Tuesday, March 31, 2020

व्यवस्थित मन नामक महान उपकरण (Vyavasthita Mana Namaka Mahana upakarana)

लेखक:तारॊडि सुरॆश 
हिन्दी अनुवाद:– पूजा धवन
(के जवाब मे :  lekhana@ayvm.in)


हमारा मन हमारे जीवन पर राज करता है । इसका अर्थ यह नहीं है कि मन हमेशा सही है । सुसंस्कृत या व्यवस्थित मन एक शान्तिपूर्ण और शान्त जीवन के लिए मार्गदर्शन करता है; ना कि दुख कि ओर  । भारत की संस्कृति जो है, उसे इस तरह से रचा गया है कि भोजन, बात, मनोरंजन, व्यवसाय, देने और लेने आदि की प्रथाओं और आदतों को शुद्ध मन सभी गतिविधियों पर नियंत्रण रखने में सक्षम बनाता है ।

दो मित्र धार्मिक यात्रा पर गए थे । वे कई धार्मिक स्थानॊं की यात्रा करने के बाद पवित्र शहर तिरुपति आए । सात पहाड़ियों पर चढ़ने में किया गया थोड़ा सा प्रयास भगवान वेंकटेश्वर के महान और राजसी दिव्य निवास में लाता है । पहाड़ियों की तलहटी पर स्थित तिरुपति शहर भी अत्यन्त सुंदर है। आत्मा को ओज प्रदान करने के अतिरिक्त,  यह इंद्रियों को कई आनंद भी प्रदान करता है । अब एक मित्र मन्दिर जाने की असुविधा नहीं उठाना चाहता था । अन्यथा वह स्वादिष्ट भोजनालयों में अपनी जीह्वा को तृप्त करने और आकर्षक जगह और चलचित्रा को अवशोषित करने के लिए जाना चाहता था ।  तो एक मित्र पहाड़ी की चोटी पर स्थित मंदिर की ओर गया और दूसरा स्थल अवलोकन करने लगा । दोनों की नियत समय पर मृत्यु हो गई । आश्चर्य की बात है कि जो व्यक्ति भगवान की एक झलक पाने के लिए सात पहाड़ियों पर चढ़ गया था, उसे मृत्यु के स्वामी के सेवकों द्वारा नरक में खींच लिया गया था । स्वर्ग के प्रहरी दूसरे को अपने राज्य में ले गए । यह कैसे उचित हो सकता है, एक उचित प्रश्न है । गहराई से विश्लेषण इस रहस्य को समझने में सहायता करेगा । 

जो व्यक्ति शहर का आनंद लेने वाला था वह दुखि था कि उसनॆ कित्नी बडी भूल करी और प्रभु कॆ दर्शन के लिए नहीं जा पाने के कारणवश उसका मन उदास था । उनका मन प्रभु, उनकी भव्यता और दिव्यता के विचारों में डूबा हुआ था । यद्यपि दूसरे व्यक्ति ने पहाड़ियों पर चढ़ने का प्रयास किया था, परन्तु उसका मन उसका दोस्त क्या कर रहा होगा इसमें लीन था । इस पूरे समय में उसे लग रहा था कि उसे भी अपने मित्र के साथ सुख का आनंद लेना चाहिए था । यद्यपि  उन दोनों के शरीर वहीं पर थे जहां वे दोनों चाहते थे परन्तु उनका मन कहीं और था । परिणाम यह हुआ कि एक नरक में गया और दूसरा स्वर्ग में। 

हमारे बुरे और अच्छे (पाप और पुण्य) कर्मों के परिणाम, हमारी बुद्धि या मन पर निर्भर करते हैं । "यह केवल मन ही है जो बंधन या मुक्ति के लिए कारण है" ज्ञानियों का ऐसा मान्ना है । मन को शुद्ध करने के लिए, हमारे ऋषियों (ज्ञानियों) ने हमारे जीवन को शुद्धिकरण के सोलह साधनों (षोडश संस्कारों) में परिवर्तित करने की विधियां स्पष्ट की हैं । उन्होंने हमारी सोच को अमर साहित्य, पवित्र अतीत (इतिहसा) की घटनाओं और अनंत काल (पुराण) की कहानियों, शिक्षा और प्रशिक्षण प्रणालियों से लेकर गुरुकुलॊं के उत्थान के अन्तर्गत ढाला है।  उन्होंने एक सभ्यता और संस्कृति का निर्माण किया है, जो इस सोच को हमारे दैनिक दिनचर्या में, हमारी आजीविका के साधनों में, उन त्योहारों में, जो हम मनाते हैं, जो हम विभूषित करते और पहनते हैं में एकीकृत किया है । जब ऋषि वाल्मीकि ने सरयू नदी के निर्मल प्रवाह की प्रशंसा की तो उन्होंने इसकी तुलना अनंत (सनमनुष्य मनो यथा) में लीन व्यक्ति के शांत मन से की । यह वह वरदान है जो मन के शुद्ध होने पर प्राप्त होता है। "जिस तरह से एक जंगली हाथी को शिक्षित हाथियों द्वारा प्रशिक्षित किया जाता है, वैसे ही ज्ञानियों की संगत के उत्कृष्ट प्रभाव द्वारा हमारा मन भी शुद्ध बन जाता है" महान श्री श्रीरंगा महागुरु ऐसे कहते थे । ज्ञानियॊ के संग से हम एक उन्नत मनःस्थिति को प्राप्त कर लेते हैं जिसके द्वारा हम सृष्टी के मूल में व्यवस्थित परमानन्द को प्राप्त कर लेगें ।

सूचन : इस लेख का कन्नड़ संस्करण AYVM ब्लॉग पर देखा जा सकता है |  

Monday, March 30, 2020

ಆದಿಕವಿಯ ರಸದೌತಣ (Adikaviya Rasadautana)

ಡಾ.  ಎನ್. ಎಸ್. ಸುರೇಶ್
(ಪ್ರತಿಕ್ರಿಯಿಸಿರಿ lekhana@ayvm.in)



ತಣವೆಂದಾಕ್ಷಣ ನಮ್ಮ ಮನಸ್ಸಿಗೆ ಬರುವುದು ಬಾಯಲ್ಲಿ ನೀರೂರಿಸುವ, ವಿವಾಹ-ಉಪನಯನಗಳಲ್ಲಿ ಉಣಬಡಿಸುವ, ವಿವಿಧ ಭಕ್ಷ್ಯ-ಭೋಜ್ಯಗಳಿಂದ ಸಮೃದ್ಧವಾದ, ಮಧುರ-ಕ್ಷಾರ-ತಿಕ್ತ-ಕಟು-ಕಷಾಯ-ರೂಕ್ಷಗಳೆಂಬ ಷಡ್ರಸೋಪೇತವಾದ ಭೂರಿಭೋಜನ.  ಭೋಜನದಿಂದುಂಟಾಗುವ ಸೌಹಿತ್ಯವು ಇಂದ್ರಿಯತೃಪ್ತಿಯನ್ನೂ, ದೇಹಪೋಷಣೆಯನ್ನೂ, ಬುದ್ಧಿಮನಸ್ಸುಗಳ ಪೋಷಣೆಯನ್ನೂ ಮಾಡುವುದಲ್ಲದೇ ಅತೀಂದ್ರಿಯನಾದ ಆತ್ಮನಿಗೂ ತೃಪ್ತಿಯನ್ನುಂಟುಮಾಡುತ್ತದೆ.  ಶುದ್ಧಮನಸ್ಕರಿಂದ ತಯಾರಿಸಿ ಬಡಿಸಲ್ಪಟ್ಟ ಶುದ್ಧವಾದ ಆಹಾರಸೇವನೆಯಿಂದ  ಸತ್ತ್ವಶುದ್ಧಿಯೂ, ಅದರಿಂದ ಸ್ಮೃತಿಯಲ್ಲಿ ಧ್ರುವತ್ವವೂ ಉಂಟಾಗಿ, ಆ ಸ್ಮೃತಿಯನ್ನವಲಂಬಿಸಿದರೆ ಜೀವವನ್ನು ಸಂಸಾರದಲ್ಲಿ ಕಟ್ಟುಹಾಕಿರುವ ಎಲ್ಲಾ ಗಂಟುಗಳೂ ಬಿಚ್ಚಿಕೊಂಡು ಆತ್ಮಸಾಕ್ಷಾತ್ಕಾರವಾಗುತ್ತದೆಯೆಂದು ಛಾಂದೋಗ್ಯೋಪನಿಷತ್ತು ತಿಳಿಸಿಕೊಡುತ್ತದೆ. 

ಸದ್ಗೃಹಿಣಿಯಿಂದ ಬಡಿಸಲ್ಪಟ್ಟ ಔತಣಕ್ಕೇ ಆತ್ಮಸಾಕ್ಷಾತ್ಕಾರಮಾಡಿಸುವ ಯೋಗ್ಯತೆ ಇರಬೇಕಾದರೆ ಇನ್ನು ರಾಮರಸಾಯನವನ್ನು ಆಸ್ವಾದಿಸಿರುವ ಮಹಾಸದ್ಗೃಹಸ್ಥರಾದ ವಾಲ್ಮೀಕಿಗಳಿಂದ ಉಣಬಡಿಸುವ ಔತಣವು ಹೇಗಿರುತ್ತದೆಂಬುದನ್ನು ನೋಡೋಣ.

ಆತಿಥೇಯನು ಹೇಗೆ ತನ್ನ ಮನೆಗೆ ಬಂದ ಅತಿಥಿಗೂ ಆ ಅತಿಥಿಯನ್ನು ಹೊತ್ತುತಂದ ಕುದುರೆಗಳಿಗೂ ಷಡ್ರಸೋಪೇತವಾದ ಆಹಾರವನ್ನು ಉಣಬಡಿಸುವನೋ, ಹಾಗೆಯೇ ಆದಿಕವಿ ವಾಲ್ಮೀಕಿಗಳು ತಮ್ಮ ಕೃತಿಯಾದ ರಾಮಾಯಣದಲ್ಲಿ ಆತ್ಮಕ್ಕೂ ಹಾಗೂ ಇಂದ್ರಿಯಾಶ್ವಗಳಿಗೂ ಶೃಂಗಾರ-ವೀರ-ಕರುಣ-ಅದ್ಭುತ-ಹಾಸ್ಯ-ಭಯಾನಕ-ಬೀಭತ್ಸ-ರೌದ್ರ-ಶಾಂತಗಳೆಂಬ ನವರಸೋಪೇತವಾದ ಆಹಾರವನ್ನು ಉಣಬಡಿಸಿದ್ದಾರೆ. ಹೇಗೆ ನದಿಗಳೆಲ್ಲವೂ ಸಮುದ್ರದಲ್ಲಿ ಲಯಹೊಂದುತ್ತದೆಯೋ ಹಾಗೆಯೇ ಎಲ್ಲಾ ರಸಗಳೂ ಶಾಂತರಸದಲ್ಲಿ ಲಯಹೊಂದುತ್ತದೆ. ಪೂಜ್ಯರಾದ ಶ್ರೀರಂಗಮಹಾಗುರುಗಳು ನವರಸಗಳ ಬಗ್ಗೆ ವಿವರಣೆ ನೀಡುತ್ತಾ 'ಶಾಂತರಸವು ಶಾಶ್ವತವಾದದ್ದು.  ಆಕಾಶದಂತೆ ನಿರ್ಮಲ, ನಿರ್ವಿಕಾರ, ನಿರಂಜನ ಮತ್ತು ನಿರ್ಲೇಪರೂಪವುಳ್ಳದ್ದು.  ಇತರರಸಗಳು ಇದರ ಮುಂದೆ ಹಾದುಹೋಗುವ ಬಣ್ಣಬಣ್ಣದ ಮೋಡದ ಚಕ್ಕೆಗಳಂತೆ ಅಶಾಶ್ವತವಾದವು. ಚಿತ್ರಮಂದಿರದಲ್ಲಿರುವ ಪರದೆಯ ಸ್ಥಾನದಲ್ಲಿರುವುದೇ ಶಾಂತರಸ.  ಪರದೆಯ ಮೇಲೆ ಚಿತ್ರದಲ್ಲಿ ತೋರಿಬರುವ ನೀರು-ಬೆಂಕಿ-ಗಾಳಿ-ಬಣ್ಣಗಳೇ ಮೊದಲಾದವುಗಳ ಪ್ರಭಾವಕ್ಕೋ ಪರಿಣಾಮಕ್ಕೋ ಒಳಪಡದೇ ಹೇಗೆ ನಿರ್ಲಿಪ್ತವಾಗಿರುತ್ತದೆಯೋ ಹಾಗೆಯೇ ಆತ್ಮನ ಸ್ವರೂಪವೂ ಶಾಂತವೇ ಆಗಿರುತ್ತಾ ಜೀವನದಲ್ಲಿ ಬರುವ ಮತ್ತಾವ ರಸಗಳ ಪ್ರಭಾವಕ್ಕೂ ಒಳಪಡದೆ ತನ್ನ ತನದಲ್ಲಿಯೇ ನೆಲೆನಿಂತಿರುತ್ತದೆ' ಎಂಬ ವಿಷಯವನ್ನು ಮನವರಿಕೆ ಮಾಡಿಕೊಟ್ಟಿರುತ್ತಾರೆ.  ರಸಗಳ ಆಸ್ವಾದನೆಯು ದೇಹೇಂದ್ರಿಯಗಳನ್ನೆಲ್ಲಾ ವ್ಯಾಪಿಸಿ, ನಮ್ಮನ್ನು, 'ರಸೋ ವೈ ಸಃ' ಎಂದು ಉಪನಿಷತ್ತು ಹೇಳುವ, ರಸಪುರುಷನಲ್ಲಿ ಆ ಪರಮಾತ್ಮರಸದಲ್ಲಿ ಮುಳುಗಿಸಿ, ಪರಮಾತ್ಮನಲ್ಲಿ ನೆಲೆನಿಲ್ಲಿಸಬೇಕು.  ಆಗ ತಾನೇ ರಸಾಸ್ವಾದನೆಯ ಪೂರ್ಣಫಲ ದೊರೆತಂತಾಗುವುದು ?  ಆದಿಕವಿಗಳ ರಾಮಾಯಣವು ಈ ಮಾತಿಗೆ ದೃಷ್ಟಾಂತವಾಗಿದೆ ಎಂಬುದು ಅದನ್ನನುಭವಿಸಿದ ಅನುಭವಿಗಳ ಮಾತು. 

ಶ್ರೀರಾಮನನ್ನು ನವರಸನಾಯಕನನ್ನಾಗಿ ಚಿತ್ರಿಸಿ ರಚಿಸಿರುವ 'ಶೃಂಗಾರಂ ಕ್ಷಿತಿನಂದನಾವಿಹರಣೇ ---' ಎಂಬ ಶ್ರೀಮಚ್ಛಂಕರಭಗವತ್ಪಾದಾಚಾರ್ಯರ ಶ್ಲೋಕವು ಅತ್ಯಂತ ಜನಪ್ರಿಯವಾಗಿದೆ. ಈ ಶ್ಲೋಕವನ್ನವಲಂಬಿಸಿ ಶ್ರೀರಾಮಚಂದ್ರನ ಜೀವನದಲ್ಲಿ ಈ ರಸಗಳು ಹೇಗೆ ಅಭಿವ್ಯಕ್ತವಾಗಿದೆಯೆಂಬುದನ್ನು ವಿಶದಪಡಿಸುವ ಪ್ರಯತ್ನಮಾಡಲಾಗುವುದು.

ಸೂಚನೆ: 30/03/2020 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ. 

ಜ್ಞಾನಮಾರ್ಗದಲ್ಲಿ ನಡೆದ ಶಂಕರರೇ ಮಾರ್ಗದರ್ಶಿ (Jnanamargadalli Nadeda Shankararee Margadharsi)

ಲೇಖಕರು: ವಿದ್ವಾನ್ ಎನ್. ಎನ್. ಚಂದ್ರಶೇಖರ ಭಟ್ಟ
(ಪ್ರತಿಕ್ರಿಯಿಸಿರಿ lekhana@ayvm.in)



ಶ್ರುತಿಸ್ಮೃತಿಪುರಾಣಾನಾಮಾಲಯಂ ಕರುಣಾಲಯಮ್| 
ನಮಾಮಿ ಭಗವತ್ಪಾದಂ ಶಂಕರಂ ಲೋಕಶಂಕರಮ್|| 

ನಾತನಭಾರತದ ಧಾರ್ಮಿಕ, ಸಾಂಸ್ಕೃತಿಕ, ಆಧ್ಯಾತ್ಮಿಕ ಕ್ಷೇತ್ರಗಳ ಆಕಾಶದಲ್ಲಿ ಬೆಳಗುತ್ತಿರುವ ಧ್ರುವತಾರೆ ಶ್ರೀಶಂಕರಾಚಾರ್ಯರು. ನಾಸ್ತಿಕರ- ಬುದ್ಧಿವಾದಿಗಳ ಸೋಗಲಾಡಿ ಮಾತುಗಳಿಗೆ ಮಾರು ಹೋಗಿ ಜನರು ಧರ್ಮಭ್ರಷ್ಟರೂ, ಕರ್ತವ್ಯಭ್ರಷ್ಟ್ರರೂ ಆಗುತ್ತಿದ್ದ ಸಂಧಿಕಾಲದಲ್ಲಿ 'ಶಂಕರ' ಸೂರ್ಯನ ಉದಯವಾಯಿತು. ಈ ಸೂರ್ಯನು ತನ್ನ ಪ್ರಖರಕಿರಣಗಳನ್ನು ಎಲ್ಲೆಡೆ ಪಸರಿಸಿ, ಜನರಲ್ಲಿ ಹುದುಗಿದ್ದ ಅಜ್ಞಾನಾಂಧಕಾರವನ್ನು ಕಳೆದನು. ಇಂತಹ ಆಚಾರ್ಯೇಂದ್ರರನ್ನು ಕುರಿತು ಯಥಾಮತಿ ನಾಲ್ಕು ಮಾತುಗಳನ್ನು ಬರೆಯಲು ಪ್ರಯತ್ನಿಸುತ್ತೇನೆ. ಆಚಾರ್ಯಶಂಕರರು ಅಲೌಕಿಕ ಮೇಧಾಸಂಪನ್ನ ವ್ಯಕ್ತಿಯಾಗಿದ್ದರು. ಇವರ ಲೋಕಾತೀತವಾದ ವಿದ್ವತ್ತು, ಮೇರುಪ್ರತಿಭೆ, ಶಾಸ್ತ್ರಪಾಂಡಿತ್ಯಗಳು ಎಲ್ಲರನ್ನೂ ಮುಗ್ಧರನ್ನಾಗಿಸುತ್ತಿತ್ತು. ಪಾರ್ವತಿಯನ್ನು ಕುರಿತು ಕಾಳಿದಾಸನು ಹೇಳುವ ಮಾತು— 'ಶರತ್ಕಾಲದಲ್ಲಿ ಹಂಸಪಕ್ಷಿಗಳು ಗಂಗಾನದಿಯಲ್ಲಿ ಸಹಜವಾಗಿ ಬಂದು ವಿಹರಿಸುವಂತೆ, ಸಂಜೆಯಾದೊಡನೆ ಮಹೌಷಧಿಗಳಲ್ಲಿ ಅವುಗಳ ಆತ್ಮಪ್ರಭೆಯು ಪ್ರಕಟಗೊಳ್ಳುವಂತೆ, ಪಾರ್ವತಿಯಲ್ಲಿ ಪೂರ್ವಜನ್ಮದಲ್ಲಿ ಗಳಿಸಿದ ಎಲ್ಲಾ ವಿದ್ಯೆಗಳೂ ಉಪದೇಶಕಾಲದಲ್ಲಿ ಪ್ರಕಟಗೊಂಡವು'. ಇದೇ ರೀತಿಯಲ್ಲಿ ಶಂಕರರು 

ಅಷ್ಟವರ್ಷೇ ಚತುರ್ವೇದೀ ದ್ವಾದಶೇ ಸರ್ವಶಾಸ್ತ್ರವಿತ್| 
ಷೋಡಶೇ ಕೃತವಾನ್ ಭಾಷ್ಯಂ ದ್ವಾತ್ರಿಂಶೇ ಮುನಿರಭ್ಯಗಾತ್|| 

ತನ್ನ ಮೂವತ್ತೆರಡು ವರ್ಷಗಳ ಜೀವಿತಾವಧಿಯಲ್ಲಿ ವಿದ್ಯಾಧ್ಯಯನ, ಭಾಷ್ಯರಚನೆ, ಗ್ರಂಥರಚನೆ, ಸ್ತೋತ್ರರಚನೆ, ಲೋಕದರ್ಶನ, ಭಾರತಾದ್ಯಂತ ಸಂಚಾರ, ಧರ್ಮಸಂಸ್ಥಾಪನೆಗಾಗಿ ಆಮ್ನಾಯಪೀಠ ಸ್ಥಾಪನೆ- ಅಲ್ಲಿ ಶಿಷ್ಯರ ನಿಯುಕ್ತಿ, ಆ ಪರಂಪರೆ ಮುಂದುವರಿಯಲು ಬೇಕಾದ ದೃಢಸ್ಫೂರ್ತಿಪೂರಣ ಇತ್ಯಾದಿ ಅಲೌಕಿಕ ಕಾರ್ಯಗಳನ್ನು ಮಾಡಿ, ದೇಶಕ್ಕೆ ಹೊಸ ಚೈತನ್ಯವನ್ನು ತುಂಬಿದ ಮಹಾಸಂತ, ದೈವೀಪುರುಷ, ಪರಿವ್ರಾಜಕಾಚಾರ್ಯ ಶ್ರೀಶಂಕರಭಗವತ್ಪಾದರು. ಶ್ರೀಶಂಕರರು ತಮ್ಮ ಭಾಷ್ಯಗ್ರಂಥಗಳಲ್ಲಿ ಅದ್ವೈತವನ್ನು ಬೋಧಿಸಿದ್ದರೂ, ಸ್ವತಃ ಭಗವತ್ಸ್ವರೂಪರಾಗಿ, ಅದ್ವೈತಿಗಳಾಗಿ ಬೆಳಗುತ್ತಿದ್ದರೂ ಲೋಕಸಂಗ್ರಹಕ್ಕಾಗಿ ಭಕ್ತಿಮಾರ್ಗವನ್ನೂ, ಕರ್ಮಮಾರ್ಗವನ್ನೂ ಉಪಷ್ಟಂಭಕವಾಗಿ ಬೋಧಿಸಿದ್ದಾರೆ. ಬ್ರಹ್ಮನಿಂದ ಮೊದಲ್ಗೊಂಡು ಇರುವೆವರೆಗಿನ ಎಲ್ಲಾ ದೇಹಗಳಲ್ಲಿಯೂ ಹುದುಗಿರುವ ಆತ್ಮವಸ್ತುವನ್ನು ಯಥಾರ್ಥವಾಗಿ ಯಾವನು ಸರ್ವದಾ ಕಾಣುತ್ತಾನೋ, ಚಾಂಡಾಲನಿರಲಿ-ಬ್ರಾಹ್ಮಣನಿರಲಿ, ಅವನೇ ನನಗೆ ಗುರುಸಮಾನ ಎಂಬ ಸಹಜಭಾವ ಶಂಕರರದು. ಹೀಗೆ ಎಲ್ಲೆಲ್ಲಿಯೂ ಬ್ರಹ್ಮವನ್ನೇ ಕಾಣುವ ಸಮದರ್ಶಿ ಶಂಕರರು. ತಮ್ಮ ಆತ್ಮೋದ್ಧಾರವನ್ನು ಮಾತ್ರ ನೋಡದ ಶಂಕರರು ಲೋಕೋದ್ಧಾರಕ್ಕಾಗಿ ಶಾರದಾಪೀಠಗಳನ್ನು ಸ್ಥಾಪಿಸಿ ಸಮಾಜಕ್ಕೆ ಮಾರ್ಗದರ್ಶನ ಮಾಡಿದರು. ಅಲ್ಲಲ್ಲಿ ದೇವಾಲಯಗಳನ್ನು ಶ್ರೀಚಕ್ರಗಳನ್ನು ಪ್ರತಿಷ್ಠಾಪಿಸಿ, ಲಲಿತಾದೇವಿಯ ಉಪಾಸನೆ ನಿರಂತರ ನಡೆಯುವಂತೆ ವ್ಯವಸ್ಥೆ ಮಾಡಿದರು. ತಾಯಿಗೆ ಸಮ್ಮತವಲ್ಲದ ಸಂನ್ಯಾಸಾಶ್ರಮವನ್ನು ವ್ಯಾಜಾಂತರದಿಂದ ಸ್ವೀಕರಿಸಿ, ಅವಳ ಅಂತ್ಯಕಾಲದಲ್ಲಿ ಸ್ಮರಿಸಿದಾಕ್ಷಣ ಒದಗಿ ಬಂದು, ಸಂನ್ಯಾಸಿಯಾದರೂ ತಾಯಿಯ ಅಂತ್ಯಕ್ರಿಯೆಯನ್ನು ಮಾಡಿ ಮಾತೃಭಕ್ತಿಯನ್ನು ಮೆರೆದವರು ಶಂಕರರು! ಲೋಕಪೂಜ್ಯ ಶ್ರೀ ಶಂಕರ ಭಾಗವದ್ಪದರು.

ಸೂಚನೆ: 30/03/2020 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.  

ಲೋಕದ ಭಾಗ್ಯ-ಶ್ರೀ ಶಂಕರಭಗವತ್ಪಾದರು (Lokada Bhagya-Sree Sankharabhagavatpadaru)

ಲೇಖಕರು: ಸುಬ್ರಹ್ಮಣ್ಯ ಸೋಮಯಾಜಿ
(ಪ್ರತಿಕ್ರಿಯಿಸಿರಿ lekhana@ayvm.in)
 

ಶಂಕರಾವತಾರ-ಜನನ ಮತ್ತು ಬಾಲ್ಯ ;
ಸುಮಾರು ಹದಿಮೂರು ಶತಕಗಳ ಹಿಂದಿನ ಮಾತು. ಒಬ್ಬ ಮಹಾಸಂನ್ಯಾಸಿಯ ಆವಿರ್ಭಾವ ನಮ್ಮೀ ಪವಿತ್ರ ಭೂಮಿಯಲ್ಲಿ ಸಂಪನ್ನವಾಯಿತು. ಹುಟ್ಟಿದ್ದು ಕೇರಳದ ಕಾಲಡಿಯಲ್ಲಿ. ಆರ್ಯಾಂಬಾ ಶಿವಗುರು ದಂಪತಿಗಳ ಪ್ರಾರ್ಥನೆಯ ಫಲಶ್ರುತಿಯಾಗಿ ವೈಶಾಖ ಶುದ್ಧ ಪಂಚಮಿಯಂದು ಅವತಾರ ಗ್ರಹಣ. ಶಿವನ ವರಪ್ರಸಾದದಿಂದ ಜನಿಸಿದ್ದರಿಂದ ಶಂಕರನೆಂದೇ ನಾಮಕರಣ. ತೇಜಸ್ವೀ ಬಾಲಕ. ೩ನೇ ವಯಸ್ಸಿನಲ್ಲೇ ಪಿತೃವಿಯೋಗ. ಅಷ್ಟು ಚಿಕ್ಕ ವಯಸ್ಸಿನಲ್ಲೇ ತಾಯಿಗೆ" ಸಮಾಧಾನ-ಆತ್ಮ ಅಮರ. ಶರೀರ ಇಂದಲ್ಲ ನಾಳೆ ಬಿದ್ದುಹೊಗುವುದೇ" ಎಂಬುದಾಗಿ. ೫ ನೆಯ ವಯಸ್ಸಿಗೆ ಶಂಕರನಿಗೆ ಬ್ರಹ್ಮೋಪದೇಶ. ಗುರುಕುಲವಾಸ. ೮ ನೆಯ ವಯಸ್ಸಿನಲ್ಲಿ ನಾಲ್ಕು ವೇದಗಳು, ಎಲ್ಲ ಶಾಸ್ತ್ರಗಳು ಕಂಟಸ್ಥ . ಆ ಗುರುಕುಲದಲ್ಲಿ ಕಲಿಯುವುದೇನೂ ಉಳಿಯಲಿಲ್ಲ. ಮನೆಗೆ ಬಂದು ವೇದಾಧ್ಯಯನ-ಬ್ರಹ್ಮಚರ್ಯ ಪಾಲನೆ ಮತ್ತು ಮಾತೃಸೇವೆ ಇವು ಶಂಕರನ ಕೈಂಕರ್ಯವಾದವು. ಕೇವಲ ೮ ವರ್ಷದ ಜೀವನದಲ್ಲಿ ಕಲ್ಪನೆ ಮಾಡಲಾಗದ ಸಾಧನೆ. 

ಸಂನ್ಯಾಸ ;
ಬಾಲಕ ಶಂಕರನ ಮನಸ್ಸಿನಲ್ಲಿ ತಾನು ಮಾಡಬೇಕಾದ ಕೆಲಸದ ಅಗಾಧ ಪರ್ವತವೇ ಎದುರಿಗಿತ್ತು. ಅದಕ್ಕಾಗಿ ಎಲ್ಲವನ್ನೂ ತೊರೆದು ಸಂನ್ಯಾಸಿಯಾಗುವುದು ಅನಿವಾರ್ಯವಾಗಿತ್ತು. ಆದರೆ ತಾಯಿಯ ಅನುಮತಿ ಇಲ್ಲದೇ ಅದು ಸಾಧ್ಯವಿರಲಿಲ್ಲ. ನಿಯತಿಯೇ ತನ್ನ ಕಾರ್ಯಕ್ಕಾಗಿ ಒಂದು ಅವಕಾಶವನ್ನು ಕಲ್ಪಿಸಿತು. ಪುರ್ಣಾನದಿಯಲ್ಲಿ ಸ್ನಾನ ಮಾಡುತ್ತಿದ್ದಾಗ ಮೊಸಳೆಯೊಂದು ಶಂಕರನ ಕಾಲನ್ನು ಹಿಡಿದೆಳೆಯಲು, ಶಂಕರನು- ದಡದಲ್ಲಿದ್ದ ತಾಯಿಯನ್ನು ಕುರಿತು- "ಅಮ್ಮಾ, ಈ ಮೊಸಳೆ ನನ್ನ ಜೀವನವನ್ನು ಮುಗಿಸುತ್ತಿದೆ. ನಾನು ಸಂನ್ಯಾಸಿಯಾಗಲು ನೀನು ಅಪ್ಪಣೆ ಕೊಡುವಿಯಾದರೆ ಜೀವಂತವಾಗಿ ಬರಬಲ್ಲೆ" ಎಂದನು. ಮಾತೃ ಹೃದಯ. ಮಗ ಬದುಕಿದರೆ ಸಾಕು, ಬೇರೆ ಉಪಾಯವಿಲ್ಲ. ಅನುಮತಿ ನೀಡಿದಳು. 

ಗುರುವಿನಿಂದ ದೀಕ್ಷೆ ; 
ಅಂದಿನಿಂದ ಪ್ರಾರಂಭ. ಶಂಕರನ ಪರಿವ್ರಾಜಕ ಬದುಕು. ಕಾಲ್ನಡಿಗೆಯಲ್ಲಿ ನರ್ಮದಾ ತೀರದ ಗೋವಿಂದಭಗವತ್ಪಾದರಲ್ಲಿಗೆ ಪ್ರಯಾಣ. ಈ ತೇಜಸ್ವೀ ಬಾಲಕನಿಗೆ ಗೋವಿಂದ ಗುರುಗಳು ವಿಧ್ಯುಕ್ತವಾಗಿ ಸನ್ಯಾಸ ನೀಡಿ ನಾಲ್ಕೂ ವೇದಗಳಿಂದ ಮಹಾ ವಾಕ್ಯಗಳನ್ನು ಅನುಭವ ಸಹಿತವಾಗಿ ಉಪದೇಶಿಸಿದರು. ಋಗ್ವೇದದಿಂದ-"ಪ್ರಜ್ಞಾನಂ ಬ್ರಹ್ಮ"-ಪ್ರಜ್ಞಾನವು ಬ್ರಹ್ಮವೇ ಆಗಿದೆ. ಯಜುರ್ವೆದದಿಂದ- ಅಹಂ ಬ್ರಹ್ಮಾಸ್ಮಿ"-ನಾನು ಬ್ರಹ್ಮವೇ ಆಗಿದ್ದೇನೆ, ಸಾಮವೇದದಿಂದ-ತತ್ತ್ವಮಸಿ-ಆ ಬ್ರಹ್ಮವು ನೀನೇ ಆಗಿದ್ದೀ ಮತ್ತು ಅಥರ್ವವೇದದಿಂದ-ಅಯಮಾತ್ಮಾ ಬ್ರಹ್ಮ-ಈ ಆತ್ಮವು ಬ್ರಹ್ಮವೇ. ಈ ಉಪದೇಶವು ಕೇವಲ ಶಾಸ್ತ್ರ ಪುಸ್ತಕದ ವಾಕ್ಯಗಳನ್ನು ಉರು ಹೊಡೆದುದಲ್ಲ. ಒಳಗಿನ ಬ್ರಹ್ಮಾನುಭವದಿಂದ ತುಂಬಿ ಹೊರಗೆ ತುಳುಕಿದ ಆನಂದಾನುಭವ. ಶಂಕರರಿಗೆ ಈ ಉಪದೇಶವಾದೊಡನೆ ಮೂರುದಿನಗಳ ಕಾಲ ಬಾಹ್ಯ ಪ್ರಜ್ಞೆಯೇ ಇಲ್ಲದೇ ಸಮಾಧಿಯ ಅನುಭವಾಗಿತ್ತಂತೆ. 

ಅದ್ವೈತ ಸಿದ್ಧಾಂತ :
ಭಾರತೀಯ ಪರಂಪರೆಯಲ್ಲಿ ಅದ್ವೈತಸಿದ್ಧಾಂತವು ಬಹಳ ಪ್ರಮುಖವಾದ ಸ್ಥಾನವನ್ನು ಅಲಂಕರಿಸುತ್ತದೆ. ಉಪನಿಷತ್ತಿನ ಈ ಸತ್ಯವನ್ನು ಶಂಕರಭಗವತ್ಪಾದರು ತಮ್ಮ ಕಾಲದೇಶಕ್ಕನುಗುಣವಾಗಿ ಸಮರ್ಥವಾಗಿ ಪುನಃ ಪ್ರತಿಷ್ಠಾಪಿಸಿ ಲೋಕೋಪಕಾರ ಮಾಡಿದ್ದಾರೆ. ಬಹಳ ಸಂಕ್ಷಿಪ್ತತಮವಾಗಿ ಆ ಸತ್ಯದ ಕೆಲವು ಹೊಳಹುಗಳನ್ನು ನೋಡೋಣ. 

ಬ್ರಹ್ಮ ಸತ್ಯ-ಜಗತ್ತು ಮಿಥ್ಯೆ: 
ಬ್ರಹ್ಮವೊಂದೇ ಸತ್ಯ. ಜಗತ್ತು ಮಿಥ್ಯೆ: ಹೇಗೆ ವಿದ್ಯುಚ್ಚಕ್ತಿಯಿಂದಲೇ ನಮ್ಮ fan, TV, ರುಬ್ಬುವ ಯಂತ್ರ, ಎಲ್ಲವೂ ಕೆಲಸ ಮಾಡುತ್ತಿವೆ. ಆ ವಿದ್ಯುತ್ತಿನ ಸಂಚಾರ ನಿಂತಾಗ ಎಲ್ಲವೂ ನಿಂತುಹೊಗುತ್ತವೆಯಲ್ಲವೇ?. ಇವು ಬೇರೆ ಬೇರೆಯಾಗಿ ಕಾರ್ಯ ನಿರ್ವಹಿಸುತ್ತಿದ್ದರೂ ಯಾವ ಒಂದು ಶಕ್ತಿ ಇಲ್ಲವಾದಾಗ ಎಲ್ಲವೂ ಅಸ್ತಿತ್ವಹೀನವಾಗಿಬಿಡುತ್ತವೆ. ಹಾಗೆಯೇ ಬ್ರಹ್ಮವೊಂದೇ ನಿತ್ಯ ಶಾಶ್ವತವಾಗಿರುವುದು. ಅದರ ಕಾರಣದಿಂದಲೇ ಎಲ್ಲವಕ್ಕೂ ಅಸ್ತಿತ್ವ ಬಂದಂತೆ ಇರುವುದು. ಆದರೆ ಅಸ್ತಿತ್ವ ಎಂದೆಂದಿಗೂ ಇರುವುದಾದರೆ ಅದು ಬ್ರಹ್ಮವೊಂದಕ್ಕೆ ಮಾತ್ರ.ಉಳಿದೆಲ್ಲವೂ ಇಂದು ಇದೆ, ನಾಳೆ ಇಲ್ಲ, ಈ ಕ್ಷಣಕ್ಕೆ ಇದೆ ಮುಂದೆ ಕಾಣದು. ಜಗತ್ತು ಪರಿವರ್ತನ ಶೀಲ. ನಿತ್ಯ ಶಾಶ್ವತವಲ್ಲ. ಎಂದೇ ಮಿಥ್ಯೆ ಎಂದಿರುವುದು. ಅದರ ಅಸ್ತಿತ್ವವೂ ಹಿಂಬದಿಯ ಬ್ರಹ್ಮವೇ ಆಗಿದೆ. 

ಅಹಂ ಬ್ರಹ್ಮಾಸ್ಮಿ: 
ನಾನು ಎನ್ನುವುದಕ್ಕೆ ವಿಷಯ ಬ್ರಹ್ಮವೇ. ಉದಾಹರಣೆಗೆ ನಮ್ಮ ಅಂಗಾಂಗಗಳು ನಾವೇ? ಇಲ್ಲ . ನನ್ನ ಕೈ, ನನ್ನ ಕಾಲು, ನನ್ನ ಹೃದಯ ಹೀಗೆಲ್ಲ ಹೇಳುವಾಗ ನಾನು ಎನ್ನುವುದು ಇದೆಲ್ಲದರಿಂದ ಹೊರತಾದ, ಇದೆಲ್ಲದಕ್ಕೂ ಚೈತನ್ಯವನ್ನು ಹರಿಸುತ್ತಿರುವ ಬ್ರಹ್ಮವನ್ನೇ ಅಲ್ಲಿ ನಿರ್ದೇಶಿಸುತ್ತಿರುವುದು. ನಮಗೇ ಗೊತ್ತಿಲ್ಲದೇ ಇದು ನಮ್ಮ ನಿತ್ಯದ ನಡೆಯಾಗಿದೆ, ಒಂದು ಮಂಜುಗಡ್ಡೆ ತನ್ನ ಪೂರ್ವಸ್ಥಿತಿಯನ್ನು ನೆನೆದು ನಾನು ನೀರಾಗಿದ್ದೆ ಎಂದರೆ ಒಪ್ಪಬೇಕಲ್ಲವೇ? ನೀರೇ ಇಲ್ಲದೇ ಮಂಜುಗಡ್ಡೆ ಇಲ್ಲ. ಎಲ್ಲದರ ಹಿಂಬದಿ ಬೆಳಗುತ್ತಿರುವ ಮಹಾ ಚೈತನ್ಯವೇ ಬ್ರಹ್ಮ. ಅದಿಲ್ಲದೇ ವಿಶ್ವವೇ ಇಲ್ಲ. ನೀರಿನಲ್ಲಿ ಕರಗಿದ ಉಪ್ಪು ನೀರನ್ನೆಲ್ಲಾ ವ್ಯಾಪಿಸಿರುವಂತೆ ಬ್ರಹ್ಮವು ಸರ್ವವ್ಯಾಪಿ. ನೀರಿನಲ್ಲಿರುವ ಉಪ್ಪನ್ನು ಅನುಭವದಿಂದಲೇ ತಿಳಿಯುವಂತೆ ಬ್ರಹ್ಮವನ್ನೂ ಅನುಭವದಿಂದಲೇ ಅರಿಯಬೇಕಾಗಿದೆ. ನಾನು ಬ್ರಹ್ಮವೇ ಆಗಿರುವೆ ಎಂಬ ಮಾತು ನಿಜವಾದ ಬ್ರಹ್ಮಾನುಭವದಿಂದ ಹೇಳಿದ್ದೇ ಹೊರತು, ಕೇವಲ ಶಾಸ್ತ್ರವಾಕ್ಯವನ್ನು ಉಲ್ಲೇಖಿಸಲಲ್ಲ. ಸಮುದ್ರವನ್ನು ನೋಡಿ "ಆಹಾ ಅಪಾರವಾದ ಸಮುದ್ರ" ಎನ್ನುವುದಕ್ಕೂ ಸಮುದ್ರವನ್ನೇ ನೋಡದೇ ಯಾರೋ ಬರೆದ ಅದೇ ವಾಕ್ಯವನ್ನು ಓದುವುದಕ್ಕೂ ಬಹಳ ವ್ಯತ್ಯಾಸವಿದೆ . ಶಂಕರಭಗವತ್ಪಾದರು ಹೀಗೆ ಯಾವ ಅನುಭವದ ನೆಲೆಯನ್ನು ಏರಿದರೆ ಬ್ರಹ್ಮವೊಂದೇ ಎಂಬ ಸತ್ಯದ ಅರಿವಾಗುವುದೋ ತಪಸ್ಯೆಯಿಂದ ಅಂತಹ ಅದ್ವೈತ ಸ್ಥಾನಕ್ಕೆ ಏರಿ ಮೊಳಗಿದ ಸತ್ಯವಾಕ್ಯವದು ಎಂಬುದನ್ನು ನಾವು ಮರೆಯಬಾರದು. ಶ್ರೀರಂಗ ಮಹಾಗುರುಗಳು ಹೇಳುತ್ತಿದ್ದರು- ಜಾತ್ರೆಯಲ್ಲಿ ಸಕ್ಕರೆ ಅಚ್ಚಿನ ಅನೇಕ ಆಕಾರಗಳ ಗೊಂಬೆಗಳನ್ನು ಮಾರಾಟಕ್ಕಿಟ್ಟಿರುತ್ತಾರೆ. ಮಕ್ಕಳು –ನನಗೆ ಹುಲಿ ಬೇಕು, ನನಗೆ ಮೀನು ಬೇಕು, ಸಿಂಹ ಬೇಕು ಎಂದೆಲ್ಲಾ ಹೊರ ಆಕಾರವನ್ನು ನೋಡಿ ಕೇಳುತ್ತವೆ. ಆದರೆ ಅವರಿಗೆ ತಂದೆಯಾದವನು ಕಣ್ಣು ಮುಚ್ಚಲು ಹೇಳಿ ಸಕ್ಕರೆ ಅಚ್ಚಿನ ಹುಲಿಯನ್ನೋ, ಸಿಂಹವನ್ನೋ ಬಾಯಲ್ಲಿ ಇಟ್ಟು ಹೇಗಿದೆ ಎಂದರೆ ಮಗು ಸಿಹಿ ಎಂದಿಷ್ಟೇ ಹೇಳಬೇಕಲ್ಲವೇ? ಹೀಗೆಯೇ ಭೇದಗಳನ್ನು ಗ್ರಹಿಸುವ ಈ ಕಣ್ಣುಗಳನ್ನು ಮುಚ್ಚಿ, ಅಭೇದವನ್ನು ಅನುಭವಿಸುವ ಕಣ್ಣನ್ನು ತೆರೆದರೆ ಬ್ರಹ್ಮವೊಂದೇ ಕಾಣುತ್ತದೆ ಎಂಬುದು ಶಂಕರಾಚಾರ್ಯರ ಅನುಭವದ ಮಾತು. ಅದನ್ನು ಆ ಸಮಾಧಿ ಸ್ಥಿತಿಯ ಅನುಭವದಿಂದಲೇ ಹೇಳಬೇಕೇ ವಿನಃ ನಾವಿದ್ದ ಲೌಕಿಕ ಪ್ರಪಂಚದ ಅರಿವಷ್ಟನ್ನೇ ಇಟ್ಟುಕೊಂಡು ಎಲ್ಲವೂ ಬ್ರಹ್ಮವೇ ಎಂದರೆ ಅದು ಕಲಿತ ಮಾತಾಗುತ್ತದೆ ಅಷ್ಟೇ. ಬ್ರಹ್ಮವೆನ್ನುವುದು ಎಂದೆಂದಿಗೂ ಇರುವ ಸತ್ಯ. ವಸ್ತುಸ್ಥಿತಿ. ಅಂತಹ ಬ್ರಹ್ಮಾನುಭವದ ಅಡಿಗಲ್ಲಿನ ಮೇಲೆ ಈ ದೇಶದ ಸಂಸ್ಕೃತಿ ಸೌಧವನ್ನು ಕಟ್ಟುವ ಗುರುತರವಾದ ಜವಾಬ್ದಾರಿಯನ್ನು ಹೊತ್ತು ಶಂಕರರು ಅಲ್ಲಿಂದ ಹೊರಟು ದೇಶದ ಎಲ್ಲೆಡೆ ಸಂಚರಿಸಿ ಜಾಗೃತಿಯನ್ನು ಮೂಡಿಸಿದರು.

