Sunday, August 30, 2020

ವಾಮನನಾಗಿ ಬಂದು ತ್ರಿವಿಕ್ರಮನಾಗಿ ಅನುಗ್ರಹಿಸಿದ ! (Vamananagi Bandu Trivikramanagi Anugrahisida !)

 ಲೇಖಕರು: ಮೈಥಿಲೀ ರಾಘವನ್

(ಪ್ರತಿಕ್ರಿಯಿಸಿರಿ lekhana@ayvm.in)


  

ಶ್ರೀಮಹಾವಿಷ್ಣುವಿನ  ಪ್ರಸಿದ್ಧವಾದ  ದಶಾವತಾರಗಳಲ್ಲಿ ಒಂದಾದ ವಾಮನಾವತಾರವು ಅನೇಕ ಪುರಾಣಗಳಲ್ಲಿ  ಸ್ಥಾನವನ್ನು ಗಳಿಸಿದೆ.  

ಭಾಗವತೋತ್ತಮನಾದ ಪ್ರಹ್ಲಾದನ ಮೊಮ್ಮಗನೂ, ಅಸುರ ರಾಜನೂ ಆದ ಬಲಿಚಕ್ರವರ್ತಿಯು(ಇಂದ್ರಸೇನಮಹಾರಾಜನು) ಮಹಾತ್ಮ, ಮಹಾಭಾಗವತ, ವಿಷ್ಣುಭಕ್ತ. ಪರಮಭಾಗವತರ ಪಟ್ಟಿಯಲ್ಲಿ ಈತನೂ ಸೇರಿಸಲ್ಪಟ್ಟಿದ್ದಾನೆ.  

ಶುಕ್ರಾಚಾರ್ಯರು ಮಾಡಿಸಿದ ಯಜ್ಞಫಲವಾಗಿ ದೊರಕಿದ ವರ-ಅನುಗ್ರಹ ಬಲದಿಂದ  ಬಲಿಯು ಇಂದ್ರನನ್ನು ಪರಾಜಯಗೊಳಿಸಿ  ದೇವಲೋಕದಲ್ಲೂ ತನ್ನ ಅಧಿಕಾರವನ್ನು ಚಲಾಯಿಸತೊಡಗಿದನು. ದೇವಮಾತೆಯಾದ ಅದಿತಿದೇವಿಯ  ಪ್ರಾರ್ಥನೆಗೆ ಓಗೊಟ್ಟು ಶ್ರೀಹರಿಯು ಶ್ರಾವಣಮಾಸದ ಶ್ರವಣ ನಕ್ಷತ್ರ, ದ್ವಾದಶಿಯದಿನ ಅದಿತಿಯ ಪುತ್ರನಾಗಿ ಜನಿಸಿದ. ಶಂಖ-ಚಕ್ರ-ಗದಾಧಾರಿಯಾಗಿ  ಆಕೆಗೆ ದರ್ಶನವಿತ್ತು ಕೂಡಲೇ ವಾಮನನ(ಕಿರಿದಾದ) ರೂಪವನ್ನು ತಾಳುತ್ತಾನೆ.  ಆ ಸಮಯಕ್ಕೆ ಬಲಿಚಕ್ರವರ್ತಿಯು  ಯಜ್ಞವನ್ನಾಚರಿಸುತ್ತಿದ್ದ.  ಎಲ್ಲರಿಂದಲೂ ಸ್ತುತಿಸಲ್ಪಟ್ಟ ಆ ವಾಮನಬ್ರಹ್ಮಚಾರಿಯು ಅತ್ಯಂತ ತೇಜೋರೂಪಿಯಾಗಿ  ಛತ್ರಿಯನ್ನು ಹಿಡಿದು ಬಲಿಯ ಯಜ್ಞವಾಟಿಕೆಯ ಬಳಿ ಸಾರಿದನು.

ಆತನನ್ನು ಕಂಡೊಡನೆಯೇ  ವಯಸ್ಸಿನಲ್ಲಿ ಹಿರಿಯರಾದ ಭೃಗುವಂಶದ  ಋಷಿಗಳೆಲ್ಲರೂ ತಟ್ಟನೆ ಎದ್ದುನಿಂತರು. ಅವನ ತೇಜಸ್ಸು ಅವರನ್ನು ಎಬ್ಬಿಸಿ ನಿಲ್ಲಿಸುತ್ತದೆ. ಬಂದಿರುವ ಬ್ರಹ್ಮಚಾರಿಯು ಸಾಕ್ಷಾತ್ ಮಹಾವಿಷ್ಣು ಎಂಬುದನ್ನು ಅರಿತ ಶುಕ್ರಾಚಾರ್ಯರು ರಾಜನನ್ನು ಎಚ್ಚರಿಸಿದರು. ಆದರೆ ಭಕ್ತಷ್ರೇಷ್ಠನಾದ ಬಲಿಯು "ಯಾರಿಗೆ ದಾನಕೊಡುವುದಾದರೂ ವಿಷ್ಣುವನ್ನೇ ಸ್ಮರಿಸಿಕೊಡಬೇಕೆಂದಿರುವಾಗ ಸಾಕ್ಷಾತ್ ವಿಷ್ಣುವೇ ಯಾಚಿಸಿದಾಗ ಕೊಡದಿರುವುದು ಹೇಗೆ?" ಎಂದು ಹೇಳಿದನು. ದಾನಕೊಡುವುದರಲ್ಲಿ ಎತ್ತಿದ ಕೈಯಾಗಿದ್ದ ಬಲಿಚಕ್ರವರ್ತಿ ಆತನನ್ನು ಸಂತೋಷದಿಂದ ಸ್ವಾಗತಿಸಿ "ಏನು ಅಪ್ಪಣೆ?" ಎಂದ.

ವಾಮನನು ತನ್ನ ಕಾಲಿನಳತೆಯಲ್ಲಿ ಮೂರಡಿ ಜಾಗವನ್ನು ಕೊಡಬೇಕೆಂದು ಯಾಚಿಸಿದಾಗ ಬಲಿಚಕ್ರವರ್ತಿಯ ಅಹಂಕಾರವು ಮತ್ತೆ ತಲೆಯೆತ್ತಿತು. "ಎಷ್ಟೋ ಜನರಿಗೆ ಆಶ್ರಯವನ್ನು ನೀಡಿರುವ ನನ್ನ ಬಳಿ ಧನ-ಕನಕವೇ ಮುಂತಾದ ಅಮೂಲ್ಯವಾದ ವಸ್ತುಗಳನ್ನು ಬಿಟ್ಟು ಬಾಲಿಶಬುದ್ಧಿಯಿಂದ ಇಂಥಹ ಸಣ್ಣ ಬೇಡಿಕೆಯೇಕೆ?" ಎಂದನು. ಆದರೆ ವಾಮನನು ತಾನು ಬಯಸಿದ್ದನ್ನೇ ಕೊಡಬೇಕೆಂದು ಒತ್ತಾಯ ಮಾಡಿದಾಗ ಬಲಿಯು ಒಪ್ಪಲೇಬೇಕಾಯಿತು.

ಅದರಂತೆಯೇ ಸಂಕಲ್ಪಮಾಡಿ ಆತನಿಗೆ ದಾನವನ್ನು ಕೊಟ್ಟ. ಕೂಡಲೇ ವಾಮನನು ಎಲ್ಲರೂ ನೋಡುತ್ತಿದ್ದಂತೆಯೇ ತನ್ನ ಸರ್ವವ್ಯಾಪಿಯಾದ  ತ್ರಿವಿಕ್ರಮರೂಪವನ್ನು  ತಾಳಿದ. ಒಂದಡಿಯಿಂದ ಬ್ರಹ್ಮಾಂಡವೆಲ್ಲವನ್ನೂ ಆಕ್ರಮಿಸಿದ. ಎರಡನೆಯ ಹೆಜ್ಜೆಯಿಂದ ಅಂತರಿಕ್ಷ, ದ್ಯುಲೋಕಗಳನ್ನಳೆದ. ಮೂರನೆಯ ಹೆಜ್ಜೆಗೆ ಜಾಗವೆಲ್ಲಿ ಎಂದು ಬಲಿಯನ್ನು ಕೇಳಿದ. ಸತ್ಯನಿಷ್ಠನಾದ ಬಲಿಯು ಮೂರನೆಯ ಹೆಜ್ಜೆಯನ್ನು ತನ್ನ ತಲೆಯಮೇಲಿಟ್ಟು ಅಳೆಯುವಂತೆ ಪ್ರಾರ್ಥಿಸಿದ. ಭಗವಂತನು ತನ್ನ ಅನುಗ್ರಹಪಾದವನ್ನು ಆತನ ಶಿರಸ್ಸಿನಲ್ಲಿಟ್ಟು ಅನುಗ್ರಹಿಸಿ ಅವನನ್ನು ಸುತಲಲೋಕಕ್ಕೆ ಅದುಮಿದ.

ಸುತಲಲೋಕದಲ್ಲಿ ಇಂದ್ರಲೋಕವನ್ನೂ ಮೀರಿಸುವ ಸುಖಭೋಗಗಳಿಂದಕೂಡಿ ತನ್ನ ಪರಿವಾರದೊಡನೆ ವಾಸಿಸುವಂತೆ ಮಾಡಿದನು. ಅಷ್ಟೇ ಅಲ್ಲ, ಆತನ ರಕ್ಷಣೆಗೆ ತಾನೇ ಗದಾಪಾಣಿಯಾಗಿ ದ್ವಾರದಲ್ಲಿ ನಿಂತ! ಬಲಿಯನ್ನು ಆಸುರೀಶಕ್ತಿಗಳು ಮೆಟ್ಟದಂತೆ  ಸುದರ್ಶನಚಕ್ರವನ್ನೂ ನೇಮಿಸಿದ! ಇಂದ್ರಪದವಿಯ ಇಚ್ಚೆ ಅವನಲ್ಲಿದ್ದುದರಿಂದ ಭಗವಂತನು ಮುಂದೆ ಸಾವರ್ಣಿಕ ಮನ್ವಂತರದಲ್ಲಿ  ಇಂದ್ರಪದವಿಯನ್ನು ಗಳಿಸಿ ಕೊನೆಗೆ ತನ್ನ ಬಳಿಗೇ ಬಂದು ಸೇರುವಂತೆ ಅನುಗ್ರಹಿಸಿದನು.

ಕಥೆಯ ತತ್ತ್ವಾರ್ಥ

ಈ ಕಥೆಯ ಬಗೆಗೆ ಶ್ರೀರಂಗಮಹಾಗುರುಗಳು ನೀಡಿದ ಪರಮಾದ್ಭುತವಾದ ವಿವರಣೆಯನ್ನು ಸ್ಮರಿಸುವುದಾದರೆ ಇದು ಐತಿಹಾಸಿಕವಾಗಿ ನಡೆದ ಕಥೆಯಲ್ಲ. ಪರಿಪೂರ್ಣವಾಗಿ ತತ್ತ್ವಾರ್ಥಗರ್ಭಿತವೂ, ಧ್ಯಾನದಲ್ಲಿ ವೊಳರಂಗದಲ್ಲಿ ದರ್ಶನಕ್ಕೆ ವಿಷಯ ಆದ ಕಥೆಯಾಗಿದೆ. ಪುರಾಣಗಳಲ್ಲಿ ಐತಿಹಾಸಿಕ ಘಟನೆಗಳ ಜೊತೆಗೆ ಜಟಿಲವಾದ ತತ್ತ್ವಗಳನ್ನು ಸುಲಭವಾಗಿ ಮನವರಿಕೆಮಾಡಲು ರೂಪಕಗಳಾಗಿ ಕಲ್ಪಿಸಿಕೊಟ್ಟಿರುವುದುಂಟು. ವಾಮನಾವತಾರವೂ ಅಂತಹದೊಂದು ರೂಪಕವೇ ಆಗಿದೆ.

ದೇವತೆಗಳು-ಅಸುರರು ಇಬ್ಬರೂ ನಮ್ಮೊಳಗೇ ಇರುವ ಶಕ್ತಿಗಳು. ನಮ್ಮನ್ನು ಧರ್ಮಮಾರ್ಗದಲ್ಲಿ ನಡೆಸಲು ಪರಮಾತ್ಮನಿಂದ ನೇಮಿಸಲ್ಪಟ್ಟ ಶಕ್ತಿಗಳೇ ದೇವತೆಗಳು. ರಜಸ್ತಮೋಗುಣಗಳಿಂದ ತುಂಬಿದ  ಆಸುರೀಶಕ್ತಿಗಳು ಅಧರ್ಮದೆಡೆಗೆ ನಮ್ಮನ್ನು ಸೆಳೆಯುವ ಶಕ್ತಿಗಳು. ಸೃಷ್ಟಿಯಲ್ಲಿ ಈ ಎರಡೂ ಶಕ್ತಿಗಳಿಗೂ ನಿರಂತರ ಯುದ್ಧವಾಗುತ್ತಲೇ ಇರುವುದು. ಕೆಲವೊಮ್ಮೆ ದೇವತೆಗಳಿಗೆ ಜಯ, ಕೆಲವೊಮ್ಮೆ ಅಸುರರಿಗೆ ಜಯ. ಒಮ್ಮೊಮ್ಮೆ ಇಬ್ಬರೂ ಸಂಧಿ ಮಾಡಿಕೊಳ್ಳುವುದೂ ಉಂಟು. ದೇವತೆಗಳು ನಮ್ಮನ್ನು ಮೇಲಕ್ಕೆಳೆದರೆ ಆಸುರರು ಕೆಳಕ್ಕೆಳೆಯುತ್ತಾರೆ. ಇಬ್ಬರ ಮಧ್ಯದಲ್ಲಿ ಹೃದಯಸ್ಥಾನದಲ್ಲಿ ಅಂಗುಷ್ಠಪರ್ವಮಾತ್ರ ಪುರುಷನಾಗಿ ಬೆಳಗುವವನೇ ವಾಮನ ಎಂಬುದಾಗಿ ಶ್ರುತಿಯು ಸಾರುತ್ತದೆ.

ಆಸುರೀಶಕ್ತಿಗೆ ಜಯವಾಗಿ ನಮ್ಮನ್ನು ಪೂರ್ಣವಾಗಿ ಆಕ್ರಮಿಸಿಕೊಂಡಾಗ ಅವರಿಂದ ಬಿಡುಗಡೆಯನ್ನು ಹೊಂದಲು ನಾವೇನಾದರೂ ಹೃದಿಸ್ಥನಾದ ವಾಮನನನ್ನು ಶರಣುಹೊಂದಿದರೆ, ನಮ್ಮನ್ನು ಪೂರ್‍ಣವಾಗಿ ಆತನಿಗೆ ಅರ್ಪಿಸಿಕೊಂಡರೆ ಆತನು ಆಸುರೀ ಶಕ್ತಿಯನ್ನು ಪಾತಾಳಕ್ಕೆ ಮೆಟ್ಟಿ ತಾನೇ ನಮ್ಮಲ್ಲಿ ಪೂರ್ತಿಯಾಗಿ ವ್ಯಾಪಿಸಿಕೊಂಡು ತ್ರಿವಿಕ್ರಮ ವಿಷ್ಣುವಾಗಿ ('ವಿಷ್ಣು' ಎಂದರೆ ವ್ಯಾಪಕನಾಗಿರುವವನು ಎಂದರ್ಥ) ಅನುಗ್ರಹಿಸುತ್ತಾನೆ. ಈತನು ವ್ಯಾಪಿಸುವ ಲೋಕಗಳೆಂದರೆ ಬೆನ್ನು ಹುರಿಯೊಳಗಿನ ಯೋಗಮಾರ್ಗ. ಮೂಲಾಧಾರದಿಂದ ಶಿರದ ಬ್ರಹ್ಮರನ್ಧದವರೆಗೂ ವ್ಯಾಪಿಸುವ ಒಳಬ್ರಹ್ಮಾಂಡವನ್ನು ಭಗವಂತನು ತುಂಬಿಕೊಂಡಾಗ, ಬಲಿಯಂತೆ ತಲೆಬಾಗುವುದು ಸಹಜವೇ. ಆಗ ಶಿರಸ್ಥಾನದಲ್ಲಿನ ಅಮೃತವು ಧಾರಾಕಾರವಾಗಿ ಗಂಗೆಯಂತೆ ಹರಿಯುವ ಒಳ ಅನುಭವವನ್ನೇ ಕಥಾರೂಪದಲ್ಲಿ 'ವಿಷ್ಣುಪಾದೋದ್ಭವಾ ಗಂಗಾ' ಎಂದು ಋಷಿಗಳು ಹೇಳುತ್ತಾರೆ.

ಅಹಂಕಾರ ಆವರಿಸಿಕೊಂಡಾಗ ಭಗವಂತನನ್ನು ಕಾಣುವುದು ಅಸಾಧ್ಯ. ಆದರೆ ಅವನನ್ನು ಶರಣು ಹೊಂದಿದರೆ ಬಲಿಯನ್ನು ಅನುಗ್ರಹಿಸಿದಂತೆ ನಮ್ಮ ಅಹಂಕಾರವನ್ನು ತೊಲಗಿಸಿ ನಮ್ಮಲ್ಲಿ ಬ್ರಹ್ಮಭಾವವನ್ನು ತುಂಬುತ್ತಾನೆ. ವಾಮನನು ಒಬ್ಬ ಸದ್ಗುರುವಿನ   ರೂಪವನ್ನೂ ತಾಳಿ ಬರಬಹುದು. ಆಗ ಗುರುವಿಗೇ ನಮ್ಮನ್ನು ಸಮರ್ಪಿಸಿಕೊಂಡಾಗ ನಿಷ್ಠೆ-ಪ್ರಾಮಾಣಿಕತೆಗಳಿಂದ ಅವನ ಆದೇಶವನ್ನು ಪಾಲಿಸಿದರೆ ಬ್ರಹ್ಮಭಾವಕ್ಕೇರಿಸಿ ನಮ್ಮನ್ನು ಉದ್ಧರಿಸುತ್ತಾನೆ.

ಅನುಗ್ರಹ ಅವತಾರ

ಭಗವಂತನು ನೃಸಿಂಹ, ರಾಮ, ಕೃಷ್ಣನಾಗಿ ಬಂದಾಗ ದೈತ್ಯರ ನಿಗ್ರಹದಿಂದ ಅವರ ಏಳಿಗೆಗೆ ಕಾರಣನಾದನು. ಆದರೆ  ವಾಮನಾವತಾರವು ಪೂರ್ಣಾನುಗ್ರಹ ಅವತಾರವೆನಿಸಿಕೊಳ್ಳುತ್ತದೆ. ಇಲ್ಲಿ ಇಂದ್ರನಿಗೆ ಪುನಃ ರಾಜ್ಯಪ್ರಾಪ್ತಿಯ ಅನುಗ್ರಹ, ಅದಿತಿದೇವಿಗೆ ಇಷ್ಟಾರ್ಥಸಿದ್ಧಿಯ ಅನುಗ್ರಹ, ಬಲಿಗೆ ಮೇಲೆ ಹೇಳಿದಂತೆ ಪರಮಾನುಗ್ರಹ. ಬ್ರಹ್ಮನಿಗೆ ತ್ರಿವಿಕ್ರಮನ ಪಾದತೊಳೆಯುವ ಅನುಗ್ರಹ. ಗಂಗೆಯು ಭುವಿಗಿಳಿದು ಲೋಕಕ್ಕೆಲ್ಲಾ ಅನುಗ್ರಹ.

ಇಂತಹ ಅನುಗ್ರಹಮೂರ್ತಿ ವಾಮನ-ತ್ರಿವಿಕ್ರಮನಿಗೆ ನಮ್ಮ ಅನಂತಾನಂತ ನಮನಗಳು.

ಸೂಚನೆ: 29/08/2020 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.

ಆರ್ಯಸಂಸ್ಕೃತಿ ದರ್ಶನ - 8 (Arya Samskruti Darshana - 8)

ಗೀತಾಚಾರ್ಯ - ಸಂಗೀತಾಚಾರ್ಯ-ಶ್ರೀಕೃಷ್ಣ 

ಲೇಖಕರು: ವಿದ್ವಾನ್ ಛಾಯಾಪತಿ 




ಕರಕಮಲನಿದರ್ಶಿತಾತ್ಮಮುದ್ರಃ
ಪರಿಕಲಿತೋನ್ನತ ಬರ್ಹಿಬರ್ಹ ಚೂಡಃ|
ಇತರ ಕರಗೃಹೀತ ವೇತ್ರತೋತ್ರಃ
ಮಮ ಹೃದಿ ಸನ್ನಿಧಿಮಾತನೋತು ಶೌರಿಃ||  

"ಒಂದು ಕೈಯಿಂದ ಆತ್ಮಮುದ್ರೆಯನ್ನು ತೋರಿಸುತ್ತಾ, ನವಿಲು ಗರಿಯನ್ನು ಪರಮೋನ್ನತವಾದೆಡೆಯಲ್ಲಿ, ಅಲಂಕಾರವಾಗಿ ಧರಿಸಿ , ಮತ್ತೊಂದು ಕೈಯಿಂದ ಕುದುರೆಗಳನ್ನು ನಿಯಂತ್ರಿಸುವ ಚಾವಟಿ ಹಿಡಿದ ಶ್ರೀಕೃಷ್ಣನು ನನ್ನ ಹೃದಯದಲ್ಲಿ ಸನ್ನಿಹಿತವಾಗಿರಲಿ."

ಇದು ಗೀತಾಚಾರ್ಯನ ಚಿತ್ರ. ಅವನು ಬಲಗೈನಲ್ಲಿ ಆತ್ಮಮುದ್ರೆಯನ್ನು ಧರಿಸಿದ್ದಾನೆ. ಹೆಬ್ಬೆರಳೂ ತೋರುಬೆರಳೂ ಬಾಗಿ ಒಂದುಗೂಡಿ, ಉಳಿದ ಬೆರಳುಗಳು ನೇರವಾಗಿ ನಿಂತಿರುವಂತೆ ವಿನ್ಯಾಸವುಳ್ಳ ಮುದ್ರೆ ಆತ್ಮಮುದ್ರೆ. ಹೆಬ್ಬೆರಳು ದೇವನನ್ನೂ,ತೋರುಬೆರಳು ಜೀವವನ್ನೂ ಸೂಚಿಸುತ್ತಾ ಆ ಎರಡರ ಒಂದು ಗೂಡುವಿಕೆ, ಜೀವದೇವರ ಸಮಾಗಮವನ್ನು ಸೂಚಿಸುತ್ತದೆ. ಈ ಮುದ್ರೆ ಜೀವಾತ್ಮನು ಪರಮಾತ್ಮನಲ್ಲಿ ಏಕೀಭವಿಸಿದಾಗ ಆ ಯೋಗದಿಂದಾಗುವ ಪರಮಾನಂದವನ್ನು (ಮುದವನ್ನು) ಹೊಮ್ಮಿಸುವ ಮುದ್ರೆಯಾದುದರಿಂದಲೇ ಅದಕ್ಕೆ ಆತ್ಮಮುದ್ರೆಯೆಂಬ ಹೆಸರು ಅನ್ವರ್ಥವಾಗಿಯೇ ಇದೆ. ಈ ಮುದ್ರೆಯು ಒಳಗೆ ಜೀವ-ದೇವ ಯೋಗವುಂಟಾದಾಗ ಸಹಜವಾಗಿಯೇ ಆ ಬೆರಳುಗಳ ವಿನ್ಯಾಸರೂಪದಲ್ಲಿ ಹೊಮ್ಮುತ್ತದೆ. ಆದ್ದರಿಂದಲೇ  ಒಳಗೆ ಉಂಟಾಗಿರುವ ಆ ಯೋಗವನ್ನು ಹೊರಸೂಸುತ್ತಿದೆ ಆ ಮುದ್ರೆ.  ಅಂತೆಯೇ ಶ್ರೀಕೃಷ್ಣನ  ಸಹಜಸ್ವರೂಪವನ್ನು ಚಿತ್ರಿಸುವ, ಆತ್ಮಭಾವವನ್ನು ಚಿತ್ರಿಸುವ ಮುದ್ರೆಯೂ ಆಗಿದೆ. ಉಳಿದ ಮೇಲೆದ್ದ ಬೆರೆಳುಗಳ ವಿನ್ಯಾಸದೊಡನೆ ಹಸ್ತ ವಿನ್ಯಾಸವನ್ನು ಗಮನಿಸಿದಾಗ ಅಭಯಮುದ್ರೆಯೂ ಅಲ್ಲಿದೆ. ಜೀವವು ತನ್ನ ಮೂಲಸ್ವರೂಪವಾದ ಆತ್ಮಜ್ಯೋತಿಯೊಡನೆ ಒಂದಾದಾಗ ಯಾವ ಭಯಕ್ಕೂ ಅವಕಾಶವಿಲ್ಲ. ಅಲ್ಲಿ ನಿರ್ಭಯ. ಅಂತೆಯೇ "ಅಭಯಂ ಸರ್ವ ಭೂತೇಭ್ಯೋ ಜ್ಞಾನಮಾಹು  ರ್ಮನೀಷಿಣಃ"  (ಸರ್ವಭೂತಗಳಿಗೂ  ಜ್ಞಾನದ ಪ್ರಾಪ್ತಿಯಾದಾಗಲೇ ಅಭಯ ಎಂದು ಜ್ಞಾನಿಗಳು ತಿಳಿಯುತ್ತಾರೆ) ಎಂಬಂತೆ ಒಳಗೆ ಬೆಳಗುವ ಜ್ಞಾನದೀಪದ ಸೂಚನೆಯೂ ಆ ಮುದ್ರೆಯಲ್ಲಿರುವುದರಿಂದ ಆ ಮುದ್ರೆಯು  ಜ್ಞಾನಮುದ್ರೆಯೂ ಹೌದು. ಅಂತೆಯೇ ಆತ್ಮಸ್ವರೂಪವರಿಯದೇ ಮೋಹಗೊಂಡಿರುವ ನರನಿಗೆ (ಅರ್ಜುನನಿಗೆ) ದಾರಿ ತೋರಲು ನಾರಾಯಣನು ಆತ್ಮಭಾವವನ್ನು ವಿವರಿಸುತ್ತಿರುವ ವ್ಯಾಖ್ಯಾಮುದ್ರೆಯೂ  ಹೌದು.

