Thursday, April 30, 2020

परमात्मा में आत्मा का एकभूत होना (Paramaatma Mein Aatma Ka Ekabhoot Hona)

लेखक – सुब्रह्मण्य सॊमयाजि
हिन्दी अनुवाद – पूजा धवन
(के जवाब मे :  lekhana@ayvm.in)



एक बार एक महान राजा था जिसने एक समृद्ध राज्य पर शासन किया था। वहां की प्रजा ने सदाचारी राजा को सदा सराहा। विधिवशात  एक बार शत्रुओं ने राज्य पर आक्रमण किया। आगामी युद्ध राजा के लिए ठीक नहीं हुआ और यह जल्द ही स्पष्ट हो गया कि राजा पराजित हो जाएगा। इस कारणवश उसके मंत्रियों ने उसे भाग जाने का परामर्श दिया। उन्होंने तर्क दिया कि, यदि राजा जीवित रहे तो संप्रभुता को उचित समय में वापस जीता जा सकता था। राजा अनिच्छा से सहमत हो गया और राज्य के हित में, अपने पत्नी और  शिशु के साथ जंगल में चला गया। जंगल के कठोर वातावरण में, वे लंबे समय तक जीवित नहीं रह सकते थे। पहले रानी, तत्पश्चात राजा की मृत्यु हो गयी और वह अपने बच्चे को पीछे छोड़ गये। जंगल के कुछ शिकारियों ने बच्चे के रोने की आवाज़ सुनी, और दयापूर्वक उसे अपने साथ ले गए। बच्चा अन्य बच्चों के साथ बड़ा हुआ, और जल्द ही युवा अवस्था में प्रवॆश किया।

एक दिन, युवा राजकुमार अपने साथियों के साथ शिकार करने के लिए जंगल में गया। जंगल में एक तपस्वी ने देखा कि यह लड़का न केवल अपनी शारीरिक विशेषताओं जैसे निर्माण और रंग में, बल्कि व्यवहार और आचरन में भी दूसरों से अलग था। उन्होंने उसे समीप बुलाया और उसे स्वयं को एक दर्पण में परिक्षण करने और प्रतिबिंबित करने के लिए कहा। दर्पण से पता चला कि उसका शारीरिक व्यक्तित्व जैसे छाती, हाथ, रंग आदि अलग थे परन्तु स्वयं पर उनका प्रतिबिंब दूसरों से भिन्न व्यक्तित्व की ओर संकॆत कर रहा था। वह युवा आश्चर्यचकित था और कारण समझने के लिए लौटकर तपस्वी के पास गया। ऋषि, अतीत वर्तमान और भविष्य को जानने की क्षमता रखते हुए, उन्हें अपने अतीत से अवगत कराया, उन्हें एक राजकुमार के रूप में अपने कर्तव्यों का स्मरण कराया और उन्हें एक सेना बनाने और राज्य को वापस जीतने के लिए प्रोत्साहित किया। इसने राजकुमार के जीवन को बदल दिया। दृढ प्रयासों और समर्पण के साथ उन्होंने अपने लोगों को संगठित किया, युद्ध की कला में महारत प्राप्त किया, एक शक्तियुत सेना का निर्माण किया, शत्रुओं से युद्धकर उनको पराजित किया और राज्य को एक बार फिर प्राप्त कर लिया।

यह हम सभी की कहानी है। हमारे भीतर एक साम्राज्य है, आत्मा का भव्य उज्ज्वल साम्राज्य जो भगवान की गोद है। इंद्रियों द्वारा पराजित, हमने उस साम्राज्य को छोड़ दिया है और अपनी जंगल की तह में भटक गए हैं और स्वयं को खो दिया है। हमारी इंद्रियों द्वारा प्रदान किए गए क्षणिक सुख के लिए, हमने अपने आंतरिक आनंदों की असीमता का त्याग किया है। हम अपनी मूल स्वरूप भूल गए हैं और अपने इन्द्रियों की भूलभुलैया में अपना रास्ता खो बैठे हैं, जैसे कि राजकुमार के साथ हुआ। आदेश है कि हम अपने सच्चे स्वयं को समझते हैं, हमारे ऋषियों ने, बहुत दया के साथ, हमें "योग" का मार्ग दिया है और कुशलता से इसे अपने दैनिक जीवन में बुना है। यहाँ, हम योग के बारे में श्री श्रीरंगा महागुरु के शब्दों को याद कर सकते हैं, और वे कहते थे कि, "आत्मा का सर्वोच्च में विलय ही योग है"। योग का वास्तविक अर्थ है, विलय, अनंत में परिमित का अवशोषण। इस संगम को प्राप्त करने के लिए अपनाए गए मार्ग को योग भी कहा जाता है। आइए हम ईश्वर से प्रार्थना करें कि वह हम पर अपनी कृपा दृष्टी रखें जिस्से हम अपने मूल स्वरूप को दुबारा पह्चानें और अपने जीवन में योग - विलीनता के अंतिम लक्ष्य को प्राप्त कर सकें।

सूचन : इस लेख का कन्नड़ संस्करण AYVM ब्लॉग पर देखा जा सकता है |    

பகுத்தறிவற்ற அரசன் குடிகளை காக்க தகுதியற்றவன் (Pakuttarivarra Aracan Kutikalai Kakka takutiyarravav)

மூலம்: வித்வான் நரசிம்ஹ பட்டர்
 தமிழாக்கம்: ஜானகி
மின்னஞ்சல் : (lekhana@ayvm.in)



ஸ்ரீமத்ராமாயணத்தில் ஓர் சம்பவம். ஸ்ரீராமனுக்கு பத்னியின் பிரிவு ஏற்பட்டுள்ளது. ராவணன் சீதையை அபகரித்திருக்கிறான். சுக்ரீவனுடன் நட்பு கொண்டால் சீதையை தேடும் பெரும் காரியம் சாத்யமாகும் என கபந்தன் கூறுகிறான். சுக்ரீவனின் நட்பை பெறுவதற்கு ராமன் முடிவெடுத்து அவன் வாசம் புரிந்த ரிஷ்யமூக  மலைக்கு வருகிறான். அங்கு சுக்ரீவன் முதலான வானரர்கள் வாலியே இவ்வேடம் தரித்து வந்துள்ளான் என அஞ்சுகிறார்கள். அப்போது பகுத்தறிவாளனான அனுமன்  சுக்ரீவனுக்கு இவ்வாறு தைரியம் கூறுகிறான்.  "நஹி அபுத்திம் கதோ ராஜா சர்வ பூதானி ஸாஸ்திஹி". என்றால் புத்தியற்ற அரசன் குடிகளை காப்பவனன்று.

எது நமக்கு 'இது இவ்வாறு தான்"  என நிச்சயமான அறிவை அளிக்கிறதோ அதை புத்தி என கூறலாம். ஒரு விஷயத்தில் இவ்வாறான திடமான அறிவு ஏற்பட பகுத்தறிவு தேவை. எது சரி அல்லது தவறு, எது வாழ்க்கைக்கு பொருந்தும் அல்லது பொருந்தாது, தீயவையிடத்தில் பற்றற்று இருப்பது, நல்லவற்றில் பற்றுடன் இருப்பது பகுத்தறிவு எனப்படும். இப் பகுத்தறிவினால்தான் புத்திக்கு நிர்ணயிக்கும் திறன் உண்டாகிறது. பகுத்தறிவு புத்தியின் சிறந்த குணமாகும். பகுத்தறிவு இல்லாத போது புத்தியை அவிவேகம் எனும் இருள் சூழ்கிறது. பகுத்தறிவில்லாத அரசன் குடிகளை காக்க தகுதியற்றவன்.

அரசன் பகுத்தறிவுடன் திகழ்ந்தால் குடிமக்கள் நிம்மதியாக வாழலாம். அவர்களுக்கு அவனே வழிகாட்டி. அரசனின் ஒவ்வொரு செயலும் மொழியும் குடிகளால் அனுசரிக்க படுகிறது. ஆகையினால் தான் "நா விஷ்ணு: ப்ருதிவீபதி:" எனும் சொல் வழங்கி வருகிறது. விஷ்ணு அல்லது விஷ்ணுவின் அம்சம் அல்லாதவன் அரசனாக மாட்டான். ஸ்ரீரங்க மஹாகுரு  அரசனைப் பற்றிய மர்மத்தை விவரித்தது எவ்வாறெனில் "நா விஷ்ணு: ப்ருதிவீபதி:" – "விஷ்ணு எனப்படும் தத்துவம் எவ்வாறு உலகை ஆள்கிறதோ அதை அனுசரித்து பின்பற்றுபவனே பாரதத்தின் மனதிற்குகந்த அரசனாக திகழ்கிறான். விஷ்ணு தத்துவத்தை அனுசரிப்பது ரிஷி அல்லாதவனுக்கு சாத்யமாகாது. ஆகையினாலேயே 'ராஜரிஷி'எனும் சொல்லால் இதிகாச புராணங்கள் அவனை(அரசனை) அடையாளம் காட்டுகிறது".

குறிப்பு: இக்கட்டுரை யின் கன்னட மூலம் AYVM blogs ல் காணலாம்.  

Wednesday, April 29, 2020

ಪರಿಶ್ರಮದ ಬೆಲೆ (Parisramada Bele)

ಲೇಖಕಿ ; ಶ್ರೀಮತಿ ರತ್ನಾವತಿ ಸುರೇಶ್ 
(ಪ್ರತಿಕ್ರಿಯಿಸಿರಿ lekhana@ayvm.in) 
  

ಗುರುಕುಲದಲ್ಲಿ ದಡ್ಡಶಿಖಾಮಣಿ ಬಾಲಕನೊಬ್ಬ ಅಧ್ಯಯನ ಮಾಡುತ್ತಿದ್ದ. ಒಮ್ಮೆ ಪಾಠದಲ್ಲಿ ತಪ್ಪುಮಾಡಿದ್ದಕ್ಕೆ ಗುರುಗಳು ಬೆತ್ತಪ್ರಹಾರಕ್ಕಾಗಿ ಕೈಚಾಚಲು ಹೇಳುತ್ತಾರೆ. ಅದು ಹಿಂದಿನಕಾಲದ ಪದ್ದತಿ. ಬಾಲಕನ ಕೈನೋಡಿ ತಕ್ಷಣ ಗುರುಗಳು ತಮ್ಮ ಕೈಯನ್ನು ಹಿಂದಕ್ಕೆಳೆದು ಕೊಳ್ಳುತ್ತಾರೆ. ಬಾಲಕನ ಕೈಯಲ್ಲಿ ವಿದ್ಯಾರೇಖೆಯೇ ಇರಲಿಲ್ಲ! ಗುರುಗಳು "ನಿನ್ನಕೈಯಲ್ಲಿ ವಿದ್ಯಾರೇಖೆಯೇ ಇಲ್ಲ, ನಿನ್ನನ್ನು ದಂಡಿಸಿಯೂ ಪ್ರಯೋಜನವಿಲ್ಲ. ಮನೆಗೆ ಹೋಗು" ಎನ್ನುತ್ತಾರೆ.
ಬಾಲಕ ಅತ್ಯಂತ ದುಃಖತಪ್ತನಾಗಿ ಮನೆಗೆ ಬರುತ್ತಿರುವಾಗ ಕೆಲವು ಹೆಂಗಳೆಯರು ಬಾವಿಕಟ್ಟೆಯಲ್ಲಿ ನೀರು ಸೇದುತ್ತಿದ್ದರು. ಹೆಂಗಸರು ನೀರುಸೇದಿ ಕೊಡ ಇಡುವ ಜಾಗದಲ್ಲಿ ಮಾತ್ರ ಹೊಂಡವೇರ್ಪಟ್ಟಿತ್ತು. ಅದನ್ನು ಕಂಡ ಬಾಲಕ "ಬಾವಿಕಟ್ಟೆ ಕಟ್ಟುವಾಗಲೇ ಹೀಗೆ ಕೊರೆದುಕಟ್ಟಿದ್ದಾರೆಯೇ?" ಎಂದ. ಅವರು "ಇಲ್ಲ, ಕಟ್ಟುವಾಗ ಸರಿಯಾಗಿಯೇಕಟ್ಟಿದ್ದರು, ದಿನವೂ ಕೊಡ ಇಟ್ಟುಇಟ್ಟು ಹೀಗಾಗಿದೆ" ಎಂದರು. ಬಾಲಕನು ಕಲ್ಲೇ ಹೀಗಾದರೆ 'ನಾನು ಪ್ರಯತ್ನಪಟ್ಟರೆ ವಿದ್ಯೆ ಬಾರದೇಕೆ? ಆದರೆ ವಿದ್ಯಾರೇಖೆಯೇ ಇಲ್ಲವಲ್ಲ' ಎಂದು ಯೋಚಿಸಿ, ಹರಿತವಾದ ಕತ್ತಿಯೊಂದರಿಂದ ವಿದ್ಯಾರೇಖೆ ಇರಬೇಕಾದಲ್ಲಿ ರೇಖೆಯನ್ನು ಕೊರೆದುಕೊಂಡು ಗುರುಕುಲಕ್ಕೆ ಪ್ರವೇಶಿಸುತ್ತಾನೆ.

ಕೋಪಗೊಂಡ ಗುರುಗಳು "ನಿನಗೆ ವಿದ್ಯಾರೇಖೆಯೇ ಇಲ್ಲ, ಇಲ್ಲಿಗೆ ಬರಬೇಡವೆಂದಿದ್ದನಲ್ಲ" ಎಂದರು. ಆತನು "ಗುರುಗಳೇ, ವಿದ್ಯಾರೇಖೆಯನ್ನು ಮಾಡಿಕೊಂಡು ಬಂದಿದ್ದೇನೆ" ಎಂದನು. ಗುರುಗಳು "ಏನು, ವಿದ್ಯಾರೇಖೆಯನ್ನು ಮಾಡಿಕೊಂಡು ಬಂದೆಯಾ?" ಎಂದು ಬಾಲಕನ ಕೈಯನ್ನು ನೋಡುತ್ತಾರೆ. ವಿದ್ಯಾರೇಖೆಯಿರುವಲ್ಲಿ ಕೈಸಿಗಿದಿರುವುದನ್ನು ಕಂಡು ಅವರ ಕಣ್ತುಂಬಿ ಬಂದು  ಪ್ರೀತಿಯಿಂದ "ಮಗು, ಸಹಜವಾಗಿ ಇರೆಬೇಕಾದ ವಿದ್ಯಾರೇಖೆ ಇಲ್ಲವಾದ್ದರಿಂದ ಶಿವನನ್ನು ಮೊರೆಹೋಗು" ಎಂದು ಅವನನ್ನು ತಪಸ್ಸಿಗೆ ಹಚ್ಚುತ್ತಾರೆ. ಬಾಲಕನ ಕಠೋರತಪಸ್ಸಿಗೆ ಶಿವ ಪ್ರತ್ಯಕ್ಷನಾದನು. ಆದರೆ ಒಂದಕ್ಷರವನ್ನೂ ಮಾತನಾಡದೆ ತನ್ನ ಢಮರುಗವನ್ನು ೧೪-ಸಾರಿ ಬಾರಿಸುತ್ತಾನೆ. ೧೪-ನಾದಗಳು ಹೊರಹೊಮ್ಮಿತು, 'ನೃತ್ತಾವಸಾನೆ ನಟರಾಜರಾಜಃ' ಇದನ್ನಾಧರಿಸಿ ಸಂಸ್ಕೃತ-ವ್ಯಾಕರಣಶಾಸ್ತ್ರ ರಚನೆಮಾಡಿದ ಆ ಬಾಲಕನೇ ಪಾಣಿನಿಮಹರ್ಷಿಗಳು.

ಶ್ರಮದ ಅರಿವು ಇಲ್ಲದಿದ್ದರೆ, ವಿದ್ಯೆಯ ಬೆಲೆ ತಿಳಿಯುವುದಿಲ್ಲ ಎಂದು ಶ್ರೀರಂಗಮಹಾಗುರುಗಳು ಹೇಳುತ್ತಿದ್ದರು. ವಿದ್ಯಾರ್ಜನೆಗಿರಬೇಕಾದ ಅರ್ಹತೆಗಳಲ್ಲಿ ಇದೊಂದು ಮುಖ್ಯವಾದ ಅಂಶವಾಗಿದೆ. ಪುರುಷಪ್ರಯತ್ನ-ದೈವಾನುಗ್ರಹಗಳೆರಡೂ ಕೂಡಿದಾಗ ಕಾರ್ಯಸಿದ್ಧಿ ಖಚಿತವೆಂಬುದನ್ನು ಸ್ಪಷ್ಟಪಡಿಸುತ್ತದೆ ಮೇಲಿನ ಘಟನೆ. ಭಗವಂತನನ್ನು ಪ್ರಾರ್ಥಿಸಿ ಪುರುಷಪ್ರಯತ್ನ ಮಾಡೋಣ. ವಿದ್ಯಾವಂತರಾಗೋಣ.

ಸೂಚನೆ: 29/04/2020 ರಂದು ಈ ಲೇಖನ ಉದಯವಾಣಿ ಯಲ್ಲಿ ಪ್ರಕಟವಾಗಿದೆ.    

Tuesday, April 28, 2020

Let go off the Woollen Blanket

Kannada Article by: Dr C R Ramaswamy
English Rendering by: M R Bhashyam
(Respond to lekhana@ayvm.in)

A washer man used to take clothes for washing in a river. One day, in the spate, a woollen blanket slipped, fell into the river and was carried away by the currents. Lamenting that the blanket was gone, he jumped into the currents, swam and caught the blanket. However, since the currents were fast, he was swept down by the river along with the rug. The dilemma now was either to save his own life or the blanket. Only if he let go of the blanket, he could get to the banks. Well-wishers on the bank, who were so-far shouting "Catch the blanket! Catch the blanket!" then started shouting "let go off the blanket, get to the banks". The washer-man shouted back saying "I am also trying to do the same but though I am trying to let go, the blanket is not leaving me.  What shall I do?"  The reason was he had caught not the rug but instead a bear. Even if he was willing to let go, it would not.  What a peril!

We do not know what ultimately was the fate that befell the washer-man.  However, we are also caught in the current of life.  We sometimes forget about the goal but spend time going behind unwanted things.  Neighbors and others many times encourage us too. Many times, we do not like the advice of the well- wishers. In due course, when we are caught in incidents of life which are like whirlpools, though we become careful they will not let us go like that bear.

In order that we may not be caught in these kinds of perils, we must understand the ultimate goal of life and the high-way to accomplish that goal. Our great sages discovered those highways through penance and taught them to us with great kindness.  They proclaimed that life lived within the four-fold bounds namely Dharma-Artha-Kaama and Moksha was this high way.  If we keep Artha and Kaama as the only objectives to be achieved, they initially appear like blankets but without doubt they will   gradually metamorphize into bears.  But if we opt only for Moksha, liberation, as the ideal to be accomplished, we are sure to reach the shores. It is not that we should not enjoy the worldly pleasures bestowed by Artha and Kaama. But if we enjoy them within the bounds of dharma, we are sure to get the rug without being tortured by the bear and we will enjoy the pleasures of life at the same time making us traverse towards liberation.   Let us remember the gem of words of Shri Ranga Mahaguru, the foremost among yogis, who said "If Artha and Kaama are controlled within the bounds of Dharma and Moksha, like we control a naughty cow by tying its two hind legs, we can milk ambrosia from life".

Note: The Kannada version of this article can be viewed at AYVM blogs.   

Monday, April 27, 2020

The Significance of Silent Exposition

Kannada Article by: Subrahmanya Somayaji
English Rendering by: M R Bhashyam
(Respond to lekhana@ayvm.in)



The scenario under the Banyan tree is a puzzling one. Disciples are seated around a Guru. The disciples are all aged.  Guru is still a youth. He is explaining silently.  But all the doubts of the disciples have been shredded. This is the essential meaning of Shri Shankara Bhagavatpaada's Dakshinaa Murthy Strotram.
Generally, Gurus are old and the disciples are young. But here it is the opposite. Furthermore, how can silence and explanation go together? Either one should be silent or explain with reasoning and examples. And the next is more bizarre. By explaining in silence, it is to be believed that all the doubts have been shredded.  In the world there are innumerable instances where people do not understand in-spite of explaining many times and expounding in many different lucid ways. But here, he is not speaking at all. So how did the doubts get cleared? Are all these things not puzzling?
Shri SriRanga Mahaguru has given the following explanation. The banyan tree that is alluded to here is nothing but the great tree of the universe. In its base (moola) is seated the seed of the universe Lord Dakshinaa Murthy, Parama Shiva, the supremely auspicious Lord. He is beyond time and the One who controls time. Hence the effect of time and aging does not affect Him. He is forever young. Disciples, in search of the ultimate truth, are subject to the vagaries of time and it has taken a toll on them. They have aged. When they had doubts about the ultimate truth, they have seen the personification of the eternal truth – Parama Shiva seated in front.  He is sitting at the pinnacle of the ultimate truth. The moment they have perceived Him, their instruments of observation have also followed Him to that pinnacle. In the light thrown by that effulgent truth, all the life's doubts have been clarified. The scope of the medium of speech is very limited. The silence of Lord Dakshinaa Murthy has unfolded all internal truths. When they were able to visualize the root of creation and its elaboration in their inner eye, they have no doubts left.  Let us pray to Lord Dakshinaa Murthy to rid us off of all our internal darkness and bestow upon us the glory of inner light.
Note: The Kannada version of this article can be viewed at AYVM blogs.

Sunday, April 26, 2020

ನಮ್ಮಂಗಳದಲ್ಲೊಂದು ಅಮರಾವತಿ ನಿರ್ಮಿಸಬಲ್ಲೆವೇ ? (Nammangaladallondu Amaravati Nirmisaballeve ?)

ಲೇಖಕರು : ಡಾII ಮೋಹನ ರಾಘವನ್
(ಪ್ರತಿಕ್ರಿಯಿಸಿರಿ lekhana@ayvm.in)



ಇಂದ್ರನು ಕಾಡಿನಲ್ಲಿ ಅಪ್ಸರೆಯರೊಡನೆ  ವಿಹರಿಸುತ್ತಿದ್ದನು. ಜಲಕ್ರೀಡೆಯ ರಂಗು, ಮಾದಕ ದ್ರವ್ಯಗಳ ಹಂಗು ಆವರಿಸಿತು.  ದುರ್ವಾಸರ ಆಗಮನದಿಂದ ಕ್ರೀಡೆಯು ಭಂಗವಾಯಿತು. ಶ್ರೀಮನ್ನಾರಾಯಣನ ಪ್ರಸಾದವಾಗಿ ಒಂದು ಕಮಲದ ಹೂವನ್ನು ಪ್ರಸಾದವಾಗಿ ಇಂದ್ರನಿಗೆ ಕೊಟ್ಟು ಹೇಳಿದರು-"ಯಾರು ಇದನ್ನು ಶಿರದಲ್ಲಿ ಮುಡಿದಿರುತ್ತಾರೋ, ಶ್ರೀದೇವಿಯ ಕೃಪಾಕಟಾಕ್ಷ ಸದಾ ಅವರಮೇಲಿರುತ್ತೆ". ಮದಿಸಿದ ಇಂದ್ರನು ಅವರ ಮಾತನ್ನು ಹಗುರವಾಗಿ ಭಾವಿಸಿ ಪ್ರಸಾದವನ್ನು ಆನೆಯ ನೆತ್ತಿಯಲ್ಲಿಟ್ಟನು. ಆನೆಯು, ಹೂವನ್ನು ಕೆಡವಿ ಮದೊನ್ಮತ್ತವಾಗಿ ಅರಣ್ಯವನ್ನು ಪ್ರವೇಶಿಸಿತ್ತು. ಇಂದ್ರನ  ನಡತೆಯಿಂದ ಲಕ್ಷ್ಮೀದೇವಿಯು ಇಂದ್ರನಿಂದ ವಿಮುಖಳಾದಳು. ಇಂದ್ರನ ಸಂಪತ್ತು, ವಿಲಾಸಿತ್ವವೆಲ್ಲ ಏಕಾಏಕಿ ನಷ್ಟವಾಯಿತು. ಆರ್ತನಾಗಿ ಬ್ರಹ್ಮದೇವರ ಮೊರೆಹೊಕ್ಕನು. ಅವರ ಸಲಹೆಯಂತೆ ಪುಷ್ಕರವೆಂಬ  ತೀರ್ಥಕ್ಷೇತ್ರದಲ್ಲಿ ನಾರಾಯಣನ ಪೂಜೆ, ತಪಸ್ಯೆಯಿಂದ  ತನ್ನ ಐಶ್ವರ್ಯವನ್ನು ಮತ್ತೆ ಪಡೆದನು. 

ಪೌರಾಣಿಕ ಕಥೆಗಳನ್ನು  ತಾತ್ತ್ವಿಕವಾದ ಹಿನ್ನೆಲೆಯಲ್ಲಿ ಅರ್ಥಮಾಡಿಕೊಳ್ಳಬೇಕೆಂಬುದು ಶ್ರೀರಂಗಮಹಾಗುರುಗಳ  ಅನುಭವಸಿದ್ಧವಾದ ಮಾತು. ಬ್ರಹ್ಮವೈವರ್ತಪುರಾಣದ ಈ ಕಥೆಯು ಅಹಂಕಾರವನ್ನು ತೊರೆವ ಪಾಠವನ್ನೂ, ವಿನಯ, ವಿವೇಕಗಳ ಮಹಿಮೆಯನ್ನು ಸಾರುತ್ತಿದೆ ಎಂಬುದು ಸ್ಥೂಲ ದೃಷ್ಟಿಗೂ ಸ್ಪಷ್ಟ. ಆದರೆ ಇಂದ್ರನೇಕೆ ಇಲ್ಲಿ ನಾಯಕನಾಗಬೇಕು ? ಆನೆಯ ಬದಲಾಗಿ ಕುದುರೆ ಏಕೆ ಆಗಿರಬಾರದೆಂಬ ಅನೇಕ ಪ್ರಶ್ನೆಗಳು ಉದ್ಭವಿಸುತ್ತವೆ. ಸೂತ್ರರೂಪವಾದ ಉತ್ತರವೆಂದರೆ ಪುರಾಣಗಳು ಅಂತರಂಗದ ತಪೋ  ದೃಷ್ಟಿಗೆ ಕಾಣುವ ಸತ್ಯಗಳ ಕಾವ್ಯಾತ್ಮಕ ವರ್ಣನೆ. ಇಲ್ಲಿ ಇಂದ್ರ ಎಂದರೆ  ಇಂದ್ರಿಯಗಳ ರಾಜ. ಮನಸ್ಸು ಎಂಬುದಾಗಿಯೂ ಹೇಳುತ್ತಾರೆ. ಲಕ್ಷ್ಮೀನಾರಾಯಣರ ಪ್ರಸಾದರೂಪವಾದ ಪುಷ್ಪವನ್ನು ಶಿರದಲ್ಲಿ ಮುಡಿಯುವುದೆಂದರೆ ಸಹಸ್ರಾರವೆಂಬ ಕಮಲದಲ್ಲಿ ಯೋಗಿಯು ಅನುಭವಿಸುವ ಸಮಾಧಿ ಮತ್ತು ಅದರಿಂದ ಇಂದ್ರಿಯ, ಮನೋಬುದ್ಧಿಗಳಿಗೆ ಉಂಟಾಗುವ ಅಪಾರವಾದ  ತೃಪ್ತಿ-ನೆಮ್ಮದಿಗಳು. ಅಂತಹ ತೃಪ್ತ ಮನಸ್ಕನೊಬ್ಬನ ನಡೆ ಲೋಕಹಿತಕಾರಿ. ಅಯಾಚಿತವಾಗಿಯೇ ಸಂಪತ್ತು ಅವನನ್ನು ವರಿಸುತ್ತದೆ.  ಅಂತಹವನ  ನುಡಿಗಳು ಅಮರ ಸತ್ಯಗಳು. ಅವನಿರುವ ಜಾಗವೇ ಇಂದ್ರನ ರಾಜಧಾನಿಯೆಂದು ಪ್ರಸಿದ್ಧವಾದ ಅಮರಾವತಿ. ಯೋಗ-ಭೋಗಗಳ ನೆಲೆವೀಡು. ಸಿರಿಯ ಆವಾಸ. ಆದರೆ ಕಾಮ-ಕ್ರೋಧ-ಮದವೇ ಮೊದಲಾದ ದುಷ್ಪ್ರಕೃತಿಗಳು ತುಂಬಿದ ಅರಣ್ಯದಲ್ಲಿ, ಇಂದ್ರಿಯಗಳ ಸೆಳೆತಕ್ಕೆ ಸಿಕ್ಕಿ, ಮೋಜುಗಾರಿಕೆಯಲ್ಲಿ  ತಲ್ಲೀನನಾದ ಅವನ ನಡತೆಗೆ ತಕ್ಕ ಉಪಮಾನವೆಂದರೆ ಮದಿಸಿದ ಆನೆ. ಆನೆಯು ತನ್ನ  ಮದದಲ್ಲಿ ಸಂಪತ್ತಿಗೆ ಮೂಲವೇ ಸಹಸ್ರಾರದ ಅನುಭವ ಎಂಬುದನ್ನು ಮರೆತು, ಅದಕ್ಕೆ ವಿಮುಖವಾಗಿ ಆ ಕಮಲವನ್ನು ಕೆಡಹುವುದು. ಅಲ್ಲಿಗೆ ಪತನಾರಂಭ. ಕಾಮಕ್ರೋಧಾದಿ ಅಸುರರು ಅಮರಾವತಿಯನ್ನು ಲೂಟಿಹೊಡೆದು ಅಪಹರಿಸುವರು. ಮನೋರೂಪಿಯಾದ ಇಂದ್ರನು ಮತ್ತೆ ಆ ಸ್ವರ್ಗವನ್ನು ಪಡೆಯಬೇಕಾದರೆ, ಪುಷ್ಕರದಲ್ಲಿ ತಪವನ್ನಾಚರಿಸಬೇಕು. ಪುಷ್ಕರವೆಂಬುದು ಬ್ರಹ್ಮದೇವರಿಗೆ ಪ್ರಿಯವಾದ ತೀರ್ಥ. ಪರಬ್ರಹ್ಮಭಾವಕ್ಕೆ ಪೋಷಕ. ಪುಷ್ಕರವೆಂಬುದು ಅನೇಕ ದಳಗಳಿಂದ ಕೂಡಿದ ಹೂವಾಗಿ ಒಳ ಧ್ಯಾನವು ಜರುಗುವ ಹೃದಯ ಕಮಲವನ್ನು ಜ್ಞಾಪಿಸುತ್ತದೆ. ಆಯುರ್ವೇದದಲ್ಲಿ ಜ್ವರ ನಿವಾರಣೆಗೆ ಔಷಧಿಯಾಗಿ ಪುಷ್ಕರವನ್ನು ಬಳಸುವುದುಂಟು. ಇಲ್ಲಿ ಮದಜ್ವರವನ್ನು ಇಳಿಸುವ ಔಷಧಿಯಾಗಿ ಇಂದ್ರನಿಗೆ ಉಪಯುಕ್ತವಾಗಿದೆ . ನಮ್ಮೊಳಗಿನ ಮುಡಿಗುಸುಮವನ್ನು ಪೋಷಿಸಿ ರಕ್ಷಿಸಿ, ನಿಜಯೋಗದ ಅಭ್ಯಾಸವನ್ನು ಬೆಳಸಿಕೊಂಡು, ನಮ್ಮ ನಮ್ಮ ಮನದಂಗಳಗಳಲ್ಲಿ ಇಂದ್ರನ ಅಮರಾವತಿಯನ್ನೂ ರೂಪಿಸಿಕೊಂಡು ಸುಖಿಸುವಂತಾಗಲಿ.

