Sunday, March 31, 2019

Wealth – Desirable or Deplorable? (Artha-Anartha)

Article in Kannada by: Rajagopalan K. S
English Rendering by: Hemalatha B. C

The word “Artha” in Sanskrit is used in multiple meanings. The “Artha” used in the sense of “money”, an instrument for deriving worldly pleasures, is one among several meanings.

There is a popular Sanskrit saying: “Dhanamulam idam jagat” (money is the root of all things in this world). Witnessing the all-pervading influence of wealthy people, there are innumerable quotations which extol the glory of wealth! On the other hand, many saints and philosophers denounce money, in the light of the agony earned while chasing money. There are many subhashitas (proverbs) that condemn money too. A common man is often confounded by the contradictory sayings on money, a praise in one breath and a ridicule in the other! Hence, there is a need for some analysis about the significance or otherwise of money.

Sri Shankara Bhagavtpaada questions with concern in his Bhaja-Govinda stotra: ”Why thou worry so much about money?” (kaa te kaantaa dhanagata chintaa”) In the same verse, he cautions: “Be sure that money causes calamity. Beyond a shadow of doubt, money does not bring even an iota of happiness. A wealthy man apprehends danger even from his own son on account of money. This is universally true.” Having cautioned people who are after money, Acharya Sri Shankara also makes his stand clear about money. Considering just these examples, one may get the impression that Sri Shankara Bhagavatpada was wholly against money.




Sriranga Mahaguru clarifies and elaborates thus: “Sri Shankara did not exhibit apathy towards worldly life, or exhort us to reject it. Lead your life in the world. Also, there is no harm if you are engaged in earning your livelihood”. (Mudha jahihi dhanaagama trshnaam, kuru sadbuddhim manasi vitrshnaam| Yallabhase nija-karmopaattam vittam tena vinodaya chittam ||) Wealth is needed in life! But one should not crave for money. The thirst for money is unquenchable just as the thirst a dying man experiences for water! The right attitude is: “I am thirsty; I drink a cup of water; my thirst is now quenched”. Develop a similar attitude towards money. Be content and happy with whatever you earn from the job you have chosen for your livelihood. Thus Sri Shankara does not shun worldly life. His message is only to have a restraint on mad chase for wealth.

None of our ancient sages has advocated that a man should give away all the wealth
in charity! Instead they advise him to allocate some amount for his family and for those that depend on him, some for the society he lives in, some for divine work, and spend it accordingly instead of utilizing the entire earnings selfishly. There are several instances witnessed by the family members and disciples of Sriranga Mahaguru who spent generously, not forgetting even the animals around.Here is a glimpse of such an incident.

“Once Mahaguru had been to Srirangapattana, the holy place on the banks of Cauvery along with his kith and kin. He gave the food to the fish in the river first and only later, proceeded to consume his food” (cited from an article published in Yogeshwara Shriranga p 319).

Instead of sneering at the attitude of earning money, Sriranga Mahaguru encourages earning money for a noble cause. Here is a beautiful quote from Shriranga Vachanaamruta (Vol I - p 59): “If Artha (money), without becoming anartha (destructive), can lead to Paramaartha (ultimate goal) thus becoming saarthaka (meaningful), then we shall endeavour to earn it every moment”. A man’s life is fittingly fulfilled if the money earned through rightful means is expended judiciously in the above manner.

Note: The Kannada version of this article can be viewed at AYVM blogs

    ದೇವರು ಕಲ್ಪನೆಯೇ? (Devaru kalpaneye?)

    ಲೇಖಕರು: ಸುಬ್ರಹ್ಮಣ್ಯ ಸೋಮಯಾಜಿ


    ಶ್ರೀರಂಗ ಮಹಾಗುರುಗಳು ಒಂದು ಕತೆ ಹೇಳುತ್ತಿದ್ದರು -ಒಂದು ಗ್ರಾಮ. ಅಲ್ಲಿ ಅನೇಕರಿಗೆ ಕಾಲರಾ ರೋಗ ಬಂದಿದೆ. ಅವರನ್ನು ಪರೀಕ್ಷಿಸಲು ವೈದ್ಯರೊಬ್ಬರು ಬರುತ್ತಾರೆ. ಎಲ್ಲರನ್ನೂ ಪರೀಕ್ಷಿಸಿದ ನಂತರದಲ್ಲಿ ಆ ಊರಿನ ಕೆರೆಯ ನೀರನ್ನು ಪರೀಕ್ಷಿಸುತ್ತಾರೆ. ನಂತರ - “ಸ್ವಲ್ಪಕಾಲ ಈ ಕೆರೆಯ ನೀರನ್ನು ಕುಡಿಯಬೇಡಿ.ಇದರಲ್ಲಿ ಬ್ಯಾಕ್ಟೀರಿಯ ಇವೆ”. ಎನ್ನುತ್ತಾರೆ. ಹಳ್ಳಿಯ ಜನರು ವೈದ್ಯರನ್ನು ಅಪಹಾಸ್ಯ ಮಾಡುತ್ತಾರೆ -“ಕಳೆದ ಎಷ್ಟೋ ವರ್ಷಗಳಿಂದ ಈ ಕೆರೆಯ ನೀರನ್ನು ಕುಡಿಯುತ್ತಿದ್ದೇವೆ. ನೀವೆಂದ ಬ್ಯಾಕ್ಟೀರಿಯ ಇದ್ದಿದ್ದರೆ ನಮಗೆ ಕಾಣಬೇಕಿತ್ತಲ್ಲ? ಹೋಗಲಿ, ನಾವು ಆ ನೀರನ್ನು ಕುಡಿಯುವಾಗ ಗಂಟಲಿಗಾದರೂ ಸಿಕ್ಕಿಹಾಕಿಕೊಳ್ಳಬೇಕಿತ್ತಲ್ಲ? ನೀವು ಹೇಳುತ್ತಿರುವುದು ಸುಳ್ಳು.” ಎಂದರು. ವೈದ್ಯನು ಆ ಕೆರೆಯ ನೀರನ್ನು ಸಂಗ್ರಹಿಸಿ, ಕೆಲವು ಹಳ್ಳಿಗರನ್ನು  ಪ್ರಯೋಗಶಾಲೆಗೆ ಕರೆದೊಯ್ದನು.  ಸೂಕ್ಷ್ಮದರ್ಶಕ ಯಂತ್ರದಲ್ಲಿ ಲೆನ್ಸ್ ಹಾಕಿ ಆ ಲೋಟದ ನೀರನ್ನು ಅದರ ಮೂಲಕ ನೋಡುವಂತೆ ಹಳ್ಳಿಗರಿಗೆ ಹೇಳುತ್ತಾನೆ. ಆಗ ಅವರ ಆಶ್ಚರ್ಯಕ್ಕೆ ಪಾರವಿಲ್ಲ. ಸಾವಿರ ಸಾವಿರ ಸಂಖ್ಯೆಯಲ್ಲಿ ಬ್ಯಾಕ್ಟೀರಿಯಾಗಳು ನರ್ತಿಸುತ್ತಿವೆ! ಹಳ್ಳಿಗರಿಗೆ ನಂಬದೇ ಬೇರೆ ದಾರಿ ಇರಲಿಲ್ಲ.
    ಶ್ರೀರಂಗಮಹಾಗುರುಗಳು ಹೇಳುತ್ತಾರೆ - ಹಳ್ಳಿಯ ಜನರಿಗೆ ಬರಿಗಣ್ಣಿಗೆ ಬ್ಯಾಕ್ಟೀರಿಯಾ ಕಾಣಲಿಲ್ಲ. ಎಂದಮೇಲೆ ಬ್ಯಾಕ್ಟೀರಿಯಾ ಇಲ್ಲವೆಂದಾಗುವುದೇ? ಒಂದು ಸಣ್ಣ ಬ್ಯಾಕ್ಟೀರಿಯಾ ನೋಡಲು ನಿಮಗೆ ಈಗಾಗಲೇ ಅದನ್ನು ನೋಡಿರುವ ವೈದ್ಯನೊಬ್ಬ ಬೇಕು. ಅವನಿಗೆ ನಿಮಗೂ ತೋರಿಸಬೇಕೆಂಬ ಅಪೇಕ್ಷೆ ಇರಬೇಕು. ನೀವು ಅವನೊಡನೆ ಪ್ರಯೋಗಶಾಲೆಗೆ ಹೋಗಲು ಸಿದ್ಧರಿರಬೇಕು, ಅವನ ಹತ್ತಿರ ಸೂಕ್ಷ್ಮದರ್ಶಕ ಯಂತ್ರವಿರಬೇಕು. ಹೇಗೆ ಅದರಲ್ಲಿ ಲೆನ್ಸ್ ಹಾಕಿ ನೋಡಬೇಕು ಎಂದು ಅವನು ತೋರಿಸಿಕೊಡಬೇಕು. ನಿಮಗೂ ನೋಡಲು ಬರಬೇಕು. ಇಷ್ಟು ನಿಯಮಗಳಿಗೆ ಒಳಪಟ್ಟರೆ ನೀವೂ ಬ್ಯಾಕ್ಟೀರಿಯಾ ನೋಡಬಹುದು. ಒಂದು ಸಣ್ಣ ಜೀವಿಯನ್ನು ನೋಡಲು ಇಷ್ಟೊಂದು ಪೂರ್ವಸಿದ್ಧತೆ ಬೇಕು.

    ಎಂದಮೇಲೆ ಯಾವ ಪುರ್ವಸಿದ್ಧತೆಯೂ ಇಲ್ಲದೇ ದೇವರು  ಬರಿಗಣ್ಣಿಗೆ ಕಾಣುತ್ತಿಲ್ಲ. ಹಾಗಾದರೆ ಅವನು ಇರುವುದೇ ಸುಳ್ಳು ಎನ್ನುವ ಮಾತು ಎಷ್ಟರಮಟ್ಟಿಗೆ ಸರಿ? ದೇವರನ್ನು ನೋಡಬೇಕಾದರೆ ಈಗಾಗಲೇ ಅವನ ಅನುಭವವನ್ನು ಪಡೆದ ಗುರು ಬೇಕು. ಅವನಿಗೆ ನಿಮಗೆ ತೋರಿಸುವ ಅಪೇಕ್ಷೆ ಉಂಟಾಗಬೇಕು. ನಿಮಗೆ ಅವನಲ್ಲಿ ನಂಬಿಕೆ ಇರಬೇಕು. ಅವನು ಹೇಳಿದ ನೀತಿ ನಿಬಂಧನೆಗಳಿಗೆ ನೀವು ಒಳಪಡಬೇಕು. ಸೂಕ್ಷ್ಮಗ್ರಾಹಿಗಳಾಗಬೇಕು. ನಿಮ್ಮ ಶರೀರವೆಂಬ ಪ್ರಯೋಗಶಾಲೆಯಲ್ಲಿ ಅವನ ಮಾರ್ಗದರ್ಶನದಲ್ಲಿ ಪ್ರಯೋಗಕ್ಕಿಳಿಯಬೇಕು. ನಿಮ್ಮ ಮನಸ್ಸು ಬುದ್ಧಿ ಇಂದ್ರಿಯಗಳನ್ನೆಲ್ಲ ಸಂಯಮಮಾಡಲು ಸಿದ್ಧರಿರಬೇಕು. ಇದ್ಯಾವುದನ್ನೂ ಮಾಡದೇ ದೇವರ ಅಸ್ತಿತ್ವವನ್ನು ಅಲ್ಲಗಳೆಯುವುದು ಹಿಂದೆ ತಿಳಿಸಿದಂತೆ ಗ್ರಾಮಸ್ಥರ ಅವೈಜ್ಞಾನಿಕವಾದ ನಡೆಯಂತೆ ನಮ್ಮದೂ ಆಗುವುದಲ್ಲವೇ?
    ಯಾರೋ ಮಹನೀಯರು ಹೇಳಿದರಂತೆ -ದೇವರು ಇರುವುದಾದಲ್ಲಿ ನನ್ನ ಮುಂದೆ ಬರಲಿ ಎಂದು. ಮಳೆ ಎನ್ನುವುದು ಇರುವುದಾದರೆ ಈಗ ನನ್ನ ಮುಂದೆ ಸುರಿಯಲಿ ಎಂದರೆ ಏನೆನ್ನಬೇಕು? ಮಳೆ ಬೀಳಲು ನಿಸರ್ಗದಲ್ಲಿ ಒಂದು ಸ್ಥಿತ್ಯಂತರ ಉಂಟಾಗಬೇಕಲ್ಲವೇ? ಸೂರ್ಯ ಇರುವುದಾದರೆ ಈ ಕ್ಷಣದಲ್ಲಿ ನನ್ನ ಮುಂದೆ ಪ್ರಕಾಶಿಸಲಿ ಎಂದು ೧೦ ಗಂಟೆಯ ರಾತ್ರಿಯಲ್ಲಿ ಘೋಷಿಸಿದರೆ? ಸೂರ್ಯೋದಯವಾಗುವವರೆಗೂ ಕಾಯಬೇಕಲ್ಲವೇ? ಹಾಗೆಯೇ ದೇವರು ಎನ್ನುವ ಶಕ್ತಿ ತಾನೇ ತಾನಾಗಿದೆ. ಅದರ ಇರುವಿಕೆ ನಾವು ನೀಡುವ  certificate  ಮೇಲೆ ನಿಂತಿಲ್ಲ. ಅದು ಎಂದೆಂದಿಗೂ ಇರುವ ವಸ್ತುಸ್ಥಿತಿ. ಅದನ್ನು ಕಾಣುವ, ಅನುಭವಿಸುವ ಪ್ರಯತ್ನವನ್ನುಅನುಭವಿಗಳ ಮಾರ್ಗದರ್ಶನದಲ್ಲಿ ಮಾಡುವಂತಾದರೆ ಅದರ ಸಾಕ್ಷಾತ್ಕಾರದ ಸುಖ, ನೆಮ್ಮದಿ ಎಲ್ಲವೂ. ಆಗ ಪರಿಷ್ಕೃತವಾದ ಜೀವನ. ಅದಿಲ್ಲದೇ ಬರಿಯ ಇಂದ್ರಿಯ ಗ್ರಾಮಗಳಷ್ಟರಲ್ಲೇ ಓಡಾಡುತ್ತಾ, ಇಂದ್ರಿಯಗಳಿಗೂ ಚೈತನ್ಯವನ್ನೆರೆಯುತ್ತಾ ಒಳಗೆ ಬೆಳಗುತ್ತಿರುವ ಪರಮಾನಂದದ ಸ್ರೋತಸ್ಸಿನೆಡೆಗೆ ಲಕ್ಷ್ಯವಿಲ್ಲದಿದ್ದಾಗ ಅಪರಿಷ್ಕೃತ ಜೀವನ. ಬರಿಯ ವೃಕ್ಷವೇ ಸತ್ಯ, ಕಣ್ಣಿಗೆ ಕಾಣದ ಬೇರು, ಬೀಜ ಎಲ್ಲವೂ ಕಲ್ಪನೆ ಎಂದರೆ ವ್ಯವಸಾಯದ ಪರಿಚಯವಿಲ್ಲವೆನ್ನುತ್ತೇವಲ್ಲವೇ? ಹಾಗೆಯೇ ಈ ಜೀವನ ವೃಕ್ಷದ ಹಿಂಬದಿಯಲ್ಲಿ ಬೆಳಗುತ್ತಿರುವ ಮಹಾಚೈತನ್ಯವೇ, ಜೀವ ರಸವೇ ದೇವರು ಎಂಬುದು ಈ ದೇಶದ ಮಹರ್ಷಿಗಳ ಅನುಭವದ ಮಾತು.