ಪರಮೋನ್ನತ ಸ್ಥಾನದಲ್ಲಿ ನವಿಲುಗರಿಯನ್ನು ತನ್ನ ಶಿರೋಭೂಷಣವಾಗಿ ಧರಿಸಿದ್ದಾನೆ ಈ ಗೀತಾಚಾರ್ಯ. ನವಿಲುಗರಿ ಅವನ ಆತ್ಮಭಾವಕ್ಕೊಪ್ಪುವ ಅಲಂಕಾರವಾಗಿದೆ. ಮೂರು ವೃತ್ತಗಳನ್ನೊಳಗೊಂಡ ಆ ಗರಿ ಸೋಮ-ಸೂರ್ಯ-ಅಗ್ನಿಮಂಡಲಗಳನ್ನು ಸೂಚಿಸಿ ಅದರೊಳಗಿರುವ ನೀಲಮೇಘಶ್ಯಾಮನಾದ ಕೃಷ್ಣ ಜ್ಯೋತಿಯನ್ನು ಸೂಚಿಸುತ್ತದೆ. ಅದರ ಜೊತೆಗೆ ಚಿತ್ರ ವಿಚಿತ್ರವರ್ಣಶೋಭಿತವಾದ ಅದು ಶ್ರೀಕೃಷ್ಣನಿಂದ ವಿಸ್ತೃತವಾದ ಸೃಷ್ಟಿವೈಭವವನ್ನೂ ಬಿತ್ತರಿಸುತ್ತದೆ. ಹೀಗೆ ಸೃಷ್ಟಿಯನ್ನೂ, ಸೃಷ್ಟೀಶನನ್ನೂ ಸೂಚಿಸಬಲ್ಲ ಗುರುತುಳ್ಳದ್ದಾದ ಕಾರಣದಿಂದಲೇ ನವಿಲುಗರಿಯು  ಶ್ರೀಕೃಷ್ಣನಿಗೆ – ಗೀತಾಚಾರ್ಯನಿಗೆ ಯೋಗ್ಯವಾದ ಭೂಷಣವಾಗಿದೆ. ನವಿಲುಗರಿಯನ್ನು ಧರಿಸುವ ಎಡೆಯೂ ಇಂದ್ರಿಯ ಭೂಮಿಕೆಯನ್ನು ದಾಟಿದ ಜ್ಞಾನಭೂಮಿಕೆಯ ಎಡೆಯಾದ ಶಿರಸ್ಸು. ಜೀವವು ಯಾವ ಮೂರ್ಧ್ನಿ ಪ್ರದೇಶದವರೆಗೂ ಮೇಲೇರಿದಾಗ ಪರಮಾನಂದಸ್ಥಿತಿಯುಂಟಾಗುವುದೆಂಬುದು ಜ್ಞಾನಿಗಳ ಅನುಭವ ಗೋಚರವಾದ ಸತ್ಯವೋ, (ತುರೀಯಂ  ಮೂರ್ಧ್ನಿ ಸಂಸ್ಥಿತಿಮ್) ಅಂತಹ ಪರಮಾನಂದದೆಡೆಯಲ್ಲಿ ಹೋದಾಗ ದಿವ್ಯದೃಷ್ಟಿಯು ಅರಳಿ, ಸೃಷ್ಟಿ, ಸೃಷ್ಟೀಶನ ರಹಸ್ಯವು ಪ್ರಕಾಶಕ್ಕೆ ಬರುವುದೋ ಆ ಎಡೆಯಲ್ಲಿಯೇ ಆ ಭಾವವನ್ನು ಬಿತ್ತರಿಸುವ ನವಿಲುಗರಿ ಅಲಂಕಾರವಾಗಿ ಧರಿಸಲ್ಪಟ್ಟಿದೆ. ಹಾಗಿದ್ದರೆ ತಾನೇ ಅದು ಅಲಂಕಾರ, ಅದರ ಸಮಗ್ರಸ್ವರೂಪವನ್ನೂ ಬಿತ್ತರಿಸಲು (ಅಲಂ) ಸಮರ್ಥವಾಗುತ್ತದೆ.

ಅವನ ಮತ್ತೊಂದು ಕೈಯಾದರೋ ಏಳುಗಿಣ್ಣುಗಳುಳ್ಳ ಬೆತ್ತದ ಚಾವಟಿಯನ್ನು ಹಿಡಿದು ರಥಾಶ್ವಗಳನ್ನು ನಿಯಂತ್ರಿಸಲು ತೊಡಗಿದೆ. ಕ್ಷಣಕಾಲವೂ ನಿಲ್ಲದೆ ಈ ಜೀವವನ್ನು ಕೂರಿಸಿಕೊಂಡು ಸೆಳೆದೊಯ್ಯುವ ಇಂದ್ರಿಯಗಳೇ ಅಶ್ವಗಳು. ನರನೇ ರಥಿಕ. ನಾರಾಯಣನೇ ಸಾರಥಿ. ದೇಹವೇ ಜೀವದೇವರನ್ನು ಹೊತ್ತ ರಥ. ಬಾಹ್ಯಕರಣಗಳಾದ  ಇಂದ್ರಿಯಗಳಂತೆ ಅಂತಃಕರಣಗಳಾದ ಮನಸ್ಸು, ಬುದ್ಧಿ, ಅಹಂಕಾರ, ಚಿತ್ತ ಇವುಗಳೂ ಅಶ್ವಗಳೇ. ಈ ಅಶ್ವಗಳು ತಮ್ಮ ಮನಬಂದತ್ತ ಹರಿಯಬಾರದು. ಬಲಗೈಯಲ್ಲಿ ಹಿಡಿದಿರುವ ಆತ್ಮ ಮುದ್ರೆಯನ್ನು ಜಾರಿಸದಂತೆ ಸಂಚರಿಸಬೇಕು. ಆತ್ಮ ಹಾನಿಯಾಗಕೂಡದು. ಅದಕ್ಕಾಗಿಯೇ ಅವುಗಳಿಗೆ ನಿಯಂತ್ರಣ, ಆತ್ಮಶಕ್ತಿಯು ಇಂದ್ರಿಯಗಳವರೆಗೆ ಹರಿದುಬರುವುದು ಏಳುಪರ್ವಸ್ಥಾನಗಳುಳ್ಳ  ಜ್ಞಾನರಜ್ಜುವಿನ ಮೂಲಕ. ಬ್ರಹ್ಮದಂಡದ ಮೂಲಕ, ಬೆನ್ನು ಮೂಳೆಯ ಮೂಲಕ. ಆದ್ದರಿಂದ ಆ ಹಾದಿಯನ್ನು ಮರೆಸದೆ ಮುನ್ನಡೆಸಲು ಹಿಡಿದಿರುವ ಬೆತ್ತವೂ ಏಳು ಗಿಣ್ಣುಳ್ಳ  ಜ್ಞಾನರಜ್ಜುವಿನ ಪ್ರತೀಕವಾದುದು. ಅದನ್ನು ಹಿಡಿದು ಶಾಸನ ಮಾಡುವ ಶ್ರೀಕೃಷ್ಣನೂ ಹೃಷೀಕೇಶ. ಇಂದ್ರಿಯಗಳ ಸ್ವಾಮಿ. ಆತ್ಮ ಜ್ಯೋತಿ. ಅದನ್ನು ಎಡಗೈಯಲ್ಲೇ ಹಿಡಿಯಲು ಕಾರಣ, ಎಡಗೈಯೇ ಪ್ರವೃತ್ತಿಮಾರ್ಗಸೂಚಕ. ಇಂದ್ರಿಯಾಶ್ವಗಳು  ಹೊರಗೆ ಸಂಚರಿಸಲು ಅಡ್ಡಿಯಿಲ್ಲ. ಆದರೆ ಆತ್ಮಭಾವಕ್ಕೆ ಅವಿರೋಧವಾಗಿರಬೇಕು ಅವುಗಳ ಸಂಚಾರ. ಹೀಗಿದ್ದಾಗ ಜೀವನಿಗೆ ನೆಮ್ಮದಿಯುಂಟು.

ಆತ್ಮಸ್ವರೂಪವನ್ನು ತೋರಿಸುವ ಆತ್ಮ ಮುದ್ರೆ, ತನ್ನ ಸ್ವರೂಪಕ್ಕೊಪ್ಪುವ ನವಿಲುಗರಿಯ ಅಲಂಕಾರ, ಎಡಗೈಯಲ್ಲಿ ಆತ್ಮಭಾವಕ್ಕೆ ವಿರೋಧವಾಗಿ ಜೀವನರಥವನ್ನೆಳೆಯುವ ಇಂದ್ರಿಯಾಶ್ವಗಳನ್ನುಹದದಲ್ಲಿಡುವ ಚಾವಟಿ, ಇವುಗಳಿಂದ ಕೂಡಿ  ತನ್ನ ಭಾವಭಂಗಿಗಳಿಂದಲೇ ಆತ್ಮಭಾವವನ್ನುಪದೇಶಿಸುತ್ತಿರುವವನು ಶ್ರೀಕೃಷ್ಣ, ಗೀತಾಚಾರ್ಯ. ಅವನ ಈ ಭಂಗಿಯೇ ಗೀತೆಯಸಾರವನ್ನುಪದೇಶಿಸುತ್ತದೆ. ಗೀತೆಯೂ ಆತ್ಮವಿದ್ಯೆಯೇ. ಅಂತಹ ಗೀತಚಾರ್ಯನೂ, ಗೀತಾಸಾರನೂ, ಗೀತಾಹೃದಯನೂ ಆದ ಶ್ರೀಕೃಷ್ಣ ನನ್ನ ಹೃದಯದಲ್ಲಿ ಸನ್ನಿಹಿತನಾಗಲಿ- ಎಂಬುದು ಮೇಲಿನ ಗೀತಾಚಾರ್ಯನ ಚಿತ್ರ ನೀಡುವ ಪದ್ಯದ ಭಾವ.

ವಿಷಾದದಲ್ಲಿ ಮುಳುಗಿದ ನರನ (ಅರ್ಜುನನ) ವಿಷಾದವನ್ನು ಕಳೆದು ಪ್ರಸಾದದಲ್ಲಿ ನಿಲ್ಲಿಸಿದ, ಪ್ರಸನ್ನನಾಗಿ ಮಾಡಿದ ಕೃತಿ, ಗೀತೆ. ಅಂತೆಯೇ ಜೀವಿಗಳ ವಿಷಾದವನ್ನು ಕಳೆದು ಪ್ರಸನ್ನತೆಯನ್ನು ನೀಡುವ ಕೃತಿಯೂ ಹೌದು. ಧರ್ಮಾಧರ್ಮಗಳ ತುಮುಲದಲ್ಲಿ ಧರ್ಮವಿಜಯಕ್ಕಾಗಿ ವಿಜಯ (ಅರ್ಜುನ)ನನ್ನು ಪ್ರೇರೇಪಿಸಿದ ಧರ್ಮ ಸಂಸ್ಥಾಪನಾಚಾರ್ಯ ಈ ಗೀತಾಚಾರ್ಯ. ಜೀವಿಯ ಮೇಲ್ಮೆಗೆ ಶ್ರೇಯಸ್ಸಿಗೆ ಬೇಕಾದ ದಿವ್ಯಾಮೃತವನ್ನೊಳಗಂಡ ಈ ಗೀತೆ ಸರ್ವೋಪನಿಷತ್ಸಾರ. ಆತ್ಮ ಸ್ವರೂಪವನ್ನೂ, ಅದನ್ನು ಕಾಪಾಡಿಕೊಳ್ಳುವ ವಿಧಾನವನ್ನೂ, ಅದರಿಂದಾಗುವ ಮೇಲ್ಮೆಯನ್ನೂ, ಭಾವದಿಂದಲೂ, ಭಂಗಿಯಿಂದಲೂ ಸೂಚಿಸಿದ ಗೀತಾಚಾರ್ಯನ ಭಾವದ ಭಾಷಾರೂಪವಾದ ವಿಸ್ತಾರವೇ ಗೀತೆ. "ಗೀತಾ ಮೇ ಹೃದಯಂ ಪಾರ್ಥ" ಎಂಬಂತೆ ಶ್ರೀಕೃಷ್ಣನ ಹೃದಯ. ಗೀತೆ ಶ್ರೀಕೃಷ್ಣನ ಹೃದಯವಾದರೆ ಗೀತಾಹೃದಯ ಶ್ರೀಕೃಷ್ಣನೇ. ಅವನ ಗೀತೆ ಒಣವೇದಾಂತವಲ್ಲ. ಬ್ರಹ್ಮರಸನಿರ್ಝರಿಣಿ. ಕವಿಯಾದ ಶ್ರೀಕೃಷ್ಣನಿಂದ ಅರಳಿದ ವಿಶ್ವಕಾವ್ಯ. ವಿಶ್ವಕ್ಕೇ ಇಂಪನ್ನು ತರುವ ವಿಶ್ವ ಸಂಗೀತ.

ಅಂತೆಯೇ  ಶ್ರೀಕೃಷ್ಣ ಕೇವಲ ಗೀತಾಚಾರ್ಯನಲ್ಲ. ಸಂಗೀತಾಚಾರ್ಯನೂ ಹೌದು. ಅವನು ವೇಣುಗಾನಲೋಲ. ಆತ್ಮಜ್ಯೋತಿಯ ನಾದರೂಪವಾದ ವಿಸ್ತಾರವನ್ನೂ, ಸೊಬಗನ್ನೂ, ಅರಿತು ಬಿತ್ತರಿಸಿದ ನಾದಮುರ್ತಿ. ಜ್ಞಾನಿಗಳಿಂದ ಬೆಳೆದ ಸಂಗೀತ ಕೇವಲ ಶ್ರೋತ್ರರಂಜಕ-ಮನೋರಂಜಕವಷ್ಟೇ ಅಲ್ಲ. ಅದು ನಾದಬ್ರಹ್ಮೋಪಾಸನೆ. ಅದರ ಮರ್ಮವರಿತವನು ಮುರಳೀ ಮನೋಹರನಾದ ಸಂಗೀತಾಚಾರ್ಯ. ಇದೋ ಅವನ ಚಿತ್ರ ಇಲ್ಲಿದೆ.



ಅಂಸಾಲಂಬಿತ ವಾಮಕುಂಡಲಭರಂ ಮಂದೋನ್ನತ ಭ್ರೂಲತಂ |
ಕಿಂಚಿತ್ ಕುಂಚಿತಕೋಮಲಾಧರಪುಟಂ ಸಾಚೀಪ್ರಸಾರೇಕ್ಷಣಂ ||
ಆಲೋಲಾಂಗುಲಿಪಲ್ಲವೈಃ ಮುರಲಿಕಾಮಾಪೂರಯಂತಂ ಮುದಾ |
ಮೂಲೇಕಲ್ಪತರೋಸ್ತ್ರಿಭಂಗಿಲಲಿತಂ ಜಾನೇ ಜನ್ಮೋಹನಮ್ ||

ಎಡಕಿವಿಯ ಕುಂಡಲ ಎಡಹೆಗಲಿನತ್ತ ವಾಲಿದೆ. ನಾದಾನುಸಂಧಾನದಿಂದ ಬಲಹುಬ್ಬು ಮೇಲೆದ್ದು ಒಳ ಔನ್ನತ್ಯವನ್ನು ಸೂಚಿಸುತ್ತಿದೆ. ಅತಿ ಕೋಮಲವಾದ ಅವನ ಅಧರ ಕೊಳಲಿನ ಮೇಲೆ ಸ್ವಲ್ಪ ಬಾಗಿ ಇರಿಸಲ್ಪಟ್ಟಿದೆ. ಆತನ ದೃಷ್ಟಿ ಎಲ್ಲೆಡೆಯನ್ನೂ ತುಂಬಿದೆ. ತಳಿರಿನಂತಹ ಅವನ ಬೆರಳುಗಳು ಕೊಳಲಿನ ಮೇಲಾಡುತ್ತಿವೆ. ತನ್ನ ಉಸಿರಿನಮೂಲಕ ಆ ಪರಮಾನಂದ ಮಾಧವನು ಆನಂದವನ್ನೇ ಕೊಳಲಿನಲ್ಲಿ ತುಂಬುತ್ತಿದ್ದಾನೆ. ಬಲಮಂಡಿಯನ್ನು ಎಡದತ್ತ ಬಾಗಿಸಿ, ಎಡಕಟಿಯನ್ನು ಬಲದತ್ತಲೂ, ಶಿರವನ್ನು ಎಡಹೆಗಲಿನತ್ತಲೂ ಬಾಗಿಸಿ, ಈ ಮೂರೂ ಭಂಗಿ (ಬಾಗು) ಗಳಿಂದ ಮನೋಹರನಾದ, ಸಂಕಲ್ಪತರುವಾದ, ಮನೋಮೂಲದಲ್ಲಿ ಜಗನ್ಮೋಹನಾಕಾರನಾಗಿ ಎಲ್ಲವನ್ನೂ ತನ್ನೆಡೆಗೆ ಆಕರ್ಷಿಸುತ್ತಿರುವ ಸಂಗೀತಾಚಾರ್ಯನನ್ನು ತಾನು ಬಲ್ಲೆ ಎಂದು ಲೀಲಾಶುಕ ಸಾರುತ್ತಾನೆ.

ಅವನ ಗೀತೆಯು ಹೇಗೆ ಅವನ ಉಸಿರೋ, ಅವನ ಸಂಗೀತವೂ ಹಾಗೆಯೇ ಅವನ ಉಸಿರು. ಕೊಳಲಿನಲ್ಲಿ ತನ್ನ ಉಸಿರನ್ನು ತುಂಬುವ ಆ ಜಗನ್ಮೋಹನ ಅಲ್ಲಿ ತುಂಬಿ ಹರಡುತ್ತಿರುವುದು ಆನಂದವನ್ನೇ. ಆತ್ಮಭಾವವನ್ನರಳಿಸಿ, ಹುಬ್ಬನ್ನು ಮೇಲೇರಿಸಿ, ಬಲಭಾಗದ ಉನ್ನತಿಯನ್ನು ಸೂಚಿಸುವುದರ ಮೂಲಕ, ಎಡವನ್ನು ಬಾಗಿಸಿದರೂ, ಉನ್ನತವಾದ ಬಲಗಿವಿಯಲ್ಲಿ, ಒಳಗೆ ಮೊಳುಗುವ ಪ್ರಣವನಾದವನ್ನು ಆಸ್ವಾದಿಸುತ್ತಾ, ಹುಬ್ಬಿನ ಉನ್ನತಿಯಿಂದ ಆ ಸ್ಥಿತಿಯನ್ನು ಸೂಚಿಸುತ್ತಾ ನಿಂತಿದ್ದಾನೆ – ಈ ಸಂಗೀತಾಚಾರ್ಯ. ಅವನ ಸಂಗೀತದ ಪರಿಣಾಮವಾದರೂ ಏನು?

ಲೋಕಾನುನ್ಮದಯನ್ ಶ್ರುತೀರ್ಮುಖರಯನ್ ಕ್ಷೋಣೀರುಹಾನ್ ಹರ್ಷಯನ್|
ಶೈಲಾನ್ವಿದ್ರವಯನ್ ಮೃಗಾನ್ವಿವಶಯನ್ ಗೋಬೃಂದಮಾನಂದಯನ್ ||
ಗೋಪಾನ್ಸಂಭ್ರಮಯನ್ ಮುನೀನ್ ಮುಕುಳಯನ್ ಸಪ್ತಸ್ವರಾನ್ ಜೃಂಭಯನ್|
ಓಂಕಾರಾರ್ಥಮುದೀರಯನ್  ವಿಜಯತೇ ವಂಶೀನಿನಾದಃ ಶಿಶೋಃ||

ಇಂದ್ರಿಯಾಶ್ವಗಳಿಂದ ಕೆಳಗೆ ಸೆಳೆಯಲ್ಪಡುತ್ತಿದೆ ಜೀವಲೋಕದ ಮನಸ್ಸು. ಅಂತಹ ಅಧೋಮನರನ್ನು ತಿಳಿಯದ ಸಂತೋಷದಿಂದ ತುಂಬಿ ಉನ್ಮನರನ್ನಾಗಿ ಮಾಡುತ್ತಿದೆ ವೇಣುನಾದ. ಮದವೆಂದರೆ ಹರ್ಷವೆಂಬರ್ಥವೂ ಉಂಟು. ಜೀವಲೋಕವನ್ನು ಪರಮಾನಂದಭಾವದ ಕಡೆಗೆ ಸೆಳೆಯುತ್ತಾ ಉನ್ಮದಿಸುವಂತೆ ಉಕ್ಕಿ ಹರ್ಷಿಸುವಂತೆ-ಹರ್ಷ ಉಕ್ಕುವಂತೆ ಮಾಡುತ್ತಿದೆ.  ಮನಸ್ಸನ್ನು ಜಾರದಂತೆ ತಡೆಯುವುದೇ ಶ್ರೀಕೃಷ್ಣನ ಚಾವಟಿಯ ಕೆಲಸ. ಅಂತೆಯೇ ಈ ಸಂಗೀತಾಚಾರ್ಯನೂ ಮಾಡುತ್ತಿರುವುದೂ ಅದೇ.

ಗಾನಕ್ಕೆ ಆಧಾರವಾದ ಶ್ರುತಿಗಳನ್ನು ಹಿಡಿದು ಮೊಳಗುತ್ತಿದೆ ಆ ಗಾನ. ಅಂತೆಯೇ ಎಲ್ಲಕ್ಕೂ ಆಧಾರಶ್ರುತಿಯಾದ ಪ್ರಣವದಿಂದ ಹೊಮ್ಮಿದ ವೇದಗಳನ್ನೂ ಅದರ ಹೃದಯವನ್ನೂ ಪ್ರತಿಧ್ವನಿಸುತ್ತಿದೆ- ಮುರಳೀಲೋಲನ ಮುರಳಿ.ಗೀತೆಯೂ ವೇದಸಾರ. ಸಂಗೀತೆಯೂ ವೇದಸಾರ. ಅಂತೆಯೇ ಆ ವೇಣುನಾದದ ಪ್ರಭಾವದಿಂದ ಮರಗಿಡಗಳೂ ಹರ್ಷದಿಂದ ಹಿಗ್ಗುತ್ತವೆ. ಮರಗಿಡಗಳಿಗೂ ಭಾವಸಂವೇದನೆಯುಂಟೆಂದು ಇತ್ತೀಚಿನ ಪ್ರಯೋಗಗಳೂ ದೃಢಪಡಿಸಿವೆ. ಮರಗಿಡಗಳನ್ನೂ ಆನಂದದಿಂದ ತುಂಬಿದೆ ಶ್ರೀಕೃಷ್ಣನ ಸಂಗೀತ.ಅತಿಕಠಿಣವಾದ ಬೆಟ್ಟಗಳನ್ನೂ ಗಾನ ತನ್ನ ಮಾಧುರ್ಯದಿಂದ ಕರಗಿಸುತ್ತಿದೆ. ದ್ರವ್ಯದ ಸಂಯೋಜನೆಯ ಮರ್ಮವರಿತು, ಅದರ ವಿಘಟನೆಗನುಗುಣುವಾದ ನಾದ ಯೋಗವೂ ಭೌತಿಕವಾಗಿಯೂ ಕಲ್ಲನ್ನು ಕರಗಿಸುವುದು ಅಸಂಭವವೇನೂ ಅಲ್ಲ. ಗಾನದ ಇಂಪು ಪಾಷಾಣ ಹೃದಯವನ್ನೂ, ಜಡ್ಡುಕಟ್ಟಿದ ಘನೀಭೂತಹೃದಯವನ್ನೂ ತುಂಬಿ ಕರಗಿ ನೀರಾಗಿಸುತ್ತಿದೆ. ಗೀತೆ ತುಂಬುವುದು ಹೃದಯವನ್ನೇ.

ಅಂತೆಯೇ ಮೃಗಗಳನ್ನೂ ಅವಕ್ಕೆ ಅರಿಯದ ಆನಂದದಿಂದ ತುಂಬಿ ಪರವಶರನ್ನಾಗಿ ಮಾಡುತ್ತಿದೆ. ಮೃಗಗಳೂ ಜೀವಿಗಳು ತಾನೇ! ಅಲ್ಲಿ ಆನಂದವನ್ನರಳಿಸಿ ಅವುಗಳನ್ನು ತನ್ನೆಡೆಗೆ ಆಕರ್ಷಿಸುವ ಸಂಗೀತಾಚಾರ್ಯ ಶ್ರೀಕೃಷ್ಣ ಸಮದರ್ಶಿಯಾದ ಗೀತಾಚಾರ್ಯನೂ ಹೌದು.ಗೋಬೃಂದವನ್ನು ಆನಂದದಿಂದ ತುಂಬುತ್ತಿದೆ ಶ್ರೀಕೃಷ್ಣನ ವೇಣುನಾದ. ಜಡ ಚೇತನಗಳಲ್ಲಿ ಆನಂದಲಹರಿಯನ್ನು ಹರಿಸುವ ಪರಮಾನಂದ ಮಾಧವನ ವೇಣುನಾದ ಆನಂದವನ್ನಲ್ಲದೆ ಮತ್ತೇನನ್ನು ತುಂಬೀತು! ಗೋವುಗಳಂತೂ ಅವನ ಧರ್ಮದ ಒಂದು ರೂಪವೇ ತಾನೆ! ಗೀತೆ ತೋರುವುದು ಆನಂದದ ನೆಲೆಯನ್ನೇ.

ಗೆಳೆಯನೆಂದು ನೋಡುವ ಗೋಪರನ್ನು ಅವ್ಯಕ್ತಾನಂದದಿಂದ ತುಂಬಿ ಸಡಗರಗೊಳ್ಳುವಂತೆ ಮಾಡಿದೆ. ಗೆಳೆಯರಿಗೆ ಇದಕ್ಕಿಂತ ಮತ್ತೇನು ಉಪಕಾರಬೇಕು. ಆನಂದನಿಧಿಯನ್ನು ಅವರ ಹೃದಯದಲ್ಲಿ ಉಕ್ಕಿಸುವ ಸಂಭ್ರಮ. ಅದನ್ನು ನೀಡುತ್ತಿದೆ ಸಂಗೀತ.ಮನನ ಭಾವದಲ್ಲಿದ್ದು ಆತ್ಮಭಾವಭಾವಿತರಾದ ಮುನಿಗಳ ಮನಸ್ಸನ್ನು ಮೊಗ್ಗಾಗಿ ಮಾಡುತ್ತಿದೆ. ಅರಳಿದ ಮನಸ್ಸನ್ನು ಮುಗುಳನ್ನಾಗಿಸಿ, ಏಕಾಗ್ರಭಾವವನ್ನು ತುಂಬಿ ಮನೋಮೂಲದತ್ತ ಒಯ್ದು ಒಳಗೆ ಪರಮಾನಂದನಿಧಿಯತ್ತ ಸೆಳೆಯುತ್ತಿದೆ. ಈ ಆತ್ಮಪ್ರಬೋಧನೆ ಗೀತೆಯ ಹೃದಯ. ಸಂಗೀತದಿಂದಾಗುತ್ತಿರುವುದೂ ಅದೇ.

ಸ.ರಿ.ಗ.ಮ.ಪ.ಧ.ನಿ. ಎಂಬ ಏಳುಸ್ವರಗಳನ್ನೂ ವಿಸ್ತಾರಪಡಿಸುತ್ತಿದೆ. ಮುನಿಗಳನ್ನು ಮುಕುಲೀಭಾವಕ್ಕೊಯ್ದು ಪ್ರಣವದ ನೆಲೆಮುಟ್ಟಿಸಿದ, ಆ ಪ್ರಣವ ನಾದದ ಮೂಲದಿಂದಲೇ  ಸಪ್ತಸ್ವರಗಳನ್ನು ವಿಸ್ತರಿಸುತ್ತದೆ.
ಕೊನೆಗೆ ಆ ಗಾನ ಪ್ರಣವದ ಅರ್ಥವನ್ನು ಹೇಳುತ್ತಿದೆ. ಅಂದರೆ ಆ ಗಾನವನ್ನು ಅನುಸರಿಸಿ ಹೋದರೆ ಪ್ರಣವದ ಮೂಲವಾದ ಪರಂಜ್ಯೋತಿಯಲ್ಲಿ ನಿಲ್ಲಿಸುತ್ತದೆ. ಅದರ ಮರ್ಮವನ್ನು ಬಿತ್ತರಿಸುತ್ತದೆ. ಆ ಓಂಕಾರದ ಅರ್ಥವೇ ಶ್ರೀಕೃಷ್ಣಪರಂಜ್ಯೋತಿ. ಆತ್ಮ ಸ್ವರೂಪ, ಅದನ್ನು ಬಿತ್ತರಿಸುವುದೇ ಗೀತಾಚಾರ್ಯನ ಹೃದಯ. ಸಂಗೀತಾಚಾರ್ಯನು  ಮಾಡುತ್ತಿರುವುದೂ ಅದೇ. ಹೀಗೆ ಲೋಕದ ಕಣ್ಣಿಗೆ ಶಿಶುವಾದ ಶ್ರೀಕೃಷ್ಣನ ವೇಣುನಾದ ವಿಜಯ ಪಡೆಯುತ್ತಿದೆ. ಆತ್ಮಭಾವದ ಜಯವೇ ಗಾನದ ಜಯ. ಗೀತೆಯ ಉತ್ಕರ್ಷವೂ ಅದೇ.

ಹೀಗೆ ಗೀತ – ಸಂಗೀತ ಎರಡೂ ಆತ್ಮ ವಿಜಯವನ್ನು ಸಾರುತ್ತವೆ. ಅಂತೆಯೇ ಶ್ರೀಕೃಷ್ಣ ಎಲ್ಲ ಯೋಗರಹಸ್ಯಗಳನ್ನೂ ಬಲ್ಲ ಯೋಗೇಶ್ವರ.ಅವನಿದ್ದಲ್ಲಿ ಆತ್ಮಶ್ರೀ. ಅವನ ಆಶಯವನ್ನು ಧನುರ್ಧಾರಿಯಾಗಿ ತರಹೊರಟ ವಿಜಯನಿದ್ದಲ್ಲಿ ಆತ್ಮ ವಿಜಯ. ಯೋಗೇಶ್ವರನಿದ್ದಲ್ಲಿ ಜ್ಞಾನವಿಭೂತಿ, ಅದನ್ನು ಜಾರಿಗೆ ತರಹೊರಟ ಪಾರ್ಥನಿದ್ದಲ್ಲಿ ನೀತಿ, ಇದು ಗೀತೆಯ ಸಾರ.  ಆತ್ಮವಿಭೂತಿ, ನಾದಮಯ  ವಿಸ್ತಾರವೇ ಸಂಗೀತದ ಸಾರ. ಈ ಮರ್ಮಬಲ್ಲ ತ್ಯಾಗರಾಜರು "ಗೀತಾರ್ಥಮು ಸಂಗೀತಾನಂದಮು" ಎಂಬ ತಮ್ಮ ಕೃತಿಯಲ್ಲಿ "ಗೀತಾರ್ಥ-ಸಂಗೀತಾನಂದ ಎರಡನ್ನೂ ಆತ್ಮಾರಾಮನನ್ನು ಬಲ್ಲ ಆಂಜನೇಯ ಬಲ್ಲ" ಎಂದು ಸಾರುತ್ತಾರೆ.

ಗೀತಾಹೃದಯ-ಸಂಗೀತಹೃದಯ ಎರಡೂ ಶ್ರೀಕೃಷ್ಣನೇ. ಒಂದು ಅವನ ಭಾಷಾರೂಪವಾದ ಉಸಿರಾದರೆ, ಮತ್ತೊಂದು ಕೊಳಲಿನ ಗಾನರೂಪವಾಗಿ ಹೊರ ಹೊಮ್ಮುವ ಉಸಿರು, ಗೀತ-ಸಂಗೀತ ಎರಡೂ ಆ ಕೃಷ್ಣನ ಉಸಿರುಗಳೇ. ಅಂತೆಯೇ ಗೀತಾಚಾರ್ಯನೂ ಸಂಗೀತಾಚಾರ್ಯನೂ ಆದ ಅನುಪಮ ಜ್ಯೋತಿ ಶ್ರೀಕೃಷ್ಣನೇ. ಅವನ ಗೀತ-ಸಂಗೀತಗಳ ಮರ್ಮವನ್ನು ಬಲ್ಲವನಾಗಿ, ಆತ್ಮಯೋಗ ನಾದಯೋಗಗಳ ನೆಲೆ ಬೆಲೆಗಳನ್ನೂ ಬಲ್ಲ ಶ್ರೀರಂಗಮಹಾಗುರುವಿಗಲ್ಲದೇ ಈ ಬರಹದ ಶ್ರೇಯಸ್ಸು ಮತ್ಯಾರಿಗೆ ಸಂದೀತು! ಆತ್ಮ ಸ್ವರೂಪದ ಅರಿವೇ ಗೀತಾ ಹೃದಯವೆಂಬುದನ್ನು "ಎನ್ನೈ ಪಾರಮ್" (ನನ್ನನ್ನು–ಆತ್ಮವಸ್ತುವನ್ನು ನೋಡಿರಿ) ಎಂಬ ನಾಲ್ಕೇ ಅಕ್ಷರಗಳಲ್ಲಿ ಸಂಗ್ರಹಿಸಿದ ಗೀತಾಹೃದಯಜ್ಞನಾದ  ಆಚಾರ್ಯನವನು. ಅಂತೆಯೇ ಯೋಗಗಾನದ ಮರ್ಮವರಿತ ಗಾನಾಚಾರ್ಯನೂ ಹೌದು. ಗೀತಾಚಾರ್ಯ-ಸಂಗೀತಾಚಾರ್ಯನಾದ ಶ್ರೀಕೃಷ್ಣನ ಮರ್ಮವನ್ನು ನನ್ನ ಬುದ್ಧಿ ಮತ್ತು ಹೃದಯ ಭೂಮಿಕೆಗಳಲ್ಲಿ ಬಿಚ್ಚಿಟ್ಟ ಮಹಾಗುರುವಿಗೆ ನಮಿಸಿ ಶ್ರೀ ಕೃಷ್ಣಜನ್ಮೋತ್ಸವದ ಸವಿನೆನಪಿನೊಡನೆ ಶ್ರೀ ಕೃಷ್ಣಪರಂಜ್ಯೋತಿಗೆ ಈ ಬರಹವನ್ನು ಅರ್ಪಿಸುತ್ತೇನೆ.  

ಸೂಚನೆ : ಈ ಲೇಖನವು ಶ್ರೀಮಂದಿರದಿಂದ ಪ್ರಕಾಶಿತವಾಗುವ ಆರ್ಯಸಂಸ್ಕೃತಿ ಮಾಸ ಪತ್ರಿಕೆಯ 1982 ಜನವರಿಯ ಸಂಪುಟ 04 ಸಂಚಿಕೆ 03 ರಲ್ಲಿ ಪ್ರಕಟವಾಗಿದೆ. 

Saturday, August 29, 2020

ತೆಂಗಿನ ಕಾಯಿಯ ಮಹತ್ವ (Tengina Kayiya Mahatva)

ಲೇಖಕರು: ವಾದಿರಾಜ. ಪ್ರಸನ್ನ
(ಪ್ರತಿಕ್ರಿಯಿಸಿರಿ lekhana@ayvm.in)



ಭಾರತ ದೇಶದಾದ್ಯಂತ ತೆಂಗಿನಕಾಯಿ ನಿತ್ಯಜೀವನ ಹಾಗೂ ಶುಭಸಮಾರಂಭಗಳಲ್ಲಿ ಉಪಯೋಗಿಸಲ್ಪಡುವ ಪದಾರ್ಥವಾಗಿದೆ.    ತೆಂಗಿನಕಾಯಿಗೆ ಅರಿಶಿನ, ಕುಂಕುಮ ಹಚ್ಚಿ ಮಂಗಳ ಕಾರ್ಯಗಳಲ್ಲಿ ಬಳಸುತ್ತಾರೆ.  ಮದುವೆ, ಮುಂಜಿಯಂತಹ ಶುಭ ಸಮಾರಂಭಗಳಲ್ಲಿ ಎಲೆ-ಅಡಿಕೆಯೊಂದಿಗೆ ಇದನ್ನು ದಾನಕೊಡುವುದನ್ನು  ಅತಿಶ್ರೇಷ್ಠವೆಂಬುದಾಗಿ ಭಾವಿಸುತ್ತಾರೆ. ದುಷ್ಟದೃಷ್ಟಿಯ ನಿವಾರಣೆಗೆ ನೂತನ ವಾಣಿಜ್ಯ ಮಳಿಗೆ, ಗೃಹಪ್ರವೇಶದ ಸಂದರ್ಭಗಳಲ್ಲಿ, ವಿವಾಹಸಂದರ್ಭಗಳಲ್ಲಿ ತೆಂಗಿನಕಾಯಿಯನ್ನು ನೀವಾಳಿಸಿ  ಒಡೆಯುವ ಪದ್ಧತಿಯುಂಟು. 

ಜ್ಞಾನಿಗಳನ್ನು ಸ್ವಾಗತಿಸಲು  ಸುಮಂಗಲಿಯರೊಡನೆ ಪೂರ್ಣಕುಂಭದೊಂದಿಗೆ ಸ್ವಾಗತವನ್ನು ಕೋರುವರು. ಪೂರ್ಣಕುಂಭವೆನ್ನುವುದು ಶುದ್ಧವಾದ, ಶೀತಲವಾದ ಜಲತುಂಬಿದ ಕೊಡ. ಅದರ ಮೇಲೆ ಮಾವಿನ ಸೊಪ್ಪನ್ನಿಟ್ಟು ಅದರ ಮೇಲೆ ಊರ್ಧ್ವಶಿಖೆಯುಳ್ಳ ತೆಂಗಿನಕಾಯನ್ನು ಇಡುತ್ತಾರೆ. 

ದಿನನಿತ್ಯದ  ಅಡುಗೆಯಲ್ಲಿ ತೆಂಗಿನ ಪಾತ್ರ ಅತಿಪ್ರಮುಖ. 'ಇಂಗೂ ತೆಂಗೂ  ಇದ್ದರೆ  ಮಂಗನ ಅಡುಗೆಯೂ ಚೆಂದ' ಎನ್ನುವ ಮಾತು ಇದನ್ನು ಪುಷ್ಟೀಕರಿಸುತ್ತದೆ.   ಇನ್ನು ಹಬ್ಬ ಹರಿದಿನಗಳಲ್ಲಂತೂ ಇದು ಕೋಸಂಬರಿ, ಪಲ್ಯ, ಚಿತ್ರಾನ್ನ, ಸಾರು ಹಾಗೂ ಸಿಹಿ ತಿನಿಸುಗಳ ಅವಿಭಾಜ್ಯ ಅಂಗ. 


ತೆಂಗಿನಕಾಯಿಯ ಆರ್ಥಿಕ ಲಾಭ 

ನಮ್ಮ ದೇಶದಲ್ಲಿನ ಅನೇಕ ರೈತರ ಕುಟುಂಬದವರು ತೆಂಗಿನ ಮರವನ್ನು ಬೆಳೆಸಿ ಅದರ  ಆದಾಯದ ಆಧಾರದಮೇಲೆ ತಮ್ಮ ಜೀವನವನ್ನು ನಡೆಸುತ್ತಿದ್ದಾರೆ. ಇದು ಸಾಮಾನ್ಯವಾಗಿ ನಷ್ಟವಿಲ್ಲದ ಬೆಳೆ. ಬೇರೆ ವ್ಯವಸಾಯಕ್ಕೆ ಹೋಲಿಸಿದರೆ ಇದರ ಆರೈಕೆ ಸುಲಭ . ತೆಂಗಿನತೋಟದಲ್ಲಿ ವರ್ಷಪೂರ್ತಿಯಾಗಿ ಫಲವನ್ನು ಪಡೆಯಬಹುದಾಗಿದೆ.  ಅನೇಕ ವರ್ಷಗಳವರೆಗೂ ಫಲ ನಿಡುವ  ಉತ್ಕೃಷ್ಟ ಬೆಳೆಯಾಗಿದೆ. ತೆಂಗಿನ ಮರದಲ್ಲಿನ ಎಳೆನೀರಿನಲ್ಲಿ ರೋಗನಿರೋಧಕ ಹಾಗು ಆಯುರ್ವರ್ಧಕ ಅಂಶಗಳಿವೆ. ಇದರ ಹೊಂಬಾಳೆಯಲ್ಲೂ  ಓಷಧಿ ಗುಣಗಳಿರುವ ಕಾರಣ ಆಯುರ್ವೇದದಲ್ಲಿ  ಹೆಚ್ಚು ಪ್ರಮಾಣದಲ್ಲಿ ಚಿಕಿತ್ಸೆಗಳಿಗೆ ಬಳಕೆಯಾಗುತ್ತದೆ.  ಇನ್ನು ಇದರ ಗರಿಗಳಿಂದ ಮಂಗಳ ಕಾರ್ಯಕ್ಕೆ ಚಪ್ಪರವನ್ನು ಹಾಕುವರು. ಇದಲ್ಲದೆ ಹತ್ತು ಹಲವು ಪ್ರಯೋಜನಗಳನ್ನು ಪಡೆಯಬಹುದಾಗಿದೆ. 


ಪೂಜಾಕಾರ್ಯಗಳಲ್ಲಿ ತೆಂಗಿನ ಪಾತ್ರ 

ಎಲ್ಲ ಪೂಜೆಗಳಲ್ಲೂ ತೆಂಗಿನಕಾಯನ್ನು ನಿವೇದಿಸುವುದು ಸಾಮಾನ್ಯವಾದ ರೂಢಿ. ದೇವಾಲಯಗಳಲ್ಲೂ ಸಹ  ದೇವರಿಗೆ ತೆಂಗಿನಕಾಯಿಯು ನೈವೇದ್ಯಕ್ಕೆ ಒದಗಿಬರುತ್ತದೆ. 

'ಈ ಸೃಷ್ಟಿಯಲ್ಲಿ ಇರುವ ಪದಾರ್ಥಗಳೆಲ್ಲವೂ ನಿನ್ನದೇ ಎಂಬ ಸತ್ಯಾರ್ಥವನ್ನು ಭಗವಂತನಲ್ಲಿ ನಿವೇದಿಸುವುದೇ ನೈವೇದ್ಯ. "ನಿನ್ನ ಪ್ರಸನ್ನತೆ ಇದರ ಮೇಲೆ ಹರಿದು,  ನನ್ನ ವಿಷಾದವು ತೊಲಗಿ ಪ್ರಸಾದವಾಗಲಿ" ಎಂಬ ಪ್ರಾರ್ಥನೆ. ಮೊದಲು ಬರಿಯ ತೆಂಗಿನಕಾಯಿಯಾಗಿದ್ದದ್ದು ನೈವೇದ್ಯದ ನಂತರ 'ಪ್ರಸಾದ'ವೆಂಬ  ಪವಿತ್ರ ಭಾವವನ್ನುಪಡೆಯುತ್ತದೆ. ಪ್ರಸಾದವನ್ನು ಸ್ವೀಕರಿಸುವುದರಿಂದ ನಮ್ಮಲ್ಲಿ ಧಾತುಪ್ರಸನ್ನತೆ ಉಂಟಾಗುತ್ತದೆ. ಹಾಗಾದಾಗ ಜೀವನದಲ್ಲಿ ನೆಮ್ಮದಿ ಶಾಂತಿ. ನಮ್ಮೆಲ್ಲರ ಪರಮ ಲಕ್ಷ್ಯವಾದ ಭಗವಂತನ ದರ್ಶನಕ್ಕೂ ಈ ಧಾತು ಪ್ರಸನ್ನತೆ ಅತಿಮುಖ್ಯ.ಎಂದು ಶ್ರುತಿಯು ಅಪ್ಪಣೆ ಕೊಡಿಸುವಂತೆ "ತಮಕ್ರತುಂ ಪಶ್ಯತಿ ವೀತಶೋಕೋ ಧಾತುಪ್ರಸಾದಾನ್ಮಹಿಮಾನಮೀಶಂ" ಎಂಬಂತೆ ಪ್ರಸಾದದ ಪರಮ ಫಲವಿದು.  "ಫಲಂ ಮನೋರಥಫಲಂ" ಎಂಬಂತೆ ಅದರಲ್ಲಿ ಆತ್ಮ ಭಾವದ ಸವಿಯೂ ಸೇರಿಕೊಳ್ಳುತ್ತದೆ, ಮನೋರಥ ಫಲವಾಗುತ್ತದೆ.  


ತೆಂಗಿನಕಾಯಿಯ ವಿಶೇಷತೆ:

ನಮ್ಮ ಸಂಸ್ಕೃತಿಯಲ್ಲಿ ತೆಂಗಿಗೆ ಇಂಥಹ ಹಿರಿದಾದ ಸ್ಥಾನವೇಕೆ ?  ಏನು ತೆಂಗಿನ ವೈಶಿಷ್ಟ್ಯ? ತೆಂಗಿನ ಕಾಯಿಯ ಬಗ್ಗೆ ಶ್ರೀರಂಗ ಮಹಾಗುರುಗಳ ಸತ್ಯಾರ್ಥಪೂರ್ಣವಾದ ನೋಟವನ್ನು ಗಮನಿಸೋಣ. ಜ್ಞಾನಿಗಳ ಶಿರಸ್ಸಿನ  ಪ್ರತಿನಿಧಿಯಾಗಿದೆ ಈ ತೆಂಗಿನ ಕಾಯಿ.  ತಲೆಯಲ್ಲಿ ಎರಡು ಹೋಳುಗಳಿರುವಂತೆ ಇದರಲ್ಲಿಯೂ ಎರಡು ಸಮನಾದ ಹೋಳುಗಳುಂಟು. ನಮ್ಮ ತಲೆಯ ಮೇಲ್ಭಾಗದಲ್ಲಿನ ಶಿಖೆಯ ಸ್ಥಾನದಲ್ಲಿ ಒಳ ಧ್ಯಾನಸ್ಥಿತಿಯಲ್ಲಿ ದೀಪಶಿಖೆಯು ಬೆಳಗುವುದನ್ನು ಕಂಡ ಜ್ಞಾನಿಗಳು, ಒಳ ದೀಪಶಿಖೆಯನ್ನು ನೆನಪಿಸುವಂತೆ ಈ ಕಾಯಿಯಲ್ಲೂ ಶಿಖೆ ಇರುವುದನ್ನು ಗಮನಿಸಿದ್ದಾರೆ. ತಲೆಯಲ್ಲಿ "ರಸೋ ವೈ ಸಃ"   ಎಂದು ಹೇಳಲ್ಪಟ್ಟಿರುವ ರಸಸ್ವರೂಪಿಯಾದ ಪರಮಾನಂದಸ್ವರೂಪಿಯಾದ ಪರಮಾತ್ಮನು  ತುಂಬಿರುವಂತೆ  ತೆಂಗಿನಕಾಯಿಯಲ್ಲೂ ಮಧುರರಸವನ್ನು ತುಂಬಿಕೊಂಡು ಮಧುಮಯವಾಗಿರುವ ಸಾರವತ್ತಾದ ಎಳನೀರಿದೆ.   ಇನ್ನು ನಮ್ಮಂತಹ  ಸಾಮಾನ್ಯರಿಗೆ ಎರಡು ಕಣ್ಣುಗಳು ಮಾತ್ರವೇ ಅನುಭವಕ್ಕೆ ಬರುವುದು. ಆದರೆ  ಜ್ಞಾನಿಗಳಿಗೆ ಈ ಎರಡು ಕಣ್ಣುಗಳಲ್ಲದೆ, ಅಂತರ್ದರ್ಶನವನ್ನು  ಮಾಡಿಸುವ ಮೂರನೇ ಕಣ್ಣು ಇದೆ. ಅಂತೆಯೇ ತೆಂಗಿನಕಾಯಿಯಲ್ಲೂ ಮೂರುಕಣ್ಣುಗಳು ಉಂಟು. ಜೀವನದಲ್ಲಿ ಈ ಮೂರನೇ ಕಣ್ಣಿನ ನೆನಪು ಮಾಡಿಕೊಡುತ್ತಿದೆ ಈ ಫಲ. ಆದ್ದರಿಂದಲೇ "ನಾರಿಕೇಲ ಸಮುದ್ಭೂತ ತ್ರಿನೇತ್ರ ಹರಸಮ್ಮತ" ಎಂದು ಹೇಳುವುದು. ಇದರಲ್ಲಿ ಮತ್ತೊಂದು ರಹಸ್ಯವಿದೆ.  ಚೆನ್ನಾಗಿ ಬಲಿತಿರುವ ತೆಂಗಿನಕಾಯಿಯಲ್ಲಿ ಆ ಮೂರನೇ ಕಣ್ಣಿನ ಸ್ಥಾನದಲ್ಲಿ ಒಂದು ಹಳದಿ ಬಣ್ಣದ ಲಿಂಗಾಕಾರವಾದ ಪದಾರ್ಥ ಇರುವುದು. ಅದನ್ನು ತಿನ್ನದೆ ತಲೆಯಲ್ಲಿ ಮುಡಿದುಕೊಳ್ಳುವ ವಾಡಿಕೆ ಇದೆ. ಇದು ತನ್ನ ಆಕಾರ, ವರ್ಣಗಳಲ್ಲಿ ಜ್ಞಾನಿಗಳ  ಭ್ರೂಮಧ್ಯದ ಸ್ಥಾನದಲ್ಲಿ ದರ್ಶನನೀಡುವ  ಜ್ಯೋತಿರ್ಮಯವಾದ ಲಿಂಗವನ್ನು ಹೋಲುವುದರಿಂದ ಅದರ ನೆನಪಿಗಾಗಿ ಹಾಗೆ ಶಿರದಲ್ಲಿ ಧರಿಸುವ ಸಂಪ್ರದಾಯ ಬಂದಿದೆ.  ಹೀಗೆ ಅಂತರ್ದರ್ಶನದ ನೆನಪನ್ನು ಕೊಡುವ ಹೊರಗಿನ ಶ್ರೇಷ್ಠವಾದ ಫಲವಿದಾಗಿದೆ.


ಒಟ್ಟಾರೆ ನೋಡುವುದಾದರೆ ತೆಂಗಿನಿಂದ ಜೀವನೋಪಾಯವೂ ಉಂಟು, ಇಂದ್ರಿಯತೃಪ್ತಿ- ಉದರ ತೃಪ್ತಿಯೂ ಉಂಟು, ಅಂತೆಯೇ ದಾಮೋದರನ ಸ್ಮರಣೆಯೂ ಉಂಟು. ಯೋಗ ಭೋಗಗಳೆರಡಕ್ಕೂ ಸಹಕಾರಿಯಾಗಿ ಉಪಕರಿಸುತ್ತಿರುವ ಸೃಷ್ಟೀಶನ ವರದಾನವಾದ  ವೃಕ್ಷವಿದು. ತೆಂಗಿನ ಮರದಲ್ಲಿ ಉಪಯೋಗವಿಲ್ಲದ ಭಾಗವೇ ಇಲ್ಲ. ಆದ್ದರಿಂದ ತೆಂಗಿನ ಮರವನ್ನು ಕಲ್ಪವೃಕ್ಷವೆಂದು ಕರೆಯುತ್ತಾರೆ. ಕಲ್ಪವೃಕ್ಷವಾಗಿರುವಂತೆ, ಇದು ಭಗವತ್ ಸಂಕಲ್ಪವೃಕ್ಷವೂ ಆಗಿದೆ. ಭಗವಂತನ ಒಳ ಅನುಭವವನ್ನೂ ಜ್ಞಾಪಿಸುತ್ತದೆ. ಜೀವನದ ಗುರಿಯಾದ ಧರ್ಮ, ಅರ್ಥ, ಕಾಮ ಮೋಕ್ಷಗಳೆಂಬ ಪುರುಷಾರ್ಥವನ್ನು ಜ್ಞಾಪಿಸುತ್ತದೆ. ಅವುಗಳ ಸಾಧನೆಯಲ್ಲಿ ಸಹಕಾರಿಯಾಗಿದೆ. ಹೀಗೆ ಐಹಿಕ ಪಾರಮಾರ್ಥಿಕ ಪ್ರಯೋಜನಗಳಿರುವ  ಈ ನಾರಿಕೇಳ ಫಲವನ್ನು ಜ್ಞಾನಿಗಳು  ನಮಗೆ ಕರುಣಿಸಿದ್ದಾರೆ ಎಂಬುದನ್ನು ನೆನೆಯುತ್ತಾ ಇದರ ಸದುಪಯೋಗವನ್ನು ಪಡೆಯೋಣ.


ಸೂಚನೆ: 29/08/2020 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ  

ಕ್ಷಾಂತಿ (ಆತ್ಮಗುಣ) Khsanti (Athmaguna)

ಲೇಖಕರು: ವಿದ್ವಾನ್ ನರಸಿಂಹ ಭಟ್ಟ

(ಪ್ರತಿಕ್ರಿಯಿಸಿರಿ lekhana@ayvm.in)


ಪ್ರತಿದಿನ ಬೆಳಿಗ್ಗೆ ಏಳುತ್ತಿದ್ದಂತೆ ನಾವು 'ಸಮುದ್ರವಸನೇ ದೇವಿ!' ಎಂದು ಭೂತಾಯಿಯನ್ನು ನಮಸ್ಕರಿಸುತ್ತಾ, ನಾನು ಮಾಡುವ ಪಾದಸ್ಪರ್ಶವನ್ನು ಕ್ಷಮಿಸು ಎಂದು ಪ್ರಾರ್ಥಿಸಿಕೊಳ್ಳುತ್ತೇವೆ. ಭೂತಾಯಿಯ ಕ್ಷಮೆ ಅದೆಂಥಾದ್ದು! ಹಾಗೇ ಪ್ರತಿದಿನ ಭಗವಂತನನ್ನು ಪೂಜಿಸಿ ಕೊನೆಯಲ್ಲಿ 'ಸರ್ವಾಪರಾಧಾನ್ ಕ್ಷಮಸ್ವ' ಎಂದು ಬೇಡಿಕೊಳ್ಳುತ್ತೇವೆ. ಭಗವಂತ ತಾನೆ ನಮ್ಮ ಎಲ್ಲಾ ತಪ್ಪುಗಳನ್ನು ಮನ್ನಿಸಬಲ್ಲ! ಮಹಾಭಾರತದಲ್ಲಿ ಭಗವಾನ್ ಶ್ರೀಕೃಷ್ಣನು ಶಿಶುಪಾಲನೆಂಬ ದುಷ್ಟನ ನೂರು ಅಪರಾಧಗಳನ್ನು ಮನ್ನಿಸುತ್ತಾನೆ ಎಂಬ ಕಥೆಯನ್ನು ಕೇಳುತ್ತೇವೆ. ಮಕ್ಕಳು ಮಾಡುವ ತಪ್ಪುಗಳನ್ನು ತಂದೆತಾಯಿಯರು ಗುರುಹಿರಿಯರು ಸಹಿಸಿಕೊಳ್ಳುತ್ತಾರೆ. ಕ್ಷಾಂತಿ ಎಂದರೇನು?

ಕ್ಷಾಂತಿ ಎಂಬ ಶಬ್ದಕ್ಕೆ ಕ್ಷಮೆ, ಸಹನೆ, ಮರ್ಷ, ಯೋಗ್ಯತೆ, ಸಾಮರ್ಥ್ಯ ಎಂಬೆಲ್ಲಾ ಅರ್ಥಗಳಿವೆ. ಸಾಮಾನ್ಯವಾಗಿ ಇತರರು ಮಾಡುವ ತಪ್ಪನ್ನು ಸಹಿಸಿಕೊಳ್ಳುವುದು ಕ್ಷಾಂತಿ ಎನಿಸಿಕೊಳ್ಳುತ್ತದೆ. ತಪ್ಪಿಗೆ ಶಿಕ್ಷೆ ಕೊಡಬೇಕು, ಅಥವಾ ತಪ್ಪನ್ನು ಮಾಡದಂತೆ ತಿಳಿಹೇಳಬೇಕು- ಅದನ್ನು ಬಿಟ್ಟು ತಪ್ಪನ್ನು ಸಹಿಸುವುದು, ಮನ್ನಿಸುವುದು ಮೂರ್ಖತನವಲ್ಲವೇ? ಎಂಬ ಪ್ರಶ್ನೆ ಬರುತ್ತದೆ. ನಿಜ. ಬೇರೆಯವರು ತಪ್ಪು ಮಾಡಿದಾಗ ಅದನ್ನು ಮನ್ನಿಸುವುದು ಮೂರ್ಖತನವಲ್ಲ, ಅದು ಕ್ಷಮಿಸುವವನ ದೊಡ್ಡತನ. ತಪ್ಪು ಮಾಡಿದರೂ ತಾನು ಉದ್ವೇಗಕ್ಕೆ ಒಳಗಾಗದೆ ಸಾವಧಾನವಾಗಿ ಸಮಯವನ್ನು ಕಾದು ಅದನ್ನು ಸರಿಪಡಿಸುವುದು ಸಜ್ಜನಿಕೆ. ಪ್ರತಿಯೊಬ್ಬನೂ ತಪ್ಪನ್ನು ಮಾಡುತ್ತಾನೆ. ಮನ್ನಿಸುವ ಸ್ವಭಾವದವನಿದ್ದಾಗ ಅವನ ಪ್ರಭಾವದಿಂದ ಯಾವಾಗ ತನ್ನ ತಪ್ಪನ್ನು ತಾನೇ ಅರ್ಥಮಾಡಿಕೊಳ್ಳುತ್ತಾನೋ ಅವನು ಬೇಗ ಎತ್ತರಕ್ಕೇರುತ್ತಾನೆ. ಬೇರೆಯವರು ನಮ್ಮನ್ನು ಮನ್ನಿಸಿದಾಗ ಅದು ನಮ್ಮನ್ನು ತಿದ್ದಿಕೊಳ್ಳಲು ಇರುವ ಅವಕಾಶವೇ ಸರಿ.. ಯಾವಾಗ ತಿಳಿಯದೇ ಅಥವಾ ಅನಿವಾರ್ಯವಾಗಿ ಅಪರಾಧವನ್ನು ಮಾಡುತ್ತಾನೋ ಅಲ್ಲಿ ಮಾತ್ರ ಕ್ಷಮೆಯೇ ಹೊರತು, ತಿಳಿದು ಮತ್ತೆ ಮತ್ತೆ ತಪ್ಪನ್ನು ಮಾಡಿದಾಗ ಅಲ್ಲಿ ದಂಡನೆಯೇ ಕ್ಷಮೆ. ದಂಡಿಸುವ ಸಾಮರ್ಥ್ಯ ಇದ್ದಾಗಲೂ ದಂಡಿಸದೆ ಸಹಿಸಿಕೊಂಡರೆ ಅದನ್ನು  ಸಹನೆ ಎನ್ನಬೇಕು; ಅದು ಹೇಡಿತನವಲ್ಲ. ಮಹಾಭಾರತದಲ್ಲಿ ಶಿಶುಪಾಲನಿಗೆ ಶ್ರೀಕೃಷ್ಣನು ಅನುಗ್ರಹಿಸಿದ ಕ್ಷಮೆ ಸ್ತುತ್ಯವಾದುದು.

ಇತರರು ತನಗೆ ತೊಂದರೆಯನ್ನುಂಟು ಮಾಡಿದಾಗ ತಿರುಗಿ ನಾವು ತೊಂದರೆಯನ್ನುಂಟುಮಾಡದೇ ಇರುವುದು ಸಹನೆ. ಕೆಲವೊಮ್ಮೆ ಬೇರೆಯವರು ನಮಗೆ ನೋವನ್ನುಂಟುಮಾಡಿದಾಗ ಅವರ ಮೇಲೆ ಕೋಪವು ಬರುತ್ತದೆ. ಇನ್ನೂ ಮಿತಿಮೀರಿದಾಗ ಕೈಗೆ ದೊಣ್ಣೆಯೂ ಬರಬಹುದು. ಶಕ್ತಿ ಇರುವವನಾದರೆ ಪ್ರತೀಕಾರದ ಇಚ್ಚೆಯನ್ನುತೀರಿಸಿಕೊಳ್ಳಬಹುದು. ಆದರೆ ಅಶಕ್ತನಾದವನು "ಕೈಯ್ಯಲ್ಲಾಗದವನು ಮೈಯ್ಯೆಲ್ಲಾ ಪರಚಿಕೊಂಡ" ಎಂಬಂತೆ ಪ್ರತಿರೋಧ ಮಾಡದಿರಬಹುದು. ಅದು ಸಹನೆ ಅಲ್ಲ.  ಈ ಬಗ್ಗೆ  ಶ್ರೀರಂಗಮಹಾಗುರುಗಳ ಬಳಿ ಅವರ ಶಿಷ್ಯಶ್ರೇಷ್ಠರಾದ ಶ್ರೀಶ್ರೀರಂಗಪ್ರಿಯಮಹಾಸ್ವಾಮಿಗಳು ಪ್ರಶ್ನೆಯನ್ನು ಮಾಡಿದರಂತೆ- "ಒಬ್ಬ ವ್ಯಕ್ತಿಯ ವಿಷಯದಲ್ಲಿ ಮನಸ್ಸಿನಲ್ಲಿ ಕೋಪವುಂಟಾಗುತ್ತದೆ. ಅನಂತರ ಅವನನ್ನು ಪ್ರಹರಿಸುವಷ್ಟು ಕೋಪಬರುತ್ತದೆ. ಹಾಗಾದರೆ ಹೊರಗಡೆ ಪ್ರಹಾರ ಮಾಡದಿದ್ದರೂ ಮಾನಸಿಕವಾಗಿ ಮಾಡಿದಂತಾಯಿತು. ಆದ್ದರಿಂದ ಈ ಮಾನಸಿಕವಾದ ಕಾರ್ಯದಿಂದ ಪಾಪವುಂಟೇ? ಇಲ್ಲವೇ? ಪೂರ್ಣವಾದ ಪ್ರಹಾರ ಪಾಪವುಂಟೇ?" ಎಂದು. ಆಗ ಅವರು ಕೊಟ್ಟ ಉತ್ತರ " ಬರಿಯ ಮಾನಸಿಕ ಕಾರ್ಯದಿಂದ ಅಷ್ಟು ಪಾಪವಿಲ್ಲ, ಮನಸ್ಸಿನಲ್ಲುಂಟಾಗಿ ಹೊರಗಡೆಯೂ ಮಾಡಿದರೆ ಆ ಪಾಪದ ಪ್ರಮಾಣ ಹೆಚ್ಚು. ಆದ್ದರಿಂದ ಒಳಗಡೆ ವೇಗ ಉಂಟಾದರೂ ಹೊರಗಡೆ ತೋರಿಸಬಾರದು. ಒಳಗಡೆಯೂ ವೇಗ ಉಂಟಾಗದಂತೆ ಇರುವುದು ಉತ್ತಮ ಕಲ್ಪ" ಎಂದು.  ಮನೋವೇಗವನ್ನು ತಡೆಯುವುದೇ ಕ್ಷಮಾ.

ಸೂಚನೆ: 29/08/2020 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.

Thursday, August 27, 2020

பெண்களுக்கு மட்டுமே அனுமதி (Pengalukku mattume anumadi)

 மூலம்: மைதிலி 

தமிழாக்கம் : ஜானகி

மின்னஞ்சல் : (lekhana@ayvm.in)


யதுவம்சத்தின்     ‌குலகுருவான கர்க்காசாரியார் ஸ்ரீ க்ருஷ்ணனின் ராஸக்ரீடையின்  ஒரு வினோதமான கட்டத்தை வர்ணிக்கிறார். க்ருஷ்ணபக்தரும், மஹாதபஸ்வியுமான ஒரு மகரிஷி கண்ணனை தரிசிக்க மிக்க ஆவலுடன் மகாதேவனுடன் ப்ருந்தாவனத்திற்கு வந்தார். ராஸக்ரீடையை கண்ணாற‌ கண்டு களித்து மகிழ வந்தவர்களுக்கு ஆச்சரியம் காத்திருந்தது. அங்குள்ள மரங்கள் கோபியர்களின்  வேஷம் கொண்டு காவல் காத்தனர். இவர்கள் இருவரையும் உள்ளே செல்ல அனுமதிக்கவில்லை. "ப்ருந்தாவனத்தில் பெண்களுக்கு மட்டுமே அனுமதி. ஸ்ரீக்ருஷ்ணன் மட்டுமே இங்கு புருஷன்(ஆண்). ஆகையால் நீங்களும் பெண் வேடம் அணிந்து வந்தால் மட்டுமே உள்ளே அனுமதிக்க முடியும்" என்றனர். மேலும் "மானஸ  ஸரோவரத்தில் மூழ்கி பெண்உருவமடைந்து வாருங்கள்" என உபாயம் கூறினார்கள். அவர்களிருவரும் அவ்வாறே மானஸஸரோவரத்தில் மூழ்கி பெண் உருவமடைந்து வந்து ப்ருந்தாவனத்திற்கு சென்று ராஸக்ரீடையை கண்ணாற கண்டு களித்து ஆனந்த பரவசமானார்கள்.

மேற்கூறிய சம்பவம் மிக வினோதமானதாக தோன்றுகிறது. ஏன் பெண்களாகவே இருக்க வேண்டும்? மானஸஸரோவரத்திற்கு யாத்திரை சென்று வந்தவர்களில்  அநேக ஆண்கள் உண்டு. அவர்களில் யாரும் பெண்ணாக  மாறிய செய்தி இதுவரை அறியப்படவில்லை. ஆகையால் மேற்கூறிய சம்பவம் கற்பனை என்றே சொல்லலாமோ? புராணங்கள் போன்ற ரிஷிகள் இயற்றிய நூல்களில் அநேக சம்பவங்கள் தத்துவம் உள்அடங்கியவை. மிகவும் கடினமான தத்துவங்களை சுலபமாக புரியவைக்க அல்லது தத்துவத்தின்பால் மனத்தை ஈர்க்கும் கைகாட்டியாக கதைகளை இயற்றியதுண்டு.

மேற்கூறிய சம்பவமும் மிகவும் மேன்மையான விஷயத்தையே தெரிவிக்கிறது. இங்கு பெண் என்பது வெளித் தோற்றமன்று. இறைவன் ஒருவனே ஆண்-(புருஷன்)-பரமபுருஷன். மற்ற அனைவரும் அவனையே பதியாக(கணவனாக) தலைவனாக கருதி அவனிடத்தே லயிப்பது பெண்மையின் உணர்வு என்பது ஞானிகளின் கூற்று. அவ்வாறான நிலையை அடையும்போது உள்ளே உறையும் இறைவனின் தரிசனம் சாத்தியம் என்னும் உண்மையை  இக்கதை உரைக்கிறது.

மானஸஸரோவரம் என்பது இமாலயத்தில் உள்ள நீர்நிலை. வெளியில் காணும் இது நம் மனத்தின் ஆழத்தில் உள்ள ஒரு பரிசுத்தமான இடத்தின் வெளிஅடையாளம் என்பது ஞானிகளின் கருத்து. இத்தகு பெண்உணர்வை அடைந்தால் அனைவரும் இறைஉணர்வை அனுபவிக்க இயலும்.

குறிப்பு: இக்கட்டுரை யின் கன்னட மூலம் AYVM blogs ல் காணலாம்.   

Monday, August 24, 2020

Sri Rama’s Courage – A Model for all of Us

Original Article by: Dr. Nanjanagud Suresh

English Rendering by: K. Mukundan




Sage Naarada, while apprising Vaalmiki of the attributes of an ideal Human being, as possessed by Sri Raama, compares them with the Sea, Mountain, Earth and Moon, duly describing the inherent speciality in each. Man's life is endowed with all the emotions in a balanced state. Though all of us always aspire for happiness, sorrow is inevitable, even if we do not desire the same. We get elated on being happy and depressed when accosted with sorrow. Various components of nature counsel us to face exigencies. For example, let us take the case of a mountain. Whether it is a case of rain, sunshine, cold, thunder, wildfires or cyclone, a mountain is able to contain these calamities, remaining firm, without losing its identity.

Let us now observe the life of Sri Rama. All preparations for the Crowning ceremony of Sri Rama had been completed. Sri Rama being an exemplary individual, endowed with the noblest etiquette, did not have the least desire to be crowned as King, though the fortune sought him on its own.

 Kaikeyi secured the banishment of Sri Rama to the forest for fourteen years and the coronation of her son Bharatha as King, from Dasharatha against the two boons awarded by him earlier. Sri Raama never lost his mental poise, even on being accosted by Kaikeyi, under the evil influence of Mantara. He accepts the changed situation similar to a resilient person who treats alike, joy or sorrow, benefit or loss, victory or defeat, praise or criticism. While portraying this situation in Raghuvamsha, Mahaakavi Kaalidaasa says that Sri Raama accepted with anguish the kingdom awarded by his father. On the contrary, he happily welcomed the proposal of going to the forest. Besides, in order to establish the truthfulness of his father, he dons the robes of an ascetic and gets ready for implementation of the mandate of Kaikeyi. But Dasharatha, being bound by obligation to respect his commitment to the grant of the boons, was feeling delicate and miserable to instruct his most loved son, to go to the forest. This scenario is aptly captured by the grand Old Master of the lineage of Poets, with the golden words, "The residents of Sakethapura (Ayodhya) were surprised to behold the unperturbed glee and radiance in the face of Sri Rama on wearing the royal robes or attire of an ascetic".

Aah! What a wonderful mental equanimity in Noble persons. This is the most appropriate example for the "Verses of Wisdom (Subhashita)" which enumerates that "Saints face fortune or misery in the same manner"- (Samaanasheelaah vyasaneshu sakhyam).

Sri Raama is the ideal for taking on any grave situation with a bold, brave and unperturbed state of mind, like a mountain. With this in mind, Sage Naarada, while describing Sri Raama, has aptly said that his "courage is equivalent to that of Himavaan"(Dhairyena himavaniva).

Note: The Kannada version of this article can be viewed at AYVM blogs. 

Sunday, August 23, 2020

ಆರ್ಯಸಂಸ್ಕೃತಿ ದರ್ಶನ - 7 (Arya Samskruti Darshana - 7)

ತ್ರಿವೇಣಿ (ಜಡೆ)
ಲೇಖಕರು:ಡಾ|| ಎಸ್.ವಿ.ಚಾಮು

  

ಸ್ವಭಾವದಿಂದಲೇ ಶೃಂಗಾರಪ್ರಿಯರಾದ ಸ್ತ್ರೀಯರಿಗೆ ಸಮೃದ್ಧವಾದ ಕಪ್ಪಾದ ತಲೆಗೂದಲಿಗಿಂತ ಪ್ರಿಯವಾದ ವಸ್ತು ಬೇರೊಂದಿರಲಾರದು. ಅನಾದಿಕಾಲದಿಂದ ಅದು ನಮ್ಮ ದೇಶದಲ್ಲಿಸ್ತ್ರೀಯರ ಸೌಂದರ್ಯ, ಯೌವನ ಮತ್ತು ಭೋಗಗಳ ಕುರುಹಾಗಿರುತ್ತದೆ. ಕೇಶಪ್ರಸಾಧನವು ಅವರ ವಿಶೇಷವಾದ ಆಸಕ್ತಿಗೆ ವಿಷಯವಾಗಿರುತ್ತದೆ. ನಮ್ಮ ಪುರಾತನ ಕಾವ್ಯ, ಶಿಲ್ಪ ಮತ್ತು ವರ್ಣಚಿತ್ರಗಳು ಭಾರತ ದೇಶದ ಮಹಿಳೆಯರು ಅದರ ಬಗ್ಗೆ ಹೊಂದಿದ್ದ ಆದರಾಭಿಮಾನಗಳನ್ನು ಸುಂದರವಾಗಿ ಚಿತ್ರಿಸುತ್ತವೆ.

ಈಗಲೂ ಪರಂಪರಾಗತವಾಗಿ ಬಂದ ವಿಧಾನದಲ್ಲಿ ಕೇಶಾಲಂಕಾರ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಳವಾಗಿಯೇ ಇದೆ. ಆದರೂ ಈಚೆಗೆ ಹಲವು ವರ್ಷಗಳಿಂದ ಪರಂಪರೆಗೆ ವಿರೋಧವಾದ ರೀತಿಯಲ್ಲಿ ಸ್ತ್ರೀಯರು ತಮ್ಮ ಕೇಶಗಳನ್ನು ಧರಿಸುವ ಹೊಸ ಹೊಸ ಪ್ರಥೆಗಳು ಆರಂಭವಾಗಿ ಸಮಾಜದಲ್ಲಿ ಶೀಘ್ರವಾಗಿ ಹರಡುತ್ತಿರುವುದನ್ನು ನೋಡುತ್ತೇವೆ. ಕೂದಲುಗಳನ್ನು ಬಗೆ ಬಗೆಯಾದ ರೀತಿಗಳಲ್ಲಿ ಕತ್ತರಿಸಿಕೊಂಡು ಅಲಂಕಾರ ಮಾಡಿಕೊಳ್ಳುವುದು ರೂಢಿಗೆ ಬರುತ್ತಿದೆ.

ಈ ವ್ಯತ್ಯಾಸಗಳುಂಟಾಗಲು ಕಾರಣವೇನು ಎಂಬ ಪ್ರಶ್ನೆ ಬರುತ್ತದೆ. ಅವುಗಳಲ್ಲಿ ತರ್ಕ, ಸೌಂದರ್ಯ, ಔಚಿತ್ಯ ಅಥವಾ ದೃಷ್ಟಿಗಳನ್ನು ಹುಡುಕ ಹೋಗುವುದು ಪ್ರಾಯಃ ದಡ್ಡತನದ ಕೆಲಸವೆಂದು ನಮಗೆ ತೋರುತ್ತದೆ. ಆದರೂ ಈ ಬಗ್ಗೆ ಯೋಚನೆ ಮಾಡಿದಾಗ ಪರಸಂಸ್ಕೃತಿಯೊಡನೆ ಸಾಂಕರ್ಯ, ಸ್ವಸಂಸ್ಕೃತಿಯಲ್ಲಿ ಅನಾದರಣೆ, ಯೋಚನೆ ಮಾಡದೆ ಬೇರೆಯವರನ್ನು ಅನುಕರಣೆ ಮಾಡುವುದು, ಸಿನೇಮಾ ಮತ್ತು ಜಾಹಿರಾತುಗಳ ಪ್ರಭಾವ, ಸ್ವೇಚ್ಛಾ ಪ್ರವೃತ್ತಿ, ಸ್ತ್ರೀಯರಿಗೆ ಆರಾಮದ ಅಭಾವ ಮುಂತಾದ ಅನೇಕ ಕಾರಣಗಳು ಮನಸ್ಸಿಗೆ ಬರುತ್ತವೆ.

ಕಾರಣಗಳು ಏನಾದರೂ ಇರಲಿ, ಕೇಶಗಳನ್ನು ಕತ್ತರಿಸಿಕೊಡಿದ್ದರಿಂದ ನಮ್ಮ ಸ್ತ್ರೀಯರು ತಮ್ಮ ಪ್ರಾಚೀನವಾದ ಸಂಸ್ಕೃತಿಯಿಂದ ದೂರ ಸರಿಯುವುದರಲ್ಲಿ ಒಂದು ದೊಡ್ಡ ಹೆಜ್ಜೆಯಿಟ್ಟಂತೆ ಎಂಬುದರಲ್ಲಿ ಯಾವ ಸಂದೇಹವೂ ಇರುವುದಿಲ್ಲ. ಏಕೆಂದರೆ ನಮ್ಮ ಪರಂಪರಾಗತವಾದ ಕೇಶಧಾರಣೆಯ ವಿಧಾನದಲ್ಲಿ ಸೌಂದರ್ಯ ದೃಷ್ಟಿ ಮಾತ್ರವಲ್ಲದೆ ಆಳವಾದ ಸಾಂಸ್ಕೃತಿಕ ಅರ್ಥವೂ ಸಹ ಇರುತ್ತದೆ. ಅದು ಸೌಂದರ್ಯಕ್ಕೆ ಪೋಷಕವಾಗಿದೆಯೆಂಬುದರಲ್ಲಿ ಯಾವ ಸಂದೇಹವೂ ಇರಲಾರದು. ಜೊತೆಗೆ ಎಲ್ಲ ವಿಧವಾದ ಸೌಂದರ್ಯಗಳಿಗೂ ಮೂಲವಾದ ಆತ್ಮಸೌಂದರ್ಯವನ್ನು ಸ್ತ್ರೀಯರಿಗೆ ಪ್ರದಾನ ಮಾಡಲು ಅದು ಸಮರ್ಥವಾಗಿರುತ್ತದೆ. ಆತ್ಮಸೌಂದರ್ಯವನ್ನು ಹೊರ ತರದೆ ಕೇವಲ ಶರೀರದ ಶೃಂಗಾರದಲ್ಲಿಯೇ ಪರ್ಯಾವಸಾನವಾಗುವ ಅಲಂಕಾರದ ವಿಷಯದಲ್ಲಿ ನಮ್ಮ ಪೂರ್ವಜರು ಉತ್ಸಾಹಿಗಳಾಗಿರಲಿಲ್ಲ ಎಂಬ ಅಂಶವನ್ನು ಈ ಸಂದರ್ಭದಲ್ಲಿ ನಾವು ನೆನೆಸಿಕೊಳ್ಳ ಬಹುದು. ವಾಸ್ತವದಲ್ಲಿ ತ್ರಿವೇಣೀಯು ಆತ್ಮಸೌಂದರ್ಯವನ್ನು ಹೊರತರುವ ಕೇಶಾಲಂಕಾರ. ಅದರ ಅರ್ಥವನ್ನು ಕುರಿತು ಮುಂದೆ ಒಂದು ಸಂಗ್ರಹವಾದ ವಿಶ್ಲೇಷಣೆಯನ್ನು ಮಾಡಬಯಸುತ್ತೇವೆ.

ಆಧುನಿಕ ವಿಜ್ಞಾನವು ಕೂದಲನ್ನು ಚರ್ಮದಿಂದ ಹುಟ್ಟುವ ಒಂದು ತಂತು ಎಂದು ವರ್ಣಿಸುತ್ತದೆ. ಆದರೆ ಅದರ ಮೂಲ ಚರ್ಮದಲ್ಲಿಯೇ ಸೀಮಿತವಾಗುವುದಿಲ್ಲ. ನಮಗೆ ಪರಿಚಿತವಾದಂತೆ ಕೂದಲು ಮನುಷ್ಯರಲ್ಲಿ ಉಂಟಾಗಬಹುದಾದ ಶೋಕ, ಭಯ, ಕ್ರೋಧ, ಕಾಮ ಮುಂತಾದ ಭಾವನೆಗಳೆಲ್ಲದರೊಡನೆಯು  ನಿಕಟವಾಗಿ ಸಂಬಂಧಿಸಿರುತ್ತದೆ. ನಮಗೆ ಸ್ಪಷ್ಟವಾಗಿ ಗೋಚರವಾಗದಿದ್ದರೂ, ನಮ್ಮಲ್ಲಿ ಉಂಟಾಗುವ ಭಾವೋದ್ರೇಕಗಳೆಲ್ಲವೂ ಕೂದಲಿನ ಮೇಲೆ ತಮ್ಮ ಪ್ರಭಾವವನ್ನು ಬೀರುತ್ತವೆ. ಹಾಗೆಯೇ ಕೂದಲೂ ಸಹ ಮನಸ್ಸಿನ ಮೇಲೆ ತನ್ನ ಗಾಢವಾದ ಪ್ರಭಾವವನ್ನು ಬೀರುತ್ತದೆ. ಚೆನ್ನಾಗಿ ಬಾಚಿ, ತೈಲ ಇತ್ಯಾದಿಗಳಿಂದ ಸಂಸ್ಕರಿಸಿದ ಕೂದಲು ಮನಸ್ಸಿನಲ್ಲಿ ಸಮಾಧಾನ, ಸಂತೋಷ, ಉತ್ಸಾಹ ಇತ್ಯಾದಿಗಳನ್ನು ಉಂಟುಮಾಡುತ್ತದೆ. ಅದೇ ಕೆದರಿದ ಹಾಗೂ ಸಂಸ್ಕರಿಸದ ಕೂದಲು ಮನಸ್ಸಿನ ಮೇಲೆ ತದ್ವಿರುದ್ಧವಾದ ಪರಿಣಾಮವನ್ನುಂಟು ಮಾಡುತ್ತದೆ. ಉದಾಹರಣೆಗೆ ಕೆದರಿದ ಕೂದಲಗಳು ನಮ್ಮ ದೇಶದಲ್ಲಿ ಬಹಳ ಹಿಂದಿನಿಂದ ಶೋಕದ ಸಂಕೇತವಾಗಿ ಪರಿಗಣಿಸಲ್ಪಟ್ಟಿರುತ್ತವೆ.

ಆ ರೀತಿ ಭಾವೋದ್ರೇಕದಿಂದ ಕೂದಲುಗಳಲ್ಲಿ ಪರಿವರ್ತನೆಯುಂಟಾಗಲು ಅವು ಭಾವವಹವಾದ ಹೃದಯನಾಡಿಗಳೊಡನೆ ಸಂಬಂಧ ಹೊಂದಿರುವುದೇ   ಕಾರಣವಾಗಿದೆ. ಈ ನಾಡಿಗಳಲ್ಲಿ ಉಂಟಾಗುವ ಕಾಮ, ಕ್ರೋಧ, ಸಂತೋಷ ಮುಂತಾದ ಭಾವಗಳೆಲ್ಲವೂ ತಂತಿಯ ಮೇಲೆ ಹರಿಯುವ ವಿದ್ಯುತ್ತಿನಂತೆ ಕೂದಲುಗಳ ಮೂಲಕ ಕೊನೆಗೊಳ್ಳುತ್ತವೆಯೆಂದು ಹೇಳಬಹುದು. ಶರೀರವನ್ನು ತಾಳಿನಿಂದ ತುದಿಯವರಿಗೆ ವ್ಯಾಪಿಸಿರುವ ಭಾವವಾಹಿಯಾದ ನರತಂತುಗಳೆಲ್ಲವೂ ಪುರಾತನ ಭಾರತೀಯರ ದೃಷ್ಟಿಯಲ್ಲಿ  ಇಡಾ ಮತ್ತು ಪಿಂಗಳಾ ಎಂಬ ಎರಡು ನಾಡಿಗಳಿಂದ ಉತ್ಪನ್ನವಾಗುತ್ತವೆ. ಅವುಗಳಲ್ಲಿ ಇಡಾ ನಾಡಿಯ ಶಾಖೋಪಶಾಖೆಗಳು ಶರೀರದ ಎಡಭಾಗವನ್ನೂ ಮತ್ತು ಪಿಂಗಳಾ ನಾಡಿಯ  ಶಾಖೋಪಶಾಖೆಗಳು ಶರೀರದಬಲಭಾಗವನ್ನೂ ವ್ಯಾಪಿಸಿಕೊಂಡು ಅವುಗಳಲ್ಲಿ ನಡೆಯುವ ವ್ಯಾಪಾರಗಳೆಲ್ಲಕ್ಕೂ ಕಾರಣವಾಗುತ್ತವೆ ಎಂಬುದು ಅವರ ತೀರ್ಮಾನ. ಈ ಎರಡು ನಾಡಿಗಳೇ ಜೀವನದಲ್ಲಿ ತೋರಿಬರುವ ಧರ್ಮ, ಅಧರ್ಮ, ಪುಣ್ಯ ಪಾಪ, ಸುಖದುಃಖ ಮುಂತಾದ ಎಲ್ಲ ವಿಧವಾದ ಸ್ಥಿತಿಗತಿಗಳನ್ನೂ ಮತ್ತು ಅನುಭವಗಳನ್ನೂ ಉಂಟುಮಾಡಲು ಕಾರಣವಾಗುತ್ತವೆ. ಮನುಷ್ಯರಲ್ಲಿ ಪರ್ಯಾಯವಾಗಿ ಉಂಟಾಗುವ ಮಾನಸಿಕವಾದ ಏರಿತಗಳೆಲ್ಲಕ್ಕೂ ಈ ನಾಡಿಗಳೇ ಮೂಲ, ಅವೆರಡು ಚಕ್ರಗಳ ಮೇಲೆಯೇ ಜೀವನ ರಥವು ಉರುಳತ್ತದೆ. ಈ ಎರಡು ಪಕ್ಷಗಳೇ ಜೀವನ ಪಕ್ಷಿಯನ್ನು ಚೈತನ್ಯಮಯವಾದ ಆಕಾಶದಲ್ಲಿ ವಹಿಸುತ್ತವೆ. ಒಂದು ಮಾತಿನಲ್ಲಿ ಹೇಳಬಹುದಾದರೆ ಧರ್ಮ, ಅರ್ಥ ಮತ್ತು ಕಾಮಗಳಿಗೆ ಸಂಬಂಧಿಸಿದ ಕೆಲಸ ಕಾರ್ಯಕ್ಕೂ ಈ ಎರಡು ನಾಡಿಗಳೇ ಆಶ್ರಯ.

ಆದರೆ ಈ ಎಡ ಬಲದ ನಾಡಿಗಳೇ ಎಲ್ಲವೂ ಅಲ್ಲ. ಅವುಗಳನ್ನು ಮೀರಿಸಿರುವ ಮತ್ತು ಅವುಗಳಿಗೂ ಮೂಲವಾದ ಪರಮರಹಸ್ಯವಾದ, ಮಧ್ಯನಾಡಿಯಾದ ಸುಷುಮ್ನೆಯು ತಾನೆ ಜೀವನದ ಮೂಲ ನಾಡಿ. ಅದು ಜ್ಞಾನ ನಾಡಿಯೆಂದು ಕರೆಸಿಕೊಳ್ಳುತ್ತದೆ.ಅದರಲ್ಲಿಯೇ ಧ್ಯಾನಯೋಗದಿಂದ ಜ್ಞಾನಿಯಾದವನು ತನ್ನ ಬಾಳಿಗೆ ಮೂಲನಾದ , ಎಲ್ಲರ ಬಾಳಿಗೂ ಮೂಲನಾದ, ಅಧ್ಯಾತ್ಮ ದೀಪನಾದ, ಪರಮ ಪ್ರಭುವನ್ನು ಸಾಕ್ಷಾತ್ಕರಿಸಿಕೊಳ್ಳುತ್ತಾನೆ. ಅದನ್ನು ಮುಟ್ಟಿದಾಗ ತಾನೆ, ಮನಸ್ಸಿಗೆ ಒಂದು ನೆಲೆ ಸಿಕ್ಕಿದಂತಾಗುತ್ತದೆ. ಅರಾಮ, ಶಾಂತಿ ಮತ್ತು ನೆಮ್ಮದಿಗಳುಂಟಾಗುತ್ತವೆ. ಅದರೊಡನೆ ಸಂಬಂಧವನ್ನು ಕಳೆದುಕೊಂಡಾಗ ಮನಸ್ಸು ಪ್ರಕೃತಿಯ ಶಕ್ತಿಗಳಿಗೆ ಸಿಕ್ಕಿ ಸಂಸ್ಮರಣ ಮಾಡುತ್ತಿರುತ್ತದೆ. ಅದರೊಡನೆ ಪುನಃ ಸಂಬಂಧವನ್ನು ಸ್ಥಾಪಿಸಿಕೊಂಡಾಗ ಮನಸ್ಸು ಸ್ವತಂತ್ರವಾಗುತ್ತದೆ.

ಆದುದರಿಂದ ಮನುಷ್ಯನು ಇಂದ್ರಿಯ ಜೀವನ ಮತ್ತು ಬುದ್ಧಿ  ಜೀವನಗಳನ್ನು ಎಷ್ಟು ಚೆನ್ನಾಗಿ ಮಾಡುತ್ತಿದ್ದರೂ ಸಹ, ತನ್ನ ಒಳಗಿರುವ ಜ್ಞಾನಮೂಲವನ್ನು ಸರ್ವಥಾ ಮರೆಯಬಾರದು. ಮರೆತರೆ ಅವನು ಶೋಕ ಮತ್ತು ವಿಷಾದಗಳಿಗೆ ಅವಶ್ಯವಾಗಿ ಈಡಾಗುತ್ತಾನೆ. ಅವನ  ಜೀವನವೇ ಶೂನ್ಯವಾಗುತ್ತದೆ. ಅವನು ದುಃಖಕ್ಕೆ ಸಿಕ್ಕಿಕೊಳ್ಳುತ್ತಾನೆ. ಅವನ ಜೀವನದಲ್ಲಿ ಯಾವುದೂ ನೆಟ್ಟಗಿರುವುದಿಲ್ಲ.

ತ್ರಿವೇಣಿಯು ಸೂಚಿಸುವುದು ಈ ಆದರ್ಶವನ್ನೇ. ಈ ಆದರ್ಶವು ಸಂಯಮಶೀಲರಾದ ಜನರಿಗೆ ಮಾತ್ರ ಸಾಧ್ಯ. ಅದು ಈ ಆದರ್ಶವನ್ನು ಸೂಚಿಸುವುದು ಮಾತ್ರವಲ್ಲದೆ ಮನಸ್ಸು ಮತ್ತು ಇಂದ್ರಿಯಗಳ ಮೇಲೆ ಹತೋಟಿಯನ್ನುಂಟುಮಾಡಿಕೊಳ್ಳುವ ಸಾಧನವೂ ಆಗಿರುತ್ತದೆ. ಅದರಲ್ಲಿ ಕೂದಲು ಎಡ, ಮಧ್ಯ ಮತ್ತು ಬಲ ಎಂಬ ಮೂರು ಭಾಗಳಾಗಿ ವಿಂಗಡಿಸಲ್ಪಟ್ತು ಒಂದು ಮತ್ತೊಂದರೊಡನೆ ಹೆಣೆಯಲ್ಪಡುತ್ತದೆ. ಎಡ, ಬಲದ ಭಾಗಗಳು ಮಧ್ಯದ ಭಾಗದೊಡನೆ ಹೆಣೆಯಲ್ಪಡುತ್ತದೆ. ಆಧಿಭೌತಿಕ (ಅರ್ಥ,ಕಾಮ) ಮತ್ತು  ಆಧಿದೈವಿಕ (ಧರ್ಮ) ಜೀವನಗಳನ್ನು ಆಧ್ಯಾತ್ಮಕದೊಡನೆ ಸೇರಿಸಿ ಹೆಣೆದು ಜೀವನಮಾಡಬೇಕೆಂದು ಸೂಚಿಸುವುದೇ ಅದರ ತಾತ್ಪರ್ಯ. ಆಗತಾನೆ ಜೀವನವು ಸಮರಸವಾಗಿರುತ್ತದೆ. ಇಲ್ಲದೆ ಇದ್ದರೆ ಏರುತಗ್ಗುಗಳಿಂದ ಕೂಡಿ ವಿಷಮವಾಗಿರುತ್ತದೆ, ಯಾವುದಾದರೂ ಒಂದು ಕಡೆಗೆ ವಾಲಿರುತ್ತದೆ ಎಂಬ ಗಹನವಾದ ತಥ್ಯವನ್ನು ಅದು ಹೇಳುತ್ತದೆ.

ಆದರೆ ತ್ರಿವೇಣಿಯು ಒಂದು ಕೃತಕವಾದ ಚಿಹ್ನೆಯಲ್ಲ. ಆ ರೀತಿ ಮೂರಾಗಿ ವಿಭಾಗಿಸುವ ಕೂದಲುಗಳು ಜೀವನದ ಮೂಲವಾದ ಮೂರು ನಾಡಿಗಳಿಂದಲೇ ಉಗಮಿಸುತ್ತವೆ. ಅವುಗಳನ್ನು ಸಂಯಮ (ಕಟ್ಟು) ಮಾಡುವುದರಿಂದ, ಅವು ಮನಸ್ಸಿನಮೇಲೆ ಸಹ ಸಂಯಮ ಪಡೆಯಲು ಸಹಾಯ ಮಾಡುತ್ತವೆ. ಮನಸ್ಸು ಸಮರಸವಾದ   ಜೀವನಮಾಡಲು ಸುಲಭವಾಗಿ ಹತೋಟಿಗೆ ಬರುತ್ತದೆ. ಅದು ಶಾರೀರಕ ಮರ್ಮಗಳನ್ನರಿತು ಕುಶಲತೆಯಿಂದ ಆತ್ಮಸೌಂದರ್ಯ ಅಥವಾ ಸಮರಸವಾದ ಜೀವನವನ್ನು ಹೇಳುವ ಹಾಗೂ ಅದಕ್ಕೆ ಸಹಾಯ ಮಾಡುವ ಅಲಂಕಾರ ವಿಧಾನವಾಗಿರುತ್ತದೆ.

ಈ ವಿವರಣೆಯು ದೂರಾನ್ವಯವಾದುದಲ್ಲ ಎಂಬುದನ್ನು ಮತ್ತೊಂದು ಪರಂಪರೆಯೂ ಸಿದ್ಧಮಾಡುತ್ತದೆ. ತ್ರಿವೇಣಿ ಎಂಬ ಪದಕ್ಕೆ ಗಂಗಾ, ಯಮುನಾ ಮತ್ತು ಸರಸ್ಚತಿಗಳು ಸೇರುವ ಜಾಗ (ಅರ್ಥಾತ್ ಪ್ರಯಾಗ) ಎಂಬ ಅರ್ಥವು ಇರುತ್ತದೆ. ಯೋಗದ ಪರಿಭಾಷೆಯಲ್ಲಿ ಈ ಗಂಗಾ, ಯಮುನಾ ಮತ್ತು ರಹಸ್ಯವಾಹಿನಿಯೆಂದು ಹೇಳುವ ಸರಸ್ವತೀ ನದಿಗಳು ಪಿಂಗಳಾ, ಇಡಾ ಮತ್ತು ಗೂಢವಾದ ಸುಷುಮ್ನಾ ನಾಡಿಗಳನ್ನೇ ಪ್ರತೀಕಿಸುವ ಪದಗಳಾಗಿರುತ್ತವೆ.

ಪುರಾತನ ಭಾರತೀಯರು ತಮ್ಮ ಅಂತರ್ದೃಷ್ಟಿಗೆ ಗೋಚರಿಸಿದ ಒಳಸತ್ಯಗಳನ್ನೇ ಕೇಶಾಲಂಕಾರದ ಮೂಲಕ ವ್ಯಕ್ತಪಡಿಸುತ್ತಾರೆಂಬುದಕ್ಕೆ ತ್ರಿವೇಣಿಗೆ ನಿಕಟವಾಗಿ ಸಂಬಂಧಿಸಿರುವ ಬೈತಲೆಯೂ ಒಂದು ಉದಾಹರಣೆ. ಪ್ರತಿಯೊಬ್ಬ ವಿವಾಹಿತ ಸ್ತ್ರೀಯೂ ಅವಶ್ಯವಾಗಿ ಬೈತಲೆಯನ್ನು ಮಾಡಿಕೊಳ್ಳಬೇಕೆಂಬ ವಿಧಿ ಇರುತ್ತದೆ. ತಲೆಯ ಕೂದಲನ್ನು ಮಧ್ಯದಲ್ಲಿ ಎರಡಾಗಿ ವಿಭಾಗ ಮಾಡಿದಾಗ ದ್ವಾದಶಾಂತ (ಹಣೆಯ ಮೇಲ್ಭಾಗ)ದಿಂದ ಕಲೆಯ ಮಧ್ಯ (ಬ್ರಹ್ಮ ರಂಧ್ರ)ದ ವರೆಗೆ ಉಂಟಾಗುವ ರೇಖೆಯೇ ಬೈತಲೆ. ಅದನ್ನು ಸೀಮಂತ ಎಂದು ಕರೆಯುವರು. ಅದನ್ನು ಮಾಡಿಕೊಳ್ಳುವುದು ಹಿಂದುಗಳಲ್ಲಿ ಆಸೇತು ಹಿಮಾಚಲದವರೆಗೆ ಇರುವ ಪದ್ಧತಿಯಾಗಿದೆ. ಆ ರೇಖೆಯು ಬಹಳ ಸಮೀಪವಾಗಿ ಜ್ಞಾನವನ್ನು ಹೊಂದುವ ಮಧ್ಯಮಾರ್ಗವನ್ನೇ ಪ್ರತೀಕಿಸುತ್ತದೆ. ಈ ರೇಖೆಯು ಐತರೇಯೋಪನಿಷತ್ತಿನಲ್ಲಿ ಬರುವ "ಏತದೇವ ಸೀಮಾನಂ ವಿದಾರ್ಯ ಏತಯಾದ್ವಾರಾ ಪ್ರಾಪದ್ಯತ| ಸೈಷಾ ವಿದೃತಿರ್ನಾಮ ದ್ವಾಃತದೇತನ್ನಾಂದನಂ||" (ಆ ಆತ್ಮನು ಈ ಸೀಮೆ (ಎಲ್ಲೆ)ಯನ್ನೇ ಸೀಳಿಕೊಂಡು ಈ ದ್ವಾರದಿಂದಲೇ ಪ್ರಕಟವಾದನು. ಈ ದ್ವಾರಕ್ಕೇ "ವಿದೃತಿ"  (ಸೀಳು) ಎಂದು ಹೆಸರು. ಇದೇ ಆನಂದವನ್ನು ಪಡೆಯುವ ದಾರಿ) ಎಂಬ ಮಾತಿಗೆ ಒಂದು ಬಾಹ್ಯರೂಪವನ್ನು ಕೊಡುತ್ತದೆ.  

ಹಾಗಿರುವುದರಿಂದಲೇ ಕರ್ಮ, ಪೂಜೆ ಇತ್ಯಾದಿಗಳನ್ನು ಮಾಡುವಾಗ ತಲೆಕೆದರಿಕೊಂಡು ಇರಬಾರದು ಎಂಬ ಸಂಪ್ರದಾಯ ಬಂದಿರುತ್ತದೆ. ತಲೆ ಕೆದರಿಕೊಂಡಿದ್ದರೆ ಪೂಜೆಗೆ ಬೇಕಾದ ಸ್ಥಿತಿಯೇ ಮನಸ್ಸಿನಲ್ಲಿ ಉಂಟಾಗುವುದಿಲ್ಲ. ಕೂದಲನ್ನು ಕತ್ತರಿಸಿಕೊಳ್ಳುವುದು, ಕೆದರಿಕೊಳ್ಳುವುದು ಇತ್ಯಾದಿಗಳು ವಿಕ್ಷಿಪ್ತ ಚಿತ್ತತೆಯ , ಅಸಂಯಮದ ಕುರುಹುಗಳು. ಇಂದ್ರಿಯ ಮತ್ತು ಮನಸ್ಸಂಯಮಗಳಿಲ್ಲದ ವ್ಯಕ್ತಿಗಳಾಗಲಿ, ದೇಶಕ್ಕಾಗಲಿ ಪ್ರೇಮವಿಲ್ಲ. ಅದು ಅಸಂಸ್ಕೃತಿಯ ಕುರುಹು. ಅನಾರ್ಯರ ದಾರಿ.

ಕೂದಲಿನ ವಿಷಯವು ನಮ್ಮ ಜೀವನದಲ್ಲಿ ಒಂದು ದೊಡ್ದ ಕಲ್ಪವಾಗಿ ಪರಿಣಮಿಸಿದ್ದಿತು. ಆದರೆ ಇಂದು ಅದೆಲ್ಲವೂ ಕೀಳು ಮೇಲಾಗಿರುತ್ತದೆ. ಬಗೆ ಬಗೆಯ ಕಾರಣಗಳಿಂದ ನಾವು ಸಭ್ಯತೆಯಿಂದ ಅಸಭ್ಯತೆಯನ್ನು ಪ್ರವೇಶಿಸುತ್ತಿದ್ದೇವೆ. ಆ ರೀತಿ ಆಗುತ್ತಿರುವುದನ್ನು ವಿಚಾರದಿಂದ, ತಿಳಿವಳಿಕೆಯಿಂದ ತಡೆದು ಸಂಸ್ಕೃತಿಯ ಸವೆದ ದಾರಿಯಲ್ಲಿ ನಾವು ಹೋಗುವುದು ಉಚಿತವಾಗಿದೆ. ಇನ್ನೂ ಅದಕ್ಕೆ ಕಾಲ ಮೀರಿಲ್ಲ.
ಶ್ರೀಗುರುಭಗವಂತರು  "ಭಾರತೀಯರ ಉಡುಗೆತೊಡಿಗೆ, ಆಹಾರ ವಿಹಾರ, ವಿದ್ಯೆ, ಕಲೆ, ವಿಜ್ಞಾನ ಇತ್ಯಾದಿಗಳೆಲ್ಲವೂ ಅಷ್ಟಾಂಗಯೋಗದಿಂದ ಹಾಸುಹೊಕ್ಕಾಗಿ   ಹೆಣೆಯಲ್ಪಟ್ಟಿವೆ " ಎಂದು ಹೇಳುತ್ತಿದ್ದರು. ಈ ತ್ರಿವೇಣಿಯು ಅದಕ್ಕೆ ಒಂದು ಉತ್ತಮವಾದ ಉದಾಹರಣೆಯಾಗಿರುತ್ತದೆ

ಸೂಚನೆ : ಈ ಲೇಖನವು ಶ್ರೀಮಂದಿರದಿಂದ ಪ್ರಕಾಶಿತವಾಗುವ ಆರ್ಯಸಂಸ್ಕೃತಿ ಮಾಸ ಪತ್ರಿಕೆಯ ಸಂಪುಟ: ೦೪ ಸಂಚಿಕೆ: ೦೩ ರಲ್ಲಿ  ಪ್ರಕಟವಾಗಿದೆ.    

Saturday, August 22, 2020

ಗಣೇಶನ ಆರಾಧನೆಯ ಮಹತ್ವ (Ganeshana Aradhaneya Mahatva)

ಲೇಖಕರು: ಸುಬ್ರಹ್ಮಣ್ಯ ಸೋಮಯಾಜಿ
(ಪ್ರತಿಕ್ರಿಯಿಸಿರಿ : lekhana@ayvm.in)


 
ಭಾದ್ರಪದ ಶುಕ್ಲ ಚತುರ್ಥಿ ಭಾರತೀಯರಿಗೆಲ್ಲ ಅತಿ ಸಂಭ್ರಮದ ಹಬ್ಬ - ಗಣೇಶಚತುರ್ಥಿ. ಆಸೇತುಹಿಮಾಚಲ, ಇಡೀ ದೇಶವೇ ಆಚರಿಸುವ ಹಬ್ಬ. ಶಿವಗಣಗಳ ಅಧಿಪತಿ, ವಿಘ್ನವಿನಾಶಕ, ವಿಘ್ನೇಶ್ವರ, ಗಜಮುಖ ಇತ್ಯಾದಿ ಬಿರುದಾಂಕಿತನಾದ ಈ ದೇವತೆ ಎಲ್ಲರಿಗೂ ಪ್ರಿಯ. ಅವನ ಆರಾಧನೆಯನ್ನು ಅಂದು ಆಬಾಲ ವೃದ್ಧರೆಲ್ಲರೂ ಭಕ್ತಿ-ಶ್ರದ್ಧೆಗಳಿಂದ ಆಚರಿಸುವುದನ್ನು ನೋಡುತ್ತೇವೆ.ಇದರ ಮಧ್ಯೆ ಗಣಪತಿಯ ಆಕಾರ, ಅವನ ಹುಟ್ಟು, ಅವನ ವಿಸರ್ಜನೆಯ ಕ್ರಮ ಇವುಗಳ ಬಗ್ಗೆ ತಥಾಕಥಿತ ವಿಚಾರವಂತರಆಕ್ಷೇಪಗಳು, ವ್ಯಂಗ್ಯೋಕ್ತಿಗಳು ಸಹ ಹೇರಳವಾಗಿವೆ. ಆನೆಯ ಮುಖ, ಮನುಷ್ಯದೇಹ, ಡೊಳ್ಳು ಹೊಟ್ಟೆ, ದೊಡ್ಡಗಾತ್ರದ ದೇಹಕ್ಕೆ ಮೂಷಕ ವಾಹನವಂತೆ. ಏನಿದು ರೂಪರಹಸ್ಯ? ಸುಂದರವಾದ ಮೂರ್ತಿಯನ್ನಾದರೂ ದೇವರೆಂದು ಇಟ್ಟುಕೊಳ್ಳಬಾರದೇ?ಪಾರ್ವತಿಯ ದೇಹದ ಕೊಳೆಯಿಂದ ಇವನ ಹುಟ್ಟು ಬೇರೆ. ಜಗನ್ಮಾತೆಯ ದೇಹದಲ್ಲಿ ಗಣಪತಿಯ ಮೂರ್ತಿಯಾಗುವಷ್ಟುಕೊಳೆಯೇ? ಹೋಗಲಿ ಭಕ್ತಿ-ಶ್ರದ್ಧೆಗಳಿಂದ ಅವನನ್ನು ಪೂಜಿಸಿದ ನಂತರ ನೀರುಪಾಲು ಎಂಬಂತೆ ಜಲದಲ್ಲಿ ವಿಸರ್ಜನೆ. ಎಲ್ಲವೂಮೂಢನಂಬಿಕೆ. ಕಲ್ಪನಾ ವಿಲಾಸ. ಹೀಗೆ ಹರಿಯುತ್ತದೆ ಅಂತಹವರ ವಾಗ್ದಾಳಿ. ಕೆಲವರು ಈ ದೇವತೆಯು ಆರ್ಯರಿಗೆ ದ್ರಾವಿಡರಿಂದ ಬಂದಿದ್ದು ಎಂದೂ ಬಣ್ಣಿಸುತ್ತಾರೆ. ಇನ್ನು ಕೆಲವರು ಡಾರ್ವಿನ್ನನ ವಿಕಾಸವಾದದ ನೀತಿಯನ್ನು ಅನ್ವಯಿಸುತ್ತಾರೆ. ಪ್ರಾಣಿಗಳಿಂದ ಮಾನವನಾದ ವಾದದಂತೆ ಆಂಜನೇಯ, ನರಸಿಂಹ, ಗಣೇಶ ಎಲ್ಲರನ್ನೂ ಆ ವಾದಕ್ಕೆ ತಳುಕು ಹಾಕುವ ಜಾಣ್ಮೆಯನ್ನು ಮೆರೆಯುವುದನ್ನೂ ನೋಡುತ್ತೇವೆ. ಹಾಗಾದರೆ ಏನಿದರ ರಹಸ್ಯ? ಇಷ್ಟು ಚಿಕ್ಕ ಲೇಖನದಲ್ಲಿ ಸಾಧ್ಯವಾದಷ್ಟನ್ನು ವಿವೇಚಿಸೋಣ.

ಮಹರ್ಷಿಗಳ ಕೊಡುಗೆ 
ಮೂಲಾಧಾರದಲ್ಲಿ ಬೆಳಗುವ ದೇವಗಣೇಶನ ಆರಾಧನೆಯನ್ನು ನಮಗೆ ತಂದುಕೊಟ್ಟಿರುವವರು ಈ ದೇಶದ ಜ್ಞಾನಿಗಳು. ಜೀವನದಲ್ಲಿ ಸ್ಥೂಲ-ಸೂಕ್ಷ್ಮ-ಪರಾ ಎಂಬಮೂರೂ ಕ್ಷೇತ್ರಗಳನ್ನೂ ತಮ್ಮ ತಪಸ್ಯೆಯಿಂದ ಅರಿತು, ಜೀವನದ ಸಮಗ್ರತೆಯನ್ನೂ ಅಂತಹ ಸಮಗ್ರವಾದ ಜೀವನವನ್ನು ಸರ್ವಾಂಗ ಸುಂದರವಾಗಿ ನಡೆಸಲು ಬೇಕಾದ ಜೀವನಕ್ರಮವನ್ನೂ ಅರುಹಿದ ಮಹಾತ್ಮರಿಂದಲೇ, ಪ್ರಸ್ತುತ ಗಣೇಶನ ಆರಾಧನೆಯೂ ಬೆಳಕಿಗೆ ಬಂದಿದೆ ಎಂಬುದನ್ನು ನಾವು ಮರೆಯಬಾರದು. ದೇವರು ನಮ್ಮ ಕಲ್ಪನೆಯ ಕೂಸಲ್ಲ; ವಸ್ತುಸ್ಥಿತಿ. ನಮಗೆ ಇಷ್ಟವೆನಿಸಿದ ರೂಪವನ್ನು ಅವನಿಗೆ ನಾವು ಕೊಡಬೇಕಾಗಿಲ್ಲ. ದೇಹದ ಮೂಲಾಧಾರ ಎಂಬ ಚಕ್ರಸ್ಥಾನದಲ್ಲಿ ಯೋಗಿಗಳು ಮನೋಲಯ ಮಾಡಿದಾಗ ಅವರಿಗೆ ಗಜಮುಖನಾದ ಈ ದೇವನ ದರ್ಶನವಾಗುತ್ತದೆ. ಎಂದೇ ಈ ರೂಪ ಯೋಗಿಜನ ಪ್ರತ್ಯಕ್ಷ. ಆ ಕೇಂದ್ರಕ್ಕೆ "ಗಜಕುಂಡಪ್ರದೇಶ" ಎಂದೇ ಯೋಗಶಾಸ್ತ್ರದ ಹೆಸರು. ಆ ಅಂತರಂಗದ ಗಜವು ನಾವು ನೋಡುವ ಆನೆಯಷ್ಟೇ ಎಂದು ಭ್ರಮಿಸಬಾರದು. ಅದಕ್ಕೇ- "ತ್ವಂ ಮೂಲಾಧಾರೇ ಸ್ಥಿತೋsಸಿ ನಿತ್ಯಮ್" ಎಂದು ಅವನನ್ನು ಗಣೇಶ ಅಥರ್ವಶೀರ್ಷದಲ್ಲಿ ಸ್ತುತಿಸಿರುವುದು. ಅದು ಪ್ರಥಮ ಚಕ್ರ. ಅಲ್ಲಿ ನಿತ್ಯವೂ ದರ್ಶನೀಯವಾದ ದೇವತಾರೂಪವದು. ನಾವು ಸಾಧನಾಮಾರ್ಗದಲ್ಲಿ ಕ್ರಮಿಸಬೇಕಾದ ಮೊದಲ ಕೇಂದ್ರ. ನಮ್ಮ ಮುಂದಿನ ಹಾದಿ ಸುಗಮವಾಗಲು ಅದಕ್ಕೇ ಆ ಕೇಂದ್ರದ ಅಧಿಪತಿಯಾದ ಗಜಮುಖನಿಗೆ ಪ್ರಥಮಪೂಜೆ. ಅವರು ಒಳಗೆ ಕಂಡಿದ್ದನ್ನು ನಮ್ಮ ಅನುಗ್ರಹಕ್ಕಾಗಿ ಹೊರಗೂ ಅದೇ ರೂಪವನ್ನು ನಮ್ಮ ಧ್ಯಾನಕ್ಕಾಗಿ ಕೊಟ್ಟಿದ್ದಾರೆ. ಆ ರೂಪದ ಸಹಜತೆಯೇ ಅದರ ಸೌಂದರ್ಯ. ಈ ತತ್ತ್ವಾರ್ಥದ ಅರಿವಿಲ್ಲದ ಪಾಮರರಿಗೆ ಅದು ವಿಚಿತ್ರವಾಗಿರಬಹುದು. ಆದರೆ ಸಾಧನೆಯಲ್ಲಿ ಅಂತರಂಗಕ್ಕೆ ಪ್ರವೇಶಿಸಿದಾಗ ಪರಮಾನಂದವನ್ನು ಉಂಟುಮಾಡುವುದರಿಂದ ಆ ಸಹಜವಾದ ರೂಪವನ್ನು ಭಕ್ತರು ಸುಂದರಮೂರ್ತಿ ಎಂದೇ ಕರೆಯಬೇಕಲ್ಲವೇ?

೨೧ ಸಂಖ್ಯೆಯ ವಿಶೇಷ
ಸೃಷ್ಟಿಯ ೨೧ ತತ್ತ್ವಗಳನ್ನು ತನ್ನ ಲಂಬೋದರದಲ್ಲಿ ಧರಿಸಿ ನಿಯಮನ ಮಾಡುತ್ತಿರುವುದರಿಂದ ಅವನ ಹೊಟ್ಟೆಯ ಗಾತ್ರದೊಡ್ಡದು. ಈ ತತ್ತ್ವದ ಪ್ರತೀಕವಾಗಿಯೇ ಅವನ ಪೂಜೆಯಲ್ಲಿ ೨೧ ಸಂಖ್ಯೆಗೆ ಮಹತ್ತ್ವವಿರುವುದು. ತಾತ್ತ್ವಿಕವಾಗಿ ಮೂಷಕವುಸಾಧನೆಗೆ ಅಡ್ಡಿಪಡಿಸುವ ಆಸುರೀ ಶಕ್ತಿ;  ಹವಿರ್ಭಾಗಗಳನ್ನು ಕದಿಯುವ ಶಕ್ತಿ ಎಂಬುದು ಜ್ಞಾನಿಗಳ ಮಾತು. ಅಂತಹ ಆಸುರೀಶಕ್ತಿಯನ್ನು ಮೆಟ್ಟಿ ಅದನ್ನು ತನ್ನ ವಾಹನವನ್ನಾಗಿಸಿ ಯೋಗವಿಘ್ನಗಳನ್ನು ಪರಿಹರಿಸುವ ದೇವ, ಮೂಷಕ ವಾಹನ, ಅವನು.

ಪಾರ್ವತಿಯ ಶರೀರದ ಕೊಳೆಯಿಂದ ಇವನ ಉತ್ಪತ್ತಿ ?



ಪುರಾಣದ ಆಲಂಕಾರಿಕವಾದ ಹೇಳಿಕೆಯನ್ನು ನೇರವಾದ ಅರ್ಥದಲ್ಲಿ ತೆಗೆದುಕೊಳ್ಳಲಾಗದು. ಪಾರ್ವತಿಯು ಪ್ರಕೃತಿಮಾತೆ. ಪ್ರಕೃತಿಯ ಮೊದಲ ಪದರವಾದ ಪೃಥಿವೀತತ್ತ್ವವನ್ನೇ ಇಲ್ಲಿ ಕೊಳೆ ಎನ್ನಲಾಗಿದೆ. ಆ ಪೃಥಿವೀತತ್ತ್ವದ ದೇವತೆಯಾಗಿರುವ ಚೈತನ್ಯವೇ ಶ್ರೀಗಣೇಶಮೂರ್ತಿ. ಗಣೇಶನ ಧಾಮವೆಂದು ಆಗಮಗಳಲ್ಲಿ ಹೇಳಿರುವ ಮೂಲಾಧಾರ ಪ್ರದೇಶವು ಪೃಥಿವೀತತ್ತ್ವಾತ್ಮಕವಾಗಿದೆ ಎಂಬುದನ್ನು ಇಲ್ಲಿ ಗಮನಿಸಬಹುದು.

ಜಲದಲ್ಲಿ ವಿಸರ್ಜನೆ?
ಪೂಜೆಯ ನಂತರ ಜಲದಲ್ಲಿ ವಿಸರ್ಜನೆ ಮಾಡುವಲ್ಲಿನ ವಿಜ್ಞಾನದ ಬಗ್ಗೆ ಶ್ರೀರಂಗಮಹಾಗುರುಗಳ ಅಭಿಪ್ರಾಯ ಹೀಗಿತ್ತು-ಮಹಾಯೋಗಿಗಳು ಮೂಲಾಧಾರ ಪ್ರದೇಶದಲ್ಲಿ ಗಣೇಶನನ್ನು ಪೂಜಿಸಿ ಅದಕ್ಕೆ ಮೇಲಿರುವ ಸ್ವಾಧಿಷ್ಠಾನ ಚಕ್ರದಲ್ಲಿಗಣೇಶನೊಡನೆ ಮನೋಲಯ ಮಾಡುತ್ತಾರೆ. ಮೂಲಾಧಾರವು ಪೃಥಿವೀತತ್ತ್ವದ ಸ್ಥಾನ. ಸ್ವಾಧಿಷ್ಠಾನವು ಜಲತತ್ತ್ವದ ಸ್ಥಾನ.ಪೃಥಿವೀತತ್ತ್ವವನ್ನು ಜಲತತ್ತ್ವದಲ್ಲಿ ಯೋಗಿಗಳು ತಮ್ಮ ಅಂತಃಪ್ರಪಂಚದಲ್ಲಿ ಲಯಗೊಳಿಸುತ್ತಾರೆ. ಯೋಗಿಗಳಲ್ಲದವರಿಗೆ ಆಅಂತರಂಗದ ಅನುಭವದ ಸಂಸ್ಕಾರವನ್ನುಂಟುಮಾಡಲು ಹೊರಪ್ರಪಂಚದಲ್ಲಿ ಮಹರ್ಷಿಗಳು ರೂಪಿಸಿದ ತಂತ್ರವೇ ಪೃಥಿವೀತತ್ತ್ವದ ಹೊರರೂಪವಾದ ಮಣ್ಣಿನಿಂದ ನಿರ್ಮಿತವಾದ ಗಣೇಶನನ್ನು ಜಲತತ್ತ್ವದ ಹೊರರೂಪವಾದ ಶುದ್ಧವಾದಜಲಾಶಯದಲ್ಲಿ ವಿಧಿಪೂರ್ವಕವಾಗಿ ಲಯಗೊಳಿಸುವುದಾಗಿದೆ. ಆದ್ದರಿಂದ ಅಂದು ಪೂಜಿಸಲ್ಪಟ್ಟ ಮಣ್ಣಿನ ಗಣೇಶ ವಿಗ್ರಹವನ್ನುಜಲಾಶಯದಲ್ಲಿ ವಿಸರ್ಜನೆ ಮಾಡುವುದು ಅಂತರ್ಯಜ್ಞಕ್ಕೆ ಪೋಷಕವಾದ ಒಂದು ಶ್ರೇಷ್ಠವಾದ ಬಾಹ್ಯಯಜ್ಞವಾಗಿದೆ.

