Sunday, August 25, 2019

ஶ்ரீரங்கமஹாகுரு - 31 (Sriranga Mahaguru - 31)

ஶ்ரீகுருவின் கண்ணோட்டம் – 20 

கல்லையும் மண்ணையும் பூஜிக்கலாமா?
===========================================================

மூலம்: திரு. வரததேசிகாசார்யர்
தமிழாக்கம்: திருமதி வனஜா



 “நம் நாட்டில் மிக பழமையான தர்மம், கலாச்சாரம், நல்வழக்கங்களின் பரம்பரையை காண்கிறோம். இது மிகவும் மேன்மையான ஓர் விஷயமே ஆயினும் இங்கு கல்லையும் மண்ணையும்  பூஜிக்கும் வழக்கமும் வளர்ந்து வருகிறது. இது ஒன்று மட்டுமே தலை குனிவை ஏற்படுத்துவதாக உள்ளது.”

"கல்லையும் மண்ணையும் இங்கு யார் பூஜிக்கிறார்கள்?"

“இவ்வாறான பழக்கம் உள்ளவர்களே அதிகமாக காணப்படுகிறார்கள். அறிவாளிகளும்,  விவேகிகளும்  கூட அவற்றை கை கூப்பி வணங்குகின்றனர். பழம் பூ முதலியவற்றை அதன் முன்னிட்டு பூஜிக்கின்றனர்.

"அப்பூஜை நிறைவுற்றதும் ‘கல், மண்ணுக்கு  பூஜை ஆயிற்று. அவை நம்மை காக்க வேண்டு’மென்று கூறுகிறார்களா?"

“இல்லை, ‘இறைவனின் பூஜை ஆயிற்று, அவர் நம்மை காத்தருள வேண்டும்’ என கூறுகின்றனர்.”

"அவ்வாறாயின் அது இறைவனின் பூஜையே அன்றி கல் அல்லது மண்ணின் பூஜையன்று. அவர்களும் அவ்வாறு உரைப்பதில்லை. இவ்வாறிருக்க  நீ ஏன் அவர்களை  இவ்வண்ணம் குற்றம் கூறுகிறாய்?"

"என் கண்களுக்கு அது நன்றாக புலப்படுவதால் கூறுகிறேன்"

"அவர்கள் ஏதோ ஓர் கல்லிற்கும் மண்ணிற்கும் மனம் போனவாறு பூஜிப்பதில்லை.  விசேஷ பொருட்களில் தெய்வசக்தியை பூரணமாக  நிறைத்து  ப்ராண ப்ரதிஷ்டையும், சக்தியையும் உண்டாக்கிய பிறகே பூஜிக்கிறார்கள். அவ்வுணர்வு அற்றவர்களுக்கு அது கல் மற்றும் மண்ணாக காணப்படுகிறது. ஆனால் விதிப்படி பூஜிப்பவரை நிந்திப்பதும் முறையன்று. கொஞ்சினால் குழந்தை, பூஜித்தால் இறைவன் என்ற ஆன்றோர்  வாக்கை அறியவில்லையா?"

தேசிய கொடிக்கு அனைவரும் வணக்கம் செலுத்துகிறார்கள். அது ஓர் சாதாரண துணி தானே? துணிக்கு வணங்குவது மூடத்தனமல்லவா என்றால் அங்கே துணிக்கு மரியாதை அல்ல. அதன் பிண்ணனியில்   உள்ள தேசப்பற்றிற்கு  தான்  எனும் உதாரணத்தை ஶ்ரீரங்க மஹாகுருவானவர் இந்த சந்தர்ப்பத்தில் தெளிவு படுத்தினார்.

ದರ್ಶನವು ಸತ್ತ ಮೇಲೋ? ಮೊದಲೋ? (Darshanavu satta melo? modalo?)

ಲೇಖಕರು:  ಡಾ|| ಕೆ.ಎಸ್. ಕಣ್ಣನ್, ಡಿಲಿಟ್. 
ಪೀಠ-ಪ್ರಾಧ್ಯಾಪಕರು, ಐಐಟಿ, ಚೆನ್ನೈ.  


ಪ್ರತಿಕ್ಷಣವೂ ನಾವು ಪ್ರಪಂಚವನ್ನು ಅರಸುತ್ತಲೇ ಇರುತ್ತೇವೆ. ಸುಖವೆಲ್ಲಿದೆಯೆಂಬ ಪ್ರಶ್ನೆ ನಮಗೆ ಸದಾ ಬರುತ್ತಿರುತ್ತದೆ. ನಮಗೆ ಸುಖವು ಸಿಕ್ಕೇ ಇಲ್ಲವೆಂದೂ ಹೇಳಲಾಗದು: ಸಿಕ್ಕಿದೆ, ಸಿಕ್ಕುತ್ತಿದೆ – ಎಂದು ಹೇಳಲೇಬೇಕಾಗುತ್ತದೆ. ಸುಂದರವಾದ ದೃಶ್ಯವನ್ನು ನೋಡಿದರೆ ಕಣ್ಣಿಗೆ ಸುಖ. ಮುದ್ದಾದ ಮಗುವಿನ ಮೊಗವನ್ನು ಕಂಡರೂ ನಮ್ಮ ಕಂಗಳಿಗೆ ಸುಖವೇ. ಸಾರಾಂಶವಾಗಿ ಒಳ್ಳೆಯ ರೂಪದಿಂದ ಕಣ್ಣಿಗೆ ಸುಖ. ಹಾಗೆಯೇ ಒಳ್ಳೆಯ ಸಂಗೀತದಿಂದ ಕಿವಿಗೆ ಸುಖ. ಅಂದರೆ, ಒಳ್ಳೆಯ ಶಬ್ದದಿಂದ ಕಿವಿಗೆ ಸುಖ. ಹಾಗೆಯೇ ಸ್ಪರ್ಶ-ರಸ-ಗಂಧಗಳಿಂದ ಚರ್ಮ-ನಾಲಿಗೆ-ನಾಸಿಕೆಗಳಿಗೂ ಸುಖ. 

ಮೇಲೆ ಹೇಳಿದುದು ಐದು ಇಂದ್ರಿಯಗಳ ಸುಖಗಳ ಬಗ್ಗೆ. ಸುಖದ ಹಸಿವು ಇಂದ್ರಿಯಗಳಿಗೆ ಮಾತ್ರವಲ್ಲ, ಮನಸ್ಸು-ಬುದ್ಧಿಗಳಿಗೂ ಹಸಿವುಂಟು. ಒಳ್ಳೆಯ ಕಲೋಪಾಸನೆಯಿಂದ, ಕ್ಲಿಷ್ಟವಾದ ಸಮಸ್ಯೆಯನ್ನು ಬಗೆಹರಿಸುವುದರಿಂದ ಮನೋ-ಬುದ್ಧಿಗಳಿಗೂ ತೃಪ್ತಿಯಾಗುವುದು. ತೃಪ್ತಿಯೆಂದರೇನು? ಎಲ್ಲೆಲ್ಲಿ ಹಸಿವೋ ಅಲ್ಲಲ್ಲಿ ತಕ್ಕ ತಕ್ಕ ಆಹಾರವು ದೊರೆಯುತ್ತಿರುವುದು. ಶ್ರೀರಂಗಮಹಾಗುರುಗಳು ಇವಿಷ್ಟನ್ನೂ ಹೇಳಿ “ದೇಹೇಂದ್ರಿಯಮನೊಬುದ್ಧಿಗಳಲ್ಲದೆ, ಜೀವವೆಂಬುದೂ ಒಂದುಂಟಪ್ಪಾ. ಆ ಜೀವಕ್ಕೂ ಹಸಿವಿರುವುದು. ಜೀವನಿಗೆ ದೇವನೇ ’ಆಹಾರ’!: ಆತ್ಮದ ಹಸಿವನ್ನು ಪರಮಾತ್ಮನೇ ಹಿಂಗಿಸುವುದು; ಆತ್ಮತೃಪ್ತಿಯು ಪರಮಾತ್ಮದರ್ಶನದಿಂದಲೇ” ಎಂದು ಪ್ರತಿಪಾದಿಸುತ್ತಿದ್ದರು.

ಆದರೆ ದೇವದರ್ಶನವಾಗುವುದು ಸತ್ತಮೇಲೇ – ಎಂದು ಹಲವರ ಎಣಿಕೆ. ಶ್ರೀರಂಗಮಹಾಗುರುಗಳು ಇದನ್ನು ಒಪ್ಪುತ್ತಿರಲಿಲ್ಲ. “ಹಾಗಲ್ಲಪ್ಪಾ, ಈ ಜನ್ಮದಲ್ಲೇ ದೇವನನ್ನು ಕಾಣುವುದು ಶಕ್ಯವಪ್ಪಾ” ಎಂದು ಬೋಧಿಸುತ್ತಿದ್ದರು. ಅದು ಅವರ ಸಾಕ್ಷಾದನುಭವದ ಮಾತಾಗಿತ್ತು. ಅದಕ್ಕೆ ಬೇರೆ ಪುರಾವೆಗಳೂ ಉಂಟೇ. ಈಚಿನ ಇತಿಹಾಸದಲ್ಲಿ ತ್ಯಾಗರಾಜರು- ರಮಣಮಹರ್ಷಿಗಳು-ರಾಮಕೃಷ್ಣಪರಮಹಂಸರು – ಇವರುಗಳೆಲ್ಲರೂ ಇದಕ್ಕೆ ಸಾಕ್ಷಿಗಳೇ. ಭಗವಂತನನ್ನು ನಾವು ಕಂಡೆವು, ಆಹಾ, ನಾವು ಕಂಡೆವು (“ಕಂಡೋಂ ಕಂಡೋಂ”)! - ಎಂದು ಪ್ರಾಚೀನ ಇತಿಹಾಸದ ಆಳ್ವಾರುಗಳೂ ಉದ್ಗರಿಸಿದ್ದರು.

ವೇದೋಪನಿಷತ್ತುಗಳಲ್ಲೂ ಈ ಬಗೆಯ ಉದ್ಗಾರಗಳಿವೆ. “ಆ ಮಹಾಪುರುಷನನ್ನು ನಾನು ಅರಿತಿದ್ದೇನೆ” (“ವೇದಾಹಮೇತಂ ಪುರುಷಂ ಮಹಾಂತಂ”) ಎಂಬುದು ಋಷಿಯ ಮಾತೇ. “ಇಲ್ಲಿಯೇ ಕಂಡಿರೋ, ಅದೋ ಸತ್ಯವುಂಟು!” – “ಇಹ ಚೇದ್ ಅವೇದೀತ್ ಅಥ ಸತ್ಯಮ್ ಅಸ್ತಿ” ಎಂದು ಕೇನೋಪನಿಷತ್ತು ಸಾ ರಿದೆ. ಅಷ್ಟೇ ಅಲ್ಲ. “ಇಲ್ಲಿ ತಿಳಿಯಲಿಲ್ಲವೋ ಮಹಾ ನಷ್ಟವೇ!!” – ಎಂದೂ ಎಚ್ಚರಿಸಿದೆ.ಪ್ರಧಾನವಾಗಿ ಸ್ವಾನುಭವದ ಬಲದ ಮೇಲೂ, ಜೊತೆಗೆ ಬೇರೆ ಉಪನಿಷತ್ತುಗಳಲ್ಲೂ ಬರುವ ಇದೇ ಅರ್ಥದ ಮಾತುಗಳನ್ನು ಬಳಸಿಕೊಂಡೂ, ಶ್ರೀರಂಗಮಹಾಗುರುಗಳು ತತ್ತ್ವಪ್ರತಿಪಾದನೆ ಮಾಡುತ್ತಿದ್ದರು.

ಸೂಚನೆ: 24/08/2019 ರಂದು ಈ ಲೇಖನ ಪ್ರಜಾ ವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಮೋಕ್ಷ ಎಲ್ಲರಿಗೂ ಬೇಕೇ? (Moksha ellarigu beke?)

ಲೇಖಕರು:  ನಾಗರಾಜ ಗುಂಡಪ್ಪ



ಮೋಕ್ಷವೆಂಬ ಪದ ಬಹಳ ಪರಿಚಿತವಾದರೂ, ಮೋಕ್ಷವು ಯಾರೋ ಕೆಲವು ಅಧ್ಯಾತ್ಮಪರರಾದ ವ್ಯಕ್ತಿಗಳಿಗೆ ಮೀಸಲಾದ ವಿಷಯ ಎನ್ನುವ ಅಭಿಪ್ರಾಯ ಜನಮನದಲ್ಲಿದೆ. ಆದರೆ, ಇದು ಎಲ್ಲರಿಗೂ ಅಗತ್ಯವೇ ಎನ್ನುವುದು ಪರಿಶೀಲನಾರ್ಹವಾದ ಪ್ರಶ್ನೆ.

ಮೋಕ್ಷ ಪದದ ಅರ್ಥ ಬಿಡುಗಡೆ ಎಂದು. ಯಾವುದರಿಂದ ಬಿಡುಗಡೆ? ಅವಿದ್ಯಾಕಾಮಕರ್ಮ ಸಂಕೋಲೆಯ ಬಂಧನದಿಂದ ಬಿಡುಗಡೆ. ಅವಿದ್ಯೆ ಎಂದರೆ ಅಜ್ಞಾನ; ಅದರಿಂದಾಗಿ ಬಗೆಬಗೆಯಾದ ಕಾಮನೆಗಳುಂಟಾಗಿ ಅವುಗಳನ್ನು ಪೂರ್ಣಗೊಳಿಸಿಕೊಳ್ಳುಲು ಕರ್ಮಗಳಲ್ಲಿ ತೊಡಗಬೇಕಾಗುತ್ತದೆ ಮತ್ತು ಈ ಕರ್ಮಗಳೇ ನಮ್ಮ ಜೀವನವನ್ನು ಬಂಧಿಸುತ್ತವೆ. ಉದಾಹರಣೆಗೆ, ನಾವು ಅಂತರ್ಮಗ್ನರಾಗಿ ಸುಮ್ಮನೆ ಇಚ್ಛೆ ಇರುವಷ್ಟು ಕಾಲ ಕುಳಿತಿರೋಣ ಎಂದುಕೊಳ್ಳುತ್ತೇವೆಂದಿಟ್ಟುಕೊಳ್ಳೋಣ. ಹೀಗೆ ಕುಳಿತಿರಲು ಸಾಧ್ಯವಿಲ್ಲ ಏಕೆಂದರೆ ಮನೆಯ ಕೆಲಸಗಳೋ ಅಥವಾ ಶಾಲಾ, ಕಾಲೇಜು, ಆಫೀಸಿನ ಕೆಲಸಗಳು ನಮ್ಮನ್ನು ಎಬ್ಬಿಸುತ್ತವೆ. ನಮ್ಮನ್ನು ಸ್ವತಂತ್ರರಾಗಿ ನಮ್ಮ ಇಚ್ಛೆಗನುಸಾರವಾದ ಸ್ಥಿತಿಯಲ್ಲಿರಲು ಬಿಡುವುದಿಲ್ಲ. ಹೀಗೆ ಇನ್ನೂ ಅನೇಕಾನೇಕ ಕಾಮ-ಕರ್ಮಗಳ ಅವಶ್ಯಕತೆಗಳಿಗನುಸಾರವಾಗಿ ನಾವು ಜೀವನಕ್ರಮ ಇಟ್ಟುಕೊಳ್ಳಬೇಕಾಗುತ್ತದೆ.

ಈ ಬಂಧನದಿಂದ ಬಿಡುಗಡೆ ಹೇಗೆ?

ತಾತ್ಕಾಲಿಕ ಬಿಡುಗಡೆ ಕಾಮನೆಗಳ ತೃಪ್ತಿಯಿಂದ ಉಂಟಾಗುತ್ತದೆ. ಆದರೆ, ಎಲ್ಲ ಕಾಮನೆಗಳನ್ನು ಈಡೇರಿಸಿಕೊಂಡೇ ಬಿಡುಗಡೆಯನ್ನು ಪಡೆಯಲು ಸಾಧ್ಯವಿಲ್ಲ ಏಕೆಂದರೆ, ಅವುಗಳನ್ನು ಈಡೇರಿಸುವ ಪ್ರಯತ್ನದಲ್ಲಿ ಮತ್ತಷ್ಟು ಕಾಮನೆಗಳು ಮತ್ತು ಕರ್ಮಗಳು ಉಂಟಾಗುತ್ತವೆ. ಆದುದರಿಂದ ಕಾಮನೆಗಳ ಸಮೂಹವನ್ನು ಉತ್ಪತ್ತಿ ಮಾಡುವ ಅಜ್ಞಾನವನ್ನೇ ತೊಡೆದು ಹಾಕುವುದರಿಂದ ಶಾಶ್ವತವಾದ ಬಿಡುಗಡೆ ಅಂದರೆ ಆತ್ಯಂತಿಕ ಮೋಕ್ಷವು ಸಿಗುತ್ತದೆ.

ಕಾಮನೆಗಳು ಯಾವಾಗ ತೃಪ್ತಿಗೊಳ್ಳುತ್ತವೆ ಎಂದರೆ ಅದನ್ನು ಧರ್ಮದ ಚೌಕಟ್ಟಿನಲ್ಲಿ ಅನುಭವಿಸಿದಾಗ. ಜೀವನದ ನಾಲ್ಕು ಪುರುಷಾರ್ಥಗಳಾದ ಧರ್ಮ, ಅರ್ಥ, ಕಾಮ, ಮೋಕ್ಷಗಳಲ್ಲಿ, ಅರ್ಥ ಕಾಮಗಳು ಧರ್ಮ-ಮೋಕ್ಷಗಳ ಚೌಕಟ್ಟಿನಲ್ಲಿರಬೇಕೆಂದು ಶ್ರೀರಂಗ ಮಹಾಗುರುಗಳು ಹೇಳುತ್ತಿದ್ದರು. ಉದಾಹರಣೆಗೆ, ನಮಗೆ ಮಾವಿನಹಣ್ಣು ತಿನ್ನಬೇಕೆನ್ನುವ ಕಾಮನೆಯುಂಟಾದರೆ ಶರೀರದ ಸುಸ್ಥಿತಿ ಎನ್ನುವ ಧರ್ಮವನ್ನು ಸಂಪಾದಿಸಬೇಕು. ನಂತರ ಮಾವಿನಹಣ್ಣು ಎನ್ನುವ ಅರ್ಥವನ್ನು ಸಂಪಾದಿಸಬೇಕು. ನಂತರ ಮಾವಿನಹಣ್ಣನ್ನು ತಿಂದು ಆಸ್ವಾದಿಸಿದರೆ, ಕಾಮನೆ ಪೂರ್ಣವಾಗುತ್ತದೆ ಮತ್ತು ಕಾಮನೆಯಿಂದ ಬಿಡುಗಡೆ ಅಥವಾ ಮೋಕ್ಷ ಸಿಗುತ್ತದೆ. ಈ ಬಿಡುಗಡೆ ತಾತ್ಕಾಲಿಕವಾದರೂ, ಅಂದರೆ, ಮಾವಿನ ಹಣ್ಣನ್ನು ತಿನ್ನಬೇಕೆಂಬ ಆಸೆ ಪುನಃ ಉಂಟಾದರೂ ಸಹಾ, ಜೀವನಕ್ರಮದಲ್ಲೇ ಯಾವಾಗಲೂ ಧರ್ಮವನ್ನೇ ಎಲ್ಲಕ್ಕೂ ಪೂರ್ವಭಾವಿಯಾಗಿಟ್ಟುಕೊಂಡಿದ್ದರೆ ಒಂದು ಹಂತದ ನಂತರ ಈ ಕಾಮನೆಗಳ ಒತ್ತಡ ಬಾಧಿಸುವುದಿಲ್ಲ. ಉದಾಹರಣೆಗೆ, ಮಕ್ಕಳಾಗಿದ್ದಾಗ ಚೆನ್ನಾಗಿ ಆಟಗಳನ್ನು ಆಡಿ ತೃಪ್ತಿ ಹೊಂದಿದ್ದರೆ, ದೊಡ್ಡವರಾದ ಬಳಿಕ ಆಟಗಳನ್ನು ಆಡಬೇಕೆನಿಸುವುದಿಲ್ಲ. ಹೀಗೆ ಧರ್ಮಮಯವಾಗಿ ಜೀವನ ಮಾಡಿದಾಗ ಬಹುತೇಕ ಕಾಮನೆಗಳು ಪೂರ್ಣಗೊಂಡು ತೃಪ್ತಿಯಿಂದ ಮೋಕ್ಷದ ಹಾದಿಯಲ್ಲಿರಬಹುದು.

ಆತ್ಯಂತಿಕ ಮೋಕ್ಷಕ್ಕಾಗಿ ಆತ್ಮ ಸಾಧನೆಯಿಂದ ಒಳಗೆ ಬೆಳಗುವ ಜ್ಯೋತಿಯ ದರ್ಶನ ಆಗಬೇಕು. ಆತ್ಮಜ್ಞಾನಿಯು ಜ್ಞಾನಬಲದಿಂದ ಅವಿದ್ಯಾಕಾಮಕರ್ಮಗಳ ರಾಶಿಯನ್ನು ಭಸ್ಮ ಮಾಡಿ, ಎಲ್ಲ ಕಾಮನೆಗಳಿಂದಲೂ ಬಿಡುಗಡೆ ಪಡೆಯುತ್ತಾನೆ.

ಇನ್ನು ಆರಂಭದ, ಮೋಕ್ಷ ಎಲ್ಲರಿಗೂ ಬೇಕೇ ಎನ್ನುವ ಪ್ರಶ್ನೆಗೆ ಉತ್ತರ ಹೌದು, ಎಲ್ಲರಿಗೂ ಅವಶ್ಯ ಎಂದೇ. ಆತ್ಮ ಸಾಧನೆ ಮತ್ತು ಆತ್ಯಂತಿಕ ಮೋಕ್ಷ ಬಯಸದಿದ್ದರೂ, ಬಂಧನ ಇರುವುದರಿಂದ ಎಲ್ಲರೂ ತಾತ್ಕಾಲಿಕ ಬಿಡುಗಡೆಯನ್ನಂತೂ ಬಯಸಿಯೇ ಬಯಸುತ್ತಾರೆ. ಉದಾಹರಣೆಗೆ, ಔತಣಕೂಟಕ್ಕೆ ಹೋದರೆ, ಅಲ್ಲಿ ತೃಪ್ತಿಹೊಂದಿ, ಆಸೆಯು ಪೂರ್ಣವಾಗಬೇಕೆಂದು ಬಯಸುತ್ತಾರೆಯೇ ಹೊರತು ಅತೃಪ್ತಿಯಿಂದ ಹಿಂದಿರುಗಬೇಕೆಂದು ಯಾರೂ ಬಯಸುವುದಿಲ್ಲ. ಹೀಗೆ ತೃಪ್ತಿಯಿಂದ ದೊರೆಯುವ ತಾತ್ಕಾಲಿಕ ಮೋಕ್ಷವು ಎಲ್ಲರೂ ಬಯಸುವಂತಹಾದ್ದಾಗಿದೆ. ವಿವೇಕದಿಂದ ಕಾಮನೆಗಳನ್ನು ಇತಿಮಿತಿಗೊಳಿಸಿಕೊಂಡು ಧರ್ಮದಿಂದೊಡಗೂಡಿ ತೃಪ್ತ ಜೀವನ ನಡೆಸುತ್ತಿದ್ದರೆ ಒಂದು ದಿನ ಆತ್ಮ ಸಾಧನೆಯಲ್ಲಿ ಅಭಿರುಚಿಯುಂಟಾಗಿ ಆತ್ಯಂತಿಕ ಮೋಕ್ಷವೇ ದೊರಕುವುದು ಅಸಾಧ್ಯವೇನಲ್ಲಾ. ಹೀಗೆ ಎಲ್ಲರೂ ಮೋಕ್ಷದ ಹಾದಿಯಲ್ಲಿದ್ದು ಕಾಲಕ್ರಮದಲ್ಲಿ ಆತ್ಯಂತಿಕ ಮೋಕ್ಷವನ್ನೇ ಪಡೆಯುವಂತಾಗಲೆಂದು ಆಶಿಸೋಣ.

ಸೂಚನೆ:  24/08/2019 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿ ವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.

Thursday, August 22, 2019

ವಿದ್ಯೆಗೆ ಅಧಿಕಾರ ಸಂಪತ್ತು (Vidyege adhikara sampaththu)

ಲೇಖಕರು:  ಕೆ.ಎಲ್. ಮಧುಸೂದನ  


ಒಂದು ಊರಿನಲ್ಲಿ ಒಬ್ಬ ಜನಾನುರಾಗಿಯಾದ ರಾಜನಿದ್ದ. ಒಮ್ಮೆ ಅವನ ಆಸ್ಥಾನಕ್ಕೆ ಒಬ್ಬ ಸಿದ್ಧ ಪುರುಷನಾದ ಸನ್ಯಾಸಿ ಬಂದ. ಅವನನ್ನು ರಾಜ ಚೆನ್ನಾಗಿ ಸತ್ಕರಿಸಿದ. ಅನೇಕ ಸಿದ್ಧಿಗಳನ್ನು ಕೊಡುವಂತಹ ಒಂದು ದಿವ್ಯ ಮಂತ್ರದ ಉಪದೇಶ ಪಡೆಯಬೇಕೆಂದು ರಾಜನಿಗೆ ಒಂದು ಬಯಕೆ ಉಂಟಾಯಿತು. ಸನ್ಯಾಸಿಯಲ್ಲಿ ಪ್ರಾರ್ಥಿಸಿದ. “ನಿನಗೆ ಅದನ್ನು ಪಡೆಯುವ ಯೋಗ್ಯತೆ ಬಂದಾಗ ಕೊಡುತ್ತೇನೆ” ಎಂದ ಸನ್ಯಾಸಿ. ರಾಜನಿಗೆ ನಿರಾಸೆಯಾಯಿತು. ಸನ್ಯಾಸಿ ಹೊರಟು ಬಂದ.

ರಾಜ ಬಹಳ ಶ್ರಮಪಟ್ಟು ಸಿದ್ಧಿಗಳನ್ನು ಪಡೆಯುವ ಮಂತ್ರವೇನೆಂದು ಯಾರಿಂದಲೋ ಸಂಗ್ರಹ ಮಾಡಿದ. ಆದರೆ, ವಿಧ್ಯುಕ್ತವಾಗಿ ಉಪದೇಶವನ್ನೇನೂ ಪಡೆಯಲಿಲ್ಲ. ಅಷ್ಟಕ್ಕೇ ಸಂತುಷ್ಟನಾಗಿ ಅದನ್ನು ನಿತ್ಯವೂ ಜಪಿಸಲು ಶುರು ಮಾಡಿದ. ಹೀಗೆ ಒಂದು ದಿನ ಅದೇ ಸನ್ಯಾಸಿ ರಾಜಾಸ್ಥಾನಕ್ಕೆ ಬಂದ. ರಾಜ ಅವನನ್ನು ಸತ್ಕರಿಸಿದ. ನಂತರ, “ತಾವು ಉಪದೇಶ ಕೊಡಲಿಲ್ಲ, ಆದರೆ, ನನಗೆ ಬೇಕಾದ ಮಂತ್ರವನ್ನು ಕಲಿತಿದ್ದೇನೆ” ಎಂದ.

ಸನ್ಯಾಸಿ ಸ್ವಲ್ಪ ಮೌನ ವಹಿಸಿ ತಕ್ಷಣ ರಾಜಭಟರಿಗೆ ಆಜ್ಞಾಪಿಸಿದ, “ಈ ನಿಮ್ಮ ರಾಜನನ್ನು ಕೂಡಲೇ ಬಂಧಿಸಿ” ಎಂದು. ಆದರೆ, ಯಾರೂ ಮುಂದೆ ಬರಲಿಲ್ಲ. ಆಗ ರಾಜನು ಸಿಟ್ಟಾದನು. ಕೂಡಲೇ “ಬಂಧಿಸಿ ಆ ರಾಜ ದ್ರೋಹಿಯನ್ನು” ಎಂದ ಭಟರಿಗೆ. ಅವರು ಸನ್ಯಾಸಿಯನ್ನು ಬಂಧಿಸಿದರು.

ಸನ್ಯಾಸಿ ಜೋರಾಗಿ ನಗುತ್ತಾ ಹೇಳಿದನು “ಮಹಾರಾಜ ನಾನು ಆಜ್ಞೆ ಮಾಡಿದಾಗ ನಿನ್ನನ್ನು ಯಾರೂ ಬಂಧಿಸಲಿಲ್ಲ, ಆದರೆ ನೀನು ಆಜ್ಞೆ ಮಾಡಿದಾಗ ತಕ್ಷಣವೇ ಬಂಧಿಸಿದರು, ಅಂದರೆ ನಿನಗೆ ಅಧಿಕಾರವಿದೆ ಅದರಿಂದ ನಿನ್ನ ಆಜ್ಞೆ ನೆರವೇರಿತು. ನನಗೆ ಆ ಅಧಿಕಾರವಿಲ್ಲ”.

ಹಾಗೆಯೇ, ವಿದ್ಯೆಯನ್ನು ಕೊಡುವ ಅಧಿಕಾರಿಯು ಕೊಟ್ಟರೆ ಮಾತ್ರ ಅದು ವಿದ್ಯಾಸಿದ್ಧಿಗೆ ಕಾರಣವಾಗುತ್ತದೆ.

 ಅಷ್ಟೇ ಅಲ್ಲಾ, ಕೊಡುವುದಕ್ಕೆ ಅಧಿಕಾರಿಯಾಗಿದ್ದರೂ ಯಾರಿಗೆ ಯಾವುದರಲ್ಲಿ, ಯಾವಾಗ, ಎಷ್ಟು ಅಧಿಕಾರ ಎಂಬ ಪಾತ್ರಾಪಾತ್ರ ವಿವೇಚನೆಯನ್ನು ಮಾಡಿಕೊಡಬೇಕು. ಏಕೆಂದರೆ, ಒಂದು ಹಣ್ಣನ್ನು ಕೊಯ್ಯುವ ಚಾಕು ಇದೆ, ಅದನ್ನು ಒಬ್ಬನ ಪ್ರಾಣ ತೆಗೆಯುವುದಕ್ಕೂ ಉಪಯೋಗಿಸಬಹುದು. ಅದನ್ನು ಬಳಸುವವನ ವಿವೇಕದ ಮೇಲೆ ನಿಂತಿದೆ.

ಮಕ್ಕಳಿಗೆ ಬೋಧನೆಯನ್ನು ಮಾಡುವ ವಿಷಯ ಎಲ್ಲಾ ವಯಸ್ಸಿನವರಿಗೂ ಒಂದೇ ಆಗಿರುವುದಿಲ್ಲ. ಅದು ವಿಭಿನ್ನವಾಗಿರುತ್ತದೆ, ಕಾರಣ ಅವರವರ ವಯಸ್ಸಿಗನುಗುಣವಾದ ಗ್ರಹಣ ಸಾಮರ್ಥ್ಯವಿರುತ್ತದೆ.

ಹೀಗೆಯೇ ಕಾಲ, ದೇಶ, ಸನ್ನಿವೇಶ, ವ್ಯಕ್ತಿ, ಲಿಂಗ, ಶಕ್ತಿ, ಸಾಮರ್ಥ್ಯ, ವಯಸ್ಸು, ಪ್ರಕೃತಿ, ಪ್ರವೃತ್ತಿ, ಆಸಕ್ತಿ, ಇತ್ಯಾದಿಗಳನ್ನು ಗಮನಿಸಿ ಅವರವರಿಗುಚಿತವಾದ ವಿದ್ಯೆಯನ್ನು ನೀಡಿ ಕಾಲ ಕಾಲಕ್ಕೆ ಗಮನಿಸುತ್ತಾ ಎಲ್ಲರನ್ನೂ ಸರಿಯಾಗಿ ಬೆಳೆಸುವುದೇ ನಿಜವಾದ ಶಿಕ್ಷಣ. ಶಿಕ್ಷಣ ಎಂದರೆ, ವಿದ್ಯಾಪ್ರದಾನ.

ಸನಾತನಾರ್ಯ ಭಾರತೀಯ ಮಹರ್ಷಿಗಳು ತಂದುಕೊಟ್ಟಂತಹ ಶಿಕ್ಷಣ ಪದ್ಧತಿಯು ಎಲ್ಲರನ್ನೂ ಶಾಂತಿಸೌಖ್ಯಾನಂದದ ನೆಲೆಯಾದ ಆತ್ಮಸಾಕ್ಷಾತ್ಕಾರಕ್ಕೆ ಕೊಂಡೊಯ್ಯುವುದೇ ಆಗಿದೆ ಎಂದು ಶ್ರೀರಂಗ ಮಹಾಗುರುಗಳು ಹೇಳಿದ ಮಾತುಗಳನ್ನು ಸ್ಮರಿಸುತ್ತಾ ಅತ್ತಕಡೆ ನಮ್ಮ ಶಿಕ್ಷಣ ಪದ್ಧತಿಯು ಸಾಗಲಿ ಎಂದು ಆಶಿಸೋಣ. 

ಸೂಚನೆ:  22/08/2019 ರಂದು ಈ ಲೇಖನ ವಿಜಯವಾಣಿ ಮನೋಲ್ಲಾಸ ಅಂಕಣದಲ್ಲಿ ಪ್ರಕಟವಾಗಿದೆ.

ஶ்ரீரங்கமஹாகுரு - 30 (Sriranga Mahaguru - 30)

ஶ்ரீகுருவின் கண்ணோட்டம் – 19 

இவர்களுக்கு ஏன் பீடமும் நமஸ்காரமும் ?
===========================================================

மூலம்: திரு. வரததேசிகாசார்யர்
தமிழாக்கம்: திருமதி வனஜா



ஆன்மீக பெரியோரையும் மகான்களையும் நாம் உயர்ந்த இருக்கையில் அமரச்செய்து  வணங்கி  உபதேசம் பெறுகிறோம். இப்பழக்கத்தை சிலர் இவ்வாறு மறுக்கின்றனர்.    
     
1. ஆன்மீக பெரியோருக்கு நம்மைவிட அதிகமான விஷயங்கள் தெரிந்திருக்கலாம். ஞானிகளாகவும் இருக்கலாம்.  எனினும் அவர்களும் நம்போன்ற மானிடர்தானே? குத்தினால் அவர்கள் உடலிலிருந்து வெளிவருவதும் உதிரம் தானே? பாலல்லவே? 
     
அவர்கள் தம் சீடர்களுடன் நட்புடன் பழகி தாங்கள் அறிந்தவற்றை பகிர்தல் வேண்டும். தான் பெரியவனென்ற அகந்தையை துறந்து சீடர்களுடன் சமமான இருக்கையில் அமர வேண்டும். இவர்களுக்கு  சீடர்களை விட உயரமான இருக்கை ஏன்? என்பது முதல் கேள்வி.     

2. அனைவரிலும் பெரியவன் இறைவன் அல்லவா? அவனை  மட்டும் வணங்குவோம்.  பெரியவர்களை ஏன் வணங்க வேண்டும்? என்பது இரண்டாவது கேள்வி.      
        
இவற்றில் முதல் மறுப்பு மிகவும் சாதாரணமானது. அமர்வதற்கு நிறைய இருக்கைகள் இல்லாத பொழுது ஆசார்யனும் சீடர்களுடன்  வெளிப்பார்வையில் சமமான இருக்கையில் அமரக்கூடும். ஆயின் உண்மையில் அவர் எல்லோரையும்விட  உயர்ந்த ஞானஇருக்கையிலேயே அமர்ந்திருக்கிறார். ஞானம் அனைத்திலும் சிறப்பானதால் அதனை ப்ரதிபலிக்கும் ஆசார்யருக்கும் உயர்ந்த இருக்கையை அளிப்பதே சரியாகும்.  அதுவே ஆசார்யர் சீடர் இருவருக்குமே மதிப்பளிக்கும். சிறப்பான மெய்யறிவு, அதனை அடைய வேண்டுமென்ற தூய்மையான மனம் இவையிரண்டிற்கும்  தகுதியான இருக்கை அளித்து  கௌரவிக்க வேண்டும். ஞானமுள்ளவனுடைய  தகுதி ஞானமற்றவனுடைய  தகுதியைவிட  உண்மையிலேயே மேலானது. ஆசார்யன் இறைவனின் வடிவே ஆகின்றான் என்று ஸ்ரீசங்கர பகவத்பாதர் கூறுகின்றார். வயது, அனுபவங்களில் முதிர்ந்தவர்களுக்கும் கூட மேலான இருக்கையே அளித்தல் வேண்டும்.

இரண்டாவது மறுப்பிற்கு  சிறிது ஆய்வு தேவைபடுகிறது. இறைவன் எல்லோரையும்விட உயர்ந்தவன். எல்லா ஆசார்யர்களுக்ககும் மூத்த ஆசார்யன் என்பதில் ஐயமில்லை.

ஆயின் அத்துணை சிறப்பான  இடத்திற்கு தம் வணக்கத்தை செலுத்தும் தகுதி இல்லாதவர்கள் தாமே நேரடியாக அர்ப்பணித்தால் அது தன் இலக்கை அடைவதில்லை.  ஆசார்யனுக்கு அர்ப்பணித்தால் அவர் அதனை இறைவனிடம் சேர்த்து அவனுடைய அருள்ஆசியை சீடன்பால் பெருகவைக்கிறார். எனவே பாமர மக்களுக்கு இத்தகையதோர்  நடுவர் தேவை.

வணக்கத்தை  நேரடியாக இறைவனுக்கு அர்ப்பணிக்க வல்லவர்கள் அரிது. அத்தகையவர்களுக்கு இடையில் ஒருவரும் தேவையில்லை. ஆயினும் அவர்கள் இறைவன் எல்லோருள்ளும் உறைந்திருப்பதை உணர்ந்து பெரியோரையும் மெய்யடியார்களையும் வணங்கி  உலக வழக்கத்தை காப்பாற்றுகிறார்கள். வணங்குவது உள்உறையும் கோவிந்தனையன்றி மனிதனையல்ல.

Sunday, August 18, 2019

ஶ்ரீரங்கமஹாகுரு - 20 (Sriranga Mahaguru - 20)

ஶ்ரீகுருவின் கண்ணோட்டம் – 9

மனித நேயம்
===========================================================

மூலம்: திரு. சாயாபதி தமிழாக்கம்
தமிழாக்கம்: திருமதி வனஜா



அவனுக்கு 'மனிதநேயமே இல்லை. மனித தன்மையே அற்ற மிருகம் அவன்' எனும் பேச்சுக்களை நாம் தினந்தோறும் கேட்கிறோம். நம்மை சூழ்ந்துள்ள சமூகத்தை கெடுக்கும் வகையில் செயல்படுவதை காணும்போது கடுங்கோபத்தில் உதிர்க்கும் சொற்கள் இவை. மனிதனிடம் இயற்கையாக உள்ள கருணை, பாசம், கொடை முதலியவற்றை மனிததன்மை என்று தீர்மானிக்கிறோம். ஆனால் ஆராய்ந்து பார்க்கையில் இன்பதுன்பங்களில் பங்கேற்பதும், பகிர்தலும் மனிதனுக்கு மட்டுமே உரியதல்ல. காகம் ஒன்று வலியால் துடிக்கும்போது உதவிக்காக அதை சுற்றியும் கூடி துயரத்தில் பங்கேற்கும் காக்கை கூட்டத்தையே காண்கிறோம். உயிரை பணயமிட்டு தன் இனத்தை காக்கும் யானையின் தியாகம், நாய், குதிரை முதலிய வளர்ப்பு பிராணிகள் தன் எஜமானனிடம் காட்டும் மனபூர்வமான 
நெருக்கம் முதலியவை சாமானிய மனிதனிடமும் காணுவது அரிதாக உள்ளது.

நாம் சிறப்பானது என்று கருதும் குணங்களை மிருகங்களிடமும் இயல்பாக காணும்போது அதனை ’மனிதநேயம்’-மனிதனின் சிறப்புகுணம் என்று எவ்வாறு கூற இயலும்?

அவ்வாறெனில் மிருகங்களிலிருந்து வேறுபட்டு மனிதனிடம் மட்டுமே உள்ள சிறப்புதான் என்ன?
இயற்கையோடு இணைந்து உணவு, இருப்பிடம், இனப்பெருக்கம் என்று வாழும் கலை மனிதனைப்போல் விலங்குகளுக்கும் உள்ளது.
ஆனால், வாழ்க்கையில் மறைந்து உள்நின்று வழிநடத்தும் ஒளியின் அறிவை அடையும் மனம் மிருகங்களிடம் காணக்கிடைப்பதில்லை. அதை தவிர மற்ற எல்லா கலைகளும், விசித்திரங்களும் விலங்குகளின் வாழ்வில் ஆச்சர்யமூட்டும் வகையில் உள்ளன.

வாழ்க்கையில் வெளியில் தெரியாமல் மறைந்திருந்து புலன்கள், மனம், புத்தி இவற்றை வழிநடத்தும் அந்தராத்மாவை அறிவதே மனிதனை விலங்குகளைவிட மேல்நிலைக்கு உயர்த்திய சாதனை. அதுவே மனிதனுக்கு மனிதநேயத்தை தரும். அந்த உள்ளுணர்வை புரிந்துகொண்டால் அதன் மூலம் மனம், புத்தி, புலன்கள் பக்குவமடைந்து நற்குணங்களை உடையவனாவான். ஸத்ய தரிசனத்தினால் மலரும் அந்த நற்குணங்களின் மணமே மனிதநேயத்தின் சாரமாகும்.

Ahimsa Paramo Dharmah

Article in Kannada by: B. G. Anantha
English Rendering by: Archana Vagish




“Maa himsyaat sarva bhootani” or “Do not be violent towards anyone” is the message of the Indian Shaastras. “Cruelty” or “Himsa” denotes trouble. If one is troubled/tortured physically or mentally, tantamount to losing one’s life, such trouble also constitutes violence. Living without causing himsa to anyone is living a life of non-violence or “Ahimsa”. It is the opinion of the Maharshis that Ahimsa is a superior attribute of the self. Non-violence pertains not merely to humans, animals or birds but also to seemingly inert entities like trees, plants, creepers, stones, twigs and mud. Because, they are also “Jeevas” or living entities as per the vision of the shaastras. At this point, one is naturally faced with a question of how one should then lead his or her life? As there is a popular saying “Jeevo Jeevasya Jeevanam” -which means one life lives by feeding on another. That being the case, is it possible for one to lead a life without causing trouble to another Jeeva? This predicament was not unknown to the Maharshis. The very fact that they advocated a non-violent life indicates that there is a deep scientific thought behind this.

An act of Violence is preceded by another act of violence. Let us assume a man kills an animal. Going forward, that animal takes birth as man and the man is born as an animal in the future. According to our shaastras, it is said that the animal which was the victim of a violent act by man switches roles with that man in a future life and carries out the exact same violence on man who is now an animal. Also, the act of violence creates an abominable wave of fear. This is caused by the suffering of the animal who is the victim of this act of violence. A similar wave manifests in the mind of man who administers this violence on the animal. Even if this wave exists just for a few moments, it perturbs the peace within that man thereby causing any feelings of happiness and peace to vanish momentarily. Hence Yoga shastras advise those who practice meditation to refrain from acts of violence.

But we saw earlier that food is also procured by acts of violence. However if the intention is to procure only the necessary amount of food, then the act does not cause much harm. Moreover, it is advised to choose that food which necessitates the least amount of violence. Hence in order to purify food, which has this inherent shortcoming, one offers food to the Lord before consuming it; thereupon he ingests the food with the remembrance of the Lord. In summary, food is a medium of accumulating sins. Hence it is advised to consume only the minimum necessary amount of food when one feels hungry. Food denotes life whether it is a piece of meat or is in the form of plants or seeds.

Furthermore, that when a self-realized Yogi consumes food, he or she has the power to directly offer the food to the very supreme lord himself, thereby liberating the lives of all those who were inconvenienced to procure that food- thus declare the Yogis. Hence there is no act of violence here. 

Note: The Kannada version of this article can be viewed at AYVM blogs

Saturday, August 17, 2019

ನಚಿಕೇತನು ಕೇಳಿದ ಮೊದಲ ವರ (Nachikethanu kelida modala vara)

ಲೇಖಕರು: ಡಾ|| ಕೆ.ಎಸ್. ಕಣ್ಣನ್, 
ಡಿಲಿಟ್. ಪೀಠ-ಪ್ರಾಧ್ಯಾಪಕರು, ಐಐಟಿ, ಚೆನ್ನೈ.


ಕಠೋಪನಿಷತ್ತಿನಲ್ಲಿ ನಚಿಕೇತನ ಕಥೆ ಬರುತ್ತದೆ. ಅಲ್ಲಿ ತಂದೆ ವಾಜಶ್ರವಸನು ಪುತ್ರನಾದ ನಚಿಕೇತನನ್ನು ಯಮನ ಬಳಿಗೆ ಕಳುಹಿಸಿಕೊಡುತ್ತಾನಷ್ಟೆ. ಯಮನನ್ನು ಭೇಟಿಯಗಲು ಮೂರುದಿನ ಗಳಿಂದ ಕಾದಿದ್ದ ಆ ಬಾಲಕನಲ್ಲಿಗೆ ಬಂದ ಯಮನು ಆತನಲ್ಲಿ ಕ್ಷಮೆ ಯಾಚಿಸಿದನು! “ಅಯ್ಯಾ, ನಮಸ್ಕಾರಕ್ಕೆ ಯೋಗ್ಯನಾದ ಅತಿಥಿಯೇ! ಮೂರು ರಾತ್ರಿ ನಿರಾಹಾರನಾಗಿ ನನ್ನ ಮನೆಯಲ್ಲಿ ಉಳಿದುಕೊಂಡಿದ್ದೀಯೆ. ನಿನಗೆ ನಮಃ. ಮೂರು ರಾತ್ರಿಗಳಿಗೆ ಪ್ರತಿಯಾಗಿ ಮೂರು ವರಗಳನ್ನು ಕೇಳಿಕೋ” – ಎಂದನು.

“ನನ್ನ ತಂದೆಗೆ ಕಳವಳ ಹೋಗಲಿ. ಆತನಿಗೆ ಒಳ್ಳೆಯ ಮನಸ್ಸು ಉಂಟಾಗಲಿ. ನನ್ನ ಮೇಲಿನ ಕೋಪವು ಹೋಗಲಿ. ನಾನು ಹಿಂದಿರುಗಿದಾಗ ಆತನು ನನ್ನನ್ನು ಗುರುತಿಸಿ ಮಾತನಾಡಿಸುವಂತಾಗಲಿ. ಇದು ನಾ ಕೇಳುವ ಮೊದಲ ವರ” ಎಂದ ನಚಿಕೇತ. “ನಿನ್ನ ತಂದೆ ಮೊದಲಿನಂತೆಯೇ ಆಗುವನಯ್ಯ! ನಿನ್ನನ್ನು ಕಾಣುತ್ತಲೇ ಗುರುತಿಸುವನು. ಆತನ ಕೋಪವೆಲ್ಲ ಕಳೆದುಹೋಗುವುದು. ರಾತ್ರಿ ಸುಖವಾಗಿ ನಿದ್ರೆ ಮಾಡುವನು” – ಎಂದನು, ಯಮ.

“ನನಗೆ ಒಂದು ದೊಡ್ಡ ಲಾಭವಾಗಬೇಕು” – ಎಂದಲ್ಲ ನಚಿಕೇತ ಕೇಳುವುದು. ಮೊದಲು ತನ್ನ ತಂದೆಗೆ ಒಳ್ಳೆಯದಾಗಬೇಕೆಂದು: “ತಂದೆಯ ಕೋಪ-ಕಳವಳಗಳು ಕಳೆದು, ಆತ ಸುಮನಸ್ಕನಾಗಬೇಕು.” – ಎಂದು! ನಚಿಕೇತನು ಮುಂದೆ ಆತ್ಮವಿದ್ಯೆಯನ್ನೇ ಕೇಳಿ ಪಡೆಯುವನಾದರೂ ಅದಕ್ಕಾಗಿ ಐಹಿಕವಾದ ಸುಖವನ್ನೆಲ್ಲ ಬಿಡಲಿಲ್ಲ. ತಾನು ಮಾತ್ರವಲ್ಲ, ತನಗೆ ಸೇರಿದವರೂ ಸುಖ- ನೆಮ್ಮದಿಗಳನ್ನು ಕಾಣಬೇಕೆಂಬುದು ಆತನ ಆಶಯ!

“ಸದುದ್ದೇಶದಿಂದ ತಾನಿತ್ತ ಸಲಹೆಯನ್ನು ತಿರಸ್ಕರಿಸಿದನಲ್ಲವೆ, ತನ್ನ ತಂದೆ?  ಅವನೂ ಪರಿಭವಪಡಲಿ” – ಎಂದು

ಭಾವಿಸುವವನಲ್ಲ, ನಚಿಕೇತ. ತಂದೆಯು ತನ್ನ ವರ್ತನೆಗೆ ತಾನೇ ಪಶ್ಚಾತ್ತಾಪವನ್ನು ಪಡುವವನು – ಎಂಬುದನ್ನೂ ಆತ ಬಲ್ಲ.

ನಾವು ಮತ್ತು ನಮ್ಮವರು - ಎಲ್ಲ ಸೇರಿ ಒಂದು ದೊಡ್ಡ ವೃಕ್ಷದಂತೆ. “ವೃಕ್ಷದ ಯಾವುದೇ ಶಾಖೆಗೆ ಖಾಯಿಲೆ ತಗುಲಿದರೂ ಅದು ಮಿಕ್ಕ ಶಾಖೆಗಳ ಮೇಲೂ ಪರಿಣಾಮ ಬೀರುವಂತಹುದೇ” – ಎಂಬ ತತ್ತ್ವವನ್ನು ಶ್ರೀರಂಗಮಹಾಗುರುಗಳು ಪ್ರತಿಪಾದಿಸುತ್ತಿದ್ದರು.

ಧನಸಂಪಾದನೆ-ಕೀರ್ತಿಸಂಪಾದನೆಗಳಿಗಿಂತ ಮನಸ್ಸಿನ ನೆಮ್ಮದಿಯ ಸಂಪಾದನೆ ಮುಖ್ಯ. “ತನ್ನ ತಂದೆಗೆ ನೆಮ್ಮದಿಯೊದಗಲಿ” ಎಂದೇ ನಚಿಕೇತನು ಕೇಳಿಕೊಳ್ಳುವುದು. ಜೀವನದಲ್ಲಿ ತಾನು-ತನ್ನವರೆಂಬ ಸ್ವಸುಖ-ಪರಸುಖಗಳೂ ಅವಶ್ಯ. ಇದು ಇಹ-ಸುಖ. ಇಷ್ಟಕ್ಕೇ ನಿಲ್ಲುವುದೂ ಅಲ್ಲ. ಇಹಸುಖದ ಜೊತೆಗೆ ಪರಸುಖವೂ ಮುಖ್ಯ – ಎಂಬುದನ್ನು ಮನಗಾಣಿಸುತ್ತದೆ, ಈ ಉಪನಿಷತ್ತಿನ ಈ ಸರಳ-ಸುಭಗ ಪ್ರಸಂಗ : ಪರವು ಪ್ರಧಾನ, ಆದರೆ ಇಹವು ಅಮುಖ್ಯವಲ್ಲ.

ಸೂಚನೆ: 17/08/2019 ರಂದು ಈ ಲೇಖನ ಪ್ರಜಾ ವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ. 

    ஶ்ரீரங்கமஹாகுரு - 19 (Sriranga Mahaguru - 19)


    ஶ்ரீகுருவின் கண்ணோட்டம் – 8

    அது அவன் இயற்கை குணமே
    ===========================================================
    மூலம்: ஶ்ரீரங்கப்ரியர்
    தமிழாக்கம்: திருமதி ஜானகி


    "அம்மா இனி உங்கள் பிள்ளைக்கு நீங்களே புத்தி புகட்ட வேண்டும். அவனுடைய குறும்புகளை தடுக்க இனி எங்களுக்கு சக்தி இல்லை. நாங்கள் சொல்வதை அவன் கேட்பதே இல்லை." கோகுலத்தில் பாலக்ருஷ்ணனின் தாயிடம் கோபிகைகள் புகார் அளித்தனர்.
    “செய்த குறும்புகளை விவரமாக கூறினால் அன்றோ ஆராய்ந்து தண்டனை வழங்கலாம்” என யசோதை ந்யாய மூர்த்தியின் கம்பீரத்தோடு பகர்ந்தாள்.
    "கூறாமல் கொள்ளாமல் வீட்டிற்குள் நுழைந்து அவேளைகளில் பசுக்களின் கயிற்றை அவிழ்த்து விடுகிறான். அவை பாலனைத்தையும் கன்றுகளுக்கு ஊட்டிவிடுகின்றன. பால் கறக்கச்செல்லும் எங்களுக்கு கிடைப்பது உதைதான்." கோபிகைகள் விவரித்தனர்.
    தாய் மிகுந்த கோபம்கொண்டு அத்தருணத்தில் அங்கு வந்த கண்ணனை அதட்டி "குறும்பு பயலே!
    நம் வீட்டு மானம் போகிறது. உன் இச்சைப்படி இவர்கள் வீட்டில் புகுந்து மாடுகளின் கயிற்றை அவிழ்க்கிறாயா?" என கேட்டாள்.
    “ஆம் அம்மா நான் அவ்வாறு செய்வதுண்டு” தயங்காமல் பதில் அளித்தான். மகன் தவறே செய்தாலும் உண்மையையே உரைத்ததினால் தாய் பெருமிதம் அடைந்தாள்.
    அவள் கோபமும் சிறிது தணிந்தது. “ஏனப்பா இவ்வாறு செய்கிறாய்” என வினவ "அதுவே என் இயற்கை குணம் அம்மா, நான் என்ன செய்ய" பாலக்ருஷ்ணன் புன்னகையுடன் பதிலளித்து அன்னையின் முகத்தையே உற்று நோக்கினான்.
    அப்பார்வையின் பொற்கிரணங்கள் யசோதையின் அகக்கண்களைத் திறந்து அவனுடைய சொற்களின் உட்பொருளையும் உணர்த்தின. கண்களுக்கு விருந்தான ஆனந்தமூர்த்தியில் தன்மயமாகி தியானசமாதியில் மெய்மறந்தாள்.
    நாம் அனைவருமே (ஜீவன்)பசுக்களே. இறைவன் நம் உலகவாழ்வின் பாசங்களை(கயிற்றை) அவிழ்த்து பேருதவிபுரிகிறான். புண்யம்-புருஷார்த்தம்-கீர்த்தி எதையும் வேண்டாதவன். ஆத்ம த்ருப்தன். எந்த லாபமும் இதனால் அவனுக்கு இல்லை. ஆயினும் ஏன் இந்த பரமோபகாரத்தை செய்கிறானெனில் அவன் குணமே அவ்வாறானது என இத்தத்துவத்தை குருவாதிராஜர் விவரிக்கிறார்.
    இக்கருணையையே ஓர் ஹரிதாசர் “பக்தப்ரியனான உனக்கு கால வரையறை உண்டோ?” என போற்றுகிறார்.

    ಸಹವಾಸ ದೋಷ -ಶುಕೋಪದೇಶ (Sahavasa dosha- shukopadesha)

    ಲೇಖಕರು: ರಾಜಗೋಪಾಲನ್. ಕೆ .ಎಸ್.  



    ಒಂದು ಗಿಣಿಗೆ ಎರಡು ಮರಿಗಳಿದ್ದವು. ಒಮ್ಮೆ ಒಬ್ಬ ಬೇಟೆಗಾರ ಆ ಮರಿಗಳನ್ನು ಹಿಡಿದುಕೊಂಡು ರಸ್ತೆಯಲ್ಲಿ ಹೋಗುತ್ತಿದ್ದ. ಒಂದು ಗಿಣಿಮರಿ ಹೇಗೋ ತಪ್ಪಿಸಿಕೊಂಡು ಒಬ್ಬ ಋಷಿಯ ಆಶ್ರಮ ಸೇರಿತು. ಅಲ್ಲಿಯೇ ಬೆಳೆಯಿತು. ಮತ್ತೊಂದು ಮರಿಯನ್ನು, ಬೇಡನು ಕಟುಕನೊಬ್ಬನಿಗೆ ಮಾರಿದ. ಆ ಗಿಣಿಮರಿ ಅಲ್ಲಿಯೇ ಬೆಳೆಯಿತು. ಒಮ್ಮೆ ದಾರಿಹೋಕನೊಬ್ಬ ಆ ಕಟುಕನ ಮನೆ ಮುಂದೆ ಹಾದುಹೋಗುತ್ತಿದ್ದ. ಅಲ್ಲಿಯೇ ಇದ್ದ ಗಿಣಿ ಇವನನ್ನು ನೋಡಿ, “ಯಾರೋ ನೀನು?” ಎಂದು ಮಾತು ಆರಂಭಿಸಿ ಕಟುವಾಗಿ ಮಾತನಾಡಹತ್ತಿತು. ದಾರಿಹೋಕ ಮುಂದೆ ಸಾಗಿ ಋಷ್ಯಾಶ್ರಮದ ಬಳಿ ಬಂದನು. ಅಲ್ಲಿದ್ದ ಗಿಣಿ, “ನಮಸ್ಕಾರ, ಬನ್ನಿ, ಕುಶಲವೇ?” ಇತ್ಯಾದಿ ಮೃದುಮಧುರ ಮಾತುಗಳನ್ನಾಡಿತು. ಒಂದೇ ತಾಯಿಯ ಮರಿಗಳಾದರೂ ಎರಡೂ ಗಿಳಿಗಳ ಮಾತಿನ ಶೈಲಿಯೇ ಬೇರೆಬೇರೆಯಾಗಿತ್ತು. ಸಹವಾಸದ ದೆಸೆಯಿಂದಾಗಿ ಸಣ್ಣಮಕ್ಕಳು ಹೇಗೆ ಗುಣದೋಷಗಳನ್ನು ಬೆಳೆಸಿಕೊಳ್ಳುತ್ತಾರೆಂದು ಈ ಕಥೆ ಸುಂದರವಾಗಿ ನಿರೂಪಿಸುತ್ತದೆ.

    ಶ್ರೀರಂಗಮಹಾಗುರುಗಳು ಹೀಗೆ ಎಚ್ಚರಿಸುತ್ತಿದ್ದರು -”ಬುದ್ಧಿ ಎನ್ನುವುದು ಒಂದು ಲತೆಯಂತೆ. ಅದನ್ನು ನಾವು ಹೇಗೆ ಹಬ್ಬಿಸಿದರೆ ಹಾಗೆ ಬೆಳೆಯುತ್ತದೆ….ಮೊಟ್ಟಮೊದಲಿಗೆ ಮಕ್ಕಳ ಮನಸ್ಸನ್ನು ಯಾವುದರ ಮೇಲೆ ಹಬ್ಬಿಸಬೇಕು ಎನ್ನುವುದರ ಬಗ್ಗೆ ಸರಿಯಾದ ಶಿಕ್ಷಣ ಆರ್ಯ ಗೃಹಿಣಿಯರಿಗೆ ಇಲ್ಲ…..”

    ನಮ್ಮ ರಾಷ್ಟ್ರದಲ್ಲಿ, ಋಷಿಗಳು ಭಗವಂತನನ್ನೇ ಜೀವನದ ಕೇಂದ್ರವಾಗಿಟ್ಟುಕೊಂಡು ಸಂಸ್ಕೃತಿ ನಾಗರಿಕತೆಗಳನ್ನು ಬೆಳೆಸಿದ ಕಾಲ ಒಂದಿತ್ತು. ಆಗ ಅದಕ್ಕೆ ತಕ್ಕಂತೆ ಹಿರಿಯರ ವ್ಯವಹಾರ ಇರುತ್ತಿತ್ತು. ಮಕ್ಕಳು ಅವರನ್ನು ನೋಡಿಯೇ ಸುಸಂಸ್ಕಾರಸಂಪನ್ನರಾಗುತ್ತಿದ್ದರು. ಮೊನ್ನೆ ಮೊನ್ನೆಯವರೆಗೂ ನಮ್ಮ ದೇಶದಲ್ಲಿ, ಇದ್ದುದರಲ್ಲಿ ತೃಪ್ತಿಪಡುವ ಎಷ್ಟೋ ಮಂದಿ ಇದ್ದರು. ಇದಕ್ಕೊಂದು ನಿದರ್ಶನವನ್ನು ಕೊಡಲೇಬೇಕು. ನಮ್ಮ ಮನೆಗೊಬ್ಬ ಪುರೋಹಿತರು ಬರುತ್ತಿದ್ದರು. ಅವರು ಕಾರ್ಯಕ್ರಮ ನಡೆಸಿಕೊಟ್ಟ ತರುವಾಯ ದಕ್ಷಿಣೆ ಎಷ್ಟು ಕೊಡಬೇಕು? ಎಂದು ಪ್ರಸ್ತಾಪ ಮಾಡಿದೊಡನೆಯೇ, “ನಿಮಗನ್ನಿಸಿದನ್ನು ಕೊಡಿ; ದೇವರು ನನಗೆ ತೃಪ್ತಿಯನ್ನು ಕೊಟ್ಟಿದ್ದಾನೆ” ಎನ್ನುತ್ತಿದ್ದರು. ಇಷ್ಟಾಗಿ ಅವರೇನೂ ಶ್ರೀಮಂತರಲ್ಲ; ಒಬ್ಬ ಬಡ ಮೇಷ್ಟ್ರರಷ್ಟೇ! ಇಂತಹ ಕೆಲವೇ ವ್ಯಕ್ತಿಗಳಾದರೂ ಮನೆಯಲ್ಲಿ, ಸಮಾಜದಲ್ಲಿ ನಡೆದಾಡುತ್ತಿದ್ದರೆ ಮಕ್ಕಳೂ ಅವರನ್ನೇ ಅನುಕರಿಸುವ ಸಾಧ್ಯತೆಗಳು ಹೆಚ್ಚು.

    ಇಂದು ಶಾಲಾಕಾಲೇಜು ಪಠ್ಯಗಳಲ್ಲಿ ನಮ್ಮ ದೇಶದ ಹಿರಿಮೆಯನ್ನು ಸಾರುವ ಪಾಠಗಳು ಹೆಚ್ಚಾಗಬೇಕು; ಪರೋಪಕಾರಿಗಳ, ನಿಃಸ್ವಾರ್ಥಿಗಳ, ದೇಶಪ್ರೇಮಿಗಳ ಕಥೆಗಳು ಮತ್ತಷ್ಟು ಸೇರ್ಪಡೆಯಾಗಬೇಕು. ಅನೇಕ ತಂದೆತಾಯಂದಿರಿಗೆ, ತಮ್ಮ ಮಕ್ಕಳು ಸಮಾಜದಲ್ಲಿ ಯಾರಿಗೂ ಕಮ್ಮಿ ಇರಬಾರದೆಂಬ ಧಾವಂತವಿರುವುದು ಸಹಜವೇ. ಹೀಗಾಗಿ ಟ್ಯೂಷನ್, ಸ್ಕೂಲು, ಹೋಮ್  ವರ್ಕಗಳ ಚಕ್ರವೊಂದೇ ಸುತ್ತುತ್ತಿರುವುದು! ಆದರೆ ಭಾರತದ ಸಂಸ್ಕೃತಿ ವೈಭವವನ್ನು ಮತ್ತೆ ತರಬೇಕೆನ್ನುವುದಾದರೆ,  ಲೌಕಿಕ ಜೀವನವನ್ನೂ ಕಡೆಗಣಿಸದೆ, ಭಗವಂತನನ್ನೂ ಮರೆಯದೆ ನೆಮ್ಮದಿಯಿಂದ ಜೀವನ ಮಾಡುವ ವಿಧಾನದ ಅರಿವುಂಟಾಗುವಂತೆ ಗೃಹಿಣೀ ಗೃಹಸ್ಥರಿಗೆ ಶಿಕ್ಷಣ ಕೊಡಬೇಕಾಗಿದೆ; ಪಠ್ಯಪುಸ್ತಕಗಳ ಸುಧಾರಣೆಯಾಗಬೇಕಾಗಿದೆ.  

    ಸೂಚನೆ:  17/08/2019 ರಂದು ಈ ಲೇಖನ ವಿಜಯವಾಣಿ ಮನೋಲ್ಲಾಸ ಅಂಕಣದಲ್ಲಿ ಪ್ರಕಟವಾಗಿದೆ.

    Thursday, August 15, 2019

    ஶ்ரீரங்கமஹாகுரு - 18 (Sriranga Mahaguru - 18)

    ஶ்ரீகுருவின் கண்ணோட்டம் – 7

    உணவு ஒருவருக்கு, மனநிறைவு மற்றொருவருக்கோ?
    =================================================

    மூலம்: ஶ்ரீரங்கப்ரியர்
    தமிழாக்கம்: திருமதி 
    வனஜா


    கேள்வி: ச்ராத்தத்தில்(தெவசம்) உணவருந்த தகுதியுள்ள ஞானிகளை அழைத்து உணவளிப்பது தவறில்லை. உண்டவர் த்ருப்தி ஆயிற்றென்று தன்வாயால் கூறுகிறார். இதனை நம்பலாம். ஆனால் உடலை விட்டு பிரிந்து சென்றுள்ள ஏதோ ஒரு உயிரை குறித்து திதி செய்கிறோம். அந்த ஜீவனுக்கு இதனால் எப்படி நிறைவுண்டாகும்?

    ஸ்ரீகுரு: பக்தியுடன் மனம்ஒன்றி ஆன்றோருக்கு முறைபடி உணவளித்தால் அவரால் அதனை அந்த ஜீவனிடம் சேர்பிக்க முடியும்.

    கேள்வி: அது எப்படி இயலும்?அந்த ஜீவன் தெய்வபிறவி அடைந்திருக்கலாம், வேறு உலகங்களிலிருக்கலாம். கழுதையாகவோ, புலியாகவோ, மீன்-முதலையாகவோ பிறந்து வெளிநாடுகளிலோ, கடலிலோ இருக்கலாம். நாம் உணவளிப்பது இங்கு. அந்த ஜீவன் இருப்பது வேறெங்கோ. இங்கு பரிமாறுவது வடை, ரவை உருண்டை போன்றவை. தேவதைகளின் உணவு அமுதம். மற்ற உயிரினங்களின் உணவோ இவ்விரண்டுமன்றி வேறொன்று. எவ்வுருவத்திலோ எங்கோ
    இருக்கும் ஜீவனுக்கு இங்கு அளிக்கப்படும் உணவு எப்படித்தான் சேரும்?

    ஸ்ரீகுரு: இங்கு வானொலியில் பேசுவது 1000மைல்களுக்கு அப்பால் இருப்பவருக்கு எப்படி கேட்கிறது?

    கேள்வி: அது முடியும். அறிவியல் உள்ளது. இங்கு எழுப்பும் ஒலி அலைகளை சக்தி வாய்ந்த மின்காந்த அலைகளென்னும்(electro magnetic waves) வாகனத்தின் மூலமாக அங்கு அனுப்புகிறோம். அது எவ்வளவு தொலைவிற்கும் செல்ல முடியும். அங்குள்ள அலைபேசி கருவி மின்காந்த அலைகளை மாற்றி ஒலி அலைகளை ஈர்த்து ஒலிபரப்புகிறது.

    ஸ்ரீகுரு: அவ்வாறே இங்கு நாம் அளிக்கும் உணவை ஆன்றோர்கள் தம் தெய்வீகமான மனோதர்மமெனும் வாகனத்தின் மூலம் தொலைவிலிருக்கும் ஜீவனுக்கும் அளிக்க இயலும். 
    கேள்வி: ஆன்றோரே ஆயினும் இங்கு படைக்கப்படும் உணவை அதே வடிவில் தன் மனோதர்மத்தால் அங்கு கொண்டு செல்ல இயலுமா?

    ஸ்ரீகுரு: அதே உருவில் ஆன்றோர் எடுத்து செல்வதில்லை. அமுதமயமாக்கி பரம்பொருளுக்கும் தேவதைகளுக்கும் அர்ப்பணிக்கின்றனர். எந்த ஜீவனை குறித்து திதி செய்யப்படுகின்றதோ அவருக்கு உகந்த நிறைவையும் மகிழ்ச்சியையும் தேவதைகள் அளிக்கின்றனர். அவர்களுக்கு அத்திறமை உண்டு. அவர்கள் எங்கும் நிறைந்தவர்கள், வலிமை உடையவர்கள்.

    ಪಾರತಂತ್ರವೇ ನರಕ-ಸ್ವಾತಂತ್ರ್ಯವೇ ಸ್ವರ್ಗ (Paarathanthrave naraka - Svaathanthrave svarga)


    ಲೇಖಕರು: ತಾರೋಡಿ ಸುರೇಶ



    ಹಳ್ಳಿಯ ನಾಯಿಯೊಂದು ಪಟ್ಟಣಕ್ಕೆ ಬಂದಿತು. ದಾರಿಯಲ್ಲಿ ಶ್ರೀಮಂತನೊಬ್ಬನ ಮನೆಯ ದ್ವಾರದಲ್ಲಿ ಸುಪುಷ್ಟವಾಗಿರುವ ಸ್ವಜಾತಿಬಾಂಧವ ಗಲ್ಲವನ್ನು ನೆಲಕ್ಕೆ ಊರಿ ಆನಂದವಾಗಿ ಮಲಗಿತ್ತು. ಪರಸ್ಪರ ಸ್ನೇಹ ಬೆಳೆದು, ಕ್ಷೇಮಸಮಾಚಾರಗಳ ವಿನಿಮಯವಾಯಿತು.ತನ್ನ ಕಷ್ಟವನ್ನು ಹಳ್ಳಿಯ ಶ್ವಾನವು ತೋಡಿಕೊಂಡಿತು. ವಾಸಕ್ಕೆ ಮನೆಯಿಲ್ಲ.ಆಹಾರವಿಲ್ಲ. ಇತ್ಯಾದಿ,ಇತ್ಯಾದಿ. ಅದೇ ಶ್ರೀಮಂತ ನಾಯಿಯು ತನಗಿರುವ ಸುಖಸೌಲಭ್ಯಗಳನ್ನೆಲ್ಲಾ ಒಂದೊಂದಾಗಿ ವಿವರಿಸುತ್ತಾ ಹೋಯಿತು. ಇದನ್ನು ಕೇಳಿದ ಗ್ರಾಮಶ್ವಾನವು ತನ್ನ ದುರದೃಷ್ಟಕ್ಕೆ ನೊಂದುಕೊಳ್ಳುತ್ತಿರುವಾಗಲೇ ಅದಕ್ಕೆ ಶ್ರೀಮಂತನ ಶ್ವಾನದ ಕೊರಳಲ್ಲಿನ ಸರಪಣಿಯು ಕಾಣಿಸಿತು. “ನಿನ್ನ ಕೊರಳಲ್ಲಿರುವ ಆಭರಣ ಯಾವುದು?” ಎಂದು ಪ್ರಶ್ನಿಸಿತು. “ಅದು ಆಭರಣವಲ್ಲ, ನಾನು ಎಲ್ಲಿಯೂ ಓಡಿಹೋಗದಂತೆ ಕಟ್ಟಲು ಯಜಮಾನ ಬಳಸುವ ಸರಪಣಿ”  ಎಂದು ಶ್ರೀಮಂತ ನಾಯಿಯು ಉತ್ತರಿಸಿತು. ಮರುಕ್ಷಣದಲ್ಲಿ ಗ್ರಾಮಶ್ವಾನವು “ನಿನ್ನ ಶ್ರೀಮಂತಿಕೆಯೂ ಬೇಡ, ಸುಖವೂ ಬೇಡ, ನನ್ನಿಚ್ಛೆಯಂತೆ ಬದುಕುವ ಸ್ವಾತಂತ್ರ್ಯವನ್ನು ಮಾತ್ರ ಬಿಡಲಾರೆ” ಎಂದು ಪರಾರಿಯಾಯಿತು.

    ಸ್ವಾತಂತ್ರ್ಯ ಎಂಬ ಪದಕ್ಕೆ ‘ತನ್ನ ಯೋಜನೆ, ತನ್ನ ಕ್ರಿಯೆ.ತನ್ನ ಚಿಂತನೆ’ ಎಂಬೆಲ್ಲ ಅರ್ಥಗಳಿವೆ.ಸ್ವಾತಂತ್ರ್ಯವು ಮನುಷ್ಯನ ಮೂಲಭೂತ ಅಗತ್ಯ. ಪಾರತಂತ್ರ್ಯವು ನರಕ. ತನ್ನ ಅಪೇಕ್ಷೆಗನುಗುಣವಾಗಿ ಬಾಳಲು ಮುಕ್ತ ಅವಕಾಶ ಬೇಕು. ಮೃಗಾಲಯದಲ್ಲಿರುವ ಪ್ರಾಣಿಗಳಿಗೂ,  ಕಾಡಿನಲ್ಲಿ ಸ್ವಚ್ಛಂದವಾಗಿ ವಿಹರಿಸುವ ಪ್ರಾಣಿಗಳಿಗೂ ಎಷ್ಟೊಂದು ವ್ಯತ್ಯಾಸವಿದೆ. ಕಟ್ಟುಪಾಡುಗಳು ಇಲ್ಲದಿದ್ದರೆ ಜೀವನವೇ ನಡೆಯದು. ರಾಷ್ತ್ರಹಿತಕ್ಕೆ ವ್ಯಕ್ತಿಯ ಸ್ವಾತಂತ್ರ್ಯ ಅಧೀನವಾಗಿರಬೇಕು. ‘ರಾಷ್ಟ್ರ ಎಂಬುದೇ ಇರಬಾರದು, ವಿಶ್ವವೇ ಒಂದು ದೇಶ’- ಹೀಗೆಲ್ಲ ವಾದವಿವಾದಗಳನ್ನು ನೋಡುತ್ತೇವೆ. ಆದರೆ ಸ್ವಾತಂತ್ರ್ಯದ ಅರ್ಥವನ್ನು, ಅದರ ಸಹಜತೆಯನ್ನು, ನಮ್ಮ ಬಾಳಿನಲ್ಲಿಯೇ ಹುಡುಕಬೇಕಷ್ಟೆ. ಮಾವಿನ ಬೀಜವೊಂದನ್ನು ನೆಟ್ಟರೆ ಅದು ಮೊಳಕೆ, ಕಾಂಡವಾಗಿ ಬೆಳೆಯುತ್ತಾ ಕೊನೆಯಲ್ಲಿ ಹಣ್ಣಿನೊಳಗೆ ಪುನಃ ಕಾಣಿಸಿಕೊಂಡು ತನ್ನ ವಿಕಾಸವನ್ನು ಮುಗಿಸಿಕೊಳ್ಳುತ್ತದೆ. ಈ ಬೆಳವಣಿಗೆಯ ಯೋಜನೆ ಬೀಜದಲ್ಲಿಯೇ ಇತ್ತು. ಮಾವನ್ನು ನೆಟ್ಟರೆ ಹಲಸಾಗಲೀ, ತೆಂಗಾಗಲೀ ಬೆಳೆಯುವುದಿಲ್ಲ. ಮಾವಿನ ಬೀಜದಿಂದ ಹೊರಟಿದ್ದು ಪುನಃ ಮಾವಿನ ಬೀಜದಲ್ಲಿಯೇ ನಿಂತಿತು. ಹಾಗೆ ಪೂರ್ಣವಿಕಾಸಕ್ಕೆ ಅವಕಾಶ ಮಾಡಿಕೊಡುವುದೇ ಸ್ವಾತಂತ್ರ್ಯ. ಈ ಸ್ವಾತಂತ್ರ್ಯ ಬೀಜಕ್ಕೆ ನಿಸರ್ಗದತ್ತವಾದುದು, ಕಲ್ಪಿತವಲ್ಲ. ಇಲ್ಲಿ ಸ್ವ ಎಂದರೆ ಅದು ಬೀಜವೇ. ಅದರ ನಿಸರ್ಗಸಹಜವಾದ ಆಶಯದಂತೆ ಬೆಳೆಯುವುದೇ ಅದರ ಯೋಜನೆ ಅಥವಾ ತಂತ್ರ. ಅದಕ್ಕೆ ಮುಕ್ತ ಅವಕಾಶವಿರುವುದೇ ಸ್ವಾತಂತ್ರ್ಯ. 

    ನಮ್ಮ ಜೀವನಕ್ಕೂ ಈ ಸಹಜತೆಯು ಅನ್ವಯಿಸುತ್ತದೆ. ಮಹರ್ಷಿಗಳಿಗೆ ಅವರ ಕಠೋರ ತಪಸ್ಸಿನಿಂದ ಅನ್ವೇಷಿಸಿದಾಗ ಗೋಚರವಾದದ್ದು ಬಾಳಮೂಲದಲ್ಲಿರುವ ಜ್ಯೋತೀರೂಪವಾದ ಒಂದು ಶಕ್ತಿ. ಶ್ರೀಕೃಷ್ಣನೂ “ಅಹಂ ಬೀಜಪ್ರದಃ ಪಿತಾ” ಎಂದು ಹೇಳುತ್ತಾನೆ. ಆ ಜ್ಯೋತಿರ್ಬೀಜದಿಂದ ಅರಳಿದ ಕಿಡಿಗಳೇ ಜೀವಿಗಳು. ಜೀವವು ವಿಕಾಸವಾಗುತ್ತಾ ಕೊನೆಗೆ ಜ್ಯೋತಿರ್ಬೀಜದಲ್ಲಿಯೇ ಲಯವಾಗಬೇಕು. ಇದೇ ಅದರ ಯೋಜನೆ. ಹಾಗಾಗುವಂತೆ ಬಾಳನ್ನು ನಡೆಸುವ ಮುಕ್ತ ಅವಕಾಶವಿದ್ದಲ್ಲಿ ಅದನ್ನು ಸ್ವಾತಂತ್ರ್ಯವೆಂದು ಕರೆಯಬಹುದು. ಇಂತಹ ಸ್ವಾತಂತ್ರ್ಯ ಮಾನವನಿಗೆ ನಿಸರ್ಗಸಹಜವಾದದ್ದೇ. ಮನೋಕಲ್ಪಿತವಾದದ್ದಲ್ಲ. ತನ್ನತನದ ಒಂದು ಸ್ಥಿತಿ, ಅದನ್ನು ಕಾಪಾಡಿಕೊಳ್ಳುವ ವಿಧಿ-ನಿಷೇಧಗಳು ಮೌಲಿಕವಾಗಿ ಧರ್ಮವಾದರೆ, ಆ ಧರ್ಮಕ್ಕೆ ಅಡ್ಡಿಬಾರದಂತೆ ಅರ್ಥ ಮತ್ತು ಕಾಮಗಳಿರಬೇಕು. ಆಗ ಜೀವನವು ಸಹಜವಾಗಿಯೇ ಮೋಕ್ಷದಲ್ಲಿ ನಿಲ್ಲುತ್ತದೆ. ಇವೇ ‘ಜೀವ’ದ ಸಹಜ ಬಯಕೆಗಳು, ಈ ನಾಲ್ಕನ್ನು ಸಾಧಿಸಲು ಸಾಧ್ಯವಾಗುವಂತೆ, ದೇಹವನ್ನೂ, ಅಂತಹ ದೇಹಕ್ಕೆ ಪೋಷಕವಾದ ಗೇಹವನ್ನೂ, ಮತ್ತು ಇದಕ್ಕೆ ಪೂರಕವಾದ ರಾಷ್ಟ್ರವನ್ನೂ, ವಿಶ್ವವನ್ನೂ ನಿರ್ಮಿಸಿಕೊಂಡರೆ ಯಾರ ಸ್ವಾತಂತ್ರ್ಯಕ್ಕೂ ಪರಸ್ಪರ ಘರ್ಷಣೆಯಿಲ್ಲ. ಧರ್ಮಾರ್ಥಕಾಮಮೋಕ್ಷಗಳಿಗೆ ಪೋಷಕವಾದ ವಿಧಿ-ನಿಷೇಧಗಳು ಹೊರೆಯಾಗುವುದಿಲ್ಲ. ಅವುಗಳನ್ನು ಸಂತೋಷದಿಂದಲೇ ಅನುಸರಿಸುತ್ತೇವೆ. ಕಟ್ಟುಪಾಡುಗಳು ಎಲ್ಲ ಬಂಧನದಿಂದ ಬಿಡಿಸಿಕೊಂಡು ಮುಕ್ತರಾಗಲು, ಸ್ವತಂತ್ರರಾಗಲು ಪೋಷಕವಾಗಿದ್ದಲ್ಲಿ ಪೂಜ್ಯವೇ. ಇಂತಹ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಎನ್ನುವುದೇ ಋಷಿಗಳ ಕಳಕಳಿಯ ಕರೆ.    

    ಸೂಚನೆ:  15/08/2019 ರಂದು ಈ ಲೇಖನ ವಿಜಯವಾಣಿ ಮನೋಲ್ಲಾಸ ಅಂಕಣದಲ್ಲಿ ಪ್ರಕಟವಾಗಿದೆ.

    Wednesday, August 14, 2019

    ಪಿತಾಮಹನ ಆಸ್ತಿ (Pithamahana aasthi)

    ಲೇಖಕರು: ಶ್ರೀಮತಿ ಮೈಥಿಲೀ ರಾಘವನ್ 



    'ಕವಿತಾರ್ಕಿಕಸಿಂಹ' ಎಂಬ ಬಿರುದುಹೊತ್ತ ಶ್ರೀವೇದಾಂತದೇಶಿಕರು ಸುಪ್ರಸಿದ್ಧ ಶ್ರೀವೈಷ್ಣವ ಆಚಾರ್ಯರು. ತಮ್ಮ ವೈದುಷ್ಯದಿಂದಲೂ,  ಕವಿತಾಸಾಮರ್ಥ್ಯದಿಂದಲೂ ಎಲ್ಲ ವಿದ್ವಾಂಸರನ್ನೂ, ಕವಿಗಳನ್ನೂ ಆಕರ್ಷಿಸಿದ ಈ ಮಹಾತ್ಮರು ಪರಮ ಭಕ್ತಶಿರೋಮಣಿಗಳೂ, ಪರಮ ವೈರಾಗ್ಯಶಿಖಾಮಣಗಳೂ ಆಗಿದ್ದರು. ಗೃಹಸ್ಥಾಶ್ರಮವನ್ನು ಅಲಂಕರಿಸಿದ್ದ ಇವರು ತಮ್ಮ ಜೀವನವನ್ನು ಉಂಛವೃತ್ತಿಯಿಂದ - ಅಂದರೆ ಬೇಡಿ ಪಡೆಯದೇ ತಾನಾಗಿಯೇ ಲಭಿಸಿದ ದಾನ್ಯಗಳಿಂದ ಆಹಾರಸಿದ್ಧಪಡಿಸಿ ಭಗವತ್ಸಮರ್ಪಣೆಮಾಡಿ ಪ್ರಸಾದರೂಪವಾಗಿ ಅದನ್ನು ಸ್ವೀಕರಿಸುತ್ತಾ - ತಮ್ಮ ಬದುಕನ್ನು ಸಾಗಿಸುತ್ತಿದ್ದವರು. 

    ಒಮ್ಮೆ ಇವರ ಪಾಂಡಿತ್ಯ-ಪ್ರತಿಭೆಗಳಿಂದ ಆಕರ್ಷಿತರಾದ ವಿಜಯನಗರ ಸಾಮ್ರಾಜ್ಯದ ವಿದ್ಯಾರಣ್ಯರು 'ಇವರಂತಹವರು ರಾಜ್ಯದ ಆಸ್ಥಾನ ವಿದ್ವಾಂಸರಾಗಬೇಕೆಂದು’ ಬಯಸಿ ಆಚಾರ್ಯರಿಗೆ ಆಹ್ವಾನವನ್ನು ಕಳುಹಿಸಿದರು. ಆರ್ಥಿಕವಾಗಿ ಕಡುಬಡತನದಲ್ಲಿದ್ದರೂ ಪರಮವೈರಾಗ್ಯ ಸಂಪನ್ನರಾದ ದೇಶಿಕರಿಗೆ ರಾಜಾಹ್ವಾನವನ್ನು ಸ್ವೀಕರಿಸುವ ಮನಸ್ಸಾಗಲಿಲ್ಲ. ಅದಕ್ಕೆ ಉತ್ತರವಾಗಿ  "ನಾನಾಗಿ ಸಂಪಾದಿಸಿದ್ದೋ, ನನ್ನ ತಂದೆಯಿಂದ ಕೂಡಲ್ಪಟ್ಟ ಧನವೋ ಕಿಂಚಿತ್ತೂ ನನ್ನಲ್ಲಿಲ್ಲ. ಆದರೆ ನನಗೆ ನನ್ನ ಪಿತಾಮಹನ(ತಾತನ) ಆಸ್ತಿಯೊಂದು ಹಸ್ತಿಗಿರಿಶಿಖರದಲ್ಲುಂಟು" ಎಂದು ತಿಳಿಸುವ 'ವೈರಾಗ್ಯಪಂಚಕವೆಂಬ' ಸ್ತೋತ್ರರತ್ನವನ್ನು ಅತ್ಯಂತಗೌರವದೊಂದಿಗೆ  ಕಳುಹಿಸಿಕೊಟ್ಟರಂತೆ! ಧನಕ್ಕಾಗಿ ಹಾತೊರೆಯುವ ಸಮಾಜದಲ್ಲಿ ಎಂತಹ ವೈರಾಗ್ಯ!

    ಇಂತಹದ್ದೇ ಒಂದು ಘಟನೆಯು ನಾದೋಪಾಸಕರಾದ ಶ್ರೀ ತ್ಯಾಗರಾಜಸ್ವಾಮಿಯ ಜೀವನದಲ್ಲೂ ಕಂಡುಬರುತ್ತದೆ. ಗೃಹಸ್ಥರಾಗಿ ಉಂಛವೃತ್ತಿಯ ಜೀವನವನ್ನೇ ನಡೆಸುತ್ತಿದ್ದ ಇವರಿಗೂ ಆಗಿನ ರಾಜನಿಂದ ಕರೆ ಬಂದಿತು - ತನ್ನ ವೈಭವವನ್ನು ಸಾರುವ ಕೃತಿರಚನೆ ಮಾಡಲು. ಶ್ರೀರಾಮಚಂದ್ರನ ಸನ್ನಿಧಿಸೌಖ್ಯವನ್ನು ಹೃದಯದಲ್ಲಿ ತುಂಬಿಕೊಂಡು ಆನಂದತುಂದಿಲರಾಗಿದ್ದ ಆ ಭಾಗವತೋತ್ತಮರ ಮುಖಾರವಿಂದದಿಂದ  ನರಸ್ತುತಿ ಹೊರಡುವುದಾದರೂ ಎಂತು? ದೇಶಿಕರಂತೆ ಇವರೂ ರಾಜಾಹ್ವಾನವನ್ನು ನಿರಾಕರಿಸಿದರು. ಅಷ್ಟೇ ಅಲ್ಲದೆ ರಾಮನ ಸನ್ನಿಧಿಸುಖದ ಮುಂದೆ ಇತರ ಸುಖಗಳು ಎಷ್ಟು ಕ್ಷುದ್ರವಾದವು ಎಂಬುದನ್ನು ಸಾರುವ ಸುಂದರ ಕೃತಿಯೊಂದನ್ನೂ ಹಾಡಿದರು!

    ಹಸ್ತಿಗಿರಿಯಲ್ಲಿನ ಪಿತಾಮಹನ ಆಸ್ತಿಯಾಗಲಿ(ವರದರಾಜಸ್ವಾಮಿ), ಶ್ರೀರಾಮನ ಸನ್ನಿಧಿಸುಖವಾಗಲಿ ಇವರಿಬ್ಬರಿಗೆ ಮಾತ್ರವೆ ಸೇರಿದ್ದಲ್ಲ.  ಇವೆರಡೂ ಸಹ ಮನುಷ್ಯಮಾತ್ರರೆಲ್ಲರಿಗೂ ಸೇರಿದ, ಸೃಷ್ಟೀಶನಾದ 'ಪಿತಾಮಹನ'(ಬ್ರಹ್ಮದೇವನ) ಆಸ್ತಿ. ಪ್ರತಿಮಾನವನ ಜನ್ಮಸಿದ್ಧವಾದ ಹಕ್ಕದು ಎಂದು ಶ್ರೀರಂಗಮಹಾಗುರುಗಳು ಘೋಷಿಸಿದ್ದರು. ಆದರೆ ಈ ಆಸ್ತಿಗಳನ್ನು ಪಡೆಯಲು ವೈರಾಗ್ಯದನಡೆಯನ್ನು ಕೈಗೊಳ್ಳುವುದು ಸಾಮಾನ್ಯರಿಗಸಾಧ್ಯ. ಆದ್ದರಿಂದ ಸಾಮಾನ್ಯರೂ ಇದನ್ನು ಗಳಿಸುವಂತೆ ರೂಪಿಸಿದ ಜೀವನಕ್ರಮವೇ ಪುರುಷಾರ್ಥಮಯವಾದ ಬಾಳಾಟ.  

     ಶಂಕರಭಗವತ್ಪಾದರ ಆದೇಶ 'ಸತ್ಕರ್ಮದಿಂದ(ಧರ್ಮಕ್ಕೊಳಪಟ್ಟ) ಲಭಿಸುವ ವಿತ್ತದಿಂದ ಸುಖಿಸು'. ವಿತ್ತದಿಂದ ಚಿತ್ತಕ್ಕೊದಗಬಹುದಾದ ಸುಖ-ಸಂತೋಷಗಳನ್ನು ಜ್ಞಾನಿಗಳು ಸಂಪೂರ್ಣವಾಗಿ ನಿಷೇಧಿಸಿಲ್ಲ. ಆದರೆ ವಿತ್ತಗಳಿಸುವಲ್ಲಿ  ನಿಯಂತ್ರಣ ಬೇಕೆಂದು ಎಚ್ಚರಿಸುತ್ತಾರೆ. ಶ್ರೀರಂಗಮಹಾಗುರುಗಳ ಸೂತ್ರಪ್ರಾಯವಾದ ಮಾತೆಂದರೆ “ಅರ್ಥ-ಕಾಮಗಳು ತುಂಟ ಹಸುವಿನಂತೆ. ಅವುಗಳನ್ನು ಸುಮ್ಮನೆ ಕರೆದರೆ ಒದೆಯುತ್ತವೆ. ಆದರೆ ಧರ್ಮ-ಮೋಕ್ಷಗಳೆಂಬ ಕಂಬಕ್ಕೆ ಕಟ್ಟಿ ಕರೆದರೆ ಅಮೃತವನ್ನೇ ನೀಡುತ್ತವೆ”. ಅಷ್ಟೇ ಅಲ್ಲ, ಧರ್ಮ-ಮೋಕ್ಷಗಳೇ ಜೀವನಧ್ಯೇಯವಾದಾಗ ಅರ್ಥ-ಕಾಮಗಳು ತಾವಾಗಿಯೇ ಬಂದೊದಗುವುವು ಎಂಬ ಮಾತೂ ಇದೆ. ಈ ರೀತಿಯಾದ ಪುರುಷಾರ್ಥಮಯ ಬಾಳಾಟದಿಂದ ಇಹಸೌಖ್ಯದೊಡನೆ 'ತಾತನ'ಆಸ್ತಿಯನ್ನೂ, ‘ರಾಮಸಾನ್ನಿಧ್ಯ'ಸುಖವನ್ನೂ ಪಡೆಯುವುದು ನಿಶ್ಚಿತ ಎಂಬುದು ಜ್ಞಾನಿಗಳ ನಿರ್ಣಯ.
    ಅಷ್ಟು ಮಾತ್ರವಲ್ಲದೆ ಈ ನಿಯಂತ್ರಣವು ಸಮಾಜದಲ್ಲಿ ಅಪರಾಧಗಳನ್ನು ತಪ್ಪಿಸಿ ಸುವ್ಯವಸ್ಥೆಯನ್ನು ಸಹ ರೂಪಿಸಬಲ್ಲುದು. ವೈಯಕ್ತಿಕಲಾಭದೊಡನೆ ಸಮಾಜದ ರಕ್ಷಣೆಯೂ ಕೂಡಿಬರುತ್ತದೆ.

    ಸೂಚನೆ:  14/08/2019 ರಂದು ಈ ಲೇಖನ ವಿಜಯವಾಣಿ ಮನೋಲ್ಲಾಸ ಅಂಕಣದಲ್ಲಿ ಪ್ರಕಟವಾಗಿದೆ.

    ತ್ಯಾಗದೊಂದಿಗಿನ ಭೋಗವೇ ಯೋಗ್ಯ (Thyaagdondigina bhogave yogya)

    ಲೇಖಕರು: ಡಾ|| ಕೆ.ಎಸ್. ಕಣ್ಣನ್


    ನಾವೆಲ್ಲರೂ ಸದಾ ಏನಾದರೂ ಮಾಡುತ್ತಲೇ ಇರುತ್ತೇವೆ. ಸುಮ್ಮನೇ ಇರಲಾದೀತೆ? ಎಲ್ಲವನ್ನೂ ಏಕೆ ಮಾಡುತ್ತೇವೆ? – ಎಂಬ ಪ್ರಶ್ನೆಗೆ ಉತ್ತರವೇ? ದಾಸರೇ ಕೊಟ್ಟಿದ್ದಾರೆ: “ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ”. ಯಾರ ಹೊಟ್ಟೆ-ಬಟ್ಟೆಗಳಿಗಾಗಿ? ನಮ್ಮವಕ್ಕೇ ತಾನೆ?

    ಬರೀ ತನ್ನ ಹೊಟ್ಟೆ—ಬಟ್ಟೆಗಳಿಗಾಗಿಯೇ? ಮನೆಯ ಯಜಮಾನನೆಂದರೆ ಮನೆಯ ಮಂದಿಯ ಎಲ್ಲರ ಹೊಟ್ಟೆ-ಬಟ್ಟೆಗಳಿಗಾಗಿಯೂ ಮಾಡುವವನೇ. ಬರೀ ತನಗೋ? “ಸ್ವಾರ್ಥಿ” ಎನ್ನುತ್ತಾರೆ! ಬೈಗಳ ತಪ್ಪಿಸಿಕೊಳ್ಳಲಾದರೂ ಕೊಟ್ಟು ತಿನ್ನಬೇಕು!

    ಹಣಕ್ಕೆ ಮೂರೇ ’ಗತಿ’ಗಳಂತೆ. ದಾನವೊಂದು, ಭೋಗವೊಂದು. ಮೂರನೆಯದೇ ನಾಶ. ಅನ್ಯರಿಗೆ ಕೊಡಲಿಲ್ಲ. ತಾನೂ ತಿನ್ನಲಿಲ್ಲ – ಎಂದಾದಲ್ಲಿ ಅಂತಹ ಗಳಿಕೆಗೆ ’ನಾಶ’ವೇ ಗತಿ. ಯಾರಿಗೋ ಹೋಯಿತು: ದುರ್ಗತಿಯೇ!

    ನಾವು ಪ್ರಗತಿಯನ್ನು ಕಾಣಬೇಕೆಂದರೆ ಕೊಟ್ಟು ಸಂತೋಷಿಸಬೇಕು. ಬಾಯಿಗೆ ಅನ್ನ ಹಾಕಿದೆವು, “ತನಗೇ ಎಲ್ಲ” ಎಂದು ಬಾಯಿ ಹೇಳುತ್ತದೆಯೇ? ಅದನ್ನು ಹೊಟ್ಟೆಗೆ ಕಳುಹಿಸುತ್ತದೆ. “ತನ್ನಲ್ಲೇ ಎಲ್ಲ ಇರಲಿ” ಎಂದು ಹೊಟ್ಟೆ ಇಟ್ಟುಕೊಂಡರೆ, ಡಾಕ್ಟರ ಬಳಿ ಹೋಗಿ “ಹೊಟ್ಟೆ ಕೆಟ್ಟಿದೆ” ಎನ್ನುತ್ತೇವೆ! ಪಚನ ಮಾಡಿ ಆಹಾರದ ಸಾರವನ್ನು ಇಡೀ ಶರೀರಕ್ಕೇ ಹೊಟ್ಟೆ ಕಳುಹಿಸುವುದಲ್ಲವೆ?: ಎಲ್ಲ ಅಂಗಗಳೂ ಚೆನ್ನಾಗಿದ್ದೇ ತಾನೂ ಚೆನ್ನಾಗಿರುವುದು.

    ಶ್ರೀರಂಗಮಹಾಗುರುಗಳು ಬೀಜದ ಉದಾಹರಣೆಯನ್ನು ಕೊಡುತ್ತಿದ್ದರು. ಕ್ಷೇತ್ರದಲ್ಲಿ ಬಿದ್ದ ಬೀಜವು ತನ್ನನ್ನೇ ಮುಂದಿನದಕ್ಕೆ ಕೊಟ್ಟುಕೊಳ್ಳುತ್ತದೆ. ಮುಂದಿನದೂ ಕೊಟ್ಟುಕೊಂಡೇ ಬೇರು, ಕಾಂಡ, ಕೊಂಬೆ, ಚಿಗುರು, ಎಲೆ, ಹೂವು, ಹಣ್ಣುಗಳಾಗಿ ವೃಕ್ಷವಾಗುವುದು. ಫಲ ಬಿಟ್ಟಾಗಲೇ ಅಲ್ಲವೆ, ಸ-ಫಲ-ತೆ?

    “ಕೊಟ್ಟರೆ ಹೋಯಿತು!” ಎಂಬುದಲ್ಲ, “ಕೊಟ್ಟದ್ದು ತನಗೆ” ಎಂಬುದು ನೀತಿ: ವಿಚಿತ್ರವಾದ ಸತ್ಯವಿದು. “ಓ, ಹಾಗಾದರೆ ನನಗೇ ಬರಲೆಂದೇ ಕೊಡುತ್ತೇನೆ” ಎಂಬ ಸಂಕಲ್ಪವೂ ಸರಿಯಲ್ಲ! ತ್ಯಾಗವನ್ನೂ ಮಾಡಬೇಕು, ಭೋಗವನ್ನೂ ಪಡಬೇಕು. ಆದರೂ ಭೋಗಿಸಿ ತ್ಯಾಗವಲ್ಲ, ತ್ಯಾಗಿಸಿ ಭೋಗ. ಈಶಾವಾಸ್ಯೋಪನಿಷತ್ತು ಅದನ್ನು “ತೇನ ತ್ಯಕ್ತೇನ ಭುಂಜೀಥಾಃ” ಎನ್ನುತ್ತ್ತದೆ. “ಜಗತ್ತಿನಲ್ಲಿಯ ಚರಾಚರವೆಲ್ಲವೂ ಈಶನಿಂದ ವ್ಯಾಪ್ತ. ಮತ್ತೊಬ್ಬರ ಸೊತ್ತಿಗಾಗಿ ಹಂಬಲಿಸೀಯೆ!” ಎಂದು ಎಚ್ಚರಿಸುತ್ತದೆ. 

    ನಮಗೆ ದೊರೆತದ್ದೂ ಬೇರೆಯವರು ಕೊಟ್ಟದ್ದರಿಂದ, ಉಳ್ಳವರು ಕೊಟ್ಟದ್ದರಿಂದಲೇ. ಎಲ್ಲವನ್ನೂ ಉಳ್ಳವನು, ಎಲ್ಲಕ್ಕೂ ಸ್ವಾಮಿಯೆಂದರೆ ಈಶನೇ. ಆ ಸ್ಮರಣೆಯಿರಬೇಕು. ದುಡಿದು ಸಂಪಾದಿಸಬೇಕು. ಹಂಚಿ ತಿನ್ನಬೇಕು: ತ್ಯಾಗಪೂರ್ವಕ ಭೋಗ. ಇಲ್ಲಿಯೇ ಇರುವುದು ಸ್ವಸುಖ-ಪರಸುಖ. ಕ್ರಮವರಿತು ಕೊಟ್ಟರಲ್ಲವೆ ಸುಖ? 

    ಪುಟ್ಟ ಉಪನಿಷತ್ತಿನ ಮೊಟ್ಟಮೊದಲ ಮಂತ್ರ ಸಫಲತೆಯ ಸೂತ್ರ.

    ಸೂಚನೆ: 13/08/2019 ರಂದು ಈ ಲೇಖನ ಪ್ರಜಾ ವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ.