Sunday, February 27, 2022

ಶ್ರೀ ರಾಮನ ಗುಣಗಳು - 45 ಪತಿತೋದ್ಧಾರಕ- ಶ್ರೀರಾಮ (Sriramana Gunagalu - 45 Patitoddharaka-Srirama)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್

(ಪ್ರತಿಕ್ರಿಯಿಸಿರಿ lekhana@ayvm.in)



ಶ್ರೀರಾಮನಿಗೆ 'ಪತಿತೋದ್ಧಾರಕ' ಎಂಬ ಬಹು ವಿಶಿಷ್ಟವಾದ ಅನ್ವರ್ಥವಿದೆ. ವಿಶ್ವಾಮಿತ್ರರು ಶ್ರೀರಾಮನನ್ನು ಮಿಥಿಲೆಗೆ ಕರೆದುಕೊಂಡು ಹೋಗುತ್ತಾರೆ. ಅಲ್ಲಿ ಜನಕನ ಪುರೋಹಿತರಾದ ಶತಾನಂದರನ್ನು ಸಂದರ್ಶಿಸುತ್ತಾರೆ. ಅವರಾದರೋ ಗೌತಮ ಮಹರ್ಷಿಗಳ ಹಿರಿಯ ಮಗ. ಶ್ರೀರಾಮನು ಮಾಡಿದ ಅಹಲ್ಯೋದ್ಧಾರದ ಕಥೆಯನ್ನು ವಿಶ್ವಾಮಿತ್ರರು ಶತಾನಂದರಿಗೆ ಹೇಳುತ್ತಾರೆ. ತನ್ನ ತಾಯಿಯ ಶಾಪವಿಮೋಚನೆಯನ್ನು ಮಾಡಿದ ಈ ಮಹಾತ್ಮನನ್ನು ಕಂಡೊಡನೆ ಶತಾನಂದರು ಪುಲಕಿತರಾಗುತ್ತಾರೆ. ಆಗ ಶತಾನಂದರು ವಿಶ್ವಾಮಿತ್ರರನ್ನು ಪ್ರಶ್ನಿಸುತ್ತಾರೆ – "ಮುನಿಗಳೇ ! ನನ್ನ ತಾಯಿಯ ಶಾಪವಿಮೋಚನೆಯ ಕಥೆಯನ್ನು ವಿಸ್ತಾರವಾಗಿ ತಿಳಿಸಿ" ಎಂದು ಕೇಳುತ್ತಾರೆ. ಶ್ರೀರಾಮನ ಗುಣವಿಶೇಷಗಳನ್ನು ಪರಿಚಯಿಸುತ್ತಾ- "ಯಾವ ರೀತಿಯಾಗಿ ಪರಶುರಾಮನ ತಾಯಿಯಾದ ರೇಣುಕೆಯು ತನ್ನ ಪತಿಯನ್ನೇ ಮತ್ತೆ ಸೇರಿದಳೋ, ಅಂತೆಯೇ ನಿನ್ನ ತಾಯಿಯೂ ಪತಿಯಾದ ಗೌತಮರನ್ನು ಸೇರಿದಳು" ಎಂದು.  

ಗೌತಮರ ಭಾರ್ಯಾ ಅಹಲ್ಯೆ. ಆಕೆ ಅನೇಕ ವರ್ಷಗಳ ಕಾಲ ಪತಿಯ ಯಜ್ಞದಲ್ಲಿ ಸಹಧರ್ಮಿಣಿಯಾಗಿ ಸೇವೆಯನ್ನೂ ಸಲ್ಲಿಸಿದ್ದಳು. ಒಮ್ಮೆ ಇಂದ್ರನು, ಗೌತಮರ ವೇಷವನ್ನು ಧರಿಸಿ, ಗೌತಮರು ಇಲ್ಲದ ವೇಳೆಯನ್ನು ಗಮನಿಸಿ ಆಶ್ರಮಕ್ಕೆ ಹೋಗುತ್ತಾನೆ. ಅಹಲ್ಯೆಯ ಜೊತೆ ಬಹುವಾಗಿ ಮಾತನಾಡಿ ಅವಳ ಸಮಾಗಮವನ್ನೂ ಬಯಸುತ್ತಾನೆ. "ದೇವೇಂದ್ರನೇ ಬಂದು ಕೇಳುತ್ತಿರುವಾಗ ಹೇಗೆ ನಿರಾಕರಿಸುವುದು?" ಎಂಬ ಸಂದೇಹದಿಂದ ಅಹಲ್ಯೆ ಅನುಮತಿಸಿದಳು. ಇಲ್ಲೇ ಅಹಲ್ಯೆಯ ಪತನ ಉಂಟಾಯಿತು. ತನ್ನ ಪತಿವ್ರತಾಧರ್ಮದಿಂದ ಜಾರಿದಳು. ಇದರ ಫಲವಾಗಿ ಅವಳಿಗೆ 'ಸಾವಿರವರ್ಷ ಗಾಳಿಯನ್ನು ಸೇವಿಸುತ್ತಾ ಅದೃಶ್ಯಳಾಗಿ ಇರು' ಎಂದು ಶಪಿಸಿದರು ಗೌತಮರು. ಶಾಪಗ್ರಸ್ತಳಾಗಿ ಪತಿಯ ವಿಯೋಗವನ್ನು ಪಡೆಯುವಂತಾಯಿತು. ಶಾಪವಿಮೋಚನೆಯ ಪರಿಹಾರವಾಗಿ "ಯಾವಾಗ ದಶರಥನ ಮಗನಾದ ಶ್ರೀರಾಮನು ಬರುವನೋ ಅಂದು ನೀನು ಪೂತಳಾಗುವೆ" ಎಂದೂ ಅನುಗ್ರಹಿಸಿದರು. ಅಂದಿನಿಂದ ಅಹಲ್ಯೆಯು ಗೌತಮರಿಂದ ದೂರವಾದಳು. ಶ್ರೀರಾಮಚಂದ್ರನ ಆಗಮನದಿಂದ ಮತ್ತೆ ಅಹಲ್ಯೆಯು ಪೂತಳಾಗಿ ತನ್ನ ಪತಿದೇವರನ್ನು ಸೇರುವಂತಾಯಿಯು. ಇದು ಶ್ರೀರಾಮನು 'ಪತಿತೋದ್ಧಾರಕ' ನಾದ ಪರಿ.

ಉತ್ – ಮೇಲಕ್ಕೆ, ಹರಣ ಎತ್ತುವುದನ್ನು 'ಉದ್ಧಾರ' ಪತಿತರನ್ನು ಮೇಲಕ್ಕೆತ್ತುವುದನ್ನು 'ಉದ್ಧಾರ' ಎನ್ನುತ್ತಾರೆ. "ಮಹರ್ಷಿಗಳ ಅಂತರಂಗ ಭೂಮಿಕೆಯಲ್ಲಿ ಕಂಡ ಋತ-ಸತ್ಯಕ್ಕೆ ಅವಿರೋಧವಾಗಿ ನಡೆಯುವ ಮಾರ್ಗವೇ ಸನ್ಮಾರ್ಗ, ಇದಕ್ಕೆ ವಿರೋಧವಾಗಿದ್ದರೆ ದುಷ್ಕೃತ" ಎಂದು ಶ್ರೀರಂಗಮಹಾಗುರುಗಳು ಪಾಪಕರ್ಮಕ್ಕೆ ಈರೀತಿಯಾದ ವಿವರಣೆಯನ್ನು ಕೊಟ್ಟಿದ್ದರು. ಹಾಗು ಶಾಸ್ತ್ರದಲ್ಲಿ ಪತಿತರ ಲಕ್ಷಣವನ್ನು ಹೀಗೆ ಹೇಳಿದ್ದಾರೆ " ವಿಹಿತಸ್ಯ ಅನನುಷ್ಠಾನಾತ್ ನಿಂದಿತಸ್ಯ ಚ ಸೇವನಾತ್ | ಅನಿಗ್ರಹಾಚ್ಚೇಂದ್ರಿಯಾಣಾಂ ನರಃ ಪತನಮೃಚ್ಛತಿ" – ಮಾಡಲೇಬೇಕಾದ ಕಾರ್ಯವನ್ನು ಮಾಡದೇ ಇರುವುದರಿಂದ, ನಿಂದಿತವಾದ ಕರ್ಮವನ್ನು ಮಾಡುವುದರಿಂದ, ಇಂದ್ರಿಯವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳದಿರುವುದರಿಂದ ಮಾನವನು ಪತಿತನಾಗುತ್ತಾನೆ. ಎಂದು. ಇಲ್ಲಿ ಹೇಳಿದ ಎಲ್ಲಾ ರೀತಿಯಿಂದಲೂ ಅಹಲ್ಯೆ ಪತಿತಳಾಗಿರುತ್ತಾಳೆ. ಪತಿತರಾದಾಗ ಆ ವ್ಯಕ್ತಿಯು ವಿವೇಕವನ್ನು ಕಳೆದುಕೊಂಡಿರುತ್ತಾನೆ. ಆಗ ಸರಿ-ತಪ್ಪುಗಳನ್ನು ನಿರ್ಧರಿಸುವುದು ಕಷ್ಟವಾಗುತ್ತದೆ. ಭಗವಂತನ ಸಂಕಲ್ಪವೇ ಪತಿತರನ್ನು ಉದ್ಧರಿಸುವುದು, ಅವರ ಪಾಪಗಳನ್ನು ದೂರಮಾಡುವುದು, ಅವರನ್ನು ನಿಷ್ಕಲ್ಮಷರನ್ನಾಗಿಸುವುದು. ಹಾಗಾಗಿ ಶ್ರೀರಾಮ ಅಹಲ್ಯೆಯಂತಹ ಪತಿತರನ್ನು ಉದ್ಧಾರಮಾಡುವ ಮೂಲಕ ಪತಿತೋದ್ಧಾರಕ ಎಂಬ ಶಾಶ್ವತ ನಾಮವನ್ನು ಪಡೆದ.

ಸೂಚನೆ : 27/2/2022 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯ "ಶ್ರೀರಾಮನ ಗುಣಗಳು" ಅಂಕಣದಲ್ಲಿ ಪ್ರಕಟವಾಗಿದೆ.

Thursday, February 24, 2022

ವಿಶ್ವಶಾಂತಿಗಾಗಿ ನಾವು ಬದಲಾಗೋಣ (Vishvashaanthigaagi naavu badalaagona)


ಲೇಖಕರು : ಶ್ರೀ ರಾಜಗೋಪಾಲನ್. 
ಕೆ. ಎಸ್ 

ಪ್ರತಿಕ್ರಿಯಿಸಿರಿ lekhana@ayvm.in




ಮನುಷ್ಯ ಕೆಲವು ಶತಮಾನಗಳ ಹಿಂದೆ ಇದ್ದಂತೆ ಈಗ ಜೀವನ ನಡೆಸುತ್ತಿಲ್ಲ. ಎಷ್ಟೋ ಸುಸಂಸ್ಕೃತನಾಗಿದ್ದಾನೆ. ಆದರೆ ಹೀಗಾದದ್ದು ಏಕಾಏಕಿ ಅಲ್ಲ. ಜೀವನದ ಸಾಕಷ್ಟು ಅನುಭವಗಳು ಕಾಲಕ್ರಮೇಣ ಅವನನ್ನು ಮಾರ್ಪಡಿಸಿವೆ. ಸಮಾಜ ತನ್ನದೇ ಆದ ಕಟ್ಟಳೆಗಳನ್ನು ನಿರ್ಮಿಸಿಕೊಂಡಿದೆ. ಇವುಗಳ ಹಿಂದಿನ ಉದ್ದೇಶ ಎಲ್ಲರೂ ಶಾಂತಿಯುತವಾಗಿ ಬದುಕಬೇಕೆಂಬುದೇ ಆಗಿದೆ. ನಾವು ಚೆನ್ನಾಗಿರಬೇಕಾದರೆ, ಹೇಗಿರಬೇಕು ಎಂಬುದನ್ನು ನಾನಾ ಧರ್ಮಗುರುಗಳು ತಮ್ಮ ಸಂದೇಶಗಳ ಮೂಲಕ ಸಾರಿ ಹೋಗಿದ್ದಾರೆ. ಕೆಲವರು ಧರ್ಮಸಂದೇಶಗಳನ್ನು ಸಾರುವ ಕಥೆಗಳನ್ನೂ ಹೇಳಿ ಹೋಗಿದ್ದಾರೆ.


 ನಮ್ಮ ದೇಶದ ಪುರಾಣೇತಿಹಾಸಗಳು ಧರ್ಮಕ್ಕಾಗಿ ಕಟ್ಟುಬಿದ್ದು ಜೀವನ ನಡೆಸಬೇಕೆಂಬ ಸಂದೇಶವನ್ನು ಸಾರುವಂತೆ ಬಹುಶಃ ವಿಶ್ವದ ಬೇರಾವ ಧರ್ಮಗ್ರಂಥಗಳೂ ಸಾರಿಲ್ಲ. ಆದರೆ ನಮ್ಮ ಗ್ರಂಥಗಳಲ್ಲಿನ ಧರ್ಮಸೂಕ್ಷ್ಮತೆಗಳನ್ನು ಅರಿಯದೆ ಹೋದ ಅಜ್ಞಾನಿಗಳಿಂದಲೂ, ಭಾರತದ ಮೇಲೆ ಆಕ್ರಮಣ ಮಾಡಿದ್ದಲ್ಲದೆ, ಇಲ್ಲಿನ ಸೈದ್ಧಾಂತಿಕ ನಿಲುವುಗಳನ್ನು ಕಪಟದಿಂದ ಕೊನೆಗೊಳಿಸಲೆತ್ನಿಸಿದ ಪರಕೀಯರಿಂದ, ಹಾಗೂ ಅವರ ಮಾನಸಪುತ್ರರಾದ ಸ್ವದೇಶೀಯರಿಂದಲೂ ಅಲ್ಲಲ್ಲಿ ಅಪಪ್ರಚಾರ ನಡೆದಿದೆಯಷ್ಟೆ. 


ದೇವರ/ವೇದಗಳ ಪ್ರಾಮಾಣ್ಯವನ್ನು ಒಪ್ಪದ ಚಾರ್ವಾಕರನ್ನು ರಾಜಾಶ್ರಯವೇ ದೊರಕಿದ್ದರೂ, ಯಾವ ಆಚಾರ್ಯರೂ ಕೊಲ್ಲಿಸಲೆಣಿಸಿಲ್ಲ. ದರ್ಶನಗಳಲ್ಲಿ ಚಾರ್ವಾಕದರ್ಶನಕ್ಕೂ ಒಂದು ಸ್ಥಾನವನ್ನು ಕೊಟ್ಟಿದ್ದಾರೆ. ದೇಶದಲ್ಲೇ ಇರುವ ಮತೀಯ ಸಂಘರ್ಷಗಳಿಂದ ಆಗೊಮ್ಮೆ ಈಗೊಮ್ಮೆ ದೌರ್ಜನ್ಯಗಳು ನಡೆದಿರುವುದು ನಿಜವಾದರೂ, ನಮ್ಮ ಆರ್ಷಗ್ರಂಥಗಳು ಅಂತಹ ಗಲಭೆಗಳಿಗೆ ಪ್ರಚೋದನೆ ನೀಡಿಲ್ಲ. "ರುದ್ರ ಮತ್ತು ನಾರಾಯಣರೆಂಬುದಾಗಿ ಒಂದೇ ತತ್ತ್ವವು ಎರಡಾಗಿ ಇದೆ" ಎಂದೇ ವ್ಯಾಸರು ಉದ್ಘೋಷಿಸುತ್ತಾರೆ. ಋಷಿಹೃದಯವನ್ನರಿಯದ ಅಲ್ಪಮತಿಗಳಷ್ಟೆ ಇಂತಹ ಸಂಘರ್ಷಗಳಿಗೆ ಕಾರಣರಷ್ಟೆ. ವಿಶ್ವದ ಎಷ್ಟೋ ಭಾಗಗಳಲ್ಲಿ, ಹಿಂದಿನಿಂದಲೂ ತಮ್ಮ ಮತವೇ ಶ್ರೇಷ್ಠವೆಂದೂ ಆ ಕಾರಣದಿಂದ ಉಳಿದ ಮತಾವಲಂಬಿಗಳನ್ನು ನಾಶಪಡಿಸಬೇಕೆಂದೂ ಹೊಡೆದಾಡುವವರು ಕಾಣಸಿಗುತ್ತಾರೆ. ಒಂದು ಕಾಲದಲ್ಲಿ ವಿಶ್ವದ ವಿವಿಧ ಭಾಗಗಳಲ್ಲಿ ಹಿಂದೂಧರ್ಮವು ಅಥವಾ ಅದರ ಶಾಖೆಯಾದ ಬೌದ್ಧಧರ್ಮವು ಯಾರನ್ನೂ ಬೆದರಿಸಿ ಪ್ರಸಾರ ಮಾಡಲಿಲ್ಲವೆಂಬುದು ಭಾರತದ ಹೆಗ್ಗಳಿಕೆ.


ಶಾಂತಿಯುತವಾಗಿ ಜೀವಿಸಬೇಕಾದುದು ಸರಿಯಾದರೂ, ಧರ್ಮರಕ್ಷಣೆಗಾಗಿ ಯುದ್ಧ ಮಾಡುವುದೂ ಯುಕ್ತವೇ ಆಗಿದೆ ಎಂಬುದು ಸನಾತನಿಗಳ ಮತ. ಪ್ರಸಿದ್ಧವಾದ ಮಹಾಭಾರತದ ಕಥೆಯನ್ನು ಇಲ್ಲಿ ಸ್ಮರಿಸಬಹುದು. ಹುಟ್ಟುಕುರುಡನಾದ ಧೃತರಾಷ್ಟ್ರ ತನ್ನ ಮಕ್ಕಳ ವಿಚಾರದಲ್ಲಿ ಕುರುಡುಪ್ರೀತಿಯನ್ನು ಬೆಳೆಸಿಕೊಳ್ಳುತ್ತಾನೆ. ಆನುವಂಶಿಕವಾದ ಧರ್ಮಪ್ರಜ್ಞೆ ಅವನಲ್ಲಿ ಆಗಾಗ ಆಡಿದರೂ ಪುತ್ರವ್ಯಾಮೋಹವೇ ಮುಂಚೂಣಿಗೆ ಬರುತ್ತದೆ. ಪುತ್ರಪ್ರೇಮ ತಪ್ಪಲ್ಲ; ಪುತ್ರವ್ಯಾಮೋಹ ತಪ್ಪು. ಆತ ತನ್ನ ತಮ್ಮ, ಪಾಂಡುವಿನ ಮಕ್ಕಳೇ ಆದ ಪಾಂಡವರನ್ನೂ ತನ್ನ ಮಕ್ಕಳಂತೆಯೇ ಭಾವಿಸಬೇಕಿತ್ತು. ಆದರೆ, ಪಾಂಡವರ ನಾಶದ ಸೋಪಾನಗಳನ್ನು ಹತ್ತಿಕೊಂಡೇ ಕೌರವರು ಅಭಿವೃದ್ಧಿ ಹೊಂದಲಿ ಎಂದು ಆಶಿಸುತ್ತಾನೆ. ಕೌರವರೊಡನೆ ಶ್ರೀಕೃಷ್ಣನು ಸಂಧಾನಕ್ಕೆಂದು ಬಂದಾಗ, ಕೊನೆಗೆ, ಪಾಂಡವರಿಗೆ ಐದು ಗ್ರಾಮಗಳನ್ನಾದರೂ ಕೊಡು ಎಂದಾಗ, ದುರ್ಯೋಧನನು ಸಮ್ಮತಿಸಲಿಲ್ಲ. ಧೃತರಾಷ್ಟ್ರನು ದುರ್ಯೋಧನನ ನಡೆಗೆ ಪ್ರತಿರೋಧವನ್ನೇ ವ್ಯಕ್ತಪಡಿಸಲಿಲ್ಲ. "ಕೌರವರ ಈ ನಡೆ  ಅಧರ್ಮ; ಆದ್ದರಿಂದ ಇದನ್ನು ಖಂಡಿಸಬೇಕಾದದ್ದು ಧರ್ಮ; ಇಂತಹ ಧರ್ಮಕ್ಕಾಗಿ ನೀವು ಯುದ್ಧ ಮಾಡಿ" ಎಂದು ಧರ್ಮಪ್ರಭುವಾದ  ಶ್ರೀಕೃಷ್ಣನೇ ಪಾಂಡವರನ್ನು ಪ್ರೋತ್ಸಾಹಿಸುತ್ತಾನೆ.  ಪರಶುರಾಮನು ದುಷ್ಟರಾದ ಕ್ಷತ್ರಿಯರನ್ನು ಇಪ್ಪತ್ತೊಂದು ಬಾರಿ ಭೂಪ್ರದಕ್ಷಿಣೆ ಮಾಡಿ ಸಂಹರಿಸಿದನೆಂದು ಪುರಾಣದ ಕಥೆ ತಿಳಿಸುತ್ತದೆ. ಇಲ್ಲಿಯೂ ದಶರಥನಂತಹ ಧಾರ್ಮಿಕ ಕ್ಷತ್ರಿಯರ ತಂಟೆಗೆ ಪರಶುರಾಮನು ಹೋದವನಲ್ಲ; ಭೀಷ್ಮರಂತಹ ಸದ್ಧರ್ಮೀ ಕ್ಷತ್ರಿಯರಿಗೆ ಆತ ಗುರುವೇ ಹೌದು. ಹಿಂಸೆಯ ಉದ್ದೇಶ, ಅಧರ್ಮವಾಗಿರಬಾರದೆಂಬುದೇ ಭಾರತೀಯ ಸನಾತನಿಗಳ ಮತ. ಬೇರೆಯವರು ಏನೇ ತಪ್ಪು ಮಾಡಿದರೂ ಎಲ್ಲವನ್ನೂ ಸಹಿಸಿಕೊಂಡು ಹೋಗಬೇಕೆನ್ನುವುದೇ ಧರ್ಮವೆಂದಾದಲ್ಲಿ ಶರೀರದಲ್ಲಿಯೇ ಸಹಜವಾಗಿ ಉತ್ಪನ್ನವಾಗುವ ರೋಗರುಜಿನಗಳೂ ನಮ್ಮೊಡನೆ ಸಹಬಾಳ್ವೆ ನಡೆಸಲು ಒಪ್ಪಿಕೊಳ್ಳಬೇಕಾದೀತು! 



ಕ್ಷಮೆ, ಅಹಿಂಸೆ ಇವುಗಳು ಉದಾತ್ತಗುಣಗಳೇ ಹೌದಾದರೂ, ಇವುಗಳ ಅಕಾಲಾಚರಣೆಯಿಂದ ಅಧರ್ಮವು ತಲೆಯೆತ್ತುವುದಾದಲ್ಲಿ ಹಿಂಸೆಯೂ ಅನಿವಾರ್ಯವೇ. ನಮ್ಮ ದೇಹದ ಒಂದು ಭಾಗವೇ  ಕೊಳೆತರೆ ಅದು ಇಡಿಯ ಶರೀರವನ್ನೇ ವ್ಯಾಪಿಸಿ ತೊಂದರೆಗೈಯುವ ಭಯವಿದ್ದಾಗ, ಶರೀರದ ಸಮಗ್ರ ಹಿತದೃಷ್ಟಿಯಿಂದ, ಕೊಳೆತ ಅಂಗವನ್ನೇ ನಿರ್ದಾಕ್ಷಿಣ್ಯವಾಗಿ ಕೊಯ್ದು ಹಾಕುವ ಶಸ್ತ್ರಚಿಕಿತ್ಸಕನ ನಡೆಯಂತೆ, ಅಧರ್ಮನಾಶಕ್ಕೆ ಶಸ್ತ್ರಾಸ್ತ್ರಚಿಕಿತ್ಸೆಯೂ ಅನಿವಾರ್ಯವಾಗಬಹುದು. ಹೀಗೆ ಭಾರತೀಯ ಇತಿಹಾಸ ಪುರಾಣಗಳಲ್ಲಿ ಧರ್ಮಕ್ಕಾಗಿ ಹೋರಾಡಿದವರ ನಾನಾ ದೃಷ್ಟಾಂತಗಳು ಕಾಣಸಿಗುತ್ತವೆ.  "ಕಣ್ಣಿನಲ್ಲಿ ಒಂದು ತೊಟ್ಟು ರಕ್ತವಿರುವವರೆಗೂ ಜ್ಞಾನಕ್ಕೆ ಪ್ರತಿಬಂಧಕವಾದುದನ್ನು ಗೆಲ್ಲಲು ಹೋರಾಡಬೇಕು" ಎಂಬ ಶ್ರೀರಂಗಮಹಾಗುರುಗಳ ಮಾತು ಇಲ್ಲಿ ಸ್ಮರಣೀಯ. 


ಆದರೆ ಹಿಂಸೆಯ ಬಗ್ಗೆ ಸರಿಯಾದ ಅರಿವಿಲ್ಲದಿರುವುದು ಎಷ್ಟೋ ಅನರ್ಥಗಳಿಗೆ ಕಾರಣವಾಯಿತು. ಅಂತಹದೊಂದು ಅನರ್ಥ ಭಾರತದ ಮೇಲಿನ ಪರಾಕ್ರಮಣ.  ಶಾಂತಿಪ್ರಿಯತೆ, ಅಹಿಂಸಾಪಾಲನೆಗಳು ಅತಿರೇಕಕ್ಕೆ ಹೋಗಿ ಹಿಂಸೆಯೇ ಕೂಡದು ಎಂಬ ಮೂರ್ಖತನವೊಂದೆಡೆಯಾದರೆ, ದೇವರು ಹೇಗೋ ನೋಡಿಕೊಳ್ಳುತ್ತಾನೆ ಎಂಬ ಮೌಢ್ಯ ಮತ್ತು ಅನೈಕಮತ್ಯ ಮತ್ತೊಂದೆಡೆ. ಯಾವುದೇ ಕಾರಣಕ್ಕಾದರೂ ಅಹಿಂಸೆಯೇ ಕೂಡದೆಂದಾಗಿದ್ದರೆ ರಾಮನೇಕೆ ರಾವಣಾದಿಗಳನ್ನು ಸಂಹಾರ ಮಾಡಬೇಕಿತ್ತು? ಕೃಷ್ಣನೇಕೆ ಕಂಸಾದಿಗಳನ್ನು ಕೊಲ್ಲಬೇಕಿತ್ತು? ತನ್ನನ್ನೇಕೆ ರಾಮ ಕೊಲ್ಲಲೆಣಿಸಿದ್ದು ಎಂಬ ವಾಲಿಯ ಪ್ರಶ್ನೆಗೆ, ವಾಲಿಯ ನಡೆ  ಅಧರ್ಮಯುಕ್ತವಾಗಿತ್ತೆಂದು ವಿವರಿಸಿ, ಅವನು ವಧಾರ್ಹನಾದನೆಂಬ ರಾಮನ ಮಾತುಗಳನ್ನು ವಾಲಿಯೂ ಒಪ್ಪುತ್ತಾನೆ!


ಇಂದು ವಿಶ್ವದಲ್ಲಿ ಆಗುತ್ತಿರುವ ಎಷ್ಟೋ ಮತೀಯ ಹಿಂಸೆಗಳಿಗೆ ಕಾರಣ ಮತಾನುಯಾಯಿಗಳಲ್ಲ; ಮತಾಂಧರು. ಇಂತಹ ಮತಾಂಧತೆಯನ್ನು ಸುಸಂಸ್ಕೃತರೆಲ್ಲರೂ ಖಂಡಿಸಬೇಕು. ನಿಷ್ಕಾರಣವಾಗಿ ನಮ್ಮ ದೇಶದ ಮೇಲೆ ಆಕ್ರಮಣವನ್ನು ಮಾಡುವ ಶತ್ರುಗಳನ್ನು ನಿಷ್ಕರುಣೆಯಿಂದ ಕೊಲ್ಲುವುದು ನ್ಯಾಯವೇ ಆಗಿದೆ. ಆದರೆ, "ನಮ್ಮ ಮತಧರ್ಮದ ಚಿಂತನೆಗೆ ಅನುಸಾರವಾಗಿಯೇ ನೀವು ಜೀವನಕ್ರಮವನ್ನು ರೂಪಿಸಿಕೊಳ್ಳಬೇಕು; ಇಲ್ಲದಿದ್ದರೆ ನೀವು ವಧಾರ್ಹರು" ಎಂದು ಹೇಳುವುದು ಯಾವ ನ್ಯಾಯ? ಹಾಗೊಮ್ಮೆ ಯಾವುದಾದರೂ ಒಂದು ಮತಧರ್ಮವು ಹೇಳುತ್ತಿದ್ದರೂ, ಇಂದಿನ ಸುಸಂಸ್ಕೃತ ಸಮಾಜ ಅದರ ಬಗ್ಗೆ ಮರುಚಿಂತನೆ ನಡೆಸಿ, ಜನರು ನೆಮ್ಮದಿಯಿಂದ ಸಹಬಾಳ್ವೆ ನಡೆಸಲು ಅನುಕೂಲವಾಗುವಂತೆ ಮತೀಯ ನಿಯಮಗಳನ್ನು ಪರಿಷ್ಕರಿಸಬೇಕು. 


ಎಲ್ಲರೂ ನೆಮ್ಮದಿಯಿಂದ ಬದುಕಬೇಕೆಂಬುದು ನಮ್ಮ ಹಕ್ಕಾಗುವುದಾದಲ್ಲಿ, ನೆಮ್ಮದಿಗೆ ಭಂಗ ತರುವ ಶಿಕ್ಷಣವನ್ನು ಕೊಡುವವರನ್ನು ಶಿಕ್ಷಾರ್ಹರನ್ನಾಗಿ ಮಾಡುವುದು ಕರ್ತವ್ಯವೇ ಆಗುತ್ತದೆ. ಇಂದು ಭಾರತದಲ್ಲಿ ಪ್ರಚಲಿತವಿರುವ ಪ್ರತಿ ಮತಧರ್ಮಗಳ ಪುಸ್ತಕಗಳನ್ನು ಗಮನವಿಟ್ಟು ನೋಡಿ, ರಾಷ್ಟ್ರಪ್ರೇಮಕ್ಕೆ ವಿರೋಧವಾದ, ಸರ್ವಶಾಂತಿಗೆ ಪೂರಕವಲ್ಲದ, ಭಾರತದ ಮುಖ್ಯವಾಹಿನಿಗೆ ಸಲ್ಲದ ಮಾತುಗಳನ್ನು ಹುಡುಕಿ, ಹೆಕ್ಕಿ, ಹೊಸಕಿ, ಹೊರಹಾಕಬೇಕು. ಭಾರತದಲ್ಲಿ ಸಿಗುವ ಸುಖಸವಲತ್ತು ಬೇಕೆನಿಸುವವರಿಗೆ, ಭಾರತೀಯರೆಲ್ಲರ ಶಾಂತಿಗಿಂತ, ಇಲ್ಲಿನ ಸಂವಿಧಾನಕ್ಕಿಂತ ತಮ್ಮ ಮತಧರ್ಮದ ವಕ್ತಾರರ ಆದೇಶ ನಿರ್ದೇಶಗಳು ಸರ್ವೋಚ್ಚವೆನಿಸಿದರೆ ಅದು ಖಂಡನಾರ್ಹ. ನಮ್ಮ ದೇಶದಲ್ಲಿ ಕೆಲವೆಡೆ ಚಾಲ್ತಿಯಲ್ಲಿದ್ದ, ಕೆಲವು ಇವತ್ತಿನ ದೇಶಕಾಲಗಳಿಗೆ ಹೊಂದದ, ಪದ್ಧತಿಗಳನ್ನು ಇಂದು ತೆಗೆದುಹಾಕಲಾಗಿದೆಯಷ್ಟೆ. ಉದಾಹರಣೆಗೆ, ಇಂದು ಸಹಗಮನ ಪದ್ಧತಿ ಸಂಪೂರ್ಣ ಮರೆಯಾಗಿದೆ. ಬಾಲ್ಯವಿವಾಹ ಪದ್ಧತಿ, ಒಂದೊಂದೆಡೆ ಕಂಡುಬಂದರೂ ಕಾನೂನುಬಾಹಿರವಾಗಿದೆ. ಇನ್ನೂ ಎಷ್ಟೋ ಅಮಾನವೀಯ ಪದ್ಧತಿಗಳ ರದ್ದತಿಗೆ ಹೋರಾಟಗಳು ನಡೆಯುತ್ತಿವೆ.


ಸರ್ವಶಾಂತಿಯ ಗುರಿಯನ್ನು ಸಾಧಿಸಲು ಭಾರತದ ಋಷಿಗಳ ಘೋಷವಾಕ್ಯಗಳು ಸಾರ್ವಕಾಲಿಕ ಹಿತನುಡಿಗಳೇ ಸರಿ.  " ಸರ್ವೇ ಚ ಸುಖಿನಃ ಸಂತುI ಸರ್ವೇ ಸಂತು ನಿರಾಮಯಾಃI ಸರ್ವೇ ಭದ್ರಾಣಿ ಪಶ್ಯಂತು Iಮಾ ಕಶ್ಚಿತ್ ದುಃಖಭಾಗ್ಭವೇತ್II"(ಎಲ್ಲರೂ ಸುಖಿಗಳಾಗಲಿ, ಎಲ್ಲರೂ ರೋಗರಹಿತರಾಗಿರಲಿ, ಎಲ್ಲರೂ ಮಂಗಳವಾದದ್ದನ್ನೇ ನೋಡುವಂತಾಗಲಿ, ಯಾರೂ ದುಃಖಭಾಗಿಗಳಾಗುವುದು ಬೇಡ) "ಲೋಕಾಃ ಸಮಸ್ತಾಃ ಸುಖಿನೋ ಭವಂತು" (ಎಲ್ಲ ಲೋಕಗಳೂ ಸುಖವಾಗಿರಲಿ) ಎಂಬ ಋಷಿಗಳ ಆಶಂಸನೆಯು ವಿಶ್ವದ ಘೋಷವಾಕ್ಯವಾಗಿ, ಅದರ ಅನುಷ್ಠಾನಕ್ಕಾಗಿ ವಿಶ್ವಮಾನವರೆಲ್ಲರೂ ಶ್ರಮಿಸುವುದಾದಲ್ಲಿ, ಇಡೀ ಜಗತ್ತೇ ಶಾಂತಿ, ನೆಮ್ಮದಿಗಳಿಂದ ನಲಿದೀತು!

ಸೂಚನೆ: 24/02/2022 ರಂದು ಈ ಲೇಖನ ವಿಜಯವಾಣಿಯ ಸಂಸ್ಕೃತಿ ದಲ್ಲಿ ಪ್ರಕಟವಾಗಿದೆ. 


