Saturday, October 31, 2020

ನಿತ್ಯಜೀವನದಲ್ಲಿ ಅಷ್ಟಾಂಗಯೋಗ (Nityajivanadalli Astangayoga)

ಲೇಖಕರು: ಶ್ರೀ ಜಿ. ನಾಗರಾಜ.
(ಪ್ರತಿಕ್ರಿಯಿಸಿರಿ lekhana@ayvm.in)



ಅಷ್ಟಾಂಗ ಯೋಗದ ಎಂಟು ಅಂಗಗಳು ಹೇಗೆ ಜೀವನದಲ್ಲಿ ಸಹಜವಾಗಿ ಅಡಕವಾಗಿದವೆಯೆಂಬುದನ್ನು ಶ್ರೀರಂಗ ಮಹಾಗುರುಗಳು ಅನೇಕ ಉದಾಹರಣೆಗಳಿಂದ ಎತ್ತಿ ತೋರಿಸುತ್ತಿದ್ದರು. ಈ ಸಹಜತೆಯನ್ನು ನಿದ್ರೆಯ ಉದಾಹರಣೆಯಿಂದ ಗಮನಿಸಬಹುದು. ಗಾಢ ನಿದ್ರೆಯಲ್ಲಿಯೂ ಬಾಹ್ಯ ಪ್ರಜ್ಞೆ ಇರುವುದಿಲ್ಲವಾದುದರಿಂದ ಗಾಢನಿದ್ರೆಯನ್ನು ಜಾಡ್ಯನಿದ್ರೆಯೆಂದೂ ಸಮಾಧಿ ಸ್ಥಿತಿಯನ್ನು ಅಜಾಡ್ಯ ನಿದ್ರೆ ಅಥವಾ ಯೋಗನಿದ್ರೆಯೆಂದೂ ಕರೆಯುತ್ತಾರೆ. ಹೇಗೆ ಯೋಗದ ಎಂಟನೇ ಅಂಗವಾದ ಸಮಾಧಿಸ್ಥಿತಿಯನ್ನು ತಲುಪಲು ಮೊದಲ ಏಳು ಅಂಗಗಳು ಸಾಧನವಾಗಿವೆಯೋ ಹಾಗೆಯೇ ಗಾಢನಿದ್ರಾ ಸ್ಥಿತಿಯನ್ನು ತಲುಪಲೂ ಸಹ ಅಂಗಗಳಿವೆಯೆಂದು ಗಮನಿಸಬಹುದು. 

ಯಮ ಎಂದರೆ ಸಂಯಮ, ನಿಷೇಧ ರೂಪವಾದ ಉಪಾಯಗಳು ಗಾಢನಿದ್ರೆಗೂ ಬೇಕಾಗುತ್ತದೆ. ಹಗಲು ನಿದ್ರೆ ಮಾಡಬಾರದು, ರಾತ್ರಿ ವೇಳೆ, ನಿದ್ರೆಗೆ ಮುನ್ನ ಕಾಫಿ ಕುಡಿಯಬಾರದು ಮುಂತಾದವು ನಿದ್ರಾಂಗವಾದ ಯಮ. ನಿಯಮ - ದಿನದಲ್ಲಿ ಸ್ವಲ್ಪವಾದರೂ ದೈಹಿಕ ಪರಿಶ್ರಮವಿರಬೇಕು, ಮನಸ್ಸು, ಬುದ್ಧಿಗಳನ್ನು ಸಕ್ರಿಯವಾಗಿಟ್ಟುಕೊಳ್ಳಲು ಏನನ್ನಾದರೂ ಓದಬೇಕು ಮುಂತಾದ, ಆಚರಿಸಬೇಕಾದ ಉಪಾಯಗಳೇ ನಿದ್ರೆಗೆ ನಿಯಮವಾಗುತ್ತದೆ. ಆಸನ - ಮಲಗಿಕೊಂಡಿರುವ ಭಂಗಿಯೇ ನಿದ್ರೆಗೆ ಅತ್ಯಂತ ಸೂಕ್ತವಾದ ಆಸನ. ನಿದ್ರೆಯೇ ಸಹಜವಾಗಿ ಒಲಿದಿದ್ದರೆ, ಅದು ನಿಂತುಕೊಂಡಿರುವವರನ್ನೂ, ಕುಳಿತುಕೊಂಡಿರುವವರನ್ನೂ ತಾನಾಗಿಯೇ ಮಲಗಿಸಿಬಿಡುತ್ತದೆ. ಪ್ರಾಣಾಯಾಮ - ನಿದ್ರೆ ಬರುತ್ತಿದ್ದರೆ ನಮ್ಮ ಉಸಿರಾಟದ ಗತಿಯೂ ಬದಲಾಗುತ್ತಿರುತ್ತದೆ. ತಾಯಂದಿರು ಮಕ್ಕಳ ಉಸಿರಾಟದ ಬದಲಾವಣೆಯನ್ನು ಗಮನಿಸಿಯೇ ನಿದ್ರೆ ಬರುತ್ತಿದೆಯೆಂದು ಗುರುತಿಸಿ, ನಿದ್ರೆ ಮಾಡಿಸಿಬಿಡುತ್ತಾರೆ. ನಿದ್ರಾಹೀನತೆಯಿರುವವರು ಪ್ರಯತ್ನಪೂರ್ವಕವಾಗಿ ದೀರ್ಘ ಉಸಿರಾಟವನ್ನು ಮಾಡಿದರೆ ಉಸಿರಾಟದ ವೇಗ ಶಮನವಾಗಿ ನಿದ್ರೆ ಚೆನ್ನಾಗಿ ಬರುತ್ತದೆ.

 ಪ್ರತ್ಯಾಹಾರ - ನಿದ್ರೆ ಮಾಡಬೇಕೆಂದರೆ, ಕೈ ಕಾಲುಗಳ ಕೆಲಸವನ್ನು ಬಿಟ್ಟು ಒಂದೆಡೆ ಮಲಗಿಕೊಳ್ಳುತ್ತೇವೆ. ಕಣ್ಣಿನ ಕೆಲಸ ಬಿಟ್ಟು, ಕಣ್ಣು ಮುಚ್ಚಿಕೊಳ್ಳುತ್ತೇವೆ. ಒಟ್ಟಾರೆ ಇಂದ್ರಿಯಗಳನ್ನು ಅವುಗಳ ವಿಷಯದಿಂದ ಹಿಂದಿರುಗಿಸುತ್ತೇವೆ. ಧಾರಣ, ಧ್ಯಾನ - ನಿದ್ರೆಯ ಸ್ಥಿತಿಯನ್ನು ಮನಸ್ಸಿನಲ್ಲಿ ಧರಿಸಿ ಉಳಿದ ಯೋಚನೆಗಳನ್ನು ಬಿಟ್ಟುಬಿಡುತ್ತೇವೆ. ನಿದ್ರಾ ಹೀನತೆಯಿರುವವರಿಗೆ ವೈದ್ಯರು "Counting the sheep" ಮೊದಲಾದ ಯಾವುದಾದರೂ ಒಂದು ವಿಷಯವನ್ನು ಮಾತ್ರ ಚಿಂತಿಸಲು ಹೇಳುತ್ತಾರೆ ಮತ್ತು ಇದರಿಂದ ನಿದ್ರೆ ಸುಲಭವಾಗುತ್ತದೆ. 

ಆದುದರಿಂದ ಅಷ್ಟಾಂಗ ಯೋಗವು ಯಾರೋ ಹಿಮಾಲಯದಲ್ಲಿ ಕುಳಿತಿರುವ ತಪಸ್ವಿಗಳಿಗೆ ಮಾತ್ರ ಸೀಮಿತವಾಗಿರದೇ ಎಲ್ಲರೂ ತಮ್ಮ ನಿತ್ಯಜೀವನದಲ್ಲಿ ಅಳವಡಿಸಿಕೊಳ್ಳಬಹುದಾದ, ಅಳವಡಿಸಿಕೊಳ್ಳಬೇಕಾದ ಉಪಾಯಗಳ ಸಮೂಹವಾಗಿದೆ. ಮಹರ್ಷಿಗಳು ಈ ಉಪಾಯಗಳನ್ನು ಭಾರತೀಯ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿ ಹೆಣೆದಿದ್ದಾರೆ.

ಸೂಚನೆ: 31/10/2020 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.  

Thursday, October 29, 2020

ஆத்திகன் – நாத்திகன்)

மூலம்: தாரோடி  சுரேஶ்

தமிழாக்கம்: வனஜா

மின்னஞ்சல் : (lekhana@ayvm.in)




'அது உண்டுஎன்று கூறுவோர் ஆத்திகர்கள்(நம்புபவர்கள்). 'அது இல்லைஎன மறுப்பவர்கள் நாத்திகர்கள்(நம்பாதோர்). இத்தகு சொற்கள்   சாதாரணமாக புழக்கத்தில் உள்ளவை. மக்கள் 'நான் நம்புகிறேன்' அல்லது 'நம்பவில்லைஎன்கையில்  எதை குறிப்பிடுகின்றனர்உண்மையில்  நம்புவோர் 'அது உண்டுஎன கூறுகையில் இறைவன் இருக்கின்றான் என நம்புவதாக பொருள். அல்லது 'அது இல்லைஎன வாதிடும் போது அவர்கள் இறைவன் உண்டு என்பதை நம்பவில்லை எனபொருள். யாருடைய கூற்று உண்மைஇறைவன் உண்மையில் இருக்கின்றானா அல்லது மாயத்தோற்றமாஇத்தகைய வினாக்கள் எழுவது இயற்கையே. நம்புபவர்களின் எண்ணிக்கை மிகுதியாக உள்ளதால் மக்களாட்சி முறையை பின்பற்றி, "பெரும்பான்மையான மக்களின் கூற்று 'இறைவன் இருக்கின்றான்என்பதனால் அவன் உள்ளான் என தீர்மானிக்கலாம். அவன் பற்பல பெயர்களால் அழைக்கப்படலாம்.  அது முக்கியமல்ல.  அவன் இருக்கிறான் என்பதே சிறப்பு" என்று கூறுவதா?.

பின் அவன் இருப்பை தீர்மானிப்பது எங்ஙனம்? புலன்களின் மூலம் அறிய இயலாததை புலன்களுக்கு அப்பாலுள்ள  சாம்ராஜ்யத்திற்கு செல்வதன் மூலமே உணரவேண்டும். அத்தகைய தகுதி பெற்றவர்கள் அதனை புலன்களுக்கு அப்பாற்பட்ட 'யோகத்ருஷ்டி(பார்வை)'  என விவரிக்கின்றனர்.  இத்தகு பார்வையை கடுந்தவத்தால் அல்லது குருவின் அருளால் மட்டுமே பெற இயலும். புற கண்களால் காண இயலாததை நுண்ணோக்கியின்(பூதக்கண்ணாடி) மூலம் காணலாம் என்பது உண்மையன்றோஅக்ஞேயவாதிகள்(அஞ்ஞானிகள்)  'அது அவரின் மாய தோற்றம்மடமை' எ வாதிடலாம். 'உளது' எனில் புலன்களால் உணர இயல வேண்டும் என வாதிடுவர். 'இல்லாத ஒன்றை தேடுவது வீணானது. நம் வாழ்நாள் முழுதும் தேடி  இறுதியில் அது இல்லை என்று கண்டறிந்தால் நம் வாழ்க்கை வீணாகுமன்றோஎன்று நம்பாதவர்கள் புலம்புவர். இன்றைய விஞ்ஞானமும் இவ்வாதத்தை ஒப்புக்கொள்வதில்லை. ஆராய்ச்சியே வீணானதென்றால் இன்றைய விஞ்ஞானத்தின் வளர்ச்சியே இயலாது அல்லவா?.

ஸ்ரீ ஸ்ரீரங்கமஹாகுரு மக்களை நான்கு வகையாக பிரித்துக்கூறியுள்ளார். "ஆத்திக—ஆத்திகர்", "ஆத்திக--நாத்திகர்", "நாத்திக--நாத்திகர்" மற்றும் "நாத்திக—ஆத்திகர்."

