Monday, November 30, 2020

Vivaaha Samskaara – 2 (Vivaaha to beget worthy progeny with Supreme Knowledge)

Kannada Article by: Tarodi Suresha

English Rendering by: Padmini Shrinivasan


  

We have acquainted ourselves with synonyms for the marriage ritual. It is called 'Paani-grahana' as both the bride and the groom, vow together while specially holding their hands –"let your heart be mine and my heart be yours".'Upayama' means the attainment of a divine orientation by the groom, who is morally bound and observes restraint, while accepting the bride. Animals do not possess any restraint and unite based on their sensual instincts. Even in humans if it is driven by an ego "get them married, they are of marriageable age", then it is as good as an animal's life. Jnaanis have identified additional qualities to be fulfilled. When such qualities are incorporated, the marriage proceeds as a purifying ritual (Samskaara). The groom, as a Brahmachari, graduates after completing his education (Vidyaabhyaasa) at the residence of his teacher (Gurukula). The Guru while instructing him not to cut the offspring chain, grants him permission to accept the life of a householder (Gruhasta). Akin to receiving sunlight from the sun, the disciple who has been blessed with spiritual knowledge from his Preceptor, enters into matrimony to get blessed with worthy progeny. Graduating as a Jnaani with the training imparted by his Guru, he qualifies to lead a life with an inner divine vision at its root (Jnaana-netra); then it is imperative that he gets married at the right age. Even in the saying "Vidyaam cha vittam cha vapurvayascha", age (Vayas) appears at the end implying that Vidyaa is more important than age. The spiritual training (Vidya) received by him is of that kind capable of elevating one into a salvation path (Vid jnaane + yaapraapane). It is not an M.A., Ph.D. kind of knowledge.

The conversation between the bride and the groom stands as a witness to this. The bride addresses the groom and says "I am visualising that you are a Jnaani through penance. I seek refuge in a Jnaani Satprusha (supremely pious person) like you". The groom with a divine reminiscence says "I am also visualising the Jnaana in you". A spectacular sight to witness! – bound by Dharma, the bride and groom with their Jnaana step into a wedlock, with a prayer to get blessed with Dharmasantaana (offspring capable of upholding and nurturing Dharma). As per the design of Rshis, all the relatives and guests who partake in the function, acquire Samskaara through thoughts steeped in the Supreme Lord (Parabrahman). Only thus, will life rise above the level of beasts and mature with the human's inherent ability, to lead an earthly- as well as heavenly-fulfilling life.

As per the saying "Jaamaata Vishnuvat poojyah", worshipping the son-in-law (as if he is Lord Vishnu) is a prevalent custom. If he has to be worshipped as a representative of Vishnu, what should be the son-in-law's worth? With passage of time, this saying has degenerated to take the form "Jaamaataa dashamo grahah". The position of the remaining nine planets can be precisely predicted, while the behaviour of this tenth planet known as son-in-law is beyond anybody's guess!  This is an experience familiar to most of us.This trend upholds an under valuation of the Maharshi culture.

Sriranga Mahaaguru had explained thus "the word Aliya (son-in-law in Kannada) means Aliyade iruvudu (eternal), it implies that he is Acchyuta (a name of Lord Vishnu meaning imperishable).

Note: The Kannada version of this article can be viewed at AYVM blogs.   


(To be continued)

Sunday, November 29, 2020

ಸತ್ಪುರುಷರು ಯಾರು ? (Satpurusaru yaru?)

ಲೇಖಕರು ; ವಿದ್ವಾನ್ ನರಸಿಂಹ ಭಟ್ ಬಡಗು 
(ಪ್ರತಿಕ್ರಿಯಿಸಿರಿ lekhana@ayvm.in)



ಮನಸಿ ವಚಸಿ ಕಾಯೇ ಪುಣ್ಯಪೀಯೂಷಪೂರ್ಣಾಃ ತ್ರಿಭುವನಮುಪಕಾರಶ್ರೇಣಿಭಿಃ ಪ್ರೀಣಯಂತಃ |
ಪರಗುಣಪರಮಾಣೂನ್ ಪರ್ವತೀಕೃತ್ಯ ನಿತ್ಯಂ ನಿಜಹೃದಿ ವಿಕಸಂತಃ ಸಂತಿ ಸಂತಃ ಕಿಯಂತಃ || ಸುಭಾಷಿತನೀತಿಶತ


ಅರ್ಥ-ಯಾರ ಮನಸ್ಸಿನಲ್ಲಿ ಮಾತಿನಲ್ಲಿ ಕೃತಿಯಲ್ಲಿ ಪುಣ್ಯ ಅಮೃತವು ತುಂಬಿದೆಯೋ ಯಾರು ಹಿತಾಚರಣ ಪರಂಪರೆಯಿಂದ ಮೂರು ಲೋಕಗಳನ್ನೂ ಸಂತೋಷಿಸುತ್ತಿರುವರೋ ಯಾರು ಬೇರೆಯವರಲ್ಲಿರುವ ಅತ್ಯಲ್ಪ ಗುಣವನ್ನೂ ಮಹತ್ತರವನ್ನಾಗಿಸುತ್ತಾ ಎತ್ತಿತೋರಿಸುವರೋ ಯಾರು ತಮ್ಮ ಅಂತಃಕರಣದಲ್ಲೇ ಸಂತೋಷಪಡುತ್ತಾರೋ ಅಂತಹ ಸತ್ಪುರುಷರು ಎಷ್ಟು ತಾನೆ ಇರಲು ಸಾಧ್ಯ!!!  

ವಿವರಣೆ - ನಿಜವಾದ ಸತ್ಪುಷರು ಯಾರು ಎಂಬ ಬಗ್ಗೆ ಅತಿ ಸುಂದರವಾದ ವಿವರಣೆ ಇಲ್ಲಿದೆ. ಮನಸ್ಸಿನಲ್ಲಿ, ಮಾತಿನಲ್ಲಿ ಕೃತಿಯಲ್ಲಿ ಹೀಗೆ ಮೂರರಲ್ಲೂ ಯಾರು ಏಕರೂಪವಾಗಿರುತ್ತಾರೋ ಅಂತವರು ಮಹಾತ್ಮರು. ಮನಸ್ಸಿನಲ್ಲಿ ಒಂದು ಮಾತಿನಲ್ಲಿ ಮತ್ತೊಂದು ಕೃತಿಯಲ್ಲಿ ಬೇರೊಂದು ಹೀಗೇ ಮೂರೂ ಭಿನ್ನರೂಪವಾಗಿರುತ್ತಾರೋ ಅಂತವರು ದುರಾತ್ಮರು. ಕಾಯ ವಾಕ್ ಮನಸ್ಸು ಯಾವ ಕಾರ್ಯದಲ್ಲಿ ಏಕಾಗ್ರವಾಗಿರುತ್ತದೆಯೋ ಆ ಕಾರ್ಯವು ಸಿದ್ಧ ಎಂದೇ ಅರ್ಥ. ಎತ್ತು ಏರಿಗೆ ಎಳೆದರೆ ಕೋಣ ನೀರಿಗೆ ಎಳೆಯಿತು ಎಂದಾದರೆ ಆರಂಭಿಸಿದ ಕಾರ್ಯ ಸಂಪನ್ನವಾಗಲು ಹೇಗೆ ಸಾಧ್ಯ? ಮಹಾತ್ಮರ ಕರ್ಮದಿಂದ ಪುಣ್ಯ ಸಂಪಾದಿತವಾಗುತ್ತದೆ. ಮತ್ತು ಇದರಿಂದ ಅಮೃತತ್ವವೂ ಸಿದ್ಧಿಸುವುದು. ಇಂತವರು ಮಾಡುವ ಆಚರಣೆಗಳು ಮನುಷ್ಯರಿಗೆ ಮಾತ್ರವಲ್ಲ ದೇವತೆಗಳಿಗೂ ಪ್ರಿಯವಾಗುತ್ತವೆ. ಇವರಿಗೆ ಬೇರೆಯವರಲ್ಲಿ ಇರುವ ದೋಷಗಳೇ ಕಾಣಿಸುವುದಿಲ್ಲ. ಸಣ್ಣ ಸದ್ಗುಣವನ್ನೂ ಹೇಳಿ ದೋಷ ಮಾಯವಾಗುವಂತೆ ಮಾಡುತ್ತಾರೆ. ಬೇರೆಯವರಲ್ಲಿರುವ ಸಣ್ಣ ಸದ್ಗುಣವನ್ನು ಕಂಡು ತಮ್ಮ ಒಳಗೇ ಆ ಗುಣವನ್ನು ಅನುಭವಿಸುತ್ತಾ ಅನಂದಿಸುತ್ತಾರೆ. ಮೊದಲು ಒಂದು ಗುಣವಾಗಿದ್ದರೂ ಅದೇ ಗುಣಗಣವಾಗುತ್ತದೆ. ದೋಷಿಯನ್ನೂ ನಿರ್ದೋಷಿಯನ್ನಾಗಿ ಪರಿವರ್ತಿಸುತ್ತದೆ. ಋಣಾತ್ಮಕತೆಯಿಂದ ಧನಾತ್ಮಕತೆಗೆ ನಮ್ಮನ್ನು ತೊಡಗಿಸುತ್ತದೆ. ಇಂತಹ ಸಂತರಾಗೋಣ. ಸಂತತವಾಗಿ ಸಂತೋಷಿಸೋಣ. ಎಲ್ಲರನ್ನೂ ಸಂತೋಷಪಡಿಸೋಣ. 

ಸೂಚನೆ: 28/11/2020 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ 
ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.  

ಆರ್ಯಸಂಸ್ಕೃತಿ ದರ್ಶನ - 19 (Arya Samskruti Darshana - 19)

ಪಂಚಾಯತನ ಪೂಜಾ
ಲೇಖಕರು: ವಿದ್ವಾನ್||ಶ್ರೀ ಶೇಷಾಚಲಶರ್ಮಾ



ಆಸ್ತಿಕ ಭಾವನೆಯುಳ್ಳ ಜನರಲ್ಲಿ ದೇವತಾಪೂಜೆ, ದೇವತೋಪಾಸನೆಗಳು ಆಚರಣೆಯಲ್ಲಿರುವುದು ಸರ್ವವಿದಿತವಾದ ವಿಷಯ. ಉಪಾಸನೆಯೆಂದರೆ ಉಪಸಮೀಪೇ  ಆಸನಂ--ಅರ್ಥಾತ್ ಬಳಿಯಲ್ಲಿ ಇರುವುದು ಎಂದು ಶಬ್ದಾರ್ಥ. ದೇವತೋಪಾಸನೆ ಎಂಬಲ್ಲಿ ನಮ್ಮ  ಇಷ್ಟದೇವತೆಯ ಸಾನ್ನಿಧ್ಯದಲ್ಲಿಯೇ ನಾವು ಎಂದರೆ ನಮ್ಮ ಅಂತಕರಣ ಮತ್ತು ಬಹಿಃಕರಣಗಳು ಸದಾ ನೆಲೆಸಿರುವುದು ಎಂದು ತಾತ್ಪರ್ಯ. ಇಂತಹ ಉಪಾಸನೆಯ ಅಂಗವಾಗಿ ಪೂಜಾ ಎಂಬ ಕರ್ಮವನ್ನು ಆಚರಿಸುವುದು ಶಾಸ್ತ್ರವಿಹಿತವಾದ ಆಚರಣೆ. ಲೌಕಿಕವಾಗಿಯೂ, ನಮಗಿಂತ ಶ್ರೇಷ್ಠರಾದವರನ್ನು, ಎಂದರೆ ಗುರುಹಿರಿಯರನ್ನು ಪೂಜಿಸುವುದು-ಗೌರವಿಸುವುದು ವಾಡಿಕೆಯಲ್ಲಿದೆ. ಪೂಜೆಯಲ್ಲಿಯೂ ಬಾಹ್ಯಪೂಜೆ ಮತ್ತು ಅಂತರಂಗ ಪೂಜೆ ಅಥವಾ ಮಾನಸಪೂಜೆ ಎಂದು ಎರಡು ವಿಧವಿದೆ. ಎರಡು ವಿಧ ಪೂಜೆಗಳೂ ಶಾಸ್ತ್ರವಿಹಿತವಾದುವುಗಳು ಮತ್ತು ಸಂಪ್ರದಾಯ ಕ್ರಮದಲ್ಲಿ ಆಚರಿಸಲ್ಪಡತಕ್ಕವುಗಳು. ಮನಸ್ಸನ್ನು ಅಂತರ್ಮುಖವಾಗಿ ಮಾಡಲು ಪ್ರಾರಂಭದಲ್ಲಿ ಬಾಹ್ಯಪೂಜೆಯು ಅವಶ್ಯಕವಾಗಿರುತ್ತದೆ. ಮಾನಸಪೂಜೆಯ ಸಿದ್ಧಿಯನ್ನು ಪಡೆದಮೇಲೆಯೂ ಉಪಾಸಕನು ಲೋಕಯಾತ್ರೆಯನ್ನು ನಡೆಸುವಾಗ ತನ್ನ ಅಂತಃಕರಣ ಮತ್ತು ಬಹಿಃಕರಣಗಳು ಸದಾ ಭಗವನ್ಮಯವಾಗಿರುವಂತೆ ಮಾಡಿಕೊಳ್ಳಲು ಅಂತರಂಗಪೂಜೆ ಮತ್ತು ಬಹಿರಂಗ ಪೂಜೆಗಳನ್ನು ಆಚರಿಸುತ್ತಾನೆ. ಮತ್ತು ಲೋಕಶಿಕ್ಷಣಕ್ಕಾಗಿಯೂ ಅಂತಹವನು ಬಾಹ್ಯಪೂಜೆಯನ್ನು ವಿಧಿವತ್ತಾಗಿ ಆಚರಿಸುತ್ತಾನೆ. ತಾನು ಒಳಗೆ ಅನುಭವಿಸಿದುದನ್ನು ಹೊರಗೂ ತುಂಬಿಕೊಳ್ಳಲು ಬಾಹ್ಯಪೂಜೆಯೂ ಅವಶ್ಯಕವಾಗುತ್ತದೆ. ಅಂತರಂಗ ಪೂಜೆಯ ಶಕ್ತಿಯಿಂದ ಪವಿತ್ರವಾದ ಕರಣಗಳು ಬಾಹ್ಯವಾಗಿಯೂ ಅಂತಹ ಪವಿತ್ರ ಭಾವನೆಗಳನ್ನೇ ಹೊರಸೂಸುತ್ತಾ ಬಾಹ್ಯ ವ್ಯಾಪಾರಗಳನ್ನು ನಡೆಸುತ್ತವೆ. ಅಂತರಂಗದಲ್ಲಿ ಆಡುವ ದೈವೀಶಕ್ತಿಯ ಪ್ರಭಾವದಿಂದ ಬಾಹ್ಯಕರಣಗಳು ಮಾಡುವ ವ್ಯಾಪಾರಗಳೆಲ್ಲಾ ಒಂದು ರೀತಿಯಲ್ಲಿ ಪೂಜೆಯೆನಿಸುತ್ತವೆ. ಯಾವ ಮಹಾಶಕ್ತಿಯು ವಿಶ್ವದ ವಸ್ತುಗಳನ್ನು ಸೃಷ್ಟಿಸಿ ಅವುಗಳಲ್ಲಿ ಅಪ್ರತಿಹತವಾಗಿ ವ್ಯಾಪಿಸಿ ಸಂಚರಿಸುತ್ತಿದೆಯೋ, ಅಂತಹ ಶಕ್ತಿಯ ಆಕರ್ಷಣೆ ಮತ್ತು ಪ್ರಭಾವಗಳಿಂದ ಅಂತಃಕರಣ ಮತ್ತು ಬಹಿಃಕರಣಗಳು ಆಡತೊಡಗಿದಾಗ ಸೃಷ್ಟೀಶನಿಗೆ ಸಲ್ಲಬೇಕಾದ ವಸ್ತುಗಳು ಹೇಗಾದರೂ ಒದಗಿಬಂದು ಅವನ ಪೂಜಿಯು ಸಮರ್ಪಕವಾಗಿ ನಡೆದೇ ನಡೆಯುತ್ತದೆ. ಆ ಮಹಾಶಕ್ತಿಯ ಆವಿರ್ಭಾವ -ತಿರೋಭಾವಗಳ ರಹಸ್ಯಕ್ಕನುಗುಣವಾಗಿ ಆಯಾ ಪೂಜೆಯಲ್ಲಿನ ದ್ರವ್ಯಗಳು, ಪೂಜಾಸಾಮಗ್ರಿಗಳು, ಕ್ರಿಯಾಕಲಾಪಗಳು, ಬಂಧ -ಮುದ್ರೆಗಳು ಇರುತ್ತವೆ. ಸಿದ್ಧಪುರುಷನಲ್ಲಿ ಇವೆಲ್ಲಾ ಸಹಜವಾಗಿ ಸಂಗೃಹೀತವಾಗುತ್ತವೆ. ಸಾಧಕನಾದವನು ಇವುಗಳನ್ನು ದೈವೀಭಾವಕ್ಕೆ ಸಲ್ಲುವಂತೆ ಸಂಗ್ರಹಿಸಬೇಕಾದರೆ ಶಾಸ್ತ್ರವಿಧಿಗಳನ್ನು ಪಾಲಿಸಬೇಕು. ಅಂತರಂಗಪೂಜೆಯಲ್ಲಿ ತತ್ತ್ವಗಳೇ ಸಹಜವಾಗಿ ಪೂಜಾಸಾಮಗ್ರಿಯಾಗುತ್ತವೆ. ಆಯಾತತ್ತ್ವಗಳ ಶಕ್ತಿಗಳೇ ಸೃಷ್ಟಿಯ ದ್ರವ್ಯಗಳಲ್ಲೂ ಹರಿಯುವುದರಿಂದ, ಬಾಹ್ಯದೃಷ್ಟಿ ಮತ್ತು ಅಂತರ್ದೃಷ್ಟಿಗಳ ಸಾಮರಸ್ಯದಿಂದ ವಿಶಿಷ್ಟವಾದ ಪೂಜಾಸಾಮಗ್ರಿಯನ್ನು ಬಳಸಿದರೆ, ಬಹಿರಂಗದಲ್ಲಿ ದ್ರವ್ಯಮಯವಾಗಿ ನಡೆಯುವ ಪೂಜೆಯು ಅಂತರಂಗದಲ್ಲಿ ತತ್ತ್ವಮಯವಾಗಿ ವ್ಯಾಪಿಸಿ, ಸೃಷ್ಟಿಯ ಮೂಲ ಮಹಾಶಕ್ತಿಗೆ ಪೂಜೆಯನ್ನು ಸಲ್ಲಿಸಿದಂತಾಗುತ್ತದೆ. ಅಂತರಂಗ ಪೂಜೆಯ ಹಾಗೂ ಬಹಿರಂಗ ಪೂಜೆಯ ಗುಟ್ಟು ಈ ಪ್ರಕ್ರಿಯೆಯಲ್ಲಿ ಅಡಗಿದೆ. ಎಲ್ಲ ವಿಧವಾದ ಪೂಜೆಗಳ ಹಿಂದೆ ತಾತ್ತ್ವಿಕವಾದ ಒಂದು ರಹಸ್ಯವಿದೆ. ತತ್ತ್ವದೃಷ್ಟಿಯಿಂದ ನೋಡಿದಾಗ ವಿವಿಧ ಪೂಜಾ ವಿಧಾನಗಳ ಸಾಮರಸ್ಯ ಮನಸ್ಸಿಗೆ ಬರುತ್ತದೆ.

ಸಾಧಕನು ಪೂಜಿಸುವ ದೇವತೆಗಳ ಸಂಖ್ಯೆಯನ್ನು ಶಾಸ್ತ್ರಗಳಲ್ಲಿ ಪರಿಶೀಲಿಸಿದರೆ ಲೆಕ್ಕ ಮಾಡುವುದೇ ಕಷ್ಟವೆನಿಸುವಂತಿದೆ. ಒಂದು, ಎರಡು, ಮೂರು, ಐದು, ಮೂವತ್ತಮೂರು, ಹೀಗೇ ಬೆಳೆಯುತ್ತಾ ಮೂವತ್ತಮೂರು ಕೋಟಿ ದೇವತೆಗಳೆಂದು ಹೇಳುವುದನ್ನು ಶಾಸ್ತ್ರ, ಪುರಾಣ, ಇತಿಹಾಸಗಳಲ್ಲಿ ಕಾಣುತ್ತೇವೆ. "ಏಕಂ ಸದ್ವಿಪ್ರಾ ಬಹುಧಾ ವದಂತಿ" ಎಂಬಂತೆ ವಿಶ್ವವ್ಯಾಪಿಯಾದ ಪರಮಾತ್ಮನೊಬ್ಬನನ್ನೇ ಬೇರೆ ಬೇರೆ ಹೆಸರಿನಿಂದ ಜ್ಞಾನಿಗಳು ಕರೆಯುತ್ತಾರೆಂದು ಶ್ರುತಿಯು ಒಂದೆಡೆ ತಿಳಿಸುತ್ತದೆ. ಬೀಜದಲ್ಲಿ ಅಡಗಿರುವ ಒಂದೇ ಮಹಾಶಕ್ತಿಯು ಅಂಕುರ, ಕಾಂಡ, ಶಾಖೆ, ಉಪಶಾಖೆ, ಹೂ, ಕಾಯಿ, ಹಣ್ಣು  -- ಎಂಬುದಾಗಿ ವಿಕಾಸಹೊಂದಿದಾಗ ಬೇರೆ ಬೇರೆ ನಾಮರೂಪಗಳನ್ನು ತಾಳುವುದು ಸರಿಯಷ್ಟೆ. ಆದರೆ ವಿವಿಧವಾದ ಈ ನಾಮರೂಪಗಳಲ್ಲಿ ಅವ್ಯಾಹತವಾಗಿ ಆಡುತ್ತಿರುವುದು ಆ ಮಹಾಶಕ್ತಿಯೊಂದೇ. ಆ ಮಹಾಶಕ್ತಿಯನ್ನು ಸೇವಿಸುವವನು ಕಾಲ-ದೇಶಗಳ ಉಪಾಧಿಯ ಸ್ಥಿತಿಯಲ್ಲಿ ವಿವಿಧ ನಾಮರೂಪಗಳನ್ನು ಸೇವಿಸಬೇಕಾದುದೇನೋ ನಿಜ. ಆದರೆ ಆ ವೈವಿಧ್ಯದ ಮೂಲಕ ತಾತ್ತ್ವಿಕವಾಗಿ ಸಾಮರಸ್ಯವನ್ನೇ ಅವನು ಸೇವಿಸಬೇಕಾದುದು ಎಂಬುದನ್ನು ಮರೆಯಬಾರದು.

ದೇವಪೂಜಾಕಲ್ಪದಲ್ಲಿ ಪಂಚದೇವಪೂಜೆ ಅಥವಾ ಪಂಚಾಯತನ ಪೂಜೆ ಬಹಳ ವ್ಯಾಪಕವಾಗಿ ಆಚರಣೆಯಲ್ಲಿದೆ. ಈ ಪೂಜೆ ಬಹಳ ಗಂಭೀರವಾದುದು ಮತ್ತು ಅತ್ಯಂತ ತಾತ್ತ್ವಿಕವಾಗಿದ್ದು, ಆಧ್ಯಾತ್ಮಿಕ ದಿವ್ಯ ರಹಸ್ಯಗಳನ್ನು ಒಳಗೊಂಡಿದೆ. ಬೇರೆ ಬೇರೆ ದೇವಪೂಜೆಗಳನ್ನು ಮಾಡವವರೂ ಪೂಜಾಸಿದ್ಧಿಗಾಗಿ ಪಂಚಾಯತನ ಪೂಜೆಯನ್ನು ಆಚರಿಸುತ್ತಾರೆ. ಈ ಪಂಚಾಯತನ ಪೂಜೆಯ ರಹಸ್ಯವು ಅತ್ಯಂತ ಉತ್ತಮೋತ್ತಮವಾದ ಸ್ಫೂರ್ತಿದಾಯಕವಾದ ಪೂಜೆಯಾಗಿದೆ. ಗಣೇಶ, ದೇವೀ, ಶಂಕರ, ವಿಷ್ಣು ಮತ್ತು ಸೂರ್ಯ –ಇವರೇ ಪಂಚಾಯತನ ಪೂಜೆಯ ದೇವತೆಗಳು. ಶಾಸ್ತ್ರಗ್ರಂಥಗಳಲ್ಲಿ

"ಆದಿತ್ಯಂ ಗಣನಾಥಂ ಚ ದೇವೀಂ ರುದ್ರಂ ಚ ಕೇಶವಂ|
ಪಂಚದೈವತಮಿತ್ಯುಕ್ತಂ ಸರ್ವಕರ್ಮಸು ಪೂಜಯೇತ್||

ಎಂಬುದಾಗಿ ಸರ್ವಕಾರ್ಯಗಳಲ್ಲಿಯೂ ಈ ಐದು ಮಂದಿ ದೇವತೆಗಳನ್ನು ಪೂಜಿಸಬೇಕು ಎಂಬ ವಿಧಿಯನ್ನು ಕಾಣುತ್ತೇವೆ. ಈ ಐದು ದೇವತೆಗಳಲ್ಲಿ ಭೇದವನ್ನೆಣಿಸದೆ ಅಭೇದ ಭಾವನೆಯನ್ನು ಹೊಂದುವುದೇ ಸರ್ವಶ್ರೇಷ್ಠವಾದ ಯೋಗವೆಂಬುದಾಗಿ ಗಣೇಶ ಪುರಾಣದಲ್ಲಿ ಉಕ್ತವಾಗಿದೆ:-
 "ಶಿವೇ ವಿಷ್ಣೌ ತಥಾ ಶಕ್ತೌ ಸೂರ್ಯೇ ಮಯಿ ನರಾಧಿಪ।
ಯಾಭೇದ ಬುದ್ಧಿರ್ಯೋಗಃ ಸ ಸಮ್ಯಗ್ಯೋಗ್ಯತಮೋ ಮತಃ||"

ಶ್ರೇಷ್ಠತಮ ಯೋಗವೆನಿಸಿದ ಈ ಪಂಚಾಯತನ ಪೂಜೆಯ ರಹಸ್ಯವಾದರೂ ಏನು? ಸೃಷ್ಟಿಯು ಪಂಚಭೂತಾತ್ಮಕವಾಗಿದೆ. ಮೂಲಪರತತ್ತ್ವದಿಂದ ಪಂಚಭೂತಗಳು ವಿಕಾಸಗೊಂಡು ಈ ಕಾರ್ಯ ಪ್ರಪಂಚರೂಪವಾಗಿ ತೋರುತ್ತಿವೆ. ಬ್ರಹ್ಮಾಂಡದಲ್ಲಿ ತಮ್ಮ ವಿಕಾಸ ಕ್ರಮವಿರುವಂತಯೇ ಪಿಂಡಾಂಡದಲ್ಲಿಯೂ ಕ್ರಮಬದ್ಧವಾಗಿ ತತ್ತ್ವಗಳು ವಿಕಾಸಗೊಂಡಿವೆ. ಪಿಂಡಾಂಡ-ಬ್ರಹ್ಮಾಂಡಗಳ ಸಾಮರಸ್ಯವೇ ಯೋಗ ಸಾಧನೆಯ ರಹಸ್ಯ. ಪಂಚಭೂತಗಳು ಕ್ರಮವಾಗಿ ಪೃಥ್ವೀ, ಜಲ, ತೇಜಸ್ಸು, ವಾಯು ಮತ್ತು ಆಕಾಶ ಎಂಬುದಾಗಿ ಐದು ಇವೆ. ಪಂಚಾಯತನ ಪೂಜೆಯ ದೇವತೆಗಳ ಭಾವನೆಯಲ್ಲಿಯೂ ಒಂದು ಕ್ರಮ ವಿದೆ. ಕ್ರಮವಾಗಿ ಗಣೇಶ, ದೇವೀ, ಶಿವ, ವಿಷ್ಣು ಮತ್ತು ಸೂರ್ಯ ಎಂಬುದಾಗಿ ಈ ಪೂಜೆಯಲ್ಲಿ ದೇವತೆಗಳು ಭಾವಿಸಲ್ಪಡುತ್ತಾರೆ. ಈ ದೇವತಾಶಕ್ತಿಗಳಿಗೂ ಪಂಚಭೂತಗಳಿಗೂ ತಾತ್ವಿಕವಾದ ಸಂಬಂಧವಿದೆ. ಈ ಪಂಚಭೂತಶಕ್ತಿಗಳೇ ಸೂಕ್ಷ್ಮ-ಸ್ಥೂಲ ವಿಧಾನಗಳಿಂದ ನಮ್ಮಶರೀರೇಂದ್ರಿಯ ಮನಸ್ಸು ಪ್ರಾಣಗಳ ರೂಪದಲ್ಲಿ ವಿಕಾಸ ಹೊಂದಿವೆ. ಈ ಐದು ದೇವತೆಗಳೂ ಒಂದೊಂದು ಭೂತಕ್ಕೆ ಅಧಿಪತಿಗಳು. ಪೃಥಿವೀ ತತ್ತ್ವಕ್ಕೆ ಶಿವನು ಅಧಿಪತಿ; ಜಲ ತತ್ತ್ವಕ್ಕೆ ಗಣೇಶನು; ತೇಜಸ್ತತ್ತ್ವಕ್ಕೆ ದೇವಿಯು; ವಾಯು ತತ್ತ್ವಕ್ಕೆಸೂರ್ಯನು; ಆಕಾಶ ತತ್ತ್ವಕ್ಕೆ ವಿಷ್ಣು; ಈ ವಿಷಯವನ್ನೇ ಶಾಸ್ತ್ರವು

"ಆಕಾಶಸ್ಯಾಧಿಪೋ ವಿಷ್ಣುರಗ್ನೇಶ್ಚೈವ ಮಹೇಶ್ವರೀ |
ವಾಯೋಃ  ಸೂರ್ಯಃ ಕ್ಷಿತೇರೀಶೋ ಜೀವನಸ್ಯ ಗಣಾಧಿಪಃ||

ಎಂದು ವರ್ಣಿಸುತ್ತದೆ. ಪೃಥ್ವೀ ತತ್ತ್ವಕ್ಕೂ ಶಿವನಿಗೂ ಸಂಬಂಧವಿರುವುದರಿಂದ ಪಂಚಾಯತನ ಪೂಜೆಯ ಒಂದು ಕಲ್ಪದ ಪ್ರಕಾರ ಶಿವನನ್ನು ಪಾರ್ಥಿವ ಲಿಂಗರೂಪದಲ್ಲಿ ಪೂಜಿಸಬೇಕೆಂಬ ವಿಧಾನವಿದೆ. ಜಲತತ್ತ್ವಕ್ಕೆ ಸೇರಿದ ಗಣಪತಿಯನ್ನು ಆರಂಭದಲ್ಲಿ ಪೂಜಿಸಿ ಜಲತತ್ತ್ವದಲ್ಲಿ ಲಯಗೊಳಿಸಬೇಕು, "ಅಪ ಏವ ಸಸರ್ಜಾದೌ" ಎಂದು ಸೃಷ್ಟಿವಿಕಾಸ ಕ್ರಮದಲ್ಲಿ ಜಲತತ್ತ್ವಕ್ಕೆ ಆದ್ಯತೆ ಇದೆ. "ಗಣೇಶಾದಿ ಪಂಚದೇವತಾಭ್ಯೋ ನಮಃ" ಎಂಬ ಕ್ರಮವು ಈ ತಾತ್ತ್ವಿಕ ರಹಸ್ಯವನ್ನು ಒಳಗೊಂಡಿದೆ. ಅಗ್ನಿ ತತ್ತ್ವಕ್ಕೆ ಸೇರಿದ ದೇವಿಯ ಪೂಜೆಯಲ್ಲಿ ಪ್ರಧಾನವಾಗಿ ಅಗ್ನಿಕುಂಡದಲ್ಲಿ ಹೋಮರೂಪದಿಂದ ಮಾಡಬೇಕಾದ ವಿಧಾನವಿದೆ. ಆಕಾಶತತ್ತ್ವದಲ್ಲಿ ವಿಷ್ಣುವಿನ ಪೂಜೆ ಪ್ರಣವೋಪಾಸನೆ ಮುಂತಾದ ಶಬ್ದ ರೂಪವಾಗಿ ನಡೆಯುತ್ತದೆ, ಸೂರ್ಯನು ಜಗತ್ತಿನ ಆತ್ಮಭೂತನು. ಪ್ರಾಣರೂಪನು. "ಸೂರ್ಯ ಆತ್ಮಾ ಜಗತಃ ತಸ್ಥುಷಶ್ಚ" ಎಂದು ವರ್ಣಿತನಾಗಿದ್ದಾನೆ. ಒಂದೇ ದೇವತೆಯನ್ನು ಪ್ರಧಾನವಾಗಿ ಇಷ್ಟದೇವತೆಯನ್ನಾಗಿ ಮಾಡಿಕೊಂಡು ಪೂಜಿಸುವವರು ಮಧ್ಯದಲ್ಲಿ ಇಷ್ಟದೇವತೆಯನ್ನಿಟ್ಟು ಇತರನಾಲ್ಕುಕಡೆಗೆ ನಾಲ್ಕು ದೇವತೆಗಳನ್ನು ಇಟ್ಟು ಪೂಜೆಮಾಡುತ್ತಾರೆ.  ಸಂಪ್ರದಾಯಭೇದದಿಂದ ಉಪಾಸನಾಭೇದ ಕಂಡುಬಂದರೂ, ಒಟ್ಟಿನಲ್ಲಿ ಪಂಚದೇವತಾಪೂಜೆಯು ಎಲ್ಲ ಸಂಪ್ರದಾಯಗಳಲ್ಲಿಯೂ ಕಂಡುಬರುತ್ತದೆ. ಆದರೆ ಕೆಲವು ಸಂಪ್ರದಾಯಗಳಲ್ಲಿ ಮೂಲ ತಾತ್ತ್ವಿಕ ಸ್ವರೂಪವು ಮರೆಯಾಗಿ, ಮಧ್ಯಕಾಲದಲ್ಲಿ ಅವಿವೇಕದಿಂದ ಕೆಲವು ವಿಷಯಗಳು ಸೇರಿಕೊಂಡು ತಾತ್ತ್ವಿಕವಾದ ಸಂಪ್ರದಾಯಕ್ಕೆ ವಿರುದ್ಧವಾದ ಆಚರಣೆಯು ನಡೆಯುತ್ತಿರುತ್ತದೆ. ತತ್ತ್ವವನ್ನರಿತು ಸಂಪ್ರದಾಯವನ್ನು ಬೆಳೆಸುವ ಜ್ಞಾನಿಯಾದ ಗುರುವಿನ ಉಪದೇಶವನ್ನು ಪಡೆದು ಪೂಜಾ ಸಾಧನವನ್ನು ಮಾಡಿದರೆ ಅದರ ಫಲವು ನಿಶ್ಚಯವಾಗಿಯೂ ಪ್ರಾಪ್ತವಾಗುತ್ತದೆ. ಪ್ರಕೃತಿಭೇದದಿಂದ ಅಧಿಕಾರಿಗಳು ಭಿನ್ನ ಭಿನ್ನವಾಗುವುದರಿಂದ ಸಂಪ್ರದಾಯ ಭೇದಗಳು ಉಂಟಾಗುವುದು ಸಹಜವಾಗಿಯೇ ಇದೆ -
"ಮಾನವಾನಾಂ ಪ್ರಕೃತಯಃ ಪಂಚಧಾ ಪರಿಕೀರ್ತಿತಾಃ|
ಯತೋ ನಿರೂಪ್ಯತೇ ಸರ್ಗಃ ಪಂಚಭೂತಾತ್ಮಕೋಬುಧೈಃ||
ಭಿನ್ನಾ ಯದ್ಯಪಿ ಭೂತಾನಾಂ ಪ್ರಕೃತಿಃ ಪ್ರಕೃತೇರ್ವಶಾತ್|
ತಥಾಪಿ ಪಂಚತತ್ತ್ವಾನಾಮಾನುಸಾರೇಣ ತತ್ತ್ವವಿತ್||
ಪ್ರಮೇಯ ತತ್ತ್ವಪ್ರಾಚುರ್ಯಂ ವಿಮೃಶ್ಯ ವಿಧಿಪೂರ್ವಕಮ್|
ಉಪಾಸನಾಧಿಕಾರಸ್ಯ ಪಂಚಭೇದಮವರ್ಣಯತ್||

"ಜ್ಞಾನಿಗಳು ಸೃಷ್ಟಿಯು ಪಂಚಭೂತಾತ್ಮಕವಾಗಿದೆಯೆಂದು ಹೇಳುತ್ತಾರೆ. ಆದ್ದರಿಂದಲೇ ಮನುಷ್ಯರ ಪ್ರಕೃತಿಗಳೂ ಐದು ವಿಧವಾಗಿರುತ್ತವೆ. ಪ್ರಕೃತಿಯ ವಶದಿಂದ ಜೀವಿಗಳ ಸ್ವಭಾವವು ಯದ್ಯಪಿ ಭಿನ್ನ ಭಿನ್ನವಾಗಿರುತ್ತದೆ. ಆದರೂ ತತ್ತ್ವಜ್ಞಾನಿಯಾದವನು ಪಂಚತತ್ತ್ವಗಳ ಕ್ರಮವನ್ನು ಅನುಸರಿಸಿ, ಪ್ರಮೇಯುಭೂತವಾದ ತತ್ತ್ವಗಳ ಪ್ರಾಚುರ್ಯವನ್ನು ವಿಧಿಪೂರ್ವಕವಾಗಿ ವಿಮರ್ಶಿಸಿ, ಉಪಾಸನೆಯ ಅಧಿಕಾರದಲ್ಲಿ ಐದು ಭೇದಗಳನ್ನು ವರ್ಣಿಸಿದ್ದಾನೆ."
ಪ್ರಾಮಾಣಿಕವಾಗಿ ಪರಮ ಪುರುಷಾರ್ಥವನ್ನು ಪಡೆಯಲಪೇಕ್ಷಿಸುವ ಸಾಧಕನು ಸದ್ಗುರುವಿನಿಂದ ಉಪದೇಶ ಪಡೆದು ಬಹಿರಂಗಪೂಜೆ ಮತ್ತು ಅಂತರಂಗ ಪೂಜೆಗಳ ರಹಸ್ಯವನ್ನು ಅರಿತು ಇಷ್ಟದೇವತೆಯನ್ನು ಉಪಾಸನೆ ಮಾಡಿ ಪೂಜಿಸಬೇಕು. ಈ ರೀತಿಯ ಪೂಜೆಯು ಒಂದು ಮಹಾ ಯೋಗವೇ ಸರಿ. ಹೀಗೆ ಪೂಜೆ ಮತ್ತು ಉಪಾಸನೆಗಳು ನಡೆದರೆ, ಪಂಚವಿಧವಾದ ಉಪಾಸನೆಯೂ ಏಕರೂಪವಾದ ಬ್ರಹ್ಮೋಪಾಸನೆಯೇ ಆಗುತ್ತದೆ. "ಉಪಾಸನಮ್ ಪಂಚವಿಧಂ ಬ್ರಹ್ಮೋಪಾಸನಮೇವತತ್||" ಎಂದು ಶಾಸ್ತ್ರವು ಸಾರುತ್ತದೆ. ಬ್ರಹ್ಮಾಂಡದ ಸ್ವರೂಪವನ್ನು ಪಿಂಡಾಡದ ರಹಸ್ಯವನ್ನೂ ಅರಿತು ಸಾಧಕನು ಯೋಗಾಯತನವೂ, ದೇವಾಯತನವೂ ಆದ ತನ್ನ ಶರೀರದಲ್ಲಿ ಪರಾಶಕ್ತಿಯ ಆವಿರ್ಭಾವ, ಊರ್ಧ್ವಗತಿ, ಪರಮ ಪದದ ನೆಲೆಗಳನ್ನು ಗುರುವಿನ ಅನುಗ್ರಹದಿಂದ ಅರಿತು, ಮೇರುದಂಡಸ್ಥವಾದ ಮೂಲಾಧಾರಾದಿ ಚಕ್ರಗಳಲ್ಲಿ ತಾತ್ವಿಕ ಪೂಜೆಯನ್ನು ನಡೆಸಬೇಕು. ಮೂಲಾಧಾರ ಚಕ್ರದಲ್ಲಿ ಪೃಥ್ವೀತತ್ತ್ವ ಶಕ್ತಿಯು ನೆಲೆಸಿದೆ. ಸ್ವಾಧಿಷ್ಠಾನದಲ್ಲಿ ಜಲತತ್ತ್ವ ಶಕ್ತಿ; ಮಣಿಪೂರದಲ್ಲಿ ಅಗ್ನಿತತ್ತ್ವ ಶಕ್ತಿ; ಅನಾಹತ ಚಕ್ರದಲ್ಲಿ ವಾಯುತತ್ತ್ವಶಕ್ತಿ; ವಿಶುದ್ಧಿ ಚಕ್ರದಲ್ಲಿ ಆಕಾಶ ತತ್ತ್ವಶಕ್ತಿ. ಆಜ್ಞಾಚಕ್ರವು ಗುರುಪೀಠ. ಇಲ್ಲಿ ಗುರುತತ್ತ್ವವನ್ನು ಪೂಜಿಸಬೇಕು.ಹೀಗೆ ಪಂಚ ತತ್ತ್ವಗಳ ಶಕ್ತಿಗಳನ್ನು ಬಹಿರಂಗಪೂಜೆಯ ಜೊತೆಗೆ ತಾತ್ತ್ವಿಕವಾಗಿ ಅಂತರಂಗದಲ್ಲಿ ಸಾಧಿಸಿ ಪರಮಪದವಾದ ಸಹಸ್ರಾರದಲ್ಲಿ ತನ್ನ ಇಷ್ಟದೈವವನ್ನು ಪರಬ್ರಹ್ಮರೂಪದಿಂದ ಉಪಾಸಿಸಿ ಪರಮಾತ್ಮೈಕ್ಯವನ್ನು ಹೊಂದಬೇಕು. ಹೀಗೆ ಬ್ರಹ್ಮಾತ್ಮಭಾವದಿಂದ ಪಂಚಾಯತನ ಪೂಜೆಯನ್ನು ಆಚರಿಸುವವರು ಆ ಬ್ರಹ್ಮಶಕ್ತಿಯೇ ಗಣೇಶಾದಿರೂಪದಿಂದ ಮೂಲಾಧಾರಾದಿ ಚಕ್ರಗಳಲ್ಲಿ ವ್ಯಕ್ತವಾಗುವುದೆಂಬುದನ್ನು ಮರೆಯಬಾರದು. ಆದ್ದರಿಂದಲೇ ಶಿವ, ವಿಷ್ಣು, ಶಕ್ತಿ, ಸೂರ್ಯ ಮತ್ತು ಗಣೇಶರಲ್ಲಿ ಅಭೇದಬುದ್ಧಿಯನ್ನು ಹೊಂದುವದೇ ಶ್ರೇಷ್ಠತಮವಾದ ಮಹಾಯೋಗ. ಆದ್ದರಿಂದಲೇ
"ಉಭಯೋರಂತರಂ ನಾಸ್ತಿ ಹ್ಯಾದಿತ್ಯಸ್ಯ ಶಿವಸ್ಯ ಚ "
(ಆದಿತ್ಯ ಮತ್ತು ಶಿವರಲ್ಲಿ ಅನ್ಯೋನ್ಯ ಭೇದವಿಲ್ಲ)
"ತ್ರಿಮೂರ್ತ್ಯಾತ್ಮಾ ತ್ರಿದೇವಾತ್ಮಾ ಸರ್ವದೇವಮಯೋರವಿಃ"
(ತ್ರಿಮೂರ್ತಿರೂಪನೂ, ತ್ರಿದೇವಾತ್ಮಕನೂ ಆದ ಸೂರ್ಯನು ಸರ್ವದೇವಮಯನು)
ಹೀಗೆಯೇ ಗಣಪತಿಯನ್ನು ಕುರಿತು,
"ತ್ವಮೇವ ಸರ್ವಂ ಖಲ್ವಿದಂ ಬ್ರಹ್ಮಾಸಿ| ತ್ವಂಸಾಕ್ಷಾದಾತ್ಮಾಸಿತ್ಯಮ್|"
(ಇದೆಲ್ಲವೂ ನೀನೇ, ನೀನೇ ಬ್ರಹ್ಮ. ನೀನೇ ಸಾಕ್ಷಾತ್ ಶಾಶ್ವತವಾದ ಆತ್ಮ )
ಎಂದು ಮುಂತಾದಾಗಿ ಶ್ರುತಿ ಮುಂತಾದೆಡೆಗಳಲ್ಲಿ ಪಂಚದೇವತೆಗಳಿಗೂ ಪರಬ್ರಹ್ಮನಿಗೂ ಐಕ್ಯವನ್ನು ವರ್ಣಿಸಿರುವುದನ್ನು ಕಾಣುತ್ತೇವೆ. ದೇವಿಯೂ ಪರಬ್ರಹ್ಮರೂಪಳೇ. ಎಲ್ಲ ದೇವತೆಗಳನ್ನೂ ಅಂತರಂಗಕ್ಕೆ ಪೋಷಕವಾದ  ಉಚಿತ ಬಾಹ್ಯದ್ರವ್ಯಗಳಿಂದ ಪೂಜಿಸಿ, ಅಂತರಂಗದಲ್ಲಿ ತತ್ತ್ವಮಯವಾಗಿ, ಯೋಗಮಯವಾಗಿ, ಪೂಜೆಯನ್ನು ನಡೆಸಿ, ಕೊನೆಗೆ ಪರಬ್ರಹ್ಮನಲ್ಲಿ ಐಕ್ಯಗೊಳಿಸಬೇಕು. ಇದೇ ಪೂಜಾರಹಸ್ಯ. ಇದೇ ಯೋಗರಹಸ್ಯ. ಇದೇ ಬ್ರಹ್ಮಾನುಭವ.

ಬ್ರಹ್ಮಾರ್ಪಣಂ ಬ್ರಹ್ಮಹವಿಃ ಬ್ರಹ್ಮಾಗ್ನೌ ಬ್ರಹ್ಮಣಾ ಹುತಮ್|
ಬ್ರಹ್ಮೈವ ತೇನ ಗಂತವ್ಯಂ ಬ್ರಹ್ಮಕರ್ಮ ಸಮಾಧಿನಾ||

ಸೂಚನೆ : ಈ ಲೇಖನವು ಶ್ರೀಮಂದಿರದಿಂದ ಪ್ರಕಾಶಿತವಾಗುವ ಆರ್ಯಸಂಸ್ಕೃತಿ ಮಾಸ ಪತ್ರಿಕೆಯ ಸಂಪುಟ: ೦೩ ಸಂಚಿಕೆ:  ೧೦. ೧೯೮೧ : ಆಗಸ್ಟ್  ತಿಂಗಳಲ್ಲಿ  ಪ್ರಕಟವಾಗಿದೆ.   

Saturday, November 28, 2020

ಯೋಗಾಂಗ - ಸತ್ಯ (Yoganga - Satya)

ಲೇಖಕರು: ಶ್ರೀ ಜಿ. ನಾಗರಾಜ.
(ಪ್ರತಿಕ್ರಿಯಿಸಿರಿ lekhana@ayvm.in)



ಯಮದ ಎರಡನೇ ಅಭ್ಯಾಸವಾದ ಸತ್ಯಕ್ಕೆ ವಿವಿಧ ಶಾಸ್ತ್ರಗಳಲ್ಲಿ ಬೇರೆ ಶಬ್ದಪ್ರಯೋಗವುಳ್ಳ, ಆದರೆ ಬಹುತೇಕ ಒಂದೇ ಆಶಯವುಳ್ಳ ವ್ಯಾಖ್ಯಾನಗಳಿವೆ. ಅವುಗಳಲ್ಲಿ ಶ್ರೀರಂಗಮಹಾಗುರುಗಳು ಭೂತಹಿತವೂ ಯಥಾರ್ಥವೂ  ಆದುದೇ ಸತ್ಯ ಎನ್ನುವ ವಿವರಣೆಯನ್ನು ಹೆಚ್ಚು ಬಳಸುತ್ತಿದ್ದರು. ಭೂತಹಿತ ಎಂದರೆ ಜೀವಿಗಳಿಗೆ ಹಿತವಾಗುವಂತಹದು , ಮತ್ತು ಯಥಾರ್ಥ ಅಂದರೆ ಇರುವುದನ್ನು ಹಾಗೆಯೇ ವ್ಯಕ್ತಪಡಿಸುವುದು. ಈ ಎರಡೂ ಲಕ್ಷಣಗಳಿದ್ದರೆ ಅಂತಹದನ್ನು ಸತ್ಯ ಎನ್ನುತ್ತಾರೆ.

ಉದಾಹರಣೆಗೆ, ಒಬ್ಬ ತಪಸ್ವಿಯು ವಿಶ್ರಮಿಸುತ್ತಿರುವಾಗ, ಸಾಲಂಕೃತ ಸ್ತ್ರೀಯೊಬ್ಬಳನ್ನು ದೋಚಲು ದುಷ್ಟನೊಬ್ಬ ಅಟ್ಟಿಸಿಕೊಂಡು ಬರುತ್ತಿರಬೇಕಾದರೆ, ಸ್ತ್ರೀಯು ಆಶ್ರಯಕ್ಕಾಗಿ ಆಶ್ರಮದೊಳಗೆ ಅಡಗಿದಾಗ, ದುಷ್ಟನು "ಇಲ್ಲೊಬ್ಬ ಸ್ತ್ರೀ ಓಡಿ ಬರುತ್ತಿದ್ದಳು, ನೀವೇನಾದರೂ ನೋಡಿದಿರಾ?" ಎಂದು ಕೇಳಿದರೆ, ತಪಸ್ವಿಯು "ನೋಡಿದೆ, ಇಲ್ಲೇ ಆಶ್ರಮದೊಳಗೆ ಅಡಗಿದ್ದಾಳೆ" ಎಂದು ಹೇಳಿಬಿಟ್ಟರೆ ದುಷ್ಟನು ಹಾನಿ ಮಾಡುತ್ತಾನಾದುದರಿಂದ ಆ ಮಾತಿನಲ್ಲಿ ಭೂತಹಿತವಿಲ್ಲ. ಹೀಗಾಗಿ ಯಥಾರ್ಥವಾದರೂ ಸಹ ಈ ಮಾತು ಸತ್ಯವಲ್ಲ. ಯಥಾರ್ಥವು ಭೂತಹಿತವಲ್ಲದಿದ್ದಾಗ, ಭೂತಹಿತವಾದ ಮಾತು ಅಯಥಾರ್ಥವಾದರೂ ಸತ್ಯವೆಂದೇ ಪರಿಗಣಿಸಲ್ಪಡುತ್ತದೆ. ಈ ಉದಾಹರಣೆಯಲ್ಲಿ, "ನಾನು ನೋಡಿಲ್ಲ" ಎನ್ನುವ ಸುಳ್ಳೇ ಸತ್ಯವೆಂದು ಪರಿಗಣಿಸಲ್ಪಡುತ್ತದೆ.

ಇನ್ನು ಯರ್ಥಾರ್ಥ ಎನ್ನುವ ನೇರದಲ್ಲಿ ಸತ್ಯಕ್ಕೆ ಬಹಳ ಗಹನವಾದ ಅರ್ಥಗಳಿವೆ. ಸತ್ ಎಂದರೆ ಇರುವಿಕೆ ಎಂದರ್ಥ; ಹೀಗಾಗಿಯೇ ಇರುವಿಕೆಯನ್ನೇ ವ್ಯಕ್ತ ಪಡಿಸುವ ನುಡಿಯೂ ಸಹಾ ಸತ್ಯ. ಇರುವಿಕೆ ಅಥವಾ ಅಸ್ತಿತ್ವಕ್ಕೆ ಮೂರು ಸ್ತರಗಳಿವೆ - ಭೌತಿಕ, ದೈವಿಕ ಮತ್ತು ಆಧ್ಯಾತ್ಮಿಕ. ನೋಡಿ, ಅನುಭವಿಸಿದ ವಿಷಯವನ್ನು ಅಂತೆಯೇ ಮಾತಿನಿಂದ ಹೊರತರುವುದು ಭೌತಿಕ ಸತ್ಯ. ಭೌತಿಕ ಸ್ತರದಲ್ಲಿ ಇರುವಿಕೆಯು ಬದಲಾವಣೆಗೆ ಒಳಪಡುತ್ತಿರುತ್ತದೆ. ಆದರೆ, ಶಾಶ್ವತವಾದ, ಎಂದಿಗೂ ಬದಲಾಗದ ಅಸ್ತಿತ್ವವಾದ ಯಾವ ಆತ್ಮವಸ್ತುವುಂಟೋ ಅದೇ ಅಧ್ಯಾತ್ಮಿಕ ಸ್ತರದಲ್ಲಿ ಸತ್ಯ ಎನ್ನಿಸಿಕೊಳ್ಳುತ್ತದೆ. ಸತ್ಯ ಎಂದರೆ, ಮೂಲತಃ ಈ ಅಧ್ಯಾತ್ಮಿಕ ಸತ್ಯವೇ ಆಗಿದೆ. ಇನ್ನು ಬದಲಾಗುತ್ತಿರುವ ಭೌತಿಕ ಪ್ರಪಂಚಕ್ಕೂ ಮತ್ತು ಶಾಶ್ವತವಾದ ಅಧ್ಯಾತ್ಮ ಪ್ರಪಂಚಕ್ಕೂ ಕೊಂಡಿಯಾಗಿರುವ ದೈವಿಕ ಸ್ತರದಲ್ಲಿ ಸುಷುಮ್ನಾ ಮಾರ್ಗಕ್ಕೇ ಸತ್ಯ ಎಂದು ಹೆಸರು. ಭೌತಿಕ ಸ್ತರದಲ್ಲಿ ಸತ್ಯನುಡಿಗಳನ್ನಾಡುತ್ತಿದ್ದರೆ, ಈ ಅಭ್ಯಾಸವು ಪ್ರಾಣಶಕ್ತಿಯು ಸುಷುಮ್ನಾ ಮಾರ್ಗದಲ್ಲಿ ಸಂಚರಿಸಿ ಆತ್ಮನ ನೆಲೆಯನ್ನು ತಲುಪಿ ಆತ್ಮಸಾಕ್ಷಾತ್ಕಾರವಾಗುವುದಕ್ಕೆ ಅನುಕೂಲವುಂಟು ಮಾಡುವುದರಿಂದ ಸತ್ಯವು ಯೋಗಕ್ಕೆ ಬಹಳ ಸಹಜವೂ ಮತ್ತು ಅವಿಭಾಜ್ಯವೂ ಆದ ಅಂಗವಾಗಿದೆ.

ಸೂಚನೆ:28/11/2020 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ .

Thursday, November 26, 2020

ஒளிரும் கன்னி (Who is this glowing one?)

 மூலம்:  நரசிம்ஹ பட்டா

தமிழாக்கம்: வனஜா

மின்னஞ்சல் : (lekhana@ayvm.in) 



 நம் பாரத கலாசாரத்தில் இயற்கைக்கு, அதாவது  படைப்பின் பெண்மை பகுதிக்கு, உயர்ந்த இடம் உண்டு. இறைவன் தன்னை  விரிவாக்கிக்கொள்ள விரும்பியபோது தானே இரு பிரிவானான். ஒன்று படைப்பில் உறையும் சக்தி (ஆண் தன்மையுடையவன்), மற்றது அவ்வுறையும் சக்தியை விரிவாக்கி வெளிப்படுத்துவது(ப்ரக்ருதி- பெண்மை). புருஷன் ப்ரக்ருதியின்றி தன்னை வெளிப்படுத்த இயலாது. வெளிப்பாடு அனேக நிலைகளை கொண்டது. முதன்மையானது கன்னி(கன்யா) என அழைக்கப்படும். இங்கு நாம் நம் கலாசாரத்தில் 'கன்யா' என்பதை குறித்த சில விவரங்களை ஆராயலாம்.

வடமொழியில் (சம்ஸ்க்ருதத்தில்) கன்யா எனும் சொல் ப்ரகாசமான, கவர்ச்சிகரமான, ஒளிமிகுந்த என பொருள்படும் - 'கனி' எனும் மூலச்சொல்லிலிருந்து வந்தது. அச்சொல்லின் முழு பொருள் அதனுடன் இணையும் சொல்லை பொறுத்தே அமையும். உதாரணமாக "யக்" என்ற சொல்லை இணைத்தால்  (கன்யகா)"குமாரி" திருமணமாகாத இளம்கன்னி எனும்  சொல் கிடைக்கும். பாணினி இலக்கணத்தின் கூற்றுப்படி கன்யா என்றால் ஒளிமிகுந்தவள் என பொருள்படும். கன்யா என்பது ஒரு ராசியின் பெயரும், மருந்தின் பெயரும் ஆகும்.  இக்கட்டுரையில் இச்சொல் திருமணமான அல்லது ஆகாத ஒளிரும் பெண் எனும் பொருளில் வருகின்றது.

வடமொழியில் உள்ள ஒரு பாடல் என்ன கூறுகிறதெனில் "அதிகாலையில்   அஹல்யா, த்ரௌபதி, சீதா,  தாரா, மண்டோதரி எனும்  இவ்வைந்து கன்னியரையும்  நினைப்பது கொடிய பாபத்தையும் போக்கும்." இவ்வைவரிடமும் உள்ள சிறப்பு யாது? அவர்கள் ஏன் நமக்கு உயரிய சிறப்புடைய முன்னுதாரணம்? தலைசிறந்த யோகியும் "அஷ்டாங்கயோக விக்ஞான மந்திரத்தின்" தலையாய உறுப்பினருமான  ஸ்ரீ ஸ்ரீரங்கமஹாகுரு இதனை இவ்வாறு விளக்குகிறார் - பொதுவாக பெண்களின் காந்தி திருமணத்திற்கு பின்  குன்றும். ஆனால் சிறப்பான இப்பெண்களின் விஷயத்திலோ அது நாள்தோறும்  வளர்ந்து வந்தது. அப்பேர்பட்டவர்களின் நினைவு ஆத்ம மார்க்கத்திற்கு ஒளி கூட்டும்.  எனவே குளிர்ச்சியான காலை பொழுதில் அவர்களை நினைவு கூர்தல்  அவசியம்.

 நம் நாட்டில் பெண்களுக்கு அளிக்கப்படும்  முக்கியத்துவம்  திருமணங்களில் தெளிவாக விளங்கும். மணமகளின் கரத்தை மணமகனிடம் ஒப்படைக்கையில் தந்தை கூறும் மந்திரம் வருமாறு - "ஸ்ரீ மஹாலக்ஷ்மியின் உருவகத்தில்(அம்சமாக) உள்ள  இக்கன்னியை (என் மகளை) ஸ்ரீ மஹா விஷ்ணுவின் உருவகத்தில்(அம்சமாக) உள்ள வரனிடம் (மணமகனிடம்) ஒப்படைக்கிறேன்."  பெண்களையும். மனைவிமார்களையும்  லக்ஷ்மி, ஸரஸ்வதி, பார்வதி எனும் இறை வடிவாகவே காண்கிறோம். 'எங்கு பெண்கள் வணங்கப்படுகின்றனரோ  அங்கு தெய்வங்கள் மகிழ்வோடு நர்த்திக்கின்றன'' என கூறப்படுகின்றது. எனவேதான் நம் சமூகத்தில் முதலில்  தாயை வணங்கும்படி அறிவுருத்தப்படுகிறது.  நாம் "லஷ்மி-நாராயணன், பார்வதி-பரமேச்வரன், ஸரஸ்வதி-ப்ரம்மா, அருந்ததி-வஸிஷ்டர் என்றே வணங்குகிறோம். பெண்களுக்கு நம் சமூகத்தில்  இத்துணை உயரிய இடம் அளிக்கப்பட்டுள்ளது  ஏனெனில் நாம் அவர்களின் அமைதியான ஒளியின்மூலம்  அற்புதமான ஆத்ம மார்க்கத்திற்கு உந்தப்படுகின்றோம்.

குறிப்பு: இக்கட்டுரை யின் கன்னட மூலம் AYVM blogs ல் காணலாம்.   

उत्थानद्वादशी (utthaanadvaadashee)


लेखकः – विद्वान् नरसिंह भट्टः 
(प्रतिक्रियां दातुं शक्यते :  lekhana@ayvm.in)




कार्तिकमासस्य शुक्लपक्षस्य द्वादशीतिथौ आचरिष्यमाणः उत्सवः 'उत्थानद्वादशी' इति । अस्यां तिथौ भगवान् विष्णुः शयनात्  उत्तिष्ठति । विष्णुः मासचतुष्टयात् पूर्वं निद्रितः । अतः अस्यां द्वादश्यां तिथौ तस्य उत्थानात् इदं दिनम् उत्थानद्वादशीति नाम्ना प्रथितः अभवत् । भगवतः शयनमपि अस्माकं उत्सवः तस्य उत्थानमपि च । एवं अस्य पर्वणः विशेषः कः ? किमर्थं वयम् उत्सवम् आचरामः इत्ययं विषयः चिन्तनीयः ।

निद्रा द्विविधा जाड्या अजाड्या इति । यदा तामसिकगुणाधिक्यप्रभवा प्राणिजातेषु दृश्यमाना निद्रा जाड्यनिद्रा इति कथ्यते । परन्तु सत्त्वगुणाधिक्यप्रभवा प्राणिजातेषु न दृश्यमाना अजाड्या । इयं निद्रा योगिनां मुनीनां भगवतः च । यदा वयं निद्रामः स कालः योगिनां जाग्रत् भवति । यः कालः भूतानां प्रतिबोधकः स मुनीनां योगनिद्राकालः । अस्माकम् एकः प्रश्नः समुदेति यत्- सामान्यानां योगिनां वा जाग्रत्-स्वप्न-सुषुप्ति-तुरीयाः इति अवस्थाः विद्यन्ते । परन्तु नित्यजागरूकस्य भगवतः कथम् एताः अवस्थाः सम्भवन्ति ? इति । अपि च उत्थानमिति पदस्य निद्रा इति पदम् विरुद्धार्थकं खलु ! उत्थानं निद्रायाः अनन्तरमेव सभवति । अतः भगवतः निद्रा वा उत्थानं वा कथं वक्तुं शक्यते इति । सत्यं मया यत्पूर्वमुक्तं निद्रा द्विविधा इति । "तत्र भगवतः निद्रा तु न अस्मन्निद्रासदृशी । स भगवान् अस्माकं रक्षणे जागरूकः सन् निद्रायाः मुद्रां प्रदर्शयति । तां मुद्रां वयं निद्रात्वेन व्यवहरामः" इति श्रीश्रीरङ्गप्रियस्वामिपादाः भगवतः निद्रायाः विवरणं प्रदत्तवन्तः । अत एव तां निद्रां "निद्रामुद्रां सकलजगतां रक्षणे जागरूकाम्" इति वर्णयन्ति । स सृष्ट्यादि-बहिर्व्यापारं योगनिद्रा-अवधिक-चतुर्षु मासेषु त्यक्तवान् इत्यर्थः । इतः परं तस्य सकलव्यापारः आरभ्यते इति यावत् । अत एव एतान् चतुरः मासान् 'चातुर्मास्यम्' इति सन्यासिनः व्रतमाचरन्ति । बहिर्मुखव्यापारं त्यक्त्वा अन्ताराज्ये विरमन्ति ते । अयं चातुर्मास्यकालः तपः कर्तुं सुयोग्यः इति मन्यन्ते । "योगनिद्रान्तविशदैः पावनैरवलोकनैः । भृग्वादीननुगृह्णन्तं सौखशायनिकान् ऋषीन्" इति उक्त्यनुसारम् ऋषीन् अनुगृहीतुं भगवता एषा निद्रा आदृता इत्यपि भाव्यते । सामान्यतया विवाहादिशुभकार्याणि च त्यज्यन्ते एतेषु चतुर्षु मासेषु । एतानि कार्याणि बहिर्मुखानि इति कारणमत्र विद्यते । अतः कार्तिकमासतः विवाहादि-शुभकर्माणि आरभन्ते सर्वत्र । 

भारते सर्वत्र अयमुत्सवः 'तुलसीविवाहमहोत्सवः' इति आचर्यते । अस्मिन् शुभावसरे तुलसीमण्डपे तुलसीवृक्षस्य पूजा, तथा तस्य वृक्षस्य पार्श्वे आमलकवृक्षं संस्थाप्य, तस्मिन् वृक्षे महाविष्णोः प्रतिनिधित्वेन विभाव्य पूजापि क्रियते ।  ततः "देवीं कनकसम्पन्नां कनकाभरणैर्युताम् । दास्यामि विष्णवे तुभ्यं ब्रह्मलोकजिगीषया " इति मन्त्रं पठित्वा सूत्रमेकं धात्रीवृक्षाय समर्प्यते । तस्मिन् दिने साक्षात् वैकुण्ठं भुवमवतरामः । भक्ष्यभोज्यादीन् भगवते निवेद्य प्रसादं स्वीकुर्मः । एवम् अयं शुभदिवसः अस्माकं सर्वविधजाड्यं निवार्य भगवतः प्रसादसिद्ध्यर्थम् उत्सवः इति आचर्यते ।

Wednesday, November 25, 2020

ಶರಣಾಗತಿ (Sharanagati)

ಲೇಖಕಿ: ಯೋಗಶ್ರೀ. ಹೆಚ್.ಕೆ
(ಪ್ರತಿಕ್ರಿಯಿಸಿರಿ lekhana@ayvm.in)


ಶ್ರೀಮದ್ವಾಲ್ಮೀಕಿ ರಾಮಾಯಣದಲ್ಲಿನ ವಿಭೀಷಣ ಶರಣಾಗತಿಯ ಸಂದರ್ಭ. ರಾವಣನ ವರ್ತನೆಯಿಂದ ಬೇಸರಗೊಂಡ ವಿಭೀಷಣನು ರಾಮನಲ್ಲಿಗೆ ಶರಣಾರ್ಥಿಯಾಗಿ ಬಂದನು. ಅವನ ಆಗಮನವನ್ನು ಗಮನಿಸಿದ ಸುಗ್ರೀವನು ಇತರ ವಾನರರೊಂದಿಗೆ ರಾಮನ ಬಳಿಯಲ್ಲಿ ಬಂದು ಈ ರೀತಿಯಾಗಿ ಹೇಳುತ್ತಾನೆ "ಲಂಕಾಧಿಪನಾದ ರಾವಣನ ತಮ್ಮನಾದ ವಿಭೀಷಣನು ಆಶ್ರಯ ಕೇಳಿ ಬಂದಿದ್ದಾನೆ. ಶತ್ರುಪಕ್ಷದವನೂ, ಮಾಯಾವಿದ್ಯೆ ಬಲ್ಲವನೂ, ಕಷ್ಟಕಾಲದಲ್ಲಿ ತನ್ನ ಸ್ವಂತ ಅಣ್ಣನನ್ನು ತ್ಯಜಿಸಿ ಬಂದವನಾದ್ದರಿಂದ ನಂಬಿಕೆಗೆ ಅನರ್ಹ". ಈ ಮಾತುಗಳನ್ನು ಕೇಳಿದ ರಾಮನು ಹನುಮಂತ ಹಾಗೂ ಇತರ ವಾನರರ ಅಭಿಪ್ರಾಯಗಳನ್ನು ಕೇಳಿದನು. ಶತ್ರುಪಕ್ಷದವನಾದ ವಿಭೀಷಣನನ್ನು ನಂಬುವುದು ಅನುಚಿತ ಎನ್ನುವ ಅಭಿಪ್ರಾಯವನ್ನು ಎಲ್ಲರೂ ವ್ಯಕ್ತಪಡಿಸುತ್ತಾರೆ. ಹನುಮಂತನು ಎಲ್ಲರ ವಾದವಿವಾದಗಳನ್ನು ಆಲಿಸಿದ ಬಳಿಕ ಈ ರೀತಿಯಾಗಿ ಹೇಳುತ್ತಾನೆ "ವಿಭೀಷಣನು ನಿಮ್ಮನ್ನು ರಾವಣನಿಗಿಂತ ಶ್ರೇಷ್ಠ, ಪರಾಕ್ರಮಿ ಹಾಗೂ ಅರ್ಹನೆಂದು ಅಭಯಾರ್ಥಿಯಾಗಿ ಬಂದಿದ್ದಾನೆ. ಅವನ ನಿರ್ಧಾರ ಸರಿಯಾಗಿದೆ". ಇದನ್ನು ಆಲಿಸಿದ ರಾಮನು    ಸಕೃದೇವ ಪ್ರಪನ್ನಾಯ ತವಾಸ್ಮೀತಿ ಚ ಯಾಚತೇ । ಅಭಯಂ ಸರ್ವಭೂತೇಭ್ಯೋ  ದದಾಮ್ಯೇತತ್ ವ್ರತಂ ಮಮ ॥

(ಒಮ್ಮೆ ನನ್ನಲ್ಲಿ ಶರಣಾಗಿ, ನಾನು ನಿನ್ನವನು ಎಂದು ಯಾಚಿಸುವ ಎಲ್ಲರಿಗೂ ಅಭಯವನ್ನು ಕೊಡುತ್ತೇನೆ; ಇದು ನನ್ನ ವ್ರತ) ಎಂದು ಹೇಳಿ  ವಿಭೀಷಣನಿಗೆ ಅಭಯವನ್ನು ನೀಡಿದನು.

ಮನುಷ್ಯರು ಭಗವಂತನಲ್ಲಿ ಮಹತ್ತಾದ ವಿಶ್ವಾಸವನ್ನು ಇಟ್ಟು ತಮ್ಮದೆಲ್ಲವನ್ನೂ ಪರಿಪೂರ್ಣವಾಗಿ ಅವನ ಪಾದಾರವಿಂದಗಳಲ್ಲಿ ಸಮರ್ಪಿಸಿ ಶರಣುಹೋದಾಗ ಅವನು ಅಭಯವನ್ನಿತ್ತು ಸನ್ಮಾರ್ಗದೆಡೆಗೆ ಕರೆದೊಯ್ಯುತ್ತಾನೆ. ಜ್ಞಾನಯೋಗ, ಭಕ್ತಿಯೋಗಗಳಂತೆ ಶರಣಾಗತಿಯೂ(ಭರನ್ಯಾಸ) ಮೋಕ್ಷೋಪಾಯಗಳಲ್ಲಿ ಒಂದು. ಭರನ್ಯಾಸವೆಂದರೆ ನಮ್ಮ ಭಾರವನ್ನೆಲ್ಲಾ ಭಗವಂತನಲ್ಲಿ ನ್ಯಾಸ(ಸಮರ್ಪಣೆ) ಮಾಡಿ ಅವನನ್ನು ಆಶ್ರಯಿಸುವುದು.

ರಾವಣನುನು ಸ್ವಂತ ಅಣ್ಣನಾದರೂ ಮಹಾ ಅಧರ್ಮಿಯಾದ್ದರಿಂದ ಆತನನ್ನೂ, ರಾಜ್ಯವನ್ನೂ ಬಿಟ್ಟು ಶತ್ರುಪಕ್ಷದವನಾದರೂ ಧರ್ಮಿಷ್ಠನಾದ ಶ್ರೀರಾಮನಲ್ಲಿ ಪರಿಪೂರ್ಣವಾದ ವಿಶ್ವಾಸವನ್ನಿಟ್ಟು ಅವನ ಪದತಲಗಳಲ್ಲಿ ವಿಭೀಷಣನು ಅಭಯವನ್ನು ಅರಸಿ ಬಂದನು. ಭಗವಂತನಾದ ಶ್ರೀರಾಮನು ಆತನನ್ನು ಉದ್ಧರಿಸಿದನು. ಶ್ರೀರಂಗಮಹಾಗುರುಗಳು ತಿಳಿಸಿರುವಂತೆ ಭಗವಂತನ ಪಾದಾವಲಂಬನವೇ ಭಕ್ತಿಯ ಮೂಲ. ಭಗವಂತನ ಪಾದವು ಸುವರ್ಲೋಕದಿಂದ ಭೂಲೋಕದವರೆಗೂ ವ್ಯಾಪಿಸಿದೆ. ಅಂತಹ ಪವಿತ್ರಪಾದವನ್ನು ನಂಬಿ ಶರಣಾದರೆ ನಮ್ಮ ಜೀವನವು ಸಾರ್ಥಕ ಹಾಗು ಪರಿಪೂರ್ಣ.

ಸೂಚನೆ: 25/11/2020 ರಂದು ಈ ಲೇಖನ ಉದಯವಾಣಿ ಯಲ್ಲಿ ಪ್ರಕಟವಾಗಿದೆ.

Monday, November 23, 2020

ಭಯ ನಿವಾರಣೆ ಹೇಗೆ? (Bhaya Nivarane Hege?)

ಲೇಖಕರು : ಡಾII ಹರ್ಷ ಸಿಂಹ
(ಪ್ರತಿಕ್ರಿಯಿಸಿರಿ lekhana@ayvm.in)



ಶ್ರೀಕೃಷ್ಣದೇವರಾಯನು ಒಮ್ಮೆ ತನ್ನ ಆಸ್ಥಾನದ ವಿದ್ವಾಂಸರನ್ನು ಪರೀಕ್ಷಿಸಲು ಒಂದು ಸವಾಲನ್ನು ಒಡ್ಡಿದನು. ಸಭೆಯಲ್ಲಿ ಗಣ್ಯರೆಲ್ಲರೂ ಉಪಸ್ಥಿತರಾಗಿದ್ದಾಗ, ಒಂದು ಕರಿ ಫಲಕವನ್ನು ತರೆಸಿ ಅದರಲ್ಲಿ ಸುಣ್ಣದಿಂದ ಒಂದು ಲಂಬರೇಖೆಯನ್ನು ಎಳೆದನು. ನಂತರ, ಸಭಾಸದರನ್ನು ಉದ್ದೇಶಿಸಿ "ಮಹನೀಯರೆ! ಇಲ್ಲಿ ಒಂದು ಲಂಬರೇಖೆಯನ್ನು ನೀವೆಲ್ಲರೂ ಕಾಣುತ್ತಿದ್ದೀರಿ. ಈ ರೇಖೆಯನ್ನು ಅಳಿಸದೆಯೇ, ರೇಖೆಯನ್ನು ಗಿಡ್ಡವಾಗಿಸಬೇಕು" ಎಂದನು. ಮೊದಲನೋಟಕ್ಕೆ ಪ್ರಶ್ನೆ ಸಾಮಾನ್ಯದ್ದು ಎಂದೆನಿಸಿದರೂ, ಸಭಾಸದರಲ್ಲಿ ಯಾರಿಗೂ ಆ ಲಂಬರೇಖೆಯನ್ನು ಗಿಡ್ಡವಾಗಿಸುವ ಬಗೆ ತೋಚದಾಯಿತು.

ಆ ಸಭೆಯ ಮಧ್ಯದಲ್ಲಿ ಇದ್ದ ಕುಶಲಮತಿಯಾದ ತೆನಾಲಿ ರಾಮಕೃಷ್ಣನು ರಾಜನ ಅನುಮತಿಯನ್ನು ಪಡೆದು, ಸುಣ್ಣದಿಂದ, ಆ ಲಂಬ ರೇಖೆಯ ಪಕ್ಕದಲ್ಲಿಯೇ ಇನ್ನೂ ಉದ್ದವಾದ ಮತ್ತೊಂದು ಲಂಬ ರೇಖೆಯನ್ನು ಎಳೆದೆನು. ಸಭಾಸದರ ಮನಸ್ಸು ತೆನಾಲಿಯ ಉದ್ದವಾದ ರೇಖೆಯೆಡೆಗೆ ಹರಿದೊಡನೆ, ಪಕ್ಕದಲ್ಲಿದ್ದ ರಾಜನ ಲಂಬರೇಖೆಯು ಗಿಡ್ಡವೆನಿಸಿತು! ತೆನಾಲಿಯ ಉತ್ತರದಲ್ಲಿ ಇದ್ದ ಚಮತ್ಕಾರವನ್ನು ಕಂಡು ಎಲ್ಲರೂ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ಇಂದು, ಕರೋನದಿಂದಾಗಿ ಒಂದು ಭಯದ ವಾತಾವರಣದಲ್ಲಿ ಜೀವನವನ್ನು ಸಾಗಿಸುತ್ತಿದ್ದೇವೆ. ಸಾಮಾಜಿಕ ಜಾಲತಾಣಗಳೂ, ಸುದ್ದಿ ಮಾಧ್ಯಮಗಳೂ ಸದಾಕಾಲದಲ್ಲಿಯೂ ಕರೋನಾ ಬಗೆಗಿನ ವಿಷಯಗಳನ್ನು ನಮ್ಮ ಮನಸ್ಸಿಗೆ ಒದಗಿಸುತ್ತಲೇ ಇವೆ. ನಮ್ಮ ಮನಸ್ಸು ಅನುಭವಿಸುತ್ತಿರುವ ಭಯಾನಕ ರಸವನ್ನು ಉತ್ತೇಜಿಸುವ  ಸಾಮಗ್ರಿಗಳಾಗಿ ಇವು ಪರಿಣಮಿಸಿವೆ. ಇಂತಹ ಹತ್ತು ಹಲವು ಭಯಜನಕ ವಿಷಯಗಳಿಂದ ಸುತ್ತುವರೆದ ನಮ್ಮಗಳ ಜೀವನದಲ್ಲಿ ಭಯವು ಸ್ಥಾಯೀಭಾವವಾಗಿಬಿಟ್ಟಿದೆ!

ಈ ಭಯವನ್ನು ನಿವಾರಿಸಿಕೊಳ್ಳುವ ಬಗೆಯನ್ನು ತೆನಾಲಿಯ ಚಮತ್ಕಾರದ ಉತ್ತರದಲ್ಲಿ ಕಾಣಬಹುದು. ಸಭಾಸದರ ಮನಸ್ಸು ತೆನಾಲಿಯ ಉದ್ದವಾದ ರೇಖೆಯೆಡೆಗೆ ಹರಿದೊಡನೆ, ಪಕ್ಕದಲ್ಲಿದ್ದ ರಾಜನ ಲಂಬರೇಖೆಯು ಗೌಣವೆನಿಸಿತಷ್ಟೇ?! ಅಂತೆಯೇ, ಈ ಭಯಜನಕ ವಸ್ತುಗಳನ್ನು ಗೌಣವಾಗಿಸಬೇಕಾದರೆ, ನಮ್ಮ ಮನಸ್ಸು ಒಂದು ಹಿರಿದಾದ ವಸ್ತುವಿನೆಡೆಗೆ ಹರಿಯಬೇಕಾಗಿದೆ. ಅಂತಹ ವಸ್ತುವು ಶಾಶ್ವತವಾಗಿಲ್ಲದಿದ್ದಲ್ಲಿ, ಆ ವಸ್ತುವು ಕಳೆದುಹೋಗಬಹುದೆಂಬ ಇನ್ನೊಂದು ಭಯವು ಮನಸ್ಸನ್ನು ಆವರಿಸುವುದು! ಆದ್ದರಿಂದ ಅದು ಶಾಶ್ವತವಾದದ್ದೂ ಆಗಿದ್ದು, ಶಾಂತರಸದಾಯಕವೂ ಆಗಿರಬೇಕು. ಆ ಹಿರಿದಾದ, ಶಾಶ್ವತವೂ ಆದ, ಶಾಂತರಸದಾಯಕವೂ ಆದ ವಸ್ತುವೇ ಬ್ರಹ್ಮವಸ್ತು. ಮನಸ್ಸು ಆ ಬ್ರಹ್ಮವಸ್ತುವಿನೆಡೆಗೆ ಹರಿದಾಗ,  ಇತರ ವಿಷಯಗಳು ಗೌಣವಾಗಿ, ಭಯವೇ ಮೊದಲಾದ ಮನಸ್ಸಿನ ತಳಮಳಗಳೆಲ್ಲವೂ ಸಹಜವಾಗಿಯೇ ನೀಗುವುವು.

ಆದರೆ ಇದು ಸುಲಭವೇ? ಆ ಭಗವಂತನಿಗೆ ನಮ್ಮ ಮನಸ್ಸಿನಲ್ಲಿ ಸ್ವಲ್ಪ ಜಾಗವನ್ನು ಕೊಟ್ಟರೂ ಸಾಕು. ನಿತ್ಯವೂ ಸ್ವಲ್ಪಹೊತ್ತು ಅವನೆಡೆಗೆ ನಮ್ಮ ಮನಸ್ಸನ್ನು ಹರಿಸಿದರೂ ಸಾಕು. ಅವನು ವಾಮನನಾಗಿ ಬಂದು ತ್ರಿವಿಕ್ರಮನಾಗಿ ಬೆಳೆದು ಮನಸ್ಸನ್ನು ಪೂರ್ಣವಾಗಿ ಆವರಿಸುವನು. ಮನಸ್ಸು ಶಾಂತಭಾವದಲ್ಲಿ ನೆಲೆ ನಿಲ್ಲುವುದು! ಈ ನಿಟ್ಟಿನಲ್ಲಿ, ಭಾರತೀಯ ಮಹರ್ಷಿಗಳು ತಂದುಕೊಟ್ಟಿರುವ ಜಪ-ಧ್ಯಾನ-ಪೂಜಾಕ್ರಮಗಳೆಲ್ಲವೂ, ನಿತ್ಯದ ಜಂಜಾಟಗಳಿಂದ ನಮ್ಮ ಮನಸ್ಸನ್ನು ಸೆಳೆದು, ಸಚ್ಚಿದಾನಂದಘನದೆಡೆಗೆ ಹರಿಸಿ ಬ್ರಹ್ಮಸ್ವರೂಪವನ್ನು ಅರಿಯುವಂತಾಗಲು ಮಾಡಿರುವ ಉಪಾಯಗಳೇ ಆಗಿವೆ.  "ಸ್ವರೂಪವನ್ನು ಅರಿತರೆ ನಮ್ಮ ಬಾಳಾಟ, ಅರಿಯದಿದ್ದರೆ ಗೋಳಾಟ!" ಎಂಬ ಶ್ರೀರಂಗಮಹಾಗುರುವಿನ ಸೂತ್ರಪ್ರಾಯವಾದ ವಾಣಿಯು ಇಲ್ಲಿ ಸ್ಮರಣೀಯ.

ಸೂಚನೆ: 21/11/2020 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.  

Saturday, November 21, 2020

ಅಹಿಂಸೆಯನ್ನು ಅಭ್ಯಾಸದಲ್ಲಿಟ್ಟುಕೊಳ್ಳುವುದು ಹೇಗೆ ? Ahimseyannu Abhyasadallittukolluvudu Hege ?

ಲೇಖಕರು: ಶ್ರೀ ಜಿ. ನಾಗರಾಜ.
(ಪ್ರತಿಕ್ರಿಯಿಸಿರಿ lekhana@ayvm.in)



ಅಹಿಂಸೆಯ ನವವಿಧಗಳನ್ನು ಅರ್ಥ ಮಾಡಿಕೊಂಡರೆ ಹೆಜ್ಜೆ ಹೆಜ್ಜೆಗೂ ಅಹಿಂಸೆಯನ್ನು ಆಚರಿಸಬಹುದು. ಉದಾಹರಣೆಗೆ, ನಾವು ಕಾರಿನಲ್ಲಿ ಪ್ರಯಾಣಿಸಬೇಕಾದರೆ ಮತ್ತೊಬ್ಬನು ಒಡ್ಡೊಡ್ಡಾಗಿ ಚಾಲನೆ ಮಾಡುತ್ತಾ ನಮಗೆ ಅಡ್ಡ ಬಂದು, ನಮ್ಮ ಮೇಲೆಯೇ ಕೂಗಾಡಿ ಹೊರಟು ಹೋಗುತ್ತಾನೆಂದುಕೊಳ್ಳೋಣ. ನಾವು ಕೋಪಗೊಂಡು, ಆ ಚಾಲಕನನ್ನು ಮಾನಸಿಕವಾಗಿಯೋ, ವಾಚಿಕವಾಗಿಯೋ ಬಯ್ದುಕೊಳ್ಳುತ್ತೇವೆ. ನಾವು ಹೀಗೆ, ನಮ್ಮ ಕಾರಿನಲ್ಲಿ, ಆ ಚಾಲಕನಿಗೆ ತಿಳಿಯದಂತೆ ಬಯ್ದುಕೊಳ್ಳುವುದರಿಂದ ಅವನಿಗೆ ಏನೂ ಪರಿಣಾಮವಾಗುವುದಿಲ್ಲ. ಅದರ ಬದಲು ನಮ್ಮ ಪ್ರಸನ್ನತೆಯೇ ಹಾಳಾಗುತ್ತದೆ. ಇಲ್ಲಿ ನಾವು ವಾಚಿಕ ಹಾಗೂ ಮಾನಸಿಕ ಅಹಿಂಸೆಯನ್ನು ನೆನಪಿನಲ್ಲಿಟ್ಟುಕೊಂಡು ಕ್ರೋಧಕ್ಕೆ ಒಳಗಾಗದೇ ಪ್ರಸನ್ನತೆಯನ್ನು ಉಳಿಸಿಕೊಂಡರೆ, ನಮ್ಮ ಶಕ್ತಿಯು ಅಪವ್ಯಯವಾಗದಂತೆ ಕಾಪಾಡಿಕೊಳ್ಳುತ್ತೇವೆ. ಹೀಗೆ, ನಮ್ಮ ನಿತ್ಯ ಜೀವನದ ಘಟನೆಗಳಲ್ಲಿ, ಕುಟುಂಬದವರ ಜೊತೆ, ಸಹೋದ್ಯೋಗಿಗಳ ಜೊತೆ, ವ್ಯವಹಾರದ ಅನೇಕ ಸಂದರ್ಭಗಳಲ್ಲಿ ವಾಚಿಕ, ಮಾನಸಿಕ ಅಹಿಂಸೆಯನ್ನು ಆಚರಿಸಲು ಆಸ್ಪದವಿರುತ್ತದೆ.

ಶ್ರೀರಂಗ ಮಹಾಗುರುಗಳ ಹಿರಿಯ ಶಿಷ್ಯರೊಬ್ಬರು ಒಬ್ಬ ಕಿರಿಯ ಸಾಧಕನನ್ನು ಕೇಳಿದರು - ನೀನು ಮಕ್ಕಳನ್ನು ದಂಡಿಸಬೇಕಾದರೆ, ಅವರ ತಪ್ಪು ನಿನಗೆ ಹಿಡಿಸಲಿಲ್ಲ ಎಂದು ದಂಡಿಸುತ್ತೀಯೋ ಅಥವಾ ಅವರ ತಪ್ಪು ಅವರಿಗೆ ಒಳ್ಳೆಯದಲ್ಲಾ ಎಂದು ದಂಡಿಸುತ್ತೀಯೋ ಎಂದು ಕೇಳಿದ್ದರು. ಈ ಪ್ರಶ್ನೆಯನ್ನು ಗಂಭೀರವಾಗಿ ಪರಿಗಣಿಸಿದ ಕಿರಿಯ ಸಾಧಕನು ತನ್ನ ಪತ್ನಿಯ ಜೊತೆ ಈ ವಿಷಯವನ್ನು ಚರ್ಚಿಸಿ ತನ್ನ ವರ್ತನೆಯ ಪರಿಣಾಮ ಮಕ್ಕಳ ಮೇಲೆ ಏನಾಗುತ್ತಿದೆಯೆಂದು ಪತ್ನಿಯ ಮೂಲಕ ಗಮನಿಸಿಕೊಳ್ಳಲು ಪ್ರಾರಂಭಿಸಿದನು. ಇದರಿಂದ ಕಂಡುಬಂದುದೇನೆಂದರೆ, ಯಾವಾಗಲೆಲ್ಲಾ ಮಕ್ಕಳ ತಪ್ಪಿನಿಂದ ಕ್ರೋಧಕ್ಕೆ ಒಳಗಾಗಿ ಅವರನ್ನು ದಂಡಿಸಿದಾಗ ಮಕ್ಕಳ ಮನಸ್ಸಿನಲ್ಲಿ ತಂದೆ ಬಯ್ದರು ಅಥವಾ ಹೊಡೆದರು ಎನ್ನುವ ಭಾವನೆ ಉಳಿದುಕೊಳ್ಳುತ್ತಿತ್ತು ಅಷ್ಟೇ ಹೊರತು ತಮ್ಮ ತಪ್ಪಿನ ಅರಿವಾಗುತ್ತಿರುಲಿಲ್ಲ. ಆದರೆ, ಕ್ರೋಧಕ್ಕೆ ಒಳಗಾಗದೆ, ಅವರ ತಪ್ಪು ಅವರಿಗೇ ಒಳ್ಳೆಯದಲ್ಲಾ ಎನ್ನುವ ಭಾವನೆಯಲ್ಲಿ ಸಮಾಧಾನವಾಗಿಯೇ ತಿಳಿಹೇಳುವುದು ಅಥವಾ ಅವಶ್ಯಕವಾದಲ್ಲಿ ಸ್ವಲ್ಪ ಕ್ರೋಧವನ್ನು ತಂದುಕೊಂಡು ದಂಡಿಸಿದರೆ, ಮಕ್ಕಳಿಗೆ ತಪ್ಪಿನ ಅರಿವಾಗಿ ತಿದ್ದುಕೊಳ್ಳುವ ಭಾವನೆ ಉಂಟಾಗುತ್ತಿತ್ತು.

ಒಮ್ಮೆ ಶ್ರೀರಂಗಮಹಾಗುರುಗಳು ಇರುವೆ ಮುತ್ತಿದ್ದ ಔಷಧಿ ಬೇರನ್ನು ಒದರಿಕೊಂಡು ಬರಲು ಶಿಷ್ಯರೊಬ್ಬರಿಗೆ ತಿಳಿಸಿದರು. ಶಿಷ್ಯರು ಇದನ್ನು ನೀರಿನಲ್ಲಿ ಅದ್ದಿಬಿಟ್ಟರೆ ಇರುವೆಗಳು ಸತ್ತು ಬೇರನ್ನು ಸುಲಭವಾಗಿ ಶುದ್ಧಿಪಡಿಸಬಹುದಲ್ಲಾ ಎಂದು ಹೇಳಿದಾಗ, ಹಾಗಾಗಬಾರದು ಎಂದೇ ಒದರಿಕೊಂಡು ಬರಲು ಹೇಳಿದ್ದಪ್ಪಾ ಎಂದು ಅನವಶ್ಯಕವಾಗಿ ಹಿಂಸೆ ಮಾಡಬಾರದೆಂದು ತೋರಿಸಿಕೊಟ್ಟಿದ್ದರು.

ಹೀಗೆ, ನಿತ್ಯ ಜೀವನದ ಸನ್ನಿವೇಶಗಳಲ್ಲಿ ಅಹಿಂಸಾಚರಣೆಯನ್ನಿಟ್ಟುಕೊಂಡಲ್ಲಿ ಮಹಾಲಾಭವಾಗುತ್ತದೆ. 

ಸೂಚನೆ:21/11/2020 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.   

ಹತ್ತಿರವಿದ್ದರೂ ಪರಿಚಯವಿಲ್ಲದ ವಸ್ತು (Hattiraviddaru Paricayavillada Vastu)

ಲೇಖಕರು : ಸುಮುಖ ಹೆಬ್ಬಾರ್
(ಪ್ರತಿಕ್ರಿಯಿಸಿರಿ lekhana@ayvm.in)



ಒಂದು ಮಗುವಿಗೆ ಆಟದ ಚೀಲದಲ್ಲಿ ಒಂದು ಆಶ್ಚರ್ಯಕರವಾದ ಆಟಿಕೆ ಕಾಣಿಸಿತು. ಅದೊಂದು ಪ್ಲಾಸ್ಟಿಕ್ ನಿಂದ ಮಾಡಲ್ಪಟ್ಟ ಸಾಮಾನ್ಯ ವಸ್ತು ಎನಿಸಿತು. ಅದರಲ್ಲಿನ ಗುಂಡಿಗಳನ್ನು ಒತ್ತಿದಾಗ, ಅತ್ತ ಕಡೆಯಿಂದ ಪರಿಚಯಸ್ಥರು ಮಾತನಾಡುವುದು ಕೇಳಿತು. ಖುಷಿಯಿಂದ ಮಾತನಾಡಿತು. ಕಾಲಕ್ರಮೇಣ ಬೆಳೆದ ಮಗುವು, ಅದರಲ್ಲಿ ಸಂದೇಶವನ್ನು ರವಾನಿಸಿತು. ಆಟಗಳನ್ನೂ ಆಡಬಹುದೆಂದು ತಿಳಿದುಕೊಂಡಿತು. ಇಷ್ಟವಾದ ಹಾಡುಗಳನ್ನು ಕೇಳಲು ಕಲಿಯಿತು. ಭಾವಚಿತ್ರ ಮತ್ತು ದೃಶ್ಯವನ್ನು ಸೆರೆಹಿಡಿಯಿತು. ಇನ್ನೂ ಬೆಳೆದು ಹುಡುಗನಾಗಿ, ಅಂತರ್ಜಾಲವನ್ನು ಇದರಲ್ಲಿ ಬಳಸಿಕೊಂಡಾಗ ಹೊಸ ಪ್ರಪಂಚವೇ ಎದುರು ತೆರೆದು ನಿಂತಿತ್ತು. ಮಗುವಾಗಿದ್ದಾಗ ಸಾಮಾನ್ಯ ಎಂದೆನಿಸಿದ್ದ ವಸ್ತು, ಅದ್ಭುತಗಳ ಆಗರವಾದ ಮೊಬೈಲ್ ಎಂದು ಅರ್ಥವಾಗಿತ್ತು.

ನಮ್ಮ ಜೀವನದಲ್ಲಿಯೂ ಪ್ರಯೋಜನವನ್ನು ತಿಳಿಯದ ಅನೇಕ ವಿಷಯಗಳಲ್ಲಿ ನಮ್ಮ ದೇಹವೂ ಒಂದಾಗಿದೆ. ದಿನವಿಡೀ ದೇಹವನ್ನು ಹೊತ್ತು ತಿರುಗುತ್ತಿದ್ದರೂ, ಅದರ ಬಗೆಗಿನ ಪೂರ್ಣ ಪರಿಚಯವಿಲ್ಲ. ದಿನದಿಂದ ದಿನಕ್ಕೆ ಮಾನವ ದೇಹದ ವೈಶಿಷ್ಟ್ಯಗಳನ್ನು ವೈದ್ಯಕೀಯ ಲೋಕದ ಸಂಶೋಧನೆ ಬಿಚ್ಚಿಡುತ್ತಲೇ ಇದೆ. ಸಾಮಾನ್ಯ ದೃಷ್ಟಿಯಲ್ಲಿ ನೋಡಿದಾಗ ಇದೊಂದು ಚರ್ಮದಿಂದ ಸುತ್ತಿಕೊಂಡ ಮೂಳೆ ಮಾಂಸದ ಮುದ್ದೆ. ದೇಹವು, ಇಂದ್ರಿಯ ಸುಖ ಅನುಭವಿಸುವ ಜಾಗ. ಸುಖವನ್ನು ಅನುಭವಿಸಲು ಅರ್ಥದ ಸಂಪಾದನೆ, ತನ್ಮೂಲಕ ಕಾಮನೆಗಳ ಸೇವನೆ, ಎಂಬಂತೆ ಇಷ್ಟರಲ್ಲೇ ಸಮಾಜದ ಕೆಲವರಲ್ಲಿ ನಡೆ ಕಾಣುತ್ತಿದೆ. ವಿಶೇಷವಾಗಿ ಮಾನವನಲ್ಲಿ ವಿವೇಚನಾ ಶಕ್ತಿಯುಂಟು. 

 ಬ್ರಹ್ಮನು ಸೃಷ್ಟಿಯನ್ನು ಮಾಡುತ್ತಾ ಮಾನವನನ್ನು ಸೃಷ್ಟಿಸಿದಾಗ, ತಾನು ಎಂತಹ ಅದ್ಬುತ ಸೃಷ್ಟಿ ಮಾಡಿಬಿಟ್ಟೆ ಎಂದು ನಿಬ್ಬೆರಗಾದನಂತೆ. ಅದರ ವೈಶಿಷ್ಟ್ಯವನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡವರು ಮಹರ್ಷಿಗಳು. ಮೊಬೈಲ್ ನ ಒಳಹೊಕ್ಕು ನೋಡಿದಷ್ಟೂ ಅದರಲ್ಲಿನ ಉಪಯೋಗಗಳು ಮತ್ತು ಒಳಗೊಂಡಿರುವ ಅಂಶಗಳು ಹೊರಬರುವಂತೆ, ಮಹರ್ಷಿಗಳ ದೃಷ್ಟಿಕೋನದಲ್ಲಿ, ಮಾನವ ದೇಹವು ಅಂತರಂಗದಲ್ಲಿ ಅಪಾರವಾದ ಸುಖವನ್ನು ಅನುಭವಿಸಲಾಗುವ ಒಡಲು. ಒಬ್ಬ ಇಡೀ ಭೂಮಂಡಲಕ್ಕೆ ರಾಜನಾದವನು, ತನ್ನ ಜೀವಿತಾವಧಿಯಲ್ಲಿ ಅನುಭವಿಸುವ ಆನಂದದ ಕೋಟಿ ಕೋಟಿ ಪಾಲಿನಷ್ಟು ಸುಖವನ್ನು, ಈ ದೇಹದಲ್ಲಿ ಬ್ರಹ್ಮಾನುಭವದಿಂದ ಅನುಭವಿಸಲು ಸಾಧ್ಯವಿದೆ. ಈ ಸುಖವನ್ನು ಅನುಭವಿಸುವುದಕ್ಕೋಸ್ಕರವೇ ಮಾನವ ದೇಹದ ಸೃಷ್ಟಿಯಾಗಿದೆ. ಇದೇ ಜೀವನದ ಗುರಿ. ಹಾಗಾಗಿ ದೇಹವನ್ನು ಧರ್ಮ-ಸಾಧನ  ಎಂಬುದಾಗಿ, ಭಗವಂತನ ಬಳಿಗೆ ತಲುಪಿಸುವ ರಥ, ಸೇತುವೆ, ಏಣಿ ಅಥವಾ ವಿಮಾನವಾಗಿಯೂ ಕಂಡಿದ್ದಾರೆ. ಆತ್ಮಸಾಧಕನಿಗೆ, ಸಾಧನೆ ಮಾಡಲು ಕ್ಷೇತ್ರವೂ ಆಗಿದೆ.

ನಮ್ಮ ಶರೀರಕ್ಕೆ ಏನು ಬೆಲೆ ಎಂದು ಕೇಳಿದರೆ "ಸ್ವಾಮಿ ಇದರಲ್ಲೇನಿದೆ? ಇಷ್ಟು ಕ್ಯಾಲ್ಸಿಯಂ, ಸ್ವಲ್ಪ ಐರನ್" ಎಂದು, ಒಟ್ಟು ಇವತ್ತಿನ ಬೆಲೆಯಲ್ಲಿ ಒಂದು ಹನ್ನೆರಡಾಣೆ   ಸಾಮಾನು ಆಗಬಹುದು ಎನ್ನುತ್ತಾನೆ. ಅದೇ ಮಹರ್ಷಿಗಳನ್ನು ಕೇಳಿದರೆ, "ಅದು ಅನರ್ಘ್ಯವಾದುದು, ಜಗತ್ತಿನಲ್ಲಿ ಇನ್ನಾವುದೂ ಈ ತರಹ ಬೆಲೆಬಾಳುವ ವಸ್ತುವಿಲ್ಲ ಎನ್ನುತ್ತಾರೆ" ಎಂಬುದು ಮಹರ್ಷಿ ಹೃದಯವೇದಿಗಳಾದ  ಶ್ರೀರಂಗ ಮಹಾಗುರುಗಳ ಅಭಿಪ್ರಾಯವಾಗಿತ್ತು. ಸಂವಹನಕ್ಕಾಗಿ ಸೃಷ್ಟಿಯಾಗಿರುವ ಮೊಬೈಲ್, ಬರಿ ಆಟವಾಡಲು ಬಳಕೆಯಾದರೆ, ಅದರ ಪೂರ್ಣ ಪ್ರಯೋಜನ ಪಡೆದಂತೆ ಆಗಲಾರದು.  ಹಾಗೆಯೇ  ಭಗವತ್ಸಾಕ್ಷಾತ್ಕಾರಕ್ಕೆಂದು ಸೃಷ್ಟಿಯಾದ ಮಾನವ ದೇಹವು ಇಂದ್ರಿಯ ಸುಖಗಳಿಗೆ ಸೀಮಿತವಾದರೆ, ಅದು ವ್ಯರ್ಥವಾದಂತೆಯೇ ಸರಿ. ದ್ದರಿಂದ ನಮ್ಮ ದೇಹವು ಸೃಷ್ಟಿಯಾದ ಉದ್ದೇಶಕ್ಕೆ ಅನುಗುಣವಾಗಿ, ಪರಮಸುಖವನ್ನು ಅನುಭವಿಸುವಂತಾಗಲಿ ಎಂದು ಪ್ರಾರ್ಥಿಸೋಣ


ಸೂಚನೆ: 21/11/2020 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.   

Wednesday, November 18, 2020

ಸತ್ಯಕ್ಕೆ ಚ್ಯುತಿ ತಾರದ ಸುಳ್ಳು (Satyakke Chyuti Tarada Sullu)

  ಲೇಖಕಿ : ಮೈಥಿಲೀ ರಾಘವನ್
(ಪ್ರತಿಕ್ರಿಯಿಸಿರಿ lekhana@ayvm.in)



ಧರ್ಮರಕ್ಷಣೆಗಾಗಿ ಹೋರಾಡುತ್ತಿದ್ದ ಶಿವಾಜಿ ಮಹಾರಾಜನನ್ನೂ ಆತನ ಮಗ ಸಂಭಾಜಿಯನ್ನೂ ಔರಂಗಜೇಬನು ಕಪಟದಿಂದ ಬಂಧಿಸಿದನು. ಬಂಧನದಿಂದ ವೇಷ ಬದಲಾಯಿಸಿಕೊಂಡು ತಪ್ಪಿಸಿಕೊಂಡ ಅವರೀರ್ವರೂ ದೆಹಲಿಯಲ್ಲಿದ್ದ ಪುರುಷೋತ್ತಮನೆಂಬ ಬ್ರಾಹ್ಮಣನ ಮನೆಗೆ ಬಂದರು. ಆತನು ಸತ್ಯವನ್ನೇ ಹೇಳುವ ವ್ರತತೊಟ್ಟವನೆಂದು ಸುಪ್ರಸಿದ್ಧನಾಗಿದ್ದ. ಶಿವಾಜಿಯು ತನ್ನ ಮಗನನ್ನು ಸ್ವಲ್ಪ ಕಾಲ ಹೇಗಾದರೂ ಕಾಪಾಡಬೇಕೆಂದು ಪ್ರಾರ್ಥಿಸಿ ಅವನಲ್ಲಿ ಬಿಟ್ಟು ಹೊರಟುಬಂದ. ಈ ಸುದ್ದಿ ತಿಳಿದ ಬಾದಶಾಹನ ಆಳುಗಳು ಬ್ರಾಹ್ಮಣನನ್ನು, ಮನೆಯಲ್ಲಿನ ಹೊಸಬ ಯಾರೆಂದು ಪ್ರಶ್ನಿಸಿದಾಗ, ಅತನು ಅತಿಥಿಯು ತನ್ನ ಸಂಬಂಧಿಯೆಂದ. ಪುರುಷೋತ್ತಮನ ಸತ್ಯನಿಷ್ಠೆಯಲ್ಲಿ ನಂಬಿಕೆಯಿದ್ದರೂ ಸೈನಿಕರು "ನೀನು ಸತ್ಯವನ್ನೇ ಹೇಳುತ್ತಿರುವುದಾದರೆ ಅವನೊಡನೆ ಸಹಪಂಕ್ತಿಭೋಜನ ಮಾಡಿತೋರಿಸು" ಎಂದರು. (ಬ್ರಾಹ್ಮಣರು ಕ್ಷತ್ರಿಯರೊಡನೆ ಸಹಪಂಕ್ತಿಯಲ್ಲಿ ಕುಳಿತು ಭೋಜನಮಾಡುವ ಅಭ್ಯಾಸ ಆಗಿನಕಾಲದ ಆಚಾರವಂತ ಬ್ರಾಹ್ಮಣರಲ್ಲಿರಲಿಲ್ಲ.) ಪುರುಷೋತ್ತಮನೂ ಸಂಭಾಜಿಯನ್ನು ರಕ್ಷಿಸಲೋಸುಗ ತನ್ನ ನಿಯಮವನ್ನು ಬಿಟ್ಟು ಸಹಪಂಕ್ತಿಭೋಜನ ಮಾಡಿ ಸೈನಿಕರನ್ನು ನಂಬಿಸಿದನು. ಕೆಲವು  ದಿನಗಳ ನಂತರ ಶಿವಾಜಿಯ ಆದೇಶದಂತೆ ಸಂಭಾಜಿಯನ್ನು ಕಳುಹಿಸಿಕೊಟ್ಟು ಶಿವಾಜಿಗೆ ಕೊಟ್ಟ ಮಾತನ್ನು ಉಳಿಸಿಕೊಂಡ.

ಇಲ್ಲಿ ಪುರುಷೋತ್ತಮನ ಸತ್ಯನಿಷ್ಠೆಗೆ ಭಂಗವಾದಂತೆ ತೋರುತ್ತದೆ. ಆದರೆ ಇಂತಹ ಸನ್ನಿವೇಶಗಳನ್ನಳೆಯಲು ಶ್ರೀರಂಗಮಹಾಗುರುಗಳು ಕೊಟ್ಟ ಸೂತ್ರವನ್ನವಲಂಬಿಸಬಹುದಾಗಿದೆ – ದೊಡ್ಡಧರ್ಮದ ರಕ್ಷಣೆಗಾಗಿ ಸಣ್ಣಧರ್ಮವನ್ನು ತ್ಯಜಿಸುವುದೇ ಉತ್ತಮ.  ಉದಾಹರಣೆಗೆ, ಕಾಲನ್ನು ಸೂಜಿಯಿಂದ ಚುಚ್ಚುವುದು ಪಾಪಕಾರ್ಯವಾದರೂ ಕಾಲಲ್ಲಿ ಮುಳ್ಳು ಚುಚ್ಚಿಕೊಂಡಾಗ ಅದನ್ನು ತೆಗೆಯಲು ಸೂಜಿಯಿಂದ ಚುಚ್ಚುತ್ತೇವೆ.  ಮುಳ್ಳನ್ನು ತೆಗೆಯಲೇಬೇಕೆಂಬುದು ದೊಡ್ಡಧರ್ಮವಾದ್ದರಿಂದ ಅದಕ್ಕಾಗಿ 'ಚುಚ್ಚಬಾರದು' ಎಂಬ ಸಣ್ಣಧರ್ಮವನ್ನು ತ್ಯಜಿಸುವುದೇ ಉತ್ತಮ.

ಸತ್ಯವನ್ನಾಡಬೇಕೆಂಬ ಸಾಮಾನ್ಯ ಧರ್ಮಕ್ಕಿಂತಲೂ ಧರ್ಮಕಂಟಕನಿಂದ ಧರ್ಮಿಷ್ಠರನ್ನು ಕಾಪಾಡಬೇಕೆನ್ನುವುದು ಹಿರಿದಾದ ಧರ್ಮ. ಅದಕ್ಕಾಗಿ ನುಡಿದ ಸುಳ್ಳಿನಿಂದ ಸತ್ಯನಿಷ್ಠೆಗೆ ಚ್ಯುತಿಯಿಲ್ಲ. ಅತ್ಯಂತ ಭೂತಹಿತವಾವುದೋ ಅದೇ ಸತ್ಯವೆಂಬ ಶಾಸ್ತ್ರವಚನಕ್ಕೂ ಇದು ಹೊಂದಿಕೆಯಾಗುತ್ತದೆ.  

'ಸತ್ಯ' ಎಂದರೆ 'ಸತ್'–ಸದಾ ಇರುವುದು, ವಿಕಾರವಾಗದೇ ಇರುವುದು. ಪರಬ್ರಹ್ಮವೊಂದೇ ಎಂದಿಗೂ ವಿಕಾರವಾಗದ ಸತ್ಯ. ವ್ಯವಹಾರದಲ್ಲೂ, ಇರುವ ವಿಷಯವನ್ನು ವಿಕಾರಗೊಳಿಸದೆ, ಇರುವಂತೆಯೇ ಹೇಳುವುದನ್ನು ಸತ್ಯವೆನ್ನುತ್ತೇವೆ. ವ್ಯಾವಹಾರಿಕಸತ್ಯವು ಮೂಲಸತ್ಯದ ಛಾಯೆಯೇ ಆಗಿರುವುದರಿಂದ ಅದನ್ನು ಪಾಲಿಸುವುದು ಸತ್ಯದ ಮೂಲರೂಪವನ್ನು ನೆನಪಿಸಿ, ಅಲ್ಲಿಗೆ ಕರೆದೊಯ್ಯಲು ಸಹಾಯಕವಾಗುತ್ತದೆ. ಆದರೂ ಮೇಲೆ ಹೇಳಿದ ಧರ್ಮಸೂಕ್ಷ್ಮವನ್ನೂ ಅರಿತು ಸತ್ಯನಿಷ್ಠೆಯನ್ನು ವಿವೇಕದಿಂದ  ಪಾಲಿಸಬೇಕಾದ ಕರ್ತವ್ಯವನ್ನೂ  ಮರೆಯಬಾರದು.

ಸೂಚನೆ: 18/11/2020 ರಂದು ಈ ಲೇಖನ ಉದಯವಾಣಿ ಯಲ್ಲಿ ಪ್ರಕಟವಾಗಿದೆ. 

Tuesday, November 17, 2020

ನಿತ್ಯ ಜೀವನದಲ್ಲಿ ಅಹಿಂಸೆ (Nitya Jivanadalli Ahinse)

ಲೇಖಕರು: ಶ್ರೀ ಜಿ. ನಾಗರಾಜ.
(ಪ್ರತಿಕ್ರಿಯಿಸಿರಿ lekhana@ayvm.in)



ಭಾರತೀಯ ಸಂಸ್ಕೃತಿಯಲ್ಲಿ ಅಹಿಂಸೆಯನ್ನು ಹಾಸುಹೊಕ್ಕಾಗಿ ಅಳವಡಿಸಿದ್ದಾರೆ. ನಮ್ಮ ಹಳೆಯ ತಲೆಮಾರಿನವರು ಯಾವುದಾದರೂ ಖಾಯಿಲೆ ಬಂದು ನೋವು ಅನುಭವಿಸುವಾಗ, ನಮ್ಮ ಶತ್ರುವಿಗೂ ಇಂಥ ನೋವು ಬೇಡಪ್ಪಾ! ಎಂದು ಭಗವಂತನಲ್ಲಿ ಮೊರೆಯಿಡುವ ರೂಢಿಯನ್ನು ಶ್ರೀರಂಗಮಹಾಗುರುಗಳು ಎತ್ತಿ ತೋರಿಸುತ್ತಿದ್ದರು. ಅಹಿಂಸೆಯನ್ನು ನಿತ್ಯ ಜೀವನದಲ್ಲಿ ಕ್ರಮೇಣ, ಯಥಾಶಕ್ತಿ ರೂಢಿಸಿಕೊಳ್ಳಬೇಕಾದರೆ, ಹಿಂಸೆಯ ಮೂಲವಾದ ಕ್ರೋಧದ ಮೇಲೆ ಕ್ರಮೇಣ ಹತೋಟಿಯನ್ನು ಸಾಧಿಸಬೇಕಾಗುತ್ತದೆ.

ಕ್ರೋಧವು ನಮ್ಮ ಪ್ರಾಣಶಕ್ತಿಯು ನಷ್ಟವಾಗುವುದಕ್ಕೆ ಮುಖ್ಯದ್ವಾರವಾಗಿರುತ್ತದೆ. ಒಮ್ಮೆ ವ್ಯಕ್ತಿಯೊಬ್ಬರು ತಮ್ಮ ಕೆಲಸಕ್ಕಾಗಿ ಸರ್ಕಾರಿ ಕಛೇರಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಕಛೇರಿಯವರು ಇವರನ್ನು ಬಹಳ ಅಲೆದಾಡಿಸಿದ ನಂತರವೂ ಕೆಲಸವಾಗದಿದ್ದಾಗ ಇವರಿಗೆ ಪ್ರಚಂಡವಾದ ಕೋಪ ಬಂದುಬಿಟ್ಟಿತು. ಅವರ ಉದ್ದೇಶ ಅಲ್ಲಿಯ ಅಧಿಕಾರಿ-ನೌಕರರ ಮೇಲೆ ಗಲಾಟೆ ಮಾಡಿಯಾದರೂ ಕಾರ್ಯಸಾಧನೆಯಾಗಬೇಕು ಎನ್ನುವುದು. ಆದರೆ ಅವರಿಗೆ ಎಷ್ಟು ಕೋಪ ಬಂದಿತ್ತೆಂದರೆ, ಅವರ ಬೆನ್ನುಲುಬಿನಲ್ಲಿ ಒಂದು ನಡುಕ ಶುರುವಾಗಿ, ಮಾತೇ ಹೊರಡದೆ, ಇನ್ನು ಅಲ್ಲಿಯೇ ಇದ್ದರೆ ತಲೆತಿರುಗಿ ಬೀಳಬೇಕಾಗುತ್ತದೆ ಅನ್ನುವ ಪರಿಸ್ಥಿತಿಯುಂಟಾಗಿ ಕೊನೆಗೆ ಯಾವ ಮಾತೂ ಆಡದೇ ಮನೆಗೆ ಬಂದು ಬಿಟ್ಟರು ಮತ್ತು ಅವರ ಕೆಲಸ ಆಗಲೇ ಇಲ್ಲ. ಹೀಗೆ, ಕ್ರೋಧಕ್ಕೆ ಒಳಗಾದರೆ, ಗೀತೆಯ "ಕ್ರೋಧಾತ್ ಭವತಿ ಸಮ್ಮೋಹಃ..."  ಎನ್ನುವ ವಾಣಿಯಂತೆ, ಕ್ರೋಧವು ನಮ್ಮನ್ನೇ ನಾಶ ಮಾಡುತ್ತದೆ ಮತ್ತು ಅಂದುಕೊಂಡ ಕೆಲಸವೂ ಆಗುವುದಿಲ್ಲ.

ಆದರೆ ಕ್ರೋಧವನ್ನು ವಶದಲ್ಲಿಟ್ಟುಕೊಂಡಿದ್ದು, ಧರ್ಮರಕ್ಷಣೆಗಾಗಿ ಪ್ರಯೋಗಿಸಿದರೆ, ಉದ್ದೇಶಿತ ಕಾರ್ಯವು ನೆರವೇರುತ್ತದೆ. ಅಹಿಂಸಾ ವ್ರತ ಎಂದರೆ, ಎಂದಿಗೂ ಯಾವ ರೀತಿಯ ಹಿಂಸೆಯನ್ನೂ ಮಾಡಬಾರದೆಂದರ್ಥವಲ್ಲ. ಕೆಲವೊಮ್ಮೆ ದೊಡ್ಡ ಮಟ್ಟದ ಹಿಂಸೆಯನ್ನು ತಪ್ಪಿಸುವುದಕ್ಕಾಗಿ ಸಣ್ಣ ಹಿಂಸೆ ಮಾಡುವುದು ಅಹಿಂಸೆಯೇ ಆಗುತ್ತದೆ. ರಾವಣ ಅಧರ್ಮಿಯಾಗಿದ್ದು ಅನೇಕ ವಿಧದ ಹಿಂಸೆಯಲ್ಲಿ ತೊಡಗಿದ್ದ. ಶ್ರೀರಾಮಚಂದ್ರನು ರಾವಣನನ್ನು ಕೊಂದು ಅಧರ್ಮವನ್ನು ತಪ್ಪಿಸಿದ್ದು  ಸಹ ಅಹಿಂಸೆಯೆಂದೇ ಪರಿಗಣಿಸಲ್ಪಡುತ್ತದೆ. ಶ್ರೀರಂಗ ಮಹಾಗುರುಗಳು "ಸಮುದ್ರದಂತಹಾ  ಕೋಪವನ್ನು ತಂದುಕೊಂಡ" ಎಂದು ಹೇಳಿ ಶ್ರೀರಾಮನು ಹೇಗೆ ಕ್ರೋಧಕ್ಕೆ ವಶನಾಗದೇ, ತಾನು ಕ್ರೋಧವನ್ನು ವಶದಲ್ಲಿಟ್ಟುಕೊಂಡು ರಾವಣನ ಮೇಲೆ ಪ್ರಯೋಗ ಮಾಡಿದ ಎಂದು ಶ್ರೀರಾಮನ ಆದರ್ಶ ವ್ಯಕ್ತಿತ್ವವನ್ನು ತೋರಿಸಿಕೊಡುತ್ತಿದ್ದರು.

ಹೀಗೆ, ಕ್ರೋಧದ ಮೇಲೆ ಹತೋಟಿ ಸಾಧಿಸಿ, ನವವಿಧ ಹಿಂಸೆಗಳ ಬಗ್ಗೆ ಎಚ್ಚರದಿಂದ್ದರೆ, ನಮ್ಮ ಪ್ರಾಣಶಕ್ತಿಯು ಸಂರಕ್ಷಿಸಲ್ಪಟ್ಟು ಯೋಗ ಹಾಗೂ ಲೌಕಿಕ ಸಾಧನೆಗಳೆರಡಕ್ಕೂ ಅನುಕೂಲವುಂಟಾಗುತ್ತದೆ.

ಸೂಚನೆ: 14/11/2020 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.  

Monday, November 16, 2020

Deepawali - Balipadyami and Govardhana Puja

Author: Mohan Raghavan

Respond to (lekhana@ayvm.in)

  

In this article we explore the deep symbolism and the inner experience behind the observances of Balipadyami / Govardhana Pooja (on prathama) and Yama dvitiya / Bhagini Dvitiya.


The story of Bali chakravarthy and the Trivikrama avatara

The story itself is well known. Bali is the king of Asuras and grandson of the great devotee Prahlada. Just like Narakasura, he too wishes to bring the heavens under his own control, thereby deviating from the natural order - Dharma. Thus Vishnu takes birth as the son of Aditi - the mother of Devas who rule the heavens. When our entire being is devoted to material enjoyment and the asuri tendencies such as kama, krodha and other vices, we ourselves are the embodiment of asura Bali. His conquest of Indra loka is an allegorical mention of the darkness of ajnana that has filled us. Here Vamana is a dwarf who seeks a small charity of three steps of land from Bali, while he is in the midst of a sacrifice. Bali gives his word. Vamana now grows manifold and effortlessly occupies the entire world and the heavens with just two steps. Just as even a small spark of flame can grow and envelop the entire forest, aatma jyothi which is seen by jnanis in the region of the heart to be of the size of a phalange of the thumb engulfs the entire Earth and Heavens. If nurtured by the sadhaka with his tapas, it can envelop the entire being and make it brahmamaya (filled with brahma vastu). Yoga shastra says that while we go about doing our worldly chores our pranas travel along the extensive network of nadis. But for travelling on the Yogic path, prana must enter the nadi called Sushumna which runs through the centre of the spinal cord from the mooladhara chakra at the lower extremity, all the way to the sahasrara at the upper extremity. The extent of this yogic path spans the three lokas bhuh, bhuvah and suvah that are alluded to in the Vedas and are the three steps of Trivikrama. The third, Swarloka is the abode of the effulgent Surya. Within ourselves, it is the Jnana Surya that the jnanis experience in the region of their crest within themselves. That trivikrama placed his third foot on Bali's head is a beautiful allegory to the fact that Bali's asuric tendencies

were cleansed by the highest Yogic experience of the effulgent light. Even more interesting is what follows and is of highest relevance to this current context. Bali for all his faults, is extremely devoted to Lord Vishnu. Hence Trivikrama showers his blessings on Bali and despatches him back to the lower loka called Sutala, which abounds in all riches. Thus Bali is sent back to the lower loka - the nadis where worldly affairs are transacted, to enjoy the material world. It is a loka of immense riches and wealth. But this time Bali enjoys the riches in the aftermath of his experience of the supreme light, that has endowed  him with a sense of balance. What is more, Narayana himself offers to stand guard at the gates of Bali, protecting him from enemies, to ensure that his asuri tendencies are kept under check. There is also the promise that in future Bali will ascend to the heavens and take up the position of Indra.


This story also shows the ways in which Narayana rectifies our asuric tendencies. Sometimes as in the case of Narakasura, he employs Nigraha or destruction of asuri tendencies to shower his grace - anugraha on us. But in this case, he gently tricks Bali into giving up his unjustly gained position voluntarily and blesses him. 


 Without these insights given by Sriranga Mahaguru, it is impossible to understand this story and make sense of it in a rational way. For instance, if one were to try to take it literally, when trivikrama had already occupied everything with just two steps, wasn't Bali and his head already covered ? Many such questions arise for which no meaningful explanation can be given. Understanding the tattvas behind the Puranic stories is only possible by insights borne of inner spiritual experience.   


Govardhana Giridhaari

While the story of Bali is of an asura who wished to usurp the position of Indra and was chastised, the story of Govardhana is of Indra himself being chastised. In both cases, the reason was ahankara or ego which makes us forget that the supreme principle - paramatma or antarjyotih is paramount in our lives. Indra lords over the Indriyas or senses, and keeps them on the path of Dharma. But if he forgets that he himself functions as an offshoot of the primordial seed variously called param-Brahma or Narayana, he is in fact acquiring the qualities that are essentially asuric. Thus the same fate awaits him as did Bali. Krishna firstly convinces the village elders that it is not Indra who sustains, but Govardhana which sustains their cows and hence is responsible for all their material prosperity. When Indra turns his rage on Gokula, Krishna lifts up the Govardhana giri and provides shelter to all his kith, kin and kine. The beautiful imagery shows that all material prosperity represented by Govardhana (literally multiplier of cows and hence prosperity) is actually sustained by the primordial principle Krishna himself. All people live happily when under his protective grace. Thus amidst Deepawali festivities which bring in riches and prosperity, here is a reminder to us on the source of this material prosperity and the dharmic way to enjoy them. This beautiful episode culminates in Indra worshipping Krishna - an episode called as Govinda pattabhisheka. 


Observance of Bali Padyami and Govardhana Puja

Balipadyami starts with the ritual oil bath. At night, the main event is the worship of Balindra. The image or idol of Balindra along with his retinue is worshipped with the following verse

बलीराज नमस्तुभ्यं विरोचनसुत प्रभो |

भविषयेन्द्र सुराराते विष्णुसान्निध्यदो भव ||


The prayer is for bestowing the saannidhya of Vishnu, which was Bali's most extraordinary achievement. It is interesting to note that golden coloured flowers by the name honnaavarike are used in this worship. These golden flowers are spread all around the courtyard while saying 'Honnu, Honnu' meaning "It's all golden, It's all golden", a clear reference to Bali's extraordinary experience of the Jnana Surya or the golden light.  In some houses there is also the tradition of turning the image of Bali backwards or westwards at the end of puja. This is very consistent and conforms very well with the tattvas we have hitherto mentioned. Turning back or westwards represents the inward journey, or the eventual ascent of Bali to the position of Indra.  


In northern India, especially among the Vaishnava sampradayas, the Govardhana Puja is also called Annakuta. An image or replica of Govardhana is installed and worshipped. Several varieties of food are offered as worship, depicting the enjoyable riches. After the worship, they are partaken as prasad of Govardhana Giridhari Krishna.


Yama dvitiya or Bhagini dvitiya

This is celebrated on the dvitiya, immediately after Balipadyami. It is celebrated as the day brothers visit their sisters with gifts and are treated sumptuously by them in return. Yama as has been explained before is the son of the supreme light, Surayanarayana. He is the king of Dharma, and dispenses the results of our karmas with his danda. He reminds us of the eventuality that awaits us, and the need to adhere to Dharma always while we go about our material lives. Yamuna is his own sister and daughter of Suryanarayana. She is the river that nourishes our lives and  defines the very essence of feminine grace. Yama and Yami(Yamuna) represent the Purusha and Prakrti principles which we have alluded to before. Thus their meeting which is the inspiration behind this festival represents the confluence of worldly benefits and Dharmic disposition. In the realm of spiritual pursuits, it represents the coming together of Purusha and Prakrti, which results in the supreme sthithi of Samadhi.  


Conclusion

This brings us to the conclusion of the series of articles on the festivities of Deepawali. We started with an exploration of the significance of Deepa. Further after an introduction to symbolism and their inner experiences, we have considered the legends, their significance and their reflections in the practiced rituals of the five day Deepawali festivities starting from the Dhanatrayodasi to Yama dvitiya.   


-----------------

This article is based on Amaravani  - the published lectures of Sriranga Mahaguru and 'Bharateeyara habba haridinagalu', a magnum opus on Indian festivals by Sri SriRangapriya Sri Srih. 

Sunday, November 15, 2020

Deepawali: Symbolism of Naraka Chaturdashi

Author: Mohan Raghavan

Respond to (lekhana@ayvm.in)




In this part, we explore the deep symbolism and the inner experience behind the observances of  Naraka Chaturdashi and Lakshmi Puja (on Amavasya).


Victory over Narakasura

Narakasura is an embodiment of naraka or the result of immense paapa karma. He is the son of Prithvi - who yields bountiful riches. However he raided and stole the ornaments of Aditi, the mother of the devas of the heavens. We may recall that acquisitions and enjoyment of material riches represented by Prithvi must never create troubles in our inner journey to the abode of light - Divi or the heavens. Narakasura's actions represent a clear violation of the principle of Dharma and this kind of violation leads us astray and to Naraka. Thus, he is a personification of wanton and irresponsible material enjoyment and lust; nay a personification of Naraka himself. His capital is Pragjyotishapura - literally the city of easterly lights. As per standard Bharatiya cultural conventions, east, the direction of the rising sun, represents the day, evolution and by extension our external worldly activities. West, in contrast represents the night, cessation of external activities, involution and our journey inwards to our source - the state of Samadhi.  Thus the city of easterly lights clearly points to immersion in the myriad lights of the world of senses. In contrast the Pratyak Atma Jyoti is the light of Atman that shines within us. Naraka's lieutenant is Mura, a five-headed demon. His capital is ensconced within walls, moats of water, fire, air and a noose. All of these clearly point to Naraka's preoccupation with the world of five bhutas or the elements that make up this material world. Naraka, the son of Bhoodevi is killed by Krishna and Satyabhama. Satyabhama is bhoodevi herself, but along with Lord Narayana in the form of Sri Krishna. Pure material mindedness is rectified by infusing with it, the sacred presence of Yogeshvara SriKrishna. On killing Narakasura, SriKrishna married the sixteen thousand damsels kept in Naraka's captivity, an allegory to the opening up of the inward nadi mukhas required for Yogic progression.      


Observance of Naraka Chaturdashi and Lakshmi puja

In keeping with the spirit of this story, the morning of Naraka chaturdashi is commenced with the remembrance and meditation of the Lord and a ritual oil bath. Shastras describe its purpose as warding off the yamaloka and to keep away alakshmi. Sriranga Mahaguru had extolled the practice of Abhyanga-snaanam or the ritual oil bath as a very scientific act capable of bestowing health and long life while nullifying the impediments to inward Yogic progression posed due to our past paapa karmas or other such acts. He had on numerous occasions practically demonstrated the right techniques and nuances of this practice to his disciples. The ritual bath in the wee hours of this day brings about an elevated state of mind, hence it is also called Ganga snanam.


Those of the ancestors who may have descended to the inferior worlds or are looking for ways to attain moksha are shown the way towards the exalted realms by means of lighting of fire torches held aloft at dusk. This aspect is a very critical factor contributing to the nomenclature as Naraka chaturdashi. In fact the shastras say that the ancestors who come down to earth to partake of offerings (presumably during the pitr paksha and Mahalaya a month earlier), are shown the way onwards by means of fire torches held aloft. Crackers that emit such skyward streaks of light in the sky satisfy this description as well. 


Amavasya too is heralded with the ritual oil bath as mentioned earlier and worship of goddess Lakshmi is the predominant ritual. The auspicious occasion of Lakshmi puja in the evening heralds the beginning of a new financial year for merchants and traders. Kubera, the god of wealth too is worshipped. The auspicious night is usually spent in prayers and incessant worship.


------ Footnotes


1. पराञ्चि खानि व्यतृणत्स्वयम्भूस्तस्मात्पराङ्पश्यति नान्तरात्मन् ।

कश्चिद्धीरः प्रत्यगात्मानमैक्षदावृत्तचक्षुरमृतत्वमिच्छन् ॥ १ ॥ कठ उप्   2-1-1


2. तैले लक्ष्मीर्जले गंगा दीपावल्याश्चतुर्दशीम्

  प्रात:काले तु य: कुर्यात् यमलोकं न पश्यति (पद्म पुराण 4-1224)

   अलक्ष्मीपरिहारार्थं अभ्यंगस्नानमाचरेत (नारद संहिता)  


3. यमलोकं परित्यज्य आगतो ये महापथे 

   उज्ज्वल ज्योतिषा मार्गं प्रपश्यन्तु व्रजन्तु ते || (नरकचतुर्दशी, स्मृति कौस्तुभ)


ಆರ್ಯಸಂಸ್ಕೃತಿ ದರ್ಶನ - 18 (Arya Samskruti Darshana - 18)

ಜ್ಯೋತಿ
ಲೇಖಕರು: ವಿದ್ವಾನ್ ಶ್ರೀ|| ಛಾಯಾಪತಿ



 " ಜ್ಯೋತಿ"! ಭಾರತೀಯ ಪರಂಪರೆಯಲ್ಲಿ ಬಾಳುವ ಪ್ರತಿಯೊಬ್ಬನೂ ಈ ಪದವನ್ನು ಕೇಳಿದ ಮಾತ್ರಕ್ಕೇ ಪುಳಕಿತನಾಗುತ್ತಾನೆ. ಇದರ ಹಿಂಬದಿಯಲ್ಲಿ ಕಾರಣವೇನಿರಬಹುದು? ಪ್ರಶ್ನೆ ಏಳುವುದು ಸಹಜ. ಸಮರ್ಪಕವಾದ ಉತ್ತರವನ್ನು ಪಡೆಯುವುದು ಶ್ರಮಸಾಧ್ಯ

ಈಗಿನ ವಿಜ್ಞಾನ ಪ್ರಪಂಚದಲ್ಲಿ ಬೆಳೆದವರಿಗೆ ಬೆಳಕಿನ ಬಗ್ಗೆ ವೈಜ್ಞಾನಿಕವಾದ ದೃಷ್ಟಿಕೋಣ ಮಾತ್ರ ಪರಿಚಿತವಾಗಿರುತ್ತದೆ. ಭೌತಿಕ ಪ್ರಪಂಚದಲ್ಲಿ ಬೆಳಕಿನ ಪಾತ್ರವೇನು? ಅದರಿಂದ ಜೀವಲೋಕಕ್ಕೆ ಪ್ರಯೋಜನಗಳೇನು? ಬೆಳಕಿನ ಮೂಲಗಳಾವುವು? ಎಂದು ಮುಂತಾದ ಪ್ರಶ್ನೆಗಳಿಗೆ ಆಧುನಿಕ ವಿಜ್ಞಾನ ಉತ್ತರ ಕೊಡಬಹುದು. ಖಗೋಳ ವಿಜ್ಞಾನಿಯು ಸೌರವ್ಯೂಹವನ್ನು ಪರಿಶೀಲಿಸಿ ಸೂರ್ಯನ ಪ್ರಾಧಾನ್ಯವನ್ನು ವಿವರಿಸುತ್ತಾನೆ. ಸೂರ್ಯ ಎಂಬ ಹೆಸರು ಅನ್ವರ್ಥವಾದುದು. ಲೋಕವನ್ನೆಲ್ಲಾ ಪ್ರೇರಿಸುವವನೇ ಸೂರ್ಯ. ಸೂರ್ಯನ ತೇಜಸ್ಸು, ಶಾಖ, ಆಕರ್ಷಣೆ ಮುಂತಾದವುಗಳಿಗೆ ಜೀವ ಲೋಕದಲ್ಲಿ ಎಷ್ಟು ಮಹತ್ವವಿದೆಯೆಂಬುದು ಸರ್ವವಿದಿತವಾದ ವಿಷಯ. ಅಂತೆಯೇ ಬೆಳಕಿನ ರೂಪದಲ್ಲಿರುವ ಗ್ರಹಗಳ ಸ್ವರೂಪ ಮತ್ತು ಮಹತ್ವಗಳನ್ನು ವಿಜ್ಞಾನದ ದೃಷ್ಟಿಯಿಂದ ಮಾನವನು ಪರಿಶೀಲಿಸಿದ್ದಾನೆ. ಸೂರ್ಯ ಗ್ರಹವಿಲ್ಲದಿದ್ದರೆ ಬಹುಶಃ ಜೀವಲೋಕದ ಅಸ್ತಿತ್ವವೇ ಇರುವುದಿಲ್ಲವೆಂದು ವಿಜ್ಞಾನಿಯು ಘೋಷಿಸುತ್ತಾನೆ.. ಭೌತಿಕ ವಿಜ್ಞಾನದ ದೃಷ್ಟಿಯಿಂದ ಇದು ಒಪ್ಪುವ ವಿಚಾರವೇ ಸರಿ.

ಬುದ್ಧಿ ವೃತ್ತಿಯಾದ ವಿಜ್ಞಾನಕ್ಕೂ ಮೀರಿದ ಸನಾತನ ಸತ್ಯ ಜ್ಯೋತಿಯೊಂದುಂಟು. ಜ್ಞಾನಿಗಳು, ಮಹರ್ಷಿಗಳು ತಪೋಮಯವಾದ ದೃಷ್ಟಿಯಿಂದ ಆ ಸತ್ಯ ಜ್ಯೋತಿಯನ್ನು ಕಂಡವರು. ಆದ್ದರಿಂದಲೇ "ತಮೇವ ಭಾಂತಮನು ಭಾತಿ ಸರ್ವಮ್, ತಸ್ಯ ಭಾಸಾ ಸರ್ವಮಿದಮ್ ವಿಭಾತಿ" ಎಂದು ಅವರು ಸಾರಿದರು. ಬೆಳಕನ್ನು ನೀಡಬಲ್ಲ ಸೂರ್ಯ, ಚಂದ್ರ, ಮುಂತಾದ ಗ್ರಹಗಳು, ವಿದ್ಯುತ್, ನಕ್ಷತ್ರ ಮುಂತಾದವುಗಳೆಲ್ಲಾ ಸತ್ಯಜ್ಯೋತಿಯ ಮುಂದೆ ಪ್ರಕಾಶ ಹೀನವಾದವುಗಳೇ ಸರಿ. "ನತತ್ರ ಸೂರ್ಯೋ ಭಾತಿ ನ ಚಂದ್ರತಾರಕಮ್ ನೇಮಾ ವಿದ್ಯುತೋ ಭಾಂತಿ ಕುತೋsಯಮಗ್ನಿಃ" ಎಂಬ ಉಪನಿಷದ್ವಚನವು ಈ ವಿಷಯವನ್ನೇ ಸ್ಪಷ್ಟಪಡಿಸುತ್ತದೆ. ವಾಸ್ತವಿಕವಾಗಿ ವಿಶ್ವವನ್ನೆಲ್ಲಾ ಬೆಳಗುತ್ತಿರುವುದು ಆ ಸತ್ಯ ಜ್ಯೋತಿಯೇ. ಅದೇ ಪರಮಾತ್ಮ ಜ್ಯೋತಿ. ಅದನ್ನು ಕಂಡ ಜೀವಿಯು ಧನ್ಯನು. ಅದನ್ನು ಕಂಡವನೇ  ಕೃತಾರ್ಥನು.            

ಚಿನ್ಮಯವಾದ ಜ್ಯೋತಿ ಅವ್ಯಕ್ತವಾದುದು. ಇಂದ್ರಿಯಾತೀತವಾದುದು. ಸಾಮಾನ್ಯ ದೃಷ್ಟಿಗೂ, ಪ್ರಾಕೃತ ಬುದ್ಧಿಗೂ ಗೋಚರವಾಗದಿರುವ ಆ ಜ್ಯೋತಿಯ ಕಡೆಗೆ ದಿಗ್ದರ್ಶನ ಮಾಡುವುದಕ್ಕಾಗಿಯೇ ಉಪನಿಷತ್ತುಗಳಲ್ಲಿ ಅನೇಕ ವಿಧವಾದ ಪ್ರತೀಕೋಪಾಸನೆಗಳು ನಿರ್ದಿಷ್ಟವಾಗಿವೆ. ಪೂಜೆ, ಉಪಾಸನೆ, ಯಜ್ಞ, ಮುಂತಾದ ಸಮಸ್ತ ಕರ್ಮಗಳಲ್ಲೂ, ಭಾರತೀಯರು ಮೊದಲು ದೀಪವನ್ನು ಬೆಳಗಿ ನಂತರ ಮುಂದಿನ ಆಚರಣೆಗಳನ್ನು ನಡೆಸುತ್ತಾರೆ. ಈ ಸಮಸ್ತ ವಿಧವಾದ ಆಚರಣೆಯಲ್ಲೂ ಆತ್ಮ ಜ್ಯೋತಿಯ ಕಡೆಗೆ  ನಮ್ಮ ಮನಸ್ಸು, ಬುದ್ಧಿ, ಆತ್ಮಗಳನ್ನು ಒಯ್ಯುವ ಒಂದು ಯತಾರ್ಥವಾದ ಸುಂದರ ವಿಧಾನವಿದೆ. ಸಮಸ್ತ ವರ್ಣದವರೂ ಪ್ರಾತಃಕಾಲದಲ್ಲಿ ಮೊದಲು ಸೂರ್ಯ ಭಗವಂತನಿಗೆ ಅಭಿವಾದನ ಮಾಡುವ ಸಂಪ್ರದಾಯವಿದೆ. ಹೊರ ನೋಟಕ್ಕೆ ಪ್ರಕಾಶ ಬೀರುವ ಬೆಳಕಿನ ಗೋಳಕ್ಕೆ ಮಾತ್ರ ನಮಸ್ಕಾರ ಮಾಡುವುದು ಈ ಸಂಪ್ರದಾಯದ ತಾತ್ಪರ್ಯವಲ್ಲ. ಸೂರ್ಯ ನಮಸ್ಕಾರ, ಸೂರ್ಯ ಧ್ಯಾನವನ್ನ ನಿರೂಪಿಸುವ ಅನೇಕ ಸ್ತೋತ್ರಗಳಲ್ಲಿ  ಈ ಕೆಳಗಿನ ಧ್ಯಾನ ಶ್ಲೋಕ ಎಲ್ಲೆಲ್ಲೂ ಪ್ರಸಿದ್ಧವಾಗಿದೆ.

ಧ್ಯೇಯಃ ಸದಾ ಸವಿತೃ ಮಂಡಲಮಧ್ಯವರ್ತೀ
ನಾರಾಯಣಃ ಸರಸಿಜಾಸನಸಂನಿವಿಷ್ಟಃ|
ಕೇಯೂರವಾನ್ ಮಕರ ಕುಂಡಲವಾನ್ ಕಿರೀಟೀ
ಹಾರೀ ಹಿರಣ್ಮಯವಪುರ್ಧೃತಶಂಖಚಕ್ರಃ||



ಚರ್ಮ ಚಕ್ಷುಸ್ಸಿಗೆ ಕಾಣುತ್ತಿರುವ ಬೆಳಕಿನ ಗೋಳವನ್ನು ಆಕಾಶದಲ್ಲಿ ಕಾಣುತ್ತಿದ್ದರೂ, ಅದನ್ನು ಪ್ರತೀಕವನ್ನಾಗಿ ಮಾಡಿಕೊಂಡು ಆ ಗೋಳದೊಳಗೆ ಅಂತೆಯೇ ಸರ್ವ ಭೂತಗಳಲ್ಲಿಯೂ ಬೆಳಗುತ್ತಿರುವ ಚಿನ್ಮಯನಾದ ಜ್ಯೋತಿರ್ನಾರಾಯಣನನ್ನು ಭಾವಿಸುತ್ತಾ ಉಪಾಸನೆ ಮಾಡುವುದೇ ಇದರ ಗುರಿ. ಯಜ್ಞ ಕರ್ಮಗಳಲ್ಲಿ  ಹೊರಗಿನ  ಕುಂಡದಲ್ಲಿ ಅಗ್ನಿಯನ್ನು ಪ್ರಜ್ವಲಗೊಳಿಸಿ ಹೋಮ ಮಾಡುವ ಯಾಜ್ಞಿಕರೂ ಯೋಗ ವಿಧಾನದಿಂದ ಆತ್ಮಾಗ್ನಿಯನ್ನೇ ಆವಾಹನೆ ಮಾಡಿಕೊಂಡು, ಯಜ್ಞಕರ್ಮವನ್ನು ಮುಗಿಸಿ ಕೊನೆಗೆ ತಮ್ಮ ಆತ್ಮದಲ್ಲೇ ಉಪಸಂಹಾರ ಮಾಡಿಕೊಳ್ಳುವ ಆಚರಣೆಯ ಹಿಂಬದಿಯಲ್ಲಿ ಅಡಗಿರುವ ರಹಸ್ಯವೂ ಇದೇ ಆಗಿದೆ. ಪ್ರಣವ ಯೋಗವನ್ನು ಅವಲಂಬಿಸಿ ಯೋಗಿಗಳು ಆತ್ಮ ಜ್ಯೋತಿಯನ್ನು ಸಾಕ್ಷಾತ್ಕಾರ ಮಾಡಿಕೊಂಡು  ಕೃತ ಕೃತ್ಯರಾಗುತ್ತಾರೆ. ತಾಯಿಯ ಗರ್ಭದಲ್ಲಿದ್ದಾಗ ಎಂಟು-ಒಂಭತ್ತನೆಯ ತಿಂಗಳಿನಲ್ಲಿ ಶಿಶುವಿಗೆ ಆತ್ಮ ಜ್ಯೋತಿಯ ದರ್ಶನ ಉಂಟಾಗುತ್ತದೆಯೆಂದು ಉಪನಿಷತ್ತುಗಳು ತಿಳಿಸುತ್ತವೆ. ವೈಷ್ಣವೀಮಾಯೆಗೆ ಸಿಕ್ಕಿ ಭೂಪತನ ಹೊಂದಿದ ಶಿಶುವಿಗೆ ಪ್ರಕೃತಿಯ ಪರದೆ ಆ ಜ್ಯೋತಿಯನ್ನು ಮರೆಮಾಡುತ್ತದೆ.

ಇಂದ್ರಿಯ ಕ್ಷೇತ್ರದ ಕಡೆಗೆ ಸೆಳೆತವಿದ್ದರೂ, ಮತ್ತೆ ಆ ಜ್ಯೋತಿಯ ಸ್ಮರಣೆ ಮೂಡಿಬಂದು ಶಿಶುವಿಗೆ ತನ್ನ ಸ್ವರೂಪದ ಮರೆವು ಉಂಟಾಗದಿರಲಿ ಎಂಬ ಉದ್ದೇಶದಿಂದ ಸೂತಿಕಾ ಗೃಹದಲ್ಲಿ ತ್ರಿಕೋಣಾಕಾರವಾದ ಹಣತೆಯಲ್ಲಿ ಅಂಗುಷ್ಠಮಾತ್ರ ಶಿಖೆಯ ಆಕಾರವುಳ್ಳ ದೀಪವನ್ನು ಬೆಳೆಗಿಸುವುದು ಭಾರತೀಯರ ಸನಾತನ ಸಂಪ್ರದಾಯವಾಗಿದೆ. ಇಂದಿನ ನಾಗರಿಕತೆಯ ವಾತಾವರಣದಲ್ಲಿ ಈ ಸಂಪ್ರದಾಯ ಮರೆಯಾಗುತ್ತಿರುವುದಕ್ಕೆ ಭಾರತೀಯರಿಗೆ ತಮ್ಮ ಉತ್ತಮ ಧರ್ಮ ಸಂಪ್ರದಾಯಗಳ ತಾತ್ತ್ವಿಕ ರಹಸ್ಯಾರ್ಥಗಳ ಬಗ್ಗೆ ಉಂಟಾಗಿರುವ ಅಜ್ಞಾನವೇ ಕಾರಣ.  "ಪ್ರಾತಃ ಸ್ಮರಾಮಿ ಹೃದಿ ಸಂಸ್ಫುರದಾತ್ಮ ತತ್ತ್ವಂ" ಎಂದು ಮುಂತಾದಾಗಿ ಬೆಳಿಗ್ಗೆ ಎದ್ದ ಕೂಡಲೇ ಆತ್ಮ ಜ್ಯೋತಿಯ ಧ್ಯಾನವನ್ನು ಮಾಡುವ ನಮ್ಮ ಪ್ರಾಚೀನ ಸಂಪ್ರದಾಯ 

ಪರಮಪಾವನವಾದುದು. ವೇದೋಪನಿಷತ್ತುಗಳೂ, ಸಕಲ ಶಾಸ್ತ್ರಗಳೂ ಆತ್ಮ ಜ್ಯೋತಿಯ ಸಾಕ್ಷಾತ್ಕಾರವೇ ಜೀವನದ ಗುರಿ ಎಂದು ಬೋಧಿಸುತ್ತವೆ. ಆತ್ಮದರ್ಶಿಯಾದ ಸದ್ಗುರುವು ಶಿಷ್ಯನಲ್ಲಿ ಜ್ಞಾನ ಪ್ರಬೋಧವನ್ನುಂಟುಮಾಡಿ ಆತ್ಮ ಜ್ಯೋತಿಯ ಸಾಕ್ಷಾತ್ಕಾರವನ್ನು ಮಾಡಿಸುತ್ತಾನೆ. ನಮ್ಮ ನಾಡಿನಲ್ಲಿ ಸತ್ಸಂಪ್ರದಾಯವನ್ನು ಬೆಳೆಸಿ ಜ್ಞಾನದ ಬೆಳಕನ್ನು ಬೆಳಗಿಸಿದ ಮಹನೀಯಚರಿತರಾದ ಶ್ರೀಶಂಕರಭಗವತ್ಪಾದರು ಆತ್ಮ ಜ್ಯೋತಿಯನ್ನು ಬಹಳ ಸರಳವೂ, ಸುಲಭವೂ ಆದ ಶೈಲಿಯಿಂದ ಬೋಧಿಸವಂತಹ ಒಂದು ಸುಂದರ ಪದ್ಯವನ್ನು ರಚಿಸಿದ್ದಾರೆ. ಈ ಪದ್ಯ "ಏಕ ಶ್ಲೋಕೀ" ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ. ಈ ಪದ್ಯದಲ್ಲಿ ಶಾಸ್ತ್ರಗಳ ಕಠಿಣ ಶೈಲಿಯಿಲ್ಲ. ಕಷ್ಟವಾದ ಪಾರಿಭಾಷಿಕ ಪದಗಳಿಂದ ಬೋಧನೆಯು ಜಟಿಲವಾಗಿಲ್ಲ. ಅತ್ಯಂತ ಸಹಜವೂ, ಸುಂದರವೂ, ಸರಳವೂ ಆದ ಭಾಷೆ ಮತ್ತು ಶೈಲಿಯಿಂದ ಅತ್ಯಂತ ಗಹನವಾದ ತತ್ತ್ವವನ್ನು ಸಾಮಾನ್ಯಬುದ್ಧಿಗೆ ಬೋಧವಾಗುವಂತೆ ನಿರೂಪಿಸಿದ್ದಾರೆ. ಈ ಪದ್ಯ ಈ ರೀತಿ ಇದೆ.

ಕಿಂಜ್ಯೋತಿಸ್ತವ ಭಾನುಮಾನಹನಿಮೇ ರಾತ್ರೌಪ್ರದೀಪಾದಿಕಂ
ಸ್ಯಾದೇವಂ ರವಿದೀಪದರ್ಶನವಿಧೌ ಕಿಂ ಜ್ಯೋತಿ ರಾಖ್ಯಾಹಿ ಮೇ|
ಚಕ್ಷುಸ್ತಸ್ಯ ನಿಮೀಲನಾದಿ ಸಮಯೇ ಕಿಂಧೀರ್ಧಿಯೋ ದರ್ಶನೇ
ಕಿಂ  ತತ್ರಾಹ ಮತೋಭವಾನ್ ಪರಮಕಂ ಜ್ಯೋತಿಸ್ತದಸ್ಮಿ ಪ್ರಭೋ||

ಉತ್ತಮ ಸಂಸ್ಕಾರ ಸಂಪನ್ನನಾಗಿ ಸರಳ ಭಾವದಿಂದ ತತ್ತ್ವವನ್ನರಿಯುವ ಹಂಬಲವುಳ್ಳ ಶಿಷ್ಯನನ್ನು ಕುರಿತು ಅತ್ಯಂತ ವಾತ್ಸಲ್ಯದಿಂದ ಗುರುವು ತತ್ತ್ವೋಪದೇಶ ಮಾಡುವ ವಿಧಾನ ಇಲ್ಲಿ ಕಂಡುಬರುತ್ತದೆ. ಸ್ವಯಂ ತತ್ತ್ವದರ್ಶಿಯಾದ ಆಚಾರ್ಯನು ಶಿಷ್ಯನನ್ನು ಪ್ರಶ್ನೆ ಮಾಡುತ್ತಾನೆ :-
ಕಿಂ ಜ್ಯೋತಿಸ್ತವ? ಎಂದರೆ ನಿನಗೆ ಜ್ಯೋತಿ ಯಾವುದು?
ಬೆಳಕಿಲ್ಲದೆ ವಿಷಯ ಪ್ರಕಾಶವಾಗುವುದಿಲ್ಲ. ಇದು ಎಲ್ಲರಿಗೂ ಗೊತ್ತಿರುವ ವಿಷಯ. ಮುಂದೆ ಆತ್ಮಜ್ಯೋತಿಯ ಕಡೆಗೆ  ಶಿಷ್ಯನ ಮನಸ್ಸನ್ನು  ಹರಿಸುವುದಕ್ಕಾಗಿ ಪ್ರಾರಂಭದಲ್ಲಿ ಗುರುವು ಈ ಸರಳ ಪ್ರಶ್ನೆಯನ್ನು ಹಾಕುತ್ತಾನೆ. ವಸ್ತು ಪ್ರಕಾಶವನ್ನುಂಟುಮಾಡುವ ಬೆಳಕು ಯಾವುದು? ಎಂಬ ಅರ್ಥವನ್ನು ಗ್ರಹಿಸಿದ ಶಿಷ್ಯನು ಉತ್ತರ ಕೊಡುತ್ತಾನೆ:-
"ಭಾನುಮಾನಹನಿಮೇ ರಾತ್ರೌಪ್ರದೀಪಾದಿಕಂ" ಎಂದರೆ ನನಗೆ ಹಗಲಿನಲ್ಲಿ ಸೂರ್ಯನೇ ಬೆಳಕು. ರಾತ್ರಿಯಲ್ಲಿ ದೀಪ ಮೊದಲಾದುದು. ಎಂದರೆ ಹಗಲಿನಲ್ಲಿ ಸೂರ್ಯನ ಬೆಳಕಿನ ಸಹಾಯದಿಂದಲೂ, ರಾತ್ರಿಯಲ್ಲಿ ದೀಪ ಮೊದಲಾದವುಗಳ ಬೆಳಕಿನ ಸಹಾಯದಿಂದಲೂ ನಾನು ವಸ್ತುಗಳನ್ನು ನೋಡಿ ತಿಳಯುತ್ತೇನೆ, ಎಂದ ಶಿಷ್ಯನ ಉತ್ತರದ ಅಭಿಪ್ರಾಯ. ಆಗ ಗುರು ಮತ್ತೆ ಪ್ರಶ್ನೆ ಮಾಡುತ್ತಾನೆ:- "ಸ್ಯಾದೇವಂ ರವಿದೀಪದರ್ಶನವಿಧೌ ಕಿಂ ಜ್ಯೋತಿ ರಖ್ಯಾಹಿಮೇ". ಅಂದರೆ, ಹೀಗಿರಬಹುದು, ಆದರೆ ಸೂರ್ಯ, ದೀಪ ಮುಂತಾದವುಗಳನ್ನೂ ನೋಡಬೇಕಾದರೆ ಬೆಳಕು ಯಾವುದು ಎಂಬುದನ್ನು ನನಗೆ ಹೇಳು. ಈ ಪ್ರಶ್ನೆಗೂ ಶಿಷ್ಯ ಉತ್ತರ ಹೇಳಿತ್ತಾನೆ:- "ಚಕ್ಷು:" ಅಂದರೆ ಕಣ್ಣು. ಕಣ್ಣಿನ ಸಹಾಯದಿಂದ ನೋಡಿ ವಸ್ತುಗಳನ್ನು ತಿಳಿಯುತ್ತೇನೆ, ಎಂದು ಶಿಷ್ಯನ ಉತ್ತರದ ಅಭಿಪ್ರಾಯ. ಆಗ ಗುರು ಮತ್ತೆ ಪ್ರಶ್ನೆ ಮಾಡುತ್ತಾನೆ.

" ತಸ್ಯ ನಿಮೀಲನಾದಿ ಸಮಯೇ ಕಿಂ?" ಎಂದರೆ, ಕಣ್ಣು ಮುಚ್ಚಿದಾಗ, ನಿದ್ರೆ ಮಾಡುವಾಗ- ಮುಂತಾದ ಸಮಯಗಳಲ್ಲಿ ಯಾವ ಬೆಳಕು ಇರುತ್ತದೆ? ಇದಕ್ಕೆ ಶಿಷ್ಯನು ಉತ್ತರಿಸುತ್ತಾನೆ:- "ಧೀಃ" ಎಂದರೆ ಬುದ್ಧಿ. ಬುದ್ಧಿಯ ಸಹಾಯದಿಂದ ತಾನು ವಸ್ತು ಜ್ಞಾನವನ್ನು ಪಡೆಯುತ್ತೇನೆ ಎಂದು ಅಭಿಪ್ರಾಯ. ಗುರು ಮತ್ತೆ ಕೇಳುತ್ತಾನೆ:-  "ಧಿಯೋ ದರ್ಶನೇ ಕಿಂ?" ಎಂದರೆ ಆ ಬುದ್ಧಿಯನ್ನೂ ತಿಳಿಯಬೇಕಾದರೆ ಬೆಳಕು ಯಾವುದು? ಅಲ್ಲಿಗೆ ಶಿಷ್ಯನ ಬುದ್ಧಿ ಸಾಮರ್ಥ್ಯ ನಿಂತಿತು. ಆಗ ವಿಚಾರ ಮಾಡಿ ಶಿಷ್ಯನು ಹೇಳುತ್ತಾನೆ:-"ತತ್ರಾಹಂ" ಎಂದರೆ ಅಲ್ಲಿ ನಾನೇ ತಿಳಿಯುತ್ತೇನೆ ಎಂದು ಅಭಿಪ್ರಾಯ.  ಆತ್ಮನ ನೇರಕ್ಕೆ ಮುಟ್ಟಿದ ಶಿಷ್ಯನನ್ನು ಕುರಿತು ಈಗ ಗುರು ಹೇಳುತ್ತಾನೆ. "ಅತೋ ಭವಾನ್ ಪರಮಕಂ ಜ್ಯೋತಿಃ" ಎಂದರೆ, ಆದ್ದರಿಂದ ನೀನೇ ಪರಮಜ್ಯೋತಿ ಎಂದರ್ಥ. ಈ ಪರಾತ್ಪರ ಜ್ಯೋತಿಯನ್ನೇ ಕುರಿತು ಉಪನಿಷತ್ತುಗಳು "ಜ್ಯೋತಿಷಾಮಪಿ ತಜ್ಜ್ಯೋತಿಃ ತಮಸಃ ಪರಮುಚ್ಯತೇ" ಎಂದು ಕೊಂಡಾಡುತ್ತವೆ. ಜ್ಯೋತಿಗಳಿಗೂ ಜ್ಯೋತಿಯಾಗಿ ಕತ್ತಲೆಯ ಆಚೆ ಇರುವುದೇ ಈ ಪರಮಾತ್ಮ ತತ್ತ್ವ. ಈ ಹಂತದಲ್ಲಿ ಶಿಷ್ಯನಿಗೆ ಸತ್ಯದ ಅರಿವುಂಟಾಯಿತು. ಆತ್ಮ ಪ್ರಬೋಧವಾಯಿತು.

" ಯಸ್ಮನ್ ವಿಜ್ಞಾತೇ ಸರ್ವಂ ವಿಜ್ಞಾತಂ ಭವತಿ" ಎಂಬ ಬ್ರಾಹ್ಮೀಸ್ಥಿತಿ ಉಂಟಾಯಿತು. ಕೃತ ಕೃತ್ಯನಾದ ಶಿಷ್ಯನು ಆನಂದ ತುಂದಿಲನಾಗಿ ವಿನಯದಿಂದ ಉತ್ತರಿಸುತ್ತಾನೆ.
 "ತದಸ್ಮಿ ಪ್ರಭೋ!" ಎಂದರೆ "ಸ್ವಾಮಿ! ನಾನು ಆ ಜ್ಯೋತಿಯೇ ಆಗಿದ್ದೇನೆ". ಆತ್ಮ ದರ್ಶಿಯೂ, ಉಪಾಯ ಕುಶಲನೂ ಆದ ಗುರುವಿನ ಅತ್ಯಂತ ಸರಳವಾದ ಈ ಉಪದೇಶ ವಿಧಾನದಿಂದ ಶಿಷ್ಯನ ಅಜ್ಞಾನವೆಲ್ಲ ತೊಲಗಿ ಜ್ಞಾನ ದೀಪವು ಬೆಳಗಿ ಆತ್ಮದರ್ಶನವುಂಟಾಯಿತು.

" ತೇಷಾಮೇವಾನುಕಂಪಾರ್ಥ ಮಹಮಜ್ಞಾನಜಂ ತಮಃ|
ನಾಶಯಾಮ್ಯಾತ್ಮ ಭಾವಸ್ಥೋ ಜ್ಞಾನದೀಪೇನ ಭಾಸ್ವತಾ||

ಎಂಬ ಭಗವದ್ವಾಣಿಯ ರಹಸ್ಯವೂ ಇದೇ ಆಗಿದೆ. ಈ ಅಧ್ಯಾತ್ಮ ದೀಪಮಾಲೆಯು ಭಾರತ ನಾಡಿನಲ್ಲೆಲ್ಲಾ ಬೆಳಗಲಿ.

ಸೂಚನೆ : ಈ ಲೇಖನವು ಶ್ರೀಮಂದಿರದಿಂದ ಪ್ರಕಾಶಿತವಾಗುವ ಆರ್ಯಸಂಸ್ಕೃತಿ ಮಾಸ ಪತ್ರಿಕೆಯ ಸಂಪುಟ: ೦೩ ಸಂಚಿಕೆ: ೪, ೧೯೮೧ :ಫೆಬ್ರುವರಿ ತಿಂಗಳಲ್ಲಿ  ಪ್ರಕಟವಾಗಿದೆ.