ನಾಭಾಗನ ಆದರ್ಶ (Nabhagana Adarsha)

ಲೇಖಕರು: ವಾದಿರಾಜ. ಪ್ರಸನ್ನ

(ಪ್ರತಿಕ್ರಿಯಿಸಿರಿ lekhana@ayvm.in)



ಶ್ರೀಮದ್ಭಾಗವತದ ಒಂದು ಕಥೆ- ನಭಗನೆಂಬ ಮಹಾರಾಜನಿಗೆ ಹಲವು ಮಕ್ಕಳಿದ್ದರು. ಅದರಲ್ಲಿ ಕಿರಿಯವನು ನಾಭಾಗ. ಇವನು ಚಿಕ್ಕವಯಸ್ಸಿನಲ್ಲೇ  ವಿದ್ಯೆಯಲ್ಲಿ ಆಸಕ್ತನಾಗಿ ವಿದ್ಯಾಭ್ಯಾಸಕ್ಕೆಂದು ಗುರುಕುಲವಾಸಕ್ಕೆ ತೆರಳಿದ್ದನು. ಅಲ್ಲಿ ಅವನು ಅನೇಕ ವರ್ಷಗಳು ಆಸಕ್ತಿಯಿಂದ ಕಲಿತು ವಿದ್ಯಾಪಾರಂಗತನಾಗಿ ರಾಜ್ಯಕ್ಕೆ ಹಿಂತಿರುಗುತ್ತಾನೆ. ತಂದೆಯು ತಪಸ್ಸಿಗೆ ಹೋಗಿದ್ದರು. ಅಣ್ಣಂದಿರು ತಂದೆಯ ರಾಜ್ಯವನ್ನು ನಾಭಾಗನ ಪಾಲಿಗೆ ಏನನ್ನೂ ಉಳಿಸದೇ ಹಂಚಿಕೊಂಡಿದ್ದರು. ಸಹೋದರರ ಬಳಿ 'ನನ್ನ ಪಾಲಿನ ರಾಜ್ಯವನ್ನು ಕೊಡಿ' ಎಂದು ಕೇಳಿದಾಗ; ಅವರು-"ನಾವು ಹಂಚಿಕೊಳ್ಳುವಾಗ ನಿನ್ನನ್ನು ಲೆಕ್ಕಕ್ಕೆ ತೆಗೆದುಕೊಂಡಿರಲಿಲ್ಲ. ಈಗ ಎಲ್ಲವೂ ಮುಗಿದಿದೆ. ನೀನು ತಂದೆಯವರನ್ನೇ ನಿನ್ನ ಭಾಗವೆಂದು ತಿಳಿ" ಎಂದುಬಿಟ್ಟರು.

 

ನಾಭಾಗನು ತಂದೆಯ ಹತ್ತಿರ ಹೋಗಿ 'ಅಪ್ಪಾ, ಅಣ್ಣಂದಿರು ರಾಜ್ಯವನ್ನು ನನಗೇನೂ ಉಳಿಸದೇ ತಾವೇ ಹಂಚಿಕೊಂಡಿದ್ದಾರೆ!  ಈಗ ನಾನೇನು ಮಾಡಲಿ ?' ಎಂದು ಪ್ರಶ್ನಿಸಿದನು. ಆ ಮಾತಿಗೆ ನಭಗ ಮಹಾರಾಜನು "ಅವರು ನಿನಗೆ ಬರಬೇಕಾದ ಸ್ವತ್ತನ್ನು ನಿನಗೆ ಕೊಡದೆ ವಂಚಿಸಿದ್ದಾರೆ; ಅದಕ್ಕೆ ಅಸೆ ಪಡಬೇಡ. ಅನತಿದೂರದಲ್ಲಿ ಆಂಗೀರಸ ಮಹರ್ಷಿಗಳು ೧೨ ದಿನಗಳ ಮಹಾಯಾಗವನ್ನು ಮಾಡುತ್ತಿದ್ದಾರೆ.  ಅವರು ಮಹಾ ವಿದ್ವಾಂಸರಾದರೂ,  ೬ ನೇ ದಿನದ ಯಾಗದ ವಿಧಿ ತಿಳಿಯದೆ ಆತಂಕಕ್ಕೊಳಗಾಗುತ್ತಾರೆ. ನಿನ್ನ ವಿದ್ಯೆಯ ಬಲದಿಂದ ಅವರಿಗೆ ಸಹಾಯಮಾಡು. ಅವರು ಯಾಗ ಮುಗಿಸಿ ಸ್ವರ್ಗಕ್ಕೆ ಹೋಗುವಾಗ  ಯಜ್ಞಶೇಷವನ್ನೆಲ್ಲ ನಿನಗೇ ಕೊಡುತ್ತಾರೆ" ಎಂದು ಹೇಳಿದ.

 

ಆ ಯಜ್ಞಮಂಟಪಕ್ಕೆ ಬಂದ ನಾಭಾಗನು, ಯಾಗದ ೬ ನೇ ದಿನದ ಸೂಕ್ತವನ್ನು ಪಠಿಸಿ ಯಾಗವು ಸಾಂಗವಾಗಿ ನೆರವೇರಲು ಸಹಕರಿಸುತ್ತಾನೆ. ಆಂಗೀರಸರು ಬಹಳ ಸಂತೋಷದಿಂದ 'ಯಾಗದಲ್ಲಿ ಉಳಿದ ಧನಕನಕಗಳನ್ನೆಲ್ಲಾ ನೀನೇ ತೆಗೆದುಕೋ' ಎಂದು ತಿಳಿಸಿ ಸ್ವರ್ಗಕ್ಕೆ ತೆರಳುವರು. ಆ ಧನರಾಶಿಯನ್ನು ಸಾಗಿಸಲು ಅನುವುಮಾಡಿಕೊಳ್ಳುತ್ತಿದಾಗ ಅಲ್ಲಿಗೆ ಕಪ್ಪು ವರ್ಣದ ಆಜಾನುಬಾಹುವಾದ ವ್ಯಕ್ತಿಯೊಬ್ಬನು  ಬರುತ್ತಾನೆ. "ಈ ಧನವೆಲ್ಲಾ ನನಗೆ ಸೇರಬೇಕು; ನೀನು ಅದನ್ನು ಎಲ್ಲಿಗೆ ಒಯ್ಯುವೆ?" ಎಂದನು. ಅಂಗೀರಸರು ಈ ಯಾಗದ ಧನವನ್ನೆಲ್ಲಾ ನನಗೆ ನೀಡಿರುವರು ಎಂದನು ನಾಭಾಗ. ಆ ಕಪ್ಪು ವ್ಯಕ್ತಿಯು ಇದರ ತೀರ್ಮಾನವನ್ನು ನಿಮ್ಮ ತಂದೆಯವರನ್ನೇ ಕೇಳೋಣ ಎಂದು ಸೂಚಿಸುತ್ತಾನೆ. ನಾಭಾಗನು ತಂದೆಯಾದ ನಭಗನನ್ನು ಕೇಳಲಾಗಿ ನಭಗನು- ಮಗನಿಗೆ "ಯಾಗ ಶೇಷವೆಲ್ಲವೂ ರುದ್ರದೇವರ ಸ್ವತ್ತು. ಆ ಕಪ್ಪುಬಣ್ಣದ ವ್ಯಕ್ತಿಯೇ ಸಾಕ್ಷಾತ್ ರುದ್ರದೇವ. ಎಲ್ಲಾ ಧನರಾಶಿಯನ್ನೂ ಅವನಿಗೆ ಸಮರ್ಪಿಸಿ ಕೃತಾರ್ಥನಾಗು" ಎಂದನು. ನಾಭಾಗನು ಬಹಳ ಸಂತೋಷದಿಂದ ರುದ್ರದೇವರಿಗೆ ಎಲ್ಲವನ್ನೂ ಸಮರ್ಪಿಸಿ ಸಾಷ್ಟಾಂಗ ನಮಸ್ಕಾರ ಮಾಡಿ ತನ್ನಿಂದಾದ ತಪ್ಪಿಗೆ ಕ್ಷಮೆ ಯಾಚಿಸಿದನು. 

 

ಮಹಾದೇವನು ತನ್ನ ನಿಜ ಸ್ವರೂಪದ ದರ್ಶನನೀಡಿ ನಾಭಾಗನ ಸಮರ್ಪಣ ಭಾವವನ್ನು ಮೆಚ್ಚಿ ಎಲ್ಲಾ ಸಂಪತ್ತನ್ನೂ ಅವನಿಗೇ ಕೊಟ್ಟನು. ಜೊತೆಯಲ್ಲಿ ಈ ಎಲ್ಲಾ ಸಂಪತ್ತನ್ನೂ ಮೀರಿದ ಬ್ರಹ್ಮಜ್ಞಾನವನ್ನು  ಬೋಧಿಸುತ್ತಾನೆ. ಶಿವನಿಂದ ಅನುಗೃಹೀತನಾದ ನಾಭಾಗನು ಮುಂದೆ ಸುಖಜೀವನವನ್ನು ನಡೆಸುತ್ತಾನೆ. ಅದೇ ಅನುಗ್ರಹದ ಫಲಸ್ವರೂಪವಾಗಿ ಲೋಕಪ್ರಸಿದ್ಧನಾದ 'ಅಂಬರೀಷ" ನೆಂಬ ಸತ್ಪುತ್ರನನ್ನು ಪಡೆಯುತ್ತಾನೆ.   

 

ಈ ಶ್ರೀಮದ್ಭಾಗವತದ ಕಥೆಯು ನಮಗೆ ಹಲವು ಪಾಠಗಳನ್ನು ತಿಳಿಸುತ್ತದೆ. ನಾಭಾಗನು ವಿದ್ಯಾಭ್ಯಾಸದ ಕಡೆಗೇ ಗಮನ ಕೊಟ್ಟಿದ್ದರಿಂದ, ಅಣ್ಣಂದಿರು ಮೋಸಮಾಡಿದರೂ ಸ್ವತ್ತಿಗಾಗಲಿ, ಸಂಪತ್ತಿಗಾಗಲಿ ಕಾದಾಡಲಿಲ್ಲ, ಪಿತೃವಾಕ್ಯ ಪಾಲನೆಮಾಡಿದನು, ಅವನಲ್ಲಿನ ಆರ್ಷವಿದ್ಯೆ ಅವನ ಮನಸ್ಸನ್ನು ಪಕ್ವಗೊಳಿಸಿತ್ತು. ಅದೇ ವಿದ್ಯಾಬಲದಿಂದಲೇ ಮಹಾಯಾಗಕ್ಕೆ ಸಹಾಯ ಮಾಡಿದನು. ಯಜ್ಞಶೇಷವಾದ ಸಂಪತ್ತೆಲ್ಲವೂ ರುದ್ರದೇವನಿಗೆ ಸೇರಿದ್ದು ಎಂಬ ತಂದೆಯ ಸತ್ಯಾರ್ಥಪೂರ್ಣವಾದ ನುಡಿಯನ್ನು ಯಥಾರ್ಥವಾಗಿ ಕಾರ್ಯರೂಪಕ್ಕೆ ತಂದನು. ವಿದ್ಯಾವಂತನಾದ ನಾಭಾಗನು ಎದುರಿಗೆ ಪರಶಿವನೇ ಇದ್ದಾಗ ಯಾವ ಸಂಪತ್ತಿನಿಂದ ಏನಾಗಬೇಕಾಗಿದೆ ಎಂಬ ಸಹಜವಾದ ತೀರ್ಮಾನಕ್ಕೆ ಬಂದನು. ಹೀಗೆ  ಪರಶಿವನನ್ನು ಒಲಿಸಿಕೊಂಡುದರ ಫಲವಾಗಿ ಬ್ರಹ್ಮಜ್ಞಾನಿಯಾದನು. "ವಿದ್ಯೆ" ಎನ್ನುವ ಪದ ಏನು ಹೇಳುತ್ತೆ?  'ವಿದ್ ' ಎಂದರೆ ಜ್ಞಾನ; 'ಯಾ'ಎಂದರೆ ಹೊಂದಿಸುವುದು. ಜ್ಞಾನದ ಕಡೆಗೆ ಒಯ್ಯುವ ವಿಷಯವೇ ವಿದ್ಯೆ ಎಂಬ ಶ್ರೀರಂಗ ಮಹಾಗುರುಗಳ ವಾಣಿಯು ಇಲ್ಲಿ ಸ್ಮರಣೀಯ.

 

ನಾಭಾಗನು ಇಂದಿಗೂ ನಮ್ಮೆಲ್ಲರಿಗೆ ಆದರ್ಶವಾಗಿದ್ದಾನೆ. ನಾಭಾಗನ ಗುಣಗಳನ್ನು ಬೆಳೆಸಿಕೊಂಡರೆ ಇಹ-ಪರ ಜೀವನಗಳೆರಡರಲ್ಲೂ ಆನಂದವಾಗಿರಬಹುದು.


ಸೂಚನೆ: 24/02/2022 ರಂದು ಈ ಲೇಖನ ವಿಜಯವಾಣಿಯ ಸಂಸ್ಕೃತಿ ದಲ್ಲಿ ಪ್ರಕಟವಾಗಿದೆ.
 


Tuesday, February 22, 2022

ಭಗವಂತನೊಬ್ಬ ಭಾವನೆ ಹಲವು (Bhagavanthanobba, Bhaavane Halavu)

ಲೇಖಕಿ: ಸೌಮ್ಯಾ ಪ್ರದೀಪ್ 

(ಪ್ರತಿಕ್ರಿಯಿಸಿರಿ lekhana@ayvm.in)



ಬೃಂದಾವನದಿಂದ ಮಥುರೆಗೆ ಆಗಮಿಸುತ್ತಿರುವ ಶ್ರೀಕೃಷ್ಣನನ್ನು, ವೃದ್ಧರು ಗಜೇಂದ್ರನನ್ನು ಉದ್ಧರಿಸಿದ ನಾರಾಯಣ ಎಂಬುದಾಗಿಯೂ, ಯುವತಿಯರು ಲಕ್ಷ್ಮೀಕಾಂತ ಎಂಬುದಾಗಿಯೂ, ಬಾಲಕರು ನಮ್ಮಂತೆಯೇ ಸಾಧಾರಣ ಬಾಲಕ ಎಂಬಿತ್ಯಾದಿಯಾಗಿ ತಮ್ಮ ಬುದ್ಧಿ ಸಾಮರ್ಥ್ಯಕ್ಕನುಗುಣವಾಗಿ ನಾನಾ ವಿಧವಾಗಿ ಭಾವಿಸುತ್ತಾರೆ. ಅಂತೆಯೇ ಯಶೋದೆಯು "ಪರಮಾತ್ಮನನ್ನು ತನ್ನ ಮುದ್ದಿನ ತುಂಟ ಕಂದ" ಎಂಬುದಾಗಿ ಭಾವಿಸಿ ವಾತ್ಸಲ್ಯದಿಂದ ಲಾಲಿಸಿ ಪಾಲಿಸುತ್ತಾಳೆ, ದೇವಕಿಯ ಕಣ್ಣು ತಪಸ್ಯೆಯಿಂದ ಪರಿಪಕ್ವವಾದ್ದರಿಂದ ಅವಳು ಶ್ರೀಕೃಷ್ಣನ ಮೂಲ ಸ್ವರೂಪವನ್ನೇ ಕಂಡು 'ಸಾಕ್ಷಾತ್ ಆಧ್ಯಾತ್ಮ ದೀಪ' ಎಂಬುದಾಗಿ ಸ್ತುತಿಸುತ್ತಾಳೆ. ವಸುದೇವನ ಕಣ್ಣಿಗೆ ಪರಮಾತ್ಮನು ಶಂಖ ಚಕ್ರ ಗಧಾಧರನಾಗಿ ಗೋಚರಿಸುತ್ತಾನೆ, ಕೃಷ್ಣನಲ್ಲಿ ತಾದಾತ್ಮ್ಯಭಾವ ಹೊಂದಿದ ಗೋಪಿಯರಿಗೆ ಅವನೇ ಸರ್ವಸ್ವ. ಅರ್ಜುನನು ಭಗವಂತನನ್ನು ಆಪ್ತ ಮಿತ್ರನೆಂದೇ ಭಾವಿಸಿದವನು, ಹೆಜ್ಜೆ ಹೆಜ್ಜೆಗೂ ತನ್ನನ್ನು ರಕ್ಷಿಸಿದ ದ್ರೌಪದಿಗೆ ಪರಮಾತ್ಮನು ಆಪ್ತರಕ್ಷಕನೇ ಹೌದು, ವಿದುರ ಭೀಷ್ಮಾದಿಗಳು ಕೃಷ್ಣನನ್ನು ಸಾಕ್ಷಾತ್ ಪರಮಾತ್ಮನೆಂದರಿತು ಪೂಜಿಸಿದವರು, ಕಲಿಯುಗದಲ್ಲಿಯೂ ಸಹ ಮೀರಾಬಾಯಿ, ಗೋದಾದೇವಿ(ಆಂಡಾಳ್)ಯಂತಹ ಭಕ್ತ ಶಿರೋಮಣಿಯರು ಭಗವಂತನನ್ನೇ ಪತಿಯೆಂದು ಭಾವಿಸಿ ಅವನಲ್ಲಿಯೇ ಅನುರಕ್ತಿಯನ್ನು ಹೊಂದಿದವರು, ಹೀಗೆ ಭಕ್ತರು ಭಗವಂತನನ್ನು ಪರಿಪರಿಯಾಗಿ ಭಾವಿಸಿದರೆ, ದುರ್ಬುದ್ಧಿಯ ದುರ್ಯೋಧನ ಶಿಶುಪಾಲ ಮುಂತಾದವರು ಅಜ್ಞಾನದ ಕಾರಣದಿಂದಾಗಿ ಭಗವಂತನನ್ನು ಗೊಲ್ಲ, ಕಪಟಿ, ಮಾಯಾವಿ, ಸ್ತ್ರೀಲೋಲ ಇತ್ಯಾದಿಯಾಗಿ ನಿಂದಿಸುತ್ತಾರೆ. 


