Wednesday, October 30, 2019

ದೀಪಾವಳಿ (Deepavali)

ಲೇಖಕರು : ವಿದ್ವಾನ್ ಶ್ರೀಯುತ ನರಸಿಂಹ ಭಟ್ಟ




ಹಬ್ಬಕ್ಕೊಂದು ಹಿನ್ನೆಲೆ

ದೀಪಾವಳಿ ಹಬ್ಬವು ಹಬ್ಬಗಳಿಗೆಲ್ಲಾ ರಾಜ. ಎಲ್ಲರಲ್ಲೂ ದೀಪಾವಳಿ ಬಂತೆಂದರೆ ಎಲ್ಲಿಲ್ಲದ ಸಂತೋಷ, ಸಡಗರ, ಸಂಭ್ರಮ ಆವರಿಸುತ್ತದೆ. ಅದರಲ್ಲೂ ನೂತನ ದಂಪತಿಗಳಿಗೆ ಹೆಚ್ಚಿನ ಆದ್ಯತೆ. ಮದುವೆ ಮಾಡಿಕೊಟ್ಟ ಮಗಳನ್ನು ತಂದೆಯ ಮನೆಗೆ ಕರೆಸಿಕೊಳ್ಳುವ ರಸಮಯ ಕಾಲ. ಮಗಳಿಗೂ ಅಷ್ಟೇ. ತವರು ಮನೆಗೆ ಹೋಗಬೇಕು, ತಂದೆತಾಯಿ ಬಂಧುಬಾಂಧವರಿಂದ ಒಡಗೂಡಿ ಹಬ್ಬವನ್ನು ಆಚರಿಸಬೇಕು, ಮೈಗೆಲ್ಲ ಎಣ್ಣೆ ಅರಿಶಿನವನ್ನು ಹಚ್ಚಿಸಿಕೊಂಡು ಅಭ್ಯಂಗಸ್ನಾನ ಮಾಡಿಸಿಕೊಳ್ಳಬೇಕು. ಹಿರಿಯರಿಂದ ಆರತಿ ಎತ್ತಿಸಿಕೊಂಡು ಉಡುಗೊರೆಯನ್ನು ಪಡೆದು ಹೊಸ ವಸ್ತ್ರವನ್ನು ಧರಿಸಿ ಸಂಭ್ರಮಿಸಬೇಕು. ವಿವಿಧ ಬಗೆಯ ತಿಂಡಿತಿನಿಸುಗಳನ್ನು ತಿನ್ನಬೇಕು ಹೀಗೆಲ್ಲ ಹೊಸದಾಗಿ ವಿವಾಹಿತರಾದವರಿಗಂತೂ ಈ ಹಬ್ಬ ಬಂತೆಂದರೆ ಅದೆಷ್ಟು ಸಂತೋಷ.! ಇನ್ನು ಮಕ್ಕಳಿಗೂ ಅತಿ ಉತ್ಸಾಹವನ್ನು ಕೊಡುವ ಹಬ್ಬ. ಪಟಾಕಿ ಸುರಕಡ್ಡಿ ಸುದರ್ಶನಚಕ್ರ ಹೀಗೆ ಹತ್ತುಹಲವು ಬಗೆಯ ಶಬ್ದದ ವೈವಿಧ್ಯ ಹತ್ತುಹಲವು ಬಗೆಯ ಬೆಳಕಿನ ಕಿಡಿಯಾಟ. ದೀಪಾವಳಿ ಹಬ್ಬ ಯಾವಾಗ ಬರುತ್ತದೆ ಎಂದು ವರ್ಷದಿಂದ ಕಾಯುತ್ತಿರುವ ಮಕ್ಕಳಿಗೆ ದೀಪಾವಳಿ ಬಂದೇಬಿಟ್ಟಿತು ಎಂಬ ಸಂಭ್ರಮ. ಇನ್ನು ವಯಸ್ಸಾದ ಅಜ್ಜ ಅಜ್ಜಿಯಂದಿರಿಗೆ ಮನೆಯಲ್ಲಿ ನಡೆಯುವ ಈ ಗೌಜು ಗದ್ದಲ ಸಡಗರವನ್ನು ಕಣ್ತುಂಬಿಸಿಕೊಳ್ಳುವ ಆಸೆ. ಆದರೆ ಯಜಮಾನನಿಗೆ ಈ ಹಬ್ಬ ಬಂತೆಂದರೆ ಇಬ್ಬಗೆ. ಒಂದು ಕಡೆ ಮಕ್ಕಳ ಆಟೋಟ ಹಿರಿಯರ ಸಂತೋಷ ಸಿಹಿತಿಂಡಿಗನ್ನು ಸವಿಯುವ ಮನಸ್ಸು. ಇನ್ನೊಂದು ಕಡೆ ಆರ್ಥಿಕಮುಗ್ಗಟ್ಟು. ಹೊಸ ಬಟ್ಟೆ ಮಕ್ಕಳಿಗೆ ಪಟಾಕಿ ಮನೆಗೆ ಸಾಮಾನು ಹೀಗೆ ಮನೆಯನ್ನು ತುಂಬಿಸಿ ಜೇಬು ಖಾಲಿಯಾಯಿತಲ್ಲ! ಮುಂದಿನ ತಿಂಗಳಿನಲ್ಲಿ ಮನೆಯನ್ನು ಸರಿದೂಗಿಸುವುದು ಹೇಗೆಂಬ ಚಿಂತೆ ಇನ್ನೊಂದು ಕಡೆ. ಅದೇನೆ ಇರಲಿ ಇಂದು ನಾವು ಆಚರಿಸುವ ಹಬ್ಬವು ಕೇವಲ ಇಂದ್ರಿಯತೃಪ್ತಿಗಷ್ಟೇ ಸೀಮಿತವಾಗಿದೆ. ಆದರೆ ನಮ್ಮ ಋಷಿಪರಂಪರೆ ಕೊಟ್ಟ ಹಬ್ಬದ ಹಿನ್ನೆಲೆಯನ್ನು ಅರ್ಥ ಮಾಡಿಕೊಂಡು ಅಂತೆಯೆ ಆಚರಿಸಿದಾಗ ಅದು ಅತ್ಮಕ್ಕೂ ತೃಪ್ತಿಯನ್ನು ಕೊಡಬಲ್ಲದು. “ತನ್ನ ಕಾಲರೂಪವಾದ ಶರೀರದಲ್ಲಿ ಭಗವಂತನು ಗೊತ್ತಾದ ಸ್ಥಾನಗಳಲ್ಲಿ ಜೀವಿಗಳಿಗೆ ಅವುಗಳ ಉದ್ಧಾರಕ್ಕಾಗಿ ಒದಗಿಸಿರುವ ಸೌಲಭ್ಯಗಳು ಪರ್ವಗಳು. ಆನುಗ್ರಹದ ಉಪಯೋಗವನ್ನು ಕಳೆದುಕೊಳ್ಳಬಾರದು”  ಎಂದು ಶ್ರೀರಂಗಮಹಾಗುರುಗಳು ಅಪ್ಪಣೆ ಕೊಡಿಸಿದ್ದನ್ನು ನಾವಿಲ್ಲಿ ಸ್ಮರಿಸಿಕೊಂಡು ಆ ಬಗ್ಗೆ ಗಮನ ಹರಿಸುವುದು ಅತ್ಯಂತ ಅವಶ್ಯವಾಗಿದೆ.


ದೀಪಾವಳಿ ಹಬ್ಬದ ಮಹತ್ತ್ವವೇನು?  

ಇದನ್ನು ಸಾಮಾನ್ಯವಾಗಿ ಚಾಂದ್ರಮಾನದ ಪ್ರಕಾರ ಆಚರಣೆ ಮಾಡುವ ಅಭ್ಯಾಸ ಬಂದಿದೆ. ಒಟ್ಟು ಆರು ಋತುಗಳಲ್ಲಿ ಒಂದಾದ ಶರದೃತುವಿನಲ್ಲಿ ಆಶ್ವಯುಜ ಮತ್ತು ಕಾರ್ತಿಕ ಎಂಬ ಎರಡು ಮಾಸಗಳು ಬರುತ್ತವೆ. ಆಶ್ವಯುಜ ಮಾಸದ ಕೃಷ್ಣಪಕ್ಷದ ಚತುರ್ದಶಿಯಿಂದ ಪ್ರಾರಂಭಿಸಿ ಕಾರ್ತಿಕ ಮಾಸದ ಶುಕ್ಲ ಪ್ರತಿಪತ್ತಿನ ವರೆಗೆ ಮೂರುದಿನಗಳ ಕಾಲವನ್ನು ದೀಪಾವಳಿ ಎಂದು ಆಚರಿಸಲಾಗುತ್ತಿದೆ. ಇನ್ನು ಕೆಲವರು ಸೌರಮಾನದ ಪ್ರಕಾರ ‘ತುಲಾವೃಶ್ಚಿಕಯೋಃ ಶರತ್’ ಎಂಬ ವಾಕ್ಯದಂತೆ ತುಲಾಮಾಸದ ಶುಕ್ಲ ಪಾಡ್ಯದಿಂದ ದರ್ಶದವರೆಗಿನ(ಅಮಾವಾಸ್ಯೆ) ಕಾಲವನ್ನು ಒಂದು ಮಾಸ ಎಂದು ಪರಿಗಣಿಸಿ ಕೃಷ್ಣಪಕ್ಷದ ಚತುರ್ದಶಿಯಿಂದ ಮೂರು ದಿನಗಳನ್ನು  ದೀಪಾವಳಿಯ ಹಬ್ಬವಾಗಿ ಆಚರಿಸುವ ಪದ್ಧತಿ ಇದೆ. ಏನೇ ಇರಲಿ ತುಲಾಮಾಸ ಅಥವಾ ಕಾರ್ತಿಕ ಮಾಸದ ಸಮಯದಲ್ಲಿ ಆಚರಿಸುವ ಈ ಹಬ್ಬವು ಸತ್ಫಲವನ್ನು ಕೊಡುವುದರಲ್ಲಿ ಯಾವ ಸಂಶಯವೂ ಇಲ್ಲ.

ಕಾರ್ತಿಕ ಮಾಸದಲ್ಲಿ ಆಚರಣೆ ಮಾಡಲು ಕಾರಣವೇನು? 

ಕಾಲದ ಪ್ರಭಾವ ಈ ಹಬ್ಬಗಳಲ್ಲಿ ಹೇಗೆಲ್ಲ ಇದೆ ಇತ್ಯಾದಿ ವಿಷಯಗಳ ಬಗ್ಗೆ ಶಾಸ್ತ್ರ ಮತ್ತು ಸಂಪ್ರದಾಯಸ್ಥರ ನೋಟವನ್ನು ಒಮ್ಮೆ ಅವಲೋಕಿಸೋಣ.

 ಕಾರ್ತಿಕಸ್ನಾನ ಮತ್ತು ತುಲಾಸ್ನಾನ ಎಂಬ ಎರಡು ವಿಧಿಯೂ ಸಮಂಜಸವಾಗಿದೆ. ದೀಪಾವಳಿ ಎಂದು ದೀಪದ ಹಬ್ಬವನ್ನು ಕಾರ್ತಿಕ ಮಾಸದ ರೀತ್ಯಾ ಅಚರಿಸುವಲ್ಲಿ ಔಚಿತ್ಯವನ್ನು ಕಾಣಬಹುದು. ಯಾವ ಮಾಸದ ಪೂರ್ಣಿಮೆಯಂದು ಕೃತ್ತಿಕಾನಕ್ಷತ್ರವು ಘಟಿಸುವುದೋ ಆ ಮಾಸಕ್ಕೆ ಕಾರ್ತಿಕಮಾಸ ಎಂದು ಕರೆಯುತ್ತಾರೆ. “ಕೃತ್ತಿಕಾನಕ್ಷತ್ರಮಗ್ನಿರ್ದೇವತಾ” ಎಂದು ವೇದವು ಹೇಳುವಂತೆ ಕೃತ್ತಿಕಾನಕ್ಷತ್ರವನ್ನು ಅಗ್ನಿದೇವತಾತ್ಮಕವಾದ ನಕ್ಷತ್ರವೆಂದು ಕರೆಯಲಾಗಿದೆ. ಈ ಮಾಸದಲ್ಲಿ ಎಲ್ಲೆಡೆ ದೀಪವನ್ನು ಬೆಳಗಿಸುವುದು ಲಕ್ಷದೀಪೋತ್ಸವ, ವಿಷ್ಣುದೀಪೋತ್ಸವ, ಶಿವದೀಪೋತ್ಸವ ಎಂದೆಲ್ಲ ದೀಪವನ್ನೇ ಪ್ರಧಾನವಾಗಿ ಆರಾಧಿಸುವ ಕ್ರಮ ಬಂದಿರುವುದು ಇಲ್ಲಿನ ವಿಶೇಷತೆಯನ್ನು ಎತ್ತಿ ತೋರಿಸುತ್ತದೆ. ಯಾವುದೇ ಬಗೆಯಲ್ಲಿ ದೀಪವನ್ನು ಆರಾಧಿಸಿದರೂ ಅದು ದೀಪರೂಪೀ ಪರಮಾತ್ಮನ ಆರಾಧನೆಯಾಗಿ ಪರ್ಯವಸಾನವಾಗುತ್ತದೆ.  
ದೀಪಾವಳಿಮಹೋತ್ಸವವು ಸುಖರಾತ್ರಿ, ಸುಖಸುಪ್ತಿಕಾ, ಯಕ್ಷರಾತ್ರಿ, ಕೌಮುದೀಮಹೋತ್ಸವ, ಬಲಿಪಾಡ್ಯಮೀ, ನರಕಚತುರ್ದಶೀ, ವೀರಪ್ರತಿಪದಾ, ಭಗಿನಿದ್ವಿತೀಯಾ, ಸೋದರಬಿದಿಗೆ ಇತ್ಯಾದಿ ನಾಮಗಳಿಂದ ಪ್ರಸಿದ್ಧವಾಗಿದೆ. ಇದು ಕೇವಲ ವೈದಿಕಸಂಪ್ರದಾಯದಲ್ಲಿ ಮಾತ್ರವಲ್ಲ ಬೌದ್ಧ ಜೈನ ಸಂಪ್ರದಾಯದಲ್ಲೂ ಆಚರಿಸುವ ರೂಢಿಯಿದೆ. ಅಲ್ಲದೇ ಈ ಹಬ್ಬವೂ ಕೇವಲ ಕರ್ಣಾಟಕದಲ್ಲಿ ಮಾತ್ರವಲ್ಲ ತಮಿಳುನಾಡು ಆಂಧ್ರ, ಮಹಾರಾಷ್ಟ್ರ ಹೀಗೆ ಭಾರತದ ಪ್ರತಿಯೊಂದು ಭಾಗದಲ್ಲೂ ಅತ್ಯಂತ ವಿಜೃಂಭಣೆಯಿಂದ ಆಚರಿಸುವಂತಹದ್ದಾಗಿದೆ.

