Wednesday, December 30, 2020

ಕರ್ಮದ ಮರ್ಮವರಿತು ಕರ್ಮ ಮಾಡಬೇಕು (Karmada Marmavaritu Karma Madabeku)

ಲೇಖಕರು: ಶ್ರೀಮತಿ ರತ್ನಾಸುರೇಶ 
(ಪ್ರತಿಕ್ರಿಯಿಸಿರಿ lekhana@ayvm.in)



ದೇವಾಲಯದ ನಿರ್ಮಾಣಕಾರ್ಯ ನಡೆಯುತ್ತಾ ಇತ್ತು. ಅಲ್ಲಿ ಮೂವರು ಕಲ್ಲು ಕೆತ್ತುತ್ತಿದ್ದರು. ಒಬ್ಬನು ಬಂದು ಮೊದಲನೆಯವನನ್ನು "ನೀನ್ಯಾಕೆ ಕಲ್ಲು ಕೆತ್ತುತ್ತಿದ್ದೀಯಾ? ಎಂದು ಕೇಳಿದನು. ಅದಕ್ಕೆ ಅವನು ಅಯ್ಯೋ ಬಡತನ ಬುದ್ದಿ, ಹೆಂಡತಿ ಮಕ್ಕಳನ್ನು ಸಾಕಬೇಕಲ್ಲಾ" ಎಂದನು. ಎರಡನೆಯವಳನ್ನೂ ಅದೇ ಪ್ರಶ್ನೆ ಕೇಳುತ್ತಾನೆ. ಅದಕ್ಕೆ ಅವಳು "ನನ್ನ ಗಂಡ ಒಬ್ಬನೇ ದುಡಿಯುತ್ತಾನೆ;ನೆ, ಸಾಕಾಗುವುದಿಲ್ಲ. ನಾನೂ ಸ್ವಲ್ಪ ಸಹಾಯಮಾಡಿದರೆ ಸಂಸಾರದ ವೆಚ್ಚ ಸರಿದೂಗಿಸಲು  ಸುಲಭವಾಗುತ್ತದೆ" ಎಂದಳು. ಮೂರನೆಯವಳು ಒಬ್ಬ ವೃದ್ಧೆ. ಬಹಳ ಶ್ರದ್ಧೆಯಿಂದ ಕಲ್ಲು ಕೆತ್ತುತ್ತಿದ್ದಳು. ಅವಳಿಗೂ ಮೇಲಿನ ಪ್ರಶ್ನೆಯನ್ನೇ ಕೇಳಲಾಗಿ, ಅವಳು ಹೇಳುತ್ತಾಳೆ "ಯಾರೋ ಪುಣ್ಯಾತ್ಮರು ದೇವಸ್ಥಾನ ಕಟ್ಟಿಸಿದ್ದಾರೆ. ನನ್ನ ಕೈಯಲ್ಲಿ ಭಗವಂತನ ಕೆಲಸ ಇನ್ನೇನೂ ಮಾಡುವುದಕ್ಕಾಗುವುದಿಲ್ಲ. ಅದಕ್ಕೇ ಈ ಚಿಕ್ಕ ಸೇವೆ ಮಾಡುತ್ತಿರುವುದು. ಎಲ್ಲಾ ಅವನಿಗಾಗಿ". ಪ್ರಶ್ನೆ ಕೇಳಿದವನು  ಒಂದು ನಿಮಿಷ ಮೂಕವಿಸ್ಮಿತನಾದ. ಅವಳು ಮಾಡುತ್ತಿರುವುದು ಹೊಟ್ಟೆಪಾಡಿಗಾಗಿಯೇ. ಆದರೆ ಅವಳ ಭಾವ ಉನ್ನತವಾದದ್ದು. ಭಗವಂತನನ್ನು ಭಾವಿಸಿದಷ್ಟೂ ನಮ್ಮ ಹೃದಯಕ್ಕೆ ಹತ್ತಿರವಾಗುತ್ತಾನೆ. "ಭಾವಗ್ರಾಹೀ ಜನಾರ್ದನಃ" ಎನ್ನುತ್ತಾರೆ. ನಾವು  ಏನನ್ನೇ ಮಾಡಿದರೂ ಅದರಲ್ಲಿ ಪೂರ್ತಿ ಮನಸ್ಸಿಟ್ಟು ಭಗವಂತನಿಗೆ ಪ್ರೀತಿಯಾಗಲಿ ಎಂಬ ಭಾವದೊಡನೆ ಶ್ರದ್ಧೆಯಿಂದ ಮಾಡಿದಾಗ ಅದು ಭಗವನ್ಮಯವಾದ ಬಾಳಾಟವಾಗುತ್ತೆ ಎಂದು ಹಿರಿಯರು ನುಡಿಯುತ್ತಾರೆ. 

ಭಾವಕ್ಕೆ ಸಂಬಂಧಪಟ್ಟ ಇನ್ನೊಂದು ಉತ್ಕೃಷ್ಟವಾದ ದೃಷ್ಟಾಂತ-ಗೋಪಿಯರು ಗೋಕುಲದಲ್ಲಿ ಪರಂಜ್ಯೋತಿ ಸ್ವರೂಪನಾದ ಶ್ರೀಕೃಷ್ಣನನ್ನು ಭಾವಿಸಿದ ಪರಿ. ಅವರ ಬೆಳಗಿನ ದಿನಚರಿ ಪ್ರಾರಂಭವಾಗುವುದೇ ಶ್ರೀ ಕೃಷ್ಣನ ಮಧುರ ಸ್ಮರಣೆಯಿಂದ. ಮನೆ ಗುಡಿಸಿ, ಸಾರಿಸಿ, ರಂಗವಲ್ಲಿ ಇಡುವಾಗ, ನೀರು ತರುವಾಗ, ಹಾಲು ಕರೆಯುವಾಗ, ಮೊಸರು ಕಡೆಯುವಾಗ ಅವರ ಮನಸ್ಸಿನ ಏಕಮಾತ್ರ ಧ್ಯೇಯಮೂರ್ತಿ ನೀಲಮೇಘಶ್ಯಾಮನಾದ ಶ್ರೀಕೃಷ್ಣ. ಸದಾ ಅವರ ಮನಸ್ಸು ಭಗವಂತನಲ್ಲಿಯೇ ರಮಿಸುತ್ತಿತ್ತು ಇದರಿಂದಾದ ಪ್ರಯೋಜನ - ಅಲಭ್ಯ ಲಭ್ಯನಾದ ಶ್ರೀಕೃಷ್ಣನ ದರ್ಶನ; ಆಲಿಂಗನ ಸೌಖ್ಯ. ಗೋಪಿಯರು ಏನನ್ನೂ ಬಯಸದೇ ಭಗವಂತನೊಬ್ಬನನ್ನೇ ಬಯಸಿ ಅವನನ್ನೇ ಪಡೆದರು. ಶ್ರೀರಂಗಮಹಾಗುರುಗಳ  ದಿವ್ಯವಾಣಿ ಇಂತಿದೆ--"ನಾವು ಮಾಡುವ ಪ್ರತಿಕರ್ಮವೂ ಬ್ರಹ್ಮಾರ್ಪಿತವಾಗಬೇಕು. ಅದಕ್ಕೆ ತಕ್ಕ ಯುಕ್ತಿಯೂ ಬೇಕು". ಇದನ್ನು ಜ್ಞಾಪಿಸಿಕೊಳ್ಳುತ್ತಾ ನಮ್ಮ ಕರ್ಮಗಳೆಲ್ಲ ಭಗವಂತನಿಗೆ ಪ್ರೀತಿಯನ್ನುಂಟುಮಾಡಿ ಅವನನ್ನೇ ಹೊಂದುವಂತಾಗಲಿ ಎಂದು ಪ್ರಾರ್ಥಿಸುತ್ತಾ "ಸರ್ವಂ ಕರ್ಮಾಖಿಲಂ ಪಾರ್ಥ ಜ್ಞಾನೇ ಪರಿಸಮಾಪ್ಯತೇ"(ಎಲ್ಲ ಕರ್ಮಗಳೂ ಜ್ಞಾನದಲ್ಲಿ ಪರಿಸಮಾಪ್ತಿಯನ್ನು ಹೊಂದಬೇಕು) ಎಂಬ ಶ್ರೀಕೃಷ್ಣನ ದಿವ್ಯವಾಣಿಯನ್ನು ಸ್ಮರಿಸೋಣ.

ಸೂಚನೆ: 30/12/2020 ರಂದು ಈ ಲೇಖನ ಉದಯವಾಣಿ ಯಲ್ಲಿ ಪ್ರಕಟವಾಗಿದೆ.     

Monday, December 28, 2020

Dharma Protects the Protector (Dharmo Rakshati Rakshitah)

Kannada Article by Dr Mohan Raghavan

English Rendering By M R Bhashyam

Respond to (lekhana@ayvm.in)




Dharmapaala and Dhanapaala were two famous merchants in the kingdom of Kaashi.  They used to travel in northern and southern directions for business.   Once, Dharmapaala took huge merchandise, a posse of sellers and armed guards in a cavalcade of bullock carts for business towards north.  Dhanapaala had already left earlier.  After many days, the army of Dharmapaala entered a vast desert. As a precaution, they had taken sufficient water to last them for a week. On the way, they met an aged gentleman. He said "Kindly take me along with you.  I will help in whatever way I can".  The followers of Dharmapaala laugh saying "Oh! Old man! You are unable to lift a stick to support yourself. In what way can you help us?" However, Dharmapaala was overcome by pity. With reverence, he asks the old man to travel with him in his own cart. As they were travelling through scorching heat and parching sun, they see a crowd of travelers coming from the opposite direction.  Their clothes were wet.  "Oh!  What a beautiful cool oasis. It is a boon to travelers" they were heard to be saying. Hearing this Dharmapaala's associates muse "if there is an oasis nearby, why should we carry the water; its load slows us down".  Though Dharmapaala thought that their argument was logical, the old man seated next to him said "Shreshti! Do not believe them. They are crooks wanting to rob the travelers weakened by thirst". Dharmapaala was in a dilemma. Unable to ignore the words of the old man, he instructs his troupe to carry on without discarding the stored water.  Some members were unhappy and were complaining "Oh! We should have travelled with Dhanapaala".  But, even after travelling for a couple of days, they could not find the oasis. Instead, they found the party of Dhanapaala robbed and without means whatsoever.  "Oh, grandpa, how did you know? Your words were true" was their question. The old man said "though their clothes were wet, no birds were seen in the horizon to signal the presence of an oasis nearby. A close observation of their eyes indicated their evil intent".

The city of Kaashi is our body. We transact with the world through our organs.  The arena of business in the outside world is like that desert. In the expanses of internal field, there are oases of serene and sappy ambrosia.  Our inclinations towards sensual pleasures create mirages that delude us.  In our business of life, we are naturally attracted towards money and power of the wealthy –Dhanapaalas. We throw away the ambrosia and are deluded by the magic woven by our senses and loose that wealth. We discard the aged and knowledgeable dharma, thinking that it is weak.  But, Dharma protects us and unveils Truth. Just as eyes give us sight and ears the ability to hear, the dharma of the soul, Aatmadharma, uncovers the inner truth. If this dharma is protected, it reveals the inner light and redeems us in turn. It enables us to keep our senses under control.  The principle that "If we protect dharma, it will protect us" was oft highlighted by the great yogi, the revered Shri Ranga Mahaaguru.

Note: The Kannada version of this article can be viewed at AYVM blogs.

Sunday, December 27, 2020

ಆರ್ಯಸಂಸ್ಕೃತಿ ದರ್ಶನ - 23 (Arya Samskruti Darshana - 23)

ಓಂ ಶ್ರೀಃ
ತ್ರಿಪುಂಡ್ರ 
ವಿಭೂತಿ
 ಲೇಖಕರು: ಡಾ|| ಎಸ್.ವಿ.ಚಾಮು.


     
ಬ್ರಹ್ಮಸೂತ್ರ, ಊರ್ಧ್ವಪುಂಡ್ರ, ತ್ರಿಪುಂಡ್ರ ಮುಂತಾದ ಧಾರ್ಮಿಕ ಚಿಹ್ನೆಗಳನ್ನು ಧರಿಸಿದರೆಯೇ ಸಾಕು, ಅದರಿಂದಲೇ ಎಲ್ಲವೂ ಸಂಪನ್ನವಾಗುತ್ತದೆ. ಅವುಗಳ ಅರ್ಥವನ್ನು ತಿಳಿಯದಿದ್ದರೂ ಪರವಾಗಿಲ್ಲ ಎಂಬ ಭಾವನೆಯು ಅನೇಕ ಧಾರ್ಮಿಕ ವಲಯಗಳಲ್ಲಿ ಇರುತ್ತದೆ. ಅದನ್ನು ಪೂರ್ತಿಯಾಗಿ ತಪ್ಪು ಎಂದು ಹೇಳಲಾಗುವುದಿಲ್ಲ. ಅವುಗಳಲ್ಲಿ ಆಳವಾದ ಶ್ರದ್ಧಾಭಕ್ತಿಗಳಿದ್ದ ಪಕ್ಷದಲ್ಲಿ, ದ್ರವ್ಯ, ಸ್ಥಾನ ಇವುಗಳ ಬಲದಿಂದ ಅವು ವ್ಯಕ್ತಿಯಲ್ಲಿ ಉತ್ಕರ್ಷವನ್ನು ಅವಶ್ಯವಾಗಿ ಉಂಟುಮಾಡುತ್ತವೆ. ಆದರೆ ಅವೆಲ್ಲವೂ ಪೂರ್ಣವಾದ ಆತ್ಮ ವಿಕಾಸವನ್ನು ಸೂಚಿಸುವ ಸಂಕೇತಗಳು. ಆದುದರಿಂದ ಆತ್ಮಪ್ರಭೋಧವನ್ನು ಸಂಪಾದಿಸಬೇಕಾದರೆ ಅವು ಒಳಗೊಂಡಿರುವ ಅರ್ಥದ ಕಡೆಗೆ ನಮ್ಮ ಗಮನವನ್ನು ಹರಿಸಲೇಬೇಕು. ಅರ್ಥವನ್ನರಿತ ನಂತರ ಅವು ಸೂಚಿಸುವ ಸಾಧನೆ, ದರ್ಶನ ಮತ್ತು ಅನುಭವಗಳನ್ನು ಸಂಪಾದಿಸುವ ಮಾರ್ಗದಲ್ಲಿ ನಡೆಯಬೇಕು. ಆಗ ಆ ಚಿಹ್ನೆಗಳ ಧಾರಣೆಯು ನಿಜವಾಗಿಯೂ ಅರ್ಥವತ್ತಾಗುತ್ತದೆ.

ಈ ಮಾತುಗಳನ್ನು ನಮ್ಮ ದೇಶದ ಧಾರ್ಮಿಕ ಚಿಹ್ನೆಗಳಲ್ಲಿ ಬಹಳ ಪ್ರಸಿದ್ಧವಾದ ತ್ರಿಪುಂಡ್ರದ ಮೂಲಕ ಉದಾಹರಿಸಲು ಯತ್ನಿಸುತ್ತೇವೆ. ತ್ರಿಪುಂಡ್ರವು ಶೈವ ಧರ್ಮದ ಒಂದು ಮುಖ್ಯವಾದ ಚಿಹ್ನೆ. ಅಂತ್ಯಜರಿಂದ ಹಿಡಿದು ಶೈವ ಧರ್ಮಾನುಸಾರಿಗಳೆಲ್ಲರೂ ಆದರದಿಂದ ಧರಿಸುವ ಈ ಚಿಹ್ನೆಯು ವಿಶೇಷವಾಗಿ ದಕ್ಷಿಣ ದೇಶದಲ್ಲಿ ಬಹಳ ವ್ಯಾಪಕವಾಗಿ ಇಂದೂ ಸಹ ಆಚರಣೆಯಲ್ಲಿರುತ್ತದೆ. ಅದು ಶಾಂಭವ ವ್ರತದ ಹೆಗ್ಗುರುತು.

ಶೈವ ಗ್ರಂಥಗಳು ಈ ತ್ರಿಪುಂಡ್ರವನ್ನು ಹೇಗೆ ನಿರ್ಮಿಸಬೇಕು, ಅದರ ಪ್ರಮಾಣ ಎಷ್ಟಿರಬೇಕು, ಅದನ್ನು ಯಾವ ಯಾವ ಸ್ಥಾನಗಳಲ್ಲಿ ಧರಿಸಬೇಕು, ಅದರ ಶಕ್ತಿ-ದೇವತೆ  ಮುಂತಾದವರು ಯಾರು? ಅದರಿಂದ ದೊರಕುವ ಫಲ ಏನು? ಮುಂತಾದ ವಿವರಗಳನ್ನು ವಿಸ್ತಾರವಾಗಿ ನಿರೂಪಿಸುತ್ತವೆ.

ಹಿಂದೆ ನಮ್ಮ ದೇಶದಲ್ಲಿದ್ದ ಕಾಳಾಮುಖ, ಕಾಪಾಲಿಕ ಮುಂತಾದ ಚಂಡ ಶೈವರು ಚಿತಾಭಸ್ಮವನ್ನೇ ಈ ಚಿಹ್ನವನ್ನು ರಚಿಸಲು ಬಳಸುತ್ತಿದ್ದರು ಎಂದು ಅವರಿಗೆ ಸಂಬಧಿಸಿದ ವಾಙ್ಮಯಗಳಲ್ಲಿ ಓದುತ್ತೇವೆ.  "ಶಿವನು ಚಿತಾಭಸ್ಮದಿಂದ ಅಲಂಕೃತನಾಗಿರುತ್ತಾನೆ" (ಚಿತಾರಜಃ ಪುಂಜ ವಿಚರ್ಚಿತಾಯ)ಮುಂತಾದ ವರ್ಣನೆಗಳನ್ನು ಓದಿದಾಗ ಶಿವಭಕ್ತರು ತಮ್ಮ ಆರಾಧ್ಯದೈವವನ್ನೇ ಅನುಕರಿಸುತ್ತಿದ್ದುದು ಅಸಹಜವಾಗಿ ಕಾಣುವುದಿಲ್ಲ. ಶೈವ ಶಾಸ್ತ್ರಗಳು ಅತಿವರ್ಣಾಶ್ರಮಿಗಳಾದ ಯತಿಗಳಿಗೆ ಶ್ಮಶಾನಾಗ್ನಿಯಿಂದ ಉಂಟಾದ ಭಸ್ಮವನ್ನೇ ತ್ರಿಪುಂಡ್ರಕ್ಕೆ ವಿಧಿಸುತ್ತವೆ. ಆದರೆ ಶಿಷ್ಟರಾದವರು ಬಹಳ ಹಿಂದಿನಿಂದಲೂ ಇತರ ವಿಧವಾದ ವಿಕಲ್ಪಗಳನ್ನೇ ಬಳಸುತ್ತಿದ್ದರು ಎಂದು ಯೋಚಿಸಬಹುದು. ಅಗ್ನಿಹೋತ್ರದಿಂದ ದೊರಕುವ ಹಾಗೂ ಶುದ್ಧವಾದ ಗೋಮಯದಿಂದ  ವಿಧಿವತ್ತಾಗಿ ಮಾಡಿದ ಭಸ್ಮವನ್ನೇ ಅವರು ಬಳಸುತ್ತಿದ್ದರು. ಶಿವಲಿಂಗಕ್ಕೆ ಲೇಪಮಾಡಿದ ಭಸ್ಮವಂತೂ ಅವರಿಂದ  ಬಹಳ ಮಾನ್ಯತೆಗೆ  ವಿಷಯವಾಗಿದ್ದಿತು.

ತ್ರಿಪುಂಡ್ರವನ್ನು ಶರೀರದಲ್ಲಿ 32, 16, 9, 8, 5 ಅಥವಾ 4 ಸ್ಥಾನಗಳಲ್ಲಿ ಧರಿಸಬೇಕೆಂದು ಶಾಸ್ತ್ರವು ವಿಧಿಸುತ್ತದೆ. ಶಿರಸ್ಸು, ಲಲಾಟ, ವಕ್ಷ (ಎದೆ) ಮತ್ತು ಭುಜಗಳೇ ಕೊನೆಯ ವಿಕಲ್ಪವು ಹೇಳುವ ನಾಲ್ಕು ಸ್ಥಾನಗಳು. ಬೇರೆ ಬೇರೆ ಸ್ಥಾನಗಳಲ್ಲಿ ಧರಿಸುವಾಗ ಶಿವನ ಬೇರೆ ಬೇರೆ ನಾಮಗಳನ್ನುಚ್ಚರಿಸುತ್ತಾ ಧರಿಸಬೇಕು ಎಂಬುದು ಶಾಸ್ತ್ರವಿಧಿ. ಭಸ್ಮಸ್ನಾನವು ಸಹ ಬಹಳ ಪ್ರಶಂಸೆಗೆ ವಿಷಯವಾಗಿರುತ್ತದೆ.

ಎರಡು ಸಂಧ್ಯೆಗಳಲ್ಲಿಯೂ, ಅರ್ಧರಾತ್ರಿಯಲ್ಲಿಯೂ, ಹಾಗೆಯೇ ಕರ್ಮಗಳ ಆರಂಭ ಮತ್ತು ಅವಸಾನಗಳಲ್ಲಿಯೂ ತ್ರಿಪುಂಡ್ರ ಧಾರಣೆಯು ಹೇಳಲ್ಪಟ್ಟಿರುತ್ತದೆ. ಅಶುದ್ಧವಾದ ಪದಾರ್ಥಗಳನ್ನು ಮುಟ್ಟಿದಾಗ ಭಸ್ಮಸ್ನಾನದಿಂದ ಶುದ್ಧಿಯು ವಿಧಿಸಲ್ಪಟ್ಟಿರುತ್ತದೆ.

ವಿಭೂತಿ ಧಾರಣೆಯಿಂದ ಮನುಷ್ಯನು ಪಶುಪತಿಯಾದ ಈಶ್ವರನನ್ನು ತಿಳಿಯುತ್ತಾನೆ. ಅವನು ಮತ್ತೆ ಈ ಭೂಮಿಯಲ್ಲಿ ಹುಟ್ಟುವುದಿಲ್ಲ, ಅವನಿಗೆ ಮೋಕ್ಷವು ಪ್ರಾಪ್ತಿಯಾಗುತ್ತದೆ, ಅವನು ಸಮಸ್ತ ಪಾಪಗಳಿಂದಲೂ ನಿರ್ಮುಕ್ತನಾಗುತ್ತಾನೆಂದು ಶೈವ ಶಾಸ್ತ್ರಗಳು ಘೋಷಿಸುತ್ತವೆ.

ಇವು ವಿಭಾತಿಧಾರಣೆಗೆ ಸಂಬಂಧಿಸಿದ ಹಲವು ಸಾಂಪ್ರದಾಯಿಕವಾದ ವಿವರಗಳು. ಭಸ್ಮಧಾರಣೆಗೆ ಅಷ್ಟು ಪ್ರಾಶಸ್ತ್ಯ ಬರಲು ಕಾರಣವೇನು? ಗಾಢವಾದ ಆಧ್ಯಾತ್ಮಿಕ ಆಚರಣೆಗೆ ಅಂಗವಾಗಿ ಭಸ್ಮವನ್ನು ಆರಿಸಲು ಕಾರಣವೇನು? ಮತ್ತು ಮೂರು ರೇಖೆಗಳ ರೂಪವಾದ ತ್ರಿಪುಂಡ್ರವು  ಏನನ್ನು ಸೂಚಿಸುತ್ತದೆ? ಅದರ ಹಿಂದಿರುವ ಆಧ್ಯಾತ್ಮಿಕ ರಹಸ್ಯವೇನು? ಮುಂತಾದ ಹಲವು ಪ್ರಶ್ನೆಗಳು ಏಳುತ್ತವೆ. ಅವುಗಳನ್ನು ಯಥಾಮತಿಯಾ ಗಿ ಕೆಳಗೆ ಉತ್ತರಿಸಲು ಯತ್ನಿಸುತ್ತೇವೆ.

ಬಹಳ ಹಿಂದಿನ ಕಾಲದಿಂದಲೂ ರುದ್ರನು ಭಕ್ತಜನರಿಂದ "ಮಹಾದೇವ" ನೆಂದು  ಪೂಜಿಸಲ್ಪಟ್ಟಿರುವುದಕ್ಕೆ ಸಾಹಿತ್ಯ ಮತ್ತು ಸಂಪ್ರದಾಯಗಳೆರಡೂ ಸಾಕ್ಷಿಗಳಾಗಿರುತ್ತವೆ. ವೇದ ಮತ್ತು ಉಪನಿಷತ್ತಗಳು ಪರಬ್ರಹ್ಮ,ಪರಮಾತ್ಮ,ಪುರುಷ ಮುಂತಾದವರನ್ನು ವರ್ಣಿಸುವುದಕ್ಕೋಸ್ಕರ ಬಳಸುವ ಮಾತುಗಳನ್ನೇ ಶೈವಶಾಸ್ತ್ರಗಳು ರುದ್ರನಿಗೆ ಬಳಸುವುದನ್ನು ನೋಡಿದಾಗ, ಹೆಸರು ಬೇರೆಯಾದರೂ ಅವು ಹೊಗಳುವುದು ಪರಿಪೂರ್ಣ ಅಥವಾ ಅಂತಿಮ ಸತ್ಯವನ್ನೇ ಎಂಬುದರಲ್ಲಿ ಯಾವ ಸಂದೇಹವೂ ಉಳಿಯುವುದಿಲ್ಲ. ಅದಕ್ಕೆ " ಯಃ ಪ್ರಣವಃ ಸ ಸರ್ವವ್ಯಾಪೀ ಯಃ ಸರ್ವವ್ಯಾಪೀ ಸೋ  ನಂತಃ   ಯೋ  ನಂತಃ ತತ್ತಾರಂ ಯತ್  ತಾರಂ ತತ್ ಸೂಕ್ಷ್ಮಂ ಯತ್ ಸೂಕ್ಷ್ಮಂ ತಚ್ಛುಕ್ಲಂ ಯಚ್ಛುಕ್ಲಂ ತದ್ವೈದ್ಯುತಂ ತತ್ ಪರಂಬ್ರಹ್ಮೇತಿ ಸ ಏಕಃ ಸ ಏಕೋ ರುದ್ರಃ ಸ ಈಶಾನಃ ಸ ಭಗವಾನ್ ಸ ಮಹೇಶ್ವರಃ ಸ ಮಹಾದೇವಃ"  ಎಂಬ ಅಥರ್ವಶ್ಶಿರೋಪನಿಷತ್ತಿನ ಮಾತು ನಿದರ್ಶನ. ಆತ್ಮನ ವಿಷಯದಲ್ಲಿ ಪುರಾತನ ಉಪನಿಷದೃಷಿಗಳ ಮನಸ್ಸಿನಲ್ಲಿ ಆಡಿದ ಉನ್ನತೋನ್ನತವಾದ ಭಾವನೆಗಳನ್ನೇ ಅದು ರುದ್ರನ ವಿಷಯದಲ್ಲಿವ್ಯಕ್ತಪಡಿಸುತ್ತದೆ. ಪುರಾತನ ಉಪನಿಷತ್ತುಗಳು ಆತ್ಮನಿಂದಲೇ ಸೃಷ್ಟಿ, ಸ್ಥಿತಿ, ಲಯಗಳುಂಟಾಗುತ್ತವೆಂಬುದನ್ನು ಹೆಜ್ಜೆ ಹೆಜ್ಜೆಗೂ ಒತ್ತಿ ಹೇಳುತ್ತವೆ. "ರುದ್ರನೇ ಎಲ್ಲಲೋಕಗಳನ್ನೂ ಸೃಷ್ಟಿಸಿ ರಕ್ಷಿಸುತ್ತಾನೆ: ಅವನೇ  ಅಂತಕಾಲದಲ್ಲಿ ಅವೆಲ್ಲವನ್ನೂ ತನ್ನಲ್ಲಿ ಉಪಸಂಹಾರ ಮಾಡಿಕೊಳ್ಳುತ್ತಾನೆ" ಎಂಬ ಶೈವಶಾಸ್ತ್ರಗಳ ಮಾತೂ ಅದನ್ನೇ ಪುನರುಕ್ತಿಸುತ್ತದೆ.

ರುದ್ರನು ಸೃಷ್ಟಿ ಸಂಹಾರಗಳೆರಡನ್ನೂ ಮಾಡುವ ಪರದೇವತೆ ಎಂಬ ಈ ಭಾವನೆಯು  ಹಲವು ವಿಶೇಷವಾದ ರೀತಿಗಳಲ್ಲಿ ತನ್ನನ್ನು ವ್ಯಕ್ತಪಡಿಸಿಕೊಂಡಿರುತ್ತದೆ. ರುದ್ರನು ಅರ್ಧನಾರೀಶ್ವರನೆಂಬ ಕಲ್ಪನೆಯಲ್ಲಿ ನಾವು ಅದನ್ನು ನೋಡುತ್ತೇವೆ. "ಅವನು ಪಾರ್ವತಿಯ ರೂಪದಲ್ಲಿ ಲಾಸ್ಯದ ಮೂಲಕ ಪ್ರಪಂಚವನ್ನು ಸೃಷ್ಟಿಸುತ್ತಾನೆ. ಅವನೇ ತನ್ನ ತಾಂಡವದ ಮೂಲಕ ಪ್ರಪಂಚವನ್ನು ಸಂಹಾರ ಮಾಡುತ್ತಾನೆ" ಎಂಬ ಅರ್ಧನಾರೀಶ್ವರ ಸ್ತೋತ್ರದ ವಚನವನ್ನು ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳಬಹುದು.

ರುದ್ರನ ಇಬ್ಬಗೆಯಾದ ರೂಪವನ್ನು ಹೇಳುವ ಬೇರೆ ವಿಧವಾದ ಪರಿಭಾಷೆಗಳೂ ಸಹ ಕಂಡುಬರುತ್ತವೆ. ಉದಾಹರಣೆಗೆ, ಒಂದು ವೇದ ಮಂತ್ರವು ರುದ್ರನನ್ನು

ಯೋ ರುದ್ರೋ ಅಗ್ನೌ ಯೋ ಅಪ್ಸ್ವಂತಃ ಯ ಓಷಧೀರ್ವೀರುಧ ಆವಿವೇಶ|  
ಯ ಇಮಾ ವಿಶ್ವಾಭುವನಾನಿ ಚಕ್ಷುಷೇ ತಸ್ಮೈ ರುದ್ರಾಯ ನಮೋ ಅಸ್ತು||

ಎಂಬುದಾಗಿ  ಸ್ತೋತ್ರ ಮಾಡುತ್ತದೆ. "ರುದ್ರನು ಆಗ್ನಿಯಲ್ಲಿರುತ್ತಾನೆ. ಅವನೇ ಜೀವ ಸೃಷ್ಟಿಗೆ ಕಾರಣವಾದ ನೀರು, ಓಷಧಿ ಮತ್ತು ಲತೆಗಳಲ್ಲಿರುತ್ತಾನೆ" ಎಂಬುದು ಮಂತ್ರದ ತಾತ್ಪರ್ಯ. ಅವುಗಳಲ್ಲಿ ಅಗ್ನಿಯು ಸಂಹಾರಶಕ್ತಿಯನ್ನೂ, ರುದ್ರನು ಪ್ರವೇಶಿಸಿರುವ ನೀರು ಮುಂತಾದವು ಸೃಷ್ಟಿ ಶಕ್ತಿಯನ್ನೂ ಪ್ರತೀಕಿಸುತ್ತವೆ. ಈ ಜಗತ್ತೆಲ್ಲವೂ "ಅಗ್ನಿಷೋಮಾತ್ಮಕವಾದುದು" ಎಂಬಲ್ಲಿಯೂ ಸಹ ಇದೇ ಭಾವನೆಯನ್ನು ನೋಡುತ್ತೇವೆ. ಅಗ್ನಿಯು ಸಂಹಾರಶಕ್ತಿಯಾದರೆ, ಓಷಧಿ ವನಸ್ಪತಿಗಳಿಗೆ ಅಧಿಪತಿಯಾದ, ಅಮೃತಮಯನಾದ ಸೋಮನು ಸೃಷ್ಟಿಶಕ್ತಿ. ಅವೂ ಸಹ ರುದ್ರನ ರೂಪಗಳೇ ಎಂಬುದಾಗಿ ಕೇಳುತ್ತೇವೆ.

ಸೃಷ್ಟಿಸಂಹಾರ(ಜನ್ಮಮೃತ್ಯು)ಗಳು ಒಂದು ಮತ್ತೊಂದನ್ನು ಅವಲಂಬಿಸಿರುತ್ತವೆ. ಒಂದು ಮತ್ತೊಂದನ್ನು ಅನುಸರಿಸುತ್ತದೆ. ಅವರೆಡರ ಮೂಲದಲ್ಲಿರುವ ಶಕ್ತಿ ಒಂದೇ. ಆ ಶಕ್ತಿಯೇ ರುದ್ರ ಎಂಬುದು ಈ  ಕಲ್ಪನೆಗಳೆಲ್ಲದರ ತಾತ್ಪರ್ಯ. ಆದರೆ ಕಟ್ಟಕಡೆಯದಾಗಿ ಹೇಳುವುದಾದರೆ ಸಂಹಾರ ಕ್ರಿಯೆಯೇ ರುದ್ರನ ಪ್ರಧಾನವಾದ ಲಕ್ಷಣವಾಗಿ ಉಳಿಯುತ್ತದೆ. ಅಗ್ನಿಯೂ ಮತ್ತು ಅಗ್ನಿಯಲ್ಲಿರುವ ರುದ್ರನೂ ಆ ಸಂಹಾರ ಕ್ರಿಯೆಯ ಅಂತಿಮ ಸಂಕೇತಗಳಾಗಿರುತ್ತಾರೆ. ಈ ಭಾವನೆಯಿಂದ ಭಸ್ಮವು ತನ್ನ ಗಾಢವಾದ ಒಳ ಅರ್ಥವನ್ನು ತೆಗೆದುಕೊಳ್ಳುತ್ತದೆ. ಭಸ್ಮ ಎಂದರೆ ಸೃಷ್ಟಿಯ ಹಿಂಬದಿಯಲ್ಲಿ ನಿತ್ಯವಾಗಿರುವ ಸಂಹಾರ ತತ್ವ. ಆದುದರಿಂದಲೇ ಶೈವ ಶಾಸ್ತ್ರಗಳು " ಅಗ್ನಿಯೆಂದರೆ ಭಸ್ಮ, ವಾಯುವೆಂದರೆ ಭಸ್ಮ, ಜಲವೆಂದರೆ ಭಸ್ಮ, ಸ್ಥಲವೆಂದರೆ ಭಸ್ಮ, ಆಕಾಶವೆಂದರೆ ಭಸ್ಮ" ಎಂಬುದಾಗಿ ಘೋಷಿಸುತ್ತವೆ. ಅವುಗಳ ಪ್ರಕಾರ ಇದನ್ನು ದೃಢವಾಗಿ ತಿಳಿದವನೇ ಮಹಾಪಾಶುಪತವೆನಿಸಿಕೊಳ್ಳುತ್ತಾನೆ

ಆದರೆ ಭಸ್ಮವು ಕೇವಲ ನಿಷೇಧಾತ್ಮಕವಾದ (negative) ಕ್ರಿಯೆ ಅಥವಾ ಸ್ಥಿತಿಯನ್ನು ಮಾತ್ರ ಸೂಚಿಸುವುದಿಲ್ಲ. ಅದರಲ್ಲಿ ವಿಧಿರೂಷ (positive) ಅರ್ಥ ಹಾಗೂ ಭಾವನೆಯು ಸಹ ಇರುತ್ತದೆ. ಉದಾಹರಣೆಗೆ ಶ್ರೀ ಕೃಷ್ಣ ಪರಮಾತ್ಮನು "ಜ್ಞಾನಾಗ್ನಿಃ ಸರ್ವಕರ್ಮಾಣಿ ಭಸ್ಮಸಾತ್ಕುರುತೇರ್ಜುನ" ಎಂದು ಹೇಳಿದಾಗ ಅವನ ಮಾತು ಒಂದು ಕಡೆ ಜ್ಞಾನಾಗ್ನಿಯಿಂದ ಕರ್ಮಗಳ ನಾಶವನ್ನು  ಹೇಳಿದರೆ, ಮತ್ತೊಂದು ಕಡೆ ಜ್ಞಾನದ ಉದಯವನ್ನು ಸೂಚಿಸುತ್ತದೆ. ಹಾಗೆಯೇ ಸೃಷ್ಟಿಯೆಲ್ಲವೂ ಭಸ್ಮವಾದಾಗ, ಸೃಷ್ಟಿಗೆ ಮೂಲವಾದ ಈಶ್ವರನು ಗೋಚರಕ್ಕೆ ಬರುತ್ತಾನೆಂಬ ಅಂಶವೂ ಸಹ ಭಸ್ಮದ ಸಾಂಕೇತಿಕ ಅರ್ಥದಿಂದ ಹೊರಪಡುತ್ತದೆ. ಅದು ಶಿವನನ್ನು ಸೂಚಿಸುವ ಸಾಂಕೇತಿಕ ವಸ್ತು. ಶಿವನ ಸ್ಮರಣೆಯನ್ನುಂಟುಮಾಡುವ  ಪದಾರ್ಥ. ಆದುದರಿಂದಲೇ ವಿಧಿ ಪೂರ್ವಕವಾಗಿ ಎಂದರೆ ಉನ್ನತವಾದ ಭಾವನೆಗಳಿಂದ ನಿರ್ಮಿತವಾದ ವಿಭೂತಿಗೆ ಅಷ್ಟು ಪವಿತ್ರತೆ. ಅದು ವ್ಯಯವಾದ ಈ  ಜಗತ್ತಿನ ಹಿಂದೆ ಸರ್ವದಾ ಇರುವ ಅವ್ಯಯನಾದ ಈಶ್ವರನ ದ್ಯೋತಕವಾಗಿರುತ್ತದೆ. ಜ್ಯೋತಿರ್ಮಯನಾದ ಅವನಿಂದ ಅದು ತನ್ನ ಅರ್ಥ ಬಾಹುಳ್ಯವನ್ನು ತೆಗೆದುಕೊಳ್ಳತ್ತದೆ.

ಈ ಅಂಶವು ತ್ರಿಪುಂಡ್ರದ  ಅರ್ಥದಿಂದ ಇನ್ನೂ ಸ್ಪಷ್ಟವಾಗಿ ಆಗುತ್ತದೆ. ನಾವೆಲ್ಲರೂ ತಿಳಿದಿರುವಂತೆ ತ್ರಿಪುಂಡ್ರವು ಅಡ್ಡಲಾದ ಮೂರು ರೇಖೆಯಲ್ಲಿರುವುದಷ್ಟೇ. ಆ ಮೂರು ರೇಖೆಗಳೂ ಪ್ರಣವದ ಮೂರು ಮಾತ್ರೆಗಳನ್ನೇ ಸೂಚಿಸುತ್ತವೆಂದು ಶೈವ ಶಾಸ್ತ್ರಗಳಲ್ಲಿ ಓದುತ್ತೇವೆ.  "ಅವುಗಳಲ್ಲಿ ಮೊದಲನೆಯ ರೇಖೆ ಯಾವುದುಂಟೋ ಅದು ಗಾರ್ಹಪತ್ಯ, ಆಕಾರ, ರಜೋಗುಣ, ಭೂಲೋಕ,ಆತ್ಮ, ಕ್ರಿಯಾಶಕ್ತಿ, ಋಗ್ವೇದ ಮತ್ತು ಪ್ರಾತಃಸವನಗಳನ್ನು ಸೂಚಿಸುತ್ತದೆ. ಪ್ರಜಾಪತಿಯು ಅದರ ದೇವತೆ ಎರಡನೆಯ ರೇಖೆ ಯಾವುದುಂಟೋ ಅದು ದಕ್ಷಿಣಾಗ್ನಿ, ಉಕಾರ, ಸತ್ವಗುಣ, ಅಂತರಿಕ್ಷ, ಅಂತರಾತ್ಮ, ಇಚ್ಛಾಶಕ್ತಿ, ಯಜುರ್ವೇದ ಮತ್ತು ಮಧ್ಯಾಹ್ನದ ಸವನಗಳನ್ನು ಸೂಚಿಸುತ್ತದೆ. ವಿಷ್ಣುವು ಅದರ ದೇವತೆ. ಮೂರನೆಯ ರೇಖೆಯು ಯಾವುದುಂಟೋ ಅದು ಆಹವನೀಯಾಗ್ನಿ, ಮಕಾರ, ತಮೋಗುಣ, ದ್ಯೌಸ್ಸು. ಪರಮಾತ್ಮ, ಜ್ಞಾನಶಕ್ತಿ, ಸಾಮವೇದ ಮತ್ತ  ಸಾಯಂ ಸವನಗಳನ್ನು ಸೂಚಿಸುತ್ತದೆ. ಅದರ ದೇವತೆ ಮಹಾದೇವ" ಎಂದು ಜಾಬಾಲೋಪನಿಷತ್ತು ಹೇಳುತ್ತದೆ. ಬೃಹಜ್ಜಾಬಾಲೋಪನಿಷತ್ತು ಸಹ ತ್ರಿಪುಂಡ್ರವು ಪ್ರಣವವನ್ನೇ ಪ್ರತೀಕಿಸುತ್ತದೆ ಎಂಬುದನ್ನು ಪುನರುಕ್ತಿ ಮಾಡುತ್ತದೆ.
ಬ್ರಹ್ಮ ವಿಷ್ಣು ಮಹೇಶಾನಾಂ ತ್ರಯ್ಯಗ್ನೀನಾಂ ಚ ಧಾರಣಂ|
ಗುಣ ಲೋಕತ್ರಯಾಣಾಂ ಚ  ಧಾರಣಂ ತೇನ ವೈಶ್ರುತಂ||

ನಾವು ಪ್ರಣವ ವಿದ್ಯೆಯ ಅರ್ಥವನ್ನು ಈಗಾಗಲೇ ವಿಸ್ತಾರವಾಗಿ ನಿರೂಪಿಸಿರುತ್ತೇವೆ (ಆರ್ಯಸಂಸ್ಕೃತಿ ಸಂಪುಟ ೨ ಸಂಚಿಕೆ ೧೦ರಿಂದ ಸಂಪುಟ ೩ ಸಂಚಿಕೆ ೬ವರೆಗೆ). ಅದು ಭಾರತೀಯ ಮಹರ್ಷಿಗಳ ತಪಸ್ಸಿನಿಂದ ಅವರಿಗೆ ಸೃಷ್ಟಿಯ ವಿಷಯದಲ್ಲಿ ಗೋಚರಿಸಿದ ದರ್ಶನ, ಅನುಭವ ವಿಚಾರಗಳೆಲ್ಲವನ್ನೂ ಸಂಪುಟಿತವಾಗಿ ಮಾಡಿಕೊಂಡಿರುವ ಸಾರ ವಿದ್ಯೆಯೆಂಬುದನ್ನು ನಾವು ನೋಡಿತ್ತಿರುತ್ತೇವೆ.  ಪರಮಾತ್ಮನೆಂಬ ಮೂಲ ಜ್ಯೋತಿಯಿಂದ ನಾದವೂ  ಮತ್ತು ಆ ನಾದದಿಂದ ವಿಶ್ವದ ಸೃಷ್ಟಿಯೂ ಉದಯವಾಗಿರುತ್ತದೆ ಎಂಬುದು ಅದರ ಸಾರಾಂಶವಾಗಿರುತ್ತದೆ. ಆ ನಾದವೇ ಊರ್ಧ್ವಮುಖವಾಗಿ ನಡೆದಾಗ ವಿಶ್ವವೆಲ್ಲವೂ  ಕಡೆಗೆ ಆ ಜ್ಯೋತಿಯಲ್ಲಿ ವಿಲೀನವಾಗುತ್ತದೆ. ಆ ರೀತಿ ಆಗುವುದು ತಾನೇ ಪರಿಪೂರ್ಣವಾದ ಜ್ಞಾನಸ್ಥಿತಿ ಎಂಬುದನ್ನು ಅದು ಸಾರುತ್ತದೆ. "ಜ್ಞಾನಾಗ್ನಿಃ ಸರ್ವಕರ್ಮಾಣಿ ಭಸ್ಮಾಸಾತ್ಕುರುತೇರ್ಜುನ" ಎಂಬ ಭಗವದ್ವಚನದ ಲಕ್ಷ್ಯವು ಈ ಪ್ರಣವ ವಿದ್ಯೆಯಲ್ಲಿಯೂ ಮತ್ತು ಅದು ಪ್ರತೀಕಿಸುವ ಜ್ಞಾನ, ವಿಜ್ಞಾನ ದರ್ಶನ ಮತ್ತು ಅನುಭವಗಳಲ್ಲಿಯೂ ಸಹ ಇರುತ್ತದೆ..

ಭಸ್ಮದಿಂದ ಇಟ್ಟುಕೊಳ್ಳುವ ತ್ರಿಪುಂಡ್ರವು ಪ್ರತೀಕಿಸುವುದು ಆ ಪ್ರಣವ ವಿದ್ಯೆಯನ್ನೇ. ಆ ಪ್ರಣವ ವಿದ್ಯೆಯನ್ನು ಅಷ್ಟಾಂಗ ಯೋಗದ  ಸಹಾಯದಿಂದ  ಸಾಧಿಸಿದಾಗ ಒಬ್ಬ ಜ್ಞಾನಿಗೆ ಅವನ ಅಂತರಾತ್ಮದಲ್ಲಿ ಉಂಟಾಗುವ ಜ್ಞಾನಾನುಭವಗಳನ್ನೇ ಅದನ್ನ ಸಾಧಿಸಿದವನಲ್ಲಿ ಅದು ಪ್ರಣವ ವಿದ್ಯೆಯಿಂದ ದೊರಕುವ ಒಳ ಪೂರ್ಣತೆಯನ್ನು ಪ್ರತೀಕಿಸುವ ಚಿಹ್ನವಾದರೆ, ಬೇರೆಯವರಿಗೆ ಧರ್ಮ  ಜೀವನದಿಂದ ಏನನ್ನು ಸಾಧಿಸಬೇಕು ಎಂಬುದನ್ನು ಸೂಚಿಸುವ ಒಂದು ಅಮೂಲ್ಯವಾದ ಗುರುತಾಗಿರುತ್ತದೆ. ಅದೇ ಅದರ ಅರ್ಥ.

ನಾವು ಪತ್ರಿಕೆಯಲ್ಲಿ ಬೇರೊಂದು ಕಡೆ ಊರ್ಧ್ಯಪುಂಡವನ್ನು ತೆಗೆದುಕೊಂಡು ವಿವರಿಸುವಾಗ ಅದೂ ಸಹ ಪ್ರಣವದೊಡನೆ  ಹತ್ತಿರದ ಸಂಬಂಧ ಹೊಂದಿರುವುದರ ಕಡೆಗೆ ವಾಚಕರ ಗಮನವನ್ನು ಸೆಳೆದವು. ಅದರಲ್ಲಿರುವ ಮರ್ಮವೇ ತ್ರಿಪುಂಡ್ರದಲ್ಲಿಯೂ ಇರುತ್ತದೆ. ಎರಡು ಚಿಹ್ನೆಗಳು ಬೇರೆ ಬೇರೆ. ಅವುಗಳ ಹಿಂದಿರುವ ಸಂಪ್ರದಾಯಗಳು ಬೇರೆ ಬೇರೆ. ಪ್ರಕ್ರಿಯೆಗಳೂ ಬೇರೆ ಬೇರೆ. ಆದರೆ ಎರಡೂ ಯೋಗ ವಿಜ್ಞಾನದ ಅಥವಾ ಪ್ರಣವ ವಿದ್ಯೆಯ ಆಸರೆಯನ್ನೇ ಅನುಸರಿಸಿ ವಿಶ್ವಪತಿಯಾದ, ವಿಶ್ವಪಿತನಾದ, ಭಗವಂತನ ಕಡೆಗೇ ನಮ್ಮ ದೃಷ್ಟಿಯನ್ನು ಸೆಳೆಯುತ್ತವೆ. ಎರಡು ಚಿಹ್ನೆಗಳ ಲಕ್ಷ್ಯವೂ ಒಂದೇ ಆಗಿರುತ್ತದೆ.

ಸೂಚನೆ : ಈ ಲೇಖನವು ಶ್ರೀಮಂದಿರದಿಂದ ಪ್ರಕಾಶಿತವಾಗುವ ಆರ್ಯಸಂಸ್ಕೃತಿ ಮಾಸ ಪತ್ರಿಕೆಯ ಸಂಪುಟ: ೦೪ ಸಂಚಿಕೆ: ೦೬ ಏಪ್ರಿಲ್: ೧೯೮೨  ತಿಂಗಳಲ್ಲಿ  ಪ್ರಕಟವಾಗಿದೆ. 

Saturday, December 26, 2020

ನಿಯಮ - ಶೌಚ (Niyama - Sauca)

ಲೇಖಕರು: ಶ್ರೀ ಜಿ ನಾಗರಾಜ

(ಪ್ರತಿಕ್ರಿಯಿಸಿರಿ lekhana@ayvm.in)

  


ಆಷ್ಟಾಂಗ ಯೋಗದ ಎರಡನೇ ಮೆಟ್ಟಿಲೇ ನಿಯಮ. ನಿಯಮವು ವಿಧಿ ಅಂದರೆ, ಆಚರಿಸಬೇಕಾದ ಕರ್ಮಗಳ ರೂಪದಲ್ಲಿದೆ. ಪತಂಜಲಿ ಯೋಗಸೂತ್ರದಲ್ಲಿ ನಿಯಮವನ್ನು ಐದು ವಿಧವಾಗಿ ವಿಂಗಡಿಸಿದ್ದಾರೆ. ಯಾವುವೆಂದರೆ - ಶೌಚ, ಸಂತೋಷ, ತಪಸ್ಸು, ಸ್ವಾಧ್ಯಾಯ, ಈಶ್ವರ ಪ್ರಣಿಧಾನ. ಇವುಗಳಲ್ಲಿ ಶೌಚವು ಬಾಹ್ಯ ಶೌಚ ಮತ್ತು ಆಂತರಿಕ ಶೌಚ ಎಂದು ಎರಡು ಬಗೆಯಾಗಿದೆ. ಜಲ ಹಾಗೂ ಮೃತ್ತಿಕೆ(ಮಣ್ಣು) ಯಿಂದ ಶರೀರವನ್ನು ಶು ಮಾಡಿಕೊಳ್ಳುವುದು ಬಾಹ್ಯ ಶುದ್ಧಿ ಎನ್ನಿಸಿಕೊಳ್ಳುತ್ತದೆ. ಕೆಮ್ಮಣ್ಣು ದುರ್ಗಂಧ ನಿವಾರಣೆಯಲ್ಲಿ ಅತ್ಯಂತ ಪರಿಣಾಮಕಾರಿಯಾಗಿರುತ್ತದೆ. ಹೀಗಾಗಿ ಇಂದು ಬಳಸುವ ಸೋಪಿನ ಬದಲು ಕೆಮ್ಮಣ್ಣನ್ನು ಬಳಸುವ ರೂಢಿ ಆರ್ಷ ಸಂಸ್ಕೃತಿಯಲ್ಲಿತ್ತು. ಮನಸ್ಸನ್ನು ಸಂಕುಚಿತವಾಗಿ ಮತ್ತು ಬಗ್ಗಡವಾಗಿ ಮಾಡುವ ಲೋಭ, ಮೋಹ, ಮದಗಳನ್ನು ಹೋಗಲಾಡಿಸಿಕೊಳ್ಳುವಿಕೆಯು ಆಂತರಿಕ ಶೌಚ.


ಯೋಗದ ತತ್ತ್ವಗಳು ಭಾರತೀಯ ಸಂಸ್ಕೃತಿಯಲ್ಲಿ ವ್ಯಾಪಕವಾಗಿ ಹರಡಿವೆ. ಪ್ರಸ್ತುತ, ಶೌಚವನ್ನು ಧರ್ಮಶಾಸ್ತ್ರಗಳು ಇನ್ನೂ ವಿಸ್ತರಿಸಿ, ದೇಹ, ಮನಸ್ಸುಗಳಲ್ಲದೇ, ಪದಾರ್ಥಗಳ ಶುದ್ಧಿ ಹಾಗೂ ಸ್ಥಳ ಶುದ್ಧಿಯನ್ನೂ ಸೇರಿಸಿಕೊಳ್ಳುತ್ತವೆ. ಭಾರತದ ಎಲ್ಲ ಜಾತಿವರ್ಗಗಳೂ ತಮಗೆ ಆಚರಿಸಲು ಸಾಧ್ಯವಾದಷ್ಟು ಇಂದಿಗೂ ವಿಸ್ತಾರವಾಗಿ ಶೌಚವನ್ನು ರೂಢಿಯಲ್ಲಿಟ್ಟುಕೊಂಡಿವೆ.


ನಿತ್ಯವೂ ಸ್ನಾನ ಮಾಡುವುದು, ಪಾತ್ರೆ ಪಡಗಗಳನ್ನು ತೊಳೆಯುವುದು, ಅಡುಗೆಗೆ ಬಳಸುವ ತರಕಾರಿ, ಧಾನ್ಯಗಳನ್ನು ತೊಳೆದು ಉಪಯೋಗಿಸುವುದು, ನೆಲವನ್ನು ಗುಡಿಸಿ ಸಾರಿಸುವುದು ಮುಂತಾದವು ದೇಹ, ಪದಾರ್ಥ, ಸ್ಥಳ (ದೇಶ) ಶುದ್ಧಿಯ ಉದಾಹರಣೆಗಳಾದರೆ, ದೇವರ ಪೂಜೆ, ಸ್ತೋತ್ರಗಳಿಂದ ಮನಸ್ಸಿನಲ್ಲಿ ಸತ್ತ್ವಗುಣವನ್ನು ಪ್ರಬೋಧಗೊಳಿಸುವುದು ಆಂತರಿಕ ಶುಧ್ಧಿಯ ಉದಾಹರಣೆಯಾಗುತ್ತದೆ.


ಆಧುನಿಕ ವಿಜ್ಞಾನವೂ ಸಹ "ಹೈಜೀನ್"(ನೈರ್ಮಲ್ಯ)ಹೆಸರಿನಲ್ಲಿ ಶೌಚವನ್ನು ಪ್ರಶಂಸಿಸುತ್ತದೆ ಮತ್ತು ಶೌಚಪಾಲನೆಗೆ ಮಾರ್ಗದರ್ಶನ ಮಾಡುತ್ತದೆ. ವಿಪರ್ಯಾಸವೆಂದರೆ, ಇಂದು ಆಧುನಿಕತೆಯ ಹೆಸರಿನಲ್ಲೇ ಹಲವರು ಶೌಚದಿಂದ ದೂರ ಸರಿಯುತ್ತಿದ್ದಾರೆ. ಪಾದರಕ್ಷೆ ಹಾಕಿಕೊಂಡೇ ಮನೆಯೊಳಗೆ ಓಡಾಡುವುದು, ಎಂಜಲು ಕೈಯಲ್ಲೇ ಬೇರೆ ಪದಾರ್ಥಗಳನ್ನು ಮುಟ್ಟುವುದು, ಒಬ್ಬರ ಎಂಜಲನ್ನು ಮತ್ತೊಬ್ಬರು ತಿನ್ನುವುದು ಹೀಗೆ ಧಾರ್ಮಿಕ ನಂಬಿಕೆಗಳನ್ನು ತೊಡೆಯುತ್ತಿದ್ದೇವೆ ಎನ್ನುವ ಮೌಢ್ಯದಲ್ಲಿ ಅಧುನಿಕ ವಿಜ್ಞಾನ, ಯೋಗ, ಧರ್ಮಶಾಸ್ತ್ರಗಳೆಲ್ಲದರ ವಿರುಧ್ಧವಾಗಿ ಹೋಗುತ್ತಿದ್ದಾರೆ. ಆದರೆ ಇದರಿಂದ ಯೋಗಕ್ಕಲ್ಲದೇ ಭೌತಿಕವಾಗಿ ಆರೋಗ್ಯಕ್ಕೂ ಸಹ ತೊಂದರೆಯಾಗುತ್ತದೆ.

ಶೌಚದ ಅನುಷ್ಠಾನವು ದೇಹಾರೋಗ್ಯ, ಲಾಘವ ಮತ್ತು ತಿಳಿಯಾದ ಮನಸ್ಸುಗಳನ್ನುಂಟು ಮಾಡಿ ಯೋಗ ಸಾಧನೆಗೆ ಅತ್ಯಂತ ಪೋಷಕವಾಗಿರುತ್ತದೆ.


ಸೂಚನೆ : 19/12/2020 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ .

Friday, December 25, 2020

व्यवहारः (Vyavahaarah)

लेखकः – विद्वान् नरसिंह भट्टः 
(प्रतिक्रियां दातुं शक्यते :  lekhana@ayvm.in)



पदस्यार्थः- 
'व्यवहारः' इति पदस्य प्रयोगः अस्माकं दैनन्दिनजीवने दृश्यते । 'तस्य व्यवहारः सम्यक् नास्ति। अस्य व्यवहारः उत्तमः अस्ति । अस्य व्यवहारं विश्वस्य अहं वञ्चितोऽस्मि' इत्यादिवाक्यानि व्यवहारपदयुक्तानि दृश्यन्ते । एवं शुद्धव्यवहारः अशुद्धव्यवहारः इति द्वौ व्यवहारौ स्तः । तर्हि अस्य पदस्य व्याप्तिः का इति कदाचित् प्रश्नः उदेति । संस्कृते समान्यतया पदस्य अर्थविवरणं न सुलभम् । कुतः इति चेत् एकस्यैव पदस्य नानार्थकत्वम् अथवा नानार्थद्योतकत्वम् । अपि च कदाचित् उपसर्गस्य योगेन अर्थव्यत्ययो भवति । एवमेव 'व्यवहारः' इति पदेऽपि तादृशक्लेशः विद्यत एव । 'वि' 'अव' इत्युपसर्गद्वययोगेन हृञ्-हरणे इति धातुना घञ् प्रत्यययोगेन व्यवहार इति पदं व्युत्पद्यते । 'विवादो व्यवहारः स्यात्' इति अमरकोशानुसारेण अस्य पदस्य 'विवादः' इत्येकोऽर्थः लभ्यते । वाग्व्यवहारः लोकव्यवहारः इत्यादिषु व्यवहार इति पदम् एकां क्रियां वक्ति । अपि च न्यायः, पणः, स्थितिः इत्याद्यर्थाः अपि सन्ति । परन्तु इदानीं लोके एतत् पदम् असत्यं वञ्चनं इत्यादिषु अर्थेषु पर्यवसितम् । याज्ञवल्क्यस्मृतौ व्यवहारनामकः एकोऽध्यायोऽपि अस्ति । "वि-नानार्थे अव-सन्देहे हरणं हार उच्यते । नानासन्देहहरणात् व्यवहार इति स्थितिः ॥" इत्यत्र व्यवहारशब्दः संशयनिवर्तकार्थः भवति । धर्मशास्त्रविरोधे तु युक्तियुक्तो विधिः स्मृतः । व्यवहारोऽपि बलवान् धर्मस्तेनावहीयते ॥" इत्यत्र युक्तचिन्तनम् इत्यर्थः भासते । कुत्रचित् आदानप्रदानरूपक्रिया अनेन पदेन बोध्यते ।

पदविवरणम् –
आवरणस्य अपनयनेन विवरणं भवति खलु । अस्मिन् पदे किमावरणमासीत् । विवरणं कथं भवतीति अस्माकं महागुरुः श्रीरङ्गपदाभिधः प्रदर्शयति स्म । तत्कथमिति पश्यामः । 'अप' 'अव' इत्युपसर्गपूर्वकौ अपहारः अवहारः इति शब्दौ सामान्यतया समानार्थकौ भवतः । यः अस्मान् मार्गात् भ्रंशयति स अवहारः । तस्य विरुद्धार्थकपदं व्यवहारः इति । अयं व्यवहारः

अस्मान् रक्षति इत्यर्थः। येन सत्परिणामं भवति स व्यवहारः । येन दुष्परिणामः भवति स अवहारः । एतस्मिन्नेव अर्थे व्यवहारपदं उत्कृष्टार्थं बोधयति । अन्यथा तस्य पदस्य व्यर्थतासम्भवः । अतः व्यवहारपदस्य अपैशुन्यं वञ्चनराहित्यम् इत्यर्थाः भासन्ते। "वि- नानार्थे अव-सन्देहे हरणं हार उच्यते । नानासन्देहहरणात् व्यवहार इति स्थितिः ॥" इत्यत्र यः अर्थः उक्तः सोऽपि अन्वर्थः भवति । याज्ञवल्क्यमहर्षिणा उक्तः व्यवहाराध्यायोऽपि अमुमेवार्थं निरूपयति । धर्माविरोधिव्यवहारः कः ? धर्मप्रबोधकः व्यवहारः कः इति तत्र निरूपितोऽस्ति ।

एकेन उदाहरणेन विषयः स्पष्टः भविष्यति – कृषकः तस्य क्षेत्रे फलं प्राप्तुं बीजं वपते । स सस्यवर्धनाय पांशुप्रयोगः जलसेचनं क्षेत्रसंस्कारकरणम् इत्येवंरूपाणि कर्माणि कुरुते । तस्य कर्मभिः यदा फलं लभ्यते तदा तेन कृतानि कर्माणि व्यवहारपदयोग्यानि भवन्ति । अन्यथा अकाले जलसेचन-पांशुप्रयोग-क्षेत्रसंस्काराकरणम् इत्येवं रूपाणि कर्माणि फलावाप्तये साधनानि न भवन्ति । एतानि कर्माणि अवहार इति पदाभिधेयानि भवन्ति । एवं च सत्फलप्रापकः व्यवहारः इति, असत्फलप्रापकः अव्यवहारः अथवा अवहारः अपहारो वा भवति।

Thursday, December 24, 2020

ಶ್ರೀಶಂಕರರಮಂಗಳ - ಶಂ ಕಾರ್ಯ (Srishankararamangala-Sha Skarya)

ಲೇಖಕರು ; ವಿದ್ವಾನ್ ನರಸಿಂಹ ಭಟ್ ಬಡಗು 
(ಪ್ರತಿಕ್ರಿಯಿಸಿರಿ lekhana@ayvm.in)



ಅವತಾರದಿಂದ ಅಧರ್ಮ ಅಡಗಿತು
ಲೋಕದಲ್ಲಿ ಯಾವಾಗ ಅಧರ್ಮವು ವಿಪರೀತವಾಗಿ, ಧರ್ಮಗ್ಲಾನಿ ಉಂಟಾಗುವುದೋ ಆಗ ಭಗವಂತನು ಅವತರಿಸುತ್ತಾನೆ. ಅಂದು ಶ್ರೀಶಂಕರಾಚಾರ್ಯರ ಅವತಾರವೂ ಹೀಗೇ ಆದುದು. ಸನಾತನಧರ್ಮವನ್ನು ಧಿಕ್ಕರಿಸುವುದರಲ್ಲಿ ಬುದ್ದಿವಂತರೆಂದೆನಿಸಿಕೊಂಡವರು ಮುಖ್ಯ ಪಾತ್ರವನ್ನು ವಹಿಸಿ ಅಧರ್ಮಕ್ಕೆ ನಾಂದಿ ಹಾಡಿದ್ದರು. ಇವರನ್ನು ಮೊದಲು ಧರ್ಮಮಾರ್ಗಕ್ಕೆ ತರಬೇಕಾಗಿತ್ತು. ಇಡೀ ಭಾರತವನ್ನು ಅನೇಕ ಬಾರಿ ಸಂಚರಿಸಿ, ಶ್ರೀಶಂಕರರು ವೈದಿಕಮತವನ್ನು ಪುನಃ ಪ್ರತಿಷ್ಠಾಪಿಸಿದರು. ಯಾವ ಮೇಧಾವಿಗಳು ಸನಾತನ ಧರ್ಮವನ್ನು ಅವಹೇಳನ ಮಾಡುತ್ತಿದ್ದರೋ ಅಂತಹ ಪಂಡಿತರನ್ನೇ ಯುಕ್ತಿಯಿಂದ, ಪ್ರತಿಭೆಯಿಂದ ವಾದ ಮಾಡಿ, ಶಿಷ್ಯರನ್ನಾಗಿ ಸ್ವೀಕರಿಸಿ, ಸನಾತನಧರ್ಮದ ಪ್ರಚಾರಕರನ್ನಾಗಿ ಮಾಡಿಕೊಂಡರು. ಇದು ವೈದಿಕ ಧರ್ಮಕ್ಕೆ ಹೆಚ್ಚು ಬಲವನ್ನು ಕೊಡುವಂತಿತ್ತು. ಪಂಡಿತರು ಸನ್ಮಾರ್ಗಕ್ಕೆ ಬರುವಂತಾಗಿತ್ತು. ಕೇವಲ ಪಂಡಿತರನ್ನು ಮಾತ್ರವಲ್ಲದೇ ಪಾಮರರನ್ನೂ ಸನ್ಮಾರ್ಗಕ್ಕೆ ತರುವ ಮಹತ್ಕಾರ್ಯ ಅವತಾರದ ಇನ್ನೊಂದು ಮುಖ್ಯಧ್ಯೇಯ. ಇದಕ್ಕೆ ಶಂಕರರು ದಿವ್ಯಶಕ್ತಿಯನ್ನು ಬಳಸಿಕೊಂಡರು. ಹೀಗೆ ಪ್ರತಿಭೆ ಮತ್ತು ದಿವ್ಯತೆಯೆಂಬ ಎರಡು ಅಸ್ತ್ರಗಳಿಂದ ಅಧರ್ಮವನ್ನು ಅಡಗಿಸಿ ಧರ್ಮವು ಪ್ರಕಾಶವಾಗುವಂತೆ ಮಾಡಿದರು.

ಶಂಕರರಶ್ರೀಕಾರ್ಯ
ಪ್ರಾಜ್ಞ ಮತ್ತು ಅಜ್ಞರಿಂದ ಕೂಡಿದ ಲೋಕವನ್ನು ಸನ್ಮಾರ್ಗಕ್ಕೆ ತರಲು ಶ್ರೀಶಂಕರರು ಬಳಸಿದ ಉಪಾಯ ಎರಡು. ಅವು ಭಾಷ್ಯ ಮತ್ತು ಸ್ತೋತ್ರಸಾಹಿತ್ಯಗಳು. ಬ್ರಹ್ಮಸೂತ್ರ, ಉಪನಿಷತ್ತು ಮತ್ತು ಭಗವದ್ಗೀತೆ ಇವುಗಳಿಗೆ ಪಾಂಡಿತ್ಯಪೂರ್ಣವೂ ಮತ್ತು ವೇದಪ್ರಾಮಾಣ್ಯದಿಂದಲೂ ಕೂಡಿದ ಭಾಷ್ಯವನ್ನು ಬರೆದರು. ಇದರಿಂದ ಪಂಡಿತರು ಸನ್ಮಾರ್ಗಕ್ಕೆ ಬರಲು ಸಹಾಯವಾಯಿತು. ಯುಕ್ತಿ ಮತ್ತು ಗ್ರಂಥವನ್ನು ಮಾತ್ರ ಪ್ರಮಾಣವಾಗಿ ಸ್ವೀಕರಿಸಬಲ್ಲ ವಿದ್ವಾಂಸರಿಗೆ ಇದು ಅತ್ಯಾಕರ್ಷಕವೆನಿಸಿತ್ತು. ಇಲ್ಲಿ 'ಬ್ರಹ್ಮಸತ್ಯಂಜಗನ್ಮಿಥ್ಯಾಜೀವೋಬ್ರಹ್ಮೈವನಾಪರಃ"- ಪರಬ್ರಹ್ಮವೆಂಬ ವಿಷಯಮಾತ್ರಸತ್ಯ. ನಮಗೆ ಕಾಣುವ ಈ ಪ್ರಪಂಚವು ಬ್ರಹ್ಮದ ದೃಷ್ಟಿಯಿಂದ ಸತ್ಯವಲ್ಲ. ಮತ್ತು ಜೀವನಿಗೂ ದೇವನಿಗೂ ಭೇದವಿಲ್ಲ. ಎರಡೂ ಒಂದೇ, ಮೋಕ್ಷವು ಜ್ಞಾನದಿಂದ ಮಾತ್ರ ಸಾಧ್ಯ. ಕರ್ಮವೆಲ್ಲವೂ ಚಿತ್ತಶುದ್ದಿಗಾಗಿ ಎಂಬ 'ಅದ್ವೈತ' ಸಿದ್ಧಾಂತವನ್ನು ಪ್ರತಿಪಾದಿಸಿದರು.

ಪಾಮರರಮಾರ್ಗ
ಪಾಮರರಿಗೆ ನಿರಾಕಾರದ ಉಪಾಸನೆ ಎಟುಕದು. ಅವರಿಗೆ ಸಾಕಾರದ ಉಪಾಸನೆಯಿಂದ ಮಾತ್ರ ಮೋಕ್ಷ ಸಿದ್ಧಿಸುವುದು ಎಂದರಿತ ಶ್ರೀಶಂಕರರು, ಮತಿಗೆ ನಿಲುಕುವ ದೇವತಾಮೂರ್ತಿಗಳನ್ನು ಕೊಟ್ಟು "ಷಣ್ಮತಸ್ಥಾಪನಾಚಾರ್ಯರು" ಎಂದೇ ಪ್ರಸಿದ್ಧರಾದರು. ಸೂರ್ಯ-ಗಣಪತಿ-ಅಂಬಿಕಾ-ಶಿವ-ವಿಷ್ಣು-ಸ್ಕಂದ ಆರು ದೇವತೆಗಳನ್ನು ವಿಶೇಷವಾಗಿ ಪರಿಭಾವಿಸಿ ಅವುಗಳಿಗೆ ಸಂಬಂಧಿಸಿದಂತೆ ಪೂಜಾಪದ್ಧತಿಯನ್ನೂ ಮತ್ತು ಸ್ತೋತ್ರಗಳನ್ನು ಅನುಗ್ರಹಿಸಿದರು. ಈ ದೇವತೆಗಳಿಗೆ ಸಂಬಂಧಿಸಿದ ಸುಮಾರು ೨೪೦ಕ್ಕಿಂತಲೂ ಹೆಚ್ಚುಸ್ತೋತ್ರಗಳನ್ನು ರಚಿಸಿದರು. ಇವುಗಳಲ್ಲಿ ಸುಮಾರು ೩೮ಕ್ಕಿಂತಲೂ ಹೆಚ್ಚು ಅಷ್ಟಕಗಳು ಇವೆ. ಇವು ಭಗವಂತನನ್ನು, ವಿವಿಧ ರೂಪಗಳಿಂದಲೂ ಮತ್ತು ಭಗವಂತನ ಕಾರ್ಯವಿಶೇಷತೆಗಳಿಂದಲೂ ಆರಾಧಿಸಲು ಸಹಕಾರಿಗಳಾದವು. ಇದು ಅಲ್ಪಜ್ಞರಾದ ಪಾಮರರನ್ನು ಆಕರ್ಷಿಸಿತು. ಈ ದೃಷ್ಟಿಯಿಂದಲೇ ಶ್ರೀಶಂಕರರು ಲೋಕದಲ್ಲಿ ಎಲ್ಲಾ ಬಗೆಯ ಜನರಿಗೂ ಪ್ರೀತಿಪಾತ್ರರಾದರು. ಹೀಗೆ, ಲೋಕವು ಆಸ್ತಿಕವಾಗಿ, "ಹದಿನೆಂಟು ವರ್ಷವಾದರೆ ಹೇಗೆ ಮತ ಚಲಾಯಿಸುವ ಹಕ್ಕುಬರುತ್ತದೆಯೋ ಅಂತೆಯೇ ಮನುಷ್ಯನಾದ್ದರಿಂದಲೇ ಭಗವಂತನನ್ನು ಕಾಣುವ ಹಕ್ಕು ಬರುತ್ತದೇಪ್ಪ" ಎಂದು ಶ್ರೀರಂಗಮಹಾಗುರುಗಳು ಹೇಳುವಂತೆ ಭಗವಂತನ ದರ್ಶನವನ್ನು ಪಡೆದು ಜೀವನವನ್ನು ಸಾರ್ಥಕಪಡಿಸಿಕೊಳ್ಳಬೇಕು ಎಂಬುದು ಶಂಕರಾವತಾರದಲ್ಲಿ ಎಲ್ಲರಿಗೂ ಮನವರಿಕೆಯಾಯಿತೆಂಬುದು ಇಲ್ಲಿ ಸ್ಮರಣೀಯ.

ಸೂಚನೆ: 24/12/2020 ರಂದು ಈ ಲೇಖನ ವಿಶ್ವ ವಾಣಿ ಯಲ್ಲಿ ಪ್ರಕಟವಾಗಿದೆ.    

பண்பட்ட மனம் எனும் சிறந்த கருவி(the great tool called cultured mind)

மூலம்: தாரோடி சுரேஶ் 
தமிழாக்கம்: வனஜா
மின்னஞ்சல் : (lekhana@ayvm.in)



நம் மனமே நம் வாழ்வை  ஆள்கிறது(வழி நடத்துகிறது). அதன் வழியில் நாம்  இழுக்கப்படுகின்றோம். அது எப்போதுமே சரியானது  என கூற இயலாது. பண்பட்ட மனமானது ஒருவரை நிம்மதியான, அமைதியான வாழ்கைக்கு வழிநடத்தும். இல்லாவிடில் துன்பம்தான்.  பாரதத்தின் கலாசாரம் எவ்வாறு வடிவமைக்கப்பட்டது எனில் தூயமனம், உணவு, பேச்சு, கேளிக்கை, வணிகம், கொடுக்கல், வாங்கல் போன்றவை அனைத்தையும்  கட்டுப்படுத்தும் வண்ணம்  அமைந்துள்ளது.

இரு நண்பர்கள் சிறிது காலம் ஆன்மீக பயணம் மேற்கொண்டனர். அநேக இடங்களுக்குப்பின் புனிதமான திருப்பதியை அடைந்தனர். சிறு முயற்சியுடன்  ஏழு மலைகளை ஏறினால் உன்னதமான, கம்பீரமான ஸ்ரீ வேங்கடாசலபதியின் ஸன்னிதியை அடையலாம். மலையடிவாரத்தில் உள்ள திருப்பதியும் மிகவும் அழகானது. ஆன்மீக இன்பத்துடன் புலன்களுக்கும் இன்பமளிக்கும் வண்ணம் உள்ளது.   நண்பர்களில்  ஒருவன் கோவிலுக்கு செல்லும் சிரமத்திற்கு பதில் நாவிற்கு சுவையான விருந்துண்டு, கண்ணிற்கினிய காட்சிகளை கண்டு மகிழ விரும்பினான். எனவே ஒருவன் மலை உச்சியில் உள்ள இறைவனை தரிசிக்க சென்றான், மற்றவன் சுற்றுலாவிற்கு சென்றான். காலப்போக்கில் இருவரும் மரணமடைந்தனர். அவர்கள் வியக்கும் வண்ணம்,  இறைவனை தரிசிக்க  மலையேறி சென்றவன் யம கிங்கரர்களால் நரகத்திற்கு இழுத்து செல்லப்பட்டான். மற்றொருவனை சொர்க்கத்திற்கு அழைத்து சென்றனர். இது என்ன நியாயம் என்பது நியாயமான கேள்வியே. ஆழ்ந்து ஆராய்ந்தால் அதன் மர்மம் விளங்கும்.

நகரத்தை சுற்றி பார்த்து மகிழ சென்றவன் தன் தவறை உணர்ந்து, இறைவனை தரிசிக்க செல்லவில்லையே  என மனம் வருந்தியவாறிருந்தான். அவன் மனம் இறைவனைக்குறித்த எண்ணத்திலேயே மூழ்கியிருந்தது. மற்றவன் சிரமப்பட்டு மலை ஏறினாலும் அவன் மனம் தன் நண்பன் என்ன செய்கிறான் என்றே எண்ணியது. தானும் நண்பனுடன் சென்று நகர இன்பங்களை கண்டு களித்திருக்கலாம் என எண்ணியவாறு இருந்தான். அவர்களின்  உடல் மட்டும் தாங்கள் விரும்பிய இடத்தில் இருப்பினும் மனம் வேறெங்கோ இருந்தது. முடிவில் ஒருவன் நரகத்திற்கும் மற்றவன் சொர்க்கத்திற்கும்  சென்றனர்.

நம் செயல்களின் பலனான நன்மை-தீமை(பாவம்-புண்ணியம்) என்பவை நம் மனம் எங்கெங்கு  உலவுகிறதோ அதைப்பொறுத்தே அமையும். "மோக்ஷத்திற்கும், ஸம்ஸாரத்தில் கட்டுப்படுவதற்கும் நம் மனமே காரணம்" என்பது கற்றறிந்த ஆன்றோர் வாக்கு. மனதை தூய்மைபடுத்த நம் முனிவர்கள் 16 வகையான ஸம்ஸ்காரம் எனப்படும் விதிமுறைகளை நம் வாழ்வில் புகுத்தினர்.  ஞானிகள் அழிவற்ற இலக்கியங்கள், இதிகாஸங்கள், புராண கதைகள், குருகுலங்களில் சிறந்த கல்வி, பயிற்சி முறை இவற்றின் மூலம் நம் எண்ணங்களை  பதப்படுத்தியுள்ளனர்.  இத்தகு எண்ணங்களை ப்ரதிபலிக்கும் வண்ணம் நம் பழக்கங்கள், அன்றாட வாழ்க்கைமுறை, நாம் கொண்டாடும் பண்டிகைகள், நம் நடை-உடை இவற்றை உயரிய முறையில் ஒருங்கிணைத்து நம் நாகரிகம் மற்றும் கலாசாரத்தை உருவாக்கினர். வால்மீகி முனிவர் அமைதியான ஸரயூ நதியின் நீரோட்டத்தை இறைஉணர்வில் மூழ்கியுள்ள ஒருவரின் சாந்தமான  மனநிலையுடன் ஒப்பிடுகிறார். (ஸன்மனுஷ்ய மனோ யதா) இதுவே மனத்தூய்மையால் பெறும் வரமாகும். "காட்டு யானையை பயிற்சி பெற்ற யானைகள் அடக்குவது போன்று இறை உணர்வில் மூழ்கியுள்ள ஞானிகளின் உடனாட்டம் நம் மனதை கட்டுப்படுத்தி தூய்மைபடுத்தும்" என மகிமை பொருந்திய ஸ்ரீ ஸ்ரீரங்க மஹாகுரு கூறினார். ஞானிகளுடன் பழகுதல் நம் மனதை படைப்பின் மூலத்திலுள்ள இறையின்பத்தை நுகர உதவும்படி  பதப்படுத்துகிறது.

குறிப்பு: இக்கட்டுரை யின் கன்னட மூலம் AYVM blogs ல் காணலாம்.  


Tuesday, December 22, 2020

ಮಹಾಭಾರತವು ‘ಪಂಚಮವೇದ’ ಹೇಗೆ ಆದೀತು? (Mahabharatavu Panncamaveda Hege Aditu?)

ಲೇಖಕರು: ಮೈಥಿಲೀ ರಾಘವನ್
 (ಪ್ರತಿಕ್ರಿಯಿಸಿರಿ lekhana@ayvm.in)




ಪಾಂಡವರು ಜೂಜಾಟದಲ್ಲಿ ಸೋತು ವನವಾಸ ಮಾಡುತ್ತಿದ್ದಾಗ,  ದುರ್ಯೋಧನನು ಪಾಂಡವರ ದುಃಸ್ಥಿತಿಯನ್ನು ಕಣ್ಣಾರೆ ಕಂಡು ಆನಂದಿಸುವ ದುರುದ್ದೇಶದಿಂದ ಅಲ್ಲಿಗೆ ಬಂದನು. ದುರಹಂಕಾರದಿಂದ ವರ್ತಿಸಿ ಅಲ್ಲಿದ್ದ ಗಂಧರ್ವರೊಡನೆ ಯುದ್ಧ ಮಾಡಿ ಪರಾಜಯಗೊಂಡು ಪರಿವಾರಸಮೇತನಾಗಿ ಬಂಧಿಸಲ್ಪಟ್ಟನು.  ಕೌರವಸೇನೆಯಲ್ಲಿದ್ದ ಕೆಲವರು ಹೇಗೋ  ತಪ್ಪಿಸಿಕೊಂಡು ಓಡಿಬಂದು ದುರ್ಯೋಧನನನ್ನು ಕಾಪಾಡೆಂದು ಯುಧಿಷ್ಠಿರನಲ್ಲಿ ಮೊರೆಯಿಟ್ಟರು. ಯುಧಿಷ್ಠಿರನ ಆಜ್ಞೆಯಂತೆ ಅರ್ಜುನಾದಿಗಳು ಗಂಧರ್ವರೊಂದಿಗೆ ಯುದ್ಧಮಾಡತೊಡಗಿದರು. ಕೊನೆಗೆ ಗಂಧರ್ವಮುಖಂಡನಾದ ಚಿತ್ರಸೇನನು ಗೆಳೆಯನಾದ ಅರ್ಜುನನೊಂದಿಗೆ ಸಮಾಧಾನಗೊಂಡು ಧರ್ಮಿಷ್ಠನಾದ ಯುಧಿಷ್ಠಿರನ ಆಶಯದಂತೆ ಕೌರವರೆಲ್ಲರನ್ನೂ ಬಿಡುಗಡೆಮಾಡಿ  ಹಸ್ತಿನಾವತಿಗೆ ಕಳಿಸಿದನು. ಯುದ್ಧದಲ್ಲಿ ಪಲಾಯನಮಾಡಿ ಓಡಿಹೋಗಿದ್ದ ಕರ್ಣನು ಹಿಂದಿರುಗುತ್ತಿದ್ದ ದುರ್ಯೋಧನನನ್ನು ಪ್ರಶಂಸೆ ಮಾಡುತ್ತಾನೆ - "ಎಂತಹ ಪರಾಕ್ರಮಿ ನೀನು! ಗಂಧರ್ವರನ್ನೇ ಸೋಲಿಸಿಬಂದಿದ್ದೀಯೆ!" ಇದನ್ನು ಕೇಳಿ ಅವಮಾನದಿಂದ ಕುಗ್ಗಿದ ದುರ್ಯೋಧನನು ನಡೆದ ವೃತ್ತಾಂತವನ್ನು ತಿಳಿಸಿ  "ಅವಮಾನಿತನಾಗಿ ಬದುಕುವುದಕ್ಕಿಂತಲೂ ಪ್ರಾಯೋಪವೇಶಮಾಡಿ ಪ್ರಾಣತ್ಯಾಗ ಮಾಡುತ್ತೇನೆ" ಎಂದು ಹಠಹಿಡಿದು ಅನ್ನ-ಆಹಾರಗಳನ್ನು ತೊರೆದನು. ಆಗ ಪಾತಾಳದಿಂದ ದೈತ್ಯ-ದಾನವರು ದುರ್ಯೋಧನನನ್ನು ತಮ್ಮಲ್ಲಿಗೆ ಕರೆಸಿಕೊಂಡು "ದುರ್ಯೋಧನ, ನೀನು ನಮ್ಮ ಅಂಶದಿಂದ ದೇವತೆಗಳನ್ನು ಪರಾಜಯಗೊಳಿಸಲು ಹುಟ್ಟಿಬಂದಿದ್ದೀಯೆ. ಹೀಗೆ ಎದೆಗುಂದಿ ಉದ್ದಿಷ್ಟಕಾರ್ಯವನ್ನು ಕೈಬಿಡಬಾರದು. ಬರಲಿರುವ ಯುದ್ಧದಲ್ಲಿ ಕರ್ಣನೇ ಮುಂತಾದವರು ದೈತ್ಯ-ದಾನವರ ಅಂಶದಿಂದ ಕೂಡಿ ನಿನಗೆ ಸಹಾಯಮಾಡುವರು" ಎಂಬುದಾಗಿ ಹುರಿದುಂಬಿಸಿ  ಆಲಿಂಗನಮಾಡಿಕೊಂಡು ಕಳುಹಿಸಿಕೊಟ್ಟರು.

ಭಗವಂತನ ಆಲಿಂಗನೆಯಿಂದ ಭಕ್ತರಲ್ಲಿ ಭಗವದ್ಭಾವವು ತುಂಬುವಂತೆಯೇ ದೈತ್ಯ ಆಲಿಂಗನದಿಂದ ಆತನ ಆಸುರೀಭಾವವು ವೃದ್ಧಿಹೊಂದಿ ಉತ್ಸಾಹದಿಂದ ಮರಳಿಬಂದನು!

ಪಾಂಡವರು ದೈವಾಂಶಸಂಭೂತರೆಂಬುದು ಪ್ರಸಿದ್ಧವೇ ಆಗಿದೆ. ಆದ್ದರಿಂದ ಮಹಾಭಾರತದ  ಮುಖ್ಯಕಥಾಭಾಗವೆಂಬುದು ದೇವಾಸುರರ(ಧರ್ಮಾಧರ್ಮಗಳ) ಮಧ್ಯೆ ನಡೆದ ಘರ್ಷಣೆ-ಯುದ್ಧವೇ ಆಗಿದೆ. ವೇದವು ಹೇಳುವುದೂ ದೇವಾಸುರರ ಸಂಘರ್ಷವನ್ನೇ.

ಅಂತೆಯೇ ಮಹಾಭಾರತವು ಪುರುಷಾರ್ಥಮಯವಾದ ಜೀವನದ ಆವಶ್ಯಕತೆಯನ್ನೂ, ಅಂತಹ ಜೀವನದಿಂದ ಪಡೆಯಬಹುದಾದ ಮಹಾಫಲವನ್ನೂ ಸ್ಪಷ್ಟಪಡಿಸುತ್ತದೆ. ಧರ್ಮಮಯಜೀವನವನ್ನು ನಡೆಸಿದಾಗ ಅರ್ಥ-ಕಾಮಗಳು ತಾವಾಗಿಯೇ ಸಿದ್ಧಿಸುವುವು ಎಂಬುದಾಗಿ ಭಗವಾನ್ವೇದವ್ಯಾಸರು ಸಾರುತ್ತಾರೆ. ಒಟ್ಟಾರೆ, ವೇದಗಳ ಸಾರವನ್ನೇ ಈ ಮಹಾಕಾವ್ಯವು ತಿಳಿಸುವುದರಿಂದ ಪಂಚಮವೇದವೆಂದು ವಿಖ್ಯಾತವಾಗಿದೆ.

ವೇದವೆಂದರೇನು?
ಸೃಷ್ಟಿಮೂಲವಾದ ಪರಂಜ್ಯೋತಿಯೇ ಪರಮಾರ್ಥದಲ್ಲಿ 'ವೇದ'ವೆನಿಸಿಕೊಳ್ಳುತ್ತದೆ. 'ವೇದ'ವೆಂಬುದು('ವಿದಜ್ಞಾನೇ')- ಜ್ಞಾನ(ಪರಂಜ್ಯೋತಿ)ವೆಂಬ ಅರ್ಥವನ್ನೇ ಕೊಡುತ್ತದೆ. 'ಪರಾತ್ಮಾ ವಿಂದತೇ ಏನ ಸ ವೇದೋ ವೇದ ಉಚ್ಯತೇ'(ಪರಮಾತ್ಮ ಯಾವುದರಿಂದ ತಿಳಿಯಲ್ಪಡುತ್ತಾನೆಯೋ ಅದೇ ವೇದ) ಎಂಬ ಆರ್ಷವಾಣಿಯೂ ಇದನ್ನೇ ಪುಷ್ಟೀಕರಿಸುತ್ತದೆ.  ಜ್ಯೋತಿಸ್ವರೂಪವಾದ  'ವೇದದ' ಅನುಭವಸ್ಥಾನದಿಂದ ಹೊರಟು, ಆ ಪರಂಜ್ಯೋತಿಯ ಕಡೆಗೇ ದಿಗ್ದರ್ಶನ ಮಾಡುವ ಮಂತ್ರಸಾಹಿತ್ಯರಾಶಿ ರೂಪದ ವೇದವು ಮುಂದಿನ ಹಂತದಲ್ಲಿ ವೇದವೆಂಬುದಾಗಿ ಕರೆಯಲ್ಪಡುತ್ತದೆ. ಅಂತೆಯೇ ವೇದಮಂತ್ರಗಳ ರೂಪವಿಲ್ಲದಿದ್ದರೂ ಅದರ ಸಾರವನ್ನೇ ಹೇಳುತ್ತಾ ಪರಂಜ್ಯೋತಿಯ ಕಡೆಗೆ ಸಾಗುವ ಕ್ರಮವನ್ನು ನಾನಾ ರೂಪಗಳಲ್ಲಿ ಬಿತ್ತರಿಸುವ ಕಾವ್ಯಗಳನ್ನೂ, ಸಾಹಿತ್ಯಗಳನ್ನೂ ವೇದವೆಂಬುದಾಗಿಯೇ ಕರೆದಿದ್ದಾರೆ ಜ್ಞಾನಿಗಳು. ಈ ವಿಚಾರವನ್ನು ಶ್ರೀರಂಗಮಹಾಗುರುಗಳು ಸರಳಸುಂದರವಾದ ಉದಾಹರಣೆಯ ಮೂಲಕ ತಿಳಿಯಪಡಿಸಿದರು – ತೆಂಗಿನ ಕಾಯೆಂಬುದು ಒಳಗಿನ ಬಿಳಿಯ ತಿರುಳುಮಾತ್ರವೇ. ಆದರೆ ಆ ತಿರುಳನ್ನೊಳಗೊಂಡಿರುವ ಕಾರಣದಿಂದಾಗಿ ಕರಟ-ಮಟ್ಟೆಗಳ ಸಹಿತವಾದದ್ದನ್ನೂ ತೆಂಗಿನಕಾಯೆಂದೇ ವ್ಯವಹರಿಸುತ್ತೇವೆ. ಆದರೆ ತಿರುಳಿನಿಂದ ಬೇರ್ಪಟ್ಟರೆ ಅವುಗಳಿಗೆ ಕರಟ,ಮಟ್ಟೆ ಇತ್ಯಾದಿ ನಾಮಗಳಷ್ಟೇ ಅನ್ವಯವಾಗುವುವು!

ಈ ಕಾರಣದಿಂದಲೇ ಮಹಾಭಾರತವು ಪಂಚಮವೇದವಾದಂತೆಯೇ ನಾಟ್ಯ'ವೇದ', ಆಯು'ರ್ವೇದ' ಮುಂತಾದವುಗಳೂ ಅರ್ಥವತ್ತಾದ ಹೆಸರುಗಳಾಗಿವೆ.

ಸೂಚನೆ: 22/12/2020 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.    

Sunday, December 20, 2020

ಆರ್ಯಸಂಸ್ಕೃತಿ ದರ್ಶನ - 22 (Arya Samskruti Darshana - 22)

ಸತ್ಸಹವಾಸ 
ಲೇಖಕರು:ವಿದ್ವಾನ್|| ಶ್ರೀಛಾಯಾಪತಿ



ಬೇಸಿಗೆಯ ತೀವ್ರವಾದ ಧಗೆ ತಾಪಕರ. ಅದೇ ಆಗ ಬೀಸುವ ಗಾಳಿಯ ಸಹವಾಸ ತಾಪಹರ. ಕೇಸರಿ, ಏಲಕ್ಕಿ, ಪುನುಗು ಮೊದಲಾದವುಗಳನ್ನೊಳಗೊಂಡ ಡಬ್ಬಿಗಳೂ ಪರಿಮಳ ಸೂಸುತ್ತವೆ. ಅದು ಅವುಗಳ ಸಹಜ ಪರಿಮಳವಲ್ಲ. ಪರಿಮಳದ್ರವ್ಯಗಳ ಸಹವಾಸದ ಫಲ. ಗೊಬ್ಬರದ ಗುಂಡಿಯ ಮೇಲೆ ಬೀಸುವ ಗಾಳಿ ಮೂಗು ಮುಚ್ಚಿಸುವಂತೆ ಇರುತ್ತದೆ. ಅದೇ ಮಲ್ಲಿಗೆಯ ತೋಟದ ಬಳಿ ಬೀಸುವ ಗಾಳಿ ಮೂಗರಳಿಸುತ್ತದೆ. ಯಾವುದರ ಸಹವಾಸ ಹಿತಕರ?  ಜೀವನದ ಬೆಳವಣಿಗೆಯಲ್ಲಿ ಈ ಸಹವಾಸದ ಪಾತ್ರ ಗಣನೀಯವಾದುದು. ಆದ್ದರಿಂದಲೇ ವಿಶ್ವದ ಎಲ್ಲ ದೇಶದ ಸಾಹಿತ್ಯಗಳಲ್ಲಿಯೂ ಒಂದಲ್ಲ ಒಂದು ಬಗೆಯಲ್ಲಿ ಸತ್ಸಸಹವಾಸ- [ಉತ್ತಮರ ಒಡನಾಟ] -ಮತ್ತು ಅದರ ಫಲಗಳ ಬಗ್ಗೆ ಉಲ್ಲೇಖ ದೊರಕುತ್ತದೆ.

ಸತ್ಪುರುಷರು ಎಂದರೆ ಯಾರು? ಅವರ ಲಕ್ಷಣಗಳೇನು? ಅವರ ಸಹವಾಸದಿಂದಾಗುವ ಅನುಕೂಲಗಳೇನು? ಎಂಬಂಶಗಳು ಇಲ್ಲಿ ಪರಿಶೀಲನಾರ್ಹವಾಗಿವೆ.
"ಸ್ವಾರ್ಥವನ್ನೂ ತೊರೆದು ಪರಾರ್ಥಕ್ಕಾಗಿ ದುಡಿಯುವವರು ಸತ್ಪುರುಷರು. ಮಾತು, ಮನಸ್ಸು, ಕ್ರಿಯೆಗಳಲ್ಲಿ ಏಕರೂಪತೆ ಸಜ್ಜನರಲ್ಲಿ ಕಂಡುಬರುತ್ತದೆ. ದುರಾಸೆಯನ್ನು ಕತ್ತರಿಸು, ಕ್ಷಮಯನ್ನಾಶ್ರಯಿಸು, ಗರ್ವವನ್ನು ಬಿಡು, ಪಾಪದಲ್ಲಿ ಪ್ರೀತಿಯನ್ನು ಮಾಡದಿರು, ಸತ್ಯವನ್ನು ಹೇಳು, ಸಾಧುಮಾರ್ಗವನ್ನು ಅನುಸರಿಸು, ವಿದ್ವಾಂಸರನ್ನು ಸೇವಿಸು, ಗೌರವಾರ್ಹರನ್ನು ಗೌರವಿಸು, ಶತ್ರುಗಳನ್ನೂ ಅನುನಯಿಸು, ತನ್ನ ಗುಣಗಳನ್ನು ಹೊಗಳಿಕೊಳ್ಳದಿರು, ಕೀರ್ತಿಯನ್ನು ಕಾಪಾಡು, ದೀನರಲ್ಲಿ ದಯೆತೋರು. ಇವು ಸಜ್ಜನರ ಲಕ್ಷಣಗಳು. ಧರ್ಮತತ್ಪರತೆ, ಮಧುರವಾಣಿ, ದಾನೋತ್ಸಾಹ, ವಂಚನೆಯಿಲ್ಲದಿರುವಿಕೆ, ವಿನಯ, ಗಂಭೀರವಾದ ಮನಸ್ಸು, ಶುಚಿಯಾದ ನಡವಳಿಕೆ, ಗುಣಾಸಕ್ತಿ, ಶಾಸ್ತ್ರ ಪರಿಣತಿ, ಸುರೂಪಸಂಪತ್ತು, ಹರಿಭಕ್ತಿ-ಇವು ಸಜ್ಜನರಲ್ಲಿ ಕಾಣುವ ಗುಣಗಳು." ಪರನಾರೀಸೋದರತ್ವ, ಪರಗುಣ ಪ್ರಶಂಸೆ, ಲೋಕಾಪವಾದ ಭೀತಿ, ಅಪಕಾರಿಗಳಲ್ಲಿಯೂ ಪ್ರೀತಿ, ಸರ್ವಭೂತಹಿತ, ಮೃದುತ್ವ, ಸತ್ಕಾರಪರತೆ, ಸಂಕಟದಲ್ಲಿ ದೃಢಚಿತ್ತತೆ, ಇವುಗಳು ಸಜ್ಜನರ ಗುಣಗಳು. ಹೀಗೆ ಸುಭಾಷಿತಗ್ರಂಥಗಳಲ್ಲಿ ಸತ್ಪುರುಷರ ಗುಣವರ್ಣನೆ ಬರುತ್ತದೆ.
.
ವಿದೇಶೀ ಸಾಹಿತ್ಯಗಳಲ್ಲಿಯೂ ಸಜ್ಜನರ ವರ್ಣನೆಗಳನ್ನೊಳಗೊಂಡ ಸಾಹಿತ್ಯಗಳಿವೆ. ಅವುಗಳಲ್ಲಿ ಎಲ್ಲರ ಮನ್ನಣೆಗೆ ಪಾತ್ರವಾದ, ಕಾರ್ಡಿನಲ್ ನ್ಯೂಮನ್,(Cardinal New man) ಎಂಬುವನು ಕೊಟ್ಟಿರುವ ಜೆಂಟಲ್ಮನ್ (Gentleman) ಶಬ್ದಾರ್ಥದ ವಿವರಣೆ ಅತಿ ಪ್ರಸಿದ್ಧವಾದುದು. ಅದು ಹೀಗಿದೆ-  "ನಿಜವಾಗಿ ದೊಡ್ಡ  ಮನುಷ್ಯನಾದವನು (ಜೆಂಟಲ್ಮಮನ್‌) ಯಾರ ಒಡನೆ ತಾನು ಬದುಕಬೇಕಾಗಿದೆಯೋ ಅವರ ಮನಸ್ಸಿಗೆ ವಿರಸ-ಕುಲುಕಾಟಗಳನ್ನುಂಟುಮಾಡಬಹುದಾದ ಸಂದರ್ಭಗಳನ್ನು ತಪ್ಪಿಸಲು ಎಚ್ಚರದಿಂದಿರುತ್ತಾನೆ. ಪ್ರತಿಯೊಬ್ಬರೂ ಸಮಾಧಾನದಿಂದ ಅವರವರ ಸ್ವಗೃಹದಲ್ಲಿ ಹೇಗೋ ಹಾಗೆ ಇರುವಂತೆ ಅನುಕೂಲಪಡಿಸಬೇಕೆಂಬುದೇ ಆತನ ಮುಖ್ಯ ಯೋಚನೆ. ಗೋಷ್ಠಿಯಲ್ಲಿ ಎಲ್ಲರ ಕಡೆಗೂ ಆತನ ಕಣ್ಣಿರುತ್ತದೆ. ನಾಚಿಕೆಯ ಸ್ವಭಾವದವರ ವಿಷಯದಲ್ಲಿ ಆತನು ಮೃದುವಾಗಿಯೂ, ಸಲಿಗೆಯಿಲ್ಲದೆ, ದೂರ ನಿಂತವರಲ್ಲಿ ನಯದಿಂದಲೂ, ಅವಿವೇಕಿಗಳಲ್ಲಿ ಮರುಕದಿಂದಲೂ ನಡೆದುಕೊಳ್ಳುತ್ತಾನೆ. ಮಾತುಕಥೆಯಲ್ಲಿ ತಾನು ಪ್ರಮುಖವಾಗಿ ಮುಂದೆ ಬರುವುದೂ, ಬೇಸರಪಡಿಸುವಂತೆ ಮಾತನಾಡುವುದು ಎಂದಿಗೂ ಇಲ್ಲ. ತನ್ನ ಉಪಕಾರವನ್ನು ಅಲ್ಪವಾಗಿ ಗಣಿಸುತ್ತಾನೆ. ತಾನೇ ಕೊಡುವವನಾದರೂ ಸ್ವೀಕರಿಸುವವನಂತೆ ನಡೆಯುತ್ತಾನೆ. ಒತ್ತಾಯವಿದ್ದ ಹೊರತು ತನ್ನ ವಿಷಯವನ್ನು ತಾನು ಹೇಳಿಕೊಳ್ಳುವುದಿಲ್ಲ. ವಾದದಲ್ಲಿ ತಾನೆಂದಿಗೂ ಪ್ರತ್ಯಾಕ್ಷೇಪಣೆಯಿಂದ ತನ್ನನ್ನುಸಮರ್ಥನೆ ಮಾಡಿಕೊಳ್ಳುವುದಿಲ್ಲ. ಚಾಡಿಮಾತು, ಗೊಡ್ಡುಹರಟೆಗಳಿಗೆ ಅವನು ಕಿವಿಕೊಡನು. ತನ್ನ ದಾರಿಗೆ ಅಡ್ಡ ಬಂದವರ ಬಗೆಗೆ ಹೇಗೆ ನಡೆದುಕೊಳ್ಳುತ್ತೇವೆಯೋ ಹಾಗೆ ನಡೆಯುವುದು ಜಾಣ್ಮೆಯೆಂಬುದು ಅವನ ದೂರದೃಷ್ಟಿಗೆ ಗೋಚರವಾಗುತ್ತದೆ. ಆತನ ಅಭಿಪ್ರಾಯ ಸರಿ ಅಥವಾ ತಪ್ಪಿದ್ದರೂ ಅವನ ವಿಚಾರವಿಶದತೆ ಅನ್ಯಾಯಕ್ಕೆಡೆಗೊಡದು. ಆತನು ಶಕ್ತ ಹಾಗೂ ಸರಳ, ನಿಷ್ಕರ್ಷೆಯುಳ್ಳವನು ಹೇಗೋ ಹಾಗೆ ಮಿತಿಯುಳ್ಳವನೂ ಹೌದು."

ಮೇಲಿನ ಮಾತು ಸತ್ಪುರುಷರ ಮತ್ತು ಅವರ ಒಡನಾಟ ಎರಡನ್ನೂ ಒಳಗೊಂಡಿದೆ. ಅಂತೆಯೇ ಸತ್ಪುರುಷರ ಸಹವಾಸದ ಬಗೆಗೂ ಸುಭಾಷಿತ ಗ್ರಂಥಗಳು ಬಹಳವಾಗಿ ಹೇಳುತ್ತವೆ. ಒಂದೆರಡು ಹೀಗೆ ಉಲ್ಲೇಖಿಸಬಹುದು. "ಸತ್ಸಂಗವು ಸ್ವರ್ಗವಾಸ. ಸತ್ಸಂಗತಿಯು ಬುದ್ಧಿಯಲ್ಲಿ ಜಡತೆಯನ್ನು ಕಳೆಯುತ್ತದೆ. ಮಾತಿನಲ್ಲಿ ಸತ್ಯವನ್ನು ಬೆರೆಸುತ್ತದೆ. ಹಿರಿಮೆಯನ್ನು ತರುತ್ತದೆ. ದುಷ್ಟತೆಯನ್ನು ದೂರೀಕರಿಸುತ್ತದೆ. ಮನಸ್ಸನ್ನು ಪ್ರಸನ್ನಗೊಳಿಸಿ ಎಲ್ಲೆಡೆಗಳಲ್ಲಿ ಕೀರ್ತಿಯನ್ನು ಹರಡುತ್ತದೆ. ಸತ್ಸಂಗತಿಯು ಏನನ್ನು ತಾನೇ ಮಾಡುವುದಿಲ್ಲ?" " ಸಜ್ಜನರ ಸಂಗವದು ಹೆಜ್ಜೇನ ಸವಿದಂತೆ". "ಬಲ್ಲವರ ಒಡನಾಟ ಬೆಲ್ಲವನು ಮೆದ್ದಂತೆ". ಹೀಗೆ ಸತ್ಪುರುಷ ಸಹವಾಸದ ಮೇಲ್ಮೆಯನ್ನು, ಒಂದೊಂದು ಗುಣಗಳ ಹಿರಿಮೆಯನ್ನೂ ಕೊಂಡಾಡುವ ಅಸಂಖ್ಯಾತ ಕಥೆಗಳು ವಿಶ್ವದ ಎಲ್ಲೆಡೆಯಲ್ಲಿಯೂ ಹರಡಿವೆ.

ಮೇಲ್ಕಂಡ ಗುಣಗಳಲ್ಲಿ ಹಲವನ್ನೋ ಎಲ್ಲವನ್ನೋ ಒಳಗೊಂಡು, ಬಾಳುವ ಜನಗಳು ವಿಶ್ವದ ಎಲ್ಲ ದೇಶಗಳಲ್ಲಿಯೂ ಬಹುಸಂಖ್ಯೆಯಲ್ಲಿ ಅಲ್ಲದಿದ್ದರೂ, ವಿರಳವಾಗಿಯಾದರೂ ಕಂಡು ಬರುತ್ತಾರೆ. ಮುಗ್ಧವಾದ ಸಾಧುಸ್ವಭಾವದವನನ್ನು –ಹಸುವಿನಂತಹ ಸ್ವಭಾವದವನು-ಅವನಿಗೆ ಪಾಪ, ಒಂದು ಕೆನ್ನೆಗೆ ಹೊಡೆದರೆ ಅಳಲೂ ಬರುವುದಿಲ್ಲ ಎಂದು ಕೊಂಡಾಡುವ, ಮರುಗುವ ಪ್ರಸಂಗಗಳೂ ಉಂಟು. "ಯಾವ ಗಲಭೆಗೂ ಹೋಗದವನು, ಒಂದು ಕೆನ್ನೆಗೆ ಹೊಡೆದರೆ ಮತ್ತೊಂದು ಕೆನ್ನೆಯನ್ನು ಒಡ್ಡುವನು, ಮೂರಕ್ಕೆ ಬರುವುದಿಲ್ಲ, ಆರಕ್ಕೆ ಹೋಗುವುದಿಲ್ಲ." ಹೀಗೆ ಒಮ್ಮೆ ಪ್ರಶಂಸೆಯಂತೆ ತೋರುವ ಮತ್ತೊಮ್ಮೆ ವ್ಯಂಗ್ಯಭರಿತವಾಗಿ ಆಡುವ ಮಾತುಗಳನ್ನೂ ಕೇಳಿದ್ದೇವೆ.

ಬಾಳಿಗೂ ಪರಿಸರ ಒಳಿತನ್ನು ತರುವ ಉದಾತ್ತ ಗುಣಗಳನ್ನು ಬಹುವಾಗಿಯೋ, ಸಮಗ್ರವಾಗಿಯೋ, ಒಳಗೊಂಡ ಜನಗಳನ್ನು ಸತ್ಪುರುಷರು ಎಂದು ಕರೆಯುವುದು ವ್ಯವಹಾರದಲ್ಲಿ ಬಂದಿದೆ. ಆದರೆ ಈ ಎಲ್ಲ ಉದಾತ್ತ ಗುಣಗಳ ಜೊತೆಗೆ, ಈ ಎಲ್ಲ ಗುಣಗಳಿಗೂ ಕಾರಣವಾದ ಮೂಲಭೂತವಾದ ಅಂಶವನ್ನು, ಸತ್ಪುರುಷರಿಗೆ ಸಜ್ಜನಿಕೆಯನ್ನು ನೀಡಿದ ಅಂಶವನ್ನು ಭಾರತಾರ್ಯಮಹರ್ಷಿಗಳು ಗಮನಿಸಿದ್ದಾರೆ.

"ಅಸ್ತಿ  ಬ್ರಹ್ಮೇತಿ ಚೇದ್ವೇದ ಸಂತಮೇನಂ ತತೋ ವಿದುರಿತಿ". ಬ್ರಹ್ಮವಸ್ತುವು ಇದೆ, ಎಂಬುದನ್ನು ಅನುಭವದಿಂದ ಅರಿತವನಾದರೆ ಅವನನ್ನು ಸಂತನೆಂದು ತಿಳಿಯುತ್ತಾರೆ. ಜೀವನ ಮತ್ತು ವಿಶ್ವವಿಕಾಸಕ್ಕೆ ಕಾರಣವಾದ ಮೂಲವಸ್ತುವೇ ಬ್ರಹ್ಮ ವಸ್ತು. ಅದನ್ನು ಕಂಡು ಅನುಭವಿಸಿದ ಆವನು ಬ್ರಹ್ಮವಿದ.

"ಸತ್"  ಎಂಬ ಪದವು ಆ ಬ್ರಹ್ಮವಸ್ತುವಿಗೇ ನೇರವಾಗಿ ಅನ್ವಯಿಸುತ್ತದೆ.
"ಓಂ ತತ್, ಸತ್, ಇತಿ ನಿರ್ದೇಶಃ ಬ್ರಹ್ಮಣಃ, ತ್ರಿವಿಧಃ ಸ್ಮೃತಃ" –ಗೀತಾ.
ಓಂ, ತತ್, ಸತ್, ಎಂಬ ಮೂರು ಬ್ರಹ್ಮನಿಗೆ ಅನ್ವಯಿಸುವ ನಿರ್ದೆಶಗಳು.

" ಸದೇವ ಸೌಮ್ಯೇದಮಗ್ರ ಆಸೀತ್".  ಸೌಮ್ಯನೇ " ಸತ್"-  ವಸ್ತುವೇ ಎಲ್ಲಕ್ಕೂ ಮೊದಲಿದ್ದುದು. ಅದು ಇರುವುದು ಮಾತ್ರವಲ್ಲ, ಅದರ ಸಂಬಂಧದಿಂದಲೇ ಎಲ್ಲ ವಸ್ತುಗಳೂ ಇರುವನ್ನು ಪಡೆದವು. ಜೀವನದ ಮೂಲವಾದ ಪರಂಜ್ಯೋತಿಯೇ ಆ ಸದ್ವಸ್ತು. ಆದ್ದರಿಂದಲೇ " ಪ್ರಥಮಸುಜನಾಯ ಪುಂಸೇ"   "ಮೊದಲನೆಯ ಸುಜನನಾದ ಪುರುಷನಿಗೆ ನಮಸ್ಕಾರ."- ಎಂದು ಭಗವಂತನನ್ನು ಕೊಂಡಾಡಿರುವುದು ಅನ್ವರ್ಥಕವಾಗಿದೆ. ಆ ಸದ್ವಸ್ತುವಿನೊಂದಿಗೆ ಯಾವಾಗಲೂ ಇರುವುದೇ ಮೂಲಾರ್ಥದಲ್ಲಿ ಸತ್ಸಹವಾಸ. ಸತ್ಸಂಗತಿ. ಒಳಗೆ ಬೆಳಗುವ ಆ ಸದ್ವಸ್ತುವನ್ನು ಕಂಡು ಅನುಭವಿಸಿ ಅದರ ನೆಮ್ಮದಿ ಸೌಖ್ಯಗಳನ್ನು ಪಡೆದವರೇ ಸತ್ಪುರುಷರು.

ಜೀವನಕ್ಕೆ ಅಗತ್ಯವಾದ ಎಲ್ಲ ಉದಾತ್ತ ಗುಣಗಳೂ ಬಾಳನ್ನು ಬೆಳಗಿಸುವ ಆ ಸದ್ವಸ್ತುವಿನಿಂದಲೇ  ಅರಳುವುವು. ಆದ್ದರಿಂದಲೇ ಅವು ಸದ್ಗುಣಗಳು. ಸದ್ವಸ್ತುವಿನ ಅರಿವಿಗೆ ಸಹಾಯಕವಾಗುವ ನಡುವಳಿಕೆಗಳೂ ಸದ್ಗುಣಗಳೇ. ಆದ್ದರಿಂದಲೇ ಋಷಿಕವಿಗಳಾದ  ವ್ಯಾಸ—ವಾಲ್ಮೀಕಿಗಳು  ಚಿತ್ರಿಸಿರುವ ರಾಮ, ಕೃಷ್ಣ, ಭೀಷ್ಮ ಮೊದಲಾದವರು ಮಹಾಪುರುಷರು. ಆ ಸದ್ವಸ್ತುವನ್ನು ಅರಿತ ಆತ್ಮಗುಣಭರಿತರಾದ ಮಹಾಪುರುಷರು, ಲೌಕಿಕವಾಗಿ ಕಂಡುಬರುವ ಒಳ್ಳೆಯ ಗುಣಗಳೂ ಆ ಸದ್ಗುಣಗಳ  ಏಕದೇಶಗಳೇ. ಒಳ್ಳೆಯ ಎಂಬ ಪದವೇ "ಉಳ್" - ಎಂಬ ಪದದ ರೂಪಾಂತರ. "ಉಳ್"-  ಎಂಬ ಪದವು ಸತ್ ಎಂಬ ಪದದ ಭಾಷಾಂತರವಷ್ಟೇ. ಆದ್ದರಿಂದ ಒಳ್ಳೆಯದು ಎಂಬುದು ಸತ್ಸಂಬಂಧವನ್ನೇ ಹೇಳುತ್ತದೆ. ಶಾಂತಿ, ಸೌಖ್ಯ, ನೆಮ್ಮದಿಗಳಿಂದ ತನ್ನ ಬಾಳನ್ನೂ ತುಂಬಿಕೊಂಡು ಲೋಕವನ್ನೂ ಅಂತೆ ಬಾಳಿಸಲು ಬೇಕಾದ ಉದಾತ್ತ ಗುಣಗಳು ಅ ಸತ್ ವಸ್ತುವಿನ ಸಂಬಂಧದಿಂದ ತಾವಾಗಿಯೇ ಮೊಳೆಯುತ್ತವೆ. ಒಳಗೆ ಬೆಳಗುವ ಸೂರ್ಯದೀಪ್ತಿ, ಚಂದ್ರಿಕಾಕಾಂತಿ ತಂಪುಗಳಿಂದಕೂಡಿದ, ದೀಪರೂಪವಾದ ಸದ್ವಸ್ತುವನ್ನು ಅರಿತು, ಅದರ ಪ್ರಕಾಶದಿಂದ ತಮ್ಮ ಒಳಗತ್ತಲೆಯನ್ನು ಕಳೆದುಕೊಂಡು, ಸ್ವಯಂ ದೀಪರೂಪರಾಗಿ ಬೆಳಗುವವರು ಸತ್ಪುರುಷರು. ಅವರ ಸಹವಾಸವು ಇತರರ ಒಳೆಗತ್ತಲೆಯನ್ನೂ ಕಳೆದು, ದೀಪದಿಂದ ದೀಪ ಬೆಳಗುವಂತೆ ಇತರರನ್ನೂ  ಪ್ರಕಾಶರೂಪರನ್ನಾಗಿ ಮಾಡುತ್ತದೆ.

ತಂಗಾಳಿಯು ಹೊರಬೇಗೆಯನ್ನು ಕಳೆದು ತಂಪು ನೀಡುತ್ತದೆ. ಲೌಕಿಕ ಗುಣಗಳು ಮನಃಪ್ರೀತಿಕರವಾಗಿರುತ್ತವೆ. ಆದರೆ ಜ್ಞಾನಿಗಳು ಹೇಳುವ ಸತ್ಸಹವಾಸವು ಆತ್ಮಸೌಖ್ಯವನ್ನೆರೆದು ಜೀವನದ ಎಲ್ಲಬಗೆಯ ತಾಪವನ್ನೂ ಕಳೆಯುತ್ತದೆ. ಹೊರಗೆ ಒಳಗೆ ಎಲ್ಲೆಲ್ಲಿಯೂ ತಂಪನ್ನು ನೀಡುವ ಗುಣ ಸದ್ವಸ್ತುವಿನ ಸಹವಾಸದ್ದು. ಅದನ್ನು ಪಡೆದ ಸತ್ಪುರುಷರ ಸಹವಾಸದ ಫಲವೂ ಅದೇ.

  " ಮೂರಕ್ಕೆ ಬರುವುದಿಲ್ಲ, ಆರಕ್ಕೆ ಹೋಗುವುದಿಲ್ಲ"-  ಎಂಬ ಸಜ್ಜನರನ್ನು ಕುರಿತ ಮಾತು ಯಾವತಂಟೆಗೂ ಬರದ ಮುಗ್ಧಸ್ವಭಾವದವನು ಎಂಬ ಸಾಮಾನ್ಯಾರ್ಥಕ್ಕಿಂತಲೂ ವಿಶೇಷವಾದ ಒಂದು ಅರ್ಥವನ್ನು ಒಳಗೊಂಡಿದೆ. ಇಲ್ಲಿ ಮೂರು ಎಂದರೆ ಸತ್ವ- ರಜಸ್-ತಮಸ್ ಎಂಬ ಮೂರು ಗುಣಗಳು ಎಂದರ್ಥ. ಆರು ಎಂದರೆ ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯಗಳೆಂಬ ಅರಿಷಡ್ವರ್ಗಗಳು. ತ್ರಿಗುಣಗಳನ್ನು ಮೀರಿ ಬೆಳಗುವ ಸದ್ವಸ್ತುವಿನಲ್ಲಿಯೇ ರಮಿಸುವ ಸತ್ಪುರುಷನು " ಮೂರಕ್ಕೆ ಬರುವುದಿಲ್ಲ" ಎಂದರೆ ತ್ರಿಗುಣಗಳಿಂದಾಗುವ ವಿಕಾರಕ್ಕೆ ಒಳಗಾಗುವುದಿಲ್ಲ. ಮತ್ತೆ ತ್ರಿಗುಣಗಳಿಂದ ಬೆಳೆಯುವ ಸೃಷ್ಟಿಗೂ ಒಳಗಾಗುವುದಿಲ್ಲ-ಎಂದರ್ಥ. "ಆರಕ್ಕೆ ಹೋಗುವುದಿಲ್ಲ" ಎಂದರೆ ಒಳಶತ್ರುಗಳಾದ ಕಾಮಕ್ರೋಧಾದಿಗಳಿಗೆ ಗುರಿಯಾಗುವುದಿಲ್ಲ. ಅವುಗಳ ತಂಟೆಗೆ ಹೋಗುವುದಿಲ್ಲವೆಂದರ್ಥ. ಅರಿಪಡ್ವರ್ಗಗಳನ್ನು ಗೆದ್ದು ತ್ರಿಗುಣಗಳನ್ನೂ ಮೀರಿರುವ, ಸದ್ವಸ್ತುವಿನಲ್ಲಿ ಒಂದಾಗಿರುವ ಸ್ವಭಾವ ಸತ್ಪುರುಷರದು ಎಂಬ ಅರ್ಥವನ್ನು ಈ ಮಾತು ಒಳಗೊಂಡಿದೆ.

ಜ್ಞಾನಿಗಳ ಒಳದೃಷ್ಟಿಗೆ ಗೋಚರವಾದ ಸದ್ವಸ್ತುವನ್ನು ಕಂಡು ಅನುಭವಿಸಿ, ಸ್ವಯಂ ಸತ್ಪುರುಷರಾಗಿ, ಲೋಕಕ್ಕೆ ಮಂಗಳವನ್ನುಂಟುಮಾಡುವ ಶಂಕರ ಎಂಬ ಅನ್ವರ್ಥವಾದ ಅಭಿಧಾನವುಳ್ಳ ಶಂಕರಭಗವತ್ಪಾದರು ತಮ್ಮ ಭಜಗೋವಿಂದ ಸ್ತೋತ್ರದಲ್ಲಿ ಸತ್ಸಹವಾಸದ ಫಲವನ್ನು ಹೀಗೆ ಹೇಳುತ್ತಾರೆ.
"ಶ್ರೀಜಗತಿ  ಸಜ್ಜನ ಸಂಗತಿರೇಕಾ ಭವತಿ ಭವಾರ್ಣವ ತರಣೇ  ನೌಕಾ °
"ಮೂರು ಲೋಕದಲ್ಲಿಯೂ ಸಜ್ಜನರ ಸಹವಾಸವೊಂದು ತಾನೇ, ಹುಟ್ಟು-ಸಾವುಗಳ ನಿರಂತರ ಪ್ರವಾಹಭರಿತವಾದ ಭವಸಮುದ್ರವನ್ನು ದಾಟಿಸುವ ಹಡಗಾದೀತು " ಈ ಮಾತು ಕೇವಲ ಲೌಕಿಕ ಗುಣಭೂಷಿತರಿಗೆ ಸಲ್ಲದು." ತಮಸಃ ಪರಮರ್ಕವರ್ಣಂ" ಎಂಬಂತೆ ತಮಸ್ಸಿನ ಆಚೆಗೆ ಬೆಳಗುವ ಆದಿತ್ಯದೀಪ್ತಿಯುಳ್ಳ ಜ್ಯೋತಿಯನ್ನುಕಂಡುಂಡ, ಆದ್ದರಿಂದಲೇ ಜೀವನದ ದಡಗಂಡ ಅನುಭವಿಗಳಾದ ಸತ್ಪುರುಷರಿಗೆ ಸಲ್ಲುವ ಮಾತಿದು. ಅವರೇ ಭವಾರ್ಣವವನ್ನು ದಾಟಿದವರು. ಹಾಗೆ ದಾಟಿದವರು ತಾನೇ ಮತ್ತೊಬ್ಬರನ್ನು ದಾಟಿಸಬಲ್ಲವರು. ತಾನೇ ದಾಟಲಾರದವನು ಮತ್ತೊಬ್ಬರನ್ನು ಹೇಗೆ ದಾಟಿಸಿಯಾನು?  ಆದ್ದರಿಂದ ಜೀವನ ಪ್ರವಾಹದ ದಡಮುಟ್ಟಿ, ನೆಮ್ಮದಿ ತುಂಬಿ ಬಾಳಲು ಸಜ್ಜನರ ಸಹವಾಸವೊಂದೇ ಸೂಕ್ತವಾದ ನೌಕೆ.
ಸಜ್ಜನ ಸಂಗತಿಯು ಹೇಗೆ ಭವಾರ್ಣವವನ್ನು ದಾಟಿಸುತ್ತದೆ- ಎಂಬ ಅಂಶವನ್ನೂ ಅವರು ಸ್ಪಷ್ಟವಾಗಿ ತಿಳಿಸಿದ್ದಾರೆ.

ಸತ್ಸಂಗತ್ವೇ ನಿಸ್ಸಂಗತ್ವಂ ನಿಸ್ಸಂಗತ್ವೇ ನಿರ್ಮೋಹತ್ವಂ|
ನಿರ್ಮೋಹತ್ವೇ ನಿಶ್ಚಲತತ್ವಂ, ನಿಶ್ಚಲತತ್ವೇ ಜೀವನ್ಮುಕ್ತಿಃ||

ಸಂತರ ಸಂಗವು, ನಿಸ್ಸಂಗತ್ವವನ್ನುಂಟುಮಾಡುತ್ತದೆ. ನಿಸ್ಸಂಗಭಾವವು ಮೋಹವನ್ನು ಕಳೆಯುತ್ತದೆ. ಮೋಹಕಳೆದರೆ ನಿಶ್ಚಲವಾದ ತತ್ತ್ವಲಾಭವಾಗುತ್ತದೆ. ನಿಶ್ಚಲತತ್ತ್ವದ ಲಾಭವಾದರೆ ಜೀವನದ ಕಟ್ಟು ಕಳೆದು ಮುಕ್ತಿ ದೊರಕುತ್ತದೆ. ಮುಖ್ಯಾರ್ಥದಲ್ಲಿ ಸದ್ವಸ್ತುವಿನ ಸಂಗವೇ ಸತ್ಸಂಗ. ಅಂತೆಯೇ ನೇರವಾಗಿಯೇ ಆ ಸದ್ವಸ್ತುವಿನ ಸಂಗವನ್ನು ಪಡೆದ ಮಹಾತ್ಮರೂ ಸದ್ರೂಪರೇ ಆಗಿರುವುದರಿಂದ ಅವರ ಸಹವಾಸವೂ ಸತ್ಸಂಗವೇ. ಅಂತಹ ಸ್ವಭಾವವುಳ್ಳ ಸತ್ಪುರುಷರು ತಮ್ಮೊಳಗೆ ಬೆಳಗುವ ಸದ್ವಸ್ತುವಿನಲ್ಲಿ ಜೊತೆಗೂಡಿ, ಲೌಕಿಕ ವಸ್ತುಗಳಿಗೆ ಅಂಟರು. ನೀರಿನೊಳೆಗಿದ್ದರೂ ಕಮಲದೆಲೆಯು ನೀರನ್ನು ಅಂಟಿಸಿಕೊಳ್ಳದಂತೆ, ಲೋಕದೊಳಗಿದ್ದರೂ ಲೋಕವು ಅವರನ್ನು ಅಂಟದು., ಈ ಸತ್ಪುರುಪರ ಸಹವಾಸವು ಇತರರಿಗೂ ಲೌಕಿಕವಸ್ತುಗಳೇ ಜೀವನದ ಸಾರಸರ್ವಸ್ವವೆಲ್ಲವೆಂದೂ ಅದಕ್ಕಿಂತಲೂ ಮಿಗಿಲಾದುದುಂಟೆಂಬ ಅರಿವನ್ನು ಮೂಡಿಸಿ, ಲೋಕಾಸಕ್ತಿಯನ್ನು ಕ್ರಮವಾಗಿ ತಗ್ಗಿಸುವುದು. ಹೀಗೆ ಕ್ರಮವಾಗಿ ಸತ್ಸಹವಾಸದಿಂದ  ನಿಸ್ಸಂಗಭಾವವು ಮೊಳೆಯುವುದು. ಇದು ಮೊದಲನೆಯ ಹೆಜ್ಜೆ. ನಿಸ್ಸಂಗಭಾವವು ಮೂಡಿದಾಗ ಲೋಕವಸ್ತುಗಳ ಗುಣದೋಷಗಳೆರಡರ ಅರಿವೂ ಮೂಡಿ, ಅದರ ಸೆಳೆತ ತಗ್ಗುವುದು. ಆಗ ಚಪಲತೆ, ಚಾಂಚಲ್ಯಗಳು ಇಲ್ಲವಾಗುವುವು. ಅದೇ ನಿರ್ಮೋಹತ್ವ. ಮನಸ್ಸನ್ನು ಒಳಗೆ ಹರಿಸಿದೆಂತೆಲ್ಲಾ ಹೊರ ಸೆಳೆತ ತಪ್ಪುವುದು. ಇದು ಎರಡನೆಯ ಹಂತ.ಈ ಸೆಳೆತವಿಲ್ಲದಿದ್ದಾಗ, ಚಿತ್ತವೃತ್ತಿ ನಿರೋಧಿಸಲ್ಪಟ್ಟಾಗ, ಒಳಯೋಗವೇರ್ಪಡುವುದು. ಮನಸ್ಸಿನ ಹರಿವೆಗೆ ತಡೆಬಿದ್ದಾಗ ಚಂಚಲತೆ ಕಳೆದು ಸ್ಥಿರಚಿತ್ತತೆಯುಂಟಾಗುವುದು. ಹೀಗೆ ಸಮಚಿತ್ತತೆ, ಒಳಯೋಗಗಳೇರ್ಪಟ್ಟಾಗ, ಅಚಲವಾದ ತತ್ತ್ವವು ಗೋಚರಿಸುವುದು. ಈ ತತ್ತ್ವವು ಹಿಂದೆ ಹೇಳಿದ  "ಸತ್"  ವಸ್ತುವೇ. ಅದರೊಡನೆ ಬೆರೆತಾಗ " ನಿವಾತದೀಪಾ ಇವ ನಿಶ್ಚಲಾಂಗಾಃ"-ಎಂಬಂತೆ ನಿಶ್ಚಲಭಾವವೇರ್ಪಡುವುದು. ಹಾಗೆ ಏರ್ಪಟ್ಟಾಗ ತತ್ತ್ವದರ್ಶಿಗಳಾಗುವರು. ಆ ನಿಶ್ಚಲತತ್ತ್ವದರ್ಶನವು ಜೀವಕ್ಕೆ ಶಾಂತಿ ಸಮೃದ್ಧವಾದ ಅಮೃತವನ್ನು ನೀಡಿ, ಮುಕ್ತಿದಾಯಕವಾಗುವುದು. ಅದರಿಂದಲೇ ಜೀವದ ಕಟ್ಟು ಕಳಚುವುದು. ಅದೇ ಜೀವನ್ಮುಕ್ತಿ. ಜೀವನದ ಮಿಗಿಲಾದ ಶ್ರೇಯಸ್ಸು, ಇದೇ ಸತ್ಸಹವಾಸದ ಫಲ. ಒಳಗಿನ ಸತ್ಸಂಬಂಧಪಡೆದ ಸಜ್ಜನರ ಸಹವಾಸವು. ಆ ಸತ್ಸಂಗದಲ್ಲಿಯೇ ಇತರರನ್ನೂ ನಿಲ್ಲಿಸುವ ಹಿರಿಮೆಯುಳ್ಳದ್ದು.
"ಸತ್" ರೂಪವಾದ ವಸ್ತುವನ್ನು ತಾನೂ ಕಂಡು, ಅದರಿಂದ ಅರಳಿದ ಸದ್ಗುಣಗಳಿಂದ ಭರಿತನಾಗಿ, ಸತ್ಸಹವಾಸದ ಸವಿ ನೀಡಿದ ಶ್ರೀರಂಗಮಹಾಗುರುವಿತ್ತ ಸ್ಫೂರ್ತಿಯೇ ಈ ಬರಹದ ತಿರುಳು. ಸದ್ವಸ್ತುವನ್ನು ಕಂಡು ಲೋಕಕ್ಕೆ ಅದರ ಸವಿಯುಣಿಸಲು ತಮ್ಮ ಬಾಳನ್ನು ಸವೆಸಿದ ಶ್ರೀಶಂಕರಭಗವತ್ಪಾದರ ಜಯಂತೀ ಮಹೋತ್ಸವದ ಸಂದರ್ಭವಿದು. ಸತ್ಯದ ಉತ್ಕರ್ಷವೇ ಜಯ. ಅದರ ನೆನಪೇ ಪುಣ್ಯ. ಅಂತಹ ಜಯವನ್ನು ಸಾರಿ, ಪುಣ್ಯವನ್ನು ಬೀರುವ ಮಹಾಪರ್ವವೇ ಜಯಂತೀ.  ಲೋಕ ಶಂಕರರಾದ, ಶ್ರೀಶಂಕರಭಗವತ್ಪಾದರ ಜಯಂತೀಮಹೋತ್ಸವದ ಸವಿಗಾಣಿಕೆಯಾಗಿ ಈ ಕಿರುಬರಹವನ್ನು, ಹೃದಯಾಂಗಣದಲ್ಲಿ ಬೆಳಗುವ ಜ್ಞಾನಜ್ಯೋತಿಗೆ, ಸದ್ವಸ್ತುವಿಗೆ ಅರ್ಪಿಸುತ್ತೇನೆ.

ಸೂಚನೆ : ಈ ಲೇಖನವು ಶ್ರೀಮಂದಿರದಿಂದ ಪ್ರಕಾಶಿತವಾಗುವ ಆರ್ಯಸಂಸ್ಕೃತಿ ಮಾಸ ಪತ್ರಿಕೆಯ ಮೇ 1981 ಸಂಪುಟ :3 ಸಂಚಿಕೆ:7 ರಲ್ಲಿ ಪ್ರಕಟವಾಗಿದೆ.  

Saturday, December 19, 2020

ಯಮ - ಅಪರಿಗ್ರಹ (Yama - Aparigraha)

ಲೇಖಕರು: ಶ್ರೀ ಜಿ ನಾಗರಾಜ
(ಪ್ರತಿಕ್ರಿಯಿಸಿರಿ lekhana@ayvm.in)


ಪಾತಂಜಲ ಯೋಗಸೂತ್ರದಲ್ಲಿ ಹೇಳಿರುವ ಕೊನೆಯ ಅಂಗವೇ ಅಪರಿಗ್ರಹ. ಪರಿಗ್ರಹ ಎಂದರೆ ದಾನವನ್ನು ಸ್ವೀಕರಿಸುವುದು ಮತ್ತು ಇದರ ನಿಷೇಧವೇ ಅಪರಿಗ್ರಹ. ದಾನವನ್ನು ಸ್ವೀಕರಿಸದೇ ಇರುವುದಷ್ಟೇ ಅಲ್ಲದೇ, ಸ್ವೀಕರಿಸಿದುದರಿಂದ ಉಂಟಾಗುವ ಪದಾರ್ಥ ಸಂಗ್ರಹ ಮತ್ತು ಅದರಿಂದ ಹೆಚ್ಚುವ ಚಿತ್ತವೃತ್ತಿಗಳನ್ನು ತಡೆಯುವುದೇ ಅಪರಿಗ್ರಹದ ಮರ್ಮವಾಗಿದೆ. ಪ್ರತಿ ಪದಾರ್ಥಕ್ಕೂ ಉಪಯೋಗವುಂಟು ಮತ್ತು ಪದಾರ್ಥಗಳು ನಮ್ಮಲ್ಲಿ ಬಂದು ಸೇರಿದರೆ ಅದರ ಸಂರಕ್ಷಣೆ ಮತ್ತು ಉಪಯೋಗದ ಬಗ್ಗೆ ಮನಸ್ಸನ್ನು ಹರಿಸಬೇಕಾಗುತ್ತದೆ ಮತ್ತು ಇದರಿಂದಾಗಿ ಚಿತ್ತವೃತ್ತಿಗಳು ಜಾಸ್ತಿಯಾಗುತ್ತವೆ. ಪದಾರ್ಥ ಸಂಗ್ರಹ ಅವಶ್ಯಕತೆಯನ್ನು ಮೀರಿದಾಗ, ಅದರಿಂದ ಸುಖ ದೊರೆಯುವ ಬದಲು ಮನಸ್ಸಿಗೆ ಹೊರೆಯೇ ಆಗುತ್ತದೆ.

ಧನದಾಹವೇ ತುಳುಕಾಡುತ್ತಿರುವ ಇಂದಿನ ವಿದ್ಯಮಾನದಲ್ಲಿ ಅಪರಿಗ್ರಹವು ಪ್ರಸ್ತುತವೇ ಎನ್ನುವ ಪ್ರಶ್ನೆ ಬರಬಹುದು. ಆದರೆ ಜಪಾನ್ ದೇಶದಲ್ಲಿ ಅಪರಿಗ್ರಹದ ಅನುಷ್ಠಾನದಿಂದ ಉಂಟಾಗಿರುವ ಅಪರಿಮಿತ ಲಾಭವನ್ನು ಗಮನಿಸಿದರೆ ಅತ್ಯಾಶ್ಚರ್ಯವಾಗುತ್ತದೆ. ಜಪಾನ್ ದೇಶದ ಶಿಂಟೋಯಿಸಮ್ ನಲ್ಲಿ ಕನಿಷ್ಠ ಪದಾರ್ಥ ಸಂಗ್ರಹವು ಒಂದು ಮುಖ್ಯವಾದ ಅಂಗ. ಈ ಅಭ್ಯಾಸವು ಅಲ್ಲಿನ ಸಂಸ್ಕೃತಿಯಲ್ಲಿ ಯಾವ ಮಟ್ಟಿಗೆ ರೂಢಿಯಲ್ಲಿದೆ ಎಂದರೆ, ಜನರು ಮನೆಗೆ ಒಂದು ಹೊಸ ಪದಾರ್ಥ ತರಬೇಕಾದರೆ, ಯಾವ ಹಳೆಯ ಪದಾರ್ಥ ಹೊರಗೆ ಹೋಗಬೇಕೆಂದು ನಿಶ್ಚಯಿಸಿ ನಂತರ ಹೊಸ ಪದಾರ್ಥವನ್ನು ಕೊಳ್ಳುತ್ತಾರೆ. ಅಲ್ಲಿನ ವಾಹನತಯಾರಿಕಾ ಸಂಸ್ಥೆಯಾದ ಟೊಯೋಟ, ಶಿಂಟೋಯಿಸಮ್ ನಿಂದ ಕೈಗಾರಿಕೆಗೆ ಅಳವಡಿಸಿಕೊಂಡಿರುವ ಹಲವು ಅಂಶಗಳಲ್ಲಿ ಕನಿಷ್ಠ ಪದಾರ್ಥ ಸಂಗ್ರಹವೂ ಒಂದು. ಇದು ಲೀನ್ ಮ್ಯಾನುಫ್ಯಾಕ್ಚರಿಂಗ್(Lean manufacturing) ಮತ್ತು ಅದರಲ್ಲಿ ಶೂನ್ಯ ದಾಸ್ತಾನು (Zero inventory) ಎನ್ನುವ ಹೆಸರಿನಿಂದ ಗುರುತಿಸಲ್ಪಟ್ಟಿದೆ. ಈ ವಿಧಾನದಿಂದ ಟೊಯೋಟ, ಉತ್ಪಾದನಾ ವೆಚ್ಚವನ್ನು ಇಳಿಸಿ, ಕಡಿಮೆ ದರದಲ್ಲಿ ಉಚ್ಚ ಗುಣಮಟ್ಟದ ವಾಹನಗಳು ಗ್ರಾಹಕರಿಗೆ ದೊರೆಯುವಂತೆ ಮಾಡಿ ಜಾಗತಿಕ ವಾಹನ ಮಾರುಕಟ್ಟೆಯಲ್ಲಿ ನಾಯಕತ್ವವನ್ನು ಸಾಧಿಸಿತು. ಇಂದು ಜಾಗತಿಕ ಮಟ್ಟದಲ್ಲಿ ಅನೇಕ ಉತ್ಪಾದನಾ ಕ್ಷೇತ್ರಗಳು ಲೀನ್ ವಿಧಾನಗಳನ್ನು ಅಳವಡಿಸಿಕೊಳ್ಳುತ್ತಿವೆ. ಹೀಗೆ ಅಪರಿಗ್ರಹದ ಒಂದು ತತ್ತ್ವವನ್ನು ವ್ಯಾಪಕವಾಗಿ ಅಳವಡಿಸಿಕೊಂಡರೆ ಎಂತಹ ಫಲಿತಾಂಶವನ್ನು ಸಾಧಿಸಬಹುದೆಂದು ಟೊಯೋಟ ತೋರಿಸಿಕೊಟ್ಟಿದೆ.

ಅಪರಿಗ್ರಹ ಯಾರಲ್ಲಿ ಪ್ರತಿಷ್ಠಿತವಾಗಿದೆಯೋ ಅವರಿಗೆ ಪೂರ್ವಜನ್ಮ ಸ್ಮರಣೆಯುಂಟಾಗುತ್ತದೆ ಮತ್ತು ಜನ್ಮಾಂತರದ ಕಾರಣಗಳೂ ತಿಳಿಯುತ್ತವೆ ಎಂದು ಯೋಗಸೂತ್ರವು ಹೇಳುತ್ತದೆ. ಯೋಗಸೂತ್ರವು ಯಮದ ಐದೂ ಅಂಗಗಳನ್ನು ಜಾತಿ, ಕಾಲ, ದೇಶ, ಸಮಯಗಳಿಂದ ಪರಿಮಿತವಾಗದ ಸಾರ್ವಭೌಮ ವ್ರತಗಳೆಂದು ಪರಿಗಣಿಸಿದೆ.

ಸೂಚನೆ : 19/12/2020 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ .  

ಶ್ರೀರಾಮನಲ್ಲಿನ “ವೀರ” ರಸ (Sriramanallina “Veera” Rasa)

ಡಾ.  ಎನ್. ಎಸ್. ಸುರೇಶ್
(ಪ್ರತಿಕ್ರಿಯಿಸಿರಿ lekhana@ayvm.in)

  

ವೀರರಸಕ್ಕೆ ಉತ್ಸಾಹವೇ ಸ್ಥಾಯಿಭಾವ. ಲಕ್ಷ್ಮಿಯು ಉತ್ಸಾಹಸಂಪನ್ನನಲ್ಲವೇ ಹೊಂದುವುದು? ವಾಲ್ಮೀಕಿಮಹರ್ಷಿಗಳು ಧೀರೋದಾತ್ತನಾಯಕನಾದ ಶ್ರೀರಾಮನಲ್ಲಿ ಈ ರಸವನ್ನು ಬಹಳ ಪ್ರಧಾನವಾಗಿ ನಿರೂಪಿಸಿದ್ದಾರೆ. ವಿಶ್ವಾಮಿತ್ರರ ಯಜ್ಞರಕ್ಷಣೆ, ಅತಿರಥಮಹಾರಥರೆಲ್ಲರೂ ಪ್ರಯತ್ನಿಸಿ, ಮಿಸುಕಾಡಿಸಲೂ ಆಗದ, ಶಿವಧನುಸ್ಸನ್ನು ಮುರಿದಸಂದರ್ಭ, ಪರಶುರಾಮರ ಅಭಿಯೋಗ, ವಿರಾಧವಧೆ, ಅಸಹಾಯಶೂರನಾಗಿ ಹದಿನಾಲ್ಕುಸಾವಿರರಾಕ್ಷಸರನ್ನು ಜನಸ್ಥಾನದಲ್ಲಿ ಸಂಹರಿಸಿದ್ದು, ಕಬಂಧನ ಬಾಹುಚ್ಛೇದನ, ಸುಗ್ರೀವನಿಗೆ ತನ್ನ ಸಾಮರ್ಥ್ಯದಲ್ಲಿ ನಂಬಿಕೆ ಹುಟ್ಟಿಸಲು ಮಾಡಿದ ಸಪ್ತಸಾಲವೃಕ್ಷಗಳ ಭಂಜನ, ದುಂದುಭಿರಾಕ್ಷಸನ ಅಸ್ಥಿಪಂಜರವನ್ನು ಅಂಗುಷ್ಠದಿಂದ ಯೋಜನದೂರ ಹಾರಿಸಿದ್ದು, ವಾಲಿವಧೆ, ರಾವಣಕುಂಭಕರ್ಣಾದಿರಾಕ್ಷಸರ ಸಂಹಾರ – ಈ ಎಲ್ಲವೂ ಶ್ರೀರಾಮಚಂದ್ರನಲ್ಲಿನ ವೀರರಸಕ್ಕೆ ಸಾಕ್ಷಿಗಳು. 

ಸಾಮಾನ್ಯವಾಗಿ ಶೌರ್ಯವಿದ್ದೆಡೆ ಆತ್ಮಪ್ರಶಂಸೆಯೂ ಇರುತ್ತದೆ. ಆದರೆ ಆದರ್ಶಪುರುಷನಾದ ಶ್ರೀರಾಮನಲ್ಲಿ ಅದಿಲ್ಲದಿರುವುದು ಅವನನ್ನು ಮತ್ತಷ್ಟು ದೊಡ್ಡವನನ್ನಾಗಿಸಿದೆ. ಆದ್ದರಿಂದಲೇ ನಾರದರು ಶ್ರೀರಾಮನನ್ನು 'ಅವಿಕತ್ಥನಃ' ಎಂದು ಬಣ್ಣಿಸಿದ್ದಾರೆ. ಅಂದ ಮಾತ್ರಕ್ಕೆ ತನ್ನ ಸಾಮರ್ಥ್ಯವನ್ನು ಹೇಳಿಕೊಳ್ಳಲೇ ಬಾರದಂತೇನೂ ಅಲ್ಲ. ಶ್ರೀರಾಮರಾವಣರ ಯುದ್ಧದ ಸಂದರ್ಭದಲ್ಲಿ, ರಾವಣನ ಮೂಲಬಲವನ್ನು ಕಂಡು, ಕಪಿಸೇನೆಯು ಓಡಿಹೋಗುತ್ತಿರುವಾಗ, ಶ್ರೀರಾಮನು ಅವರನ್ನು ತಡೆದು, 'ಇಂದು ರಾಮನ ರಾಮತ್ವವನ್ನು ಕಪಿಸೇನಾನಿಗಳು ನೋಡಲಿ' ಎಂದು ಹೇಳಿಕೊಳ್ಳುತ್ತಾನೆ. ಹಾಗೆಯೇ, ರಾವಣನನ್ನು ಯುದ್ಧದಿಂದ ಹಿಮ್ಮೆಟ್ಟಿಸಿದಾಗ, 'ಈ ಸಾಮರ್ಥ್ಯವು ನನಗೆ ಅಥವಾ ಈಶ್ವರನಿಗೆ ಮಾತ್ರ' ಎಂಬ ಮಾತನ್ನು ಆಡುತ್ತಾನೆ. 

ಶತ್ರುವು ಮುಂ‍ದಿರುವಾಗ ಪ್ರತಿದ್ವಂದ್ವಿಯ ಮಾತು ಆತ್ಮಪ್ರಶಂಸೆಯಾಗದೆ, ಅವನ ಆತ್ಮಸ್ಥೈರ್ಯವನ್ನು ಪ್ರಕಾಶಪಡಿಸುತ್ತದೆ. 'ಕೆಲಸಕ್ಕಾಗಿ ಸಂದರ್ಶನಕ್ಕೆ ಹೋದಾಗ, ತನ್ನ ಸಾಮರ್ಥ್ಯವನ್ನು ಹೇಳಿಕೊಳ್ಳುವ ಸಂದರ್ಭಬಂದಾಗ ಅಲ್ಲಿ ವಿನಯ ಸಲ್ಲ. ಅಲ್ಲಿ ತನ್ನ ಸಾಮರ್ಥ್ಯವನ್ನು ಹೇಳಿಕೊಳ್ಳಬೇಕು' ಎಂಬ ಶ್ರೀರಂಗಮಹಾಗುರುವಿನ ಹಿತನುಡಿ ಇಲ್ಲಿ ಸ್ಮರಣಾರ್ಹ. ಶ್ರೀರಾಮನಲ್ಲಷ್ಟೇ ಅಲ್ಲದೇ ಶ್ರೀರಾಮನ ನಾಮಸ್ಮರಣೆಗೂ, ಶ್ರೀರಾಮಬಾಣಕ್ಕೂ ಇದೇ ರೀತಿಯಾದ ಶಕ್ತಿ ಇದೆ. ಇಂದ್ರಜಿತ್ತನ್ನು ಸಂಹರಿಸಲು, ಲಕ್ಷ್ಮಣನು ತನ್ನ ಶರದಲ್ಲಿ ಅಭಿಮಂತ್ರಿಸಿದ್ದು ಶ್ರೀರಾಮನ ಪೌರುಷವನ್ನೇ. 'ಶ್ರೀರಾಮನು ಧರ್ಮಾತ್ಮನಾಗಿರುವುದರಿಂದ, ಸತ್ಯಸಂಧನಾಗಿರುವುದರಿಂದ, ಪೌರುಷದಲ್ಲಿ ತನಗೆ ಸರಿಸಾಟಿಯಿಲ್ಲದಿರುವುದರಿಂದ ಎಲೈ ಬಾಣವೇ ಈ ರಾವಣಿಯನ್ನು ಸಂಹರಿಸು, ಎಂದು ಹೇಳಿ ಬಾಣಪ್ರಯೋಗವನ್ನು ಮಾಡುತ್ತಾನೆ. ಈ ಶ್ಲೋಕವು 'ರಾಮಸಾಯಕಮಹಾಮಂತ್ರ'ವೆಂದೇ ಪ್ರಸಿದ್ದಿ. 

ಶೌರ್ಯವು ಯಾವಾಗಲೂ ದಯೆಯಿಂದಲೇ ಶೋಭಿಸುತ್ತದೆ. ವಿಭೀಷಣನನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳಬಹುದೇ ಎಂಬ ಜಿಜ್ಞಾಸೆ ಬಂದಾಗ 'ವಿಭೀಷಣನೇ ಬರಲಿ ಅಥವಾ ಸ್ವಯಂ ರಾವಣನೇ ಬರಲಿ, ಅವನಿಗೆ ಅಭಯವುಂಟು, ಒಮ್ಮೆ ನನ್ನನ್ನಾಶ್ರಯಿಸಿದ ಎಲ್ಲಾ ಭೂತಗಳಿಗೂ ಅಭಯವುಂಟು. ಇದು ನನ್ನ ವ್ರತ' ಎಂಬುದಾಗಿ ಘೋಷಿಸುತ್ತಾನೆ ಶ್ರೀರಾಮ. ಇಂತಹ ಶ್ರೀರಾಮನನ್ನಲ್ಲವೇ ಶ್ರೀಕೃಷ್ಣನು ಭಗವದ್ಗೀತೆಯಲ್ಲಿ 'ನಾನು ಧನುರ್ಧಾರಿಗಳಲ್ಲಿ ಶ್ರೀರಾಮನಾಗಿದ್ದೇನೆ' ಎಂದು ಹೇಳಿಕೊಳ್ಳುವುದು. ಶ್ರೀರಾಮನಿಗೆ ನಮೋ ನಮಃ.

ಸೂಚನೆ: 13/06/2020 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.  

Friday, December 18, 2020

சாஸ்திரங்கள் நமக்கு ஏன் தேவை? (Shastirangal namakku en tevai?)

மூலம்: சுமுகா ஹெப்பார்
தமிழாக்கம்: ஜானகி
மின்னஞ்சல் : (lekhana@ayvm.in) 


  
     
பரந்து, விரிந்து ஆழ்ந்த  பெருங் கடல். அதன்மீது பயணிகள் நிறைந்த அழகான ஒரு படகு கரையை நோக்கி அலைகளின் ஏற்றத்தாழ்விற்கு ஏற்ப அசைந்தாடிய படி முன்னோக்கி சென்று கொண்டிருந்தது. திடீரென கடலின் சீற்றம் அதிகரிக்கத்தொடங்கியது. நிதானமாக இருந்த அலைகளின் ஆரவாரம் அதிகமாயிற்று. புயலின் அடையாளங்கள் காணத் தொடங்கின. இதனால் பயணிகளிடம்  பதட்டம் கண்டு ஒருவித பீதி சூழ்ந்தது. இதை அறிந்து படகோட்டிகள் அவர்களுக்கு தைரியமளித்து "யாரும் பயப்படத் தேவையில்லை. நாம் கூறும் விதிமுறைகளை     கடைபிடித்து அவரவர்களின் இருக்கையில் அமர்ந்தால் நீங்கள் பாதுகாப்பாக கரை சேரலாம்" என சமாதானம் கூறினார்கள்.

இவ்வாறு விவரமாக கூறிய பின்பும் சில பயணிகள் படகோட்டிகளின் உத்தரவை மீறி நடந்ததால் இயற்கையின் சீற்றத்திற்கு ஆட்பட்டு கடலில் அடித்து செல்லப் பட்டனர். ஆனால் படகோட்டியின் கட்டளைக்கு இணங்கி   ஒரு சிறுவன் மட்டும் நிம்மதியாக தன் இருக்கையில் தைரியமாக அமர்ந்திருந்தது. பாதுகாப்பாக கரை சேர்ந்த பின் ஒரு பயணி அச்சிறுவனிடம்ஆச்சரியமுடன் வினவினான்."நீ எவ்வாறுஅவ்வளவு தைரியமாக இருந்தாய்? உனக்கு பயமாகவில்லையா?" அதற்கு அச்சிறுவன் "படகோட்டி என் தந்தை, அவர் பாதுகாப்பாக என்னை கரை சேர்ப்பார் எனும் முழு நம்பிக்கை எனக்கிருந்ததால் எந்தவித பயமும் இல்லை" என்றான்.

வாழ்க்கையில் படகோட்டியின் கட்டளைகளை போன்ற பல கட்டுப்பாடுகளை நாம் சந்திக்கிறோம். உண்மையே பேசு, பொய் உரைக்காதே முதலிய விதிமுறைகளை சாஸ்திரங்கள் நமக்கு கூறுகின்றன. .இது எந்த பயணத்தை குறிக்கிறது?  இதன் பொருள் என்ன?.இந்த நம் வாழ்க்கையே பயணம், அதில் நாம் பயணிகள். ஸம்சாரம் எனும் பயங்கர கடலை கடந்து பிறப்பு, இறப்பிலிருந்து விடுபட்டு வீடு பேறு அடைவதே நாம் சேர வேண்டிய கரை. நம் பாரதத்தின் மகரிஷிகளே தேர்ச்சி பெற்ற படகோட்டிகள். அவர்கள் தர்மம் மற்றும் மோட்சத்தை பற்றி நன்கு அறிந்தவர்கள். காமம், க்ரோதம் லோபம்,மோகம்,மதம்,மாத்சர்யம் முதலிய ஆறு விதமான அலைகளின் நடுவே நம்மை நிலையாக தர்மத்தில் நிலை நிறுத்தும் விதிமுறைகளே சாஸ்திரங்கள் எனப்படும். அப்பதமே கூறுவது--"சாஸநாத் த்ராணநாத் சைவ சாஸ்த்ரமித்யபிதீயதே" என்றால் எந்த விதிமுறைக்கு  உட்பட்டால் நாம் காக்கப்படுவோமோ அதுவே சாஸ்திரம். படகோட்டியின் கட்டளை போன்று சான்றோரின்  நல்மொழி. மகரிஷிகளின் சாஸ்திரத்தில் சிறுவனை போன்று முழு நம்பிக்கை வைத்து நம் வாழ்க்கையை நடத்தினால் நாமும் பத்திரமாக கரை சேரலாம். இல்லையேல் இயற்கையின் வேகத்தில் சிக்கி வழி தவறுவது உறுதி. படைத்தல், காத்தல், அழித்தல் என்பது எதுவரை உள்ளதோ அதுவரை ச்ருஷ்டி வித்தையின் ரகசியத்தை உட்கொண்ட வேத சாஸ்திரங்களும் நித்யமானவை எனும் ஸ்ரீ ரங்கமஹாகுருவின்  கூற்றை நினைவு கூறலாம். மகரிஷிகள் வழிகாட்டிய சாஸ்திரத்தை அனுசரித்த வாழ்க்கை முறை நம்முடையதாகட்டும் என நிச்சயித்து அவ்வாறே வாழ்வோமாக.

குறிப்பு: இக்கட்டுரை யின் கன்னட மூலம் AYVM blogs ல் காணலாம்.




Tuesday, December 15, 2020

Is there a Place for Compassion in a War?

Kannada Article by: Sumukha Hebbar

English Rendering by M R Bhashyam

Respond to (lekhana@ayvm.in)


 

The time to kill the enemy has arrived. The gallant soldier says "The arrow that I am going to launch presently is going to separate life from you. Offer prayers to your personal God". The arrow fulfills its destiny and pushes the enemy into the abyss of death. It is not clear whether the uttered words were because of supreme self-confidence or due to great vanity. These types of incidence appear in Mahaa Bhaarata and other classics.

A thorn is buried into the sole of our foot. We remove the thorn. If gangrene attacks we cut the toe. If it spreads to the feet, the entire feet is cut off to prevent the spread of the malady to the rest of the body. In a similar way, if non-righteous actions, adharma, are not nipped in the bud, it will engulf the entire body, mind, speech and spirit and makes the person evil. If that wicked person becomes a king, one can imagine the fate of the kingdom and its subjects. Where is the place for dharma (righteousness) in that kingdom?

In the olden days, wars were waged principally to establish dharma, in addition to expanding the kingdom or to display valor or to increase the state's wealth. A righteous emperor would declare war against a demonic king. It is very difficult to correct a person who has vile filled in his entire body. If someone is intent on performing heinous acts through all  his senses-physical, speech and mind - let that person be purified by death and at-least be noble in his next birth was the intent of the Knowledgeable, Jnaanis.

"If the thorns declare 'We have surrendered to you. Let us serve you through your feet' then, it is only perilous to the leg. Hence to protect dharma, it is necessary to eradicate evil" - Shri Shriranga Mahaguru used to say.  Thus killing is necessary.

What is desired just before death leads to the path of the next birth. Hence before the enemy is eliminated, it is one of the characteristics of heroes to warn "you will be killed by this arrow" and give time to pray to his own deity.  It is one of the rules of war.  Similarly "those who are fearful, those without arms or those who surrender should not be killed" are other aspects of dhaarmic war.

The experts in archery knew the technique of making life depart in such a way that death was not painful and at the same time lead to a future more noble life. Hence we see warriors in Mahaa Bhaarata wanted to be killed by Bhishma or Arjuna.  This was one of the features of the art of archery in Bhaarath.  Though it may outwardly appear that war was primarily for making one suffer, if we understand protecting dharma and compassion on the soul are also parts of a war, we will begin to appreciate the sublime rules of war laid down by our sages with the intent of protecting dharma

Note: The Kannada version of this article can be viewed at AYVM blogs.  

Sunday, December 13, 2020

ಆರ್ಯಸಂಸ್ಕೃತಿ ದರ್ಶನ - 21 (Arya Samskruti Darshana - 21)

 ಊರ್ಧ್ವಪುಂಡ್ರ

 ಲೇಖಕರು:  ಡಾII ಶ್ರೀ ಎಸ್.ವಿ. ಚಾಮು


   
ಬಹಳ ಹಿಂದಿನಿಂದ ಹಣೆಯಲ್ಲಿ ಲಾಂಛನ (ಚಿಹ್ನ)ವನ್ನುಧರಿಸುವುದು ಭಾರತೀಯರ ಸಂಪ್ರದಾಯ. ಈಗ ಒಂದೆರಡು ಪೀಳಿಗೆಗಳ ಹಿಂದಿನವರೆಗೆ ಈ ಧಾರ್ಮಿಕ ಪದ್ಧತಿಯನ್ನು ದೇಶದಲ್ಲಿ ಉಚ್ಚವರ್ಗಗಳಿಗೆ ಸೇರಿದವರೆಲ್ಲರೂ ತಪ್ಪದೆ ಅನುಸರಿಸುತ್ತಿದ್ದರು. ಪಾಶ್ಚಾತ್ಯ ನಾಗರಿಕತೆಯ ಪ್ರಭಾವದಿಂದ ಹೇಗೆ ಉಡಿಗೆ ತೊಡಿಗೆಗಳಲ್ಲಿ ವ್ಯತ್ಯಾಸವಾಗಿದೆಯೋ ಹಾಗೆಯೇ ಲಾಂಛನವನ್ನು ಧರಿಸುವ ವಿಷಯದಲ್ಲಿಯೂ ಬದಲಾವಣೆಯಾಗಿರುತ್ತದೆ.  ಅವರವರ ಮತಗಳಿಗೆ ಅನುಸಾರವಾಗಿ ಲಾಂಛನಗಳನ್ನು ಧರಿಸುವವರು ಇಂದೂ ಇದ್ದರೂ ಅವರ ಸಂಖ್ಯೆ ಬಹಳ ವಿರಳವಾಗಿರುತ್ತದೆ.

ಸಂಸ್ಕೃತಿಯ ದೃಷ್ಟಿಯಿಂದ ಇದು ವಿಷಾದಕರವಾದ ವಿಷಯ. ಏಕೆಂದರೆ ಆಧುನಿಕರು ಯೋಚಿಸುವಂತೆ  ಲಾಂಛನವನ್ನು ಧರಿಸುವುದು ಅರ್ಥವಿಲ್ಲದ ಆಚರಣೆಯಲ್ಲ.  ಲಾಂಛನವನ್ನು ಧರಿಸುವುದು ಎಷ್ಟು ಹಳೆಯ ಪದ್ಧತಿ ಎಂಬುದು ನಮಗೆ ತಿಳಿಯದು. ವೇದ ಮತ್ತು ಪುರಾತನವಾದ ಉಪನಿಷತ್ತುಗಳಲ್ಲಿ ಎಲ್ಲಿಯೂ ಲಾಂಛನಗಳ ಉಲ್ಲೇಖವು ಕಂಡುಬರುವುದಿಲ್ಲ. ಪ್ರಾಯಃ ಕರ್ಮ ಬಹುಳವಾದ ವೈದಿಕ ಧರ್ಮದಲ್ಲಿ ಲಾಂಛನಗಳಿಗೆ ಯಾವ ಸ್ಥಾನವೂ ಇದ್ದಿರಲಾರದು. ಅದು ನೀರಸವಾಗಿ ಕಂಡ ನಂತರ ವೇದ ಮತ್ತು ಉಪನಿಷತ್ತುಗಳಲ್ಲಿ ಇದ್ದ ಜ್ಞಾನ ಮತ್ತು ಭಕ್ತಿ ಪರವಾದ ಅಂಶಗಳು ಮೇಲೆದ್ದು ತೋರಿ ನಮ್ಮ ದೇಶದ ಬೇರೆ ಬೇರೆ ಧಾರ್ಮಿಕ  ಪಂಥಗಳ ಮೂಲಕ ಪ್ರಕಟವಾದವು. ಅಂತಹ ಧಾರ್ಮಿಕ ಪಂಥಗಳಲ್ಲಿ ಶೈವ ಮತ್ತು ವೈಷ್ಣವ (ಭಾಗವತ) ಧರ್ಮಗಳು ಅತ್ಯಂತ ಗಣ್ಯವಾದುವು. ಲಾಂಛನಗಳನ್ನು ಧರಿಸುವ ಪದ್ಧತಿಯು ಈ ಧರ್ಮಗಳ ಉದ್ಭವ ಮತ್ತು ಬೆಳವಣಿಗೆಗಳೊಡನೆ ನಿಕಟವಾಗಿ ಸಂಬಂಧಿಸಿದೆ ಎಂದರೆ ತಪ್ಪಿಲ್ಲ.

 ಲಾಂಛನ ಧರಿಸುವುದರ ಇತಿಹಾಸವು ಹೇಗಾದರೂ ಇರಲಿ, ಅದು ನಮ್ಮ ದೇಶದ ಜ್ಞಾನ ಪುರುಷರಲ್ಲಿ ಉಂಟಾದ ವಿಶೇಷವಾದ ಆತ್ಮವಿಕಾಸವನ್ನು ಪ್ರತೀಕಿಸುತ್ತದೆ ಎಂಬುದರಲ್ಲಿ ಯಾವ ಸಂದೇಹವೂ ಇಲ್ಲ. ಅದರಲ್ಲಿ ತತ್ತ್ವಜ್ಞಾನವಿರುತ್ತದೆ. ಯೋಗವಿರುತ್ತದೆ. ಭಕ್ತಿ ಮತ್ತು ಜ್ಞಾನಗಳು ಅದನ್ನು ಹೆಣೆದುಕೊಂಡಿರುತ್ತವೆ. ಅದರ ಹಿಂಬದಿಯಲ್ಲಿ ನಮ್ಮ ದೇಶದ ಪ್ರಬುದ್ಧಾತ್ಮರು ಸಾಧಿಸಿದ ದರ್ಶನ ಮತ್ತು ಅನುಭವಗಳ ರಸಮಯವಾದ ಸ್ಮರಣೆಯಿರುತ್ತದೆ. ಶರೀರ ವಿಜ್ಞಾನವಿರುತ್ತದೆ. ಸಾಧನೆಯ ಮಾರ್ಗವಿರುತ್ತದೆ. ಒಂದು ಮಾತಿನಲ್ಲಿ ಹೇಳುವುದಾದರೆ, ಈ ಲಾಂಛನಗಳಲ್ಲಿ ಮನುಷ್ಯರ ಉದ್ಧಾರಕ್ಕೆ ಸಾಕಾಗುವ ಆಧ್ಯಾತ್ಮಿಕ ರಹಸ್ಯಗಳನ್ನು ಸಂಗ್ರಹವಾಗಿ, ಸಾರಭೂತವಾಗಿ ಪ್ರಕಟ ಪಡಿಸುವ ಕೌಶಲ್ಯವಿದೆ.ಆದುದರಿಂದಲೇ ಲಾಂಛನಕ್ಕೆ ನಮ್ಮ ಹಿಂದಿನವರು ಅಷ್ಟು ಮಹತ್ವವನ್ನು ಕೊಟ್ಟರು. ಲಾಂಛನವನ್ನು ಧರಿಸದೆ ಮಾಡುವ ದಾನ, ಪೂಜೆ, ಹೋಮ, ಜಪ, ಕರ್ಮ, ಮುಂತಾದ ಧರ್ಮಕಾರ್ಯಗಳಾವುವೂ ಸಫಲವಾಗದೆಂದು ಅವರು ಸಾರಿದರು. ಲಾಂಛನದ ಮೂಲಕ ಸಾಮಾಜಿಕ ಐಕ್ಯವನ್ನು ಸಾಧಿಸಿದರು. ಜೊತೆಗೆ ಬೇರೆ ಬೇರೆ ಮತಗಳ ಚಿಹ್ನೆಗಳಾದುದರಿಂದ, ಲಾಂಛನಗಳು ಸಮಾಜದಲ್ಲಿ ಬೇರೆ ಬೇರೆ ಗುಂಪುಗಳ ಮಧ್ಯೆ ಒಡಕನ್ನುಂಟುಮಾಡಲು ಕಾರಣವಾಗಿರುತ್ತವೆಂಬುದನ್ನು ನಾವು ಒಪ್ಪಿಕೊಳ್ಳಬೇಕಾಗುತ್ತದೆ. ಬೇರೆ ಮತಗಳ ವಿಷಯದಲ್ಲಿದ್ದ ಅಸಹಿಷ್ಣುತೆಯು ಲಾಂಛನಗಳ ಮೂಲಕ ವ್ಯಕ್ತವಾಗಿ ಅವುಗಳ ಬಗ್ಗೆ ಕಲಹ, ಕುತ್ಸಿತ ಮತ್ತು ಕುಚೋದ್ಯಗಳನೇಕ ಉಂಟಾಗಿರುತ್ತವೆ. ಆದರೆ ಅವು ಮತಿಹೀನರಾದ ಮಂದಾತ್ಮರ ಕೆಲಸ. ನಮ್ಮ ದೇಶದ ಲಾಂಛನಗಳು ಒಳಗೊಂಡಿರುವ ಆಳವಾದ ಅರ್ಥವು ಅವರಿಗೆ ತಿಳಿದುಬಂದಿದ್ದರೆ, ಆಗ ಪ್ರಾಯಶಃ ಅವರು ಯಾವ ಲಾಂಛನವನ್ನೂ ಅಲ್ಲಗಳೆಯುವ ಸಾಹಸ ಮಾಡುತ್ತಿರಲಿಲ್ಲವೆಂದು ನಮ್ಮ ನಂಬಿಕೆ.    

ಇಲ್ಲಿ ಅಂತಹ ಲಾಂಛನವೊಂದನ್ನು ತೆಗೆದುಕೊಂಡು ಅದರ ಭಾವಗಾಂಭೀರ್ಯವನ್ನು ವಿವರಿಸುವ ಆಶಯದಿಂದ ಕೂಡಿರುತ್ತೇವೆ. ಅದು ಊರ್ಧ್ವಪುಂಡ್ರ. ಈ ಊಧ್ವಪುಂಡ್ರವು ವೈಷ್ಣವ (ಭಾಗವತ)ಧರ್ಮದ ಸಾರವೆಲ್ಲವನ್ನೂ ತನ್ನಲ್ಲಿ ಒಳಗೊಂಡಿರುವುದರಿಂದ, ಅದನ್ನು ಪೂರ್ತಿಯಾಗಿ ಹೇಳಬೇಕಾದರೆ ವೈಷ್ಣವ ಧರ್ಮದ ಮೂಲ ತತ್ತ್ವಗಳನ್ನು ನಿರೂಪಿಸಬೇಕಾಗುತ್ತದೆ. ಆದರೆ 3-4 ಪುಟಗಳ ಒಂದು ಸಣ್ಣ ಲೇಖನದಲ್ಲಿ ಆ ಕೆಲಸವನ್ನು ಮಾಡಲಾಗುವುದಿಲ್ಲ. ಅದರ ಬಗ್ಗೆ ಒಂದು ಸಂಗ್ರಹವಾದ ನೋಟವನ್ನಿತ್ತು ತೃಪ್ತರಾಗುತ್ತೇವೆ.

ಊರ್ಧ್ವಪುಂಡ್ರವು ಶುದ್ಧವಾದ ಬಿಳಿಯ ಮಣ್ಣಿನಿಂದ ಹಾಗೂ ಅರಿಸಿನದ ಪುಡಿ, ಅಕ್ಕಿಯಹಿಟ್ಟು, ತುಳಸೀ, ಕರ್ಪೂರ, ಗಂಧ, ಕುಂಕುಮ ಮುಂತಾದ ದ್ರವ್ಯಗಳಿಂದ ಮಾಡಿದ ಚೂರ್ಣದಿಂದ ಹಣೆ ಮತ್ತು ನಾಭಿಯಿಂದ ಮೇಲೆ ಶರೀರದ ನಿರ್ದಿಷ್ಟವಾದ ಸ್ಥಾನಗಳಲ್ಲಿ ಶ್ರೀವೈಷ್ಣವರು ಗುರುತಿಸುವ ಚಿಹ್ನವನ್ನುಸೂಚಿಸುತ್ತದೆ. ಅದಕ್ಕೆ ನಾಮ ಎಂಬ ಹೆಸರಿರುವುದು ಎಲ್ಲರಿಗೂ ತಿಳಿದ ವಿಷಯವಾಗಿದೆ. ಬೇರೆ ಬೇರೆ ಸ್ಥಾನಗಳಲ್ಲಿ ಅದನ್ನು ಹಾಕಿಕೊಳ್ಳುವಾಗ ಭಕ್ತಿ ಭಾವದಿಂದ ವಿಷ್ಣುವಿನ ನಾಮೋಚ್ಚಾರಣೆ ಮಾಡುತ್ತಾ, ಪರಂಜ್ಯೋತಿ  ಪರಮಾತ್ಮನಾದ ವಿಷ್ಣುವಿನ ಸ್ಮರಣೆ ಮಾಡುತ್ತಾ, ಆದನ್ನು  ಮಾಡುವುದರಿಂದ ಅದಕ್ಕೆ ನಾಮ (ಹೆಸರು) ಎಂಬ ಹೆಸರು ಪ್ರಚಾರಕ್ಕೆ ಬಂದಿರುತ್ತದೆ. ವೈಷ್ಣವ ಧರ್ಮವು ಭಗವನ್ನಾಮ ಸಂಕೀರ್ತನಗೆ ಎಷ್ಟು ಪ್ರಾಧಾನ್ಯ ಕೊಡುತ್ತದೆ ಎಂಬುದನ್ನು ಮುಂದಿನ ಮಾತುಗಳಿಂದ ಸ್ವಲ್ಪ ಮಟ್ಟಿಗೆ ಊಹಿಸಿಕೊಳ್ಳಬಹುದು:

ಸರ್ವೇಷಾಂ ಅಘವತಾಂ ಇದಮೇವ ಸುನಿಷ್ಕೃತಂ |
ನಾಮವ್ಯಾಹರಣಂ ವಿಷ್ಣೋಃ ಯತಃ ತದ್ವಿಷಯಾ ಮತಿಃ|| 
                                                                                                                                                                      -ಭಾಗವತ 6,2.10  
                                             
ಕನ್ನಡದಲ್ಲಿ "ನಾಮಹಾಕುವುದು" ಎಂದರೆ ಮೋಸ ಮಾಡುವುದು ಎಂಬ ಅರ್ಥವು ಸಾಮಾನ್ಯಜನರಲ್ಲಿ ಬಳಕೆಯಲ್ಲಿರುತ್ತದೆ. ಶಬ್ದಕೋಶಗಳೂ ಈ ಅರ್ಥವನ್ನು ಅಂಗೀಕರಿಸುತ್ತವೆ. ವಾಸ್ತವದಲ್ಲಿ "ನಾಮ"ವು ಜಗತ್ಸ್ವಾಮಿಯಾದ  ಭಗವಂತನ ಮಹಿಮೆಯನ್ನು ಕೊಂಡಾಡುವ ಪದ.ಅದನ್ನು ಅಪಾರ್ಥದಲ್ಲಿ ಬಳಸುವುದು ಬಹಳ ಕೆಳಮಟ್ಟದ ಅನಾಗರಿಕತೆಯನ್ನು ಸೂಚಿಸುತ್ತದೆ ಎಂಬುದನ್ನು ಹೇಳಬೇಕಾಗಿಲ್ಲ.

ಸಾಂಕೇತ್ಯಂ ಪಾರಿಹಾಸ್ಯಂವಾ ಸ್ತೋಭಂ ಹೇಲನ ಮೇವ ವಾ|
ವೈಕುಂಠನಾಮಗ್ರಹಣಂ ಅಶೇಷಾಘ ಹರಂ ವಿದುಃ||14||
ಪತಿತಃ ಸ್ಖಲಿತೋ ಭಗ್ನಃ ಸಂದಷ್ಟಃ ತಪ್ತ ಆಹತಃ|
ಹರಿರಿತ್ಯವಶೇನಾಹ ಪುಮಾನ್ನಾರ್ಹತಿ ಯಾತನಾಂ||15||    

 (ಮನುಷ್ಯನು ಮಾಡಿದ ಪಾಪವು ಎಷ್ಟೇ ದೊಡ್ಡದಾಗಿರಲಿ, ವಿಷ್ಣುವಿನ ನಾಮವನ್ನು ಹೇಳುವುದರಿಂದಲೇ ಅದಕ್ಕೆ ಪ್ರಾಯಶ್ಚಿತ್ತ ಮಾಡಿದಂತಾಗುತ್ತದೆ. ವಿಷ್ಣುವಿನ ನಾಮವನ್ನು ಉಚ್ಚರಿಸಿದ ಮಾತ್ರದಿಂದಲೇ ಅವನ  ಮತಿಯು ಭಗವಂತನಲ್ಲಿ ಹರಿಯುತ್ತದೆ. ಮನಸ್ಸಿನಲ್ಲಿ ಅಭಿಪ್ರಾಯವನ್ನಿಟ್ಟುಕೊಂಡಾಗಲಿ, ಪರಿಹಾಸ್ಯಕ್ಕೋಸ್ಕರವಾಗಲಿ, ಹಾಡುವಾಗಾಗಲಿ, ಅಥವಾ ಅವಹೇಳನ ಮಾಡುವ ಉದ್ದೇಶದಿಂದಾಗಲಿ ವೈಕುಂಠನ(ವಿಷ್ಣುವಿನ) ನಾಮವನ್ನು ಹೇಳಿದರೆ, ಅದರಿಂದಲೇ  ಅವನ  ಪಾಪಗಳೆಲ್ಲವೂ ನೀಗುತ್ತವೆ ಎಂದು ಹೇಳುತ್ತಾರೆ. ಬೀಳುವಾಗ, ಜಾರುವಾಗ, ಮೈಮುರಿಯುವಾಗ, ಹಾವು ಕಚ್ಚಿದಾಗ, ಸುಟ್ಟಾಗ, ಹೊಡೆಯಲ್ಪಟ್ಟಾಗ ಅವಶನಾಗಿಯೇ ಆಗಲಿ ಹರಿ! ಎಂದು ಹೇಳಿದ ಮಾತ್ರದಿಂದಲೇ ಮನುಷ್ಯನು ನರಕಯಾತನೆಗೆ ಅನರ್ಹನಾಗುತ್ತಾನೆ.)

ಅಂತಹ ಮನುಷ್ಯನನ್ನು ಸರ್ವಕಾಲಕ್ಕೂ ಉದ್ಧಾರಮಾಡುವ, ಪರಮ ಪಾವನವಾದ ಭಗವನ್ನಾಮವನ್ನು ಉಚ್ಚರಿಸುತ್ತಾ ಮಾಡುವ ಚಿಹ್ನವು ನಮಗೆ ತಿಳಿದಂತೆ ಭ್ರೂ
ಮಧ್ಯದಿಂದ (ಅಥವಾ ನಾಸಾಗ್ರದಿಂದ) ದ್ವಾದಶಾಂತ (ಹಣೆ ಮತ್ತು ಕೂದಲು ಸೇರುವ ಜಾಗದವರೆಗೆ  ಹೋಗುವ ಮೂರು ರೇಖೆಗಳ ರೂಪವಾಗಿರುತ್ತದೆ. ಆ ಚಿಹ್ನವನ್ನು ಗುರುತಿಸುವ ಬೇರೆ ವಿಧಾನಗಳು ಇರುತ್ತವೆಂದು ಶಾಸ್ತ್ರ ಗ್ರಂಥಗಳಿಂದ ತಿಳಿದುಬರುತ್ತದೆ. ಅದನ್ನು ದೀಪಶಿಖೆ, ಬಿದಿರಿನ ಎಲೆ, ಕಮಲದ ಮೊಗ್ಗು, ಮೀನು, ಆಮೆ, ಅಥವಾ ಕವಿಗಳ ಆಕಾರದಲ್ಲಿ ಇಡುವ ರೂಢಿಯು ಇದ್ದಿತು. ಪರ್ವತಾಗ್ರ, ನದೀತೀರ, ಮರದ ಬುಡಗಳಿಂದ ಸಂಗ್ರಹಿಸಿದ  ಮಣ್ಣಿನಿಂದ ಅದನ್ನು ಹಾಕಿಕೊಳ್ಳಬೇಕೆಂದು ಶಾಸ್ತ್ರವು ಹೇಳುತ್ತದೆ. ಕೆಂಪು, ಕಪ್ಪು ಅಥವಾ ಹಳದಿ ಬಣ್ಣದ ಮಣ್ಣು (ಗೋಪಿಚಂದನ)ಗಳನ್ನು ಸಹ ಪುಂಡ್ರ ಧಾರಣೆಗೆ ಬಳಸಬಹುದು. ಧರ್ಮಶಾಸ್ತ್ರಗಳು ಬೇರೆ ಬೇರೆ ಬಣ್ಣದ ಮಣ್ಣುಗಳಿಗೆ ಶಾಂತಿ, ವಶ್ಯ, ಸಂಪತ್ತು ಮುಂತಾದ ಫಲಗಳನ್ನು ಹೇಳುತ್ತವೆ. ಬಿಳೀ ಮಣ್ಣಿಗೆ ವೈಷ್ಣವವೆಂದು ವಿಶೇಷವಾದ ಪ್ರಶಸ್ತಿಯು ಹೇಳಲ್ಪಟ್ಟಿರುತ್ತದೆ. ಸತ್ವಗುಣವು ಶ್ವೇತವರ್ಣವೆಂದು ಶಾಸ್ತ್ರಗಳು ಹೇಳುತ್ತವೆ. ವಿಷ್ಣುವು ಸತ್ವಗುಣಕ್ಕೆ ಅಧಿಪತಿಯಾದುದರಿಂದ ಬಿಳಿ ಮಣ್ಣಿಗೆ ಹೆಚ್ಚು ಮಹತ್ವ ಹೇಳಲು ಕಾರಣವಿರಬಹುದು. ವೈಷ್ಣವ ಧರ್ಮದ ಒಂದು ಬಗೆಯನ್ನು ಆರಂಭಿಸಿದ ರಾಮಾನುಜಾಚಾರ್ಯರು   ಮೇಲುಕೋಟೆಯಲ್ಲಿ ಅಂತಹ ಮಣ್ಣಿನ ಖನಿಯನ್ನು ಕಂಡು ಅದರ ಬಳಕೆಯನ್ನು ಪ್ರಸಾರಮಾಡಿದರೆಂಬ ಐತಿಹ್ಯವು ಸಹ ಕೇಳಿಬರುತ್ತದೆ.

ಈ ಊರ್ಧ್ವಪುಂಡ್ರವನ್ನು ಹಾಕಿಕೊಳ್ಳುವಾಗ "ಲಲಾಟದಲ್ಲಿ ಕೇಶವನನ್ನೂ, ಉದರದಲ್ಲಿ ನಾರಾಯಣನನ್ನೂ, ಹೃದಯದಲ್ಲಿ ಮಾಧವನನ್ನೂ, ಭುಜದ ಬುಡಭಾಗದಲ್ಲಿ ಗೋವಿಂದನನ್ನೂ, ಉದರದ ಬಲ ಪಾರ್ಶ್ವದಲ್ಲಿ ವಿಷ್ಣುವನ್ನೂ, ಅದರ ಪಾರ್ಶ್ವದಲ್ಲಿಯೂ, ಬಾಹುಮಧ್ಯದಲ್ಲಿಯೂ ಮಧುಸೂದನನ್ನೂ ,ಕಂಠದೇಶದಲ್ಲಿ ತ್ರಿವಿಕ್ರಮನನ್ನೂ, ಉದರದ  ಎಡಪಾರ್ಶ್ವದಲ್ಲಿ ವಾಮನನನ್ನೂ, ಎಡಬಾಹುವಿನಲ್ಲಿ ಶ್ರೀಧರನನ್ನೂ, ಕಿವಿಯಲ್ಲಿ ಹೃಷೀಕೇಶನನ್ನೂ, ಬೆನ್ನಿನಲ್ಲಿ ಪದ್ಮನಾಭನನ್ನೂ, ಕುತ್ತಿಗೆಯ ಹಿಂಭಾಗದಲ್ಲಿ ದಾಮೋದರನನ್ನೂ  ಸ್ಮರಿಸಬೇಕು. ಇವು ದ್ವಾದಶನಾಮಗಳು." ವಾಸುದೇವ" ಎಂದು ನೆತ್ತಿಯಲ್ಲಿ  ಹಚ್ಚಬೇಕು" ಎಂದು ಶಾಸ್ತ್ರವು ಆದೇಶ ಮಾಡುತ್ತದೆ.

"ಪೂಜಾಕಾಲ, ಹೋಮಕಾಲ, ಸಾಯಂಕಾಲ, ಪ್ರಾತಃಕಾಲಗಳಲ್ಲಿ ಮನಸ್ಸಮಾಧಾನವುಳ್ಳವನಾಗಿ ವಿಧ್ಯುಕ್ತ ಪ್ರಕಾರ ಈ ನಾಮಗಳನ್ನುಚ್ಚರಿಸುತ್ತಾ ಊರ್ಧ್ವಪುಂಡ್ರವನ್ನು  ಧರಿಸಬೇಕು" ಎಂಬುದು ಶಾಸ್ತ್ರನಿಯಮ.
"ಯಾರ ಮುಖದಲ್ಲಿ ಶುದ್ಧವಾದ ಊರ್ಧ್ವಪುಂಡ್ರವು ಕಾಣಿಸುತ್ತದೆಯೋ ಅವನು ಚಂಡಾಲನಾದರೂ ಶುದ್ಧ ಸ್ವರೂಪ, ಪೂಜಾರ್ಹ. ಅದರಲ್ಲಿ ಸಂದೇಹವಿಲ್ಲ" ಎಂದು ಸತ್ಯವ್ರತನೆಂಬ ಧರ್ಮೋಪದೇಶಕನು ಘೋಷಣೆ ಮಾಡುತ್ತಾನೆ.  ಇವು ಊರ್ಧ್ವಪುಂಡ್ರದ ವಿಷಯದಲ್ಲಿ ಹಿಂದಿನಿಂದ ಬಂದ ಸಂಪ್ರದಾಯಗಳು. ಈಗ ಅವುಗಳ ಹಿಂದಿರುವ ಜ್ಞಾನ ವಿಜ್ಞಾನದ ಕಡೆಗೆ ನಮ್ಮ ದೃಷ್ಟಿಯನ್ನು ಹೊರಳಿಸಬೇಕಾಗಿದೆ. ಈ ಚಿಹ್ನವನ್ನು  ಹಣೆ ಮತ್ತು ಶರೀರದ ಬೇರೆ ಬೇರೆ ಸ್ಥಾನಗಳಲ್ಲಿ ಅಂಕಿತ ಮಾಡುವುದರ ಕಾರಣವೇನು ಎಂಬುದನ್ನು ವಿಚಾರಿಸಬೇಕಾಗಿದೆ.

ಭಾರತೀಯರ ಸತ್ಯಾನ್ವೇಷಣೆಯಲ್ಲಿ ಶರೀರ ವಿಜ್ಞಾನವು ಬಹಳ ದೂರದವರೆಗೆ ವ್ಯಾಪಾರ ಮಾಡಿದ್ದಿತೆಂಬುದನ್ನು ನಾವು ಈಗಾಗಲೇ ಪತ್ರಿಕೆಯಲ್ಲಿ ವಿಶದವಾಗಿ ಬೇರೆ ಬೇರೆ ಸಂದರ್ಭಗಳಲ್ಲಿ ನಿರೂಪಿಸಿರುತ್ತೇವೆ. ಭಾರತದೇಶದ ಜ್ಞಾನ ಪುರುಷರು ಧ್ಯಾನಯೋಗದ ಸಹಾಯದಿಂದ ಶರೀರದ ರಚನೆಗೆ ಕಾರಣವಾದ ತತ್ತ್ವಗಳೆಲ್ಲಕ್ಕೂ ಮೂಲನಾದ ಸ್ವಾಮಿಯನ್ನು ಈ ಶರೀರವೆಂಬ ದೇಗುಲವನ್ನು ಪ್ರವೇಶಿಸಿಯೇ ಸಾಕ್ಷಾತ್ಕರಿಸಿದವರಾಗಿದ್ದರು. ಶರೀರದಲ್ಲಿ ಗೂಢವಾಗಿರುವ ಜ್ಞಾನಮಾರ್ಗದಲ್ಲಿ ಪ್ರಾಣ ಮತ್ತು  ಮನಸ್ಸುಗಳ ಸಹಾಯದಿಂದ ನಡೆದು, ಬ್ರಹ್ಮರಂಧ್ರವನ್ನು ಮುಟ್ಟಿ ಅಲ್ಲಿ ಅವರು ಪರವಾಸುದೇವನಾದ ನಾರಾಯಣನ, ಆಧ್ಯಾತ್ಮದೀಪನಾದ ವಿಷ್ಣುವಿನ ದರ್ಶನವನ್ನು ಒಳಗಣ್ಣಿನಿಂದ  ಮಾಡಿದರವಾಗಿದ್ದರು. "ತದೇವ ನಾರಾಯಣ ಸ್ಥಳಂ| ತದ್ವೇತ್ತಾ ಮುಕ್ತಿಭಾಕ್|| ತ್ರಿಸ್ಥಾನಂ ಚ ತ್ರಿಮಾರ್ಗಂ ಚ ತ್ರಿಬ್ರಹ್ಮ ಚ ತ್ರಯಾಕ್ಷರಂ| ತ್ರಿಮಾತ್ರಂ ಅರ್ಧಮಾತ್ರಂ ವಾ ಯಸ್ತಂ ವೇದ ಸ ವೇದವಿತ್|| (ಅದೇ ನಾರಾಯಣಸ್ಥಳ. ಅದನ್ನು ತಿಳಿದವನು ಮುಕ್ತಿಗೆ ಅರ್ಹನಾಗುತ್ತಾನೆ. ಮೂರು ಸ್ಥಾನಗಳನ್ನೂ, ಮೂರುಮಾರ್ಗಗಳನ್ನೂ, ಮೂವರು ಬ್ರಹ್ಮರನ್ನೂ, ಮೂರು ಅಕ್ಷರಗಳನ್ನೂ, ಮೂರು ಮಾತ್ರೆಗಳನ್ನೂ ಮತ್ತು ಅರ್ಧ ಮಾತ್ರೆಯನ್ನೂ ತಿಳಿದವನು ವೇದ (ಜ್ಞಾನ)ವನ್ನು ತಿಳಿದವನು ಮುಂತಾದ ಮಾತುಗಳು ಅಂತಹ ಪರಮಾತ್ಮಸಾಕ್ಷಾತ್ಕಾರದಲ್ಲಿರುವ  ಜ್ಞಾನ ವಿಜ್ಞಾನಗಳನ್ನು ಸಾರಭೂತವಾಗಿ  ಹೇಳುತ್ತವೆ.                          
.
ಅಂತಹ ಜ್ಞಾನಸ್ಥಿತಿಯನ್ನು ತಮ್ಮಲ್ಲಿ  ಅನುಭವಾತ್ಮಕವಾಗಿ ಸಾಧಿಸಿದ ಯೋಗಿಗಳಿಂದಲೇ ವೈಷ್ಣವ ಧರ್ಮವು ತನ್ನ ಉತ್ಪತ್ತಿಯನ್ನು ತೆಗೆದುಕೊಂಡಿರುತ್ತದೆ. ಅದರಲ್ಲಿರುವ  ಆಚರಣೆ ಮತ್ತು ಸಂಪ್ರದಾಯಗಳನೇಕ ಯೋಗದ ಒಳರಹಸ್ಯಗಳ ಕಡೆಗೆ ನಿರ್ದೇಶಿಸುತ್ತವೆ. ಯೋಗಪಕ್ವತೆಯನ್ನುಂಟು ಮಾಡುವುದೇ ಅವುಗಳ ಆಶಯವಾಗಿದೆ. ಅವುಗಳ ಪೈಕಿ ಊರ್ಧ್ವಪುಂಡ್ರವನ್ನಿಡುವ ಪದ್ಧತಿಯು ತ್ರಿನಾಡಿ (ಇಡಾ,ಪಿಂಗಳಾ,ಸುಷುಮ್ನಾ)ರೂಪವಾದ ತ್ರಿಮಾರ್ಗವನ್ನೇ ಶರೀರದ ಮೇಲೆ ನಕ್ಷೆ ಎಳೆದು ತೋರಿಸುತ್ತದೆ. ಉದರ, ಹೃದಯ, ಕಂಠ, ಹಣೆಗಳಲ್ಲಿಡುವ ಮೂರು ರೇಖೆಗಳು ಕಡೆಗೆ ಪರವಾಸುದೇವನ ಸ್ಥಾನವಾದ ಬ್ರಹ್ಮರಂಧ್ರದ ಕಡೆಗೇ ಅಗ್ರಿಮವಾಗಿರುತ್ತವೆ. ಮನುಷ್ಯನ ಆತ್ಯಂತಿಕ ಹಿತ ಅಲ್ಲಿದೆ ಎಂಬುದನ್ನು ಹೇಳುತ್ತವೆ.

ಇಲ್ಲಿ ಶ್ರೀರಂಗಗುರುವು ಮಾಡಿದ ಜ್ಞಾನ ಪ್ರಯೋಗದಿಂದ ಹೊರಬಿದ್ದ ಒಂದು ಸಂಗತಿಯು ಸ್ಮರಣೆಗೆ ಬರುತ್ತದೆ. ಅವರು ಜ್ಞಾನಮಾರ್ಗದಲ್ಲಿ ಕರೆದುಕೊಂಡು ಹೋಗಿ, ಶಿಷ್ಯರೊಬ್ಬರಲ್ಲಿ ಧ್ಯಾನ ಕಾಲದಲ್ಲಿ ಊರ್ಧ್ವಪುಂಡ್ರದ ರಹಸ್ಯವು ಹೊರಪಟ್ಟಿತು. ಧ್ಯಾನದಲ್ಲಿ ಕುಳಿತಾಗ ಅವರ ಹಣೆಯಲ್ಲಿ ಮೂರು ನರಗಳು ಎದ್ದು ತೋರಿಬರುತ್ತಿದ್ದುದು ಮಾತ್ರವಲ್ಲದೆ, ಭುಜ ಇತ್ಯಾದಿಗಳಲ್ಲಿ ನರಗಳು ಎದ್ದು ತೋರಿ ವೈಷ್ಣವ ಚಿಹ್ನೆಗಳೆಲ್ಲವೂ ಕಾಣಿಸಿಕೊಳ್ಳುತ್ತಿದ್ದವು. ಶ್ರೀರಂಗಗುರುವು ಇದನ್ನು ನಮಗೆ ಹೇಳಿದರು. ನಂತರ ನಾವೇ ಪ್ರತ್ಯಕ್ಷವಾಗಿ ಒಂದೆರಡು ಬಾರಿ ಅದನ್ನು ನೋಡಿದೆವು. ಹಾಗೆ ವೈಷ್ಣವ ಧರ್ಮಕ್ಕೆ ಸಂಬಂಧಿಸಿದ ಮುದ್ರೆ,ಚಿಹ್ನೆಗಳೆಲ್ಲವೂ ಆವರ್ತವಾಗಿ ತೋರಿ ಅಡಗಿದ ನಂತರ ಅವರಲ್ಲಿ ಶೈವಧರ್ಮಕ್ಕೆ ಸಂಬಂಧಿಸಿದ ಚಿಹ್ನೆಗಳೆಲ್ಲವೂ ಶರೀರದಲ್ಲಿ ಸಹಜವಾಗಿ ಬರದಿಟ್ಟಂತೆ ಗೋಚರವಾಗುತ್ತಿದ್ದವು. ಅದನ್ನು ನೋಡಿ ಗುರು ಭಗವಂತರು ಅವರಿಗೆ ಶಂಕರನಾರಾಯಣ ದಾಸ ಎಂದು ನಾಮಕರಣ ಮಾಡಿದರು.

ಈ ಚಿಹ್ನೆಗಳು ಮನಃಕಲ್ಪಿತವಾದವುಗಳಲ್ಲ ಎಂಬುದನ್ನು ಹೇಳಲು ಇದನ್ನು ಇಲ್ಲಿ ಹೇಳಿದೆವು. ಅವುಗಳ ಮೂಲ, ಮನುಷ್ಯನಲ್ಲಿರುವ ಜ್ಞಾನದಲ್ಲಿರುತ್ತದೆ. ಧರ್ಮ ಕರ್ಮ ಸಂಯೋಗದಿಂದ ಒಬ್ಬನು ಅದನ್ನು ಪಡೆಯುವಂತಾದರೆ, ಆಗ ಅವು ಹೃದಯ ಸಮುದ್ರದ ತಳದಿಂದ ಮೇಲೆದ್ದು ಬಂದು ತೋರುತ್ತವೆ. ಅವನ್ನರಿತ  ಜ್ಞಾನಿಗಳು ಪಂಡಿತರಿಂದ ಪಾಮರರವರೆಗೆ ಎಲ್ಲರೂ ಆ ಜಾಡಿನಲ್ಲಿ ನಡೆಯಲೆಂದು ಮಣ್ಣು, ಅರಶಿನ ಮುಂತಾದ ದ್ರವ್ಯಗಳಿಂದ ಶರೀರದಲ್ಲಿ ಅದನ್ನು ಗುರುತಿಸುವ ಸಂಪ್ರದಾಯವನ್ನು ರೂಢಿಗೆ ತಂದರು. ಇಲ್ಲಿ ಮಣ್ಣಿಗಲ್ಲ ಬೆಲೆ. ಮಣ್ಣಿನಿಂದ ಎಳೆದ ರೇಖೆಯು ಸೂಚಿಸುವ ರಹಸ್ಯವಾಗಿರುವ ಜ್ಞಾನಮಾರ್ಗಕ್ಕೆ. ಅದರಲ್ಲಿ ನಡೆದಾಗ ಮನುಷ್ಯನು ಶಾಶ್ವತವಾದ ವಿಷ್ಣುಪದವನ್ನು ಮುಟ್ಟುತ್ತಾನೆಂದು ಹೇಳುವುದೇ ಆ ರೇಖೆಗಳ ಉದ್ದೇಶ. ಅದೇ ಅವುಗಳ ಅರ್ಥ.

ಸೂಚನೆ : ಈ ಲೇಖನವು ಶ್ರೀಮಂದಿರದಿಂದ ಪ್ರಕಾಶಿತವಾಗುವ ಆರ್ಯಸಂಸ್ಕೃತಿ ಮಾಸ ಪತ್ರಿಕೆಯ  ಫೆಬ್ರುವರಿ 1982 ಸಂಪುಟ :4 ಸಂಚಿಕೆ:4 ರಲ್ಲಿ ಪ್ರಕಟವಾಗಿದೆ.

ಯಮ - ಅಸ್ತೇಯ ಮತ್ತು ಬ್ರಹ್ಮಚರ್ಯ (Yama - asteya mattu brahmacarya)

ಲೇಖಕರು: ಶ್ರೀ ಜಿ. ನಾಗರಾಜ.
(ಪ್ರತಿಕ್ರಿಯಿಸಿರಿ lekhana@ayvm.in)

ಅಸ್ತೇಯ ಮತ್ತು ಬ್ರಹ್ಮಚರ್ಯಗಳು ಯಮದ ಮೂರನೆಯ ಮತ್ತು ನಾಲ್ಕನೆಯ ಅಂಗಗಳಾಗಿರುತ್ತವೆ.

ಸ್ತೇಯವೆಂದರೆ ಕಳ್ಳತನ. ಕ್ರಿಯೆ ಯಿಂದಾಗಲೀ, ಮಾತಿನಿಂದಾಗಲೀ, ಮನಸ್ಸಿನಿಂದಾಗಲೀ ಕಳ್ಳತನದಲ್ಲಿ ತೊಡಗದೇ ಇರುವುದು ಅಸ್ತೇಯವಾಗುತ್ತದೆ. ಇದು ಹೇಗೆ ಯೋಗಾಂಗವಾಗುತ್ತದೆಯೆಂದು ನೋಡೋಣ.  ಚಿತ್ತವೃತ್ತಿಗಳನ್ನು ನಿರೋಧಿಸುವುದೇ ಯೋಗವಾದುದರಿಂದ ಯಾವುದು ಚಿತ್ತವೃತ್ತಿಗಳನ್ನು ಹೆಚ್ಚಿಸುತ್ತದೋ ಅದು ಯೋಗವಿಘ್ನವಾಗಿರುತ್ತದೆ. ಪದಾರ್ಥಗಳಿಗೆ ಅವುಗಳ ಒಡೆಯನ ಚಿತ್ತವೃತ್ತಿಯು ಅಂಟಿರುತ್ತದೆ. ಪದಾರ್ಥವನ್ನು ಸಕ್ರಮವಾಗಿ ಖರೀದಿಸಿದಾಗ ಅಥವಾ ದಾನ ಪಡೆದಾಗ, ಪದಾರ್ಥಕ್ಕೆ ಅಂಟಿದ್ದ ಚಿತ್ತವೃತ್ತಿಯು ಕಳಚಿ, ಪದಾರ್ಥವು ನಿರುಪಾಧಿಕವಾಗಿ ಖರೀದಿಸಿದವನನ್ನು/ದಾನ ಪಡೆದವನನ್ನು  ಬಂದು ಸೇರುತ್ತದೆ. ಆದರೆ ಕಳ್ಳತನ ಮಾಡಿದಾಗ, ಒಡೆಯನ ಅನುಮತಿಯಿಲ್ಲದೇ ಬಂದುದರಿಂದ, ಪದಾರ್ಥವು ಚಿತ್ತವೃತ್ತಿಯ ಅಂಟಿನೊಂದಿಗೇ ಕೂಡಿದ್ದು, ಕಳ್ಳತನ ಮಾಡಿದವನ ಚಿತ್ತವೃತ್ತಿಯು ಜಾಸ್ತಿಯಾಗುವಂತೆ ಮಾಡುತ್ತದೆ. ಹೀಗೆ ಕಳ್ಳತನದಿಂದ ದೂರವಿರುವುದು ಚಿತ್ತವೃತ್ತಿಗಳು ಹೆಚ್ಚುವುದನ್ನು ತಪ್ಪಿಸುತ್ತದೆ; ಆದ್ದರಿಂದ  ಯೋಗಕ್ಕೆ ಪೋಷಕವಾಗಿ ಯೋಗಾಂಗವಾಗುತ್ತದೆ.

ಬ್ರಹ್ಮಚರ್ಯವೆಂಬ ಪದಕ್ಕೆ, ಬ್ರಹ್ಮನಲ್ಲಿ ಸಂಚಾರ ಮಾಡುವುದು  ಎನ್ನುವುದೇ ಶಬ್ದಾರ್ಥವಾದರೂ ರೂಢಿಯಲ್ಲಿ, ಕಾಮದ ವಿಷಯದಲ್ಲಿ ಸ್ವೇಚ್ಛಾಚಾರವಿಲ್ಲದಿರುವುದು ಎನ್ನುವುದೇ ಅರ್ಥವಾಗಿದೆ. ಸ್ತ್ರೀ ಸಂಬಂಧವಾದ ಕಾಮಾಸಕ್ತಿಯು ಇಂದ್ರಿಯಗಳನ್ನು ಮಥಿಸಿ ವೀರ್ಯವು ಹೊರಮುಖವಾಗಿಸುವ ಕ್ರಿಯೆ. ಈ ಕ್ರಿಯೆಯಲ್ಲಿ ತೊಡಗಿದರೆ ನರಸಮೂಹವೆಲ್ಲವೂ ಹೊರಮುಖವಾಗುತ್ತದೆ ಮತ್ತು ಅವು ಸ್ವಸ್ಥಿತಿಗೆ ಬರುವ ತನಕ ಬೇರೊಂದು ಕೆಲಸಕ್ಕೆ ಬರುವುದಿಲ್ಲವೆಂಬುದು ಪ್ರಕೃತಿ ನಿಯಮ. ಯೋಗವು ದೇಹೇಂದ್ರಿಯಗಳೆಲ್ಲವನ್ನೂ ಒಳಮುಖವಾಗಿಸುವ ಪ್ರಕ್ರಿಯೆಯಾದುದರಿಂದ ಕಾಮದಲ್ಲಿ ತೊಡಗಿದ ದೇಹೇಂದ್ರಿಯಗಳನ್ನು ಯೋಗದಲ್ಲಿ ತೊಡಗಿಸಲು ಬರುವುದಿಲ್ಲ. ಹೀಗಾಗಿ ಕಾಮಾಸಕ್ತಿಯ ನಿರೋಧರೂಪವಾದ ಬ್ರಹ್ಮಚರ್ಯವು ಯೋಗಕ್ಕೆ ಪೋಷಕವೆಂಬುದು ಸಾಮಾನ್ಯ ನಿಯಮ. ಆದರೆ ಈ ಸಾಮಾನ್ಯ ನಿಯಮಕ್ಕೆ ಅಪವಾದವೂ ಉಂಟು. ಸ್ವಸ್ತ್ರೀಯಲ್ಲಿ ಯಥೋಚಿತವಾದ ಸಂಗದಿಂದ ಉಂಟಾಗುವ ದೇಹೇಂದ್ರಿಯಗಳ ಪ್ರಸನ್ನತೆಯು ಆರೋಗ್ಯಕ್ಕೂ, ಯೋಗಕ್ಕೂ ಪೋಷಕವಾಗಬಲ್ಲದು ಮತ್ತು ತಂತ್ರಮಾರ್ಗದಲ್ಲಿ ಮೈಥುನಕ್ರಿಯೆಯಿಂದಲೇ ಯೋಗಸಾಧನೆ ಮಾಡುವ ಮಾರ್ಗವೂ ಉಂಟು. ಆದರೆ ಸಾಮಾನ್ಯವಾಗಿ, ಬ್ರಹ್ಮಚರ್ಯವು ಯೋಗಸಾಧನೆಗಾಗಿ ಅನುಸರಿಸಬೇಕಾದ ಯಮವಾಗಿದೆ.

ಎಲ್ಲ ಯಮಗಳ ಸಾಧನೆಯಲ್ಲಿಯೂ ಅವುಗಳ ಪರಾಕಾಷ್ಠೆಯನ್ನು ತಲುಪಿದಾಗ ಒಂದೊಂದು ಫಲವುಂಟು. ಅಹಿಂಸಾ ಸಿದ್ಧಿಯಿರುವವರ ಪ್ರಭಾವವಲಯದಲ್ಲಿ ಯಾರಿಗೂ ವೈರವನ್ನಿಟ್ಟುಕೊಳ್ಳಲಾಗುವುದಿಲ್ಲ. ಸತ್ಯದ ಸಿದ್ಧಿಯಿರುವವರು ನುಡಿದದ್ದೆಲ್ಲಾ ಸತ್ಯವಾಗಿ ಪರಿಣಮಿಸುತ್ತದೆ. ಬ್ರಹ್ಮಚರ್ಯ ಸಿದ್ಧಿಯಲ್ಲಿ ಎಲ್ಲ ಗುಣಗಳೂ ವೃದ್ಧಿ ಹೊಂದುವ ವೀರ್ಯಲಾಭವಾಗುತ್ತದೆ ಮತ್ತು ಅಸ್ತೇಯ ಸಿದ್ಧಿ ಹೊಂದಿದವನನ್ನು ಸರ್ವ ರತ್ನಗಳು ಬಂದು ಸೇರುತ್ತವೆ ಎಂದು ಪತಂಜಲಿಗಳ ಯೋಗ ಸೂತ್ರವು ಹೇಳುತ್ತದೆ.

ಸೂಚನೆ : 12/12/2020 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ .