Sunday, June 28, 2020

ವಿನಯವೇ ಭೂಷಣ (Vinayave Bhusana)

ಲೇಖಕರು: ಶ್ರೀ ನರಸಿಂಹ ಭಟ್ಟ 
(ಪ್ರತಿಕ್ರಿಯಿಸಿರಿ lekhana@ayvm.in)



೧೦.ವಿದ್ಯಾವಿನಯಸಂಪನ್ನೇ ಬ್ರಾಹ್ಮಣೇ ಗವಿ ಹಸ್ತಿನಿ |
ಶುನಿ ಚೈವ ಶ್ವಪಾಕೇ ಚ ಪಂಡಿತಾಃ ಸಮದರ್ಶಿನಃ || -ಭಗವದ್ಗೀತಾ ೫.೧೮

ಅರ್ಥ- ವಿದ್ಯಾ ಮತ್ತು ಅದರಿಂದ ಬಂದ ವಿನಯದಿಂದ ಕೂಡಿದ ಬ್ರಾಹ್ಮಣನಲ್ಲಿ, ಗೋವಿನಲ್ಲಿ, ಅನೆಯಲ್ಲಿ, ನಾಯಿಯಲ್ಲಿ ಮತ್ತು ನಾಯಿಯನ್ನು ತಿಂದು ಜೀವಿಸುವ ಮನುಷ್ಯನಲ್ಲಿಯೂ ಜ್ಞಾನಿಯಾದವರು ಸಮಾನ ದೃಷ್ಟಿಯುಳ್ಳವನಾಗುತ್ತಾರೆ.

ವಿವರಣೆ -ಪ್ರಪಂಚವು ವೈವಿಧ್ಯವಾಗಿದೆ. ಇಂತಹ ವಿವಿಧತೆಯಲ್ಲಿ ಏಕತೆಯನ್ನು ಕಾಣಬಹುದು ಎಂಬುದನ್ನು ಇಲ್ಲಿ ಹೇಳಲಾಗಿದೆ. ನೋಡುವ ವ್ಯಕ್ತಿಯಲ್ಲಿ ಇಲ್ಲ ಏಕತೆ. ದೃಷ್ಟಿಯಲ್ಲಿದೆ. ವ್ಯಕ್ತಿಯು ದೃಷ್ಟಿಯನ್ನು ಸಂಪಾದನೆ ಮಾಡಿದ್ದಾನೆ. ಯಾವನು ತಪ್ಪಸ್ಸು ಜ್ಞಾನ ವೈರಾಗ್ಯಗಳಿಂದ ಈ ದೃಷ್ಟಿಯನ್ನು ಸಂಪಾದಿಸಿರುತ್ತಾನೋ ಅಂತವನಿಗೆ 'ಸಮದರ್ಶೀ' ಎಂದು ಕರೆಯುತ್ತಾರೆ. ಅವನನ್ನೆ 'ಪಂಡಿತ' ಎಂದೂ ಕರೆದರು. 'ಪಂಡಾ ಪರಾತ್ಮವಿಜ್ಞಾನಂ ತತ್ ಅಸ್ಯ ಸಂಜಾತಮ್ ಇತಿ ಪಂಡಿತಃ' ಎಂಬ ವ್ಯುತ್ಪತ್ತಿಯಂತೆ  ಆತ್ಮಗಳಿಗೆಲ್ಲ ಶ್ರೇಷ್ಠನಾದ ಪರಾತ್ಮ-ಪರಮಾತ್ಮನನ್ನು ಯಾರು ತಿಳಿದಿರುತ್ತಾನೋ ಅಂತವನನ್ನು ಪಂಡಿತ ಎಂದು ಕರೆಯುತ್ತಾರೆ. ಅವನಿಗೆ ಮಾತ್ರ ಸಮದರ್ಶಿತ್ವ ಬರಲು ಸಾಧ್ಯ. ಹೇಗೆ ಕೃಷಿಕನಾದನು ಕೇವಲ ಬೀಜ ಎಲೆ ಕಾಯಿ ಹಣ್ಣು ಅಂತ ಕಾಣದೇ ಮಾವಿನ ಬೀಜ ಮಾವಿನ ಎಲೆ ಮಾವಿನ ಹಣ್ಣು ಹೀಗೇ ಎಲ್ಲೆಲ್ಲೂ ಮಾವನ್ನೇ ಕಾಣುತ್ತಾನೋ ಅಂತೆಯೇ ಈ ಸೃಷ್ಟಿಯ ಚರಾಚರ ಎಲ್ಲಾ ವಸ್ತುಗಳಲ್ಲೂ ಜ್ಞಾನಿಯಾದವನು ಸಮನಾದ ಭಗವಂತನನ್ನು ಬಿಟ್ಟು ಬೇರೆ ಏನನ್ನೂ ಕಾಣುವುದಿಲ್ಲ. ಆದ್ದರಿಂದ ಅವನಿಗೆ ಯಾರ ಮೇಲು ಅತಿಯಾದ ಮಮತೆಯಾಗಲಿ ಅತಿಯಾದ ದ್ವೇಷವಾಗಲಿ ತೋರುವುದಿಲ್ಲ. ಎಲ್ಲರನ್ನೂ ಒಂದೇ ರೀತಿಯಾಗಿ ಕಾಣುತ್ತಾನೆ. ಇದು ಜ್ಞಾನಿಯಾದವನ ದೃಷ್ಟಿ. ಇದೇ ದೃಷ್ಟಿಯನ್ನು ಎಲ್ಲರೂ ಪಡೆಯುವಂತಾದರೆ ಎಲ್ಲಿ ಕ್ರೋಧ? ಎಲ್ಲಿ ಅಸೂಯೆ? ಎಲ್ಲಿ ದುರ್ಗುಣಗಳಿಗೆ ಸ್ಥಳ?

ಸೂಚನೆ:  23/05/2020 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ   

ದರಿದ್ರನಾರು? ಧನಿಕನಾರು? (Daridranaru? Dhanikanaru?)

ಲೇಖಕರು: ಶ್ರೀ ಕೆ.ಎಲ್. ಮಧುಸೂದನ 
(ಪ್ರತಿಕ್ರಿಯಿಸಿರಿ lekhana@ayvm.in)

ಒಮ್ಮೆ ಒಬ್ಬ ರಾಜನು ಬೇಟೆಯಾಡಲು ಅರಣ್ಯಕ್ಕೆ ಹೋಗಿದ್ದನು . ದಾರಿತಪ್ಪಿ ಪರಿವಾರದಿಂದ ದೂರವಾಗಿ ಉಳಿಯಬೇಕಾಯಿತು. ಬಹಳ ದೂರ ಕ್ರಮಿಸಿದ ಮೇಲೆ ದಾರಿ ತಿಳಿಯಿತು. ಹಾಗೆಯೇ ಅರಣ್ಯದಲ್ಲಿನ ಓಟಾಟದಿಂದ ಬಳಲಿ ಆಯಾಸವಾಗಿ ಆಶ್ರಯವನ್ನು ಅರಸುತ್ತಾ ಒಂದು ಋಷಿಯ ಆಶ್ರಮಕ್ಕೆ ಬಂದನು. ನಿಯಮದಂತೆ ಆ ದೇಶದ ರಾಜನಿಗೆ ಆಶ್ರಮದಲ್ಲಿ ಒಳ್ಳೆಯ ಅತಿಥಿಸತ್ಕಾರವು ದೊರಕಿತು. ಒಂದು ದಿನ ಅಲ್ಲಿಯೇ ತಂಗಿದ್ದು ಚೆನ್ನಾಗಿ ವಿಶ್ರಾಂತಿ ಪಡೆದನು. ಮಾರನೆಯ ದಿನ ಪ್ರಯಾಣಕ್ಕೆ ಸಿದ್ಧನಾದನು.

ಅದಕ್ಕೆ ಪೂರ್ವಭಾವಿಯಾಗಿ ಋಷಿಯ ಜೊತೆಯಲ್ಲಿ ಸ್ವಲ್ಪಕಾಲ ಉಭಯ ಕುಶಲೋಪರಿ ಹಾಗೂ ಸದ್ವಿಚಾರಗಳ ಚಿಂತನೆಯು ನಡಯುತ್ತದೆ. ರಾಜನಿಗೆ ಋಷಿಗಳಿಗೆ ಏನಾದರೂ ಕಾಣಿಕೆಯನ್ನು ಸಮರ್ಪಿಸಬೇಕೆಂದು ತೋರುತ್ತದೆ. "ಮಹರ್ಷಿಗಳೇ, ತಾವು ಏಕೆ ನನ್ನೊಡನೆ ನನ್ನ ರಾಜ್ಯಕ್ಕೆ ಬರಬಾರದು? ನಾನು ತಮಗೆ ಸಮಸ್ತ ವಿಧವಾದ ಅನುಕೂಲಗಳನ್ನು ತಾವು ಬಯಸಿದಂತೆ ಕಲ್ಪಿಸಿ ಕೊಡುತ್ತೇನೆ. ಈ ಅರಣ್ಯದ ಕಷ್ಟಕಾರ್ಪಣ್ಯಗಳೇಕೆ? ನಾರುಮಡಿಯೇಕೆ? ಸುಖವಾಗಿ ವೈಭವದಿಂದ ತಾವು ಜೀವನ ಮಾಡಬೇಕು. ಆದ್ದರಿಂದ ತಾವು ಬರಬೇಕು"ಎಂದು ವಿನಂತಿಸುತ್ತಾನೆ.

ಅದಕ್ಕೆ ಋಷಿಗಳು ಹೇಳುತ್ತಾರೆ " ವಯಮಿಹ ಪರಿತುಷ್ಟಾ: ವಲ್ಕಲೈ: ತ್ವಂ  ದುಕೂಲೈ: ಸಮ ಇಹ ಪರಿತೋಷಃ ನಿರ್ವಿಶೇಷೋ ವಿಶೇಷಃ। ಸತು ಭವತಿ ದರಿದ್ರ: ಯಸ್ಯ ತೃಷ್ಣಾ ವಿಶಾಲಾ, ಮನಸಿ ಚ ಪರಿತುಷ್ಟೇ ಕೋsರ್ಥವಾನ್ ಕೋ ದರಿದ್ರ: "ಎಂದರೆ ನಾವು ಋಷಿಗಳು ನಾರುಮಡಿಯಲ್ಲೇ ಸಂತುಷ್ಟರು, ನೀನಾದರೋ ರೇಷ್ಮೆ ವಸ್ತ್ರದಿಂದ. ಇಲ್ಲಿ ಸಂತೋಷವು ಇಬ್ಬರಿಗೂ ಸಮಾನ ಏನೂ ವಿಶೇಷವಿಲ್ಲ. ಯಾರಿಗೆ ಆಸೆಯು ವಿಸ್ತಾರವಾಗಿರುವುದೋ ಅವನೇ ದರಿದ್ರನು. ಮನಸ್ಸಿನಲ್ಲಿ ಸಂತೃಪ್ತಿಯಿದ್ದರೆ ಯಾರು ದರಿದ್ರ?ಯಾರು ಧನಿಕ?
  
ಮೇಲಿನ ಕಥೆಯಲ್ಲಿ ಇಡೀ ಜಗತ್ತಿಗೆ ಉತ್ತಮ ಸಂದೇಶವಿದೆ. ಪ್ರಕೃತ ಪ್ರತಿಯೊಬ್ಬ ಮನುಷ್ಯನೂ ಲಿಂಗ, ವಯಸ್ಸು, ಗುಣ, ಅಭಿರುಚಿ, ವೃತ್ತಿ, ಪ್ರವೃತ್ತಿ ಇತ್ಯಾದಿಗಳಿಗೆ ಅನುಗುಣವಾಗಿ ನಾಲ್ಕು ಪುರುಷಾರ್ಥಗಳ ಚೌಕಟ್ಟಿನಲ್ಲಿ ಬಾಳಾಟವನ್ನಿಟ್ಟುಕೊಂಡಾಗ ಮನಸ್ಸ್ಸು ಸಂತುಷ್ಟವಾಗಿ ಶಾಂತಿಯಿಂದ ಸುಖವಾಗಿರುತ್ತದೆ. ಹಾಗಲ್ಲದೆ ಇಂದ್ರಿಯಗಳ ಸೆಳೆತಕ್ಕೆ ಸಿಕ್ಕಿ ಸೃಷ್ಟಿಯಲ್ಲಿರುವುದೆಲ್ಲವನ್ನೂ ಬಯಸುತ್ತಾ ಹೋದರೆ ಇವನ ಪ್ರಜ್ಞೆಯು ಹರಣವಾಗುತ್ತದೆ. ಅದರಿಂದ ನೆಮ್ಮದಿ, ತೃಪ್ತಿ, ಸೌಖ್ಯ ಒಂದೂ ಇರುವುದಿಲ್ಲ. ಆಗ ಎಷ್ಟು ಸಿರಿತನವಿದ್ದರೂ ದರಿದ್ರನೇ. ಅಲ್ಲಿ ಅತಿಯಾಸೆ, ದುರಾಸೆ ಎಲ್ಲವೂ ತಾಂಡವವಾಡುತ್ತದೆ. ಕಡೆಗೆ ಸರ್ವಸ್ವವನ್ನೂ ಕಳೆದುಕೊಳ್ಳುತ್ತಾನೆ. ಇಂದು ನಾವು ಕಾಣುವ ಪ್ರಪಂಚವು ಹೀಗೆಯೇ ಇದೆ. ಹಾಗಾಗದೇ ಎಲ್ಲರೂ ಭಾ-ರತರಾಗಿ ಅಂದರೆ ಆತ್ಮಾನಂದದಿಂದ ಕೂಡಿದ ಮಹಾತ್ಮರ ಜೀವನಾದರ್ಶವನ್ನು ರೂಢಿಸಿಕೊಂಡು ಬಾಳಬೇಕೆಂಬುದು ಶ್ರೀರಂಗಮಹಾಗುರುಗಳ ಸಂದೇಶ. ಅಲ್ಲಿ ಸಂತೃಪ್ತಿ ಇದೆ. ಅದೇ ನಿಜವಾದ ಸಿರಿತನ. ರಾಮರಾಜ್ಯವು ಹಾಗೆಯೇ ಇತ್ತೆಂದು ಕವಿಗಳು ವರ್ಣಿಸುತ್ತಾರೆ. ಅಂಥಹಾ ಭಾರತವು ಮತ್ತೆ ನಮ್ಮದಾಗಲಿ ಎಂದು ಆಶಿಸೋಣ. ಶ್ರೀರಾಮನವಮಿಯ ಸವಿನೆನಪಿನಲಿ.

ಸೂಚನೆ: 29/05/2020 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.  

ರಾಮಾಯಣದಲ್ಲಿ ಅದ್ಭುತರಸ (Ramayanadalli Adbhutarasa)

ಲೇಖಕರು: ಡಾ|| ನಂಜನಗೂಡು ಸುರೇಶ್
(ಪ್ರತಿಕ್ರಿಯಿಸಿರಿ lekhana@ayvm.in)


ನವರಸಗಳಲ್ಲಿ ಅದ್ಭುತರಸಕ್ಕೆ ವಿಶಿಷ್ಟಸ್ಥಾನವಿದೆ.  ಅದ್ಭುತರಸಕ್ಕೆ ವಿಸ್ಮಯವೇ ಸ್ಥಾಯಿಭಾವ. ಈ ರಸದ ಅಭಿವ್ಯಕ್ತಿ ತರ್ಕಾತೀತವಾದದ್ದು.  ಶ್ರೀಮದ್ರಾಮಾಯಣದಲ್ಲಿ ಈರಸವು ಎರಡು ಸಂದರ್ಭಗಳಲ್ಲಿ ಅಭಿವ್ಯಕ್ತವಾಗಿರುವುದನ್ನು ಕಾಣುತ್ತೇವೆ.  

ಮೊದಲನೆಯದು, ಸಮುದ್ರದಲ್ಲಿ ಸೇತುಬಂಧನದ ಸಂದರ್ಭ. .ಸಮುದ್ರರಾಜನ ಸಲಹೆಯಂತೆ ದೇವಶಿಲ್ಪಿಯಾದ ವಿಶ್ವಕರ್ಮನ ಮಗ ನಲನು ಸೇತುನಿರ್ಮಾಣಕರ್ಮವನ್ನು ವಹಿಸಿಕೊಳ್ಳುತ್ತಾನೆ.  ಶ್ರೀರಾಮನ ಆಣತಿಯಂತೆ ಕಪಿಶ್ರೇಷ್ಠರು ಪರ್ವತಶಿಖರಗಳನ್ನೂ, ಅನೇಕವೃಕ್ಷಗಳನ್ನೂ, ಬೃಹದಾಕಾರವಾದ ಬಂಡೆಗಳನ್ನೂ ಹೊತ್ತುತಂದು ಸಮುದ್ರಕ್ಕೆ ಹಾಕುತ್ತಾರೆ. ನೈಸರ್ಗಿಕವಾಗಿ ನೋಡುವುದಾದರೆ ವೃಕ್ಷಾದಿಗಳ ಸಾಂದ್ರತೆಯು ಜಲದಸಾಂದ್ರತೆಗಿಂತ ಹೆಚ್ಚಾಗಿರುವುದರಿಂದ ಅವುಗಳು ನೀರಿನಲ್ಲಿ ಮುಳುಗಬೇಕು.  ಆದರೆ ಶ್ರೀರಾಮನಿಗೆ ಸಮುದ್ರರಾಜನು 'ತಮಹಂಧಾರಯಿಷ್ಯಾಮಿ', 'ನಾನು ಅದನ್ನು ಮುಳುಗದಂತೆ ಧರಿಸುತ್ತೇನೆ' ಎಂದು ಕೊಟ್ಟಮಾತಿನಂತೆ ಅದನ್ನು ಧರಿಸುತ್ತಾನೆ.  ನೀಲನಾದರೋ ಹತ್ತುಯೋಜನಗಳಷ್ಟು ಅಗಲವಾಗಿಯೂ, ನೂರು ಯೋಜನಗಳಷ್ಟು ಉದ್ದವಾಗಿಯೂ ಇದ್ದ ಸೇತುವೆಯನ್ನು ಪ್ರಥಮದಿನದಿಂದಾರಂಭಿಸಿ ದಿನಂಪ್ರತಿ ೧೪-೨೦-೨೧-೨೨-೨೩ ಯೋಜನಗಳಂತೆ ಐದುದಿನಗಳಲ್ಲಿ ಕಟ್ಟಿಮುಗಿಸುತ್ತಾನೆ. ನ್ಯಾಯಮಾರ್ಗದಲ್ಲಿರುವವನಿಗೆ ಪಶುಪಕ್ಷಿಗಳಾದಿಯಾಗಿ ಸಕಲ ಜಗತ್ತೂ ಅವನ ಸಹಾಯಕ್ಕೆ ನಿಲ್ಲುತ್ತದೆಯಲ್ಲವೇ? ಊಹಿಸಲೂ ಅಸಾಧ್ಯವಾದ, ಪರಮಾದ್ಭುತವಾದ ಈ ನಲಸೇತುವನ್ನು ನೋಡಿದೇವ-ಗಂದರ್ವ-ಪರಮರ್ಷಿಗಳಾದಿಯಾಗಿ ಎಲ್ಲರೂ ರೋಮಾಂಚನಗೊಂಡರು.  ಹಿಂದೆಂದೂ ಕಂಡು-ಕೇಳರಿಯದ ಈ ಅದ್ಭುತವನ್ನು ಪ್ರತ್ಯಕ್ಷವಾಗಿ ಕಂಡು ಮೂಕ ವಿಸ್ಮಿತರಾದರು. ಶ್ರೀರಂಗಮಹಾಗುರುವು 'ಅದ್ಭುತ' ಶಬ್ದದ ನಿರ್ವಚನವನ್ನು ಹೇಳುತ್ತಾ 'ಅತ್ತಿಭೂತಮ್ಇತಿಅದ್ಭುತಮ್'ಎಂದರೆ, 'ಹಿಂದಿನದ್ದನ್ನು ಮೀರಿಸಿ ಮತ್ತೊಂದನ್ನು ಪ್ರಕಾಶಕ್ಕೆ ತರುವುದು' ಎಂದುತಿಳಿಸಿಕೊಟ್ಟಿರುತ್ತಾರೆ.

ಶ್ರೀಮದ್ರಾಮಾಯಣದ ಉತ್ತರಕಾಂಡದಲ್ಲಿ, ಶ್ರೀರಾಮನ ಒಡ್ಡೋಲಗದಲ್ಲಿ, ಸಾಕ್ಷಾತ್ತಾಗಿ ಮಹರ್ಷಿವಾಲ್ಮೀಕಿಗಳೇ 'ಸೀತೆಯು ಶುದ್ಧಚಾರಿತ್ರ್ಯಳು, ಶ್ರೀರಾಮನನ್ನೇ ಪರದೇವತೆಯಾಗಿ ಭಾವಿಸಿರುವವಳು ಮತ್ತು ಪಾಪರಹಿತಳು' ಎಂಬುದಾಗಿ ಹೇಳಿದರೂ, ಶ್ರೀರಾಮನು, 'ಸಭಾಸದರ ಸಮಕ್ಷಮದಲ್ಲಿ ವೈದೇಹಿಯು ತನ್ನ ಪಾವಿತ್ರ್ಯವನ್ನು ಪ್ರಮಾಣೀಕರಿಸಬೇಕೆಂ'ದಾಗ ಸೀತಾದೇವಿಯು' ತ್ರಿಕರಣಗಳಿಂದಲೂ ನಾನು ಶ್ರೀರಾಮನನ್ನೇ ಅರ್ಚಿಸುತ್ತಿರುವುದು ನಿಜವಾಗಿದ್ದರೆ ಭೂದೇವಿಯು ವಿವರವನ್ನು ಕೊಡಲಿ' ಎಂದು ಬೇಡಿಕೊಳ್ಳುತ್ತಾಳೆ.  ಆಗ ಭೂಮಿಯಿಂದ ಅದ್ಭುತವಾದ ಸಿಂಹಾಸನದಲ್ಲಿ ಮಂಡಿಸಿದ್ದ ಭೂದೇವಿಯು ಬಂದು ಸೀತೆಯನ್ನು ಕುಳ್ಳಿರಿಸಿಕೊಂಡು ಮತ್ತೆ ರಸಾತಳಕ್ಕೆ ಪ್ರವೇಶಿಸುತ್ತಾಳೆ. ಈ ಅದ್ಭುತವನ್ನು ಕಂಡ ಸಭಾಸದರ ಸಾಧುವಾದಗಳಿಂದ ಸಭೆಯು ತುಂಬುತ್ತದೆ.  

ಬರಿಯಮಾತಿಗೆ ಇಷ್ಟು ದೊಡ್ಡ ಪರಿಣಾಮವೇ !?  'ಋಷೀಣಾಂ ಪುನರಾದ್ಯಾನಾಂ ವಾಚಮರ್ಥೋನುಧಾವತಿ' ಎಂದರೆ 'ಜ್ಞಾನಿಗಳ ಮಾತಿನಂತೆ ಕ್ರಿಯೆ ನಡೆದುಹೋಗುತ್ತದೆ' ಎಂಬ ಭವಭೂತಿಯ ಮಾತು ಎಷ್ಟು ನೈಜ! 'ಬಾಳಿದರೆ ಸತ್ಯದೊಡನೆ ಬಾಳಬೇಕು. ಸತ್ಯಬೆಳೆಯಬೇಕು. ಸತ್ಯಸಮರಕ್ಕೆಕಾಲಿಟ್ಟರೂ, ಜೊತೆಗೆ ಒಂದು ಸಕಾರ ಸೇರಿಸಿಕೊಂಡು ಸಾಧಿಸಿದರೆ, ಅಂತ್ಯದಲ್ಲಿ ಸತ್ಯಸಾಕ್ಷಾತ್ಕಾರವಾಗಿ ಸಮರಸವಾಗುತ್ತದೆ ಜೀವನ' ಎಂಬ ಶ್ರೀರಂಗಮಹಾಗುರುವಿನ ವಾಣಿಗೆ ಇದೊಂದು ಉತ್ತಮ ನಿದರ್ಶನ.

ಸೂಚನೆ:  27/06/2020 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.

चित्रकला का अन्तरार्थ (Citrakala Ka Antharartha)

लेखक – डा० हर्षा सिंहा 
हिन्दी अनुवाद – पूजा धवन
(के जवाब मे :  lekhana@ayvm.in)



वह कला जो मन को - चित्त  को - आकर्षित करती है – उसॆ चित्र कला कहतॆ हैं - चित्रण की कला । जब एक महान आत्मा एक सुंदर चित्र को देखती है, तो पर्यावरण की सुंदरता से आकर्षित मन चित्रण की परिस्थितियों का आनंद लेता है8+। क्योंकि चित्रण (चित्र) एक व्यक्ति के मन को विषय के प्रति आकर्षित करते हैं और एक स्वाद (रस) उत्पन्न करते हैं और उसे आनन्दित करते हैं, उन्हें चित्र (कला) कहा जाता है। मूर्तिकला यां शिल्पकला भी इस तत्व को परिपूर्ण रूप से सिद्ध करती है जिस कारण से विशेषज्ञों द्वारा मूर्तिकला को भी चित्र कला कहा जाता है।

चित्र का विषय कलाकार पर निर्भर है। इंद्रियां, मन और उनकी मनोदशा कलाकार के मन पर एक छाप सृजित करती है और उसका कूंचा इन मानसिक चित्रों को दर्शाता है । जो पर्यवेक्षक का मन भी चित्र वीक्षण से चित्रकार के हृदय या मनस्थिति की ओर ले जाता है ।  इस रहस्य को जानने के बाद, भारत के ऋषियों ने चित्रों और मूर्तियों के माध्यम से प्रकृति, देवताओं और गन्दर्वों के रहस्यों को प्रकाशित किया है जो उन्होंने ध्यान अवस्था में अनुभव किए । इन चित्रों और मूर्तियों को निरन्तर देखने से, तपस्या की भांति, धीरे-धीरॆ परन्तु निश्चित रूप से हमारा मन ऋषियों की तपस्थिति का अनुभव करता है और उनके द्वारा अनुभव किए गए आनन्द का आभास करता है , अंततः उसे सृष्टि के मूल में प्रभु के निवास में ले जाता है - उनके असीम (आनन्द) और उनके रस (अमृत) में । शिल्पा (मूर्तिकला) का अर्थ ही समाधि है-अनन्त में विलय। आसन, दृष्टिकोण, दृष्टि, सौंदर्य, भगवान की मूर्तियों की मुस्कुराहट और प्रतिरूप, मन को सुंदरता, परम के विलय और अनुभव की ओर प्रेरित करती है।

मन्दिरों में, मुख्य देवता की मूर्ति के अतिरिक्त, प्रकृति की सुंदरता, जानवरों, पक्षियों और यहां तक कि सांसारिक जीवन का चित्रण करते हुए अन्य मूर्तियाँ, चित्र भी हो सकते हैं। यह वैसा ही है जब हम जोग फॉल तक की यात्रा करते हैं, तो क्या हम हरे जंगलों की प्राकृतिक सुंदरता, रास्ते में भोजन और यात्रा का आनंद नहीं लेते हैं? फॉल्स को अचंभित करने के अतिरिक्त, हम अन्य स्मृतियों में भी रहस्योद्घाटन करते हैं। इसी तरह, यद्यपि हम अभयारण्य के गर्भगृह के अन्दर देवता की मूर्ति का आनन्द लेते हैं, हम रास्ते में उनकी रचना की भव्यता के किरमिच का भी आनन्द लेते हैं। हम उनकी विभूति (विशालता) से प्रभावित हैं। एक महान आत्मा प्रकृति की सुखदायक जंगल की गोद, पहाड़ों और पहाड़ियों में उसकी उदात्तता, उसके महासागरों के तट पर उसकी विशालता और गहरे नीले तारों वाले आकाश में उसकी चमक की हरियाली का आनन्द लेती है। जैसा कि श्री श्री रंगा महागुरु द्वारा बताया गया है, "क्योंकि भगवान की रचना की पहेली उनकी छाप और हस्ताक्षर को वहन करती है, उन्हें देखते हुए, मन को उसके प्रति, धीरे-धीरे लेकिन निश्चित रूप से प्रेरित करता है। मन मौन की गहराई में गोता लगाता हुआ अल्प मात्रा में ही किन्तु परमानन्द का अनुभव करता है।" इस दृष्टिकोण से, उनकी पूरी रचना उनका चित्र, उनकी मूर्तिकला है। वह, प्रकाशमयि भगवान, सच्चे कलाकार हैं और हर दूसरे कलाकार के लिए आदर्श हैं। इस सार्वभौमिक कलाकार की कला, जिसने इस ब्रह्मांड का निर्माण किया है, हमारी भूमि भारत की सभी कलाओं का आधार है।

सूचन : इस लेख का कन्नड़ संस्करण AYVM ब्लॉग पर देखा जा सकता है |      

Saturday, June 27, 2020

ಭಾರತೀಯರ ಸಂವಹನ ಮಾಧ್ಯಮ (Bharathiyara Sanvahana Madhyama)

ಲೇಖಕರು: ಶ್ರೀ ನರಸಿಂಹ ಭಟ್ಟ 
(ಪ್ರತಿಕ್ರಿಯಿಸಿರಿ lekhana@ayvm.in)



ಇಂದು ನಾವು ಪ್ರಪಂಚದ ಯಾವುದೇ ಮೂಲೆಮೂಲೆಯಲ್ಲಿರುವ ಸುದ್ದಿಯನ್ನು ಕ್ಷಣಾರ್ಧದಲ್ಲಿ ವಾರ್ತಾಪತ್ರಿಕೆ, ದೂರದರ್ಶನ ಮತ್ತು ಅಂತರ್ಜಾಲದ ವ್ಯವಸ್ಥೆಗಳಿಂದ ಪಡೆಯುತ್ತಿದ್ದೇವೆ. ಹಾಗಾದರೆ ಇದಕ್ಕೂ ಹಿಂದೆ ಒಂದು ಕಡೆಯಿಂದ ಇನ್ನೊಂದು ಕಡೆ ಸುದ್ದಿ ತಲುಪುತ್ತಿರಲಿಲ್ಲವೇ? ಅಂದಿನ ಜನರು ಯಾವ ಮಾಧ್ಯಮವನ್ನು ಇದಕ್ಕಾಗಿ ಬಳಸಿಕೊಳ್ಳುತ್ತಿದ್ದರು? ಅಥವಾ ಇರಲೇ ಇಲ್ಲವೇ? ಇತ್ಯಾದಿ ಸಂಶಯಗಳು ಬರುತ್ತವೆ. ಹಿಂದೆಯೂ ತಮ್ಮ ಅಭಿಪ್ರಾಯವನ್ನು ಇನ್ನೊಬ್ಬರಿಗೆ ತಿಳಿಸುತ್ತಿದ್ದರು ಎಂಬುದಕ್ಕೆ  ನಮಗೆ ಅನೇಕ ಪುರಾಣ, ಇತಿಹಾಸಕಥೆಗಳು ಸಿಗುತ್ತವೆ.

ಅಭಿಪ್ರಾಯವನ್ನು ತಲುಪಿಸಲು ಅನೇಕ ಮಾಧ್ಯಮಗಳಿವೆ. ಇಂದು ಅವುಗಳು ರೂಪಾಂತರ ಹೊಂದಿವೆ ಅಷ್ಟೇ. ಹಿಂದಿನ ಕಾಲದಲ್ಲಿ ಅತ್ಯಂತ ಸ್ಪಷ್ಟವಾಗಿ ಸುದ್ದಿಯನ್ನು ರವಾನಿಸುತ್ತಿದ್ದರು. ಅದರಿಂದ ನಿಖರವಾಗಿ ವ್ಯವಹಾರವನ್ನೂ ಮಾಡುತ್ತಿದ್ದರು.

ಇತಿಹಾಸ, ಕಾವ್ಯ, ಪುರಾಣಾದಿಗಳಲ್ಲಿ ಇವುಗಳ ಬಗ್ಗೆ ಅನೇಕ ಕಥೆಗಳು ಉಪಲಬ್ಧವಿದೆ. ಚಾಣಕ್ಯನ ಕಾಲದಲ್ಲಿ ಪಕ್ಷಿಯ ಕಾಲಿಗೆ ಪತ್ರವನ್ನು ಕಟ್ಟಿ  ಕಳುಹಿಸುತ್ತಿದ್ದರು ಎಂಬುದು ಒಂದು ಇತಿಹಾಸ. ಕಾವ್ಯಗಳಲ್ಲಿ ಶುಕಸಂದೇಶ, ಹಂಸಸಂದೇಶ, ಮೇಘಸಂದೇಶ ಇತ್ಯಾದಿ ಸಂದೇಶಮಾಧ್ಯಮಗಳ ಉಲ್ಲೇಖ ಸಿಗುತ್ತವೆ.
ಇವುಗಳನ್ನು ನಾವು ಕವಿಸಮಯ ಎಂದು ಭಾವಿಸಿದರೂ ಅಲ್ಲೊಂದು ಸಂವಹನವನ್ನು ಒಪ್ಪಲೇಬೇಕು. ಉದಾಹರಣೆಗೆ ವೇದಾಂತದೇಶಿಕರು 'ಹಂಸಸಂದೇಶ' ಎಂಬ ಕಾವ್ಯವನ್ನು ಬರೆದರು. ಅದರಲ್ಲಿ ಹಂಸದ ಮೂಲಕ, ರಾಮನು ತನ್ನ ಮಡದಿ ಸೀತೆಗೆ ಸಂದೇಶವನ್ನು ಕಳಿಸುವ ಸಾಹಿತ್ಯ ಸಿಗುತ್ತದೆ. ಇನ್ನೂ ಒಂದು ಪ್ರಸಿದ್ಧವಾದ ಕಾಳಿದಾಸನ ಮೇಘದೂತ ಕಾವ್ಯ. ಇಲ್ಲಿ ಪತ್ನೀವಿರಹದಿಂದ ಬಳಲಿದ ಒಬ್ಬ ಯಕ್ಷನು ತನ್ನ ಅಭಿಪ್ರಾಯವನ್ನು ಒಂದು ಮೋಡದ ಮೂಲಕ ತಿಳಿಸುವುದು ಅದ್ಭುತ. ಇಲ್ಲೂ ಕೂಡ ಮಾರ್ಗವನ್ನು ತಿಳಿಸುತ್ತಾ ತನ್ನ ವಿರಹಸಂದೇಶವನ್ನು ಮತ್ತು ಪತ್ನಿಯಿಂದ ಪ್ರತಿಸಂದೇಶವನ್ನೂ ತಿಳಿಸುವ ಭಾಗವನ್ನು ನಾವು ತಿಳಿಯಬಹುದು.

ಇನ್ನು ಪುರಾಣಗಳಲ್ಲಿ ಬಂದರೆ ನಳ- ದಮಯಂತಿಯರ ಮಧ್ಯೆ ಪ್ರೇಮಪತ್ರದ ರವಾನೆ ಒಂದು ಪಾರಿವಾಳದ ಮೂಲಕ ನಡೆದಿತ್ತು. ಇಲ್ಲಿ ಒಂದು ಪಕ್ಷಿಯನ್ನು ಮಾಧ್ಯಮವಾಗಿ ಸ್ವೀಕರಿಸಿದರು. ಇನ್ನು ಕೆಲವು ಕಡೆ ಒಬ್ಬ ವ್ಯಕ್ತಿಯನ್ನೋ, ಪ್ರಾಣಿಯನ್ನೋ, ಕಳಿಸುತ್ತಿದ್ದರು. ಇವೆಲ್ಲವೂ ಸಂದೇಶವನ್ನು ಕಳುಹಿಸಲು ಬಳಸುತ್ತಿದ್ದ ಲೌಕಿಕಮಾಧ್ಯಮ. ಅಂದರೆ ಇತಿಹಾಸದಲ್ಲಾಗಲಿ ಕವಿಸಮಯದಲ್ಲಾಗಲಿ ಮತ್ತು ಪುರಾಣದಲ್ಲಾಗಲಿ ಎಲ್ಲಾ ಕಡೆಗೂ ಒಂದು ಮೂರ್ತರೂಪವನ್ನು ಬಳಸುತ್ತಿದ್ದರೆ, ಇಂದಿನ ಸಂವಹನಮಾಧ್ಯಮ ಇದಕ್ಕೆ ಹೊರತಲ್ಲ. ಇಷ್ಟರಿಂದಲೇ ಪ್ರಾಚೀನ ಭಾರತೀಯರ ಸಂವಹನದ ಹಿರಿಮೆಯನ್ನು ಹೇಳಿದಂತಾಗುವುದಿಲ್ಲ. ಇವಕ್ಕೆಲ್ಲ ಕಳಶಪ್ರಾಯವಾದ ಇನ್ನೊಂದು ಅತ್ಯಂತ ಶ್ರೇಷ್ಠವಾದ ಮಾಧ್ಯಮವಿದೆ. ಇಲ್ಲಿ  ಯಾವುದೇ ಮೂರ್ತರೂಪ ಇಲ್ಲ.  ಅಲೌಕಿಕ ಸಂವಹನ. ಇದನ್ನೇ ಯೋಗಜಪ್ರತ್ಯಕ್ಷ,  ದಿವ್ಯದೃಷ್ಟಿಪ್ರದಾನ ಇತ್ಯಾದಿ ಶಬ್ದಗಳಿಂದ ನಾವು ಹೇಳಬಹುದು. ಒಬ್ಬ ಯೋಗಿಯಾದವನು ತನ್ನ ಮನಸ್ಸನ್ನು ಎಲ್ಲಿಗೆ ಬೇಕಾದರೂ ಕಳುಹಿಸಿ ಅಲ್ಲಿನ ಸಮಾಚಾರವನ್ನು ಕೂತಲ್ಲೇ ತಿಳಿದುಕೊಳ್ಳಬಹುದು. ಇದಕ್ಕೆ ಮಹಾಭಾರತ ಮುಂತಾದ ಕಡೆ ಉದಾಹರಣೆಯನ್ನು ನೋಡಬಹುದು. ಇದಕ್ಕೆ ಕಾರಣ ಅವರಲ್ಲಿದ್ದ ದಿವ್ಯದೃಷ್ಟಿಯ ಪ್ರಭಾವದಿಂದ ಅವರು ಬಯಸಿದ ಎಲ್ಲ ಪದಾರ್ಥದ ಆಮೂಲಾಗ್ರ ಪರಿಚಯವನ್ನು ಪಡೆಯಬಹುದಿತ್ತು. ಇದೊಂದು ನಿಖರವಾದ ಮಾಹಿತಿಯಾಗಿ ಇಂದಿಗೂ ಅಳಿಯದೇ ನಮ್ಮವರೆಗೂ ಬಂದಿದೆ ಎಂಬುದು ಅದ್ಭುತ. ಹಾಗೆ ಹುಟ್ಟಿರುವುದೇ ವೇದ,ಶಾಸ್ತ್ರ, ಪುರಾಣ, ಇತಿಹಾಸಗ್ರಂಥಗಳು. ಒಂದು ಉದಾಹರಣೆಯನ್ನು ನೋಡುವುದಾದರೆ ಮಹಾಭಾರತದಲ್ಲಿ, ಸಂಜಯನು ತನಗೆ ಅನುಗ್ರಹಿತವಾದ ದಿವ್ಯದೃಷ್ಟಿಯ ಪ್ರಭಾವದಿಂದ ಧೃತರಾಷ್ಟ್ರನಿಗೆ ಯುದ್ಧದ ವಾರ್ತೆಯನ್ನು ಸಮಗ್ರವಾಗಿ ತಿಳಿಸುತ್ತಿದ್ದನು. ಈ  ಕಾರಣಕ್ಕೆ ಪ್ರಾಚೀನ ಕಾಲದಲ್ಲಿ ಅಷ್ಟೊಂದು ಮೂರ್ತಸಂವಹನ ಮಾಧ್ಯಮ ಇರಲಿಲ್ಲವಾದರೂ ಅದಕ್ಕಿಂತ ಬಲಿಷ್ಠವಾದ ಅಭಿಪ್ರಾಯ ಸಂವಹನವನ್ನು ನಾವು ವೇದೋಪನಿಷತ್ತುಗಳಲ್ಲಿ ಕಾಣಬಹುದು. ಶಂಕರ ಭಗವತ್ಪಾದರ ದಕ್ಷಿಣಾಮೂರ್ತಿ ಸ್ತೋತ್ರದಲ್ಲಿ ತಿಳಿಸಿದಂತೆ ಗುರು ದಕ್ಷಿಣಾಮೂರ್ತಿ ಮೌನದಿಂದಲೇ ಪರತತ್ತ್ವವನ್ನು ವ್ಯಾಖ್ಯಾನಿಸಿ ಶಿಷ್ಯರ ಸಂಶಯಗಳನ್ನು ನಿವಾರಣೆ ಮಾಡಿದ್ದರ ಆದರ್ಶವುಂಟು. " ನಾವು ಮಾಡುವ ಕೆಲಸವೆಲ್ಲವೂ ಇಂದ್ರಿಯಗಳಿಗೆ ಸಂಬಂಧಿಸಿದುದು.ಆದರೆ ಮಹರ್ಷಿಗಳ ಜೀವನ ಆತ್ಮಾವಲಂಬಿ ಜೀವನ. ನಾವು ಇಂದ್ರಿಯಗಳಿಂದ ಇಂದ್ರಿಯಗಳಿಗೆ ಬೇಕಾದ ವಿಷಯಗಳನ್ನು ಹೇಗೆ ಗ್ರಹಿಸುತ್ತೇವೆಯೋ ಹಾಗೆ ಅವರು ಆತ್ಮನ ಮೂಲಕ ಜೀವನಕ್ಕೆ ಬೇಕಾದ ಎಲ್ಲ ವಿಷಯಗಳನ್ನೂ ಅರಿಯುತ್ತಾರೆ" ಎಂಬ ಶ್ರೀರಂಗ ಮಹಾಗುರುಗಳ ಮಾತು ಇಲ್ಲಿ ಸ್ಮರಣೀಯ. ಋಷಿ ಸಂವಹನವನ್ನು ಋಷಿಯಾಗಿ ಅರ್ಥ ಮಾಡಿಕೊಳ್ಳಬೇಕು. ಇಲ್ಲವೇ ಪೂರ್ವಾಗ್ರಹ ರಹಿತರಾಗಿ ಅವರ ಸಾಹಿತ್ಯದಿಂದ ಅರ್ಥಮಾಡಿಕೊಳ್ಳಬೇಕು.   

ಸೂಚನೆ:  27/06/2020 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ 

Friday, June 26, 2020

ಮೂರು ಶಿಕ್ಷಣ ಪದ್ಧತಿಗಳು (Muru Sikshana Paddhatigalu )

ಲೇಖಕರು: ಡಾ ।। ಮೋಹನ ರಾಘವನ್ 
(ಪ್ರತಿಕ್ರಿಯಿಸಿರಿ lekhana@ayvm.in)



ರಾ
ಮದಾಸ-ಶ್ರೇಷ್ಠಿಗೆ ಮೂವರು ಗಂಡು ಮಕ್ಕಳು. ಮೂವರೂ ಚುರುಕು ಬುದ್ಧಿಯುಳ್ಳವರೂ, ವಿದ್ಯಾವಂತರಾದರೂ ಸ್ನೇಹಿತರೊಡನೆ ಅಡ್ಡಾಡುತ್ತಾ ಬೇಜವಾಬ್ದಾರಿಯಿಂದ ಕಾಲ ಕಳೆಯುತ್ತಿದ್ದರು. ತಂದೆ-ತಾಯಿಯರನ್ನು ವಯೋಧರ್ಮ ಬಾಧಿಸುತ್ತಿತ್ತು. ಅಂಗಡಿ ವ್ಯಾಪಾರ, ಹೊಲ ಗದ್ದೆಗಳನ್ನು ನಿಭಾಯಿಸುವುದು ಕಷ್ಟವಾಗುತ್ತಾ ಬಂತು. ಚಿಂತಾಕ್ರಾಂತರಾಗಿ, ಮಕ್ಕಳನ್ನು ಸದ್ಧರ್ಮದೆಡೆಗೆ ಕರೆತರುವ ಬಗೆಯ ಹುಡುಕ ತೊಡಗಿದರು. ಒಮ್ಮೆ ಶ್ರೇಷ್ಠಿಗಳು ಮೂವರನ್ನೂ ಕರೆದು, ವರ್ಷದ ಕರ-ಮತ್ತಿತರ ಕಾಣಿಕೆಗಳನ್ನು ರಾಜನಿಗೆ ತಲುಪಿಸಿ ಬರಲು ನೇಮಿಸಿದರು. ಕಪ್ಪಕಾಣಿಕೆಗಳನ್ನು ಸ್ವೀಕರಿಸಿ, ರಾಜನು ಪ್ರಸಿದ್ಧವಾದ ಶ್ರೇಷ್ಠಿಗಳ ಕುಶಲ ಸಮಾಚಾರ, ಅಂತೆಯೇ ಮಕ್ಕಳ ಆಗುಹೋಗುಗಳನ್ನು ವಿಚಾರಿಸಿಕೊಂಡ. 'ವಾರ್ಧಕ್ಯದಲ್ಲಿ ತಂದೆತಾಯಿಯರನ್ನು ಸಲಹುವುದು ಧರ್ಮ. ನಮ್ಮ ರಾಜ್ಯದ ನಿಯಮ ಕೂಡ. ಕೂಡಲೇ  ವೃತ್ತಿಜೀವನದಲ್ಲಿ ಉದ್ಯುಕ್ತರಾಗಿ !' ಎಂಬಆದೇಶವನ್ನಿತ್ತ. ಹಿರಿಯ ಮಗ ರಾಜಾಜ್ಞೆಗೆ ಬಾಗಿ ಮರುದಿನದಿಂದಲೇ ಮನೆಯ ಜವಾಬ್ದಾರಿಗಳಲ್ಲಿ ಪಾಲ್ಗೊಂಡನು. ಆದರೆ ತಮ್ಮಂದಿರಿಬ್ಬರು ಬೇಜವಾಬ್ದಾರಿಯನ್ನು ಮುಂದುವರೆಸಿದರು. ಅಣ್ಣನು ತಮ್ಮಂದಿರನ್ನು ಪ್ರತ್ಯೇಕವಾಗಿ ಕರೆದು "ಅಂತೂ ಒಂದು ವಿಷಯ ಹೇಳಬೇಕು ಕಣ್ರಪ್ಪಾ. ! ವ್ಯಾಪಾರ ನಡೆಸುವುದು ಏನೋ ಬೇಜಾರು ಕೆಲಸ ಅಂದುಕೊಂಡುಬಿಟ್ಟಿದ್ದೆ. ಆದರೆ ತುಂಬಾ ಸ್ವಾರಸ್ಯ ಇದು! ಈಗ ನನಗೆ ಸಿಗುವ ಮರ್ಯಾದೆ ಅಪಾರ  ! ನೀವುಗಳು ಒಳ್ಳೆಯ ಅವಕಾಶ ಕಳೆದುಕೊಂಡ್ರಿ. ನಾನು ಅಣ್ಣನಾಗಿ ಅಲ್ಲ, ನಿಮ್ಮೊಡನೆ ಅಡ್ಡಾಡುತ್ತಿದ್ದ ಮಿತ್ರನಾಗಿ ಹೇಳುತ್ತೇನೆ".ಎಂದನು. ಮರುದಿನವೇ ತಮ್ಮನೊಬ್ಬನು ಅಂಗಡಿಯಲ್ಲಿ ಸಕ್ರಿಯವಾಗಿ ಕಾಣಿಸಿಕೊಂಡ. ಆದರೆ ಕೊನೆಯ ತಮ್ಮ ತಿದ್ದುಕೊಳ್ಳದೇ,  ಜೂಜು, ಮದ್ದು ಮುಂತಾದ ಚಟಗಳಲ್ಲಿ ಇನ್ನೂ ಆಳಕ್ಕೆ ಮುಳುಗಿದ. ತಾಯಿಯು ಅವನಿಗೆ  ಒಂದು ಹುಡುಗಿಯನ್ನು ತೋರಿಸಿ ಮದುವೆಯಾಗುವೆಯಾ? ಎಂದು ಕೇಳಿದರು. ಆಕೆಯ ಸೌಂದರ್ಯಕ್ಕೆ ಬೆರಗಾಗಿ ಒಪ್ಪಿಕೊಂಡ. ಹೆಂಡತಿ ಮೃದು-ಸೌಮ್ಯ ಸ್ವಭಾವದವಳು, ಬಹಳ ಚತುರೆ ಕೂಡ. ಸುಲಭವಾಗಿ ಗಂಡನನ್ನ ವಶಕ್ಕೆ ತೆಗೆದುಕೊಂಡಳು. ಆಕೆಯ ಮಾತು ತಳ್ಳಿಹಾಕಲಾರದೆ ಕ್ರಮೇಣ ನೇರ ದಾರಿಯನ್ನ ಹಿಡಿದ. ತಂದೆ-ತಾಯಿಯರು ನೆಮ್ಮದಿಯಿಂದ ಕೊನೆಯ ಕಾಲವನ್ನು ತೃಪ್ತಿ-ಸಂತೋಷದಿಂದ ಜಪ-ತಪಾದಿಯಲ್ಲಿ ಕಳೆದರು.

ಇದು ಭಾರತೀಯ ಶಿಕ್ಷಣ ಪದ್ಧತಿಯ ಒಂದು ಕಥೆಯಾಗಿದೆ. ಭಾರತದ ಮಹರ್ಷಿಗಳು ತಪೋಧನರು. ಅಪಾರವಾದ ಸಂತೋಷದ ಗಣಿಯನ್ನು ತಮ್ಮೊಳಗೇ ಕಂಡುಕೊಂಡಿದ್ದರು. ಜೊತೆಯಲ್ಲಿ ವಸುಧೆಯು ಕೊಡಲು ಬಯಸುವ ಸಂಪತ್ತನ್ನು ಅನುಭವಿಸುವ ವಿಧಾನವನ್ನೂ, ಕಾಮನೆಗಳನ್ನು ಈಡೇರಿಸಿಕೋಳ್ಳುವ ವಿಧಾನಗಳನ್ನೂ ಹಾಕಿಕೊಟ್ಟಿದ್ದರು. ಒಳಧರ್ಮ ಮತ್ತು ಅರ್ಥ-ಕಾಮದ ಸೌಖ್ಯ ಎರಡನ್ನೂ ತೂಗಿಸಿಕೊಂಡು ಹೋಗುವುದೇ ಅವರ ಮಂತ್ರ. ಅಂತಹ ಜೀವನಶೈಲಿ ತಾವೂ ನಡೆಸಿ, ಜೀವನ-ಸಮಾಜ-ರಾಷ್ಟ್ರದಲ್ಲೂ ಬೆಳಸಿದರು. ಇದೇ ಸನಾತನ ಭಾರತದ ಸಾರ. ಇಂತಹ ವ್ಯವಸ್ಥೆಯನ್ನು ದೇಶದ ಉದ್ದ-ಅಗಲಕ್ಕೂ ಜಾರಿಗೊಳಿಸಬೇಕಾದರೆ ಸೂಕ್ತ ಶಿಕ್ಷಣಪದ್ಧತಿ ಬೇಕು. ನಾನಾ ಅಭಿರುಚಿಗಳಿಂದ ಕೂಡಿದ ಜನರನ್ನೂ, ಅವರ ಮನಸ್ಸನ್ನೂ ಪರಿವರ್ತಿಸಬೇಕು. ಆತ್ಮಧರ್ಮದ ಮಾರ್ಗಕ್ಕೆ ತರಬೇಕು.

ಈ ಜನಸಮೂಹವು ಶ್ರೇಷ್ಠಿಯ ಮೂರು ಮಕ್ಕಳಂತೆ. ಅವರಿಗೆ ವೇದ, ಉಪನಿಷತ್ತು, ಶಾಸ್ತ್ರಗಳ ಮೂಲಕ ಧರ್ಮಶಿಕ್ಷಣ ನೀಡುತ್ತಿದ್ದರು. ಉಪನಿಷದ್ವಾಣಿಯು ಧೀರಗಂಭೀರವಾಗಿ, ರಾಜಾಜ್ಞೆಯಂತೆ ಒಳತಪೋಭೂಮಿಯ ಸಮಾಚಾರವನ್ನು ಸಾರುತ್ತದೆ. "ಸತ್ಯಂ ವದ ! ಧರ್ಮಮ್ ಚರ ! ಸ್ವಾಧ್ಯಾಯಾನ್ಮಾಪ್ರಮದ:" ಸತ್ಯವನ್ನೇ ನುಡಿ, ಧರ್ಮಮಾರ್ಗದಲ್ಲಿ ಚರಿಸು ಎಂದು ಅಪ್ಪಣೆ ಮಾಡುತ್ತದೆ. ಸ್ವಾಧ್ಯಾಯದ ಮಾರ್ಗದಿಂದ ವಿಮುಖವಾಗಬೇಡ ಎಂಬ ಎಚ್ಚರಿಕೆ ಇಲ್ಲಿದೆ. "ಏಷ ಆದೇಶ: ಏಷ ಉಪದೇಶ:" ಆದೇಶ, ಉಪದೇಶದ ಧ್ವನಿ ಇಲ್ಲಿದೆ. ಇದು ರಾಜನ ಆಜ್ಞೆಯಂತೆ ಗಂಭೀರವಾಗಿ ಮೊಳಗುತ್ತದೆ. ಜನರ ಮನಸ್ಸಿನಲ್ಲಿ ಸ್ಥಬ್ಧತೆಯನ್ನುಂಟುಮಾಡುತ್ತದೆ. ವಿಸ್ಮಯದ ಒಂದು ರಸನಿಮಿಷದಲ್ಲಿ ಜನರ ಮನಗಳನ್ನು ಸೆಳೆದೊಯ್ಯುತ್ತದೆ. ಆದರಿಂದಲೇ ವೇದೋಪನಿಷತ್ತು ಮತ್ತು ಶಾಸ್ತ್ರಗಳನ್ನು ಪ್ರಭುಸಮ್ಮಿತ ಎಂದು ಕರೆಯುತ್ತಾರೆ. ಹಿರೇಮಗನಂತೆ ರಾಜಾಜ್ಞೆಯನ್ನು ಪಾಲಿಸುವರು ಕೆಲವರು.

ಆದರೆ ಕಿರಿಯ ಇಬ್ಬರು ಮಕ್ಕಳಂತೆ ಅನೇಕರಿಗೆ ಇದು ರುಚಿಸುವುದಿಲ್ಲ. ಅವರು ಬಂಡಾಯ ಏಳುತ್ತಾರೆ. ನೇರವಾಗಿ ಉಪದೇಶ ಮಾಡದೆ, ಪರೋಕ್ಷವಾಗಿ ಕಥೆ-ಉಪಾಖ್ಯಾನಗಳ ಮಾಧ್ಯಮದಿಂದ ಧರ್ಮಮಾರ್ಗದ ಸೌಖ್ಯವನ್ನು ಹೇಳಬೇಕು. ಅಧರ್ಮದ ದುಷ್ಪರಿಣಾಮವನ್ನು ತಿಳಿಸಬೇಕು. ಮಿತ್ರನಂತೆ ಉಪಾಯವಾಗಿ ಈ ಕೆಲಸವನ್ನು ಮಾಡುವುದರಿಂದ ಪುರಾಣ-ಇತಿಹಾಸಗಳನ್ನು ಮಿತ್ರಸಮ್ಮಿತವೆಂದು ಕರೆಯುತ್ತಾರೆ. ಹಿರಣ್ಯಕಶಿಪುವಿನ ಅಧರ್ಮ - ಪ್ರಹ್ಲಾದನ ಭಕ್ತಿ; ಕೌರವರ ದುರಹಂಕಾರ - ಪಾಂಡವರ ಧರ್ಮನಿಷ್ಠೆ; ನಹುಷನ ಪತನ - ಅಜಾಮಿಳನ ಉದ್ಧಾರ; ಅನೇಕ ಉದಾಹರಣೆಗಳು ಕಂಡುಬರುತ್ತವೆ. ಅನೇಕ ಕಥೆಗಳಲ್ಲಿ ಗುಪ್ತವಾಗಿ ತತ್ತ್ವಾರ್ಥಗಳನ್ನು ಹೆಣೆದಿರುತ್ತಾರೆ. ಧ್ರುವ ಐದು ವರ್ಷದ ಹುಡುಗನಾಗಿ ಘೋರ ತಪಸ್ಯೆ ಮಾಡಿ ನಾರಾಯಣನನ್ನು ಒಲಿಸಿಕೊಂಡ. ಅವನ ತಾಯೀ ಸುನೀತಿ. ಆದರೆ ಅವನತಂದೆಗೆ ಸುರುಚಿ ಎಂಬ ರಾಣಿಯಲ್ಲಿ ಹೆಚ್ಚು ಒಲವು. ಆದರಿಂದ ಸುನೀತಿಯ ಮಗನಾದ ಧ್ರುವನಿಗೆ ಅನ್ಯಾಯವಾಗುತ್ತಿತು. ಅನ್ಯಾಯವನ್ನು ಸಹಿಸದೆ ಮನೆ ಬಿಟ್ಟು ನಾರದ ಮಹರ್ಷಿಗಳಿಂದ ಉಪದೇಶ ಪಡೆದು ತಪಸ್ಯೆ ಕೈಗೊಳ್ಳುತ್ತಾನೆ. ನಾರಾಯಣನ ಅನುಗ್ರಹ ಪಡೆಯುತ್ತಾನೆ. ಶ್ರೀರಂಗಮಹಾಗುರುಗಳು ಈ ಕಥೆಯ ಮೂಲಕ ಮಹರ್ಷಿಗಳ ಪರೋಕ್ಷವಾದ ತತ್ತ್ವಸಂಯೋಜನೆಯ ನಿದರ್ಶನ ನೀಡುತ್ತಿದ್ದರು. ನಮಗೆ ಒಳ್ಳೆಯ ನೀತಿ - ಧರ್ಮಕ್ಕಿಂತ, ರುಚಿಯೇ ಹೆಚ್ಚು ಪ್ರಿಯ. ಸಕ್ಕರೆ ಖಾಯಿಲೆ ಇದ್ದವನಿಗೆ, ಸಂಯಮದ ಸುನೀತಿಗಿಂತ, ರುಚಿಯೇ ದೊಡ್ಡದಾದರೆ ಅನಾಹುತವೇ ಫಲ. ಸುನೀತಿಯನ್ನು ತೊರೆದ ರುಚಿ  ನಮ್ಮ ಮನೆಯಾದ ಶರೀರದಲ್ಲಿ ಅಲ್ಲೋಲಕಲ್ಲೋಲ ತರುತ್ತದೆ. ನೆಮ್ಮದಿ ಧ್ರುವ - ನಿಶ್ಚಲ ಮನಸ್ಸಿನಿಂದಬರುತ್ತೆ. ಧೃತಿ ಸುನೀತಿ- ಸದ್ಬುದ್ಧಿಯಿಂದಲೇ ಬರುತ್ತೆ. ಮನಸ್ತತ್ತ್ವ ಪ್ರತೀಕವಾದ ನಾರದರೇ ಮಾರ್ಗದರ್ಶಕರು. ಚಿತ್ತವು ಧ್ರುವವಾಗಿ ಪರಮಪುರುಷನಲ್ಲಿ ನೆಲೆಸಿದರೆ, ನಾರಾಯಣನ ದರ್ಶನ, ಶಾಶ್ವತವಾಗಿ ಅವನ ಸಾನ್ನಿಧ್ಯ. ಇದರ ಫಲ ದೊರೆಯಬೇಕಾದರೆ ಗುರುಮುಖೇನ ಮಿತ್ರಸಮ್ಮಿತಗಳ ಅಧ್ಯಯನ ಅವಶ್ಯಕ.

ಮೂರನೆಯ ಮಗ ಯಾವುದಕ್ಕೂ ಬಗ್ಗುವುದಿಲ್ಲ. ಲೋಭ, ಮೋಹ ಮದಗಳಿಗೆ ವಶನಾಗಿದ್ದಾನೆ. ಮದಿಸಿದ ಆನೆಯನ್ನು ಹಿಡಿಯಲು ಪಳಗಿದ ಆನೆ ಒಂದು ಬೇಕು ಎಂದು ಶ್ರೀರಂಗಮಹಾಗುರುಗಳು ಹೇಳುತ್ತಿದ್ದರು. ಅಂಥವನನ್ನು ಛಲದಿಂದ ವಶಿಸಬೇಕು. ಸ್ತ್ರೀ ಪುರುಷನನ್ನು ವಶದಲ್ಲಿ ಮಾಡಿಕೊಳ್ಳುವ ಹಾಗೆ. ಈ ಉಪಾಯವನ್ನು ಬಳಸುವ ಕಾವ್ಯಗಳು ಕಾಂತಾಸಮ್ಮಿತೆಯೆಂದು ಪ್ರಸಿದ್ಧವಾಗಿವೆ. ಆದರೆ ಶೃಂಗಾರಾದಿ ರಸಗಳಿಂದ ಜನರ ಮನಗಳನ್ನು ಆಕರ್ಷಿಸಿ ಶಾಂತರಸದಲ್ಲೇ ನಿಲ್ಲಿಸುತ್ತವೆ. ನಾಯಕ-ನಾಯಕಿಯರ ಗುಣ-ಭಾವಗಳು ನಮ್ಮಲ್ಲಿ ಸಂಕ್ರಮಿಸುತ್ತವೆ. ಶ್ರೀಮದ್ರಾಮಾಯಣ ಆದಿಕಾವ್ಯವ ಆದರ್ಶಕಾವ್ಯವೆಂದೂ ಪ್ರಸಿದ್ಧ. ಸೀತಾರಾಮರ ಶೃಂಗಾರ, ರಾಮನ ವೀರ, ಅಗಲಿಕೆಯ ಕರುಣಾ ರಸ, ಯುದ್ಧದ ಭಯಾನಕ, ಬೀಭತ್ಸ, ರೌದ್ರ ರಸಗಳಿದ್ದರೂ, ಶ್ರೀರಾಮನ ಗಂಭೀರವೂ ಧೀರ-ಶಾಂತ ವ್ಯಕ್ತಿತ್ವವೂ ಪಲ್ಲವಿಯಂತೆ ಕಾವ್ಯದುದ್ದಕ್ಕೂ ಪ್ರಭಾವ ಬೀರುತ್ತದೆ. ರಾಮನ ವಿನಯ, ಭೂತದಯೆ, ನಮಗೇ ತಿಳಿಯದ೦ತೆ ನಮ್ಮಂತರಂಗದಲ್ಲಿ ಸದ್ಧರ್ಮದ ಬೀಜವನ್ನು ಬಿತ್ತರಿಸುತ್ತದೆ. ನಾರದ-ವಾಲ್ಮೀಕಿಗಳ ತಪಸ್ಸ್ವಾಧ್ಯಾಯದಲ್ಲಿ ಪ್ರಾರಂಭವಾದ ಕಾವ್ಯವು ಶಾಂತರಸದಲ್ಲೇ ಮಂಗಲಗೊಳ್ಳುತ್ತದೆ.

ಮಹರ್ಷಿಭಾರತದಲ್ಲಿ  ಧರ್ಮ-ಅರ್ಥ-ಕಾಮ-ಮೋಕ್ಷರೂಪವಾದ ಪುರುಷಾರ್ಥಗಳೇ ಜೀವನದ ಗುರಿ. ಅತ್ತ ಸಾಗಲಿಕ್ಕೆ ಮಾರ್ಗ ಮೂರು: ಪ್ರಭು-ಮಿತ್ರ-ಕಾಂತಾ ಸಮ್ಮಿತಗಳು. ಭಾರತ ಶಿಕ್ಷಣ ಪದ್ಧತಿಯ ಈ ಅನರ್ಘ್ಯರತ್ನಗಳನ್ನು ಬಳಸಿ ಬೆಳೆಸಿ ಬಾಳನ್ನು ಬೆಳಗಿಸಿಕೊಳ್ಳೋಣ.  

ಸೂಚನೆ: 25/06/2020 ರಂದು ಈ ಲೇಖನ ವಿಶ್ವ ವಾಣಿ ಯಲ್ಲಿ ಪ್ರಕಟವಾಗಿದೆ.   

काल चक्र का रहस्य (Kaal Chakr Ka Rahasy)

लेखक् : श्रीराम चक्रवर्ति 
हिन्दी अनुवाद: अर्चना वागीश
(के जवाब मे :  lekhana@ayvm.in)



काल
सृष्टि का एक ऐसा नियम हैं जिससे प्रकृति के सभी वस्तु और जीव प्रभावित हैं | समय हम सब के लिए बहुत ही अमूल्य द्रव्य हैं, समय हमारे पास जितना भी हो वह कम ही लगता हैं - ऐसा कहना अतिशयोक्ति नहीं हैं | दुनिया  के सभी व्यापार  और  सभी  व्यवहार काल के अवलंबन करते हुए स्वाभाविक रूप से काल की परिक्रमा में व्यवस्थित हैं | सूर्योदय होते ही पक्षियों के चहकने की आवाज सुन पड़ती हैं, प्राणियों और पक्षियों की संचार साथ में प्रकृति में  उल्हास को हम देख सकते हैं | जैसे ही दिन समाप्त होता है सारे गतिविधियां धीमी होकर दिन के अंत में एक तरह की स्तब्धता और शांतियुत वातावरण का अनुभव करसकते हैं | बढ़ते और घटते हुए चंद्र के उदय-अस्त के अनुसार समुद्र की लहरें प्रफु  होती हैं और पीछे हटती हैं | पक्ष मास बीतकर ऋतुवों का बदलना, वसंत काल के दौरान पौधे और पेड़ में अंकुर उभरना, बारिश के मौसम में नदियों का भरना और प्रवाहित होना , शरद ऋतू में धान्य समृद्धि, शिशिर ऋतू में पेड़ के फूलों और पत्तियों का सूखना, हर बरस हम देख रहे हैं | जिस ऋतु में आहार भरपूर प्राप्त होता हैं उस ऋतु में प्राणी और पक्षियां बच्चे पैदा करते हैं | बारिश आने के उपरान्त मेंढक आपस में चर्चा करते हैं, मोर अपने पंख  खोलते हैं |

मनुष्य भी प्रकृति के बदलावों को नज़र में रखते हुए  हमारा लक्ष्य के अनुसार हमारे जीवन शैली को रचाया हैं| घड़ी का समय के अनुसार विद्याभ्यास, वृत्ति, निद्रा एवं दैनिक गतिविधियां को समायोजित किया हैं | इसके अलावा वेश भूषण, आहारों एवं विहारों, प्रथाओं और व्यवहारों की व्यवस्था समय की अनुसार किये गए हैं | वर्षा बादल सर्दी गर्मी जैसे मौसम किसानों के कामकाज को निर्धारित करते हैं | समुद्र की ओर प्रस्थान करने वाले नाविक, हिमालय की ऊंचाइयों को चढ़ने वाले पर्वतारोही, मौसम को नज़र में रखते हुए प्रकृति द्वारा प्रदान किए गए संकेतों पर ध्यान देते ही रहना चाहिए | 

परन्तु आज जिस विशेष लक्ष्य का ज्ञान हम्हे नहीं हैं  उस ज्ञान को हमारे संस्कृति के रचेता ऋषि और महर्ऋषि जानते थे | वे इन्द्रियों के तुष्टि के साथ आत्म-तुष्टि भी चाहते थे | (वे) तपस्या के द्वारां भीतर मनोवृत्ति से प्रकट हुए लहरों पर काबू पाकर, आंतरिक मेरु पर्वत चढ़कर, आनंद सागर में डूबने का उन्हें शौक था | इस आरोहण के लिए उपयुक्त समय संपूर्ण रूप से चुनते थे | ऐसे विशेष काल को हम पर्व दिन के नाम से आज जानते हैं | वैसे ही नित्य प्रातः और  सायं संध्याकाल भी पर्व काल हॊते हैं | पक्ष-मास, नक्षत्र, तिथि जैसे संजोग काल
 को त्यौहार और उत्सव के रूप में आचरण के लिए लाया गया | मकर संक्रांति, दीपावली, गणेश चतुर्थी जैसे त्यौहार जाने माने ही हैं | श्रीरंगमहागुरु ने याद दिलाया करते थे की आत्म साधन के लिए ग्रहण का समय अत्यंत विशेष पर्व काल हैं | सूर्य चंद्र और नक्षत्रों के नियामक जो काल पुरुष हैं, उन्हें कृतज्ञता से याद करते हुए, उनका प्रसाद ग्रहण करने की समय ही पर्व काल जैसा हैं | श्रीरंगमहागुरु याद दिलाया करते थे की आत्म साधन के लिए ये सभी पर्व काल बहुत ही पोषणीय हैं | इन पर्व कालों में ऋषियों ने जो महिमा को देखा और जाना हैं, उस महिमा को समझकर, ऐसे समयों को हमारे सांसारिक तथा पारमारथिक भलाई के लिए उपयोग करके हमारे जीवन को सार्थक बनाये |
  सूचन : इस लेख का कन्नड़ संस्करण AYVM  ब्लॉग पर देखा जा सकता है I