    ಸೂಚನೆ: ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿ ವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.

    दीपक - परञ्ज्योति की प्रतिनिधि (deepak - paranjyoti kee pratinidhi)

    मूल लेखन :  तरोड़ी सुरेश 
    हिन्दी  अनुवाद  : पूजा धवन


    यह विचार सर्वविदित है कि अन्धकार का विनाश दीपक के प्रज्जवलन से होता है ।

    उल्लुओं इत्यादियों के अतिरिक्त समस्त जीवों को प्रकाश प्रिय है । समस्त विश्व में कहीं और भारत में जो दीपक को महत्त्व दिया है ऐसा महत्त्व नहीं दिखाई देता है । भारत शब्द का अर्थ ही - ’भा’ माने प्रकाश और इसमें जो ’रत’ है वही भारत है ।

    प्रतिकर्म भारत में दीप प्रज्जवलन से ही प्रारम्भ होता है । और बिना दीपक समस्त कर्म अशुभ माने जाते हैं । हम जो प्रज्जवलन करते हैं वह दीपक परमात्मा की प्रतिनिधि है क्योंकि परमात्मा ही समस्त ज्योतियों की मूल ज्योति है ।

    "सर्वेषां ज्योतिषां ज्योतिः"तमेव भान्तमनुभाति सर्वं तस्य भासा सर्वमिदं विभाति

    उसके ज्वलन से ही समस्त भासित होता है । उसकी जो ज्योति है उसी से समस्त वस्तुओं का विभान्त होता है । और उस परमात्मा को ’ज्योतिरिव अधूमकः’ कहते हैं - इसका अर्थ है ’बिना धुआं प्रज्जवलन होने वाली ज्योति’ । ’दीपवद्वेदसारम्’ - ’ह्रदय कमल के बीच या मध्यस्थल में निरन्तर जाज्वल्यमान वेदसार आत्मज्योति है’ - ऐसा समस्त वेदादि  शास्त्रों में वर्णित है । ऐसी आत्मज्योति अन्दर की ज्योति यदि अन्तर्निधि है तब बाहर जो दीपक प्रज्जवलित है वह इसी की प्रतिनिधि है । प्रतिनिधि का सामर्थ्य मूल निधि की ओर ले जाने में है । अर्थात प्रतिनिधि में निधि का लक्षण और धर्म अधिक प्रमाण में अन्तर्गत होना है ।

    जैसे परमात्मा नामक अन्तर्ज्योति अज्ञान नामक अन्धकार को दूर करता है वैसे ही बाहर का दीपक भी बाहर के अन्धकार को दूर करता है ।

    हमारे राष्ट्रकवि कालीदास शिवजी की तपस्या का वर्णन ऐसे करते हैं - ’जैसे बिना वायु की तीव्रता से दीपक निश्चल होता है वैसा ही उनका मन था’ । ऐसे ही मन के संयम से परमात्मा का दर्शन साध्य है । यही विचार योगशास्त्र में भी बारंबार उद्धघोषित है ।

     इस दीपक की और एक विशेषता यह है कि - जब एक दीपक से और एक दीपक को उज्जवलन करते हैं तो भी मूल ज्योति के मूल स्वरूप में कोई रूपान्तर नहीं होता है । यह भगव्द्धर्म का स्थिरता की प्रतिनिधि है |परमसुख का मूल स्रोत ही परमात्मा है वैसे ही दीपक भी मंगलकर है - यहां मंगल का अर्थ ही सुखदायक है अर्थात जो सुख देता है वही मंगल है । यह वचन ज्ञानियों के अनुभव स्रोत से निकला हुआ है । ऐसे ज्ञानियों के मार्गदर्शन में इस दीपक को यदी साधना का साधन बनाएंगे तो परमात्मानुभव का सुख स्वयं सिद्ध हो जाएगा । जैसे परमात्मा अज्ञान को दूर करके, जनम - मरण चक्र से जीवियों को पार करता है, उसी प्रकार दीपक भी ’तमसो मा ज्योतिर्गमय’ तपस्या का साधन बनकर  आत्मज्यॊती की ऒर ले जाते हुए जनन-मरण  चक्र से मुक्त कर्ता है । इसीलिए इस्का प्रशंसा किया गया है  कि ’मृत्युविनाशिनो दीपः’ - अर्थात केवल बाहर का नहीं ’मृत्यु को भी विनाश करने वाला’ दीपक बन जाता है । 



    जैसे भुगोल के नक्षके द्वारा हम इस धरती को अच्छे से समझ लेते हैं, वैसे बाहर का दीपक भी  जीवन का एक नक्षा है । इस दीपक में त्रिवर्ति है - अर्थात तीन बत्तियां हैं । यह त्रिवर्ति त्रिगुणात्मक (सत्व् - रजस - तम्) प्रकृति का प्रतिबिम्ब है । इसमें उपयुक्त तेल और घी को स्नेह भी कहते हैं । ’स्नेह’ का अर्थ ’चिपकना’ है - यहां स्नेह अर्थात घी और तेल भक्ति का प्रतीक है ।  इस दीप को धारण करने वाला दीपस्तम्भ हमारा ’मेरुदण्ड’ अर्थात् ’पीठ की प्रधान हड्डि’ जिसमें ही समस्त अध्यात्म सार है उसका प्रतीक है। योगशास्त्र भी इस मेरुदण्ड में प्रक्षिप्त अध्यात्म मार्ग और उसके अग्रभाग में स्थित सहस्रार चक्र में जाज्वल्यमान् कोटि सूर्य तेज प्रकाश परञ्ज्योति को भी मुक्तकण्ठ से वर्णन करता है । इसीलिये यह दीपक केवल परमात्मा की प्रतिनिधि नहीं है परन्तु हमारे जीवन के परमोदेश्य को समग्र रूप से प्रतिबिम्भित करता है । ऐसा दीपस्तम्भ हमारे ऋषि-मुनियों द्वारा जीवियों को अज्ञान से निवृत्कर ज्ञान मार्ग में प्रवृत करने का अत्यद्भुत परियोजना है ।

    पूजा में उपयुक्त विविध विन्यास और संख्या सहित मंगल आरती का विधान भी हमारे अन्दर स्थित योग जीवन के तत्त्वों को एवं चक्रों, पद्मो को, तथा विद्याओं को स्मरण दिलाने वाली विधि है ।

    यह समस्त रहस्यों को, महर्षियों के हृदय को समझने वाले गुरुजन द्वारा ही समझना चाहिये । जो इस दीपक के रहस्य को भेदकर उसके तत्त्व को हमारे हृदय में विदित कराये ऐसे परञ्ज्योति की प्रतिनिधि गुरु परञ्ज्योति को और उनकी प्रतिनिधि दीपक को एवं ज्योतिर्विधान रचिता महर्षियों को भी भूयो भूयो वन्दन है ॥

    Note: The Kannada version of this article can be viewed at AYVM blogs




























    Tuesday, March 26, 2019

    ಸೀಮಂತೋನ್ನಯನ-2 (Seemanthonnayana-2)

    ಲೇಖಕರು: ತಾರೋಡಿ ಸುರೇಶ


    ಸೀಮಂತ ಸಂಸ್ಕಾರದಲ್ಲಿ ಒಂದು ವಿಶೇಷವಾದ ಮಂತ್ರವನ್ನು ಉಚ್ಛರಿಸಬೇಕು ಮತ್ತು  ಆ ಮಂತ್ರವನ್ನು ವೀಣೆಯಲ್ಲಿ ಕೂಡ ನುಡಿಸಬೇಕು. “ಸೋಮ ಏವನೋ ರಾಜೇತ್ಯಾಹು ಬ್ರಾಹ್ಮಣೀಃ ಪ್ರಜಾಃ ವಿವೃತ್ತಚಕ್ರಾ ಆಸೀನಾಸ್ತೀರೇಣ(ಅಸೌ) ಕಾವೇರಿ ತವಃ”ಎಂಬ ಪ್ರಸಿದ್ಧವಾದ ಮಂತ್ರವದು. ಈ ಮಂತ್ರವನ್ನು ಗಾಂಧಾರಗ್ರಾಮದಲ್ಲಿ ವೀಣೆಯಲ್ಲಿ ವಾದನ ಮಾಡಬೇಕು ಮತ್ತು ಜಪಿಸಬೇಕು. ಎಲ್ಲರಿಗೂ ಗಾಂಧಾರಗ್ರಾಮದಲ್ಲಿ ಉಚ್ಛರಿಸುವ ಸಾಮರ್ಥ್ಯವಿರುವುದಿಲ್ಲ. ಹಾಗೆ ಗಾಂಧಾರಗ್ರಾಮದಲ್ಲಿ ನುಡಿಸಲು ವೀಣೆಯು  ಅತ್ಯುತ್ತಮವಾದ ಸಾಧನವಾಗಿದೆ. ಪರಮಭಾಗವತೋತ್ತಮನಾದ ಪ್ರಹ್ಲಾದ ಗರ್ಭದಲ್ಲಿದ್ದಾಗ ಸಾಕ್ಷಾತ್ ನಾರದರೇ ಈ ವೀಣಾವಾದನದ ಸಂಸ್ಕಾರವನ್ನು ಕೊಟ್ಟಿದ್ದರು. ಐತರೇಯ ಉಪನಿಷತ್ತಿನಲ್ಲಿ ಬರುವ ಒಂದು ಮಾತನ್ನು ಶ್ರೀರಂಗಮಹಾಗುರುಗಳು ಉಲ್ಲೇಖಿಸುತ್ತಿದ್ದರು. ‘ಒಂದು ದೈವೀವೀಣೆ ಉಂಟು. ಅದರ ಅನುಕೃತಿಯಾಗಿ ಮಾನುಷೀವೀಣೆಯನ್ನು ಮಾಡಿಕೊಳ್ಳಬೇಕು. ನಮ್ಮೊಳಗೇ ಇರುವ ದೈವೀವೀಣೆಯನ್ನು ಅನುಕರಿಸಬೇಕು’. ಜ್ಞಾನಸಂತಾನವು ಆಗಲಿ ಎಂಬ ಸಂಕಲ್ಪದೊಡನೆ ವೀಣಾವಾದನವನ್ನು ಮಾಡಿದರೆ, ಕರ್ಣಕುಹರದ ಮೂಲಕ ಬ್ರಾಹ್ಮೀಶಕ್ತಿಯು ಶಿಶುವನ್ನು ಪ್ರವೇಶಿಸಿ ಜನ್ಮತಃ ಜ್ಞಾನಿಯ ಹುಟ್ಟಿಗೆ ಕಾರಣವಾಗುತ್ತದೆ. ಇದು ಸಮಸ್ತ ವಿಧಿ-ವಿಧಾನಗಳನ್ನು ಋಷಿಗಳ ಕ್ರಮದಂತೆ ವೈಜ್ಞಾನಿಕವಾಗಿ ನಡೆಸಿದಾಗ ಮಾತ್ರ ಎನ್ನುವುದನ್ನು ಮರೆಯುವಂತಿಲ್ಲ. ಆತ್ಮ ಹೇಳಿದಂತೆ ಬುದ್ಧಿಯೂ, ಬುದ್ಧಿ ಹೇಳಿದಂತೆ ಉಳಿದ ಕರಣಗಳೆಲ್ಲವೂ ನಡೆಯಬೇಕು ಎಂಬ ಮೌಲಿಕಾರ್ಥವನ್ನು ಇಲ್ಲಿ ಭಾವಿಸಬೇಕು.

    ಇನ್ನು ರಾಕಾ, ಧಾತೃ, ನೇಜಮೇಶ ಇವರೆಲ್ಲರೂ ಕೂಡ ಗರ್ಭಕ್ಕೆ ಸಂಬಂಧಿಸಿದ ದೇವತೆಗಳು. ಅವರೂ ಪ್ರಸನ್ನರಾಗಬೇಕು. ಇಲ್ಲಿ ವೃಷಭವನ್ನು ದಾನ ಮಾಡಬೇಕು.  ಪತ್ನಿಯು ಗಂಡು ಕರುವನ್ನು ಸ್ಪರ್ಷ ಮಾಡಬೇಕು. ಒಟ್ಟಾರೆ ಸ್ಪರ್ಷ, ದರ್ಶನ, ದೇವತಾಪ್ರಸನ್ನಕರವಾದ ಮಂತ್ರಗಳು ಮತ್ತು ಅನ್ಯಾನ್ಯ ತಂತ್ರಗಳು- ಎಲ್ಲೆಡೆಯಲ್ಲಿಯೂ ಪುಂ-ಭಾವವೇ ಇದ್ದು ಪುರುಷಶಿಶುವಿನ ಜನನಕ್ಕೆ ಬೇಕಾದ ಯೋಜನೆ ಅತ್ಯಂತ ಮನೋಹರವಾಗಿದೆ. ಈ ಸಂಸ್ಕಾರದ ಮುಖ್ಯ ಉದ್ದೇಶಕ್ಕನುಗುಣವಾಗಿ ಶುದ್ಧಿ ಮತ್ತು ರಕ್ಷಣೆಯ ಹಿನ್ನೆಲೆಯಲ್ಲಿ ಅನೇಕ ನಿಯಮಗಳನ್ನು ಶಾಸ್ತ್ರಗಳು ಬೋಧಿಸುತ್ತವೆ. ಗರ್ಭಿಣಿಯು ಪ್ರಾಣಿಗಳ ಸವಾರಿ, ಬೆಟ್ಟ, ಮಹಡಿಗಳನ್ನು ಹತ್ತುವುದು, ಗಾಡಿಯಲ್ಲಿ ಪ್ರಯಾಣ ಇವುಗಳನ್ನು ಮಾಡಕೂಡದು. ಕುಟ್ಟುವುದು, ರುಬ್ಬುವುದು, ಕಲಹ ಕೂಡದು. ಸಂಧ್ಯಾಕಾಲದಲ್ಲಿ ಭೋಜನ ನಿಷಿದ್ಧ. ಮೈಥುನ ಕ್ರಿಯೆ ಮಾಡಬಾರದು.

    ದಾನ, ಪರಿಶುದ್ಧವಾದ ಗೃಹದಲ್ಲಿ ವಾಸ, ಪ್ರಶಸ್ತವಾದ ಮಾಲೆಗಳ ಧಾರಣೆ, ಸ್ತೋತ್ರ ಹಾಗೂ ಸದ್ಗ್ರಂಥಗಳ ಅನುಸಂಧಾನ ಇವೆಲ್ಲವೂ ವಿಧಿಗಳು. ಸಂತೋಷವಾಗಿರುವುದು, ಮಹಾತ್ಮರ ದರ್ಶನ, ದೇವಾಲಯಗಳಿಗೆ ಹೋಗುವುದು ಇವೆಲ್ಲವೂ ಗರ್ಭಿಣಿಗೂ, ಗರ್ಭದಲ್ಲಿರುವ ಶಿಶುವಿಗೂ ಕ್ಷೇಮಕಾರಿ. ಹಾಗೆಯೇ ಪತಿಯೂ ಪತ್ನಿಯಿಂದ ಕಷ್ಟಕರವಾದ ಕೆಲಸಗಳನ್ನು ಮಾಡಿಸಬಾರದು. ಆಕೆಯ ಒಳ್ಳೆಯ ಅಪೇಕ್ಷೆಗಳನ್ನು ಈಡೇರಿಸಬೇಕು. ಪತ್ನಿಯ ಇಚ್ಛೆಯೂ ಧರ್ಮಕ್ಕನುಗುಣವಾಗಿರಬೇಕು. ದೂರಪ್ರಯಾಣ ಮಾಡಬಾರದು. ಕ್ಷೌರ, ಮೈಥುನ,  ಕೂಡದು. ಹೀಗೆ ಪತಿ ಪತ್ನಿಯರಿಬ್ಬರಿಗೂ ಇನ್ನೂ ಅನೇಕ ವಿಧಿ-ನಿಷೇಧಗಳನ್ನು ಹೇಳಿದ್ದಾರೆ. ಅವುಗಳ ವಿಜ್ಞಾನವನ್ನು ವಿವರಿಸುವುದು ಈ ಸಂಕ್ಷಿಪ್ತ ಲೇಖನದಲ್ಲಿ ಸಾಧ್ಯವಿಲ್ಲ.

    ಜಗದಾದಿದಂಪತಿಗಳ ದಿವ್ಯವಾದ ದಾಂಪತ್ಯಭಾವವನ್ನು, ಕುಂದಿಲ್ಲದಂತೆ ಮುಂದುವರೆಸುವಂತಹ ಪವಿತ್ರವೂ, ಮಂಗಳಕರವೂ ಆದ ಕರ್ಮ ಸೀಮಂತೋನ್ನಯನ. ಧ್ಯಾನಸಮಾಧಿಯಲ್ಲಿ ಅನುಭವಿಸಿದ್ದನ್ನು ರೇತೋಯಜ್ಞದಲ್ಲಿ  ಸರಿಯಾಗಿ ಅರ್ಥಮಾಡಿಕೊಂಡು ಮುಂದುವರೆಸುವ ನಿಜವಾದ ಅರ್ಥದಲ್ಲಿ ಉನ್ನಯನ ಮಾಡುವಂತಹ ಸಂಸ್ಕಾರ.

    ಸೂಚನೆ: ಈ ಲೇಖನ ಪ್ರಜಾ ವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ.

    ಅಹಿಂಸಾಪರಮೋ ಧರ್ಮ (Ahimsaparamo dharma)

     ಲೇಖಕರು: ಬಿ. ಜಿ. ಅನಂತ


    ಮಾ ಹಿಂಸ್ಯಾತ್ ಸರ್ವಾ ಭೂತಾನಿ ( ಎಂದರೆ ಯಾರಿಗೂ ಹಿಂಸೆಯನ್ನು ಉಂಟು ಮಾಡಬೇಡ ) ಎನ್ನುತ್ತವೆ ಭಾರತೀಯ ಶಾಸ್ತ್ರಗಳು. ಹಿಂಸೆ ಎಂದರೆ ತೊಂದರೆ ಎಂದರ್ಥ. ಹಿಂಸೆಯೆಂಬುದು ಒಬ್ಬನನ್ನು ಸಣ್ಣ ಮಟ್ಟದಲ್ಲಿ ದೈಹಿಕ ಮಾನಸಿಕವಾಗಿ ಘಾಸಿಗೊಳಿಸುವುದರಿಂದ ಹಿಡಿದು ಪ್ರಾಣವನ್ನು ತೆಗೆಯುವವರೆಗೂ ಆಗಬಹುದು. ಹೀಗೆ ಯಾರಿಗೂ ಹಿಂಸೆ ಯನ್ನು ಉಂಟುಮಾಡದೆ ಬದುಕುವುದನ್ನೇ ಅಹಿಂಸೆ ಎಂದು ಕರೆದಿದ್ದಾರೆ. ಇದೊಂದು ಶ್ರೇಷ್ಠವಾದ ಆತ್ಮಗುಣ ಎಂಬುದು ಭಾರತೀಯ ಮಹರ್ಷಿಗಳ ಅಭಿಪ್ರಾಯ.  ಅಹಿಂಸೆ ಎಂಬುದು ಕೇವಲ ಮನುಷ್ಯರಿಗೆ ಪ್ರಾಣಿ-ಪಕ್ಷಿಗಳಿಗೆ ಅಷ್ಟೇ ಅಲ್ಲದೆ ಜಡವಾಗಿ ಕಾಣುವ ಗಿಡ ಮರ ಬಳ್ಳಿಗಳಿಗೂ, ಕಲ್ಲು ಮಣ್ಣು ಕಾಷ್ಠಗಳಿಗೂ  ಅನ್ವಯಿಸುತ್ತದೆ.   ಏಕೆಂದರೆ ಅವೆಲ್ಲವೂ ಜೀವಗಳೇ ಎಂಬುದು ಭಾರತೀಯರ ದರ್ಶನ. ಹಾಗಾದರೆ ಬದುಕುವುದು ಹೇಗೆ? ಎಂಬ ಪ್ರಶ್ನೆ ಎದುರಾಗುವುದು ಸಹಜ.  ಏಕೆಂದರೆ ಜೀವೋ ಜೀವಸ್ಯ ಜೀವನಂ ಎಂಬ ಮಾತು ಕೂಡ ಪ್ರಸಿದ್ಧವಾಗಿದೆ.  ಎಂದರೆ ಒಂದು ಜೀವಿಯು ಮತ್ತೊಂದು ಜೀವಿಯನ್ನು ತಿಂದೇ ಬದುಕಬೇಕು. ಅಂತಿರುವಾಗ ಯಾರಿಗೂ ತೊಂದರೆಯನ್ನೇ ಕೊಡದೆ ನೂರಕ್ಕೆ ನೂರು ಅಹಿಂಸಾಪರನಾಗಿ ಬದುಕುವುದು ಸಾಧ್ಯವೇ?  ಇದು ಮಹರ್ಷಿಗಳಿಗೆ ತಿಳಿಯದ್ದೇನೂ ಅಲ್ಲ.  ಹಾಗಿದ್ದರೂ ಈ ಮಾತನ್ನು ಆಡಿದ್ದಾರೆ ಎಂದರೆ ಇದರ ಹಿಂದೆ ಆಳವಾದ ವೈಜ್ಞಾನಿಕ ಚಿಂತನೆ ಅಡಗಿದೆ ಎಂಬುದನ್ನು ಅರ್ಥೈಸಿಕೊಳ್ಳಬೇಕು.
    ಒಂದು ಹಿಂಸೆ ಮತ್ತೊಂದು ಹಿಂಸೆಗೆ ಮುನ್ನುಡಿಯನ್ನು ಬರೆಯುತ್ತದೆ.  ಹೇಗೆಂದರೆ ಒಬ್ಬ ಮನುಷ್ಯನು ಒಂದು ಪ್ರಾಣಿಯನ್ನು ಕೊಂದ ಎಂದಿಟ್ಟುಕೊಳ್ಳೋಣ. ಮುಂದೆ ಆ ಪ್ರಾಣಿಯು ಮನುಷ್ಯನಾಗಿ ಹುಟ್ಟುತ್ತದೆ, ಈ ಮನುಷ್ಯನು ಪ್ರಾಣಿಯಾಗಿ ಹುಟ್ಟುತ್ತಾನೆ. ಹಿಂದೆ ಮನುಷ್ಯನು ಆ ಪ್ರಾಣಿಗೆ ಕೊಟ್ಟಿದ್ದ ಹಿಂಸೆಯನ್ನು  ಮುಂದಿನ ಜನ್ಮದಲ್ಲಿ ಆ ಪ್ರಾಣಿಯ ಪುನರಾವರ್ತಿಸುತ್ತದೆ ಎನ್ನುತ್ತವೆ ನಮ್ಮ ಶಾಸ್ತ್ರಗಳು. ಇದಲ್ಲದೆ, ಮಾಡಿದ ಹಿಂಸೆಯು ವಾತಾವರಣದಲ್ಲಿ ಒಂದು ಅನಪೇಕ್ಷಿತ ವಾದ ಭಯದ ಅಲೆಯನ್ನು ಹುಟ್ಟು ಹಾಕುತ್ತದೆ. ಹಿಂಸೆಗೆ ಒಳಗಾದ ಪ್ರಾಣಿಯು ಅನುಭವಿಸುವ ಯಾತನೆಯು ಅಂತಹ ಅಲೆಗೆ ಕಾರಣ.  ಇದಲ್ಲದೆ ಹಿಂಸೆಯನ್ನು ಕೊಟ್ಟ ಮನುಷ್ಯನ ಮನಸ್ಸಿನಲ್ಲಿಯೂ ಕೂಡ ಅದರ ಒಂದು ಅಲೆಯು ಮೂಡಿಯೇ ಮೂಡುತ್ತದೆ.  ಇದು ಕ್ಷಣ ಕಾಲವಾದರೂ ಅವನ ಮನಸ್ಸಿನ ಶಾಂತತೆಯನ್ನು ಕದಡುತ್ತದೆ. ತತ್ಪರಿಣಾಮವಾಗಿ ಮನಸ್ಸಿನ ನೆಮ್ಮದಿ ಸಂತೋಷದ ಅನುಭವಗಳು ಕೆಲವು ಕಾಲದ ಮಟ್ಟಿಗಾದರೂ ಮರೆಯಾಗುತ್ತವೆ.  ಈ ಕಾರಣದಿಂದಲೇ ಧ್ಯಾನವನ್ನು ಅಭ್ಯಾಸ ಮಾಡುವವರು ಸಾಧ್ಯವಾದಷ್ಟೂ ಹಿಂಸೆಯನ್ನು ಬಿಡಬೇಕು ಎನ್ನುತ್ತದೆ ಯೋಗಶಾಸ್ತ್ರ.

    ಆದರೆ ಹಿಂಸೆಯ ಮೂಲಕವೇ ಆಹಾರವನ್ನು ಪಡೆಯಬೇಕಲ್ಲವೇ?  ಹಾಗಾಗಿ ನಮಗೆ ಅಗತ್ಯವಿರುವಷ್ಟು ಆಹಾರಕ್ಕಾಗಿ ಮಾಡುವ ಹಿಂಸೆಯು ಹೆಚ್ಚಿನ ವಿಪರಿಣಾಮವನ್ನು ಉಂಟು ಮಾಡುವುದಿಲ್ಲ.  ಆದರೆ ಅಲ್ಲಿಯೂ ಕೂಡ ಸಾಧ್ಯವಾದಷ್ಟೂ ಕಡಿಮೆ ಹಿಂಸೆ ಇರುವ ಆಹಾರವನ್ನು ಆರಿಸಿಕೊಳ್ಳಬೇಕು ಎಂಬುದು ತಿಳಿದವರ ಮಾತು. ಜೊತೆಗೆ, ಆಹಾರದಲ್ಲಿನ ಈ ಹಿಂಸೆಯ ದೋಷವು ಮರೆಯಾಗಲಿ ಎಂಬ ಕಾರಣದಿಂದಲೇ ನಾವು ಸ್ವೀಕರಿಸುವ ಆಹಾರವನ್ನು ಭಗವಂತನಿಗೆ ಸಮರ್ಪಿಸಿ ಅವನ ಸ್ಮರಣೆಯೊಂದಿಗೆ ಪ್ರಸಾದ ರೂಪವಾಗಿ ಅದನ್ನು ಬಳಸುವ ಪದ್ಧತಿಯಿದೆ.  ಒಟ್ಟಾರೆ ಆಹಾರದ ಮೂಲಕ ಪಾಪವು ಸಂಗ್ರಹವಾಗುವುದುರಿಂದಲೇ ಅಗತ್ಯವಿರುವಷ್ಟು  ಆಹಾರವನ್ನು ಮಾತ್ರ ಸೇವಿಸಬೇಕು, ಹಸಿವೆಯಾದಾಗ ಮಾತ್ರ ಆಹಾರವನ್ನು ಬಳಸಬೇಕು ಎಂಬ ನಿಯಮಗಳಿವೆ.  ಆಹಾರವೆಂದರೆ ಅವೆಲ್ಲವೂ ಜೀವಗಳೇ- ಅದು ಪ್ರಾಣಿಯ ಮಾಂಸವಾಗಿರಲಿ ಅಥವಾ ಸಸ್ಯಗಳು ಧಾನ್ಯಗಳೇ ಆಗಿರಲಿ.

    ಇನ್ನು ಆತ್ಮಸಾಕ್ಷಾತ್ಕಾರವನ್ನು ಮಾಡಿಕೊಂಡ ಯೋಗಿಯೊಬ್ಬನು ಆಹಾರವನ್ನು ಬಳಸಿದಾಗ ಅವನು, ತಾನು ಬಳಸಿದ ಆಹಾರವನ್ನು ನೇರವಾಗಿ ಭಗವಂತನಿಗೆ ಸಮರ್ಪಿಸುತ್ತಾನೆ.  ಆದ್ದರಿಂದ ಅವನು ಆಹಾರ ರೂಪವಾಗಿ ಬಳಸಿದ ಜೀವಿಗಳೆಲ್ಲವೂ ಸದ್ಗತಿ ದೊರಕುತ್ತವೆ ಎನ್ನುತ್ತಾರೆ ಯೋಗಿ ಜನರು.  ಹಾಗಾಗಿ ಅಲ್ಲಿ ಹಿಂಸೆಯ ದೋಷವಿಲ್ಲ.

    ಸೂಚನೆ: ಈ ಲೇಖನದ ಆಯ್ದ ಭಾಗಗಳು ವಿಜಯ ಕರ್ನಾಟಕ ಪತ್ರಿಕೆಯ ಬೋಧಿ ವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.

    Saturday, March 23, 2019

    ಉನ್ನಯನ ಮಾಡುವ ಸೀಮಂತ (Unnayana maaduva seemantha)

    ಲೇಖಕರು: ತಾರೋಡಿ ಸುರೇಶ


    ಪುಂಸವನದ ನಂತರದ ಸಂಸ್ಕಾರವಿದು. ಇದು ಗರ್ಭಿಣೀ-ಸ್ತ್ರೀಸಂಸ್ಕಾರ. ಆದ್ದರಿಂದ ಒಮ್ಮೆ ಮಾಡಿದರೆ ಸಾಕು. ಪ್ರತಿಗರ್ಭಕ್ಕೂ ಬೇಕಿಲ್ಲ. ಇದರ ಪೂರ್ಣಹೆಸರು “ಸೀಮಂತೋನ್ನಯನ”.ತಲೆಯ ಮಧ್ಯರೇಖೆಗೆ ಸೀಮಂತ-ಬೈತಲೆ ಎಂದು ಹೆಸರು. ಕೇಶವೇಶದ ಮಧ್ಯದ ಎಲ್ಲೆಕಟ್ಟಿನ ಜಾಗ. ಎಲ್ಲೆ ಎಂದರೆ ಸೀಮೆ ಎಂದರ್ಥ. ಆ ಸೀಮಂತವನ್ನು ಉನ್ನಯನ ಅಂದರೆ ಮೇಲಕ್ಕೆ ಎತ್ತಿ ಬಾಚುವುದು ಈ ಸಂಸ್ಕಾರದ ಪ್ರಮುಖ ಅಂಗ.

    ಮೇಧೆ, ಯಶಸ್ಸು, ಪ್ರಜ್ಞಾ ಮತ್ತು ತೇಜಸ್ಸು ಇರುವ ಶಿಶು ಹುಟ್ಟಬೇಕು. ಇಂತಹ ವಿಶೇಷ ಶಕ್ತಿಗಳು ಶಿಶುವಿನಲ್ಲಿದ್ದಾಗ ಅವುಗಳನ್ನು ಅಪಹರಿಸುವ ದುಷ್ಟಶಕ್ತಿಗಳಿಂದ ರಕ್ಷಣೆ ದೊರೆಯಬೇಕು. “ಜ್ಞಾನಪೂರ್ಣತೆಯಿಂದ ಕೂಡಿದ ಸರ್ವಾಂಗಸುಂದರವಾದ ಸಂತಾನವಾಗಬೇಕು. ಆ ಪೂರ್ಣತೆಯಲ್ಲಿ ಆತ್ಮಚೈತನ್ಯ, ಆತ್ಮಗುಣ, ದೇಹಪುಷ್ಟಿ ಎಲ್ಲವೂ ಇರುತ್ತದೆ” ಎಂದು ಶ್ರೀರಂಗಮಹಾಗುರುಗಳ ತಿಳಿಸಿದ್ದರು. ಮಹರ್ಷಿಗಳು ತಂದುಕೊಟ್ಟ ಯಾವುದೇ ಕರ್ಮಗಳಲ್ಲಿಯೂ ಆತ್ಮಧರ್ಮ,ಮನೋಧರ್ಮ ಮತ್ತು ದೇಹಧರ್ಮಗಳೂ ಎಲ್ಲವೂ ಅರಳಲು ಬೇಕಾದ ವಿಜ್ಞಾನವಿರುತ್ತದೆ ಎಂಬುದನ್ನು ಮರೆಯುವಂತಿಲ್ಲ. ಕೊನೆಯಲ್ಲಿ “ಸರ್ವಂ ಕರ್ಮಾಖಿಲಂ ಪಾರ್ಥ ಜ್ಞಾನೇ ಪರಿಸಮಾಪ್ಯತೇ” ಎಲ್ಲವೂ ಈಶ್ವರನಲ್ಲಿ ಲಯಗೊಳ್ಳಬೇಕು. ಇಲ್ಲಿ ವಿಧಿಸಿರುವ ಮಂತ್ರ, ತಂತ್ರ ದ್ರವ್ಯಗಳೆಲ್ಲವೂ ಇದಕ್ಕೆ ಪೂರಕವಾಗಿವೆ.

    ಗರ್ಭಸ್ಪಂದನವಾದ ನಂತರ ಮೂರು ಅಥವಾ ನಾಲ್ಕನೇ ತಿಂಗಳಲ್ಲಿ, ಶುಕ್ಲಪಕ್ಷ, ಪುರುಷನಕ್ಷತ್ರಗಳಲ್ಲಿ ಸೀಮಂತವನ್ನು ನಡೆಸುವುದು ಉತ್ತಮ. ಹಗಲಿನಲ್ಲಿಯೇ ಮಾಡಬೇಕು.
    ವೃಷಭದ ಚರ್ಮ, ಭೂತದಅತ್ತಿ ಮರದ ಕಾಯಿಗಳ ಗೊಂಚಲು, ಮತ್ತು ಮೂರು ಬಿಳೀಚುಕ್ಕಿಗಳಿರುವ ಅಥವಾ ಪರ್ವಗಳಿರುವ ಶಲಲೀ(ಮುಳ್ಳುಹಂದಿಯ ಮುಳ್ಳು) ಗಳನ್ನು ಹೊಂದಿಸಿಕೊಳ್ಳಬೇಕು. ಆದರೆ ಶಲಲಿಯನ್ನು ಗೃಹದ ಒಳಗೆ ಇಡಕೂಡದು. ಅದರಿಂದ ಕಲಹ ಉಂಟಾಗುತ್ತದೆ ಎಂಬ ಅಭಿಪ್ರಾಯವಿದೆ. ಹಾಗೆಯೇ,ಮೂರು  ದರ್ಭೆಗಳಿಂದ ಹೆಣೆದ ಮೂರು ಪುಂಜಗಳು ಸಿದ್ಧವಿರಬೇಕು.

    ಅಂದು,ಮಂಗಳಸ್ನಾನ,ಹೊಸವಸ್ತ್ರಗಳ ಧಾರಣೆ, ನಂತರ ಪುಣ್ಯಾಹ ಮತ್ತು ಸಂಕಲ್ಪ ಮಾಡಬೇಕು.ಆಮೇಲೆ,ಕಂಕಣಬಂಧ, ಇಷ್ಟದೇವತಾಪೂಜೆ ಹಾಗೂ ಎಂಟು ನಿರ್ದಿಷ್ಟಮಂತ್ರದೊಂದಿಗೆ ಹೋಮ. ಧಾತಾ, ರಾಕಾ, ನೇಜಮೇಷ ಮತ್ತು ಪ್ರಜಾಪತಿ-ದೇವತೆಗಳನ್ನು ಸ್ತುತಿಸುವ ಮಂತ್ರಗಳಿವು. ದೇವತೆಗಳ ಪ್ರಸನ್ನತೆ ಆವಶ್ಯಕ.

    ಪತಿಪತ್ನಿಯರು ಕ್ರಮವಾಗಿ ಪೂರ್ವ-ಪಶ್ಚಿಮಾಭಿಮುಖವಾಗಿ ಕುಳಿತುಕೊಳ್ಳಬೇಕು. ಕಾಯಿಗಳಿಂದ ಕೂಡಿದ ಅತ್ತಿ ಗೊಂಚಲು,ಶಲಲೀ ಮತ್ತು ದರ್ಭೆಗಳ 3 ಪುಂಜಗಳು ಇವುಗಳೆಲ್ಲವನ್ನೂ ಒಟ್ಟಿಗೆ ಸೇರಿಸಿ ಹಿಡಿದುಕೊಂಡು,ಲಲಾಟಸಂಧಿಯಿಂದ ಆರಂಭಿಸಿ ಬೈತಲೆಯ ಹಿಂಭಾಗದವರೆಗೂ ರೇಖೆ ಪೂರ್ತಿ ಬರುವಂತೆ ಪತಿಯು ಬಾಚುತ್ತಾನೆ. ಉನ್ನಯನವನ್ನು ಮೂರು ಭಾರಿ ಮಾಡಬೇಕು. ಉನ್ನಯನವು ಊರ್ಧ್ವಸ್ಥಿತಿಗೆ ನಯನ ಮಾಡುವ ಮರ್ಮವನ್ನೊಳಗೊಂಡಿರುತ್ತದೆ.

    ಇಲ್ಲೆಲ್ಲಾ ಮೂರರ ಸಂಯೋಜನೆಯನ್ನು ನೋಡುತ್ತೇವೆ. ಮೂರು ಲೋಕಗಳಿಗೂ ವ್ಯಾಪಿಸುವಂತಹ ಕರ್ಮವಿದು. ನಂತರ ಅವಕ್ಕೂ ಮೂಲವಾದ ಪ್ರಣವದಲ್ಲಿ ಮುಕ್ತಾಯಗೊಳ್ಳಬೇಕು.ಆದ್ದರಿಂದ ‘ಓಂ ಭೂರ್ಭುವಸ್ಸುವರೋಂ’ ಎನ್ನುವ ಮಂತ್ರದ ಅನುಸಂಧಾನವಿರುತ್ತದೆ. ಆದಿಯಲ್ಲಿಯೂ ಪ್ರಣವ, ಮಧ್ಯೆ ಅದರಿಂದ ವಿಕಾಸಗೊಂಡ ಮೂರುಲೋಕಗಳು ಮತ್ತು ಕೊನೆಯಲ್ಲಿ ಪುನಃ ಪ್ರಣವದಲ್ಲಿಯೇ ವಿಲೀನ. ಇದು ಕೇವಲ ಇಂದ್ರಿಯಕ್ಷೇತ್ರದ ವ್ಯವಹಾರ ಮಾತ್ರವಲ್ಲ


    ಹಾಗೂ ಈ ಮೂರೂ ಪದಾರ್ಥಗಳ ಸಂಯೋಜನೆಯಲ್ಲಿ. ಒಂದರ ದೋಷವನ್ನು ಇನ್ನೊಂದು ನಿವಾರಿಸಿ ಉದ್ದೇಶಿತ ಫಲವನ್ನು ಪೂರ್ಣವಾಗಿ ನೀಡುವ ಯೋಗ ಕೂಡಿಬರುತ್ತದೆ. ,,,,, (ಮುಂದುವರೆಯುತ್ತದೆ)

    ಸೂಚನೆ: ಈ ಲೇಖನ ಪ್ರಜಾ ವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ.

    ಆತ್ಮಗುಣಗಳು (Aathmagunagalu)


                                                                    ಲೇಖಕರು: ತಾರೋಡಿ ಸುರೇಶ


    ಆತ್ಮಸ್ವರೂಪವನ್ನು ಹೊಂದಿಸುವ ಗುಣಗಳಿಗೆ ಆತ್ಮಗುಣಗಳೆಂದು ಹೆಸರು. ಇವು ಆತ್ಮಪ್ರಾಪಕವಲ್ಲದೆ ಅದಕ್ಕಿರುವ ವಿಘ್ನಗಳನ್ನೂ ನಿವಾರಿಸುತ್ತವೆ. ದಯೆ, ಕ್ಷಮೆ, ಅನಸೂಯಾ, ಶೌಚ, ಅನಾಯಾಸ, ಮಂಗಲ, ಅಕಾರ್ಪಣ್ಯ ಮತ್ತು ಅಸ್ಪೃಹಾ ಇವೇ ಆ ಎಂಟು ಆತ್ಮಗುಣಗಳು. ಸಾಧಕನು ಆತ್ಮಭಾವಕ್ಕೆ ಏರಿದಾಗ ಸಹಜವಾಗಿಯೇ ಆತ್ಮಗುಣಗಳು ಪ್ರಬೋಧಗೊಳ್ಳಬಹುದು ಮತ್ತು ಸಂಸ್ಕಾರಗಳಿಂದಲೂ, ಸ್ವಪ್ರಯತ್ನಗಳಿಂದಲೂ ಮೈಗೂಡಬಹುದು-ಹೀಗೆ ಎರಡೂ ಉಂಟು.ಈಗ ವಿವರಗಳನ್ನು ನೋಡೋಣ.


    ದಯೆ:
    ಆಪತ್ತಿಗೊಳಗಾದವರನ್ನು ರಕ್ಷಿಸುವ ಸಹಜವಾದ ಮನೋಧರ್ಮ. ಲೋಕದಲ್ಲಿ ಒಬ್ಬನು ಇನ್ನೊಬ್ಬನಿಗೆ ದಯೆಯನ್ನು ತೋರಿಸಿದರೆ ಇಬ್ಬರಿಗೂ ಲಾಭ ಉಂಟು. ತೋರಿಸಿದವನಿಗೆ ಶುದ್ಧಿ,ಪುಣ್ಯ ದೊರಕಿದರೆ, ದಯೆಗೆ ಪಾತ್ರನಾದವನಿಗೆ ಕಷ್ಟ ಪರಿಹಾರ. ಶ್ರೀರಾಮನಲ್ಲಿ ದಯೆ ಎನ್ನುವುದು ಸಹಜವಾಗಿಯೇ ತುಂಬಿತ್ತು. ದಯೆಯು ಭಗವಂತನ ಗುಣ. ಆದರೆ ಭಗವಂತನಿಗೆ ಯಾರಿಂದಲೂ ಏನೂ ಆಗಬೇಕಿಲ್ಲ. ಅದು ಅವನ ಸ್ವಭಾವ. ದಯೆಯ ಅಭಿವ್ಯಕ್ತಿ ಒಮ್ಮೆ ನೇರವಾಗಿರ-ಬಹುದು. ಅಥವಾ ಕಹಿಔಷಧಿಗೆ ಜೇನುತುಪ್ಪವನ್ನು ಲೇಪಿಸಿ, ರೋಗಿಗೆ ಗೊತ್ತಾಗದಂತೆ ಚಿಕಿತ್ಸೆ ಮಾಡುವ ವೈದ್ಯನ ದಯೆಯಂತೆಯೂ ಇರಬಹುದು. ದಯೆಯ ಮೂಲದಲ್ಲಿ ಎಲ್ಲ ಜೀವಿಗಳಲ್ಲಿ ಬೆಳಗುವ ಆತ್ಮಸ್ವರೂಪದ ನಂಟಿದೆ.

    ಕ್ಷಮಾ:
    ಅನ್ಯರ ಅಪರಾಧಗಳನ್ನು ತೀವ್ರವಾಗಿ ಗಣಿಸದೆ ಸಹಿಸುವ ಮನೋಧರ್ಮ. ಪ್ರತಿಯಾಗಿ ತೊಂದರೆಯನ್ನು ಕೊಡದಿರುವುದು. ಇತರರಿಂದ ಉಂಟಾದ ಒಳ-ಹೊರಗಿನ ಪ್ರಹಾರಗಳಿಂದ ವಿಚಲಿತನಾಗದಿರುವುದು. ಶ್ರೀರಾಮನು “ನ ಸ್ಮರತ್ಯಪಕಾರಾಣಾಂ ಶತಮಪಿ ಆತ್ಮವತ್ತಯಾ”- ತನ್ನಗೆ  ನೂರಾರು ಅಪಕಾರಗಳನ್ನು ಮಾಡಿದ್ದರೂ ಕೂಡ ಅವನ್ನು ಸ್ಮರಿಸುತ್ತಿರಲಿಲ್ಲ ಎನ್ನುತ್ತಾರೆ ವಾಲ್ಮೀಕಿಗಳು. “ಮನಸ್ಸಿನಲ್ಲಿಯೂ ಕೋಪ ಅಥವಾ ದುಃಖ ಉಂಟಾಗದಿದ್ದರೆ ಉತ್ತಮಕಲ್ಪ. ಹಾಗೆ ಉಂಟಾದರೂ ಹೊರಗಡೆ ಅದನ್ನು ಮುಂದುವರೆಸದಿದ್ದರೆ ಅಷ್ಟು ಪಾಪವಿಲ್ಲ” ಎಂದು ಶ್ರೀರಂಗಮಹಾಗುರುಗಳು ಹೇಳಿದ್ದರು.

    ಅನಸೂಯಾ:
    ಅಸೂಯೆ ಎಂದರೆ ಗುಣಗಳನ್ನೂ ಮತ್ತು ಗುಣಶಾಲಿಗಳನ್ನೂ ಸಹಿಸದ ಮನೋಧರ್ಮ. ಇದಲ್ಲದೇ- ಗುಣಶಾಲಿಯ ಬಗ್ಗೆ ಅಸೂಯೆ ಕೂಡದು. ಜೊತೆಗೆ ಅತ್ಯಲ್ಪ ಸದ್ಗುಣವಿದ್ದರೂ ಮೆಚ್ಚಬೇಕು. ಇನ್ನೊಬ್ಬನ ದೋಷದಲ್ಲಿ ರಮಿಸಬಾರದು-ಹೀಗಿದ್ದರೆ ಅದು ಅನಸೂಯಾ.

    ಶೌಚ:
    ದೇಹಶುದ್ಧಿಯ ಜೊತೆಗೆ ಪ್ರಧಾನವಾಗಿ ಧಾತುಗಳನ್ನು ದೂಷಿತಗೊಳಿಸುವ ಆಹಾರಗಳನ್ನು ಸೇವಿಸದಿರುವುದು, ದುಷ್ಟಸಹವಾಸವರ್ಜನೆ ಮತ್ತು ಸ್ವಧರ್ಮಾಚರಣೆಗಳನ್ನು ಶೌಚವೆಂದು ಕರೆದಿದ್ದಾರೆ. ಅಭಕ್ಷ್ಯವಾದ ಪದಾರ್ಥಗಳ ಸೇವನೆಯಿಂದ ಬಿಡುಗಡೆ ಪಡೆಯುವುದು ಬಹು ದುಸ್ತರ. ಮನಸ್ಸಿನಿಂದಲೂ ಬಯಸಬಾರದು, ಮತ್ತು ಅದು ಮೈಗೂಡಿದಲ್ಲಿ ಪರಮಾತ್ಮಸಾಕ್ಷಾತ್ಕಾರ ಮಾತ್ರದಿಂದಲೇ ಅದರ ನಿವಾರಣೆ ಸಾಧ್ಯ ಎಂದು ಜ್ಞಾನಿಗಳು ಹೇಳುತ್ತಾರೆ.

    ಅನಾಯಾಸ:
    ಮಿತಿಮೀರಿದ ಆಯಾಸ ಕೂಡದು. ಇದು ಪರ್ಯವಸಾನದಲ್ಲಿ ಆತ್ಮಸಮಾಧಿಗೆ ಭಂಗ ತರುತ್ತದೆ. ಆತ್ಮರಕ್ಷಣೆಗಾಗಿ ಶರೀರದ ರಕ್ಷಣೆ ಬಹುಮುಖ್ಯ. ಶ್ರೀರಾಮನನ್ನು ‘ಅಕ್ಲಿಷ್ಟಕರ್ಮಾ’ ಎಂದು ಕರೆದಿದ್ದಾರೆ. ಆತ್ಮಕ್ಲೇಷಕ್ಕೆ ಕಾರಣವಾಗುವ ಕೆಲಸಗಳನ್ನು ರಾಮನು ಮಾಡುತ್ತಿರಲಿಲ್ಲವೆಂದು ಇದರ ಒಂದು ಅರ್ಥ.

    ಮಂಗಲ:
    ಶುಭವಾದದ್ದನ್ನು ಮಾತ್ರ ಆಚರಿಸಿ ತದ್ವಿರುದ್ಧವಾದದ್ದನ್ನು ತ್ಯಜಿಸುವುದು ಮಂಗಲ. ಸಾಧಕನು ಸದಾ ಮಂಗಲವನ್ನೇ ಆಚರಿಸಬೇಕು.ಮಂಗಲವೆಂದರೆ ಸುಖವನ್ನು ತರುವಂತಹದ್ದು ಎಂದರ್ಥ. ಆತ್ಮನಿಗನುಗುಣವಾಗಿ ಶರೀರವನ್ನು ಸ್ಥೂಲಸೂಕ್ಷ್ಮಪರಗಳಲ್ಲಿ ಚೆನ್ನಾಗಿಡುವಂತಹ ಕರ್ಮಗಳನ್ನು, ದ್ರವ್ಯಗಳನ್ನು ಬಯಸಿ ಸೇವಿಸುವುದು.

    ಅಕಾರ್ಪಣ್ಯ:
    ಅತ್ಯಲ್ಪ ಸಂಪತ್ತಿದ್ದರೂ ಸಂತೋಷದಿಂದ ಸತ್ಪಾತ್ರನಿಗೆ ನಿತ್ಯವೂ ಕಿಂಚಿತ್ತಾದರೂ ದಾನ ಮಾಡುವಿಕೆಗೆ ಅಕಾರ್ಪಣ್ಯ ಎಂದು ಹೆಸರು. ಹಾಗೆ ಮಾಡುವ ಗುಣವಿಲ್ಲದವನು ಕೃಪಣ. ಶ್ರೀರಂಗಮಹಾಗುರುಗಳು ಇದಕ್ಕೆ ಇನ್ನೊಂದು ವಿವರಣೆಯನ್ನು ಕೊಟ್ಟಿದ್ದರು; 
    ಬ್ರಹ್ಮಭಾವವಿಲ್ಲದವನು ಕೃಪಣ. ಆತ್ಮಜ್ಞಾನವನ್ನು ಪಡೆದು, ಅಭ್ಯಾಸದಿಂದ ತನ್ನ ಸಪ್ತಧಾತುಗಳಲ್ಲಿಯೂ ಆ ಭಾವವನ್ನು ಸಾತ್ಮ್ಯಮಾಡಿಕೊಂಡವನೇ ಪರಿಪೂರ್ಣನಾದ ಬಹ್ಮಜ್ಞಾನಿ. ಅವನಲ್ಲಿ ಸಹಜವಾಗಿಯೇ ಅಕಾರ್ಪಣ್ಯವು ನೆಲೆಸಿರುತ್ತದೆ. ಇದು ಉಳಿದವರಿಗೆ ಆದರ್ಶ.

    ಅಸ್ಪೃಹಾ:
    ಸತ್ಕರ್ಮಗಳ ಫಲರೂಪವಾಗಿ ಬಂದಿದ್ದರಲ್ಲಿ ಸಂತೋಷಪಡುವುದು, ತನ್ನದಲ್ಲದ್ದನ್ನು ಬಯಸದಿರುವುದು.ಸಂಸ್ಕಾರಗಳಿಂದ ಸುಸಂಸ್ಕೃತನಾದ ಸದಾ ಆತ್ಮಗುಣಸಂಪನ್ನನು ಋಷಿಹೃದಯ, ದೇವತಾಪ್ರೀತಿ ಮತ್ತು ಬ್ರಹ್ಮಸಾಯುಜ್ಯದ ಮಹದಾನಂದವನ್ನು ಪಡೆಯುತ್ತಾನೆ ಎಂದು ಶಾಸ್ತ್ರಗಳು ಒಕ್ಕೊರಲಿನಿಂದ ಸಾರುತ್ತವೆ. ಸ್ವಸ್ಥಸಮಾಜಕ್ಕೂ ಆತ್ಮಗುಣಗಳು ಅತ್ಯಗತ್ಯ.

    ಸೂಚನೆ: ಈ ಲೇಖನದ ಆಯ್ದ ಭಾಗಗಳು ವಿಜಯ ಕರ್ನಾಟಕ ಪತ್ರಿಕೆಯ ಬೋಧಿ ವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.

    Re-cognition and Amnesia

    Kannada Article by: Tarodi Suresha
    English Rendering: Padmashri Mohan


    AnubhootaVishayaaSampramoshahSmrtih” This is the definition of Smrti given in the Yogashastras.  Smrti is the word employed to refer to an experience that does not evanesce from the mind.  When an experience does slip from the mind, it is Vismrti.  All of us have experienced such retention or loss of memories of different experiences at one time or the other.

    Smrti and Vismrti are not limited to temporal happenings in our daily lives.  The rishis, who are our forefathers, did Yogic Sadhana and discovered the Sookshma (subtle) and the Para (the Infinite, the Immortal) states within each of us.  Our understanding of our own lives or the presence of God within us is superficial; it is nowhere close to the deep realization of the rishis.  Hence we may say that we have run intoVismrti here. Although Deva (God) has been coming along with the Jiva (the individual soul), persistent unawareness of it has brought aboutVismrti.

    We need people to remind us of what we have forgotten; especially when what we have forgotten is of unparalleled importance in life. Otherwise we are likely to forfeit our fundamental birthright and squander away our life. Once again, the rishis-our forefathers-have given us a way of life that will consistently revive Smrti from the domination of Vismrti. Such a way of life is Samskrti. It can be taught only by those rishis who have had the experience of the Sookshma and Para and retain its Smrti.

    Consider the following example from the Garbhopanishad. It tells about the outward appearance and the inward state of mind of the foetus when it is in the womb. The baby floats in the womb with both its hands folded together. This folding of its hands comes to it naturally and is called Namaskara Mudra.  It is a Yogic mudra that manifests spontaneously. Such a position of the baby is also essential for its easy passage through the birth canal. According to the Garbhopanishad, the baby is experiencing and savouring Paramatman in the form of Jyoti (Light) within itself.  Hence, even after birth, playing with babies includes actions that correspond to folding hands in front of God and elders.  We just need to observe how our grandmothers have laid babies on their laps and have clapped the babies’ hands together saying refrains like “Ram-Ram, Sita-Ram.”  Even grown-ups greet each other with hands folded together in salutation as a mark of recognizing the presence of God in all people. Practicing this repeatedly and consciously throughout our life will keep alive the Smrti of the Paramatman seen in the womb in the form of Light while the hands were folded of their own accord.

    It is also an age-old practice to keep a lighted lamp in the labour and delivery room. The reason for this practice goes back to the baby’s experience in the womb.  In its eighth and ninth month of gestation, the baby has uninterrupted darshana of Paramatman in the form of Light.  It rejoices in this experience.  Both the darshana and the consequent joy vanish immediately upon birth when the effects of karmas (deeds) in previous lives tighten their grip on the new-born. Hence to remind the newborn of the Light it knew inside the womb, the rishis have directed us to keep a lighted lamp in the baby’s line of sight.  There are rules about the kind of ghee (in a certain proportion)and the wick (made of lotus fibres) that facilitate the closest recreation of the Jyoti (the flame) in complete likeness to the Jyotiin Yogic darshana.  Such a lamp reminds the new-born of its recent darshana in the womb and revokes Smrti.  Even though a few weeks pass before a newborn recognizes its parents and smiles at them, it immediately recognizes the Jyoti in the lamp and shows its glee.  

    Neyam sajjana sange cittam - say the realized sages and emphasize cultivating the company of sajjanas - good people.  Being with such sajjanasinfluences our mind and inspires us to similarly undertake Saadhana (spiritual endeavour) that eventually wipes out Vismrti.

    When Arjuna forgets his true nature and gets caught in the confusing mire of dharmaand adharma, Krishna teaches him the Bhagavad Gita to instil clarity.  In the end, Arjuna says:
    nashtomohahsmrtirlabdhaatvatprasaadaanmayaachyuta
    meaning that his confusion is shattered; and having regained Smrti of his previous, clear state of mind, he is ready to take up his responsibility to fight.  The dharmic texts that give us directives and restrictions do so to revoke within us the memory of God.  For this reason, the dharma-shastras are also called Smrtis.

    By overcoming Vismrti, we can constantly experience oneness with the Light within.  The Jyoti is in the form of Jnaana (Knowledge) and Ananda(Bliss).  Such constant Smrti delivers us from the bondage occurring due to repeated cycles of birth and death.  Samskrti is the means to achieve this.  

    Note: The Kannada version of this article can be viewed at AYVM blogs

    Friday, March 15, 2019

    Viewing with Equanimity


    Kannada Article & English Rendering by: Rajagopalan K. S


    Vidyā-vinaya-sampannebrāhmanegavihastini|
    śunicaivaśva-pāke capanditāsama-darśina ||(Bhagavadgeeta 5-18)

    Pandits see all of these as “equal”: a brahmin who is matured with knowledge, a cow, an elephant, a dog and a dog eater. This, in simple words, is the meaning of the verse quoted above.

    This quotation is favored often by speakers and writers in their speeches and writings.

    Apparently, anyone can notice that the quoted verse depicts the magnanimity of a pandit. The Constitution of India clearly states in unequivocal terms that there should be equality among all in all respects. Any one violating this rule is punishable as per the Indian Constitution.Of course, the Constitution of India is of recent origin when compared to “Bhagavadgeeta” which is 5000 years old as per our tradition. Hence every Indian feels proud of the magnanimous attitude of our ancestors. However, a good critic wonders as to how such a diversity of human beings and beasts so different in physical size, intellectual capabilities, food habits etc are declared equal en masse!

    We can find many commentaries, ancient as well as modern, on Bhagavadgeeta wherein scholars have exhibited their intellectual acumen. Once we grasp the real intention of the author, we can naturally conclude that some commentators actually mislead us. A pandit cannot chew grass, the food of cows, to prove that he is equal to a cow! (samadarshin). Moreover, the word ‘sama’ does not mean ‘equal’ in all contexts. To cite an example, it is said that Rama was sama-vibhaktāga while referring to his proportionate bodily features. If we interpret the word ‘sama’ in the literal sense of “equal”, his nose should be equal in size to his hand! Samavibhaktāga simply means that the organs of Rama’s body were ideally proportionate.



    We should obviously know the context while interpreting a person’s statements. The statement we are trying to analyse is from Bhagavadgeetha which is in the form of verses. One can comprehend the totality of the meaning only if the cited quotation is read with the meanings of preceding and succeeding verses! In the very next stanza, Bhagawan Krishna makes it clear that the Brahman (the Supreme) is one bereft of defects and is also ‘samam’(Nirdosham hi samam Brahma). Obviously, a true pandit sees this ‘samam’ in all living beings. While elucidating this beautiful simple explanation, Srirangamahaguru has further made it more comprehensible once with the help of a simple experiment. He drew the pictures of all beings quoted in the verse: a brahmin, a cow, an elephant, a dog and a dog-eater. Later, casually he enquired the disciples around to find out a common factor (if any) in all those pictures. The disciples could find none. Then the Guru drew attention to a small dot he had drawn in all the drawings, and proceeded to explain that just as the dot is common in all the pictures drawn there, a pandit visualizes Brahman as a common factor in all the beings.

    The word ‘pandit’ here is not used in a narrow sense meaning a ‘scholar’. The word ‘Panda’implies knowledge of the Self(Brahman) and hence the person who has realised Brahman is a real pandit.

    As one who sees ‘gold’ as a common factor in the diverse gold-ornaments, a true pandit sees Brahman as the common factor and hence aSamadarshin!

    Note: The Kannada version of this article can be viewed at AYVM blogs

    Wednesday, March 13, 2019

    ‘ಪುಂಸವನ’ ಸಂಸ್ಕಾರ- ಜ್ಞಾನಿಗಳ ವಂಶಕ್ಕಾಗಿ (Pumsavana samskara - jnanigala vamshakkagi)

    ಲೇಖಕರು: ತಾರೋಡಿ ಸುರೇಶ

    ಗರ್ಭಾಧಾನದ ನಂತರ ನಡೆಯಬೇಕಾದ ಸಂಸ್ಕಾರವಿದು. ಪುಂ ಎಂದರೆ ಪುರುಷ. ಸವನ ಎಂದರೆ ಪ್ರಸವಿಸುವುದು. ಯಾವ ಸಂಸ್ಕಾರದಿಂದ ಪುರುಷಶಿಶುವನ್ನು ಪಡೆಯುತ್ತೇವೆಯೋ ಅದು ಪುಂಸವನ. ಹಾಗಿದ್ದರೆ ಸ್ತ್ರೀಸಂತತಿಯು ಬೇಡವೇ? ಹುಟ್ಟುವ ಶಿಶುಗಳೆಲ್ಲ ಪುರುಷರೇ ಆಗಿ ತಕ್ಕ ಸಂಖ್ಯೆಯ ಸ್ತ್ರೀಯರಿಲ್ಲದಿದ್ದರೆ ವಂಶವೃದ್ಧಿ ಹೇಗೆ? ಸ್ತ್ರೀಯರನ್ನು ಕುರಿತು ಈ ಪಕ್ಷಪಾತ ನ್ಯಾಯವೇ?

    ಶಾಸ್ತ್ರಗಳನ್ನೇ ಉಲ್ಲೇಖಿಸಿ ಶ್ರೀರಂಗಮಹಾಗುರುಗಳು ಹೀಗೆ ಉತ್ತರಿಸಿದ್ದರು. ಪುರುಷ ಎಂದರೆ ಎರಡು ಅರ್ಥಗಳಿವೆ. ಬ್ರಹ್ಮಜ್ಞಾನಿ ಎಂದು ಒಂದರ್ಥ. ಬ್ರಹ್ಮಜ್ಞಾನಿಯಲ್ಲದವನನ್ನು ನಮ್ಮ ಸಾಹಿತ್ಯಗಳಲ್ಲಿ ಸ್ತ್ರೀ ಎಂದೇ ಕರೆದಿದ್ದಾರೆ. ಕಾರಣ ಪ್ರಕೃತಿಯ ಪ್ರತಿನಿಧಿ ಸ್ತ್ರೀ. ಅಂತಹ ಪ್ರಕೃತಿಕ್ಷೇತ್ರವನ್ನು, ಇಂದ್ರಿಯಕ್ಷೇತ್ರವನ್ನು ಮೀರಿ ದೈವಸಾಕ್ಷಾತ್ಕಾರ ಮಾಡಿಕೊಂಡಿದ್ದರೆ ಅವನು ಪುರುಷ. ಇಲ್ಲದಿದ್ದರೆ ಸ್ತ್ರೀ ಎಂಬ ತಾತ್ವಿಕ ಅಭಿಪ್ರಾಯವಿಲ್ಲಿದೆ. ಇಲ್ಲಿ ಪುರುಷಶಿಶುವನ್ನು ಪಡೆಯುವುದು ಎಂದರೆ ಜ್ಞಾನಿಯಾದ ಶಿಶುವನ್ನು ಪಡೆಯುವುದು ಎಂದರ್ಥ. “ಜ್ಞಾನಿಯಾಗಿದ್ದರೆ ಬಾಹ್ಯ ಲಕ್ಷಣಗಳು ಹೆಣ್ಣಿನಂತೆ ಇದ್ದರೂ ಸ್ತ್ರೀಯನ್ನೂ ಪುರುಷ ಎಂದೇ ಕರೆಯಬೇಕು” ಎಂದು ವೇದಮಾತೆಯು ಹೇಳುತ್ತಾಳೆ. ಪುರುಷದೇಹದ ಬಾಹ್ಯ ಚಿಹ್ನೆಗಳುಳ್ಳವನು ಪುರುಷ ಎನ್ನುವುದು ಎರಡನೆಯ ಅರ್ಥ.  ಗಂಡಸು ಎನ್ನುವ ಅಭಿಪ್ರಾಯದಲ್ಲಿ ಬಳಸುತ್ತೇವೆ. ಗಂಡುಶಿಶುವನ್ನು ಪ್ರಥಮಸಂತಾನವಾಗಿ ಬಯಸುವುದರಲ್ಲಿಯೂ ತಪ್ಪೇನಿಲ್ಲ. ಋಷಿಗಳು ತಮ್ಮ ಅತೀಂದ್ರಿಯ ದೃಷ್ಟಿಯಿಂದ ನೋಡಿ “ಪುತ್ರನು ತನ್ನ ಜನ್ಮದ ಕಾರಣದಿಂದಲೇ ಮಾತಾಪಿತೃಗಳನ್ನು ಪುತ್ ಎಂಬ ನರಕದಿಂದ ಪಾರುಮಾಡುತ್ತಾನೆ” ಎಂದಿದ್ದಾರೆ. 



    ಇದು ವಿಶೇಷವಾಗಿ ಸ್ತ್ರೀಗರ್ಭಕ್ಕೆ ಮಾಡುವ ಸಂಸ್ಕಾರ. ಮಹಾಪಾಪ ಕೃತ್ಯಗಳನ್ನು ಮಾಡಿರದಿದ್ದರೆ ಮುಂದಿನ ಎಲ್ಲ ಗರ್ಭಗಳಿಗೂ ಈ ಶುದ್ಧಿಯೇ ಮುಂದುವರೆಯುತ್ತದೆ. ಪುಂಸವನದ ಆಚರಣೆ ಸಂಕ್ಷಿಪ್ತವಾಗಿ ಹೀಗಿದೆ. ಪುಂಸವನ ಸಂಸ್ಕಾರಕ್ಕೆ ಪತ್ನಿಯು ಗರ್ಭವತಿಯಾಗಿರುವುದು ಖಚಿತವಾಗಿರಬೇಕು. 2,4,6 ಅಥವಾ 8ನೆಯ ತಿಂಗಳು ಉತ್ತಮ. ಇವೆಲ್ಲವೂ ಸಮಸಂಖ್ಯೆಯಾಗಿರುವುದರಿಂದ ಪುರುಷಸಂತಾನಕ್ಕೆ ಪೋಷಕ. ಪುರುಷ ನಕ್ಷತ್ರಗಳೂ ಕೂಡಿಬಂದರೆ ಇನ್ನೂ ಅನುಕೂಲ. ಪತ್ನಿಯು ಮಂಗಳಸ್ನಾನ, ಮಹಾತ್ಮರ ಅಥವಾ ದೇವತೆಗಳ ದರ್ಶನ ಮಾಡಿ ಹೊಸಬಟ್ಟೆಯನ್ನು ಧರಿಸಿ ಶುದ್ಧಳಾಗಿರಬೇಕು.