ಸೂಚನೆ: 26/04/2020 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.   

ಪೂಜ್ಯ ಶ್ರೀರಾಮಕೃಷ್ಣಗುರುದಾಸರು (ರಾಮಕೃಷ್ಣಭಟ್ಟರು) (Pujya Sriramakrishnagurudasaru [Ramakrshnabhattaru])

ಸಂಗ್ರಾಹಕರು: ಎ. ಕೃಷ್ಣಮೂರ್ತಿ
(ಪ್ರತಿಕ್ರಿಯಿಸಿರಿ lekhana@ayvm.in)
  
ಪೂಜ್ಯ ಶ್ರೀರಾಮಕೃಷ್ಣ ಗುರುದಾಸರು
  ಧನ್ಯಜೀವಿತದ ಕಾಲ 1926 ರಿಂದ 1978.  


ಶ್ರೀ ರಾಮಕೃಷ್ಣಭಟ್ಟರು ಬಸರೀಕಟ್ಟೆಯ ಶ್ರೀಲಕ್ಷ್ಮೀಕಾಂತ ಜನಾರ್ದನಸ್ವಾಮಿ ದೇವಾಲಯದಲ್ಲಿ ಅರ್ಚಕರಾಗಿದ್ದ ವೇ||ಬ್ರ|| ಶ್ರೀ ವೇಂಕಟರಮಣಭಟ್ಟರು ಮತ್ತು ಶ್ರಿಮತಿ ಕಾವೇರಮ್ಮನವರ ಸುಪುತ್ರರಾಗಿ ಶ್ರೀಅಕ್ಷಯ ನಾಮ ಸಂವತ್ಸರದ ಶ್ರಾವಣ ಬಹುಳ ಚತುರ್ದಶೀ ದಿನಾಂಕ 06-09-1926ರಂದು ಜನಿಸಿದರು. ಇವರಿಗೆ ಒಬ್ಬ ಅಣ್ಣ ಮತ್ತು ಐದು ಮಂದಿ ತಂಗಿಯರು.

ಶ್ರಿರಾಮಕೃಷ್ಣ ಭಟ್ಟರು ನಮ್ಮ ಕಣ್ಮುಂದೆಯೇ ಇದ್ದು ತಂಬೂರಿಯನ್ನು ಮೀಟಿಕೊಂಡು ಭವಾಬ್ಧಿಯನ್ನು ಮಹಾಗುರುವಿನ ಅನುಗ್ರಹದಿಂದ ತಾವು ದಾಟಿ, ಬಹು ಜನರಿಗೆ ಭವಾಬ್ಧಿಯನ್ನು ದಾಟಿಸುವ ಮಹಾ ನಾವಿಕನಾದ ಸದ್ಗುರುವಿನೆಡೆಗೆ ಒಯ್ದವರು. ಅವರೊಬ್ಬ ಅಪೂರ್ವ ಅದ್ಭುತ ಗಾಯಕರಾಗಿದ್ದರು. ಯೋಗ ಗಾಯನವನ್ನು ಬಲ್ಲವರಾಗಿದ್ದರು. ಅವರ ಸಂಗೀತವನ್ನು ಕೇಳಲು ಸುತ್ತಮುತ್ತಲಿನ ಹಳ್ಳಿಗಳಿಂದ ಜನರು ಬರುತ್ತಿದ್ದರು. ಅವರ ಸಂಗೀತವನ್ನು ಕೇಳುತ್ತಾ ಕೇಳುತ್ತಾ ತಡೆಯಲಾರದೆ ಆನಂದೊನ್ಮಾದದಿಂದ ಎಷ್ಟೋ ಮಂದಿ ನರ್ತಿಸಿದ್ದೂ ಉಂಟು.

ಶ್ರೀರಾಮಕೃಷ್ಣಭಟ್ಟರು ಸಂಸ್ಕೃತ, ಜ್ಯೋತಿಷ್ಯ ಮತ್ತು ಸಂಗೀತದಲ್ಲಿ ವಿದ್ವಾಂಸರು. ವಿಶೇಷವಾಗಿ ಸಂಗೀತದಲ್ಲಿ ಸಾಧನೆ ಮಾಡಿದವರು. ಸಂಗೀತವನ್ನು ಸಾಧಿಸಿ ತಮ್ಮ ಜ್ಞಾನದಾತರೂ, ಜ್ಞಾನವಿಜ್ಞಾನತೃಪ್ತಾತ್ಮರೂ, ನಾದಯೋಗಿಗಳೂ ಆಗಿದ್ದ ಶ್ರಿರಂಗಮಹಾಗುರುಗಳಿಗೆ ಸಮರ್ಪಿಸಿ, ಗುರುಗಳಿಂದಲೇ 'ಗುರುದಾಸರು' ಎಂಬ ಅಭಿದಾನವನ್ನು ಪಡೆದ ಧನ್ಯಾತ್ಮರು. ಮಹಾಗುರುಗಳು ಗುರುದಾಸರನ್ನು ಉದ್ದೇಶಿಸಿ 'ಇವರದು ಗಂಧರ್ವ ಕಂಠವಪ್ಪಾ. ಇವರು ಗಂಧರ್ವಗಾಯನ ಮಾಡುತ್ತಾರೆ' ಎಂದು ಶಿಷ್ಯರೊಬ್ಬರಿಗೆ ಹೇಳಿದ್ದರು.

  

ಶ್ರೀ ರಾಮಕೃಷ್ಣ ಭಟ್ಟರಿಗೆ ಸಿನಿಮಾರಂಗದಲ್ಲಿ ಬಹು ಬೇಡಿಕೆಯಿತ್ತು. ಲಕ್ಷ ಲಕ್ಷ ಸಂಪಾದನೆ ಮಾಡುವಷ್ಟು ಕಲಾಪ್ರೌಡಿಮೆಯೂ ಇವರಲ್ಲಿತ್ತು. ಹಿನ್ನೆಲೆ ಗಾಯಕರಾಗಲು ಬಹಳ ಒತ್ತಾಯವೂ ಇತ್ತು. ನಟನೆಯೂ ಚೆನ್ನಾಗಿ ಸಿದ್ಧಿಸಿತ್ತು. ಸಾಧಾರಣ ಸ್ಥಿತಿವಂತರಾಗಿದ್ದವರಿಗೆ ಈ ಆಮಿಷ ಬಹಳ ಆಕರ್ಷಣೀಯವೂ ಆಗಿದ್ದಿತು. ಇವರಿಗೆ ಸಿನಿಮಾರಂಗದ ಹಲವು ಪ್ರತಿಷ್ಠಿತ ವ್ಯಕ್ತಿಗಳ, ಸಿನಿಮಾ ನಟರ ನಿಕಟ ಪರಿಚಯವಿತ್ತು. ಚಿತ್ರಸಾಹಿತಿ ಕರೀಂಖಾನ್, ನಟ-ನಿರ್ದೇಶಕ-ನಿರ್ಮಾಪಕರಾದ ನಾಗೇಂದ್ರರಾಯರು, ಹೊನ್ನಪ್ಪ ಭಾಗವತರು ಮುಂತಾದವರು ಇವರ ಗಾನಪಾಂಡಿತ್ಯವನ್ನೂ ನಟನಾ ಸಾಮರ್ಥ್ಯವನ್ನೂ ಬಲ್ಲವರಾಗಿದ್ದರು. ಸುಂದರ ಶರೀರ ಮತ್ತು ಶಾರೀರ ಹೊಂದಿದ್ದ ಇವರು ನಟನೆಯೊಡನೆ ಗಾಯನವನ್ನೂ ಮಾಡುತ್ತಿದ್ದರು. ಇವರ ನಟನಾ ಸಾಮರ್ಥ್ಯವನ್ನು ನೋಡಿ ಮುಗ್ಧರಾದ ಮದರಾಸಿನ ಸಿನಿಮಾರಂಗದವರು ಇವರಿಗೆ ಕೈತುಂಬಾ ಸಂಬಳ, ವಾಸ್ತವ್ಯದ ಏರ್ಪಾಡು-ಸವಲತ್ತುಗಳನ್ನು ಕೊಡಲು ಸಿದ್ಧರಾಗಿದ್ದರು. ಇಷ್ಟೆಲ್ಲಾ ಹಿನ್ನಲೆಯಿದ್ದ ಇವರು ತಮಿಳುನಾಡಿಗೆ ಸಿನಿಮಾ ಪ್ರಪಂಚಕ್ಕೆ ಧುಮುಕಲು ಸಿದ್ಧರಾಗಿದ್ದರು.  

ಮೈಸೂರಿನ ಮಹಾರಾಜಾ ಸಂಸ್ಕೃತ ಪಾಠಶಾಲೆಯಲ್ಲಿ ಅಧ್ಯಯನ ಮಾಡುತ್ತಿದ್ದಾಗ, 'ಗುರುದಾಸರು ಕಾಳಿದಾಸನ ಶಾಕುಂತಲಾ ನಾಟಕದಲ್ಲಿ ಮಾಡಿದ ದುಷ್ಯಂತನ ಪಾತ್ರವನ್ನೂ, ಭಾಸನ ಪ್ರತಿಮಾ ನಾಟಕದಲ್ಲಿ ಶ್ರೀರಾಮನ ಪಾತ್ರವನ್ನೂ ನೋಡಿದವರು ಯಾರೂ ಅವರನ್ನು ಮರೆಯುವ ಹಾಗಿಲ್ಲ. ಶ್ರೀರಾಮಕೃಷ್ಣಭಟ್ಟರು ಸಾಹಿತ್ಯ, ಸಂಗೀತ, ಪಾತ್ರಗಳರೂಪ, ವೇಷಭೂಷಣಗಳ ಅಭಿರೂಪ್ಯ, ಅಭಿನಯ ಕಲೆ ಎಲ್ಲದರಲ್ಲೂ ಅದ್ವಿತೀಯರಾಗಿದ್ದರು' ಎಂದು ಅದೇ ಪಾಠಶಾಲೆಯಲ್ಲಿ ಆಗ ಅಧ್ಯಯನ ಮಾಡುತ್ತಿದ್ದ ಶ್ರೀ ಶ್ರೀ ರಂಗಪ್ರಿಯ ಶ್ರೀಗಳು ನೆನೆಪಿಸಿಕೊಳ್ಳುತ್ತಿದ್ದರು. ಶ್ರೀ ರಂಗಪ್ರಿಯ ಶ್ರೀಗಳ ಸತ್ಸಂಗದಿಂದ ಗುರುದಾಸರಿಗೆ ಶ್ರೀರಂಗಮಹಾಗುರುಗಳ ಪರಿಚಯವಾಯಿತು. ಅದು ಅವರಿಗಿದ್ದ ಪ್ರಚಾರ, ಪ್ರಸಿದ್ಧಿ, ಪುರಸ್ಕಾರ ಇತ್ಯಾದಿ ಆಮಿಷಗಳ ಬಗ್ಗೆ ಆಳವಾಗಿ ಚಿಂತಿಸುವಂತೆ ಮಾಡಿತು. ಜೀವನದ ಪರಮಗುರಿ ಆತ್ಮಸಾಕ್ಷಾತ್ಕಾರ ಎಂಬ ಅರಿವು ಆಳವಾಗಿ ಬೇರೂರಿತು. ಇದರ ಫಲವಾಗಿ ಗುರುದಾಸರು ತಮಗಾಗಿ ಗೊತ್ತುಪಡಿಸಿದ್ದ ಸಂಭಾವನೆ, ಹೋಟೆಲು, ಸ್ಟುಡಿಯೋ ಸಂಪತ್ತು ಎಲ್ಲವನ್ನೂ ನಿರಾಕರಿಸಿದರು. ಗುರುಭಕ್ತರಾಗಿಯೇ ಉಳಿಯುವುದರಲ್ಲೇ ಧನ್ಯತೆಯನ್ನು ಕಂಡರು. ಇದು ತ್ಯಾಗರಾಜರು 'ನಿಧಿಚಾಲಸುಖಮಾ' ಎಂದು ಹಾಡಿದ ಘಟನೆಯನ್ನು ನೆನೆಪಿಗೆ ತರುತ್ತದೆ. ನಿರಂತರ ಸಾಧನೆಯಿಂದ ಪರಮಗುರುವಿನ ಅನುಗ್ರಹದಿಂದ ರಾಗರಾಗಿಣಿಯರ ಸಾಕ್ಷಾತ್ಕಾರ ಪಡೆದರು.

ಅವರದು ಕಂಚಿನ ಕಂಠ. ಅವರು ಹಾಡುವಾಗ ನೂರಾರು ಜನರಿರುವ ಭಕ್ತರ ಸಭೆಗೆ ಧ್ವನಿವರ್ಧಕದ ಅಗತ್ಯವೇ ಇರುತ್ತಿರಲಿಲ್ಲ. ಅವರು ಭಕ್ತರ ಮನೆಯಲ್ಲಿ ಹಾಡುತ್ತಿದ್ದಾಗ ಅವರ ಕಂಠದ ಆಕರ್ಷಣೆಗೆ ಜನರು ತಾವಾಗೆ ಬಂದು ಸದ್ದಿಲ್ಲದೆ ನಿಂತೊ ಕುಳಿತೊ ಆಲಿಸುತ್ತಿದ್ದರು. ಅವರು ಹಾಡುವಾಗ ಗೋಕುಲವು ಧರೆಗಿಳಿಯುತ್ತಿತ್ತು. ಕೃಷ್ಣನ ಸಾನ್ನಿಧ್ಯ ಹಾಗೂ ಕೃಷ್ಣ ವಿರಹದ ಬೇಗೆ ಎರಡೂ ಉಂಟಾಗುತಿತ್ತು. ಕೃಷ್ಣನ ಸಾನ್ನಿಧ್ಯವನ್ನು ಅನುಭವಿಸಿದವರು ಎಷ್ಟೋ ಮಂದಿ. ಸತತ ಸಾಧನೆ ಮತ್ತು ಪರಮ ಗುರುವಿನ ಅನುಗ್ರಹದಿಂದ ಸುಲಲಿತವಾಗಿ ಯೋಗ ಚಕ್ರಗಳಲ್ಲಿ ಸಂಚಾರಮಾಡುತ್ತಿದ್ದರು. ಅವರು 'ಆತ್ಮದೀಪಂ' 'ಸ್ವಧಾಮ್ನಾಂ' ಮುಂತಾದ ಪದಗಳನ್ನು ಹಾಡುತ್ತಿರುವಾಗ ಆ ಪದವನ್ನು ಅನುಭವಿಸಿ ಮುಳುಗಿ ಮುಳುಗಿ ಯೋಗ ಗಾಯಕರಾಗಿ ಹಾಡುತ್ತಿದ್ದರು.ಯೌಗಿಕ ಪದಗಳನ್ನು ಹಾಡುತ್ತಿರುವಾಗ ಆಯಾ ಯೋಗ ಚಕ್ರಗಳಲ್ಲೇ ನೆಲೆಸಿ ಹಾಡುತ್ತಿದ್ದರು. ಇಂತಹ ದೈವೀಗಾಯನ ಪ್ರವೃದ್ಧಿಗೆ ಬಂದದ್ದು ಶ್ರೀರಂಗಮಹಾಗುರುಗಳ ಸಾನ್ನಿಧ್ಯ ಮತ್ತು ಮಾರ್ಗದರ್ಶನದಿಂದ. ಅವರಿಗೆ ಗುರುದೇವರು 'ಸ್ತೋತ್ರದ ಒಂದು ಸಾಹಿತ್ಯದ ಮೂಲಕ ಭಗವಂತನನ್ನು ನೋಡಬಹುದಪ್ಪಾ. ಎಲ್ಲಾ ಅರವತ್ನಾಲ್ಕು ಕಲೆಗಳ ಗುರಿಯೂ ಇದೇ ಆಗಿದೆ. ನಿನಗೆ ಅದರ ಮರ್ಮವನ್ನು ಸಂಗೀತದ ಮೂಲಕ ಹೇಳಿಕೊಟ್ಟಿದ್ದೇನೆ' ಎಂದು ಆಶೀರ್ವದಿಸಿದ್ದರು.

ಗುರುದಾಸರು, 'ನಿಸರ್ಗವು ನಾದಮಯವಾಗಿದೆ, ಸಂಗೀತಮಯವಾಗಿದೆ. ಪ್ರತಿಯೊಂದು ವಾತಾವರಣಕ್ಕೂ ರಾಗವಿದೆ' ಎಂದು ಹೇಳುತ್ತಿದ್ದರು. ಸಂಗೀತ ಶಾಸ್ತ್ರದಲ್ಲೂ ಬೇರೆ ಬೇರೆ ಕಾಲಕ್ಕೆ ಬೇರೆ ಬೇರೆ ರಾಗಗಳನ್ನು ಅನುಮೋದನೆ ಮಾಡಿರುತ್ತಾರೆ. 'ಶಾಸ್ತ್ರವು ವೈಜ್ಞಾನಿಕವಾಗಿದೆ. ಪ್ರಯೋಗದಿಂದ ಅದನ್ನು ಸಿದ್ಧಪಡಿಸಬಹುದು. ಪ್ರಯೋಗಕ್ಕೆ ಬರದಿದ್ದರೆ ಅದೆಂತಾ ಶಾಸ್ತ್ರ?' ಎಂದು ಮಹಾಗುರುಗಳು ಹೇಳುತ್ತಿದ್ದರು. ಅವರು ವಾತಾವರಣಕ್ಕೆ ಅನುಸಾರವಾಗಿ ಬೀಸುವ ಗಾಳಿ, ಬೆಳಕು ಮತ್ತು ಆಗಿನ ರಸಕ್ಕೆ ಅನುಗುಣವಾಗಿ ರಾಗಗಳನ್ನು ಯೋಜಿಸುತ್ತಿದ್ದರು. ಇದರ ವಿಜ್ಞಾನವನ್ನು ಗುರುದಾಸರು ಮಹಾಗುರುಗಳಿಂದ ಪಡೆದಿದ್ದರು. ಉದಾಹರಣೆಗೆ ಮಹಾಗುರುಗಳು ಹಾಡುತ್ತಿದ್ದ ಭಜಗೋವಿಂದ ಸ್ತೋತ್ರದ 'ನಳಿನೀದಲಗತ ಜಲಮತಿತರಲಂ' ಎಂಬ ಸ್ತೋತ್ರಕ್ಕೆ ಗುರುಗಳು ಏಕೆ ಬಿಲಹರಿ ರಾಗ ಹಾಕಿದ್ದಾರೆ ಎಂಬುದನ್ನು ನೆನೆಸಿಕೊಂಡು ಭಾವುಕರಾಗುತ್ತಿದ್ದರು. ಬಿಲಹರೀ ಪ್ರಾತಃಕಾಲದ ರಾಗ. ಆಗ ಎಲೆಗಳ ಮೇಲೆ ನೀರಿನ ಬಿಂದುಗಳು ನಿಂತಿರುತ್ತವೆ. ಆ ರಾಗವು 'ದಲಗತಜಲಮ್'ಗೆ ಹೇಗೆ ಸರಿಯಾಗಿ ಹೊಂದಿಕೊಳ್ಳುತ್ತದೆ ಮತ್ತು ಭಾವಪುಷ್ಟಿಯನ್ನು ಕೊಡುತ್ತದೆ ಎಂದು ಅನುಭವಿಸುತ್ತಾ ಭಾವುಕರಾಗಿ ಹೇಳುತ್ತಿದ್ದರು. ಮಹಾಗುರುಗಳು ಗುರುದಾಸರಿಗೆ ಈ ರೀತಿ ಅನೇಕ ಪಾಠಗಳನ್ನು ಮಾಡಿದ್ದಾರೆ.

ಗುರುದಾಸರು ಮಾಡುತ್ತಿದ್ದ ಸ್ತೋತ್ರಗಾನವನ್ನು ಅವರ ಸಾನ್ನಿಧ್ಯದಲ್ಲೇ ಆಲಿಸಿದವರಿಗೆ ಅದರ ರಸ ಮತ್ತು ಸೊಬಗು ಅರಿವಾಗುತ್ತಿತ್ತು. ಹೆಸರಾಂತ ಕವಿ ಶಿವರುದ್ರಪ್ಪನವರ ಭಾವಗೀತೆಗಳನ್ನು ಗುರುದಾಸರು ಭಾವಪೂರ್ಣವಾಗಿ ಹಾಡುತ್ತಿದ್ದರು. ಗುರುದಾಸರು ಬಹು ಅಪರೂಪದ ಯೋಗ ಗಾಯಕರು. ಅವರು ಸಂಗೀತವನ್ನು ಕೇವಲ ಭಗವಂತನ ಸೇವೆಗಾಗಿಯೇ ವಿನಿಯೋಗಿಸಿದರು.  ಅವರ ಜೀವನದಲ್ಲಿ ಬಹಳವಾಗಿ ಹಣಕಾಸಿನ ತೊಂದರೆಗೆ ಒಳಗಾದರೂ ಸಂಗೀತವನ್ನು ಹಣಸಂಪಾದನೆಗೆ ಬಳಸಿಕೊಳ್ಳಲಿಲ್ಲ. ಇದು ಅವರ ಒಂದು ಮುಖ.

ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಬಸರೀಕಟ್ಟೆಯ ಸುತ್ತಮುತ್ತ ಇರುವ ಹಳ್ಳಿಗಾಡಿನಲ್ಲಿ ಬಡವರಿಗೆ ವಿದ್ಯಾಭ್ಯಾಸಕ್ಕೆ ಅವಕಾಶವೇ ಇಲ್ಲದಿದ್ದಾಗ, ಅದೂ ಹೆಣ್ಣುಮಕ್ಕಳ ವಿದ್ಯಾಭ್ಯಾಸವೇ ಅಸಾಧ್ಯವಾಗಿದ್ದಾಗ ಅಲ್ಲಿ 'ಶ್ರೀಸದ್ಗುರುವಿದ್ಯಾಶಾಲೆ' ಎಂಬ ವಸತಿಶಾಲೆಯನ್ನು ಶ್ರೀಲಕ್ಷ್ಮೀಜನಾರ್ದನಸ್ವಾಮಿ ದೇವಸ್ಥಾನದ ಆವರಣದಲ್ಲಿ ತೆರೆದು, ಪ್ರಾಚೀನ ಗುರುಕುಲ ಪದ್ಧತಿಯಂತೆ ವಾತ್ಸಲ್ಯಪೂರಿತವಾದ ಮನೋಭಾವದಿಂದ ಮಕ್ಕಳನ್ನು ಬೆಳಸಿ ಅವರ ಜೀವನವನ್ನು ರೂಪಿಸುವುದರಲ್ಲಿ ಮಹಾಪಾತ್ರವಹಿಸಿ ಜ್ಞಾನದಾನ ಮಾಡಿದ ಸಾಹಸಿಗಳಾದ ಪುಣ್ಯಾತ್ಮರು. ಲೌಕಿಕ ಹಾಗೂ ಆಧ್ಯಾತ್ಮಿಕ ವಿದ್ಯಾಭ್ಯಾಸದ ಜೊತೆಗೆ ಸಂಗೀತ ಸ್ತೋತ್ರಾದಿಕಲೆಗಳೂ, ಸಂಸ್ಕೃತ, ಹಿಂದಿ ಭಾಷೆಗಳೂ, ಧರ್ಮ, ಸಂಪ್ರದಾಯ, ಸಂಸ್ಕೃತಿ ಹಾಗೂ ದೈಹಿಕ ಶಿಕ್ಷಣಗಳ ಸುಂದರ ಸಮನ್ವಯಾತ್ಮಕವಾದ ವಿದ್ಯಾಪದ್ಧತಿಯನ್ನು ರೂಪಿಸಿದ್ದರು. ಈ ಶಾಲೆಯ ಕಾರ್ಯಕ್ಷೇತ್ರದಲ್ಲಿ ಇವರ ಧರ್ಮಪತ್ನಿ ಕಲ್ಯಾಣಮ್ಮ ಮತ್ತು ಅತ್ಯಂತ ಕ್ರಿಯಾಶೀಲರಾಗಿದ್ದ ದಿವಂಗತ ಶ್ರೀಜಿ.ಕೆ.ಶಂಕರರಾಯರ ಸಮರಸ ಸಹಯೋಗವನ್ನು ಮರೆಯುವಂತಿಲ್ಲ.

ಗುರುದಾಸರು ಉತ್ತಮ ಶಿಕ್ಷಣ ತಜ್ಞರು, ನಾಟಕ-ಗೀತ ರಚನಕಾರರು, ಅದ್ಭುತ ನಟರು ಮತ್ತು ಉತ್ತಮ ನಿರ್ದೇಶಕರು. ಊರಿನಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಗಳಿಗೆ ನುಡಿಸಲು ಮಕ್ಕಳಿಗೆ ಚಂಡೆ, ಮೃದಂಗ, ಖಂಜಿರ ಮುಂತಾದ ತಾಳವಾದ್ಯಗಳನ್ನೂ ಕಲಿಸುತ್ತಿದ್ದರು. ಅವರು ರಚಿಸಿದ ದೇಶಭಕ್ತಿಗೀತೆ 'ಬೆಳಗಲೀ ಬೆಳಗಲೀ ಸನಾತನಾರ್ಯ ಭಾರತ' ಎಂಬುದು ಭಾರತದ ರಾಷ್ಟ್ರಗೀತೆಯಾಗುವ ಯೋಗ್ಯತೆಯನ್ನು ಹೊಂದಿದೆ.

ಶ್ರೀಗುರುದಾಸರು ಸರಳಸಜ್ಜನರು, ದೈವಭಕ್ತರು. ಧ್ಯಾನಶೂರರು ಮತ್ತು ದೈವದ ಸ್ವತ್ತಾಗಿದ್ದರು. ಜ್ಞಾನಪಿಪಾಸುಗಳಿಗೆ ತಿಳುವಳಿಕೆ ನೀಡಿ, ಆರ್ದ್ರರಾದವರಿಗೆ ಗುರುದ್ವಾರವಾಗಿ ಕೆಲಸ ಮಾಡಿದವರು. ಅತಿಥಿ ಸತ್ಕಾರವನ್ನು ಆದರದಿಂದ ಮಾಡುತ್ತಿದ್ದರು. ಅವರು ಉತ್ತಮ ಬಾಣಸಿಗರೂ ಆಗಿದ್ದರು. ಅವರ ಆತಿಥ್ಯವನ್ನು ಸವಿದ ಅತಿಥಿಗಳು ಇನ್ನೂ ಅದರ ರುಚಿಯನ್ನು ಮರೆತಿಲ್ಲ. ಅವರು ಸುತ್ತಮುತ್ತಲಿನ ಹಳ್ಳಿಗಳಿಗೆ, ಬಂಧುಗಳ ಮನೆಗೆ ನಡೆದೇ ಹೋಗುತ್ತಿದ್ದರು. ಅವರು ಅಲ್ಲಿರುವವರೆಗೂ ಸಮಯದ ಸದುಪಯೋಗ ಹೇಗೆ ಮಾಡಿಕೊಳ್ಳಬೇಕೆಂಬುದನ್ನು ಮೊದಲೇ ನಿರ್ಧರಿಸಿರುತ್ತಿದ್ದರು. ಅಲ್ಲಿರುವವರಿಗೆ ಜೀವನದ ಗುರಿ, ಅಧ್ಯಾತ್ಮಿಕತೆಯ ಕಡೆಗೆ ಒಲವು ಉಂಟಾಗುವಂತೆ ತಿಳುವಳಿಕೆ ನೀಡುತ್ತಿದ್ದರು.
ಅವರಿಗೆ ಪಾರಂಪರಿಕವಾಗಿ ಬಂದ ಆಸ್ತಿಗಳಾವುದನ್ನೂ ಇಟ್ಟುಕೊಳ್ಳಲಿಲ್ಲ. ಅವರ ಅಣ್ಣನವರಿಗೆ 'ನನಗೆ ಭೂಮಿಕಾಣಿ ಯಾವುದೂ ಬೇಡ. ನನಗೆ ಬರಬೇಕಾಗಿರುವ ಭೂಮಿಯನ್ನು ಧ್ಯಾನ ಮಂದಿರದ ಕಟ್ಟಡಕ್ಕೆ ಬಿಟ್ಟುಕೊಡಬೇಕು' ಎಂದು ತಾಕೀತು ಮಾಡಿದರು. ಅದರಂತೆಯೇ ಅವರ ಅಣ್ಣನವರಾದ ಹರಿದಾಸರು ಆ ಭೂಮಿಯನ್ನು ತುಲಸೀ ತೀರ್ಥದೊಡನೆ ಧಾರೆ ಎರೆದುಕೊಟ್ಟರು.

ಶ್ರೀಗುರುದಾಸರು ಮಹಾಗುರುಗಳ ನಿರ್ದೇಶನದಂತೆ ಶ್ರೀಸದ್ಗುರು ವಿದ್ಯಾಶಾಲೆಯ ಮುಂದುವರಿಕೆಯಾಗಿ ಶ್ರೀಸದ್ಗುರು ಪ್ರೌಢಶಾಲೆಯನ್ನು ಸ್ಥಾಪಿಸಿ ಅದರ ಪ್ರಥಮಾಧ್ಯಕ್ಷರಾಗಿದ್ದರು. ಅದು ಇಂದಿಗೂ ಚಿಕ್ಕಮಗಳೂರು ಜಿಲ್ಲೆಯಲ್ಲೇ ಉತ್ತಮ ಪ್ರೌಢಶಾಲೆಯೆಂಬ ಪ್ರಸಿದ್ಧಿ ಹೊಂದಿದೆ. ಆ ಪಾಠಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳು ಇಂದು ಸಮಾಜದಲ್ಲಿ ಉತ್ತಮ ಸ್ಥಾನದಲ್ಲಿದ್ದು ದೇಶ ಸೇವೆ ಮಾಡುತ್ತಿದ್ದಾರೆ. ರಾಜ್ಯಪ್ರಶಸ್ತಿ, ರಾಷ್ಟ್ರಪ್ರಶಸ್ತಿಗಳನ್ನು ಗಳಿಸಿದವರಿದ್ದಾರೆ.

ಗುರುದಾಸರು ಖಂಡಿತವಾದಿಗಳು; ಹಿಡಿದಕೆಲಸವನ್ನು ಬಿಡದೇ ಸಾಧಿಸುತ್ತಿದ್ದ ಛಲಗಾರರಾಗಿದ್ದರೂ ವಾತ್ಸಲ್ಯಮಯರು. ಇವರೊಬ್ಬ ಅದ್ಭುತ ಸಂಘಟನಾ ಚತುರರು ಮತ್ತು ಯೋಜಕರಾಗಿದ್ದರು. ವೇದಪಾಠಿಗಳಾಗಿದ್ದೂ ಅಲ್ಲದೆ ಉತ್ತಮ ಉಪನ್ಯಾಸಕಾರರೂ ಆಗಿದ್ದರು. 1962ರಿಂದ ಆಜೀವಪರ್ಯಂತ ಬಸರೀಕಟ್ಟೆಯ ಅಷ್ಟಾಂಗಯೋಗ ವಿಜ್ಞಾನಮಂದಿರದ ಶ್ರೀ ಕಾರ್ಯದರ್ಶಿಗಳಾಗಿದ್ದರು.

  

ಕೊನೆಯ ಬಾರಿ ಗುರುದಾಸರು ಬೆಂಗಳೂರಿಗೆ ಬಂದಿದ್ದಾಗ ವಿದ್ಯಾಶಾಲೆಯ ವಿದ್ಯಾರ್ಥಿಗಳೊಬ್ಬರ ಮನೆಗೆ ಬಂದಿದ್ದರು. ಆ ವಿದ್ಯಾರ್ಥಿಯ ತಂದೆಯವರೊಡನೆ ಇವರಿಗೆ ತುಂಬ ಗೆಳೆತನ. ಅವರು ಗುರುದಾಸರನ್ನು ಬೀಳ್ಕೊಡಲು ಹೋದಾಗ ಆಗಸದಲ್ಲಿ ಹಾರುತ್ತಿದ್ದ ಹಕ್ಕಿಯ ಸಾಲನ್ನು ತೋರಿಸಿ 'ರಾಮರಾಯರೇ, ಹಕ್ಕಿ ಹಾರುತಿದೆ ನೋಡಿದಿರಾ?' ಎಂದಿದ್ದರು. ರಾಮರಾಯರು ಅದು ಬೇಂದ್ರೆಯವರ ಕವನ' ಎಂದಿದ್ದರು. ಅದಕ್ಕೆ ಗುರುದಾಸರು 'ಎಲ್ಲಿ ಹಾರುತಿದೆ ನೋಡಿದಿರಾ?' ಎಂದಿದ್ದರು. ಇದಾದ ಕೆಲವು ದಿನಗಳ ನಂತರ ಗುರುದಾಸರು ಇಹಲೋಕವನ್ನು ತ್ಯಜಿಸಿ ಭಗವಂತನಪಾದಗಳನ್ನು ಸೇರಿದರು. ತಂಬೂರಿ ಮೀಟುತ್ತಲೇ ಭವಾಬ್ಧಿ ದಾಟಿಬಿಟ್ಟರು.

Saturday, April 25, 2020

Why Not to grieve ?

Original in Kannada: Vid Narasimha Bhat 
English Translation: K Mukunda
(Respond to lekhana@ayvm.in)



शॊकॊ नाशयतॆ धैर्य्ं शॊकॊ नाशयतॆ शृतम् 
शॊकॊ नाशयतॆ सर्वम् नास्ति शॊकसमॊ रिपुः ││ रामायण्म्- 2.62.15

Śōkō nāśhayatē dhairyaṁ śōkō nāśayatē śrutam |
Śōkō nāśayatē sarvaṁ nāsti śōkasamō ripuḥ || Rāmāyaṇa 2.62.15

Meaning : Grief destroys courage, acquired knowledge and all the noble attributes of a person. Hence there is no enemy equivalent to grief.

Explanation : Grief signifies a depressed state of the mind. In this situation, the mind is not in its normal state. There are two states of mind viz. 'active' and 'withdrawn'. While active state indicates that the mind is associated with the senses, whereas the withdrawn state arises when the mind gets insulated from the senses and gets associated with the Atman or Divinity.

In the active state the Mind experiences all emotions related to the sensory world. The experiences in this state pose obstacles to the mind in its journey to the withdrawn state. Our mind gets into a state of gloom when the associated Senses do not realize their object of desire. This condition is termed Shoka i.e. Grief or Sorrow. In the above Shloka of Ramayana all the ill-effects of Shoka have been briefly enumerated.Mind concentrating on one issue is termed as Courage. This concentration is destroyed when the Mind is enveloped with Shoka. On losing the concentration, the grasping power of Mind is diminished. With the reduction of grasping ability, the power of retention gets destroyed. All this leads to loss of acquired knowledge. A person losing knowledge gets completely ruined. Hence Shoka is likened to an enemy. Just as an enemy destroys a person, Shoka 
destroys his personality. Hence we should not be over-powered by Shoka or Sorrow.

Note: The Kannada version of this article can be viewed at AYVM blogs.

Friday, April 24, 2020

The Power of enticement of the Blended Senses

Kannada Article by: Tarodi Suresha
English Rendering by: M R Bhashyam
(Respond to lekhana@ayvm.in)


Jaimini, the disciple of Sage Vedavyaasa was diligently noting down what was being dictated by  the profoundly wise sage.  Knowing how difficult it was to control the senses, Vedavyaasa was dictating "Balavaan Indriya-graamo vidvaamsamapi karshati" meaning "the senses in combination are so powerful that they attract even the learned". Arguing within himself that "it may be true that the senses may attract commoners and make them weak but can't cause downfall to the learned and especially the trained" Jaimini changed what was being dictated to    "…. Naapakarshati" ie., from "they attract even the learned" to "they can't entice the learned".  Vedavyaasa, even though aware of this change, kept quiet.

One day there was a huge downpour. A soothingly calm atmosphere prevailed. Sage Jaimini was seated serenely in his hermitage after completing his prayers to the setting sun. The god of fire was burning in all his glory in the sacrificial hearth.  The representative of the eternal effulgent light, the flame of a wick, was   glowing brightly at the crest of a lamp post. At that very time he heard the wails of a woman in distress. There stood at the door a beautiful woman fully drenched. She requested the sage whether she could get protection in the hermitage till the rain abated.   Moved by her plight, the sage immediately acceded to her request. He made her sit in front of the fiery hearth. As he was watching the beautiful damsel, the sage's mind  slowly but surely slipped, disturbed. Soon, he suggested  to her whether she could be his wife. She responded by saying that if he should carry her  and go  round the  fiery hearth thrice,  she was agreeable. While he was performing as was told, during the third circumambulation the lady asked "naapakarshati?!" , "cannot attract the learned?". What a surprise! Instead of that beautiful damsel, the one who was in Jaimini's arms was none other than his Guru, Sage Vedavyaasa. Vedavyaasa had performed a clever experiment to drive home a subtle understanding!
Control of the senses is not attained easily.   It has to be acquired by the grace and guidance of the Guru and by constant and consistent practice of the path shown. "Life prevails only if the soul exists.  Only if the soul prevails over the senses as per its need, then only life exists" so the great ShriRanga Mahaguru used to remind.

Note: The Kannada version of this article can be viewed at AYVM blogs.    

Thursday, April 23, 2020

இந்திரனுக்கும் விளங்காத புதிர் (Intiranukkum Vilankata Putir)

மூலம்: Dr. கே.எஸ். கண்ணன்த
மிழாக்கம்: வனஜா
மின்னஞ்சல் : (lekhana@ayvm.in)

நம் புராணங்களிலும்உபநிடதங்களிலும் நிரம்பியுள்ளது அமரர்களுக்கும் அரக்கர்களுக்கும் இடையேயான போரின் கதைதான்.
ஒருமுறை போரில் அரக்கர்கள் தோல்வியுற்றனர். அமரர்கள் வென்றனர். உண்மை என்னவெனில் அமரர்காக  பரப்ரம்மமே வென்றது என கேனோபநிஷத்து கூறுகிறது..

அக்கதை பின்வருமாறு ரகசியமான  விஷயங்கள்  எளிதில் விளங்காது.அமரர்க்கும் இவ்வாறேஅவர்கள் இது தங்களின் வெற்றியே (நாமே வெற்றியடைந்தோம்) என்று எண்ணினர். ப்ரம்மம் இதை அறியாதா?  ஆயின் இதை அவர்களுக்கு அறிவுறுத்த வேண்டுமன்றோ! எனவே அவர்களின்முன் தோன்றியது. ஆயின் தன் சுய உருவம் தெளிவாக அறியும்படி அல்ல. வினோதமான உருவில். (உபநிடதத்தின் கூற்றுப்படி ஒரு யக்ஷனைப்போல்) அப்போது அமரர்கள் 'இது என்னவென்று அறிந்துவஎன்று அக்னி தேவனை அனுப்பினர். அவன் சென்ற போது "நீ யாரென்று" யக்ஷன் வினவ "நான் அக்னிதேவன் இப்பூவுலகிலுள்ள அனைத்தையும் எரிக்க வல்லேன்" என்றான். "இதனை சுட்டெறி" என ஒரு புல்லை  முன்னி்ட்டான் யக்ஷன். தன் முழு வலிமையுடன் முயன்றும் அப்புல்லை சுட்டெறிக்க இயலவில்லை.

தோல்வியை ஒப்புக்கொண்டு திரும்பின அக்னிதேவன் "யாரந்த யக்ஷனென்று. அறிய இயலவில்லை" என்று அமரர்களிடம் கூறினான். எல்லாவற்றையும் கவர்ந்து விடுவேனென்ற வாயு(காற்று)விற்கும் தோல்வியே கிட்டியது. பின்னர் இந்திரனே செல்ல வேண்டியதாயிற்று அப்பொழுதுஅந்த யக்ஷனே மறைந்து விட்டது. ஆயின் அதே வானத்தில் மிக்க ஒளியுடன் தேவி உமாஹைமவதி தோன்றினாள். அவளையே இந்திரன் வினவினான் யாரந்த யக்ஷன் என்று. "அதுவே ப்ரம்மம். ப்ரம்மத்தின் வெற்றியாலேயே நீங்கள்  பெருமை அடைந்தீர்களென்று" உரைத்தாள். இதன்பிறகே  இந்திரனுக்கு மெய்யறிவுண்டாயிற்றுஅப்போதே அதனை ப்ரம்மமென்று அறிந்து கொண்டான்.
"மின்னல் வெட்டியது" போன்ற என்னும் உவமையை உபநிடதம் கூறுகின்றது. ஸ்ரீ ஸ்ரீ ரங்கப்ரியஸ்வாமிகள் "வித்யுல்லேகேவ பாஸ்வரா" என்னும் மறைபொருளை இக்கட்டத்தை விவரிக்கையில் நினைவு கூர்ந்தார்.

தேவர்களே ஆயினும் அகங்காரம் இருப்பின்  வெற்றி இல்லை. அகங்காரமற்ற பரிசுத்த மனம் மட்டுமே இறைவனை உணர வல்லது என்ற அடிப்படை கருத்தை தேவதைகளுக்கு உணர்த்தியது பரப்பிரம்மம். 

குறிப்பு: இக்கட்டுரை யின் கன்னட மூலம் AYVM blogs ல் காணலாம். 

Wednesday, April 22, 2020

ಗುರುವಿನ ಗುಲಾಮನೇಕೆ ಆಗಬೇಕು ? (Guruvina Gulamanke Agabeku ?)

ಲೇಖಕಿ : ಶ್ರೀಮತಿ ಸುಮೇಧಾ 
 (ಪ್ರತಿಕ್ರಿಯಿಸಿರಿ lekhana@ayvm.in)


ನಾರದರು ಭಕ್ತಶಿರೋಮಣಿಗಳು, ಭಕ್ತಿಶಾಸ್ತ್ರಕ್ಕೆ ಆಚಾರ್ಯರೂ ಕೂಡ. ಅವರ ಪೂರ್ವಜನ್ಮದ ಆಖ್ಯಾನವು ಶ್ರೀಮದ್ಭಾಗವತದಲ್ಲಿ ಕಂಡುಬರುತ್ತದೆ. ನಾರದರು ಋಷಿಗಳ ಕುಟೀರದಲ್ಲಿ ಕೆಲಸ ಮಾಡುವಾಕೆಯ ಮಗನಾಗಿ ಹುಟ್ಟಿದ್ದರು. ೫ ವರ್ಷದ ಬಾಲಕನಾಗಿದ್ದಾಗಲೂ ಆಟಗಳಲ್ಲಿ ಮನಸ್ಸಿಲ್ಲದೆ, ವೇದ ವೇದಾಂತ ಹಾಗು ಭಗವದ್ಭಕ್ತಿಯಲ್ಲಿ ಮನಸ್ಸುಳ್ಳವರಾದರು. ಒಮ್ಮೆ ಚಾತುರ್ಮಾಸ್ಯದ ಸಮಯದಲ್ಲಿ ಕೆಲವರು ಸಾಧುಗಳು ಅವರಿರುವಲ್ಲಿಯೇ ವಾಸವಾಗಿದ್ದರು. ನಾರದರನ್ನು ಅವರ ಸಹಾಯಕ್ಕೆ ನೇಮಿಸಲಾಗಿತ್ತು.  ನಾರದರು ತೋರುತ್ತಿದ್ದ ಆಸಕ್ತಿ ಭಗವದ್ರಸದಿಂದಾಗಿ ಅವರಲ್ಲಿ ವಿಶೇಷ ಪ್ರೀತಿ ಉಂಟಾಯಿತು. ತ್ರಿಕಾಲದಲ್ಲೂ ಅವರು ಮಾಡುತ್ತಿದ್ದ ಭಜನೆ ಕೀರ್ತನೆಗಳಿಂದ ನಾರದರ ಮನಸ್ಸು ಇನ್ನೂ ಭಗವನ್ಮಯವಾಗಿ ಸತತವಾಗಿ ಅವರು ತೋರಿದ ದಾರಿಯಲ್ಲಿ ನಡೆಯತೊಡಗಿದರು. ಸಾಧುಗಳ ಶುಶ್ರೂಷೆಯಿಂದ ತಮ್ಮ ಪೂರ್ವಕರ್ಮಫಲಗಳನ್ನು ಕಳೆದುಕೊಂಡರು. ಚಾತುರ್ಮಾಸ್ಯದ ನಾಲ್ಕುತಿಂಗಳು ಕಳೆದಂತೆಯೇ ಸಂತರು ಅಲ್ಲಿಂದ ಹೊರಟರು. ಆದರೆ ನಾರದರು ಗುರುವಾಕ್ಯ-ಉಪದೇಶದ ಪರಿಪಾಲನೆಯನ್ನು ಹಾಗೆಯೆ ಮುಂದುವರಿಸಿದರು. ವಿಧಿವಶಾತ್ ಹಾವಿನ ವಿಷಕ್ಕೆ ಸಿಕ್ಕಿ ತಾಯಿಯನ್ನು ಕಳೆದುಕೊಂಡರು. ಆದರೆ ಅವರು ಧೃತಿಗೆಡಲಿಲ್ಲ. ವಿಧಿಯ ಆಟವನ್ನ ಸಹಜವಾಗಿ ಸ್ವೀಕರಿಸಿ, ಸಂಸಾರದ ಎಲ್ಲ ಬಂಧಗಳು ಕಳೆದವೆಂದುಕೊಂಡರು. ವೈರಾಗ್ಯದಿಂದ ಲೋಕಾಟನೆ ಮಾಡುತ್ತಾ ತಮಗೆ ಗುರುಗಳು ತೋರಿದ ಪಥದಲ್ಲಿ ಮುಂದುವರೆದರು. ಒಂದು ದಟ್ಟವಾದ ಅಡವಿಯನ್ನು ಪ್ರವೇಶಿಸಿ ನಿಶ್ಚಲವಾಗಿ ತಪಸ್ಸನ್ನು ಆಚರಿಸಿದರು. ದೀರ್ಘಕಾಲದ ತಪಸ್ಯೆ ನಂತರ ಶ್ರೀಹರಿಯನ್ನು ತಮ್ಮ ಧ್ಯಾನದಲ್ಲಿ ಸಾಕ್ಷಾತ್ಕಾರ ಮಾಡಿಕೊಂಡು ಧನ್ಯರಾದರು.

ಗುರುವಿನಲ್ಲಿ ನಿಶ್ಚಲ ಭಕ್ತಿ-ನಂಬಿಕೆಗಳು ಸಾಧಕನಿಗೆ ಅತ್ಯಾವಶ್ಯಕವೆಂದು ಶ್ರೀರಂಗಮಹಾಗುರುಗಳು ಒತ್ತಿ ಹೇಳುತ್ತಿದ್ದರು. ಎಲ್ಲರಿಗೂ ಗುರುವೆಂಬ ಮಾರ್ಗದರ್ಶಕ ಬೇಕೇಬೇಕು. ಗುರುಭಕ್ತಿಯು ಎಷ್ಟು ಶುದ್ಧವಾಗಿರುತ್ತದೆಯೋ ಅಷ್ಟು ಬೇಗ ಅದು ಫಲಿಸುತ್ತದೆ. ಅಲ್ಪಕಾಲದ ಸಂಗಡವಾದರೂ ಗುರುವಾಕ್ಯವನ್ನು ನಾರದರು ತನ್ಮಯತೆಯಿಂದ ಜೀವನಾದ್ಯಂತ ಪಾಲಿಸಿದರು. ಭೌತಿಕ ಏಳು ಬೀಳುಗಳನ್ನು ಲೆಕ್ಕಿಸದೆ ಸತತವಾಗಿ ತಮ್ಮ ಸಾಧನೆ ಮುಂದಿವರಿಸಿದರು. "ಗುರುವಿನ ಗುಲಾಮನಾಗುವತನಕ ದೊರೆಯದಣ್ಣ ಮುಕುತಿ" ಎಂಬ ದಾಸರ ವಾಕ್ಯವು ಈ ಮನಸ್ಥಿತಿಯನ್ನು ತಿಳಿಸುತ್ತದೆ. ಇಲ್ಲಿ ಗುಲಾಮಗಿರಿ ಶೋಷಣೆಯಲ್ಲ. ಇಂದ್ರಿಯಗಳ ಸ್ವೇಚ್ಛೆಯನ್ನು ತೊರೆದು ಸಂಯಮದ ನಡತೆಯನ್ನು ಹೇಳುತ್ತದೆ. ಅಂತಹ ಮಧುರವಾದ ಸತ್ಪಥದ ಗುಲಾಮಗಿರಿ ಎಲ್ಲರಿಗೂ ದೊರೆಯುವಂತಾಗಲೆಂದು ಹಾರೈಸೋಣ.       

ಸೂಚನೆ: 21/04/2020 ರಂದು ಈ ಲೇಖನ  ಉದಯವಾಣಿ ದಲ್ಲಿ ಪ್ರಕಟವಾಗಿದೆ.    

Tuesday, April 21, 2020

ಪ್ರತಿನಿಧಿಯ ಪೂಜೆ, ನಿಧಿಯ ಪೂಜೆಯೇ? (Pratinidhiya Pooje Nidhiya Poojeye?)

ಲೇಖಕರು: ಸುಮುಖ ಹೆಬ್ಬಾರ್
(ಪ್ರತಿಕ್ರಿಯಿಸಿರಿ lekhana@ayvm.in)



ನಮ್ಮ ಸಂಸ್ಕೃತಿ, ಆಚಾರ, ಸಂಪ್ರದಾಯಗಳಲ್ಲಿ ಗುರು-ಹಿರಿಯರಿಗೆ, ಪೂಜನೀಯರಿಗೆ ಗೌರವ ನೀಡುವ ಪದ್ಧತಿಯಿದೆ. ತುಂಬಾ ಶ್ರೇಷ್ಠರೆಂದು ಪೂಜಿಸುವ ವಿಷಯವೂ ಇದೆ. ವ್ಯಕ್ತಿಪೂಜೆ ಸರಿಯೇ ಎಂಬುದು ಸಮಾಜದಲ್ಲಿ ಪ್ರಶ್ನಾರ್ಹ ವಿಷಯವೂ ಆಗಿದೆ. ಇದನ್ನು ಶ್ರೀರಂಗ ಮಹಾಗುರುಗಳು ಕೊಡುತ್ತಿದ್ದ ಒಂದು ದೃಷ್ಟಾಂತದ ಮೂಲಕ ಅರ್ಥಮಾಡಿಕೊಳ್ಳಬೇಕಿದೆ.

ಒಬ್ಬ ವ್ಯಕ್ತಿಯ ಆತ್ಮೀಯ ಸಂಬಂಧಿಕರ ಮನೆಯಲ್ಲಿ ಶುಭ ಸಮಾರಂಭ. ಅವರು ಪ್ರೀತಿಯಿಂದ ಮತ್ತು ಒತ್ತಾಯ ಪೂರ್ವಕವಾಗಿ ಆಮಂತ್ರಿಸಿರುತ್ತಾರೆ. ಆದರೆ ಈ ವ್ಯಕ್ತಿಗೆ ಅತ್ಯಂತ ಒತ್ತಡದ ಮತ್ತು ಜವಾಬ್ದಾರಿಯುತವಾದ ಕೆಲಸ. ಹಾಗಾಗಿ ಸಮಾರಂಭಕ್ಕೆ ಹೋಗಲಾಗುತ್ತಿಲ್ಲ. ಹೋಗದಿದ್ದರೆ ಆತ್ಮೀಯರಿಗೆ ಬೇಸರವಾಗುತ್ತದೆ ಎಂಬ ಚಿಂತೆ. ಹಾಗಾಗಿ ತನ್ನ ಮಗನನ್ನು, ತನ್ನ ಪ್ರತಿನಿಧಿಯಾಗಿ ಕಳುಹಿಸಿದ. ಸಮಾರಂಭದಲ್ಲಿ ಸಂಬಂಧಿಕರು ವ್ಯಕ್ತಿಯ ಪ್ರತಿನಿಧಿಯಾಗಿ ಬಂದ ಮಗನನ್ನು ಆತ್ಮೀಯವಾಗಿ ಸ್ವಾಗತಿಸಿದರು. ಸಣ್ಣವನೆಂದು ಪರಿಗಣಿಸದೆ, ಆ ವ್ಯಕ್ತಿಗೆ ಹಾಕುತ್ತಿದ್ದ ಆಸನದಲ್ಲಿಯೇ ಕೂರಿಸಿದರು. ಅಷ್ಟೇ ಗೌರವದಿಂದ ಉಪಚರಿಸಿದರು. ಆ ವ್ಯಕ್ತಿಗೆ ನೀಡಬೇಕಿದ್ದ ಉಡುಗೊರೆಗಳನ್ನೆಲ್ಲಾ, ಇವನಿಗೆ ನೀಡಿದರು. ಕೊನೆಯಲ್ಲಿ ಅಷ್ಟೇ ಪ್ರೀತಿಯಿಂದ ಬೀಳ್ಕೊಟ್ಟರು.

ಎಲ್ಲರ ಜೀವನದಲ್ಲಿಯೂ ನಡೆಯುವ ಸಾಮಾನ್ಯ ಘಟನೆ ಇದು. ಇಲ್ಲಿ ಆಗಮಿಸಿದ ಪ್ರತಿನಿಧಿಗೆ ಎಲ್ಲಾ ರೀತಿಯ ಗೌರವವೂ ದೊರೆಯಿತು. ಹಾಗೆಯೇ ಪೂಜಾ ಸಂಧರ್ಭಗಳಲ್ಲಿ ನಿಧಿಯ ಸ್ಥಾನದಲ್ಲಿ ಭಗವಂತನನ್ನು ನೋಡಬೇಕು. ಯಾರು ಭಗವಂತನನ್ನು ಸಾಕ್ಷಾತ್ಕಾರ ಮಾಡಿಕೊಂಡಿರುತ್ತಾರೋ ಅಂತಹವರು ಪ್ರತಿನಿಧಿಯ ಸ್ಥಾನದಲ್ಲಿ ಪರಿಗಣಿಸಲು ಯೋಗ್ಯರಾದವರಾಗುತ್ತಾರೆ.

ಒಂದು ಕಬ್ಬಿಣದ ತುಂಡು ಕೆಂಡದ ಮಧ್ಯದಲ್ಲಿ ಸೇರಿಕೊಂಡಿದೆ ಎಂದುಕೊಳ್ಳೋಣ. ಬಹಳ ಸಮಯದ ನಂತರ, ಕೆಂಡದ ಸಾಂಗತ್ಯದಿಂದ, ಕಬ್ಬಿಣದ ತುಂಡು, ಕೆಂಡದಂತೆಯೇ ಕಾಣುತ್ತದೆ. ಕೆಂಡದ ಮಧ್ಯದಲ್ಲಿ ಕಬ್ಬಿಣದ ತುಂಡು ಸೇರಿಕೊಂಡಿದೆ ಎಂದು ಗುರುತಿಸಲಾಗದ ಮಟ್ಟಿಗೆ, ಕಬ್ಬಿಣದ ತುಂಡಿನಲ್ಲಿ ಮಾರ್ಪಾಡು ಕಂಡುಬರುತ್ತದೆ. ಭಗವಂತನನ್ನು ಸಾಕ್ಷಾತ್ಕಾರ ಮಾಡಿಕೊಂಡ ಒಬ್ಬ ಜ್ಞಾನಿಯೂ ಹಾಗೆಯೇ ಭಗವದ್ರಸದಲ್ಲಿ ಸದಾ ಕಾಲದಲ್ಲಿಯೂ ಮುಳುಗಿರುತ್ತಾನೆ. ಹಾಗಾಗಿ ಭಗವದ್ರಸವನ್ನು ತನ್ನ ಸಪ್ತ-ಧಾತುಗಳಲ್ಲಿಯೂ, ತ್ರಿಕರಣಗಳಲ್ಲಿಯೂ ತುಂಬಿಕೊಂಡಿರುತ್ತಾನೆ.  ಏಲಕ್ಕಿ ತಿಂದು ಮಾತನಾಡುವವನ ಬಾಯಿಂದ ಮಾತಿನ ಜೊತೆಗೆ, ಏಲಕ್ಕಿಯ ಪರಿಮಳ ಸಹಜವಾಗಿ ಪಸರಿಸುತ್ತದೆ. ಹಾಗೆಯೇ ಅಂತಹ ಜ್ಞಾನಿಯ ಎಲ್ಲಾ ಕೆಲಸಗಳಲ್ಲಿಯೂ, ನಡೆಗಳಲ್ಲಿಯೂ ಭಗವದ್ರಸ ಎದ್ದು ಕಾಣುವಂತಿರುತ್ತದೆ. ಅಂತಹ ಜ್ಞಾನಿಯು ಸಿಕ್ಕರೆ, ಆತನಿಗೆ ಸಮರ್ಪಿಸಿದ ಎಲ್ಲವನ್ನೂ ಭಗವಂತನಿಗೆ ತಲುಪಿಸುವ ಮತ್ತು ಅಲ್ಲಿಂದ ಬಂದ ಪ್ರೇರಣೆಯನ್ನು ನಮ್ಮೆಡೆಗೆ ತಲುಪಿಸುವ ವಾಹಕನಾಗಿ ಕೆಲಸ ಮಾಡುತ್ತಾನೆ. ಅಂತಹವನಿಗೆ ಪೂಜೆ ಮಾಡಿದರೆ, ನೇರವಾಗಿ ಭಗವಂತನಿಗೆ ಪೂಜೆ ಮಾಡಿದಂತೆ. ಅಂತಹವನು ಸರ್ವಾತ್ಮನಾ ಪೂಜ್ಯ.

ಹಾಗಾಗಿ ಜ್ಞಾನಿಗೆ ಪೂಜೆ ಮಾಡುವ ವಿಷಯ ಯಾವುದೊ ಒಂದು ವ್ಯಕ್ತಿಗೆ ಸಲ್ಲಿಸುವ ಪೂಜೆ ಅಥವಾ ಗೌರವ ಎಂದು ಭಾವಿಸಬಾರದು. ಜ್ಞಾನಿ ಎಂಬ ಪ್ರತಿನಿಧಿಯ ಮೂಲಕ, ಇಡೀ ಜಗತ್ತಿಗೇ ನಿಧಿಯಾಗಿರುವ ಪರಮಾತ್ಮನಿಗೆ ಸಲ್ಲಿಸುವ ಪೂಜೆ. ಹಿಂದಿನ ಕಾಲದಲ್ಲಿ ಗುರು-ಹಿರಿಯರು ಇಂತಹ ಜ್ಞಾನಿಗಳಾಗಿರುತ್ತಿದ್ದರು. ಹಾಗಾಗಿ ಅವರನ್ನು ಗೌರವಿಸುವ ಪೂಜಿಸುವ ಪದ್ಧತಿ ನಮ್ಮ ಸಂಸ್ಕೃತಿಯಲ್ಲಿ ಸೇರಿಕೊಂಡಿದೆ. ಇಂತಹ ಪದ್ದತಿಗಳನ್ನು ನಮ್ಮ ಸಂಸ್ಕೃತಿಯಲ್ಲಿ ಸೇರಿಸಿದ ಮಹರ್ಷಿಗಳಿಗೆ ನತಮಸ್ತಕರಾಗೋಣ.   

ಸೂಚನೆ: 21/04/2020 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.   

Monday, April 20, 2020

Aarya & Anaarya (Virtuous & Wicked)

Original in Kannada: Vid Narasimha Bhat 
English Translation: K Mukunda
(Respond to lekhana@ayvm.in


यथा कंदुकपातेन उत्पतति आर्यः विपतन्नपि |

तथा तु अनार्यः पतति मृत्पिंडपतनं यथा ||    -सुभाषित नीतिशतक ८३

yathA kaMdukapAtena utpatati AryaH vipatannapi | 

tathA tu anAryaH patati mRRitpiMDapatanaM yathA || -subhAShita nItishataka  83

Meaning:

A Virtuous person is like a ball that rebounds immediately on falling to the ground, whereas a Wicked person resembles a lump of mud that is unable to lift itself, when dropped on the ground.

Description:

Here two types of individuals are portrayed - Arya (Vituous Person) and Anaarya (Wicked Person). The former discharges his duties, whereas the latter shirks the same. One who performs the tasks pertinent to him is Aarya. The person whose nature is just the opposite is Anaarya. It is but natural for everyone born in this material world, to face difficulties. This cannot be avoided even by a Seer. In this context, what could be the scenario for an ordinary mortal?! Even a person who leads an austere life with right word, thought and deed gets completely vanquished in the avalanche of insurmountable series of miseries befalling him, losing all hope of revival. However with the passage of time he is able to rebound to his original state of mind, to experience happiness.

A ball is able to rebound even after falling to the ground. As the ball is light, it escapes the force of Gravity and gets lifted up immediately on being dropped to the ground.  Similarly a virtuous person gets back to his state of eminence without yielding to any sort of desire, attraction etc. in the environment to which he is eventually placed.

In comparison, a lump of mud cannot lift itself up against gravity, due its inherent weight, once it is cast on the ground. Similarly a Wicked person, once entangled in misery during his lifetime, cannot get liberated from the same.

In contrast, a Virtuous person washes off all his sins with his good deeds, gets lighter and ascends to the elevated state. A Wicked person becomes a sinner as a result of his evil deeds, becomes heavier, gets dumped here itself and suffers intensely.

Message/Conclusion: Punya (Good Deed)-Light     Papa-(Wicked Deed)-Heavy

Note: The Kannada version of this article can be viewed at AYVM blogs.   

Sunday, April 19, 2020

What is Dharma ?

 Original In Kannada: Vid Narasimha Bhat
English Translation: K Mukundan
(Respond to lekhana@ayvm.in)  



धर्मात् अर्थः प्रभवते धर्मात् प्रभवते सुखम् | 

धर्मेण लभते सर्वं धर्मसारमिदं जगत् ||    रामायण‍-३.९.३०

Dharmāt arthaḥ prabhavatē dharmāt prabhavatē sukham

Dharmēṇa labhatē sarvaṁ dharmasāramidaṁ jagat ||  Rāmāyaṇa‍-3.9.30


Meaning:

Dharma begets Matter. Happiness arises from Dharma. Everything is obtained from Dharma. This world is the essence of Dharma.

Description:

Dharma assumed so such prominence, as it was considered to be the essence of the world. The word 'Dharma' is derived from the Sanskrit Dhatu 'Dhring-Dharana-Poshanayoh". That which sustains and nourishes everything is termed as Dharma.  As this world is nurtured and sustained through Dharma, everything is ascribed to Dharma. That is why Sri Sriranga mahaguru specifically bestowed the original meaning for the word Dharma, as the Lord Himself. Only when we understand the real meaning of Dharma, we will be able to comprehend all other related issues.

This world created by God is sustained only by Him. In view of this, if we regard Him as the Guardian, that would only add to the embellishment of His Role. The meaning for the word ARTHA should be considered in this context as Matter. In this context, it could be understood that "this world of matter is created by God", is the meaning conveyed by the phrase "Dharma begets Matter". Further if we progress with the realization, that God is everything, we get to know the purpose of life. In this background, Dharma gets additional meanings like good conduct, means of obtaining communion with God etc. Only when we ascribe God as the meaning to the word Dharma, the above shloka is understood clearly.

The sublime message concealed in the wise utterance enumerated above, reveals itself as below:

"Matter evolves from God. Happiness arises from God. Everything is obtained from God. This world is the essence of God."

Note: The Kannada version of this article can be viewed at AYVM blogs. 

Saturday, April 18, 2020

ಕಷ್ಟಗಳು ಬಂದಾಗ ಎದುರಿಸೋಣ (Kastagalu Bandaga Edurisona)


ಲೇಖಕರು : ಶ್ರೀ ರಾಜಗೋಪಾಲನ್. ಕೆ. ಎಸ್  
(ಪ್ರತಿಕ್ರಿಯಿಸಿರಿ lekhana@ayvm.in)


ಗವದ್ಗೀತೆಯಲ್ಲಿ ಶ್ರೀಕೃಷ್ಣನು ಸ್ಥಿತಪ್ರಜ್ಞನ ಲಕ್ಷಣಗಳನ್ನು ವಿವರಿಸುತ್ತಾ, "ದುಃಖದ ಪ್ರಸಂಗಗಳೊದಗಿದಾಗ ಸಾಮಾನ್ಯರ ಮನಸ್ಸು ಉದ್ವೇಗಕ್ಕೊಳಗಾಗುತ್ತದೆ. ಆದರೆ ಅಂತಹ ಸಂದರ್ಭಗಳಲ್ಲಿ ಸ್ಥಿತಪ್ರಜ್ಞನು ಉದ್ವೇಗ ಹೊಂದದ ರೀತಿಯಲ್ಲಿ ಮನಃಸ್ಥಿತಿಯನ್ನು ಕಾಪಾಡಿಕೊಳ್ಳುತ್ತಾನೆ" (ದುಃಖೇಷು ಅನುದ್ವಿಗ್ನಮನಾಃ) ಎನ್ನುತ್ತಾನೆ.

ಹೇಳುವುದು ಸುಲಭ; ಆಚರಣೆ ಸಾಧ್ಯವೇ? ಎಂಬ ಪ್ರಶ್ನೆ ಸಹಜ. ಶ್ರೀಮದ್ರಾಮಾಯಣದ ಒಂದು ಪ್ರಸಂಗ- ರಾಮನಿಗೆ ಪಟ್ಟಾಭಿಷೇಕ ನಿಶ್ಚಯವಾಗಿರುತ್ತದೆ. ಕೈಕೇಯಿಯ ದೆಸೆಯಿಂದಾಗಿ ರಾಮನು ಕಾಡಿಗೆ ಹೊರಡಬೇಕಾಗುತ್ತದೆ. ರಾಜನಾಗುವುದಿರಲಿ; ಎಲ್ಲವನ್ನೂ ಬಿಟ್ಟು ಕಾಡಿಗೆ ಹೋಗಬೇಕೆಂದಾಗ ಯಾರಿಗೆ ತಾನೇ ಹತಾಶೆ ಉಂಟಾಗದು ! ಆದರೆ ಆಗ  ಇದ್ದ ರಾಮನ ಸ್ಥಿತಿಯನ್ನು ವಾಲ್ಮೀಕಿಗಳು, "ಎಲ್ಲ ಲೌಕಿಕಧರ್ಮಗಳನ್ನೂ ದಾಟಿದ ಯೋಗಿಯಂತೆ ಇತ್ತು, ಕಾಡಿಗೆ ಹೊರಟ ರಾಮನ ಮನಃಸ್ಥಿತಿ. ಅವನಲ್ಲಿ ಯಾವ ವಿಧವಾದ ಚಿತ್ತವಿಕಾರವೂ ಇರಲಿಲ್ಲ" ಎನ್ನುತ್ತಾರೆ.

ಕಳೆದ ಶತಮಾನದಲ್ಲಿ ಎಲೆಮರೆಯ ಕಾಯಿಯಂತೆ ಜೀವನ ಸಾಗಿಸಿದ ಶ್ರೀರಂಗಮಹಾಗುರುಗಳ ಜೀವನದಲ್ಲಿನ ಒಂದು ಪ್ರಸಂಗವೂ ರಾಮನ ಇಂತಹ ಮನಃಸ್ಥಿತಿಯನ್ನೇ ನೆನಪಿಗೆ ತರುತ್ತದೆ. ಹಳ್ಳಿಯಲ್ಲಿದ್ದ ಅವರ ಗೃಹದಲ್ಲಿ ಭಕ್ತ ಸಮ್ಮೇಳನವೊಂದು ಆರಂಭಗೊಳ್ಳುವುದರಲ್ಲಿತ್ತು. ಆ ಊರಿನಲ್ಲಿ ಆಗಷ್ಟೇ ಹರಿದ ಹುಚ್ಚುಹೊಳೆಯ ಪ್ರವಾಹದಿಂದ ಅವರ ಇಡೀ ವರ್ಷದ ಆದಾಯಕ್ಕೆ ಆಧಾರಭೂತವಾದ ಪೈರೆಲ್ಲ ಧ್ವಂಸವಾದ ವಾರ್ತೆಯನ್ನು ಆಳೊಬ್ಬನು ಬಂದು ಉಸುರುತ್ತಾನೆ. "ಆಗಲಿ, ಆಮೇಲೆ ನೋಡೋಣ" ಎಂದಷ್ಟೇ ಹೇಳಿ ಆ ಆಳನ್ನು ಕಳುಹಿಸಿ, ನೆರೆದಿದ್ದ ಭಕ್ತರಿಗೆ ಅದರ ಸುಳಿವು ಕೊಡದೆ ತಮ್ಮ ಕಾರ್ಯಕ್ರಮವನ್ನು ನಿರ್ವಿಕಾರವಾಗಿ ಜರುಗಿಸಿದರೆಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದುಂಟು. ಜೀವನದಲ್ಲಿ ಮಹಾಮೌಲ್ಯಗಳನ್ನು ಕಂಡುಕೊಂಡಿರುವ ಮಹಾತ್ಮರಿಗೆ ಸಹಜವಾಗಿಯೇ ಇಂತಹ ಧೃತಿಯುಂಟಾಗುತ್ತದೆ. ಅಂತಹವರ ನಡೆಯನ್ನು ಗಮನಿಸಿ ನೋಡುತ್ತಿದ್ದರೆ, ಆದರ್ಶದ ಪಾಠ ನಮಗೆ ದೊರಕುತ್ತದೆ.
ಕೆಲವು ಭಕ್ತರು "ಭಗವಂತ ನನಗೆ ಕಷ್ಟಗಳನ್ನು ಕೊಡು; ಆಗಲಾದರೂ ನಿನ್ನ ಸ್ಮರಣೆ ಮಾಡುವಂತಾಗುತ್ತದೆ" ಎಂದು ಒಂದು ಸ್ಥಿತಿಯಲ್ಲಿ ದೇವರನ್ನು ಬೇಡುವುದುಂಟು. ಹೇಗಾದರೂ ಭಗವಂತನಲ್ಲಿ ಭಕ್ತಿಯುಂಟಾಗಲಿ ಎಂಬ ಉದ್ದೇಶವನ್ನಿಟ್ಟುಕೊಂಡು ಭಕ್ತರು ಬಗೆ ಬಗೆಯ ವಿಧಾನಗಳಿಂದ ಪರಮಾತ್ಮನನ್ನು ಪ್ರಾರ್ಥಿಸುವುದುಂಟು. "ನಿನ್ನನ್ನು ಕರುಣಾಕರನೆಂಬುದೇತಕೋ?" ಎಂದು ಭಗವಂತನನ್ನು ಛೇಡಿಸುವುದುಂಟು. ಒಟ್ಟಿನಲ್ಲಿ ಭಕ್ತರ ಬಗೆ ಬಗೆಯ ಭಾಷೆಯ ಹಿಂದಿನ ಧ್ವನಿ, ಭಗವಂತನಲ್ಲಿ ಭಕ್ತಿಯನ್ನು ಪ್ರಾರ್ಥಿಸುವುದೊಂದೇ; ಹೇಗಾದರೂ ಭಗವಂತ ನಮಗೆ ಒಲಿದಾನೇ ಎಂಬ ಕಳಕಳಿಯಷ್ಟೇ. ಕಷ್ಟಗಳು ಬಂದಾಗಷ್ಟೆ ಭಗವಂತನನ್ನು ಸ್ಮರಿಸುತ್ತೇವೆ ಎಂದು ತಿಳಿದು ಕಷ್ಟಗಳನ್ನು ನಾವು ಆಹ್ವಾನಿಸಬೇಕಾಗಿಲ್ಲ.    

ಕೆಲವು ಮಹಾತ್ಮರನ್ನು ನೋಡಿದವರಿಗೆ ಒಂದಂಶ ಸ್ಪಷ್ಟವಾಗುತ್ತದೆ- ಮಹಾಪುರುಷರಿಗೆ ಎಷ್ಟೋಬಾರಿ ಜನಸಾಮಾನ್ಯರಿಗೆ ಬರುವ ಕಷ್ಟಗಳಿಗಿಂತ ಎಷ್ಟೋ ಪಟ್ಟು ಹೆಚ್ಚಿನ ಕಷ್ಟಗಳೇ ಬಂದಿವೆ. ಆಗ ಕಷ್ಟಪರಿಹಾರಕ್ಕಾಗಿ ದೇವರನ್ನು ಬೇಡದೆ ಸಮಾಧಾನ, ಧೈರ್ಯ ಹಾಗೂ ವಿವೇಕಗಳಿಂದ ಇದ್ದು ಪೌರುಷದಿಂದ ಕಷ್ಟಗಳನ್ನು ಎದುರಿಸಿರುವುದೇ ಅವರ ವೈಶಿಷ್ಟ್ಯ. ಕಷ್ಟಗಳು ಬರದಂತೆ ಮುಂಜಾಗ್ರತೆಯ ಕೆಲಸಗಳನ್ನು ಮಾಡಲೇಬೇಕು. ಕೈಮೀರಿ  ಕಷ್ಟಗಳು ಬಂದಾಗ ಧೃತಿಗೆಡಬಾರದು. ಕಷ್ಟಗಳು ಬಂದಾಗ ಕುಗ್ಗಿ ಕೈಚೆಲ್ಲಿ ಕುಳಿತುಬಿಟ್ಟರೆ, ಮುಂದೆ ಮಾಡಬಹುದಾದ ಪರಿಹಾರೋಪಾಯಗಳು ಹೊಳೆಯಲಾರವು. ಮಹಾತ್ಮರ ಸಹವಾಸವು ನಮಗೆ ಜೀವನಾದರ್ಶವನ್ನು ಕೊಡುವುದೆಂದೇ ದಾಸರು "ಸಜ್ಜನರ ಸಂಗದಲಿ ಇರಿಸೆನ್ನ ಮನವ" ಎಂದು ಭಗವಂತನನ್ನು ಪ್ರಾರ್ಥಿಸುತ್ತಾರೆ.  


ಸೂಚನೆ: 18/04/2020 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.  

ರಂಗನನ್ನು ಆಶ್ರಯಿಸುವ ರಂಗವಲ್ಲಿ (Ranganannu Ashrayisuva Rangavalli)

ಲೇಖಕರು: ಶ್ರೀಮತಿ ಮೈಥಿಲೀ  ರಾಘವನ್
(ಪ್ರತಿಕ್ರಿಯಿಸಿರಿ : lekhana@ayvm.in)

ರಂಗವಲ್ಲಿ (ರಂಗೋಲಿ) ಎಂಬುದು ಒಂದು ಜನಪ್ರಿಯ ಕಲೆಯಾಗಿದೆ. ವಿವಿಧ ಚಿತ್ರಗಳನ್ನು ಬರೆದು ಬಣ್ಣದ ಪುಡಿಗಳಿಂದಲೂ, ಬಣ್ಣಬಣ್ಣದ ಹೂವಿನದಳಗಳಿಂದಲೂ ಅವುಗಳನ್ನು ತುಂಬಿ ಅಲಂಕರಿಸುವುದು ಪ್ರಚಲಿತವಾಗಿದೆ. ಕೆಲವೆಡೆ ದೇವತಾಮೂತಿಗಳನ್ನು ಬಣ್ಣದ ಪುಡಿಯಿಂದ ರಚಿಸುವುದೂ ಸಹ ಕಾಣಸಿಗುತ್ತದೆ. ಇವೆಲ್ಲವೂ  ಅತ್ಯಂತ ಆಕರ್ಷಕವಾಗಿದ್ದು ಕಣ್ಮನಗಳನ್ನು ಸೆಳೆಯುತ್ತವೆ.

ನಮ್ಮದೇಶದಲ್ಲಿ ಮನೆಯ ಬಾಗಿಲಲ್ಲಿ, ಪೂಜಾಗೃಹದಲ್ಲಿ, ಉತ್ಸವಗಳಲ್ಲಿ, ಶುಭಸಮಾರಂಭಗಳಲ್ಲಿ ರಂಗವಲ್ಲಿಯ ಅಲಂಕಾರವು ಅವಿಭಾಜ್ಯ ಅಂಗವಾಗಿದೆ. ಈ ಪದ್ಧತಿಯು ಮೇಲೆಹೇಳಿದಂತೆ ಕಣ್ಣಿಗೆ ಹಬ್ಬವಾಗುವ ಉದ್ದೇಶಮಾತ್ರದಿಂದ ಬಂದದ್ದಲ್ಲ. ಭಾರತೀಯ ಸಂಸ್ಕೃತಿಯಲ್ಲಿ ರಂಗವಲ್ಲಿಯನ್ನು ಕಲೆಯಾಗಿ ತಂದಿದ್ದಾರೆ. 'ಕಲೆ' ಎನ್ನುವ ಪದ ಇಂದು 'Art' ಎನ್ನುವುದರ ಭಾಷಾಂತರವಾಗಿ ಬಳಸಲ್ಪಡುತ್ತಿದೆ. ಆದರೆ ಮಹರ್ಷಿ ಸಾಹಿತ್ಯದಲ್ಲಿ ಈ ಪದಕ್ಕೆ 'ಅಂಶ'-'ಪೂರ್ಣವಾದ ವಸ್ತುವಿನ ಒಂದು ಭಾಗ' ಎಂಬರ್ಥವಿದೆ. ಭಾರತೀಯವಾದ ಕಲೆಗಳೆಲ್ಲವೂ ಕೂಡ ಪೂರ್ಣಪುರುಷನಾದ ಪರಮಾತ್ಮನ ಭಾಗಗಳಾಗಿ ವಿಸ್ತಾರವಾಗಿವೆ ಎಂಬುದು ಜ್ಞಾನಿಗಳ ಮತ. ಶರೀರದ ಭಾಗವಾದ ಕೈಯನ್ನು ಹಿಡಿದೆಳೆದರೆ ಆಸಾಮಿಯೇ ಹತ್ತಿರಬರುತ್ತಾನಲ್ಲವೇ? ಆದ್ದರಿಂದ ಯಾವುದನ್ನು ಹಿಡಿದಾಗ ಪೂರ್ಣನಾದ ಭಗವಂತನು ಹತ್ತಿರನಾಗುವನೋ ಅಂತಹದ್ದನ್ನು ಮಾತ್ರವೇ ಋಷಿಸಂಸ್ಕೃತಿಯು 'ಕಲೆ' ಎಂದು ಗುರುತಿಸಿದೆ. 'ನೆಲೆ'ಯಲ್ಲಿ ನಿಲ್ಲಿಸುವುದೇ 'ಕಲೆ'. ಮೇಲೆ ಸೂಚಿಸಿರುವ ಅರ್ಥದಲ್ಲಿ ಭಾರತೀಯಸಂಸ್ಕೃತಿಯು ೬೪ ಕಲೆಗಳನ್ನು  ಗುರುತಿಸಿದೆ. ಅವುಗಳಲ್ಲಿ ಚಿತ್ರಕಲೆಯ ಒಂದು ಪ್ರಕಾರವೇ ರಂಗವಲ್ಲಿ.

ರಂಗವಲ್ಲಿಯು ಕಲೆಯಾಗುವುದು ಹೇಗೆ?
ಇದು ಸಾಮಾನ್ಯವಾಗಿ ಕಾಣಸಿಗುವ ಷಟ್ಕೋಣ-ರಂಗವಲ್ಲಿ. ಇದರಲ್ಲಡಗಿರುವ ತತ್ತ್ವವನ್ನು ನೋಡಿದಾಗ ಮಹರ್ಷಿಗಳ ಕುಶಲಮತಿಯ ಅರಿವಾಗುವುದು. ಸೃಷ್ಟಿಮೂಲದಲ್ಲಿ ಬಿಂದುರೂಪವಾದ (.) ಪುರುಷನೊಬ್ಬನೇ ಇದ್ದ. ಆತನು ತಾನು ವಿಸ್ತಾರವಾಗಬೇಕೆಂದು ಇಚ್ಚಿಸಿದಾಗ ತಾನೇ ಪುರುಷ-ಪ್ರಕೃತಿರೂಪವಾದದ್ದನ್ನು ವಿಸರ್ಗವು( . . ) ಸೂಚಿಸುತ್ತಿದೆ. ಇವೆರಡರ ಸೇರುವೆಯಿಂದ ವಿಸ್ತಾರವಾಗುವ ಸೃಷ್ಟಿಯಸಂಕೇತ ಅಧಸ್ತ್ರಿಕೋಣ. ಈ ಸೃಷ್ಟಿಯಲ್ಲಿ ಪುರುಷಾರ್ಥಮಯ-ಬಾಳಾಟದಿಂದ ಪುನಃ ನಮ್ಮ ಮೂಲಸ್ವರೂಪವಾದ ಭಗವಂತನನ್ನು ಸೇರಬಹುದು ಎಂಬುದನ್ನು ಸೂಚಿಸುವುದು ಊರ್ಧ್ವತ್ರಿಕೋಣ. ಯೋಗ-ಭೋಗಮಯವಾದ ಜೀವನದ ನಕ್ಷೆಯಾಗುವಂತೆ ಈ ಎರಡು ತ್ರಿಕೋಣಗಳನ್ನೂ ಜೋಡಿಸಿ ಷಟ್ಕೋಣಾಕೃತಿಯ ರಂಗವಲ್ಲಿಯನ್ನು ರಚಿಸಿದೆ ಜ್ಞಾನಿಗಳ ಮೇಧೆ. ಇದನ್ನು ಮನೆಬಾಗಿಲಲ್ಲಿ ಚಿತ್ರಿಸಿದಾಗ 'ಯೋಗ-ಭೋಗಮಯವಾದ ಜೀವನವನ್ನು ನಡೆಸುವ ಗೃಹಸ್ಥನ ಮನೆ' ಎಂಬುದರ ಸಂಕೇತವಾಗುತ್ತದೆ. ಮಧ್ಯಬಿಂದುವು ಜೀವನದ ಕೇಂದ್ರವಾದ ಪರಮಾತ್ಮಸೂಚಕವಾಗಿದೆ. ಇದು ಜೀವನದ ಮೂಲ-ವಿಸ್ತಾರ-ನೆಲೆ(ಗುರಿ) ಇಷ್ಟರ ಕಡೆಗೂ ನಮ್ಮನ್ನು ಕೊಂಡೊಯ್ಯುವ ವಿನ್ಯಾಸವಾಗಿದ್ದು 'ಕಲೆ'ಎಂಬ ಅನ್ವರ್ಥವಾದ ಹೆಸರನ್ನು ಪಡೆದಿದೆ.
ಯೋಗಿವೇದ್ಯವಾದ ದೇವತಾಶಕ್ತಿಗಳ ಪೂಜಾದಿಗಳಲ್ಲಿ ಒಳದರ್ಶನಕ್ಕೆ ಹೊಂದಿಕೊಂಡಂತೆ ಹೊರಗೆ ಮಂಡಲಗಳನ್ನು(ರಂಗವಲ್ಲಿಯಾಗಿ) ರಚಿಸುವುದುಂಟು. ಪೂಜಾಗೃಹದಲ್ಲಿ ಪ್ರತಿದಿನವೂ ಆಯಾ ವಾರಕ್ಕೆ ತಕ್ಕಂತೆ ನವಗ್ರಹ-ರಂಗವಲ್ಲಿಗಳನ್ನು ಚಿತ್ರಿಸಿ ಮಧ್ಯದಲ್ಲಿ ಸಂಬಂಧಪಟ್ಟ ಬೀಜಾಕ್ಷರಗಳನ್ನು ಬರೆಯುವ ರೂಢಿಯೂ ಉಂಟು.

ಜೀವನಬಳ್ಳಿಯನ್ನು ಸೂಚಿಸುವ ಫಲ-ಪುಷ್ಪಭರಿತವಾದ ಬಳ್ಳಿಗಳನ್ನೂ ಚಿತ್ರಿಸುವುದುಂಟು. ಇಲ್ಲಿ ಶ್ರೀರಂಗಮಹಾಗುರುಗಳ ಮಾತೊಂದು ಸ್ಮರಣೀಯವಾಗಿದೆ -"ಜೀವಲತೆಯು ಕಾಮಕ್ರೋಧಗಳ ಮೇಲೆ ಹಬ್ಬಿಬಿಟ್ಟರೆ ಅಲ್ಲಿಂದ ಕೀಳುವುದು ಸಾಧ್ಯವಿಲ್ಲ. ಆದ್ದರಿಂದ ಅದರ ಒಂದು ಶಾಖೆಯನ್ನಾದರೂ ಪರಮಪುರುಷನೆಂಬ ಬೆಳಕಿನೆಡೆಗೆ ಹಬ್ಬಿಸಿ. ಅಲ್ಲಿ ಸುಖವಾಗಿ ಬೆಳೆದಾಗ ಉಳಿದ ಕಾಮಕ್ರೋಧಾದಿಗಳನ್ನು ಕತ್ತರಿಸ ಬಹುದು". ಬಳ್ಳಿಗಳ ವಿನ್ಯಾಸವು ಈ ಮಾತಿನೆಡೆಗೆ ನಮ್ಮನ್ನು ಒಯ್ಯಬಲ್ಲುದು.

ಹೀಗೆ ಅಂತ'ರಂಗ'ನನ್ನಾಶ್ರಯಿಸುವ ಜೀವ'ವಲ್ಲಿ'ಯ(ಬಳ್ಳಿಯ) ನಾನಾಮುಖದ ನಕ್ಷೆಗಳೇ 'ರಂಗವಲ್ಲಿ'ಗಳಾಗುತ್ತವೆ.  

ಸೂಚನೆ:  18/04/2020 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ .  

ವ್ಯಕ್ತಿಯ ಸ್ವಭಾವ (Vyaktiya Svabhava)

ಲೇಖಕರು: ಶ್ರೀ ನರಸಿಂಹ ಭಟ್ಟ 
(ಪ್ರತಿಕ್ರಿಯಿಸಿರಿ lekhana@ayvm.in)




ಪ್ರಾರಭ್ಯತೇ ನ ಖಲು ವಿಘ್ನಭಯೇನ ನೀಚೈಃ ಪ್ರಾರಭ್ಯ ವಿಘ್ನವಿಹತಾ ವಿರಮಂತಿ ಮಧ್ಯಾಃ |
ವಿಘ್ನೈಃ ಪುನಃ ಪುನರಪಿ ಪ್ರತಿಹನ್ಯಮಾನಾಃ ಪ್ರಾರಬ್ಧಮುತ್ತಮಗುಣಾ ನ ಪರಿತ್ಯಜಂತಿ || - ಸುಭಾಷಿತ ನೀತಿಶತಕ  ೭೨


ಅರ್ಥ-
ಅಧಮಸ್ವಭಾವದ ಜನರು ವಿಘ್ನದ ಭಯದಿಂದ ಕಾರ್ಯವನ್ನು ಆರಂಭ ಮಾಡುವುದಿಲ್ಲ. ಮಧ್ಯಮಸ್ವಭಾವದವರು ವಿಘ್ನಗಳಿಂದ ಮಧ್ಯದಲ್ಲೇ ಕಾರ್ಯವನ್ನು ಸ್ಥಗಿತಗೊಳಿಸುತ್ತಾರೆ. ಆದರೆ ಉತ್ತಮರು ಎಷ್ಟೇ ವಿಘ್ನಗಳು ಮತ್ತೆ ಮತ್ತೆ ಎರಗಿದರೂ ಪ್ರಾರಂಭ ಮಾಡಿದ ಕಾರ್ಯವನ್ನು ಬಿಡುವುದಿಲ್ಲ. ಮುಗಿಸುತ್ತಾರೆ.

ವಿವರಣೆ-
ಈ ಸುಭಾಷಿತದಲ್ಲಿ ಮೂರು ಬಗೆಯ ಜನರ ಸ್ವಭಾವವನ್ನು ವಿವರಿಸಿದ್ದಾರೆ. ಉತ್ತಮ ಮಧ್ಯಮ ಮತ್ತು ಅಧಮ ಎಂದು. ಮನುಷ್ಯನ ಮನಸ್ಸಿನ ಸ್ಥಿರತೆಯನ್ನು ಅನುಸರಿಸಿ ಈ ಮೂರು ವಿಭಾಗವನ್ನು ಮಾಡಲಾಗಿದೆ. ಯಾವುದೇ ಕಾರ್ಯವನ್ನು ಮಾಡಬೇಕಾದರೂ ಮನಸ್ಸು ಕಾರಣ. ಮಾಡುವವನ ಮನಸ್ಸನ್ನು ಅವಲಂಬಿಸಿ ಕಾರ್ಯದ ಗುಣಮಟ್ಟ ಸಫಲತೆಯನ್ನು ಅಳೆಯಬಹುದು. ಮನಸ್ಸೇ ಎಲ್ಲದಕ್ಕೂ ಕಾರಣ. ಯಾವನು ತನ್ನ ಮನಸ್ಸನ್ನು ಎಷ್ಟರ ಮಟ್ಟಿಗೆ ನಿಯಂತ್ರಣದಲ್ಲಿ ಇಟ್ಟುಕೊಂಡಿದ್ದಾನೆ ಎಂಬುದರ ಮೇಲೆ ವ್ಯಕ್ತಿಯ ಗುಣಮಟ್ಟವು ತೀರ್ಮಾನವಾಗುವುದು. ಆರಂಭಿಸಿದ ಕಾರ್ಯವು ಫಲಿಸಲು ಮನಸ್ಸು ಏಕಾಗ್ರದಿಂದ ಕೂಡಿದಾಗ ಮಾತ್ರ ಸಾಧ್ಯ. ಆಗ ಆತ ಎಂತಹ ತೊಂದರೆ ಬಂದರೂ ಅದನ್ನು ಲೆಕ್ಕಿಸದೇ ಸಮಾಪ್ತಿಪರ್ಯಂತವೂ ಕಾರ್ಯಮಗ್ನನಾಗುತ್ತಾನೆ. ಇವನನ್ನು 'ಧೀರ' ಎಂದೂ ಕರೆಯಬಹುದು. ಹೇಗೆ ಧೀರನಾದ ಸೈನಿಕ ಎಂತಹ ಬಿಗಿ ವಾತಾವರಣದಲ್ಲೂ ಎದೆಗೊಂದದೇ ಶತ್ರುಸೈನ್ಯವನ್ನು ಬಡಿದೇ ಬರುತ್ತಾನೆ. ಹಾಗೇ ಆರಂಭಿಸಿದ ಕಾರ್ಯವನ್ನು ಧೀರನಾದವನು ಮುಗಿಸಿಯೇ ಸಿದ್ಧ. ಅದೇ ಪುಕಲನು ಬಂದ ವಿಘ್ನಗಳಿಂದ ಹೆದರಿ ಆರಂಭಿಸಿದ ಕಾರ್ಯವನ್ನು ಮಧ್ಯದಲ್ಲೇ ಬಿಡುತ್ತಾನೆ. ಇನ್ನೂ ಕೆಲವರು 'ಯಾವುದಾರೂ ತೊಂದರೆ ಬಂದು ಶುರು ಮಾಡಿದ ಕೆಲಸ ನಿಂತುಬಿಟ್ಟರೆ!' ಎಂಬ ಆತಂಕದಿಂದ ಯಾವುದೇ ಕಾರ್ಯವನ್ನು ಶುರು ಮಾಡುವ ಮನಸ್ಸನ್ನೇ ಮಾಡುವುದಿಲ್ಲ. 'ಏನೇ ಬರಲಿ. ಬಂದಿದ್ದನ್ನು ಸಾಧಿಸಿಯೇ ಸಿದ್ಧ' ಎಂಬ ಧೈರ್ಯದಿಂದ ಕಾರ್ಯವನ್ನು ಆರಂಭಿಸಿದರೆ ಫಲಕೊಡದಿರಲು ಹೇಗೆ ಸಾಧ್ಯ ! ಎಂಬುದು ಈ ಸೂಕ್ತಿಯ ಸಾರ.

ಸೂಚನೆ:  18/04/2020 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ .

Friday, April 17, 2020

If Exists, let it be Visible !

Original article by: Mythily Raghavan
English Rendering by: M.S. Anantha
(Respond to lekhana@ayvm.in)


Once upon a time cholera had spread in and around the villages of a city. A doctor came to educate the villagers about their health. Addressing the villagers he said "The water which all of you are drinking daily contains disease-spreading bacteria. So please do not drink this water." Most of the people accepted the words of the doctor. But one person protested and told the doctor "Sir, if bacteria are present in the water, they should have been seen by us. If not, at least, the bacteria should have got stuck in our throats while drinking this water! Hence, I cannot accept what you say."  The doctor tried to convince him saying that the bacteria are so small that they cannot be seen by our naked eyes. Even then he did not agree. Finally, the doctor took some water-sample and took him to a laboratory in the nearby city. There the doctor showed him the minute bacteria in the water sample through a microscope. At once, he became dumb-founded after seeing the bacteria dancing in the water-sample.

Sri SriRanga mahaguru taught us a lesson through this anecdote. "If you can grind a glass suitably so that it acquires the capability of a lens for a microscope, then we can see even the tiny things, which cannot be seen with our bare eyes. Similarly, if your mind is subjected to proper spiritual orientation, then, just like a microscopic lens, it will acquire the ability to 'see' even the imperceptible Paramatman.

The ancient education system propounded by Maharshis (seers) was very successful in achieving this state. In early boyhood days, they would embrace Brahmacharya (celibacy). Under the able guidance of a proper Guru, their minds would become matured by studying vedic literature and through practice of penance they were able to visualize and enjoy the inner light, the Paramatman.  Then, by the command of their Guru, they used to embrace the Gruhasthashrama (house-holder's life) and successfully spread the divine knowledge acquired by them. Today such a system of education may not be in vogue, but still several methodologies blessed by Maharshis such as stotras and poojas would cleanse the mind, if meticulously followed. This would prepare the mind to enjoy and experience God, the Almighty.

Note: The Kannada version of this article can be viewed at AYVM blogs.