ಗ್ರಂಥಸೇವೆ ; 
ಜೀವಿಗಳೆಲ್ಲರೂ ಆ ಅನುಭವವನ್ನು ಪಡೆಯುವಂತಾಗಲು ಅವರ ಪ್ರಕೃತಿ ಅದಕ್ಕೆ ಸಜ್ಜಾಗಬೇಕು, ಶುದ್ಧವಾಗಬೇಕು. ಬ್ರಹ್ಮದ ವಿಸ್ಮರಣೆಯಾಗಿ ಎಲ್ಲರೂ ದುಃಖ ದೈನ್ಯಗಳಿಂದ ನರಳುವುದಾಗಬಾರದು.ಹಾಗಾಗಲು ಶಂಕರರು ದೇಶದುದ್ದಕ್ಕೂ ಸಂಚರಿಸಿ ಸಮಾಜದಲ್ಲಿನ ಕಾಲುಷ್ಯವನ್ನು ತೊಳೆಯುವ ಪ್ರಯತ್ನ ಮಾಡಿದರು. ನಾವಿರುವ ಸ್ಥಿತಿಯಿಂದ ನಮ್ಮನ್ನು ಮೇಲೆತ್ತಬೇಕಲ್ಲವೇ? ಅದಕ್ಕಾಗಿ ನೂರಾರು ಸ್ತೋತ್ರ ಸಾಹಿತ್ಯವನ್ನು ರಚಿಸಿ ಸಾಮಾನ್ಯರೂ ಅದರ ಪಾರಾಯಣದಿಂದ ಪ್ರಕೃತಿ ಶುದ್ಧವಾಗಿ ಅಸಾಮಾನ್ಯವಾದ ಅನುಭವದ ನೆಲೆಗೆ ತಲುಪಲು ಸಹಾಯವಾಗುವಂತೆ ಮಾಡಿದರು. ಈ ದೇಶದ ವಿದ್ವಾಂಸರ ವೇದಾಂತವೆಲ್ಲ ಬರಿಯ ವಾದಾಂತದಲ್ಲಿ ಕೊನೆಗೊಳ್ಳುವುದನ್ನು ನೋಡಿ ಮರುಗಿ ಅವರೆಲ್ಲರಿಗೂ ಅನುಭವದ ಸುಧೆಯನ್ನು ಉಣಬಡಿಸುವಂತಹ ವಿವೇಕ ಚೂಡಾಮಣಿ, ಗೀತಾ ಭಾಷ್ಯ, ಉಪನಿಷತ್ ಭಾಷ್ಯ, ಬ್ರಹ್ಮ ಸೂತ್ರ ಭಾಷ್ಯಗಳಂತಹ ಉದ್ಗ್ರಂಥಗಳನ್ನು ರಚಿಸಿ ಉಪಕರಿಸಿದರು. " ಸರ್ವಂ ಕರ್ಮಾಖಿಲಂ ಪಾರ್ಥ ಜ್ಞಾನೇ ಪರಿಸಮಾಪ್ಯತಿ ಎಂಬಂತೆ ಎಲ್ಲ ಕರ್ಮಗಳೂ ಜ್ಞಾನದಲ್ಲೇ ಹೋಗಿ ನಿಲ್ಲುವಂತಾದಾಗಲೇ ಅವುಗಳ ಸಾರ್ಥಕ್ಯ ಎಂಬ ಗೀತಾಚಾರ್ಯನ ಮಾತುಗಳನ್ನು ಎಲ್ಲರ ಮನಮುಟ್ಟುವಂತೆ ಉಪದೇಶಿಸಿದರು. ಸಮಾಜ ಸುಧಾರಣೆ. ಬುದ್ಧನ ಸರಳವಾದ ಉಪದೇಶಗಳನ್ನು ತಮ್ಮ ಮನಸ್ಸಿಗೆ ಬಂದಂತೆ ವ್ಯಾಖ್ಯಾನಿಸಿ ನಾಸ್ತಿಕತೆಯನ್ನು ಹರಡಿ ಸನಾತನ ಧರ್ಮವನ್ನು ಈ ನಾಡಿನಿಂದ ಬುಡಮೇಲು ಮಾಡುವ ಪ್ರಯತ್ನದಲ್ಲಿದ್ದ ತಥಾಕಥಿತ ಬೌದ್ಧ ರನ್ನು ಅವರದೇ ವರಸೆಯಿಂದ ಪರಾಭವಗೊಳಿಸಿ, ಅತ್ಯಂತ ಪ್ರೀತಿಯಿಂದ ಅವರಿಗೆಲ್ಲ ನಿಜವನ್ನು ಮುಟ್ಟಿಸುವ ಕೆಲಸವನ್ನು ಸಮರ್ಥವಾಗಿ ನಿರ್ವಹಿಸಿದರು. ಅಂದಿನ ನಮ್ಮ ದೇಶದ ಪರಿಸ್ಥಿತಿ ಬಹಳ ಚಿಂತಾಜನಕ. ಚಿಕ್ಕ ಚಿಕ್ಕ ರಾಜ್ಯಗಳು, ಒಳಜಗಳ ಇತ್ಯಾದಿ ರಾಜಕೀಯ ಸಮಸ್ಯೆಯಾದರೆ ಧಾರ್ಮಿಕವಾಗಿ ಕಾಪಾಲಿಕರು, ತಾಂತ್ರಿಕರು, ಶಾಕ್ತರು, ಶೈವರು, ವೈಷ್ಣವರು, ಪಾಶುಪತರು, ಭೈರವರು, ಜೈನರು, ಬೌದ್ಧರು, ಚಾರ್ವಾಕರು ಹೀಗೆ ಪರಸ್ಪರ ಹೊಂದಾಣಿಕೆ ಇಲ್ಲದೇ ತಮ್ಮ ತಮ್ಮ ಮತಗಳೇ ಶ್ರೇಷ್ಠ ಎಂಬ ಮತಾಂಧತೆಯ ಆಚರಣೆಗಳಲ್ಲಿಯೇ ಮಗ್ನರಾಗಿ ಎಲ್ಲವೂ ಭಗವಂತನ ಪ್ರಾಪ್ತಿಗಾಗಿ ಎನ್ನುವ ವಿಷಯವನ್ನೇ ಕೈಬಿಟ್ಟು ಕುಳಿತ ಗೊಂದಲದ ವಾತಾವರಣದಲ್ಲಿ ಶಂಕರರು ಎಲ್ಲರನ್ನೂ ಒಗ್ಗೂಡಿಸಿ ಸನಾತನ ಧರ್ಮದಲ್ಲಿ ಎಲ್ಲದಕ್ಕೂ ಸಮನ್ವಯತೆ ಇರುವುದನ್ನು ತೋರಿಸಿ ಧರ್ಮಧ್ವಜವನ್ನು ಎತ್ತಿ ಹಿಡಿದರು. ಪ್ರಯೋಜನವಿಲ್ಲದೇ ಕರ್ಮಗಳನ್ನು ಆಚರಿಸುವುದನ್ನು ಶಂಕರರು ಖಂಡಿಸಿದರು. ಕರ್ಮಗಳೆಲ್ಲವೂ ಬಂದಿರುವುದು ಜ್ಞಾನಾನುಭವಕ್ಕಾಗಿಯೇ. ಅದನ್ನು ಮರೆತು ಶುಷ್ಕವಾಗಿ ಯಾರೂ ಕರ್ಮಗಳನ್ನು ಆಚರಿಸುವಂತಾಗದೆ ಜೀವಂತವಾಗಿ ಬ್ರಹ್ಮನ ಅನುಭವ ಉಂಟಾಗಲು ಬೇಕಾದ ಕರ್ಮಾಚರಣೆಗೆ ಎಲ್ಲರನ್ನೂ ಪ್ರೇರಿಸಿದರು.

ಚತುರಾಮ್ನಾಯ ಪೀಠಗಳು ; 
ಎಲ್ಲರೂ ಒಂದು ಸಂಸ್ಕೃತಿ ಸೂತ್ರದಲ್ಲಿ ಧರ್ಮ,ಅರ್ಥ,ಕಾಮ,ಮೋಕ್ಷಗಳೆಂಬ ಪುರುಷಾರ್ಥಗಳನ್ನು ಅನುಭವಿಸುತ್ತಾ, ನೆಮ್ಮದಿಯಿಂದ ಬಾಳುವಂತಾಗಲು ದೇಶದ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಆಮ್ನಾಯ ಪೀಠಗಳನ್ನು ಸ್ಥಾಪಿಸಿ ಅಲ್ಲಿ ಇಡೀ ಭಾರತೀಯ ಸಮಾಜದಲ್ಲಿ ನೈಜವಾದ ಜೀವನ ದೃಷ್ಟಿಯನ್ನು ಬೆಳೆಸುವ ಕಾರ್ಯ ನಿರಂತರವಾಗಿ ನಡೆಯುವಂತೆ ವ್ಯವಸ್ಥೆಗೊಳಿಸಿದರು. ಅದು ಚ್ಯುತಿ ಇಲ್ಲದಂತೆ ಸಾಗಲು ತಮ್ಮ ನಾಲ್ಕುಜನ ಜ್ಞಾನೀ ಶಿಷ್ಯರನ್ನು ಈ ನಾಲ್ಕೂ ಪೀಠಗಳಿಗೆ ನಿಯುಕ್ತಿಗೊಳಿಸಿದರು. ಶಂಕರ ಭಗವತ್ಪಾದರ ಜೀವನವನ್ನು ಇಷ್ಟು ಚಿಕ್ಕ ಲೇಖನದಲ್ಲಿ ಸೆರೆಹಿಡಿಯುವುದು ಸಾಧ್ಯವಿಲ್ಲದಮಾತು. ಆದರೂ ಶಂಕರ ಜಯಂತಿಯ ಪರ್ವದಿನದಂದು ಆ ಮಹಾಪುರುಷನ ಸವಿನೆನಪು ನಮ್ಮೆಲ್ಲರ ಜೀವನದ ಕೈದೀವಿಗೆಯಾಗಿ ಸದಾ ನಮ್ಮ ಜೊತೆಯಾಗಿರಲಿ ಎಂಬ ಆಶಯವಷ್ಟೇ ಈ ಕಿರು ಬರಹದ ಉದ್ದೇಶ. ಇಷ್ಟೆಲ್ಲಾ ಸಾಧನೆಗಳನ್ನು ಕೇವಲ ೩೨ ವರ್ಷದಲ್ಲಿ ಅದೂ ಕಾಲ್ನಡಿಗೆಯಲ್ಲಿ ಶಂಕರ ಭಗವತ್ಪಾದರು ಸಮರ್ಥವಾಗಿ ನಿರ್ವಹಿಸಿದರು ಎಂದರೆ ಅವರು ಎಂಟನೇ ಶತಮಾನದ ಅದ್ಭುತವಲ್ಲವೇ?

ಸೂಚನೆ: 30/03/2020 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಮತ್ತು 02/04/2020 ರಂದು ವಿಶ್ವವಾಣಿಯ ಗುರುಪುರವಾಣಿ ಪ್ರಕಟವಾಗಿದೆ.

Saturday, March 28, 2020

Hanuman’s Ideal and its Result

Kannada Article by: Vadhi Raj Prasanna
English Rendering by: M R Bhashyam
(Respond to lekhana@ayvm.in)

It was ten months since the Monarch of Shri Lanka, Raavana, had abducted Seeta and kept her a captive in his pleasure orchard, the Ashokavana.  Having begged Seeta for her love many times and having been repeatedly rejected, Raavana reaches the limit of his frustration.  He gives her one last two-month deadline, and in anger, orders his servants that, if Seeta were not to accede to his request, she be made mince- meat and served for breakfast.
Seeta has no wish to address directly the evil-doer Raavana, but keeps a piece of grass in-between and says "You may eat me or do whatever you may wish to, but you cannot take away my celibacy, my devotion to my Husband (paativratya).  Besides, you will not be able to win a war against Raama and you will be annihilated by his sharp arrows".
Having been pushed to the depths of despair, Seeta decides to give her life up.   She ties her long hair to a branch of a tree and attempts to commit suicide. At that very moment, Hanuman, Shree Raama's emissary in search of Seeta, arrives in Ashokavana. His first sight is that of Seeta trying to end her life. Without getting perturbed, with great composure and presence of mind, he melodiously sings the glorious saga of Raama's dynasty, so as to induce composure in her and to turn her away from her attempt. He also muses that he was seeing the personality of Seeta as described by Raama in the lady before him - the height, the color and other features. Listening to these words, Seeta is distracted and searches for the soothing voice whence it came from.  Soon Hanuman comes near Seeta and hands over the ring given by Raama and tells her that he was Shree Raama's messenger and had come in search of her.  We all know the subsequent happy ending for this story.
It has been thousands of years since this story was enacted. It is relevant even today. Raavana, forgetting what legitimately belonged to him, falls prey to the temptation of his senses seeking things that were not his and unattainable, thus violating the bounds of Dharma. We see similar things in our society too. Raama destroys the evil Raavana and protects Dharma. As such, Seeta too, in her depths of despair, disturbed by the situation she was in, comes to the wrong conclusion. We too face similar situations.
Hearing from Hanuman, nectarine instances from the history of Shri Raama's lineage at the right time, Seeta gains confidence. Hanuman, having placed himself entirely at the service of Shree Raama, with a great presence of mind, saves a disaster from occurring, at the vital moment. Having dedicated his life to Raama, Hanuman had placed Raama at the substratum for all his acts of service. The crossing of the ocean by Hanuman mirrors the crossing of the ocean of life with the grace of the lord of the universe, Raama.  Hanuman by stoking memories of Raama fills Seetha's heart with courage, conviction, patience and fortitude for the wait for Raama's arrival. With his heroics in the battles and his skillful arguments and by his action of setting the city of Lanka ablaze, he torments Raavana's heart with anxiety, at the same time espousing the incomparable valor and heroism of Shree Raama, and the superiority of the path of righteousness, Dharma.
Thus, having completely absorbed Shree Ramaa's heart and acting in consonance with it, Aanjaneya pours the nectar of Shree Raama's saga into the heart of all readers and listeners. Our salutations to that master tutor, the prime life force- Mukhya Praana, who showed to the world what was meant by ideal devotion to Lord Shree Raama.
Note: The Kannada version of this article can be viewed at  AYVM blogs.  

Friday, March 27, 2020

ಒಳಗಿನ ಬ್ರಹ್ಮಜ್ಞಾನಕ್ಕೆ ಬೆಲೆ. ಹೊರ ವೇಷಕ್ಕಲ್ಲ ! (Olagina Bhrahmajnanakke Bele. Hora Veshakkalla !)

ಲೇಖಕರು: ಸುಬ್ರಹ್ಮಣ್ಯ ಸೋಮಯಾಜಿ 
(ಪ್ರತಿಕ್ರಿಯಿಸಿರಿ : lekhana@ayvm.in)



ಶಂಕರಭಗವತ್ಪಾದರು ಗಂಗಾತೀರದಲ್ಲಿ ಶಿಷ್ಯರೊಡನೆ ಸ್ನಾನಕ್ಕಾಗಿ ಹೋಗುತ್ತಿದ್ದಾಗ ಎದುರಿಗೆ ಚಂಡಾಳನೊಬ್ಬ ನಾಲ್ಕು ನಾಯಿಗಳ ಜೊತೆ ಅತಿ ಮಲಿನವಾದ ಬಟ್ಟೆಗಳನ್ನು ಧರಿಸಿ ದಾರಿಗೆ ಎದುರಾಗಿ ಬಂದನು. ಶಂಕರರು ಅವನ ವೇಷ, ಮಲಿನವಾದ ಬಟ್ಟೆಗಳು ಎಲ್ಲವನ್ನೂ ನೋಡಿ ಸ್ವಲ್ಪ ಅಸಹ್ಯವಾಗಿ, ಲೇ ಚಂಡಾಳ, ದೂರಸರಿ ಎನ್ನುತ್ತಾರೆ. ಚಂಡಾಳನಾದರೋ ಇವರನ್ನು ನೋಡಿ ನಗುತ್ತಾನೆ. ಶಂಕರರು ತುಸು ಆಶ್ಚರ್ಯದಿಂದಲೇ ಮತ್ತೊಮ್ಮೆ ದೂರಸರಿ ಎನ್ನುತ್ತಾರೆ. ಆಗ ಚಂಡಾಲನ ಮುಖದಿಂದ ಹೊರಡುವ ಮಾತುಗಳಿವು- "ಎಲೈ ಯತಿಯೇ, ನಿನಗಿನ್ನೂ ಭ್ರಮೆ ಹೋಗಿಲ್ಲವೇ? ದೂರ ಸರಿ ಎಂದುದು ಯಾವುದಕ್ಕೆ? ದೇಹಕ್ಕೆ ಹೇಳಿದ್ದರೆ, ಅದು ಜಡ. ಅದು ಇದ್ದಲ್ಲಿಂದ ಸರಿಯಲಾರದು. ಒಳಗಿರುವ ಆತ್ಮಕ್ಕೆ ಹೇಳುತ್ತಿರುವಿಯಾದರೆ, ಅದು ಸರ್ವಾಂತರ್ಯಾಮಿ. ಅದು ಎಲ್ಲಿಂದ ಎಲ್ಲಿಗೆ ಸರಿಯಬೇಕು?" ಎಂತಹ ಮನೋಜ್ಞವಾದ ಪ್ರಶ್ನೆ! ಜೀವನದ ಪರಮ ಸತ್ಯವು ಚಂಡಾಲನ ಬಾಯಿಂದ! ಒಡನೆಯೇ ಶಂಕರರು- ಎಂತಹ ಸತ್ಯವನ್ನು ಹೇಳಿದೆ! ಬ್ರಹ್ಮಜ್ಞನಲ್ಲದೇ ಈ ಮಾತನ್ನು ಆಡಲು ಸಾಧ್ಯವಾಗದು. ನಿಜ, ಬ್ರಹ್ಮಜ್ಞಾನಿಯಾದವನು, ಬ್ರಾಹ್ಮಣನಿರಲಿ, ಚಂಡಾಳನಿರಲಿ ನನ್ನ ಗುರುವೆಂದೇ ಭಾವಿಸುವೆ ಎಂದು ಅವನಿಗೆ ಸಾಷ್ಟಾಂಗ ನಮಸ್ಕಾರ ಮಾಡಿದರು. ಚಂಡಾಳ ರೂಪದಿಂದ ಬಂದ ವಿಶ್ವೇಶ್ವರನು ನಾಲ್ಕು ನಾಯಿಗಳ ಜಾಗದಲ್ಲಿ ನಾಲ್ಕು ವೇದಗಳನ್ನು ಹಿಡಿದು ಶಂಕರ ಭಗವತ್ಪಾದರಿಗೆ ದರ್ಶನ ಕೊಟ್ಟನು ಎಂದು ಆಚಾರ್ಯರ ಜೀವನಗಾಥೆಯಲ್ಲಿ ಬರುವ ಒಂದು ಮಾರ್ಮಿಕವಾದ ಘಟನೆ ಇದು. 

ಎಲ್ಲದರ ಹಿಂಬದಿಯಲ್ಲಿ ಬೆಳಗುತ್ತಿರುವ, ಎಲ್ಲದರ ಅಸ್ತಿತ್ವಕ್ಕೆ ಕಾರಣವಾಗಿರುವ ಮಹಾ ಚೈತನ್ಯವೇ ಬ್ರಹ್ಮ. "ಜೀವನ ವಿಕಾಸ ನಡೆಯುತ್ತಿರುವಾಗ ದೇವನಿಂದ ಶಕ್ತಿ ಸಪ್ಲೈ ಆಗುವುದು. ಅದು ನಿಂತರೆ ಯಾವ ಕೆಲಸವೂ ಇಲ್ಲ. ಕರೆಂಟ್ ನಿಂತರೆ ರೇಡಿಯೋ, ಫ್ಯಾನ್ ಎಲ್ಲಾ ನಿಲ್ಲುತ್ತದೆ" ಎಂಬ ಶ್ರೀರಂಗ ಮಹಾಗುರುಗಳ ವಾಣಿ ಇಲ್ಲಿ ಸ್ಮರಣೀಯ. ಪರಮ ಅದ್ವೈತದ ಸ್ಥಿತಿಯಲ್ಲಿ ಎಲ್ಲವೂ ಬ್ರಹ್ಮಮಯ. ಸರ್ವವ್ಯಾಪಿಯಾದ ಬ್ರಹ್ಮವು ಒಂದೆಡೆಯಿಂದ ಇನ್ನೊಂದೆಡೆಗೆ ಹೋಗುವುದಾದರೂ ಹೇಗೆ? ಎಂಬುದರ ಅರಿವಿನ ಪರೀಕ್ಷೆ ಸ್ವಯಂ ವಿಶ್ವೇಶ್ವರನಿಂದಲೇ ಚಂಡಾಳ ರೂಪದಿಂದ ನಡೆಯಿತು. ಶಂಕರರು ಸತ್ಯಕ್ಕೆ ಶರಣಾದರು. ಅದರ ಪರಿಣಾಮವಾಗಿ ಮನೀಷಾ ಪಂಚಕವೆಂಬ ದಿಗ್ದರ್ಶಕವಾದ ಸ್ತೋತ್ರವನ್ನು ರಚಿಸಿ ಭಗವಂತನಿಗೆ ಸಮರ್ಪಿಸಿದರು. ಶಂಕರರ ಬೌದ್ಧಿಕ ಪ್ರಾಮಾಣಿಕತೆಗೆ ಹಿಡಿದ ಕನ್ನಡಿ ಈ ಘಟನೆ. ಸತ್ಯದರ್ಶನ ಮಾಡಿಸಿದ (ಅಥವಾ ಶಂಕರರ ವಿಷಯದಲ್ಲಿ ಅದನ್ನು ಸ್ಮರಣೆಗೆ ತಂದ) ಚಂಡಾಳನನ್ನೂ ತನ್ನ ಗುರು ಎನ್ನಲು ಅವರು ಹಿಂಜರಿಯಲಿಲ್ಲ. ಒಳಗೆ ಬೆಳಗುವ ಸತ್ಯರೂಪಿ ಬ್ರಹ್ಮಕ್ಕೆ ಬೆಲೆ. ಅದರ ಅನುಭವದಲ್ಲಿ ಸುಖಿಸುವವನ ಹೊರವೇಷ ಹೇಗಾದರೂ ಇರಲಿ. ಅದು ಗೌಣವಾಗುತ್ತದೆ ಎಂಬ ಪಾಠವನ್ನು ಈ ಘಟನೆ ಸಾರುತ್ತಿದೆ. 

ಶಂಕರಭಗವತ್ಪಾದರ ಜೀವನೋದ್ದೇಶ ಆ ಪರಮ ಸತ್ಯವನ್ನು ಪ್ರತಿಷ್ಠಾಪಿಸುವುದೇ ಆಗಿತ್ತು. ಎಂದೇ ಅವರ ಜೀವನ ಇಂತಹ ಉದ್ಬೋಧಕವಾದ ಅನೇಕ ಸನ್ನಿವೇಶಗಳಿಂದ ತುಂಬಿದೆ. ಎಲ್ಲವೂ ಸಾರ್ವಕಾಲಿಕ ಸತ್ಯದ ಅನಾವರಣ.ಎಲ್ಲಕಾಲಕ್ಕೂ ಪ್ರಸ್ತುತವೇ ಎಂಬುದನ್ನು ಮರೆಯದಿರೋಣ.

ಸೂಚನೆ: 27/03/2020 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ಅಂಕಣದಲ್ಲಿ ಪ್ರಕಟವಾಗಿದೆ.

ಯುಗಾದಿ - ಋಷಿದೃಷ್ಟಿ (Ugadi - Rusidrusti)

ಲೇಖಕರು: ಡಾII ಯಶಸ್ವಿನೀ
ಆಯುರ್ವೇದ ವೈದ್ಯೆ
(ಪ್ರತಿಕ್ರಿಯಿಸಿರಿ lekhana@ayvm.in)


ಯುಗಾದಿಹಬ್ಬ ಎಂದರೆ ಸಡಗರ, ಸಂಭ್ರಮ. ಕೆಲಸಕ್ಕೆ ರಜೆ ಇರುವ ದಿನ. ನವ ವಸ್ತ್ರ ಧರಿಸಿ, ಬಗೆ ಬಗೆ ಹೂವುಗಳಿಂದ ಭಗವಂತನ ಪೂಜೆಯ ಮಾಡಿ, ಬೇವು ಬೆಲ್ಲ ತಿಂದು ಪಂಚಾಂಗ ಶ್ರವಣ ಮಾಡಿ, ಹಬ್ಬದ ಅಡುಗೆಯ ಸವಿಯುವ ದಿನ. ವರ್ಷವಿಡೀ ಸಿಹಿ, ಕಹಿ ಅನುಭವಗಳನ್ನು ಸಂಪೂರ್ಣ ಭಗವದರ್ಪಣೆ ಮಾಡುತ್ತೇವೆ. ಸಿಹಿ, ಕಹಿಯನ್ನು ಸಮವಾಗಿ ಕಾಣುತ್ತೇನೆ ಎಂಬ ಮನಸ್ಸಿನಲ್ಲಿ ವರ್ಷವನ್ನು ಆರಂಭಮಾಡುವ ದಿನ. ಇಂದು ಹೊಸ ಸಂಕಲ್ಪಗಳನ್ನು ಪ್ರಾರಂಭಿಸಲು ಯೋಗ್ಯವಾದ ದಿನ. ಇಂದು ವರ್ಷಾದ್ಯಂತ ಆಚರಿಸುವ ಸತ್ಕಾರ್ಯ, ಜಪ ಮುಂತಾದ ಒಳ್ಳೆಯ ಕಾರ್ಯಗಳನ್ನು ಪ್ರಾರಂಭಿಸಲು, ಸಂಕಲ್ಪ ಮಾಡಲು ಪ್ರಶಸ್ತವಾದ ದಿನ. ನಮ್ಮ ಮನೆಯಲ್ಲಿ ಹಿರಿಯರು ಹೇಳುವುದನ್ನು ಕೇಳಿರುತ್ತೇವೆ- ಇವತ್ತು ಬೇಗನೆ ಏಳು. ತಡವಾಗಿ ಎದ್ದರೆ ವರ್ಷವಿಡೀ ತಡವಾಗಿ ಏಳುತ್ತೀಯ ಎಂದು ಇವತ್ತು ಕೋಪ, ಹಠ ಮಾಡಬಾರದು, ಅಳಬಾರದು, ನಗುನಗುತ್ತಾ ಸಂತೋಷದಿಂದಿರು. ಆಗ ವರ್ಷವಿಡೀ ಸಂತೋಷದಿಂದ ಸಮಾಧಾನದಿಂದ ಇರುತ್ತೀಯ ಎಂದು. ಈ ವಿಚಾರಗಳು ಮನೆಮನೆಗಳಲ್ಲಿ ಸಂಸ್ಕಾರ ರೂಪದಲ್ಲಿ ಬಂದಿರುವುದು ಎಲ್ಲರಿಗೂ ತಿಳಿದಿರುವ ವಿಚಾರಗಳು. 

ಜಿಜ್ಞಾಸೆ 
ಈಗಿನ ಜೀವನಶೈಲಿಗೆ ಇವೆಲ್ಲವೂ ಕಾಲಬಾಹಿರ ವಿಷಯಗಳು ಎನ್ನಿಸಬಹುದು. ವರ್ಷದ ಮೊದಲ ರಜೆ. ರಜೆದಿನ ಹೊಸತಿಂಡಿ ಮನೆಕೆಲಸ ಅಂತ ಮತ್ತೆ ಆಯಾಸ ಮಾಡಿಕೊಳ್ಳುವುದಕ್ಕಿಂತ ಹಾಯಾಗಿ ಸ್ವಿಗ್ಗಿಯಲ್ಲಿ ಸುಗ್ಗಿಯ ಅಡುಗೆ ಆರ್ಡರ್ ಮಾಡಬಹುದಲ್ಲ? ಎಂಬ ಯೋಚನೆ ಬರಬಹುದು. ಅಥವಾ ಫ್ಯಾಮಿಲಿ ಔಟಿಂಗ್ ಪ್ರವಾಸಕ್ಕೆ ಹೋಗಿ ಶ್ರಮವನ್ನು ಕಳೆದುಕೊಂಡು ಬರಬಹುದಲ್ಲ ಎಂಬ ಚಿಂತನೆಗಳೂ ಈಗ ಸಹಜವಾಗಿವೆ.ಈ ಹಬ್ಬದ ಪರಿಪೂರ್ಣ ಉಪಯೋಗ ಏನು? ಪ್ರಯೋಜನೆ ಏನು? ಎಂಬ ಶಿಕ್ಷಣ ಇಲ್ಲದಿರುವುದರಿಂದ ಈ ರೀತಿಯಾದ ಬಗೆ ಬಗೆ ಯೋಚನೆಗಳು ಸಹಜ. ಭಾರತೀಯರ ಹಬ್ಬಗಳು ಕ್ಯಾಲೆಂಡರ್ ದಿನಾಂಕ ಆಧಾರಿತ ಹಬ್ಬಗಳಲ್ಲ. ಪ್ರಕೃತಿಯಲ್ಲಿ, ಬ್ರಹ್ಮಾಂಡದಲ್ಲಿ ಒಂದು ನಿರ್ದಿಷ್ಟ ಬದಲಾವಣೆ ಉಂಟಾಗುತ್ತದೆ. ಗ್ರಹ, ತಿಥಿ, ಮಾಸ, ರಾಶಿ, ಋತುಗಳಲ್ಲಿ ಒಂದು ಯೋಗ ಉಂಟಾಗುತ್ತದೆ. ಅದನ್ನು ಪ್ರಮಾಣಿಸಿಯೂ ನೋಡಬಹುದು. ಅದೇ ಬದಲಾವಣೆ, ನಮ್ಮ ಪಿಂಡಾಂಡದಲ್ಲಿ (ದೇಹ)ಯೂ ಉಂಟಾಗುತ್ತದೆ. ಇದು ಋಷಿ ಮಹರ್ಷಿಗಳು ತಮ್ಮ ಅನುಭವದಿಂದ ನಮಗೆ ತಿಳಿಸಿಕೊಟ್ಟಿರುವ ವೈಜ್ಞಾನಿಕ ಸತ್ಯ. 

 ಹಿನ್ನೆಲೆ 
ಯುಗಾದಿಯನ್ನು ಒಂದು ಪರ್ವ ಎಂದು ಕರೆಯುತ್ತಾರೆ. ಪರ್ವ ಎಂದರೆ ಗಿಣ್ಣು ಎಂದರ್ಥ. ಕಬ್ಬಿನಲ್ಲಿ ಗಿಣ್ಣುಗಳನ್ನು ನೋಡುತ್ತೇವೆ. ಈ ಗಿಣ್ಣುಗಳಿಗೆ ಪರ್ವ ಎಂದು ಹೆಸರು. ಇದು ಹಳೆಯದಕ್ಕೆ ಅಂತ್ಯ, ಮುಂದಿನದಕ್ಕೆ ಪ್ರಾರಂಭ. ಒಂದು ಸಂಧಿಯ ಕಾಲ. ಇಂತಹ ಸಂಧಿಕಾಲದಲ್ಲಿ ನಮ್ಮ ಶರೀರದಲ್ಲಿ ಭಗವತ್ ಕಾರ್ಯಕ್ಕೆ ಅನುಕೂಲತೆ ಏರ್ಪಡುತ್ತದೆ. ಸಾತ್ವಿಕ ಪ್ರವೃತ್ತಿ ಹೆಚ್ಚಾಗಿ ಇರುವಂತಹ ಅಂತಹ ವಿಶೇಷ ದಿನಗಳಲ್ಲಿ ಯುಗಾದಿ ಒಂದು. ರಾತ್ರಿ ಕಳೆದು ಹಗಲು, ಹಗಲು ಕಳೆದು ಮಧ್ಯಾಹ್ನ, ಮಧ್ಯಾಹ್ನ ಕಳೆದು ರಾತ್ರಿ. ಹೀಗೆ ಒಂದು ದಿನದಲ್ಲಿ ಮೂರು ಸಂಧ್ಯಾಕಾಲಗಳು ಸಂಭವಿಸುತ್ತದೆ. ಈ ಸಂಧ್ಯಾಕಾಲಗಳು ಯೋಗಸಾಧನೆಗೆ, ಸಂಧ್ಯಾವಂದನೆಗೆ, ಧ್ಯಾನ, ಪ್ರಾರ್ಥನೆ, ಭಜನೆ, ಪೂಜಾ, ಮಂಗಳಾರತಿಗೆ ಯೋಗ್ಯಕಾಲ. ಸಂಧ್ಯಾಕಾಲದಲ್ಲಿ ಸಾತ್ವಿಕ ಪ್ರವೃತ್ತಿ ಹೆಚ್ಚಾಗಿ ಇರುವಂತಹ ಕಾಲ. ಹಾಗೆಯೇ ಇಡೀ ಒಂದು ವರ್ಷದಲ್ಲಿ ಆತ್ಮಸಾಧನೆಗೆ, ಭಗವಂತನ ಅನುಗ್ರಹಕ್ಕೆ ಯೋಗ್ಯ ಕಾಲಗಳು ಒದಗಿಬರುತ್ತದೆ. ಅಂತಹ ದಿನಗಳಲ್ಲಿ ಗ್ರಹ, ನಕ್ಷತ್ರಾದಿಗಳಲ್ಲಿ ಯೋಗ ಉಂಟಾದಾಗ ಅವುಗಳನ್ನು ಹಬ್ಬಗಳನ್ನಾಗಿ ಆಚರಿಸುತ್ತಿದ್ದೇವೆ. ಗಣೇಶನ ಅನುಗ್ರಹಕ್ಕೆ ಅನುಕೂಲವಾದ ತಿಥಿ, ಪಕ್ಷದಂದು ಗಣಪತಿ ವ್ರತ ಆಚರಿಸುತ್ತಿದ್ದೇವೆ. ನಮ್ಮ ಪೂರ್ವಜರಾದ ಆರ್ಯ ಋಷಿಗಳು ಆಯಾ ದೇವತಾ ಅನುಗ್ರಹಕ್ಕೆ ಸಹಜವಾಗಿ ಯೋಗ ಕೂಡಿಬರುವುದನ್ನು ಗುರುತಿಸಿ ಹಬ್ಬಕ್ಕೆ ಒಂದು ಚೌಕಟ್ಟು ಹಾಕಿಕೊಟ್ಟಿರುತ್ತಾರೆ. ಹಬ್ಬ ಯಾವ ಋತುವಿನಲ್ಲಿರುತ್ತದೆಯೋ ಅದಕ್ಕೆ ತಕ್ಕಂತಹ ಆಹಾರ, ಭಕ್ಷ್ಯ ಅಂದು ಮಾಡುವ ಸಂಪ್ರದಾಯವಿದೆ. ಆಯಾ ದೇವತಾ ಪ್ರಸನ್ನತೆಗೆ ನಮ್ಮೀ ಶರೀರವು ಬಿಟ್ಟುಕೊಡುವಂತೆ ನಮ್ಮಲ್ಲಿ ಧಾತುಸಾಮ್ಯತೆ ಉಂಟಾಗುವಂತೆ ಮಾಡುವ ವ್ಯವಸ್ಥೆ ಇದು. ರಾಮನವಮಿಯಲ್ಲಿ ಬಿಸಿಲ ಬೇಗೆಗೆ ಶರೀರದಲ್ಲಿಯ ಉಷ್ಣತೆ ಕಡಿಮೆ ಮಾಡಿ ಧಾತು ಸಾಮ್ಯತೆ ತರಲು ಕೋಸಂಬರಿ, ಪಾನಕ, ಗಣೇಶ ಚತುರ್ಥಿಯಂದು ಮೂಲಾಧಾರಕ್ಕೆ ಪುಷ್ಟಿಯನ್ನು ನೀಡುವ ಚಕ್ಕಲಿ ಭಕ್ಷ್ಯ ಸೇವನೆ ಮಾಡುವ ಕ್ರಮ ಇರುವುದಾಗಿದೆ.

ಶಾರ್ವರಿ ವರ್ಷಾರಂಭ
ಪ್ರಸ್ತುತ ಯುಗಾದಿ ಹಬ್ಬದಂದು ಪ್ರಕೃತಿಯಲ್ಲಿ ಹೊಸತನ-ಹೊಸ ಚಿಗುರುಗಳು ಮೊಳೆಯುವ ಕಾಲ. ಹೂವು ಬಿರಿಯುವ ಕಾಲ. ಎಲ್ಲಾ ಜೀವ ಜಂತುಗಳಲ್ಲಿಯೂ ನವನವೀನತೆಯು ಮೊಳೆಯುವ ಕಾಲ. ಯುಗದ ಆದಿಯ ದಿನವಾದ ಇಂದು ಚೈತ್ರ ಮಾಸಕ್ಕೆ ಪ್ರಥಮ ತಿಥಿ. ಪ್ರಥಮ ಋತುವಿಗೆ, ಹೊಸ ಶಾರ್ವರಿ ಸಂವತ್ಸರಕ್ಕೆ ಪ್ರಥಮ ದಿನ. ಇಂತಹ ಶುಭ ದಿನದಂದು ನಮ್ಮ ಶರೀರದಲ್ಲಿ ನವೀನತೆ ಉಂಟಾಗಲು ಎಳ್ಳೆಣ್ಣೆಯಿಂದ ಅಭ್ಯಂಜನವನ್ನು ಮಾಡುವುದಿದೆ. ಸೃಷ್ಟಿಕರ್ತನಾದ ಬ್ರಹ್ಮನು ಸೃಷ್ಟಿಯನ್ನು ಮೊದಲು ಮಾಡಿದ ದಿನ. ಕೃತಯುಗದ ಪ್ರಾರಂಭದ ದಿನ. ಆದ್ದರಿಂದಲೇ ಕೃತಯುಗದ ಲಕ್ಷಣಗಳು ಈ ಯುಗಾದಿ ದಿನದಂದು ಇರುತ್ತದೆ. ವಸಂತ ಮಾಸದಲ್ಲಿ ಬಿಸಿಲಿನ ಬೇಗೆಗೆ ಕರಗುವ ಕಫ ಭಗವತ್ ಕಾರ್ಯಕ್ಕೆ ಅಡ್ಡಿಬಾರದಿರಲೆಂದು ಬೇವು ತಿನ್ನುವ ಒಂದು ಪದ್ಧತಿಯನ್ನು ತಂದಿದ್ದಾರೆ.

ಶತಾಯುರ್ವಜ್ರದೇಹಾಯ ಸರ್ವಸಂಪತ್ಕರಾಯಚ| 
ಸರ್ವಾರಿಷ್ಟವಿನಾಶಾಯ ನಿಂಬಕಂದಳಭಕ್ಷಣಂ|| 

ಬೇವಿನ ಕಹಿ ಬೇವು ತಿನ್ನುವುದರಿಂದ, ಹೃದಯಕ್ಕೆ ಖಿನ್ನತೆ ಉಂಟಾಗುತ್ತದೆ. ಲೆಕ್ಕರಸ, ವಾತ ಪ್ರಕೋಪಕ್ಕೂ ಕಾರಣವಾಗುತ್ತದೆ. ಧಾತುಗಳಲ್ಲಿ ವೈಷಮ್ಯತೆ ಉಂಟುಮಾಡದಿರಲೆಂದು ಬೇವಿನೊಂದಿಗೆ ಬೆಲ್ಲ ಸೇರಿಸಿ ಭಕ್ಷಿಸುವ ಕ್ರಮ ಬಂದಿದೆ. ಹಬ್ಬವನ್ನು ಸತ್ಯ ವಿಧಾನವಾದ ಮನಸ್ಸಿನಿಂದ, ನಿಷ್ಠೆಯಿಂದ ಆಚರಿಸೋಣ. ಹಬ್ಬದ ಸಂಪೂರ್ಣ ಪ್ರಯೋಜನವನ್ನು ಪಡೆಯೋಣ. ವಿಶ್ವವನ್ನೆಲ್ಲಾ ವ್ಯಾಪಿಸಿ ಬೆಳಗುತ್ತಿರುವ ಲೋಕವಂದ್ಯನೂ ಮಹಾಯೋಗೇಶ್ವರನೂ, ಸುರೇಶ್ವರನೂ ಆದ ಭಗವಂತನನ್ನು ನಮ್ಮಲ್ಲಿ ನಾವು ಕಾಣುವಂತಾಗಲಿ. ಎಲ್ಲರಿಗೂ ಸುಖ, ಶಾಂತಿ ನೆಮ್ಮದಿಯು ದೊರಕಲಿ.

ಯುಗಾದಿಯ ಆಚರಣೆ 
ಯುಗಾದಿಯ ಶಾಸ್ತ್ರ ಸಂಪ್ರದಾಯಗಳ ಗುರಿಯು ಪುರಷಾರ್ಥಗಳ ಸಿದ್ಧಿ. ಅಂದರೆ ಧರ್ಮ, ಅರ್ಥ, ಕಾಮ, ಮೋಕ್ಷಗಳೆಂಬ ನಾಲ್ಕೂ ಫಲಗಳನ್ನು ಪಡೆಯುವುದೇ ಆಗಿದೆ. ದೇಹ, ಇಂದ್ರಿಯ, ಮನಸ್ಸು, ಬುದ್ಧಿ ಎಲ್ಲದಕ್ಕೂ ಒಳ್ಳೆಯದನ್ನು ಮಾಡುವ ಪದಾರ್ಥಗಳನ್ನು ಅಂದು ಸೇವಿಸಬೇಕೆಂಬುದೇ ಇದರ ಉದ್ದೇಶ. ಯಾಂತ್ರಿಕವಾಗಿ ಸೇವನೆ ಮಾಡದೆ ಸಂಕಲ್ಪ ಸಹಿತವಾಗಿ, ಅಂತರಂಗದಲ್ಲಿರುವ ದೇವತೆಗಳ ಆರಾಧನೆಯೊಡನೆ ಸ್ವೀಕರಿಸಬೇಕೆಂದು ಋಷಿಗಳ ಆಶಯ. ಅಭ್ಯಂಗ: ಪ್ರಾತ:ಕಾಲದಲ್ಲಿ "ಅಭ್ಯಂಗ" ಮಾಡಿಕೊಳ್ಳಬೇಕು. ಎಳ್ಳೆಣ್ಣೆಯಿಂದಲೇ ಅಭ್ಯಂಗ ಮಾಡಿಕೊಳ್ಳುವುದು ಪ್ರಶಸ್ತ. ಅಭ್ಯಂಗವನ್ನು ಪ್ರತಿದಿನವೂ ಆಚರಿಸಬೇಕು. ಅದು ಮುಪ್ಪು, ಆಯಾಸ, ವಾತದ ದೋಷಗಳನ್ನು ನಿವಾರಣೆ ಮಾಡುವುದು. ದೃಷ್ಟಿಪಾಟವವನ್ನು ಕೂಡುವುದು. "ಪುಷ್ಟಿ" ಆಯಸ್ಸು, ನಿದ್ರೆಯ ಸೌಖ್ಯ ಇವುಗಳನ್ನುಂಟುಮಾಡುವುದು. ಚರ್ಮದ ಆರೋಗ್ಯ, ಸೌಂದರ್ಯ ಧೃಢತೆಗಳನ್ನು ತಂದುಕೊಡುವುದು ಎಂದು ಆಯುರ್ವೇದವು ಹೇಳುತ್ತದೆ. ಇದರಿಂದ ದೈಹಿಕ, ಮಾನಸಿಕ ಎರಡು ವಿಧವಾದ ಆರೋಗ್ಯವು ಕೂಡಿ ಬರುತ್ತದೆ. ಯುಗಾದಿ ದಿನದಂದು ಸಂಕಲ್ಪಪೂರ್ವಕವಾಗಿ ಈ ಆಭ್ಯಂಗವನ್ನು ಕೈಗೊಂಡರೆ, ನಿತ್ಯವೂ ಅಭ್ಯಂಗವನ್ನು ಆಚರಿಸುವಂತಾಗುತ್ತದೆ. ದೇಹವು ಹಗುರವಾಗುತ್ತದೆ. ಅಂದು ಅಚರಿಸಬಹುದಾದ ಆರೋಗ್ಯವ್ರತಕ್ಕೂ ಇದು ನಾಂದಿಯಾಗುತ್ತದೆ. ಭೌತಿಕ ಲಾಭಗಳೊಂದಿಗೆ ಭೋಗಪ್ರದವಾದ ಆಚರಣೆಯಾದರೂ ಯೋಗಕ್ಕೆ ಅನುಕೂಲಕರ ಈ ಅಭ್ಯಂಗ. ದೇಹ, ಇಂದ್ರಿಯ ಮನಸ್ಸನ್ನು ಹಗುರಗೊಳಿಸುತ್ತದೆ.

ಗೃಹಾಲಂಕಾರ-ಪೂಜೆ 
ಗೃಹಾಲಂಕಾರ:- ತಳಿರು ತೋರಣಗಳಿಂದ, ರಂಗವಲ್ಲಿ, ಹೂ ಅಲಂಕಾರಗಳಿಂದ ಇಂದು ಮನೆಯನ್ನೂ, ಪೂಜಾಗೃಹವನ್ನೂ ವಿಶೇಷವಾಗಿ ಅಲಂಕರಿಸಬೇಕು. ಕಣ್ಣುಗಳಿಗೆ ಹಬ್ಬವಾಗಿ ಮನಸ್ಸನ್ನು ಹಸಿರನ್ನಾಗಿ ಮಾಡುತ್ತದೆ. ಮನಸ್ಸನ್ನು ದಿವ್ಯಭಾವಕ್ಕೆ ಒಯ್ಯುವ ಪದಾರ್ಥಗಳ ಮತ್ತು ಕಲಾಕೃತಿಯ ಸೌಂದರ್ಯದಿಂದ ಅಲಂಕರಿಸಬೇಕು. ಪೂಜೆ: ನಿತ್ಯವೂ ಪೂಜೆ ಮಾಡಬೇಕು. ಇಂದಿನ ದಿನ ಪ್ರಜಾಪತಿಯು ಸೃಷ್ಟಿಯ ಆರಂಭ ಮಾಡಿದ್ದರಿಂದ ಪ್ರಜಾಪತಿ/ಕಾಲಪುರುಷನನ್ನು ಇಂದು ಪೂಜಿಸಬೇಕು. ಭಗವಂತ, ನಿನ್ನ ದೇಹವಾಗಿರುವ ಈ ಕಾಲದಲ್ಲಿ ಪರ್ವಸ್ಥಾನಗಳನ್ನು ಅರಿತು ಅವುಗಳನ್ನು ಅರ್ಥವತ್ತಾಗಿ ಆಚರಿಸಿ ಕಾಲವನ್ನೇ ದಾಟಿ ನಿನ್ನನ್ನು ಸೇರುವ ಸಾಧನೆಗಾಗಿ ಸಂಸಾರಸಾಗರದಿಂದ ಮುಕ್ತರಾಗುವಂತೆ ಮಾಡು ಎಂಬ ಅರಿಕೆಯನ್ನು ಇಡುವುದು ಉಚಿತವಾಗಿದೆ. 

ಪಂಚಾಗ ಶ್ರವಣ
ಪಂಚಾಗ ಶ್ರವಣ: ತಿಥಿ, ವಾರ, ನಕ್ಷತ್ರ, ಯೋಗ, ಕರಣ ಇವುಗಳ ಜ್ಞಾನದೊಡನೆಯೇ ಪ್ರತಿದಿನ ವ್ಯವಹರಿಸಬೇಕು. ಕಡೇಪಕ್ಷ ಅವುಗಳ ತಿಳುವಳಿಕೆಯಾದರೂ ಇರಬೇಕು. ಯುಗದ ಆದಿಯ ದಿನವಾದ ಇಂದು, ಇಂದಿನ ದಿನದ ಪಂಚಾಂಗದ ಜೊತೆಗೆ, ಇಡೀ ಸಂವತ್ಸರದ ಪಂಚಾಂಗವನ್ನು, ಸಾಮಾನ್ಯವಾದ ಯೋಗವನ್ನು ಕೇಳಿ ತಿಳಿದರೆ ಅದಕ್ಕೆ ತಕ್ಕಂತೆ ವರ್ಷದ ಕಾರ್ಯಯೋಜನೆ ಹಾಕಿಕೊಳ್ಳಲು ಸಹಾಯವಾಗುವುದು ಎಂದು. ಈ ರೀತಿಯಾಗಿ ಪಂಚಾಂಗ ಶ್ರವಣ ಮಾಡುವ ಜ್ಯೋತಿಷರಿಗೆ ಕೃತಜ್ಞತೆಯಿಂದ ಯಥೋಚಿತ ಸಂಭಾವನೆ ನೀಡುವುದು ಕ್ರಮ. ದಾನ: ಯುಗಾದಿಯ ಪರ್ವದಲ್ಲಿ ಸಾಮಾನ್ಯವಾದ ಅನ್ನದಾನ ಮುಂತಾದವುಗಳ ಜೊತೆಗೆ, ವಿಶೇಷವಾಗಿ ಪಂಚಾಂಗ, ಮತ್ತು ವಸ್ತ್ರಭೂಷಣಗಳನ್ನು ದಾನಮಾಡಬೇಕಂತೆ. ವಸಂತ ಋತುವಿನಲ್ಲಿ ಉಷ್ಣತೆ ಹೆಚ್ಚು ಇರುವುದರಿಂದ ಅಂದು ನೀರಿನ ಪಾತ್ರೆಗಳನ್ನು, ದೇವಸ್ಥಾನಾದಿ ಜಾಗಗಳಲ್ಲಿ ಸಿಹಿನೀರು, ಮಜ್ಜಿಗೆ, ಪಾನಕ ಮುಂದಾದವುಗಳನ್ನು ದಾನ ಮಾಡುವುದು ಕಾಲೋಚಿತವಾದ ದಾನವೇ ಆಗುತ್ತದೆ.

 ನೈವೇದ್ಯ
ಇಂದು ಅರ್ಪಿಸಿ ಸೇವಿಸಬೇಕಾದ ವಿಶೇಷವಾದ ನೈವೇದ್ಯ "ಬೇವು" ಹೂವಿನೊಡನೆ ಕೂಡಿದ ಚಿಗುರಬೇವು, ಬೇವು ಅಸ್ಥಿಗತವಾದ ರೋಗವನ್ನೂ ವಿಷದ ಸೋಂಕನ್ನೂ ನಿವಾರಿಸುವ ಮಹೌಷಧಿ. ಬೇವಿನಿಂದ ಉಂಟಾಗುವ ವಾತ ವೃದ್ಧಿಯನ್ನು ಶಮನ ಮಾಡಲು ಸುಲಭವಾಗಿ ತಿನ್ನಲಾಗುವಂತೆ ಬೆಲ್ಲದೊಂದಿಗೆ ತಿನ್ನಬೇಕು. ಬೇವಿನ ಚಿಗುರೆಲೆಯ ಪಲ್ಯವು ಯುಗಾದಿಯ ದೇವತೆಯಾದ ಪ್ರಜಾಪತಿ ಕಾಲಪುರಷನಿಗೆ ಅತಿಪ್ರಿಯವಾದುದು.

ಯುಗಾದಿ 
ಯುಗಾದಿ ಎಂಬ ಪದವೇ ಹೇಳುವಂತೆ, "ಯುಗಸ್ಯ ಆದಿ" ಯುಗಾದಿ, ಯುಗದ ಪ್ರಾರಂಭ ಎಂದರ್ಥ. ಯುಗ ಎಂದರೆ ಜೋಡಿ-ನೊಗ ಎಂಬ ಅರ್ಥಗಳಿವೆ. ಪ್ರಕೃತಿ-ಪುರುಷ ಶಕ್ತಿಗಳು ಕೂಡಿ ಸೃಷ್ಟಿ ಪ್ರಾರಂಭಿಸಿದ ದಿನ. ಯುಗಗಳು ನಾಲ್ಕು. ಸತ್ಯಯುಗ, ತ್ರೇತಾಯುಗ, ದ್ವಾಪರಯುಗ, ಕಲಿಯುಗ ಎಂದು. ಶ್ರೀರಂಗಮಹಾಗುರುಗಳು ತಮ್ಮ ಯುಗಾದಿಯ ಸಂದೇಶಾಮೃತದಲ್ಲಿ ಯುಗಾದಿಯನ್ನು ಸತ್ಯಯುಗದ ಆದಿ ಎಂದು ನಿರ್ದೇಶಿಸಿದ್ದಾರೆ. ಬ್ರಹ್ಮನು ಈ ದಿನ ಜಗತ್ತನ್ನು ಸೃಷ್ಟಿಸಿದನು. ಅವನು ಪ್ರಾರಂಭಿಸಿದ್ದು ಸತ್ಯಯುಗವನ್ನು. ಅಂದರೆ ಸತ್ಯಧರ್ಮಮಯವಾದ ಬಾಳಾಟಕ್ಕೆ ತಕ್ಕ ಯೋಜನೆ ಹಾಕಿಕೊಂಡು ಅದನ್ನು ಪ್ರಾರಂಭಿಸಿವುದಕ್ಕೆ ಅನುಗುಣವಾದ ಧರ್ಮವುಳ್ಳ ದಿನ ಇಂದು. ಸಂಕ್ರಾಂತಿ ದಿನದಂದು "ಎಳ್ಳುಬೆಲ್ಲ ತಿಂದು ಒಳ್ಳೆ ಮಾತಾಡಿ" ಎಂದು ಹೇಳುವಂತೆ ಯುಗಾದಿ ದಿನದಂದು "ಬೇವು ಬೆಲ್ಲ ತಿಂದು ಸತ್ಯಧರ್ಮದಿಂದ ಕೂಡಿದ ಬಾಳಾಟವನ್ನು ಮಾಡಿ" ಎಂಬ ಸಂದೇಶವನ್ನು ಈ ಆಚರಣೆಯ ಮಾತಿನಲ್ಲಿ ಅಡಗಿಸಿಟ್ಟಿದ್ದಾರೆ. ಹೊಸ ಸಂವತ್ಸರದ ಪ್ರಾರಂಭ ದಿನ. ಸಂವತ್ಸರ ಎಂದರೆ ಋತುಗಳು ಪರಿವರ್ತನೆ ಹೊಂದುವ ಕಾಲ. ಆರು ಋತುಗಳಾದ ವಸಂತ, ಗ್ರೀಷ್ಮ ವರ್ಷ, ಶರತ್, ಹೇಮಂತ ಹಾಗೂ ಶಿಶಿರಗಳಲ್ಲಿ ವಸಂತ, ಗ್ರೀಷ್ಮ, ವರ್ಷ ಋತುಗಳು ದಕ್ಷಿಣಾಯನದಲ್ಲಿ ಬರುವ ಋತುಗಳು. ಇದನ್ನು ಆಯುರ್ವೇದದಲ್ಲಿ ವಿಸರ್ಗ ಕಾಲ ಎಂಬುದಾಗಿ ಪರಿಗಣಿಸಿದ್ದಾರೆ. ಅಂದರೆ ಶರತ್, ಹೇಮಂತ, ಶಿಶಿರ ಋತುಗಳು, ಉತ್ತಾರಾಯಣದಲ್ಲಿ ಬರುವ ಋತುಗಳು. ಯುಗಾದಿಯ ವಿಚಾರದಲ್ಲಿ ಜನರಲ್ಲಿ ದ್ವಂದ್ವ, ಗೊಂದಲ ಇದೆ. ಯುಗಾದಿಯನ್ನು ಆಚರಿಸುವ ಕೆಲವರು ಚೈತ್ರ, ಶುದ್ಧ ಪ್ರತಿಪತ್ ಎಂದು ಆಚರಿಸುತ್ತಾರೆ. ಇನ್ನು ಕೆಲವರು ಮೇಷ, ಸಂಕ್ರಮಣದ ದಿವಸದಲ್ಲಿ ಯುಗಾದಿ ಆಚರಿಸುತ್ತಾರೆ. ಹಿಂದುಗಳಲ್ಲಿಯೇ ಈ ಗೊಂದಲ ದ್ವಂದ್ವಗಳು ಏಕೆ ಎಂಬ ಪ್ರಶ್ನೆ ಇದೆ. ಭಾರತದಲ್ಲಿ ಈ ಎರಡೂ ಯುಗಾದಿಯ ಆಚರಣೆ ವಾಡಿಕೆಯಲ್ಲಿದೆ. ಬ್ರಹ್ಮನು ಸೃಷ್ಟಿಸಿದ ದಿನದಂದು ಗ್ರಹ, ನಕ್ಷತ್ರಗಳೆಲ್ಲವೂ ಚಲಿಸಲು ಪ್ರಾರಂಭವಾಯಿತು. ಚಂದ್ರನ ಚಲನೆಯನ್ನೇ ಆಧರಿಸಿ, ಚಂದ್ರನನ್ನು ನಾವು ಪಕ್ಷದ ಗಣನೆಯ ಮೂಲಕ ಗಣನೆ ಮಾಡುತ್ತೇವೆ. ಚೈತ್ರ ಮಾಸದ, ಶುಕ್ಲಪಕ್ಷದ ಪಾಡ್ಯದಿನಕ್ಕೆ ಚಂದ್ರನು ಭೂಮಿಯೊಂದಿಗೆ ಸೂರ್ಯನನ್ನು ಸುತ್ತಿ ಒಂದು ಆವರ್ತ ಸಮಾಪ್ತಿಯಾಗಿ ಮತ್ತೊಂದು ಆವರ್ತ ಪ್ರಾರಂಭವಾಗುತ್ತದೆ. 

ಚಾಂದ್ರಮಾನ-ಸೌರಮಾನ ಯುಗಾದಿ 
ಚಂದ್ರನ ನಡೆಗೆ ಅನುಸಾರವಾಗಿ ಕಾಲ ಗಣನೆಮಾಡುವ ಗುಂಪು, ಚಾಂದ್ರಮಾನ ಯುಗಾದಿಯೆಂದು ಆಚರಿಸುತ್ತಾರೆ. ಅಂತೆಯೇ ಸೂರ್ಯನು ಮೇಷ, ವೃಷಭ, ಮಿಥುನಾದಿ 12 ನಕ್ಷತ್ರಗಳ ಗುಚ್ಛವನ್ನು ಸಂಕ್ರಮಿಸುತ್ತಾನೆ. ಮೇಷ ಸಂಕ್ರಮಣದಂದು ಸೂರ್ಯನ ಒಂದು ಆವರ್ತನೆ ಮುಗಿಯುತ್ತದೆ. ಹೊಸ ಆವರ್ತ ಪ್ರಾರಂಭವಾಗುತ್ತದೆ. ಈ ರೀತಿ ಸೂರ್ಯನ ಚಲನೆಯನ್ನಾಧರಿಸಿ ಕಾಲ ಗಣನೆಯಿಡುವ ಗುಂಪು ಸೌರಮಾನ ಯುಗಾದಿ ಎಂದು ಆಚರಿಸುತ್ತಾರೆ. ಅವರದ್ದು ಸರಿ, ಇವರದ್ದು ತಪ್ಪು ಎಂಬ ಗೊಂದಲಕ್ಕೆ ಇಲ್ಲಿ ಪ್ರಶ್ನೆಯೇ ಇಲ್ಲ. ಎರಡೂ ಸಮಂಜಸ. ಅವರ ಪೂರ್ವಜರು ಯಾವ ರೀತಿಯಲ್ಲಿ ಆಚರಿಸಿಕೊಂಡು ಬಂದಿರುತ್ತಾರೋ ಆದಿನವೇ ಅವರಿಗೆ ಪ್ರಾಶಸ್ತ್ಯ. ಹೆಚ್ಚಾಗಿ ಉತ್ತರ ಭಾರತದವರು ಸೌರಮಾನ ಯುಗಾದಿಯನ್ನು "ಚಿತ್ರವಿಪು" ಎಂಬ ಹೆಸರಿನಲ್ಲಿ ಆಚರಿಸುತ್ತಾರೆ. 

ಆಚರಣೆ ಅಂತರ್ಥ 
ದಕ್ಷಿಣಭಾರತದಲ್ಲಿ ಚಾಂದ್ರಮಾನ ಯುಗಾದಿಯನ್ನು "ಸಂವತ್ಸರ ಪ್ರತಿಪತ್" ಎಂಬುದಾಗಿ ಆಚರಿಸುತ್ತಾರೆ. ಪಕ್ಷಗಳಲ್ಲಿ ಶುಕ್ಲಪಕ್ಷವು ದೇವತೆಗಳಿಗೆ ಪ್ರಿಯವಾದದ್ದು. ಪಿತೃ ಪಕ್ಷವು ಪತೃಗಳಿಗೆ ಪ್ರಿಯವಾದುದು. ನವವರ್ಷದ ಪ್ರಥಮ ದೇವತಾ ಪೂಜೆಯೇ ಪ್ರಧಾನವಾಗಿರುವ ಯುಗಾದಿ ಶುಭಪರ್ವದ ಆಚರಣೆಗೆ ಶುಕ್ಲಪಕ್ಷವೇ ತಕ್ಕದಾದುದ್ದು. ಸೃಷ್ಟಿ ಮತ್ತು ಧಾರಣೆ ಪೋಷಣೆಗಳಿಗೆ ಅನ್ನ ಮತ್ತು ಔಷದಿಗಳು ಬೇಕು. ಆ ಔಷದಿಗಳಿಗೆಲ್ಲಾ ರಾಜನಾದ ಸೋಮ(ಚಂದ್ರ)ನು ವೃದ್ಧಿಯಾಗುವ ಪ್ರಥಮ ದಿವಸ. ಉಳಿದ ತಿಥಿಗಳಲ್ಲಿ ಚಂದ್ರನು ಅಪೂರ್ಣನಾಗಿರುತ್ತಾನೆ. ಅಥವಾ ಪೂರ್ಣನಾಗಿರುತ್ತಾನೆ. ಆರಂಭದ ದಿವಸಗಳಾಗುವುದಿಲ್ಲ. ಆದುದರಿಂದ ವರ್ಷದ ಪ್ರಥಮ ದಿನವನ್ನಾಗಿ ಚೈತ್ರ, ಶುಕ್ಲ ಪ್ರಥಮೆಯನ್ನೇ ಪರಿಗಣಿಸುವುದು ಯುಕ್ತವಾಗಿದೆ. ಸೌರಮಾನ ಯುಗಾದಿಯಂದು ಸೂರ್ಯನು ರಾಶಿಚಕ್ರದಲ್ಲಿ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶಿಸುವ ಕಾಲವನ್ನು ಸಂಕ್ರಾಂತಿ ಅಥವಾ ಸಂಕ್ರಮಣ ಎನ್ನುತ್ತಾರೆ. ಇವುಗಳೆಲ್ಲವೂ ಪರ್ವಗಳೇ. ಅವುಗಳಲ್ಲಿ ಮೇಷ ಸಂಕ್ರಮಣವು ಅತ್ಯಂತ ಶುಭವಾದ ಕಾಲ. ಈ ಕಾಲದಲ್ಲಿ ಹೊರಗಿನ ಸೂರ್ಯನು ರಾಶಿಯಲ್ಲಿ ಹೆಜ್ಜೆ ಹಾಕುತ್ತಿರುವಂತೆ ಸಮಕಾಲದಲ್ಲಿ ನಮ್ಮೊಳಗಿನ ಜೀವ ಸೂರ್ಯನು ಸುಷುಮ್ನೆಯ ಗ್ರಂಥಿಯೊಳಗೆ ಸಂಗಮ ಹೊಂದುತ್ತಾನೆ ಮತ್ತು ಸಮಾಧಿಯಲ್ಲಿ ಅವಗಾಹನೆ ಮಾಡಲು ತೊಡಗುತ್ತಾನೆ ಎಂಬುದು ಅನುಭವಿ ಜ್ಞಾನಿಗಳ ಮಾತು. ಆಗ ಪ್ರಾಮಾಣಿಕವಾಗಿ ಧ್ಯಾನಾಭ್ಯಾಸ ಮಾಡುವ ಸಾಧಕರಿಗೆ ಈ ಪರ್ವಕಾಲದ ಮಹಾಮೌಲ್ಯವು ಅನುಭವಕ್ಕೆ ಬರುವ ವಿಷಯಗಳಾಗಿವೆ. ನಾಡೀ ವಿಜ್ಞಾನದಲ್ಲಿ ಒಳ್ಳೆಯ ಪರಿಚಯವುಳ್ಳವರಿಗೆ ಆ ಮಹತ್ವವನ್ನು ಪ್ರಾಯೋಗಿಕವಾಗಿಯೂ ತೋರಿಸಬಹುದು ಎಂಬುದನ್ನು ಶ್ರೀರಂಗಮಹಾಗುರುಗಳು ತಿಳಿಸುತ್ತಿದ್ದರು. ಹೀಗೆ ದೇವತಾನುಗ್ರಹದಿಂದಲೂ, ಪುರುಷಪ್ರಯತ್ನದಿಂದಲೂ ಧರ್ಮ, ಅರ್ಥ, ಕಾಮ, ಮೋಕ್ಷಗಳಾದ ಎಲ್ಲಾ ಪುರಷಾರ್ಥಗಳ ಸಾಧನೆಗೂ ಹೊಂದಿಕೆಯಾಗಿ ಮಹರ್ಷಿಗಳ ಅದ್ಭುತವಾದ ಕಾಲವಿಜ್ಞಾನಕ್ಕೆ "ಯುಗಾದಿಯ" ಆಚರಣೆಯೂ ಕೈಗನ್ನಡಿಯಾಗಿದೆ. ಈ ಪವಿತ್ರ ಸ್ಮರಣೆಯಲ್ಲಿ ನಾವೆಲ್ಲರೂ ಹಬ್ಬವನ್ನು ಆಚರಿಸುವಂತಾಗಲಿ.

ಸೂಚನೆ: 21/03/2020 ರಂದು ಈ ಲೇಖನದ ಆಯ್ದ ಭಾಗವು ಉದಯವಾಣಿ ಯಲ್ಲಿ ಪ್ರಕಟವಾಗಿದೆ.  

Thursday, March 26, 2020

ಶ್ರೀರಾಮರ ಧೈರ್ಯವು ನಮಗೆ ಆದರ್ಶ (Sriramara Dhairyavu Namage Adarsa)

ಲೇಖಕರು: ಡಾ|| ನಂಜನಗೂಡು ಸುರೇಶ್ 
(ಪ್ರತಿಕ್ರಿಯಿಸಿರಿ lekhana@ayvm.in)



ಲೋಕದಲ್ಲಿ ಆದರ್ಶಪುರುಷನ ಲಕ್ಷಣಗಳನ್ನು ಹೊಂದಿರುವ ಶ್ರೀರಾಮನ ಬಗ್ಗೆ ವಾಲ್ಮೀಕಿಗಳಿಗೆ ತಿಳಿಸಿಕೊಡುತ್ತಾ ನಾರದಮಹರ್ಷಿಗಳು ಶ್ರೀರಾಮನನ್ನು ಪ್ರಕೃತಿಯಲ್ಲಿರುವ ಸಮುದ್ರ, ಪರ್ವತ, ಪೃಥ್ವಿ, ಚಂದ್ರ ಮುಂತಾದವುಗಳಿಗೆ ಹೋಲಿಸುತ್ತಾ ಆ ವಸ್ತುಗಳ ಶ್ರೇಷ್ಠತೆಯನ್ನು ವಿಶದಪಡಿಸುತ್ತಾರೆ. ಮಾನವನ ಜೀವನವು ಸಮರಸದಿಂದ ಕೂಡಿರುವುದಾಗಿದೆ. ನಾವು ಯಾವಾಗಲೂ ಸುಖವನ್ನೇ ಬಯಸುವುವವರಾದರೂ ನಮಗೆ ಇಷ್ಟವಿಲ್ಲದಿದ್ದರೂ ದುಃಖವೂ ಅನಿವಾರ್ಯವೇ.  ಸುಖ ಬಂದಾಗ ಹಿಗ್ಗುವುದು ದುಃಖ ಬಂದಾಗ ಕುಗ್ಗುವುದೂ ಆಗುತ್ತದೆ. ಇಂತಹ ಸಂದರ್ಭದಲ್ಲಿ ಮಾನವನು ಹೇಗೆ ನಡೆದುಕೊಳ್ಳಬೇಕೆಂದು ಪ್ರಕೃತಿಯಲ್ಲಿರುವ ವಸ್ತುಗಳು ನಮಗೆ ತಿಳಿಸಿಕೊಡುತ್ತವೆ. ಉದಾಹರಣೆಗೆ ಪರ್ವತವನ್ನು ತೆಗೆದುಕೊಳ್ಳೋಣ. ಮಳೆಯಾಗಲೀ, ಬಿಸಿಲಾಗಲೀ, ಚಳಿಯಾಗಲೀ, ಸಿಡಿಲಾಗಲೀ, ಕಾಡ್ಗಿಚ್ಚಾಗಲೀ, ಬಿರುಗಾಳಿಯಾಗಲೀ  ವರ್ಷ ಪರ್ಯಂತ ಪ್ರಕೃತಿಯಲ್ಲಿ ಆಗುವ ಈ ರೀತಿಯಾದ ಅನೇಕ ವೈಪರೀತ್ಯಗಳಿಂದ ಸತತವಾಗಿ ಪೀಡಿಸಲ್ಪಟ್ಟರೂ ಯಾವುದಕ್ಕೂ ಧೃತಿಗೆಡದೆ ತನ್ನ ತನವನ್ನು ಬಿಟ್ಟುಕೊಡದೆ ಪರ್ವತವು ನಿಶ್ಚಲವಾಗಿರುತ್ತದೆ. 

ಈಗ ಶ್ರೀರಾಮನ ಜೀವನವನ್ನು ಗಮನಿಸೋಣ.  ಶ್ರೀರಾಮನಿಗೆ ಪಟ್ಟಾಭಿಷೇಕದ ಎಲ್ಲಾ ಸಿದ್ಧತೆಗಳೂ ನಡೆದಿದ್ದವು. ಶ್ರೀರಾಮ ಮರ್ಯಾದಾಪುರುಷೋತ್ತಮ. ಅವನೇನೂ ಅದಕ್ಕಾಗಿ ಹಂಬಲಿಸಿರಲಿಲ್ಲ. ತಾನಾಗಿಯೇ ಹುಡುಕಿಕೊಂಡು ಬಂದ ಭಾಗ್ಯ. ಮಂಥರೆಯ ದುರ್ಬೋಧನೆಗೆ ಮರುಳಾಗಿ, ವರಗಳೆರಡರ ನೆಪದಲ್ಲಿ ಶ್ರೀರಾಮನನ್ನು ಹದಿನಾಲ್ಕು ವರ್ಷ ವನವಾಸ ಮತ್ತು ತನ್ನ ಮಗನಿಗೆ ಪಟ್ಟಾಭಿಷೇಕವನ್ನು ದಶರಥನಿಂದ ಮಾಡಿಸಲು ಮುಂದಾಗಿದ್ದ ಕೈಕೇಯಿಯ ಮಾತನ್ನುಕೇಳಿ ಶ್ರೀರಾಮನು ಧೃತಿಗೆಡಲಿಲ್ಲ. ಸುಖದುಃಖಗಳನ್ನು, ಜಯಾಪಜಯಗಳನ್ನು, ಲಾಭಾಲಾಭಗಳನ್ನು, ನಿಂದಾಸ್ತುತಿಗಳನ್ನು ಸಮಾನವಾಗಿ ಸ್ವೀಕರಿಸುವ ಸ್ಥಿತಪ್ರಜ್ಞನಂತೆ, ಸ್ವೀಕರಿಸುತ್ತಾನೆ. ಮಹಾಕವಿಕಾಳಿದಾಸನು ತನ್ನ ರಘುವಂಶದಲ್ಲಿ ಈ ಸಂದರ್ಭವನ್ನು ವರ್ಣಿಸುವಾಗ 'ತಂದೆಯಿಂದ ಮೊದಲು ಕೊಡಲ್ಪಟ್ಟ ರಾಜ್ಯವನ್ನು ಅಳುತ್ತಾ ಸ್ವೀಕರಿಸಿದನು; ನಂತರ 'ವನಕ್ಕೆ ಹೋಗು' ಎಂಬ ಮಾತನ್ನು ಸಂತೋಷದಿಂದ ಸ್ವೀಕರಿಸಿದ'ನೆಂದು ಹೇಳುತ್ತಾನೆ. ಅಷ್ಟೇ ಅಲ್ಲದೆ, ಸಂಕೋಚದಿಂದಲೂ, ಕೊಟ್ಟಮಾತಿಗೆ ಕಟ್ಟುಬಿದ್ದು ಪ್ರೀತಿಪಾತ್ರನಾದ ಶ್ರೀರಾಮನನ್ನು ವನಕ್ಕೆ ಹೋಗೆಂದು ಹೇಳಲಾರದೇ ಪರಿತಪಿಸುತ್ತಿದ್ದ ತಂದೆ ದಶರಥನನ್ನು ಸತ್ಯವಾಕ್ಕಾಗಿಸಲು, ಕೈಕೇಯಿಯ ಆಣತಿಯಂತೆ ನಾರುಮಡಿಯನ್ನುಟ್ಟು ವನವಾಸಕ್ಕೆ  ಹೊರಟು ನಿಲ್ಲುತ್ತಾನೆ ಶ್ರೀರಾಮ. ಈ ಸನ್ನಿವೇಶವನ್ನು ಕವಿಕುಲಗುರುವು, 'ಮೊದಲು ಪಟ್ಟಾಭಿಷೇಕ್ಕಾಗಿ ಮಂಗಳಮಯವಾದ ಪೀತಾಂಬರವನ್ನು ಧರಿಸಿರುವಾಗಲೂ ಮತ್ತು ನಂತರ ವಲ್ಕಲವನ್ನುಟ್ಟು ಕಾಡಿಗೆ ಹೊರಟು ನಿಂತಾಗಲೂ ಶ್ರೀರಾಮನ ಸಮಾನವಾದ ಮುಖರಾಗವನ್ನು ಕಂಡು ಸಾಕೇತಪುರವಾಸಿಗಳು ವಿಸ್ಮಿತರಾದರು' ಎಂದು ವರ್ಣಿಸುತ್ತಾನೆ.  ಅಬ್ಬಾ! ಮಹಾತ್ಮರಲ್ಲಿ ಅದೆಂತಹ ಧೃತಿ ! ಸಂಪತ್ತು ಮತ್ತು ವಿಪತ್ತುಗಳಲ್ಲಿ ಮಹಾತ್ಮರು ಒಂದೇ ರೀತಿಯಲ್ಲಿರುವರೆಂಬ ಸುಭಾಷಿತಕ್ಕೆ ಅತ್ಯುತ್ತಮ ಉದಾಹರಣೆಯಾಗಿ ಶ್ರೀರಾಮನನ್ನು ಸ್ಮರಿಸಬಹುದಾಗಿದೆ. 

ಜೀವನದಲ್ಲಿ ಬರುವ ಯಾವುದೇ ಅಸುಖಕರ ಸಂದರ್ಭದಲ್ಲಿಯೂ ಧೃತಿಗೆಡದೆ ಧರ್ಮಮಾರ್ಗದಿಂದ ಕಿಂಚಿತ್ತೂ ವಿಚಲಿತರಾಗದೇ ಪರ್ವತದಂತೆ ಧೀರರಾಗಿ, ಸ್ಥೈರ್ಯದಿಂದ ಕಷ್ಟಗಳನ್ನು ಎದುರಿಸಬೇಕೆಂಬುದಕ್ಕೆ ಶ್ರೀರಾಮನೇ ಆದರ್ಶ. ಆದ್ದರಿಂದಲೇ ಶ್ರೀರಾಮನನ್ನು ವರ್ಣಿಸುವಾಗ ನಾರದಮಹರ್ಷಿಗಳು 'ಧೈರ್ಯೇಣ ಹಿಮವಾನಿವ' ಎಂದಿದ್ದಾರೆ.

ಸೂಚನೆ: 24/03/2020 ರಂದು ಈ ಲೇಖನ  ಪ್ರಜಾವಾಣಿ ಯಲ್ಲಿ ಪ್ರಕಟವಾಗಿದೆ.  

உணவை ஏற்பதற்கு வேண்டிய முன்-நிபந்தனை (Unavai Erpatarku Ventiya Mun-Nipantanai)

மூலம் : அனந்த பி.ஜி
தமிழாக்கம் : வனஜா
மின்னஞ்சல் : (lekhana@ayvm.in)


உணவு என்பது அவரவரின் விருப்பம் மற்றும் வசதியை பொருத்தது. அவ்வாறாயினும் பாரதத்தின் சமய நூல்கள் இது குறித்த அநேக விதி மற்றும் தடைகளை கூறியுள்ளன.  அவற்றில் யார் அளிக்கும் உணவை ஏற்கலாம், யார் உணவை மறுக்க வேண்டும், எத்தகைய சமயங்களில் ஏற்கலாம் முதலிய விவரங்களும் அடங்கியுள்ளன. இதை குறித்து மஹாபாரதத்தில் ஒரு சுவையான கதை உண்டு.

பாண்டவர்கள் வனவாஸம் முடித்து வந்த பிறகு அவர்களுக்குரிய அரசுரிமையை அளிக்க துரியோதனன் மறுக்கிறான். அதனால் போரை தவிர்க்க முடியாத சூழ்நிலை ஏற்படுகிறது. போரினால் ஏற்படும் துன்பங்கள் மற்றும் மரணங்களை குறித்து நன்கறிந்த தர்மராஜன்  போரின்றி வேறு மார்க்கத்தில் அரசுரிமை பெற இயலுமா என சிந்திக்கின்றான். சமாதானத்திற்காக ஸ்ரீக்ருஷ்ணனை தன் தூதுவனாக அனுப்புகிறான். க்ருஷ்ணனின் வருகையையும்  அதற்கான காரணத்தையும் அறிந்த கௌரவன் க்ருஷ்ணனை  விருந்தோம்பலால் மகிழ்வித்து தன் பக்கம் சேர்த்துக்கொள்ளலாம் என்று எண்ணுகிறான். அதற்காக க்ருஷ்ணனுக்கு விருப்பமான பலவகை உணவுகளை தயாரிக்கின்றான்.

ஆனால் பக்தப்ரியனும் எளியோனுமாகிய  பகவான் தன் தூயபக்தனாகிய விதுரனின் இல்லத்திற்கு செல்கின்றான். அங்கு மிக்க அன்புடன் விதுரன் அளித்த கனிகள், பால் முதலியவற்றை ஏற்று மனதிருப்தி அடைகிறான்.

மறுநாள் கௌரவர்களின் சபைக்கு பாண்டவ தூதனாக  வந்தபோது முன்தினம் தான் க்ருஷ்ணனுக்காக தயாரித்திருந்த விருந்தை பற்றி கூறி   துரியோதனன் க்ருஷ்ணனை எள்ளிநகையாடுகிறான். "நீ எவ்வாராயினும்  தாழ்ந்த குலத்தவன். எனவேதான் உன்னை  போன்றே தாழ்ந்த குலத்தவனான விதுரனின் இல்லத்தில் உணவை ஏற்றுக்கொண்டாய். சரியாகி விட்டது. உனக்கெதற்கு அரண்மனை விருந்து?" என்று.

அதற்கு க்ருஷ்ணன் அளித்த பதில் மிக அருமையானது. "துர்யோதனா, யாராயினும் அன்புடன் அளிக்கும் உணவை மட்டுமே ஏற்க வேண்டும். அல்லது அன்புடனில்லாவிடினும் நாம்  தவிர்க்கமுடியாத வறுமை நிலையில் இருப்பின் அப்போது  கிட்டும் உணவை ஏற்கலாம். ஆனால் நீயோ அன்புடன் என்னை உபசரிக்கவில்லை. அன்பில்லாவிடனும் ஏற்கும்  தவிர்க்கமுடியாத நிலைமையும் எனக்கிருக்கவில்லை" என்றான். இது எக்காலத்திற்கும் பொருந்தும் பேச்சல்லவோ?

குறிப்பு: இக்கட்டுரை யின் கன்னட மூலம் AYVM blogs ல் காணலாம்.  

Monday, March 23, 2020

ಆತ್ಮಸಾಧನೆಗೆ ಕಾಲಾವಕಾಶವಿದೆಯೇ ? (Atmasadhanege Kalavakasavideye ?)

ಲೇಖಕರು : ಶ್ರೀ ವಿದ್ವಾನ್ ನರಸಿಂಹ ಭಟ್ಟ
(ಪ್ರತಿಕ್ರಿಯಿಸಿರಿ : lekhana@ayvm.in)


ಪ್ರತಿಯೊಬ್ಬ ಮಾನವನಿಗೂ ತನ್ನ ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು ಎಂಬ ಹಂಬಲ ಇದ್ದೇ ಇರುತ್ತದೆ. ಆದರೆ ಏನನ್ನು ಸಾಧಿಸಬೇಕು? ಎಂಬ ಬಗ್ಗೆ ಸರಿಯಾದ ಅರಿವು ಇರುವುದಿಲ್ಲ. ಇದಕ್ಕೆ ಭಾರತೀಯ ಮಹರ್ಷಿಗಳು ಸಂಕ್ಷಿಪ್ತವೂ ಸಮಾಧಾನಕರವೂ ಆದ ಉತ್ತರವನ್ನು ಕೊಟ್ಟಿದ್ದಾರೆ. "ಯಾವುದನ್ನು ಪಡೆದ ಮೇಲೆ ಇನ್ನಾವುದನ್ನೂ ಪಡೆಯುವಂತಹದ್ದು ಇರುವುದಿಲ್ಲವೋ ಅಂತಹದ್ದನ್ನು ಸಾಧಿಸಬೇಕು" ಎಂದು. ಹಾಗಾದರೆ ಅದಾವುದು? ಅದೇ ಆತ್ಮಲಾಭ. ಪ್ರತಿಯೊಬ್ಬರ ಒಳಗೂ ಭಗವಂತ ಇದ್ದಾನೆ. ಅಂತಹ ಭಗವಂತನನ್ನು ನೋಡಿದರೆ ಎಲ್ಲವನ್ನೂ ಸಾಧಿಸಿದಂತೆಯೇ. ಏಕೆಂದರೆ ಈ ಸೃಷ್ಟಿಯಲ್ಲಿ ಎಲ್ಲವೂ ಅವನೇ. ಎಲ್ಲದರಲ್ಲೂ ಅವನೇ. ಇಂತಹ ವಿಶಿಷ್ಟವಾದ ಅಸ್ತಿತ್ವವನ್ನು ನಾವು ನಮ್ಮಲ್ಲೇ, ಅಂದರೆ ನಮ್ಮ ಈ ಜನ್ಮದಲ್ಲೇ ನಮ್ಮ ಈ ಮಾನವಶರೀರದಲ್ಲೇ ಕಾಣಬೇಕು. ಇದು ಮಾನವಜನ್ಮದ ಪರಮೋದ್ದೇಶ. ಇದೇ ಸಾಧಿಸಲೇಬೇಕಾದದ್ದು. ಹಾಗಾದರೆ ಇದನ್ನು ಸಾಧಿಸಲು ಕಾಲಾವಕಾಶವೆಷ್ಟು?!

ಸಾಮಾನ್ಯವಾಗಿ ಒಬ್ಬ ಮನುಷ್ಯನಿಗೆ ನೂರು ವರ್ಷ ಆಯುಷ್ಯ ಎಂದಾದರೆ ಅವುಗಳಲ್ಲಿ ಅರ್ಧಭಾಗ ರಾತ್ರಿಯಾಗಿ ಕಳೆಯುತ್ತೇವೆ. ಇನ್ನು ಐವತ್ತರಲ್ಲಿ ಬಾಲ್ಯ ಮತ್ತು ವಾರ್ಧಕ್ಯ ಎಂಬ ಎರಡು ಅವಸ್ಥೆಗಳಲ್ಲೇ ಇಪ್ಪತ್ತು ವರ್ಷಗಳನ್ನು ಕಳೆಯುತ್ತೇವೆ. ಇನ್ನು ಕೆಲವು ವರ್ಷಗಳನ್ನು ರೋಗ, ಆಲಸ್ಯ, ಬೇಜವಾಬ್ದಾರಿ ಮೊದಲಾದವುಗಳಿಂದ ಕಳೆಯುತ್ತೇವೆ. ಅಂದರೆ ನಮಗೆ ಗಟ್ಟಿಯಾಗಿ ಸಿಗುವ ಕಾಲವೆಷ್ಟು? ಎಂದು ಯೋಚಿಸಿದರೆ ಭಯವಾಗುತ್ತದೆ. ನಮಗಿರುವ ಇಷ್ಟು ಅಲ್ಪಕಾಲವನ್ನು ಯಾವ ರೀತಿ ಬಳಸಿಕೊಳ್ಳಬೇಕು? ಎಂಬುದಕ್ಕೆ ನಮ್ಮ ಹಿರುಯರು ಉಪಾಯವನ್ನೂ ಹೇಳುತ್ತಾರೆ. "ಅಜರಾsಮರವತ್ಪ್ರಾಜ್ಞಃ ವಿದ್ಯಾಮರ್ಥಂಚ ಸಾಧಯೇತ್,ಗೃಹೀತ ಇವ ಕೇಶೇಷು ಮೃತ್ಯುನಾ ಧರ್ಮಮಾಚರೇತ್" ಎಂದು. 

ವಿದ್ಯೆ ಮತ್ತು ಧನವನ್ನು ಸಂಪಾದಿಸುವಾಗ ವೈರಾಗ್ಯ ಸಲ್ಲದು. ನಾನು ಮುಪ್ಪಿಲ್ಲದವನು, ಎಂದೆಂದಿಗೂ ಇರುವವನು ಎನ್ನುವ ಉತ್ಸಾಹದಿಂದ ಇವೆರಡನ್ನೂ ಸಂಪಾದಿಸಬೇಕು. ಆದರೆ ಜೊತೆಗೇ, ನಮ್ಮನ್ನು ಕರೆದೊಯ್ಯಲು ಯಮಭಟರು ಬಂದು ನಮ್ಮ ತಲೆಯ ಕೇಶರಾಶಿಗೆ ಕೈ ಹಾಕಿದ್ದಾರೆ. ಇನ್ನೇನು ಸ್ವಲ್ಪ ಹೊತ್ತಿನಲ್ಲೇ ನಮ್ಮ ಪ್ರಾಣವಿಯೋಗವಾಗುತ್ತದೆ ಎಂದು, ತ್ವರೆಯಿಂದ, ಜವಾಬ್ದಾರಿಯಿಂದ ಧರ್ಮಕಾರ್ಯವನ್ನು ಮಾಡಬೇಕು. ಕಾಲವು ಬಹಳ ಕಡಿಮೆ. ಆದರೆ ಸಾಧಿಸಬೇಕಾದದ್ದು ತುಂಬಾ ಇದೆ. ಇದ್ದ ಅಲ್ಪಕಾಲದಲ್ಲೇ ನಾವು ಭಗವಂತನನ್ನು ಕಾಣಲು ಪ್ರಯತ್ನಿಸಬೇಕು. ಇದರ ಜೊತೆಜೊತೆಯಲ್ಲೇ ನಮ್ಮ ಸಾಂಸಾರಿಕ ಜೀವನವನ್ನೂ ಸುಂದರವಾಗಿ ಸಾಗಿಸಬೇಕು. ಅಲ್ಲಿನ ಕರ್ತವ್ಯಕ್ಕೆ ಚ್ಯುತಿ ಇಲ್ಲದ ರೀತಿಯಲ್ಲಿ ನಮ್ಮ ಬಾಳಾಟವಿರಬೇಕು. "ಎಚ್ಚರದಲ್ಲಿ ತನ್ನ ಜೀವನಕ್ಕಾಗಿ ದುಡಿಯುತ್ತಾನೆ, ವಿಶ್ರಾಂತಿಗಾಗಿ ನಿದ್ರೆ ಮಾಡುತ್ತಾನೆ, ಮಧ್ಯೆ ಕನಸು ಕಾಣುವುದೂ ಉಂಟು, ಹೀಗೆ ಎಚ್ಚರ, ಕನಸು, ನಿದ್ರೆಗಳು ಹೇಗೆ ಜೀವನಿಗೆ ಸಹಜಸಿದ್ಧವಾದ ಹಕ್ಕೋ, ಹಾಗೆಯೇ ಸುಖವಾಗಿ ಭಗವಂತನ ಜೊತೆಯಲ್ಲಿರೋಣ ಎನ್ನುವುದೂ ಜೀವದ ಹಕ್ಕು" ಎಂಬ ಶ್ರೀರಂಗ ಮಹಾಗುರುಗಳ ವಾಣಿಯನ್ನು ಇಲ್ಲಿ ಸ್ಮರಿಸಬೇಕು. ಮೃತ್ಯು ಯಾವಾಗಲಾದರೂ ಬರಬಹುದು.ಎಂದೇ ಜೀವನದ ಪರಮ ಧ್ಯೇಯಕ್ಕಾಗಿ ಸಾಧನೆ ಮಾಡುವುದನ್ನು ಮುಂದೆ ಹಾಕದೇ ಒಡನೆಯೇ ಮಾಡೋಣ. ಅಲ್ಪಜೀವಿತಕಾಲದಲ್ಲಿ ಮಹತ್ತಾದುದನ್ನು ಸಾಧಿಸೋಣ.

ಸೂಚನೆ: 1/03/2020 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.  

Sunday, March 22, 2020

The mooring of the Art of cooking

Article in kannada by: Tharodi Suresha
 English rendering by: M R Bhashyam
(Respond to lekhana@ayvm.in)  


In the earlier article we remembered briefly the thought process and planning of cooking by today's generation.  The idea of this article is to give an introduction to the Kala- art of cooking.
The word "Paaka" (to cook) means to bring to a balanced condition; that is, creating a balance without amplifying the imbalances in nature.  "The Lord is balanced without blemish (Nirdosham hi samam Brahma). Shri SriRanga Mahaguru used to remind: "Instead of the mere contentment of the udara (stomach), Daamodara (the Lord with a cord tied to the stomach) must also be satisfied". Cooking becomes a kala (an art) only when it does not impede one from experiencing Him.
Cooking is not just an art; it is the mother of all arts. It is an art which satisfies and nurtures all living beings in creation.  It is an art that gives nourishment to all gods and superior deities; and the singer, the actor, the poet, the painter, the sketcher, the writer, the farmer, the soldier and so on.  But planning is required to create rasa (the essence of the taste types) that are appropriate for each of the different arts. The 'balance' in rasa that needs to be created must be appropriate to the nature of the artist and the kala.  The balance that needs to be blended for different archetypes is also different. Since the secret of preparation is in understanding the proportion of blend needed to create this 'balance', it is not only an art, but mother of all art forms.
Playing a very important part in the evolution of creation, the kitchen enables man to have the necessary physical strength, mental vitality, and a goal for the soul. Its vision encompasses not only the aspects of physical joy but also the bliss of the yoga.  Cooking becomes exquisite only if the different taste types, rasas, like salt, sour and spice blend and are balanced, the blend and balance that does not obstruct the experience and vision of God.  In addition, the rasa enjoyed by the senses in their field is also a part of the 'Source' rasa namely  the supreme Lord Himself (Raso vai sah).
We need to keep in mind one more aspect. Lord Shri Krishna says "the one who cooks for his own self eats only the sins. "Bhunjate te tvagham paapaah ye pachanti aatmakaaranaat".  All materials and ingredients come from God. We are also bound to his creation. He is the Lord for both. Hence, while using His things, we must be aware that all these belong to Him, the owner. Then we will not be thieves. When we offer to Him and partake it with His memories, then it transforms to prasaada, sacred food. Therefore, this activity becomes a yagna, a sacrifice.  It is worth recalling here the words of Shri SriRanga Mahaaguru that "The food-preparation which makes one remember Him at every step of the way is real cooking".
With this background, let us examine in future articles the organization of the kitchen, the people who cook, hearth, the utensils used for cooking etc. 
Note: The Kannada version of this article can be viewed at  AYVM blogs.

Saturday, March 21, 2020

ಶಾರ್ವರಿ ಯುಗಾದಿಯ ಸಂತಸ (Sharvari ugadiya Santasa)

ಲೇಖಕರು: ಡಾII ಯಶಸ್ವಿನೀ
ಆಯುರ್ವೇದ ವೈದ್ಯೆ
(ಪ್ರತಿಕ್ರಿಯಿಸಿರಿ lekhana@ayvm.in)



ಯುಗಾದಿಹಬ್ಬ ಎಲ್ಲೆಲ್ಲೂ ಸಡಗರ, ಸಂಭ್ರಮ. ಕೆಲಸಕ್ಕೆ ರಜೆ ಇರುವ ದಿನ. ನವ ವಸ್ತ್ರ ಧರಿಸಿ,ಬಗೆ ಬಗೆ ಹೂವುಗಳಿಂದ ಭಗವಂತನ ಪೂಜೆಯ ಮಾಡಿ, ಬೇವು ಬೆಲ್ಲ ತಿಂದು ಪಂಚಾಂಗ ಶ್ರವಣ ಮಾಡಿ, ಹಬ್ಬದ ಅಡುಗೆಯ ಸವಿಯುವ ದಿನ. ವರ್ಷವಿಡೀ ಸಿಹಿ, ಕಹಿಯನ್ನು ಸಮವಾಗಿ ಕಾಣುತ್ತೇನೆ ಎಂಬ ಮನಸ್ಸಿನಲ್ಲಿ ವರ್ಷವನ್ನು ಆರಂಭಮಾಡುವ ದಿನ. ಇಂದು ಹೊಸ ಸಂಕಲ್ಪಗಳನ್ನು ಪ್ರಾರಂಭಿಸಲು ಯೋಗ್ಯವಾದ ದಿನ. ನಮ್ಮ ಮನೆಯಲ್ಲಿ ಹಿರಿಯರು ಹೇಳುವುದನ್ನು ಕೇಳಿರುತ್ತೇವೆ- ಇವತ್ತು ಬೇಗನೆ ಏಳು. ತಡವಾಗಿ ಎದ್ದರೆ ವರ್ಷವಿಡೀ ತಡವಾಗಿ ಏಳುತ್ತೀಯ ಎಂದು ಇವತ್ತು ಕೋಪ, ಹಠ ಮಾಡಬಾರದು, ಅಳಬಾರದು, ನಗುನಗುತ್ತಾ ಸಂತೋಷದಿಂದಿರು. ಆಗ ವರ್ಷವಿಡೀ ಸಂತೋಷದಿಂದ ಸಮಾಧಾನದಿಂದ ಇರುತ್ತೀಯ ಎಂದು. ಈ ವಿಚಾರಗಳು ಮನೆಮನೆಗಳಲ್ಲಿ ಸಂಸ್ಕಾರ ರೂಪದಲ್ಲಿ ಬಂದಿರುವುದು ಎಲ್ಲರಿಗೂ ತಿಳಿದಿರುವ ವಿಚಾರಗಳು.

ಈಗಿನ ಜೀವನಶೈಲಿಗೆ ಇವೆಲ್ಲವೂ ಕಾಲಬಾಹಿರ ವಿಷಯಗಳು ಎನ್ನಿಸಬಹುದು. ವರ್ಷದ ಮೊದಲ ರಜೆ. ರಜೆದಿನ ಹೊಸತಿಂಡಿ ಮನೆಕೆಲಸ ಅಂತ ಮತ್ತೆ ಆಯಾಸ ಮಾಡಿಕೊಳ್ಳುವುದಕ್ಕಿಂತ ಹಾಯಾಗಿ ಸ್ವಿಗ್ಗಿಯಲ್ಲಿ ಸುಗ್ಗಿಯ ಅಡುಗೆ ಆರ್ಡರ್ಮಾಡಬಹುದಲ್ಲ? ಎಂಬ ಯೋಚನೆ ಬರಬಹುದು. ಅಥವಾ ಫ್ಯಾಮಿಲಿ ಔಟಿಂಗ್ ಪ್ರವಾಸಕ್ಕೆ ಹೋಗಿ ಶ್ರಮವನ್ನು ಕಳೆದುಕೊಂಡು ಬರಬಹುದಲ್ಲ ಎಂಬ ಚಿಂತನೆಗಳೂ ಈಗ ಸಹಜವಾಗಿವೆ.ಈ ಹಬ್ಬದ ಪರಿಪೂರ್ಣ ಉಪಯೋಗ ಏನು? ಪ್ರಯೋಜನೆ ಏನು? ಎಂಬ ಶಿಕ್ಷಣ ಇಲ್ಲದಿರುವುದರಿಂದ ಈ ರೀತಿಯಾದ ಬಗೆ ಬಗೆ ಯೋಚನೆಗಳು ಸಹಜ. ಭಾರತೀಯರ ಹಬ್ಬಗಳು ಕ್ಯಾಲೆಂಡರ್ ದಿನಾಂಕ ಆಧಾರಿತ ಹಬ್ಬಗಳಲ್ಲ. ಪ್ರಕೃತಿಯಲ್ಲಿ, ಬ್ರಹ್ಮಾಂಡದಲ್ಲಿ ಒಂದು ನಿರ್ದಿಷ್ಟ ಬದಲಾವಣೆ ಉಂಟಾಗುತ್ತದೆ. ಗ್ರಹ, ತಿಥಿ, ಮಾಸ, ರಾಶಿ, ಋತುಗಳಲ್ಲಿ ಒಂದು ಯೋಗ ಉಂಟಾಗುತ್ತದೆ. ಅದನ್ನು ಪ್ರಮಾಣಿಸಿಯೂ ನೋಡಬಹುದು. ಅದೇ ಬದಲಾವಣೆ, ನಮ್ಮ ಪಿಂಡಾಂಡದಲ್ಲಿ (ದೇಹ)ಯೂ ಉಂಟಾಗುತ್ತದೆ. ಇದು ಋಷಿ ಮಹರ್ಷಿಗಳು ತಮ್ಮ ಅನುಭವದಿಂದ ನಮಗೆ ತಿಳಿಸಿಕೊಟ್ಟಿರುವ ವೈಜ್ಞಾನಿಕ ಸತ್ಯ. ಯುಗಾದಿ ಹಬ್ಬದಂದು ಪ್ರಕೃತಿಯಲ್ಲಿ ಹೊಸತನ-ಹೊಸ ಚಿಗುರುಗಳು ಮೊಳೆಯುವ ಕಾಲ. ಹೂವು ಬಿರಿಯುವ ಕಾಲ. ಎಲ್ಲಾ ಜೀವ ಜಂತುಗಳಲ್ಲಿಯೂ ನವನವೀನತೆಯು ಮೊಳೆಯುವ ಕಾಲ.

ಯುಗದ ಆದಿಯ ದಿನವಾದ ಇಂದು ಚೈತ್ರ ಮಾಸಕ್ಕೆ ಪ್ರಥಮ ತಿಥಿ. ಪ್ರಥಮ ಋತುವಿಗೆ, ಹೊಸ ಶಾರ್ವರಿ ಸಂವತ್ಸರಕ್ಕೆ ಪ್ರಥಮ ದಿನ. ಯುಗಾದಿಯ ಆಚರಣೆ - ಪ್ರಾತ:ಕಾಲದಲ್ಲಿ ಎಳ್ಳೆಣ್ಣೆಯಿಂದ "ಅಭ್ಯಂಗ" ಮಾಡಿಕೊಳ್ಳಬೇಕು. ಪ್ರತಿದಿನವೂ ಅಭ್ಯಂಗವನ್ನು ಆಚರಿಸಬೇಕು. ಅದು ಮುಪ್ಪು, ಆಯಾಸ, ವಾತದ ದೋಷಗಳನ್ನು ನಿವಾರಣೆ ಮಾಡುವುದು. ದೃಷ್ಟಿಪಾಟವವನ್ನು ಕೂಡುವುದು. ಭೋಗಪ್ರದವಾದ ಆಚರಣೆಯಾದರೂ ಯೋಗಕ್ಕೆ ಅನುಕೂಲಕರ ಈ ಅಭ್ಯಂಗ. ದೇಹ, ಇಂದ್ರಿಯ ಮನಸ್ಸನ್ನು ಹಗುರಗೊಳಿ"ಪುಷ್ಟಿ" ಆಯಸ್ಸು, ನಿದ್ರೆಯ ಸೌಖ್ಯನ್ನುಂಟುಮಾಡುವುದು. ಎಂದು ಆಯುರ್ವೇದವು ಹೇಳುತ್ತದೆ.ಯುಗಾದಿ ದಿನದಂದು ಸಂಕಲ್ಪಪೂರ್ವಕವಾಗಿ ಈ ಆಭ್ಯಂಗವನ್ನು ಕೈಗೊಂಡರೆ, ನಿತ್ಯವೂ ಅಭ್ಯಂಗವನ್ನು ಆಚರಿಸುವಂತಾಗುತ್ತದೆ ಇಂದಿನ ದಿನ ಪ್ರಜಾಪತಿ/ಕಾಲಪುರುಷನನ್ನು ಪೂಜಿಸಬೇಕು.ನಿನ್ನ ದೇಹವಾಗಿರುವ ಈ ಕಾಲದಲ್ಲಿ ಪರ್ವಸ್ಥಾನಗಳನ್ನು ಅರಿತು ಅವುಗಳನ್ನು ಅರ್ಥವತ್ತಾಗಿ ಆಚರಿಸಿ ಕಾಲವನ್ನೇ ದಾಟಿ ನಿನ್ನನ್ನು ಸೇರುವ ಸಾಧನೆಗಾಗಿ ಸಂಸಾರಸಾಗರದಿಂದ ಮುಕ್ತರಾಗುವಂತೆ ಮಾಡು ಎಂಬ ಅರಿಕೆಯನ್ನು ಇಡುವುದು ಉಚಿತವಾಗಿದೆ. ಪಂಚಾಗ ಶ್ರವಣ: ತಿಥಿ, ವಾರ, ನಕ್ಷತ್ರ, ಯೋಗ, ಕರಣ ಇವುಗಳ ಜ್ಞಾನದೊಡನೆಯೇ ಪ್ರತಿದಿನ ವ್ಯವಹರಿಸಬೇಕು.ಇಂದಿನ ದಿನದ ಪಂಚಾಂಗದ ಜೊತೆಗೆ, ಇಡೀ ಸಂವತ್ಸರದ ಪಂಚಾಂಗವನ್ನು, ಸಾಮಾನ್ಯವಾದ ಯೋಗವನ್ನು ಕೇಳಿ ತಿಳಿದರೆ ಅದಕ್ಕೆ ತಕ್ಕಂತೆ ವರ್ಷದ ಕಾರ್ಯಯೋಜನೆ ಹಾಕಿಕೊಳ್ಳಲು ಸಹಾಯವಾಗುವುದು ಎಂದು. ದಾನ: ಯುಗಾದಿಯ ಪರ್ವದಲ್ಲಿ ಸಾಮಾನ್ಯವಾದ ಅನ್ನದಾನಗಳ ಜೊತೆಗೆ, ವಿಶೇಷವಾಗಿ ಪಂಚಾಂಗ, ಮತ್ತು ವಸ್ತ್ರಭೂಷಣಗಳನ್ನು ದಾನಮಾಡಬೇಕಂತೆ. ವಸಂತ ಋತುವಿನಲ್ಲಿ ಉಷ್ಣತೆ ಹೆಚ್ಚು ಇರುವುದರಿಂದ ಅಂದು ನೀರಿನ ಪಾತ್ರೆಗಳನ್ನು, ದೇವಸ್ಥಾನಾದಿ ಜಾಗಗಳಲ್ಲಿ ಸಿಹಿನೀರು, ಮಜ್ಜಿಗೆ, ಪಾನಕ ಮುಂದಾದವುಗಳನ್ನು ದಾನ ಮಾಡುವುದು ಕಾಲೋಚಿತವಾದ ದಾನವೇ ಆಗುತ್ತದೆ. ನೈವೇದ್ಯ : ಇಂದು ಅರ್ಪಿಸಿ ಸೇವಿಸಬೇಕಾದ ವಿಶೇಷವಾದ ನೈವೇದ್ಯ "ಬೇವು". ಹೂವಿನೊಡನೆ ಕೂಡಿದ ಚಿಗುರಬೇವು, ವಸಂತ ಮಾಸದಲ್ಲಿ ಬಿಸಿಲಿನ ಬೇಗೆಗೆ ಕರಗುವ ಕಫ ಭಗವತ್ ಕಾರ್ಯಕ್ಕೆ ಅಡ್ಡಿಬಾರದಿರಲೆಂದು ಬೇವು ತಿನ್ನುವ ಪದ್ಧತಿ.

ಶತಾಯುರ್ವಜ್ರದೇಹಾಯ ಸರ್ವಸಂಪತ್ಕರಾಯಚ| 
ಸರ್ವಾರಿಷ್ಟವಿನಾಶಾಯ ನಿಂಬಕಂದಳಭಕ್ಷಣಂ||

ಹಿ ಬೇವು ತಿನ್ನುವುದರಿಂದ, ಹೃದಯಕ್ಕೆ ಖಿನ್ನತೆ ಉಂಟಾಗುತ್ತದೆ. ವಾತ ಪ್ರಕೋಪಕ್ಕೂ ಕಾರಣವಾಗುತ್ತದೆ. ಧಾತುಗಳಲ್ಲಿ ವೈಷಮ್ಯತೆ ಉಂಟುಮಾಡದಿರಲೆಂದು ಬೇವಿನೊಂದಿಗೆ ಬೆಲ್ಲ ಸೇರಿಸಿ ಭಕ್ಷಿಸುವ ಕ್ರಮ ಬಂದಿದೆ. 


ಸತ್ಯಯುಗ, ತ್ರೇತಾಯುಗ, ದ್ವಾಪರಯುಗ, ಕಲಿಯುಗಗಳ ಶ್ರೀರಂಗಮಹಾಗುರುಗಳು ಯುಗಾದಿಯನ್ನು ಸತ್ಯಯುಗದ ಆದಿ ಎಂದು ನಿರ್ದೇಶಿಸಿದ್ದಾರೆ. ಕೆಲವರು ಚೈತ್ರ, ಶುದ್ಧ ಪ್ರತಿಪತ್ ಎಂದು ಆಚರಿಸುತ್ತಾರೆ. ಇನ್ನು ಕೆಲವರು ಮೇಷ, ಸಂಕ್ರಮಣದ ದಿವಸದಲ್ಲಿ ಯುಗಾದಿ ಆಚರಿಸುತ್ತಾರೆ. ಬ್ರಹ್ಮನು ಸೃಷ್ಟಿಸಿದ ದಿನದಂದು ಗ್ರಹ, ನಕ್ಷತ್ರಗಳೆಲ್ಲವೂ ಚಲಿಸಲು ಪ್ರಾರಂಭವಾಯಿತು. ಚಂದ್ರನ ಚಲನೆಯನ್ನೇ ಆಧರಿಸಿ, ಚಂದ್ರನನ್ನು ನಾವು ಪಕ್ಷದ ಗಣನೆಯ ಮೂಲಕ ಗಣನೆ ಮಾಡುತ್ತೇವೆ. ಚಂದ್ರನ ನಡೆಗೆ ಅನುಸಾರವಾಗಿ ಕಾಲ ಗಣನೆಮಾಡುವ ಗುಂಪು, ಚಾಂದ್ರಮಾನ ಯುಗಾದಿಯೆಂದು ಆಚರಿಸುತ್ತಾರೆ. ಅಂತೆಯೇ ಸೂರ್ಯನ ಚಲನೆಯನ್ನಾಧರಿಸಿ ಕಾಲ ಗಣನೆಯಿಡುವ ಗುಂಪು ಸೌರಮಾನ ಯುಗಾದಿ ಎಂದು ಆಚರಿಸುತ್ತಾರೆ. ಅವರದ್ದು ಸರಿ, ಇವರದ್ದು ತಪ್ಪು ಎಂಬ ಗೊಂದಲಕ್ಕೆ ಇಲ್ಲಿ ಪ್ರಶ್ನೆಯೇ ಇಲ್ಲ. ಎರಡೂ ಸಮಂಜಸ. ಅವರ ಪೂರ್ವಜರು ಯಾವ ರೀತಿಯಲ್ಲಿ ಆಚರಿಸಿಕೊಂಡು ಬಂದಿರುತ್ತಾರೋ ಆದಿನವೇ ಅವರಿಗೆ ಪ್ರಾಶಸ್ತ್ಯ. ಸೌರಮಾನ ಯುಗಾದಿಯನ್ನು "ಚಿತ್ರವಿಷು" ಎಂಬ ಹೆಸರಿನಲ್ಲಿ ಆಚರಿಸುತ್ತಾರೆ. ಚಾಂದ್ರಮಾನ ಯುಗಾದಿಯನ್ನು "ಸಂವತ್ಸರ ಪ್ರತಿಪತ್" ಎಂಬುದಾಗಿ ಆಚರಿಸುತ್ತಾರೆ. ಈ ಕಾಲದಲ್ಲಿ ಹೊರಗಿನ ಸೂರ್ಯನು ರಾಶಿಯಲ್ಲಿ ಹೆಜ್ಜೆ ಹಾಕುತ್ತಿರುವಂತೆ ಸಮಕಾಲದಲ್ಲಿ ನಮ್ಮೊಳಗಿನ ಜೀವ ಸೂರ್ಯನು ಸುಷುಮ್ನೆಯ ಗ್ರಂಥಿಯೊಳಗೆ ಸಂಗಮ ಹೊಂದುತ್ತಾನೆ ಮತ್ತು ಸಮಾಧಿಯಲ್ಲಿ ಅವಗಾಹನೆ ಮಾಡಲು ತೊಡಗುತ್ತಾನೆ ಎಂಬುದು ಅನುಭವಿ ಜ್ಞಾನಿಗಳ ಮಾತು. ಆಗ ಪ್ರಾಮಾಣಿಕವಾಗಿ ಧ್ಯಾನಾಭ್ಯಾಸ ಮಾಡುವ ಸಾಧಕರಿಗೆ ಈ ಪರ್ವಕಾಲದ ಮಹಾಮೌಲ್ಯವು ಅನುಭವಕ್ಕೆ ಬರುವ ವಿಷಯಗಳಾಗಿವೆ. ನಾಡೀ ವಿಜ್ಞಾನದಲ್ಲಿ ಒಳ್ಳೆಯ ಪರಿಚಯವುಳ್ಳವರಿಗೆ ಆ ಮಹತ್ವವನ್ನು ಪ್ರಾಯೋಗಿಕವಾಗಿಯೂ ತೋರಿಸಬಹುದು ಎಂಬುದನ್ನು ಶ್ರೀರಂಗಮಹಾಗುರುಗಳು ತಿಳಿಸುತ್ತಿದ್ದರು. ಹೀಗೆ ದೇವತಾನುಗ್ರಹದಿಂದಲೂ, ಪುರುಷಪ್ರಯತ್ನದಿಂದಲೂ ಧರ್ಮ, ಅರ್ಥ, ಕಾಮ, ಮೋಕ್ಷಗಳಾದ ಎಲ್ಲಾ ಪುರಷಾರ್ಥಗಳಸಾಧನೆಗೂ ಹೊಂದಿಕೆಯಾಗಿ ಮಹರ್ಷಿಗಳ ಅದ್ಭುತವಾದ ಕಾಲವಿಜ್ಞಾನಕ್ಕೆ "ಯುಗಾದಿಯ" ಆಚರಣೆಯೂ ಕೈಗನ್ನಡಿಯಾಗಿದೆ. ಈ ಪವಿತ್ರ ಸ್ಮರಣೆಯಲ್ಲಿ ನಾವೆಲ್ಲರೂ ಹಬ್ಬವನ್ನು ಆಚರಿಸುವಂತಾಗಲಿ.

ಸೂಚನೆ: 21/03/2020 ರಂದು ಈ ಲೇಖನ ಉದಯವಾಣಿ ಯಲ್ಲಿ ಪ್ರಕಟವಾಗಿದೆ.

ಮಹರ್ಷಿಗಳ ಪೂಜಾಪದ್ಧತಿಯ ವೈಶಿಷ್ಟ್ಯ (Maharsigala Poojapaddhatiya Vaishistya )

ಲೇಖಕರು: ಶ್ರೀಮತಿ ಮೈಥಿಲೀ  ರಾಘವನ್
(ಪ್ರತಿಕ್ರಿಯಿಸಿರಿ : lekhana@ayvm.in)



ಭಾರತೀಯಮಹರ್ಷಿಗಳು ತಪೋಬಲದಿಂದ ತಮ್ಮೊಳಗೆ ಬೆಳಗುವ ದೈವೀ ಸಾಮ್ರಾಜ್ಯ - ಆತ್ಮಸಾಮ್ರಾಜ್ಯಗಳನ್ನು ಕಂಡು ನಲಿದರು. ತಾವು ಅನುಭವಿಸಿದ ಶಾಂತಿ ಸಮೃದ್ಧಿಯನ್ನು ಲೋಕವೆಲ್ಲವೂ ಅನುಭವಿಸಿ ನಲಿದಾಡಲೆಂಬ ಕರುಣೆ-ಹೆಬ್ಬಯಕೆಗಳಿಂದ ಅತ್ತಕಡೆಗೆ ಲೋಕವನ್ನು ಸೆಳೆಯುವಂತೆ ಜೀವನ ಕ್ರಮವನ್ನು ರೂಪಿಸಿದರು. 

ಮಹರ್ಷಿಗಳ ಪೂಜಾಪದ್ಧತಿಯು ಅವರ ಜೀವನಕ್ರಮದ ಅತಿಪ್ರಮುಖ ಅಂಗವಾಗಿದೆ.  ಜೀವ-ದೇವರ ನಡುವಿನ ಸೇತುವೆಯಾಗುವಂತೆ ರೂಪಿತವಾಗಿರುವ ಈ ಕ್ರಮವು ಮಹರ್ಷಿಗಳ ಮೇಧಾವಿಲಾಸವನ್ನು ಲೋಕಕ್ಕೆ ಸಾರುವಂತಿದೆ. ಮಹರ್ಷಿಗಳು ಸೃಷ್ಟಿಯ ಪದಾರ್ಥಗಳಮೇಲೆ ತಮ್ಮ ದೃಷ್ಟಿಯನ್ನು ಹರಿಸಿ ಅವುಗಳ ಗುಣಧರ್ಮಗಳನ್ನು ಗುರುತಿಸಿ, ತಮ್ಮ ಉದ್ದೇಶಕ್ಕೆ ಪೂರಕವಾಗುವಂತೆ ಅವುಗಳನ್ನು ಬಳಸಿಕೊಂಡಿರುವುದು ಅವರ ಪ್ರತಿಭೆಗೊಂದು ನಿದರ್ಶನ. ಭೌತಿಕ-ದೈವಿಕ-ಆಧ್ಯಾತ್ಮಿಕ ಮೂರುಕ್ಷೇತ್ರಗಳಿಗೂ ಒಂದು ಕೊಂಡಿಯಾಗುವಂತೆ ಮಂತ್ರ(ಸ್ತೋತ್ರ)-ತಂತ್ರ-ಕ್ರಿಯಾಕಲಾಪಗಳನ್ನು ಕಲ್ಪಿಸಿಕೊಟ್ಟಿದ್ದಾರೆ. ಅತ್ತ ಸಾಗಲು ಬೇಕಾದ ಮನಸ್ಥಿತಿಯನ್ನು ಹೊಂದಿಸುವ ಒಳ-ಹೊರ ಸಿದ್ಧತೆಗಳನ್ನೂ ಸಹ ಋಷಿಗಳು ನಿರ್ದೇಶಿಸಿದ್ದಾರೆ.

ಜ್ಞಾನಿಯಾದವನು ತನ್ನ ದೇಹವೆಂಬ ದೇವಾಲಯದೊಳಗೆ ಭಗವಂತನನ್ನು ಅನುಭವಿಸಿ ಅದರಿಂದಾದ ಆನಂದದೊಂದಿಗೆ ಹೊರದೇವಾಲಯಗಳಲ್ಲಿ ಅರ್ಚಕನಾಗಿ ಪೂಜಿಸಿದಾಗ ಆತನು 'ಅರ್ಚಕಸ್ಸ ಹರಿಃಸಾಕ್ಷಾತ್' ಎಂಬಂತೆ ಅತ್ಯಂತ ಪೂಜ್ಯನಾಗುತ್ತಾನೆ. ಆತನು ಮಾಡುವ ಪೂಜೆ, ಮಾಡಿಸುವ ದೇವರದರ್ಶನ, ನೀಡುವ ಪ್ರಸಾದ ಮುಂತಾದವುಗಳ ಮೂಲಕ ಆತನು ತಾನುಪಡೆದ ಕಷ್ಟಸಾಧ್ಯವಾದ ಫಲವನ್ನು ಇತರರು ಸುಲಭವಾಗಿ ಪಡೆಯುವಂತೆ ವಿತರಣೆಮಾಡುವ ಯೋಜನೆ ಋಷಿಪ್ರಣೀತ ಕಲ್ಪದಲ್ಲಡಗಿದೆ. 

ಗಂಧ-ಪುಷ್ಪ-ಧೂಪ-ದೀಪ-ನೈವೇದ್ಯ ಮುಂತಾದ ಪ್ರತಿಯೊಂದು ಪೂಜಾಂಗವೂ ಜೀವಿಯನ್ನು ಭಗವಂತನೆಡೆ ಸೆಳೆಯುವ ಯೋಜನೆಯಿಂದಲೇ ರೂಪಿಸಲ್ಪಟ್ಟಿದೆ. ಪೂಜಾದ್ರವ್ಯಗಳ ಆಯ್ಕೆ, ಅವುಗಳನ್ನು ಬಳಸಬೇಕಾದ ಕ್ರಮ ಎಲ್ಲೆಡೆಯಲ್ಲೂ ಮಹರ್ಷಿಗಳ ವೈಜ್ಞಾನಿಕಮನೋಧರ್ಮವು ಹರಿದಿರುವುದನ್ನು ಮಹರ್ಷಿಹೃದಯವೇದ್ಯರಾದ ಶ್ರೀರಂಗಮಹಾಗುರುಗಳು ಎತ್ತಿತೋರಿಸಿದ್ದಾರೆ. ಉದಾಹರಣೆಗೆ, ದೇವರ ಅಭಿಷೇಕ ತೀರ್ಥಕ್ಕೆ ಕೇಸರಿ, ಏಲಕ್ಕಿ, ಪಚ್ಚಕರ್ಪೂರ, ಲವಂಗ ಮುಂತಾದ ಪರಿಕರಗಳನ್ನು ಸೇರಿಸುವ ಪದ್ಧತಿಯಿದೆ. ಈ ದ್ರವ್ಯಗಳ ಪ್ರತ್ಯೇಕಧರ್ಮ ಹಾಗೂ ಒಟ್ಟು ಸೇರಿದಾಗ ಕೂಡಿಬರುವ ಪರಿಣಾಮಗಳನ್ನು ನಾಡೀಪರಿಜ್ಞಾನದಿಂದ ನಿಖರವಾಗಿ ಅಳೆದ ಶ್ರೀರಂಗಮಹಾಗುರುಗಳು ಅವುಗಳ ಸ್ಪರ್ಶ-ಆಘ್ರಾಣ-ಸೇವನೆಗಳು ಮನಸ್ಸು-ಪ್ರಾಣಗಳನ್ನು ಒಳಾಮುಖವಾಗಿ ಸೆಳೆಯುತ್ತವೆ ಎಂಬುದನ್ನು ಸುಸ್ಪಷ್ಟವಾಗಿ ನಿರೂಪಿಸಿದರು. 

ಅಂತೆಯೇ ಯಾವ ದ್ರವ್ಯಗಳ ಗಂಧ-ಸ್ಪರ್ಶ-ಸೇವನೆಗಳು ನಮ್ಮೊಳಗಿನ ಯಾವ ದೇವತಾಕೇಂದ್ರವನ್ನು ತೆರೆಯಬಲ್ಲವು ಎಂಬುದನ್ನು ಮಹರ್ಷಿಗಳ ಕುಶಾಗ್ರಮತಿಯು ಗುರುತಿಸಿಕೊಂಡಿತ್ತು. ಈ ಅರಿವಿನ ಆಧಾರದ ಮೇಲೆ ಬೇರೆಬೇರೆ ದೇವತೆಗಳ ಸಾಕ್ಷಾತ್ಕಾರಕ್ಕೆ ಪೋಷಕವಾಗುವ ದ್ರವ್ಯಗಳನ್ನು ಆಯಾ ದೇವತೆಗಳಿಗೆ 'ಪ್ರಿಯ' ಎಂಬುದಾಗಿ ಸೂಚಿಸಿ ಅವರ ಪೂಜೆಗೆ ಅವುಗಳನ್ನು ವಿಧಿಸಿದ್ದಾರೆ. ಶ್ರೀರಂಗಮಹಾಗುರುಗಳು ನೀಡಿರುವ ಈ ವಿವರಣೆಯು 'ದೇವತೆಗಳಿಗೂ ನಮ್ಮಂತೆ ಇಷ್ಟ-ಅನಿಷ್ಟಗಳುಂಟೇ? ನಾಲಿಗೆಯ ಚಾಪಲ್ಯವುಂಟೇ?' ಎಂಬ ಸಂಶಯಗಳನ್ನು ಪರಿಹರಿಸುತ್ತದೆ.

ಸಾರಾಂಶವಾಗಿ ಹೇಳುವುದಾದರೆ ಮಹರ್ಷಿಗಳ ಪೂಜಾಪದ್ಧತಿಯು ಅತ್ಯಂತ ವೈಜ್ಞಾನಿಕವಾಗಿದ್ದು  ನಿಜಕ್ಕೂ ಜೀವ-ದೇವರ ನಡುವಿನ ಸೇತುವೆಯೇ ಆಗಿದೆ. ಜೊತೆಗೆ ಪೂಜೆಗೆ ಒದಗಿಬರುವ ಸೃಷ್ಟಿಯಲ್ಲಿನ ಪದಾರ್ಥಗಳಿಗೂ ಧನ್ಯತೆಯನ್ನು ಕೊಡುವ ಅತ್ಯುತ್ತಮ ಕಲ್ಪವಾಗಿದೆ. ಈ ಕರ್ಮದ ಮರ್ಮವರಿತು ಆಚರಿಸಿ ದೇವನ ಸಾಕ್ಷಾತ್ಕಾರಕ್ಕಾಗಿ ಪ್ರಯತ್ನಿಸೋಣ. ಇಂತಹ ಅದ್ಭುತ ಕೊಡುಗೆಯನ್ನು ಅನುಗ್ರಹಿಸಿದ ಮಹರ್ಷಿಗಳಿಗೆ ನಮ್ಮ ಅನಂತಾನಂತ ಪ್ರಣಾಮಗಳು ಅರ್ಪಿತವಾಗಲಿ.

ಸೂಚನೆ: 21/03/2020 ರಂದು ಈ ಲೇಖನ  ಪ್ರಜಾವಾಣಿ ಯಲ್ಲಿ ಪ್ರಕಟವಾಗಿದೆ.

ಆರ್ಯ ಮತ್ತು ಅನಾರ್ಯ (‘Arya’ Mattu ‘Anaarya’)


ಲೇಖಕರು: ಶ್ರೀ ನರಸಿಂಹ ಭಟ್ಟ 
(ಪ್ರತಿಕ್ರಿಯಿಸಿರಿ lekhana@ayvm.in)




ಯಥಾ ಕಂದುಕಪಾತೇನ ಉತ್ಪತತಿ ಆರ್ಯಃ ವಿಪತನ್ನಪಿ |
ತಥಾ ತು ಅನಾರ್ಯಃ ಪತತಿ ಮೃತ್ಪಿಂಡಪತನಂ ಯಥಾ ||  -ಸುಭಾಷಿತ ನೀತಿಶತಕ ೮೩

ಅರ್ಥ- ಹೇಗೆ ಒಂದು ಚೆಂಡು ಕೆಳಗೆ ಬಿದ್ದರೂ ಮತ್ತೆ ಪುಟಿದು ಮೇಲಕ್ಕೆ ಚಿಮ್ಮುತ್ತದೆಯೋ ಹಾಗೆಯೇ ಆರ್ಯನಾದ ಸತ್ಪುರುಷ. ಹೇಗೆ ಮಣ್ಣಿನ ಮುದ್ದೆಯು ಕೆಳಕ್ಕೆ ಬಿದ್ದರೆ ಮತ್ತೆ ಮೇಲಕ್ಕೆ ಏಳಲು  ಸಾಧ್ಯವಿಲ್ಲವೋ ಅಂತಯೇ ಅನಾರ್ಯನಾದ ದುಷ್ಟ.

ವಿವರಣೆ- ಇಲ್ಲಿ ಎರಡು ಬಗೆಯ ಮನುಷ್ಯರು ಇದ್ದಾರೆ, 'ಆರ್ಯ' ಮತ್ತು 'ಅನಾರ್ಯ' ಎಂದು. ಕರ್ತವ್ಯವನ್ನು ಮಾಡುವವನು, ಅಕರ್ತವ್ಯವನ್ನು ಮಾಡದವನು, ಪ್ರಕೃತವಾದದ್ದನ್ನು ಮಾಡುವವನಿಗೆ 'ಆರ್ಯ' ಎಂದು ಕರೆಯುತ್ತಾರೆ. ಇದಕ್ಕೆ ವಿರುದ್ಧಸ್ವಭಾವ ಉಳ್ಳವನು 'ಅನಾರ್ಯ'ನಾಗುತ್ತಾನೆ. ಪ್ರಕೃತಿಕ್ಷೇತ್ರದಲ್ಲಿ ಇಳಿದವನಿಗೆ ಪ್ರತಿಯೊಬ್ಬರಿಗೂ ಕಷ್ಟಗಳು ಬರುವುದು ಸಹಜ. ಎಂತಹ ಜ್ಞಾನಿಯಾದವನಿಗೂ ಅದು ತಪ್ಪಿದ್ದಲ್ಲ , ಎಂದರೆ ಸಾಮಾನ್ಯರ ಪಾಡೇನು!. ಒಳ್ಳೆಯ ನಡೆ-ನುಡಿ-ಆಚಾರ-ವಿಚಾರವನ್ನು ಪಾಲಿಸುವವನಿಗೂ ಕೂಡಾ ಕೆಲವೊಮ್ಮೆ ಕಷ್ಟಸಂಕಷ್ಟಗಳು ಬಂದು ಕುಸಿದು ಜೀವನದಲ್ಲಿ ಪಡಬಾರದ ಪಾಡನ್ನು ಅನುಭವಿಸಿ ಮತ್ತೆ ಏಳುವುದೇ ಕಷ್ಟ ಎಂಬ ಪರಿಸ್ಥಿತಿಗೆ ಬರುತ್ತಾನೆ. ಆದರೂ ಮುಂದೊಮ್ಮೆ ಮತ್ತೆ ಜೀವನದಲ್ಲಿ ಮೇಲೆದ್ದು ಸಂತೋಷವನ್ನು ಹೊಂದುವನು. ಚೆಂಡು ಕೆಳಕ್ಕೆ ಬಿದ್ದರೂ ಮತ್ತೆ ಮೇಲಕ್ಕೆ ಪುಟಿದೇಳುವುದು. ಚೆಂಡು ಹಗುರವಾಗಿದೆ. ಹಾಗಾಗಿ ಅದು ಭೂಮಿಯ ಆಕರ್ಷಣೆಗೆ ಒಳಪಡದೇ ಮೇಲಕ್ಕೆ ಏಳುತ್ತದೆ. ಸಜ್ಜನನಾದವನು ಯಾವುದೇ ಆಸೆ ಆಮಿಷಕ್ಕೆ ಆಕರ್ಷಿತನಾಗದೇ ಜೀವನದಲ್ಲಿ ಉತ್ಕರ್ಷವನ್ನು ಪಡೆಯುತ್ತಾನೆ. ಅದೇ ಮಣ್ಣಿನ ಮುದ್ದೆ ಭಾರವಾಗಿರುವುದರಿಂದ ಒಮ್ಮೆ ಬಿದ್ದರೆ ಮತ್ತೆ ಏಳಲು ಆಗುವುದೇ ಇಲ್ಲ. ಅಂತೆಯೇ ಕೆಟ್ಟ ಮನುಷ್ಯನು ಒಮ್ಮೆ ಜೀವನದಲ್ಲಿ ಕಷ್ಟಕ್ಕೆ ಸಿಲುಕಿ ಕೆಳಕ್ಕೆ ಬಿದ್ದರೆ ಮತ್ತೆ ಕಷ್ಟದಿಂದ ಪಾರಾಗಲು ಸಾಧ್ಯವೇ ಇಲ್ಲ. ಸಜ್ಜನನು ತಾನು ಮಾಡಿದ ಸತ್ಕಾರ್ಯದಿಂದ ಪಾಪವನ್ನೆಲ್ಲಾ ತೊಳೆದುಕೊಂಡು ಹಗುರನಾಗಿ ಎತ್ತರದ ಸ್ಥಾನಕ್ಕೆ ಏರುತ್ತಾನೆ. ದುರ್ಜನನು ತಾನು ಮಾಡಿದ ದುಷ್ಕೃತ್ಯದ ಫಲವಾಗಿ ಪಾಪಿಷ್ಠನಾಗಿ ಭಾರನಾಗಿ ಇಲ್ಲೇ ಕೆಳಗೆ ಬಿದ್ದು ನರಳುತ್ತಾನೆ. ಪುಣ್ಯ=ಲಘು, ಪಾಪ=ಗುರು.

ಸೂಚನೆ:  21/03/2020 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ .

Thursday, March 19, 2020

ಯೋಗ ಭೋಗ ಸಮನ್ವಯ (Yoga Bhoga Samanvaya)

ಲೇಖಕರು: ಶ್ರೀ ರಾಜಗೋಪಾಲನ್
(ಮಿಂಚ್ಅಂಚೆ  lekhana@ayvm.in)


ನುಷ್ಯ ಎಲ್ಲ ಕೆಲಸ ಮಾಡುವುದು, ತನ್ನ ಸುಖಕ್ಕಾಗಿ. ಆ ಸುಖವನ್ನು ತನ್ನ ಇಂದ್ರಿಯಗಳ ಮೂಲಕವಷ್ಟೇ ಆತ ಅನುಭವಿಸಬಹುದು. ಕಣ್ಣಿಗೆ ನೋಟ, ಮೂಗಿಗೆ ಗಂಧ….ಇತ್ಯಾದಿ ಒಂದೊಂದು ಇಂದ್ರಿಯಕ್ಕೂ ಒಂದೊಂದು ವಿಷಯ ಬೇಕು. ಆಶ್ಚರ್ಯವೆಂದರೆ ಇಂದ್ರಿಯಗಳಿಗೆ ಬೇಕಾದ್ದನ್ನು ಕೊಟ್ಟಮೇಲೂ ತನಗಿನ್ನೂ ಪೂರ್ಣತೆ ಸಿಕ್ಕಿಲ್ಲವೆಂಬ ತುಡಿತ ಮನುಷ್ಯನನ್ನು ಕೆಲವೊಮ್ಮೆ ಬಾಧಿಸುತ್ತದೆ.

ನಮ್ಮ ದೇಶದ ದಾರ್ಶನಿಕರು ಹಾಗೂ ವೇದಾಂತಿಗಳು ಈ ಸಮಸ್ಯೆಗೆ ತಮ್ಮ ವಿಶಿಷ್ಟವಾದ ನೋಟವನ್ನು ಪರಿಹಾರದ ರೂಪದಲ್ಲಿ ಕೊಟ್ಟಿದ್ದಾರೆ. ಎಲ್ಲೋ ಹುಟ್ಟಿದ ನದಿ, ಸಮುದ್ರವನ್ನು ಸೇರುವವರೆಗೂ ತನ್ನ ಧಾವಂತವನ್ನು ಮುಂದುವರೆಸುವಂತೆ, ಮನುಷ್ಯನೂ ಕೂಡ ತನಗರಿವಿಲ್ಲದಂತೆಯೇ, ತನ್ನ ಮೂಲನೆಲೆಯಾದ ಭಗವಂತನನ್ನು ಸೇರುವವರೆಗೂ ಒಂದು ತುಡಿತವನ್ನು ಅನುಭವಿಸುತ್ತಲೇ ಇರುತ್ತಾನೆ. ಒಮ್ಮೆ ತನ್ನ ವಿಶ್ರಾಂತಿಧಾಮವನ್ನು ಕಂಡುಕೊಂಡಾಗಲಷ್ಟೆ ಮನುಷ್ಯ ಪೂರ್ಣತೃಪ್ತನಾಗಬಲ್ಲ ಎನ್ನುತ್ತಾರೆ, ದಾರ್ಶನಿಕರು. ರೋಗವೇನೆಂದು ಪತ್ತೆಯಾಗದೆ ಇದ್ದಾಗ ವೈದ್ಯನೇ ರೋಗಿಯ ಮೇಲೆ ಬೇರೆ ಬೇರೆ ಔಷಧಗಳನ್ನು ಪ್ರಯೋಗ ಮಾಡುತ್ತಿರುವಂತೆ, ಒಬ್ಬ ಜೀವಿಯು ಪೂರ್ಣಸುಖದ ತಾಣವನ್ನು ವಿಧವಿಧವಾಗಿ ಅರಸುತ್ತಲೇ ಇರುತ್ತಾನೆ; ಈ ಸಮಸ್ಯೆಗೆ ಪರಿಹಾರ, ದೇವದರ್ಶನ ಒಂದೇ ಎನ್ನುವ ವೇದಾಂತಿಗಳಲ್ಲಿ ಕೆಲವರು, ಲೌಕಿಕ ಭೋಗವನ್ನು ಬಿಟ್ಟ ಹೊರತು ಪಾರಲೌಕಿಕವಾದ ಭಗವಂತ ಸಿಗಲಾರ ಎಂದು ಎಚ್ಚರಿಸುತ್ತಲೇ ಬಂದಿದ್ದಾರೆ.

ಮನುಷ್ಯನಿಗಾದರೋ, ಇಂದ್ರಿಯಗಳ ಸೆಳೆತ ಪ್ರಕೃತಿ ಸಹಜವಾದದ್ದೇ. ಇವುಗಳನ್ನು ಆತ ಬಿಡಲಾರ. ಯತ್ನಪೂರ್ವಕವಾಗಿ ಬಿಡಲು ಹೋದರೆ, ವಿಶ್ವಾಮಿತ್ರಾದಿ ಋಷಿಗಳು ತೀವ್ರ ತಪಸ್ಸನ್ನು ಮಾಡುತ್ತಿದ್ದಾಗ, ಕಾಮಕ್ಕೋ ಕ್ರೋಧಕ್ಕೋ ವಶರಾದಂತೆ, ಕಷ್ಟಕ್ಕೆ ತುತ್ತಾಗುತ್ತಾನಷ್ಟೇ. ಅಧ್ಯಾತ್ಮ ಮಾರ್ಗದಲ್ಲಿ ಸಾಗುವ ಸಾಧಕನಿಗೆ, ಇಂದ್ರಿಯಗಳಿಗೆ ಬೇಕಾದ್ದನ್ನು ಕೊಡದಿರಲಾರದ ಚಿಂತೆ ಒಂದು ಕಡೆ; ಭೋಗವನ್ನು ಬಿಡಲಾಗಲಿಲ್ಲವಲ್ಲ ಎಂಬ ದುಃಖ ಮತ್ತೊಂದು ಕಡೆ, ಎಳೆಯುತ್ತದೆ.

ಇಂದ್ರಿಯಗಳ ಸ್ವಭಾವವನ್ನು ಬಲ್ಲ ಮಹಾತ್ಮರು "ಇಂದ್ರಿಯಗಳಿಗೆ ವಿಷಯಗಳನ್ನು ಕೊಡದಿರಲು ಯತ್ನಿಸಬೇಡಿ; ಇಂದ್ರಿಯಗಳಿಗೆ ಅವು ತಡೆಯುವಷ್ಟು ಭಗವದ್ವಿಷಯವನ್ನು ಕೊಟ್ಟು ಪಳಗಿಸಿ" ಎಂದಿದ್ದಾರೆ.
ಶ್ರೀ ಕುಲಶೇಖರ ಆಳ್ವಾರರು ತಮ್ಮ ಮುಕುಂದಮಾಲಾ ಸ್ತೋತ್ರದಲ್ಲಿ ಹೀಗೆಂದಿದ್ದಾರೆ-- 

"ಜಿಹ್ವೇ ಕೀರ್ತಯ ಕೇಶವಂ ಮುರರಿಪುಂ ಚೇತೋ ಭಜ ಶ್ರೀಧರಂ 
ಪಾಣಿ ದ್ವಂದ್ವ ಸಮರ್ಚಯ ಅಚ್ಯುತ ಕಥಾಃ ಶ್ರೋತ್ರದ್ವಯ ತ್ವಂ ಶೃಣು 
ಕೃಷ್ಣಂ ಲೋಕಯ  ಲೋಚನದ್ವಯ ಹರೇರ್ಗಚ್ಚ್ಛಾಂಘ್ರಿಯುಗ್ಮಾಲಯಂ 
ಜಿಘ್ರ ಘ್ರಾಣ ಮುಕುಂದಪಾದತುಲಸೀಂ ಮೂರ್ಧನ್ ನಮಾಧೋಕ್ಷಜಂ"

(ನಾಲಗೆಯೇ, ಕೇಶವನನ್ನು ಕೀರ್ತಿಸು; ಮನವೇ,  ಮುರಾರಿಯನ್ನು ಭಜಿಸು. ಕೈಗಳಿರಾ, ಶ್ರೀಧರನನ್ನು ಅರ್ಚಿಸಿರಿ; ಕಿವಿಗಳೇ, ಅಚ್ಯುತನ ಕಥೆಯನ್ನು ಕೇಳಿರಿ; ಕಣ್ಣುಗಳೇ, ಕೃಷ್ಣನನ್ನು ನೋಡಿ; ಕಾಲುಗಳೇ, ಹರಿಯ ಆಲಯಕ್ಕೆ  ಹೋಗಿ;  ಮೂಗೇ, ಮುಕುಂದನ ಪಾದಗಳ ಮೇಲಿಟ್ಟ  ತುಳಸಿಯನ್ನು ಆಘ್ರಾಣಿಸು; ತಲೆಯೇ, ಭಗವಂತನನ್ನು ನಮಿಸು)

ಶ್ರೀರಂಗ ಮಹಾಗುರುಗಳು ಯಾವ ನೋಟವನ್ನು ಇಟ್ಟುಕೊಂಡು ಬಾಳಬೇಕು ಎಂಬ ಬಗ್ಗೆ ಹೀಗೆ ಎಚ್ಚರಿಸಿದ್ದಾರೆ - "ಲೋಕಕ್ಕೆ ಬಂದ ಮೇಲೆ ಭೋಗಕ್ಕೆ ದೂರವಾಗಬೇಡಿ. 'ಯಾವುದು ತಾನೇ ಶಾಶ್ವತ?' ಎಂಬ ಒಣಮಾತಿನಿಂದ ಎಲ್ಲಾ ವಿಷಯಗಳನ್ನೂ ತಳ್ಳಬೇಡಿ.  ಹಾಗೆ ಆಗುವುದಾದರೆ,  ಈಶ್ವರ ಈ ಸೃಷ್ಟಿಯಲ್ಲಿ ಕಣ್ಣು, ಕಿವಿ, ನಾಲಿಗೆ ಮೊದಲಾದ ಇಂದ್ರಿಯಗಳನ್ನೂ ಕೊಟ್ಟು ಅವುಗಳ ವಿಷಯವನ್ನೂ ಏಕೆ ಕೊಟ್ಟಿದ್ದಾನೆ?  ಆದ್ದರಿಂದ ಇಂದ್ರಿಯಕ್ಕೆ ವಿಷಯ ಬೇಡ ಎಂದುಕೊಳ್ಳಬೇಡಿ. ನಾನ್ಸೆನ್ಸ್(nonsense) ಆದ ವರ್ತನೆ ಬೇಡ.  ಆತ್ಮಹಾನಿಯಾಗದ ರೀತಿಯಲ್ಲಿ ವಿಷಯವನ್ನು ಕೊಡಿ".

ಹೀಗೆ ಐಹಿಕ ವಿಷಯಗಳ ಜೊತೆ ಜೊತೆಗೇ ಭಗವಂತನನ್ನೂ ಸೇರಿಸಿ ಕೊಡುತ್ತಿದ್ದರೆ, ಭಗವಂತನ ರುಚಿ ಹತ್ತಿ, ಇಹ -ಪರಗಳೆರಡನ್ನೂ ಸಮತೋಲನದಲ್ಲಿ ಇಟ್ಟುಕೊಂಡು ಪೂರ್ಣ ಜೀವನವನ್ನು ಜೀವಿಗಳು ನಡೆಸಲು ಕಲಿಯಬಲ್ಲರು.

ಸೂಚನೆ: 19/03/2020 ರಂದು ಈ ಲೇಖನವು ವಿಶ್ವವಾಣಿಯ ಗುರುಪುರವಾಣಿ ಯಲ್ಲಿ ಪ್ರಕಟವಾಗಿದೆ.