முதல் பிரிவினர் இறைவன் இருப்பதை ஒப்புக் கொள்வதுடன் அவரை தம் இக-பர வாழ்விலும்  ஒருங்கிணைத்துக்கொள்வர். அவர்  அதன் இருப்பை அனுபவத்தில் உணர்ந்து அறிந்து கொண்டவர்.

இரண்டாம் பிரிவினர் இறைவன் இருப்பதை உள்ளத்தில் உணர்ந்தாலும் வெளியே இல்லை என்று கூறுவர். ஒற்றை கண்பார்வையுடையவர்களின்  அரசாட்சியில் தன்  பாதுகாப்பிற்காக ஒரே கண்பார்வை உள்ளபடி நடிக்க வேண்டும். ஒரு கண்ணில் பார்வையுள்ள அரசன் தன் குடி மக்களும் அவ்வாறே இருக்க வேண்டுமென விரும்புவதில் வியப்பேதுமில்லையே. அவ்வாறு பாதுகாப்பிற்காக 'இல்லை' என்று கூறுவர்.

"நாத்திக--நாத்திகர்"  எனும் பிரிவினர் இறைவன் இருப்பதை ஒப்புக்கொள்வதில்லை. வெளி உலக வாழ்க்கையையும் வீணாகவே  கழிக்கின்றனர். ஆனால் இவர்கள் சொல்வதைப்போன்றே  நடந்து கொள்ளும்  நாணயமானவர்களாதலால் அவர்களுக்கு என்றாவது ஒரு நாள் உண்மையை புரிய வைப்பது இயலும்.  

ஆனால் மிகவும் அபாயகரமானவர்கள்  "நாத்திக—ஆத்திகர்'' என்ற பிரிவினர். மனதளவில் இறைவன் இருப்பதை ஒப்புக்கொள்ளாவிடினும் வெளிஉலகிற்காக நம்புவதுபோல்  நடிக்கின்றனர். நம்பிக்கை உள்ளவன் போல் காட்டிக்கொள்கின்றனர். அவர்கள் இறைஅனுபவத்தின் சுவையும், புலன்களுக்கு அப்பாற்பட்ட அனுபவமும்  இல்லாதவர்கள். அவர்களுக்கு தேவை "ஆத்திகன் " என்ற பட்டம் மட்டுமே. அவரிடம்  அறிவு சார்ந்த நேர்மையோ, உண்மையை அறிவதற்காக பாடுபடும் ஆர்வமோ இல்லை. நம்பிக்கை உள்ளவன் என்ற முகமூடி அணிபவர்கள். பல நேரங்களில் அந்த நடிப்பு வயிற்று பாட்டிற்காகவே  அமைந்திருக்கும். அறிந்தோ  அறியாமலோ  இத்தகைய மக்கள், சமூகத்தை வஞ்சித்து தவறான பாதையில்  வழிநடத்துகின்றனர்.
நாம் எப்போதும் இப்பிரிவினரிடம் எச்சரிக்கையாக இருத்தல் அவசியம்.

நேர்மையானவர்கள் தம் சொற்போன்றே  வாழ்க்கையில் நடந்து கொள்வர். அவர்களின் சொற்பொழிவு ஒருவரை உண்மையை நோக்கி கொண்டு செல்லும். ஆகையினால் நாம் 'ஆத்திக—ஆத்திகர்', 'ஆத்திகநாத்திகர்', 'நாத்திகநாத்திகர்' என்ற மூன்று நேர்மையான பிரிவினரையும் அவசியம்  வணங்க வேண்டும்.  

குறிப்பு: இக்கட்டுரை யின் கன்னட மூலம் AYVM blogs ல் காணலாம்.     

Wednesday, October 28, 2020

ಪಾರ್ವತಿಯ ತಪಸ್ಸು-ನಮ್ಮ ಆದರ್ಶ (Parvatiya Tapassu-Namma Adarha0

ಲೇಖಕರು: ಶ್ರೀಮತಿ ಸೌಮ್ಯಾ ಪ್ರದೀಪ್
(ಪ್ರತಿಕ್ರಿಯಿಸಿರಿ lekhana@ayvm.in)



ಪಾರ್ವತೀ ದೇವಿಯು ಪರಮೇಶ್ವರನನ್ನು ಪತಿಯನ್ನಾಗಿ ಪಡೆಯಲು ತಪಸ್ಸೊಂದೇ ಏಕೈಕ ಸಾಧನವೆಂಬುದನ್ನು ಅರಿತು, ಪರಶಿವನನ್ನು ಹೊಂದಲು ಸಾಮಾನ್ಯರು ಊಹಿಸಲೂ ಸಾಧ್ಯವಾಗದಂತಹ ಅತ್ಯಂತ ಕಠಿಣವಾದ ತಪಸ್ಸನ್ನು ಆಚರಿಸುತ್ತಾಳೆ..ಅನೇಕ ದಿನಗಳವರೆಗೆ ಪಂಚಾಗ್ನಿಯ ಮಧ್ಯದಲ್ಲಿ ನಿಂತು, ತರಗೆಲೆಗಳನ್ನೇ ಆಹಾರವಾಗಿ ಸೇವಿಸಿ, ನಂತರ ಅವನ್ನೂ ತ್ಯಜಿಸಿ "ಅಪರ್ಣಾ" ಎಂಬ ಹೆಸರು ಪಡೆದು ಏಕಾಗ್ರವಾದ ಮನಸ್ಸಿನಿಂದ ಪರಮೇಶ್ವರನನ್ನೇ ಧ್ಯಾನಿಸುತ್ತಾಳೆ. ಅವಳ ತಪಸ್ಸಿನ ದಾರ್ಢ್ಯವನ್ನು ಪರೀಕ್ಷಿಸುವ ಸಲುವಾಗಿ  ಪರಮೇಶ್ವರನು ಓರ್ವ ಬ್ರಹ್ಮಚಾರಿಯ ರೂಪದಲ್ಲಿ ಬಂದು, ಅವಳ ತಪಸ್ಸಿನ ಕಾರಣ ತಿಳಿದು - "ರಾಜಕುಮಾರಿಯಾದ ತ್ರಿಲೋಕ ಸುಂದರಿಯಾದ ನೀನೆಲ್ಲಿ? ಸ್ಮಶಾನವಾಸಿಯಾದ ಭಸ್ಮಧಾರಿಯಾದ ಆ ಪರಶಿವನಲ್ಲಿ"? ಇತ್ಯಾದಿಯಾಗಿ ಶಿವನನ್ನು ಅತಿಯಾಗಿ ನಿಂದಿಸಿ, ಅವನು ನಿನಗೆ ಯೋಗ್ಯವಾದ ವರನಲ್ಲ ಎನ್ನುತ್ತಾನೆ. ಇದನ್ನು ಸ್ವಲ್ಪವೂ ಸಹಿಸದ  ಪಾರ್ವತಿಯು ತನ್ನೆರಡೂ ಕಿವಿಗಳನ್ನು ಮುಚ್ಚಿಕೊಂಡು "ಮಹಾತ್ಮರನ್ನು ನಿಂದಿಸುವುದು ಎಷ್ಟು ಪಾಪಕರವೋ ಆ ನಿಂದೆಯನ್ನು ಕೇಳಿಸಿಕೊಳ್ಳುವುದೂ ಅತ್ಯಂತ ಪಾಪಕರ. ಆ ಶಿವನ ಮಹಿಮೆಯನ್ನು ನೀನೇನು ಬಲ್ಲೆ? ನಿನ್ನ ದೃಷ್ಟಿಯಲ್ಲಿ ಅವನು  ಹೇಗೇ ಇರಲಿ, ಅವನೇ ತ್ರಿಲೋಕನಾಥನಾದ ನನ್ನ ಸ್ವಾಮಿ" ಎಂಬುದಾಗಿ ಹೇಳಿ ತಪಸ್ಸನ್ನು ಮುಂದುವರೆಸಲು ಬೇರೆಡೆಗೆ ತೆರಳಲು ಸಿದ್ಧಳಾಗುತ್ತಾಳೆ. ಆಗ ಪರಮೇಶ್ವರನು ತನ್ನ ನಿಜಸ್ವರೂಪವನ್ನು ತೋರಿಸಿ ತನ್ನನ್ನು ಪಡೆಯುವ ಬಗ್ಗೆ ಅಚಲವಾದ ನಿರ್ಧಾರವನ್ನು ಹೊಂದಿರುವ ಪಾರ್ವತಿಯನ್ನು ವರಿಸುತ್ತಾನೆ.

ಪ್ರತಿಯೊಂದು ಜೀವಿಯ ಮಹಾಧ್ಯೇಯವು ಭಗವಂತನನ್ನು ಪಡೆಯುವುದೇ ಆಗಿದೆ. ಅದಕ್ಕೆ ಅನುಗುಣವಾದ ಅವಾಂತರ[ಅನ್ಯ] ಧ್ಯೇಯಗಳನ್ನು ಇಟ್ಟುಕೊಳ್ಳಬೇಕು ಎಂಬುದು ಈ ದೇಶದ ಋಷಿಗಳ ಅಭಿಮತ. ಶ್ರೀರಂಗಮಹಾಗುರುಗಳು- ಮನುಷ್ಯ ಜನ್ಮಸಿಕ್ಕಿದ ತಕ್ಷಣವೇ ಭಗವಂತನನ್ನು ಪಡೆಯುವ ಹಕ್ಕು ಬಂದು ಬಿಡುತ್ತದೆ. ಅದನ್ನು ಅಧಿಕಾರದಿಂದ ಚಲಾಯಿಸಬೇಕು. ಗಾಳಿಬಂದಾಗ ತೂರಿಕೊಂಡು ಮಾನವ ಜನ್ಮವನ್ನು ಸಾರ್ಥಕಪಡಿಸಿಕೊಳ್ಳಬೇಕು ಎಂದಿದ್ದರು. ಪಾರ್ವತಿಯ ತಪಸ್ಸು ನಮ್ಮೆಲ್ಲರಿಗೂ ಆದರ್ಶವಾಗಿದೆ. ಪ್ರಕೃತಿಯಲ್ಲಿ ಜೀವಿಸುವ ನಾವೆಲ್ಲಾ ಪ್ರಕೃತಿಸ್ವರೂಪಿಣಿಯಾದ ಪಾರ್ವತಿಯ ಅನುಗ್ರಹದಿಂದ ನಮ್ಮೊಳಗೇ ಚೈತನ್ಯಮಯವಾಗಿ ಬೆಳಗುತ್ತಿರುವ ಪರಶಿವನನ್ನು ಕಂಡು ವರಿಸುವಂತಾಗಲಿ. ಆ ಲಕ್ಷ್ಯಕ್ಕೆ ಅಭಿಮುಖವಾಗಿಯೇ ನಮ್ಮ ವ್ಯವಹಾರ ಜೀವನವನ್ನು ಹೊಂದಿಸಿಕೊಳ್ಳುವಂತಾಗಲಿ ಎಂದು ಪ್ರಾರ್ಥಿಸೋಣ. ಅವಳಂತೆ ಭಗವಂತನನ್ನೇ ಮನಸ್ಸಿನಲ್ಲಿ ಸದಾ ಚಿಂತಿಸುತ್ತಾ ಪರಮಾತ್ಮನನ್ನು ಹೊಂದಲು ಪ್ರಯತ್ನಿಸೋಣ.

ಸೂಚನೆ: 28/10/2020 ರಂದು ಈ ಲೇಖನ ಉದಯವಾಣಿ ಯಲ್ಲಿ ಪ್ರಕಟವಾಗಿದೆ.  

Monday, October 26, 2020

एक एव देवः, न नाना (Ek Ev Devah, Devah Naana)

लेखकः – विद्वान् नरसिंह भट्टः 
(प्रतिक्रियां दातुं शक्यते :  lekhana@ayvm.in)



'एकं सद् विप्राः बहुधा वदन्ति' इति काचन श्रुतिरस्ति। सदिति अरूपम् अव्यक्तं नित्यं शाश्वतं च एकमेव अस्ति । तत्तु 'देव' इति पदेन वयं व्यवहरामः । परन्तु त्रयस्त्रिंशत् कोटिदेवाताः सन्ति । अथापि एकः देवः इति व्यवहारः असाधुः इति केषाञ्चन वादः श्रूयते। आपाततः स वादः सत्यमिव भाति । परन्तु स देवः एक एव सन् नाना रूपेण विराजते । इदं कथं युज्यते? 

एकस्मिन् गृहे गृहस्थः भवति । स भार्यायै पतिः भवति तत्र पतिरूपेण कार्यं करोति । पुत्राय पिता भवति तत्र पितृरूपेण कार्यं करोति । सहोदराणां कृते भ्राता भवति तत्र सहोदरत्वं निर्वहति। यदा स याने भवति तं यात्रिकः इति उपचरतन्ति । एवं एक एव यथा पतिः पिता भ्राता यात्रिकः इत्यादिपदव्यवहार्यः भवति तथैव एक एव देवः तत्तत् कार्यानुगुणं विविधनामानि विधत्ते । सृष्टेः पूर्वं स एकः अद्वयः परब्रह्मनामकः आसीत् । यदा तस्मिन् 'बहुधा व्याकरवाणि' इति सङ्कल्पः अजायत तदाप्रजापतिरूपम् अधत्त ।सृष्टिकार्ये निरतस्य ब्रह्मणः रूपविशेष एव प्रजापतिः इति कथ्यते । स प्रजापतिः आत्मानं  प्रकृतिपुरुषरूपेण विभक्तवान् ।

तयोः पुरुषप्रकृत्योः संयोगेन प्रथमा सृष्टिरभवत् । स प्रजापतिः उत्तरत्र सृष्टिकार्यं निरन्तरं एतावत्पर्यन्तम् अविच्छिन्नरूपेण निरवहत् । यदा स सृष्टिं करोति स ब्रह्मा इति नाम्ना प्रथितः सञ्जातः । सा सृष्टिः एकैनैव रूपेण न तिष्ठति । निरन्तरम् अनुवर्तते । बीजं स्वस्वरूपेण वर्तते चेत् तदा तस्य उपयोगः कदापि न भवति । बीजं अङ्कुरशाखोपशाखापुष्पफलरूपेण पुनः बीजरुपे पर्यवसानं गच्छति । तदा नैकं बीजं फलति । अनन्तानि बीजानि भूत्वा लोकोपकाराय कल्पते । एवमेव ब्रह्मा सृष्टिं करोति । तां सृष्टिं काचित् शक्तिरेव पालयति । तां शक्तिं विष्णुः इति नाम्ना व्यवहरन्ति । एवमेव बीजं न केवलं शाखोपशाखारूपेण  विवर्धते । अपि तु कदाचित् तस्य लयोऽपि भवति । तस्मिन् लयेऽपि काचन शक्तिः अभ्युपगन्तव्या । सा शक्तिः शिवः इति ख्यातः । एवं प्रवर्तिता सृष्टिः एतावत्कालपर्यन्तम् अनवरतं स्वस्वशक्तिरूपेण परिवर्तयन्ती अस्ति । अस्यां सृष्टौ न शक्तित्रयमलम् । विघ्ननिवारकत्वेन विनायकं विघ्नकर्तृत्वरूपेण विघ्नराजं-विघ्नेशं वयं भावयाम । एवमेव यथा पुरुषशक्तिरस्ति तथा स्त्रीशक्तिरपि अस्ति । तदा दुर्गा-सरस्वती-लक्ष्मीरूपेण भावयाम । एतस्मिन् क्रमे कार्यानुगुणं अस्माभिः त्रयस्त्रिंशद्देवतानां भावना क्रियते । वस्तुतः एक एव देवः एतादृशविविधकार्याणां निर्वहणं कर्तुं स्वरूपं बहुधा व्यरचयत् । 

प्रतिदिनं वयं गुरुस्तुतिं पठामः "गुरुर्ब्रह्मा गुरुर्विष्णुः गुरुर्देवो महेश्वरः । गुरुः साक्षात् परब्रह्म तस्मै श्रीगुरवे नमः" इति । एक एव गुरुः सन् ब्रह्मविष्णुशिवरूपेण विवर्तः सन् अग्रे स्वयं परब्रह्मापि भवति । एवं एकः एव देवः वा त्रयस्त्रिशत् कोटिदेवाः इति संशयः निरस्तः ।

ಯೋಗವು ಭಾರತೀಯ ಸಂಸ್ಕೃತಿಯ ಬೆನ್ನೆಲುಬು ( Yogavu Bharatiya Sanskrtiya Bennelubu )

  ಲೇಖಕರು: ಶ್ರೀ ಜಿ. ನಾಗರಾಜ. 

 (ಪ್ರತಿಕ್ರಿಯಿಸಿರಿ lekhana@ayvm.in)


ಯೋಗವೆಂದು ಪ್ರಸಿದ್ಧವಾಗಿರುವ ಅಷ್ಟಾಂಗಯೋಗವು ಭಾರತೀಯ ಸಂಸ್ಕೃತಿಯ ಅಂಗವೆನ್ನುವುದು ಇಂದಿನ ಜನಾಭಿಪ್ರಾಯವಾಗಿದೆ. ಆದರೆ, ಒಳಹೊಕ್ಕು ನೋಡಿದರೆ, ಯೋಗವು ಭಾರತೀಯ ಸಂಸ್ಕೃತಿಯ ಅಂಗವಷ್ಟೇ ಅಲ್ಲಾ, ಜೀವಾಳವಾಗಿದೆ, ಬೆನ್ನೆಲುಬಾಗಿದೆ ಎನ್ನುವುದನ್ನು ಶ್ರೀರಂಗಮಹಾಗುರುಗಳು ಎತ್ತಿ ತೋರಿಸಿಕೊಟ್ಟಿದ್ದಾರೆ. ಯೋಗದ ಅಂಗಗಳಾವುವು ಮತ್ತು ಅವು ಹೇಗೆ ಜೀವನದಲ್ಲಿ ಹಾಸುಹೊಕ್ಕಾಗಿ ನಿತ್ಯಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಸೂತ್ರಗಳಿಂದ ಕೂಡಿದೆಯೆಂಬುದನ್ನು ವಿವರಿಸುವುದು ಈ ಲೇಖನ ಮಾಲೆಯ ಉದ್ದೇಶ.

ಮೊದಲನೆಯದಾಗಿ ಅಷ್ಟಾಂಗಯೋಗದ ಒಟ್ಟಾರೆ ನೋಟವನ್ನು ಗಮನಿಸೋಣ. ಅಷ್ಟಾಂಗ ಯೋಗವೆಂದರೆ, ಎಂಟು ಅಂಗಗಳುಳ್ಳ ಯೋಗ ಎಂದರ್ಥ. ಈ ಎಂಟು ಅಂಗಗಳಾವುವೆಂದರೆ: ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ, ಸಮಾಧಿ. ಪತಂಜಲಿ ಮಹರ್ಷಿಗಳ ಯೋಗಸೂತ್ರದ ಪ್ರಕಾರ ಈ ಅಂಗಗಳ ವಿವರಗಳನ್ನು ಈಗ ಗಮನಿಸೋಣ.

"ಯಮ"ವು ಮೊದಲನೆಯ ಅಂಗವಾಗಿರುತ್ತದೆ. ಯಮ ಎಂದರೆ ಸಂಯಮ ಅಥವಾ ಹತೋಟಿಯಲ್ಲಿಟ್ಟುಕೊಳ್ಳುವಿಕೆ ಎಂದರ್ಥ. ನಮ್ಮ ದೇಹ, ಮನಸ್ಸು, ಬುದ್ಧಿಗಳಲ್ಲಿ ವೇಗಗಳಿದ್ದು ಅದು ಯೋಗ ಸಾಧನೆಗೂ ಮತ್ತು ಏಕಾಗ್ರಚಿತ್ತರಾಗಿ ಮಾಡಬೇಕಾದ ಲೌಕಿಕ ಕೆಲಸಗಳಿಗೂ ತೊಡಕನ್ನುಂಟುಮಾಡುತ್ತಿರುತ್ತದೆ. ಈ ವೇಗವನ್ನು ನಿಯಂತ್ರಿಸಲು ಇರುವ ಉಪಾಯಗಳಾದ ಅಹಿಂಸಾ, ಸತ್ಯ, ಅಸ್ತೇಯ, ಬ್ರಹ್ಮಚರ್ಯ, ಅಪರಿಗ್ರಹಗಳೇ ಯಮ.

ಶೌಚ, ಸಂತೋಷ, ತಪಸ್ಸು, ಸ್ವಾಧ್ಯಾಯ, ಈಶ್ವರ ಪ್ರಣಿಧಾನಗಳೇ "ನಿಯಮ" ಎಂಬ ಎರಡನೆಯ ಅಂಗ. ಮೂರನೆಯ ಅಂಗವಾದ "ಆಸನ" ಎಂದರೆ ಇರಿಸುವುದು ಎಂದರ್ಥ. ಶರೀರವನ್ನು ಸ್ಥಿರವಾಗಿ ಸುಖವಾಗಿ ಇರಿಸುವ ಭಂಗಿಯನ್ನು ಆಸನ ಎನ್ನುತ್ತಾರೆ. ನಾಲ್ಕನೇ ಅಂಗ "ಪ್ರಾಣಾಯಾಮ". ನಮ್ಮ ಉಸಿರಾಟದ ಹಿಂದಿರುವ ಶಕ್ತಿಯೇ ಪ್ರಾಣ. ಉಸಿರಾಟವನ್ನು ನಿಯಂತ್ರಿಸುವ ಮೂಲಕ ಪ್ರಾಣಶಕ್ತಿಯನ್ನು ನಿಯಂತ್ರಿಸುವ ಉಪಾಯವೇ ಪ್ರಾಣಾಯಾಮ. ಐದನೆಯ ಅಂಗವಾದ "ಪ್ರತ್ಯಾಹಾರ" ಎಂದರೆ ಹಿಂದಕ್ಕೆಳೆದುಕೊಳ್ಳುವುದು ಎಂದರ್ಥ. ಇಂದ್ರಿಯಗಳನ್ನು ಅವುಗಳ ವಿಷಯಗಳಿಂದ ಹಿಂದೆಗೆದುಕೊಂಡು ಅಂತರ್ಮುಖವಾಗಿಸುವ ಉಪಾಯವನ್ನು ಪ್ರತ್ಯಾಹಾರ ಎನ್ನುತ್ತಾರೆ. ಆರನೆಯ ಅಂಗವೇ "ಧಾರಣ". ಧಾರಣವೆಂದರೆ ಧರಿಸುವುದು ಎಂದರ್ಥ. ಮುಂದಿನ ಹೆಜ್ಜೆಯಾದ ಧ್ಯಾನದಲ್ಲಿ ಒಂದೇ ವಸ್ತುವನ್ನು ಸ್ಮರಿಸಿಕೊಳ್ಳುತ್ತಿರಬೇಕಾಗುತ್ತದೆ. ಆ ವಸ್ತುವನ್ನು ಚಿತ್ತದಲ್ಲಿ ಧರಿಸುವುದೇ ಧಾರಣ. ಧರಿಸಿದ ವಸ್ತುವೊಂದನ್ನೇ ಸ್ಮರಿಸುವ ಸ್ಥಿತಿಯು ಧ್ಯಾನ. ಇದರ ಪರಿಣಾಮವಾಗಿ ಮನಸ್ಸು ಧಾರಣ ಮಾಡಿದ ವಸ್ತುವಿನಲ್ಲಿ ಲಯಹೊಂದಿ ಬಾಹ್ಯ ಪ್ರಜ್ಞೆಯು ಇಲ್ಲವಾದಾಗ ಆ ಸ್ಥಿತಿಯನ್ನು "ಸಮಾಧಿ"ಯೆನ್ನುತ್ತಾರೆ. ಇದೇ ಎಂಟನೆಯ ಅಂಗವಾಗಿದೆ.

ಈ ಎಂಟೂ ಅಂಗಗಳ ವಿವರವನ್ನು ಮುಂದಿನ ಪ್ರಕರಣಗಳಲ್ಲಿ ಗಮನಿಸೋಣ

ಸೂಚನೆ: 24/10/2020 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.

Friday, October 23, 2020

A New Trick to make an old thief take to his Heels

Kannada Article by Vidwan B G Anantha

 English Rendering by M R Bhashyam




We are carrying many bad and ignoble (Anaatma gunagalu) qualities for a long time. Some would have come through our genes. These are not easily brought under control. They rebel saying "We have made this our home for a long time. After keeping quiet for so long, why are you trying to throw us out now?"  Shri SriRanga Mahaguru used to cite an incidence about this.

An epidemic had broken out during his ancestor's time. As was the practice then, people used to leave their homes in the village, and live in fields. They would build temporary huts with coconut and beetle leaves and stay.

His ancestors had a jar full of tasty pickles in their hut.  As days progressed, the pickles started vanishing faster than anticipated. One day as the family members were watching, an unknown hand crawled through a hole in the hut and was taking away the pickles. They ran and caught the thief. To their astonishment the thief said "I am taking these pickles since many days. Why are you shouting hoarse now?!" The thief was complaining against the house holder!! What it means is that we must make sure that bad qualities do not take roots in us for long. If they do, we must get rid of them cleverly. It is not easy to get rid of dogs and cats that we have reared for long. If they leave suddenly, we will also not be pleased.

If this were to be so, is it easy to cast away mental volitions that have made their home in us for a long time?  We must bend our nature slowly with love, cast away the bad and slowly let the good characteristics (Aatma gunas) permeate into us.

There is a method for this in nature. We can understand this with an example. Let us assume that a thief sneaks into our home when we are asleep. The family head knows that the thief has sneaked in. What happens if the thief comes to know that the family has come to know about his presence? Does not the thief try to get away? The bad volitions that we have are similar. If they come to know that we are aware, they vanish automatically. It may take a little while though.

This is the capability of our mind. The ones we do not want will go away automatically. Those we want will come in and build nests. Hence it is important that we recognize the bad qualities that we have. Once we have identified, it is necessary that we are determined not to retain them. If we pray to the Almighty saying "kindly save me from these" it is certain that these will not stay for long. Let us perform this exercise on ourselves and succeed!

Note: The Kannada version of this article can be viewed at AYVM blogs.    

Wednesday, October 21, 2020

ಸತ್ಸಂಕಲ್ಪದ ಮಹಿಮೆ (Satsankalpada Mahime)

ಲೇಖಕರು: ಶ್ರೀಮತಿ ರತ್ನಾಸುರೇಶ
 (ಪ್ರತಿಕ್ರಿಯಿಸಿರಿ lekhana@ayvm.in)


ಜ್ಯೋತಿಷಿಯೊಬ್ಬನ ಪ್ರಸಿದ್ಧಿಗೆ ಪ್ರಭಾವಿತನಾಗಿ ಯುವಕನೊಬ್ಬ ತುಂಬಾ ಹೊತ್ತು ಕಾದು ದರ್ಶನ ಪಡೆದನು. ಯುವಕನ ಪ್ರಾರ್ಥನೆಯಂತೆ ಜ್ಯೋತಿಷಿ ಯುವಕನ ಅಂಗೈ ನೋಡಿ ನಾಳೆ ಬಾ ಎಂದರು. ಕತ್ತಲಾದ್ದರಿಂದ ಆ ರಾತ್ರಿ ಊರಿನ ಆಚೆಯಿರುವ ಪಾಳು ಶಿವದೇವಾಲಯದಲ್ಲಿ ತಂಗಿದ. ದೇವಸ್ಥಾನದ ದುಃಸ್ಥಿತಿ ನೋಡಿ ದುಃಖಿತನಾಗಿ, ಭಗವಂತ ಆಯುಸ್ಸು ಕೊಟ್ಟರೆ ಈ ದೇವಾಲಯದ ಜೀರ್ಣೋದ್ಧಾರ ಮಾಡುತ್ತೇನೆ ಎಂಬ ಸತ್ಸಂಕಲ್ಪಮಾಡಿ ನಿದ್ರಿಸಿದ. ಮಧ್ಯರಾತ್ರಿ ಭಾರೀ ಶಬ್ದದೊಂದಿಗೆ ಯುವಕನ ಪಕ್ಕದಲ್ಲಿಯೇ ಕಲ್ಲಿನ ತೊಲೆಯೊಂದು ಬಿದ್ದುಬಿಟ್ಟಿದೆ. ಯುವಕನಿಗೆ ಗಾಬರಿ, ಆಶ್ಚರ್ಯ. ಭಗವಂತನೇ ತನ್ನನ್ನು ಕಾಪಾಡಿದನೆಂಬ ಕೃತಜ್ಞತೆಯಿಂದ ವಿಶ್ರಾಂತಿ ಪಡೆದು ಪ್ರಾತಃಕಾಲ ಎದ್ದು ಜ್ಯೋತಿಷಿಯಲ್ಲಿಗೆ ಹೋದನು. ಜ್ಯೋತಿಷಿಗೆ ಆಶ್ಚರ್ಯ. ಹಿಂದಿನ ದಿನವೇ ಯುವಕನ ಆಯುಸ್ಸು ಮುಗಿದಿದೆ ಎಂಬುದು ತಿಳಿದಿತ್ತು. ತನ್ನ ಲೆಕ್ಕಾಚಾರ ತಪ್ಪದಿರುವ ಆತ್ಮವಿಶ್ವಾಸದಿಂದ ಜ್ಯೋತಿಷಿಯು- ನೀನು ನಿನ್ನೆ ಇಲ್ಲಿಂದ ಹೋದ ಮೇಲೆ ಏನೇನು ಮಾಡಿದೆ ಎಂಬುದನ್ನು ಸವಿಸ್ತಾರವಾಗಿ ಹೇಳು ಎನ್ನಲು, ಯುವಕನು ನಡೆದಿದ್ದೆಲ್ಲವನ್ನೂ ತಿಳಿಸಿದ. ಅದಕ್ಕೆ ಜ್ಯೋತಿಷಿಗಳು-ನಿನ್ನ ಆಯುಸ್ಸು ನಿನ್ನೆಗೆ ಮುಗಿದಿತ್ತು. ನೀನು ಮಾಡಿದ ಸತ್ಸಂಕಲ್ಪ ನಿನ್ನ ಆಯುಸ್ಸನ್ನು ವೃದ್ಧಿಸಿದೆ ಎಂದರು. ಗಭೋ೯ಪನಿಷತ್ತು ಸಾರುವಂತೆ ಪ್ರತಿ ಜೀವಿಯು ತಾಯಿಯ ೭-೮ ತಿಂಗಳಿನ ಗರ್ಭದಲ್ಲಿರುವಾಗ ಭಗವಂತನ ದರ್ಶನ ಪಡೆಯುತ್ತೆ. ಅದಕ್ಕೆತನ್ನ ಹಿಂದಿನ ಜನ್ಮಗಳ ಸ್ಮರಣೆಯು ಉಂಟಾಗಿ ಅದೊಂದು ಸಂಕಲ್ಪ ಮಾಡುತ್ತೆ.
 "ನಾನು ಗರ್ಭದಿಂದ ಆಚೆ ಬಂದ ಮೇಲೆ ಭಗವಂತ ನಿನ್ನನ್ನು ಮರೆಯದೇ ಬಾಳುತ್ತೇನೆ" ಎಂದು. ಆದರೆ ಭೂಪತನವಾಗುತ್ತಿದ್ದಂತೆಯೇ ಮಾಯೆಗೆ ಒಳಗಾಗಿ ತನ್ನ ಸಂಕಲ್ಪವನ್ನು ಮರೆತುಬಿಡುತ್ತೆ. ಹಾಗಾಗದಿರಲೆಂದೇ ಮಗು ಹುಟ್ಟಿದಾಗ ಪ್ರಸೂತಿಗೃಹದಲ್ಲಿ ತ್ರಿಕೋಣಾಕಾರದ ಹಣತೆ ಹಚ್ಚುವುದು,ಮತ್ತು ಘಂಟಾನಾದ ಮಾಡುವುದ. ಒಟ್ಟಿನಲ್ಲಿ,  ಷೋಡಶ ಸಂಸ್ಕಾರಗಳು ಇತ್ಯಾದಿ ಎಲ್ಲವೂ ಜೀವಿಗೆ ತನ್ನ ಸತ್ಸಂಕಲ್ಪವನ್ನು ನೆನಪಿಸುವ ಅಭಿಜ್ಞಾನಗಳನ್ನಾಗಿ ಆರ್ಯ ಮಹರ್ಷಿಗಳು ನಮ್ಮ ಸಂಸ್ಕೃತಿಯಲ್ಲಿ ತಂದಿದ್ದಾರೆ.ಶ್ರೀರಂಗಮಹಾಗುರುಗಳು ಹೇಳುವಂತೆ- "ಸಂಕಲ್ಪವು ಸುದೃಢವಾಗಿ ಶಕ್ತಿಯುತವಾಗಿದ್ದರೆ ಆ ಸಂಕಲ್ಪವನ್ನು ಹರಿಸಿಬಿಟ್ಟರೂ ಪರವಾಗಿಲ್ಲ. ಆ ಸಂಕಲ್ಪವೇ ಕೆಲಸ ಮಾಡಿಕೊಳ್ಳುತ್ತೆ" ಎಂಬುದಾಗಿ ಸತ್ಸಂಕಲ್ಪ ಮಾಡಿ ಭಗವಂತನೆಡೆಗೆ ಸಾಗೋಣ.

ಸೂಚನೆ: 21/10/2020 ರಂದು ಈ ಲೇಖನ ಉದಯವಾಣಿ ಯಲ್ಲಿ ಪ್ರಕಟವಾಗಿದೆ.   

Monday, October 19, 2020

देवकी परमानंदं.......(devakee paramaanandan.......)

लॆखक: सुब्रह्मण्य सॊमयाजि
हिन्दी अनुवाद: अर्चना वागीश
(के जवाब मे :  lekhana@ayvm.in)
        


श्रीकृष्ण के जन्म का शुभ समय था | कंस के कारागृह में जगमगाता हुआ रौशनी प्रकट हुयी | वसुदेव और देवकी के समक्ष भगवन् श्री कृष्ण पूरे वैभव के साथ जन्म लिए | श्रीमद् भागवत के अनुसार वसुदेव ने उस अद्भुत बालक का दर्शन इस प्रकार किया- उन्होंने कमल जैसे नयन को देखा, जो अपने चारों हाथों में शंख, चक्र, गदा और पद्म धारण किये हुए थे | अपने छाती पर श्रीवत्स चिह्न चमक रहा था | गला प्रकाशमान कौस्तुभ मणि से सुशोभित था | दीप्तिमान पीताम्बर से बालक का श्याम वर्ण शरीर लिपटा हुआ था |  उसके मुकुट हीरों रत्नों से सजा हुआ था | कर्ण कुण्डल से प्रकाशित उसके केश सूर्य किरणों की भांति रौशनी फैला रहे थे | सोने की मेखला कमर से बंधा हुआ था | भुजाओं सोने के बाजूबंद से और पग पर घुँघरू अलंकृत थे |

देवकी ने भी वसुदेव के साथ दिव्य बालक का दर्शन किया | वसुदेव द्वारा देखा गया वैभव अपने समक्ष रहकर भी, देवकी ने उस बालक का वर्णन इस प्रकार किया- "हे भगवान्! जिस दिव्य रूप का वर्णन योगियों करते हैं, उसी अव्यक्त रूप को मैं देख रही हूँ, जो सृष्टि का कारण हैं, ब्रह्मवस्तु, गुण और दोष रहित, संपूर्ण निर्गुण, अवैयक्तिक और परम सत, आप सच में विष्णु ही हैं|"

श्री रंगमहागुरु ने दोनों वर्णन का बहुत सुन्दर तरीके से तुलना किया हैं – "वसुदेव ने भगवान की बाहरी रूप का अनुभव किया | हालांकि तपस से परिपक्व हुयी नज़र से देवकी ने भगवान का दिव्य मंगल रूप का दर्शन किया | इसीलिए भगवन कृष्ण के विषय में कहा जाता हैं - " देवकी परमानंदं कृष्णम्  वंदे जगतगुरुम्" | देवकी ने अंतरंग में दिव्य ज्योति का दर्शन किया और उस अनुभव का अनायास वर्णन किया | हमारे देश की माताओं को भी इस प्रकार अंतरंग आनंद का आभास होना चाहिए |" वसुदेव का अनुभव भी प्रशंसनीय हैं | ऐसा अनुभव सामान्य जनों को दुर्लभ हैं | परन्तु देवकी को जिस तरह आंतरिक ज्योति का दर्शन और अनुभव हुआ वही तो परम लक्ष्य हैं- इसे भुलाया नहीं जा सकता | महर्षियों का कहना हैं की हर वस्तु का तीन रूप होते हैं- स्थूल, सूक्ष्म और परा | हमे सिर्फ स्थूल रूप पर ही ध्यान जाता हैं | सामने स्थित एक वृक्ष को देखते हैं | वृक्ष को जड़ धरती के भीतर संभालते हैं | जड़ को जो चैतन्य देती हैं उसे सिर्फ कृषक महसूस कर सकता हैं | स्थूल रूप को सूक्ष्म और परा रूप संभालते हैं - हमें यह नहीं भूलना चाहिए | इस प्रकार श्री कृष्ण के स्थूल रूप के पीछे छुपे हुए सूक्ष्म और परा रूपों का ज्ञान अगर हमें प्राप्त हो जाये तब हमारा जीवन सफल हो जाएगा | इसी को देवकी देवी ने अपनी भक्ति, तपस और साधना से प्राप्त किया हैं, वह हमारे लिए आदर्श बनती हैं |

सूचन : इस लेख का  अंग्रेज़ी  संस्करण AYVM ब्लॉग पर देखा जा सकता है | 

Sunday, October 18, 2020

ಆರ್ಯಸಂಸ್ಕೃತಿ ದರ್ಶನ - 15 (Arya Samskruti Darshana - 15)

ಮೌನವ್ಯಾಖ್ಯಾನದ ಮಹತ್ವ

ಲೇಖಕರು : ವಿದ್ವಾನ್ ಶ್ರೀ ಶೇಷಾಚಲ ಶರ್ಮಾ


 
ಗುರುವು ಶಿಷ್ಯರಿಗೆ ತತ್ತ್ವವನ್ನು ಉಪದೇಶಿಸುವ ಮಾರ್ಗಗಳು ಅಸಂಖ್ಯಾತವಾಗಿವೆ. ಚೋದಕ, ಬೋಧಕ ಮತ್ತು ಮೋಕ್ಷಪ್ರದ ಎಂದು ಮೂರು ವಿಧವಾದ  ಗುರುಗಳನ್ನು ಶಾಸ್ತ್ರವು ನಿರ್ದೇಶಿಸುತ್ತದೆ. ಚೋದಕನು ತತ್ತ್ವ ದರ್ಶನಕ್ಕೆ ಬೇಕಾದಪ್ರೇರಣೆಯನ್ನು ನೀಡುತ್ತಾನೆ. ಬೋಧಕನು "ನಾನಾ ದೇಶಿಕ ವಕ್ತ್ರಸ್ಥೈರುಪಾಯೈರ್ಯುಕ್ತಿ ಕಲ್ಪಿತೈಃ"-  ಎಂದು ಹೇಳುವಂತೆ ನಾನಾ ವಿಧವಾದ ಉಪಾಯಗಳಿಂದ ಶಿಷ್ಯನಿಗೆ ತತ್ತ್ವವನ್ನು ಬೋಧಿಸುತ್ತಾನೆ.  ಮೋಕ್ಷಪ್ರದನಾದ ಗುರುವು ಶಿಷ್ಯನಿಗೆ ಪರಮಾನಂದ ಪದವನ್ನು ಸಾಕ್ಷಾತ್ತಾಗಿ ದೊರಕಿಸಿಕೊಡುತ್ತಾನೆ. ಆದ್ದರಿಂದಲೇ "ಪರತತ್ವವೇ  ಮೋಕ್ಷಪ್ರದಗುರು" ಎಂಬುದಾಗಿ ಶಾಸ್ತ್ರಗಳು ಸಾರುತ್ತವೆ. ಪರಿಪೂರ್ಣ ಪರತತ್ತ್ವವನ್ನು ಸದಾ ಅನುಭವಿಸುತ್ತಾ, ಬ್ರಹ್ಮಭಾವದಿಂದ ಬೆಳಗುತ್ತಿರುವ ಸದ್ಗುರುವು ಚೋದಕನೂ , ಬೋಧಕನೂ ಆಗಿ ಕೊನೆಗೆ ಮೋಕ್ಷಪ್ರದನೂ ಆಗುತ್ತಾನೆ. ನೇರವಾಗಿ ಪರತತ್ತ್ವ  ಸ್ಥಿತಿಗೇರಿಸುವ ಉಪದೇಶ ವಿಧಿಗಳಲ್ಲಿ, ಮೌನವ್ಯಾಖ್ಯಾನದ ವಿಧಾನವು ಪರಮ ಶ್ರೇಷ್ಠವೂ ವಸ್ತು ನಿಷ್ಠವೂ ಆಗಿದೆ.

"ಚಿತ್ರಂ ವಟತರೋರ್ಮೂಲೇ ವೃದ್ಧಾಃ ಶಿಷ್ಯಾ ಗುರುರ್ಯುವಾ|
ಗುರೋಸ್ತು ಮೌನಂ ವ್ಯಾಖ್ಯಾನಂ ಶಿಷ್ಯಾಸ್ತು ಛಿನ್ನ ಸಂಶಯಾಃ||

ಇದೊಂದು ಆಶ್ಚರ್ಯದ ಸಂಗತಿ. ವಟವೃಕ್ಷದ (ಆಲದ ಮರದ)  ಬುಡದಲ್ಲಿ, ಗುರು ಶಿಷ್ಯರು ಆಸೀನರಾಗಿದ್ದಾರೆ. ಶಿಷ್ಯರಾದರೋ ಬಹಳ ವೃದ್ಧರಾದವರು, ಗುರುವು ಮಾತ್ರ ಯುವಕನಾಗಿದ್ದಾನೆ. ಗುರುವಿನ ವ್ಯಾಖ್ಯಾನ ವಿಧಾನವೆಂದರೆ, ಮೌನ. ಅದರಿಂದ ಶಿಷ್ಯರ ಸಮಸ್ತ ಸಂದೇಹಗಳು ನಿವೃತ್ತವಾದವು.

ಪರತತ್ತ್ವ ಜಿಜ್ಞಾಸುಗಳು ಈ ವಿಧವಾದ ಸನ್ನಿವೇಶವನ್ನು ಬಹಳ ಭಕ್ತಿ ಶ್ರದ್ಧೆಗಳಿಂದ ಅನುಸಂಧಾನ ಮಾಡುತ್ತಾರೆ. ಈ ಪದ್ಯವನ್ನು ಹಾಡಿ ಹಾಡಿ ನಲಿಯುತ್ತಾರೆ. ಮೌನ ವ್ಯಾಖ್ಯಾನದ ರಹಸ್ಯವು ಸಾಮಾನ್ಯ ಬುದ್ಧಿಗೆ ಎಟುಕುವುದಿಲ್ಲ. ಮೌನ ವ್ಯಾಖ್ಯಾನದ ರಹಸ್ಯವನ್ನು ಮೌನದಿಂದಲೇ ಭೇದಿಸಿ ಅರಿಯಬೇಕು. ಆಧುನಿಕ ವಿದ್ಯಾಭ್ಯಾಸ  ಕ್ಷೇತ್ರಗಳಲ್ಲಿ ಶಿಕ್ಷಣ ವಿಧಾನಗಳ ಬಗ್ಗೆ ಬಹಳ ಸಂಶೋಧನೆಗಳು ನಡೆದಿವೆ. ವೈಜ್ಞಾನಿಕವಾದ ಹೊಸ ಹೊಸ ಬೋಧನಾ ವಿಧಾನಗಳೂ ರೂಪಿತವಾಗಿವೆ ಮತ್ತು ಆಗುತ್ತಲಿವೆ. ಆದರೆ ಮೌನ ವ್ಯಾಖ್ಯಾನದ ರಹಸ್ಯವಾಗಲೀ, ಮಹತ್ವವಾಗಲೀ ಆಧುನಿಕ ವಿಜ್ಞಾನಿಯ ಅಥವಾ ಸಂಶೋಧಕನ ಮನಸ್ಸಿಗೆ ತಟ್ಟಿದೆ ಎಂದು ಹೇಳಲಾಗುವುದಿಲ್ಲ. ಉಪದೇಶ ವಿಧಾನಗಳಲ್ಲಿ ವಾಗ್ವಿಧಾನಕ್ಕೆ ಅನಿವಾರ್ಯವಾದ ಪ್ರಧಾನ ಸ್ಥಾನ ಇರುವುದು ಸರಿಯಷ್ಟೆ. ವಾಗ್ವಿಧಾನವು ಪ್ರಭಾವಯುತವೂ, ಸಫಲವೂ ಆಗುವುದಕ್ಕಾಗಿ, ಅದಕ್ಕೆ ಪೋಷಕವಾದ ಇತರ ಲೌಕಿಕ  ಸಾಧನೆಗಳನ್ನು ಬೋಧಕನು ಆಶ್ರಯಿಸುವುದು ಆವಶ್ಯಕವಾಗುತ್ತದೆ. ವೈಜ್ಞಾನಿಕ ವಿಧಾನದಿಂದ ಆ ರೀತಿಯ ಸಾಧನಗಳನ್ನು ಪ್ರಯೋಗಿಸಿ ಬೊಧನೆ ಮಾಡಿದರೆ, ಶಿಷ್ಯನ ಮನಸ್ಸಿನಲ್ಲಿ ಜ್ಞಾನದ ಪ್ರಬೋಧವು ಶೀಘ್ರವಾಗಿ ಆಗುವುದಷ್ಟೇ ಅಲ್ಲದೆ, ಸ್ಥಿರವಾಗಿ ನೆಲೆಗೊಳ್ಳುತ್ತದೆ. ಇದು ಆಧುನಿಕ ಮನೋವಿಜ್ಞಾನಕ್ಕೆ ಸಮ್ಮತವಾದ ಸಿದ್ಧಾಂತವಾಗಿದೆ.

ಆದರೆ ಮೌನ ವ್ಯಾಖ್ಯಾನವು ಸಹಜವೂ.ಸುಂದರವೂ, ಅತ್ಯಂತ ವಿಜ್ಞಾನಯುಕ್ತವೂ ಆಗಿದೆಯೆಂದ ತಿಳಿಯಬೇಕು. ಮೌನ ವ್ಯಾಖ್ಯಾನದ ಪ್ರಭಾವವಂತೂ ಅತ್ಯಧ್ಬುತವಾದುದು. ಇದರಲ್ಲಿ ಗುರುವು ತ್ರಿಮೂರ್ತಿ ಸ್ವರೂಪನೂ, ವಿದ್ಯಾಮಯನೂ,ಸಾಕ್ಷಾತ್ ತತ್ತ್ವಮಯನೂ ಆಗಿರುತ್ತಾನೆ. ಶಿಷ್ಯನು ಸರ್ವಭಾವದಿಂದ ಗುರುವನ್ನು ಆಶ್ರಯಿಸುವವನಾಗಿರಬೇಕು. ಸಾಮಾನ್ಯವಾಗಿ ಲೋಕ ಜೀವನದಲ್ಲಿ ಒಬ್ಬ ವ್ಯಕ್ತಿಯಲ್ಲಿ ಉಂಟಾಗುವ ಮನೋಭಾವಗಳು ಎದುರಾಳಿಯ ಮೇಲೆ ಕೂಡಲೇ ಪ್ರಭಾವ ಬೀರುವುದನ್ನು ನಾವು ಕಾಣತ್ತೇವೆ. ಸಂತೋಷದಿಂದ ಉಬ್ಬಿ ಮುಖದಲ್ಲೂ ಸಂತೋಷಮುದ್ರೆಯನ್ನು ಹೊಂದಿರುವ ಒಬ್ಬ ವ್ಯಕ್ತಿಯನ್ನು ನೋಡಿದಕೂಡಲೇ, ಎದುರಾಳಿಯ ಮನಸ್ಸಿನಲ್ಲಿಯೂ ಸಂತೋಷಭಾವ  ಉಂಟಾಗಿ, ಮುಖದಲ್ಲಿ ನಗುವಿನ ಮುದ್ರೆ ಮೂಡುತ್ತದೆ. ಒಬ್ಬ ವ್ಯಕ್ತಿಯು ಕೋಪದಿಂದ ಕೆಂಪೇರಿದ ಮುಖವುಳ್ಳವನಾಗಿ ಛಡಪಡಿಸುತ್ತಿರುವುದನ್ನು ನೋಡಿದ ಕೂಡಲೇ ಎದುರಾಳಿಯ ಮನಸ್ಸಿನಲ್ಲಿಯೂ ಕೋಪಾಂಕುರವುಂಟಾಗಿ, ಮುಖಮುದ್ರೆ ಬದಲಾಯಿಸುವುದನ್ನು ಕಾಣುತ್ತೇವೆ. ಶೋಕಗ್ರಸ್ತನಾಗಿ ಕರುಣಾಕ್ರಂದವನ್ನು ಮಾಡುತ್ತಿರುವ ವ್ಯಕ್ತಿಯನ್ನು ನೋಡಿದ ಕೂಡಲೇ, ಹಾಗೆ ನೋಡಿದವವನ  ಹೃದಯವೂ ಕರಗಿ ಕರುಣ ಭಾವವನ್ನು ತಾಳುತ್ತದೆ. ಹಾಗೆ ಪ್ರತಿಕ್ರಿಯೆಯನ್ನು ಹೊಂದಬೇಕೆಂದು ಮಾತಿನಿಂದ ಯಾರೂ ಉಪದೇಶ ಮಾಡದಿದ್ದರೂ, ಇಂತಹ ಸನ್ನಿವೇಶಗಳಲ್ಲಿ ಒಬ್ಬ ವ್ಯಕ್ತಿಯಲ್ಲುಂಟಾಗುವ ಲೌಕಿಕ ಭಾವಗಳು ಎದುರಾಳಿಯ ಮೇಲೆ ಪ್ರಭಾವ ಬೀರುವುದು ಸಹಜವಾಗಿದೆ. ಆದರೆ ಇಂತಹ ಸಂದರ್ಭಗಳಲ್ಲಿ ಎದರಾಳಿಯೂ ಸಂಸ್ಕಾರವಂತನಾಗಿರಬೇಕು. ಅಂದರೆ, ಸಂತೋಷ, ಕೋಪ, ಶೋಕ ಇತ್ಯಾದಿ ಮನೋಭಾವಗಳ ಸಂಸ್ಕಾರವಿಲ್ಲದವನು ಆಯಾಭಾವಗಳಿಂದ ಪ್ರಭಾವಿತನಾಗುವುದಿಲ್ಲ. ಉದಾಹರಣೆಗೆ-ಆಗತಾನೇ ಹುಟ್ಟಿದ ಮಗುವಿನ ಮುಂದೆ ಈ ರೀತಿಯ ಭಾವಗಳನ್ನು ಪ್ರದರ್ಶಿಸಿದರೆ, ಅದರ ಮೇಲೆ ಗಮನಾರ್ಹವಾದ ಯಾವ ಪ್ರಭಾವವೂ  ಉಂಟಾಗುವುದಿಲ್ಲ. ಅಂತೆಯೇ ಸ್ಥಿತಪ್ರಜ್ಞನಾದ ಯೋಗಿಯ ಮೇಲೂ ಈ ರೀತಿಯಾದ ಭಾವಗಳು ಬೀರಲಾರವು.

ಈ ರೀತಿಯ ವೈಜ್ಞಾನಿಕ ಹಿನ್ನೆಲೆಯಲ್ಲಿ ಮೌನೋಪದೇಶದ ರಹಸ್ಯವನ್ನು ಅರಿಯುವುದು ಆವಶ್ಯಕ. ವಟವೃಕ್ಷದ ಬುಡದಲ್ಲಿ ಈ ಮೌನವ್ಯಾಖ್ಯಾನದ ಆಶ್ಚರ್ಯ ಘಟನೆಯನ್ನು ವರ್ಣಿಸುವುದರಲ್ಲಿ ಒಂದು ವಿಶೇಷ ರಹಸ್ಯವಿದೆ. ವಟ ವೃಕ್ಷವು ಬಿಳಲುಬಿಟ್ಟುಕೊಂಡು ಬೆಳೆಯುತ್ತಾ (ವಿಸ್ತರಿಸುತ್ತಾ) ಹೋಗುವ ಸ್ವಭಾವವುಳ್ಳದ್ದು. ಈ ಸಂಸಾರವೂ ಹಾಗೆಯೇ ವಿಸ್ತಾರ ಹೊಂದುತ್ತಿರುವುದು. ಹೀಗೆ ವಟವೃಕ್ಷವು ಸಂಸಾರದ ಸಹಜವಾದ ಪ್ರತೀಕವಾಗಿದೆ. ಇಂತಹ ವೃಕ್ಷದ ಮೂಲದಲ್ಲಿ ತತ್ತ್ವೋಪದೇಶಮಾಡಲು ಗುರುವು ಕುಳಿತಿರುವುದು, ಅಂತಹ ಉಪದೇಶವನ್ನು ಪಡೆಯಲು ಶಿಷ್ಯರು ಅಂತಹ ಗುರುವನ್ನು ಆಶ್ರಯಿಸಿರುವುದು:- ಈ ಗುರು ಶಿಷ್ಯ ಸಮಾಗಮ ಎಷ್ಟುಸಮಂಜಸವಾಗಿದೆ! ಎಂದಿಗೂ ಕಂದದಿರುವ ಜ್ಞಾನ ಪ್ರಬೋಧದ ತಾರುಣ್ಯ ಗುರುವಿನಲ್ಲಿ ತುಂಬಿದೆ. ಶಿಷ್ಯರಾದರೋ ಸಂಸಾರ ಚಕ್ರದಲ್ಲಿ ಸಿಕ್ಕಿ, ಬಳಲಿ, ಬೆಂಡಾಗಿ, ವೃದ್ಧರಾಗಿದ್ದಾರೆ. ತಾಪತ್ರಯದಿಂದ ಪೀಡಿತರಾದ ಅವರ ಶರೀರ, ಇಂದ್ರಿಯ, ಮನಸ್ಸು, ಬುದ್ಧಿಗಳು, ತತ್ತರಿಸಿ ಜೀರ್ಣವಾಗಿವೆ. ಆದರೆ ಈಗ ತತ್ತ್ವದ ಜಜ್ಞಾಸುಗಳಾದ ಅವರಲ್ಲಿ ಗುರುಭಕ್ತಿ,  ಪ್ರಾಮಾಣಿಕತೆ, ತತ್ತ್ವನಿಷ್ಠೆ, ಮುಂತಾದ ಉತ್ತಮ ಶಿಷ್ಯಗುಣಗಳು ಜಾಗೃತವಾಗಿವೆ. ಇಂತಹ ಸುಸಂಧರ್ಭದಲ್ಲಿ ಗುರು ಶಿಷ್ಯರಿಗೆ ನೇರವಾಗಿ ತತ್ತ್ವ ಬೋಧವುಂಟಾಗುವಂತೆ, ಮೌನವ್ಯಾಖ್ಯಾನದಿಂದ ಉತ್ತಮೋಪದೇಶವನ್ನು ಮಾಡುತ್ತಾನೆ. ಶಿಷ್ಯರು ಅತ್ಯಂತ ಪರಿಪಾಕ ಹೊಂದಿದ ಮನಸ್ಸುಳ್ಳವರಾಗಿ, ಪರತತ್ತ್ವಮಯನಾದ ಗುರುವಿಗೆ ಅಭಿಮುಖವಾಗಿ ಕುಳಿತಿದ್ದಾರೆ. ಶಿಷ್ಯರಿಗೆ ಮಾಡಬೇಕಾದ ಚೋದನೆ, ಬೋಧನೆಗಳೆರಡರ ಹಂತವನ್ನೂ ದಾಟಿಯಾಗಿದೆ. ಇನ್ನು ಉಳಿದಿರುವುದು, ನೇರವಾದ ಪರತತ್ತ್ವ ಪ್ರಾಪ್ತಿ,. ಕೂರ್ಮವು ತನ್ನ ಅಂಗಗಳನ್ನು ಒಳಗೆ ಎಳೆದುಕೊಳ್ಳುವಂತೆ, ಗುರುವು ಸಮಸ್ತ ಇಂದ್ರಿಯಗಳನ್ನೂ ಉಪಸಂಹಾರ ಮಾಡಿಕೊಂಡು, ಮನೋಬುದ್ಧಿಗಳನ್ನು ಪರಮಾತ್ಮನಲ್ಲಿ ನಿಲ್ಲಸಿ, ಸಹಜವಾದ ಮಹಾ ಮೌನದ ಸ್ಥಿತಿಯಲ್ಲಿದ್ದಾನೆ. ನಿವಾತ ದೀಪದಂತೆ ಒಳಗೆ ಬೆಳಗುತ್ತಿರುವ ಅಂತರ್ಜ್ಯೋತಿಯ ಪ್ರಕಾಶದಿಂದ ತುಂಬಿ ಹೋಗಿದ್ದಾನೆ. ಆ ಪರಮಾನಂದ ಭಾವಕ್ಕೆ ಸಹಜವಾದ ಶಾಂಭವೀ ಮುದ್ರೆಯು ಗುರುವಿನಲ್ಲಿ ಮೂಡಿದೆ. ಜಾಲಂಧರ, ಉಡ್ಡೀಯನ, ಮೂಲ ಎಂಬ ಮೂರು ಬಂಧಗಳು ಯೋಗೈಶ್ವರ್ಯ ಸಂಪನ್ನನಾದ ಗುರುವಿನ ಶ್ರೀ ವಿಗ್ರಹದಲ್ಲಿ ಸಹಜವಾಗಿ ಏರ್ಪಟ್ಟಿವೆ.

"ಜಾಲಂಧರೋಡ್ಡೀಯನ ಮೂಲಬಂಧಾನ್
ಜಲ್ಪಂತಿ ಕಂಠೋಧರ ಪಾಯು ಸಂಸ್ಥಾನ್|
ಬಂಧ ತ್ರಯೇಸ್ಮಿನ್ ಪರಿಚೀಯಮಾನೇ
ಬಂಧಃ ಕುತೋ ದಾರುಣ ಕಾಲ ಪಾಶಾತ್||

ಜೀವದೇವರ ಏಕೀಭಾವವನ್ನುಹೊಂದಿರುವ ಜ್ಞಾನ ಮುದ್ರೆ, ಆ ಜ್ಞಾನವನ್ನು ಸೂಚಿಸುವ ವ್ಯಾಖ್ಯಾಮುದ್ರೆಗಳು ಸಹಜವಾಗಿ ಶೋಭಿಸುತ್ತಿವೆ. ಗುರುವಿನ ಮುಖದಲ್ಲಿ ಬೆಳಗುತ್ತಿರುವ ಬ್ರಹ್ಮಾನಂದದ ಪ್ರಕಾಶವು, ಸುಕೃತಿ ಜೀವಗಳನ್ನು ತನ್ನೆಡೆಗೆ ಆಕರ್ಷಿಸುತ್ತಿದೆ. ಗುರುವಿನ ಈ ಮೌನಮುದ್ರೆಯಲ್ಲಿ ವಿಶ್ವವನ್ನೇ ತನ್ನೆಡೆಗೆ ಎಳೆದಕೊಳ್ಳುವ ಯೋಗೈಶ್ವರ್ಯದ ಪ್ರಭಾವ ಅನಿರ್ವಚನೀಯವಾದುದು. ಗುರುವಿನ ಪರಮ ಕರುಣೆಗೆ ಪಾತ್ರರಾದ ಶಿಷ್ಯರು ಅವನ ಈ ಯೋಗೈಶ್ವರ್ಯದ ಪ್ರಭಾವಕ್ಕೆ ಸಿಕ್ಕಿದರು. ಶಿಷ್ಯರ ದೇಹ, ಪ್ರಾಣ, ಮನಸ್ಸು, ಇಂದ್ರಿಯ, ಬುದ್ಧಿಗಳು ಪಾವನವಾದವು. ಶುದ್ಧಾತ್ಮರಾದ ಅವರು ಗುರುವಿನೊಂದಿಗೆ ಏಕೀ ಭಾವವನ್ನು ಹೊಂದಿ, ತಾವೂ ಆ ಮಹಾಮೌನದ ಮುದ್ರೆಗೆ ಏರಿದರು. ತಿಳಿಯಬೇಕಾದುದನ್ನು ತಿಳಿದರು. ಪಡೆಯಬೇಕಾದುದನ್ನು ಪಡೆದು ಧನ್ಯರಾದರು. ಈ ಯೋಗೈಶ್ವರ್ಯದ ಸ್ಥಿತಿಯಲ್ಲಿ ಸಂಶಯಕ್ಕೆ ಅವಕಾಶವೇ ಇಲ್ಲ. ಅದು ತತ್ತ್ವನಿರ್ಣಯದ ಸ್ಥಿತಿ. ಆ ಸ್ಥಿತಿಯಲ್ಲಿ ಹೃದಯಗ್ರಂಥಿಯು ಭೇದಗೊಂಡು, ಸಂಶಯಗಳೆಲ್ಲಾ ನಿರ್ಮೂಲಗೊಂಡು, ಸಕಲ ಕರ್ಮಗಳೂ ಕ್ಷಯ ಹೊಂದಿ, ಕೇವಲ ಪರಾತ್ಪರ ಸತ್ಯ ವಸ್ತುವಿನ ಸಾಕ್ಷಾತ್ಕಾರವೊಂದೇ  ನೆಲೆಗೊಳ್ಳುತ್ತದೆ:-

"ಭಿದ್ಯತೇ ಹೃದಯಗ್ರಂಥಿಃ   ಛಿದ್ಯಂತೇ ಸರ್ವ ಸಂಶಯಾಃ |
ಕ್ಷೀಯಂತೇ ಚಾಸ್ಯ ಕರ್ಮಾಣಿ, ತಸ್ಮಿನ್ ದೃಷ್ಟೇ ಪರಾವರೇ||"  

ಇದೇ ಗುರುವಿನ ಮಹಾ ಮೌನವ್ಯಾಖ್ಯಾನದ ಮಹಿಮೆ, ಯೋಗೇಶ್ವರನಾದ ಅಂತಹ ಗುರುವಿಗೆ ಪ್ರಾಣ ಪ್ರಣಾಮಗಳು. ಅಂತಹ ಗುರುವನ್ನು ಸರ್ವಭಾವಗಳಿಂದಲೂ ಉಪಾಸಿಸಿ, ತತ್ತ್ವ ಸಾಕ್ಷಾತ್ಕಾರ ಪಡೆದು ಧನ್ಯರಾದ ಶಿಷ್ಯರಿಗೂ ಪ್ರಾಣ ಪ್ರಣಾಮಗಳು:--

"ಗುರುರೇವ ಪರಂಬ್ರಹ್ಮ ಗುರುರೇವ ಪರಾಗತಿಃ|
ಗುರುರೇವ ಪರಾವಿದ್ಯಾ ಗುರುರೇವ ಪರಾಯಣಂ||"

ಸೂಚನೆ : ಈ ಲೇಖನವು ಶ್ರೀಮಂದಿರದಿಂದ ಪ್ರಕಾಶಿತವಾಗುವ ಆರ್ಯಸಂಸ್ಕೃತಿ ಮಾಸ ಪತ್ರಿಕೆಯ 1981 ಸಂಪುಟ :3 ಸಂಚಿಕೆ:3 ರಲ್ಲಿ ಪ್ರಕಟವಾಗಿದೆ.

Saturday, October 17, 2020

ಆತ್ಮಗುಣ - ಹಿನ್ನೋಟ (ಉಪಸಂಹಾರ) Atmaguna - Hinnota (Upasanhara)

  ಲೇಖಕರು ; ವಿದ್ವಾನ್ ನರಸಿಂಹ ಭಟ್ ಬಡಗು

(ಪ್ರತಿಕ್ರಿಯಿಸಿರಿ lekhana@ayvm.in)



ನಾವು ಯಾವುದಾದರೂ ದೇಶದಲ್ಲಿ ಅಥವಾ ರಾಜ್ಯದಲ್ಲಿ ವಾಸಮಾಡಬೇಕಾದರೆ ಅಲ್ಲಿನ ವಾತಾವರಣ, ಭಾಷೆ; ಸಂಸ್ಕೃತಿಗೆ ಒಗ್ಗಿಕೊಳ್ಳುವುದು ಅನಿವಾರ್ಯವಾಗಿದೆ. ಹಾಗೆ ಭಗವಂತನ ಸಾಮ್ರಾಜ್ಯದಲ್ಲಿ ನಲಿಯಬೇಕಾದರೆ ಅಲ್ಲಿನ ವಾತಾವರಣ ಮತ್ತು ಗುಣಗಳಿಗೆ ನಮ್ಮನ್ನು ಅಣಿಗೊಳಿಸಿಕೊಂಡಾಗ ಮಾತ್ರ ಸಾಧ್ಯ. ಆ ಸಿದ್ಧತೆಯನ್ನೇ 'ಆತ್ಮಗುಣ' ಎಂದು ಕರೆದಿದ್ದಾರೆ. ಆತ್ಮಗುಣಗಳು ಭಗವಂತನ ಸಹಜಗುಣಗಳಾಗಿವೆ. ಅವುಗಳನ್ನು ನಾವು ಪ್ರಯತ್ನಪೂರ್ವಕವಾಗಿ ಕಲಿತುಕೊಳ್ಳಬೇಕು. ಆಗ ನಾವೂ ದೇವಭಾವವನ್ನು ಹೊಂದಲು ಸಾಧ್ಯ. ಇದು ಒಂದೆರಡು ದಿನ, ತಿಂಗಳು ಅಥವಾ ವರ್ಷಗಳ ಮಾತಲ್ಲ. ಗುರಿಮುಟ್ಟುವ ತನಕ ಯತ್ನ ಸಾಗಬೇಕು. ಆ ಪ್ರಯತ್ನವು ದೀರ್ಘಕಾಲ, ನಿರಂತರವಾಗಿ, ಅತ್ಯಂತ ಆದರದಿಂದ ನಡೆದಾಗ ಮಾತ್ರ ನಮ್ಮಲ್ಲಿ ಆ ಗುಣಗಳು ಬೆಳೆಯಲು ಸಾಧ್ಯ.  ಇಂತಹ ಸಂಸ್ಕಾರಗಳು ಬ್ರಹ್ಮಸಾಯುಜ್ಯವನ್ನು ದೊರಕಿಸಿಕೊಡುವ ಸಾಧನಗಳು. ಅದಕ್ಕಾಗಿ ಗೌತಮಮಹರ್ಷಿಗಳು ಈ ಆತ್ಮಗುಣಗಳಿಗೆ ಅಷ್ಟೊಂದು ಮಹತ್ತ್ವವನ್ನು ಕೊಟ್ಟಿದ್ದಾರೆ.

1. 'ದಯಾ' ಎಂಬ ಆತ್ಮಗುಣವು ಪ್ರಾಣಿ-ಪಶು-ಪಕ್ಷಿ ಹೀಗೆ ಪ್ರಪಂಚದ ಎಲ್ಲಾ ಎಂಭತ್ತನಾಲ್ಕು ಲಕ್ಷ ಜೀವಜಾತಿಗಳೂ ನಿರ್ಭಯವಾಗಿ ಬದುಕಬೇಕು ಎಂದು ಬಯಸುವ ಗುಣ. ಎಲ್ಲಾ ಭೂತಗಳಿಗೂ ಬದುಕಲು ಪ್ರತಿಯೊಬ್ಬನೂ ಅವಕಾಶ ಮಾಡಿಕೊಡುವ ಭಾವ.  

2. 'ಕ್ಷಾಂತಿ' ಎಂಬ ಆತ್ಮಗುಣವು ಬೇರೆಯವರ ತಪ್ಪನ್ನು ಮನ್ನಿಸುವ ವಿಶೇಷ ಗುಣವಾಗಿದೆ. ಇದು ಒಂದು ಅಸಾಮರ್ಥ್ಯವನ್ನು ಪ್ರದರ್ಶಿಸುವ ರೀತಿಯಲ್ಲ.  ತಿಳಿಯದೇ ಅಥವಾ ಅನಿವಾರ್ಯವಾಗಿ ಮಾಡಿದ ತಪ್ಪನ್ನು ಮನ್ನಿಸುವುದು ಮತ್ತು ಬುದ್ಧಿಪೂರ್ವಕವಾಗಿ ತಪ್ಪನ್ನು ಮಾಡಿದಾಗ ನಿರ್ದಯವಾಗಿ ಶಿಕ್ಷಿಸುವುದು ಉಚಿತವೇ ಆಗಿದೆ

3. 'ಅನಸೂಯಾ' ಬೇರೆಯವರ ಉನ್ನತಿಯನ್ನು ನೋಡಿ, ನೊಂದು ಬೆಂದು ನಮ್ಮ ಮನಸ್ಸನ್ನು ಹಾಳುಮಾಡಿಕೊಳ್ಳದೇ ಅವರಂತೆಯೇ ನಾವೂ ಬೆಳೆಯಬೇಕು, ಅವರಂತೆಯೇ ನಾವೂ ಎತ್ತರಕ್ಕೆ ಬೆಳೆಯಬೇಕು ಎಂಬ ಬಯಕೆ. ಮತ್ತೊಬ್ಬರ ಗುಣವನ್ನು ಗ್ರಹಿಸುವುದು ಮತ್ತು ದೋಷವನ್ನು ಬಿಡುವುದು.

4. 'ಶೌಚ' ಎಂಬುದು ನಮ್ಮ ಮೈ ಮನಸ್ಸುಗಳನ್ನು ಶುದ್ಧಿಮಾಡಿಕೊಳ್ಳುವ ವಿಧಾನ. ನಮ್ಮತನವನ್ನು ಅದರದರ ಸ್ವಭಾವ ಕೆಡದಂತೆ ಉಳಿಸುವ ಪ್ರಕ್ರಿಯೆ.

5. ಅನಾಯಾಸ - ಮಾಡಬೇಕಾದ ಕಾರ್ಯವನ್ನು ಬಹಳ ನಾಜೂಕಾಗಿ ಮಾಡುವುದರ ಮೂಲಕ  ಶಾರೀರಿಕವಾಗಲೀ, ಮಾನಸಿಕವಾಗಲೀ ಮಿತಿ ಮೀರಿದ  ಬಳಲಿಕೆ ಆಗದ ರೀತಿಯಲ್ಲಿ ಸಮಾಪ್ತಿಗೊಳಿಸುವುದು.

6. ಮಂಗಲ-ದೇಹಧರ್ಮ, ಮನೋಧರ್ಮ ಮೊದಲಾದವುಗಳನ್ನು ಅದರದರ ಸ್ಥಿತಿಯನ್ನು(condition) ಉಳಿಸಲು ನಮ್ಮ ಸುತ್ತಮುತ್ತಲಿನ ದ್ರವ್ಯ ದೇಶಾದಿಗಳನ್ನು ಬಳಸಿಕೊಂಡು ಪ್ರಶಸ್ತವಾದುದನ್ನು ಆಚರಿಸುತ್ತಾ ಅಪ್ರಶಸ್ತವಾದುದನ್ನು ಬಿಡುವುದೇ ಮಂಗಲ.

7. ಅಕಾರ್ಪಣ್ಯ- 'ಕಾರ್ಪಣ್ಯ' ಎಂದರೆ ಜಿಪುಣತನ, ದೀನಭಾವ, ಬೇಡುವಸ್ವಭಾವ, ತನ್ನಲ್ಲಿರುವುದನ್ನು ಮತ್ತೊಬ್ಬರಿಗೆ ಕೊಡದಿರುವುದು. ಈ ಸ್ವಭಾವಕ್ಕೆ ವಿರುದ್ಧವಾದುದನ್ನೇ 'ಅಕಾರ್ಪಣ್ಯ' ಎಂದು ಕರೆಯುತ್ತಾರೆ.8. ಅಸ್ಪೃಹಾ – ಸತ್ಪರಿಣಾಮವನ್ನು ಕೊಡುವಂತಹ ಕಾರ್ಯಕ್ಕೆ ಬೇಕಾದುದನ್ನು ಬಯಸುವುದು ಮತ್ತು ದುಷ್ಪರಿಣಾಮವನ್ನು ಉಂಟುಮಾಡುವ ಬಯಕೆಯನ್ನು ಬಿಡುವುದು.

ಹೀಗೆ ಎಂಟು ಆತ್ಮಗುಣಗಳು ಬೆಳೆಯುವ ರೀತಿಯಲ್ಲಿ ನಮ್ಮ ನಿತ್ಯಜೀವನವನ್ನು ರೂಢಿಸಿಕೊಂಡು ನಮ್ಮ ಮೂಲವಾದ ಭಗವಂತನನ್ನು- ಬ್ರಹ್ಮಸಾಯುಜ್ಯವನ್ನು ಪಡೆಯುವಂತಾಗಲಿ. ಈ ಲೇಖನಕ್ಕೆ ಬೌದ್ಧಿಕವಾಗಿ ಕಾರಣಕರ್ತರಾದ ಎಲ್ಲಾ ಗುರುಪರಂಪರೆಗೆ ನಮಸ್ಕಾರ ಸಲ್ಲಿಸುತ್ತಾ ಈ ಲೇಖನಕ್ಕೆ ಮಂಗಲವನ್ನು ಮಾಡುತ್ತೇನೆ.


ಸೂಚನೆ: 10/10/2020 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.

ನಾವು ನಿಜವಾಗಲೂ ಸ್ವತಂತ್ರರೇ ? ( Navu Nijavagalu Svatantrare?)

ಲೇಖಕರು: ಸುಮುಖ ಹೆಬ್ಬಾರ್
(ಪ್ರತಿಕ್ರಿಯಿಸಿರಿ : lekhana@ayvm.in)




ಒಂದು ಕಪಿಗಳ ಗುಂಪು, ಹಳ್ಳಿಯ ಪಕ್ಕದಲ್ಲಿದ್ದ ಕಾಡಿನಂಚಿನಲ್ಲಿ ವಾಸವಾಗಿತ್ತು. ಅಲ್ಲಿಗೆ ದೇವಸ್ಥಾನವನ್ನು ಕಟ್ಟಲು ಜನರ ಗುಂಪೊಂದು ಸೇರಿತು. ಹಿರಿಯ ಕಪಿಯು, "ಅವರಿಗೆ ತೊಂದರೆ ಕೊಡಬೇಡಿ. ಮುಂದೆ ದೇವರಿಗೆ ಸಮರ್ಪಿಸುವ ಸಿಹಿ ತಿಂಡಿಗಳು ನಮಗೆ ಸಿಗುತ್ತವೆ" ಎಂದಿತು. ಕಪಿಗಳೂ ಒಪ್ಪಿದವು. ಆದರೆ ತುಂಟ ಕಪಿಯೊಂದು, ಹಿರಿಯ ಕಪಿಯ ಮಾತನ್ನು ಕೇಳದೆ, ತನ್ನಿಚ್ಛೆಯಂತೆ ದೇವಸ್ಥಾನವನ್ನು ಕಟ್ಟುವ ಸಲಕರಣೆಗಳು ಮತ್ತು ಹಲಗೆಗಳನ್ನು ಕಪಿಬುದ್ಧಿಯಿಂದ ಅಲುಗಾಡಿಸಲು ಆರಂಭಿಸಿತು. ಆಧಾರಕ್ಕಾಗಿ ನೀಡಿದ್ದ ಹಲಗೆಯೊಂದನ್ನು ಅಲುಗಾಡಿಸಿದಾಗ, ಗೋಡೆಯೊಂದು ಕುಸಿದು, ದೇಹ ನುಜ್ಜುಗುಜ್ಜಾಗಿ, ಕೋತಿ ಸಾವನ್ನಪ್ಪಿತು.

ಇಂದು ನಾವು ಬ್ರಿಟಿಷರಿಂದ ಸ್ವತಂತ್ರರು. ಪ್ರತಿಯೊಬ್ಬರಿಗೂ ತನ್ನಿಚ್ಛೆಯಂತೆ ಬದುಕಲು ಮುಕ್ತ ಅವಕಾಶವಿದೆ.  ಆದರೆ ನಿಜವಾಗಲೂ ನಾವು ಸ್ವತಂತ್ರರೇ? ಎಂಬ ಪ್ರಶ್ನೆಯನ್ನು ಕೇಳಿಕೊಳ್ಳುವುದು ಒಳಿತು.  ಮೇಲಿನ ಕಥೆಯನ್ನು ಅವಲೋಕಿಸಿದರೆ, ಕಪಿಗೆ ತುಂಟತನದ ಸ್ವಾತಂತ್ರ್ಯವಿತ್ತು. ಎಲ್ಲರಿಗೂ ಹಿತವನ್ನುಂಟು ಮಾಡುವಂತಹ ಹಿರಿಯ ಕಪಿಯ ವಿವೇಕದ ಮಾತನ್ನು ಮೀರಿ ತನ್ನ ತುಂಟತನದ ಸ್ವಾತಂತ್ರ್ಯದ ಬಳಕೆಯಿಂದಾಗಿ  ಪ್ರಾಣ ಕಳೆದುಕೊಂಡಿತು.  ಅಂತೆಯೇ ಇಂದು, ಸ್ವಾತಂತ್ರ್ಯವಿದೆಯೆಂದು,ಲೈಸೆನ್ಸ್ ಇಲ್ಲದೆ ಅಥವಾ  ಭಾರತದ ರಸ್ತೆಗಳ  ಬಲಭಾಗದಲ್ಲಿ ವಾಹನ ಚಾಲನೆ ಮಾಡಬಹುದೇ? ಈಗಿನ ದಿನಗಳಲ್ಲಿ ಮಾಸ್ಕ್ ಧರಿಸದೇ ನಮ್ಮಿಚ್ಛೆಯಂತೆ ಓಡಾಟ ಮಾಡಬಹುದೇ? ಇಲ್ಲ! ದಂಡನಾರ್ಹ ಅಪರಾಧಗಳಿವು. ಹಾಗಾದರೆ ಸ್ವಾತಂತ್ರ್ಯಕ್ಕೇನು ಅರ್ಥವೆಂದೆನಿಸುವುದು ಸಹಜ.

ಸ್ವ-ತಂತ್ರಕ್ಕೆ ಕಟ್ಟುಪಾಡುಗಳು ಇಲ್ಲದಿಲ್ಲ. ಜನರ ಹಿತವನ್ನು ಗಮನದಲ್ಲಿಟ್ಟುಕೊಂಡು, ತಿಳಿದವರು ಹಾಕಿದ ಕಟ್ಟುಪಾಡಿನ ಚೌಕಟ್ಟಿನೊಳಗೆ ಸ್ವಾತಂತ್ರ್ಯವನ್ನು ಬಳಸುವುದು ಲೇಸು. ಅಂತಹ ಚೌಕಟ್ಟನ್ನು ಹೇಳುವ ಭಾರತ ಸಂವಿಧಾನಕ್ಕೆ ನಾವು ಬದ್ಧರಾಗಿದ್ದೇವೆ. ಅದರಲ್ಲಿ ಮೂಲಭೂತ ಹಕ್ಕುಗಳಲ್ಲಿಯೇ ಸ್ವಾತಂತ್ರ್ಯವೆಂಬುದನ್ನು ಸೇರಿಸಿದ್ದರೂ, ಸಂವಿಧಾನವನ್ನು ಮೀರಿ ನಡೆದಾಗ ಶಿಕ್ಷೆಯಿದೆ.

ಇನ್ನು ಬೆಳಗ್ಗೆ ಎದ್ದು ಹಲ್ಲುಜ್ಜಬೇಕು, ಕಸವನ್ನು ಬಾಯಿಗೆ ಹಾಕಬಾರದೆಂಬ ನಿಯಮಗಳು ಸಂವಿಧಾನದಲ್ಲಿವೆಯೇ? ಭಾರತದ ಸಂವಿಧಾನದಲ್ಲಿಲ್ಲದಿದ್ದರೂ ಇಂತಹ ಅನೇಕ ಕಟ್ಟುಪಾಡುಗಳು ಪ್ರಕೃತಿಮಾತೆಯ ಸಂವಿಧಾನದಲ್ಲಿರುವ ಕಾರಣ, ಆ ನಿಯಮಗಳಿಗೆ ಬದ್ಧರಾಗಿರಬೇಕು. ಅಂತೆಯೇ ನಮ್ಮೊಳಗೆ ಆತ್ಮಸಾಮ್ರಾಜ್ಯದ ಸಂವಿಧಾನವೂ ಒಂದಿದೆ. ಬೀಜದಿಂದ ಹೊರಟು, ಕಾಂಡ, ಶಾಖೆ, ಪುಷ್ಪ, ಕಾಯಿ, ಹಣ್ಣಾಗಿ ಮುಂದೆ ಬೀಜದಲ್ಲಿ ಬಂದು ನಿಂತಾಗ, ವೃಕ್ಷಕ್ಕೆ ಒಂದು ಸಾರ್ಥಕತೆ; ಪರಿಪೂರ್ಣವೆಂಬ ಭಾವ. ಹಾಗೆಯೇ ನಮ್ಮ ಜೀವ, ಪ್ರಕೃತಿಯಲ್ಲಿ ಹುಟ್ಟಿ ಬೆಳೆದರೂ ತನ್ನೊಳಗಿನ ಆತ್ಮಾನಂದವೆಂಬ ಫಲವನ್ನು ಅನುಭವಿಸಿದರೆ ಜೀವನ ಪರಿಪೂರ್ಣವೆನಿಸುತ್ತದೆ. ಅದನ್ನು ಪಡೆಯಬೇಕಾದರೆ, ಆತ್ಮರಾಜ್ಯದ ಸಂವಿಧಾನವನ್ನು ಮೀರದೆ ಸ್ವಾತಂತ್ರ್ಯವನ್ನು ಬಳಸಬೇಕು. ಸಮಾಜ, ರಾಷ್ಟ, ಪ್ರಕೃತಿ ಮತ್ತು ಆತ್ಮ ಹಿತಗಳನ್ನೂ ಗಮನದಲ್ಲಿಟ್ಟುಕೊಂಡು ರಚಿಸಿದ ಸಂವಿಧಾನವೇ ಭಾರತ ಮಹರ್ಷಿಗಳು ತಂದುಕೊಟ್ಟ ಶಾಸ್ತ್ರ-ಸಂಪ್ರದಾಯಗಳು.    

೧೮ ವರ್ಷ ತುಂಬಿದ ಕೂಡಲೆ ಮತದಾನದ ಹಕ್ಕು ಬರುವಂತೆ ಭಗವತ್ಸಾಕ್ಷಾತ್ಕಾರವು ಪ್ರತಿಯೊಬ್ಬ ಮಾನವನಿಗೂ ಜನ್ಮಸಿದ್ಧ ಹಕ್ಕೆಂಬುದು ಶ್ರೀರಂಗಮಹಾಗುರುಗಳ ಅಭಿಪ್ರಾಯವಾಗಿತ್ತು. ಈ ಹಕ್ಕನ್ನು ನಮ್ಮದಾಗಿಸಿಕೊಂಡು ಆ ಪರಮ ಸುಖವನ್ನು ಪಡೆಯಲು, ಆತ್ಮಸಂವಿಧಾನದ ಚೌಕಟ್ಟಿನೊಳಗೆ ವೀರಯೋಧರಂತೆ ವರ್ತಿಸಬೇಕಾಗಿದೆ.  ಭಗವಂತನ ಕರುಣೆಯಿಂದ ಆತ್ಮರಾಜ್ಯದ ಸಂವಿಧಾನಕ್ಕೆ ಒಳಪಟ್ಟು, ಆತ್ಮಸುಖದ ಸ್ವಾತಂತ್ರ್ಯವು ನಮಗೂ ಒಲಿಯಲಿ ಎಂದು ಪ್ರಾರ್ಥಿಸೋಣ.

ಸೂಚನೆ: 17/10/2020 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.