Monday, August 30, 2021

ಶ್ರೀಕೃಷ್ಣಾಷ್ಟಮಿ (Shreekrishnashtami)

ಲೇಖಕಿ - ಸುರಭಿ ತಾತಾಚಾರ್. ಕೆ. ಎಂ.

(ಪ್ರತಿಕ್ರಿಯಿಸಿರಿ lekhana@ayvm.in)





ಯಾರು ಈ ಕೃಷ್ಣ?
ಆಷಾಢ ಮಾಸವು ಕಳೆದಂತೆ ಹಬ್ಬಗಳ ಸಂಭ್ರಮವು ಭಾರತದೆಲ್ಲೆಡೆ ಆರಂಭವಾಗುತ್ತದೆ. 'ಪರ್ವ' ಎಂಬ ಸಂಸ್ಕೃತ ಪದದ ಪ್ರಾಕೃತ ರೂಪವೇ 'ಹಬ್ಬ' ಎಂದಾಗಿದೆ. ಶ್ರಾವಣ ಮಾಸದಲ್ಲಿ ಬರುವ ದೇಶದೆಲ್ಲೆಡೆ  ಭಕ್ತಿ, ಸಂತೋಷಗಳಿಂದ ಆಚರಿಸಲ್ಪಡುವ ಮಹೋತ್ಸವವೇ ಶ್ರೀ ಕೃಷ್ಣಜನ್ಮಾಷ್ಟಮಿ ಅಥವಾ ಗೋಕುಲಾಷ್ಟಮಿ. 'ಕೃಷ್ಣ' ಎಂಬುದು  ಹಿಂದುಗಳೆಲ್ಲರ ಮನೆ-ಮನಗಳಲ್ಲಿ ನೆಲೆಸಿರುವ ಸ್ವಾಮಿಯ ಹೆಸರು. "ಕೃಷ್ಣಸ್ತು ಭಗವಾನ್ ಸ್ವಯಂ", "ಈಶ್ವರಃ ಪರಮಃ ಕೃಷ್ಣ:" ಎಂಬುದಾಗಿ ಯೋಗಿಗಳು ಶ್ರೀಕೃಷ್ಣನನ್ನು ಕೊಂಡಾಡುತ್ತಾರೆ. ಇವನು ನಾರಾಯಣನ ಒಂಭತ್ತನೆಯ ಅವತಾರನಾದ ಸಾಕ್ಷಾತ್ ಭಗವಂತನೇ ಆಗಿದ್ದಾನೆ. ಎಲ್ಲ ಲೋಕಗಳನ್ನೂ ರಕ್ಷಿಸುವ, ಎಲ್ಲ ಭೂತಕೋಟಿಗಳ ಒಡೆಯನಿವನು. ಮಹರ್ಷಿಗಳು, ಭಕ್ತರು, ಆಚಾರ್ಯರು, ದಾಸಶ್ರೇಷ್ಠರು, ಕವಿಗಳು, ಕೀರ್ತನಕಾರರು - ಎಲ್ಲರೂ ತುಂಬು ಹೃದಯದಿಂದ ಕೊಂಡಾಡಿರುವ ದೇವರ ದೇವನಿವನು. ಧರ್ಮೋದ್ಧಾರಕ, ಮಹಾಭಾರತದ ಸೂತ್ರಧಾರ ಮತ್ತು ಗೀತಾಚಾರ್ಯನೆಂದೇ ಇವನು ಪ್ರಸಿದ್ಧ. ರಾಸಕ್ರೀಡೆಯ ಮೂಲಕ ಗೋಪಿಯರ ಆತ್ಮೋದ್ಧಾರ ಮಾಡಿ, ಹಾಲು-ಬೆಣ್ಣೆಗಳನ್ನು ಚೌರ್ಯ ಮಾಡುವ ಮೂಲಕ ಅವುಗಳನ್ನು ಮಹಾಪ್ರಸಾದವನ್ನಾಗಿಸಿ, ಉಣಬಡಿಸಿದ ಧೀರನಿವನು. ವೇದ-ಶಾಸ್ತ್ರಗಳ ಸಾರರೂಪವಾದ ಶ್ರೀಮದ್ಭಗವದ್ಗೀತೆಯನ್ನು ಲೋಕಕ್ಕೆಲ್ಲಾ ಅನುಗ್ರಹಿಸಿರುವ ಜಗದ್ಗುರು. ಅದಕ್ಕಾಗಿಯೇ "ಕೃಷ್ಣಂ ವಂದೇ ಜಗದ್ಗುರುಮ್" ಎಂದು ಅವನನ್ನು ಸ್ತುತಿಸುತ್ತೇವೆ.

ಆಚರಣೆಯ ಕಾಲ
ಶ್ರಾವಣ ಮಾಸದ ಕೃಷ್ಣಪಕ್ಷದ ಅಷ್ಟಮೀ ತಿಥಿಯಲ್ಲಿ ರೋಹಿಣೀ ನಕ್ಷತ್ರದಲ್ಲಿ ಅರ್ಧರಾತ್ರಿಯಲ್ಲಿ ಶ್ರೀಕೃಷ್ಣನು ಅವತರಿಸಿದನೆಂದು ಪುರಾಣಗಳು ತಿಳಿಸುತ್ತವೆ. ಒಂದೇ ಹಬ್ಬದ ನಾನಾ ಪ್ರಕಾರದ ಆಚರಣೆಗಳನ್ನು ನಮ್ಮ ದೇಶದಲ್ಲಿ ಹೆಚ್ಚಾಗಿ ಕಾಣಬಹುದು. ಅಂತೆಯೇ, ಈ ಹಬ್ಬವನ್ನೂ ಎರಡು ವಿಧವಾಗಿ ಆಚರಿಸುತ್ತಾರೆ. ಜನ್ಮಾಷ್ಟಮಿಯಲ್ಲಿ ಅಷ್ಟಮೀ ತಿಥಿಗೆ ಪ್ರಾಧಾನ್ಯವಾದರೆ, ಶ್ರೀಜಯಂತಿಯಲ್ಲಿ ರೋಹಿಣೀ ನಕ್ಷತ್ರಕ್ಕೆ ಪ್ರಾಧಾನ್ಯ. ಈ ಪರ್ವಕಾಲವು ಸೋಮವಾರ/ಬುಧವಾರದ ದಿವಸಗಳಲ್ಲಿ ಕೂಡಿಬಂದರೆ ಅತ್ಯಂತ ಪ್ರಶಸ್ತವೆಂದು ಶಾಸ್ತ್ರಗಳು ಹೇಳುತ್ತವೆ. ಈ ದಿವಸಗಳಲ್ಲಿ ಶ್ರೀಕೃಷ್ಣನ ಸಾಕ್ಷಾತ್ಕಾರಕ್ಕೆ ಬೇಕಾದ ವಿಶೇಷವಾದ ಪ್ರಕೃತಿಯ ಆನುಕೂಲ್ಯವು ಒದಗಿ ಬರುವುದರಿಂದ ಒಳಕೇಂದ್ರಗಳು ಜಾಗರೂಕವಾಗುತ್ತವೆ ಎಂಬ ಶ್ರೀರಂಗಮಹಾಗುರುಗಳ ಅಭಿಪ್ರಾಯವನ್ನು ಇಲ್ಲಿ ಗ್ರಹಿಸಬಹುದು. ಅರ್ಧರಾತ್ರಿಯಲ್ಲಿ, ಅಂದರೆ, ಶ್ರೀಕೃಷ್ಣನ ಜನನ ಸಮಯದಲ್ಲಿ ಮಾಡುವ ಪೂಜೆಯು ಅತ್ಯಂತ ಶ್ರೇಷ್ಠವೆನಿಸುತ್ತದೆ.

ಅಲಂಕಾರ
ಶ್ರೀಕೃಷ್ಣನು ಶೃಂಗಾರ ಪ್ರಿಯನು. ಆದ್ದರಿಂದ ಅಲಂಕಾರಕ್ಕೆ ಹೆಚ್ಚಿನ ಪ್ರಾಧಾನ್ಯವನ್ನು ಈ ಹಬ್ಬದಲ್ಲಿ ಕಾಣಬಹುದು. ಚಪ್ಪರ, ಮಂಟಪಗಳನ್ನು ಯೋಗಶಾಸ್ತ್ರಕ್ಕೆ ಅನುಗುಣವಾದ ಚಿತ್ರಗಳಿಂದಲೂ, ರಂಗವಲ್ಲಿಗಳಿಂದಲೂ ವಿಶೇಷವಾಗಿ ಸಿಂಗರಿಸುತ್ತಾರೆ. ಭಕ್ತಿಯನ್ನು ತುಂಬುವಂತೆ ಕಣ್ಣು, ಮನಸ್ಸುಗಳಿಗೆ ರಂಜನೆಯಾಗುವಂತೆ ತಳಿರು, ತೋರಣ, ಹೂವಿನ ಮಾಲೆಗಳು, ಬಾಳೆಕಂಬಗಳು- ಇವುಗಳಿಂದ ಮಂಟಪವನ್ನು ಅಲಂಕರಿಸುತ್ತಾರೆ. ರಮಣೀಯವಾಗಿ, ರಸಪೂರ್ಣವಾಗಿರುವ ಬಗೆ ಬಗೆಯ ಹೂವು, ಹಣ್ಣು, ಕಾಯಿಗಳಿಂದಲೂ ಸಿಂಗರಿಸಲ್ಪಟ್ಟಿರುವ ಆ ಪೂಜೆಯ ಚಪ್ಪರವನ್ನು 'ಫಲವತ್ಸರ' ಎಂದು ಕರೆಯುತ್ತಾರೆ. ಮಳೆಗಾಲವು ಆಗಷ್ಟೇ ಪ್ರಾರಂಭವಾಗಿ ಪ್ರಕೃತಿಯಲ್ಲಿ ಹಸಿರು ಮೈದುಂಬಿಕೊಂಡು ಹಣ್ಣು, ಹೂವುಗಳೆಲ್ಲ ಸೊಂಪಾಗಿ ಬೆಳೆಯುವ ಸುಂದರಕಾಲವಿದು. ಇದೇ ಸಂದರ್ಭದಲ್ಲಿ ಈ ಪರ್ವವನ್ನು ಆಚರಿಸುತ್ತೇವೆಯಾದ್ದರಿಂದ ಭಗವಂತನ ವಿಭೂತಿಗಳೇ ಆಗಿರುವ ಈ ಎಲ್ಲವನ್ನೂ ಅಲಂಕಾರ ಪ್ರಿಯನಾದ ಶ್ರೀಕೃಷ್ಣನ ಸನ್ನಿಧಿಗೆ ಸಮರ್ಪಿಸಿ, ಪ್ರಸಾದ ರೂಪದಲ್ಲಿ ಪೂಜೆಯ ನಂತರ ಅದನ್ನು ಸ್ವೀಕರಿಸಿ ಧಾತುಪ್ರಸನ್ನತೆಯನ್ನು ಸಂಪಾದಿಸಲು ಅನುಕೂಲವಾಗುವಂತಹ ವೈಶಿಷ್ಟ್ಯಯುತವಾದ ಈ ಆಚರಣೆಯನ್ನು ಜ್ಞಾನಿಗಳು ಸೂಚಿಸಿದ್ದಾರೆ.

ಆಚರಣೆಯ ಕ್ರಮ
ಭಗವಂತನ ವಿಶೇಷಪೂಜೆ, ಕಥಾಸಂಕೀರ್ತನ, ಉಪವಾಸ, ಜಾಗರಣೆ, ದಾನ-ಧರ್ಮ ಇತ್ಯಾದಿಗಳು ಆಚರಣೆಯ ಮುಖ್ಯ ಅಂಶಗಳು. ಕೃಷ್ಣನ ಪೂಜಾಸಮಾಪ್ತಿಯವರೆಗೆ ಉಪವಾಸವ್ರತವನ್ನು ಆಚರಿಸುವುದು ರೂಢಿ. ಉಪವಾಸವನ್ನು ಕ್ರಮಬದ್ಧವಾಗಿ ಮಾಡಿದರೆ ದೈಹಿಕ ಮತ್ತು ಮಾನಸಿಕ  ಪ್ರಕೃತಿಗಳು ಶುದ್ಧವಾಗಿ ಪರಮಾತ್ಮನ ಪೂಜೆಗೆ ಅನುಕೂಲವಾಗುವಂತೆ ಧಾತುಪ್ರಸನ್ನತೆ ಉಂಟಾಗುತ್ತದೆ. ಆತ್ಮಸ್ಥೈರ್ಯವು ಹೆಚ್ಚುತ್ತದೆ. ರಾತ್ರಿಯಲ್ಲಿ ಪೂಜೆಯು ನೆರವೇರುವುದರಿಂದ ಜಾಗರಣೆ ಮಾಡುತ್ತಾ, ಆ  ಸಮಯವನ್ನು ಕೇವಲ ಭಗವಂತನ ಧ್ಯಾನ ಮತ್ತು ಸಂಕೀರ್ತನೆಗಳಿಗೆ ಮೀಸಲಾಗಿಡಬೇಕು. ಭಗವಂತನ ಪ್ರೀತ್ಯರ್ಥವಾಗಿ ಅವನ ಸ್ಮರಣೆಯೊಂದಿಗೆ ದಾನದಕ್ಷಿಣೆಗಳನ್ನು ಸತ್ಪಾತ್ರರಿಗೆ ಸಮರ್ಪಿಸಬೇಕು. ಪೂಜಾ ಸಮಾಪ್ತಿಯ ನಂತರ ರಾತ್ರಿಯಲ್ಲೇ ಶ್ರೀಕೃಷ್ಣನ ಮಹಾಪ್ರಸಾದವನ್ನು ಸ್ವೀಕರಿಸುವ ಪದ್ಧತಿಯಿದೆ. ಶ್ರೇಷ್ಠ ಗ್ರಂಥಗಳಾದ ಭಾಗವತ, ಹರಿವಂಶ, ವಿಷ್ಣುಪುರಾಣಗಳಲ್ಲಿ ಬರುವ ಶ್ರೀಕೃಷ್ಣನ ಕಥೆಯನ್ನು ಭಕ್ತಿಯಿಂದ ಪಾರಾಯಣ ಮಾಡುತ್ತಾರೆ. ಪಂಚೋಪಚಾರ, ಷೋಡಶೋಪಚಾರ ಪೂಜೆಗಳನ್ನು ನೆರವೇರಿಸಿ, ವೇದಘೋಷ, ಶಾಸ್ತ್ರವಾಕ್ಯ ಶ್ರವಣ, ನೃತ್ಯ, ಗೀತ ಗಾಯನ, ಅಷ್ಟೋತ್ತರಶತ ಮತ್ತು ಸಹಸ್ರನಾಮಗಳಿಂದ ಶ್ರೀಕೃಷ್ಣನನ್ನು ಆರಾಧಿಸುತ್ತಾರೆ.

ನೈವೇದ್ಯ
ಭಕ್ತಿಯೆಂಬ ಶ್ರೇಷ್ಠರಸದ ಮಿಶ್ರಣದೊಂದಿಗೆ ವಿಧ ವಿಧವೂ, ರಸಮಯವೂ ಆದ ಭಕ್ಷ್ಯ, ಭೋಜ್ಯ, ಪಾನೀಯಗಳನ್ನು ಅಚ್ಯುತನ ನೈವೇದ್ಯಕ್ಕೆ ಸಿದ್ಧಪಡಿಸುತ್ತಾರೆ. ಕೃಷ್ಣನಿಗೆ ಅತ್ಯಂತ ಪ್ರಿಯವಾದ ಗೋಕ್ಷೀರ, ಕ್ಷೀರಾನ್ನ, ಪರಮಾನ್ನ, ಬೆಲ್ಲದ ಅವಲಕ್ಕಿ, ಹಸನಾದ ಬೆಣ್ಣೆ (ನವನೀತ) ಮತ್ತು ಶುಂಠಿ- ಬೆಲ್ಲಗಳು ವಿಶೇಷವಾದ ನೈವೇದ್ಯ ಪದಾರ್ಥಗಳು. ಈ ರೀತಿಯಾದ ಬಗೆಬಗೆಯ ಪ್ರಸಾದಗಳನ್ನು  ಸ್ವೀಕರಿಸುವುದರಿಂದ, ಶುಂಠಿ-ಬೆಲ್ಲವು ಭಕ್ತರ ಆರೋಗ್ಯಕ್ಕೆ ಒಳ್ಳೆಯ ಔಷಧಿಯಾಗಿ ಕೆಲಸಮಾಡುತ್ತದೆ ಎಂಬ ಶ್ರೀರಂಗಮಹಾಗುರುಗಳ ವೈಜ್ಞಾನಿಕ ನೋಟವನ್ನಿಲ್ಲಿ ಕಾಣಬಹುದು.

ನಂತರದ ಪೂಜಾಕ್ರಮ
ಮಹಾಮಂಗಳಾರತಿಯ ನಂತರ ಕೃಷ್ಣನಿಗೂ ಮತ್ತು ಅವನ ಅವತಾರಕ್ಕೆ ಸಾಕ್ಷಿಯಾದ ಚಂದ್ರದೇವನಿಗೂ ಅರ್ಘ್ಯವನ್ನು ಸಮರ್ಪಿಸುತ್ತಾರೆ. ಇಡೀ ರಾತ್ರಿ ಶ್ರೀಕೃಷ್ಣನ ಸ್ತುತಿಗಳನ್ನು, ಕಥೆಗಳನ್ನು, ಸಂಗೀತಾದಿಗಳ ಮೂಲಕ ಕೊಂಡಾಡಿ ಸಂಭ್ರಮಿಸುತ್ತಾರೆ. ಮಹಾರಾಷ್ಟ್ರದಲ್ಲಿ ಜನ್ಮೋತ್ಸವದ ಮಾರನೆಯ ದಿನ ಮೊಸರು, ಮಜ್ಜಿಗೆಗಳು ತುಂಬಿರುವ ಮಡಕೆಯನ್ನು ನೇತುಹಾಕಿ, ಮಡಕೆಯಲ್ಲಿ ರಂಧ್ರಗಳನ್ನು ಮಾಡಿ, ಅದರಿಂದ ಸುರಿಯುವ ಮೊಸರು-ಮಜ್ಜಿಗೆಗಳಿಂದ ತಾವು ಅಭಿಷೇಕ ಮಾಡಿಕೊಂಡು ಸಂತೋಷದಿಂದ ಬಾಲಕರೆಲ್ಲರೂ ಆಡುತ್ತಾರೆ. ಶ್ರೀಕೃಷ್ಣನ ಜನ್ಮಸಮಯದಲ್ಲಿ ಗೋಪಾಲಕರು ಹಾಲು, ಮೊಸರು, ತುಪ್ಪಗಳನ್ನು ಒಬ್ಬರ ಮೇಲೊಬ್ಬರು ಸುರಿದಾಡಿ, ಸಿಂಪಡಿಸಿ, ಮೈಗೆ ಬಳಿದುಕೊಂಡು ಅವನ ಜನ್ಮದಿನೋತ್ಸವವನ್ನು ಆಚರಿಸಿದರು ಎಂದು ಶ್ರೀಮದ್ಭಾಗವತವು ಹೇಳುತ್ತದೆ. ಮಹಾರಾಷ್ಟ್ರದಲ್ಲಿ ಬಾಲಕರು ಮಾಡುವ ಆಚರಣೆಯು ಭಾಗವತದಲ್ಲಿನ ಆಚರಣೆಯ ನೆನಪನ್ನು ತರುವಂತಹದ್ದಾಗಿದೆ.

ಜನ್ಮೋತ್ಸವದ ಮಾರನೆಯ ದಿನ ದಕ್ಷಿಣ ದೇಶದಲ್ಲಿ ಬಾಲಕರು 'ಉರಿಯಡಿ' ಎಂಬ ಮಂಗಳ ಕರ್ಮವನ್ನು ಆಚರಿಸುತ್ತಾರೆ. ಇಲ್ಲಿ ಹಾಲು, ಮೊಸರುಗಳೊಂದಿಗೆ ಅಭಿಷೇಕ ಮಾಡಿಕೊಳ್ಳುವುದರ ಜೊತೆಗೆ, ಭಗವಂತನ 'ಫಲವತ್ಸರ' ಎಂಬ ಚಪ್ಪರದಲ್ಲಿ ಕಟ್ಟಲ್ಪಟ್ಟಿರುವ ಬಗೆಬಗೆಯ ಹಣ್ಣುಗಳನ್ನು ಮಕ್ಕಳು ತೆಗೆದುಕೊಳ್ಳುತ್ತಾರೆ. "ಮೇಲಕ್ಕೆ ಹಾರಿ ತೆಗೆದುಕೊಳ್ಳುವವರಿಗೆ ಆ ಹಣ್ಣುಗಳು" ಎಂದು ಹೇಳುತ್ತಾ ಹಿರಿಯರು ಬಾಲಕರನ್ನು ಪ್ರೋತ್ಸಾಹಿಸುತ್ತಾರೆ. "ಮೂರು ಲೋಕಗಳನ್ನೂ ದಾಟಿ ಉನ್ನತಸ್ಥಾನದಲ್ಲಿ ಇರುವ ಮಹಾಫಲವನ್ನು ಪಡೆಯಬೇಕಾದರೆ ಊರ್ಧ್ವಗತಿಯುಳ್ಳವನಾಗಿರಬೇಕು. ಅಂತಹ ದಿವ್ಯಫಲವನ್ನು ಪಡೆಯುವ ಸಂಸ್ಕಾರಕ್ಕಾಗಿ ಹಾಗೆ ಅವರು ಹಾರಬೇಕು" ಎಂಬ ಮೇಲ್ಕಂಡ ಸಂಪ್ರದಾಯದ ಅರ್ಥವನ್ನು ಶ್ರೀರಂಗಗುರುದೇವರು ತಮ್ಮ ಸಂದೇಶದಲ್ಲಿ ವಿವರಿಸಿದ್ದಾರೆ.

ಇಷ್ಟಲ್ಲದೇ, ಶಾಸ್ತ್ರವಿಹಿತವಾದ ಬೇರೆ ಕ್ರಮಗಳನ್ನು ಸೌರಾಷ್ಟ್ರ, ಬಂಗಾಳ, ಒರಿಸ್ಸಾ ಮುಂತಾದ ದೇಶಗಳಲ್ಲಿ ಆಚರಿಸುತ್ತಾರೆ. ಆಚರಣೆಯ ಕ್ರಮಗಳು ಅನೇಕವಾಗಿದ್ದರೂ, ಅವುಗಳ ಮುಖ್ಯ ತಾತ್ಪರ್ಯ ಒಂದೇ - ಶ್ರೀಕೃಷ್ಣ ಪರಮಾತ್ಮನನ್ನು ಪ್ರಸನ್ನಗೊಳಿಸುವುದು;  ಮನಸ್ಸು, ಮಾತು ಮತ್ತು ಕೃತಿಗಳಿಂದ ಆತನು ಸಂಪ್ರೀತನಾಗುವಂತೆ ಮಾಡುವುದು; ಆತನಲ್ಲಿ ತನ್ಮಯತೆಯನ್ನು ಹೊಂದಿ ಪರಮಾನಂದವನ್ನು ಅನುಭವಿಸುವುದು.

Sunday, August 29, 2021

ಶ್ರೀರಾಮನ ಗುಣಗಳು - 19 ಸರ್ವಭೂತಹಿತೈಷೀ- ಶ್ರೀರಾಮ (Sriramana Gunagalu - 19 Sarvabhuthahitaishi - Shrirama)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ 
(ಪ್ರತಿಕ್ರಿಯಿಸಿರಿ lekhana@ayvm.in)

ಸೃಷ್ಟಿಯಲ್ಲಿ ಎಂಭತ್ತನಾಲ್ಕುಲಕ್ಷ ಬಗೆಯ ಜೀವಜಾತಿಗಳಿವೆ. ಇವುಗಳಲ್ಲಿ ಯಾವುದೋ ಒಂದು ಬಗೆಯ ಸಾಮರಸ್ಯವಿದ್ದೇ ಇದೆ. ಸಮರಸಜೀವನವು ಎಷ್ಟು ಸಹಜವೋ ಪರಸ್ಪರ ವಿರಸವೂ ಅಷ್ಟೇ ಸಹಜ. ಕೆಲವು ಕಡೆ ಒಂದು ಜೀವಿಯು ಇನ್ನೊಂದು ಜೀವಿಯನ್ನು ಆಶ್ರಯಿಸಿ ಇರುತ್ತದೆ. ಕೆಲವು ಕಡೆ ಒಂದು ಜೀವಿಗೆ ಇನ್ನೊಂದು ಜೀವಿಯು ಆಜನ್ಮ ಶತ್ರುವೂ ಆಗಿರುತ್ತದೆ. ಇಂತಹ ವಿಚಿತ್ರ ಸೃಷ್ಟಿಯಲ್ಲಿ ಮಾನವನ ಸೃಷ್ಟಿಯೂ ಒಂದು. ಸಮಗ್ರವಾದ ಸೃಷ್ಟಿಯಲ್ಲಿ ಮಾನವನ ಪಾತ್ರ ಅತ್ಯಲ್ಪವೆಂದೇ ಹೇಳಬೇಕಾಗುತ್ತದೆ. ಆದರೆ ಈ ಸೃಷ್ಟಿಯಲ್ಲಿ ಮಾನವನ ನಿಯಂತ್ರಣವೂ ಅಷ್ಟೇ ಹಿರಿದು ಎನ್ನಬೇಕಾಗುತ್ತದೆ. ಹೇಗೆ ಮಾನವನು ತನ್ನ ಪ್ರಯತ್ನದಿಂದ, ಆಜನ್ಮಶತ್ರುಗಳನ್ನೂ ಕೂಡ, ಅವರಲ್ಲಿ ಶತ್ರುತ್ವ ಇಲ್ಲದಂತೆ ಮಾಡಬಹುದು ಎಂಬುದನ್ನು ಯೋಗಶಾಸ್ತ್ರ, ಪುರಾಣ ಮೊದಲಾದ ಭಾರತೀಯ ಸಾಹಿತ್ಯಗಳಲ್ಲಿ ಹೇರಳವಾಗಿ ಕಾಣಬಹುದು. ಭೂತಹಿತವೆಂಬ ಗುಣವನ್ನು ಋಷಿಮಹರ್ಷಿಗಳ, ಮಹಾಪುರುಷರ, ಅವತಾರಪುರುಷರ ವ್ಯಕ್ತಿತ್ವದಲ್ಲಿ ಕಾಣಬಹುದು. ಇದಕ್ಕೆ ಶ್ರೀರಾಮನ ಚರಿತೆ ಬಲು ಉತ್ತಮವಾದ ಉದಾಹರಣೆಯಾಗಿದೆ. ಪ್ರತಿಯೊಂದು ಜೀವಿಯೂ ಈ ಪ್ರಪಂಚದಲ್ಲಿ ನಿರ್ಭಯವಾಗಿ ವಾಸಿಸಲು ಅವಕಾಶವಿದೆ. ಹಾಗೆ ಬದುಕಲು ಬಿಡುವುದನ್ನೇ 'ಸರ್ವಭೂತ(ಜೀವಿ)ಹಿತ' ಎಂದು ಕರೆಯುತ್ತಾರೆ. ಹಿಂದೆ ಋಷ್ಯಾಶ್ರಮಗಳಲ್ಲಿ ಕಾಡುಪ್ರಾಣಿಗಳು ಭಯವನ್ನು ಬಿಟ್ಟು ವಿಹರಿಸುತ್ತಿದ್ದವು, ತಪಸ್ಸಿನ ಪ್ರಭಾವದಿಂದ ಆ ಪರಿಸರವು ಅಂತಹ ನಿರ್ಭೀತವಾದ ವಾತಾವರಣದಿಂದ ಕೂಡಿತ್ತು. ರಾಜನು ಇದಕ್ಕೆ ಬೇಕಾದ ಪೋಷಕವ್ಯವಸ್ಥೆಯನ್ನು ಮಾಡುತ್ತಿದ್ದನು. ಮಾನವರಲ್ಲಿ ಮುಖ್ಯನಾದ ರಾಜನ ಪಾತ್ರ ಅಷ್ಟೇ ಪ್ರಮುಖವಾದದ್ದು. 


ರಾಜನಾದವನಿಗೆ ತನ್ನ ರಾಜ್ಯದಲ್ಲಿರುವ ಪ್ರತಿಯೊಬ್ಬರೂ ನೆಮ್ಮದಿಯಿಂದ ಜೀವನ ಮಾಡಬೇಕು; ಯಾರಿಂದಲೂ ಭಯ, ಬೆದರಿಕೆ ಇರಬಾರದು ಎಂಬ ಜವಾಬ್ದಾರಿ ಇರಬೇಕು. ಹಾಗೇನಾದರೂ ಕಂಡುಬಂದಲ್ಲಿ ಅದನ್ನು ಹದ್ದುಬಸ್ತಿಗೆ ತರುವ ಜವಾಬ್ದಾರಿಯೂ ರಾಜನದ್ದೇ ಆಗಿರುತ್ತದೆ. ಎಲ್ಲಿ ಸಮಾಜಕ್ಕೆ ಅಥವಾ ಜೀವನಕ್ಕೆ ಆಘಾತ ಉಂಟಾಗುತ್ತದೆಯೋ, ಅಲ್ಲಿ ಆಘಾತಕ್ಕೆ ಒಳಗಾದವರಿಗೆ ರಕ್ಷಣೆ ಕೊಡುವುದು ರಾಜನ ಭೂತಹಿತವೆಂಬ ಮಹಾಗುಣ. ಒಮ್ಮೆ ಶ್ರೀರಂಗಮಹಾಗುರುಗಳಲ್ಲಿ ಅವರ ಶಿಷ್ಯರೊಬ್ಬರು ಪ್ರಶ್ನೆಯನ್ನು ಕೇಳಿದ್ದರು 'ಕಪಟಿಗಳಲ್ಲಿ ದಯೆ ತೋರಬಾರದೇ? ಕಪಟಿಗಳು ದಯಾರ್ಹರಲ್ಲವೇ?' ಎಂದು. ಆಗ ಮಹಾಗುರುಗಳು " 'ಭೂತದಯಾಂ ವಿಸ್ತಾರಯ' ಎನ್ನುತ್ತಾರಲ್ಲ! ಎಂದರೆ- ಅವಶ್ಯವಾಗಿ ಅವರಲ್ಲೂ ದಯೆ ತೋರಬೇಕು. ಏಕೆಂದರೆ ಅವರೂ ಕಪಟ ಬಿಟ್ಟು ಸತ್ಯವಂತರಾಗಬೇಕೆಂಬುದೂ ನಮ್ಮ ಗುರಿಯಷ್ಟೇ" ಎಂದು ನುಡಿದಿದ್ದರು. ದೇಶದಲ್ಲಿದ್ದ ಪ್ರತಿಯೊಬ್ಬರೂ ಸತ್ಯ, ಪ್ರಾಮಾಣಿಕತೆ ಮೊದಲಾದ ಸದ್ಗುಣಗಳನ್ನು ಆಪ್ತವಾಗಿಸಿಕೊಂಡು ಸತ್ಪ್ರಜೆಯಾಗಿ ಬೆಳೆಯುವಂತೆ ಒಂದು ವಾತಾವರಣವನ್ನು ಸೃಷ್ಟಿಸುವುದು ರಾಜನ ಕರ್ತವ್ಯವಾಗಿದೆ. ಅವತಾರಗಳ ಮೂಲ ಉದ್ದೇಶವೂ ಇದೇ ಆಗಿದೆ. ಎಲ್ಲಿ ಅಧರ್ಮವು ವಿಜೃಂಭಿಸುತ್ತದೆಯೋ ಎಲ್ಲಿ ಶಿಷ್ಟರು ಕಷ್ಟಪಡುವಂತಾಗುತ್ತದೆಯೋ ಅಲ್ಲಿ ಧರ್ಮಸ್ಥಾಪನೆಗಾಗಿ, ಶಿಷ್ಟರ ರಕ್ಷಣೆಗಾಗಿ ಭಗವಂತನು ತನ್ನ ಅವತಾರವನ್ನು ಎತ್ತುತ್ತಾನೆ ಅಲ್ಲವೇ. ಶ್ರೀರಾಮನೂ ತನ್ನ ಅವತಾರಕ್ಕೆ ಇದೇ ಉದ್ದೇಶವನ್ನು ಇಟ್ಟುಕೊಂಡಿದ್ದ. ಅವನ ಹಿರಿದಾದ ಭೂತಹಿತವೆಂಬ ಗುಣದಿಂದ ಶಾಂತಿ ಸಮೃದ್ಧವಾದ "ರಾಮರಾಜ್ಯ"ವನ್ನು ಸ್ಥಾಪಿಸಿದ. ಇಂತಹ ಶ್ರೀರಾಮನು ನಮಗೆಲ್ಲ ಆದರ್ಶ. ಅವನ ಜೀವನವೇ ಎಲ್ಲರಿಗೂ ಪ್ರೇರಕ.


ಸೂಚನೆ : 29/8/2021 ರಂದು ಈ ಲೇಖನವು  ಹೊಸದಿಗಂತ ಪತ್ರಿಕೆಯ " ಶ್ರೀರಾಮನ ಗುಣಗಳು " ಅಂಕಣದಲ್ಲಿ ಪ್ರಕಟವಾಗಿದೆ.

Saturday, August 28, 2021

ಯೋಗತಾರಾವಳಿ - 19 ಶಮನದತ್ತ ಮೆಲ್ಲಮೆಲ್ಲನೆ (Yogataravali - 19 Shamanadatta Mellamellane)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)



 ಯೋಗತಾರಾವಳೀ (ಶ್ಲೋಕ 20))

ಪ್ರಸಹ್ಯ ಸಂಕಲ್ಪ-
ಚಿತ್ತಶಾಂತಿಯನ್ನು ಪಡೆಯುವುದು ಹೇಗೆಂಬುದನ್ನು ಪ್ರಕೃತ-ಶ್ಲೋಕದಲ್ಲಿ ಚಿತ್ರಿಸಿದೆ.

ಸಂಕಲ್ಪವೆಂಬ ಕ್ರಿಯೆ

ನಮ್ಮ ಮನಸ್ಸಿನಲ್ಲಿ ಸಂಕಲ್ಪ-ವಿಕಲ್ಪಗಳು ಸದಾ ಆಡುತ್ತಿರುತ್ತವೆ. ಸಂಕಲ್ಪವೆಂದರೇನು? "ಸಂಕಲ್ಪಃ ಕರ್ಮ ಮಾನಸಮ್". ಮಾನಸಿಕವಾದ ಕರ್ಮವು ಸಂಕಲ್ಪ. 'ಹೀಗೆ ಮಾಡುವೆ' ಎಂದುಕೊಳ್ಳುವುದು ಸಂಕಲ್ಪ.

ಶುಭಕರ್ಮಗಳನ್ನೋ ಪುಣ್ಯಕರ್ಮಗಳನ್ನೋ ಮಾಡಬೇಕಾದಲ್ಲಿ "ಇದೋ ನಾನು ,<ಇಂತಹ>  ದೇಶ-ಕಾಲಗಳಲ್ಲಿ <ಇಂತಹ> ಫಲಕ್ಕಾಗಿ <ಇಂತಹ> ಕರ್ಮವನ್ನು ಮಾಡುತ್ತೇನೆ. ಭಗವಂತನಿಗೆ ಪ್ರೀತಿಯಾಗಲಿ" ಎಂಬ ಪರಿಯಲ್ಲಿ, ವಿಶಿಷ್ಟ-ಭಂಗಿಯಲ್ಲಿ ಕುಳಿತು ಹೇಳಿಕೊಂಡು ಆಮೇಲೆ ಆ ಕರ್ಮದಲ್ಲಿ ತೊಡಗುತ್ತೇವೆ. ಶರೀರದ ಅಂಗಗಳಿಂದ ನಡೆಯಬೇಕಾದ ಚಟುವಟಿಕೆಗಳಿಗೆ ಪೂರ್ವಭಾವಿಯಾಗಿ (ಅಥವಾ ಅದರ ಮೊದಲ ಅಂಗವೇ ಆಗಿ) ನಡೆಯುವ ಈ ಮಾನಸಿಕ-ಕ್ರಿಯೆಯೇ "ಸಂಕಲ್ಪ".

ನಮ್ಮಲ್ಲಿ ದೈವೀಸಂಪತ್ತು ಇಲ್ಲದಿದ್ದಾಗ ನಮ್ಮ ಮನಸ್ಸು ಹೇಗಿರುತ್ತದೆ? ದುಷ್ಪೂರವಾದ (ಎಂದರೆ ಪೂರೈಸಲಾಗದ) ಕಾಮ, ಅಪರಿಮೇಯವಾದ (ಎಂದರೆ ಅಳೆಯಲಾಗದ) ಚಿಂತೆ, ಆಶಾ-ಪಾಶಗಳು, ಮೋಹ-ಜಾಲ - ಇವುಗಳಿಂದ ತುಂಬಿರುತ್ತದೆ. (ಗೀತೆಯ 16ನೇ ಅಧ್ಯಾಯದಲ್ಲಿ ಇವುಗಳ ವಿವರಣೆಯಿದೆ). "ನನಗಿದು ಸಿಕ್ಕಾಗಿದೆ, ಇದೋ ಇನ್ನಿದನ್ನು ಹೊಂದುವೆ" - ಎಂದು ಮುಂತಾಗಿ ಮನಸ್ಸಿಗೆ ತೋರುತ್ತಿರತಕ್ಕವೂ ಸಂಕಲ್ಪಗಳೇ.

ಸಮುದ್ರತೀರದಲ್ಲೊಮ್ಮೆ ನಿಂತರೆ ಅಲೆಗಳು ಬಂದು ದಡಕ್ಕಪಳಿಸುವುದನ್ನು ನೋಡಬಹುದು. ಎಷ್ಟು ಅಲೆಗಳು! ಒಂದೇ ಎರಡೇ? ಅಲೆಗಳ ಪರಂಪರೆಯೇ ತೋರುತ್ತದೆ! ಒಂದಾದ ಮೇಲೆ ಮತ್ತೊಂದು, ಮತ್ತೊಂದಾದ ಮೇಲೆ ಮಗದೊಂದು: ಇವಕ್ಕೆಲ್ಲಾದರೂ ಕೊನೆಯುಂಟೆ? ಹಾಗೆಯೆ ನಮ್ಮ ಮನಸ್ಸೂ. ಸಂಕಲ್ಪ-ಪರಂಪರೆಗಳೇ ನಮ್ಮ ಮನಸ್ಸಿನಲ್ಲಿ ಉಕ್ಕಿ ಉಕ್ಕಿ ಬರುತ್ತಿರುತ್ತವೆ. ಹೀಗಿರುವಾಗ ಮನಸ್ಸಿಗೆ ಶಾಂತಿಯಾದರೂ ಹೇಗೆ ಬಂದೀತು?

ಹಾಗಿದ್ದಲ್ಲಿ, ಹೇಗಾದರೂ ಮಾಡಿ ಈ ನಿರಂತರ-ಸಂಕಲ್ಪ-ಪರಂಪರೆಯನ್ನು ಭೇದಿಸಬೇಕು. ಚೆನ್ನಾಗಿಯೇ ಭೇದಿಸಬೇಕು: ಇದುವೆ ಸಂಭೇದನ. ಈ ಕಾರ್ಯದಲ್ಲಿ ಮನಸ್ಸು ತೊಡಗಬೇಕು. ಸಂಕಲ್ಪ-ಸಂಭೇದನದ ಸಂಕಲ್ಪ ಮಾತ್ರ ಬೇಕಾದ ಸಂಕಲ್ಪವೇ!

ಸಾವಧಾನತೆಯಿಂದಲೇ ಸಾಧ್ಯ

ಇದರಲ್ಲಿ ತೊಡಗುವಿಕೆಯಾದರೂ ಆಗೊಮ್ಮೆ ಈಗೊಮ್ಮೆ ಆದರೆ ಸಾಲದು. ಎಚ್ಚರಿಕೆಯಿಂದಲೇ ಇದು ಆಗತಕ್ಕದ್ದು. ಎಡೆಬಿಡದ ಎಚ್ಚರವುಳ್ಳ ಮನಸ್ಸನ್ನು ಸಂತತ-ಸಾವಧಾನವೆನ್ನುತ್ತಾರೆ. ಅವಧಾನವೆಂದರೆ ಮನಸ್ಸಿನ ಗಮನಕೊಡುವಿಕೆ, ಐಕಾಗ್ರ್ಯ; ಅವಧಾನದಿಂದ ಕೂಡಿರುವುದು ಸಾವಧಾನ.

ಮನಸ್ಸು ಏನೇನನ್ನೋ ತುಂಬಿಸಿಕೊಂಡು ಉಬ್ಬಿಹೋಗಿರುತ್ತದೆ. ಉಪಚಯವೆಂದರೆ ತುಂಬಿರುವಿಕೆ. ಉಪಚಯವನ್ನು ಹೊಂದಿರುವ ಮನಸ್ಸನ್ನು ಪಳಗಿಸುವುದು ಸುಲಭವಲ್ಲ. ಹೀಗೆ ಉಪಚಿತವಾದ ಮನಸ್ಸು ಅಪಚಿತವಾಗಬೇಕು. ಉಪಚಿತಕ್ಕೆ ವಿರುದ್ಧವಾದದ್ದು ಅಪಚಿತ. ಅರ್ಥಾತ್, ಕೊಬ್ಬಿದ ಮನಸ್ಸು ಕೃಶವಾಗಬೇಕು. ಅದು ಹೇಗೆ ಸಾಧ್ಯವೆಂಬುದೇ ಪ್ರಶ್ನೆ.

ಅದಕ್ಕಿರುವ ಕ್ರಮವೆಂದರೆ ಅದರ "ಆಲಂಬ-ನಾಶ"ವೇ ಸರಿ. ಆಲಂಬ ಅಥವಾ ಆಲಂಬನ ಎಂದರೆ ಆಶ್ರಯ. ಅದರ ನಾಶವಾಗಬೇಕು. ಬಳ್ಳಿಯೊಂದು ತಾನೇ ಎತ್ತರಕ್ಕೆ ಹತ್ತಿ ನಿಲ್ಲಲಾರದಷ್ಟೆ? ಅದಕ್ಕೊಂದು ಆಲಂಬವು ಬೇಕು. ಆಲಂಬವಿಲ್ಲದಿದ್ದರೆ ಅದು ಬರಬರುತ್ತಾ ಬಡವಾಗುವುದು, ಕೊನೆಗೆ ಕುಸಿಯುವುದು.

ಹಾಗೆಯೇ ಮನಸ್ಸೂ: ಆಲಂಬವು ನಾಶವಾಗುತ್ತಲೂ ಮನಸ್ಸೂ ಮೆಲ್ಲಮೆಲ್ಲನೆ ಅಪಚಯವನ್ನು ಹೊಂದುವುದು. ಮನಸ್ಸು ಕೃಶವಾದ ಸ್ಥಿತಿಗೆ ತನು-ಮಾನಸಾ ಎನ್ನುವರು. ತನುವೆಂದರೆ ಶರೀರ, ಹೌದು. ಇನ್ನೊಂದು "ತನು"ವಿದೆ. ಅದಕ್ಕೆ ತೆಳುವಾದ ಎಂಬ ಅರ್ಥ.ಇಂತಹ "ತೆಳು"ಮನಸ್ಸೇ ಶಮನವನ್ನು ಹೊಂದುವುದು.

ಮೆಲ್ಲನೆ ಸಾಗು

ಧೃತಿಯೊಂದಿಗಿರುವ ಬುದ್ಧಿಯಿಂದ ಮೆಲ್ಲಮೆಲ್ಲನೆ ಉಪರತಿಯನ್ನು (ಎಂದರೆ ಶಾಂತಿಯನ್ನು) ಹೊಂದಬೇಕು - ಎಂಬುದನ್ನು ಗೀತೆಯೂ ಹೇಳುತ್ತದೆ. (6ನೇ ಅಧ್ಯಾಯ). ಸಂಕಲ್ಪದಿಂದ ಕಾಮಗಳು ಉಂಟಾಗುತ್ತವೆ; ಅವನ್ನು ನಿಃಶೇಷವಾಗಿ ತ್ಯಜಿಸಬೇಕು. ಇಂದ್ರಿಯ-ಸ್ತೋಮದ ಸಂಯಮವನ್ನು ಎಲ್ಲೆಡೆಗಳಿಂದಲೂ ಮನಸ್ಸಿನಿಂದಲೇ ಮಾಡಬೇಕೆಂದು ಗೀತೆಯೂ ಹೇಳುತ್ತದೆ. ಅಲ್ಲೂ "ಶನೈಃ ಶನೈಃ" "ಮೆಲ್ಲಮೆಲ್ಲನೆ" ಎಂದೇ ಹೇಳಿದೆ.

ಸಂಕಲ್ಪಪರಂಪರೆಯನ್ನು ಬಲಪ್ರಯೋಗದಿಂದಲೇ ಭೇದಿಸಬೇಕು. ಹಾಗೆ ಭೇದಿಸುವಿಕೆಯಲ್ಲಿ ನಿರಂತರವಾದ ಸಾವಧಾನತೆಯು ಬೇಕು. ಇಂತಹ ಸಂಭೇದನದಿಂದಾಗಿ ಮನಸ್ಸಿನ ಆಲಂಬನವು ನಾಶವಾಗುತ್ತದೆ. ಇದರಿಂದಾಗಿ ಮೆಲ್ಲಮೆಲ್ಲನೆ ಅಪಚಯಹೊಂದಿದ ಮನಸ್ಸು ಶಮವನ್ನು ಹೊಂದುತ್ತದೆ.

ಪ್ರಸಹ್ಯ ಸಂಕಲ್ಪ-ಪರಂಪರಾಣಾಂ

   ಸಂಭೇದನೇ ಸಂತತ-ಸಾವಧಾನಮ್ |

ಆಲಂಬ-ನಾಶಾದ್ ಅಪಚೀಯಮಾನಂ

   ಶನೈಶ್ ಶನೈಶ್ ಶಾಂತಿಮ್ ಉಪೈತಿ ಚೇತಃ || 20||


ಸೂಚನೆ : 28/8/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ 
ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.

ಷೋಡಶೋಪಚಾರ - 15 ದೀಪ (Shodashopachaara 15-Deepa)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ 
(ಪ್ರತಿಕ್ರಿಯಿಸಿರಿ lekhana@ayvm.in)



"ಸಾಜ್ಯಂ ತ್ರಿವರ್ತಿಸಂಯುಕ್ತಂ ವಹ್ನಿನಾ ಯೋಜಿತಂ ಮಯಾ | ಗೃಹಾಣ ಮಂಗಲಂ ದೀಪಂ ತ್ರೈಲೋಕ್ಯತಿಮಿರಾಪಹಾ||" ಎಂದು ಭಗವಂತನಿಗೆ ದೀಪದ ಉಪಚಾರವನ್ನು ಮಾಡುತ್ತೇವೆ. ಸತ್ತ್ವ, ರಜಸ್ಸು ಮತ್ತು ತಮಸ್ಸು ಎಂಬ ಮೂರು ಗುಣಗಳ ಪ್ರತೀಕವಾದ ಮೂರು ಬತ್ತಿಗಳಿಂದ; ಒಳ್ಳೆಯ ತುಪ್ಪ ಅಥವಾ ತೈಲವೆಂಬ ಜೀವದ ಪ್ರತೀಕವಾದ ದೀಪದಿಂದ ಭಗವಂತನಿಗೆ ಆರಾಧನೆಯನ್ನು ಮಾಡುವ ಅಭ್ಯಾಸ ಬಂದಿದೆ. ನಮ್ಮ ಒಳಗಿನ ಅಜ್ಞಾನವೆಂಬ ಕತ್ತಲೆಯನ್ನು ತೊಲಗಿಸಲು ಭಗವಂತನಿಗೆ ದೀಪವನ್ನು ತೋರಿಸುತ್ತೇವೆ. ದೀಪಕ್ಕೆ ತಾನೂ ಬೆಳಗಿ ಮತ್ತೊಂದನ್ನು ಬೆಳಗಿಸುವ ಸ್ವಭಾವವಿದೆ.

ದೀಪದಿಂದ ಉಳಿದ ಪದಾರ್ಥಗಳ ದರ್ಶನವಾಗುತ್ತದೆ. ದೀಪವನ್ನು ನೋಡಲು ಮತ್ತೊಂದು ದೀಪದ ಅವಶ್ಯಕತೆಯಿಲ್ಲ. ಆದ್ದರಿಂದ ದೀಪವನ್ನು ಭಗವಂತನ ನಿರ್ವಿಕಾರವಾದ ಪ್ರತಿರೂಪ ಎನ್ನುತ್ತಾರೆ. ಭಗವಂತನಿಗೆ ದೀಪಕ್ಕಿಂತ ಮಿಗಿಲಾದ ಸ್ಪಷ್ಟವಾದ ಪ್ರತಿನಿಧಿ ಬೇರೊಂದಿಲ್ಲ. ದೀಪವು ಭಗವಂತನ ವರ್ಣವಾದ ಸುವರ್ಣದ ಬಣ್ಣವನ್ನು, ನಿರ್ಮಲತೆಯನ್ನು ಪ್ರತಿನಿಧಿಸುತ್ತದೆ. ಶ್ರೀರಂಗಮಹಾಗುರುಗಳು ಪ್ರತಿನಿಧಿ ಎಂದರೇನು? ಎಂಬುದನ್ನು ಈ ರೀತಿಯಾಗಿ ವಿವರಿಸಿದ್ದರು. "ಒಂದು ಪ್ರತಿನಿಧಿ ಆಗಬೇಕಾದರೆ ಅದರ ಹಿಂದೆ ನಿಧಿ ಇರಬೇಕು. ಆ ನಿಧಿಗೆ ಪ್ರತಿಯಾಗಿ; ಆ ನಿಧಿಯ ಬಳಿಗೆ ಕರೆದೊಯ್ಯುವುದಕ್ಕೆ ಸಾಧನವಾಗಿರುವುದು ಪ್ರತಿನಿಧಿ" ಎಂದು. ಆದ್ದರಿಂದ ಭಗವಂತನ ಪ್ರತಿನಿಧಿಯಾಗಿ ದೀಪವನ್ನು ಭಾವಿಸಿ ಅದರಿಂದ ಭಗವಂತನನ್ನು ಪೂಜಿಸುತ್ತೇವೆ. ದೀಪವನ್ನೇ ಭಗವಂತ ಎಂದೂ ಪೂಜಿಸುತ್ತೇವೆ.


ಜ್ಞಾನಿಗಳು ಅಂತರಂಗದಲ್ಲಿ ಯಾವ ಬೆಳಕನ್ನು ಕಂಡರೋ ಅದರ ಪ್ರತೀಕವೇ ದೀಪ. 'ನಿವಾತದೀಪಾ ಇವ ನಿಶ್ಚಲಾಂಗಃ' ಎಂಬಂತೆ ಅಲ್ಲಿ ಕಾಣುವ ಪರಂಜ್ಯೋತಿಯು ಗಾಳಿ ಇಲ್ಲದಿರುವ ಕಡೆ ಬೆಳಗುವ ದೀಪದಂತೆ ಎಂಬ ಸ್ವಾರಸ್ಯವಾದ ದೃಷ್ಟಾಂತವನ್ನು ನೀಡಿದ್ದಾರೆ. ಕಾಳಿದಾಸನೂ ಕೂಡ 'ನಿವಾತನಿಷ್ಕಂಪಮಿವ ಪ್ರದೀಪಂ'- ಎನ್ನುವುದಾಗಿ ಭಗವಂತನ ಅಸ್ತಿತ್ವವನ್ನು ದೀಪದ ಹೋಲಿಕೆಯೊಡನೆ ವಿವರಿಸಿದ್ದಾನೆ. ಸರ್ವವ್ಯಾಪಕನಾದ ಪರಂಜ್ಯೋತಿಯನ್ನು ಸಾಮಾನ್ಯ ಮಾನವನ ಬುದ್ಧಿಗೆ ಸೀಮಿತಗೊಳಿಸಿ  ಅವನನ್ನು ಮೇಲಕ್ಕೆತ್ತಲು ಋಷಿಗಳು ತಂದ ಈ ಸಾಧನವೇ ಈ ದೀಪ.


ದೀಪಕ್ಕೆ ಬಳಸುವ ತುಪ್ಪವು ಶುದ್ಧವಾದ ದೇಸೀ ಹಸುವಿನಿಂದ ಸಿದ್ಧವಾಗಿರಬೇಕು. ಇಂದು ಮಾರುಕಟ್ಟೆಯಲ್ಲಿ ಸಿಗುವ ತುಪ್ಪದ ಲೇಬಲ್ ಇರುವ ಇತರ ತುಪ್ಪಗಳು ನಿಷಿದ್ಧ. ಏಕೆಂದರೆ ಪ್ರತಿಯೊಂದು ಪದಾರ್ಥಕ್ಕೂ ಅದರದ್ದೇ ಆದ ಪರಿಣಾಮವಿರುತ್ತದೆ. ಯಾವುದು ಸಾತ್ತ್ವಿಕ ಪರಿಣಾಮವನ್ನು ಕೊಡುವುದೋ  ಅದು ದೇವರಿಗೆ ಪ್ರಶಸ್ತವಾದುದು. ಅಥವಾ ಶುದ್ಧವಾದ ತಿಲದಿಂದ ಮಾಡಿದ ಎಣ್ಣೆಯನ್ನೂ ಬಳಸಬಹುದು. ಅವರವರ ಭಾವ-ಭಕ್ತಿ-ಶಕ್ತಿಗನುಗುಣವಾಗಿ ಮಾಡುವ ದೀಪಾರಾಧನೆಯು ಭಗವಂತನ ಪ್ರಸನ್ನತೆಗೆ ಕಾರಣವಾಗುತ್ತದೆ.

ಸೂಚನೆ : 28/8/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.

Friday, August 27, 2021

Ananda Tandava Of Nataraja - 20

Respond to (lekhana@ayvm.in)

  

The Interpretation of Zvelebil (Continued)

Thus the two feet denote the 'continuous circulation of consciousness into and out of the condition of inertness and ignorance.' (ibid., p.41). Coming finally now to the figure below the foot, he compares Apasmāra or Mūyalaka to Kahlil Gibran's 'shapeless pygmy that walks asleep in the mist searching for its own awakening'. (ibid., p.41).

For Zvelebil, the ashes falling from Śiva's body during the dance are 'the lines of a master-plan to shape the world.' (ibid., p.41). For him, the interpretation that dancing on Apasmāra signifies the eradication of ignorance resulting in the birth of knowledge is 'the late, sophisticated, philosophical interpretation of the Cosmic Dancer.' (ibid., p.42). The cobra on the head emits deadly poison that results in death, he says, and the moon emits rays of ambrosia which assure immortality. The laughing skull laughs at those who consider the world and themselves eternal. The crescent moon is the symbol of growth and eternity; the Gaṅgā the symbol of the sustenance of life; and the snake, symbol of transmigration of the eternal soul from one body to another. The prabhāvali or tiruvāsi (= the "flaming aureole") 'represents the "dance" of nature (Prakṛti) within which the dance of the Prime Mover is an eternal event'. (ibid., p.42).The whole form may be read too as the mystic mantra Om, he says, and refers to the reputed Pañcakṛtya interpretation.

           Towards the end of his book, Zvelebil says: 'As to the meaning of Ānanda-tāṇḍava, it remains enigmatic. However, we may interpret it, possibly, as a dance expressive of the polarity of opposites, of the conjunction of opposites and the resolution of contradictions (which is usually the objective of most Hindu myths): ānanda "peaceful bliss"; tāṇḍava "vigorous, awesome, fearsome dance"'. (ibid., p.73). In the final analysis, Zvelebil feels, this dance of Naṭarāja is to an analytical, discursive mind, a mystery; he avers 'it is so, inevitably; that it must remain so; for I do believe, with Frederick Franck, that "symbol and myth are not to be analysed, but to be responded to."' (ibid., p.73).


Thursday, August 26, 2021

தீர்த்தம்-ப்ரசாதம் (Tirtham-Prasaadam )

மூலம் : தாரோடி சுரேஷ்

தமிழாக்கம்: வனஜா

மின்னஞ்சல் : (lekhana@ayvm.in)



நாம் பொதுவாக தீர்த்தம் என்றால் பூஜையில் இறைவனின்   அபிஷேகத்திற்கு  உபயோகிக்கும் புனித நீர் என்று கருதுகிறோம். நாம் கங்கை முதலிய நதிகளையும் புனிதமானதாக வணங்குகிறோம். அதே போன்று இறைவனுக்கு அர்ப்பணிக்கும் நைவேத்தியங்களை அவரின் பிரசாதமாக  கருதுகிறோம்.


         உதாரணமாக. சர்க்கரை கலந்த கொப்பரை, தேங்காய், அன்னம் முதலியவை இறைவனுக்கு படைத்தபின் ப்ரசாதமாக கருதப்படும். அர்ச்சிக்கப்படும் பூக்களும். புனிதமாக கருதப்படும். வயதில் முதிர்ந்தவர்களை கடிதத்தில் குறிப்பிடுகையில் 'தீர்த்த ரூபர்(மதிப்பிற்குரியவர்)' என அழைக்கும் பழக்கம் சிறிது காலத்திற்கு முன்பு வரையில் இருந்தது.


         சுவாரஸ்யம் என்னவெனில்,   கடையிலிருந்து வாங்கும்போது தேங்காய் என்கிறோம். ஆயின்  பூஜைகக்குப்பிறகு நிவேதனமாக கருதப்படுகிறது. முதலில் சாதாரண தண்ணீரானது பூஜைக்குபின் (தீர்தம்)புனித நீராகிறது. எனினும் விஞ்ஞானம் அதனை பூஜைக்கு முன்னும், பின்னும் h2o என்றே கருதும். அதே போன்றே நாமும் பூஜையில் அர்ப்பணிக்கு முன்னும், பின்னும் அப்பொருளில் எந்த வேறுபாட்டையும் காண்பதில்லை.


            தீர்த்தம் எனும் வடமொழி சொல் 'த்ரு' எனும் தாதுவிலிருந்து வந்தது. அதன் பொருள் 'கடப்பது', 'கடக்கவைப்பது' என்பதாகும். .தீர்த்தம் என்பது ஒருவரை ஒரு நிலையிலிருந்து மற்றொரு நிலைக்கு  அழைத்து செலவது தீர்தம் எனப்படும். 


      அவ்வாறாயின் நாம் எங்கு சென்றடைய வேண்டும்? நம் குறிக்கோள் யாது? இக்குழப்பத்திற்கு ஞானிகளின் அறிவுரை யாதெனில் நம் அறியாமையை ஒழித்து ஞானத்தை அடைதல் வேண்டும். இருளை விலக்கி இறைஒளியில் ஒன்ற வேண்டும். உலக இன்பங்களில் திளைப்பதை விடுத்து ஆத்மபோதம் எனும் இறைஒளியில் மூழ்க வேண்டும். ஞானிகள் தங்களின் அனுபவத்தில் உணர்ந்து உறுதியாக கூறுவதாவது யாதெனில் அவ்விதம் அடையும் பேரின்பம் புலன்களுக்கு அப்பாற்பட்டது. உலக இன்பங்களுடன் ஒப்பிடுகையில். அதனினும் மிக உயரியது, சிறந்தது. தீர்த்தம் என்பதன் பொருள் அறியாமையாகிய உலக இன்பங்களில் உழலும் நிலையிலிருந்து தூய ஆத்ம போத நிலைக்கு மாற்ற வல்லது.


           தீர்த்தத்தில் உள்ள புனித தன்மையை நாம் ஏன் புரிந்து கொள்ள இயலவில்லை? என்னும்  வினா எழுகிறது. ஒரு குறிப்பிட்ட முறையில் பயிற்சியும், உள்ளுணர்வும் இதற்கு தேவை. நம் உடல் என்னும் இயந்திரம் திறம்பட இயங்கவேண்டும். ஜலதோஷம் ஏற்பட்டால் முகரும் தன்மையை இழக்கிறோம். காய்ச்சலில் நாவில் சுவையை உணர இயலாது. அதே போன்று நம் மனதின் தூர்வாசனைகளால்  உடலிலுள்ள  இறைவனை உணர்த்தும் தகுதி பெற்ற மைய புள்ளிகள் அடைக்கப்பட்டு விடுவதால் நம்மால் தண்ணீர் தீர்த்தமாக மாறுவதன் பின்னுள்ள தத்துவத்தை புரிந்து கொள்ள இயலுவதில்லை. நாம் இத்தடையை நீக்குவதற்கான சரியான சிகிச்சை முறையை மேற்கொண்டால் நம்மாலும் தீர்த்தத்தில் விரவியுள்ள இறைதன்மையை உணர இயலும்.


ஆயின் ரிஷிகள் சூட்சுமமான உள்ளுணர்வு படைத்தவர்களாதலால்  சோதித்து அறிந்தனர். அவ்வாறே, தீர்த தன்மை உள்ள மற்ற பொருள்களையும்  சோதித்து அறிந்து அவைகளையும் தீர்தம் என்றே  அழைத்தனர். அநேக நதிகளும், மரங்களும், சாளக்ராமங்களும் தீர்தங்களே. ஜ்ஞாநிகளான பெரியவர்களும் தீரதஸ்வரூபரே ஆவர்.    பதார்தங்களுக்கு தீரத்த தன்மை வருவது  ஜ்ஞானிகளின் பார்வை,  தொடுதல் மற்றும் சங்கல்பத்தினாலே. இவர்கள் தாமும் அனுபவித்து பிறறையும் (பிறவிக்கடலை) தாண்ட வைக்கின்றனர். ஆதலால் தான் 'ஜ்ஞானிகள் தீர்த்ததன்மை அளிப்பவர்கள்' எனும் சொல்வழக்கு.  


உண்மையில் இறைவனே முதன் முதலான தீர்த்தம். அவனுடைய தர்மம் மற்றவர்களிடம் எத்துணை நிறைந்துள்ளதோ அவ்வளவிற்கு அவர்கள் தீர்த்த ஸ்வரூபராகின்றனர். 


பொருள்களை இறைவனுக்கு நிவேதனம் செய்யும்போது ஜ்ஞானிகள் அவனுடைய உணர்வை தம்முள் நிறைத்துக்கொண்டு நைவேத்யபொருள்கள் மீதும் அவ்வுணர்வை பெருகவிடுகின்றனர். அப்பொழுது அது பிரசாதம் ஆகிறது. 


அதனை உட்கொள்ளும் பக்தர்களுக்கு அது காலப்போக்கில் இறைவனை காணும் தகுதியை ஏற்படுத்துகிறது. சில பொருள்களில் இக்குணம் இயற்கையாகவே உள்ளது. உதாரணமாக ஸாளக்ராமம், துளசி, அருகம்புல் முதலியவை. தீர்த்தம், பிரசாதம் இவ்விரண்டும் நம் உடல், மனம், புலன்கள் அனைத்தையும் சுத்தப்படுத்தி  நம்மை தாண்டவைக்கின்றன.

     

இவ்விஜ்ஞாநத்தை அறிந்து பக்தியுடன் ஏற்றுக்கொண்டால் தீர்த்த-பிரசாதங்கள் நம்மை முதல் தீர்த்தமான இறைவனிடம்  சேர்க்கும். 


குறிப்பு: இக்கட்டுரை யின் கன்னட மூலம் AYVM blogs ல் காணலாம்.




Tuesday, August 24, 2021

Mangaḻa – Auspiciousness – The Property of the Soul

Kannada Article by:  Vid. Narasimha Bhat 

English rendering by:  M R Bhashyam

Respond to (lekhana@ayvm.in)




Performing acts which are most beneficial, propitious and glorious are termed as Auspicious or Mangaa. On the contrary, executing acts which are unfavorable are termed as Inauspicious -Amangaa.  When we perform deeds which are auspicious, the result is comfort and joy. Performing inauspicious acts results in sadness and dejection.  The characteristics which are useful for the realization of the soul are called as Ātma Guās. Performing deeds which are auspicious are beneficial to the soul and hence have been classified under Ātmagua. 

Executing acts which are auspicious and not executing inauspicious actions have been recognized as Mangaby Sages.  The great Yogi Śrī Ranga Mahāguru has explained beautifully the standard for identifying something as auspicious or otherwise. "The materials and environment which aid our progress towards attaining the self are classified as   Auspicious and those which hinder that progress are Inauspicious". One can find the effect of materials, environment or for that matter anything on us using the Science of ī (ī-Vijñāna).


The Omniscience of the Lord in the Entire Creation:

How can anything be inauspicious when the Lord resides in everything, including atomic dust, in tiny twigs and roots "Īśāvāsyam idam Sarvam"? When everything is auspicious because of His presence how can there be anything which can be inauspicious, is a legitimate question. Though that may be true, the truly propitious substances are those where His presence is expressed vibrantly. These substances are termed as Suvastu–Auspicious Substances.  Lord Śrī Krisha in Bhagavad Geeta explains to Arjuna that where ever His presence is expressed in exuberance that is His divine Opulence or Vibhūti. Where the Lord's presence can be felt in abundance using which one can attain the Lord, that is termed as Mangaa. Yellow and red-Turmeric, Gold, Cow, Cow's products like milk, the fossilized shell Sāligrāma are all Auspicious substances.


What is Inauspicious?

If we believe honestly that there is nothing in the universe that is inauspicious, we will understand the idea of "Not – Auspicious" correctly.  We classify something as Auspicious or Inauspicious, useful or useless, based on the effect it has on desired outcomes.  There is a statement in Sanskrit "There is no letter which cannot be part of a hymn – mantra, there is no plant or herb or a root which cannot be a medicine or there is no person who is unfit for anything. The personages who can transform a syllable into a hymn, or an herb into medicine, or a person into a useful personality are rare - Amantrakam Akaram Nāsti Nāsti Mūlam Anauadham / Ayogya Purusho Nāsti Yojaka tatra durlabha //". Those knowledge-experts who have understood the science of nature and the properties of the substances in nature have brought in a system for benefic usage. They have defined how a substance has to be used, when and by whom. Following this science, and using materials as decreed by them is Auspicious.  Using in such a way that they produce adverse effects is Inauspicious and should not be practiced.  When this nature  is flawlessly embedded in our souls, it helps us to attain the Lord. The sages called this nature as Mangaa.

Note: The Kannada version of this article can be viewed at AYVM blogs

Monday, August 23, 2021

ಲೋಕಹಿತಕ್ಕಾಗಿ ಬಂದ ಶಾಸ್ತ್ರಗಳು (Lokahitakkagi Bamda Shastragalu)

ಲೇಖಕರು:ಸುಬ್ರಹ್ಮಣ್ಯ ಸೋಮಯಾಜಿ
(ಪ್ರತಿಕ್ರಿಯಿಸಿರಿ lekhana@ayvm.in)




ಒಬ್ಬ ಗುರುವಿಗೆ ಇಬ್ಬರು ಶಿಷ್ಯರು. ಇಬ್ಬರಿಗೂ ಪರಸ್ಪರ ವೈಮನಸ್ಯ. ಒಬ್ಬ ಗುರುಗಳ ಬಲಗಾಲನ್ನು ಒತ್ತಿ ಸೇವೆ ಮಾಡುತ್ತಿದ್ದರೆ ಇನ್ನೊಬ್ಬ ಎಡಗಾಲನ್ನು ಒತ್ತುತ್ತಿದ್ದ. ಇದು ನಿತ್ಯದ ಅವರ ಗುರುಸೇವೆಯಾಗಿತ್ತು. ಒಮ್ಮೆ ಎಡಗಾಲನ್ನು ಒತ್ತಿ ಸೇವೆಮಾಡುತ್ತಿದ್ದ ಶಿಷ್ಯ ಊರಿಗೆ ಹೋಗಿದ್ದ. ಬಲಗಾಲಿನ ಸೇವೆಮಾಡುತ್ತಿದ್ದ ಶಿಷ್ಯನಿಗೆ ಗುರುಗಳು ಹೇಳಿದರು- ಎಡಗಾಲು ನೋಯುತ್ತಿದೆ. ಅದನ್ನೂ ಸ್ವಲ್ಪ ಒತ್ತಪ್ಪಾ ಎಂದು. ಆಗ ಆ ಶಿಷ್ಯ- ಅದು ಕಾಲೇ? ನನ್ನ ಪ್ರಾಣ ಹೋದರೂ ಅದನ್ನು ನಾನು ಮುಟ್ಟುವುದಿಲ್ಲ. ನನ್ನ ವೈರಿಯು ಮುಟ್ಟಿದ ಕಾಲದು ಎಂದುಬಿಟ್ಟ. ಗುರುಗಳ ಬಗ್ಗೆ ಏಕನಿಷ್ಠೆ, ಇದ್ದಿದ್ದರೆ ಗುರುಗಳ ಪವಿತ್ರವಾದ ಚರಣಗಳಿವು ಎಂಬ ಅರಿವಿನಿಂದ ಸೇವೆ ಮಾಡುತ್ತಿದ್ದ. ಉಳಿದೆಲ್ಲವೂ ಗೌಣವಾಗುತ್ತಿತ್ತು. ಕಥೆ ತಮಾಷೆಯಾಗಿದೆ. ಆದರೆ ಇದು ಲೋಕದ ನಿತ್ಯದ ಕಥೆ. ಋಷಿಗಳು ಲೋಕಹಿತಕ್ಕಾಗಿ ತಂದ ಶಾಸ್ತ್ರಗಳ ವಿಷಯದಲ್ಲೂ ಹೀಗೆಯೇ ಆಗಿದೆ. ಅನೇಕರು ತಾವು ಓದಿದ, ನಂಬಿದ ಶಾಸ್ತ್ರವೇ ಮೇಲು, ಉಳಿದುದೆಲ್ಲವೂ ನಿಷ್ಪ್ರಯೋಜಕ ಎಂದು ವಾದಿಸುವುದನ್ನು ಕಾಣುತ್ತೇವೆ. ನಮ್ಮ ಜೀವನದ ಧ್ಯೇಯ ಒಳ-ಹೊರ ಜೀವನವನ್ನು ಸಮೃದ್ಧಗೊಳಿಸಿ ಬಾಳುವುದೆಂದಾದರೆ ಅದಕ್ಕೆ ಸಂಬಂಧಿಸಿದ ಎಲ್ಲಾ ಶಾಸ್ತ್ರಗಳ ಬಗ್ಗೆಯೂ ಗೌರವ ಮೂಡುತ್ತದೆ. ಅದಿಲ್ಲದಿದ್ದಾಗ ನಾವು ಹಿಡಿದುಕೊಂಡ ದಾರಿಯೇ ಸರಿಯೆಂಬ ಸಂಕುಚಿತ ಮನೋವೃತ್ತಿ ಇನ್ನೊಬ್ಬರ ಮೇಲೆ ದ್ವೇಷ ಕಾರುವಂತೆ ಮಾಡುತ್ತದೆ.


ದೇಹದಲ್ಲಿ ಬಗೆಬಗೆಯ ಅಂಗಾಂಗಗಳೆಲ್ಲ ಕೆಲಸ ಮಾಡುತ್ತಿದ್ದರೂ ಅವುಗಳಿಗೆ ಪರಸ್ಪರ ವೈರವಿಲ್ಲ. ಕಣ್ಣು, ಕಿವಿ, ಹೃದಯ, ಇತ್ಯಾದಿ ಅಂಗಾಂಗಗಳ ಶಾಸ್ತ್ರಗಳೆಲ್ಲವೂ ದೇಹಿಗಾಗಿ ಬಂದಿವೆ ಎಂದು ಚಿಂತಿಸದೇ ಕಣ್ಣಿನ ವೈದ್ಯರು ಕೇವಲ ಕಣ್ಣಿಗೆ ಹಿತವಾದುದನ್ನು ಮಾತ್ರವೇ ನೋಡಿ ಉಳಿದೆಲ್ಲವನ್ನೂ ಕಡೆಗಣಿಸಲಾದೀತೇ? ಒಬ್ಬ ರೋಗಿಗೆ ಒಂದು ಶಸ್ತ್ರಚಿಕಿತ್ಸೆ ಮಾಡಬೇಕಾದಲ್ಲಿ ಆಯಾ ವಿಷಯಗಳಲ್ಲಿ ಪರಿಣಿತರಾದ ವೈದ್ಯರೆಲ್ಲರೂ ಒಟ್ಟಿಗೆ ಸೇರಿ ಎಲ್ಲಿ ಕತ್ತರಿ ಹಾಕಿದರೆ ಇನ್ನೆಲ್ಲಿ ಸಮಸ್ಯೆ ಆಗುವುದೋ ಎಂದು ಚಿಂತಿಸಿ ಜೀವಹಿತವನ್ನು ಲಕ್ಷ್ಯದಲ್ಲಿರಿಸಿ ಚಿಕಿತ್ಸೆ ನಡೆಸಬೇಕಲ್ಲವೇ? ಹಾಗೆಯೇ ಪ್ರತಿಯೊಬ್ಬರ ಪ್ರಕೃತಿಯೂ ಭಿನ್ನ ಭಿನ್ನ. ಅವರವರ ಪ್ರಕೃತಿಗೆ ಹಿತವಾಗುವಂತೆ, ಎಲ್ಲರೂ ತಮ್ಮ ಐಹಿಕ-ಪಾರಮಾರ್ಥಿಕ ಜೀವನವನ್ನು ಚೆನ್ನಾಗಿಸಿಕೊಳ್ಳಲೆಂದೇ ನೂರಾರು ಶಾಸ್ತ್ರಗಳನ್ನೂ, ಜೀವನ ಪದ್ಧತಿಗಳನ್ನೂ ಈ ದೇಶದಲ್ಲಿ ನಮ್ಮ ಮಹರ್ಷಿಗಳು


ತಂದುಕೊಟ್ಟಿದ್ದಾರೆ. ಎಲ್ಲವೂ ನಮ್ಮ ಹಿತಕ್ಕಾಗಿಯೇ ಬಂದವುಗಳು. ಶ್ರೀರಂಗ ಮಹಾಗುರುಗಳು ಮಾತು ಇಲ್ಲಿ ಸ್ಮರಣೀಯ  "ಸೃಷ್ಟಿ, ಸ್ಥಿತಿ, ಲಯಗಳು ಎಲ್ಲಿಯವರೆಗೆ ನಡೆಯುತ್ತಿರುತ್ತವೆಯೋ ಅಲ್ಲಿಯವರೆಗೂ ಸೃಷ್ಟಿವಿದ್ಯಾರಹಸ್ಯರೂಪಗಳಾದ ವೇದಶಾಸ್ತ್ರಗಳೂ ನಿತ್ಯವಾಗಿಯೇ ಇರುತ್ತವೆ ". ಸೃಷ್ಟೀಶನ ಶಾಸನವೇ ಶಾಸ್ತ್ರ. "ಶಾಸನಾತ್ ತ್ರಾಣನಾತ್ ಚೈವ" ಎಂಬಂತೆ ನಮ್ಮನ್ನು ಶಾಸನ ಮಾಡುತ್ತಾ ಕಾಪಾಡಲು ಇರುವುದೇ ಶಾಸ್ತ್ರಗಳು. ಅವು ಕೇವಲ ಗ್ರಂಥಗಳಲ್ಲ. ನಿಸರ್ಗದ ಸಹಜವಾದ ವಿಷಯಗಳು. ಅದನ್ನು ತಮ್ಮ ತಪಸ್ಯೆಯಿಂದ ಆಮೂಲಾಗ್ರವಾಗಿ ಕಂಡುಕೊಂಡು ಲೋಕಹಿತಕ್ಕಾಗಿ ಕರುಣಿಸಿದವರು ನಮ್ಮ ಮಹರ್ಷಿಗಳು.


ನಮಗೆ ಈ ಅರಿವು ಮೂಡಿದಾಗ ಮಾತ್ರವೇ ಸಮಾಹಿತ ಮನಸ್ಸಿನಿಂದ ನಾವು ಎಲ್ಲವನ್ನೂ ಕಾಣಲು ಸಾಧ್ಯವಾಗುತ್ತದೆ. ಅಂತಹ ಮಹರ್ಷಿಗಳ ಧೀರೋದಾತ್ತವಾದ ಮನಸ್ಸನ್ನು ಬೆಳೆಸಿಕೊಳ್ಳೋಣ.


ಸೂಚನೆ: 23/8/2021 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.   

Sunday, August 22, 2021

ಶ್ರೀರಾಮನ ಗುಣಗಳು - 19 ತ್ಯಾಗಮಯೀ - ಶ್ರೀರಾಮ (Sriramana Gunagalu - 19 Thyagamayi Shrirama)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ 
(ಪ್ರತಿಕ್ರಿಯಿಸಿರಿ lekhana@ayvm.in)


ತ್ಯಾಗದಲ್ಲಿದೆ ಸುಖ;  ತ್ಯಾಗದಲ್ಲಿದೆ ಯೋಗ!  ಆದ್ದರಿಂದ ತ್ಯಾಗವು ಅತ್ಯಂತ ಶ್ರೇಷ್ಠವಾದ ಗುಣ. ತ್ಯಾಗದಲ್ಲಿ ಎಷ್ಟು ಸುಖವಿದೆ? ಎಂಬುದಕ್ಕೆ ನಿದ್ದೆಯೇ ಸಾಕ್ಷಿ. ನಿದ್ದೆಯನ್ನು ಮಾಡುವುದಕ್ಕೆ ಏನೆಲ್ಲ ಪ್ರಯತ್ನ ಮಾಡುತ್ತೇವೆ! ಏನೆಲ್ಲ ನಿದ್ದೆಗೆ ಬೇಕಾದ ಸಾಧನೋಪಾಯಗಳನ್ನು ಸಂಗ್ರಹಿಸುತ್ತೇವೆ! ಜಾಗ್ರತ್ತಿನಲ್ಲಿ ನಮಗೆ ಸುಖವನ್ನು ಕೊಡುವ ಎಷ್ಟೆಲ್ಲಾ ಸಂಗತಿಗಳು ಇರುತ್ತವೆ! ಆದರೆ ಇವೆಲ್ಲದರ ಮೇಲಿನ ಮಮತೆಯನ್ನು ಬಿಟ್ಟಾಗ ಮಾತ್ರವೇ ನಿದ್ದೆಗೆ ಜಾರುತ್ತೇವೆ. 'ಅತ್ಯಂತ ಪ್ರೀತಿಗೆ ಪಾತ್ರಳಾದ ಪತ್ನಿಯನ್ನು ಮರೆಯಲು ಸಾಧ್ಯವೇ?' ಎಂದು ಒಮ್ಮೆ ಯೋಚಿಸಿದರೂ ನಿದ್ದೆ ಎಂಬ ಸುಖದಿಂದ ವಂಚಿತರಾಗುತ್ತೇವೆ. ಹೀಗೆ ಎಲ್ಲವನ್ನೂ ಮರೆತಾಗ, ಎಲ್ಲವನ್ನೂ ಬಿಟ್ಟಾಗ ಮಾತ್ರ ನಿದ್ದೆ ಎಂಬ ಪರಮಸುಖವನ್ನು ಅನುಭವಿಸುತ್ತೇವೆ. ಆದ್ದರಿಂದ ಸುಖವನ್ನು ಪಡೆಯಲು ಇರುವ ಒಂದೇ ಒಂದು ಸಾಧನ 'ತ್ಯಾಗ'. 'ತ್ಯಾಗ' ಎಂಬ ಗುಣಕ್ಕೆ ಶ್ರೀರಾಮನನ್ನು ಬಿಟ್ಟು ಬೇರೊಂದು ಉತ್ತಮ ನಿದರ್ಶನ ಸಿಗಲು ಸಾಧ್ಯವೇ! ದಶರಥನು ಅಯೋಧ್ಯೆಯಲ್ಲಿ ಶುಭಮುಹೂರ್ತದಲ್ಲಿ ಶ್ರೀರಾಮನನ್ನು ಪಟ್ಟವೇರಿಸಲು ಸಂಕಲ್ಪಿಸಿದ್ದಾನೆ.  


ಇಡೀ ಅಯೋಧ್ಯಾನಗರವು ಸಿಂಗರಿಸಲ್ಪಟ್ಟಿದೆ. ಪುರಜನರಿಗೆ ಹೊಸತನ ಮಡುಗಟ್ಟಿದೆ. ಅರಮನೆಯ ಮಹಾಜನರಿಗೂ 'ಪ್ರಿಯದರ್ಶನ' ಶ್ರೀರಾಮನನ್ನು ಸಿಂಹಾಸನದಲ್ಲಿ ನೋಡಬೇಕೆಂಬ ಆಸೆ. ತಾಯಂದಿರಿಗೆ ಮಗನನ್ನು ರಾಜನಾಗಿ ಕಾಣುವ ಹಂಬಲ. ಇಷ್ಟೆಲ್ಲಾ ಸಂತೋಷದ ಕ್ಷಣವನ್ನು ಅನುಭವಿಸಲು ಶ್ರೀರಾಮನ ಮನಸ್ಸೂ ಕೂಡ ಸನ್ನದ್ಧವಾಗಿರಲೂ ಸಾಕು. ಆದರೆ ಹಾಗೆ ಸಿದ್ಧವಾಗಿಲ್ಲದಿದ್ದುದು ಮಾರನೆಯ ದಿನದ ಸೂರ್ಯೋದಯ ಮಾತ್ರ. ಅಂದು ಶ್ರೀರಾಮನ ರಾಜ್ಯತ್ಯಾಗ. ಸಿಂಹಾಸನದ ಯೋಗದ ವಾರ್ತೆ ಒಂದು ದಿನವಾದರೆ; ಮಾರನೆಯ ದಿನದಲ್ಲಿ ರಾಜ್ಯತ್ಯಾಗದ ಸಮಾಚಾರ. ಕಾನನ ಆವಾಸ. ಯೋಗ ಮತ್ತು ತ್ಯಾಗ ಎರಡೂ ವಿರುದ್ಧಧರ್ಮವುಳ್ಳ ಪದಗಳು. ಆದರೆ ಯೋಗಕ್ಕೆ ತ್ಯಾಗವೇ ಮೂಲ. ಶ್ರೀರಾಮನು ಈ ಎರಡೂ ಕ್ಷಣಗಳಲ್ಲಿ ಸಮನಾಗಿದ್ದ. ಸುಖ ಮತ್ತು ದುಃಖದಲ್ಲಿ ಸಮವಾಗಿರುವ ವ್ಯಕ್ತಿತ್ವ ಶ್ರೀರಾಮನದ್ದಾಗಿತ್ತು. ಈ ಎರಡೂ ಸಂದರ್ಭಗಳಲ್ಲಿ ಶ್ರೀರಾಮನ ನಡವಳಿಕೆಯಲ್ಲಿ ಯಾವ ವ್ಯತ್ಯಾಸವೂ ಇರಲಿಲ್ಲ. ಶ್ರೀರಾಮನ ಈ ಸಮತ್ವಕ್ಕೆ ತ್ಯಾಗವೇ ಮೂಲ. ಯುದ್ಧದಲ್ಲಿ ಶ್ರೀರಾಮನು ದುರುಳ ರಾವಣನನ್ನು ಸಂಹರಿಸಿ, ರಾವಣನ ತಮ್ಮನಾದ ವಿಭೀಷಣನಿಗೆ ರಾಜ್ಯದ ಭಾರವನ್ನು ವಹಿಸುತ್ತಾನೆ. ಇಲ್ಲೂ ಶ್ರೀರಾಮನ ತ್ಯಾಗವನ್ನು ಕಾಣಬಹುದು. ಬಯಸಿದ್ದರೆ ರಾಮನೇ ಲಂಕೆಯ ಅಧಿಪತಿಯಾಗಬಹುದಿತ್ತು. ಲಕ್ಷ್ಮಣನೂ, ಒಮ್ಮೆ ಶ್ರೀರಾಮನಲ್ಲಿ ಕೇಳಿದ್ದೂ ಆಯಿತು. ಅದಕ್ಕೆ ಶ್ರೀರಾಮನ ಉತ್ತರವು ಅವನ ತ್ಯಾಗಕ್ಕೆ ಸಾಕ್ಷಿ. "ಹೇ!ಲಕ್ಷ್ಮಣ! ಈ ಲಂಕೆಯು ಸ್ವರ್ಣಮಯವಾಗಿದ್ದರೂ  ನನಗೆ ರುಚಿಸುವುದಿಲ್ಲ. ಜನನೀ ಮತ್ತು ಜನ್ಮಭೂಮಿಯು ಸ್ವರ್ಗಕ್ಕಿಂತಲೂ ಮಿಗಿಲಾದದ್ದು ತಾನೆ" (ಈ ಮಾತು ಮೂಲರಾಮಾಯಣದಲ್ಲಿಲ್ಲದಿದ್ದರೂ ಬಹಳ ಪ್ರಸಿದ್ಧವಾದ ಮಾತೇ ಆಗಿದೆ). 'ಮರಣಾಂತಾನಿ ವೈರಾಣಿ' ಎನ್ನುವಂತೆ ರಾವಣನ ವಧೆಯಾಗುತ್ತಿದ್ದಂತೆಯೇ ವೈರತ್ವವನ್ನೂ ತ್ಯಾಗಮಾಡಿದ ಮಾಹಾನುಭಾವ ಈತ. ರಾಮನದ್ದು ರಾವಣನಲ್ಲಿರುವ ದುರ್ಗುಣದ ವಿರುದ್ಧದ ಸಮರವೇ ಹೊರತು ರಾವಣನೆಂಬ ಒಬ್ಬ ವ್ಯಕ್ತಿಯ ವಿರುದ್ಧವಾದದ್ದಲ್ಲ. ಇದರಿಂದ ಶ್ರೀರಾಮನು ಆದರ್ಶನಾದ. ತ್ಯಾಗದಿಂದಲೇ ಅಮೃತತ್ವಪ್ರಾಪ್ತಿ ಎನ್ನುತ್ತಾರೆ. ಅಮೃತಸ್ವರೂಪನಾದ ಶ್ರೀರಾಮನಲ್ಲಲ್ಲದೆ ಇನ್ನಾರಲ್ಲಿ ತಾನೇ ಈ ತ್ಯಾಗಶೀಲತೆಯನ್ನು ನಿರೀಕ್ಷಿಸೋಣ!

ಸೂಚನೆ : 22/8/2021 ರಂದು ಈ ಲೇಖನವು  ಹೊಸದಿಗಂತ ಪತ್ರಿಕೆಯ " ಶ್ರೀರಾಮನ ಗುಣಗಳು " ಅಂಕಣದಲ್ಲಿ ಪ್ರಕಟವಾಗಿದೆ.

Saturday, August 21, 2021

ಯೋಗತಾರಾವಳಿ - 18 ಹೀಗೊಂದು ಉದಾಸೀನತೆ (Yogataravali - 18 Higondu Udasinate)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


ಯೋಗತಾರಾವಳೀ (ಶ್ಲೋಕ ೧೯)

ಉನ್ಮನ್ಯವಸ್ಥಾ

ಜ್ಞಾನವೆಂಬುದೇನು?


ಉನ್ಮನ್ಯವಸ್ಥೆಯು ಉದಾತ್ತವಾದುದು. ಇಂತಹ ಅವಸ್ಥೆಯನ್ನು ಹೊಂದುವುದು ಹೇಗೆ?

ನಾಡೀ-ಶೋಧನದಿಂದ ಆರಂಭಿಸಿ ಸಾಕಷ್ಟು ವಿಚಾರ-ವಿಮರ್ಶೆಗಳಿಂದಲೂ ಪ್ರಯತ್ನ-ಅನುಭವಗಳಿಂದಲೂ ಇಲ್ಲಿಯವರೆಗೂ ಪ್ರಯಾಣಿಸಿರುವವನು ಸಾಕಷ್ಟೇ ಅನುಭವ-ಜ್ಞಾನವನ್ನು ಸಂಪಾದಿಸಿಕೊಂಡಿರುವವನೇ. ಜ್ಞಾನವೆಂಬುದು ಬರೀ ಪುಸ್ತಕದ ಬದನೆಕಾಯಿಯಾಗಿರದೆ, ಪ್ರಯೋಗಗಳಿಂದ ಅರ್ಜಿತವೂ ಊರ್ಜಿತವೂ ಆದ ಅನುಭವಗಳಿಂದ ಪರಿಷ್ಕಾರವಾಗುತ್ತಿರಬೇಕಾದದ್ದು.

ಅಂತೂ ಇಷ್ಟು ದೂರ ಬಂದಿರುವನನ್ನು 'ವಿದ್ವಾಂಸನೇ' ಎಂದೇ ಇಲ್ಲಿ ಸಂಬೋಧಿಸಿರುವುದು ಉಚಿತವೇ. ಇಷ್ಟು ದೂರ ಬರುವುದೂ ಸುಲಭವಲ್ಲವಲ್ಲವೆ? ಇನ್ನುಳಿದಿರುವುದು ಸ್ವಲ್ಪವೇ ದೂರ. ಆದ್ದರಿಂದ ಇನ್ನು ಮುಂದಕ್ಕೆ ಸಾಧನೀಯವಾದದ್ದೇನೋ ಅದಕ್ಕೆ ಹಾದಿಯೇನೆಂಬುದನ್ನು ಹೇಳಬೇಕು. ಅದನ್ನಿಲ್ಲಿ ಹೇಳಿದೆ.

ಎಲ್ಲ ಕೆಲಸಗಳನ್ನೂ ಮನಸ್ಸಿಟ್ಟು ಮಾಡಬೇಕು – ವಿಶೇಷವಾಗಿ ಪ್ರಾಣಾಯಾಮಕ್ಕೆ ಸಂಬಂಧಪಟ್ಟವುಗಳನ್ನು ("ಮನೋ-ಯುಕ್ತಂ ಸಮಭ್ಯಸೇತ್") - ಎಂಬ ಸಾಧಾರಣ-ನಿಯಮವೊಂದಿದ್ದೇ ಇದೆಯಷ್ಟೆ. ಯೋಗಾಭ್ಯಾಸಿಗಳಿಗಂತೂ ಅದು ಸಹಜವೇ ಆಗಿಬಿಟ್ಟಿರುತ್ತದೆ. ಕ್ರಿಯೆಯೆಲ್ಲೋ ಮನಸ್ಸೆಲ್ಲೋ - ಎಂಬಂತಾಗಲೇಬಾರದು. ಯೋಗ್ಯವಾದುದನ್ನೇ ಮಾಡತಕ್ಕದ್ದು; ಮಾಡುವುದರ ಮೇಲೆ ಗಮನವಿಟ್ಟೇ ಮಾಡತಕ್ಕದ್ದು - ಎಂಬ ಮುಖ್ಯ-ನಿಯಮವು ಸರ್ವದಾ ಪಾಲನೀಯವಾದುದೇ.

ಆದರೂ, ಪ್ರಕೃತ ಸಂದರ್ಭದಲ್ಲಿ, ಎಚ್ಚರದಿಂದ ಮಾಡಬೇಕಾದ ಕ್ರಿಯೆಯೊಂದಿದೆ. ಅದನ್ನು ಇಲ್ಲಿ ಹೇಳಲಾಗಿದೆ. ಮಾಡಬೇಕಾದುದೇನು, ಅದಕ್ಕೆ ಪೂರ್ವಸಿದ್ಧತೆಯಾಗಿ ಮಾಡಿಕೊಳ್ಳಬೇಕಾದುದೇನು? - ಎಂಬುದನ್ನು ಇಲ್ಲಿ ಹೇಳಿದೆ.

ಪ್ರಪಂಚವನ್ನು ಬಿಡುವುದೇ!

ಮೊದಲು ಪೂರ್ವಸಿದ್ಧತೆಯ ವಿಷಯ. ನಮಗೂ ಪ್ರಪಂಚಕ್ಕೂ ಯಾವ ರೀತಿಯ ಸಂಬಂಧವಿರಬೇಕೆಂಬುದನ್ನು ಸ್ಪಷ್ಟಪಡಿಸಿಕೊಂಡಿರಬೇಕಾದದ್ದು ಮುಖ್ಯ. ನಮ್ಮ ನಡೆಯೂ ಮಾತುಕತೆಗಳೂ ನಮಗೂ ನಾಲ್ಕು ಜನಕ್ಕೂ ಉಪಯೋಗವಾಗುವಂತಿರಲಿ - ಎಂಬ ಒಳ್ಳೆಯ ಅಪೇಕ್ಷೆಯು ಬರುವುದೇನೋ ಸಹಜವೇ. ಆದರಿಲ್ಲೊಂದು ಸೂಕ್ಷ್ಮವಿದೆ: ನಾವು ಪ್ರಪಂಚಕ್ಕೆ ಉಪಯೋಗಕ್ಕೆ ಬರಲು ಸಹ ಮೊದಲು ಕೆಲಕಾಲ ಪ್ರಪಂಚವನ್ನು "ಬಿಟ್ಟಿರಬೇಕಾಗುತ್ತದೆ"! ಇದೇನು? ಲೋಕಸೇವೆಗೆಂದು ಹೊರಟು ಲೋಕವನ್ನೇ ದೂರಮಾಡಿಕೊಳ್ಳುವುದೇ? - ಎಂಬ ಪ್ರಶ್ನೆಯೇ?

ಒಂದರ್ಥದಲ್ಲಿ ಇದನ್ನು ನಿತ್ಯವೂ ನಾವು ಮಾಡುತ್ತಿರುವವರೇ! ಉತ್ಸಾಹದಿಂದ ಹೆಚ್ಚು ಕಾರ್ಯವನ್ನು ಮಾಡಬಯಸುವವರು ಕೆಲಕಾಲ ನಿದ್ದೆಮಾಡುವುದೂ ಅವಶ್ಯವಾಗುತ್ತದಲ್ಲವೆ? ಶ್ರಾಂತಿಗಾಗಿ (ಅಂದರೆ ಶ್ರಮಪಡುವುದಕ್ಕಾಗಿ) ವಿಶ್ರಾಂತಿ. "ನಿದ್ದೆಗೆಟ್ಟೆಯೋ ಬುದ್ಧಿಗೆಟ್ಟೆಯೋ?" ಎಂದು ಕೇಳುವುದಿಲ್ಲವೇ? ಪ್ರಪಂಚವನ್ನು ಬಿಟ್ಟುಹೋಗಿ ನಿದ್ದೆಮಾಡಿ ಏಳುವಷ್ಟರಲ್ಲಿ ಪ್ರಪಂಚವೇ ಹೊರಟುಹೋಗಿರುವುದಿಲ್ಲವಲ್ಲ? ಪ್ರಪಂಚವೇನು, ಇದ್ದೇ ಇರುತ್ತದೆ!

ಜೊತೆಗೆ ಪ್ರಪಂಚವು ಎಷ್ಟಾದರೂ 'ವ್ಯಾಧ್ಯಭಿಮಾನ-ಗ್ರಸ್ತ'ವಾದುದು, ಲೋಕವು 'ಶೋಕ-ಹತ'ವಾದುದು – ಎಂದು ಆಚಾರ್ಯರು ಹೇಳುವರಲ್ಲವೇ? ಆದ್ದರಿಂದ ಅದರ ಬಗ್ಗೆ ಮೊದಲು ಒಂದಿಷ್ಟು ಉದಾಸೀನ-ಭಾವವೂ ಉಪಕಾರಿಯೇ. ವೈದ್ಯನಾಗಿ ಮಾಡಬಹುದಾದ ಸೇವೆ ವಿಶಿಷ್ಟವಾದುದು; ಚಿಕಿತ್ಸೆಮಾಡಲು ಅರ್ಹತೆ ಸಾಮರ್ಥ್ಯಗಳನ್ನು ಸಂಪಾದಿಸಬೇಕು; ಅಷ್ಟು ಕಾಲ ವಿದ್ಯೆಯತ್ತ ಗಮನಕೊಟ್ಟಿರಬೇಕು: ಆ ಅವಧಿಯಲ್ಲೂ ಪ್ರಾಪಂಚಿಕದಲ್ಲೇ ಮುಳುಗಿರಲಾದೀತೇ? ಪ್ರಪಂಚವನ್ನು ಮರೆತು ವಿದ್ಯೆಯಲ್ಲಿ ಕೆಲಕಾಲ ಮುಳುಗಬೇಕು. ಮಿಕ್ಕದ್ದರ ಬಗ್ಗೆ "ಉದಾಸೀನತೆ" ಬೇಕು.

ಉದಾಸೀನತೆ ಬೇಕೆ!

ಉತ್-ಆಸೀನನೆಂದರೆ ವಾಸ್ತವವಾಗಿ "ಮೇಲೆ ಕುಳಿತಿರುವವನು". (ನ್ಯಾಯಾಧೀಶನ ಹಾಗೆ) ಮಧ್ಯದಲ್ಲಿ ಎತ್ತರಕ್ಕೆ ಹತ್ತಿ ಕುಳಿತಾಗ ಲೌಕಿಕ-ಜಂಜಾಟದಲ್ಲಿ ತಾನು ಸಿಲುಕಿಹಾಕಿಕೊಳ್ಳದೆ ನಿರ್ಲಿಪ್ತನಾಗಿಯೂ ನಿಷ್ಪಕ್ಷಪಾತವಾಗಿಯೂ ನೋಡಿ ಯಥಾರ್ಥವನ್ನು ತಿಳಿಯಲು ಅನುಕೂಲವಾಗುತ್ತದಲ್ಲವೇ? ಹೀಗಾಗಿ, ಕೆಲಕಾಲ ದೂರವಿರುವುದು ಅವಶ್ಯವೇ.

ದೂರವಿದ್ದು ಮಾಡಬೇಕಾದುದೇನು?: ಸಂಕಲ್ಪವನ್ನು ತ್ಯಜಿಸುವುದು. ಎಲ್ಲ ಬಯಕೆಗಳೂ ಕಾಮಗಳೇ; ಎಲ್ಲ ಕಾಮಗಳ ಹಿಂದೆಯೂ ಸಂಕಲ್ಪವೆಂಬುದೊಂದಿರುತ್ತದೆ. ಅದನ್ನು ತೊರೆದು ದೈವಸಂಕಲ್ಪಕ್ಕೆ ತನ್ನನ್ನು ಒಡ್ಡಿಕೊಳ್ಳುವುದಾದಲ್ಲಿ, "ನಾನು ಹೀಗೆ ಮಾಡಬೇಕು, ನಾನು ಹಾಗೆ ಮಾಡಬೇಕು" - ಎಂಬಲ್ಲಿಯ ನಾನು-ನಾನು ಎಂಬುದು ಕ್ಷೀಣವಾಗುತ್ತದೆ.

ಅರಿವು ಅಲ್ಪವಾಗಿದ್ದಾಗ ಸಂಕಲ್ಪಗಳ ರಾಶಿಯೇ ಇರುತ್ತದೆ. ಅರಿವು ಅಧಿಕವಾದಾಗ ಮೂಲಭೂತವಾದ ಕೆಲವೇ ಸಂಕಲ್ಪಗಳಿರುತ್ತವೆ. ಧ್ಯಾನಕ್ಕೆಂದು ಕುಳಿತಾಗ ಕೆಲಕಾಲ ಅವಿಂದ ಸಹ ದೂರವಿರಬೇಕಾಗಿತ್ತದೆ. ಎಷ್ಟೋ ಸಂಕಲ್ಪಗಳು ಅರಿವಿಗೆ ತೋರದೆಯೂ ಅಂಟಿಕೊಂಡೇ ಇರುವುದರಿಂದ ಸಾವಧಾನತೆಯಿಂದ, ಎಂದರೆ ಎಚ್ಚರವಾಗಿ, ಅದನ್ನು ಸಾಧಿಸಬೇಕಾಗಿರುತ್ತದೆ. ಉನ್ಮನಿಗಿದು ಹಾದಿ.

ಉನ್ಮನ್ಯವಸ್ಥಾಽಧಿಗಮಾಯ ವಿದ್ವನ್ !

   ಉಪಾಯಮ್ ಏಕಂ ತವ ನಿರ್ದಿಶಾಮಃ |

ಪಶ್ಯನ್ನುದಾಸೀನತಯಾ ಪ್ರಪಂಚಂ

   ಸಂಕಲ್ಪಮ್ ಉನ್ಮೂಲಯ ಸಾವಧಾನಃ ||೧೯ ||

ಸೂಚನೆ : 21/8/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.


ಷೋಡಶೋಪಚಾರ - 14 ಧೂಪ (Shodashopachaara - 14 Dhoopa)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ 
(ಪ್ರತಿಕ್ರಿಯಿಸಿರಿ lekhana@ayvm.in)




ಭಗವಂತನನ್ನು 'ಹೃಷೀಕೇಶ' ಎಂದು ಕರೆಯುತ್ತೇವೆ. ಇಂದ್ರಿಯಗಳಿಗೆ ಒಡೆಯ ಅಥವಾ ಇಂದ್ರಿಯಗಳ ನಿಯಾಮಕ ಎಂಬುದು ಅದರ ಅರ್ಥ. ಭಗವಂತನ ಇಂದ್ರಿಯಗಳನ್ನು ತೃಪ್ತಿಪಡಿಸಲು ಬಳಸುವ ಉಪಚಾರವೇ ಧೂಪೋಪಚಾರ. ತನ್ಮೂಲಕ ನಮ್ಮನ್ನು ನಾವು ಹತೋಟಿಗೆ ತಂದುಕೊಳ್ಳುವ ವಿಧಾನ. "ದಶಾಂಗಂ ಗುಗ್ಗುಲಂ ಧೂಪಂ ಸುಗಂಧಂ ಚ ಸುಮನೋಹರಮ್ | ಕಪಿಲಾಘೃತಸಂಯುಕ್ತಂ ಧೂಪೋಽಯಂ ಪ್ರತಿಗೃಹ್ಯತಾಮ್" ಎಂದು ಹೇಳುತ್ತಾ ಭಗವಂತನಿಗೆ ಧೂಪದ ಸೇವೆಯನ್ನು ಮಾಡುತ್ತೇವೆ. ಈ ಸೇವೆಯು ಪ್ರಧಾನವಾಗಿ ಘ್ರಾಣೇಂದ್ರಿಯದ ತೃಪ್ತಿಗಾಗಿ ಇರುವ ಸೇವೆಯಾಗಿದೆ.

ಹಾಗಾಗಿ ಇಲ್ಲಿ ಬಳಸುವ ದ್ರವ್ಯವು ಸುಗಂಧದಿಂದ ಕೂಡಿದ್ದಾಗಿರುತ್ತದೆ. ಶ್ರೀಚಂದನ, ಸಾಲ, ಕಾಲಾಗುರು ಮೊದಲಾದ ಕಟ್ಟಿಗೆಯನ್ನು ಇಲ್ಲಿ ಬಳಸಲಾಗುವುದು. ಕೆಲವು ವೃಕ್ಷಗಳಿಂದ ಬರುವ ಪರಾಗವನ್ನು ಅಥವಾ ಅಂಟುದ್ರವ್ಯವನ್ನೂ ಇಲ್ಲಿ ಬಳಸಲಾಗುತ್ತದೆ. ಕೆಂಡದ ಮೇಲೆ ಸುಗಂಧದ್ರವ್ಯವನ್ನು ಹಾಕಿದಾಗ ಹೊಗೆಯು ಸುಗಂಧದಿಂದ ಕೂಡಿ ಘ್ರಾಣೇಂದ್ರಿಯಕ್ಕೆ ಆಘ್ರಾಣಿಸಲು ಯೋಗ್ಯವಾಗುತ್ತದೆ. ದಶಾಂಗ ಗುಗ್ಗುಳ ಎಂಬ ಧೂಪವನ್ನು ಪ್ರಧಾನವಾಗಿ ಬಳಸಲಾಗುತ್ತದೆ. ಮಧು ಮುಸ್ತ-ಅನೇಕ ಮೂಲಿಕೆಗಳಿಂದ ಕೂಡಿದ, ಘೃತ, ಶ್ರೀಗಂಧ, ಗುಗ್ಗುಲು- ಗೋರೋಚನ, ಅಗುರು-ಒಂದು ಮರದ ಅಂಟು, ಪರ್ವತದಲ್ಲಿ ಬೆಳೆಯುವ ಧೂಪವೃಕ್ಷ, ಸರಲವೃಕ್ಷ, ಸಿಹ್ಲ-ಸ್ನಿಗ್ಧವಾದ ಒಂದು ಬಗೆಯ ಸುಗಂಧದ್ರವ್ಯ, ಸಿದ್ಧಾರ್ಥ ಎಂಬ ಹತ್ತು ದ್ರವ್ಯಗಳಿಂದ ಕೂಡಿದ ಧೂಪವು ಪೂಜೆಗೆ ಶ್ರೇಷ್ಠವಾಗಿದೆ. ಒಂದೊಂದೂ ಓಷಧೀಯ ದ್ರವ್ಯವಾಗಿದೆ. ಇವೆಲ್ಲದರ ಸಂಯೋಗದಲ್ಲೂ ಒಂದು ವಿಶೇಷವಾದ ಪರಿಣಾಮವಿದೆ. ಋಷಿಗಳು ಮಾತ್ರವೇ ಈ ದ್ರವ್ಯಸಂಯೋಗದಿಂದ ಉಂಟಾಗುವ ಸತ್ಪರಿಣಾಮವನ್ನು ತಿಳಿಯುತ್ತಾರೆ. ಇದು ನಮ್ಮ ಇಂದ್ರಿಯವನ್ನು ಸಂಯಮಗೊಳಿಸುತ್ತದೆ -ಏಕಾಗ್ರಗೊಳಿಸುತ್ತದೆ. ಇಂದ್ರಿಯಸಂಯಮವೇ ಎಲ್ಲಾ ಪೂಜೆಯ ತಾತ್ಪರ್ಯವಷ್ಟೆ!


ಶ್ರೀರಂಗಮಹಾಗುರುಗಳು ಹೀಗೆ ಅಪ್ಪಣೆ ಕೊಡಿಸುತ್ತಿದ್ದರು – "ಅಗ್ನಿಯಲ್ಲಿ ಯಾವುದಾದರೂ ಒಂದು ಧೂಪದ ಪದಾರ್ಥವನ್ನು, ನೀವು ಕೆಳಗಡೆ ಹಾಕಿದರೂ ಕೂಡ ಅದರ ಹೊಗೆ ಮೇಲಕ್ಕೇ ಹೋಗುತ್ತದೆ. ಎಲ್ಲೇ ಹಾಕಿದರೂ ಹೋಗುವ ದಾರಿ ಕೆಳಕ್ಕೆ ಅಥವಾ ಅಡ್ದಲಾಗಿ ಹೋಗದೇ ಹಗುರವಾಗಿ ಮಾಡಿಕೊಂಡು ಗಾಳಿಯ ಒಂದು ಧರ್ಮದಂತೆ ಮೇಲಕ್ಕೇ ಹೋಗುತ್ತದೆ. ಅಂತೆಯೇ ನಮ್ಮ ಮನಸ್ಸೂ ಕೂಡ ಮೇಲ್ಮುಖವಾಗಿ –'ಊರ್ಧ್ವರೇತಂ ವಿರೂಪಾಕ್ಷಂ ವಿಶ್ವರೂಪಾಯ ವೈ ನಮಃ' – ಎನ್ನುವ ಪರಂಜ್ಯೋತಿಯ ಕಡೆಗೆ ಮೇಲ್ಮುಖವಾದ ಪ್ರಯಾಣವನ್ನು ಬೆಳೆಸಲಿ ಎನ್ನುವ ಭಾವದ ಜೊತೆಯಲ್ಲಿ ದೇವರಿಗೆ ಧೂಪವನ್ನು ಸಮರ್ಪಣೆ ಮಾಡಬೇಕು". ನಮ್ಮ ಭಾರತೀಯರ ಪೂಜೆ- ಪುರಸ್ಕಾರಗಳಲ್ಲಿರುವ ಧ್ಯೇಯವು ಇಂದ್ರಿಯಗಳನ್ನು ಸಮಾಧಾನವಾಗಿ ಕೂರಿಸುವುದೇ ವಿನಾ ಕುಣಿಸುವುದಲ್ಲ.


ಸೂಚನೆ : 21/8/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.

Friday, August 20, 2021

Ananda Tandava Of Nataraja - 19

Respond to (lekhana@ayvm.in)

  

The Interpretation of Zvelebil (Continued)

As regards the ḍamaru (the "tambourine" used by dancers) Zvelebil quotes Rustam Mehta in saying that it represents 'the primary creative force and the intervals of the beat of time-process'; (ibid., p.35; citing R. J. Mehta, Masterpieces of Indian Temples, Bombay: Taraporewala, 1974), he compares this with Zimmer's remarks about the elements of Sound and Ether 'signifying the first, truth-pregnant moment of creation, the productive energy of the Absolute, in its pristine, cosmogenetic strength.'  (ibid., p.35 ; citing Zimmer, Myths and Symbols in Indian Art and Civilization, p.152). Zvelebil also remarks on the form of ḍamaru: 'because of its form resembling two triangles, it symbolises the unity of the male and the female principles.'  (ibid., p.35). The foremost significance he perceives here is that of the rhythm of the cosmos, which returns him, like Zimmer, to the idea of Ether as the first manifestation.

           Zvelebil offers an interesting comparison of the abhaya-mudrā hand with the magna manus ("great hand") of Christian art.  (ibid., p.41; cf. R. Beer, The Handbook of Tibetan Buddhist Symbols, San Fancisco: Shambala, 2003, under 'abhaya-mudrā'). He notes the ardha-candra-hasta, i.e. the outstretched palm forming a crescent or semicircle between the thumb and the index finger to hold a bowl of fire or a flame of fire, suggesting: 'The tongue of the flame is not just a straight line but it too, dances violently or gently like the lamp-flame slightly stirred by a soft breeze'. (ibid., p.41).The two upper hands symbolise thus the balance of creation and destruction. The daṇḍa-hasta, i.e. the staff-like stretched hand, is 'stretched across the body, indicating power and strength' and is pointing to the foot of salvation.

           With respect to the legs, Zvelebil observes that 'the bhujaṅga-trāsita  mode of the position of the legs (= reflecting fear of serpents) has the left leg raised and bent, while the weight of the body rests on the right leg'. (ibid., p.41). The symbolism here is 'Śiva's world-creative force driving life-monads into inert matter, while the left raised foot symbolizes their release.' (ibid., p.41).