ಅಮೂಲ್ಯವಾದ ಇಂದ್ರನೀಲಮಣಿಯನ್ನು ಗಾಜಿನ ಚೂರೆಂದು ಭಾವಿಸುವಂತೆ, ಒಬ್ಬನೇ ಭಗವಂತನು ತಮ್ಮ ತಮ್ಮ ಪ್ರಕೃತಿ ವೈಧರ್ಮ್ಯಕ್ಕೆ ಅನುಗುಣವಾಗಿ ಜನಗಳಿಂದ ಪರಿಪರಿಯಾಗಿ ಭಾವಿಸಲ್ಪಡುತ್ತಾನೆ. ಆದರೆ ಅವನ ಪರಿಪೂರ್ಣ ಸ್ವರೂಪವನ್ನರಿತು ಅಂತೆಯೇ ಭಾವಿಸಿದವರು ಅತ್ಯಂತ ವಿರಳ. ನಿತ್ಯ ಜೀವನದಲ್ಲಿಯೂ ಕೂಡ ಒಬ್ಬ ವ್ಯಕ್ತಿಯು ಎಲ್ಲರಿಂದಲೂ ಒಂದೇ ರೀತಿಯಾಗಿ ಭಾವಿಸಲ್ಪಡುವುದಿಲ್ಲ, ಆ ವ್ಯಕ್ತಿಯೊಡಗಿನ ಒಡನಾಟ, ಅವನೊಂದಿಗಿನ ಸಂಬಂಧ, ಅವನ ಬಗ್ಗೆ ಏಕದೇಶೀಯ ನೋಟ ಕೆಲವೊಮ್ಮೆ ಪೂರ್ವಗ್ರಹ ಪೀಡಿತ ದೃಷ್ಟಿಯ ಕಾರಣ-ಇವುಗಳಿಂದಾಗಿ ಅನೇಕ ವಿಧವಾಗಿ ಭಾವಿಸಲ್ಪಡುವುದಕ್ಕೆ ಅವಕಾಶವಿರುತ್ತದೆ. ಒಬ್ಬರಿಗೆ ಅತ್ಯಂತ ಗೌರವಕ್ಕೆ ಪಾತ್ರನಾದ ವ್ಯಕ್ತಿ ಇನ್ನೊಬ್ಬರಿಂದ ನಿಂದಿಸಲ್ಪಡಬಹುದು ಅಥವಾ ಇದಕ್ಕೆ ವಿಪರೀತವೂ(ವಿರುದ್ಧ ) ಆಗಬಹುದು, ಒಬ್ಬ ವ್ಯಕ್ತಿಯ ನೈಜ ಸ್ವರೂಪವನ್ನು ಎಲ್ಲರಿಂದಲೂ ಅರಿಯಲು ಅಸಾಧ್ಯವೇ ಸರಿ. ಗೀತಾಚಾರ್ಯನು ಧರ್ಮಕ್ಕೆ ಗ್ಲಾನಿಯುoಟಾಗಿ ಅಧರ್ಮದ ಪ್ರಭಾವ ಹೆಚ್ಚಾದಾಗ, ಅಧರ್ಮವನ್ನು ಅಳಿಸಿ ಧರ್ಮವನ್ನು ಪುನರ್ಪ್ರತಿಷ್ಠಾಪಿಸಲು ಭುವಿಯಲ್ಲಿ ಅವತರಿಸುತ್ತೇನೆ, ಎಂದು ಹೇಳಿರುವಂತೆ ರಾಮ ಕೃಷ್ಣಾದಿ ಪ್ರಸಿದ್ಧ ಹತ್ತು ಅವತಾರಗಳನ್ನಷ್ಟೇ ಅಲ್ಲದೇ ಕಾಲಕಾಲಕ್ಕೆ ಬಂದೊದಗುವ ಅಧರ್ಮವನ್ನು ಅಳಿಸಿ ಧರ್ಮಸೇತುವನ್ನು ಕಟ್ಟಲು ಪರಂಜ್ಯೋತಿಯು ಪುರುಷಾಕಾರವನ್ನು ತಾಳಿ ಧರೆಗಿಳಿದು ಬಂದಾಗ ಕೇವಲ ಶುದ್ಧಾತ್ಮರು ಅವನನ್ನು ಭಗವಂತನೆಂದು ಭಾವಿಸಿ, ನಂಬಿ ಉದ್ಧಾರವಾಗುತ್ತಾರೆ. "ಭಗವಂತನು ಮನುಷ್ಯ ಮಾತ್ರನಾಗಿ ಬಂದರೂ ತನ್ನ ದೈವೀಧರ್ಮದೊಡನೆ ಬಂದಿರುತ್ತಾನೆ. ಅದನ್ನು ಅರ್ಥಮಾಡಿಕೊಂಡು, ಅನುಸರಿಸಿದರೆ ಅವನ ಪೂರ್ಣತೆ ತಿಳಿಯುತ್ತದೆ. ಇಲ್ಲದಿದ್ದರೆ ನಮ್ಮಂತೆಯೇ ಅವನು ಎಂದುಕೊಳ್ಳಬಹುದು" ಎಂಬ ಶ್ರೀರಂಗ ಮಹಾಗುರುಗಳ ವಾಣಿ ಸ್ಮರಣೀಯವಾಗಿದೆ.


ಸೂಚನೆ: 22/2/2022 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.

ஒப்பற்றமஹாபுருஷர் ஶ்ரீரங்கமஹாகுரு - பாகம் - 9 (Oppatra Mahaapurushar Srirangamahaa Guru - Part - 9)

தமிழாக்கம்:  ஶ்ரீமதி ஜானகி

மின்னஞ்சல் : (lekhana@ayvm.in)




தமிழாக்கம் : திருமதி ஜானகி

  

         ஶ்ரீரங்கமஹாகுரு தன்னுடைய அசாதாரணமான கலைத் திறன்கள் அனைத்தையும், தான் பரிபூரண ஞான நிலையில் எந்த பரம்பொருளைக் கண்டாரோ, அதன் பெருமையை போற்றி புகழ்வதற்கே உபயோகித்தார்.

         

         சங்கீத கலைக்கு ஆத்மானுபவத்தை வெளிப்படுத்துவதை தவிர வேறு எந்த உன்னதமான நோக்கமும் கிடையாது என்ற கருத்துடையவராக இருந்தார். ஒருபுறம் ஆத்மானுபவத்தையும், மறுபுறம் நாத வித்யையின் மூலத்தையும்  அடைந்தவரான ஶ்ரீரங்கமஹாகுரு  இக்கலையை நாத ப்ரஹ்மத்தின், சப்த ப்ரஹ்மத்தின் இறுதியில் அடையும் பரம்பொருளின் உபாசனைக்கே உபயோகித்தார்.

            

          ஆதிசங்கரர் எந்த பேரொளியை கோவிந்தன் என போற்றி புகழ்ந்து அதனை பஜிக்குமாறு உலகிற்கு உரைத்தாரோ அதை தன் உள்ளத்தில் தரிசித்து சாந்தி மற்றும் ஆனந்தத்தை தன்வசம் செய்து கொண்ட மஹா யோகியாகவும், அதில் தன் மனதை செலுத்தி அதி மேன்மையான பக்தி உணர்வை அடைந்த ஒரு தலைசிறந்த பக்தனாகவும் விளங்கிய ஒப்பற்ற மகான் ஶ்ரீரங்கமஹாகுரு.

(தொடரும்)


Monday, February 21, 2022

Fruit from a Guru


 

Kannada Article by: Vadirāja Prasanna

 English Rendering by: M R Bhashyam

Respond to (lekhana@ayvm.in)



We have some problem or the other in our daily lives. We use some means to come out of these. If we cannot find solutions by ourselves, we consult others.

 

"The mother is the first teacher, Guru, and the home is the first school" is a saying which reflects our first learnings at home. As time progresses, we go to schools and colleges and educate ourselves under the tutelage of several teachers and Gurus and attain graduation. Hence, there is a practice of youngsters learning from elders. Nowadays, we can see that elders learn from youngsters about Computers, TV, Mobile etc. So, the common understanding of the present day is we have to learn from those who are knowledgeable and they are our Gurus.

 

But in Bhāratīya culture, the word Guru has a special meaning. "The letter Gu means darkness and the letter Ru means the One who obliterates it" meaning Guru is the one who removes darkness. So, a question arises as to what this darkness is and what does it mean to say it is eliminated?

 

It is important for one who does not know swimming to have proper guidance from an expert. If by over enthusiasm or carelessness one gets into water, it is possible that life will be in danger. Our life is also like a fast current.  We are being swept away in the deluge of our wants and aspirations. The flow of life does not stop and we cannot be at peace or be contended.  If we want to be peaceful, we should be able to swim in the flood of life and reach the banks. In this rush of worldly life, we need to take asylum in a Guru who has realized the immutable principles and is able to show them to us too.  A Guru can not only negotiate by himself but is also able to make the disciples who have taken refuge in him and follow his guidance, to navigate. Though a Guru may look like an ordinary person he is not afraid of worldly perils;, for, he is anchored to God and is traversing the inner-path, .  That is why the saying "Guru is Brahma, Guru is Viṣṇu and Guru is Mahesvara,  Guru is Parambrahman Himself, so prostrate to that Guru" has come into being. Here it is appropriate to recall the words of Śrī Śrīraṅga Mahāguru "The importance to a match stick is because it contains powder, not because it is a wooden stick. The word Guru is not used for the person but for the energy resident in him.   The power of that greatness comes to light when there is a union, the yoga, of Guru-Siśya (disciple) and the Lord.

 

Having realized Paramatman himself, a Mahāguru is someone who is able to make others also realize God when they come to him for asylum.  If we take refuge in such a guru and live a life as per his intent and traverse the path of yoga as per his direction, we can get rid of the internal darkness and realize the eternal effulgent light, the pinnacle of joy resident in our own selves. We can thus attain the ultimate fruit of liberation in this birth itself.  


Note: The Kannada version of this article can be viewed at AYVM blogs.

Sunday, February 20, 2022

ಅಷ್ಟಾಕ್ಷರ ದರ್ಶನ -6 ಪಂಡಿತಾಃ ಸಮದರ್ಶಿನಃ (Astakshara Darshana -6 Panditah Samadarshinah)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)




ಒಂದೇ ಮನೆಯಲ್ಲಿ ಹುಟ್ಟಿದವರಲ್ಲಿ ಎಷ್ಟೋ ವೇಳೆ ಬಹಳವೇ ಸಾಮ್ಯವಿರುವುದುಂಟು. ಅಣ್ಣತಮ್ಮಂದಿರಲ್ಲಿ ಅಥವಾ ಅಕ್ಕತಂಗಿಯರಲ್ಲಿ (ಕೆಲವೊಮ್ಮೆ ಹತ್ತಿರದ ಬಂಧುಗಳಲ್ಲೂ) ಅತಿಶಯಿತವಾದ ಸಾಮ್ಯವೂ ತೋರುವುದು ಆಶ್ಚರ್ಯವಲ್ಲ: ಅಣ್ಣನನ್ನು ತಮ್ಮನೆಂದೋ, ತಮ್ಮನನ್ನು ಅಣ್ಣನೆಂದೋ ಭ್ರಮಿಸುವಂತೆ ಸಹ ಆಗುವುದು. ಇನ್ನು ಅವಳಿ-ಜವಳಿಗಳಾಗಿಬಿಟ್ಟರಂತೂ ಹೇಳಲೇಬೇಕಿಲ್ಲ. ಇಷ್ಟು ಸಾಲದೆಂಬಂತೆ ಕೆಲವು ಮನೆಗಳಲ್ಲಿ ಹೆಸರುಗಳಲ್ಲೂ ಸಾಮ್ಯ ತಂದಿಡುವ ತಂದೆತಾಯಿಗಳುಂಟು. ಉಮಾ-ರಮಾ, ನರೇಶ-ನಗೇಶ, ವಿಮಲಾ-ಕಮಲಾ - ಇತ್ಯಾದಿಯಾಗಿ. ನಾಮರೂಪಗಳಲ್ಲಿ ಹೋಲಿಕೆಯುಳ್ಳ ಇಂತಹವರು ಅನೇಕರನ್ನು ಬೇಸ್ತುಬೀಳಿಸುವ ಪ್ರಸಂಗಗಳೂ ಇಲ್ಲದಿಲ್ಲ!

ಆದರೆ ಇದೆಲ್ಲವೂ ಅಂತಹವರೊಂದಿಗಿನ ಪರಿಚಯದ ಆರಂಭದಲ್ಲಿ; ಅವರೊಡನೆಯ ಒಡನಾಟವು ಹೆಚ್ಚುಹೆಚ್ಚಾದಂತೆಲ್ಲ, ಅವರುಗಳಲ್ಲಿ ಒಬ್ಬರಿಗಿಂತ ಮತ್ತೊಬ್ಬರು ಅದೆಷ್ಟು ಭಿನ್ನವೆಂಬುದು ಹೆಚ್ಚುಹೆಚ್ಚಾಗಿ ಗೋಚರವಾಗುತ್ತ ಹೋಗುವುದು.

ಇಷ್ಟನ್ನು ಹೇಳಿದುದರ ಉದ್ದೇಶವೆಂದರೆ - ಸೃಷ್ಟಿಯಲ್ಲಿ ಅದೆಷ್ಟು ವೈವಿಧ್ಯವಿದೆ! - ಎಂಬತ್ತ ಬೊಟ್ಟುಮಾಡಿ ತೋರಿಸುವುದು. ಒಂದು ಕಾಡಿಗೆ ಹೋಗಿ ನೋಡಿ: ಒಂದು ಮರದಂತೆ ಇನ್ನೊಂದು ಮರವಿಲ್ಲ, ಒಂದು ಹಣ್ಣಿನಂತೆ ಇನ್ನೊಂದಿಲ್ಲ. ಒಂದೇ ಮರದಲ್ಲಿ ಸಹ ಒಂದು ಹೂವಿನಂತೆ ಮತ್ತೊಂದು ಹೂವಿಲ್ಲ. ಯಾವೊಂದೆಲೆಯೂ  ಮತ್ತೊಂದರ ಅಚ್ಚಲ್ಲ! ವಸ್ತುಗಳಷ್ಟೇ ಅಲ್ಲ, ಪ್ರಾಕೃತಿಕವಾದ ಘಟನೆಗಳೂ ಸಹ ಒಮ್ಮೆ ಇದ್ದಂತೆ ಮತ್ತೊಮ್ಮೆ ಇಲ್ಲ. ನಿನ್ನೆಯ ಸೂರ್ಯೋದಯದಂತೆ ನಾಳೆಯ ಸೂರ್ಯೋದಯವಿರದು! ಒಂದೇ ನದಿಯೇ ಆದರೂ, ನಿನ್ನೆಯ ನೀರು ಇಂದಿಲ್ಲ: ಪ್ರಕೃತಿಯಂತೂ ಎಂದೂ ನಿಂತ ನೀರಲ್ಲ. "ಮಾಡಿದ್ದನ್ನೇ ಮತ್ತೆ ಮಾಡಬೇಕೇಕೆ?"- ಎಂದು ಪ್ರಶ್ನಿಸಲೆಂಬಂತೆ, "ಬೇಜಾರೇ ಇಲ್ಲದೆ" ನವನವರೂಪಗಳನ್ನೂ, ನವನವಕ್ರಿಯೆಗಳನ್ನೂ ಸೃಷ್ಟಿಸುತ್ತಲೇ ಹೋಗುತ್ತಿರುತ್ತದೆ, ಪ್ರಕೃತಿ!

"ಏನಯ್ಯಾ ನಿನ್ನ 'ಪುರಾಣ'?" ಎಂದು ಕೆಲವೊಮ್ಮೆ ಕೇಳುವಂತಾಗುತ್ತದೆ - ಹಳೆಯ ಕಥೆಯೇ ಪುನರುಕ್ತವಾದಾಗ. 'ಪುರಾಣ' ಎಂಬುದಕ್ಕೆ 'ಹಳೆಯದು' ಎಂಬರ್ಥವಾದರೂ, "ಹಿಂದೆಯೂ ಹೊಸದಾಗಿತ್ತು" ("ಪುರಾ ಅಪಿ ನವಮ್") - ಎಂದೇ ಅದರ ವ್ಯುತ್ಪತ್ತಿ! ಹಾಗೆಯೇ  ಭಾರತೀಯ ಸಂಸ್ಕೃತಿಯ - ಅರ್ಥಾತ್ ಋಷಿದರ್ಶನದ – ಬಗ್ಗೆ, "ಅದು ಚಿರ-ಪುರಾತನವಾದರೂ ನಿತ್ಯ-ನೂತನ" - ಎಂಬುದಾಗಿ ಶ್ರೀರಂಗಮಹಾಗುರುಗಳೊಮ್ಮೆ ಉದ್ಗರಿಸಿದ್ದರು!

"ಎಲ್ಲರೂ ಬೇರೆ ಬೇರೆ" ಎಂದು ಹೇಳುವಂತೆಯೇ, "ಎಲ್ಲರೂ ಸಮ"ವೆಂಬ 'ಸಮತಾವಾದ' ವನ್ನು ಹೇಳುವವರೂ ಇಲ್ಲದಿಲ್ಲ. ಅಷ್ಟೇ ಅಲ್ಲ, ಅದಕ್ಕಾಗಿ ಭಗವದ್ಗೀತೆಯ ಶ್ಲೋಕವೊಂದನ್ನು ಸಹ ಎಳೆತರುತ್ತಾರೆ! ಅಲ್ಲಿಯ ಪ್ರಸಿದ್ಧ ಶ್ಲೋಕವೊಂದರಂತೆ ಈ ಆರರ ಬಗ್ಗೆ ಸಮದರ್ಶಿತ್ವವುಳ್ಳವರು ಪಂಡಿತರು: ವಿದ್ಯಾ-ವಿನಯಗಳಿಂದ ಕೂಡಿದ ಬ್ರಾಹ್ಮಣ, ಹಸು, ಆನೆ, ನಾಯಿ, ಹಾಗೂ ನಾಯಿಯ ಮಾಂಸ ತಿನ್ನುವವ - "ವಿದ್ಯಾವಿನಯಸಂಪನ್ನೇ ಬ್ರಾಹ್ಮಣೇ ಗವಿ ಹಸ್ತಿನಿ |  ಶುನಿ ಚೈವ ಶ್ವಪಾಕೇ ಚ ಪಂಡಿತಾಃ ಸಮದರ್ಶಿನಃ ||" ಎನ್ನುತ್ತದೆ, ಗೀತೆ.

ಇದು ಸ್ವಲ್ಪ ಆಶ್ಚರ್ಯಕರವೇ: ಶ್ವಾನವೂ ಶ್ವಪಚನೂ ಸಮವೇ? ಅವರಿಬ್ಬರಿಗೂ ಹಸುವೂ ಹಸ್ತಿಯೂ ಸಮವೆಂದು ಭಾವಿಸುವುದೇ? ಹಾಗೆ ಭಾವಿಸುವವರು ಪಂಡಿತರೇ? ಅದು ಹೇಗೆಂದೇ ಅರ್ಥವಾಗುವುದಿಲ್ಲ! "ಇವೆಲ್ಲರನ್ನೂ ಭೂಮಿಯ ಮೇಲೆ ಕಾಣಬಹುದು, ಎಲ್ಲರೂ ಗಾಳಿಯನ್ನು ಸೇವಿಸುತ್ತಾರೆ, ಎಲ್ಲರಿಗೂ ಆಹಾರ ಬೇಕು" – ಎಂಬ ಹಲಕೆಲವು ಜುಜುಬಿ ಅಂಶಗಳಲ್ಲಿ ಏನೋ ಸಾಮ್ಯ ಹೇಳಬಹುದಾದರೂ, ಒಬ್ಬರಿಗೊಬ್ಬರು ಸಮವೆಂದುಬಿಡುವುದೇ? ಸಮದರ್ಶನ ಶಕ್ಯವೇ? ಸಾಧುವೇ?

ಈ ಸಮಸ್ಯೆಗೆ ಪರಿಹಾರವನ್ನು ಶ್ರೀರಂಗಮಹಾಗುರುಗಳು ಬಹಳ ಸುಲಭವಾಗಿ ಕೊಟ್ಟಿದ್ದರು: "ಇವೆಲ್ಲದರಲ್ಲೂ ಪಂಡಿತರು ಸಮದರ್ಶಿಗಳಾಗಿರುತ್ತಾರೆ – ಎಂಬ ಗೀತೋಕ್ತಿಯಲ್ಲಿ  'ಸಮ'ವೆಂಬುದು ಭೌತಿಕಸ್ತರದ್ದಲ್ಲ; "ಸಮಂ ಬ್ರಹ್ಮ" ಎಂದು (ಅಲ್ಲೇ ಮುಂದಿನ ಶ್ಲೋಕದಲ್ಲೇ) ಹೇಳಿರುವಂತೆ, ಎಲ್ಲದರಲ್ಲಿಯೂ ಸಮವಾಗಿರತಕ್ಕ ಬ್ರಹ್ಮವನ್ನೇ ಕಾಣುವರು ಎಂಬ ಭಾವವನ್ನು ಅರಿಯಬೇಕು."

ಅದು ಹೇಗೆ? ಶ್ಲೋಕವನ್ನೇ ಮತ್ತೊಮ್ಮೆ ಕಣ್ಣಿಟ್ಟು ಓದಿನೋಡಿದರೆ ಗೋಚರವಾಗುತ್ತದೆ. ವ್ಯಾಕರಣದ ಮೊದಲ ಪಾಠವೆಂದರೆ "ವಿಭಕ್ತಿ"ಗಳು; ಈ ಶ್ಲೋಕದಲ್ಲಿ ಆ ಆರೂ 'ಪ್ರಾಣಿ'ವಾಚಕಗಳೂ ಸಪ್ತಮೀವಿಭಕ್ತಿಯಲ್ಲಿಯೇ ಇವೆಯಲ್ಲವೇ?: 'ಬ್ರಾಹ್ಮಣನಲ್ಲಿ', 'ಗೋವಿನಲ್ಲಿ', 'ಗಜದಲ್ಲಿ', 'ಶ್ವಾನದಲ್ಲಿ', 'ಶ್ವಪಾಕನಲ್ಲಿ' - ಎಂಬಲ್ಲಿ ಆರೂ ಕಡೆಯೂ '-ಅಲ್ಲಿ' ಎಂಬ (ಸಪ್ತಮೀವಿಭಕ್ತಿಯ ಪ್ರತ್ಯಯವೇ) ಇದೆಯಲ್ಲವೆ? "ಪಂಡಿತರು ಈ ಆರನ್ನೂ ಸಮನಾಗಿ ನೋಡುವರು" ಎಂದೆಲ್ಲಿ ಹೇಳಿದೆ? ಬದಲಾಗಿ, "ಈ ಆರರಲ್ಲೂ ಸಮವಾದುದಾವುದೋ ಅದನ್ನು ಕಾಣುವರು" – ಎಂದೇ ಹೇಳಿದೆ.

ಅಲ್ಲಿಗೆ, ಪ್ರಕೃತಿಯಲ್ಲಿ ಯಾವೆರಡೂ 'ಸಮ'ವಲ್ಲ. ಸಮವಲ್ಲದವು ವಿಷಮಗಳು; ಅವಲ್ಲಿರುವುದು ವೈಷಮ್ಯವೇ. ವಿಷಮವಾದವುಗಳಲ್ಲೂ ಸಮನಾದುದೆಂದರೆ ಬ್ರಹ್ಮವೊಂದೇ. ಅನೇಕದೊಳಗಿನ ಏಕವನ್ನು, ಎಲ್ಲದರೊಳಗಿರುವ ಬ್ರಹ್ಮವನ್ನು, ಕಾಣಬಲ್ಲವರು ಸಮದರ್ಶಿಗಳಾದ ಪಂಡಿತರು - ಎಂಬೀ ವಿವರಣೆಯು ಅತ್ಯಂತಸಹಜವಾಗಿದೆಯಲ್ಲವೇ?

ಸೂಚನೆ: 20/2/2022 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ. 

Saturday, February 19, 2022

ವಸ್ತ್ರಾಭರಣ - 10 ಕೇಶಾಲಂಕಾರ (Vastra Bharana - 10 Kesaalankara)

ಲೇಖಕರು: ಮೋಹನ ರಾಘವನ್.

(ಪ್ರತಿಕ್ರಿಯಿಸಿರಿ lekhana@ayvm.in)





ಅನಾದಿ ಕಾಲದಿಂದಲೂ ಕೇಶಗಳನ್ನು ಆಯಾ ಕಾಲದ ಫ್ಯಾಷನ್ಗೆ ತಕ್ಕಂತೆ ಅನೇಕ ವಿಧವಾಗಿ ಕಟ್ಟಿ, ಅಲಂಕರಿಸುವ ವಾಡಿಕೆಯಿದೆ. ನಮ್ಮ ದೇಶ ಮೊದಲುಗೊಂಡು ನಾನಾ ದೇಶಗಳಲ್ಲಿ ಕಾಲ, ದೇಶಕ್ಕೆ ತಕ್ಕಂತೆ ಫ್ಯಾಷನ್ ಬದಲಾಗುತ್ತಾ ಬಂದಿದೆ. ಆದರೆ ಅದರ ನಡುವೆ ನಮ್ಮ ದೇಶದಲ್ಲಿ ಯೋಗ, ಯೋಗಸಾಧನೆಯ ದೃಷ್ಟಿಯಿಂದ ಕೇಶಾಲಂಕಾರಕ್ಕೆ ಒಂದು ಹಾದಿಯನ್ನು ಹಾಕಿಕೊಟ್ಟಿರುವುದನ್ನು ಗಮನಿಸಬೇಕು. 


ಕೂದಲು ಸತ್ತ ಜೀವಕಣಗಳ ರಾಶಿ, ಆದ್ದರಿಂದಲೇ ಕತ್ತರಿಸಿದಾಗ ನೋವು ಉಂಟಾಗುವುದಿಲ್ಲ ಎಂದು ಹೇಳುತ್ತಾರೆ. ಆದರೆ  ನಮ್ಮ ಮೈಯಲ್ಲಿ ರೋಮ-ರೋಮವೂ ಚರ್ಮದ ಕೆಳಗಿನ ನರಗಳಿಗೆ ಅಂಟಿಕೊಂಡಿದೆ. ಆದ್ದರಿಂದಲೇ ಎಳೆದರೆ, ನೋವು ಉಂಟಾಗುತ್ತದೆ. ಕೇಶರಾಶಿಯನ್ನು ನಾನಾ ವಿಧವಾಗಿ ವಿಭಜಿಸಿ,  ತಿರುಚಿ, ಕಟ್ಟಿ, ಇಳಿಯಬಿಟ್ಟು ಅನೇಕ ವಿನ್ಯಾಸಗಳನ್ನು ಮಾಡಿದಾಗ ಅದು ನಮ್ಮ ನರಗಳಮೂಲಕ ನಮ್ಮ ಮೇಲೆ ಪ್ರಭಾವವನ್ನು ಬೀರುತ್ತದೆ. ಹಿಂದೆಯೇ ಬಟ್ಟೆಗಳಿಂದ ಉಂಟಾಗುವ ಬಂಧಗಳ ಉಲ್ಲೇಖವನ್ನು ಮಾಡಿ್ದ್ದವು. ಅಂತೆಯೇ ಕೇಶರಾಶಿಯನ್ನು ಕಟ್ಟುವ ಕ್ರಮಗಳು ಸರಿಯಾಗಿ ಯೋಜಿಸಿದ್ದಲ್ಲಿ ಯೋಗ ಸಾಧನೆಗೆ ಅನುಕೂಲ ಮಾಡುವ ಶಕ್ತಿಯನ್ನು ಹೊಂದಿದೆ. 


ಕೇಶರಾಶಿಯನ್ನು  ಕಟ್ಟಿಡುವುದು ಯೋಗಸಾಧನೆಗೆ ಪೋಷಕ. ಆದ್ದರಿಂದಲೇ ಬದ್ಧಶಿಖಿಯಾಗಿ ಎಲ್ಲ ಕರ್ಮಗಳನ್ನು ಮಾಡಬೇಕು ಎಂದು ಶಾಸ್ತ್ರಗಳು ಹೇಳುತ್ತವೆ. ಸಾಮಾನ್ಯವಾಗಿ ತಲೆಯ ಹಿಂಭಾಗದಲ್ಲಿ ಕೂದಲನ್ನು ಸೇರಿಸಿ ಶಿಖೆಯನ್ನು ಕಟ್ಟುತ್ತಾರೆ. ಈ ವಿನ್ಯಾಸದಿಂದ ತಲೆಯಹಿಂಬದಿಯ ಮರ್ಮಸ್ಥಾನದ ರಕ್ಷಣೆಯಾಗುತ್ತದೆ. ತಲೆಯ ಶಿಖಾಸ್ಥಾನದಲ್ಲಿ  ಜ್ಞಾನಿಯು ತನ್ನೊಳಗೆ ಪರಮಾತ್ಮ ಜ್ಯೋತಿಯನ್ನು ದೀಪಶಿಖೆಯ ಆಕಾರದಲ್ಲಿ ಕಾಣುತ್ತಾನೆ. ಆ ಸ್ಮರಣೆಯಲ್ಲಿ ಹೊರಗಿನ ಈ ಶಿಖೆ. ಪುರುಷರು ಅಂಗುಷ್ಟಗಾತ್ರದ ಶಿಖೆಯನ್ನು ಧರಿಸುತ್ತಾರೆ. ಇನ್ನೂ ಪರಮ ವೈರಾಗ್ಯದಿಂದ ಕೂಡಿದ ಋಷಿಮುನಿಗಳು ಜಗತ್ತಿಗೆ ವಿಮುಖರಾಗಿ, ಕೇಶಭಾರವನ್ನು ಶಿರದ ಮೇಲೆ ಕಟ್ಟಿರುತ್ತಾರೆ.  ಆದರೆ, ಸ್ತ್ರೀಯರು ಪ್ರಕೃತಿಮಾತೆಯ ಪ್ರತಿನಿಧಿ. ಪರಮಾತ್ಮ ಶಕ್ತಿಯನ್ನು ಇಡೀ ವಿಶ್ವದಲ್ಲಿ ಬೆಳೆಸುವವಳು.  'ವಿಶ್ವ' ಎಂದು ಕರೆಯಲ್ಪಡುವ ಈ ಇಡೀ ಶರೀರವನ್ನೂ ವ್ಯಾಪಿಸಿ ಪೋಷಿಸುವ ಕೆಲಸ ಪ್ರಕೃತಿಮಾತೆಯದು. ಅದನ್ನು ಸೂಚಿಸುವಂತೆ ಸ್ತ್ರೀಯರು ಶಿಖೆಯನ್ನು ಜಡೆಯ ರೂಪದಲ್ಲಿ ಉದ್ದವಾಗಿ ಇಳಿಯಬಿಡುತ್ತಾರೆ. ಈ ಕ್ರಮವನ್ನು ನಿಸರ್ಗದ ಯೋಜನೆಯಲ್ಲಿಯೂ ಕಾಣಬಹುದು. ನಮ್ಮ ಮೆದುಳು ಶಿರಸ್ಸಿನ ಸ್ಥಾನವನ್ನು ಅಲಂಕರಿಸಿದೆ, ಬೆನ್ನುಹುರಿಯ ರೂಪದಲ್ಲಿ ಸೊಂಟದವರೆಗೂ ಇಳಿದುಬಂದಿದೆ. ಬೆನ್ನುಹುರಿಯ ಮೂಲಕ ಇಡೀ ಶರೀರವನ್ನು ವ್ಯಾಪಿಸುವ ನರಮಂಡಲವನ್ನು  ನಿಯಂತ್ರಿಸುತ್ತದೆ. ಸ್ತ್ರೀಯರು ಇಳಿಯಬಿಡುವ ಜಡೆಯೂ ಬೆನ್ನುಹುರಿಯ ಆಕಾರವನ್ನು ಹೊಂದಿ ಅದೇಸ್ಥಾನವನ್ನು ಅಲಂಕರಿಸಿದೆ. 


ಕೇಶಕ್ಕೆ ಅಲಂಕಾರವನ್ನು ಮಾಡುವ ಬಗೆಯನ್ನು ಗಮನಿಸಿದರೆ ಜಡೆಯನ್ನು ಹೆಣೆದುಕೊಳ್ಳುವುದೆ ಒಂದು ಅಲಂಕಾರ. ವಿಶೇಷವಾಗಿ ಸ್ತ್ರೀಯರಲ್ಲಿ. ಮೂರು ಕಾಲುಗಳಿಂದ ಕೂಡಿದ ಒಂದು ಜಡೆ ಸರ್ವೇ ಸಾಮಾನ್ಯವಾಗಿ ನಮ್ಮ ದೇಶದಲ್ಲಿ ಕಂಡುಬರುತ್ತದೆ. ಆದರೆ ನೋಡುಗರಿಗೆ ಎರಡೇ ಕಾಲುಗಳು ಇದ್ದಂತೆ ಕಂಡುಬರುತ್ತದೆ. ಇದು ಬೆನ್ನು ಹುರಿಯ ಮೂರು ನಾಡಿಗಳಂತೆ ಎಂದು ಶ್ರೀರಂಗಮಹಾಗುರುಗಳು ಸ್ಮರಿಸಿಕೊಂಡಿದ್ದರು. ಇಡಾ-ಪಿಂಗಲಗಳ ಜೊತೆಯಲ್ಲಿ ಸುಷುಮ್ನಾ ಗುಪ್ತವಾಗಿ ಹರಿಯುತ್ತದೆ. ಗಂಗೆ-ಯಮುನೆಗಳ ನಡುವೆ ಗುಪ್ತಗಾಮಿನಿಯಾದ ಸರಸ್ವತಿಯಂತೆ. ಆದರಿಂದಲೇ ಜಡೆಗೆ ತ್ರಿವೇಣಿ ಎಂದೂ ಹೆಸರು. ಈ ರೀತಿ ಹೆಣೆದಿರುವ ಜಡೆಯು, ಜ್ಞಾನಿಗಳಿಗೆ ಜಾಗೃತವಾದ ಕುಂಡಲಿನೀ ಸರ್ಪದ ಆಕಾರವನ್ನು ಜ್ಞಾಪಿಸುತ್ತದೆ. ಮೂಲಾಧಾರದಿಂದ ಎದ್ದು ಸುಷುಮ್ನಾನಾಡಿಯನ್ನು ಹಾದು, ಸಹಸ್ರಾರಕಮಲದಲ್ಲಿ  ಹೆಡೆಯನ್ನೆತ್ತಿ ಜ್ಞಾನಸಮಾಧಿಯ ಪ್ರತಿರೂಪದಂತೆ ಕಾಣುತ್ತದೆ. ಸಮಾಧಿಸ್ಥಾನದಲ್ಲಿನ ಬೆಳಕು, ಸೂರ್ಯ ಚಂದ್ರ ಅಗ್ನಿಗಳ ಸಮಾಗಮವೆಂದು ಹೇಳುತ್ತಾರೆ. ಅದರ ಸ್ಮರಣೆಯಲ್ಲಿಯೇ ಶಿರಸ್ಥಾನದಲ್ಲಿ ಸೂರ್ಯ-ಚಂದ್ರ-ಅಗ್ನಿ-ಕಮಲ ಮುಂತಾದ ಅಲಂಕಾರಗಳನ್ನು ಸ್ತ್ರೀಯರು ಧರಿಸುತ್ತಾರೆ. 


ಕೇಶಾಲಂಕಾರವನ್ನೂ ಯೋಗಸಾಧನೆಯ ನಿಟ್ಟಿನಲ್ಲಿ ಕಂಡರುಹಿದ ಮಹರ್ಷಿಗಳಿಗೆ ನಮೋನಮಃ 

 (ಮುಂದುವರಿಯುವುದು)

ಸೂಚನೆ: ಈ ಲೇಖನವು ವಿಜಯ ಕರ್ನಾಟಕದ ಪತ್ರಿಕೆಯ ಬೋಧಿ ವೃಕ್ಷ ದಲ್ಲಿ 19/2/2022 ರಂದು ಪ್ರಕಟವಾಗಿದೆ.

ನವವಿಧ ಭಕ್ತಿ - 16 ಮಾಧುರ್ಯಭಾವದಲ್ಲಿ ಪರದೈವವೇ ಪತಿ (Madhuryabhavadalli paradaivave pathi)

ಲೇಖಕರು:  ಡಾ ಸಿ.ಆರ್. ರಾಮಸ್ವಾಮಿ

(ಪ್ರತಿಕ್ರಿಯಿಸಿರಿ lekhana@ayvm.in)



ಆತ್ಮನಿವೇದನಂ - 3  


ನವವಿಧಭಕ್ತಿಯಲ್ಲದೆ ವಿಶೇಷವಾದ ಮಾಧುರ್ಯಭಾವವು ಭಕ್ತಿಯ ಪ್ರಕಾರಗಳಲ್ಲಿ ಒಂದಾಗಿ ನಮ್ಮ ಸಾಹಿತ್ಯದಲ್ಲಿ ಕಂಡುಬರುತ್ತದೆ. ಮಾಧುರ್ಯಭಕ್ತಿಯಲ್ಲಿ ಭಗವಂತನನ್ನೇ ಪತಿಯಾಗಿ ವರಿಸುವುದು  ವಿಶೇಷ ಅಂಶವಾಗಿದೆ. ಈ ಸನ್ಮಾರ್ಗದಲ್ಲಿ ಜೀವನು ಭಗವಂತನನ್ನು ಪ್ರಿಯತಮನಾದ ಪತಿಯನ್ನಾಗಿಯೂ ತನ್ನನ್ನು ಅವನ ಪ್ರೇಯಸಿಯನ್ನಾಗಿಯೂ ಭಾವಿಸಿ ಭಜಿಸಲಾಗುವುದು. ಮಾಧುರ್ಯಭಕ್ತಿಗೆ ಹೆಸರಾಂತ ಭಕ್ತೆಯರು ಗೋದಾದೇವಿ, ಅಕ್ಕಮಹಾದೇವಿ ಮತ್ತು ಮೀರಾಬಾಯಿ. ಈ ಭಾವವನ್ನು  ಅನೇಕರು ಟೀಕೆ ಮಾಡುತ್ತಾರೆ.  ಈ ಭಾವನೆ "ಅಪವಿತ್ರ, ದೈವದ್ರೋಹ" ಎಂದೆಲ್ಲಾ ಟೀಕೆಮಾಡಿದ ಮಹಿಳೆಯೊಬ್ಬಳನ್ನು ಪೂಜ್ಯ ರಂಗಪ್ರಿಯಸ್ವಾಮಿಗಳು ಅವರ ಸಂಪ್ರದಾಯದಲ್ಲಿ ಭಗವಂತನನ್ನು ಹೇಗೆ ಸಂಬೋಧಿಸುತ್ತಾರೆಂದು ವಿಚಾರಿಸಲು Father(ತಂದೆ) ಎಂಬುದಾಗಿ ಉತ್ತರಿಸಿದರು. ತಕ್ಷಣವೇ "ತಂದೆಯೂ ಒಬ್ಬರ ಪತಿಯೇ ಆಗಿರಬೇಕಲ್ಲವೇ?" ಎಂದಾಗ ಆಕೆಯು ತಬ್ಬಿಬ್ಬಾಗಿ ಉತ್ತರವಿಲ್ಲದೆ ಹೊರಟುಹೋದರು. ಹಾಗೆ ಲೋಕಕ್ಕೆಲ್ಲಾ ಪತಿ-ಜಗದೀಶ್ವರ, ಪತಿಗಳಿಗೆಲ್ಲಾ ಪತಿ ಅವನು ಎಂಬುದೇ ವಾಸ್ತವ. 


ಗೋದಾದೇವಿ 

ಗೋದಾದೇವಿಯ ಭಕ್ತಿಭಾವವನ್ನು ಹಿಂದಿಯೇ ಗಮನಿಸಿದ್ದೇವೆ. ಗೋದೆಯು ಭಗವಂತನೇ ತನಗೆ ಪತಿಯಾಗಬೇಕೆಂದು ಹಂಬಲಿಸಿ ವ್ರತವನ್ನು ಕೈಗೊಂಡಳು.  ಈ  ವೃತ್ತಾಂತವನ್ನು "ತಿರುಪ್ಪಾವೈ" ಎಂಬ ಮೂವತ್ತು ಪಾಶುರಗಳಲ್ಲಿ ವಿವರಿಸಿರುವುದು ಸುಪ್ರಸಿದ್ಧ. ಅವಳ ಹಂಬಲವನ್ನು 'ನಾಛ್ಚಿಯಾರ್ ತಿರುಮೊಳಿ' ಎಂಬ 143 ಪಾಶುರಗಳಲ್ಲಿ(ಪದ್ಯಗಳಲ್ಲಿ) ವ್ಯಕ್ತಪಡಿಸಿದ್ದಾಳೆ. ಅವನನ್ನೇ ಸಾಂಗವಾಗಿ ವಿವಾಹವಾಗುವಂತಹ ಹೊಂಗನಸನ್ನು ಕಂಡೆ ಎಂಬುದಾಗಿ ಸಖಿಯ ಬಳಿ "ವಾರಣಮಾಯಿರಂ" ಎಂಬ ಪಾಶುರಗಳ ಮೂಲಕ ಹಂತಹಂತವಾಗಿ ಹೇಳಿ ಹರ್ಷಿಸುತ್ತಾಳೆ. ತಾನು ಅವನನ್ನೇ ವಿವಾಹವಾಗಬೇಕು, ಅವನಲ್ಲಿಯೇ ಒಂದಾಗಬೇಕು ಎನ್ನುವ ಉತ್ಕಟೇಚ್ಛೆಯು ಬಂದಾಗ ಭಗವಂತ ಅನೇಕ ವಿಧಗಳಲ್ಲಿ ಪರೀಕ್ಷೆಮಾಡಿ ಕೊನೆಯಲ್ಲಿ ಇವಳ ಹಂಬಲವನ್ನು ಪೂರೈಸುವ ಸಂಕಲ್ಪವನ್ನು ಮಾಡಿಕೊಳ್ಳುತ್ತಾನೆ. ತಂದೆ ಪೆರಿಯಾಳ್ವಾರರಿಗೆ ಕನಸಿನಲ್ಲಿ ಭಗವಂತನು ಗೋದೆಯನ್ನು ತಾನು ವಿವಾಹಮಾಡಿಕೊಳ್ಳಲು ನಿರ್ಧರಿಸಿರುವುದನ್ನು ವ್ಯಕ್ತಪಡಿಸುತ್ತಾನೆ. ಅದರಂತೆ ನಿರ್ದಿಷ್ಟ ದಿನದಂದು ಗೋದಾದೇವಿಯನ್ನು ವಧುವಿನ ಸರ್ವಾಲಂಕಾರದೊಂದಿಗೆ ಶ್ರೀರಂಗಕ್ಷೇತ್ರಕ್ಕೆ ಕರೆತರಲು ಆಜ್ಞೆ ಮಾಡುತ್ತಾನೆ. ಪೆರಿಯಾಳ್ವಾರ್  ಮತ್ತು ಗೋದಾದೇವಿ ಇಬ್ಬರೂ ಅತ್ಯಂತ ಸಂತುಷ್ಟರಾಗುತ್ತಾರೆ. ಅಲ್ಲಿನ ಅರ್ಚಕರು ಇದನ್ನೊಪ್ಪುತ್ತಾರೆಯೇ ಎಂಬ ಚಿಂತೆಗವಕಾಶವಿಲ್ಲದಂತೆ ಭಗವಂತನು ಅರ್ಚಕರಿಗೂ ತನ್ನ ಸಂಕಲಪನ್ನು ತಿಳಿಸಿ "ಗೋದೆಯನ್ನು ಪೂರ್ಣ ಮರ್ಯಾದೆಯೊಂದಿಗೆ ಬಿಜಯ ಮಾಡಿಸಿಕೊಂಡು ಬನ್ನಿ" ಎಂಬುದಾಗಿ ಆದೇಶಿಸುತ್ತಾನೆ. ಅಷ್ಟಲ್ಲದೆ ಪಾಂಡ್ಯರಾಜನಿಗೆ  ಆ ದಿನ ಗೋದಾದೇವಿಯನ್ನು ಪಲ್ಲಕ್ಕಿಯಲ್ಲಿ ಶ್ರೀರಂಗಕ್ಕೆ ವಿಜೃಂಭಣೆಯಿಂದ ದಾರಿಯುದ್ದಕ್ಕೂ ತಳಿರು-ತೋರಣಗಳಿಂದ ಸಿಂಗರಿಸಿ ಕರೆತರಲು ಆಜ್ಞಾಪಿಸುತ್ತಾನೆ!  ಭಗವಂತ ತನ್ನ ಭಕ್ತರಿಗೆ ಒಲಿದರೆ ಅನಾಯಾಸವಾಗಿ ಎಲ್ಲ ವಿಘ್ನಗಳನ್ನೂ ನಿವಾರಿಸುತ್ತಾನಲ್ಲವೇ?  ಭಗವಂತನ ಆಜ್ಞೆಯಂತೆಯೇ ಗೋದಾದೇವಿಯು ಸರ್ವಾಲಂಕಾರ ಭೂಷಿತೆಯಾಗಿ ಶ್ರೀರಂಗವನ್ನು ತಲುಪಿದಳು. ರಂಗನಾಥಮೂರ್ತಿಯನ್ನು ನೋಡೀದಾಗ ಅವಳಿಗೆ ಸಾಕ್ಷಾತ್ ಭಗವಂತನೇ ಕಾಣುತ್ತಾನೆ. ಆಗ ಪೆರಿಯಾಳ್ವಾರ್, ಭಗವಂತನಲ್ಲಿ "ನಿಮ್ಮ ಆಜ್ಞೆಯಂತೆ ಅವಳನ್ನು ಕರೆತಂದಿರುವೆ. ಆದರೆ ವಿವಾಹ ಮಂಗಳವು ನಮ್ಮ ಊರಿನ ಜನರೆಲ್ಲರೂ ಕಣ್ತುಂಬ ನೋಡಿ ಸಂತೋಷಿಸುವಂತೆ ಶ್ರೀವಿಲ್ಲಿಪುತ್ತೂರಿನಲ್ಲೇ ಸಂಪನ್ನಗೊಳ್ಳಬೇಕು" ಎಂದು ಪ್ರಾರ್ಥಿಸುತ್ತಾರೆ. ಭಗವಂತನೂ ಒಪ್ಪಿಕೊಳ್ಳುತ್ತಾನಂತೆ. ಆದರೆ ನಿಶ್ಚಯಿಸಿದ ಮತ್ತೊಂದು ದಿನದಲ್ಲಿ ಭಗವಂತನ ಆಗಮನ ತಡವಾದದ್ದನ್ನು ನೋಡಿ ದುಃಖಿತಳಾದ ಗೋದಾದೇವಿಯು ಗರುಡಾಳ್ವಾರರ ಸಹಾಯವನ್ನು ಬೇಡುತ್ತಾಳೆ. ಭಕ್ತವತ್ಸಲನಾದ ಭಗವಂತನು ಕ್ಷಣಮಾತ್ರದಲ್ಲೇ ಗರುಡವಾಹನನಾಗಿ ದಯಮಾಡಿಸುತ್ತಾನೆ. ವಿವಾಹಮಂಗಳವು ಎಲ್ಲರ ಕಣ್ಮನಗಳನ್ನು ತಣಿಸುವಂತೆ ಸಂಪನ್ನಗೊಂಡಿತು. ಗೋದೆಯು ಅಲ್ಲಿಯೇ ಭಗವಂತನಲ್ಲಿ ಐಕ್ಯಹೊಂದಿದಳೆಂದು ಐತಿಹ್ಯ.  ಭಗವಂತನನ್ನು ಪತಿಯಾಗಿ ಭಾವಿಸುವುದಷ್ಟೇ ಅಲ್ಲದೆ ಬಾಹ್ಯವಾಗಿಯೂ ಅವನನ್ನೇ ವಿವಾಹ ಮಾಡಿಕೊಂಡ ಮಹಾಭಕ್ತಶಿರೋಮಣಿ ಆಂಡಾಳ್ ದೇವಿ. 


ಅಕ್ಕಮಹಾದೇವಿ

ಅಂತೆಯೇ ನಮ್ಮ ಕರ್ನಾಟಕ ರಾಜ್ಯದವರಾದ ಅಕ್ಕಮಹಾದೇವಿಯೂ ಶಿವಭಕ್ತಿಯಲ್ಲಿ ಮುಳುಗಿದವರು. ಮೀರಾಬಾಯಿಯಂತೆಯೇ ಅಕ್ಕಮಹಾದೇವಿಯೂ ಕೂಡ ರಾಣಿಯಾಗಿದ್ದಳು. ಆದರೂ ಲೌಕಿಕದಲ್ಲಿ ಸ್ವಲ್ಪವೂ ಆಸಕ್ತಿ ಇಲ್ಲದವಳಾಗಿ ಲೌಕಿಕ-ಸುಖ-ಭೋಗಗಳೆಲ್ಲವನ್ನೂ ನಶ್ವರವೆಂದು ತಿಳಿದು ಪತಿಯನ್ನೂ ಅರಮನೆಯನ್ನೂ ತ್ಯಜಿಸಿ ಚನ್ನಮಲ್ಲಿಕಾರ್ಜುನನನ್ನು ಹಂಬಲಿಸಿ ಹಿಂಬಾಲಿಸಿದಳು. ತನ್ನ ಉಡಿಗೆ-ತೊಡಿಗೆ ಎಲ್ಲವನ್ನೂ ತ್ಯಾಗಮಾಡಿ ಪರಮವೈರಾಗ್ಯದಿಂದ ಜಡೆಯಿಂದಲೇ ತನ್ನನ್ನು ಆವರಿಸಿಕೊಂಡಿದ್ದ ಭಕ್ತಶಿರೋಮಣಿ. ಲೋಕಕ್ಕೆ ಹೆದರಿದವಳಲ್ಲ. ತಾನುಡುವ ವಸ್ತ್ರ ತ್ಯಜಿಸಿದುದರಿಂದ ಜನರ ಟೀಕೆಗೆ ಗುರಿಯಾಗಿ "ಏನು ನಾಚಿಕೆಯಾಗುವುದಿಲ್ಲವೇ?" ಎಂಬ ಪ್ರಶ್ನೆಗೆ: "ನಾಚಿಕೆ ಏಕೆ? ಲೋಕಕ್ಕೆಲ್ಲಾ ತಂದೆ ಚನ್ನಮಲ್ಲಿಕಾರ್ಜುನ ಇಡೀ ಜಗತ್ತನ್ನೇ ನೋಡುತ್ತಿರಲು ನಾಚಿಕೆ ಏನಿದೆ?" ಎಂದು ದಿಟ್ಟತನದ ಉತ್ತರವಿತ್ತ  ಪರಮ ವಿರಾಗಿಣಿ ಭಕ್ತೆ.

ಮಾಧುರ್ಯಭಾವದಿಂದಲೂ ಚನ್ನಮಲ್ಲಿಕಾರ್ಜುನನೊಬ್ಬನೇ ತನ್ನ ಪತಿಯೆಂದು ಭಾವಿಸಿ ಟೀಕಿಸುವವರಿಗೆ "ಗಂಡಗಂಡರೆಲ್ಲರ ಹೆಂಡಿರಾಗಿ ಆಳುವ ಗರುವದ ಗಂಡು ಆತ" ಎಂದು ಧೀರವಾಣಿಯಿಂದ ಘೋಷಣೆ ಮಾಡಿದವಳು. ತನ್ನನ್ನು ಚನ್ನನಿಗೆ ಪರಿಪೂರ್ಣವಾಗಿ ಸಮರ್ಪಿಸಿಕೊಂಡು ಯಾವುದೇ ರೀತಿಯ ಭಯವೂ ಇಲ್ಲದಿದ್ದವಳು. "ಚನ್ನಮಲ್ಲಿಕಾರ್ಜುನನೇ ಗಂಡನೆನಗೆ, ನಾನು ಚನ್ನಮಲ್ಲಿಕಾರ್ಜುನಂಗೆ ಮದುವಳಿಗೆ ...." ಎಂಬುದು ಆಕೆಯ ಅವ್ಯಾಜ ಪ್ರೇಮಕ್ಕೆ ಹಿಡಿದ ಕನ್ನಡಿ. ಅಕ್ಕನ ಮಾಧುರ್ಯಭಕ್ತಿಯ ಸ್ಥಿರವಾದ ಮನವನ್ನು ಬಿಂಬಿಸುವ ವಚನವಿದು: "ಎನ್ನ ದೈವ ಚನ್ನಮಲ್ಲಿಕಾರ್ಜುನನಂಗಲ್ಲದೆ  ಅನ್ಯಕ್ಕೆಳಸುವುದೆ ಎನ್ನ ಮನ?"  ವಿರಕ್ತಳಾಗಿ ಅರಮನೆ ತ್ಯಜಿಸಿದಾಗ ಹಸಿವು-ಬಾಯಾರಿಕೆ ಮುಂತಾದ ಅವಶ್ಯಕತೆಗಳಿಗೆ ಮನಗೊಡದೆ ಆಡಿದ ವೈರಾಗ್ಯದ ಮಾತು ಇಂತು: "ಹಸಿವಾದೆಡೆ ಭಿಕ್ಷಾನ್ನಗಳುಂಟು, ತೃಷೆಯಾದಡೆ ಕೆರೆ-ಬಾವಿ-ಹಳ್ಳಗಳುಂಟು..... ಆತ್ಮ ಸಂಗಾತಕ್ಕೆ ನೀನೆನಗುಂಟು". ತನು-ಮನ-ಪ್ರಾಣಗಳೂ ಅವನೇ ಆಗಿರುವಾಗ ತನ್ನ ಆಸ್ತಿತ್ವವೆಲ್ಲಿಯದು? ಎಂಬ ಭಾವನೆಯನ್ನು ತೋರ್ಪಡಿಸಿದ ಪರಿ ಆತ್ಮನಿವೇದನಭಕ್ತಿಗೆ ಎಂತಹ ಉನ್ನತ ಉದಾಹರಣೆ! ಪ್ರಕೃತಿ ಸಿರಿಯಲ್ಲೂ ಭಗವಂತನನ್ನೇ ಕಾಣುವ ಆಳವಾದ ಅಧ್ಯಾತ್ಮದನುಭವದ ಮಾತು - "ವನವೆಲ್ಲಾ ನೀನೇ , ವನದೊಳಗಣ ದೇವತರುವೆಲ್ಲ ನೀನೆ....."   ಲೋಕ ವಿಲಕ್ಷಣವಾಗಿದ್ದು ಇತರರ ನಿಂದನೆಯನ್ನು ಕಿಂಚಿತ್ತೂ ಲೆಕ್ಕಿಸದೆ ತನ್ನ ನಿಲುವಿನಲ್ಲಿಯೇ ಸ್ಥಿರವಾಗಿ ನಿಂತ ಪರಮ ವಿರಾಗಿಣಿ. ತನ್ನ ಗುರಿಸಾಧನೆ, ಅದರ ಅನುಭವದಲ್ಲಿ ನಿರತಳಾಗಿದ್ದು ಕಡೆಗೆ ಶ್ರೀಶೈಲದಲ್ಲಿ ತನ್ನ ನಲ್ಲ ಚನ್ನನೊಡನೆ ಒಂದಾಗಿ ಸೇರಿದಭಕ್ತ ಶಿರೋಮಣಿ ಈಕೆ.


ಸೂಚನೆ: ಈ ಲೇಖನವು ವಿಜಯ ಕರ್ನಾಟಕದ ಪತ್ರಿಕೆಯ ಬೋಧಿ ವೃಕ್ಷ ದಲ್ಲಿ 19/2/2022 ರಂದು ಪ್ರಕಟವಾಗಿದೆ.

Thursday, February 17, 2022

ಗಂಗಾಸ್ನಾನದ ಸಾಫಲ್ಯವೆಂತು? (Gangasnanada Saphalyaventu?)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


ನಮ್ಮ ಸಂಸ್ಕೃತಿಯಲ್ಲಿ ಗಂಗೆ ಪೂಜ್ಯೆ. ಸ್ವರ್ಗದಿಂದವತರಿಸಿ ಹರಿದು ಸಾಗರ ಸೇರಿದವಳಾದರೂ, ಅವಳ  "ಅಧೋಮುಖ"ದ ಪಯಣದಲ್ಲೂ ಜೀವಕೋಟಿಯನ್ನು ಉದ್ಧರಿಸುತ್ತಿರುತ್ತಾಳೆ. ನಮ್ಮ ಸಂತರೂ ಕವಿಗಳೂ ಗಂಗೆಯ ಎಲ್ಲಾ ಮುಖಗಳನ್ನೂ ವರ್ಣಿಸಿರುವರಾದರೂ, ಅವಳ ಲೋಕಪಾವಕತ್ವವೇ ಅವುಗಳಲ್ಲಿ ಪ್ರಮುಖವಾದದ್ದು.


ಋಷಿ-ಕವಿಗಳ ಮಾತುಗಳು

ಗಂಗಾವತರಣದ ಕಥೆಯನ್ನು ರಾಮಾಯಣದಲ್ಲಿ ಕಾಣುತ್ತೇವೆ. ಕರ್ತೃಗಳಾದ ವಾಲ್ಮೀಕಿಗಳು ಗಂಗೆಯ ಬಗ್ಗೆ ಹೇಳಿರುವ ಮಾತುಗಳು ಇಲ್ಲಿ ಸ್ಮರಣಾರ್ಹ. ಆದಿಕವಿಗಳೂ ಋಷಿಗಳೂ ಆದವರು ಈ ನದಿಯನ್ನು ಹೇಗೆ ಕಂಡಿರುವರು!: ಅವಳ ಪಾವಕತ್ವವನ್ನು ವರ್ಣಿಸುತ್ತಾ, ಬೇರೆಡೆಯಲ್ಲಿ ರಾಜನಾಗಿರುವುದಕ್ಕಿಂತ ಅವಳ ದಡದಲ್ಲಿ ಹೀನ ಜಂತುಗಳಾಗಿರುವುದು ಲೇಸೆನ್ನುತ್ತಾರೆ. ಅವಳಲ್ಲಿ ಸ್ನಾನಮಾಡಿದವರು ಸಂಸಾರಚಕ್ರಕ್ಕೆ ಮತ್ತೆ ಬೀಳುವುದಿಲ್ಲವೆಂದೂ, ಅವಳು ಮೋಕ್ಷಲಕ್ಷ್ಮಿಗೆ ವಿಜಯಧ್ವಜವೆಂದೂ ವರ್ಣಿಸುತ್ತಾರೆ. ಇಷ್ಟೇ ಅಲ್ಲ, ತಮ್ಮ ಮರಣವು ಅವಳ ಸ್ಮರಣೆಯೊಂದಿಗೇ ಆಗಬೇಕೆಂಬ ಕನಸು ಕಾಣುತ್ತಾರೆ.

ಶಂಕರಾಚಾರ್ಯರು ಗಂಗೆಯನ್ನು ಕುರಿತಾಗಿ ಎರಡು ಸ್ತೋತ್ರಗಳನ್ನು ರಚಿಸಿದ್ದಾರೆ. ಗಂಗೆಯು ಸ್ವರ್ಗದಿಂದಲೂ ಪರ್ವತಗಳ ಮೂಲಕವೂ ಧುಮುಕುತ್ತಿರುವ  ಪರಿಯನ್ನೂ, ಅವಳು ಪಾಪನಾಶಿನಿಯೆಂಬುದನ್ನೂ ಅವುಗಳಲ್ಲಿ ವರ್ಣಿಸುತ್ತಾರೆ.  ಅವಳ ಅನುಗ್ರಹದಿಂದ ನಾರಾಯಣ ಪದಪದ್ಮಗಳ ಸ್ಮರಣೆಯೊಂದಿಗೆ ತಮ್ಮ ಅವಸಾನಸಮಯವು "ಪ್ರಾಣ-ಪ್ರಯಾಣೋತ್ಸವ"ವಾಗಲೆಂದು ಆಶಿಸುತ್ತಾರೆ.

ಭತೃಹರಿಯ "ಕನಸು" ಇದು: ಎಂದಿಗಾದರೂ ನಾನು ಗಂಗೆಯ ದಡದಲ್ಲಿ ಹಿಮಾಲಯದ ಶಿಲೆಯೊಂದರ ಮೇಲೆ ಪದ್ಮಾಸನವನ್ನು ಹಾಕಿ ಕುಳಿತಿರಬೇಕು; ಬ್ರಹ್ಮ-ಧ್ಯಾನಾಭ್ಯಾಸದಿಂದಾಗಿ ಯೋಗ-ನಿದ್ರೆಯನ್ನು ಹೊಂದಿರಬೇಕು; ಅದೆಷ್ಟು ಆಳವಾಗಿರಬೇಕೆಂದರೆ, ಮುದಿಜಿಂಕೆಗಳು ತಮ್ಮ ಮೈಯನ್ನು ನನ್ನ ಮೈಗೆ ಉಜ್ಜಿಕೊಳ್ಳುತ್ತಾ ತಮ್ಮ ಮೈತುರಿಯನ್ನು ಕಳೆದುಕೊಳ್ಳುತ್ತಿರಬೇಕು! [ಅರ್ಥಾತ್, ನಾನಾದರೂ ಅದರ ಪರಿವೆ ಸಹ ಇಲ್ಲದೆ ಧ್ಯಾನದಲ್ಲಿ ಮುಳುಗಿಹೋಗಿರರಬೇಕು] - ಅಂತಹ ಸುದಿವಸಗಳು ಅದೆಂದು ಬಂದಾವೋ! - ಎಂದು ಎದುರುನೋಡುತ್ತಿದ್ದೇನೆ, ಎನ್ನುತ್ತಾನೆ : "ಗಂಗಾತೀರೇ... ಮಮ ಸುದಿವಸೈಃ" ! ತನ್ನ ನೀತಿಶತಕದಲ್ಲಿ ಗಂಗೆಯ ಬಗ್ಗೆ ನಕಾರಾತ್ಮಕವಾಗಿ ಅಧೋಗತಿಯನ್ನು ಹೊಂದಿದವಳೆಂದು ಹೇಳಿದ್ದರೂ, ಆಮೇಲಿನ ವೈರಾಗ್ಯ-ಶತಕದಲ್ಲಿ ಮೇಲೆ ಹೇಳಿರುವುದನ್ನು ಚಿತ್ರಿಸಿದ್ದಾನೆ: 

ವೈರಾಗ್ಯ-ಶತಕದ ಕಟ್ಟಕಡೆಯ ಭಾಗವಾದ "ಅವಧೂತ-ಚರ್ಯಾ"ಪ್ರಕರಣದಲ್ಲಿ, ತನ್ನ ಭಾಗ್ಯ ಫಲಿಸಿದರೆ ಗಂಗಾತೀರದ ಆ ಸನ್ನಿವೇಶ ದೊರೆತೀತೆಂಬ ಮೇಲಿನ ಮಾತು ಬರುತ್ತದೆ. ಇದಕ್ಕೆ ಸ್ವಲ್ಪ ಮುಂಚೆ ಕೂಡ, "ಸ್ನಾತ್ವಾ ಗಾಂಗೈಃ ಪಯೋಭಿಃ" ಎಂದು ಗಂಗಾ-ಸ್ನಾನದ ಶ್ರೇಷ್ಠತೆಯನ್ನು ಕೊಂಡಾಡಿದ್ದಾನೆ. ಆರಂಭದ ಧೋರಣೆಯು ಒಂದಾದರೂ ಅಂತ್ಯದ "ಕನಸು" ಸಕಾರಾತ್ಮಕವೇ.

ಆತನು ಮಾತ್ರವಲ್ಲ, ಶಂಕರಭಗವತ್ಪಾದರೂ ಹೀಗೆಯೇ ಮಾಡಿದ್ದಾರೆ!  ಅವರ ಪ್ರಸಿದ್ಧ ಸ್ತೋತ್ರವೆನಿಸುವ "ಭಜಗೋವಿಂದ"ವನ್ನೇ ನೋಡಿ: "ಜನರು ಏನೆಲ್ಲ ಮಾಡುತ್ತಾರೆ! ಗಂಗೆಗೆ ಹೋಗುವುದೇನು, ಸಾಗರಕ್ಕೆ ಹೋಗುವುದೇನು, ವ್ರತಗಳನ್ನು ಮಾಡುವುದೇನು, ದಾನವನ್ನು ಮಾಡುವುದೇನು? - ಇವೆಲ್ಲವನ್ನೂ ಮಾಡುತ್ತಾರೆ! ಆದರೆ ಮುಕ್ತಿಯೊಂದಕ್ಕಾಗಿ ನೂರುಜನ್ಮವಾದರೂ ಏನು ಶ್ರಮಪಡಲೂ ಸಿದ್ಧರಿಲ್ಲವಲ್ಲಾ!" - ಎನ್ನುತ್ತಾ ಜನರ ಮೂರ್ಖತನವನ್ನು ಅಧಿಕ್ಷೇಪಿಸುತ್ತಾರೆ. (ಕುರುತೇ ಗಂಗಾ-ಸಾಗರ-ಗಮನಂ …  ಮುಕ್ತಿಂ ನ ಭಜತಿ ಜನ್ಮ-ಶತೇನ! ಭಜ ಗೋವಿಂದಂ…). ಈ ಮಾತಿನ ಮರ್ಮವನ್ನು ಮುಂದೆ ನೋಡುತ್ತೇವೆ. ಏಕೆಂದರೆ, ಭತೃಹರಿಯಾದರೂ ಮೊದಲೊಂದು ಕೊನೆಗೊಂದು ಹೇಳಿದ. ಆದರೆ ಇವರು, ಇನ್ನು ಮೂರೇ ಶ್ಲೋಕವಾದಮೇಲೆ ಹೇಳಿರುವುದೇನು?  ಗಂಗಾಪಾನದಿಂದಲೇ  ಮೋಕ್ಷವು ಸಿದ್ಧಿಸುವುದು -ಎಂದು!: "ಗೀತೆಯನ್ನು ಕಿಂಚಿತ್ತಾಗಿ ಓದಿದರೂ ಆಯಿತು; ಗಂಗಾಜಲದ ಒಂದು ಲವದ ಒಂದು ಕಣದ ಒಂದು ಭಾಗವಷ್ಟನ್ನಾದರೂ ಪಾನಮಾಡಿದರಾಯಿತು … ಆತನಿಗಿನ್ನು ಯಮದರ್ಶನವಾಗದು – ಎಂದು! ( ಭಗವದ್-ಗೀತಾ ಕಿಂಚಿದ್-ಅಧೀತಾ ಗಂಗಾ-ಜಲ-ಲವ-ಕಣಿಕಾ ಪೀತಾ). (ವಾಲ್ಮೀಕಿಗಳ ಗಂಗಾಸ್ತುತಿಯ ಛಾಯೆಯೇ ಇಲ್ಲಿದೆ : ಮಾತರ್ ಗಂಗೇ ತ್ವಯಿ ಯೋ ಭಕ್ತಃ / ಕಿಲ ತಂ ದ್ರಷ್ಟುಂ ನ ಯಮಃ ಶಕ್ತಃ!).

ಸ್ವಲ್ಪ ಗಮನಿಸಿ: ಗಂಗೆಯ ಮಹಿಮೆಯೆಷ್ಟೆಂದರೆ, ಅದರ ಒಂದು ಬಿಂದುವಿನ ಮಹಿಮೆಯನ್ನಲ್ಲ ಇಲ್ಲಿ ಹೇಳಿರುವುದು. ಜಲದ ಲವದ ಕಣಿಕೆಯದು. ಲವವೆಂದರೂ ಲೇಶವೆಂದರೂ ಒಂದೇ; ಕಣವೆಂದರೂ ಅಣುವೆಂದರೂ ಒಂದೇ; ಇನ್ನು ಕಣದೊಂದು ಪುಟ್ಟ ಭಾಗವೇ "ಕಣಿಕೆ". ಅಲ್ಲಿಗೆ, ಗಂಗೆಯ ಜಲದ ಲವದ ಕಣದ ಕಿರುಭಾಗವಾಯಿತು! ಇಷ್ಟೇ ಸಾಕು! ಅಷ್ಟು ಶಕ್ತಿ ಅದಕ್ಕೆ, ಅಬ್ಬಬ್ಬ!


ಹಾಗಾದರೆ ಇದನ್ನು ಹೇಗೆ ಕಾಣಬೇಕು?

ಹೀಗೆ ಕವಿಯೊಬ್ಬರು, ಜ್ಞಾನಿಯೊಬ್ಬರು - ಇಬ್ಬರೂ ಗಂಗೆಯನ್ನು ತೆಗಳಿಯೂ ಹೊಗಳಿಯೂ ಇದ್ದಾರೆ. ಇದೇನೀ ದ್ವಂದ್ವ? ಸರಿಯಾದುದು ಯಾವುದು? -  ಎಂಬ ವ್ಯವಸ್ಥೆ ಬೇಕಲ್ಲವೆ?

ಈ ಪ್ರಶ್ನೆಗೆ ಉತ್ತರವನ್ನು ಎರಡು-ಮೂರು ಸ್ತರಗಳಲ್ಲಿ ಕಾಣಬಹುದು. ಮೊದಲನೆಯದಾಗಿ, ಮಹಾತ್ಮರಲ್ಲೂ ಕೆಲವೊಮ್ಮೆ ಸಣ್ಣ-ಪುಟ್ಟ ದೋಷಗಳು ಬರಬಹುದು. ಅವು ಆದರ್ಶವೆಂದಲ್ಲ. ಆ ಅಂಶದಲ್ಲಿ ಅವರನ್ನು ಅನುಕರಿಸಬೇಕಾದುದಿಲ್ಲ, ಅಷ್ಟೆ. ಅಲ್ಲಿಗವನ್ನು ಬಿಡಬೇಕು.

ಇನ್ನೂ ಸರಿಯೆಂದರೆ, ಸರಿಯಾದುದೂ ಸಹ ತಪ್ಪೆಂದು ನಮ್ಮ ಕಣ್ಣಿಗೆ ತೋರಬಹುದು. ವಾಸ್ತವವಾಗಿ ಗಂಗೆಯಿಂದಾದುದು ಲೋಕೋದ್ಧಾರವೇ. ಆದರೆ ನಮ್ಮ ಕಣ್ಣಿಗೆ ಬಿದ್ದದ್ದು ಅವಳು ಬಿದ್ದದ್ದು, ಅಷ್ಟೆ. ಸಹಾಯಮಾಡಲು ಧುಮುಕಿ ಬಂದವರನ್ನು "ಅಯ್ಯೋ ಬಿದ್ದುಹೋದೆಯಾ!" ಎಂದಂದಂತಾಯಿತು, ಅಷ್ಟೆ! ಶ್ರೀರಂಗಮಹಾಗುರುಗಳು ಒಂದು ಭವ್ಯವಾದ ಉದಾಹರಣೆಯನ್ನು ಕೊಡುತ್ತಿದ್ದರು: ಈಜು ಬರದೆ ನೀರಿನಲ್ಲಿ ಮುಳುಗುತ್ತಿರುವನನ್ನು ಉಳಿಸಲು ಈಜುಬಲ್ಲವನೊಬ್ಬ ನೀರಿಗೆ ಧುಮುಕಿದರೆ, ಇಬ್ಬರಿಗೂ ಭೇದ ತಿಳಿಯದವ ಇಬ್ಬರೂ ಬಿದ್ದಿರುವವರೇ ಎಂದುಕೊಂಡಾನು!

ಮೂರನೆಯದಾಗಿ, ಕವಿಗಳು ಕೊಡುವ ಉದಾಹರಣಗಳೆಲ್ಲಾ ಸದಾ ಪೂರ್ಣವಾಗಿಯೂ ಔಚಿತ್ಯ-ಪೂರ್ಣವಾಗಿಯೂ ಇರುತ್ತವೆಂದು ಹೇಳುವಂತಿಲ್ಲ.  ಒಟ್ಟಾರೆ ಚಿತ್ರವನ್ನು ಬಿಟ್ಟು ಕೆಲವೊಮ್ಮೆ ಏಕದೇಶವನ್ನೇ – ಎಂದರೆ ಒಂದು ಸಣ್ಣ ಭಾಗವನ್ನೇ - ತೆಗೆದುಕೊಂಡು ಯಾವುದಕ್ಕೋ ಉದಾಹರಣೆಯನ್ನಾಗಿ ಕೊಡುವುದುಂಟು! ಆಗ ಏನೋ ಭಾಗಶಃ ಅನ್ವಯವು ಘಟಿಸೀತು, ಅಷ್ಟೆ. ಕವಿ-ವಿವಕ್ಷೆಯನ್ನು ಗಮಿನಿಸಿ, ಉಳಿದದ್ದನ್ನು ಬಿಡುವುದರಲ್ಲಲ್ಲವೇ ಔಚಿತ್ಯವಿರುವುದು?  


ಮರ್ಮ

ಇದಕ್ಕಿಂತಲೂ ಮುಖ್ಯವಾಗಿ, ಶ್ರದ್ಧೆಯೆಂಬುದಿಲ್ಲದೆ ಹೋದಲ್ಲಿ, ಗಂಗೆಗೆ ಹೋಗಿಬಂದರೂ, ಮಿಂದುಬಂದರೂ ಫಲವಿಲ್ಲ,. ಮುಕ್ತಿಯತ್ತಲೇ ಉತ್ಕಟವಾಗಿ ಮನಸ್ಸು ಲಗ್ನವಾಗಿದ್ದಲ್ಲಿ ಗಂಗಾ-ಸ್ನಾನವೇ ಏಕೆ, ದೂರದಲ್ಲೆಲ್ಲೋ ಇದ್ದುಕೊಂಡೇ ಗಂಗಾ-ಜಲ-ಬಿಂದುವೊಂದರ ಪಾನ ಮಾಡಿದರೇ ಸಾಕಾದೀತು! "ಸ್ಮರಣೆಯೊಂದೆ ಸಾಲದೇ?"

ಹೀಗೆ ಒಂದೇ ಕೆಲಸವನ್ನೇ ಒಡ್ಡಾಗಿ ಗೊಡ್ಡಾಗಿ ಮಾಡುವುದಕ್ಕೂ, ಬದಲಾಗಿ ಅರಿವಿನೊಂದಿಗೆ ತಿಳಿವಿನ ಮನಸ್ಸಿನೊಂದಿಗೆ ಶ್ರದ್ಧೆಯೊಂದಿಗೆ, ಮಾಡುವುದಕ್ಕೂ ಇರುವ ಭೇದವನ್ನು ಹೀಗೆ ತಿಳಿಸಿದ್ದಾರೆಂಬುದನ್ನು ಮನಗಾಣಬೇಕು. ಯಾವುದೇ ಕರ್ಮವಾಗಲಿ,  "ವಿದ್ಯಯಾ ಶ್ರದ್ಧಯಾ ಉಪನಿಷದಾ"  ಮಾಡು – ಎಂದು ತಾನೆ ಉಪನಿಷತ್ತು ಹೇಳುವುದೂ? ಶ್ರೀರಂಗಮಹಾಗುರುಗಳು ಹೇಳುವಂತೆ "ಮರ್ಮವರಿತು ಕರ್ಮಮಾಡಬೇಕು. "

ಆದರಿದೋ: ಗಂಗಾಸ್ನಾನದಿಂದ ಪಾಪವು ಹೇಗೂ ಕಳೆಯುವುದಲ್ಲವೇ? ಎಂದುಕೊಂಡು  ಮತ್ತೆ ಪಾಪಕೃತ್ಯಕ್ಕೆ ಮನಸ್ಸು ತೊಡಗಿತೋ, ಕೆಟ್ಟೆವು. ಎಂದೇ, ಮುಖ್ಯತೀರ್ಥವಾವುದೆಂದು ಕೇಳಿಕೊಂಡು, "ಯಾವುದು ಮನೋ-ಮಲವನ್ನು ಹೋಗಲಾಡಿಸುವುದೋ ಅದೇ ಮುಖ್ಯತೀರ್ಥ" – ಎಂದು ಶಂಕರರೇ ಹೇಳುತ್ತಾರೆ ( ಕಿಂ ತೀರ್ಥಮಪಿ ಚ ಮುಖ್ಯಂ? ಚಿತ್ತ-ಮಲಂ ಯನ್ನಿವರ್ತಯತಿ).

ಇಲ್ಲದಿದ್ದಲ್ಲಿ, ಅವರೇ ಕೇಳುವ ಪ್ರಶ್ನೆ ಕಣ್ಣ ಮುಂದೆ ನಿಲ್ಲುತ್ತದೆ ("ಅನಾತ್ಮಶ್ರೀ-ವಿಗರ್ಹಣ"ಸ್ತೋತ್ರದಲ್ಲಿ): "ಜಾಹ್ನವಿಯಲ್ಲಿ ಸ್ನಾನ ಮಾಡಿದರೇನು ಬಂದಿತು - ಆತ್ಮ-ಸಾಕ್ಷಾತ್ಕಾರವನ್ನೇ ಮಾಡಿಕೊಳ್ಳದಿದ್ದಲ್ಲಿ!?: "ಸ್ನಾತಸ್ತೀರ್ಥೇ ಜಹ್ನುಜಾದೌ ತತಃ ಕಿಂ/ಯೇನ ಸ್ವಾತ್ಮಾ ನೈವ ಸಾಕ್ಷಾತ್ಕೃತೋಽಭೂತ್?".


ಅಂತಃಶುದ್ಧಿ-ಬಹಿಃಶುದ್ಧಿಗಳು

ಯಾವನು ಅತ್ಯಂತ ಶುದ್ಧನೋ - ಅರ್ಥಾತ್ ಅಂತರಂಗಶುದ್ಧಿಯನ್ನು ವಿಶೇಷವಾಗಿ ಹೊಂದಿರುವನೋ - ಅಂತಹವನು ಗಂಗೆಯ ಪರ್ಯಂತ ಹೋಗಲೇಬೇಕಿಲ್ಲವೆಂಬ ಮಾತು ಸಹ ಉಂಟು! ಹಾಗೆಂದು ಸಾಕ್ಷಾತ್ ಮನುಸ್ಮೃತಿಯಲ್ಲೇ ಹೇಳಿದೆ: "ನಿನ್ನ ಹೃದಯದಲ್ಲೇ ಯಮನಿದ್ದಾನಲ್ಲವೇ? ಅವನೊಡನೆ ನಿನಗೆ ತಕರಾರಿಲ್ಲವೋ, ನಿನಗೇಕೆ ಗಂಗೆ, ನಿನಗೇಕೆ ಕುರುಕ್ಷೇತ್ರ? ಅಲ್ಲೆಲ್ಲಿಗೂ ಹೋಗಬೇಕಿಲ್ಲ!  "ಯಮೋ ವೈವಸ್ವತೋ ರಾಜಾ ಯಸ್ತವೈಷ ಹೃದಿ ಸ್ಥಿತಃ | ತೇನ ಚೇದ್ ಅವಿವಾದಸ್ತೇ ಮಾ ಗಂಗಾಂ ಮಾ ಕುರೂನ್ ಗಮಃ ||"

ಇದೋ ನೋಡಿ ಸೃಷ್ಟಿಯ ಮಧುರ ವೈಚಿತ್ರ್ಯ! ಗಂಗೆಯ ಬಿಂದುಪಾನವಾದರೂ ಆಯಿತು, ಯಮನ ದರ್ಶನವಿನ್ನಿಲ್ಲ; ಹಾಗೆಯೇ, ಒಳಗಣ ಯಮನೊಡನೆ "ವಿವಾದ"ವಿಲ್ಲವೋ, ನಿನಗಿನ್ನು ಗಂಗೆಯ ಹಂಗೂ ಇಲ್ಲ!

ಸಾರವಿಷ್ಟೆ: ಗಂಗಾಸ್ನಾನ-ಪಾನ-ಸ್ಮರಣಗಳೆಲ್ಲವೂ ಸಫಲವೇ – ಯುಕ್ತವಾದ ಭಾವವಿದ್ದಲ್ಲಿ. ಮೈಮಾತ್ರ ಮುಳುಗುಹಾಕಿದರಾಗದು, ಜೊತೆಗೆ ಮನಸ್ಸು ಭಗವದ್ಭಾವದಲ್ಲಿ ಮುಳುಗಲಿ: [ಒಳಗಣ ಜ್ಞಾನ] ಗಂಗೆಯಲ್ಲಿ ಮೀಯುವುದಕ್ಕಿಂತಲೂ ಸಫಲತೆ ಮತ್ತೊಂದುಂಟೇ?

ಸೂಚನೆ: 17/2/2022 ರಂದು ಈ ಲೇಖನ ವಿಜಯವಾಣಿಯ ಸಂಸ್ಕೃತಿ ಲ್ಲಿ ಪ್ರಕಟವಾಗಿದೆ.

உடலும் ஆலயமும் - 2 (Udalum Alayamum - 2)

  • மூலம்: கஜானன பட்டா
  • தமிழாக்கம்: ஸி. ஆர். ஸ்ரீதர்
  • மின்னஞ்சல் : (lekhana@ayvm.in)


ஆலயம்  - மனித உடலின் நகல் 

இந்த மனித இயந்திரத்தை  கவனித்த  யோகிகள், இதனுள் மூலாதாரம், ஸ்வாதிஷ்டானம், மணிபூரம், அனாஹதம், விசுத்தி, ஆக்ஞா மற்றும் ஸஹஸ்ராரம் என்னும் ஏழு மையங்களை தரிசித்தனர். இந்த  ஏழு  மையங்கள்  ஏழு வாயில்களாக  விளங்கி, உள் ஒளிரும்  இறைவனுடைய தரிசனத்திற்கு வழி செய்து கொடுக்கின்றன. இந்த ஏழு மையங்களில் மூன்று மையங்கள் மிகவும்  முக்கியமானவைகளாகும். இவற்றில்  ஒன்று  முதன்மையானதாகும். 

இவ்வாறான உள் அமைப்பை அடையாளமாக கொண்டு, ஆலயங்களிலும் முறையே ஏழு  வாயில்கள், மூன்று வாயில்கள், ஒரு வாயில் என்னும்  முறையிலான  அமைப்பை ஏற்படுதினர்.

முதுகெலும்பின் அடையாளமாக ஒரு த்வஜஸ்தம்பம், இறைவனின் எதிரில் ஒருவருக்கு உண்டாகும் மேல்முகநோக்கின்  அடையாளமாக ஒன்று-மூன்று-ஐந்து மற்றும் ஏழு கலசங்களின்  அமைப்பு, ஆலயத்தின் சுற்றிலும் முறையே பௌதிகம், தைவிகம், ஆத்யாத்மிகங்களாகிய சிற்பங்கள், அந்தரங்கத்தில்   நடைபெறும்  ஸத்பக்திகளின்  மோதல் மற்றும்  ஸத்சக்திகளின் வெற்றியைக்குறிக்கும்  கதைகளின் கல்வெட்டுக்கள், அறுபத்திநான்கு ஆயகலைகளின் வெவ்வேறு  சுவடுகள் - இவை அனைத்தும் மனித உடலின் உள்கட்டமைப்பை ஒத்திருக்கின்றன. ஸ்தம்பங்ககளின் எண்ணிக்கை  இருபத்தி  நான்கு, முப்பத்தி ஆறு, அறுபத்தி  நான்கு, தொண்ணூற்றி ஆறு, நூற்றி எட்டு, ஆயிரத்தி எட்டு என்று இவ்வாறு படைப்பின் விரிவிலுள்ள தத்துவங்களின் பிரதிநிதியாக  வந்துள்ளன.

படுத்துள்ள நிலையில் உள்ள  ஒரு  மனிதஉடலுக்கு ஒப்பிடும்போது  பாதங்களே  முன்வாசல், ஜனனேந்த்ரியம் த்வஜஸ்தம்பம், வயிறே பலிபீடம், இதயமானது நவரங்கம், கழுத்து ஸுகநாஸி, தலை கர்ப்பக்ருஹம், ப்ரூமத்யத்தின் ஆக்ஞாசக்ரஸ்தானமே மூலபீடம். செங்குத்தான நிலையில் உள்ள மனிடஉடலுக்கு ஒப்பிட்டு  பார்த்தோமானால் பாதங்களே நிதிகும்பம்,  நாளங்களே முழங்கால்கள், அஸ்திவாரங்களே தொடைகள், இடுப்பு மற்றும்  வயிற்றுப்பகுதிகளே  சுவர்கள், தோளே வலபி, கைகள் ப்ராகாரங்கள், நாக்கானது மணி, இதயமே இறைவனின் சிற்பம், கழுத்தே விமானம், தலையே சிகரம், ஸஹஸ்ராரம் எனப்படும்  ப்ரம்மரந்த்ரமே கலசங்களாகி உள்ளன.

 இனி, தத்வமயமாய் யோகத்தின் ஒருங்கிணைப்பான சக்ரமயமாயும் ஒரு ஒற்றுமையை காணலாம். ஐந்து வகையான கோசங்களின் பார்வையில் நோக்கினால் வெளிப்ராகாரம் அன்னமயமாகவும், உள் ப்ராகாரம்  ப்ராணமயமாகவும், நவரங்கசுற்று மனோமயமாகவும், உள் ப்ராகாரம்  விஞ்ஞானமயமாகவும் மற்றும் கர்ப்பக்ரஹம் ஆனந்தமய கோசமாகவும் கூறப்படுகிறது.

ஆலயம் என்பது நம் பண்டைய மஹரிஷிகளின் தவத்தின் பயனாய் யக்ஞம்-தானம்-தவம், ருதம்-ஸத்யம்-தர்மம், உலகவாழ்க்கையின் செழிப்பு-ஆன்மீகவளர்ச்சி, மற்றும் நான்கு வகையான புருஷார்த்தங்களின் அடிப்படையில் சிற்ப பூஜை வடிவில் பரவியுள்ளது. ஆலயம்  என்னும் தத்துவம்  தர்மம், பிரம்மம், ரஸம் என்னும் மூன்று சிறப்பான வழிகளால் கூறப்பட்டு, க்ஷேத்ரம்-தீர்த்தம்-யாத்திரையாகி, ஜீவனை தேவனாக்கும் உன்னதமான உறுதியான சங்கல்பத்துடன் கூடியுள்ளது. இது தேச காலத்திற்கு உட்பட்டு மாறுபடும்  பிண்டாண்டத்தில்,  மாறுபடாத பிரம்மாண்டத்தைக் காணும்  ஒரு  முயற்சியாக உள்ளது.

குறிப்பு: இக்கட்டுரை யின் கன்னட மூலம் AYVM blogs ல் காணலாம்.

Tuesday, February 15, 2022

ஒப்பற்றமஹாபுருஷர் ஶ்ரீரங்கமஹாகுரு - பாகம் - 8 (Oppatra Mahaapurushar Srirangamahaa Guru - Part - 8)

தமிழாக்கம்:  ஶ்ரீமதி ஜானகி

மின்னஞ்சல் : (lekhana@ayvm.in)



தமிழாக்கம்  : திருமதி ஜானகி

   

 ஶ்ரீரங்கமஹாகுருவின்  குரல் மென்மையாகவும், இனிமையாகவும், பிறர் மனதை கவர்ந்திழுக்கும் திறமையுடனும் மற்றும் எவ்விதமாயினும் மாறும் தன்மையும் கொண்டிருந்தது.


ஒவ்வொரு பாடல் வரியின் பொருள் மற்றும் பாவத்தை அனுசரித்து இயற்கையே அதற்கு ஒரு ராகத்தை வழங்கியிருக்கிறது என்பதை அறிந்து கூறினார். ஒரு பாடகன் அதை தன் கூர்மையான புத்தியினால் பரிசோதித்து அறிந்த  பிறகே பாடலுக்கான ராகத்தை தேர்ந்தெடுக்க வேண்டும் என வலியுறுத்தினார்.


ஶ்ரீரங்கமஹாகுரு  பாடல்கள், ராகங்கள், தாளங்கள் உள்ளன என்று தோன்றியவாறெல்லாம் ராகங்களை தேர்வு செய்யாமல் அவை எவ்விதமான உணர்வுகளை வெளிப்படுத்துகின்றன எனும் விஞ்ஞானத்தை குறித்து ஆழ்ந்த பரிசோதனைக்கு பின்னரே ராக நிர்ணயம் செய்தார். 


 250க்கும் அதிகமான பாடல்களுக்கு மேற்கூறியவாறு ராகங்களை தேர்வு செய்து அவைகளின் மூலம் தன்னுடைய ஆழ்ந்த அனுபவம், பரந்த கண்ணோட்டம், ஞானம், விஞ்ஞானம், கலை முதலியவற்றை வெளிப்படுத்தினார். இவர் ராக நிர்ணயம் செய்த பாடல்களில் அவர் மிகவும் போற்றி புகழ்ந்த ஆதிசங்கரரின் பஜகோவிந்த ஸ்தோத்திரம், நாராயணஸ்துதி, பகவந்மானஸ பூஜை முதலியவை மற்றும் வால்மீகி ராமாயணம், துளசி ராமாயணம், கம்ப ராமாயணம், திராவிட திவ்ய ப்ரபந்தம், பாகவதம், பகவத்கீதை முதலிய நூல்களிலிருந்து தேர்ந்தெடுக்கப்பட்ட பாடல்கள் இடம் பெற்றன.    

(தொடரும்)