ಗೋಪೂಜಾ- ವಿಶೇಷತೆ

“ಪ್ರತಿಪದ್ದರ್ಶಸಂಯೋಗೇ ಕ್ರೀಡನಂ ತು ಗವಾಂ ಮತಮ್” (ನಿರ್ಣಯಾಮೃತ). ಈ ದಿನ ಗೋವುಗಳನ್ನು ಸ್ನಾನ ಮಾಡಿಸಿ ಅಲಂಕಾರ ಮಾಡಿ “ ಲಕ್ಷ್ಮೀರ್ಯಾ ಲೋಕಪಾಲಾನಾಂ ಧೇನುರೂಪೇಣ ಸಂಸ್ಥಿತಾ | ಘೃತಂ ವಹತಿ ಯಜ್ಞಾರ್ಥೇ ಮಮ ಪಾಪಂ ವ್ಯಪೋಹತು” ಎಂಬ ಮಂತ್ರದಿಂದ ಪೂಜಿಸಿ ಅವುಗಳಿಗೆ ತೃಪ್ತಿಯಾಗುವಷ್ಟು ಗ್ರಾಸವನ್ನು  ನೀಡಬೇಕು. ಗೋವರ್ಧನಪರ್ವತವನ್ನು “ಗೋವರ್ಧನ ಧರಾಧಾರ ಗೋಕುಲತ್ರಾಣಕಾರಣ | ಬಹುಬಾಹುಕೃತಚ್ಛಾಯ ಗವಾಂ ಕೋಟಿಪ್ರದೋ ಭವ” ಎಂಬ ಮಂತ್ರದಿಂದ ಪ್ರದಕ್ಷಿಣೆ ಮಾಡಿ ಗೋಪಾಲಕೃಷ್ಣನನ್ನು ಆರಾಧಿಸಬೇಕು. ಗೋವರ್ಧನಕ್ಕೆ ಹೋಗಲಾಗದಿದ್ದರೆ ಪರ್ವತದ ಚಿತ್ರವನ್ನಾಗಲಿ, ವಿಗ್ರಹವನ್ನಾಗಲಿ ಅಥವಾ ಸಗಣಿಯಿಂದಾಗಲಿ ಅನ್ನದಿಂದಾಗಲಿ ಪರ್ವತವನ್ನು ಮಾಡಿ ಪೂಜಿಸಿ ಅನ್ನಸಂತರ್ಪಣೆ ಮಾಡಬೇಕು. ಈ ದಿನ ಮಧ್ಯಾಹ್ನ ಹಸುಗಳನ್ನು ರಾಸುಗಳನ್ನು ಮೈದಾನಕ್ಕೆ ಕರೆದೊಯ್ದು ಅವುಗಳನ್ನು ಓಡಿಸಿ ಆಟವಾಡುವ ಪದ್ಧತಿಯಿದೆ. ಅಲ್ಲದೆ ರಾತ್ರಿಯಲ್ಲಿ ಅವುಗಳಿಗೆ ‘ಕಿಚ್ಚಾಯಿಸಿ’ ಅವುಗಳಿಗಿರುವ ದೃಷ್ಟಿದೋಷವನ್ನು ತೆಗೆಯುವ ಪದ್ಧತಿಯೂ ಇದೆ. ಈ ದಿನ ಗೋಪಾಲಕೃಷ್ಣನು ಗೋವರ್ಧನ ಪರ್ವತವನ್ನು ಕನಿಷ್ಠಾಗ್ರದಿಂದ ಎತ್ತಿ ಗೋವುಗಳನ್ನು, ಗೋಪಾಲಕರನ್ನು ರಕ್ಷಿಸಿ ಇಂದ್ರನ ಗರ್ವಭಂಗ ಮಾಡಿದ ಎಂಬ ಪುರಾಣ ಕಥೆ ಈ ಹಬ್ಬಕ್ಕಿದೆ. ಇದರ ನೆನಪಿಗಾಗಿ ಗೋವನ್ನೂ ಇಂದು ವಿಶೇಷವಾಗಿ ಪೂಜಿಸುವ ಸಂಪ್ರದಾಯ ಬಂದಿದೆ.

ದೀಪವನ್ನು ಆರಾಧಿಸುವ ವಿಶೇಷತೆ  

ನರಕ ಚತುರ್ದಶಿಯಿಂದ ಆರಂಭಿಸಿ ಕಾರ್ತಿಕಮಾಸದ ಪರ್ಯಂತ ಎಲ್ಲೆಲ್ಲೂ ದೀಪಗಳನ್ನು ಲಕ್ಶಲಕ್ಷಸಂಖ್ಯೆಯಲ್ಲಿ ಬೆಳಗಿಸುವುದು ಪದ್ಧತಿ. ದೀಪವು ಭಗವಂತನ ಪ್ರತೀಕ. ದೀಪದ ಜ್ವಾಲೆ ಭಗವಂತನ ವರ್ಣವನ್ನು ಹೋಲುತ್ತದೆ. ತಿಲತೈಲ ಅಥವಾ ತುಪ್ಪದ ದೀಪವನ್ನು ಬೆಳಗಿಸಬೇಕು. ಏಕೆಂದರೆ ಈ ದೀಪದಿಂದ ಬರುವ ಬೆಳಕು ಮಾತ್ರ ಭಗವಂತನ ಬಣ್ಣವನ್ನು ಬಹುವಾಗಿ ನೆನಪಿಸುವಂತಹದ್ದು. ವಿಷ್ಣುದೀಪೋತ್ಸವ, ಶಿವದೀಪೋತ್ಸವ, ಕಾರ್ತಿಕಸೋಮವಾರ, ಲಕ್ಷದೀಪೋತ್ಸವ, ಆಕಾಶದೀಪ ಹೀಗೆ ಪ್ರತಿನಿತ್ಯವೂ ದೀಪವನ್ನು ಆರಾಧಿಸುವ ವಿಶೇಷವಾದ ಹಬ್ಬವೇ ದೀಪಾವಳಿ.
ಹೀಗೆ ಭಗವಂತವನನ್ನು ಬೇರೆಬೇರೆ ರೂಪದಲ್ಲಿ ಆರಾಧಿಸಿ ಜೀವನವನ್ನು ಸಾರ್ಥಕಗೊಳಿಸಿಕೊಳ್ಳಲು ನಮ್ಮ ಆರ್ಯಭಾರತೀಯ ಮಹರ್ಷಿಗಳು ಕಂಡು ಅರುಹಿದ ಪವಿತ್ರ ಕಾಲ. ಇದನ್ನು ಸದುಪಯೋಗ ಪಡಿಸಿಕೊಂಡರೆ ನಾವು ಧನ್ಯರು. ಇಲ್ಲದಿದ್ದರೆ ನಮ್ಮಂತಹ ನತದೃಷ್ಟರು ಇರಲಾರರು.     

ಪ್ರಾತಃಸ್ನಾನ – ಅಭ್ಯಂಗದ ಮಹತ್ತ್ವ

ಕಾರ್ತಿಕ ಮಾಸದ ಪ್ರಾತಃಕಾಲದಲ್ಲಿ  ಮಾಡುವ ಅಭ್ಯಂಗಸ್ನಾನ ಅತ್ಯಂತ ಶ್ರೇಷ್ಠ ಎನ್ನಲಾಗಿದೆ. ಅಥವಾ ತುಲಾಸ್ನಾನ ಎಂದೇ ಪ್ರಸಿದ್ಧವಾದ ನದಿಸಮುದ್ರಗಳಲ್ಲಿ ಮಾಡುವ ಸ್ನಾನವೂ ಮಹಾಪಾತಕನಾಶ ಮಾಡುತ್ತದೆ ಎಂದು ಅದರ ಮಹತ್ತ್ವವನ್ನು ಸಾರಲಾಗಿದೆ. ಆಶ್ವಯುಜ ಮಾಸದ ಶುಕ್ಲಪಕ್ಷದ ಏಕಾದಶಿಯಿಂದ ಪ್ರಾರಂಭಿಸಿ ಕಾರ್ತಿಕಮಾಸದ ಪೂರ್ತಿ ಪ್ರಾತಃಕಾಲದಲ್ಲಿ ಮಾಡುವ ಅಭ್ಯಂಗವು ವಿಶೇಷಫಲದಾಯಕವಾಗಿದೆ ಎಂದು ಭಾರ್ಗವವಚನವಿದೆ. “ ಕಾರ್ತಿಕೇಽಹಂ ಕರಿಷ್ಯಾಮಿ ಪ್ರಾತಃಸ್ನಾನಂ ಜನಾರ್ದನ!| ಪ್ರೀತ್ಯರ್ಥಂ ತವ ದೇವೇಶ! ದಾಮೋದರ! ಮಯಾ ಸಹ”” ಎಂದು ಹೇಳುತ್ತಾ ಸ್ನಾನವನ್ನು ಮಾಡಬೇಕು. ಹತ್ತುಸಾವಿರ ಗೋವುಗಳ ದಾನದಿಂದ ಬರುವಷ್ಟು ಫಲ ಈ ಸ್ನಾನಕ್ಕೆ. ಯಾರು ಜಿತೇಂದ್ರಿಯನಾಗಿ ಪ್ರತಿನಿತ್ಯ ಅಭ್ಯಂಗ ಅಥವಾ ತೀರ್ಥಸ್ನಾನಮಾಡುತ್ತಾರೋ ಮತ್ತು ಶಾಂತನಾಗಿ ಜಪಧ್ಯಾನಗಳಲ್ಲಿ ಮುಳುಗಿ ಯಜ್ಞಪ್ರಸಾದರೂಪವಾದ ಹವಿಷ್ಯಾನ್ನವನ್ನು ಸ್ವೀಕರಿಸುತ್ತಾರೋ ಅಂತವರು ಎಲ್ಲಾ ಪಾಪಗಳಿಂದ ಮುಕ್ತರಾಗುತ್ತಾರೆ ಎಂಬ ಮಾತೂ ಇದೆ. ಈ ಕಾಲದಲ್ಲಿ ಕುರುಕ್ಷೇತ್ರ, ಗಂಗಾನದೀ, ಪುಷ್ಕರ, ದ್ವಾರವತೀ, ಮಥುರಾ ಹೀಗೆ ಪುಣ್ಯಕ್ಷೇತ್ರಗಳಲ್ಲಿ ಮಾಡುವ ಸ್ನಾನವು ಬೇಡಿದ ಫಲವನ್ನು ನೀಡುತ್ತದೆ ಎಂಬಷ್ಟರ ಮಟ್ಟಿಗೆ ಪುರಸ್ಕರಿಸಲಾಗಿದೆ. ಇದನ್ನು ಸನ್ಯಾಸಿಗಳೂ ಮಾಡಬೇಕು ಎನ್ನಲಾಗಿದೆ.

ನರಕಚತುರ್ದಶೀ  ವಿಶೇಷತೆ  

ಈ ದಿನ ಬೆಳಗಿನ ಜಾವ ಎದ್ದು  ತಿಲತೈಲದಿಂದ ಅಭ್ಯಂಗಸ್ನಾನ ಮಾಡಬೇಕು. ಇದು ನರಕಭೀತಿಯನ್ನು ದೂರಮಾಡುತ್ತದೆ. ತೈಲದಲ್ಲಿ ಲಕ್ಷ್ಮಿಯು, ಜಲದಲ್ಲಿ ಗಂಗೆಯು ಈ ದಿನ ವಿಶೇಷಸಾನ್ನಿಧ್ಯವನ್ನು ವಹಿಸುವುದರಿಂದ ಈ ದಿನದಲ್ಲಿ ಮಾಡುವ ಸ್ನಾನದಿಂದ ಯಮಲೋಕದ ದರ್ಶನವೂ ಉಂಟಾಗದು ಎಂದು ಪದ್ಮಪುರಾಣದಲ್ಲಿ ಉಲ್ಲೇಖವಿದೆ. ಇದಕ್ಕೊಂದು ಪುರಾಣಕಥೆಯನ್ನೂ ಹೇಳುವುದುಂಟು. ನರಕಾಸುರನು ಹದಿನಾರುಸಾವಿರ ಸ್ತ್ರೀಯರನ್ನು ಬಲಾತ್ಕಾರವಾಗಿ ತನ್ನ  ಸೆರೆಮನೆಯಲ್ಲಿ ಇರಿಸಿಕೊಂಡ. ಈತನ ಉಪಟಳ ಹೆಚ್ಚಾಗಿತ್ತು. ಶ್ರೀಕೃಷ್ಣನು ಅಸುರನನ್ನು ಸಂಹಾರ ಮಾಡಿ ಬಂಧಿತರಾದ ಆ ಸ್ತ್ರೀಯರನ್ನು ಬಿಡುಗಡೆಗೊಳಿಸಿ ಅವರಲ್ಲಿ ಆತ್ಮರತಿಯನ್ನು ಉಂಟುಮಾಡುವಂತೆ ಮಾಡಿದ. ನರಕಾಸುರನ ತಾಯಿಯ ಪ್ರಾರ್ಥನೆಯನ್ನು ಒಪ್ಪಿ ಅಂದಿನಿಂದ ಈ ದಿನವನ್ನು ನರಕಚತುರ್ದಶಿಯೆಂದು ಆಚರಿಸಲಾಗುವುದು ಎಂದು ಭಗವಂತ ಲೋಕಕ್ಕೆ ಅನುಗ್ರಹಿಸಿದ ಪರ್ವಕಾಲ. ಪುರಾಣಕಥೆ ಏನೇ ಇರಲಿ. ಇಲ್ಲೊಂದು ತಾತ್ತ್ವಿಕವಾದ ಅಂಶವೊಂದಿದೆ. ಶ್ರೀಶ್ರೀರಂಗಪ್ರಿಯಸ್ವಾಮಿಗಳು ತಮ್ಮ ‘ಭಾರತೀಯರ ಹಬ್ಬಹರಿದಿನಗಳು’ ಎಂಬ ಪುಸ್ತಕದಲ್ಲಿ ಹೀಗೆ ವಿವರಿಸಿದ್ದಾರೆ. “ಶ್ರೀಕೃಷ್ಣನು ಪ್ರತ್ಯಕ್ ಜ್ಯೋತಿಯಾದ ಭಗವಂತ. ನರಕಾಸುರನು ಹೊರಗಿನ ಬೆಳಕಿನ ಪ್ರತಿರೂಪವಾದ ಪ್ರಾಗ್ಜ್ಯೋತಿಷಪುರದ ರಾಜ. ಹದಿನಾರುಸಾವಿರ ನಾರಿ ಅಂದರೆ ನಾಡಿಗಳು. ಪ್ರಣವಪಕ್ಷಿಯಾದ ಗರುಡನನ್ನು ಏರಿ ವಿಷ್ಣುವು ಪಂಚಭೂತಾತ್ಮಕನಾದ ಆಸುರೀ ಶಕ್ತಿಯನ್ನು ಸಂಹರಿಸಿದ. ಹದಿನಾರುಸಾವಿರನಾಡಿಗಳಲ್ಲಿ ತನ್ನ ಶಕ್ತಿಯನ್ನು ಹರಿಸಿ ಆ ಜೀವವನ್ನು ಉದ್ಧರಿಸಿದ ಎಂಬ ತಾತ್ತ್ವಿಕ ಹಿನ್ನೆಲೆ ಇದಕ್ಕಿದೆ.

ಲಕ್ಷ್ಮೀಪೂಜೆಯ  ವಿಶೇಷತೆ

ಆಶ್ವಯುಜಮಾಸದ ಅಮಾಮಾಸ್ಯೆಯಂದು ಲಕ್ಷ್ಮೀಪೂಜೆಯನ್ನು ಮಾಡುತ್ತಾರೆ. ಅಂದೂ ಕೂಡಾ ಬೆಳಿಗ್ಗೆ ಅಭ್ಯಂಗಸ್ನಾನ ಮಾಡಬೇಕು. ಲಕ್ಷ್ಮೀದೇವಿಯನ್ನು ವಿಗ್ರಹದಲ್ಲೋ, ಕಲಶದಲ್ಲೋ ಆವಾಹನೆ ಮಾಡಿ ಪೂಜಿಸಬೇಕು. ಲಕ್ಷ್ಮೀಪೂಜೆಗೆ ಪ್ರದೋಷ ಅತ್ಯಂತಶ್ರೇಷ್ಠವಾದ ಕಾಲ. ಪ್ರದೋಷಕಾಲದಿಂದ ಆರಂಭಿಸಿ ಅರ್ಧರಾತ್ರಿಯವರೆಗೂ ಪೂಜೆ ಮಾಡಬಹುದು. ಇದರ ಜೊತೆ ಧನಪತಿಯಾದ ಕುಬೇರನನ್ನೂ ಆರಾಧಿಸುವ ಅಭ್ಯಾಸವಿದೆ. ಈ ದಿನ ಹಗಲು ಬಾಲಕರು, ರೋಗಿಗಳನ್ನು ಬಿಟ್ಟು ಯಾರೂ ಊಟ ಮಾಡಬಾರದು. ದೀಪವೃಕ್ಷಗಳನ್ನು ದಾನ ಮಾಡಬೇಕು. ವಿಶೇಷವಾಗಿ ವ್ಯಾಪಾರಿಗಳು ಸಾಯಂಕಾಲ ಅಂಗಡಿಯಲ್ಲಿ ತಾವು ಸಂಪಾದಿಸಿದ ಧನವನ್ನೇ ಲಕ್ಷ್ಮಿಯೆಂದು ಭಾವಿಸಿ ಅದು ಇನ್ನಷ್ಟು ವೃದ್ಧಿಯಾಗಲಿ ಎಂದು ಸಂಕಲ್ಪ ಮಾಡಿ ಪೂಜಿಸಿ ಬಂಧುಬಾಂಧವರು ಇಷ್ಟಮಿತ್ರರಿಗೆ ಸಿಹಿ ವಿತರಿಸಿ ಸಂಭ್ರಮಿಸುತ್ತಾರೆ.  


ಬಲಿಪಾಡ್ಯಮೀ - ವಿಶೇಷಪೂಜೆ 

ಕಾರ್ತಿಕ ಮಾಸದ ಮೊದಲದಿನವೇ ಬಲಿಪಾಡ್ಯಮೀ. ಹೇಸರೇ ಹೇಳುವಂತೆ ಈ ದಿನ ಬಲಿಗೆ ವಿಶೇಷಪೂಜೆ ಸಲ್ಲುತ್ತದೆ. ರಾತ್ರಿ ರಾಜನಾದವನು ದೈತ್ಯಪತಿಯಾದ ಬಲಿಯನ್ನು ಪೂಜಿಸಬೇಕು. ಐದು ಬಗೆಯ ಬಣ್ಣಗಳಿಂದ ಬಲಿಯನ್ನು ಭೂಮಿಯ ಮೇಲೆ ಚಿತ್ರಿಸಿ ಮನೆಯೊಳಗೆ ಬಲಿಯನ್ನು ಕಲಶದಲ್ಲಿ ಆವಾಹಿಸಿ ಅರ್ಚಿಸಬೇಕು. ಸಾಮಾನ್ಯರು ಮಂಚದ ಮೇಲೆ ಬಿಳಿಯ ಅಕ್ಕಿಯಲ್ಲಿ  ಬಲಿಯನ್ನು ಆವಾಹಿಸಿ ಫಲ ಪುಷ್ಪಗಳಿಂದ ಅರ್ಚಿಸಬೇಕು. “ಬಲಿರಾಜ ನಮಸ್ತುಭ್ಯಂ ದೈತ್ಯದಾನವವಂದಿತ | ಇಂದ್ರಶರೋಽಮರಾರಾತೇ ವಿಷ್ಣುಸಾನ್ನಿಧ್ಯದೋ ಭವ” ಎಂಬ ಮಂತ್ರದಿಂದ ಪೂಜಿಸಬೇಕು.
“ಪೂಜಾಂ ಕುರ್ಯಾತ್ ನೃಪಃ ಸಾಕ್ಷಾತ್ ಭೂಮೌ ಮಂಡಲಕೇ ಶುಭೇ |
ಬಲಿಮಾಲಿಖ್ಯ ದೈತ್ಯೇಂದ್ರಂ ವರ್ಣಕೈಃ ಪಂಚರಂಗಕೈಃ |
ಲೋಕಶ್ಚಾಪಿ ಗೃಹಸ್ಯಾಂತಃ ಶಯ್ಯಾಯಾಂ ಶುಕ್ಲತಂಡುಲೈಃ |
ಸಂಸ್ಥಾಪ್ಯ ಬಲಿರಾಜಾನಂ ಫಲೈಃ ಪುಷ್ಪೈಃ ತು ಪೂಜಯೇತ್ ||-(ಹೇಮಾದ್ರಿ)
ಕೆಲವು ಕಡೆ ನರಕಚತುರ್ದಶಿಯಂದೇ ಬಲಿಯನ್ನು ಆವಾಹಿಸಿ ಪಾಡ್ಯದಂದು ವಿಸರ್ಜಿಸುವ ಪದ್ಧತಿಯೂ ಇದೆ. ಬಲಿಮಹಾರಾಜನು ದಾನಕ್ಕೆ ಪ್ರಸಿದ್ಧನು. ಅದಕ್ಕೇ ಆ ದಿನ ಮಾಡುವ ದಾನಕ್ಕೆ ವಿಶೇಷಫಲವನ್ನು ಶಾಸ್ತ್ರವು ಹೇಳಿದೆ. ಅಮಾಯುಕ್ತವಾದ ಪಾಡ್ಯದಂದು ಉಪವಾಸವಿದ್ದು ಬಲಿಯನ್ನು ಪೂಜಿಸಿ ಗೋವನ್ನೂ ಯಾರು ಪೂಜಿಸುತ್ತಾರೋ ಅಂತಹ ರಾಜ್ಯದಲ್ಲಿ ಪ್ರಜೆಗಳು, ಗೋವುಗಳು ಮತ್ತು ರಾಜರು ಅಭಿವೃದ್ಧಿಯನ್ನು ಹೊಂದುವರು ಎಂಬ ಮಾತಿದೆ.

ಈ ಉತ್ಸವಕ್ಕೆ ಒಂದು ಪುರಾಣ ಮತ್ತು ತಾತ್ತ್ವಿಕವಾದ ಹಿನ್ನೆಲೆಯಿದೆ. ವಿಷ್ಣುವು ವಾಮನನ ರೂಪದಲ್ಲಿ ಅವತರಿಸಿ ಇಂದ್ರನ ರಾಜ್ಯವನ್ನು ಅಪಹರಿಸಿ ಅಧರ್ಮದಿಂದ ರಾಜ್ಯಭಾರ ಮಾಡುತ್ತಿದ್ದ ಬಲಿಯ ದರ್ಪವನ್ನು ಅಡಗಿಸಿ ಪಾತಾಲಲೋಕಕ್ಕೆ ತಳ್ಳಿ ಇಂದ್ರನ ರಾಜ್ಯವನ್ನು ಮರಳಿಸಿದ ಎಂಬುದು ಪುರಾಣಕಥೆ. ಬಲಿಯ ತಲೆಯ ಮೇಲೆ ತನ್ನ ದಿವ್ಯಪಾದನ್ನು ಇಟ್ಟು ಬಲಿಯಲ್ಲಿದ್ದ ಆಸುರಭಾವವನ್ನು ದೂರಮಾಡಿದ ಭಗವಂತ. ಅವನನ್ನು ಪುನೀತನನ್ನಾಗಿ ಮಾಡಿ ಉದ್ಧರಿಸಿದ ವಿಧಾನವಿದು. ಇದರಿಂದ  ಬಲಿಯು ಚಿರಜೀವಿಪಟ್ಟವನ್ನು ಪಡೆದ. ಭಗವಂತನ ಅನುಗ್ರಹವೆಂದು ತಿಳಿದ ಪರಮಭಾಗವತನೀತ. ಹಾಗಾಗಿ ಭಾಗವತರನ್ನು ಪೂಜಿಸುವುದು ಭಗವಂತನನ್ನು ಪೂಜಿಸಿದಷ್ಟೇ ಫಲ.

ಪಗಡೆಯಾಟದ ಹಿನ್ನೆಲೆ

ಈ ದಿನ ಬೆಳಿಗ್ಗೆ ಪಗಡೆಯಾಟವನ್ನು ಆಡುವ ರೂಢಿಯಿದೆ. ಪಾರ್ವತೀಪರಮೇಶ್ವರರು ಸೃಷ್ಟಿಯ ವಿನೋದಕ್ಕಾಗಿ ಪಗಡೆಯಾಡಿದರು ಎಂಬ ಪುರಾಣಕಥೆಯ ಹಿನ್ನೆಲೆಯಲ್ಲಿ ಪಗಡೆಯಾಟ ಬಂದಿದೆ. ಈ ಪಗಡೆಯಾಟದಲ್ಲಿ ತಾತ್ತ್ವಿಕವಾದ ಆಶಯವೂ ಅಡಗಿದೆ ಎಂಬುದಾಗಿ ಶ್ರೀಶ್ರೀರಂಗಪ್ರಿಯಸ್ವಾಮಿಗಳು ಹೀಗೆ ವಿವರಿಸಿದ್ದರು “ಇದು ಸೃಷ್ಟಿಯಲ್ಲಿ ಬರುವ ತ್ರಿಗುಣಗಳ ಆಟ. ಜೀವಿಗಳು ಇಲ್ಲಿ ಪಗಡೆಕಾಯಿಗಳು. ಪುಣ್ಯಪಾಪರೂಪವಾದ ಜೀವಿಗಳ ಕರ್ಮಗಳು ದಾಳ. ಕೆಲವು ಕಾಯಿಗಳು ಹೊಡೆಯಲ್ಪಡುತ್ತವೆ. ಇನ್ನು ಕೆಲವು ಕಾಯಿಗಳು ಹಣ್ಣಾಗುತ್ತವೆ. ಹೊಡೆಯಲ್ಪಡುವ ಕಾಯಿಗಳು (ಜೀವಿಗಳು) ತಮ್ಮ ಕರ್ಮಾನುಗುಣವಾಗಿ ಪುನರ್ಜನ್ಮವನ್ನು ಪಡೆಯುತ್ತವೆ. ಹಣ್ಣಾದ ಕಾಯಿಗಳು ಮೋಕ್ಷವನ್ನು ಪಡೆಯುತ್ತವೆ. ಕೊನೆಗೊಮ್ಮೆ ಎಲ್ಲಾ ಕಾಯಿಗಳೂ ಹಣ್ಣಾಗುವಂತೆ ಎಲ್ಲಾ ಜೀವಿಗಳೂ ಮೋಕ್ಷವನ್ನು ಪಡೆಯಬೇಕು” ಎಂದು. ಇಂತಹ ಜಗನ್ಮಾತಾಪಿತೃಗಳನ್ನು ಸ್ಮರಿಸಿಕೊಂಡು ಆಡುವ ಆಟವಿದು.

ಭಗಿನೀದ್ವಿತೀಯಾ/ ಯಮದ್ವಿತೀಯಾ

ಕಾರ್ತಿಕಶುಕ್ಲಪಕ್ಷದ ಎರಡನೆಯ ದಿನದಂದು ಈ ಹಬ್ಬವನ್ನು ಆಚರಿಸಲಾಗುವುದು. ಈ ದಿನ ಯಮನು ತನ್ನ ಸೋದರಿ ಯಮುನೆಯ ಮನೆಗೆ ಹೋಗಿ ಆತಿಥ್ಯ ಸ್ವೀಕರಿಸಿದ ಎಂಬ ನಂಬಿಕೆಯಿದೆ. ಇದನ್ನೇ ಹಿನ್ನೆಲೆಯಾಗಿಸಿಕೊಂಡು ಅಂದು ಸೋದರಿಯರ ಮನೆಗೆ ಹೋಗಿ ಅವಳಿಂದ ಭೋಜನಸ್ವೀಕರಿಸಬೇಕು. ಮತ್ತು ಸೋದರಿಗೆ ಉಡುಗೊರೆ ಕೊಟ್ಟು ಗೌರವಿಸುವ ಪದ್ಧತಿಯಿದೆ.  ಈ ದಿನ ಬೆಳಿಗ್ಗೆ ಯಮುನಾನದಿಯಲ್ಲಿ ಸ್ನಾನ ಮಾಡಿದರೆ ಯಮಲೋಕವನ್ನು ನೋಡುವುದಿಲ್ಲ ಎಂಬ ಮಾತಿದೆ. ಮತ್ತು ಯಮ, ಚಿತ್ರಗುಪ್ತ ಮತ್ತು ಯಮದೂತರಿಗೆ ಅರ್ಘ್ಯಪಾದ್ಯಾದಿಗಳಿಂದ ಪೂಜಿಸಬೇಕು. ಯಾವ ನಾರಿಯು ಈ ದಿನ ಅಣ್ಣನನ್ನು ಫಲತಾಂಬೂಲಾದಿಗಳಿಂದ ಸತ್ಕರಿಸುವಳೋ ಅವಳು ವೈಧವ್ಯವನ್ನು ಹೊಂದಲಾರಳು ಎಂಬ ಶಾಸ್ತ್ರವಚನವಿದೆ. ಈ ಎಲ್ಲಾ ಕಾರಣದಿಂದ ಈ ದಿನಕ್ಕೆ ಅಷ್ಟೊಂದು ವಿಶೇಷತೆ.

ஶ்ரீரங்கமஹாகுரு - 40 (Sriranga Mahaguru - 40)

ஶ்ரீகுருவின் கண்ணோட்டம் – 29

சிற்பத்தை காண தேவையான கண்ணோட்டம்

===========================================================

மூலம்: திரு சாயாபதி
தமிழாக்கம்: திருமதி ஜானகி


ஓர் சிற்பத்தை மக்கள் வெவ்வேறு விதமாக காண்பதுண்டு. அதை காணவேண்டிய சரியான கண்ணோட்டத்தை  எடுத்துக்காட்டுவதற்காக ஶ்ரீரங்க மஹாகுரு அளித்த விளக்கமிது.

               மைசூர் நகரத்தில் கிருஷ்ணராஜ வ்ருத்தம் எனும் ஓர் நாற்சந்தியில்  நால்வடி கிருஷ்ணராஜ ஒடயர் எனும் ஒரு புகழ்பெற்ற அரசரின் உருவம் செதுக்கப்பட்டுள்ளது. பளிங்கு சிலையில் செதுக்கபட்ட அச்சிற்பத்தை காணும்போது அவ்வரசனை நேரில் காணும் அனுபவத்தை அளிக்கும் வகையில் மிகவும் அழகுடன் கூடியதாக விளங்குகிறது.

               ’அங்கு செதுக்க பட்ட மீசை எத்துணை அழகு?”,  ’அதில் காணப்படும் ராஜ கம்பீரத்தை பார்” என்பவர் சிலர்.  ஒவ்வொரு அவயவத்தின் அழகையும் கண்டு ரசிக்கும் மக்கள் சிலர்.

அங்கே அரசருக்கே உரிய உடை,  அவர் கத்தியை பிடித்துள்ள தோரணை முதலியனவற்றை ரசிப்பவர் பலர். இவ்வாறு அனைவரும் சிற்பத்தின் அழகை புகழ்ந்துபேசுபவர்களே.

               ஆனால் அந்த அரசனுடன் சேர்ந்து வாழ்ந்த  அரசி அச்சிற்பத்தை கண்டவுடன் தான் அவனுடன் வாழ்ந்த  இனிய நாட்களுக்கே சென்று விடுகிறாள். அந்த இனிய நினைவுகளின்பால் மட்டுமே மனம் செல்கிறது. வெளியே காணப்படும் சிற்பத்தின் அழகு,தோரணை, அவயங்களின் மெருகு, உடையலங்காரம் முதலியவைகளை மனம் நாடுவதில்லை.  இனிய நினைவுகளால் ஆட்கொள்ளப்பட்டு வெளிஉணர்வின்றி  சிற்பத்தை அணைத்துக் கொள்கிறாள். உள்ளம் கரைகிறது. அவளுக்கு அது சிற்பமல்ல. உயிருள்ள உருவம்.

                அவ்வாறே ஓர் தெய்வசிற்பத்தை காணும் போது அதன் உள்ளழகை அறியாதவர் மனம் அதன்  ஆபரணங்களின் மெருகு, உடையலங்காரம், தோரணை முதலானவற்றில் மட்டுமே அலைகிறது.

                  ஆனால் தெய்வச்சிலை  எந்த உள்உறையும் சக்தியின் ப்ரதிநிதியாக உள்ளதோ அவ்வுள்அனுபவத்தை அடைந்த ஞானிகள் அதை கண்டவுடனே இதயத்தில் கண்ட சத்தியத்தின் பால் அவர்கள் மனம் தாவுகிறது. வெளிப்பார்வைக்கு காணப்படும் எந்த அழகிலும் மனம் செல்லாது தாம் அனுபவித்த  இறைஉணர்வில் மனம்ஒன்றி பரமானந்தத்தில் லயிக்கிறார்கள். ஆனந்த கண்ணீர் சொறிந்து, உடல் சிலிர்த்து நிற்கிறார்கள். அந்த மெய்பொருளின்பால் ஈர்ப்பதற்கே இந்த சிற்பம். தன் உள்உரையும் இறைவனிடம் இணைந்து அதற்கு வழிகாட்டும் ஞானிகள்தான் சிற்பங்களின் உண்மையை உணர்த்த முடியும். அவர்களுக்கு விக்ரகமென்பது உள் ஈர்க்கும் ஓர் கைகாட்டி மட்டுமே. அவர்களே இறைஉணர்வில் ஒன்றாய்திளைக்கும் பக்தர்கள்.

Sunday, October 27, 2019

ஶ்ரீரங்கமஹாகுரு - 39 (Sriranga Mahaguru - 39)

ஶ்ரீகுருவின் கண்ணோட்டம் – 28
கலைபடைபிற்கு மேலும் மெருகேற்றுதல் தேவையா?
===========================================================
மூலம்: ஸ்ரீ வரத தேசிகாசார்யார்
தமிழாக்கம் : திருமதி வனஜா




“சிற்பி செதுக்கும் இறைவடிவமே ரசிகனின் மனதை கொள்ளை கொள்கிறது. அவனில் மகிழ்ச்சியை நிரப்புகிறது. இவ்வாறிருக்கையில் புரோகிதர்கள் அதற்கு மந்திர-தந்திர சடங்குகள் செய்வது ஏன்? இச்சடங்குகள் இல்லை எனினும் மக்கள் அதன் இயற்கை அழகை ரசிக்கலாமல்லவா?”

 “சிற்பியும் கல்லை செதுக்கி அதற்கு இறைவடிவை ஏன் அளிக்க வேண்டும்? கல் கல்லாகவே  இருந்தாலும் அதன் இயல்பான நிறம் மற்றும் உருவத்தில் மக்கள் அதனை ரசிக்க இயலாதா?”

 “அவ்வாறில்லை.  சிற்பி அதை சிறப்பாக செதுக்கி அதனில் கலை அழகை ஏற்படுத்துகிறான். அதனை காண்கையில் மக்களின் மனது மகிழ்ச்சியில் புல்லரிக்கின்றது. எனவே சிற்பியை அவன் படைப்பிற்காக பாராட்டுகிறோம்”

  “அவ்வாறே ஞானிகளும் தங்கள் தவத்தின் பலனால் கல்லினால் உண்டான அந்த  உருவத்திற்கு  இறைதன்மையை அளிக்கின்றனர். அதற்கு உயிரூட்டுகின்றனர். இறைஅழகு நிரம்பும்படி செய்கின்றனர். அதனை தரிசித்து பூஜிக்கையில் மக்களின் மனதில் மகிழ்ச்சி அதிகரிக்கின்றது. எனவே தவத்தில் சிறந்த ஞானிகளை நாம் நன்றியுடன் கௌரவிக்கின்றோம்.

  “இறைவனின் சிற்பத்தை காணும் அனைவருக்குமே இறைவனுடன் ஒன்றிடும் மகிழ்ச்சி ஏற்படுவதில்லையே?”

 “இறையுருவில் உள்ள கலையழகை ரசித்துமகிழாத மக்களும் இருக்கின்றார்கள் அல்லவா?”

 “அவர்கள் ரசிக தன்மையற்ற அறிவிலிகள். எனவே சிற்பகலை அவர்களில் மகிழ்ச்சி அலைகளை ஏற்படுத்துவதில்லை”.

   “அவ்வாறே இறையுருவை கண்டு மகிழாதவர் பக்தி உணர்வற்ற பாமரர்கள் என்று அறிந்தவர்கள் கூறுவர். ஈடுபாடும், பக்தியும் கலையின்பால் உள்ள விருப்பத்தை போன்றே சிறப்பானது. இவ்விரண்டிற்கும் தூய்மையான மனமும் ரசிக்கும் தன்மையும் தேவை.

ಲೋಕಹಿತ (Lokahitha)

ಲೇಖಕರು:  ವಿದ್ವಾನ್  ಎನ್. ಎನ್.ಚಂದ್ರಶೇಖರಭಟ್ಟ



ದೇವನೊಂದಿಗೆ ಸೇರಿ ಬಾಳುವುದರಿಂದ ಸೃಷ್ಟಿವ್ಯಾಪಾರ ಸುಗಮವಾಗುತ್ತದೆ. ಇದನ್ನೇ ದಿವಿ-ಭುವಿಗಳ ಸಂಗಮವೆನ್ನುತ್ತಾರೆ. ಈ ಸಂಗಮ ತಪ್ಪಿದಾಗ ಲೋಕದಲ್ಲಿ  ಅನಾಹುತಗಳು ತಪ್ಪಿದ್ದಲ್ಲ. ಮನುಷ್ಯ ಯಾವಾಗ ನಾನು ಸರ್ವಸಮರ್ಥ, ನನ್ನ ಮುಂದೆ ಯಾರೂ ನಿಲ್ಲಲಾರರು ಎಂದು ಭಾವಿಸುತ್ತಾ ರಾಕ್ಷಸೀಪ್ರವೃತ್ತಿಯಿಂದ ಮೆರೆಯುತ್ತಾನೋ ಆಗ ದೈವವು "ಹೋಗು, ನಿನ್ನಂತೆ ಇರು" ಎಂದು ಸುಮ್ಮನಾಗುತ್ತದೆ. ಅದಿಲ್ಲದೆ "ನನ್ನ ಕರ್ತವ್ಯವನ್ನು ನಾನು ಮಾಡಿದ್ದೇನೆ, ಅದನ್ನು ಆಗಿಸುವ ಜವಾಬ್ದಾರಿ ನಿನ್ನದು" ಎಂದು "ಪಂಚಮಂ ದೈವಚಿಂತನಮ್" ಎಂದು ದೈವಕ್ಕೆ ತನ್ನನ್ನು ಕೊಟ್ಟುಕೊಂಡುಬಿಡುತ್ತಾನೋ ಆಗ ದೈವವು ತನ್ನ ಕೈನೀಡಿ ಸಹಕರಿಸುತ್ತದೆ.

 ಮಹಾಕವಿ ಕಾಳಿದಾಸನು ದೈವ-ಮಾನುಷ ಸಂಬಂಧವನ್ನು ಬಹಳ ಸುಂದರವಾಗಿ, ತನ್ನ ರಘುವಂಶ ಮಹಾಕಾವ್ಯದಲ್ಲಿ ವರ್ಣಿಸಿದ್ದಾನೆ. ದಿಲೀಪಮಹಾರಾಜನು ತನ್ನ ಪ್ರಜೆಗಳ ಮೂಲಕ ಭೂಮಿಯನ್ನು ಉತ್ತಿ,ಬಿತ್ತಿ, ಬೆಳೆಸಿ ಬಂದ ಫಲವನ್ನು ದೈವಕ್ಕೆ ನಿವೇದಿಸಿ ಅನಂತರ ತನ್ನ ಪ್ರಜೆಗಳಲ್ಲಿ ವಿತರಿಸಿದನಂತೆ. ಹಾಗೆ ಇವನ ನಿವೇದನವನ್ನು ಸ್ವೀಕರಿಸಿದ ಇಂದ್ರನು ತಾನು ಮಳೆಗರೆದು, ಭೂಮಿಯು ಸಸ್ಯಸಮೃದ್ಧವಾಗುವಂತೆ, ಧನಧಾನ್ಯಸಮೃದ್ಧವಾಗುವಂತೆ ಮಾಡಿದನಂತೆ. ಹೀಗೆ ರಾಜಾ-ಇಂದ್ರರು ಇಬ್ಬರೂ ಹೊಂದಾಣಿಕೆಯಿಂದ ಎರಡೂ ಲೋಕಗಳನ್ನು ಭರಣಮಾಡಿದರಂತೆ!
 ಇಂದು ಪ್ರಪಂಚದಲ್ಲಿ  ಅತಿವೃಷ್ಟಿ, ಅನಾವೃಷ್ಟಿ, ಅತ್ಯಾಚಾರ, ಅನಾಚಾರ ಇತ್ಯಾದಿಗಳನ್ನು ಕಾಣುತ್ತೇವೆಯೋ, ಇವೆಲ್ಲವೂ ಮಾನವನ ಅಜ್ಞಾನದ, ಅವಿವೇಕದ, ಅಹಂಕಾರದ, ಉದ್ಧಟತನದ, ದ್ವೇಷಾಸೂಯೆಗಳ ಫಲ. ಇವನ್ನು ಬಿಟ್ಟು ಕಬೀರವಾಣಿಯಂತೆ-

"ಹೇ ಸ್ವಾಮೀ, ನನಗೆ ನನ್ನ ಪರಿವಾರವನ್ನು ಸಾಕಿ ಸಲಹಲು ಬೇಕಾಗುವಷ್ಟು-ಸಾಕಾಗುವಷ್ಟು ಸಂಪತ್ತನ್ನು ಮಾತ್ರ ಕೊಡು, ಅದಕ್ಕಿಂತ ಹೆಚ್ಚಿಗೆ ಬೇಡ. ಕಾರಣ ನನ್ನ ಕುಟುಂಬ ಹಸಿದಿರಬಾರದು. ಜೊತೆಗೆ ಅದಕ್ಕಿಂತ ಹೆಚ್ಚಿಗೆ ನನ್ನಲ್ಲಿ ಸಂಪತ್ತು ಸಂಗ್ರಹವಾದರೆ ಅದು ನನ್ನದಲ್ಲ, ಇನ್ನೊಬ್ಬರದು. ಅವರ ಸಂಪತ್ತನ್ನು ನಾನು ಅಪಹರಿಸಿ, ಅವರು ಹಸಿವಿನಿಂದ ನರಳುವಂತಹ ತಪ್ಪು ನಡೆಯಬಾರದು”. ಆತ್ಮಗುಣಗಳಲ್ಲಿ "ಅಪರಿಗ್ರಹ" ಎಂಬುದೂ ಒಂದು. ಎಂದರೆ ಇನ್ನೊಬ್ಬರ ಸಂಪತ್ತಿಗೆ ಆಸೆಪಡದಿರುವುದು- ಅಪಹರಿಸದಿರುವುದು. ಇಂತಹ ಆತ್ಮಗುಣ ನಮ್ಮಲ್ಲಿ ಬೆಳೆಯುವಂತೆ ಆಗಬೇಕು.
 ಭಗವಂತನು ಕೊಟ್ಟದ್ದನ್ನು ಅವನಿಗೆ ಸಮರ್ಪಣೆ ಮಾಡಿ ಅದನ್ನು ಅವನ ಪ್ರಸಾದವಾಗಿ ಉಪಭೋಗಿಸುವುದು ನಮ್ಮ ಸಂಸ್ಕೃತಿಯ ಹಿರಿಮೆ. ಭಗವದ್ಗೀತೆಯಲ್ಲಿ ಶ್ರೀಕೃಷ್ಣನು

"ಇಷ್ಟಾನ್ಭೋಗಾನ್ಹಿವೋದೇವಾದಾಸ್ಯಂತೇಯಜ್ಞಭಾವಿತಾಃ|
ತೈರ್ದತ್ತಾನಪ್ರದಾಯೈಭ್ಯೋಯೋಭುಂಕ್ತೇಸ್ತೇನಏವಸಃ||"

 ಭಗವಂತನ ಪೂಜೆಯನ್ನು ಮಾಡಿ, ಅವನ ಭಾವವನ್ನು ತುಂಬಿಕೊಂಡಾಗ ಅವನು ನಮ್ಮ ಇಷ್ಟವಾದ ಭೋಗಗಳನ್ನು ಕೊಡುತ್ತಾನೆ. ಹಾಗೆ ಅವನು ಅನುಗ್ರಹಿಸಿ ಕೊಟ್ಟಿದ್ದನ್ನು  ಅವನ ಪ್ರಸಾದವೆಂದು ಭಾವಿಸಿ, ಅವನಿಗೆ ಸಮರ್ಪಿಸದೇ ಒಂದು ವೇಳೆ ಉಪಭೋಗಿಸಿದರೆ ಅದು ಕಳ್ಳತನವಾಗುತ್ತದೆ.

“ನಮ್ಮ ಮನೋರಥಗಳೆಷ್ಟೇ ಇರಲಿ. ಅವುಗಳೆಲ್ಲದರ ಮೇಲೆ ಭಗವಂತನನ್ನು ಕೂಡಿಸಿ ನಮ್ಮ ಜೀವನರಥವನ್ನು ಎಳೆಯುವುದಾದರೆ, ಆತ್ಮ-ಕಲ್ಯಾಣ,ಲೋಕ-ಕಲ್ಯಾಣ ಎರಡೂ ಸಿದ್ಧಿಸುತ್ತವೆ” ಎಂಬ ಶ್ರೀರಂಗಮಹಾಗುರುಗಳ ಅಮೃತವಾಣಿ ಇಲ್ಲಿ ಸ್ಮರಣೀಯ.

 ಆದ್ದರಿಂದ ಸೃಷ್ಟಿಯಲ್ಲಿ ನಡೆಯುವ ಅನಾಹುತಗಳನ್ನು- ಏರುಪೇರುಗಳನ್ನು ತಪ್ಪಿಸಲು ದಿವಿ-ಭುವಿಗಳ ಸಹಜ ಸಂಗಮವಾಗಬೇಕು.


ಸೂಚನೆ:  27/10/2019 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ಅಂಕಣದಲ್ಲಿ ಪ್ರಕಟವಾಗಿದೆ.

ಆಹಾರ-ಭಾರತೀಯ ನೋಟ (Aahaara-Bharatheeya nota)

ಲೇಖಕರು: ತಾರೋಡಿ ಸುರೇಶ


ಅನ್ನ,ವಸ್ತ್ರ, ವಸತಿ ಇತ್ಯಾದಿ ಮಾನವನ ಮೂಲಭೂತ ಅಗತ್ಯಗಳಲ್ಲಿ ಆಹಾರ ಮೊದಲ ಸ್ಥಾನ ಪಡೆದಿದೆ. “ಹೊಟ್ಟೆಗಾಗಿ, ಗೇಣುಬಟ್ಟೆಗಾಗಿ ಪಹಲೇ ಪೇಟೂಬಾ ಫಿರ್ ವಿಠೋಬಾ” ಹೀಗೆ ಆಹಾರಕ್ಕೇ ಮೊದಲ ಮಾನ್ಯತೆ. ಇದು ಮಾನವನಿಗೆ ಮಾತ್ರವಲ್ಲ. ಎಲ್ಲ ಜೀವಿಗಳಿಗೂ ಆಹಾರ ಅನಿವಾರ್ಯ.

ಆದರೆ ಮಾನವನಿಗೆ ಆಹಾರವನ್ನು ಕುರಿತು ನಾನಾ ವಿಧಿ-ನಿಷೇಧಗಳನ್ನು ಆರೋಗ್ಯಶಾಸ್ತ್ರಗಳೂ ಹಾಗೆಯೇ ಧರ್ಮಶಾಸ್ತ್ರಗಳೂ ವಿಧಿಸುತ್ತವೆ. ಆಧುನಿಕ ನೋಟವೂ ತನ್ನದೇ ಆದ ದೃಷ್ಟಿಯನ್ನು ಪ್ರತಿಪಾದಿಸುತ್ತದೆ. ಅನೇಕ ಭಾರಿ ಆಧುನಿಕ ನೋಟ ಹಾಗೂ ಪರಂಪರಾಗತ ನೋಟಗಳು ಪರಸ್ಪರ ವಿರೋಧವಾಗಿರುವುದೂ ಕಂಡುಬರುತ್ತದೆ. ಉದಾಹರಣೆಗೆ ಆಹಾರಸೇವನೆಯ ಉದ್ದೇಶವನ್ನೇ ಗಮನಿಸಬಹುದು. ಆಧುನಿಕ ಚಿಂತಕರು ಹಸಿವಿನ ನಿವಾರಣೆ, ಆರೋಗ್ಯ ರಕ್ಷಣೆಯನ್ನು ಪ್ರಧಾನವಾಗಿ ಹೇಳುತ್ತಾರೆ. ಅದೇ ಭಾರತೀಯ ಪರಂಪರೆಯಲ್ಲಿ ಹಸಿವಡಗಿಸುವಿಕೆ, ಅರೋಗದೃಢಕಾಯತೆಯ ಜೊತೆಯಲ್ಲಿ ಪರಮಾತ್ಮ ಸಾಕ್ಷಾತ್ಕಾರ, ದೇವತಾಪ್ರಸನ್ನತೆಯವರೆಗೂ  ಅದರ ವ್ಯಾಪ್ತಿಯಿರುವುದನ್ನು ಅನ್ವೇಷಿಸಿ ಘೋಷಿಸಿದ್ದಾರೆ.

ಮಾನವದೇಹವು ಪರಮಶ್ರೇಷ್ಠವಾದ ಯಂತ್ರವೆಂದು ಜೀವಿಗಳಲ್ಲಿ ಮುಕುಟಪ್ರಾಯವಾದುದು ಎಂದು ಎಲ್ಲರೂ ಒಪ್ಪುತ್ತಾರೆ. ಅಂತಹ ದೇಹವನ್ನು ಬಳಸುವಾಗ ಅದರ ಪೂರ್ಣವಾದ ಪರಿಚಯ ಬೇಕು. ಅದರ ಸಮಗ್ರ ಪರಿಚಯವನ್ನು ಪಡೆದು ನಂತರ ಒಂದು ಕಾಯಕಲ್ಪ ನಡೆದರೆ ಆಗ ತಾನೇ ನಿರ್ದಿಷ್ಟವಾದ ಫಲವನ್ನು ನಿರೀಕ್ಷಿಸಬಹುದು. ಆಧುನಿಕ ವಿಜ್ಞಾನವು ಮಾನವದೇಹದ ಪರಿಚಯವನ್ನು ತನ್ನದೇ ಆದ ಕ್ರಮದಲ್ಲಿ ಅನ್ವೇಷಣೆ ನಡೆಸಿ ವಿವರಿಸಿದೆ. 

ಹಾಗೆಯೇ ಭಾರತದ ಋಷಿಮುನಿಗಳೂ ಕೂಡ ದೇಹದ ಸ್ವರೂಪ, ಅದರಲ್ಲಿರುವ ವಿವಿಧ ತತ್ವಗಳು, ಶಕ್ತಿಗಳು ಮತ್ತು ಅದರ ನಿಸರ್ಗಸಹಜವಾದ ಉದ್ದೇಶ ಇವುಗಳ ಪರಿಚಯವನ್ನು ನೀಡಿದ್ದಾರೆ. ಒಂದು ಪ್ರಮುಖ ವ್ಯತ್ಯಾಸವೆಂದರೆ ಆಧುನಿಕ ವಿಜ್ಞಾನದ್ದು ಕೇವಲ ಇಂದ್ರಿಯಗೋಚರ  ಅಂದರೆ ಸ್ಥೂಲದೃಷ್ಟಿಗೆ  ದೊರೆತ ಪರಿಚಯವಾದರೆ, ಋಷಿಗಳು ಸ್ಥೂಲದ ಜೊತೆಯಲ್ಲಿ ಸೂಕ್ಷ್ಮವಾದ ಯೋಗದೃಷ್ಟಿಯಿಂದ ಪಡೆದ ವಿವರಗಳನ್ನೂ ಮತ್ತು ದೇಹವನ್ನು ಸಾರ್ಥಕಗೊಳಿಸಿಕೊಳ್ಳಲು ಬೇಕಾದ ಮಾರ್ಗಗಳನ್ನೂ ತಿಳಿಸಿಕೊಟ್ಟಿರುವುದುಂಟು. ಇಂತಹ ಯೋಗದೃಷ್ಟಿಯು ಅವರ ಕಠೋರವಾದ ತಪಸ್ಸಿನಿಂದ ಲಭ್ಯವಾಯಿತು ಎಂದು ಭಾರತೀಯ ಸಾಹಿತ್ಯಗಳು ಸಾರುತ್ತವೆ. ಈ ಹಿನ್ನೆಲೆಯಲ್ಲಿ ಆಹಾರವನ್ನು ಕುರಿತು ಅವರ ನೋಟವನ್ನು ಸಂಕ್ಷಿಪ್ತವಾಗಿ ವಿವರಿಸಲು ಇಲ್ಲಿ ಯತ್ನಿಸಿದೆ.

“ಆಹ್ರಿಯತೇ ಇತಿ ಆಹಾರಃ” ಎಂದರೆ ಚೆನ್ನಾಗಿ, ಆತ್ಮನವರೆಗೂ ತೆಗೆದುಕೊಳ್ಳಲ್ಪಡುವುದೇ ಆಹಾರ. ಕೇವಲ ಬಾಯಿಯ ಮೂಲಕ ಮಾತ್ರವಲ್ಲದೆ ಎಲ್ಲಾ ಇಂದ್ರಿಯಗಳಿಂದಲೂ ಒಳಗೆ ಸ್ವೀಕರಿಸಲ್ಪಡುವುದೆಲ್ಲವೂ ಆಹಾರವೇ. ಕಣ್ಣಿಗೆ ದೃಶ್ಯವಾದರೆ, ಕಿವಿಗೆ ಮಾತು, ಮನಸ್ಸಿಗೆ ಸಂಸ್ಕಾರಗಳು ಹೀಗೆ ಎಲ್ಲ ಇಂದ್ರಿಯಗಳೂ ಒಂದೊಂದು ಆಹಾರವನ್ನು ಸೇವಿಸುತ್ತಲೇ ಇರುತ್ತವೆ. ಇದು ರೂಢಿಯ ಅರ್ಥಕ್ಕಿಂತಲೂ ವ್ಯಾಪಕವಾದ ಅರ್ಥದಿಂದ ಕೂಡಿದೆ.  


ಸೂಚನೆ: 26/10/2019 ರಂದು ಈ ಲೇಖನ ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ஶ்ரீரங்கமஹாகுரு - 38 (Sriranga Mahaguru - 38)

ஶ்ரீகுருவின் கண்ணோட்டம் – 27

போய்வருகிறேன்

===========================================================

மூலம்: திரு  சாயாபதி
தமிழாக்கம் : திருமதி ஜானகி


போய் வருகிறேன், வருகிறேன்___வீட்டிலிருந்து வெளியில் செல்பவர் கூறும் வார்த்தை இது. தினமும் செய்யும் வேலையாக இருக்கலாம், வேறு வேலைகளாக இருக்கலாம் அன்றி வேலை நிமித்தமாக வெளியூர் பயணமாகவும் இருக்கலாம். ஆனால் வீட்டை விட்டு  வெளியே செல்பவர் "போகிறேன்," எனகூற வேண்டுமே தவிர வருகிறேன், போய் வருகிறேன் என்பது எவ்வாறு பொருந்தும்?  எனும் வினா மனதில் தோன்றுவது  ஆச்சரியமல்ல. முதன்முதலில் இவ்வாறு தோன்றிய போதும் பல தடவை கேட்டு பழகிவிட்டால் இது ஒரு வழக்கம் என விட்டு விடலாம்.

              எவ்வாறு வந்தது இவ்வழக்கம? இதில் ஏதாவது அர்த்தமுள்ளதா என மனதில் தோன்றுவதில் தவறேதுமில்லை.

          வீடு என்பது தன்னுடைய நிம்மதி மற்றும் சுகத்திற்காக ஏற்படுத்திக் கொண்ட ஓர் இடம். அங்கிருந்து வெளியில் கிளம்பும் போது எங்கு சென்றாலும் மீண்டும் வீட்டிற்கு திரும்ப வேண்டும் எனும் நினைவுடன் இந்த வழக்கம் வந்துள்ளது. வெளியே செல்வதே தன்னுடைய நோக்கமல்ல. வேலை நிமித்தமாக விதியின்றி வெளியே சென்றாலும் மீண்டும் தன் இருப்பிடம் வந்தடைவதே முக்கிய குறிக்கோளாகும். வெளியில் செல்வது மீண்டும் திரும்புவதற்கே. ஆகையினால் போய் வருகிறேன் என கூறுவது தகும். அவ்வாறே மீண்டும் வருவதற்கே போகிறேன் என்பதில் வருவதை அழுத்தமாக சொல்வதற்காக "வருகிறேன்" என கூறுவது வழக்கமாக உள்ளது.

        உடலை வைத்துக் கொள்ள ஒரு வீடு உள்ளது போன்று , உடலே ஓர் ஜீவன் வாசம் புரியும் வீடாக உள்ளது. அவ்வாறே ஜீவனுக்கு தன் நிலையான, தன் நிஜ ரூபத்தின் சௌந்தர்யத்தை அனுபவிக்கும் ஓர் வீடு உள்ளது. அது சாந்தி, பரமானந்ததின் இருப்பிடம். ஜீவன் தன் உலக வாழ்க்கைக்காக தன் ஐம்புலன்களுடன் தொடர்பு கொள்வதே வெளியே செல்வதாகும். மற்றும் புலன்களிடமிருந்து பின்னோக்கி தன் நிலை அடைவதே மீண்டும் வருவது. இது அந்த உள்ளிருக்கும் ஆனந்தநிலை என்னும் வீட்டை அறிந்த ஞானிகளின் வாழ்க்கை முறை. ஆகையினால் இந்திரியங்களின் தொடர்பு கொள்ளும்  ஜீவன் தான் மீண்டும் தன் நிலைக்கு செல்ல வேண்டும் என்பதை மறவாமல் வெளியே வரவேண்டும். இந்திரியங்களால் தான் அனுபவிக்க வேண்டியதை அடைந்த பிறகு மீண்டும் தன் நிலைக்கே திரும்ப வேண்டும். வீட்டிலிருந்து புறப்பட்டவன் மறந்து தெருவிலேயே அலைபவனாக கூடாது. அவ்வாறே ஜீவனும் தன்நிலையை மறந்து புலன் இன்பங்களில் அலைந்து திரிவது தகாது எனும் எச்சரிக்கை வார்த்தை இது. தன்னுடைய நிம்மதிக்காக திரும்பி வரவேண்டிய அமைதியான இல்லமொன்று உண்டு  என்பதை நினைவுறுத்தும்  அறிவுறை இது. அவ்வாறு தன்னிலையை, சாந்தியின் இருப்பிடத்தை அடைந்த போதுதானே இவ்வார்த்தையின் உட்பொருளை அறிய இயலும்!

Tuesday, October 22, 2019

ಮನಸ್ಸೇ ಬಂಧ-ಮೊಕ್ಷಗಳಿಗೆ ಕಾರಣ (Manasse bandha-mokshagalige kaarana)

ಲೇಖಕರು:  ಸುಬ್ರಹ್ಮಣ್ಯ ಸೋಮಯಾಜಿ



ಒಂದೂರಿನಲ್ಲಿ ಒಬ್ಬಳು ವೇಶ್ಯೆ. ಅವಳಲ್ಲಿಗೆ ಆ ವ್ಯಸನಕ್ಕೆ ಸಿಲುಕಿದವರೆಲ್ಲ ಹೋಗಿಬರುತ್ತಿದ್ದರು. ಆ ವೇಶ್ಯೆಯ ಮನೆಯ ಎದುರು ಒಬ್ಬ ಸಂತರು. ಅವರ ಹತ್ತಿರ ಧರ್ಮಜಿಜ್ಞಾಸೆ ಮಾಡಲು, ಒಳ್ಳೆಯ ಉಪನ್ಯಾಸಗಳನ್ನು ಕೇಳಲು ಸಜ್ಜನರೆಲ್ಲ ಬರುತ್ತಿದ್ದರು. ಅದನ್ನು ವೇಶ್ಯೆ ನಿತ್ಯವೂ ನೋಡುತ್ತಿದ್ದಳು. ಅವಳ ಮನಸ್ಸಿನಲ್ಲಿ-“ ಇವರು ಎಷ್ಟು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಸದಾ ಭಗವಂತನ ಸ್ಮರಣೆಯಲ್ಲಿ ಕಳೆಯುತ್ತಾರೆ. ಬಂದವರಿಗೆಲ್ಲ ದೇವರ ವಿಷಯಗಳನ್ನು ಹೇಳುತ್ತಾರೆ. ಜೀವಿತದ ಎಲ್ಲ ಅವಧಿಯೂ ಎಷ್ಟು ಪಾವನ! ನಾನಾದರೋ ಧರ್ಮಬಾಹಿರವಾದ ಕೆಲಸವನ್ನು ಮಾಡುತ್ತಿದ್ದೇನೆ. ನನ್ನ ಜೀವನದಲ್ಲಿ ಅವರಂತೆ ಸದಾ ಭಗವಂತನನ್ನು ಆರಾಧಿಸುವ, ಸನ್ನಿವೇಶ ಒದಗಲೇ ಇಲ್ಲವಲ್ಲ. ಎಷ್ಟು ಪಾಪಿ ನಾನು. ಮುಂದಿನ ಜನ್ಮದಲ್ಲಾದರೂ ನನಗೆ ನಿನ್ನನ್ನು ಪೂಜಿಸುವ ಅವಕಾಶ ಕರುಣಿಸಪ್ಪಾ ದೇವ” ಎಂದು ನಿತ್ಯವೂ ಪ್ರಾರ್ಥಿಸುತ್ತಿದ್ದಳು.

ಇತ್ತ ಈ ಸಂತರು ಆ ವೇಶ್ಯೆಯ ಮನೆಗೆ ಹೋಗಿ ಬರುವವರನ್ನೆಲ್ಲಾ ನಿತ್ಯವೂ ನೋಡುತ್ತಿದ್ದರು. ಆ ವೇಶ್ಯೆಯನ್ನು ತುಚ್ಚವಾಗಿ ನಿಂದಿಸುತ್ತಿದ್ದರಾದರೂ, ಹೀಗೆ ಯೋಚಿಸುತ್ತಿದ್ದರು -“ನಿತ್ಯವೂ ಇವಳಲ್ಲಿಗೆ ಬಂದು ಈ ಜನರೆಲ್ಲಾ ಎಲ್ಲ ಬಗೆಯ ಸುಖವನ್ನು ಪಡೆಯುತ್ತಿದ್ದಾರೆ. ನಾನು ಯಾವುದೋ ಕಾರಣಕ್ಕೆ ಸಂತನಾಗಿ  ಜೀವನದ ಸುಖವನ್ನೆಲ್ಲ ಕಳೆದುಕೊಂಡೆ. ನೀರಸವಾದ ಬದುಕಾಯಿತು ನನ್ನದು. ಇವರೆಲ್ಲರಂತೆ ಸಾಮಾನ್ಯ ಮನುಷ್ಯನಾಗಿದ್ದಿದ್ದರೆ ನಾನೂ ಆ ಸುಖವನ್ನೆಲ್ಲ ಅನುಭವಿಸಬಹುದಿತ್ತು” ಎಂದು ಪಶ್ಚಾತ್ತಾಪ ಪಡುತ್ತಿದ್ದರು.

ಮೃತ್ಯು ಯಾರನ್ನು ಬಿಡುತ್ತದೆ? ಆಶ್ಚರ್ಯವೆಂಬಂತೆ ಇಬ್ಬರೂ ಒಂದೇ ದಿನ ಮರಣ ಹೊಂದಿದರು. ವೇಶ್ಯೆಯ ಹೆಣವನ್ನು ನಾಯಿ ನರಿಗಳಿಗೆ ಆಹಾರವಾಗುವಂತೆ ಊರ ಹೊರಗೆ ಎಸೆಯಲಾಯಿತು. ಸಂತರ ದೇಹಕ್ಕೆ ಪೂರ್ಣಕುಂಭದ ಮರ್ಯಾದೆ. ಅಂತಿಮ  ಯಾತ್ರೆಯಲ್ಲಿ ಸಾವಿರಾರು ಜನರ ಮೆರವಣಿಗೆ.

ಆದರೆ ಆಶ್ಚರ್ಯವೊಂದು ನಡೆಯಿತು. ವೇಶ್ಯೆಯ ಜೀವವನ್ನು ಕೊಂಡೊಯ್ಯಲು ವಿಷ್ಣುದೂತರೂ, ಸಂತರ ಜೀವವನ್ನು ಕೊಂಡೊಯ್ಯಲು ಯಮದೂತರೂ ಬಂದರು. ಆತಂಕದಿಂದ ಸಂತರ ಆತ್ಮವು ಕೇಳಿತು - ಏನಿದು ಅನ್ಯಾಯ? ಜೀವನವಿಡೀ ಧರ್ಮ ಕಾರ್ಯದಲ್ಲೇ ಕಳೆದ ನನ್ನನ್ನು ನೀವೇಕೆ ಕೊಂಡೊಯ್ಯುತ್ತಿದ್ದೀರಿ? ಜೀವನಪೂರ್ತಿ ಅಸಹ್ಯವಾದ ಕೆಲಸವನ್ನು ಮಾಡುತ್ತಿದ್ದ ಆ ವೇಶ್ಯೆಯ ಆತ್ಮವನ್ನು ವೈಕುಂಠಕ್ಕೆ ಹೇಗೆ ಕರೆದೊಯ್ಯಲಾಗುತ್ತಿದೆ? ಅಶರೀರ ವಾಣಿಯೊಂದು ಉತ್ತರಿಸಿತು-“ನೀನು ದೇಹದಿಂದ ಧರ್ಮ ಕಾರ್ಯವನ್ನೇ ಮಾಡಿದ್ದರಿಂದ ನಿನ್ನ ದೇಹಕ್ಕೆ ನೋಡು -ಪೂರ್ಣಕುಂಭದ ಮರ್ಯಾದೆ. ಆದರೆ ಮನಸ್ಸಿನಲ್ಲಿ ಸದಾ ವಿಷಯ ಸುಖಗಳನ್ನೇ ಚಿಂತಿಸಿದೆ. ಅದಕ್ಕಾಗಿ ನರಕವೇ ಗತಿ. ಹಾಗೆ ಅವಳು ದೇಹದಿಂದ ಅಸಹ್ಯವಾದ ಕೆಲಸ ಮಾಡಿದಳು. ಅವಳ ದೇಹ ಅನಾಥವಾಗಿ ಬಿದ್ದಿದೆ. ಆದರೆ ಮನಸ್ಸು ಸದಾ ಭಗವಂತನನ್ನೇ ಸ್ಮರಿಸುತ್ತಿತ್ತು ಎಂದೇ ಅವಳಿಗೆ ವೈಕುಂಠ”.

“ಮಾನವ ತನ್ನ ಹೃದಯದಲ್ಲಿ ಭಗವಂತನಿಗೆ ಜಾಗ ಕೊಟ್ಟಷ್ಟೂ ಆ ತೇಜೋನಿಧಿಯು ತನ್ನ ಮಡಿಲಿನಲ್ಲಿ ಅವನಿಗೆ ಜಾಗ ಕೊಡುತ್ತಾನೆ” ಎಂಬ ಶ್ರೀರಂಗಮಹಾಗುರುಗಳ ಮಾತು ಇಲ್ಲಿ ಸ್ಮರಣೀಯ. ಸದ್ಗತಿ, ದುರ್ಗತಿಗಳಿಗೆ ಮನಸ್ಸೇ ಕಾರಣ. ನಮ್ಮ ಮನಸ್ಸುಗಳನ್ನು ನಿನ್ನ ಸ್ಮರಣೆಯಲ್ಲಿರಿಸು ಎಂದು ಆ ಸರ್ವೆಶ್ವರನನ್ನು ಪ್ರಾರ್ಥಿಸೋಣ.    



ಸೂಚನೆ:  21/10/2019 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ಅಂಕಣದಲ್ಲಿ ಪ್ರಕಟವಾಗಿದೆ.

कम्बल के रूप में भालू (Kambal ke roop me bhaalu)

लॆखक : बि.  जि.  अनन्त 
हिन्दि अनुवाद : अर्चना वागीश

यह संसार असंख्य वस्तुओं और अगणनीय  चीज़ों से भरे हुए हैं | इन सब के बीच में  हमें जीना हैं | ऐसी स्थिति में हमें जिन चीज़ों की आवश्यक्ता हो सिर्फ उन्हें पाने की प्रयत्न करने में ही समझदारी हैं | इसके बजाय अगर हम उन सभी चीज़ों के पीछे जाएँ, जिस पर हमारी नज़र चले, तो हम उन चीज़ों के अधीन होकर , क्लेश मह्सूस करसकते हैं |  ‘मैंने इसे जो  समझकर स्वीकार किया, यह वह नहीं हैं, बल्कि कुछ और ही है’- ऐसी उलझन में पड़ सकते हैं | इस विषय में श्रीरंगमहागुरु  एक दिलचस्प कथा सुनाते थे 
एक बार एक नदी के किनारे दो दोस्त खड़े थे |  नदी प्रवाह का सौन्दर्य देखते आनंद में डूबे थे |  इस दौरान नदी के बीच में एक काली वस्तु तैरते हुए दिखाई दिया | उन दोनों के बीच जिसे तैरना आता था उसने –‘ देखो एक अच्छासा काला कम्बल तैरकर आ रहा है | कभी तो हमें इसकी आवश्यकता होगी | अभी लेकर आता हूँ’ यह कहकर नदी में कूदा और तैरने लगा और बहुत प्रयास के साथ तैरते हुए उस काला चीज़ को पकड़कर रखा | लेकिन उसके बाद तुरंत उसने आवाज़ लगाया- ‘यह कंबल नहीं बल्कि भालू है’ | उसके पश्चात नदी किनारे पर खड़ा हुआ साथी पुकारा- ‘तो फिर क्यों उसे पकड़े हुए हो, उसे छोड़ कर आ जाओ’ | ‘हाय! उसे छोड़ने के बावजूद भी वह मुझे नहीं छोड़ रहा हैं’ ऐसा उत्तर मिला |  इसका मतलब  हुआ  की वह आदमी भालू को छोड़ देने के पश्चात भी भालू उसे नहीं छोड़ रहा था |
यह तो हमारी ही कहानी हैं | हमें आवश्यक हैं ऐसा सोच कर हम अनेक चीज़ों पर इच्छा रखते हैं | उन्हें पाने के लिए हम बहुत परिश्रम करते हैं | इस के कारण हमारे मेहनत की कमाई और अमूल्य समय  खर्च करदेते हैं | इन सब के बाद  हुम्हे यह एहसास होने लगता है की हम्हे यह सब नहीं चाहिए था | जो हमने सोचा था यह उससे अलग हैं | ऐसा  कई  बार  हमारे  साथ  होता है | परन्तु क्या करें? हमने स्वयं इस वस्तु से लगाव रखे हुए हैं | अब यह हमारे साथ जुड़ गया है | इसीलिए किसी वस्तु के साथ लगाव रखने से पहले बहुत अच्छी तरह से सोच लेना चाहिए | श्रीरंगमहागुरु इस विषय के बारे में कहते थे-‘ विश्वास करने पर निश्वास छोड़ देने  की अवस्था (मानसिक थकान के कारण) नहीं आना चाहिए | इस विषय में सावधानी ज़रूरी है’ | कुछ समय के लिए अगर हम बिल्ली कुत्तों का पालनकरके  बादमे  उन्हे छोड़ देना चाहे तो वे हमें नहीं छोड़ते | अगर हम उन्हें धक्का देकर निकाल दे तो भी हमारे घर छोड़कर नहीं जाते | कुछ विषय इस प्रकार ही होते हैं | अगर हम दिमाग में विषयों को ज़रा सा भी जगह दे दें तो (हमसे) मजबूती से जुड़ जाते हैं | इसीलिए अनावश्यक विषयों और जानकारियों को हमारे दिमाग भरने से रोकें |
Note: The Kannada version of this article can be viewed at AYVM blogs

ದೈವಾನುಗ್ರಹದ ಜೊತೆಗೆ ಪುರುಷ ಪ್ರಯತ್ನವೂ ಬೇಕು. (Daivanugrahada jothege purusha prayathnavu beku)

ಲೇಖಕರು:  ಮೈಥಿಲೀ ರಾಘವನ್ 



ಒಂದು ಗ್ರಾಮದಲ್ಲಿ ಸನ್ಯಾಸಿಯೊಬ್ಬ ವಾಸವಾಗಿದ್ದ. ದೈವಭಕ್ತನಾಗಿ ದೈವವನ್ನೇ ಸರ್ವದಾ ನಂಬಿದ್ದ ಆತನನ್ನು ಗ್ರಾಮದ ಜನರೆಲ್ಲರೂ ಅತ್ಯಂತ ಗೌರವದಿಂದ ಕಾಣುತ್ತಿದ್ದರು.

ಒಮ್ಮೆ ಪಕ್ಕದಲ್ಲಿನ ನದಿಯು ಉಕ್ಕಿಬಂದು ಗ್ರಾಮವನ್ನೆಲ್ಲ ಆವರಿಸತೊಡಗಿತು. ಜನರು ಗಾಬರಿಗೊಂಡು ಗ್ರಾಮದಿಂದಾಚೆ ಸುರಕ್ಷಿತ ಸ್ಥಳಸೇರಲು ಉದ್ಯುಕ್ತರಾದರು. ತಮ್ಮೆಲ್ಲರ ಗೌರವಕ್ಕೆ ಪಾತ್ರನಾದ ಸಂನ್ಯಾಸಿಯ ಬಳಿ ಬಂದು “ಸ್ವಾಮಿ, ನದಿ ಉಕ್ಕಿ ಬರಿತ್ತಿದೆ. ಸ್ವಲ್ಪ ಕಾಲದಲ್ಲೇ ಗ್ರಾಮವು ಮುಳುಗಿಹೋಗುವುದು. ನಾವೆಲ್ಲರೂ ಗ್ರಾಮದಿಂದಾಚೆ ಹೋಗುತ್ತಿದ್ದೇವೆ. ತಾವೂ ನಮ್ಮ ಜೊತೆಯಲ್ಲಿ ಸುರಕ್ಷಿತ ಸ್ಥಾನಕ್ಕೆ ತೆರಳಬೇಕು” ಎಂದರು. ಎಷ್ಟೇ ಪ್ರಾರ್ಥಿಸಿದರೂ ಸಂನ್ಯಾಸಿಯು “ನನಗೆ ಭಗವಂತನ ಮೇಲೆ ಅಪಾರ ನಂಬಿಕೆಯಿದೆ. ಅವನು ಅವಶ್ಯವಾಗಿ ನನ್ನನ್ನು ಕಾಪಾಡುವನು. ಆದ್ದರಿಂದ ನಾನು ಇಲ್ಲೇ ಉಳಿಯುತ್ತೇನೆ” ಎಂದು ತಾನು ಕುಳಿತಿದ್ದ ಮರದ ಕೆಳಗಿನ ಕಲ್ಲಿನ ಮೇಲೇ ಕುಳಿತಿದ್ದ. ಎಷ್ಟು ಬೇಡಿದರೂ ಆತ ಕೇಳಲಿಲ್ಲವಾಗಿ ಜನರು ಹೊರಟುಹೋದರು.

ಕ್ರಮೇಣ ಗ್ರಾಮವೆಲ್ಲವೂ ಮುಳುಗತೊಡಗಿತು. ಆತನು ಮಾತ್ರ ಭಗವಂತ ಕಾಯುತ್ತಾನೆಂದು ಅಲ್ಲಿಯೇ ಕುಳಿತಿದ್ದ. ಸ್ವಲ್ಪ ಹೊತ್ತಿನಲ್ಲಿ ದೋಣಿಯೊಂದು ಅಲ್ಲಿಗೆ ಬಂದಿತು. ದೋಣಿಗಾರನು ಸಂನ್ಯಾಸಿಯನ್ನು ಕಂಡು “ಸ್ವಾಮಿ, ಬನ್ನಿ. ತಮ್ಮನ್ನು ಬೇರೆಡೆಗೆ ಒಯ್ಯುತ್ತೇನೆ” ಎಂದ. ಆಗಲೂ ಆತನು ಕುಳಿತಲ್ಲೇ ಕುಳಿತು “ದೈವ ನನ್ನನ್ನು ಕಾಪಾಡುವುದು, ಹೆದರಬೇಡ” ಎಂದ. ಬೇರಾರೂ ಅಲ್ಲಿ ಕಾಣಲಿಲ್ಲವಾಗಿ ದೋಣಿಗಾರನು ಹೊರಟುಹೋದ.

ಕೊನೆಗೆ ಸಂನ್ಯಾಸಿಯು ಪ್ರವಾಹದಲ್ಲಿ ಮುಳುಗಿ ಪ್ರಾಣತ್ಯಾಗ ಮಾಡಿದ. ಸ್ವರ್ಗಕ್ಕೆ ಹೋದ ಆತ ದೇವರನ್ನು ಕೇಳಿದ “ಭಗವಂತ, ನಿನ್ನನ್ನೇ ನಂಬಿದ್ದ ನನ್ನನ್ನು ಮುಳುಗಿಸಿಬಿಟ್ಟೆಯಲ್ಲಾ? ಇದು ನ್ಯಾಯವೇ?” ಭಗವಂತ ಮುಗುಳ್ನಕ್ಕು ಹೇಳಿದ. “ನನ್ನನ್ನೇ ನಂಬಿದ್ದೆಯಾದ್ದರಿಂದಲೇ ಗ್ರಾಮದ ಜನರ ಗೌರವಕ್ಕೆ ಪಾತ್ರನಾಗಿ ಪ್ರವಾಹ ಬರುವ ಮುನ್ನ ಸೂಚನೆಯನ್ನು ಪಡೆದೆ. ನಂತರ ನಿನಗಾಗಿ ದೋಣಿಯನ್ನೂ ಕಳುಹಿಸಿದೆ. ಆದರೆ ಅದರಲ್ಲಿ ಹತ್ತಿ ಕುಳಿತುಕೊಳ್ಳುವಷ್ಟು ಪ್ರಯತ್ನವನ್ನಾದರೂ ನೀನು ಮಾಡಬೇಕಿತ್ತಲ್ಲವೇ! ಏಕೆ ಮಾಡಲಿಲ್ಲ?” ಎಂದ. ಸಂನ್ಯಾಸಿ ನಿರುತ್ತರನಾದ. ದೈವವನ್ನೇ ನಂಬಿರಬೇಕೆನ್ನುವುದು ಸರಿಯಾದರೂ ಜೊತೆಗೆ ನಮ್ಮದಾದದ್ದೊಂದು ಪ್ರಾಮಾಣಿಕವಾದ ಪ್ರಯತ್ನವೂ ಜರುಗಲೇ ಬೇಕೆನ್ನುವುದು ಇಲ್ಲಿಯ ಆಶಯ. ಈ ಸತ್ಯವನ್ನೇ ಸ್ಪಷ್ಟಪಡಿಸುತ್ತ ಸುಭಾಷಿತವೊಂದು ಸಾರುತ್ತದೆ `ನಿದ್ರಿಸುವ ಸಿಂಹದ ಬಾಯೊಳಗೆ ಆಹಾರಾರ್ಥವಾಗಿ ಮೃಗಗಳು ಬಂದು ಬೀಳುವುದಿಲ್ಲ’.

ಶ್ರೀರಂಗಮಹಾಗುರುಗಳು ತಿಳಿಸಿರುವಂತೆ ದೈವಾನುಗ್ರಹ-ಪುರುಷಪ್ರಯತ್ನಗಳು ರಥದ ಚಕ್ರಗಳಂತೆ. ಹೇಗೆ ಎರಡು ಚಕ್ರಗಳೂ ಒಟ್ಟಿಗೆ ಉರುಳಿದಾಗ ಮಾತ್ರ ರಥವು ಮುನ್ನಡೆಯುವುದೋ ಅಂತೆಯೇ ದೈವಾನುಗ್ರಹದ ಜೊತೆಯಾಗಿ ಪುರುಷಪ್ರಯತ್ನವೂ ಇದ್ದಾಗ ಮಾತ್ರ ಜೀವನ ರಥವು ಸುಗಮವಾಗಿ ಸಾಗುವುದು. ಕಾರ್ಯಸಿದ್ಧಿಯಾಗುವುದು. ಜೀವನದಲ್ಲಿ ಭಗವಂತನಿಂದಲೇ ಅನುಗ್ರಹಿಸಲ್ಪಟ್ಟ ಬುದ್ಧಿಯನ್ನುಪಯೋಗಿಸಿಕೊಂಡು ವಿವೇಕದಿಂದ ಸಾಗಬೇಕಾಗಿದೆ. ‘ದೇವತೆಗಳು ದನಕಾಯುವವರಂತೆ ದಂಡವನ್ನು ಹಿಡಿದು ಎದುರಿಗೆ ಬಂದು ಕಾಯುವುದಿಲ್ಲ. ನಮ್ಮ ಬುದ್ಧಿಯನ್ನು ಪ್ರಚೋದಿಸಿ ಸಹಾಯವನ್ನು ಮಾಡುವರಷ್ಟೆ’ ಎಂಬ ಆರ್ಷವಾಣಿಯನ್ನೂ ಸ್ಮರಿಸಬಹುದಾಗಿದೆ. ಆದ್ದರಿಂದ ಪ್ರತಿಹೆಜ್ಜೆಯಲ್ಲೂ ಭಗವಂತನಲ್ಲಿ ಪ್ರಾರ್ಥನೆಯೊಂದಿಗೆ ಪ್ರಯತ್ನಶೀಲರಾಗುವುದೇ ಸಫಲತೆಯ ಮಾರ್ಗ. ಇದು ಲೌಕಿಕ-ಪಾರಮಾರ್ಥಿಕಗಳೆರಡಕ್ಕೂ ಅನ್ವಯಿಸುವ ಸಾರ್ವಕಾಲಿಕ ಸೂತ್ರ.   

ಸೂಚನೆ:  19/10/2019 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ಅಂಕಣದಲ್ಲಿ ಪ್ರಕಟವಾಗಿದೆ.

ಆಸ್ತಿಕರು-ನಾಸ್ತಿಕರು (Aasthikaru-naasthikaru)

ಲೇಖಕರು: ತಾರೋಡಿ ಸುರೇಶ


ಅಸ್ತಿ- ಇದೆ ಎನ್ನುವವರು ಆಸ್ತಿಕರು. ಇಲ್ಲ ಎನ್ನುವವರು ನಾಸ್ತಿಕರು. ಇವುಗಳು ರೂಢಿಯಲ್ಲಿರುವ ಪದಗಳಾಗಿವೆ. ಇವರುಗಳು ಯಾವುದನ್ನು ಇದೆ ಅಥವಾ ಇಲ್ಲ ಎನ್ನುತ್ತಿದ್ದಾರೆ?. ವಾಸ್ತವಿಕವಾಗಿ ದೇವರು ಎಂಬ ಪದಾರ್ಥವನ್ನು ಆಸ್ತಿಕರು ಇದೆ ಎಂಬುದಾಗಿಯೂ ಹೇಳಿದರೆ ದೇವರು ಇಲ್ಲ ಎಂದು ನಾಸ್ತಿಕರು ವಾದಿಸುತ್ತಾರೆ. ಯಾರ ಅಭಿಪ್ರಾಯ ಸರಿ? ದೇವರು ನಿಜವಾಗಿ ಇರುವನೇ ಅಥವಾ ಅದು ಕೇವಲ ನಮ್ಮ ಭ್ರಮೆಯೇ? ಎಂಬ ಪ್ರಶ್ನೆಗಳು ಸಹಜ. ಆಸ್ತಿಕರು ಬಹುಸಂಖ್ಯೆಯಲ್ಲಿದ್ದಾರೆ. ಆದ್ದರಿಂದ ಅವರ ಮಾತು ಸರಿ ಎಂದರೆ ಪ್ರಜಾಪ್ರಭುತ್ವ ಸಿದ್ಧಾಂತಗಳನ್ನು ಒಪ್ಪಿ ನಡೆದಂತಾಯಿತು. ಅದನ್ನು ಒಬ್ಬೊಬ್ಬರು ಒಂದೊಂದು ಹೆಸರಿನಿಂದ ಕರೆಯುತ್ತಿರಬಹುದು. ಯಾವುದೇ ಹೆಸರಿನಿಂದ ಕರೆದರೂ ಪದಾರ್ಥವಿದ್ದರೆ ಸರಿ. ಹೆಸರು ಅಷ್ಟು ಮುಖ್ಯವಲ್ಲ.

ಅದರ ಇರುವಿಕೆಯನ್ನು ನಿರ್ಣಯಿಸುವುದು ಹೇಗೆ?. ಇಂದ್ರಿಯಗಳಿಗೆ ಗೋಚರವಾಗದ ಅತೀಂದ್ರಿಯವಾದ ಪದಾರ್ಥವನ್ನು ಅದಿರುವ ಎಡೆಗೇ ಹೋಗಿ ತಿಳಿಯಬೇಕಷ್ಟೆ. ಅಂತಹ ದೃಷ್ಟಿಯನ್ನು ಪಡೆದವರು ಅದನ್ನು ಯೋಗದೃಷ್ಟಿ ಅಥವಾ ಅತೀಂದ್ರಿಯ ದೃಷ್ಟಿ ಎಂಬುದಾಗಿ ವಿವರಿಸಿದ್ದಾರೆ. ಆ ದೃಷ್ಟಿಯು ತಪಸ್ಸಿನಿಂದ, ಗುರೂಪದೇಶದಿಂದ ಲಭ್ಯವಾಗುವುದು. ಸೂಕ್ಷ್ಮದರ್ಶಕ ಯಂತ್ರದಿಂದ ನೋಡಿದಾಗ ಬರಿಗಣ್ಣಿಗೆ ಕಾಣದ್ದು ಕಾಣಿಸುವಂತೆ ಈ ಅತೀಂದ್ರಿಯದೃಷ್ಟಿಗೆ ಇಂದ್ರಿಯಗಳಿಗೆ ಅಗೋಚರವಾದದ್ದು ತೋರಬಲ್ಲುದು. ಅದೆಲ್ಲಾ ಭ್ರಮೆ. ತಮ್ಮನ್ನು ತಾವೇ ಮೋಸಗೊಳಿಸಿಕೊಳ್ಳುವ ಮೂರ್ಖತನ. ಪದಾರ್ಥವಿದ್ದರೆ ಗೋಚರಿಸಬೇಕು.ಅನುಭವಕ್ಕೆ ಬರಬೇಕು. ಇಲ್ಲದಿರುವ ಯಾವುದೋ ಒಂದನ್ನು ಹುಡುಕುವುದೇ ಅಸಂಬದ್ಧ. ಅದಕ್ಕಾಗಿ ಜೀವನವನ್ನೆಲ್ಲಾ ವ್ಯಯಿಸಿ ನಂತರ ಅದಿಲ್ಲವೆಂದು ಖಚಿತವಾದರೆ ಗತಿಯೇನು? ನಮ್ಮ ಬಾಳೇ ವ್ಯರ್ಥವಾಗಿಬಿಡುವುದಿಲ್ಲವೇ? ಎಂದು ನಾಸ್ತಿಕರು ಹರಿಹಾಯುತ್ತಾರೆ. ಆದರೆ ಆಧುನಿಕ ವಿಜ್ಞಾನವೂ ಇಂತಹ ಏಕದೇಶದ ವಾದವನ್ನು ಒಪ್ಪುವುದಿಲ್ಲ. ಮತ್ತು ಅನ್ವೇಷಣೆಯೇ ನಿಷ್ಪ್ರಯೋಜಕ ಎಂಬ ವಾದವನ್ನು ಒಪ್ಪಿದರೆ ಇವತ್ತಿನ ಪ್ರಗತಿ ಸಾಧ್ಯವಾಗುತ್ತಿರಲಿಲ್ಲ, ಅಲ್ಲವೆ?.

ಶ್ರೀರಂಗಮಹಾಗುರುಗಳು ಇವುಗಳನ್ನು ಇನ್ನೂ ನಾಲ್ಕು ಗುಂಪುಗಳಾಗಿ ವಿಂಗಡಿಸುತ್ತಿದ್ದರು. ಆಸ್ತಿಕ-ಆಸ್ತಿಕ, ಆಸ್ತಿಕ-ನಾಸ್ತಿಕ, ನಾಸ್ತಿಕ-ನಾಸ್ತಿಕ ಮತ್ತು ನಾಸ್ತಿಕ ಆಸ್ತಿಕ. ಎಂಬುದಾಗಿ. ಆಸ್ತಿಕ-ಆಸ್ತಿಕನು ತಾನು ದೇವರ ಅಸ್ತಿತ್ವವನ್ನು ನಂಬುವುದಲ್ಲದೆ ತನ್ನ ಜೀವನದಲ್ಲಿಯೂ ಬಹಿರಂತರಂಗಗಳಲ್ಲಿ ಅಳವಡಿಸಿಕೊಂಡಿರುತ್ತಾನೆ. ಅದರ ಅಸ್ತಿತ್ವನ್ನಾದರೋ ತಾನು ಸ್ವತಃ ಕಂಡು, ಸಾಕ್ಷಾತ್ಕರಿಸಿಕೊಂಡಿರುತ್ತಾನೆ. ಆಸ್ತಿಕ-ನಾಸ್ತಿಕನು ತನ್ನೊಳಗೆ ದೇವರ ಅಸ್ತಿತ್ವವನ್ನು ತಾನು ಒಪ್ಪಿದ್ದರೂ ಬಾಹ್ಯದಲ್ಲಿ ಅದು ಇಲ್ಲ ಎನ್ನುತ್ತಾನೆ. ಏಕೆಂದರೆ ಅನೇಕ ಭಾರಿ ಒಕ್ಕಣ್ಣನ ರಾಜ್ಯದಲ್ಲಿ ಒಂದು ಕಣ್ಣನ್ನು ಮುಚ್ಚಿಕೊಂಡಿರಬೇಕಾದ ಅನಿವಾರ್ಯತೆ ಇರುತ್ತದೆ. ಇಲ್ಲದಿದ್ದರೆ ಅಪಾಯ. ಒಂದು ಕಣ್ಣು ಇಲ್ಲದ ರಾಜ ಉಳಿದವರಿಗೂ ಹಾಗೆಯೇ ಒಂದೇ ಕಣ್ಣಿರಬೇಕೆಂದು ಬಯಸಿದರೆ ಆಶ್ಚರ್ಯಪಡಬೇಕಿಲ್ಲ. ನಾಸ್ತಿಕ-ನಾಸ್ತಿಕನು ತಾನು ದೇವರ ಅಸ್ತಿತ್ವವನ್ನು ಒಪ್ಪುವುದಿಲ್ಲ. ಬಾಹ್ಯದಲ್ಲಿಯೂ ಅದನ್ನು ಧಿಃಕರಿಸಿಯೇ ಬಾಳುತ್ತಾನೆ. ನುಡಿದಂತೆ ನಡೆಯುತ್ತಾನೆ. ಆದರೆ ನಾಸ್ತಿಕ-ನಾಸ್ತಿಕನು ಪ್ರಾಮಾಣಿಕನಾಗಿರುವುದರಿಂದ ಇವನಿಗೆ ಸತ್ಯವನ್ನು ಮನಗಾಣಿಸುವುದು ಸಾಧ್ಯತೆಯು ಉಂಟು. ಆದರೆ ಇನ್ನೊಂದು ಅಪಾಯಕಾರಿಯಾದ ವರ್ಗವಿದೆ. ಅದೇ ನಾಸ್ತಿಕ-ಆಸ್ತಿಕರು. ಅವರು ಒಳಗೆ ನಾಸ್ತಿಕರಾಗಿರುತ್ತಾರೆ. ಆದರೆ ಹೊರಗೆ ಆಸ್ತಿಕರಂತೆ ತೋರಿಸಿಕೊಳ್ಳುತ್ತಾರೆ. ಎಲ್ಲೆಡೆಯಲ್ಲಿಯೂ ಆಸ್ತಿಕತ್ತ್ವದ ಪ್ರದರ್ಶನ ಮಾತ್ರವಿರುತ್ತದೆ. ಆದರೆ ಅಂತರಂಗದಲ್ಲಿ ಅತೀಂದ್ರಿಯಕ್ಷೇತ್ರಗಳ ಅನುಭವವಗಳಾಗಲೀ.ಆಸ್ವಾದನೆಯಾಗಲೀ ಯಾವುದೂ ಇರುವುದಿಲ್ಲ. ಇಂಥಹವರಿಗೆ ಆಸ್ತಿಕಮಹಾಶಯ ಎಂಬ ಪಟ್ಟಬೇಕು. ಆದರೆ ಅದಕ್ಕಾಗಿ ಶ್ರಮಿಸುವ ಮನೋಧರ್ಮವಾಗಲೀ, ಕೊನೆಯಪಕ್ಷ ಬೌದ್ಧಿಕವಾದ ಪ್ರಾಮಾಣಿಕತೆಯಾಗಲೀ ಇರದೆ ಢಾಂಬಿಕರಾಗಿರುತ್ತಾರೆ. ಅನೇಕ ನಾಸ್ತಿಕ-ಆಸ್ತಿಕರಿಗೆ ಆಸ್ತಿಕತೆಯ ಅಭಿನಯವು ಹೊಟ್ಟೆಪಾಡಿನ ವಿಷಯವಾಗಿರುತ್ತದೆ. ತಿಳಿದೋ ತಿಳಿಯದೆಯೋ ಸಮಾಜದಲ್ಲಿ ಕಾಪಟ್ಯವನ್ನು ಬೆಳೆಸಿ ವ್ಯವಸ್ಥೆಗಳ ದುರುಪಯೋಗ ಮಾಡಿಕೊಳ್ಳುತ್ತಾರೆ.

ಆದ್ದರಿಂದ ಸದಾ ನಾಸ್ತಿಕ-ಆಸ್ತಿಕರ ಬಗ್ಗೆ ಎಚ್ಚರಿಕೆ ಬೇಕು.ಸಜ್ಜನರು ನುಡಿದಂತೆ ನಡೆಯುತ್ತಾರೆ. ಬಾಳುತ್ತಾರೆ. ಅವರ ಉಪದೇಶಗಳು ಸತ್ಯದತ್ತ ಜೀವಿಗಳನ್ನು ನಯನಮಾಡುತ್ತವೆ. ಅಂತಹ ಪ್ರಾಮಾಣಿಕರಾದ ಆಸ್ತಿಕ-ಆಸ್ತಿಕರಿಗೂ, ಆಸ್ತಿಕ-ನಾಸ್ತಿಕರಿಗೂ, ನಾಸ್ತಿಕ-ನಾಸ್ತಿಕರಿಗೂ ಅಭಿನಂದನೆಗಳನ್ನು ಅರ್ಪಿಸಲೇಬೇಕು. 



ಸೂಚನೆ:  19/10/2019 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿ ವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.

ಕರ್ಮಗಳನ್ನು ಬಿಡುವುದು ಸಂನ್ಯಾಸವಲ್ಲ (Karmagalannu biduvudu sanyasavalla)

ಲೇಖಕರು:  ನಾಗರಾಜ್ ಗುಂಡಪ್ಪ



ಲೌಕಿಕ ಮತ್ತು ಪಾರಮಾರ್ಥಿಕ ಸುಖಗಳನ್ನೊಳಗೊಂಡ ಸಂಪೂರ್ಣ ಜೀವನದ ಕೊನೆಯ ಹಂತವೇ ಯೋಗವನ್ನಾಶ್ರಿಯಿಸಿ ಶರೀರ ತ್ಯಾಗ ಮಾಡುವುದು. ದೌರ್ಬಲ್ಯ, ರೋಗ, ವಿಪತ್ತು ಮುಂತಾದ ಕಾರಣಗಳಿಂದ ಮೃತ್ಯುವಿಗೆ  ಒಳಗಾಗಿ ಪುನರ್ಜನ್ಮವನ್ನು ತಾಳುವುದರ ಬದಲು ಯೋಗಬಲದಿಂದ ಶರೀರ ತ್ಯಾಗ ಮಾಡಿ ಮೋಕ್ಷವನ್ನು ಪಡೆಯುವ ವಿಧಾನ ಎಂತಹಾ ಅದ್ಭುತ! ರಘುವಂಶದ ರಾಜರಲ್ಲದೇ ಬಲರಾಮ, ಕೃಷ್ಣಾದಿ ಅವತಾರಪುರುಷರೂ ಹಾಗೂ ಇನ್ನೂ ಅನೇಕ ರಾಜರು, ಮಹಾತ್ಮರು, ಈ ರೀತಿಯ ಜೀವನಾಂತ್ಯಕ್ಕೆ ನಿದರ್ಶನರಾಗಿದ್ದಾರೆ. ಮಹಾತ್ಮನಾದ ಭೀಷ್ಮನು ಶರೀರ ತ್ಯಾಗಕ್ಕೆ ಮುನ್ನ ಜನರೊಡನೆ ಮಾತನಾಡಿ, ಮುಹೂರ್ತಕಾಲ ಮೌನವಾಗಿದ್ದು, ಕ್ರಮವಾಗಿ ಪಾದದಿಂದ ಶಿರದವರೆವಿಗೆ ಪ್ರಾಣಗಳನ್ನು ಬೇರೆ ಬೇರೆ ಸ್ಥಾನಗಳಲ್ಲಿ ಧರಿಸಿ, ಕೊನೆಯಲ್ಲಿ ನೆತ್ತಿಯ ಬ್ರಹ್ಮರಂಧ್ರದಿಂದ ಬೆಳಕಿನ ರೂಪದಲ್ಲಿ ಹೊರಬಂದು ತನ್ನ ಮೂಲಸ್ಥಾನವನ್ನು ಸೇರಿಕೊಂಡ ಎಂದು ಮಹಾಭಾರತವು ಹೇಳುತ್ತದೆ.

ನಿರ್ಯಾಣ ಹೊಂದಿದ ಸಾಧಕಶ್ರೇಷ್ಠರ ಸಹೋದರರೊಬ್ಬರು ಶ್ರೀರಂಗ ಮಹಾಗುರುಗಳ ಬಳಿ ದುಃಖ ಹೇಳಿಕೊಳ್ಳಲು ಬಂದಾಗ, ಗತಿಸಿ ಹೋದವರ ಸ್ಥಿತಿಯು ಸಹೋದರರ ಮನಸ್ಸಿಗೆ ಅರಿವಾಗಿ, ದುಃಖದ ಬದಲು ಆನಂದವನ್ನನುಭವಿಸಿದರು ಎಂದು ಕೇಳಿದ್ದೇವೆ. ಈ ಸಂಸ್ಕೃತಿಯ ಕಾರಣದಿಂದಲೇ ಗತಿಸಿ ಹೋದವರಿಗೆ ಗೌರವ ಸೂಚಕವಾಗಿ ಬ್ರಹ್ಮೈಕ್ಯರಾದರು, ಲಿಂಗೈಕ್ಯರಾದರು, ವೈಕುಂಠವನ್ನು ಸೇರಿದರು ಎಂದು ಹೇಳುತ್ತಾರೆ.

ಸಂನ್ಯಾಸವು ಇಂತಹಾ ಅಂತ್ಯಕ್ಕೆ ಪೋಷಕವಾದ, ಪರಮ ಆದರ್ಶವಾದ ಮನಸ್ಸಿನ ಸ್ಥಿತಿ. ನ್ಯಾಸವೆಂದರೆ ಇಡುವುದು, ಸಂನ್ಯಾಸವೆಂದರೆ ಚೆನ್ನಾಗಿ ಇಡುವುದೆಂದರ್ಥ. ಮನಸ್ಸು ಪ್ರಾಣಗಳನ್ನು ಪರಮಾತ್ಮನಲ್ಲಿ ಇರಿಸುವುದನ್ನು ಸಂನ್ಯಾಸವೆನ್ನುತ್ತಾರೆ. ಕೃಷ್ಣ ಪರಮಾತ್ಮನು ಭಗವದ್ಗೀತೆಯಲ್ಲಿ, ಕರ್ಮಗಳನ್ನು ಬಿಡುವುದು ಮಾತ್ರವೇ ಸಂನ್ಯಾಸವಲ್ಲಾ, ಕರ್ಮಗಳ ನಡುವೆಯೂ ಸಹಾ, ವಿರಕ್ತಿಯಿಂದ ನಿರ್ಲಿಪ್ತರಾಗಿದ್ದು ಎಲ್ಲವನ್ನೂ ಭಗವದರ್ಪಣ ಮಾಡುವುದೇ ನಿಜವಾದ ಸಂನ್ಯಾಸ ಎಂದು ಘೋಷಿಸಿದ್ದಾನೆ. ಸಂನ್ಯಾಸಕ್ಕೂ ಸಂನ್ಯಾಸಾಶ್ರಮಕ್ಕೂ ವೆತ್ಯಾಸವಿದೆ. ಸಂನ್ಯಾಸವನ್ನೇ ವಿಶೇಷ ಸಾಧನವಾಗಿಟ್ಟುಕೊಂಡು, ಸರ್ವಸಂಗ ಪರಿತ್ಯಾಗಿಯಾಗಿ, ಖಾವಿ ವಸ್ತ್ರ, ತ್ರಿದಂಡಗಳನ್ನು ಧರಿಸಿ, ಮೂರು ಹೊತ್ತು ಸ್ನಾನ-ಪೂಜೆಗಳ ಆಚರಣೆ, ಭಿಕ್ಷಾಟನೆ ಮೊದಲಾದ ಕಠೋರ ನಿಯಮಗಳೊಂದಿಗೆ ಜೀವಿಸುವ ಕ್ರಮವನ್ನು ಸಂನ್ಯಾಸಾಶ್ರಮ ಎನ್ನುತ್ತಾರೆ. ಸಂನ್ಯಾಸವು ಎಲ್ಲರಿಗೂ ಸೂಕ್ತ; ಆದರೆ   ಸಂನ್ಯಾಸಾಶ್ರಮವು ಕೆಲವು ಅರ್ಹರಿಗೇ ಹೊರತೂ ಎಲ್ಲರಿಗೂ ಹೇಳಿ ಮಾಡಿಸಿದ್ದಲ್ಲಾ.

ಹೀಗೆ ಭಗವದ್ಗೀತೆ ಮತ್ತು ಯೋಗಸೂತ್ರಗಳಲ್ಲಿ ಶ್ಲಾಘಿಸಲ್ಪಟ್ಟಿರುವ ಅಭ್ಯಾಸ ಮತ್ತು ವೈರಾಗ್ಯಗಳ ಮೂಲಕ ರೂಢಿಸಿಕೊಳ್ಳಬಹುದಾದ ಸಂನ್ಯಾಸ ಮನೋಧರ್ಮವು ನಾಲ್ಕೂ ಆಶ್ರಮಿಗಳಿಗೂ ಪೂರ್ಣಜೀವನಕ್ಕೆ ಸಾರ್ಥಕ ಅಂತ್ಯವನ್ನು ತಂದುಕೊಡಬಲ್ಲಂತಹಾ ಪರಮಾದರ್ಶವಾಗಿದೆ

ಸೂಚನೆ: 19/10/2019 ರಂದು ಈ ಲೇಖನ ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ.