Sunday, October 31, 2021

ಶ್ರೀರಾಮನ ಗುಣಗಳು - 29 ಅನಸೂಯಕ - ಶ್ರೀರಾಮ (Sriramana Gunagalu - 29 Anasuyaka Shrirama)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ 

(ಪ್ರತಿಕ್ರಿಯಿಸಿರಿ lekhana@ayvm.in)



  


ಗೌತಮಧರ್ಮಸೂತ್ರದಲ್ಲಿ ಹೇಳಲಾದ ಎಂಟು ಬಗೆಯ ಆತ್ಮಗುಣಗಳಲ್ಲಿ 'ಅನಸೂಯಾ' ಎಂಬುದು ಒಂದು. ಒಬ್ಬ ಪರಿಪೂರ್ಣ ವ್ಯಕ್ತಿ ಆಗಬೇಕಾದರೆ ಆತನಲ್ಲಿ ಈ ಆತ್ಮಗುಣ ಇದ್ದಾಗ ಮಾತ್ರ ಸಾಧ್ಯ. ಶ್ರೀರಾಮನು ಇಂದಿಗೂ ಒಬ್ಬ ಮಾನ್ಯನಾದ ಮಾನವರೂಪ. ಇದಕ್ಕೆ ಕಾರಣ, ಅವನಲ್ಲಿದ್ದ ವಿಶೇಷವಾದ ಆತ್ಮಗುಣವೇ ಅನಸೂಯಾ. ಭರತನು ರಾಜನಾಗುತ್ತಾನೆಂದು ರಾಮನು ಸ್ವಲ್ಪವೂ ಅಸೂಯೆ ಪಡಲಿಲ್ಲ. ಈ ಗುಣವನ್ನು ಹೊಂದಿರುವುದರಿಂದ ಶ್ರೀರಾಮನನ್ನು 'ಅನಸೂಯಕ ಶ್ರೀರಾಮ' ಎಂದು ಕರೆಯುತ್ತೇವೆ. 


'ನ ಗುಣಾನ್ ಗುಣಿನೋ ಹಂತಿ ಸ್ತೌತಿ ಮಂದಗುಣಾನಪಿ | ನಾನ್ಯದೋಷೇಷು ರಮತೇ ಸಾನಸೂಯಾ ಪ್ರಕೀರ್ತಿತಾ ||' (ಗುಣಶಾಲಿಗಳನ್ನಾಗಲಿ, ಅವರಲ್ಲಿರುವ ಸದ್ಗುಣಗಳನ್ನಾಗಲಿ, ನಾಶ ಮಾಡಲು ಯತ್ನಿಸದಿರುವುದು, ಇತರರಲ್ಲಿ ಅಲ್ಪಪ್ರಮಾಣದಲ್ಲಿ ಒಳ್ಳೆಯ ಗುಣವಿದ್ದರೂ ಅದನ್ನು ಪ್ರಶಂಸಿಸುವುದು, ಇತರರ ದೋಷಗಳಲ್ಲಿ ರಮಿಸದಿರುವುದು 'ಅನಸೂಯಾ' ಎಂದು ಹೇಳಲ್ಪಡುತ್ತದೆ.)'ಅನಸೂಯಾ' ಎಂಬುದು 'ಅಸೂಯಾ' ಎಂಬ ಗುಣದ ವಿರುದ್ಧಾರ್ಥಕ ಶಬ್ದ. ಮತ್ತೊಬ್ಬರಲ್ಲಿರುವ ಒಳ್ಳೆಯ ಸಂಗತಿಗಳನ್ನು ನೋಡಿ ಸಹಿಸಿಕೊಳ್ಳಲಾಗದ ಸ್ಥಿತಿ. ಅಸೂಯಾಪರನು ತಾನು ಒಂದು ಕಾರ್ಯವನ್ನು ಮಾಡಲು ಹೊರಟು ಅದರಲ್ಲಿ ಸಫಲನಾಗದೇ, ಮತ್ತೊಬ್ಬನು ಸಫಲನಾದರೆ ಅದನ್ನು ಸಹಿಸಿಕೊಳ್ಳುವುದಿಲ್ಲ. ಬೇರೆಯವರ ಏಳಿಗೆಯನ್ನು ಸಹಿಸಲಾರನು. ಈ ಗುಣವನ್ನೇ ಈರ್ಷ್ಯಾ, ಹೊಟ್ಟೆಕಿಚ್ಚು ಇತ್ಯಾದಿ ಪದಗಳಿಂದ ಹೇಳುತ್ತೇವೆ. ಗುಣವಂತನಲ್ಲಿರುವ ಉತ್ತಮಸ್ವಭಾವವನ್ನು ಹೇಳಲು ಸ್ವಲ್ಪವೂ ಹಿಂಜರಿಕೆ ಇಲ್ಲದೆ ಮುಕ್ತವಾಗಿ ಉತ್ಕೀರ್ತನಮಾಡುವುದು, ಬೇರೆಯವರಲ್ಲಿರುವ ಪರಮಾಣುಗುಣವನ್ನು ಪರ್ವತೋಪಾದಿಯಾಲ್ಲಿ ಎತ್ತಿ ಸಾರುವುದು, ಬೇರೆಯವರ ದೋಷವನ್ನು ಹೇಳುವುದರಲ್ಲೇ ತೃಪ್ತಿಯನ್ನು ಪಡದಿರುವುದು, ಇವೆಲ್ಲವೂ ಅನಸೂಯಾ ಎಂಬುದಕ್ಕೆ ಸಾಕ್ಷಿ. ಇಂತಹ ಮಾನಸಿಕತೆ ಬರಲು ಹೇಗೆ ಸಾಧ್ಯ? 


ಯಾರು ತನ್ನ ಜೀವನದ ಸರ್ವೋತ್ಕೃಷ್ಟವಾದ ಸ್ತರವನ್ನು ತಲುಪಿರುತ್ತಾನೋ ಅಥವಾ ಅತ್ತ ಸಾಗಬೇಕೆಂಬ ಹಂಬಲ ಉಳ್ಳವನಾಗುತ್ತಾನೋ, ಅಂತಹವನು ಈರ್ಷ್ಯಾ ಅಸೂಯಾದಿ ದುರ್ಗುಣಗಳ ಸಹವಾಸಕ್ಕೆ ಬೀಳನು. ಅಸೂಯಾ ಗುಣವು ನಮ್ಮನ್ನೇ ಸುಡುತ್ತದೆ. ಅದಕ್ಕೆ ಕನ್ನಡದಲ್ಲಿ 'ಹೊಟ್ಟೆಕಿಚ್ಚು' ಎನ್ನುತ್ತೇವೆ. ಯಾರ ಹೊಟ್ಟೆಯಲ್ಲಿ ಈ ಬಗೆಯ ಕಿಚ್ಚು ಇರುವುದೋ, ಅದು ಅವರನ್ನೇ ಮೊದಲು ಬಲಿತೆಗೆದುಕೊಳ್ಳುವುದು ಸಹಜ ತಾನೆ! ಇದು ಆತ್ಮಹಾನಿಗೆ ಕಾರಣ. ಆದ್ದರಿಂದ ಇಂತಹ ದುಷ್ಟಸ್ವಭಾವಗಳಿಂದ ದೂರವಿರಬೇಕೆಂಬುದನ್ನು ಶ್ರೀರಾಮನು ತನ್ನ ಜೀವನದಲ್ಲಿ ತೋರಿಸಿಕೊಟ್ಟಿದ್ದಾನೆ. 


ಶ್ರೀಮದ್ರಾಮಾಯಣದಲ್ಲಿ ಶ್ರೀರಾಮನು ಪರೋನ್ನತಿಯನ್ನು ಸಹಿಸದಿರುವ ಯಾವ ಸಂದರ್ಭವನ್ನೂ ನೋಡಲಾರೆವು. ಅಷ್ಟೇ ಅಲ್ಲ, ತಾನು ಕಷ್ಟವನ್ನು ಸಹಿಸಿಕೊಂಡು ಬೇರೆಯವರ ಸುಖಕ್ಕೆ ಕಾರಣನಾದ ಅನೇಕ ಘಟನೆಗಳನ್ನು ನೋಡಬಹುದು. ಕೈಕೇಯಿಯ ಆಸೆಯನ್ನು ಈಡೇರಿಸಲು ತಾನು ಅತಿಭಯಾನಕವಾದ ಅರಣ್ಯದಲ್ಲಿ ವಾಸಮಾಡಲು ಮುಂದಾದ. ಅರಣ್ಯದ ಕಷ್ಟ ಇನ್ನೊಬ್ಬರಿಗೆ ಯಾಕೆ ಬೇಕೆಂದು ಸೀತಾಮಾತೆಯನ್ನು ಅರಮನೆಯಲ್ಲೇ ಬಿಟ್ಟು ಹೋಗುವ ಸೂಚನೆಯನ್ನೂ ನೀಡಿದ. ಶ್ರೀರಾಮನ ಅವತಾರದ ಉದ್ದೇಶದ ಹಿನ್ನೆಲೆಯೇ ದುಷ್ಟಶಿಕ್ಷಣವಲ್ಲವೇ! ಅಂದರೆ ಅರಮನೆಯಲ್ಲೇ ತಾನು ಮಾತ್ರ ಸುಖದಿಂದ ಇದ್ದರೆ ದುಷ್ಟರ ನಿಗ್ರಹ ಸಾಧ್ಯವೇ? ರಣಾಂಗಣಕ್ಕೆ ತಾನೂ ತೆರಳಿ, ವಾಲಿ, ರಾವಣ ಮೊದಲಾದ ದುಷ್ಟರ ಜೊತೆ ಯುದ್ಧ ಮಾಡಿ ಸಜ್ಜನರ ಶಾಂತಿಗೆ ಅವಕಾಶ ಮಾಡಿಕೊಟ್ಟ. ಇವೆಲ್ಲವೂ ಸಾಧ್ಯವಾಗಬೇಕಾದರೆ ಆ ವ್ಯಕ್ತಿಯಲ್ಲಿ ಅನಸೂಯಾ ರೂಪವಾದ ಆತ್ಮಗುಣ ಇದ್ದರೆ ಮಾತ್ರ ಸಾಧ್ಯ.   

ಸೂಚನೆ : 31/10/2021 ರಂದು ಈ ಲೇಖನವು  ಹೊಸದಿಗಂತ ಪತ್ರಿಕೆಯ "ಶ್ರೀರಾಮನ ಗುಣಗಳು" ಅಂಕಣದಲ್ಲಿ ಪ್ರಕಟವಾಗಿದೆ.


Saturday, October 30, 2021

ಭಾಗವತೋತ್ತಮನಿಗೆ ಸಲ್ಲಿಸುವ ಪೂಜೆ ಬಲಿಪಾಡ್ಯಮಿ (Bhagavathotthamanige Sallisuva Puje Balipadyami)

ಡಾ. ಹಚ್.ಆರ್. ಮೀರಾ
(ಪ್ರತಿಕ್ರಿಯಿಸಿರಿ lekhana@ayvm.in)


ಐದು ದಿನಗಳ ದೀಪಾವಳೀಪರ್ವದ ನಾಲ್ಕನೇ ದಿನವಾದ ಪ್ರಥಮೆಯಂದು ಮಾಡುವ ಬಲೀಂದ್ರಪೂಜೆಯನ್ನು ಬಲಿಪಾಡ್ಯಮಿಯೆಂದು ಆಚರಿಸುತ್ತೇವೆ. ಬಲಿಚಕ್ರವರ್ತಿಯ ಕಥೆಯ ಜೊತೆಗೇ ಮನಸ್ಸಿಗೆ ಬರುವುದು: ಮಹಾವಿಷ್ಣುವಿನ ವಾಮನ ಹಾಗೂ ತ್ರಿವಿಕ್ರಮಾವತಾರಗಳು; ಅದರೊಂದಿಗೆಯೇ ಪತ್ರಿಕೆ-ಸಾಮಾಜಿಕಜಾಲತಾಣಗಳಲ್ಲಿ ಪದೇ ಪದೇ ಚರ್ಚಿಸಲಾಗುವ ವಿಷಯಗಳಿಂದೇಳುವ ಹಲವಾರು ಪ್ರಶ್ನೆಗಳು. ಅವಲ್ಲಿ ಒಂದು – ವಾಮನನಾಗಿ ಬಂದು, ದಾನಕೊಡಲೊಪ್ಪಿದ ಬಲಿಯನ್ನು ಮೋಸದಿಂದ ತುಳಿದು ಪಾತಾಳಕ್ಕೆ ತಳ್ಳಿದ್ದು ತಪ್ಪಲ್ಲವೇ? – ಎಂದು.

ಅಲ್ಲಿಯ ಸನ್ನಿವೇಶ ಹೀಗೆ: ಇಂದ್ರನಿಗೆ ಸೇರಿದ್ದ ರಾಜ್ಯವನ್ನು ಅಧರ್ಮದಿಂದ ತನ್ನದನ್ನಾಗಿ ಮಾಡಿಕೊಂಡಿದ್ದವನು ಬಲಿಚಕ್ರವರ್ತಿ. ಅವನನ್ನು ನಿಗ್ರಹಿಸಲು ಮಹಾವಿಷ್ಣುವೇ ಬರಬೇಕಾಯಿತು. ವಾಮನನಾಗಿ ಬಂದು, ಬಲಿಯಿಂದ ಮೂರು ಹೆಜ್ಜೆಗಳಷ್ಟು ಸ್ಥಳವನ್ನು ದಾನ ಪಡೆದು ತ್ರಿವಿಕ್ರಮನಾದನು. ಭೂಮಿ-ಸ್ವರ್ಗಗಳನ್ನು ತನ್ನ ಎರಡು ಪಾದಗಳಿಂದ ಅಳೆದು, ಮೂರನೆಯ ಹೆಜ್ಜೆಯನ್ನು ಬಲಿಯ ಶಿರಸ್ಸಿನ ಮೇಲಿಟ್ಟು, ಅವನನ್ನು ಪಾತಾಳಕ್ಕೆ ಕಳುಹಿಸಿದನು.

ಇವಿಷ್ಟು ಘಟನಾವಳಿ. ಅದರ ಫಲಿತವೇ ಮೂರು ಅನುಗ್ರಹಗಳು: ಇಂದ್ರನಿಗೆ ತನ್ನ ರಾಜ್ಯ ಮತ್ತೆ ಸಿಕ್ಕಿ, ಅವನ ಮೇಲೆ ಮಹಾನುಗ್ರಹವಾಯಿತು. ಬಲಿಯು ಇಂದ್ರನ ರಾಜ್ಯಕ್ಕಿಂತಲೂ ಹೆಚ್ಚು ಸಮೃದ್ಧವಾದ ಅಧೋರಾಜ್ಯಕ್ಕೆ ಒಡೆಯನಾದನು; ಅಲ್ಲದೆ, ತನ್ನ ಆಸುರಭಾವದ ದಮನವಾಗಿ, ಮಹಾವಿಷ್ಣುವೇ ತನ್ನ ರಾಜ್ಯಕ್ಕೆ ದ್ವಾರಪಾಲಕನಾದುದೂ ಬಲಿಗೆ ಮಹತ್ತರವಾದ ಅನುಗ್ರಹವಾಯಿತು. ತ್ರಿವಿಕ್ರಮರೂಪದಲ್ಲಿ ಎತ್ತಿದ ಪಾದದಿಂದ ಲೋಕಪಾವನಿಯಾದ ಗಂಗೆಯು ಉದ್ಭವಿಸಿ, ಲೋಕಕ್ಕೆಲ್ಲ ಮಹತ್ತಮವಾದ ಅನುಗ್ರಹವಾಯಿತು.

ಹಿಂದೆ ಬಂದ ಪ್ರಶ್ನೆಗೆ ಲೋಕನೀತಿಯ ದೃಷ್ಟಿಯಿಂದ ಫಲಿತದ ವಿವೇಚನೆಯ ವಿವರಣೆ ಇದಾಯಿತು. ಈ ಕಥೆಯನ್ನು ತಾತ್ತ್ವಿಕ ನಿಟ್ಟಿನಿಂದ ನೋಡಿದರೆ ಮತ್ತೂ ಆಳವಾದ ನೋಟ ದೊರೆತಂತಾಗುತ್ತದೆ.

ಯಾಚಕನಾಗಿ ಬಂದು ತನ್ನನ್ನು ಸಣ್ಣ ದಾನವೊಂದನ್ನು ಕೇಳಿದಾಗ, ಬಂದಿರುವವನು ವಿಷ್ಣುವೆಂದು ತಿಳಿದೂ ಬಲಿಯು ದಾನಕೊಡಲೊಪ್ಪಿದನು. ಏಕೆ? ಬಲಿಯ ಮನಸ್ಸಿನಲ್ಲಿ ವಾಮನನ ಪಾದಗಳ ಅಳತೆ ತನ್ನ ಪಾದಗಳ ಅಳತೆಯಂತೆಯೇ ಎಂದಿತ್ತು. ಆಸುರೀಶಕ್ತಿಗಳಿಗಾಗಲೇ ಸ್ಥಾನವನ್ನು ಕೊಟ್ಟಿರುವಾಗ ವಿಷ್ಣುವು ಸ್ವಲ್ಪ ಜಾಗ ಕೇಳಿದರೆ ಕೊಡಲಾರೆನೇ? – ಎಂದೆಣಿಸಿ ದಾನಕೊಟ್ಟನು. ಆಗ ವಾಮನಮೂರ್ತಿಯು ತ್ರಿವಿಕ್ರಮನಾಗಿ ಭೂರ್ಭುವಸ್ಸುವರ್ಲೋಕಗಳನ್ನು ಅಳೆದು, ಬಲಿಯ ಶಿರಸ್ಸಿನ ಮೇಲೆ ಪಾದವಿಟ್ಟನು. ಶ್ರೀರಂಗಮಹಾಗುರುಗಳು ಯೋಗದೃಷ್ಟಿಯಿಂದ ಹೇಳಿದಂತೆ – ಮೂಲಾಧಾರ ಮತ್ತು ಕೆಳಗಿರಬೇಕಾದ ಆಸುರೀಶಕ್ತಿಗಳು ಹೃದಯಪರ್ಯಂತ ದೇಹವನ್ನು ಆಕ್ರಮಿಸಿ ನಿಂತಿವೆ. ಹೃದಯವೇ ಬಲಿಯ ಯಜ್ಞವೇದಿ. ಬಲಿಯು ಕೊಟ್ಟ ಜಾಗವೇ ಹೃನ್ಮಧ್ಯದಲ್ಲಿ ಭಗವಂತನ ಶಕ್ತಿಗಿತ್ತಿರುವ ಸ್ವಲ್ಪ ಜಾಗ. ಹಾಗೆ ಕೊಟ್ಟದ್ದೇ ತಡ, ಭಗವಚ್ಛಕ್ತಿಯು ಅನತಿಕಾಲದಲ್ಲಿ ಸರ್ವಕ್ಷೇತ್ರವನ್ನೂ ವ್ಯಾಪಿಸಿಕೊಂಡಿತು. ಆಸುರೀಶಕ್ತಿಗಳು ತಮ್ಮ ಸ್ಥಾನವಾದ ಮೂಲಾಧಾರಕ್ಕೆ ಹಿಂದಿರುಗಿದವು. ಆಸುರದೇಹ ಹೊಂದಿದ್ದರೂ ಆಸುರಭಾವಮುಕ್ತನಾದ ಬಲಿಗೆ  ಭಗವದ್ದರ್ಶನವಾಯಿತು.

ಈ ತತ್ತ್ವದೃಷ್ಟಿಯಿದ್ದರೂ ಬರುವ ಮತ್ತೊಂದು ಪ್ರಶ್ನೆ - ಭಗವಂತನನ್ನೇ ನೇರವಾಗಿ ಪೂಜಿಸಲು ಸಾಧ್ಯವಿರುವಾಗ, ಅಸುರನಾದ ಬಲಿಗೆ ಪೂಜೆ ಮಾಡಬೇಕೆ? - ಎಂಬುದು.

ಅದಕ್ಕೆ ಸಮಾಧಾನವಿದು: "ಭಾಗವತ" ಎಂದರೆ "ಭಗವದ್ಭಾವವನ್ನು ಹೊತ್ತವನು". ಭಗವಂತನ ಭಕ್ತಿಯಲ್ಲಿ ತಾದಾತ್ಮ್ಯ ಹೊಂದಿರುವವರ ವರ್ಣಾಶ್ರಮ-ಜಾತಿಕುಲಾದಿಗಳು ಗಣನೆಗೆ ಬಾರವು. ಹಾಗಾಗಿ ಬಲಿಯು ಆಸುರದೇಹಧರ್ಮವುಳ್ಳವನಾದರೂ ಭಾಗವತೋತ್ತಮನಾದ್ದರಿಂದ ಪೂಜಾರ್ಹನೇ ಸರಿ. ಅವನನ್ನು ನಿಕೃಷ್ಟವಾಗಿ ಕಂಡರೆ ಅದು ಭಾಗವತಾಪಚಾರವಾಗಿ, ಭಗವದಪಚಾರವೇ ಮಾಡಿದಂತೆ.

ಹಿಂದೆ ತನ್ನ ರಾಜ್ಯವಾಗಿದ್ದ ಭೂಮಿಗೆ ಬಲಿಪಾಡ್ಯಮಿಯಂದು ಹಿಂದಿರುಗಿ, ನಾವು ಸಲ್ಲಿಸುವ ಪೂಜೆಯನ್ನು ಬಲಿಯು ಸ್ವೀಕರಿಸುತ್ತಾನೆ. ಕೆಲ ಸಂಪ್ರದಾಯಗಳಲ್ಲಿ ಕಲಶ-ವಿಗ್ರಹಗಳಿಗೆ ಪೂಜೆಯಾದರೆ, ಕೆಲವಲ್ಲಿ ಸಗಣಿಯಿಂದ ಕೋಟೆಯನ್ನು ಕಟ್ಟಿ, ಗೋಪುರದಾಕಾರದ ಸಗಣಿಯನ್ನಿಟ್ಟು, ಅದನ್ನು ಬಲೀಂದ್ರನೆಂದು ಪೂಜಿಸಲಾಗುತ್ತದೆ. ಇಲ್ಲಿ ಮತ್ತೊಂದು ಪ್ರಶ್ನೆ: ಸಗಣಿಯಂತಹ ವಸ್ತುವಿನಿಂದ ಮಾಡಿದ ಬಿಂಬವನ್ನು ಬಲಿಯ ಪ್ರತಿನಿಧಿಯೆಂದು ಕಾಣುವುದು ಅಪಚಾರವಾಗುವುದಿಲ್ಲವೇ? ಅದು ಖಂಡಿತ ಅಪಚಾರವಲ್ಲ. ಏಕೆಂದರೆ ಸಗಣಿಯು ಅಪವಿತ್ರವಲ್ಲ: ಅದು "ಗೋಮಯ", ಪವಿತ್ರವಾದ ಪಂಚಗವ್ಯದಲ್ಲಿ ಒಂದು ಪದಾರ್ಥ. ಹಾಗಾಗಿ ಬಲೀಂದ್ರನ ಆವಾಹನೆಯನ್ನು ನಿಕೃಷ್ಟವಾದ ಪದಾರ್ಥದಲ್ಲಿ ಮಾಡಿದಂತಾಗುವುದಿಲ್ಲ. ಹೀಗಾಗಿ ಉದ್ದೇಶವೂ, ಕ್ರಮವೂ ಯುಕ್ತವೇ ಆಗಿವೆ.

ಸಂಪ್ರದಾಯಬದ್ಧವಾಗಿ ಬಲೀಂದ್ರನ ಪೂಜೆಯನ್ನು ಭಕ್ತಿಯಿಂದ ಮಾಡಿ, ಆ ಭಾಗವತೋತ್ತಮನ ಅನುಗ್ರಹದಿಂದ ಈ ಪರ್ವದ ತತ್ತ್ವಾರ್ಥವು ನಮ್ಮ ಜೀವನಕ್ಕೆ ಪಸರಿಸುವಂತೆ ಮಾಡಿಕೊಳ್ಳೋಣ.

ಸೂಚನೆ: ಈ ಲೇಖನವು ವಿಜಯ ಕರ್ನಾಟಕದ ಪತ್ರಿಕೆಯ ಬೋಧಿ ವೃಕ್ಷ ದಲ್ಲಿ 30/10/2021 ರಂದು ಪ್ರಕಟವಾಗಿದೆ.

ದೀಪಾವಳೀ ಮತ್ತು ಲಕ್ಷ್ಮೀ ಪೂಜೆ (Deepavali Matthu Lakshmi Puje)

(ಪ್ರತಿಕ್ರಿಯಿಸಿರಿ lekhana@ayvm.in)




ಭಾರತದ ಎಲ್ಲ ಪ್ರಾಂತ್ಯಗಳಲ್ಲೂ ಸಂಭ್ರಮದಿಂದ ಆಚರಿಸಲ್ಪಪಡುವ ಹಬ್ಬ ದೀಪಾವಳೀ.  ಆಚರಣೆಯ ಕ್ರಮದಲ್ಲಿ  ವ್ಯತ್ಯಾಸಗಳು ಕಂಡುಬಂದರೂ ಎಲ್ಲ ವರ್ಗದವರೂ ಇದನ್ನು ಆಚರಿಸುತ್ತಾರೆ.  ಆಶ್ವಯುಜ ಮಾಸದ ಕೃಷ್ಣಪಕ್ಷ ತ್ರಯೋದಶಿಯಿಂದ ಕಾರ್ತಿಕ ಶುಕ್ಲ ತದಿಗೆಯ ವರೆಗಿನ ಆರು ದಿನಗಳ ಕಾಲ ಈ  ಹಬ್ಬವು ಆಚಾರಿಸಲ್ಪಡುವುದುಂಟು. ಚತುರ್ದಶಿಯು ನರಕಚತುರ್ದಶಿಯೆಂಬ ಹೆಸರಿನಿಂದಲೂ, ಅಮಾವಾಸ್ಯೆಯು  ದೀಪಾವಳೀ ಎಂಬುದಾಗಿಯೂ, ಪ್ರಥಮೆಯು ಬಲಿಪಾಡ್ಯಮಿಯೆಂದೂ, ದ್ವಿತೀಯೆಯು ಯಮದ್ವಿತೀಯಾ/ಭಗಿನೀದ್ವಿತೀಯಾ ಎಂಬುದಾಗಿಯೂ ಪ್ರಸಿದ್ಧವಾಗಿವೆ. 

ಆಚರಣೆಯ ಕ್ರಮ

ದೀಪಾವಳಿಯಂದು ಪ್ರಾತಃಕಾಲದಲ್ಲಿ  ಅಭ್ಯಂಗಸ್ನಾನವನ್ನು ಮಾಡುವುದು ಎಲ್ಲ ವರ್ಣ-ವರ್ಗದವರಲ್ಲೂ ಕಂಡುಬರುವ ಸಾಮಾನ್ಯ ಕ್ರಮ. ಅಂದು ಸ್ನಾನದ ನೀರಿನಲ್ಲಿ ಗಂಗೆಯ ಸಾನ್ನಿಧ್ಯವೂ, ಎಣ್ಣೆಯಲ್ಲಿ ಲಕ್ಷ್ಮೀದೇವಿಯ ಸಾನ್ನಿಧ್ಯವೂ ಇರುವುದೆಂಬುದು ಮಹರ್ಷಿಗಳ ದೃಷ್ಟಿ. ಸಂಭ್ರಮದಿಂದ  ಹೊಸ ಬಟ್ಟೆಗಳನ್ನು ಧರಿಸುವ ರೂಢಿಯೂ ಸಾಮಾನ್ಯವಾಗಿದೆ.  

ಮನೆ-ಮಠ-ದೇವಾಲಯಗಳಲ್ಲೂ ಅಂದು ಭಗವಂತನಿಗೆ ವಿಶೇಷವಾಗಿ ಪೂಜೆಯು ಸಂಪನ್ನವಾಗುತ್ತದೆ. ವ್ಯಾಪಾರಿಗಳು ಅಮಾವಾಸ್ಯೆಯಂದು ರಾತ್ರಿ ವಿಶೇಷವಾಗಿ ಲಕ್ಶ್ಮೀದೇವಿಯ ಪೂಜೆಯನ್ನು ಮಾಡಿ ಬಂಧು-ಮಿತ್ರರಿಗೆ ಸಿಹಿಯನ್ನು ಹಂಚುವುದು ಪ್ರಸಿದ್ಧವಾಗಿದೆ. ವ್ಯಾಪಾರದ ಹೊಸ ಲೆಕ್ಕವನ್ನೂ ಅಂದಿನಿಂದ ಪ್ರಾರಂಭಿಸುತ್ತಾರೆ. 

'ಆವಳಿ' ಎಂದರೆ ಸಾಲು. ದೀಪಾವಳೀ ಎಂದರೆ ದೀಪಗಳ ಸಾಲು. ಆದ್ದರಿಂದ ಅಂದು ಮನೆಯ ಬಾಗಿಲಲ್ಲಿ ಸಾಲುದೀಪಗಳನ್ನು ಬೆಳಗಿಸುವ ಪದ್ಧತಿಯು ಅನ್ವರ್ಥವಾಗಿದೆ. ಈ  ದಿನದಿಂದ  ಪ್ರಾರಂಭಮಾಡಿ ಕಾರ್ತಿಕಮಾಸದ ಕೃತ್ತಿಕಾ ದೀಪೋತ್ಸವದವರೆಗೂ ನಿತ್ಯವೂ ಮನೆಯ ಬಾಗಿಲಿನಲ್ಲಿ ದೀಪಗಳನ್ನು ಬೆಳಗಿಸುವುದು ಪದ್ಧತಿ. ಎತ್ತರದ ಜಾಗದಲ್ಲಿ  ಆಕಾಶದೀಪವೆಂದು ಕರೆಯಲ್ಪಡುವ ದೀಪವನ್ನು  ಹೊತ್ತಿಸುವ ಪದ್ಧತಿಯೂ ಕೆಲವರಲ್ಲಿದೆ.

ಪಟಾಕಿ, ಬಾಣ-ಬಿರುಸುಗಳ ಸಡಗರವಂತೂ ಹೇಳಿತೀರದು. ಸ್ಫೋಟದ ಧ್ವನಿ, ಪ್ರಕಾಶಗಳು ಎಲ್ಲರಿಗೂ ಸಂತಸವನ್ನೂ, ಉಲ್ಲಾಸವನ್ನೂ ನೀಡುತ್ತದೆ. ಪರಿಸರಮಾಲಿನ್ಯಕ್ಕೆ ಕಾರಣವಾಗುವುದೆಂಬ ಪ್ರಜ್ಞೆಯಿರುವವರಿಗೂ ಇದು ಉತ್ಸಾಹವನ್ನು ನೀಡುತ್ತಿರುವುದನ್ನು ಪ್ರತ್ಯಕ್ಷವಾಗಿ ಕಾಣಬಹುದಾಗಿದೆ. 

ಆಚರಣೆಯ ವೈಜ್ಞಾನಿಕ ಅಂಶಗಳು – ಕಾಲದ ವೈಶಿಷ್ಟ್ಯ

'ಭಾರತೀಯರಲ್ಲಿ  ವರ್ಷ ಇಡೀ ಒಂದಲ್ಲ ಒಂದು  ಹಬ್ಬ -  ಕಾಲವ್ಯಯ, ಪದಾರ್ಥವ್ಯಯ; ಅದರ ಬದಲು ಆ ಕಾಲವನ್ನು ಪ್ರಗತಿಯ ಮಾರ್ಗಕ್ಕೆ ಉಪಯೋಗಪಡಿಸಿಕೊಳ್ಳಬಹುದು' ಎಂಬ ಆಪಾದನೆಯನ್ನು ಮಾಡುವವರುಂಟು. ಇನ್ನೂ ಕೆಲವರು 'ವಾರದಮಧ್ಯದಲ್ಲಿ ಹಬ್ಬಗಳ ಆಚರಣೆಯನ್ನು ಮಾಡಲು ರಜೆಯ ಘೋಷಣೆಮಾಡಿ ಉದ್ಯೋಗಕ್ಷೇತ್ರಗಳಲ್ಲಿ ತಡೆಯೊಡ್ಡುವ  ಬದಲು ರಜಾದಿನಗಳಲ್ಲೇ ಏಕೆ ಆಚಾರಿಸ  ಬಾರದು?' ಎಂಬ ಸಲಹೆಯನ್ನು ನೀಡುವವರೂ ಉಂಟು. ಆದ್ದರಿಂದ ಹಬ್ಬಗಳ ದಿನವನ್ನು ನಿಶ್ಚಯಿಸುವುದರ ಹಿಂದೆ ಅಡಗಿರುವ ಮರ್ಮವನ್ನು ತಿಳಿಯುವುದು ಅವಶ್ಯವೆಂದೆನಿಸುತ್ತದೆ.

ಇದರ ಮರ್ಮವನ್ನು ಬಿಚ್ಚಿಟ್ಟ ಶ್ರೀರಂಗಮಹಾಗುರುಗಳ ವಿವರಣೆಯನ್ನು ಇಲ್ಲಿ ಸ್ಮರಿಸುವುದು ಸೂಕ್ತವಾಗಿದೆ. ಸೃಷ್ಟಿಮೂಲನಾದ ಭಗವಂತನ ಕಾಲಶರೀರದಲ್ಲಿ ಅನೇಕ ವಿಶಿಷ್ಟವಾದ ಸ್ಥಾನಗಳು ಉಂಟು ಎಂಬುದು ಮಹರ್ಷಿಗಳು ಅರಿತ ಸತ್ಯ. ಕಾಲಚಕ್ರದ ಅಂತಹ ವಿಶಿಷ್ಟಸ್ಥಾನಗಳನ್ನು ಪರ್ವಗಳು ಎಂದು ಕರೆದಿದ್ದಾರೆ. ಗಿಡಮರಗಳಲ್ಲಿನ ಗಿಣ್ಣಿನ ಸ್ಥಾನಗಳು ಗಿಡದ ಬೆಳವಣಿಗೆಗೆ ಸಹಕರಿಸಿ ಪುಷ್ಟಿಯನ್ನು ನೀಡುವ ಹಾಗೆ ಈ ಕಾಲ-ಪರ್ವಸ್ಥಾನಗಳು ಜೀವಿಗಳ ದೈವಿಕ-ಅಧ್ಯಾತ್ಮಜೀವನದ ಬೆಳವಣಿಗೆ-ಪೋಷಣೆಗಳಿಗೆ ಸಹಕರಿಸುವ  ಗಿಣ್ಣುಗಳು ಎಂಬುದು ಮಹರ್ಷಿಗಳ ತಪೋದೃಷ್ಟಿ.

ಇಂತಹ ಪರ್ವಗಳು ನಮ್ಮೊಳಗಿನ ದೇವತಾಕೇಂದ್ರವನ್ನು ತೆರೆಸಿ ಆ ದೇವತೆಯ ಸಾಕ್ಷಾತ್ಕಾರಕ್ಕೆ ನೆರವಾಗುವುದು. ಉದಾಹರಣೆಗೆ ಗಣೇಶಚತುರ್ಥಿಯದಿನ ಗಣೇಶನ ಸಾಕ್ಷಾತ್ಕಾರಕ್ಕೆ ಪೋಷಕವಾದರೆ ರಾಮನವಮಿಯದಿನ ನಮ್ಮೊಳಗೆ ಶ್ರೀರಾಮನ ದರ್ಶನಕ್ಕೆ ಬೇಕಾದ ಕೇಂದ್ರಗಳನ್ನು ತೆರೆಯಿಸಲು ಪೋಷಕವಾಗುತ್ತದೆ. ಆದ್ದರಿಂದಲೇ ಆ ದಿನಗಳಲ್ಲಿ  ಗಣೇಶನ ಹಾಗೂ ಶ್ರೀರಾಮನ ಪೂಜೆಗಳನ್ನು ವಿಧಿಸಿದ್ದಾರೆ. ಇಂತಹ ಪುಷ್ಟಿಯು ಕಾಲದಲ್ಲೇ ಸೃಷ್ಟಿಸಹಜವಾಗಿ ಹುದುಗಿರುವುದನ್ನು ಮಹರ್ಷಿಗಳ ವೈಜ್ಞಾನಿಕಮತಿಯು ಗುರುತಿಸಿ ಅದರ ಲಾಭವನ್ನು ಜೀವಲೋಕವು ಪಡೆಯುವ ರೀತಿಯಲ್ಲಿ ಜೀವನಕ್ರಮವನ್ನು ವ್ಯವಸ್ಥೆಗೊಳಿಸಿದೆ.  ಈ ನಿಯಮದಂತೆ ದೀಪಾವಳಿಯ ಎಲ್ಲಾ ದಿನಗಳೂ ನಮ್ಮ ಅಂತರಂಗದ ಕೇಂದ್ರಗಳನ್ನು ತೆರೆಯಲು ಸಹಾಯ ಮಾಡುತ್ತವೆ. ದೀಪಾವಳಿಯ ಅಮಾವಾಸ್ಯೆಯು ಮಹಾಲಕ್ಷ್ಮಿಯ ಪೂಜೆಗೆ ಮೀಸಲಾಗಿದೆ. 

ಲಕ್ಷ್ಮೀ ಪೂಜೆ 

ಸಾಮಾನ್ಯವಾಗಿ ಲಕ್ಷ್ಮಿಯನ್ನು ಧನ-ಧಾನ್ಯಗಳಿಗಾಗಿ ಮಾತ್ರವೇ ಪೂಜಿಸುತ್ತೇವೆ. ಆ ರೀತಿಯ ಲೌಕಿಕವಾದ ಸಂಪತ್ತುಗಳನ್ನು ಆಕೆಯು ಕರುಣಿಸುವಳು ಎಂಬುದರಲ್ಲಿ ಸಂಶಯವಿಲ್ಲ. ವಿಪುಲವಾದ ಹಣವು ಅಹಂಕಾರ-ರಾಗದ್ವೇಷಗಳಿಗೆ ಕಾರಣವಾಗುತ್ತದೆ ಎಂದು ಅದನ್ನು ನಿಂದಿಸುವುದೂ ಸರಿಯಲ್ಲ. ಏಕೆಂದರೆ ಇದನ್ನು ಜಗನ್ಮಾತೆಯ ಒಂದು ವಿಭೂತಿ ಎಂದು ಭಾವಿಸಿ ಧರ್ಮ ಮತ್ತು ಸುಖ ಸಾಧನೆಗೆ ಬಳಸಿಕೊಳ್ಳುವುದು ವಿವೇಕದ ಹಾದಿ. ಶ್ರೀರಂಗಮಹಾಗುರುಗಳ ವಿವೇಕವಾಣಿಯು ಇಲ್ಲಿ ಉಲ್ಲೇಖಾರ್ಹ ಎಂದೆನಿಸುತ್ತದೆ: "ಅರ್ಥವು ಪರಮಾರ್ಥಕ್ಕೆ ಯಾವುದೇ ರೀತಿಯಲ್ಲಾದರೂ ಉಪಯೋಗಪಡುವುದಾದರೆ ಅದರ ವಿಷಯದಲ್ಲಿ ನಾನು ವಿಮುಖನಾಗುವುದಿಲ್ಲ."    

ಲಕ್ಷ್ಮೀದೇವಿಯು ಎಲ್ಲ ಜೀವಿಗಳಿಗೂ ತಾಯಿಯಾಗಿ ಸರ್ವಜ್ಞಳಾಗಿ, ಸರ್ವಸಾಕ್ಷಿಣಿಯಾಗಿ ಭಗವಂತನೊಡನೆ ನಿತ್ಯಯೋಗವನ್ನು ಪಡೆದು ಸರ್ವಮಂಗಳವನ್ನೂ ಕರುಣಿಸುವ ಮಹಾಮಾತೆಯಾಗಿದ್ದಾಳೆ. ಲಕ್ಷ್ಮೀ ಎಂಬ ಪದವು ಜೀವಿಗಳು ಅಪೇಕ್ಷಿಸಬೇಕಾದ ಎಲ್ಲಾ ಶ್ರೇಷ್ಠಪದಾರ್ಥಗಳಿಗೂ ವಾಚಕವಾಗಿದೆ. ಕೇವಲ ಹಣಕಾಸು ಎಂಬುದು ಆ ಮಹಾಲಕ್ಷ್ಮಿಯ ಒಂದು ಅಂಶ ಮಾತ್ರವೇ. ಅವಳ ಪೂರ್ಣ ರೂಪವು ಅಷ್ಟಲಕ್ಷ್ಮಿಯೇ – ಧನ-ಧಾನ್ಯ-ಸಂತಾನ-ವಿದ್ಯಾ-ಶೌರ್ಯ-ಕೀರ್ತಿ-ಸೌಮ್ಯ-ವಿಜಯಲಕ್ಷ್ಮೀ – ಎಂಬುದಾಗಿ ಆಗಮಶಾಸ್ತ್ರಗಳು ಮೊಳಗುತ್ತವೆ. ಆ ಮೂರ್ತಿಗಳನ್ನು ಅನೇಕ ದೇವಾಲಯಗಳಲ್ಲಿ ಶಿಲ್ಪ-ಚಿತ್ರರೂಪಗಳಲ್ಲೂ ಕಾಣಬಹುದು. ಧನಲಕ್ಷ್ಮೀ, ಧಾನ್ಯಲಕ್ಷ್ಮೀಯನ್ನು ಮಾತ್ರವೇ ಪೂಜಿಸುವ ನಮ್ಮ ಗಮನವನ್ನು ಇವುಗಳಿಗಿಂತಲೂ ಉನ್ನತವಾದ ಆತ್ಮಸಂಪತ್ತನ್ನು ಕರುಣಿಸಬಲ್ಲ ಆತ್ಮಲಕ್ಷ್ಮೀ- ಮೋಕ್ಷಲಕ್ಷ್ಮಿಯತ್ತ   ಜ್ಞಾನಿಗಳು ಸೆಳೆದಿದ್ದಾರೆ.

ದೀಪ ಬೆಳಗಿಸುವಿಕೆ  

ಹಣತೆಯದೀಪಕ್ಕೆ ಬತ್ತಿಯನ್ನಿಟ್ಟು ಎಣ್ಣೆ/ತುಪ್ಪಗಳಿಂದ ಬೆಳಗಿಸುವುದು ಋಷಿಸಂಪ್ರದಾಯದ ಕ್ರಮ. ಆದರೆ ಕತ್ತಲೆಯನ್ನು ನಿವಾರಿಸಲು ಇಂದಿನ ಪ್ರಗತಿಪರವಾದ ಯುಗದಲ್ಲಿ ಕಣ್ಣನ್ನು ಕೋರೈಸುವಷ್ಟು ಪ್ರಕಾಶಮಾನವಾದ ವಿದ್ಯುದ್ದೀಪಗಳು , ಮನಸ್ಸನ್ನು ಸೆಳೆಯುವ ಬಣ್ಣ-ಬಣ್ಣದ ದೀಪಗಳು, ಸಾಲು ಸಾಲಾಗಿ ಸಂಚರಿಸುವಂತೆ ಕಾಣುವ ದೀಪಪರಂಪರೆಗಳು ಉಪಲಬ್ಧವಿರುವಾಗ ಋಷಿಯುಗದ ಹಣತೆಗಳೇಕೆ? ಎಂಬ ಪ್ರಶ್ನೆ ನ್ಯಾಯವಾಗಿದೆ.  



ಇದಕ್ಕೆ ಉತ್ತರವನ್ನು ಹುಡುಕಬೇಕಾದರೆ ಹಣತೆಗಳ ಹಿಂದೆ ಮಹರ್ಷಿಗಳ ಆಶಯವೇನಿದೆಯೆಂಬುದನ್ನು ಅರಿಯುವುದು ಉಚಿತ. ದೀಪವು ಜ್ಯೋತಿರ್ಮಯನಾದ ಪರಮಾತ್ಮನ ಪ್ರತಿನಿಧಿಯೇ ಆಗಿರುತ್ತದೆ. ಆದುದರಿಂದಲೇ ದೀಪಕ್ಕೂ ಕೈಮುಗಿಯುತ್ತೇವೆ. ಮಹರ್ಷಿಗಳು ತಮ್ಮ ಧ್ಯಾನ-ಸಮಾಧಿಯಲ್ಲಿ ಸುಷುಮ್ನಾ ನಾಡಿಯಮೂಲಕ ಆರು ಚಕ್ರಗಳನ್ನು ದಾಟಿ ಅತ್ಯುನ್ನತಸ್ಥಾನದಲ್ಲಿ ಸಹಸ್ರಾರ ಚಕ್ರದಲ್ಲಿ ಪರಮಪ್ರಕಾಶರೂಪವಾದ ಜ್ಯೋತಿಯ ದರ್ಶನವನ್ನು ಮಾಡಿದರು.  ಆ ದರ್ಶನವು ನೀಡಿದ ಆನಂದವು ಲೌಕಿಕ ಸುಖಗಳಲ್ಲಿ ಪಡೆಯಬಹುದಾದ ಆನಂದಗಳೆಲ್ಲಕ್ಕಿಂತಲೂ ವಿಭಿನ್ನವಾಗಿಯೂ, ಅಪರಿಮಿತವಾಗಿಯೂ, ಶಾಶ್ವತವಾಗಿಯೂ ಇರುವುದೆಂಬುದನ್ನು ಅನುಭವಿಸಿದರು. ತಾವುಕಂಡ ಆ ದಿವ್ಯ ಪ್ರಕಾಶದೆಡೆಗೆ ಲೋಕದ ಗಮನವನ್ನು ಹರಿಸಲು ಅದನ್ನೇ ಹೋಲುವ ದೀಪಶಿಖೆಯನ್ನು ಮೂಡಿಸಿದರು. ಬತ್ತಿ, ಎಣ್ಣೆ-ತುಪ್ಪಗಳನ್ನು ಬಳಸುವಾಗ ದೀಪಜ್ವಾಲೆಯ ಉದ್ದ, ಆಕಾರ, ಬಣ್ಣ ಎಲ್ಲವೂ ತಮ್ಮ ಅಂತರ್ದರ್ಶನಕ್ಕೆ ಹೋಲುವಂತಿರುವ ವ್ಯವಸ್ಥೆಯನ್ನು ತಂದುಕೊಟ್ಟರು. ಅದನ್ನು ಸರಿಯಾಗಿ ದಿಟ್ಟಿಸಿ ನೋಡುವುದರಿಂದ ನಮ್ಮಲ್ಲಿನ ದುರ್ಭಾಗ್ಯದ ಕೇಂದ್ರಗಳು ಮುಚ್ಚುವುದಲ್ಲದೇ ಸೌಭಾಗ್ಯದ ಕೇಂದ್ರಗಳು ತೆರೆಯುತ್ತವೆ ಎಂಬುದು ಜ್ಞಾನಿಗಳ ಮತ.

ವಿಶ್ವವೆಲ್ಲವೂ ಪರಮಾತ್ಮಮಯವೇ ಆಗಿದೆ ಮತ್ತು ಪರಮಾತ್ಮನೇ ಅಧ್ಯಾತ್ಮ ದೀಪ. ಅವನಿಂದಲೇ ದೇವತೆಗಳೂ, ವಿದ್ಯೆಗಳೂ ಪ್ರಕಾಶಗೊಂಡು ವಿಶ್ವವೆಲ್ಲಾ ವಿದ್ಯಾಮಯವಾಗಿದೆ. ಈ ಭಾವವನ್ನು ಸ್ಪಷ್ಟಪಡಿಸುವ ಆಚರಣೆಯೆಂದರೆ ದೇವರ ಸನ್ನಿಧಿಯಲ್ಲಿ ಮೊದಲು ಒಂದು ದೀಪವನ್ನು ಹಚ್ಚುವುದು. ನಂತರ ಅದರಿಂದ ಮತ್ತೊಂದು ದೀಪ ಎಂಬಂತೆ ನಾನಾದೀಪಗಳನ್ನು ಹತ್ತಿಸುವುದು.

ಇಂದಿನ ವಿದ್ಯುತ್ ದೀಪಗಳು ಎಷ್ಟೇ ಮನರಂಜಕವಾಗಿದ್ದರೂ, ಪ್ರಕಾಶಮಯವಾಗಿದ್ದರೂ ಅಂತರಂಗದ ಪ್ರಕಾಶದ ಹೋಲಿಕೆಯನ್ನು ಹೊಂದಿರುವುದಿಲ್ಲ. ಆದ್ದರಿಂದಲೇ ಹಣತೆಗಳನ್ನು ಬಳಸುವುದು ವಿವೇಕಪೂರ್ಣವಾದ, ಲಾಭಕರವಾದ ಸಂಪ್ರದಾಯವಾಗಿದೆ. 

ದೀಪಾವಳಿಯಂದು ಬೆಳಗಿಸುವ ಆಕಾಶದೀಪವೂ ಅಂತರಂಗದಲ್ಲಿ ಉನ್ನತವಾದ ಸಹಸ್ರಾರದಲ್ಲಿ ಬೆಳಗುವ ಜ್ಯೋತಿಯನ್ನು ಸ್ಮರಣೆಗೆ ತಂದುಕೊಡುವಂತಿದೆಯೆಂಬುದನ್ನು ಗಮನಿಸ ಬಹುದಾಗಿದೆ.    

ಪಟಾಕಿಗಳ ಸದ್ದು ಬರೀ ಮೋಜಿಗಾಗಿ ಮಾತ್ರವೇ?

ಪಟಾಕಿಯಿಲ್ಲದ ದೀಪಾವಳಿಯು ಸಪ್ಪೆಯೇ ಸರಿಯೆನಿಸುವುದು ಸಹಜ. ಆದರೆ ಈಗ ಜನರಲ್ಲಿ ಬೆಳೆದುನಿಂತಿರುವ ಪರಿಸರಮಾಲಿನ್ಯ, ಅದರ ನಿವಾರಣೆ ಇತ್ಯಾದಿ ವಿಚಾರಗಳು ಪಟಾಕಿಗಳ ಬಳಕೆಗೆ ಬಹುಮಟ್ಟಿಗೆ ಅಡ್ಡಿಯನ್ನು ತರುತ್ತಿರುವುದು ಕಂಡುಬರುತ್ತಿದೆ. ಆರೋಗ್ಯದ ಹಾಗೂ ನಿಸರ್ಗದಲ್ಲಿ ಸ್ವಚ್ಛತೆಯನ್ನು ಕಾಪಾಡುವ ನಿಟ್ಟಿನಲ್ಲಿ ಇದೊಂದು ದೊಡ್ಡ ಹೆಜ್ಜೆಯೇ ಆಗಿದೆಯೆನ್ನುವುದನ್ನು ನಿರಾಕರಿಸಲಾಗದು.  

ಇದು ಲೌಕಿಕವಾದ ದೃಷ್ಟಿಕೋಣವಾಗಿದೆ. ಆದರೆ ಪಟಾಕಿಗಳ ಸದ್ದು, ಅದರಿಂದ ಹೊರಬರುವ  ಪ್ರಕಾಶ ಇವುಗಳು ಜ್ಞಾನಿಗಳಿಗೆ ಅಂತಃಪ್ರಪಂಚದ ಸ್ಮರಣೆಯನ್ನು ಕೊಡುತ್ತವೆ. ಯೋಗಮಾರ್ಗದಲ್ಲಿ ವಿವಿಧ ಚಕ್ರಸ್ಥಾನಗಳನ್ನು ದಾಟುವಾಗ ಒಂದು ಸ್ಫೋಟವು ಕೇಳಿಬರುವುದೆಂದೂ, ಒಂದು ಪ್ರಕಾಶವೂ  ಕಾಣಿಸುವುದೆಂದೂ ಶ್ರೀರಂಗಮಹಾಗುರುಗಳು ತಿಳಿಸಿದ್ದರು. ಆದ್ದರಿಂದ ಪಟಾಕಿ ಹೊಡೆಯುವುದರಲ್ಲಿ ಲೌಕಿಕವಾದ ಆನಂದದ ಜೊತೆಯಲ್ಲಿ ಅಧ್ಯಾತ್ಮದ ಆನಂದವನ್ನೂ ನೆನಪಿಸಿಕೊಳ್ಳಬಹುದಾದ ವಿಷಯವಿದೆ.     

ಅರ್ಥಪೂರ್ಣ ಆಚರಣೆಯ ಪ್ರಯೋಜನ 

ಸತ್ಸಂಪ್ರದಾಯದ ಆಚಾರಣೆಗಳನ್ನು ಅರ್ಥವರಿತು ಆಚಾರಿಸಿದಾಗ  ಲೌಕಿಕ, ದೈವಿಕ, ಆಧ್ಯಾತ್ಮಿಕ ಮೂರೂ ಕ್ಷೇತ್ರಗಳ ಲಾಭವನ್ನೂ ಪಡೆಯಬಹುದು. ಜ್ಞಾನಿಗಳ ಸಂಯೋಜನೆಯಲ್ಲಿ ಧರ್ಮ-ಅರ್ಥ-ಕಾಮ-ಮೋಕ್ಷಗಳೆಂಬ ನಾಲ್ಕು ಪುರುಷಾರ್ಥಗಳ ಪ್ರಾಪ್ತಿಗೂ ಅವಕಾಶವಿದೆ. ಆದುದರಿಂದಲೇ  "ಮರ್ಮವರಿತು ಕರ್ಮಗಳನ್ನು ಆಚರಿಸಬೇಕು" ಎಂಬ ಶ್ರೀರಂಗಮಹಾಗುರುಗಳ ಸೂತ್ರಪ್ರಾಯವಾದ ಮಾತು ಸ್ಮರಣೀಯ. ಈ ಬಗೆಯ ಋಷಿ ದೃಷ್ಟಿಯಲ್ಲಿ ದೀಪಾವಳಿ ಹಬ್ಬವನ್ನು ಆಚರಿಸಿ ಸಂಭ್ರಮಿಸೋಣ.

ಸೂಚನೆ: ಈ ಲೇಖನವು ವಿಜಯ ಕರ್ನಾಟಕದ ಪತ್ರಿಕೆಯ ಬೋಧಿ ವೃಕ್ಷ ದಲ್ಲಿ 30/10/2021 ರಂದು ಪ್ರಕಟವಾಗಿದೆ.

Friday, October 29, 2021

Ananda Tandava Of Nataraja - 29

Respond to (lekhana@ayvm.in)

  

The Facial Expression

Looking at the face of Naṭarāja one gets immediately aware of a special feature viz. "the third eye" set vertically in the forehead. The vertical extremes of this tilaka-shaped "eye" touch the rim of the head-dress at the top, and the point between the two eyebrows at the bottom. The pupils of all the three eyes, Śrīraṅgamahaguru noted, appear equidistant. It is common to refer to the two eyes of the Lord as the Sun and the Moon.( Cf. dhyāna-śloka of Viṣṇusahasranāman , or even the much older Muṇḍakopaniṣad 2.1.4.) The third eye, known as the "eye of knowledge," is commonly represented as the Eye of Fire. This trinity of eyes thus represents the trinity of luminaries viz. the Sun, the Moon, and the Fire.

           The third eye is closed, while the horizontal eyes are depicted as open. This combination suggests a special yogic condition. It is known in yogic literature as "eyes open but gaze turned inwards," which is a reference to the peak of yogic experience called Śāmbhavī-mudrā. Refer Śāṇḍilyopaniṣad 1.7.14:

antar lakṣyaṁ bahir dṛṣṭir nimeṣonmeṣa-varjitā | eṣā sā śāmbhavī mudrā sarva-tantreṣu gopitā || अन्तर् लक्ष्यं बहिर् दृष्टिर् निमेषोन्मेष-वर्जिता । एषा सा शाम्भवी मुद्रा सर्व-तन्त्रेषु गोपिता ॥

           The left eyebrow of Naṭarāja is considerably raised. This indicates a high state of mind. Kālidāsa makes a reference to this as a culmination in the particular positioning of the eyebrow. Kumārasambhava  3.47: bhrū-vikriyāyāṁ virata-prasaṅgaiḥ. This is also the way to attain the high yogic state(s) called unmanī/samunmanī/ manonmanī. This is confirmed by Śāṇḍilyopaniṣad 1.17:

tāraṁ jyotiṣi saṁyojya kiñcid unnamaya bhruvau |

pūrvābhyāsasya mārgo'yam unmanī-kārakaḥ kṣaṇāt |

तारं ज्योतिषि संयोज्य किञ्चिद् उन्नमय भ्रुवौ

पूर्वाभ्यासस्य मार्गोऽयम् उन्मनी-कारकः क्षणात्

The connection between the raising of the eyebrow and the state of mind is a matter of yogic experience, as the Upaniṣad sets it forth.

           The ecstatic state of Naṭarāja is borne out by His facial expression. An ineffable, gentle smile adorns His face. There is an asymmetry noticeable in the smile, recognized only upon a close observation: the left portion of the smile has a certain femininity, with a visible dimple on the left cheek, while the right portion is somewhat tinged by restraint, as the dimple is hardly obvious. The lower lip is a little projected forward, as against the upper one which is a little drawn back. The nostrils betray features of deep inhalation, followed by the retention of breath; thus these nostrils show the stillness attained by what is spoken of as Kevala-kumbhakāvasthā "the state of Kevala Kumbhaka, "Stilled Retention" in yogic texts. 



Thursday, October 28, 2021

ಭಗವಂತನ ಸಹವಾಸಕ್ಕೆ ಬೇಕು ಉಪವಾಸ (Bhagavantana Sahavaasakke Beku Upavaasa)

ಲೇಖಕರು; ಡಾ. ರಾಮಮೂರ್ತಿ ಟಿ. ವಿ

(ಪ್ರತಿಕ್ರಿಯಿಸಿರಿ lekhana@ayvm.in)


  


ಜಪಾನಿನ ಪ್ರಾಚಾರ್ಯರಾದ ಯೋಶಿನೋರಿ ಓಸೂಮಿ ರವರಿಗೆ ವೈದ್ಯಕೀಯ ಕ್ಷೇತ್ರದಲ್ಲಿ ೨೦೧೬ರ ನೋಬೆಲ್ ಪಾರಿಷೋತಕ ನೀಡಲಾಯಿತು. ಈ ಗೌರವ ಸಂದಿದ್ದು ಅವರ ಆಟೋಫಗಿ ಬಗೆಗಿನ ವೈಜ್ಞಾನಿಕ  ಸಂಶೋಧನೆಗಾಗಿ. ಆಟೋಫಗಿ ಎಂದರೆ ಮಾನವ ಶರೀರದಲ್ಲಿನ ಅನಾರೋಗ್ಯ ಜೀವಕೋಶಗಳು ಹಾಗೂ ಅನುಪಯುಕ್ತ ಪ್ರೋಟಿನ್ ಗಳ ಸ್ವಯಂಭಕ್ಷಣೆ. ಉಪವಾಸ ಮಾಡುವ ಸಂಧರ್ಭದಲ್ಲಿ ಈ ಪ್ರಕ್ರಿಯೆ ಸಹಜವಾಗಿ ಆಗುತ್ತದೆ. ಇದರಿಂದಾಗಿ ಮಾನವನ ಆರೋಗ್ಯದಲ್ಲಿ ಸುಧಾರಣೆ ಕಂಡು ಬರುತ್ತದೆ.  


ಪುರಾತನ ಕಾಲದಿಂದಲೂ ಉಪವಾಸದ ಬಗ್ಗೆ ಪುರಾಣ, ಆಯುರ್ವೇದ, ಆಧ್ಯಾತ್ಮಿಕ ಕ್ಷೇತ್ರಗಳಲ್ಲಿ ಚಿಂತನೆ ನಡೆದಿದೆ. ಆಧುನಿಕ ವೈಜ್ಞಾನಿಕ ಭಾಷೆಯಲ್ಲಿ ಇಲ್ಲದಿರಬಹುದು. ಆಯುರ್ವೇದವು ಉಪವಾಸದಿಂದ ಜೀರ್ಣಾಂಗ ವ್ಯವಸ್ಥೆ ಶುದ್ಧಗೊಳ್ಳುತ್ತದೆ ಹಾಗೂ ವಿಷಾಂಶವು ಕಡಿಮೆಯಾಗುತ್ತದೆ ಎಂದು ತಿಳಿಸುತ್ತದೆ. "ಶರೀರಮಾದ್ಯಂ ಖಲು ಧರ್ಮಸಾಧನಂ" ಎಂಬಂತೆ ಶರೀರದ ಆರೋಗ್ಯವು ಧರ್ಮಸಾಧನೆಗೆ ಮತ್ತು ಆಧ್ಯಾತ್ಮಿಕ ಸಾಧನೆಗೆ ಮುಖ್ಯವಾಗಿರುತ್ತದೆ. 


ಪ್ರತಿಜೀವಿಯೂ ಶಾಂತಿಸಮೃದ್ಧಿಗಾಗಿ ಹಂಬಲಿಸುತ್ತಾನೆ. ಶ್ರೀರಂಗಮಹಾಗುರುಗಳ ಮಾತುಗಳು ಇಲ್ಲಿ ಸ್ಮರಣೀಯ " ದೇವನ ಕಡೆಗೆ ಜೀವನು ಸುಖ ಶಾಂತಿಗಾಗಿ ಹೋಗಲೇಬೇಕು. ಅದು ಜೀವನ ಸಹಜವಾದ ಹಕ್ಕು; ಮೂಲಭೂತವಾದ ಹಕ್ಕು." ಈ ಸುಖ ಶಾಂತಿ ಪಡೆಯಲು ಭಾರತದ ಋಷಿಗಳು ಕಾಲದೇಶಗಳಲ್ಲಿ ಬರುವ ಸಂದರ್ಭಗಳನ್ನು ಗುರಿತಿಸಿ ಕೆಲವು ಆಚರಣೆಗಳನ್ನು ತಂದಿರುವುದುಂಟು. ಕಾಲಚಕ್ರದಲ್ಲಿ ಬರುವ ಸನ್ನಿವೇಶಗಳನ್ನು ಉಪಯೋಗಮಾಡಿಕೊಳ್ಳಲಿ ಎಂಬ ಸದುದ್ದೇಶದಿಂದ ನಮ್ಮ ಹಿರಿಯರು ತಂದಿರುವ ಮಾರ್ಗಗಳಲ್ಲಿ ಏಕಾದಶಿಯಂದು ಮಾಡುವ ಉಪವಾಸವೂ ಒಂದು. 


ಉಪವಾಸದ ಆಚರಣೆಗೆ ಒತ್ತುಕೊಡುವ ಕಥೆಗಳಲ್ಲಿ ಅಂಬರೀಷ ಮಹಾರಾಜನ ಕಥೆ ಪುರಾಣಪ್ರಸಿದ್ಧ. ಆತ ಮಹಾವಿಷ್ಣುವಿನ ಪರಮ ಭಕ್ತನಾಗಿದ್ದು, ಪ್ರತಿ ಏಕಾದಶಿ ಮತ್ತು ಮರುದಿನ ದ್ವಾದಶಿಯಲ್ಲಿ ವ್ರತಾಚರಣೆಯನ್ನು ಶ್ರದ್ಧಾಭಕ್ತಿಗಳಿಂದ ಆಚರಿಸುತ್ತಿದ್ದನು. ಅವನ ರಕ್ಷಣೆಗಾಗಿ ಮಹಾವಿಷ್ಣುವಿನ ಸುದರ್ಶನ ಚಕ್ರವೇ ಅವನಲ್ಲಿತ್ತು. ದೂರ್ವಾಸಮುನಿಗಳೊಮ್ಮೆ ದ್ವಾದಶಿದಿನದಂದು ಅಂಬರೀಷನ ಅರೆಮನೆಗೆ ಬಂದು ಸತ್ಕಾರಗಳನ್ನು ಸ್ವೀಕರಿಸಿ, ಸ್ನಾನಾಹ್ನಿಕಗಳನ್ನು ಪೂರೈಸಿಕೊಂಡು ಬರುವೆನೆಂದು ತಿಳಿಸಿ ಹೊರಟವರು ದ್ವಾದಶಿಮುಹೂರ್ತ ಮುಗಿಯುವ ವೇಳೆಗೆ ಬರಲಿಲ್ಲ. ಆಗ ರಾಜನು ಕೇವಲ ನೀರನ್ನು ಪ್ರಾಶನಮಾಡುವುದು ಅನಿವಾರ್ಯವಾಯಿತು. ಆ ಕಾರಣಕ್ಕಾಗಿ ದೂರ್ವಾಸರು ಕೋಪಾವಿಷ್ಟರಾಗಿ ಅಂಬರೀಷನನ್ನು ಸಂಹರಿಸಲು ಪ್ರಯತ್ನ ಪಟ್ಟಾಗ ಸುದರ್ಶನಚಕ್ರವು ದೂರ್ವಾಸರ ಬೆನ್ನು ಹತ್ತಿತು. ಆಗ ದೂರ್ವಾಸರು ತ್ರಿಮೂರ್ತಿಗಳಲ್ಲಿ ಶರಣಾದರೂ, ಅವರು ರಕ್ಷಿಸದೆ, ಕೊನೆಗೆ ಅಂಬರೀಷನಲ್ಲಿಯೇ ಶರಣಾದರು. ಸುದರ್ಶನ ಚಕ್ರವು ಮನಸ್ಸ್ತತ್ವವನ್ನು ಸೂಚಿಸುತ್ತದೆ. ಅಂಬರೀಷನಿಗೆ ಮನಸ್ಸಿನ ಮೇಲೆ ಪೂರ್ಣಹತೋಟಿ ಇದ್ದುದರಿಂದ, ಸುದರ್ಶನಚಕ್ರವನ್ನು ಮಹಾವಿಷ್ಣುವು ಅದನ್ನು ಅಂಬರೀಷನಿಗೆ ಕೊಟ್ಟಿದ್ದನು ಎಂಬುದು ಸೂಕ್ಷ್ಮಾರ್ಥ. ಕೋಪತಾಪಗಳಿಗೆ ಅಲ್ಲಿ ಜಾಗವಿಲ್ಲ. ಆದ್ದರಿಂದ ದೂರ್ವಾಸರ ಕೋಪತಾಪಗಳು  ಫಲಿಸದೆ ಅವರು ಅಂಬರೀಷನಲ್ಲಿಯೇ ಶರಣಾಗಬೇಕಾಯಿತು. ಅಂತಹ ಭಕ್ತರ ಬಗ್ಗೆ ಪುರಂದರದಾಸರು ಕೀರ್ತನೆ ಮಾಡಿದ್ದಾರೆ " ಹರಿವಾಸರದುಪವಾಸದ ಭಾಗ್ಯವು ಕಂಡ ಕಂಡವರಿಗೆ ದೊರಕುವುದೆ ? ಹಿರಿದು ಜನ್ಮಗಳಿಂದ ಹರಿಯನಾರಾಧಿಪ ಪರಮ ಭಾಗವತಭಕ್ತರಿಗಲ್ಲದೆ"ಕಾಲಚಕ್ರದಲ್ಲಿ ಬರುವ ಸಂದರ್ಭಗಳನ್ನು ಉಪಯೋಗಿಸಿ ನಾವು ಭಗವತ್ಸಾಕ್ಷಾತ್ಕಾರವೆಂಬ ಮಹಾಧ್ಯೇಯವನ್ನು ಪಡೆಯುವಂತಾಗಲಿ ಎಂದು ಹಾರೈಸೋಣ.


ಸೂಚನೆ: 28/10/2021 ರಂದು ಈ ಲೇಖನವು ವಿಶ್ವ ವಾಣಿ ಯಲ್ಲಿ ಪ್ರಕಟವಾಗಿದೆ.  

Sunday, October 24, 2021

ಶ್ರೀರಾಮನ ಗುಣಗಳು - 28 ನರೋತ್ತಮ - ಶ್ರೀರಾಮ (Sriramana Gunagalu - 28 Narotthama Shrirama)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ 

(ಪ್ರತಿಕ್ರಿಯಿಸಿರಿ lekhana@ayvm.in)


 

ಶ್ರೀರಾಮನನ್ನು 'ನರೋತ್ತಮ' ಎಂಬ ಗುಣವಿಶೇಷದಿಂದ ಕರೆಯಲು ಬಲವಾದ ಕಾರಣವಿದೆ. ನರರಲ್ಲಿ ಉತ್ತಮನಾದವನನ್ನು ನರೋತ್ತಮ ಎನ್ನಲಾಗುತ್ತದೆ. ಇದು ಶ್ರೀರಾಮನಲ್ಲಿ ನೂರಕ್ಕೆ ನೂರು ಅನ್ವಯವಾಗುವ ಪದವಾಗಿದೆ. ಈ ಸೃಷ್ಟಿಯಲ್ಲಿ ಎಂಭತ್ತನಾಲ್ಕು ಲಕ್ಷ ಜೀವಜಾತಿಗಳಿವೆ. ಇವುಗಳಲ್ಲಿ ಮಾನವನದು ಅತ್ಯಂತ ಉತ್ತಮವಾದ ಸೃಷ್ಟಿ. ಸೃಷ್ಟಿಯ ಕಾರ್ಯವನ್ನು ಮಾಡುವಾಗ ಬ್ರಹ್ಮನಿಗೆ ಯಾವ ಬಗೆಯ ಸೃಷ್ಟಿಯನ್ನು ಮಾಡಿದರೂ ಅಲ್ಲಿ ಸಮಾಧಾನ ಕಂಡಿಲ್ಲವಂತೆ. ಒಂದಲ್ಲ ಒಂದು ಐಬು ಅವನ ಮನಸ್ಸಿಗೆ ಬರುತ್ತಿತ್ತಂತೆ. ಆದರೆ ಯಾವಾಗ ಮಾನವನ ಸೃಷ್ಟಿಯನ್ನು ಮಾಡಿದನೋ ಆಗ ಭಗವಂತ ಬಹಳ ತೃಪ್ತಿಯನ್ನು ಪಟ್ಟನು ಎಂಬುದಾಗಿ ಕೇಳುತ್ತೇವೆ. ಪ್ರತಿಯೊಬ್ಬರೂ ಬಯಸುವುದು ಪೂರ್ಣವನ್ನು. ಅಥವಾ ಯಾವುದರಿಂದ ಪೂರ್ಣವಾದುದನ್ನು ಪಡೆಯಲು ಸಾಧ್ಯವೋ, ಅಂತಹದ್ದನ್ನು ಪಡೆಯಬೇಕೆಂಬುದೂ ಕೂಡ ಅಷ್ಟೇ ಸಹಜವಾದ ಬಯಕೆಯಾಗಿರುತ್ತದೆ. ಈ ಕಾರಣದಿಂದ ಮಾನವನ ಸೃಷ್ಟಿಯನ್ನು ಪೂರ್ಣವಾದ ಸೃಷ್ಟಿ ಎನ್ನಲಾಗುತ್ತದೆ. ಅಂದರೆ ಭಗವಂತನನ್ನು ಪೂರ್ಣ ಎನ್ನುತ್ತಾರೆ. ಆ ಪೂರ್ಣವಾದ ವಿಷಯವನ್ನು ನಮ್ಮಲ್ಲಿ ತುಂಬಿಕೊಳ್ಳಲು  ಅಂತಹ ಉತ್ಕೃಷ್ಟ ಒಡಲು ಬೇಕಲ್ಲವೇ!  ಶ್ರೀರಂಗಮಹಾಗುರುಗಳು, ಸತ್ಯವೂ, ಸುಂದರವೂ, ಮಂಗಳಕರವೂ ಆದ ಭಗವಂತನನ್ನು ಹೊತ್ತಿದೆ ಈ ಶರೀರ ಎಂಬ ಭಾವದಲ್ಲಿಯೇ ಶರೀರವನ್ನು ಸನಾತನಾರ್ಯ ಭಾರತ ಮಹರ್ಷಿಗಳು ನೋಡಿದ್ದಾರೆ- ಎಂದು ನೆನಪಿಸುತ್ತಿದ್ದರು. ಅಂದರೆ ನಮ್ಮ ಭಾರತೀಯ ಋಷಿಮಹರ್ಷಿಗಳು ಮಾನವನ ದೇಹವನ್ನು ಒಂದು ಮಾಂಸದ ಮುದ್ದೆಯನ್ನಾಗಿ ನೋಡದೆ, ಇದನ್ನು 'ಭಗವಂತನು ವಾಸ ಮಾಡುವ ಮಂದಿರ' ಎಂದು ಕೊಂಡಾಡಿದ್ದಾರೆ. "ಒಂದು ವೇಳೆ ಸತ್ಯವನ್ನು ಸಾಧಿಸಬೇಕೆಂದಿದ್ದರೆ ಈ ಮಾನವನ ಜನ್ಮದಲ್ಲೇ ಸಾಧಿಸಿಕೊಳ್ಳಿ. ಇಲ್ಲವಾದರೆ ಬಹಳ ದೊಡ್ದದಾದ ಹಾನಿಯನ್ನು ಅನುಭವಿಸುತ್ತೀರಿ" ಎಂಬ ಎಚ್ಚರಿಕೆಯನ್ನೂ ಉಪನಿಷತ್ತು ಕೊಟ್ಟಿದೆ. ಇಂತಹ ಮಾನವನ ಜನ್ಮವನ್ನು ಪಡೆಯುವುದೇ ಪುಣ್ಯ ಎಂದು ನಮ್ಮೆಲ್ಲ ಸಾಹಿತ್ಯಗಳು ಸಾರಿವೆ. ಇಷ್ಟೆಲ್ಲಾ ಹಿರಿಮೆ ಮಾನವನ ಜನ್ಮಕ್ಕೆ ಇರಬೇಕಾದರೆ  ಭಗವಂತನೇ ಶ್ರೀರಾಮರೂಪಿಯಾಗಿ ಮಾನವನ ಶರೀರದಲ್ಲಿ ಅವತಾರವನ್ನು ಎತ್ತಿ ಬಂದರೆ ಆ ಶರೀರದಲ್ಲಿ  ಶ್ರೀರಾಮನ ವ್ಯಕ್ತಿತ್ವಕ್ಕೆ ಅದೆಷ್ಟು ಮಹತ್ತ್ವ ಇರಬೇಕು! 

ರಾವಣನೆಂಬ ಮಹಾರಕ್ಕಸನನ್ನು ಬಡಿಯಲು ಮಾನವನ ರೂಪದಲ್ಲೆ ಧರೆಗಿಳಿಯಬೇಕಾದುದು ಅನಿವಾರ್ಯ. ಏಕೆಂದರೆ ರಾವಣನು, ಮಾನವನನ್ನು ಬಿಟ್ಟು ಬೇರೆ ಯಾರಿಂದಲೂ ಸಾವು ಬರಬಾರದು ಎಂಬ ವರವನ್ನು ಪಡೆದಿದ್ದವನು. ಮಂದಬುದ್ಧಿಯಾದ ರಕ್ಕಸನಿಗೆ, ಪರಿಪೂರ್ಣನಾದ ಭಗವಂತನು ಮಾನವನ ರೂಪದಲ್ಲಿ ಅವತರಿಸಿದರೆ ತನ್ನ ಅಂತ್ಯವಾಗುತ್ತದೆ ಎಂಬ ಸಾಮಾನ್ಯ ಅರಿವೂ ಇಲ್ಲದೇ ಹೋಯಿತು;  ಹುಟ್ಟಿದವನಿಗೆ ಅಮರತ್ವ ಸಾಧ್ಯವಿಲ್ಲವಷ್ಟೇ. ಆದ್ದರಿಂದ 'ಮಾನುಷೀರೂಪಮಾಶ್ರಿತಮ್' ಎಂಬಂತೆ ಭಗವಂತನು ಉತ್ಕೃಷ್ಟವಾದ  ಮಾನವನ ರೂಪದಲ್ಲಿ ಅವತರಿಸಬೇಕಾಯಿತು. ಶ್ರೀರಾಮನು ಯಾವ ರೀತಿಯಾಗಿ ಸರ್ವಸಮ್ಮತನಾದ ವ್ಯಕ್ತಿತ್ವ ಉಳ್ಳವನಾಗಿದ್ದ ಎಂಬುದಕ್ಕೆ ಈ ಲೋಕದಲ್ಲಿ ಸರ್ವಗುಣಸಂಪನ್ನನಾದ ವ್ಯಕ್ತಿ ಯಾರು? ಎಂಬ ವಾಲ್ಮೀಕಿಗಳ ಪ್ರಶ್ನೆಗೆ ನಾರದರು ಕೊಟ್ಟ ಉತ್ತರವೇ ಸಾಕು. ನಾರದರು ಶ್ರೀರಾಮನಲ್ಲಿದ್ದ ಅಸಾಧಾರಣಗುಣಗಳನ್ನು ಪಟ್ಟಿ ಮಾಡಿ, ಜಗತ್ತಿನಲ್ಲೇ ಅಂತಹ ಮಾನವರೂಪ ಮತ್ತೊಂದಿಲ್ಲ ಎಂಬುದನ್ನು ಸಾಬೀತುಪಡಿಸಿದರು. ಶ್ರೀರಾಮನೂ ಕೂಡ ತನ್ನ ಮಾನವತ್ವವನ್ನೇ ರಾಮಾಯಣದ ಉದ್ದಕ್ಕೂ ಪ್ರದರ್ಶಿಸಿ ಲೋಕೋತ್ತರನಾದ ನರೋತ್ತಮನಾದ.

ಸೂಚನೆ : 24/10/2021 ರಂದು ಈ ಲೇಖನವು  ಹೊಸದಿಗಂತ ಪತ್ರಿಕೆಯ "ಶ್ರೀರಾಮನ ಗುಣಗಳು" ಅಂಕಣದಲ್ಲಿ ಪ್ರಕಟವಾಗಿದೆ.

Saturday, October 23, 2021

ಯೋಗತಾರಾವಳಿ-26 ಕಾಣದ ಜಗತ್ತು (Yogataravali - 26 Kanada Jagattu)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)




ಯೋಗತಾರಾವಳೀ (ಶ್ಲೋಕ ೨೭)


ಪ್ರಕಾಶಮಾನೇ


ಜಗತ್ತು ಮಿಥ್ಯೆ - ಎಂಬುದಾಗಿ ಹೇಳುವರಲ್ಲವೆ? ಎಷ್ಟೋ ವೇಳೆ ಅದಕ್ಕೆ ಕಾರಣಗಳನ್ನು ಎಷ್ಟು ಬಾರಿ ಕೇಳಿದರೂ ಅದೇಕೋ ಪೂರ್ತಿಯಾಗಿ ತೃಪ್ತಿಯಾದಂತಿರುವುದಿಲ್ಲ. "ಜಗತ್ತು ಮಿಥ್ಯೆಯೇ ಇರಬಹುದೋ ಏನೋ? ಆದರೂ ಒಪ್ಪುವುದೂ ಸುಲಭವಲ್ಲ; ಮತ್ತೊಬ್ಬರಿಗೆ ಒಪ್ಪಿಸುವುದಂತೂ ಮತ್ತೂ ಕಷ್ಟವೇ" ಎಂದೆಲ್ಲ ತೋರುತ್ತಿರುತ್ತದೆ. ಆದರೆ ಈ ಶ್ಲೋಕದಲ್ಲಿ ಅದನ್ನು ಸುಭಗವಾಗಿ ನಿರೂಪಿಸಿದೆ.


ಕಾಣುವುದೆಂದರೆ ಹೇಗೆ?


ಯಾವುದಾದರೂ ವಸ್ತುವನ್ನು ನಾವು ಕಾಣಬಲ್ಲೆವು ಎಂದರೆ ಏನರ್ಥ? ಆರು ಸಂನಿವೇಶಗಳಿವೆಯೆಂದರ್ಥ.


ಮೊದಲನೆಯದಾಗಿ, ವಸ್ತುವೊಂದು ಇರಬೇಕು. ಎರಡನೆಯದಾಗಿ, ಅದು ಕತ್ತಲಲ್ಲಿರಬಾರದು. ಮೂರನೆಯದಾಗಿ, ಅದರ ಮೇಲೆ ಸಾಕಷ್ಟು ಬೆಳಕು ಬೀಳಬೇಕು. ನಾಲ್ಕನೆಯದಾಗಿ, ಅದರ ಮೇಲೆ ಬಿದ್ದ ಬೆಳಕು ಪ್ರತಿಫಲಿತವಾಗಿ ನಮ್ಮ ಕಣ್ಣಿಗೆ ಬೀಳಬೇಕು. ಐದನೆಯದಾಗಿ, ನಮ್ಮ ಕಣ್ಣು ಆರೋಗ್ಯವಾಗಿರಬೇಕು! ಆರನೆಯದಾಗಿ, ನೋಡುವವರಿಗೆ ಅರಿವಿರಬೇಕು.


"ಆದರಿದೋ ನೋಡಿ ವಿಚಿತ್ರವನ್ನು!" ಎಂದು ಈ ಶ್ಲೋಕವು 'ಅಹೋ' (ಆಶ್ಚರ್ಯ)! ಎನ್ನುತ್ತಾ ತೋರಿಸುತ್ತದೆ.


ಈ ಜಗತ್ತು ಎಷ್ಟು ವಿಶಾಲವಾದುದು! ಅಲ್ಲಿ ಏನೆಲ್ಲ ಇಲ್ಲ!? ಕಗ್ಗತ್ತಲಾದಾಗ ಏನೂ ಕಾಣದಾದರೂ ಸೂರ್ಯೋದಯವಾಗುತ್ತಲೇ ಕತ್ತಲು ಮರೆ! ಸೂರ್ಯನು ಮೇಲೆ ಬಂದನೆಂದರೆ ಕತ್ತಲೆಯೆತ್ತಲೋ! ಮೋಡದ ಮರೆಯೆಂಬುದೇನೂ ಇಲ್ಲದೆ ಸೂರ್ಯನು ಪ್ರಕಾಶದಿಂದ ಕೂಡಿ ಬೆಳಗುತ್ತಿದ್ದಾನೆಂದರೆ, ಸೂರ್ಯನ ಕಿರಣಗಳು ತಡೆಯಿಲ್ಲದೆ ಬೀಳುತ್ತಿವೆಯೆಂದರೆ, ಆಗ ಕಾಣಲಾಗದ ಪದಾರ್ಥವೆಂಬುದೊಂದಿರಲು ಸಾಧ್ಯವೇ? ವಸ್ತುವಿನ ಮೇಲೆ ಸೂರ್ಯನ ಬೆಳಕೇ ಬಿದ್ದಿತೆಂದರೆ, ಪದಾರ್ಥವು ಅತ್ಯಂತ-ಸ್ಫುಟವಾಗಿ ತೋರುವುದೇ ಸರಿ!


ಆ ಸೂರ್ಯ ಬೆಳಗಿದಾಗ!


ಆದರಿದೋ ನೋಡಿ, ಯೋಗದ ಉನ್ನತೋನ್ನತ-ಸ್ಥಿತಿಯಲ್ಲುಂಟಾಗುವ ಸಂನಿವೇಶವನ್ನು!: ಪರಮಾತ್ಮನೇ ಸೂರ್ಯ. ಅತನೋ ಜಾಜ್ವಲ್ಯಮಾನನಾಗಿ ಪ್ರಕಾಶಿಸುತ್ತಿದ್ದಾನೆ. ಅವಿದ್ಯೆಯೆಂಬುದೇ ಕತ್ತಲು. ಸೂರ್ಯೋದಯವಾಗುತ್ತಲೇ ಕತ್ತಲೆಯೆಂಬುದೆಲ್ಲಿ ಹೋಯಿತೋ ಗೊತ್ತಾಗದು! ಇನ್ನು ಸೂರ್ಯನು ಜ್ವಲಿಸುತ್ತಿರುವಾಗ ಕತ್ತಲೆಯು ಸಂಪೂರ್ಣವಾಗಿಯೇ ನಾಶಹೊಂದುತ್ತದೆ.  ಹಾಗೆಯೇ ಪರಮಾತ್ಮ-ಭಾನುವು ಬೆಳಗುತ್ತಿರಲು. ಅವಿದ್ಯೆಯೆಂಬ ತಿಮಿರವು ಸಮಸ್ತವಾಗಿಯೇ ನಾಶವಾಗಿದೆ!

ಇದಲ್ಲದೆ, ಯೋಗದ  ನಿರ್ವಿಕಲ್ಪ-ಸಮಾಧಿಯ ಸ್ಥಿತಿಯವರೆಗೂ ಏರಿರುವವರು ಜ್ಞಾನಿಗಳೇ ಸರಿ. ಅಂತಹವರನ್ನು 'ಬುಧ'ರೆಂದೇ ಗೌರವಿಸಲಾಗುವುದು. ಯೋಗಾಭ್ಯಾಸವನ್ನು ಮಾಡಿದವರ ದೃಷ್ಟಿಯಲ್ಲಿ ಒಂದು ನಿರ್ಮಲತೆಯಿರುವುದು. ಅಂದರೆ ಅವರ ಕಣ್ಣು ಆರೋಗ್ಯವಾಗಿರುವುದೆಂದೂ ತಿಳಿಯುವುದು. ಅವರ ತಿಳಿಯಾದ, ಎಲ್ಲವನ್ನೂ ತಿಳಿಯುವ ದೃಷ್ಟಿಯು ನಿರ್ಮಲವೆಂದೂ ಸಿದ್ಧವಾಗುವುದು. ಇಂತಹ ಶುದ್ಧ-ದೃಷ್ಟಿಯುಳ್ಳವರ ಅನುಭವವನ್ನು ಈ ಶ್ಲೋಕವು ಹೇಳುತ್ತಿದೆ.

ಇದು ಅನುಭವದ ಮಾತು!

ಅದೇನೆಂದರೆ, "ಅವರು ಜಗತ್ತನ್ನೇ ಕಾಣರು!" - ಎಂದು. ಇಷ್ಟು ದೊಡ್ಡ ಜಗತ್ತನ್ನೂ ಕಾಣರೇ? - ಎಂದು ಕೇಳಬಹುದು. ಹೋಗಲಿ, ಇಡೀ ಜಗತ್ತಲ್ಲದಿದ್ದರೂ ಜಗತ್ತಿನ ಸ್ವಲ್ಪ-ಭಾಗವನ್ನಾದರೂ, ಅವರ ಎದುರಿಗಿರುವ ಭಾಗವನ್ನಾದರೂ, ಕಾಣುವರೇನು? - ಎಂದೂ ಕೇಳಬಹುದು. "ಕಿಂಚಿತ್ತೂ ಕಾಣದು, ಈ ಜಗತ್ತು!" -ಎಂದೇ ಉತ್ತರ ಬರುವುದು!

ಯಾವುದು ಕಾಣದೋ ಅದನ್ನು ಇಲ್ಲವೆನ್ನುವೆವು. "ಇಲ್ಲದ್ದೇ ಮಿಥ್ಯೆ"ಯೆನ್ನುವುದಾದರೆ ಇದೋ ಇಲ್ಲಿ ಜಗತ್ತೇ ತೋರುತ್ತಿಲ್ಲವೆಂಬ ಕಾರಣದಿಂದ ಜಗತ್ತನ್ನೇ ಮಿಥ್ಯೆಯೆನ್ನಬಹುದಲ್ಲವೆ?

ಶ್ಲೋಕದ ವಾಸ್ತವವಾದ ಅರ್ಥವಿದು: ಜಾಗ್ರತ್ ಮೊದಲಾದ ಮೂರೂ ಅವಸ್ಥೆಗಳನ್ನು ಮೀರಿದ ಮೇಲೆ, ದೊರೆಯುವುದು ನಾಲ್ಕನೆಯ ಅವಸ್ಥೆ. ಆ ಸ್ಥಿತಿಯಲ್ಲಿ ಒಂದು ವಿಶೇಷವಾದ ಅನುಭವವಾಗುತ್ತದೆ. ತುರೀಯ, ತುರ್ಯ, ಅಥವಾ ಸಮಾಧಿಯೆಂಬ ಆ ಸ್ಥಿತಿಯಲ್ಲಿ ಭಗವಂತನ ಸಾಕ್ಷಾತ್ಕಾರವೇ ಆಗುತ್ತದೆ. 

ಭಗವಂತನು ಸೂರ್ಯನಂತೆ. 'ಅಂತೆ'ಯೇನು? ಆತನನ್ನು "ಕೋಟಿ-ಸೂರ್ಯ-ಸಮ-ಪ್ರಭ!" - ಎಂದು ಕೂಡ ಹೇಳುವರಲ್ಲವೆ?

ಅದಿದ್ದಾಗ ಇದಿಲ್ಲ!

ಅವಿದ್ಯೆಯಿರುವ ತನಕ ಆತ್ಮನ ಅನುಭವವಾಗದು ಅವಿದ್ಯಾಂಧಕಾರವು ಸಂಪೂರ್ಣವಾಗಿ ತೊಲಗುವುದು ಪರಮಾತ್ಮ-ಸೂರ್ಯನ ಉದಯವಾಗುವ ಸಮಯಕ್ಕೇ. ಪರಮಾತ್ಮನ ಅನುಭವವಾಗುವಾಗ ಈ ಜಗತ್ತು ಎಲ್ಲಿ ಮತ್ತು ಹೇಗೆ ಗೋಚರವಾದೀತು? 

ತಾತ್ಪರ್ಯವೆಂದರೆ, ಯೋಗದ ಪರಮೋನ್ನತ-ಸ್ಥಿತಿಯಲ್ಲಿ, ಪರಮಾತ್ಮನ ಅನುಭವವಾಗುತ್ತಿರುವಾಗ, ಜಗತ್ತು ಕಾಣದು. ಕಾಣದ್ದನ್ನು ಮಿಥ್ಯೆಯೆಂದರೆ ಯಾರು ತಾನೆ ಒಪ್ಪರು?

ಪ್ರಕಾಶಮಾನೇ ಪರಮಾತ್ಮ-ಭಾನೌ

   ನಶ್ಯತ್ಯವಿದ್ಯಾ-ತಿಮಿರೇ ಸಮಸ್ತೇ |

ಅಹೋ ! ಬುಧಾ ನಿರ್ಮಲ-ದೃಷ್ಟಯೋಽಪಿ

   ಕಿಂಚಿನ್ನ ಪಶ್ಯಂತಿ ಜಗತ್ ಸಮಗ್ರಮ್ !! ||೨೭||

ಸೂಚನೆ : 16/10/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.

Friday, October 22, 2021

Ananda Tandava Of Nataraja - 28

Respond to (lekhana@ayvm.in)

 

Prāṇa and Apāna (continued)

The harmony of prāna and apāna is also recognised as the defining condition of the "primordial vibration," which is manifest as nāda ("sound") and more, specifically, the sound of the mystical Om.

Says Saṅgīta-ratnākara 1.3.6 :

nakāraṁ prāṇa-nāmānaṁ dakāram analaṁ viduḥ |

jātaḥ prāṇāgni-saṁyogāt nāda-namābhidhīyate ||

नकारं प्राण-नामानं दकारम् अनलं विदुः

जातः प्राणाऽग्नि-संयोगात् नाद-नमाऽभिधीयते

The union of prāṇa and apāna, the active listening to the nāda, and the act of following nāda to its subtle end wherein resonance merges into energy (nādānta) culminating in Manonmanī, ("Upthrust Mind)," a high yogic state, are all intimately related to the dance of Naṭarāja.

           As Naṭarāja dances to the melody of the subtle nāda, His mind (manas) glides into the stillness of nādānta. According to the Nādabindūpaniṣad the mind functions only as long as the nāda sounds. Nādabindūpaniṣad 43:

nādo yāvan manas tāvat nādānte tu manonmanī.

नादो यावन् मनस् तावत् नादाऽन्ते तु मनोन्मनी।

The relationship between prāṇa and manas is not unknown in Vedic literature. Śatapathabrāhmaṇa refers to the mind as 'lording over all the vital airs.' Śatapathabrāhmaṇa 14.3.2.3:

mano vai prāṇānām adhipaḥ | manasi hi sarve prāṇāḥ pratiṣṭhitāḥ |.

मनो वै प्राणानाम् अधिपः मनसि हि सर्वे प्राणाः प्रतिष्ठिताः |

This is repeated in the Haṭhayogapradīpikā 4.29:

mano-nāthas tu mārutaḥ.

The Muṇḍakopaniṣad talks of the simultaneous transcendence of prāṇa and manas. Muṇḍakopaniṣad 2.1.2:

aprāṇo hy amanāḥ śubhraḥ.

The drawing of the mind "upwards" physically, and "inwards" experientially, is what is labelled manonmanī: 'It is when there is no stirring in the eyes, nor in breathing, nor in mind, that this state is attained'. Śaṅkara's Yogatārāvalī 17:

netre yayonmeṣa-nimeṣa-śūnye

vāyur yayā varjita-reca-pūraḥ |

manaśca saṅkalpa-vikalpa-śūnyaṁ

manonmanī sā mayi sannidhattām ||

नेत्रे ययोन्मेष-निमेष-शून्ये

वायुर् यया वर्जित-रेच-पूरः ।

मनश्च सङ्कल्प-विकल्प-शून्यं

मनोन्मनी सा मयि सन्निधत्ताम् ॥

Yoga is thus 'an integration of the mind and the prāṇa, as too of the senses', resulting naturally in the relinquishment of all feelings, as stated in Maitrāyaṇyupaniṣad. Says Maitrāyaṇyupaniṣad 6.25:

ekatvaṁ prāṇa-manasor indriyāṇāṁ tathaiva ca |

sarva-bhāva-parityāgo yoga ity abhidhīyate ||

एकत्वं प्राण-मनसोर् इन्द्रियाणां तथैव

सर्व-भाव-परित्यागो योग इत्य् अभिधीयते

We might also note that Pārvati Herself is sometimes referred to as Manonmanī, and Śiva, too appositely as Manonmana : Taittirīyāraṇyaka calls Śiva Manonmana. (Taittirīyāraṇyaka 10.44.1; also Mahānārāyaṇopaniṣad 17.2). No wonder, then, that the dance of Naṭarāja is called Nādānta-naṭana, which may be rendered as "Trans-nāda Dance."