    ಮುಂದಿನ ಎಲ್ಲ ಗರ್ಭಗಳೂ ಶುದ್ಧವಾಗಲಿ, ಪುರುಷಶಿಶುವು ಜನಿಸಲಿ ಮತ್ತು ಜ್ಞಾನಕ್ಕೆ ವಿರೋಧವಾದ ದುಷ್ಟಶಕ್ತಿಗಳ ನಿವಾರಣೆಯಾಗಲಿ ಎಂಬ ಸಂಕಲ್ಪ ಮಾಡಬೇಕು. ಅಂಗೈಯಲ್ಲಿ ನಿಗಧಿತಪ್ರಮಾಣದ ಮೊಸರನ್ನು ಪತಿಯಿಂದ ಹಾಕಿಸಿಕೊಂಡು, ಆ ಮೊಸರಿನ ಎಡಬಲಗಳಲ್ಲಿ ಲಿಂಗಾಕಾರದಲ್ಲಿ ಧಾನ್ಯವನ್ನಿಟ್ಟು ಪುಂ-ಭಾವವನ್ನು ಸೇವಿಸುತ್ತಿದ್ದೇನೆ ಎಂದು ಭಾವನೆ ಮಾಡಬೇಕು. ಆಲದ ಶಾಖೆಯನ್ನು ಅರೆಯಿಸಿ ಅದರ ರಸವನ್ನು ಪತಿಯು, ನಿರ್ದಿಷ್ಟ ಮಂತ್ರದೊಂದಿಗೆ ತನ್ನ ಅಂಗುಷ್ಠದ ಮೂಲಕ ತನ್ನ ಪತ್ನಿಯ ಮೂಗಿನ ಬಲಹೊಳ್ಳೆಯಲ್ಲಿ ಬಿಡುತ್ತಾನೆ. ಔಷಧಿಯ ಲಾಭ, ಪುರುಷಭಾವದ ಸ್ಮೃತಿ ಮತ್ತು ಪರಮಾತ್ಮನನ್ನು ಪ್ರತಿನಿಧಿಸುವ ಹೆಬ್ಬೆರಳಿನ ಮೂಲಕ ಔಷದಿಯ ರಸವನ್ನು ಬಿಡುವುದು ಇವೆಲ್ಲವೂ ಪುರುಷಸಂತಾನಕ್ಕೆ ಬೇಕಾದ  ಧರ್ಮವನ್ನು ಸ್ತ್ರೀಯ ಮೈಯಲ್ಲಿ ಪ್ರಬೋಧಗೊಳಿಸುವುದು. ಆಧ್ಯಾತ್ಮಿಕ, ಅಧಿದೈವ, ಅಧಿಭೌತಿಕ ಮೂರೂ ಕ್ಷೇತ್ರಗಳಿಗೂ ವ್ಯಾಪಿಸುವಂತೆ ಆಚರಣೆಗಳೊಂದಿಗೆ ಜ್ಞಾನಿಯಾದ ಪುರುಷಶಿಶುವನ್ನು ಪಡೆಯಲು ಋಷಿಗಳು ರೂಪಿಸಿಕೊಟ್ಟ ಸಂಸ್ಕಾರವೇ ಪುಂಸವನ.

    ಸೂಚನೆ: ಈ ಲೇಖನ ಪ್ರಜಾ ವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ.

    Sunday, March 10, 2019

    ಹೆಸರಿನಲ್ಲೇನಿದೆ? (Hesarallenide?)

    ಲೇಖಕರು: ತಾರೋಡಿ ಸುರೇಶ

    ಹೆಸರಿಡುವುದನ್ನು ನಾಮಕರಣ ಎನ್ನುತ್ತಾರೆ. ಹೆಸರು ಒಂದು ವ್ಯಾವಹಾರಿಕ ಆವಶ್ಯಕತೆ. ಒಂದೊಮ್ಮೆ ಹೆಸರಿಡದಿದ್ದರೆ ತಾನಾಗಿಯೇ ವ್ಯಕ್ತಿಯಲ್ಲಿರುವ ವೈಶಿಷ್ಟ್ಯಕ್ಕನುಗುಣವಾಗಿ ಒಂದು ಹೆಸರು ಹುಟ್ಟಿಕೊಂಡುಬಿಡುತ್ತದೆ. ಹಲ್ಲು ಮುಂದೆ ಬಂದಿದ್ದರೆ ‘ಹಲ್ಲುಬ್ಬ’ ಎಂದೋ, ಬೆಕ್ಕಿನಂತಹ ಕಣ್ಣಿದ್ದರೆ ‘ಬೆಕ್ಕಿನಕಣ್ಣು’ ಎಂದೋ ಒಂದು ಹೆಸರು ಆವಿರ್ಭವಿಸಿಬಿಡುತ್ತದೆ.  ಇದು ಮನುಷ್ಯರಿಗೆ ಮಾತ್ರವಲ್ಲ.ವಿಶ್ವದಲ್ಲಿರುವ ಸಮಸ್ತ ಪದಾರ್ಥ, ಪ್ರಾಣಿ, ಸಸ್ಯ ಎಲ್ಲವುದಕ್ಕೂ ಅನ್ವಯಿಸುತ್ತದೆ.

    ಶೇಕ್ಸ್‍ಫಿಯರ್ 'what is there in a name? A rose by any other name would smell as sweet.' ಎಂದು ಹೇಳುತ್ತಾನೆ. ರೋಸ್ ಗೆ ಮೋಸ್ ಎಂದೋ.ನೋಸ್ ಎಂದೋ ಕರೆದಾಕ್ಷಣ ಅದರ ವಾಸನೆ,ಬಣ್ಣ ಎಲ್ಲ ಬದಲಾಗಿಬಿಡುವುದೇ?  ಎನ್ನುವುದು ಈ ಮಾತಿನ ಅಭಿಪ್ರಾಯ. ಆದರೆ ಅದರ ಕೋಮಲತೆ,ವರ್ಣ,ಸೌರಭ ಸ್ವರೂಪಕ್ಕಗನುಗುಣವಾಗಿ ಹೆಸರಿಡುವುದೊಂದು ಕಲೆ ಎನ್ನುವುದನ್ನು ಅಲ್ಲಗಳೆಯಲಾಗದು.

    ವ್ಯವಹಾರವೆಂದರೇನು?. ಮೂಲ ಆಶಯಕ್ಕನುಗುಣವಾಗಿ ನಡೆಸುವುದೆಲ್ಲವೂ ವ್ಯವಹಾರವೇ. ನಮ್ಮ ಪೂರ್ವಜರಾದ ಋಷಿಗಳು ವ್ಯವಹಾರವನ್ನು ಎರಡು ಬಗೆಯಾಗಿ ಕಂಡು, ಅವುಗಳಿಗೆ ಲೌಕಿಕ ಮತ್ತು ಪಾರಮಾರ್ಥಿಕ ಎಂದು ಹೆಸರಿಟ್ಟಿದ್ದಾರೆ. ಆದರೆ ಲೌಕಿಕವು ಪಾರಮಾರ್ಥಿಕಕ್ಕೆ ಅನುಗುಣವಾಗಿರಬೇಕು ಎಂದು ಪರಮಾತ್ಮಸುಖಕ್ಕೆ ಸೋಪಾನವಾಗಿ ಈ ವ್ಯವಹಾರಗಳನ್ನು ಅಳವಡಿಸಿದರು. ಅವೆರಡಕ್ಕೂ ಹೊಂದುವಂತೆ ಹೆಸರಿಡುವ ಪ್ರಕ್ರಿಯೆಯನ್ನು ತಂದಿದ್ದಾರೆ.

    ಮಗನಿಗೆ ಇಟ್ಟಿದ್ದ ‘ನಾರಾಯಣ’ ಎಂಬ ಶುಭ ನಾಮಧೇಯದ ಕಾರಣದಿಂದ ಅಜಾಮಿಳನಿಗೆ ಸದ್ಗತಿ ಪ್ರಾಪ್ತವಾಯಿತು ಎಂಬ ಕಥೆ ಇದೆ. ಸುಮ್ಮನೆ ಕರೆಯಲು ಒಂದು ಹೆಸರು ಎಂದು ನಮ್ಮ ದೇಶದಲ್ಲಿ ಬಂದಿಲ್ಲ. ಅದರ ಹಿನ್ನೆಲೆಯಲ್ಲಿ ಆಳವಾದ ವಿಜ್ಞಾನವಿದೆ. ‘ಮೊದಲು ತಾನೇತಾನಾಗಿ ಬೆಳಗುತ್ತಿದ್ದ ಪರತತ್ವವು ಸೃಷ್ಟಿಗೆ ಹೆಜ್ಜೆಯಿಟ್ಟಾಗ ತನ್ನನ್ನೇ ನಾಮ ರೂಪ ಪ್ರಪಂಚವಾಗಿ ಬೆಳೆಸಿಕೊಂಡಿತು’ ಎಂದು ಶ್ರುತಿಸ್ಮೃತಿಗಳು ಹೇಳುತ್ತವೆ. ಅಂದರೆ ಆಗ ಸೃಷ್ಟಿಗೊಂಡ ಸಮಸ್ತ ಜೀವಜಾತಿಗಳೊಂದಿಗೆ, ಮತ್ತು ಪದಾರ್ಥಗಳೊಂದಿಗೆ ಅವುಗಳ ಶಬ್ಧರೂಪವಾದ ಅಭಿವ್ಯಕ್ತಿಯಾಗಿ ಹೆಸರು(ಪದ)ಗಳೂ ಬಂದವು. ಅರ್ಥ(ಪದಾರ್ಥ)ಕ್ಕೆ ಪದವು ದೇಹವಾಗುತ್ತದೆ. ಅರ್ಥಕ್ಕೂ ಪದಕ್ಕೂ ಒಂದು ಅವಿನಾಭಾವಸಂಬಂಧವಿರುತ್ತದೆ. ಅರ್ಥವನ್ನು ಹಿಡಿದರೆ ಅದು ಪದಕ್ಕೂ, ಹಾಗೆಯೇ ಪದವನ್ನು ಹಿಡಿದರೆ ಅದು ಅರ್ಥಕ್ಕೂ ನಯನಮಾಡುವುದು. 

    ಈ ರೀತಿ ಸೃಷ್ಟಿಯಲ್ಲಿ ಸಹಜವಾಗಿರುವ ಪದ ಪದಾರ್ಥಗಳ ಸಂಬಂಧವನ್ನು ಅರಿತು, ಯಾವುದೇ ವ್ಯಕ್ತಿಗೂ ಮತ್ತು ಪದಾರ್ಥಗಳಿಗೂ ಹೆಸರನ್ನಿಡುವ ಕಲೆ,ವಿಜ್ಞಾನ ನಮ್ಮ ದೇಶದಲ್ಲಿದ್ದಿತ್ತು. “ನಾಮ ಎನ್ನುವುದು ಚೈತನ್ಯದ ಶಬ್ಧರೂಪವಾದ ಮೂರ್ತಿ” ಎಂದು ಶ್ರೀರಂಗಮಹಾಗುರುಗಳು ವರ್ಣಿಸುತ್ತಿದ್ದರು. ವ್ಯಕ್ತಿಯೊಬ್ಬನು ಜೀವ, ಮನೋಬುದ್ಧೀಂದ್ರಿಯಗಳು, ಪುಣ್ಯಪಾಪಗಳ ಸಂಸ್ಕಾರಗಳು, ಇವುಗಳೆಲ್ಲಕ್ಕೂ ಒಡಲಾಗಿರುವ ದೇಹದಿಂದ ಕೂಡಿರುತ್ತಾನಷ್ಟೆ.  ಮೂಲದಲ್ಲಿ ಪರಮಾತ್ಮತತ್ವವೂ ಬೆಳಗುತ್ತಿರುತ್ತದೆ. ಜ್ಞಾನಿಗಳಾದ ಮಾತಾಪಿತೃಗಳು ಗುರುಜನರು ಇದೆಲ್ಲವನ್ನು ತಮ್ಮ ಯೋಗದೃಷ್ಟಿಯಿಂದ ಅರಿತು ಆ ಜೀವಕ್ಕೆ ಸಹಜವಾದ ಶಬ್ಧರೂಪವಾದ ಹೆಸರನ್ನಿಡುವ ಪದ್ಧತಿಯಿತ್ತು.  ಅದರ ಉಚ್ಛಾರ, ಸ್ಮರಣೆಗಳು ವಿಜ್ಞಾನಸಹಿತವಾಗಿದ್ದಾಗ ಆ ಜೀವಿಯನ್ನು ಪರಮಾತ್ಮನಲ್ಲಿ ಲಯಗೊಳಿಸುವ ಮಂತ್ರರೂಪವಾದ ಸಾಧನವಾಗುತ್ತಿದ್ದವು. ಆದ್ದರಿಂದಲೇ ನಮ್ಮ ರಾಷ್ಟ್ರಕವಿಯಾದ ಕಾಳಿದಾಸನು  ‘ಶಬ್ದ(ಪದ,ಹೆಸರು) ಮತ್ತು ಅರ್ಥಗಳು ಎಂದಿಗೂ ಬೇರೆಯಾಗದ ಪಾರ್ವತೀಪರಮೇಶ್ವರರಂತೆ’ ಎಂದಿದ್ದಾನೆ. ಜೊತೆಗೆ, ದೇವರು, ದೇವರಿಗೆ ಸಮರ್ಪಿಸುವ ಪದಾರ್ಥಗಳಿಗೆ ಹೆಸರಿಡುವಾಗ, ಜೀವನದ ಮಹಾಧ್ಯೇಯಸಾಧನೆಗೆ ಸ್ಫೂರ್ತಿದಾಯಕವಾದ, ಸ್ತ್ರೀಪುರುಷ ಧರ್ಮಗಳಿಗೆ ಹೊಂದಿಕೊಳ್ಳುವ ಹೆಸರುಗಳನ್ನು ಇಡುತ್ತಿದ್ದರು - ಹೀಗೆಲ್ಲಾ ಋಷಿಗಳ ಚಿಂತನೆ ತುಂಬಾ ಆಳವಾಗಿ ಸಾಗಿದೆ. ಹೆಸರು ಆರ್ಥಶುದ್ಧಿ,ವರ್ಣಶುದ್ಧಿ,ಮಂತ್ರಶುದ್ಧಿಯನ್ನು ಹೊಂದಿ,ಅಂತ್ಯದಲ್ಲಿ ನಾಮರೂಪಗಳ ಸೀಮೆಯನ್ನು ದಾಟಿ ಪರತತ್ವದಲ್ಲಿ ನೆಲೆಗೊಳಿಸುತ್ತದೆ.

    ಒಟ್ಟಿನಲ್ಲಿ, ನಾಮ, ರೂಪ ಮತ್ತು ಅವುಗಳ ವಿಕಾಸಕ್ಕೂ ಮೊದಲಿನ ಬೀಜರೂಪವಾದ ಭಗವಂತ- ಈ ಮೂರರ ಸಂಯೋಜನೆಯಿಂದಾಗಿ ಹೆಸರಿಟ್ಟುಕೊಂಡವನಲ್ಲಿ ಒಂದು ಧರ್ಮವು ಉದ್ಬೋಧಗೊಂಡು ಅದೊಂದು ಸಂಸ್ಕಾರವಾಗಿ ಆ ಜೀವಿಯ ಉದ್ಧಾರಕ್ಕೆ ಕಾರಣವಾಗುತ್ತದೆ. ಹೆಸರೇ ಒಂದು ಸಾಧನಾಕ್ರಮವಾಗಿ ಜೀವಿಯನ್ನು ಪರಮಾತ್ಮತತ್ವದ ಉಪಾಸನೆಯಲ್ಲಿ ನೆಲೆನಿಲ್ಲಿಸುವುದು ಅದೆಂತಹ ಅದ್ಭುತವಾದ ವಿಷಯವಾಗಿದೆ.

    ಸೂಚನೆ: ಈ ಲೇಖನದ ಆಯ್ದ ಭಾಗಗಳು ವಿಜಯ ಕರ್ನಾಟಕ ಪತ್ರಿಕೆಯ ಬೋಧಿ ವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.

    ವಾಗ್ವೈಖರೀ (Vaagvaikhari)

    ಲೇಖಕರು : ಡಾ. ಎಂ. ಜಿ. ಪ್ರಸಾದ್
    ನಿವೃತ್ತ ಪ್ರಾಧ್ಯಾಪಕರು, ಸ್ಟೀವನ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ
    ನ್ಯೂಜರ್ಸಿ, ಅಮೇರಿಕಾ






    ಪರಿಚಯ:
    ಸಾಮಾನ್ಯವಾಗಿ ಮನುಷ್ಯನಿಗೆ ಮಾತನಾಡುವುದು ಹುಟ್ಟಿನಿಂದ ಬರುವ ಶಕ್ತಿ. ಅದರಲ್ಲಿಯೂ ಮಕ್ಕಳಾಡುವ ಮಾತು ಚೆನ್ನ. ಹಾಗೆಯೇ ಮಕ್ಕಳು ಬೆಳೆಯುತ್ತಿದ್ದಂತೆ ಅವರು ಮಾತನಾಡುವ ಶಕ್ತಿಯನ್ನೂ ಬೆಳೆಸಿಕೊಳ್ಳಬೇಕು. ನಮಗೆಲ್ಲಾ ತಿಳಿದಂತೆ ಮಾತನಾಡುವ ಕಲೆ ಜೀವನದಲ್ಲಿ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಮಾತು ಎಂಬ ಪದಕ್ಕೆ ಸಂಸ್ಕೃತ ಭಾಷೆಯಲ್ಲಿ ‘ವಾಕ್ ‘ ಎಂದಾಗುತ್ತದೆ. ಅಂತೆಯೇ ಯಾರಾದರೂ ವೇದಿಕೆಯ ಮೇಲೆ ಅಥವಾ ಸಾಮಾನ್ಯವಾಗಿಯಾದರೂ ಪ್ರಭಾವಶಾಲಿಯಾಗಿ ಮಾತನಾಡಿದಾಗ ಅವರ ವಾಗ್ವೈಖರೀ ಎಷ್ಟು ಚೆಂದ ಎನ್ನುತೇವೆ. ಆದ್ದರಿಂದ ಯಾವ ಶಕ್ತಿಯಿಂದ ಇಂತಹ ವಾಗ್ವೈಖರೀ ಹೊರಬರುತ್ತದೆ? ಎಂಬ ಪ್ರಶ್ನೆ ಕುತೂಹಲವನ್ನು ಉಂಟುಮಾಡುತ್ತದೆ. ಇದಕ್ಕೆ ಉತ್ತರವಾಗಿ ನಮ್ಮ ಸನಾತನ ಧರ್ಮದ ಮೂಲವಾದ ವೇದಗಳಲ್ಲಿ ವಾಕ್ಕಿಗೆ ನಾಲ್ಕು ಹಂತಗಳಿವೆ ಎಂದು ಹೇಳಿದೆ.

    ಮಾತಿನ ನಾಲ್ಕು ಹಂತಗಳು:
    ಮಾತನಾಡುವುದು ಸಾಮಾನ್ಯವಾಗಿ ಸುಲಭವೆಂದು ಕಂಡುಬಂದರೂ ನಮ್ಮ ಬಾಯಿನಿಂದ ಹೊರಬರುವ ಮಾತನ್ನು ಆಳವಾದ ದೃಷ್ಟಿಯಿಂದ ನಮಗೆ ವೇದಗಳನ್ನು ನೀಡಿದ ಋಷಿಗಳು ನೋಡಿದ್ದಾರೆ. ಋಗ್ವೇದದ ಒಂದು ಮಂತ್ರದ ಭಾವಾರ್ಥ ಹೀಗಿದೆ. ಮಾತಿಗೆ ನಾಲ್ಕು ಹಂತಗಳಿವೆ ಎಂದು ಜ್ಞಾನಿಗಳು ಹೇಳುತ್ತಾರೆ. ಅದರಲ್ಲಿ ಮೂರು ಹಂತಗಳು ಮನುಷ್ಯನ ದೇಹದೊಳಗೆ ಗುಹೆಯಲ್ಲಿ ಇರುವಂತೆ ಅಡಗಿವೆ. ಮನುಷ್ಯನ ಬಾಯಿನಿಂದ ಹೊರಬರುವ ಮಾತು ನಾಲ್ಕನೆಯ ಹಂತ.  ಈ ನಾಲ್ಲಕು ಹಂತಗಳನ್ನೇ ಪರಾ, ಪಶ್ಯಂತೀ, ಮಧ್ಯಮಾ ಹಾಗು ವೈಖರೀ ಎಂದು ಶಾಸ್ತ್ರಗಳಲ್ಲಿ ಗುರುತಿಸುತ್ತಾರೆ.

    ಮಾತು ಎಲ್ಲಿ ಹುಟ್ಟುತ್ತದೆ?
    ಮಾತಿನ ಅಥವಾ ವಾಕ್ಕಿನ ಹುಟ್ಟು ಎಲ್ಲಿಂದಾಗುತ್ತದೆ? ಎಂಬ ಪ್ರಶ್ನೆಗೆ ಉತ್ತರವೇ ಎಲ್ಲಿ ‘ಪರಾ’ ಎಂಬ ಮೂಲವಾದ ಹಂತದ ಸ್ಥಾನವೋ ಅಲ್ಲಿಂದ ಮಾತು ಶಕ್ತಿ ರೂಪದಲ್ಲಿ ಹುಟ್ಟುತ್ತದೆ. ನಮ್ಮ ದೇಹದಲ್ಲಿ ಯೋಗದೃಷ್ಟಿಯಿಂದ ನೋಡಿದಾಗ ನಮ್ಮಲ್ಲಿ ಉದ್ದೀಪನಗೊಳ್ಳುವ ಶಕ್ತಿಗಳಿಗೆ ಮೂಲಸ್ಥಾನವಾಗಿ ಮೂಲಾಧಾರ ಚಕ್ರವಿದೆ. ಈ ಮೂಲಾಧಾರ ಚಕ್ರವು ಗುದ ಮತ್ತು ಲಿಂಗಗಳ ಮಧ್ಯೆ ಇರುವ ತ್ರಿಕೋನ ಪ್ರದೇಶದಲ್ಲಿರುತ್ತದೆ. ಮಾತನಾಡಬೇಕೆಂಬ ಇಚ್ಛೆಯು ವ್ಯಕ್ತಿಯಲ್ಲಿ ಬಂದಾಗ ಈ ಇಚ್ಛಾಶಕ್ತಿಯೂ ಮನಸ್ಸಿನ ಮೂಲಕ ಮೂಲಾಧಾರದಲ್ಲಿ ಅಡಗಿರುವ ಪರಾ ಹಂತದಲ್ಲಿ ಮಾತಿನ ಶಕ್ತಿಯ ರೂಪದಲ್ಲಿ ಮೇಲ್ಮುಖವಾಗಿ ಚಲಿಸುತ್ತದೆ. ನಂತರ ಆ ಶಕ್ತಿಯು ನಾಭಿ ಎಂದರೆ ಹೊಕ್ಕಳಿನ ಸ್ಥಾನಕ್ಕೆ ಚಲಿಸುತ್ತದೆ. ನಾಭಿ ಸ್ಥಾನದಲ್ಲಿ ಈ ಶಕ್ತಿಯು ಪಶ್ಯಂತೀ ಎನಿಸಿಕೊಳ್ಳುತ್ತದೆ. ಹಾಗೆಯೇ ಮಾತಿನ ಶಕ್ತಿಯು ಮೇಲ್ಮುಖವಾಗಿ ಚಲಿಸಿ ಹೃದಯ ಸ್ಥಾನಕ್ಕೆ ಬರುತ್ತದೆ. ಆಗ ಅದು ಮಧ್ಯಮಾ ಎನಿಸಿಕೊಳ್ಳುತ್ತದೆ. ಕೊನೆಗೆ ಈ ಶಕ್ತಿಯು ಮೇಲ್ಮುಖವಾಗಿ ಚಲಿಸಿ ಗಂಟಲಿನ ಸ್ಥಾನಕ್ಕೆ ಬಂದು ನಾಲಗೆ, ಹಲ್ಲು, ಮೂಗು, ದವಡೆಗಳು ಹಾಗು ತುಟಿಗಳ ಸಹಾಯದಿಂದ ಬಾಯಿಯ ಮೂಲಕ ಹೊರಬಂದು ವೈಖರೀ ಎಂದೆನಿಸಿಕೊಳ್ಳುತ್ತದೆ.

    ಮಾತಿನ ಮಹತ್ವ:
    ವ್ಯಕ್ತಿಯ ಮನಸ್ಸಿನಲ್ಲಿ ಏಳುವ ಭಾವನೆಗಳು ಒಂದು ಭಾಷೆಯ ಮೂಲಕ ಮಾತಿನ ರೂಪದಲ್ಲಿ ವ್ಯಕ್ತವಾಗುವುದಕ್ಕೆ ವ್ಯಕ್ತಿಯ ದೇಹದಲ್ಲಿ ಇಷ್ಟು ಕ್ರಿಯೆಗಳಾಗಬೇಕು. ಇದಕ್ಕೆ ಪೂರಕವಾಗಿ ವ್ಯಕ್ತಿಯು ತನ್ನಲ್ಲಿರುವ ಜ್ಞಾನ, ಮಾತಿನ ದೃಷ್ಟಿ ಹಾಗು ಪದಗಳ ಭಂಡಾರ ಇವುಗಳನ್ನು ಉಪಯೋಗಿಸಿಕೊಂಡು ಮಾತನ್ನಾಡಬೇಕು. ಆದ್ದರಿಂದಲೇ ತ್ರಿಕರಣಗಳ ಶುದ್ಧಿ ಎಂದಾಗ ಕಾಯಾ, ವಾಚಾ ಹಾಗು ಮನಸಾ ಶುದ್ಧತೆ ಎಂದೆನಿಸಿಕೊಳ್ಳುತ್ತದೆ. ಅದಕ್ಕಾಗಿಯೇ ಕರ್ಮಣ್ಯೇಕಂ ವಚಸ್ಯೇಕಂ ಮನಸ್ಯೇಕಂ ಮಹಾತ್ಮಾನಾಮ್  ಎಂದರೆ ಮಹಾತ್ಮರ ಕಾರ್ಯ, ಮಾತು ಹಾಗು ಮನಸ್ಸು ಒಂದಾಗಿರುತ್ತದೆ. ಅದಕ್ಕಾಗಿಯೇ ಮಾತಿಗೆ ಇಷ್ಟು ಮಹತ್ವ. ಆದ್ದರಿಂದಲೇ ನಮ್ಮ ಸನಾತನ ಧರ್ಮದಲ್ಲಿ ವಾಕ್ಕಿನ ಶಕ್ತಿಯನ್ನು ವಾಗ್ದೇವಿ ಅಥವಾ ಸರಸ್ವತಿ ದೇವಿಯೆಂದು ಆರಾಧಿಸುತ್ತೇವೆ. ಒಬ್ಬ ವ್ಯಕ್ತಿಯ ವಾಗ್ವೈಖರೀ ಚೆನ್ನಾಗಿದೆ ಎನ್ನಬೇಕಾದರೆ ಅದರ ಹಿಂದಿರುವ ಈ ಎಲ್ಲಾ ಅಂಶಗಳನ್ನು ನೋಡಬೇಕು.

    ಸೂಚನೆ: ಈ ಲೇಖನದ ಆಯ್ದ ಭಾಗಗಳು ವಿಜಯ ಕರ್ನಾಟಕ ಪತ್ರಿಕೆಯ ಬೋಧಿ ವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.