ಆರ್ಯ-ದ್ರಾವಿಡ ವಾದ:
ಗಣೇಶನನ್ನು ಆರ್ಯರ ದೇವತೆ, ದ್ರಾವಿಡರ ದೇವತೆ ಎನ್ನುವುದು ಸೂರ್ಯನನ್ನು ಆರ್ಯರ ಸೂರ್ಯ, ದ್ರಾವಿಡರ ಸೂರ್ಯ ಎಂದಷ್ಟೇ ಹಾಸ್ಯಾಸ್ಪದ. "ಸತ್ಯಂ ಜ್ಞಾನಮನಂತಂ ಬ್ರಹ್ಮ", " ಅಖಂಡ ಮಂಡಲಾಕಾರಂ ವ್ಯಾಪ್ತಂ ಏನ ಚರಾಚರಂ " ಎಂದಂತೆ ಸರ್ವವ್ಯಾಪಿಯಾದ ದೇವನನ್ನು ಭೌಗೋಳಿಕವಾಗಿ ವರ್ಗೀಕರಿಸುವುದೇ ಅಜ್ಞಾನದ ವಿಲಾಸ. ಗಣೇಶನನ್ನು ಒಳಗೆ ನಿತ್ಯವಾಗಿ ನೋಡುತ್ತಿರುವ ಜ್ಞಾನಿಗಳ ಮಾತೇ ಇಲ್ಲಿ ಪರಮಪ್ರಮಾಣ. ಈ ಅಂತರ್ದರ್ಶನದ ಸತ್ಯವನ್ನು ವಿಕಾಸವಾದಕ್ಕೆ ಹೋಲಿಸುವುದೂ ಅಷ್ಟೇ ಹಾಸ್ಯಾಸ್ಪದ.ಕೇವಲ ಸ್ಥೂಲ ಬುದ್ಧಿಯಿಂದ ವಿಷಯವನ್ನು ನೋಡಹೋಗದೇ, ಮಹರ್ಷಿಗಳಂತೆ ತಪಸ್ಯೆಯಿಂದ ಸೂಕ್ಷ್ಮ, ಪರಾ ದೃಷ್ಟಿಯನ್ನೂಪಡೆದಾಗ ಗಣೇಶನ ಆರಾಧನೆಯ ಮಹತ್ತ್ವ ಅರಿವಿಗೆ ಬಂದೀತು. ಅಲ್ಲಿಯವರೆಗೆ ಅವರ ಆನುಭವಿಕ ಸತ್ಯವನ್ನು ಮನದಲ್ಲಿಸ್ಮರಿಸುತ್ತಾ, ನಮಗೂ ಅಂತಹ ಆನಂದಾನುಭವವನ್ನು ದಯಪಾಲಿಸು ಎಂದು ಆ ವಿಘ್ನನಾಶಕನನ್ನು ಪ್ರಾರ್ಥಿಸುತ್ತಾ ಶ್ರದ್ಧಾ-ಭಕ್ತಿಗಳಿಂದ ಶ್ರೀಗಣೇಶನನ್ನು ಆರಾಧಿಸೋಣ.

ಸೂಚನೆ: 22/08/2020 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.   

ದಯಾ (ಆತ್ಮಗುಣ) ದಯಾ ಸರ್ವಭೂತೇಷು (Daya - Athmaguna, Daya - Sarvabhutesu)

ಲೇಖಕರು: ವಿದ್ವಾನ್ ನರಸಿಂಹ ಭಟ್ಟ
(ಪ್ರತಿಕ್ರಿಯಿಸಿರಿ lekhana@ayvm.in)


ದಯಾ ಎಂಬ ಪದಕ್ಕೆ ಕೃಪಾ, ಅನುಕಂಪಾ, ಕಾರುಣ್ಯ, ಘೃಣಾ ಎಂಬೆಲ್ಲಾ ಪರ್ಯಾಯಪದಗಳಿವೆ. ಪ್ರಾಣಿ, ಪಶು, ಪಕ್ಷಿ, ಗಿಡ, ಮರಗಳು ನಮ್ಮಂತೆ ಬದುಕಬೇಕು. ಅವಕ್ಕೂ ಈ ಪ್ರಪಂಚದಲ್ಲಿ ಬದುಕುವ ಹಕ್ಕು ಇದೆ. ಅವುಗಳ ಬದುಕಿನ ಹಕ್ಕನ್ನು ಕಸಿದುಕೊಳ್ಳಬಾರದು. ಭಯವನ್ನು ಬಿಟ್ಟು ಸ್ವಚ್ಛಂದವಾಗಿ ಅವು ವಿಹರಿಸಬೇಕು. ಇದರಿಂದ ಪ್ರಕೃತಿಯಲ್ಲಿ ಸಮತೋಲನ ಉಂಟಾಗುತ್ತದೆ. ಜೊತೆಗೂಡಿ ಬಾಳುವ ಸ್ಥಿತಿ ನಿರ್ಮಾಣವಾಗಬೇಕು ಎನ್ನುವ ಮನಸ್ಸಿನ ಭಾವನೆಯನ್ನೇ 'ದಯಾ' ಎಂಬುದಾಗಿ ಕರೆಯಲಾಗುತ್ತದೆ. ಈ ಭಾವನೆಗಳು ಇದ್ದಾಗ ಮತ್ತೊಬ್ಬರಿಗೆ ತೊಂದರೆ ಕೊಡುವುದಾಗಲಿ, ಹಿಂಸೆಯಾಗಲಿ, ಬಲಾತ್ಕಾರವಾಗಲಿ ಸಂಭವಿಸುವುದಿಲ್ಲ. ಯಾರಾದರೂ ಇಂತಹ ಕಷ್ಟದಲ್ಲಿದ್ದರೆ ಸಂರಕ್ಷಿಸಬೇಕೆಂಬ ಬಯಕೆ ಸಹಜವಾಗಿ ಮೂಡುತ್ತದೆ. ಇದನ್ನೆ 'ಅನುಕಂಪಾ' ಎಂದು ಕರೆಯುತ್ತಾರೆ. ನಮಗೆ ಬೇರೆಯವರಿಂದ ಹಿಂಸೆಯಾದರೆ ಅದರಿಂದ ನಾವು ಹೇಗೆ ವ್ಯಥೆಪಡುತ್ತೇವೋ ಹಾಗೆ ನಮ್ಮಿಂದ ಇನ್ನೊಂದು ಜೀವಿಗೆ ಹಿಂಸೆಯಾದಾಗ ಅದೂ ವ್ಯಥೆಪಡುತ್ತದೆ ಎಂದು  ನಮ್ಮ ಮನಸ್ಸು ಕರಗುತ್ತದೆ. ಇಂತಹ ಅವಸ್ಥೆಯನ್ನೇ  'ದಯಾ' ಎಂದರು. ಭಗವಂತನ ದಯೆ, ಹಿರಿಯರ ಅನುಕಂಪ ನಮ್ಮ ಮೇಲೆ ಸದಾ ಇರಲಿ ಎಂದು ನಾವು ಸದಾ ಆಶಿಸುತ್ತೇವೆ. ಆದ್ದರಿಂದ ಇದು ಅತ್ಯಂತ ಶ್ರೇಷ್ಠವಾದ ಗುಣ.

ದಯೆಯ ಮುಂದಿನ ಪರಿಣಾಮವೇ ಅಹಿಂಸೆ. ಯಾರು ಅಹಿಂಸಾಧರ್ಮವನ್ನು ಪಾಲಿಸುತ್ತಾರೋ ಅವರ ಸುತ್ತಲೂ ವೈರತ್ವವು ದೂರವಾಗುವುದು. ಇದನ್ನೇ ಪಾತಂಜಲಯೋಗಸೂತ್ರದಲ್ಲಿ 'ಅಹಿಂಸಾ ಪ್ರತಿಷ್ಠಾಯಾಂ ತತ್ಸನ್ನಿಧೌ ವೈರತ್ಯಾಗಃ' ಎಂದು ಹೇಳಿದ್ದಾರೆ. ಇದನ್ನೇ ನಾವು ಪ್ರಾಚೀನಕಾಲದ ಋಷ್ಯಾಶ್ರಮಪ್ರದೇಶದಲ್ಲಿ ಕಾಣುತ್ತಿದ್ದೆವು. ಅಲ್ಲಿನ ಪರಿಸರವು ಯಜ್ಞಯಾಗಗಳಿಂದ ಪವಿತ್ರವಾಗಿರುತ್ತಿತ್ತು. ಇದರ ಪರಿಣಾಮವಾಗಿ ಸಹಜವೈರಿಗಳೂ ತಮ್ಮ ವೈರವನ್ನು ಬಿಟ್ಟು ಅನ್ಯೋನ್ಯವಾಗಿ ಬಾಳುತ್ತಿದ್ದವು.

ನಿಗ್ರಹವೂ ದಯೆಯೇ

ದುಷ್ಟರನ್ನು ಶಿಕ್ಷಿಸುವುದೂ 'ನಿಗ್ರಹದಯಾ' ಎನ್ನಬಹುದು. ದುಷ್ಟರ ವಿಷಯದಲ್ಲಿ ಅನುಕಂಪ ಸಲ್ಲದು. ಯಾರ ಕಾರಣದಿಂದ ದುಃಖ ಉಂಟಾಗುತ್ತದೆಯೋ ಅವರ ಮೇಲೆ ದಯೆಯು ಸರ್ವಥಾ ಒಳ್ಳೆಯದಲ್ಲ. ಇನ್ನೊಬ್ಬರಿಗೆ ಬೆಂಕಿಯನ್ನಿಡುವ, ವಿಷವನ್ನು ಕೊಡುವ, ಶಸ್ತ್ರಧಾರಿಯಾದ, ಹಣವನ್ನು ಅಪಹರಿಸಿದ, ಕ್ಷೇತ್ರ ಮತ್ತು ಪತ್ನಿ(ಸ್ತ್ರೀ)ಯನ್ನು ಅಪಹರಿಸಿದ ವ್ಯಕ್ತಿಯ ಮೇಲೆ ದಯೆಯನ್ನು ತೋರಲೇಬಾರದು. ಅಂತಹವರನ್ನು ವಿಚಾರಿಸದೇ ಸಾಯಿಸುವುದನ್ನು ದಯೆ ಎಂಬುದಾಗಿ ಹಿರಿಯರು ಹೇಳುತ್ತಾರೆ. ಅಂತಹವರಿಂದ ಆಗುವ ಅಪರಾಧವನ್ನು ತಡೆಯುವುದರಿಂದ, ಲೋಕಕ್ಕೆ ಕಲ್ಯಾಣವಾಗುವುದರಿಂದ ಅದು ದಯೆಯೇ. "ಭಗವಂತನು ಮಾಡುವ ನಿಗ್ರಹವೂ ಅವನ ಅನುಗ್ರಹವೇಪ್ಪ" ಎಂಬುದಾಗಿ ಶ್ರೀರಂಗಮಹಾಗುರುಗಳು ಹೇಳುತ್ತಿದ್ದರು. ಇದನ್ನೇ ಶ್ರೀರಾಮನು ಶಸ್ತ್ರಪಾಣಿಯಾದ ತಾಟಕೆಯನ್ನು 'ಸ್ತ್ರೀ' ಎಂದು ಪರಿಗಣಿಸದೇ 'ದಯೆಯನ್ನು ಬಾಣದ ಜೊತೆ ಬಿಟ್ಟನು' ಎಂಬುದಾಗಿ ಕಾಳಿದಾಸನು ತನ್ನ ರಘುವಂಶಕಾವ್ಯದಲ್ಲಿ ಮಾರ್ಮಿಕವಾಗಿ ಹೇಳುತ್ತಾನೆ.

ಜೀಮೂತವಾಹನನ ಕಾರುಣ್ಯ

ಹರ್ಷಕವಿಯ 'ನಾಗಾನಂದ' ನಾಟಕ, ಕಾರುಣ್ಯರಸಕ್ಕೆ ಉತ್ತಮ ಉದಾಹರಣೆ. ಅಲ್ಲಿ- ಜೀಮೂತವಾಹನನು ವಿಹಾರಕ್ಕಾಗಿ ಸಮುದ್ರತೀರಕ್ಕೆ ಹೋಗುತ್ತಾನೆ. ಅಲ್ಲಿ ಸರ್ಪಗಳ ಅಸ್ಥಿಗಳನ್ನು ಕಂಡು ತನ್ನ ಮಿತ್ರನಾದ ಮಿತ್ರಾವಸುವನ್ನು ಕೇಳುತ್ತಾನೆ. ಆಗ ಮಿತ್ರನು, ಗರುಡ ಮತ್ತು ನಾಗಗಳ ಮಧ್ಯೆ ಆದ ಸಂಧಾನ ವಿಷಯವನ್ನು ಹೇಳುತ್ತಾನೆ. ಸಂಧಿಯ ಪ್ರಕಾರ ಪ್ರತಿದಿನ ಒಂದೊಂದು ನಾಗವನ್ನು ಗರುಡನಿಗೆ ಆಹಾರವಾಗಿ ನೀಡಬೇಕಾಗಿತ್ತು. ಇದನ್ನು ತಿಳಿದ ಜೀಮೂತವಾಹನನು ನಾಗಗಳನ್ನು ರಕ್ಷಿಸಬೇಕೆಂಬ ಕರುಣೆಯಿಂದ ತನ್ನ ದೇಹತ್ಯಾಗಮಾಡಲು ನಿರ್ಧರಿಸುತ್ತಾನೆ. ವೃದ್ಧ ನಾಗನ ಏಕಮಾತ್ರ ಪುತ್ರ ಶಂಖಚೂಡನ ಆಹಾರರೂಪವಾಗಿ ವಧ್ಯಶಿಲೆಗೆ ತಾನೇ ಹೋಗಿ ಜೀಮೂತವಾಹನನು ತನ್ನನ್ನು ಗರುಡನಿಗೆ ಸಮರ್ಪಿಸಿಕೊಳ್ಳುತ್ತಾನೆ.  ಭಕ್ಷಿಸುವ ವೇಳೆ ಆನಂದವನ್ನು ಅನುಭವಿಸುತ್ತಿರುವ ಈತನನ್ನು ಕಂಡು ಗರುಡನಿಗೆ ಆಶ್ಚರ್ಯವಾಗುತ್ತದೆ. ಆ ವೇಳೆ ದುರ್ಗಾಮಾತೆಯು ಪ್ರತ್ಯಕ್ಷಳಾಗಿ ಜೀಮೂತವಾಹನನನ್ನು ಸ್ಪರ್ಶಿಸಿ, ಜಲವನ್ನು ಪ್ರೋಕ್ಷಿಸಿ ಬದುಕಿಸುತ್ತಾಳೆ. 'ವಿದ್ಯಾಧರಚಕ್ರವರ್ತಿ' ಎಂಬ ಬಿರುದನ್ನು ಕೊಡುತ್ತಾಳೆ, ಗರುಡನು ಅಮೃತವರ್ಷಧಾರೆಯಿಂದ ಎಲ್ಲಾ ನಾಗಗಳನ್ನೂ ರಕ್ಷಿಸುತ್ತಾನೆ, ಇದು ಜೀಮೂತವಾಹನನ ಭೂತದಯೆ.  

ಸೂಚನೆ: 22/08/2020 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.    


Friday, August 21, 2020

राम मन्दिर से रामराज्य के छोर तक (Raam Mandhir Se Raamaraajy Ke Chhor Tak)

लेखक – डा मोहन राघवन
हिन्दी अनुवाद – पूजा धवन
(के जवाब मे :  lekhana@ayvm.in)



हमारी संस्कृति के लिये यह एक महत्वपूर्ण पल है, एक निर्वाह का दिन है जिसके लिये हमने सदियों तक प्रतीक्षा की है। शिशु राम लल्ला की अर्चा रूप में भगवान राम अपने जन्मस्थान में पुनः पदन्यास करने वाले हैं। इस दिन जब हमारे लाखों देशवासियों के प्रयास सफल हो रहे हैं, तो यह स्वाभाविक है कि हमारी छाती गर्व से फूल रही है और हमारे हृदय भक्ति से गदगद हो रहे हैं। क्या यह पोषित राम राज्य का पहला कदम हो सकता है? क्या प्रस्तुत समय और आने वाले समय में सनातन आर्य महर्षियों के भारत स्वर्णिम युग का पुनरागमन होगा? क्या यह संभव है? क्या ऐसी कल्पना संवैधानिक रूप से मान्य है? इस महत्वपूर्ण अवसर पर, हर्षोल्लास के साथ साथ इसके महत्व पर भी विचार करना उप्युक्त होगा। 'श्रीराम' शब्दमात्र से हमारे अन्तरङ्ग में विभिन्न भावनाएँ जागृत होति हैं । भक्तों के लिए वह परम है, परिपूर्ण अवतार है। दूसरों के लिए वह सत्य का प्रतीक है - वह वीर, जो प्रसन्न्ता पूर्वक अपने पिता की बात रखने के लिए सिंहासन से दूर जंगलों में चला गया। अनगिनत देशवासियों के लिए वह 'मर्यादा पुरुषोत्तम' है, जो सदाचार का प्रतीक है, जो धर्म को बनाए रखने के लिए नित्य समर्पित है । वह अतुलनीय और असहायशूर योद्धा थे

- जो हजारों को स्वयं ही परास्त करने में सक्षम थे। लोग अपनी रुची और स्वभाव के अनुसार उनके व्यक्तित्व के विभिन्न पहलुओं में से एक या अधिक से मोहित हो जाते हैं - उनकी समविभक्त सुंदर अंग, लंबी भुजायें, अपने भाइयों और प्रजा के प्रति प्रगाढ स्नेह, उनका नेतृत्व, प्रतिष्ठा का बोध, उनका गम्भीर व्यक्तित्व या उनके विभिन्न अनगिनत लक्षण।

राम के अनुयायियों और श्रद्धालुओं के साथ, ऐसे भी कई हैं जो मानते हैं कि राम काल्पनिक हैं; जो लोग सोचते हैं कि राम मन्दिर एक बहुत बडी अपव्यय है; कि यह राम राज्य का उन्माद हमारे समाज को रसातल में कर्षित करेगा; ऐसा राम राज्य हमारे संविधान के उल्लंघन में है। इन लोगों का मानना है कि प्रस्तुत समय में राम के शासनकाल की नहीं परन्तु मानवीय मौलयों के शासनकाल की आवश्यकता है। ऐसी स्थिति और विचारधाराओं के बीच मे राम मन्दिर और राम राज्य का निर्माण सम्पूर्ण करना है। इसलिए यह आवश्यक है कि राम के प्रति हमारी श्रद्धा, उत्साह और विश्वास को हमारी परम्पराओं में सौंपी गई बुद्धि और तर्क के साथ सदृढ़ किया जाए। रामजी की वास्तविक समरूपता? जैसा कि सर्वविदित है, राम इक्ष्वाकु के वंश में जन्मित रघु के वंशज दशरथ के पुत्र थे। रामायण द्वारा ऋषि नारद ने स्वयं राम के जीवन और उपलब्धियों को ऋषि वाल्मीकि को पूर्ण रूप से वर्णित किया था। किन्तु यह सब ज्ञात होने के उपरान्त भी, वाल्मीकि जी ने महाकाव्य लिखना प्रारम्भ नहीं किया । वाल्मीकि की रामायण में वर्णित उनका ऐसा पोतारोहण आज के चलन में विचित्र माना जायेगा । उन्होंने कुशा घास को

पूर्वाभिमुख कर अपना आसन बनाया । आचमन करके अपनी सङ्कायों को शुद्ध करते हुए, वह ध्यान मुद्रा में अपने पवित्र आसन पर बैठ योग समाधि में मग्न हो गये। समाधि में उन्होंने राम के वास्तविक रूप, वैभव और गतिविधियों का स्पष्ट अवलोकन किया। रामजी का रूप, स्वरूप का दर्शन योग समाधि में इतना स्पष्ट दिखाई दे रहा था जैसे मानो कि करतलामलक (हथेली में आमला)। हृदय की गुफा में वह सर्वोच्च प्रकाश, जो योगिक अनुभव का सार है, वास्तव में राम के अतिरिक्त और कोई नहीं । राम शब्द का उगम 'रम्' धातु से होता है, जिसका अर्थ है 'आनन्दित करना'; योगी अन्तरंग आनन्द का अनुभव करते हैं और लोग राम के बाहरी रूप से आनन्दित होते हैं। इस प्रकार राम के व्यक्तित्व और गाथा का वर्णन कर पाने के लिए, व्यक्ति का महर्षि वाल्मीकि जैसे उच्च कोटि का तपस्वी और कवि होना अत्यावश्यक है । यही कारण है कि वाल्मीकि रामायण को हमारी परम्पराओं में इतनी उच्च मान्यता प्राप्त है।



रामावतार का रहस्य

यदि राम को वाल्मीकि का योगिक अनुभव माना जाये तो दशरथ के पुत्र राम कौन थे ? क्या वह एक कपोलकल्पित पात्र थे? क्या वह 'काल्पनिक' थे? हमारी परम्पराएं योगिक सत्य और ऐतिहासिक व्यक्तित्व के बीच के इस संबंध को 'अवतार' नाम से वन्दित करती हैं - एक अवतरण। एक अवतार, निहित और अमूर्त की स्पष्ट अभिव्यक्ति है। उदाहरण के लिए, एक क्रोधित व्यञ्जक किसी अव्यक्त क्रोध की अभिव्यक्ति है। एक स्मित मुखाकृति, अन्तरानन्द का अवतार कहा जा सकता है। क्रोध और वासना, लालच और मोह, हिंसा और छल राक्षसी प्रवृत्ति के अवतार हैं। ऐसी मानुष गुणों के अवतरणों से हम भली भाति परिचित हैं | किन्तु मन की असाधारण या योगिक अवस्थाओं, और शक्तियों का अवतार या सांसारिक अभिव्यक्तियाँ अतीव दुर्लभ हैं। राम और कृष्ण अवतार को सर्वोच्च श्रेणी के ऐसे अवतार माने जा सकते हैं। ऐसे अवतारों में स्वाभाविक रूप से आत्म भाव और योगिक अवस्था की अभिव्यक्ति पूर्ण है। अवतार के समकालीन योगियों और तपस्वियों को जब इन अवतारों का दर्शन होता है, वह उन्हें मुग्धबन्ध और विस्मित कर देता है। उन्होंने जो कुछ भी अपने अंदर देखा, उसके हर पहलू को इस बाहरी व्यक्तित्व में प्रकट किया गया है - रूप, रंग, गति, कक्ष्या, कण्ठ, ध्वनि, गुण; समस्त स्वरूप। इस सब पर आधारित राम को आत्मदेव की मूर्ति का रूप माना जाता है। "रामो विग्रहवान धर्मः"। अन्य नश्वर यद्यपि राम और कृष्ण के अवतार रूपी प्रतीमा को नहीं जान पाये, तदापि उन्हें भी सुखद और तीव्र आनन्दमयी भावना का अनुभव हुआ ।  

राम और प्रजा पर प्रभाव

यदि हम किसी के क्रोधित मुख को देखें, तो यह स्वाभाविक है कि हम स्वयं क्रोध से भर जायेंगे। एक हंसमुख व्यक्ति अपने समक्ष प्रसन्न्ता भाव को बडाता है। यह प्रतिबिम्ब के एक सामान्य सिद्धांत को इंगित करता है, जिसमें हर भाव के पीछे अन्तर्निहित स्थितियां दर्शक के हृदय मे भी प्रतिबिंबित होते हैं। यदि किसी को महान अवतार अवलोकन करने का सौभाग्य प्राप्त होता है, तो उसके रूप को मन में धारण करें और उनकी गतिविधियों का सटीक वर्णन अन्तर्मन में सुनें। ऐसा करने से हम स्वाभाविक रूप से योगिक अवस्था में पहुँच जायेंगे। राम राज्य में वशिष्ठ और विश्वामित्र जैसे ऋषियों को यह सौभाग्य निज था। राम अवतार में प्रत्येक आत्मगुण आविर्भूत थे। वह वास्तव में अपने भक्तों को प्रसन्न कर देने वाले अवतार थे। जो उसे देखता है, देखता ही रह जाता, वह पुनः पुनः दर्शनिच्छुक बनकर पुनः लब्ध दर्शन से भी अतृप्त रह जाते थे। वाल्मीकि वर्णित, रामजी के शब्द और ध्वनि मीठी और सहज थी। वह पूर्वभाषी थे | अपनी प्रजा की पीड़ा को देखकर उनका हृदय द्रवित हो जाता था। यद्यपि अधिपति, उनका मन संसारिक सुखों के प्रति वैराग्य से भरा था; इतना कि सिंहासन के सुख को छोड वनगमन मे दुख या क्रोध का अवलेश भी न था । परब्रह्मन के अवतरण का निर्णायक गुण यह है कि इसके व्यक्तित्व का प्रत्येक पहलू हमें सीधा योग की आन्तरिक अवस्थाओं की ओर अग्रसर कराता है। योगी और ऋषि ऐसे अवतार की पहचान कर सकते हैं। इस प्रकार वाल्मीकि ने रामायण के महाकाव्य को अपनी कविता में डालने का उद्यम शुरू किया । ऐसी कविता अपने श्रोताओं के मन में सीता और राम के व्यक्तित्व को पूरी तरह से डाल देती है। दिव्य दम्पति के गुणों का ध्यान करना योग की अव्यक्त प्रक्रिया द्वारा आध्यात्मिक आनंद को पुनः प्राप्त करने का एक साधन है। वास्तव में, यदि इस महाकाव्य - 'रामायण का पारायण' किसी राम परायण ज्ञानी द्वारा किया जाता है, तो प्रतिबद्ध और
अवशोषित श्रोताओं पर उसका प्रभाव योग के फल के समान ही होता है। यह उच्चतम योगिक स्थिति की ओर हमें ले जाता है।



रामराज्य और धर्म की रक्षा

जहाँ सौम्य राम, रावण के सम्मुख कालअग्नि के समान भीकर और भीषण रूप में दिखाई पड़ते हैं। जो दूसरों में दया, क्षमा और सन्तोष जैसे सौम्य और सुन्दर आत्म धर्म प्रबोधित करते हैं वही राम उन धार्मिक शक्तियों के विरोधी असुर शक्तियों को नष्ट करने के लिए दृढ़ भी रहते हैं। जो स्वास्थ्य की इच्छा रखता है, उसे कीटाणुओं पर विजय प्राप्त करनी ही पडती है। जो लोग जन कल्याण निहित पवित्रता, तपस्या और योगानुभव परमानन्द

की नींव पर बनाई गई सभ्यता के विरोधी हैं, उनका समूल नाश होना ही चाहिए। ऋषयाश्रम, गुरुकुल जैसे संस्थान को संरक्षित किया जाना चाहिए जो आत्मधर्म, संयम और पुरुषार्थमय जीवन के आधार हैं। इस प्रकार यह आवश्यक था कि ऋषि, उनकी तपस्या, उनके बलिदान और धर्म के उनके सुरक्षात्मक आदेश की रक्षा की जाए। यही राम और कृष्ण जैसे अवतार का लक्ष्य था। युद्ध में बाहरी शत्रु पर विजय प्राप्त करना अपेक्षाकृत आसान है, परन्तु हमारे हृदय में व्याप्त कुरीतियों से जूझना और हमें अत्मधर्म के पथ पर रखना सामान्यों के लिए असंभव ही है। सीता और राम ने अपने आदर्श आचरण और व्यक्तित्व द्वारा अपनी प्रजा में उच्च आदर्शों का आह्वान किया, जो वास्तव में यथार्थ रामराज्य की नींव थी। रामायण में वर्णित है कि राम के शासनकाल में प्रजा लोभ और अतिरेक से मुक्त थी। संतुलन की उनकी भावना और उनके चाव पर नियन्त्रण ने उन्हें संसाधनों का केवल इतना उपयोग करने के लिए प्रेरित किया, जितनी की जरूरत थी। प्रकृति में संतुलन इतना उपयुक्त था कि सर्व ऋतु क्रमिक और समय बध थीं। सबके हृदय सन्तुष्ट थे, चूल्हे प्रचुर्य थे और झोपड़ियों में समृद्धि थी। राज्य में भरमार वहाँ के राजा की अनुकम्पा थी। यहां तक कि सबसे कठिन समय में जब सीता और राम को अनगिनत पीड़ा उठानी पड़ी और उनके अपने निजी जीवन बिखर गए, उन्होंने अपना आचार ऐसा रखा जिससे उनकी प्रजा का धर्म के प्रति विश्वास और समर्पण शिथिल ना हो। प्रजा और समाज के अंतःकरणों में आत्मगुण और आत्म धर्म के बीज बोना, उन्हें सींचना और उनका पालन-पोषण करना रामराज्य के आदर्श हैं। हमारे जैसे आम लोग प्रायः अनियन्त्रित उत्साह, लालसा, असन्तोष और इंद्रिय ग्राम सम्बन्धित दोषों की आसुरी लंका में कैद हैं। राम के व्यक्तित्व को आत्मसात करने के माध्यम से, सीता याने मूर्तिमत शान्ति को पुनः प्राप्त करसकते हैं | हमारे हृदय की गुप्त गुफा में हमें आत्माराम को प्रतिष्ठित कर सकते हैं । योगियों को विदित हृदय की यह गुफा ही अयोध्या

है, जो अभेद्य है - जिसे बाहरी साधनों से नहीं जीता जा सकता है। यह केवल उच्चतम क्रम की तपस्या से प्राप्य है। किन्तु रामायण के अद्भुत उपकरण द्वारा हमें अत्यन्त सरलता से यह सब प्राप्य है। राम के लिए एक मन्दिर जिस प्रकार उपयुक्त परिस्थितियों में चुम्बक अन्य आधार वस्तुओं में चुम्बकत्व को प्रेरित करता है, वैसे ही अवतार चेतन और निर्जीव वस्तुओं में सदगुण उत्पन्न करने में सक्षम होते हैं। ऐसे महापुरुष किसी भी भौगोलिक क्षेत्र को 'पवित्र' कर 'तीर्थ' क्षेत्र में परिवर्तित सकते हैं - यह श्रीरंग महागुरु द्वारा प्रतिपादित एक अनुभवात्मक और प्रायोगिक सत्य था। इस प्रकार के स्थान तपस्या, पूजा और अन्य आध्यात्मिक साधनों के लिए एक आदर्श बन जाते हैं। श्रीराम ने हमारे देश भर में यात्रा करते हुए अन्य स्थानों को जैसे - चित्रकूट, प्रयाग, दंडकारण्य, पञ्चवटी, हम्पी, रामेश्वरम, धनुषकोटि, लंका और उन सभी में सर्वाधिक अयोध्या, तीर्थक्षेत्र के रूप में प्रतिष्ठित किया। यदि अयोध्या को आध्यात्मिक साधना के मन्दिर के निर्माण के लिए उपयोग किया जाता है, तो यह अनगिनत पुरुष और महिलाओं के लिए हर्ष, शान्ति और आन्तरिक आनंद का आश्रय होगा। अस्पताल, स्कूल और ऐसे अन्य संस्थान बहुत महत्वपूर्ण हैं, इसमें कोई सन्देह नहीं है। परन्तु यह सब सामान्य प्रभाव युक्त अन्य किसी स्थान में भी निर्मित हो सकते हैं। यदि आध्यात्मिक खोज के लिए पवित्र स्थानों का उपयोग किया जाता है, तो इस प्रक्रिया से हमें लाभ होगा, भगवान राम को नहीं। इस ऐतिहासिक अवसर पर, हम अत्यन्त कृतज्ञता और श्रद्धा भाव से श्रीरङ्ग महागुरु की तपस्या प्रेरित योगदान को सम्मानपूर्वक याद करते हैं जिस के द्वारा उन्होंने हमे राम, रामायण और रामराज्य का सार प्रस्तुत किया । यह केवल उस महानता के कारण है कि इस ऐतिहासिक

अवसर पर हम सभी हाथ जोड प्रार्थना और आशा करते हैं कि अयोध्या में राम का निवास हम सभी को हमारे अन्तर्मन की अयोध्या के आनंद की चरम अवस्था तक ले जाए। यह हमारे हृदय, घर-द्वार , समाज, देश और सम्पूर्ण जगत में राम राज्य की स्थापना की दिशा में पहला कदम हो सकता है - एक ऐसा राज्य जहाँ राम और सीता का आत्म धर्म पूर्णरूप से पल्लवित होता है।

सूचन : इस लेख का  अंग्रेज़ी  संस्करण AYVM ब्लॉग पर देखा जा सकता है |     

Thursday, August 20, 2020

ಕೆರೆಯ ನೀರನು ಕೆರೆಗೆ ಚೆಲ್ಲಿ (Kereya Niranu Kerege Celli)

ಲೇಖಕರು: ಗಣೇಶ್ ಕುಮಾರ್. ಬಿ. ಎನ್  

(ಪ್ರತಿಕ್ರಿಯಿಸಿರಿ lekhana@ayvm.in) 




ವ್ಯವಸಾಯಿಗಳ ಒಂದು ಪುಟ್ಟ ಗ್ರಾಮ. ಗ್ರಾಮಸ್ಥರು  ವ್ಯವಸಾಯಕ್ಕೆ ಮಳೆಯನ್ನೇ ಅವಲಂಬಿಸಿದ್ದರಿಂದ ಅದು ಯೋಗ್ಯವಲ್ಲವೆಂದು, ಮುಂಜಾಗ್ರತಾ ಕ್ರಮವಾಗಿ ಒಂದು ದೊಡ್ಡ ವಿಸ್ತೀರ್ಣವುಳ್ಳ ಕೆರೆಯನ್ನು ಕಟ್ಟಿಸುವುದಾಗಿ  ಹಿರಿಯರು ನಿಶ್ಚಯಿಸಿದರು. ಬೃಹತ್ತಾದ ನಿರ್ಮಾಣದ ಖರ್ಚುವೆಚ್ಚಗಳಿಗೆ ಊರಿನ ಎಲ್ಲ ಕುಟುಂಬಗಳು ತಮ್ಮ ಕೊಡುಗೆಯನ್ನು ನೀಡಬೇಕೆಂದು ಸುತ್ತೋಲೆಯನ್ನು ಹೊರಡಿಸಿದರು. ಗ್ರಾಮದ ಕುಟುಂಬಗಳೆಲ್ಲವೂ ಅನುಕೂಲಸ್ಥರಾಗಿದ್ದುದರಿಂದ ಹಣವನ್ನು ಸಂದಾಯ ಮಾಡುವುದು ಕಷ್ಟಕರವಾಗಿರಲಿಲ್ಲ.

ಆದರೆ ಗ್ರಾಮದ ಧನಿಕನೊಬ್ಬ ಹೀಗೆ ಆಲೋಚಿಸಿದನು- "ನನ್ನ ಕೃಷಿ ಭೂಮಿಯ ಬಾವಿಯಲ್ಲಿ ಸಮೃದ್ಧವಾಗಿ ನೀರು ತುಂಬಿದೆ, ನಾನೇಕೆ ಊರಕೆರೆಗೆ ಹಣವನ್ನು ವ್ಯಯಿಸಬೇಕು", ಎಂದು. ಕುಬುದ್ಧಿಯಿಂದ ಕೂಡಿದ ಆತನು ಬಹಳ ನಷ್ಟದಲ್ಲಿರುವೆನೆಂದು ಸುಳ್ಳು ಹೇಳಿ ಕಳುಹಿಸಿದನು. ಧನಿಕನ ಈ ನಡೆಯನ್ನು ನೋಡಿ, ಗ್ರಾಮದ ಬಹುಜನರು ನಾವೂ ಈ ರೀತಿಯಲ್ಲಿ ನಡೆದರೆ ಹಣವು ಉಳಿಯುವುದು ಎಂದು ಆಲೋಚಿಸಿ, ಧನಿಕನ ಹಾಗೆ ಸುಳ್ಳು ಕಾರಣಗಳನ್ನು ನೀಡಿ ಹಿರಿಯರನ್ನು ಹಿಂತಿರುಗಿಸಿದರು. ನಿರೀಕ್ಷಿಸಿದ ಹಣ ಸಂಗ್ರಹವಾಗದ ಕಾರಣ ಕೆರೆ ನಿರ್ಮಾಣವಾಗಲಿಲ್ಲ. ಮುಂದಿನ ಎರಡು ವರ್ಷಗಳಲ್ಲಿ ಭೀಕರ ಕ್ಷಾಮವು ತಲೆದೋರಿತು. ಎಲ್ಲರ ಬಾವಿಗಳು ಬತ್ತಿದವು; ನೀರಿನ ಹಾಹಾಕಾರ ಉಂಟಾಗಿ ರೋಗಗಳು ಹರಡಿದವು; ಅನಾಹುತಗಳು ಸಂಭವಿಸಿದವು. ಗ್ರಾಮ ಹಾಗೂ ಅಲ್ಲಿಯ ಜನಜೀವನ ನಷ್ಟವಾಯಿತು.

ಕೆರೆಗೆ ಸಲ್ಲಿಸುವ ಕರವು, ನಷ್ಟವಲ್ಲ, ತಮ್ಮ ಒಳಿತಿಗಾಗಿಯೇ ಮಾಡುವ ಕೆಲಸ ಎಂಬುದನ್ನು ಮರೆಯಬಾರದು. "ಕೆರೆಯ ನೀರನು ಕೆರೆಗೆ ಚೆಲ್ಲಿ ವರವ ಪಡೆದವರಂತೆ ಕಾಣಿರೋ" ಎಂಬ ದಾಸರ ವಾಣಿಯನ್ನು ಜ್ಞಾಪಿಸುವೀ ಕಥೆಯು ಗೂಢವಾದ ಅರ್ಥವನ್ನು ಕೊಡುತ್ತಿದೆ. ನಮ್ಮ ದೇಹವೇ ಈ ಗ್ರಾಮ. ಇದು ನಮ್ಮ ಇಂದ್ರಿಯಗಳಿಂದ ಕೂಡಿದ ಗ್ರಾಮ. ಯಜ್ಞ, ದಾನ, ಪೂಜೆಗಳಿಗೆ ಏಕೆ ಧನವ್ಯಯವೆಂದು, ತಮ್ಮ ಸ್ವಂತ ಅನುಭವಕ್ಕಾಗಿ ಕೂಡಿಡುವ ಬುದ್ಧಿ ಸಹಜ. ಆದರೆ, ಯಜ್ಞದಲ್ಲಿ ಕೊಟ್ಟ ಹವಿಸ್ಸು ಹೊರನೋಟಕ್ಕೆ ವ್ಯಯದಂತೆ ಕಂಡರೂ ನಮ್ಮನ್ನು ಧರಿಸುವ ದೇವತಾ ರೂಪವಾದ ಶಕ್ತಿ ಎಂಬ ಕೆರೆಗೆ ಚೆಲ್ಲಿದ ಕಾಣಿಕೆಯದು. ಇದು ಸಸಿಯ ಬೇರಿಗೆ ಎರೆದ ನೀರಿನಂತೆ, ಎಂಬುದು ಶ್ರೀರಂಗಮಹಾಗುರುಗಳ ಪ್ರಯೋಗಬದ್ಧವಾದ ದರ್ಶನ. ನಮ್ಮ ಅಸ್ತಿತ್ವದ ಬೇರಾಗಿರುವ ಚೈತನ್ಯಶಕ್ತಿಗಳಿಗೆ ಎರೆದ ನೀರಿದು ಎಂಬುದು ಅವರ ಸಿದ್ಧಾಂತ. ಆದರೆ ಬೇರಿಗೆ ಸರಿಯಾಗಿ ನೀರೆರೆವ ಕಲೆಯು ತಿಳಿದಿರಬೇಕು.  ಯಜ್ಞದಲ್ಲಿ ಹವಿಸ್ಸನ್ನು ಸಮರ್ಪಿಸುವಂತೆ ಸದ್ಗೃಹಸ್ಥನು ಮನೆಯ ಅಡುಗೆಯನ್ನು ಭಗವಂತನಿಗೆ ನಿವೇದಿಸಿ ಪ್ರಸಾದವಾಗಿ ಸ್ವೀಕರಿಸುತ್ತಾನೆ. ಇದು ನಮ್ಮ ಒಳಿತಿಗಾಗಿ; ದೇವರ ಒಳಿತಿಗಾಗಲ್ಲ. ಅಂತೆಯೇ ಧರ್ಮಿಷ್ಠನಾದ ರಾಜನಿಗೆ ಸಲ್ಲಿಸಿದ ಕರವು ವರದಂತೆ ಕೆಲಸಮಾಡುತ್ತದೆ. ನಮ್ಮ ದೇಶದ ಋಷಿ-ಮುನಿಗಳು ಇಂತಹ ಕಲೆಯನ್ನು ಬಲ್ಲವರಾಗಿದ್ದರು.  

ಅಂತಹ ಋಷಿಗಳು ಹೇಳುವ ಸೂತ್ರರೂಪದ ಮಾತೆಂದರೆ, ಸಮರ್ಪಿಸುವುದು ಅಲ್ಪವಾದರೂ, ಸಮರ್ಪಣಾ ಭಾವದಿಂದ, "ನ ಮಮ" (ನನಗಲ್ಲ) ಎಂದು ಸಮರ್ಪಿಸಿದರೆ ಅದು ಬೃಹತ್ತಾದ ವರವಾಗಿ ಮರಳಿ  ಬರುವುದು. ಸಮರ್ಪಣೆಯು ಪಾರಮಾರ್ಥಿಕವಾಗಿ ಶಾಶ್ವತವಾದ ನೆಮ್ಮದಿ, ಸೌಖ್ಯಗಳನ್ನು  ತರುತ್ತದೆ.

ಸೂಚನೆ: 20/08/2020 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ. 

தீர்கபந்து (Dhirgabandhu)

மூலம்: பி.ஜி. அனந்த 
தமிழாக்கம்: வனஜா
மின்னஞ்சல் : (lekhana@ayvm.in)



பிறவிக் கடலை கடக்க துணை புரியம்  குரு(ஆசார்யர்) பல விதமான பெயர்களால்  அழைக்கப்படுகிறார். அவை வெறும் பெயர்களோ, ஒத்தசொல்லோ அல்ல. குருவின் சிறப்பான குணநலன்களையும் இயல்பையும்  எடுத்துக்காட்டும் பதங்கள். அவற்றில் ஒன்றுதான் 'தீர்க்கபந்து' (நிலையான உறவு).

உறவினன்
பந்து எனும் சொல் பிணைப்பு(கட்டு) என்பதை குறிக்கும் பந்தம் எனும் சொல்மூலம் ஏற்பட்டதுஂ.  இருவரிடையே  ஒரு பிணைப்பு அல்லது ஏதோ ஒன்றுக்கு கட்டுப்பட்டவன் என்ற பொருளை குறிக்கிறது 'பந்து' என்ற சொல். சாதரணமாக இச்சொல் பிறப்பினால்   ஏற்படும்  சொந்தத்தை குறிக்கும். பிறப்பினால் ஏற்படும் உறவு ஆயுட்காலத்திலும் மற்றும் அதன் பிறகும் தொடரும். தசரதனுக்கும் ராமனுக்கும் இடையேயான தந்தை மகன் உறவு ஆயிரம் ஆண்டுகளுக்கு பின்னும் அறியப்படுகிறது.

சில உறவுகள் பிறப்பிற்கு பின் ஏற்பட்டாலும் ஆயுள் முழுவதும் நிலைத்திருக்கும். உதாரணமாக, கணவன்-மனைவி உறவு, சிறுவயது நட்பு போன்றவை. ஆசிரியர் மாணாக்கர் உறவும் இத்தகையதே. ஒரு மாணவன் தன்னை முழுமையாக  குருவிடம் ஒப்படைத்து அவர் ஏற்றுக்கொள்ளும் வரை அவர்களிடையே எந்த உறவும் இல்லைஂ. ஏற்றுக்கொண்டபின் என்றும் நிலைத்திருக்கும்.

குரு(ஆசார்யன்)
இவ்வுலகில் கற்பதற்கு அனேக விஷயங்கள் உள்ளன. இவ்வுலக விஷயங்களை கற்பிப்பவரை குரு எனறோ கற்பவரை சீடன் என்றோ  கூற இயலாதுஂ. குரு, சீடன் என்பவை   சிறப்பான பொருள் உள்ள பதங்கள். யாரொருவர் ஆன்மீக பாதையில் வழிநடத்தி இறைவனை காணச்செய்கிறாறோ அவரே குரு எனப்படுவார்.  யார் ஒருவன் இறைவனை அடைவதையே  குறிக்கோளாக கொண்டு குரு வழிகாட்டும் பாதையில் அயராது பயணிக்கிறானோ அவனே சீடன் எனப்படுவான். குருவின் மூலம் கிடைக்கப்பெறும் ஆழ்ந்த ஆன்மிக கருத்துக்களும், வழிகாட்டலுமே  வித்யை எனப்படும். இக்கருத்தையே பகவான் ஸ்ரீ க்ருஷ்ணன் பகவத்கீதையில் குறிப்பிடுகிறான் "அத்யாத்ம வித்யா வித்யானாம்" "வித்யைகளனைத்திலும் நான் அத்யாத்ம வித்யை."

ஒரு ஜீவன் பிறவி தளையிலிருந்து விடுபட்டு முக்தி அடைவதையே இப்பிறவியில் குறிக்கோளாக கொண்டால்  அத்தகு ஆழ்ந்த ஆன்மீக பாதையில் வழிகாட்டும்படி குருவை பிரார்த்திக்கிறான். குருவானவர்  சீடனுக்கு அதற்குரிய  தகுதிகள் உள்ளனவா என ஆராய்ந்து ஏற்றுக்கொள்கிறார். அக்கணம் மிகவும் புனிதமானது. அப்போதிலிருந்து  குரு-சீடனிடையே  ஒரு ஆன்மீக பிணைப்பு உருவாகின்றது. சீடன் ஸாதனை புரிபவன், குரு சித்தி அடைந்தவர்,  ஆன்மீக பயணத்தின் உன்னத நிலையை எட்டியவர் என்பதை நினைவு கூர்தல் அவசியம்.  இருவரும் ஸாதனை புரிபவரே ஆயின் அவர்களில் ஒருவன் குருவாக இயலாது. நீச்சல் பயிலும் இருவரில் யாராவது ஒருவன் கற்றுக்கொடுக்க முயன்றால் கதி என்ன?!

தீர்க்கபந்து
ஒரு குருவானவர் ஒருவனை சீடனாக ஏற்றுக்கொண்டபின் அவன் குறிக்கோளை அடையும்வரை  அப்பிணைப்பு நிலைத்திருக்கும். குரு-சீடனிடையே இத்தகு ஆழ்ந்த பிணைப்பு  சீடன் பரம்பொருளின் ஞானத்தை அடையும் வரை ஒன்றல்ல, பல நூறு பிறவிகளாயினும் நிலைத்திருக்கும்.

மீன் தன் குஞ்ஜின் அழைப்பிற்காக ஆயிரம் மைல்களுக்கு நீந்தும் என கூறப்படுகிறது.  அவ்வாறே குரு தன் சீடனை காத்து வழிநடத்த நேரம் காலம் கடந்து செயல்படுவார். இவ்வாறு நீண்ட கால உறவுள்ள குரு சீடர்களால்  நன்றியுடன் "தீர்க்கபந்து" என அழைக்கபடுகிறார். உலகில் வேறு எந்த உறவும் குரு சீடனைப்போல் நீண்டகாலம் நிலைப்பதில்லை எனபது சிறப்பானது. கருணையே உருவான தீர்க்க பந்துவை மீண்டும் மீண்டும் தொழுவோமாக.

குறிப்பு: இக்கட்டுரை யின் கன்னட மூலம் AYVM blogs ல் காணலாம்.