Thursday, September 30, 2021

ಭಗವಂತ ಭಾಗವತರ ಸಂಬಂಧ (Bhagavanta Bhaagavatara Sambandha)

ಲೇಖಕರು; ಡಾ. ರಾಮಮೂರ್ತಿ ಟಿ. ವಿ

(ಪ್ರತಿಕ್ರಿಯಿಸಿರಿ lekhana@ayvm.in)



"ಲಾಲಿಸಿದರೆ ಮಕ್ಕಳು, ಪೂಜಿಸಿದರೆ ದೇವರು" ಇದು ಕನ್ನಡಿಗರಿಗೆ ಪರಿಚಿತವಾದ ಗಾದೆ. ಮಕ್ಕಳು, ಪ್ರೀತಿಯ, ಸಮಾಧಾನವಾದ ಮಾತುಗಳಿಗೆ ಒಲಿಯುತ್ತಾರೆ; ಹಾಗೆಯೇ ತ್ರಿಕರಣಶುದ್ಧರಾಗಿ ಪ್ರೀತಿಯಿಂದ ಭಗವಂತನನ್ನು ಸಜ್ಜನರು ಒಲಿಸಿಕೊಳ್ಳುತ್ತಾರೆ. ಭಾಗವತೋತ್ತಮನಾದ ಪ್ರಹ್ಲಾದರಾಜನು ಭಗವಂತನು ಒಲಿಯಬೇಕಾದರೆ, ಭಕ್ತರು ನವವಿಧ ಭಕ್ತಿಯನ್ನು ಅನುಸರಿಸಬೇಕೆಂದು ಲೋಕಕ್ಕೆ ಉಪದೇಶಮಾಡಿರುತ್ತಾನೆ. ನವವಿಧಭಕ್ತಿಯಲ್ಲಿ ಪರಮಾತ್ಮನ ಪಾದಸೇವೆ, ದಾಸ್ಯಗಳೆಂಬ ಉಪಚಾರಗಳೂ ಸೇರಿವೆ. "ಏನು ಧನ್ಯಳೋ ಲಕುಮಿ ಎಂಥ ಮಾನ್ಯಳೋ, ಸಾನುರಾಗದಿಂದ ಹರಿಯ ತಾನೇ ಸೇವೆ ಮಾಡುತಿಹಳು"ಎಂಬ ಪುರಂದರದಾಸರ ಕೀರ್ತನೆ ಸ್ಮರಣೀಯ. 

ಜಗನ್ಮಾತೆಯೇ ಹರಿಯ ಪಾದಸೇವೆಯಲ್ಲಿ ನಿತ್ಯವೂ ನಿರತಳಾಗಿರುತ್ತಾಳೆ. ಈ ರೀತಿ ಮಾಡುವ ಪೂಜೆಗಳು, ಸೇವೆಗಳು ಭಗವಂತನಿಗೆ ಸೇರುವುವೇ? ಎಂಬ ಸಂಶಯಗಳು ಸಾಮಾನ್ಯರ ಮನಸ್ಸಿಗೆ ಬರಬಹುದು. ಇದಕ್ಕೆ ಉತ್ತರ ಶ್ರೀರಂಗಗುರುಗಳ ವಾಣಿಯಲ್ಲಿದೆ- "ಫೋನ್ ನಲ್ಲಿ ಮಾತನಾಡಿದರೆ ಸಾವಿರಾರು ಮೈಲಿ ದೂರ ಸಾಗಬಹುದು. ನಿಮ್ಮ ಮನಸ್ಸನ್ನು ಭಗವಂತನವರೆಗೆ ಹರಿಯಬಿಟ್ಟರೆ ಅಲ್ಲಿಗೂ ನೀವು ಮಾಡುವ ಉಪಚಾರ ತಲುಪಬಹುದು. ಭಗವನ್ಮಯವಾಗಿ ಜೀವನ ನಡೆಸಲು ಒಂದು ವಿಧಾನ ಹಾಕಿಕೊಟ್ಟಿದ್ದಾರೆ. ಹಾಗೆ ಮಾಡುವ ಜೀವನದಲ್ಲಿ ಸತ್ಯ, ಸೌಂದರ್ಯ, ಮಾಂಗಲ್ಯಗಳಿಗೆಡೆಯಿವೆ" .

ಪುರಾಣಗಳಲ್ಲಿ ಬರುವ ಪ್ರಹ್ಲಾದ, ಧ್ರುವ, ದ್ರೌಪದಿ, ಭೀಷ್ಮ ಮುಂತಾದವರು ಹಾಗೂ ಚರಿತ್ರೆಯಲ್ಲಿ ನಾವು ನೋಡುವ ಪುರಂದರ ದಾಸರು, ಸಂತ ಸಕ್ಕುಬಾಯಿ ಇತ್ಯಾದಿ ಭಾಗವತರು ಭಗವಂತನಲ್ಲಿ ಭಕ್ತಿಯ ಸಂಬಂಧವನ್ನಿಟ್ಟುಕೊಂಡು ತಮ್ಮ ಇಹ-ಪರ ಜೀವನವನ್ನು ಸಾರ್ಥಕವಾಗಿ ಕಳೆದ ಪ್ರಸಂಗಗಳು ಉತ್ತಮ ಉದಾಹರಣೆಗಳಾಗಿವೆ. ಶುದ್ಧವಾದ ಭಕ್ತಿಗೆ ಮೆಚ್ಚಿದ ಭಗವಂತ ಭಕ್ತರ ವಿಷಯದಲ್ಲಿ ವಿಶೇಷ ಪ್ರೀತಿಯನ್ನು ತೋರಿದ ಪ್ರಸಂಗಗಳು ಇಲ್ಲದಿಲ್ಲ. ಮಹಾಭಾರತದ ಯುದ್ಧದ ಸಮಯದಲ್ಲಿ ತನ್ನ ಭಕ್ತರಾದ ಭೀಷ್ಮಪಿತಾಮಹರ ಮಾತನ್ನುಳಿಸಲು, ತಾನು, ಕುರುಕ್ಷೇತ್ರ ಯುದ್ಧದಲ್ಲಿ ಶಸ್ತ್ರ ಹಿಡಿಯುವುದಿಲ್ಲವೆಂಬ ತನ್ನ ಮಾತು ಮುರಿದರೂ ಲೆಕ್ಕಿಸದೇ, ಶ್ರೀಕೃಷ್ಣನು ಸುದರ್ಶನಚಕ್ರ ಹಿಡಿದನಲ್ಲವೇ?

ಪಂಡರಾಪುರದ ಸಮೀಪದ ಗ್ರಾಮದಲ್ಲಿ ಜನಿಸಿದ ಸಂತಸಕ್ಕುಬಾಯಿಯವರ ಕಥೆ ಭಾರತೀಯರೆಲ್ಲರಿಗೆ ಪರಿಚಿತವಾದದ್ದು. ಭಗವಂತನು ತನ್ನ ಭಕ್ತೆಯಾದ ಸಕ್ಕುಬಾಯಿಯವರ ಪರವಾಗಿ ಅತ್ತೆಯ ಮನೆಯಲ್ಲಿದ್ದುಕೊಂಡು ಮನೆಯ ಕೆಲಸವನ್ನೆಲ್ಲಾ ಮಾಡಿ ಸಂತಸಕ್ಕುಬಾಯಿಯವರನ್ನು ಪಂಡರಾಪುರಕ್ಕೆ ಕಳಿಸುವ ಘಟನೆ ರೋಮಾಂಚನವನ್ನುಂಟುಮಾಡದಿರದು. ಇನ್ನೊಂದು ಪುರಾಣಪ್ರಸಂಗದಲ್ಲಿ, ಭಗವಂತನು ವಾಮನನಾಗಿ ಬಲಿಯ ಮನೆಗೆ ಬಂದು ಮೂರಡಿ ಭೂಮಿಯನ್ನು ಕೇಳಿ, ತ್ರಿವಿಕ್ರಮನಾಗಿ ಬೆಳೆದಾಗ, ಬಲಿಯು ಶರಣಾದ. ಹರಿಯಪಾದ ಬ್ರಹ್ಮಾಂಡವನ್ನೇ ವ್ಯಾಪಿಸಿ, ಮೂರನೆಯ ಪಾದಕ್ಕೆ ಜಾಗವಿಲ್ಲದಾಗ, ತನ್ನ ಶಿರವನ್ನೇ ಬಲಿಯು ಒಪ್ಪಿಸಿಕೊಂಡ. ಭಗವಂತನು ಮೆಚ್ಚಿ, ಬಲಿಯನ್ನು, ಪಾತಾಳದ ದೊರೆಯನ್ನಾಗಿ ಮಾಡಿ, ಅವನ ಬಾಗಿಲು ಕಾಯುವ ಕಾಯಕವನ್ನು ಮಾಡುತ್ತಿರುವುದು ಭಗವಂತ- ಭಾಗವತರ ಸಂಬಂಧ ಎಷ್ಟು ಅದ್ಭುತವೆಂದು ನಿರೂಪಿಸುತ್ತದೆ. ಭಗವಂತನು ಭಕ್ತರಸೇವೆ ತನ್ನಲ್ಲಿ ಅರ್ಪಿತವಾಗಬೇಕಾದರೆ ಸುಲಭೋಪಾಯ ಸೂಚಿಸುತ್ತಾನೆ- "ನನ್ನಲ್ಲೇ ಮನಸ್ಸಿಡು. ನನ್ನನ್ನು ಅತಿಶಯವಾಗಿ ಪ್ರೀತಿಸು. ನನ್ನನ್ನೇ ಆರಾಧಿಸು. ನನಗೆ ತಲೆಬಾಗು. ಮನಸ್ಸನ್ನು ಹೀಗೆ ಅಣಿಗೊಳಿಸಿ ನನ್ನನ್ನೇ ಮೊರೆಹೊಕ್ಕಾಗ ನನ್ನನ್ನೇ ಸೇರುವೆ" ಶುದ್ಧವಾದ ಭಕ್ತಿಯುಳ್ಳ ತನ್ನ ಭಕ್ತರನ್ನೇ ಉಪಚರಿಸುವ ಅಂತಹ ಭಗವಂತನಲ್ಲಿ ನಾವು ಮಾಡುವ ಸೇವೆ ನೆಲೆನಿಲ್ಲಲಿ ಎಂದು ಪ್ರಾರ್ಥಿಸೋಣ.

ಸೂಚನೆ: 30/09/2021 ರಂದು ಈ ಲೇಖನವು ವಿಶ್ವ ವಾಣಿ ಯಲ್ಲಿ ಪ್ರಕಟವಾಗಿದೆ.


சமையற்கூடமும் அடுப்பும் (Samaiyal Kudamum Aduppum)

மூலம்: தாரோடி சுரேஷ்

தமிழாக்கம்: வனஜா

மின்னஞ்சல் : (lekhana@ayvm.in)




    ஒரு இயந்திரம் சரியான முறையில் இயங்க வேண்டுமெனில் சிறியதாயினும் மரைகளும் ஆணிகளும் பொருத்தமாக இருத்தல் அவசியம். இயந்திரத்தின் அனைத்து பாகங்களும் குறையின்றி இருந்தால் மட்டுமே சரியாக இயங்கும். அது போன்றே நம் பண்டைய ரிஷிகள் அனைத்து நுட்பமான அம்சங்களையும் கருத்தில் கொண்டு சமையல்கலையை விரிவாக வகுத்துள்ளனர்.


       சமையல் அறை எங்கு அமைய வேண்டும் என்ற அவர்களின் கருத்தை ஆராய்கையிலேயே அவர்களின் தொலைநோக்கு விளங்கும். சமையல் அறை பூஜை அறையை ஒட்டியே அமைதல் வேண்டும். சமையல் நிறைவுற்றதும் முதலில் இறைவனுக்கு அர்ப்பணிக்கப்பட வேண்டுமன்றோ? எனவே உணவு தயாரானதும் முதலில் பூஜையறையை அடைய வேண்டும், நம் உணவு கூடத்தை அல்ல. உணவு இறைவனுக்கு படைக்கப்பட்டு ப்ரசாதமாக மாறிய பின்னரே அது உணவு கூடத்தை அடைய வேண்டும்.


          மேலும் அடுப்பு சமையல் அறையின் தென்கிழக்கில் இருத்தல் வேண்டுமென்ற விதி உள்ளது. அடுப்பு எத்திசையில் இருப்பினும் சமைப்பதில் தடையில்லை.  ஆயின் தென்கிழக்கு அக்னி பகவானின் ஆற்றல் பெருகும் இடம். இயற்கையையும், அதன் நுண்ணிய தத்துவங்களையும் அறிந்தவர் மட்டுமே இவ்வாறு திட்டமிட இயலும். இதன் பின்னணியில் அடுப்பு சமையல் அறையின்  தென்கிழக்கு மூலையில் அமைதல் நன்று.  இவ்வாறாயின் இயல்பாகவே அக்னி பகவானின் கருணை பெருகும். தீயை எதிரில் காணும்போதும் நம் எண்ணம்  அதன் மூலரூபமான அக்னிதேவனின்பால் செல்ல  எந்த இடையூறும் ஏற்பாடாது. இதில் மனதை  ஸ்தூலத்திலிருந்து சூக்ஷ்மத்திற்கு  அழைத்துச்செல்லும்  திறனும் பொதிந்துள்ளது. 


               அடுப்பு வடிவமைக்கப்பட்ட முறையிலும் நம் முனிவர்களின் நிபுணத்வத்தை அறியலாம். இத்தகைய அடுப்பை இக்காலத்தில் காண்பது அரிது. பின்புறம் ஒன்றும்  முன்னிலையில் இரண்டுமாக மேடான(குப்பிகள் போன்ற)  பாகங்கள் கொண்டு முக்கோணம் போன்று காணப்படும். இக்காலத்திலும் அதிகமான நபர்களுக்கான சமையலின்போது பின்புறம் ஒன்றும் முன்புறத்தில் இரண்டுமாக கற்களை வைத்து சமைக்கும் பழக்கம் உள்ளது. இத்தகைய அமைப்பில் பாத்திரங்களை வைத்து இக்காலத்தில் எளிதாக சமைக்கலாம். ஆனால் அதன் உட் பொருள் ஸ்ரீரங்கமஹாகுருவின் மூலம் இவ்வாறு விவரிக்கப்படுகிறது.


        படைப்பின் ஆதியில் பரம்பொருளானது  ஒரு பிந்து-புள்ளியாக காட்சியளிக்கிறது.  அதுவே பரம்பொருளின் வடிவம். அப்பரம்பொருள் தான் விரிவடையும்  பொருட்டு தன்னை   புருஷன்-ப்ரக்ருதி என மற்றும் இரண்டாக பிரித்துக்கொள்கிறது. இம்மூன்று மேடுகளை காண்கையில் படைப்பின் மூலத்திலுள்ள பரம்பொருளையும் அவன் விரிவடைதலையும்  நினைவு கூர்கிறோம். ஜீவன் தனது மூலத்தை மறவாத வண்ணம் ஆன்மீக உட்பொருளுடன் அடுப்பினை வடிவமைத்த ரிஷிகளின் அறிவு கூர்மை உண்மையில் வியப்பிற்குரியது.


குறிப்பு: இக்கட்டுரை யின் கன்னட மூலம் AYVM blogs ல் காணலாம்.

Tuesday, September 28, 2021

ಶ್ರೀರಾಮನ ಗುಣಗಳು - 24 ವಿದ್ವಾನ್ - ಶ್ರೀರಾಮ (Sriramana Gunagalu - 24 Vidhvan Srirama)

 ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ 

(ಪ್ರತಿಕ್ರಿಯಿಸಿರಿ lekhana@ayvm.in)

ಶ್ರೀರಾಮನು 'ವಿದ್ವಾನ್' ಆಗಿದ್ದ. ಈ ವಿದ್ವಾನ್ ಎಂಬ ಶಬ್ದವನ್ನು ಇಂದು ನಾವು ಬಹಳ ಕಡೆ ಕಾಣುತ್ತೇವೆ. ಶಾಸ್ತ್ರವಿದ್ವಾನ್, ಸಂಗೀತವಿದ್ವಾನ್, ನಾಟ್ಯವಿದ್ವಾನ್ ಇತ್ಯಾದಿಯಾಗಿ. ಅಂದರೆ ಒಂದು ವಿದ್ಯೆಯಲ್ಲಿ ಪಾರಂಗತ ಅಥವಾ ಆ ವಿಷಯವನ್ನು ಚೆನ್ನಾಗಿ ಬಲ್ಲವನು ಎಂಬ ಅರ್ಥದಲ್ಲಿ ಈ ಪದ ಬಳಕೆಯಾಗುತ್ತಿದೆ. ಆದರೆ ನಿಜವಾಗಿಯೂ ವಿದ್ವಾನ್ ಎಂಬ ಶಬ್ದದಲ್ಲಿ ಯಾವ ಗಂಭೀರವಾದ ಅರ್ಥ ಹುದುಗಿದೆ? ಎಂಬುದನ್ನು ಗಮನಿಸಬೇಕು. ಮತ್ತು ಶ್ರೀರಾಮನಿಗೆ ಈ ಪದ ಯಾವ ರೀತಿಯಲ್ಲಿ ಅನ್ವರ್ಥವಾಗುತ್ತದೆ? ಎಂಬುದನ್ನು ಮನಗಾಣಬೇಕು. ಇದು ಸಂಸ್ಕೃತಭಾಷೆಯ ಶಬ್ದವಾಗಿದೆ. 'ವಿದ್' ಅಂದರೆ ಜ್ಞಾನ, ಅದನ್ನು ಉಳ್ಳವನು 'ವಿದ್ವಾನ್' ಎಂಬುದು ಈ ಪದದ ಅರ್ಥ. 

ಹಾಗಾದರೆ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಪದಾರ್ಥದ ಅರಿವು ಇದ್ದೇ ಇರುತ್ತದೆ. ಹಾಗಾಗಿ ಪ್ರತಿಯೊಬ್ಬರೂ ಜ್ಞಾನಿಗಳಾಗಬೇಕಲ್ಲವೇ? ಹಾಗಾದರೆ ಯಾವುದು ನಿಜವಾದ ಜ್ಞಾನ? ಅಂತಹ ಜ್ಞಾನ ಉಳ್ಳವನು ಯಾರು? "ಸತ್ಯಂ ಜ್ಞಾನಮನಂತಂ ಬ್ರಹ್ಮ" ಎಂದು ಉಪನಿಷತ್ತು ಹೇಳುವಂತೆ 'ಭಗವಂತ' ಅಥವಾ 'ಪರಬ್ರಹ್ಮ'ನನ್ನು ಮೊಟ್ಟಮೊದಲು 'ಜ್ಞಾನ' ಎನ್ನಲಾಗುತ್ತದೆ. ಈ ಅರಿವು ಯಾರಿಗೆ ಇರುತ್ತದೆಯೋ ಅವನನ್ನು ವಿದ್ವಾನ್ ಎಂಬುದಾಗಿ ಮೂಲತಃ ಕರೆಯಬೇಕಾಗುತ್ತದೆ. ಶ್ರೀರಾಮನು ಈ ದೃಷ್ಟಿಯಲ್ಲಿ ವಿದ್ವಾನ್. ಹಾಗಾದರೆ ಇಂದು ನಾವು ಅನೇಕರಿಗೆ ವಿದ್ವಾನ್ ಎನ್ನುವುದು ಎಷ್ಟು ಸರಿ? ಅಂದರೆ- ಭಗವಂತನ ಜ್ಞಾನವನ್ನು ಹೊತ್ತು ಸಾರುವ ಯಾವೆಲ್ಲ ಅರಿವಿದೆಯೋ ಅವೆಲ್ಲವನ್ನೂ 'ವಿಜ್ಞಾನ' ಎನ್ನುತ್ತಾರೆ. ಆ ಪರಬ್ರಹ್ಮವೇ ಸೃಷ್ಟಿಯಲ್ಲಿ ಹಾಸುಹೊಕ್ಕಾಗಿ ಸೇರಿಕೊಡಿದೆ. ಇದನ್ನು ತಿಳಿಯುವುದೂ ವಿದ್ಯೆಯೇ. ಇಂತಹ ವಿದ್ಯೆ ಉಳ್ಳವನನ್ನೂ 'ವಿದ್ವಾನ್' ಎಂದೇ ಕರೆಯಬೇಕಾಗುತ್ತದೆ. ಶ್ರೀರಂಗಮಹಾಗುರುಗಳ ಮಾತು ಇಲ್ಲಿ ಸ್ಮರಣೀಯ. "ಬ್ರಹ್ಮವಿದ್ಯೆಯನ್ನು ಕೊಡತಕ್ಕಂತಹ ವಿದ್ಯೆ ಯಾವುದುಂಟೋ ಅದೇ ತಾನೆ ವಿದ್ಯೆ. 'ಅಧ್ಯಾತ್ಮವಿದ್ಯಾ ವಿದ್ಯಾನಾಂ – ವಿದ್ಯೆಯಲ್ಲಿ ಅಧ್ಯಾತ್ಮವಿದ್ಯೆ ನಾನಾಗಿದ್ದೇನೆ ಎಂದು ಕೃಷ್ಣ ಹೇಳಿದ್ದೂ ಉಂಟು" ಎಂದು. ಜ್ಞಾನ ಎಂಬ ಪದವು ಮೂಲತಃ ಭಗವಂತನ ವಾಚಿ ಆದರೂ; ಯಾವುದರಿಂದ ನಾವು ಪರಮಾತ್ಮನ ಅರಿವನ್ನು ಪಡೆಯುತ್ತೇವೋ ಅದನ್ನೂ ವಿದ್ಯೆ ಅಥವಾ ಜ್ಞಾನ ಎಂಬುದಾಗಿಯೇ ಹೇಳುತ್ತೇವೆ. 

ಶ್ರೀರಾಮನು ಈ ದೃಷ್ಟಿಯಿಂದಲೂ ವಿದ್ವಾನ್ ಆಗಿದ್ದ. ಅವನು ಹೇಗೆ ವಿದ್ಯಾಸಂಪನ್ನನಾಗಿದ್ದ ಎಂಬುದನ್ನೂ ಶ್ರೀಮದ್ರಾಯಣವೇ ವಿವರಿಸುತ್ತದೆ. 'ಶ್ರೀಮಂತಃ ಕೀರ್ತಿಮಂತಶ್ಚ ಸರ್ವಜ್ಞಾ ದೀರ್ಘದರ್ಶಿನಃ" ಎಂಬುದಾಗಿ. ಅವನು ವೇದಾದಿ ಎಲ್ಲಾ ವಿದೆಗಳಲ್ಲೂ ಪಾರಂಗತನಾಗಿದ್ದನು. ಪಿತೃಶುಶ್ರೂಷೆಯಲ್ಲೂ ರತನಾಗಿದ್ದನು. ಧನುರ್ವೇದದಲ್ಲೂ ಅಷ್ಟೇ ಪ್ರಾವೀಣ್ಯವನ್ನು ಸಂಪಾದಿಸಿದ್ದನು. ಅನಂತರ ಮಹರ್ಷಿ ವಿಶ್ವಾಮಿತ್ರರ ಆಶ್ರಯದಲ್ಲಿ ಯುದ್ಧಕ್ಕೆ ಬೇಕಾದ ಬಲ-ಅತಿಬಲ ರೂಪವಾದ ಅನೇಕ ಶಸ್ತ್ರ ಮತ್ತು ಅಸ್ತ್ರವಿದ್ಯೆಯನ್ನೂ ಸಂಪಾದಿಸಿದ್ದನು. ವಿಶ್ವಾಮಿತ್ರರಿಂದ ಪಾವನವಾದ ಅನೇಕ ಪೂರ್ವಜರ ಕಥೆಯನ್ನು ಕೇಳಿ ಲೋಕಜ್ಞಾನವನ್ನೂ ಸಂಪಾದಿಸಿದ್ದ. ವಿದ್ಯೆಯೆಂಬುದು ಗುರುಕುಲದಲ್ಲಿ ಗುರುಗಳಿಂದ ಸಂಪಾದಿಸುವ ಜ್ಞಾನದ ಜೊತೆಯಲ್ಲಿ, ಅಲ್ಲೇ ಸಿಗುವ ಲೋಕಜ್ಞಾನವೂ ಮೇಳೈಸಿದರೆ ಮಾತ್ರ ಪರಿಪೂರ್ಣವಾದ ಜ್ಞಾನವಾಗುವುದು. ಅಂತಹ ಜ್ಞಾನಸಂಪತ್ತಿಯುಳ್ಳವನು ಶ್ರೀರಾಮನಾಗಿದ್ದ. ಇಷ್ಟೇ ಅಲ್ಲದೇ ರಾಜನೀತಿಕುಶಲನೂ ಆಗಿದ್ದ. ಅವನ ರಾಜ್ಯವು ಇಂದಿಗೂ ಆದರ್ಶಪ್ರಾಯವಾಗಬೇಕಾದರೆ ಅವನಿಗೆ ಅದೆಷ್ಟು ನೈಪುಣ್ಯವಿದ್ದಿರಬೇಕು! ಎಂಬುದನ್ನೂ ಊಹಿಸಬಹುದು. ಇದು ತಾನೆ ಶ್ರೀರಾಮನ ವಿದ್ವತ್ತು!.

ಸೂಚನೆ : 26/9/2021 ರಂದು ಈ ಲೇಖನವು  ಹೊಸದಿಗಂತ ಪತ್ರಿಕೆಯ " ಶ್ರೀರಾಮನ ಗುಣಗಳು " ಅಂಕಣದಲ್ಲಿ ಪ್ರಕಟವಾಗಿದೆ

Monday, September 27, 2021

ರಾಜನೀತಿಯಲ್ಲಿ ಒಂದು ಪಾಠ (Rajaniitiyalli Ondu Paatha)

ಲೇಖಕರು : ಡಾ|| ಎಸ್.ವಿ. ಚಾಮು

ರಾಮನು ಕಾಡಿಗೆ ಹೋಗದಂತೆ ಮಾಡಲು ದಶರಥನು ಕಡೆಯದಾಗಿ ಅವನಿಗೆ 'ಭವ ರಾಜಾ ನಿಗೃಹ್ಯ ಮಾಂ।' (ನನ್ನನ್ನು ನಿಗ್ರಹಿಸಿ ನೀನು ರಾಜನಾಗು) ಎಂದು ನುಡಿಯುತ್ತಾನೆ. ಅದು ಹತಾಶನಾದ ರಾಜನ ಕೊನೆಯ ಪ್ರಯತ್ನ. ಆದರೆ ರಾಮನು ಬಲ ಪ್ರಯೋಗ ಮಾಡಿ ತಂದೆಯಿಂದ ರಾಜ್ಯವನ್ನು ವಶಪಡಿಸಿಕೊಳ್ಳುವಂತಹ ಮಗನಲ್ಲ. ಅವನು ತನಗುಚಿತವಾದ ಗಾಂಭೀರ್ಯದಿಂದ 'ಭವಾನ್ ವರ್ಷಸಹಸ್ರಾಯ ಪೃಥಿವ್ಯಾಃ ಪತಿರುತ್ತಮಃ|' (ಸಾವಿರ ವರ್ಷಗಳಿಗೂ ನೀನೇ ಪೃಥಿವಿಗೆ ಉತ್ತಮನಾದ ಪತಿ) ಎಂದು ಉತ್ತರಿಸುತ್ತಾನೆ.


ಇದು ರಾಮನ ಸಮಾಚಾರ. ಲೋಕದಲ್ಲಿ ರಾಜರುಗಳಿಗೆ ಶತ್ರುಗಳಿಂದ ಎಷ್ಟು ಭಯವಿರುತ್ತದೆಯೋ, ಮಹತ್ವಾಕಾಂಕ್ಷಿಗಳಾದ ಮಕ್ಕಳು, ಭ್ರಾತೃಗಳು ಮತ್ತು ಬಂಧುಗಳಿಂದ ಅಷ್ಟೇ ಭಯವಿದ್ದಿರುತ್ತದೆ. ಅದಕ್ಕೋಸ್ಕರ ಕೊಲೆ, ರಾಷ್ಟ್ರನಾಶ ಇತ್ಯಾದಿಗಳು ಸಾಕಷ್ಟು ನಡೆದಿರುತ್ತವೆ. ಈಗಲೂ ನಡೆಯುತ್ತಿವೆ. ಆದರೆ ಪ್ರಜಾಪ್ರಭುತ್ವಕ್ಕೆ ವ್ಯಾಪಕವಾಗಿ ಮನ್ನಣೆ ದೊರಕಿರುವುದರಿಂದ ಇಂದು ಬಹಳ ದೇಶಗಳಲ್ಲಿ ಅಧಿಕಾರಕ್ಕೆ ಬರುವ ವಿಧಾನವು ಬದಲಾವಣೆಯಾಗಿರುತ್ತದೆ.


ಪ್ರಜಾಪ್ರಭುತ್ವದ ತತ್ತ್ವವನ್ನು ಅನುಸರಿಸಿರುವ ದೇಶಗಳಲ್ಲಿ ನಮ್ಮದೂ ಒಂದು. ಅದರ ಪ್ರಕಾರ ರಾಜ್ಯದ ಚುಕ್ಕಾಣಿ ಹಿಡಿಯುವ ನಾಯಕರು ಚುನಾವಣೆಯಲ್ಲಿ ವಿಜಯಿಗಳಾಗುವ ವಿಧಾಯಕರಿಂದ ಆರಿಸಲ್ಪಡುತ್ತಾರೆ. ಆದುದರಿಂದ ಅವರನ್ನು ಆರಂಭದಿಂದ ಕೊನೆಯವರೆಗೆ ತಮ್ಮ ಕಡೆ ಇರಿಸಿಕೊಳ್ಳುವ ಕಷ್ಟಸಾಧ್ಯವಾದ ಜವಾಬ್ದಾರಿ ಪ್ರಧಾನಮಂತ್ರಿ ಮತ್ತು ಮುಖ್ಯಮಂತ್ರಿಗಳ ಉಡಿಯಲ್ಲಿ ಬೀಳುತ್ತದೆ. ಅವರೇನಾದರೂ ಪ್ರತಿಕೂಲರಾದರೆ ಮಂತ್ರಿ ಮಹೋದಯರು ಬುಡ ಕಡಿದ ಮರದಂತೆ ಉರುಳಿ ಬೀಳುತ್ತಾರೆ. ವಿಧಾಯಕರು 'ಮೂರು ದೋಸೆ ಕೊಟ್ಟರೆ ಅತ್ತೆಯ ಕಡೆ, ಆರು ದೋಸೆ ಕೊಟ್ಟರೆ ಸೊಸೆಯ ಕಡೆ' ಎಂಬ ನೀತಿಯನ್ನು ಅನುಸರಿಸುವರು. ತಮ್ಮ ಮತಗಳಿಗೆ ಪರ್ಯಾಪ್ತವಾದ ಬೆಲೆ ಅಥವಾ ಲಾಭ ದೊರಕುವವರೆಗೆ ಅವರು ಅನುಕೂಲವಾಗಿರುತ್ತಾರೆ. ಜೊತೆಗೆ ಚುನಾವಣೆಯಲ್ಲಿ ಗೆದ್ದಿರುವುದರಿಂದ ಅವರೆಲ್ಲರೂ ನಾಯಕರಾಗಲು ಅರ್ಹರಾದವರೇ! ಎಲ್ಲರೂ ಮಹಾತ್ವಾಕಾಂಕ್ಷಿಗಳೇ! ಅವರಲ್ಲಿ ಯಾರು ಕುಟಿಲ ತಂತ್ರ ನಿಷ್ಣಾತರೋ, ಯಾರ ಬಳಿ ಬಹಳ ಧನವಿರುತ್ತದೆಯೋ ಅಥವಾ ಯಾರಿಗೆ ಧನಿಕರ ಬೆಂಬಲವಿರುತ್ತದೆಯೋ ಅವರು ಸಾಕಷ್ಟು ಸಂಖ್ಯೆಯಲ್ಲಿ ವಿಧಾಯಕರನ್ನು ಖರೀದಿಸಿ ಅಧಿಕಾರಕ್ಕೆ ಬರಬಹುದು. ವಾಸ್ತವದಲ್ಲಿ ಒಬ್ಬರು ಪ್ರಧಾನ ಮಂತ್ರಿಯೋ ಮುಖ್ಯಮಂತ್ರಿಯೋ ಆದರೆ ಆ ಕ್ಷಣದಿಂದ ಅವರನ್ನು ಉರುಳಿಸಲು ಒಂದು ಭಿನ್ನಮತೀಯರ ಗುಂಪು ತಯಾರಾಗುತ್ತದೆ. ಇದು 50 ವರ್ಷದ ಪ್ರಜಾಪ್ರಭುತ್ವದ ಚರಿತ್ರೆ. ಒಳ್ಳೆಯ ನಾಯಕರಿಲ್ಲದಿರುವುದರಿಂದ ಇದು ಇತ್ತೀಚೆಗೆ ದೊಡ್ಡ ಪ್ರಮಾಣವನ್ನು ತಾಳಿರುತ್ತದೆ. ಈ ಲೇಖನವನ್ನು ಬರೆಯುತ್ತಿರುವಾಗ ಗುಜರಾತಿನಲ್ಲಿ ಅಂತಹದೊಂದು ಕಿರುನಾಟಕ ನಡೆದುದನ್ನು ಪತ್ರಿಕೆಯಲ್ಲಿ ಓದಿದೆವು. ಈ ವಿಧಾಯಕರುಗಳಿಗೆ ಉತ್ತಮವಾದ ರಾಜ್ಯಶಾಸ್ತ್ರದ ಮೂಲತತ್ವಗಳ ವಿಷಯದಲ್ಲಾಗಲಿ, ಅದರ ಆದರ್ಶಗಳ ವಿಷಯದಲ್ಲಾಗಲೀ ಆಳವಾದ ನಂಬಿಕೆ ಇರುವಂತೆ ಕಾಣುವುದಿಲ್ಲ. ಅವರ ದಕ್ಷತೆ ಮತ್ತು ಪ್ರಾಮಾಣಿಕತೆಗಳು ಸಂದಿಗ್ಧವಾಗಿಯೇ ಇರುತ್ತವೆ. ಸ್ವಹಿತದಲ್ಲಿ ಅವರ ಆಸಕ್ತಿ ಬಹಳ. ಅವರ ಅಲ್ಪಕಾಲಾವಧಿ ಮುಗಿದ ನಂತರ ಅವರಿಗೆ ಸಿಗುವುದು ಭ್ರಷ್ಟ, ಅನರ್ಹ, ಸ್ವಾರ್ಥಿ ಮುಂತಾದ ಬಿರುದುಗಳು. ಭೇದನೀತಿಯನ್ನು ಅವಲಂಬಿಸಿಯೇ ಅವರೆಲ್ಲರೂ ಮುಂದಕ್ಕೆ ಬರುತ್ತಾರೆ. ಅದರ ದೆಸೆಯಿಂದ ಸಮಾಜವು ಛಿದ್ರ ಛಿದ್ರವಾಗಿ ಒಡೆಯುತ್ತದೆ. ಅವರಲ್ಲಿ ನ್ಯಾಯ, ಸತ್ಯ, ಧರ್ಮ ಮುಂತಾದವುಗಳ ಮೇಲೆ ಆಧಾರಿತವಾದ ನೀತಿಗಳು ಇಲ್ಲವೇ ಇಲ್ಲ ಎಂದರೆ ತಪ್ಪಾಗದು. ನಮ್ಮ ಪೂರ್ವಿಕರು ಈಗಿರುವುದಕ್ಕಿಂತ ಬೇರೆಯಾದ ಮತ್ತು ಪ್ರಶಸ್ತವಾದ ಆದರ್ಶಗಳ ಮೇಲೆ ವಿರಚಿತವಾದ ರಾಜ್ಯ ಪದ್ಧತಿಯನ್ನು ನಿರ್ಮಿಸಿಕೊಂಡಿದ್ದರು ಎಂಬುದು ನಮ್ಮ ದೇಶದ ಕಾವ್ಯೇತಿಹಾಸಗಳಿಂದ ತಿಳಿದು ಬರುತ್ತದೆ. ಅದರ ಉತ್ತಮವಾದ ಆದರ್ಶಗಳನ್ನು ಎತ್ತಿ ಹಿಡಿಯುವ ಒಂದು ಪ್ರಸಂಗವನ್ನು ಆದಿಕಾವ್ಯದಿಂದ ಸ್ಮರಿಸಿಕೊಳ್ಳುತ್ತೇವೆ.


ದಶರಥನು ಜ್ಯೇಷ್ಠನೂ ರಾಜಗುಣಸಂಪನ್ನನೂ ಆದ ರಾಮನನ್ನು ಯುವರಾಜನನ್ನಾಗಿ ಮಾಡಲು ಇಚ್ಛಿಸುತ್ತಾನೆ. ಆದರೆ ಮಂಥರೆಯ ದುರ್ಬೋಧನೆಯಿಂದ ಕೈಕೇಯಿಯ ಬುದ್ದಿಯಲ್ಲಿ ಭೇದವುಂಟಾಗುತ್ತದೆ. ಅವಳು ರಾಜನು ಯಾವುದೋ ಒಂದು ಸಂದರ್ಭದಲ್ಲಿ ಕೊಟ್ಟಿದ್ದ ಎರಡು ವರಗಳನ್ನು ಮುಂದಿಟ್ಟುಕೊಂಡು ರಾಮನನ್ನು 14 ವರ್ಷಗಳ ಕಾಲ ದಂಡಕಾರಣ್ಯಕ್ಕೆ ಕಳುಹಿಸಬೇಕೆಂದೂ ಮತ್ತು ತನ್ನ ಮಗನಾದ ಭರತನಿಗೆ ಅಭಿಷೇಕ ಮಾಡಬೇಕೆಂದೂ ಪತಿಯನ್ನು ನಿರ್ಬಂಧ ಪಡಿಸುತ್ತಾಳೆ. ಸತ್ಯವಾಕ್ಯನಾದ ರಾಜನಿಗೆ ವರಗಳನ್ನು ಇಲ್ಲವೆನ್ನಲಾಗುವುದಿಲ್ಲ. ತಂದೆಯ ಮಾತನ್ನು ಪಾಲಿಸಲು ರಾಮನು ಸೀತಾಲಕ್ಷ್ಮಣರೊಡನೆ ಕಾಡಿಗೆ ಹೋಗುತ್ತಾನೆ. ತಾತನ ಮನೆಗೆ ಹೋಗಿದ್ದ ಭರತನನ್ನು ಮಂತ್ರಿ ಪುರೋಹಿತರು ಅಯೋಧ್ಯೆಗೆ ಕರೆಯಿಸುತ್ತಾರೆ. ಕೈಕೇಯಿಯು ಅವನ ಅಭ್ಯುದಯವನ್ನು ಬಯಸಿ ತಾನು ಮಾಡಿದ ಕೆಲಸಗಳನ್ನು ಹೇಳಿ, ರಾಜನಾಗಿ ಅಭಿಷೇಕ ಮಾಡಿಕೊಳ್ಳುವಂತೆ ಮಗನಿಗೆ ಹೇಳುತ್ತಾಳೆ. ತನ್ನ ಕಾರಣದಿಂದ ಉಂಟಾದ ರಾಮನ ವನವಾಸ ಮತ್ತು ದಶರಥನ ಮರಣಗಳಿಂದ ಭರತನು ಅತ್ಯಂತ ದುಃಖಿತನಾಗುತ್ತಾನೆ. ಅಭಿಷೇಕವನ್ನು ನಿರಾಕರಿಸುವುದು ಮಾತ್ರವಲ್ಲದೆ ಅವನು ಕಾಡಿಗೆ ಹೋಗಿ ರಾಮನನ್ನು ಹಿಂದಕ್ಕೆ ಕರೆತಂದು ಅವನಿಗೆ ಅಭಿಷೇಕವನ್ನು ಮಾಡುವುದಾಗಿ ಪ್ರತಿಜ್ಞೆ ಮಾಡುತ್ತಾನೆ. ಬೇರೆಯಾರಾದರೂ ಆಗಿದ್ದರೆ ಪ್ರಯತ್ನವಿಲ್ಲದೆ ಬಂದ ರಾಜ್ಯವನ್ನು ಬೇಡವೆನ್ನುತ್ತಿರಲಿಲ್ಲ. ಅವನು ರಾಜನಾಗುವುದಕ್ಕೆ ಯಾರ ವಿರೋಧವೂ ಇರಲಿಲ್ಲ. ಅವನು ಒಂದು ವೇಳೆ ಸಿಂಹಾಸನವನ್ನು ಹತ್ತಿದ್ದರೆ ತುಂಬ ಯಶಸ್ವಿಯಾದ ರಾಜನಾಗುತ್ತಿದ್ದ ಎಂಬುದರಲ್ಲಿ ಸಂದೇಹವಿಲ್ಲ. ರಾಮನು ವಿಷ್ಣುವಿನ ಅಂಶವಾಗಿದ್ದರೆ, ಭರತನು ಚತುರ್ಧಾಂಶ. ಅವನ ವಿಷಯದಲ್ಲಿ ರಾಮನೇ ತುಂಬ ಪ್ರಶಂಸೆಯ ಮಾತುಗಳನ್ನು ಆಡುತ್ತಾನೆ. ತನ್ನ ಜೊತೆಯಲ್ಲಿ ವನಕ್ಕೆ ಬರುತ್ತೇವೆಂದು ಹೊರಟ ಅಯೋಧ್ಯೆಯ ಜನರಿಗೆ ಅವನು


ಯಾ ಪ್ರೀತಿರ್ಬಹುಮಾನಶ್ಚ ಮಯ್ಯಯೋಧ್ಯಾನಿವಾಸಿನಾಂ|

ಮತ್ಪ್ರಿಯಾರ್ಥಂ ವಿಶೇಷೇಣ ಭರತೇ ಸಾ ನಿವೇಶ್ಯತಾಂ।

ಸ ಹಿ ಕಲ್ಯಾಣಚಾರಿತ್ರಃ ಕೈಕೇಯ್ಯಾನಂದವರ್ಧನ:।

ಕರಿಷ್ಯತಿ ಯಥಾವದ್ವಃ ಪ್ರಿಯಾಣಿ ಚ ಹಿತಾನಿ ಚ।

ಜ್ಞಾನವೃದ್ಧೋ ವಯೋ ಬಾಲೋ ಮೃದುರ್ವೀರ್ಯಗುಣಾನ್ವಿತಃ।

ಅನುರೂಪ: ಸ ವೋ ಭರ್ತಾ ಭವಿಷ್ಯತಿ ಭಯಾಪಹ:।

ಸ ಹಿ ರಾಜಗುಣೈರ್ಯುಕ್ತ: ಯುವರಾಜಸ್ಸಮೀಕ್ಷಿತಃ।


(ಅಯೋಧ್ಯಾನಿವಾಸಿಗಳಾದ ನಿಮ್ಮಲ್ಲಿ ನನ್ನ ಬಗ್ಗೆ ಯಾವ ಪ್ರೀತಿ ಮತ್ತು ಬಹುಮಾನಗಳು ಇರುತ್ತವೆಯೋ ಅವುಗಳನ್ನು ನನ್ನ ಪ್ರೀತಿಗೋಸ್ಕರ ವಿಶೇಷವಾಗಿ ಭರತನಲ್ಲಿ ಇರಿಸಿರಿ. ಕೈಕೇಯಿಯ ಆನಂದವರ್ಧನನಾದ ಅವನು ಕಲ್ಯಾಣ ಚಾರಿತ್ರನಾಗಿರುತ್ತಾನೆ. ನಿಮಗೆ ಪ್ರಿಯವೂ ಹಿತವೂ ಆದ ಎಲ್ಲ ಕೆಲಸಗಳನ್ನೂ ಅವನು ಯಥಾವತ್ತಾಗಿ ಮಾಡುತ್ತಾನೆ. ಅವನು ವಯಸ್ಸಿನಲ್ಲಿ ಚಿಕ್ಕವನಾಗಿದ್ದರೂ ಜ್ಞಾನದಲ್ಲಿ ವೃದ್ಧನಾಗಿರುತ್ತಾನೆ. ಅವನು ಮೃದುವೂ ವೀರ್ಯಗುಣಾನ್ವಿತನೂ ಆಗಿರುತ್ತಾನೆ. ಅವನು ಎಲ್ಲ ರಾಜಗುಣಗಳಿಂದಲೂ ಕೂಡಿರುವುದರಿಂದಲೇ ಅವನು ಯುವರಾಜನಾಗಿ ಆರಿಸಲ್ಪಟ್ಟಿರುತ್ತಾನೆ) ಎಂದು ನುಡಿಯುತ್ತಾನೆ. ಭರತನಲ್ಲಿ ತಾನು ನೋಡಿದ್ದ ರಾಜಗುಣಗಳನ್ನೇ ರಾಮನು ಕೊಂಡಾಡುತ್ತಾನೆ. ರಾಮನ ವನವಾಸ ಕಾಲದಲ್ಲಿ ಭರತನು ಮಾಡುವ ಆಳ್ವಿಕೆಯು ರಾಮನ ಪ್ರಶಂಸೆಗಳನ್ನು ಸಂಪೂರ್ಣವಾಗಿ ಸಮರ್ಥಿಸುತ್ತದೆ. ರಾಜಭೋಗಗಳೆಲ್ಲವನ್ನೂ ತ್ಯಾಗ ಮಾಡಿ ಅವನು ವಲ್ಕಲ ಮತ್ತು ಜಟೆಗಳನ್ನು ಧರಿಸಿ ಮುನಿವೇಷಧರನಾಗಿ ಹದಿನಾಲ್ಕು ವರ್ಷಗಳ ಕಾಲ ರಾಜ್ಯವನ್ನಾಳುತ್ತಾನೆ. ವನವಾಸವನ್ನು ಪೂರೈಸಿ ಹಿಂದಿರುಗಿದ ರಾಮನಿಗೆ ಅವನು ಅವೇಕ್ಷತಾಂ ಭವಾನ್‌ ಕೋಶಂ ಕೋಷ್ಠಾಗಾರಂ ಪುರಂ ಬಲಂ। ಭವತಸ್ತೇಜಸಾ ಸಾರ್ಧಂ ಕೃತಂ ದಶಗುಣಂ ಮಯಾ। (ನೀನು ಬೊಕ್ಕಸವನ್ನೂ, ಕೋಷ್ಠಾಗಾರವನ್ನೂ, ಪುರವನ್ನೂ ಮತ್ತು ಸೈನ್ಯವನ್ನೂ ನೋಡು. ನಿನ್ನ ತೇಜಸ್ಸಿನ ಸಹಾಯದಿಂದ ನಾನು ಎಲ್ಲವನ್ನೂ ಹತ್ತರಷ್ಟು ಅಭಿವೃದ್ಧಿಮಾಡಿರುತ್ತೇನೆ.) ಎಂದು ನಿವೇದಿಸುತ್ತಾನೆ. ಮಾಡಿದ ಕೆಲಸದಲ್ಲಿ ತನ್ನದೇನೂ ಇಲ್ಲವೋ ಎಂಬಂತೆ ಅವನು ನುಡಿದರೂ ಅದು ಅವನ ಅದ್ವಿತೀಯವಾದ ಸಾಮರ್ಥ್ಯದ ಫಲ ಎಂಬುದನ್ನು ಯಾರೂ ಇಲ್ಲವೆನ್ನಲಾಗುವುದಿಲ್ಲ. ದೊಡ್ಡ ಸಾಮರ್ಥ್ಯದ ಜೊತೆಗೆ ವಿನಯವನ್ನೂ ಸೇರಿಸಿಕೊಂಡಿದ್ದುದು ಅವನ ಒಂದು ವೈಶಿಷ್ಟ್ಯ. 'ಸ್ವಜಾ ವೈನಯಿಕೀ ಚ ಯಾ। ' (ಅವನಿಗೆ ವಿನಯವು ಸಹಜವಾಗಿದ್ದಿತು.) ರಾಜಕುಮಾರನಾದ ಭರತನೂ ರಾಮಾದಿಗಳಂತೆ ಜನಪ್ರಿಯನಾಗಿದ್ದನು. ಕೈಕೇಯಿಯ ವ್ಯವಹಾರದಿಂದ ಸ್ವಲ್ಪಕಾಲ ಜನರಲ್ಲಿ ಅವನ ಬಗ್ಗೆ ಭೀತಿ ಮತ್ತು ಸಂಶಯಗಳುಂಟಾಗುತ್ತವೆ. ಆದರೆ ಅವನು ಬಹಳ ಅಲ್ಪಕಾಲದಲ್ಲಿ ತನ್ನ ಪರಿಶುದ್ಧವಾದ ಚಾರಿತ್ರ್ಯದಿಂದ ಅವನ್ನು ಹೋಗಲಾಡಿಸಿ ಜನರಲ್ಲಿ ಮೊದಲಿದ್ದುದಕ್ಕಿಂತ ಅಧಿಕವಾದ ಪ್ರೀತಿ ಮತ್ತು ಗೌರವಗಳನ್ನು ಗಳಿಸುತ್ತಾನೆ. ಅವರು ಅವನ್ನು ವ್ಯಕ್ತಪಡಿಸುವ ರೀತಿಯು ಹೃದಯಸ್ಪರ್ಶಿಯಾಗಿರುತ್ತದೆ. ಅವನು ಚಿತ್ರಕೂಟಕ್ಕೆ ಹೋಗಿ ರಾಮನನ್ನು ಹಿಂದಕ್ಕೆ ಕರೆತರುವುದರಲ್ಲಿ ಸಫಲನಾಗದಿದ್ದಾಗ ರಾಮನ ಸ್ಥಾನದಲ್ಲಿ ಅವನ ಪಾದುಕೆಗಳನ್ನು ಪಡೆದು ಅಯೋಧ್ಯೆಗೆ ಹಿಂದಿರುಗುತ್ತಾನೆ. ಅಲ್ಲಿ ತಾಯಂದಿರನ್ನಿರಿಸಿ ರಾಮನನ್ನು ಪ್ರತೀಕ್ಷೆ ಮಾಡಲು ನಂದಿಗ್ರಾಮಕ್ಕೆ ಹೋಗುತ್ತಾನೆ. ಅವನ ಜೊತೆಯಲ್ಲಿ ವಸಿಷ್ಠಾದಿ ಗುರುಗಳು ಹಾಗೂ ಮಂತ್ರಿಪುರೋಹಿತರೂ ಹೋಗುತ್ತಾರೆ. ಅಷ್ಟೇ ಅಲ್ಲದೆ ಗಜ, ರಥ ಮತ್ತು ಅಶ್ವಗಳಿಂದ ತುಂಬಿದ ಸೈನ್ಯವೂ ಮತ್ತು ಎಲ್ಲ ಪುರವಾಸಿಗಳೂ ಹೋಗುತ್ತಾರೆ.


ಬಲಂ ಚ ತದನಾಹೂತಂ ಗಜಾಶ್ವರಥಸಂಕುಲಂ।

ಪ್ರಯಯೌ ಭರತೇ ಯಾತೇ ಸರ್ವೇಚ ಪುರವಾಸಿನಃ |


ಅನಾಹೂತಂ ಎಂದರೆ ಕರೆಯದೆಯೇ ಅವರು ಹೋದರು ಎಂದು ಕವಿಯು ಹೇಳುವುದು ಗಮನಾರ್ಹವಾಗಿರುತ್ತದೆ. ಒಬ್ಬ ಪರಿಶುದ್ಧಾತ್ಮನ ಆಚರಣೆಯಲ್ಲಿ ಹೀಗೆಂದು ವರ್ಣಿಸಲಾಗದ ಶಕ್ತಿಯಿರುತ್ತದೆ. ಅದು ಎಲ್ಲರ ಮೇಲೆಯೂ ಪ್ರಭಾವವನ್ನು ಬೀರಿ ಅಯಸ್ಕಾಂತದಂತೆ ಎಲ್ಲರನ್ನೂ ಸೆಳೆದುಕೊಂಡು ಹೋಗುತ್ತದೆ ಎಂಬುದಕ್ಕೆ ಇದು ಒಳ್ಳೆಯ ನಿದರ್ಶನ.


ರಾಮನು ವನವಾಸದಿಂದ ಹಿಂದಿರುಗುತ್ತಿರುವಾಗ ದಾರಿಯಲ್ಲಿ ಭರದ್ವಾಜಾಶ್ರಮದಲ್ಲಿ ಸ್ವಲ್ಪಕಾಲ ಇಳಿಯುತ್ತಾನೆ. ಅಲ್ಲಿಂದ ತಾನು ಬರುತ್ತಿರುವ 

ಸಮಾಚಾರವನ್ನು ತಿಳಿಸಲು ಹಾಗೂ ಭರತನೇನಾದರೂ ರಾಜ್ಯಾಕಾಂಕ್ಷಿಯಾಗಿದ್ದಾನೆಯೇ ಎಂಬುದನ್ನು ತಿಳಿದುಬರಲು ಹನುಮಂತನನ್ನು ಮುಂದಾಗಿ ಕಳುಹಿಸುತ್ತಾನೆ. ನಂದಿಗ್ರಾಮದಲ್ಲಿ ಆಂಜನೇಯನು ನೋಡುವ ಭರತನನ್ನು ಕವಿಯು ಈ ರೀತಿ ವರ್ಣಿಸುತ್ತಾರೆ-


ಪಾದುಕೇ ತೇ ಪುರಸ್ಕೃತ್ಯ ಶಾಸಂತಂ ವೈ ವಸುಂಧರಾಂ।

ಚಾತುವ್ವರ್ಣಸ್ಯ ಲೋಕಸ್ಯಾತ್ರಾತಾರಂ ಸತೋ ಭಯಾತ್॥

ಉಪಸ್ಥಿತಮಮಾತ್ಯೈಶ್ಚ ಶುಚಿಭಿಶ್ಚ ಪುರೋಹಿತೈಃ।

ಬಲಮುಖ್ಯೈಶ್ಚ ಯುಕ್ತೈಶ್ಚ ಕಾಷಾಯಾಂಬರಧಾರಿಭಿಃ॥

ನ ಹಿ ತೇ ರಾಜಪುತ್ರಂ ತಂ ಚೀರಕೃಷ್ಣಾಜಿನಾಂಬರಂ।

ಪರಿಭೋಕ್ತುಂ ವ್ಯವಸ್ಯಂತಿ ಪೌರಾ ವೈ ಧರ್ಮವತ್ಸಲಂ॥


(ಆ ಪಾದುಕೆಗಳನ್ನು ಮುಂದಿಟ್ಟುಕೊಂಡು ವಸುಂಧರೆಯನ್ನು ಆಳುತ್ತಿದ್ದ, ನಾಲ್ಕು ವರ್ಣಗಳಿಂದ ಕೂಡಿದ್ದ ಲೋಕವನ್ನು ಎಲ್ಲ ಕಡೆಗಳಿಂದಲೂ ಭಯದಿಂದ ಕಾಪಾಡುತ್ತಿದ್ದ, ಕಾಷಾಯಾಂಬರಧಾರಿಗಳಾದ ಅಮಾತ್ಯರಿಂದಲೂ, ಶುಚಿಗಳಾದ ಪುರೋಹಿತರಿಂದಲೂ, ಸೇನಾಪತಿಗಳಿಂದಲೂ ಮತ್ತು ಅಧಿಕಾರಿಗಳಿಂದಲೂ ಸೇವಿಸಲ್ಪಡುತ್ತಿದ್ದ ಭರತನನ್ನು ನೋಡಿದನು. ಪೌರರು ಚೀರಕೃಷ್ಣಾಜಿನಾಂಬರನೂ ಧರ್ಮವತ್ಸಲನೂ ಆದ ಅವನನ್ನು ಬಿಟ್ಟು ಭೋಗಗಳನ್ನು ಅನುಭವಿಸಲು ಸಮರ್ಥರಾಗಲಿಲ್ಲ). ತಮ್ಮ ರಾಜಪುತ್ರನ ಶುದ್ಧಭಾವದಿಂದ ಪ್ರಭಾವಿತರಾಗಿ ಜನರು ಅವನನ್ನು ಉಡಿಗೆಯಲ್ಲಿಯೂ ಅನುಸರಿಸುವುದು ಒಂದು ಸೋಜಿಗವೇ ಸರಿ! ಮೇಲಿನ ಸಂಗತಿಗಳಿಂದ ಭರತನದು ಎಷ್ಟು ಸಾಮರ್ಥ್ಯಶಾಲಿಯಾದ ಹಾಗೂ ವಿಶಿಷ್ಟವಾದ ವ್ಯಕ್ತಿತ್ವವೆಂಬುದು ಅವಶ್ಯವಾಗಿ ತಿಳಿದು ಬರುತ್ತದೆ. ತನ್ನ ನೈತಿಕಶಕ್ತಿಯಿಂದ ಎಲ್ಲರನ್ನೂ ಆಳಬಲ್ಲ ಮಹಾನುಭಾವನವನು ಎಂಬುದರಲ್ಲಿ ಸ್ವಲ್ಪವೂ ಸಂಶಯ ಉಳಿಯುವುದಿಲ್ಲ. ಆದುದರಿಂದ ಅವನು ಅನಾಯಾಸವಾಗಿ ಬಂದ ರಾಜ್ಯವನ್ನು ನಿರಾಕರಿಸಲು ಅಸಾಮರ್ಥ್ಯ, ಜನಪ್ರಿಯತೆಯ ಅಭಾವ ಇತ್ಯಾದಿಯಾವುವೂ ಕಾರಣವಾಗುವುದಿಲ್ಲ. ಅವನು ರಾಜ್ಯವನ್ನು ಬಯಸದಿರಲು ಪ್ರಧಾನ ಕಾರಣ ಅವನ ಅಚಲವಾದ ಧರ್ಮನಿಷ್ಠೆ. ರಾಮನಲ್ಲಿ ಹೇಗೋ ಹಾಗೆಯೇ ಭರತನಲ್ಲಿಯೂ ಸಹ ಅವನ ಕುಲಧರ್ಮವು ಅವನ ಮನಸ್ಸನ್ನು ರೂಪಿಸಿರುತ್ತದೆ.ಅದನ್ನು ಹೇಳುವ ಕೆಲವು ವಚನಗಳನ್ನು ಇಲ್ಲಿ ಉಲ್ಲೇಖಿಸುತ್ತೇವೆ.


ಅಸ್ಮಿನ್ ಕುಲೇ ಹಿ ಪೂರ್ವೇಷಾಂ ಜ್ಯೇಷ್ಠೋ ರಾಜ್ಯೇಽಭಿಷಿಚ್ಯತೇ।

ಅಪರೇ ಭ್ರಾತರಸ್ತಸ್ಮಿನ್ ಪ್ರವರ್ತಂತೇ ಸಮಾಹಿತಾಃ ॥

ಜ್ಯೇಷ್ಠಸ್ಯ ರಾಜತಾ ನಿತ್ಯಂ ಉಚಿತಾ ಹಿ ಕುಲಸ್ಯ ನಃ ।

ಕಥಂ ದಶರಥಾಜ್ಜಾತೋ ಭವೇದ್ರಾಜ್ಯಾಪಹಾರಕಃ ॥


(ಪೂರ್ವಕಾಲದಿಂದ ಬಂದ ನಮ್ಮ ರಾಜ್ಯದಲ್ಲಿ ಜ್ಯೇಷ್ಠನು ರಾಜ್ಯದಲ್ಲಿ ಅಭಿಷೇಕಿಸಲ್ಪಡುತ್ತಾನೆ. ಇತರ ಭ್ರಾತೃಗಳು ಅವನಲ್ಲಿ ಮನಸ್ಸಂಯಮದಿಂದ ಕೂಡಿ ಇರುತ್ತಾರೆ; ನಮ್ಮ ಕುಲದಲ್ಲಿ ಜ್ಯೇಷ್ಠನಿಗೇ ಯಾವಾಗಲೂ ರಾಜತೆಯು ಉಚಿತವಾಗಿರುತ್ತದೆ; ದಶರಥನಿಂದ ಹುಟ್ಟಿದವನು ಹೇಗೆ ತಾನೆ ರಾಜ್ಯಾಪಹಾರಕನಾಗಬಲ್ಲನು?) ಜೇಷ್ಠನು ರಾಜನಾಗುವುದು ಇಕ್ಷ್ವಾಕುಗಳ ಕುಲಧರ್ಮ. ಹಾಗೆ ಇದ್ದುದರಿಂದಲೇ ಆ ಕುಲವು ಬಹಳ ದೀರ್ಘಕಾಲ ಮುಂದುವರಿಯಿತು ಎಂಬುದು ಭರತನ ಮಾತಿನಿಂದ ವ್ಯಕ್ತಪಡುತ್ತದೆ. ಆದುದರಿಂದ ರಾಮನು ವನವಾಸದಿಂದ ಬಂದ ಕೂಡಲೇ ರಾಜ್ಯವನ್ನು ಅವನಿಗೆ ಒಪ್ಪಿಸಿ ಭರತನು ಕೃತಕೃತ್ಯನಾಗುತ್ತಾನೆ.


ರಾಮನು ವಿಶೇಷಪುರುಷ. ಭರತನು ಆದಿಕಾವ್ಯದ ಕೊನೆಯಲ್ಲಿ ಒಂದು ಬಲಿಷ್ಠವಾದ ಎತ್ತು ಮತ್ತು ಕರು, ಒಂದು ಕುದುರೆ ಮತ್ತು ಕತ್ತೆ, ಒಂದು ಹಂಸ ಮತ್ತು ಕಾಗೆಗಳ ಉಪಮಾನದಿಂದ ರಾಮನಿಗೂ ತನಗೂ ಇರುವ ಅಂತರವನ್ನು ಹೇಳಿ ರಾಮನ ಉತ್ಕೃಷ್ಟತೆಯನ್ನೂ ಮತ್ತು ತನ್ನ ನಿಕೃಷ್ಟತೆಯನ್ನೂ ವ್ಯಕ್ತಪಡಿಸುತ್ತಾನೆ. ಆದರೆ ಅದೇ ರಾಜ್ಯ ನಿರಾಕರಣೆಗೆ ಕಾರಣವಾಗುವುದಿಲ್ಲ. ರಾಮನು ಅಂತಹ ಉತ್ಕೃಷ್ಟ ಪುರುಷನಾಗದೆ ಸಾಮಾನ್ಯನಾಗಿದ್ದರೂ ಸಹ ಜೇಷ್ಠನೆಂಬ ಕಾರಣದಿಂದ ರಾಜ್ಯವು ಅವನಿಗೇ ಸೇರಬೇಕೆಂದು ಭರತನು ಹೇಳುತ್ತಿದ್ದನೆಂದು ನಿಶ್ಚಿತ. ಏಕೆಂದರೆ ದೀರ್ಘದರ್ಶಿಯಾದ ಅವನು ಕುಲಮರ್ಯಾದೆಯು ಭಗ್ನವಾದರೆ ಅದರಿಂದ ಅವಶ್ಯವಾಗಿ ಉಂಟಾಗುವ ದುಷ್ಪರಿಣಾಮಗಳನ್ನು ಚೆನ್ನಾಗಿ ತಿಳಿದಿರುತ್ತಾನೆ. ಅಂತಃಕಲಹ, ಯುದ್ಧ, ದೇಶಕ್ಕೆ ಪರರ ಪ್ರವೇಶ, ಪ್ರಜಾನಾಶ ಮತ್ತು ಪೀಡೆ, ಮತ್ತು ದೇಶದ ಸಂಪತ್ತುಗಳ ನಾಶಗಳೆಲ್ಲವೂ ಸಂಭವಿಸುತ್ತವೆಂಬುದು ಜ್ಞಾನವೃದ್ಧನಾದ ಅವನಿಗೆ ಗೊತ್ತು. ಆದುದರಿಂದಲೇ ಅವನು ಜ್ಯೇಷ್ಠನ ಅಧಿಕಾರವನ್ನು ಎತ್ತಿ ಹಿಡಿಯುತ್ತಾನೆ. ತನಗೆ ಯೋಗ್ಯತೆಯಿದ್ದರೂ ರಾಜ್ಯವನ್ನು ಸ್ವೀಕರಿಸುವುದಿಲ್ಲ. ಪ್ರತಿಯಾಗಿ ತಾಯಿಯು ಮಾಡಿದ ಕೆಲಸಕ್ಕೆ ಒಂದು ಉಗ್ರವಾದ ಪ್ರಾಯಶ್ಚಿತ್ತವನ್ನೇ ಮಾಡಿಕೊಳ್ಳುತ್ತಾನೆ. ಅಂತಹ ರಾಜಧರ್ಮದ ಆದರ್ಶಗಳಿಗೆ ಪೂರ್ತಿ ಹೊರತಾಗಿರುವ ನಾಯಕರನ್ನೂ ಮತ್ತು ವಿಧಾಯಕರನ್ನೂ ದೊಡ್ಡ ಸಂಖ್ಯೆಯಲ್ಲಿ ಉಂಟು ಮಾಡಿರುವುದೇ ಪ್ರಜಾಪ್ರಭುತ್ವದ 50 ವರ್ಷಗಳ ಮಹಾಸಾಧನೆ. ಅವರಲ್ಲಿ ಪ್ರಾಯಃ ಎಲ್ಲರೂ ಅಸಂಯತಾತ್ಮರು, ಅಧಿಕಾರ ಹಾಗೂ ಧನಲೋಲುಪರೂ ಆಗಿರುವುದರಿಂದಲೇ ವಿಧಾಯಕರು ಆಯ್ಕೆಯಾಗಿ ಬಂದ ಕ್ಷಣದಿಂದಲೇ ಒಂದು ಬಣವನ್ನು ಸೇರಿಕೊಂಡು ನಾಯಕರ ಪದವನ್ನು ಅಪಹರಿಸುವ ಕೆಲಸದಲ್ಲಿ ನಿರತರಾಗುತ್ತಾರೆ. ನಾಯಕರೂ ಅವರಂತೆಯೇ ಇರುವುದರಿಂದ ವಿಧಾಯಕರಿಗೆ ಅವರ ವಿರೋಧವಾಗಿ ಪ್ರಚಾರನಡೆಸಲು ಹೇರಳವಾಗಿ ಅವಕಾಶಗಳು ದೊರಕುತ್ತವೆ. ನಿರಂತರವಾಗಿ ನಡೆಯುವ ಅಂತಹ ಪದಾ (ರಾಜ್ಯ?)ಪಹಾರದ ಪ್ರಯತ್ನಗಳು ಪತ್ರಿಕೆಗಳ ಪ್ರಧಾನ ರಾಜಕೀಯ ಸುದ್ದಿಗಳಾಗಿರುತ್ತವೆ. ವಿಧಾಯಕರಿಗೆ ಶೀಲ, ನೀತಿ, ಸಾಮರ್ಥ್ಯ ಮತ್ತು ಧರ್ಮಾದಿಗಳಾವುವೂ ಆವಶ್ಯಕ ಗುಣಗಳಲ್ಲ. ಅವರು ಒಳ್ಳೆಯ ಮಾತುಗಾರರಾಗಿರಬೇಕು. ಭೇದ ನೀತಿಯಲ್ಲಿ ನುರಿತವರಾಗಿರಬೇಕು. ದ್ರವ್ಯಶಕ್ತಿ ಮತ್ತು ರಟ್ಟೆಯ ಬಲಗಳನ್ನು ತರಬಲ್ಲವರಾದರೆ ಇನ್ನೂ ಚೆನ್ನ. ಇದರ ಪರಿಣಾಮವಾಗಿ ಪಾಪಾತ್ಮರನೇಕರು ದೊಡ್ಡ ಸಂಖ್ಯೆಯಲ್ಲಿ ಶಾಸನಾಂಗಗಳನ್ನು ಪ್ರವೇಶಿಸಿರುತ್ತಾರೆ. ಅವರ ಕರಾಳವಾದ ಛಾಯೆಯು ಜೀವನದ ಎಲ್ಲ ಕ್ಷೇತ್ರಗಳ ಮೇಲೆಯೂ ಬಿದ್ದಿರುತ್ತದೆ. ಬೇರೆ ಬೇರೆ ಐತಿಹಾಸಿಕ ಕಾರಣಗಳಿಂದ ಶುದ್ಧವಾದ ರಾಜಧರ್ಮವನ್ನು ಇಂದು ಪುನಃ ಅಸ್ತಿತ್ವಕ್ಕೆ ತರಲಾಗುವುದಿಲ್ಲ. ಜನರ ಬುದ್ಧಿಗಳಲ್ಲಿ ಉಂಟಾಗಿರುವ ಪರಿವರ್ತನೆಗಳು ಅಷ್ಟು ದೊಡ್ಡವಾಗಿರುತ್ತವೆ. ಆದರೆ ರಾಜಧರ್ಮದ ಉತ್ತಮವಾದ ಮೌಲ್ಯಗಳನ್ನು ಪ್ರಜಾಪ್ರಭುತ್ವದ ಚೌಕಟ್ಟಿಗೆ ಅಳವಡಿಸಿದುದಾದರೆ, ಅವು ಇಂದಿನ ಸಾಂಸ್ಕೃತಿಕ ಪತನವನ್ನು ಸ್ವಲ್ಪಮಟ್ಟಿಗೆ ತಡೆದುಕೊಡಬಹುದು.


ಸೂಚನೆ : ಈ ಲೇಖನವು ಶ್ರೀಮಂದಿರದಿಂದ ಪ್ರಕಾಶಿತವಾಗುವ ಆರ್ಯಸಂಸ್ಕೃತಿ ಮಾಸ ಪತ್ರಿಕೆಯ ಸಂಪುಟ:೧೭ ಸಂಚಿಕೆ:೧, ೧೯೯೫ ನವಂಬರ್ ತಿಂಗಳಲ್ಲಿ  ಪ್ರಕಟವಾಗಿದೆ.

Saturday, September 25, 2021

ಷೋಡಶೋಪಚಾರ - 18 ಪ್ರದಕ್ಷಿಣೆ (Shodashopachaara - 18 - Pradakshine)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ 
(ಪ್ರತಿಕ್ರಿಯಿಸಿರಿ lekhana@ayvm.in)



ನಾವು ಈ ಹಿಂದಿನ ಉಪಚಾರಗಳಿಂದ ಭಗವಂತನನ್ನು ಅರ್ಚಿಸಿದ್ದೇವೆ. ನಮ್ಮಲ್ಲಿರುವ ತನು-ಮನವನ್ನು ಅರ್ಪಿಸಿದ್ದೇವೆ. ನಮ್ಮತನವನ್ನು ತ್ಯಾಗಮಾಡಿ ಭಗವದ್ಭಾವದಿಂದ ಪೂತರಾಗಿದ್ದೇವೆ. ಆರಾಧಿಸಿದ ಭಗವಂತನನ್ನು ಪ್ರದಕ್ಷಿಣೆ ಮಾಡುವುದು ಈ ಸಮಯದ ಉಪಚಾರವಾಗಿದೆ. ದೇವರ ಮುಂಭಾಗದಿಂದ ಆರಂಭಿಸಿ ನಮ್ಮ ಬಲಗೈ ಮೊದಲುಗೊಳ್ಳುವ ರೀತಿಯಲ್ಲಿ ಭಗವಂತನನ್ನು ಸುತ್ತುವುದು ಈ ಪ್ರದಕ್ಷಿಣೆಯಾಗಿದೆ. ಅದಕ್ಕೇ ಈ ಉಪಚಾರಕ್ಕೆ 'ಪ್ರದಕ್ಷಿಣೆ' ಎಂಬ ಹೆಸರು ಬಂದಿದೆ. ಮತ್ತು ಈ ಪದವೇ ಹೇಳುವಂತೆ ನಮ್ಮನ್ನು ದಕ್ಷ-ಸಮರ್ಥವಾಗಿಸುತ್ತದೆ. ಆವಾಹನಾದಿ ಉಪಚಾರಗಳಿಂದ ಭಗವಂತನನ್ನು ತುಂಬಿಕೊಳ್ಳಲು ನಮ್ಮ ಶರೀರ, ಇಂದ್ರಿಯ, ಮನಸ್ಸುಗಳು ಯೋಗ್ಯತೆಯನ್ನು ಸಂಪಾದಿಸಿವೆ ಎಂದರ್ಥ. ಯಾವುದಾದರೂ ಒಬ್ಬ ಶ್ರೇಷ್ಠವ್ಯಕ್ತಿಯನ್ನು ಸಂದರ್ಶನ ಮಾಡಲು ಆ ವ್ಯಕ್ತಿಗೆ ತಕ್ಕುದಾದ ವೇಷ ಭೂಷ ಭಾಷೆಗಳೊಂದಿಗೆ ನಮ್ಮನ್ನು ಸಿದ್ಧಪಡಿಸಿಕೊಂಡು ತಾನೆ ಹೋಗುತ್ತೇವೆ. ಯಾವುದೇ ಕಾರ್ಯವನ್ನು ಮಾಡಲು ಯೋಗ್ಯತೆ ಬೇಕಾಗುತ್ತದೆ. ಯೋಗ್ಯತೆ ಇಲ್ಲದಿರುವಾಗ ಅದನ್ನು ಪಡೆದುಕೊಳ್ಳಬೇಕಾಗುತ್ತದೆ. ಹಾಗೆಯೇ ಭಗವಂತನನ್ನು ಕಾಣಲು ನಾವು ಒಂದಷ್ಟು ಸಿದ್ಧತೆ ಮಾಡಬೇಕಲ್ಲವೇ! ಅದಕ್ಕೆ ಅನೇಕ ಬಗೆಯಲ್ಲಿ ಪಳಗಿಸುವ ವಿಧಾನವೇ ಈ ಉಪಚಾರಗಳಾಗಿವೆ. ಮಾಡಿರುವ ಉಪಚಾರಗಳಿಂದ ನಾವು ಮೈ-ಮನಸ್ಸುಗಳಿಗೆ ಚೈತನ್ಯವನ್ನು ಪಡೆದಿರುತ್ತೇವೆ. ಹಾಗಾಗಿ ಇವುಗಳ ಕೊನೆಯಲ್ಲಿ ಈ ಪ್ರದಕ್ಷಿಣೆ ಎಂಬ ಉಪಚಾರವು ವಿಹಿತವಾಗಿದೆ. 

ಜೀವವು ದೇವನನ್ನು ಹೊಂದಲು ಅನೇಕ ಮಾರ್ಗಗಳಿವೆ. ದೇವತೆಗಳಿಗೆ ಅನುಗುಣವಾಗಿ ಮಾರ್ಗವೂ ಭಿನ್ನವಾಗಿರುತ್ತದೆ. 'ಯಾವ ರೀತಿಯಾಗಿ ಜೀವವು ಪ್ರದಕ್ಷಿಣಕ್ರಮವಾಗಿ ದೇವನನ್ನು ತಲಪುತ್ತದೆಯೋ, ಅಥವಾ ತಲುಪಬೇಕೋ, ಅದಕ್ಕನುಗುಣವಾಗಿ ಆದೇ ವಿಷಯವನ್ನು ಇಟ್ಟುಕೊಂಡು ನಮ್ಮ ಹಿರಿಯರು ಹೊರಗಡೆಯೂ ಇಂತಹ ಪ್ರದಕ್ಷಿಣೆಯ ವಿಧಾನವನ್ನು ತಂದುಕೊಟ್ಟರು' ಎಂಬ ಶ್ರೀರಂಗ ಮಹಾಗುರುವಿನ ಮಾತಿನ ಆಶಯವನ್ನು ನಾವಿಲ್ಲಿ ಸ್ಮರಿಸಬಹುದು. ದೇವತಾಪ್ರಸನ್ನತೆಗಾಗಿ ಬಲಭಾಗ ಮೊದಲು ಬರುವಂತೆ ದೇವರನ್ನು ಸುತ್ತುತ್ತೇವೆ. ಮಾರ್ಗಕ್ಕೆ ಅನುಗುಣವಾಗಿ ಪ್ರದಕ್ಷಿಣೆಯ ಕ್ರಮವೂ ಭಿನ್ನವೇ ಆಗಿರುತ್ತದೆ. ಹೆಚ್ಚೆಚ್ಚು ಪ್ರದಕ್ಷಿಣೆ ಮಾಡಿದಷ್ಟು ಹೆಚ್ಚೆಚ್ಚು ಭಗವಂತನ ಅನುಗ್ರಹವಾಗುತ್ತದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಆದರೂ ಪ್ರದಕ್ಷಿಣೆಯ ಸಂಖ್ಯೆಯೂ, ಆಯಾ ವ್ಯಕ್ತಿಯ ಸಾಮರ್ಥ್ಯಕ್ಕೆ ತಕ್ಕಂತೆ ಅವನವನ ದೇವತಾಪ್ರಸನ್ನತೆಗೆ ತಕ್ಕಂತೆ ಇರುತ್ತದೆ ಎಂಬ ವಿಷಯವೂ ಇದೆ. ಹೀಗಿದ್ದರೂ ಒಂದು ಸಾಮಾನ್ಯವಾದ ಪ್ರದಕ್ಷಿಣೆಯ ಸಂಖ್ಯಾಕ್ರಮವನ್ನು ಹೇಳಿದ್ದುಂಟು. ದೇವಿಗೆ ಒಂದು ಪ್ರದಕ್ಷಿಣೆ, ಸೂರ್ಯನಿಗೆ ಏಳು, ವಿನಾಯಕನಿಗೆ ಮೂರು, ಕೇಶವನಿಗೆ  ನಾಲ್ಕು ಮತ್ತು ಶಿವನಿಗೆ ಅರ್ಧಪ್ರದಕ್ಷಿಣೆ ಎಂಬುದಾಗಿ ಆಗಮಶಾಸ್ತ್ರವು ಹೇಳುತ್ತದೆ.  

ಸೂಚನೆ : 25/9/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.

ಯೋಗತಾರಾವಳಿ - 22 ಸಹಜಾಮನಸ್ಕದ ಹಂಬಲಿಕೆ (Yogataravali - 22 Sahajamanaskada Hambalike)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)




ಯೋಗತಾರಾವಳೀ (ಶ್ಲೋಕ ೨೩)


ನಿವರ್ತಯಂತೀಂ

ಎಂತಹ ಉತ್ಕೃಷ್ಟವಾದ ಸ್ಥಿತಿ, ಈ ಸಹಜಾಮನಸ್ಕ-ಭಾವವೆಂಬುದು! ಏಕೆಂದರೆ ಈ ಸ್ಥಿತಿಯನ್ನು ತಲುಪುವುದೆಂದರೆ ಸಮಸ್ತವಾದ ಇಂದ್ರಿಯಗಳನ್ನೂ ಹಿಂದಿರುಗಿಸುವುದು ಎಂದೇ. ಏನು ಹಾಗೆಂದರೆ? ಇಂದ್ರಿಯಗಳೆಲ್ಲವೂ ಸದಾ ಬಹಿರ್ಮುಖಗಳೇ ಆಗಿರುತ್ತವೆ. ಅರ್ಥಾತ್ ಹೊರಗಿರುವ ವಸ್ತುಗಳನ್ನು ಗ್ರಹಿಸತಕ್ಕವುಗಳೇ ಆಗಿರುತ್ತವೆ. ನಾವು ಎಚ್ಚರವಾಗಿರುವಷ್ಟು ಹೊತ್ತೂ ಇಂದ್ರಿಯಗಳೆಲ್ಲ ಎಡೆಬಿಡದೆ ದುಡಿಯುತ್ತಿರುವುವು. ನಮ್ಮ ನಿದ್ರೆಯ ಸಮಯವನ್ನು ಬಿಟ್ಟರೆ ಉಳಿದ ಕಾಲದಲ್ಲಿ ಅವುಗಳಿಗೆ ವಿಶ್ರಾಂತಿಯೆಂಬುದೇ ಇರದು. ಏಕೆ ಹೀಗೆ? ಏಕೆಂದರೆ ಅವುಗಳ ಸೃಷ್ಟಿಯಾಗುವಾಗಲೇ ಆ ಬಗೆಯ ಪ್ರವೃತ್ತಿಯಿರುವಂತೆಯೇ ಅವು ಸೃಷ್ಟವಾಗಿವೆ. ಹಾಗೆಂದು ಉಪನಿಷತ್ತೇ ಹೇಳುತ್ತದೆ.

ಸೃಷ್ಟಿಯಾದದ್ದೇ ಹಾಗೆ!

ಕುಂಬಾರನು ಮಡಕೆ ಮಾಡುವಾಗ ಹಸಿಮಣ್ಣಿನ ಒಂದು ಮುದ್ದೆಗೆ ಒಂದು ವಿಶಿಷ್ಟವಾದ ಆಕಾರವನ್ನು ಕೊಡುತ್ತಾನೆ. ಮಡಕೆಯನ್ನು ಮಾಡುವಾಗಲೇ ಕುಂಬಾರನೇನಾದರೂ ಒಂದಿಷ್ಟು ರಂಧ್ರಗಳನ್ನೂ ಮಾಡಬೇಕೆಂದುಕೊಂಡನೆನ್ನಿ. ಎಷ್ಟು? ಏಳು. ಮಡಕೆಯಿನ್ನೂ ಹಸಿಹಸಿಯಾಗಿರುವಾಗಲೇ ಒಂದು ವಿಶಿಷ್ಟವಾದ ರೀತಿಯಲ್ಲಿ ಏಳು ರಂಧ್ರಗಳನ್ನು ಮಾಡಿದರೆ ಹೇಗಿರಬಹುದು? ಯಾವ ರೀತಿ? ನಮ್ಮ ಮುಖವು ಹೇಗೋ ಹಾಗೆ: ಎರಡು ಕಣ್ಣುಗಳು, ಎರಡು ಹೊಳ್ಳೆಗಳು, ಎರಡು ಕಿವಿಗಳು, ಒಂದು ಬಾಯಿ.

ಬೋರಲಾದ ಈ ಮಡಕೆಯ ಕಂಠವೇ ನಮ್ಮ ಕಂಠವೂ. ನಿದ್ರೆಯಿಂದ ಏಳುತ್ತಲೇ ಏಳು ರಂಧ್ರಗಳೂ ಕಾರ್ಯೋನ್ಮುಖವಾಗುವುವು. ಸರ್ವೇಂದ್ರಿಯಗಳೂ ನೆಲೆಸಿರುವ ತಾಣವೇ ನಮ್ಮ ಶಿರಸ್ಸು. ಒಳಗಿನಿಂದ ಹೊರಕ್ಕೆ ಕೊರೆದ ರಂಧ್ರಗಳಂತೆಯೇ ಇವೆ, ನಮ್ಮ ಇಂದ್ರಿಯಗಳೆಲ್ಲವೂ. ಎಂದೇ ಕೆಲಸವೆಲ್ಲವೂ ಹೊರಜಗತ್ತಿನೊಂದಿಗೇ.

ಹಿನ್ನೋಟವೂ ಸಾಧ್ಯ

ಎಚ್ಚರವಾಗಿರುವವನು ಸುಮ್ಮನೆ ಕಣ್ಮುಚ್ಚಿ ಕುಳಿತಿರನು. "ಕಣ್ಣು ಮುಚ್ಚಿಕೊಂಡು ಕುಳಿತುಕೋ" ಎಂದಪ್ಪಣೆ ಮಾಡಿದರೂ ಸ್ವಲ್ಪ-ಕಾಲಕ್ಕೇ ಚಡಪಡಿಕೆ ಆರಂಭವಾಗುವುದು. ಹೀಗಾಗಿ ಇಂದ್ರಿಯಗಳನ್ನು ಸುಮ್ಮನಿರು ಎಂದರೇ ಚಡಪಡಿಕೆಯೆನ್ನಿಸುವಾಗ, ಇನ್ನು ಹಿಮ್ಮುಖವಾಗು. ಎಂದರೆ ಕೇಳುವುವೇ? ಆದರೆ ಈ ಸಹಜಾಮನಸ್ಕವು ಇಂದ್ರಿಯಗಳನ್ನು ಹಿಮ್ಮುಖವಾಗಿಸಬಲ್ಲುದು. ಸಹಜಾಮನಸ್ಕವು ಸಿದ್ಧಿಸಿತೆಂದರೆ ಇಂದ್ರಿಯಗಳು ಹಿಮ್ಮುಖವಾದಂತೆಯೇ.

ಇಂದ್ರಿಯಗಳಲೆಲ್ಲ ಪ್ರಧಾನವಾದುದು ಕಣ್ಣೇ. ಈ ಚಕ್ಷುರಿಂದ್ರಿಯದ ನಿವೃತ್ತಿಯೊಂದಾದರೆ ಮಿಕ್ಕೆಲ್ಲ ಇಂದ್ರಿಯಗಳೂ ನಿವೃತ್ತವಾದವೆಂದೇ ಅರ್ಥ. ನಿವೃತ್ತಿಯೆಂದರೆ ಹಿಂತಿರುಗಿರುವಿಕೆ. ಹಿಂದಕ್ಕೆ ತಿರುಗುವುದೇ ಹಿಂತಿರುಗುವುದು, ಒಳಮುಖವಾಗುವುದು.

ಹಿಂತಿರುಗಿರುವುದನ್ನು ನಿವೃತ್ತ ಎನ್ನುವಂತೆಯೇ "ಆವೃತ್ತ" ಎಂದೂ ಹೇಳುವುದುಂಟು. ಎಂದೇ ಕಠೋಪನಿಷತ್ತು "ಆವೃತ್ತ-ಚಕ್ಷು"ವನ್ನು ಕುರಿತು ಹೇಳುವುದು. ಆವೃತ್ತ-ಚಕ್ಷುವಾದವನನ್ನೇ ಉಪನಿಷತ್ತು ಧೀರನೆಂದು ಕರೆಯುವುದೂ. ನೇತ್ರವೇ ಆವೃತ್ತವೆಂದಾದಲ್ಲಿ, ಅದು ಮಿಕ್ಕೆಲ್ಲದರ ಆವೃತ್ತವಾಗುವಿಕೆಯ ಉಪಲಕ್ಷಣವೇ ಸರಿ. (ಉಪಲಕ್ಷಣವೆಂದರೆ - ಒಂದನ್ನು ಹೇಳಿದರೆ ಮಿಕ್ಕದ್ದು ಊಹ್ಯ – ಎಂಬ ಲೆಕ್ಕ; ಕಷ್ಟವಾದದ್ದೇ ಸಾಧ್ಯವಾದ ಮೇಲೆ ಉಳಿದವು ಸು-ಸಾಧ್ಯವೇ ಸರಿ- ಎಂದು ತಿಳಿದುಕೊಳ್ಳುವ ಲೆಕ್ಕ). ಈ ಶ್ಲೋಕವಂತೂ ಬಾಯಿಬಿಟ್ಟೇ ಎಲ್ಲ ಇಂದ್ರಿಯಗಳ ನಿವೃತ್ತಿಯನ್ನು ತಿಳಿಸಿದೆ.

ದೊಡ್ಡದು ದಕ್ಕಲು ಚಿಕ್ಕದನ್ನು ಬಿಡು!

ಹೊರಪ್ರಪಂಚವನ್ನು ಬಿಟ್ಟದ್ದು ಏತಕ್ಕಾಗಿ? ಮತ್ತೊಂದನ್ನು ಹಿಡಿದುಕೊಳ್ಳುವುದಕ್ಕಾಗಿ: ಅಲ್ಪವಾದುದನ್ನು ಬಿಟ್ಟು ಅನಲ್ಪವಾದುದನ್ನು ಹಿಡಿಯಲಿಕ್ಕಾಗಿ; ಅಲ್ಪವಾದ ಬಾಹ್ಯ-ಪ್ರಪಂಚವನ್ನು ಬಿಟ್ಟು ಭೂಮವಾದ ಬ್ರಹ್ಮವನ್ನು ಹಿಡಿಯಲಿಕ್ಕಾಗಿ. ('ಭೂಮ' ಎಂದರೆ ಹಿರಿದಾದುದು). ಹೊರಗಣ ಪ್ರಪಂಚದಿಂದ ವಿಯೋಗ ಹೊಂದಿದುದು ಒಳಗಣ ಯೋಗಕ್ಕಾಗಿ: ಆತ್ಮ-ಯೋಗಕ್ಕಾಗಿ, ಪರಮಾತ್ಮ-ಯೋಗಕ್ಕಾಗಿ.

ನಿದ್ರೆಯಲ್ಲೂ ಹೊರಪ್ರಪಂಚವನ್ನು ಬಿಟ್ಟಿರುತ್ತೇವಾದರೂ ನಿದ್ರೆಯಲ್ಲಿ ಜಾಡ್ಯವಿರುತ್ತದೆ. ಎಲ್ಲಿ ಜ್ಞಾನವಿಲ್ಲವೋ ಅಲ್ಲಿ ತಮಸ್ಸು. ತಮಸ್ಸೇ ಜಾಡ್ಯ. ಜ್ಞಾನವೇ ಬೆಳಕು. ಜ್ಞಾನಮಯವಾದುದೇ ಈ ಸಹಜಾಮನಸ್ಕ-ಸ್ಥಿತಿ. ಜ್ಞಾನಮಯವೆಂದರೂ ಒಂದೇ, "ಸಂವಿನ್ಮಯ"ವೆಂದರೂ ಒಂದೇ. ಹೀಗೆ ಸಹಜಾಮನಸ್ಕವು ಸಂವಿನ್ಮಯ.

ಹಂಬಲದ ಕೇಳ್ಕೆ

ಸಹಜಾಮನಸ್ಕವನ್ನು ಅದೆಂದು ಹೊಂದಿಯೇನೋ?! - ಎಂಬ ಹಂಬಲದ ಕೇಳ್ಕೆ ಇಲ್ಲಿದೆ. ಹೇಗೆ ಕೆಲಕಾಲ ಚೆನ್ನಾಗಿ ನಿದ್ರಿಸಿದ ಮೇಲೆ ತೃಪ್ತಿಯಾಗಿ ಏಳುವೆವೋ, ಹಾಗೆಯೇ ಈ ಸಹಜಾಮನಸ್ಕ-ಸ್ಥಿತಿಯಲ್ಲೂ. ಹೇಗೆ ನಿದ್ದೆ ಎಳೆಯುತ್ತಿದ್ದಾಗ ಪ್ರಪಂಚದ ಗೊಡವೆಯೇ ಬೇಡವೆನಿಸುತ್ತದೋ ಹಾಗೆಯೇ ಇಲ್ಲೂ. ಅನ್ಯ-ಭಾವಗಳೆಲ್ಲ ಹೋಗಿ ಜ್ಞಾನಮಯವಾದ ಈ ಸ್ಥಿತಿಯಲ್ಲಿ ನೆಲೆಗೊಂಡಾಗ ಬರುವ ತೃಪ್ತಿ-ಸಂತೋಷಗಳೇ ಬೇರೆ! ಬರೀ ನಿದ್ದೆಯಲ್ಲದೆಲ್ಲಿ? ಎಂದೇ ಈ ಹಂಬಲಿಕೆ!

ನಿವರ್ತಯಂತೀಂ ನಿಖಿಲೇಂದ್ರಿಯಾಣಿ

   ಪ್ರವರ್ತಯಂತೀಂ ಪರಮಾತ್ಮ-ಯೋಗಮ್ |

ಸಂವಿನ್ಮಯೀಂ ತಾಂ ಸಹಜಾಽಮನಸ್ಕಾಂ

   ಕದಾ ಗಮಿಷ್ಯಾಮಿ ಗತಾಽನ್ಯಭಾವಃ ||೨೩||

ಸೂಚನೆ : 25/9/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.

ಸೂಚನೆ : 25/9/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ 
ಬೋಧಿವೃಕ್ಷ  ಅಂಕಣದಲ್ಲಿ

Friday, September 24, 2021

Ananda Tandava Of Nataraja - 24

Respond to (lekhana@ayvm.in)

  

Apasmāra and The Feet of Naṭarāja (continued)

 

Śrīraṅga Mahāguru points out how there is nothing mysterious about this trampling of Apasmāra. The pressing of Naṭarāja's foot upon Apasmāra's spine is highly significant from the point of view of the yogic science. Yogic texts describe several cakra–s ("wheels") in the human body. See for example, Yogacūḍāmaṇyupaniṣad 1.4-5 (In : Yoga Upanishads ed. Sastri, Pandit A. Mahadeva. Adyar : The Adyar Library and Research Centre, 1983 edition). Of the seven or more, the six cakra–s spanning the spine form one unit, whereas the one(s) from above the nape up to the cranium, another. The former is called śakti-sthāna and stand for the realm of Prakṛti ("Nature"); the latter is called called śāmbhava-sthāna, and stands for Puruṣa ("Person"). This has been taken note of in Varāhopaniṣad 5.53: mūlādhārādi-ṣaṭcakraṁ śakti-sthānam udīritam | 

kaṇṭhādupari mūrdhāntaṁ śāmbhavaṁ sthānamucyate ||

मूलाधारादि-षट्चक्रं शक्ति-स्थानम् उदीरितम् | 

कण्ठादुपरि मूर्धान्तं शाम्भवं स्थानमुच्यते ||

(In : Yoga Upanishads ed. Sastri, Pandit A. Mahadeva. Adyar : The Adyar Library and Research Centre, 1983 edition)


The entanglement of the  jīva (the "individual self") in saṁsāra is primarily due to the jīva's  being unable to go beyond the realm of Prakṛti to the original realm, viz. that of the Puruṣa.  Naṭarāja thus applies pressure upon the Prakṛti portion of Apasmāra , and it is this that easens the "transportation" , a veritable squeezing of the jīva  - from out of the realm of Prakṛti into that coveted realm of the Puruṣa, thus restoring the jīva to the original nature. It is thus an anugraha, favour, that the Lord has rendered to the jīva - the greatest possible benefaction indeed! As Śrīraṅga Mahāguru states it, what is apparently a nigraha, punishment, is indeed an anugraha, blessing!  - a nigraha-rūpa-anugraha, as he would put it.


Thursday, September 23, 2021

அனைத்து உயிரிடத்தும் இரக்கம் கருணை (Anaitthu Uyiridatthum Irakkam-Karunai)

மூலம்வித்வான் நரசிம்ஹ பட்டா 

தமிழாக்கம்வனஜா

மின்னஞ்சல் : (lekhana@ayvm.in)




வடமொழியில் தயை என்னும் சொல்லிற்கு இணையாக க்ருபை, அனுகம்பம், காருண்யம், க்ருணா(Gruna)  எனும் சொற்கள்  வழக்கில் உள்ளன. செடிகள், மரங்கள், விலங்குகள், பறவைகள் முதலானவற்றிற்கும் நம்மை போன்றே, அவை விரும்பியவாறு வாழும் உரிமை உண்டு. அவற்றின் சுதந்திரத்தை பறிக்க நமக்கு உரிமை இல்லை. அவை அச்சமின்றி வாழ வேண்டும். அவ்வாறாயின் சுற்றுசூழல் அமைப்பில் சமநிலை ஏற்படும். படைப்பனைத்தும் இணக்கமாக வாழ ஏற்ற சூழ்நிலை உருவாக வேண்டுமெனும் உணர்வே தயை-அன்பு எனப்படும். இத்தகு உணர்வு நமக்கு உண்டாயின் மற்றவர்க்கு துன்பம் கொடுக்கவும், கொடுமை செய்யவும், வற்புறுத்தவும்  மனம் இடம்கொடாது. துன்பத்தில் உள்ளபோது நம்மை நாம் காத்துக்கொள்ள விரும்புவது  போலவே, மற்றவர்கள் துன்பத்தில்  உள்ளபோது அவர்களை காக்கவேண்டும். இவ்வுணர்வு தானாகவே ஏற்படுதல் அனுகம்பம் -கருணை எனப்படும். நாம் துன்புறுத்தபடுகையில் உணரும் வலியையே மற்ற உயிரினங்கள் துன்புறுகையிலும் உணர்ந்து நம் இதயம் உருகும். இத்தகைய மனநிலையே தயை எனப்படும். நாம் இறைவனின், பெரியோர்களின் கருணையை வேண்டுகின்றோம். இவ்வுணர்வின் வெளிப்பாடு வன்முறையற்ற மனப்பான்மை. வன்முறையற்றவர்களை சூழ்ந்திருப்பவரிடத்து பகைமை இல்லை. "ஒருவன்  வன்முறையற்றவனாயின் அவன் சுற்றமும் பகையின்றிருக்கும் என்பது பதஞ்ஜலி முனிவரின் கூற்று. பண்டைய முனிவர்களின் குடியிருப்புகள் அவ்வாறே விளங்கின. முனிவர்களின் இருப்பும், பழக்க வழக்கங்களும், வழிபாடுகளும் இயற்கையாகவே பகையுணர்ச்சி கொண்ட விலங்குகளிடமும் பகையை நீக்கின.

 

          தண்டனை - இதுவும் ஒருவித அன்பின்/கருணையின்  வெளிப்பாடே

தீயவர்களை தண்டிப்பதும் "கருணை கூர்ந்த தண்டனை" என கூறலாம். தீமைக்கு கருணை காட்டுதல் பரிந்துரைக்கப்படவில்லை. மற்றவர்களை துன்புறுத்துபவர்களிடம் பெருந்தன்மை காட்டுதல் கூடாது. மற்றவரின் வீட்டையும் இதயத்தையும் கொளுத்துபவரையும், நஞ்ஜளிப்பவரையும், ஆயுத பலத்தால் மற்றவரின் நிலத்தை அபகரிப்பவரையும், செல்வத்தையும் பெண்களையும் கவர்ந்து செல்வோரையும் ஒருபோதும் பெருந்தன்மையான  மனதுடன் நடத்தக்கூடாது. இத்தகையோரை விசாரணை இன்றியே கொல்லலாம் என்பதை தயை என அறிவுடைய பெரியோர் கூறுவர். இத்தகு பாதக செயலை தடுப்பது சமூகத்திற்கு காட்டும் இரக்கம். "தீமையை அழிக்கும் இறைவனின் செயலும் கருணையே" என ஸ்ரீரங்க மஹாகுரு கூறுவார். கவி காளிதாஸன் தன் ரகுவம்சத்தில் ஸ்ரீ ராமன் அரக்கி தாடகையை பெண் என்றும் பாராமல் கொல்வதை  இவ்வாறு வர்ணிக்கிறார்: "ராமன் இரக்கத்துடன் அம்பு செலுத்தினார்".

        

 ஜீமூத வாஹனனின் இரக்கம் :

 ஹர்ஷன் எழுதிய நாகாநந்தா எனும் நாடகம் இரக்கம் - கருணாரஸத்திற்கு சீரிய உதாரணம். ஜீமூதவாஹனன் ஓய்வெடுக்க கடற்கரைக்கு சென்றான். அங்கு அநேக அரவங்களின் எலும்புகளை கண்டு தன் நண்பன் மித்ராவஸுவிடம் அது குறித்து வினவுகிறான். நண்பன் கருடனுக்கும் அரவங்களுக கும் இடையே ஏற்பட்ட ஒப்பந்தத்தை குறித்து கூறுகிறான். அதன்படி கருடனுக்கு உணவாக தினமும் ஒரு பாம்பை அளிக்க வேண்டும். அதை செவிமடுத்த ஜீமூதவாஹனன் மிகவும் இரக்கம கொண்டு தன் உடலையே கருடனுக்கு உணவாக அளித்து பாம்புகளை காப்பாற்ற தீர்மானித்தான். ஒரு வயதான பாம்பின் ஒரே வாரிசான  சங்கசூடனுக்கு பதிலாக பலிகொடுக்கும் பாறைக்கு சென்றான். தன் உடல் தின்னப்படும்போதும் மகிழ்ச்சியான முக பாவத்துடன் இருந்த ஜீமூதவாஹனனைக்கண்டு  கருடன் மிகவும் வியப்படைந்தான். பின் துர்காதேவி தோன்றி புனிதநீரை தெளித்து ஜீமூதவாஹனனை மீண்டும் உயிர்த்தெழ செய்கிறாள். கருடன் தானே தேவருலகிலிருந்து அமுதத்தை கொணர்ந்து அனைத்து அரவங்களையும் மீண்டும் உயிர்ப்பிக்கிறான். ஜீமுதவாஹனனுக்கு  அனைத்து உயிரினங்களிடத்தும் இருந்த இரக்கத்தை விளக்கும் புகழ் பெற்ற கதை இதுவாகும்.


குறிப்பு: இக்கட்டுரை யின் கன்னட மூலம் AYVM blogs ல் காணலாம்.

Monday, September 20, 2021

ಶ್ರೀನಿವಾಸನ ಸೇವೆ (Srinivasana Seve)

ಲೇಖಕರು : ಡಾ|| ಎಸ್.ವಿ. ಚಾಮು




ತಿರುಪತಿಯಾತ್ರೆಯನ್ನು ಮಾಡಿಬಂದ ಬಂಧುವೊಬ್ಬರು 'ಮೊನ್ನೆ ನಮಗೆ ಬರುವ ವೈಕುಂಠೈಕಾದಶಿಯಂದು(1.1.1996) ಪರಮ ಪುಣ್ಯಕರವಾದ ಮಧ್ಯರಾತ್ರಿಯಲ್ಲಿ ಎಲ್ಲೆಲ್ಲಿಂದಲೂ VVIP ಮತ್ತು VIP ಗಳಾದ ರಾಜಕಾರಣಿಗಳಿಗೆ ತಿರುಪತಿಯಲ್ಲಿ ದೇವರ ದರ್ಶನ ಮಾಡಲು ಅವಕಾಶ ಕೊಡುತ್ತಾರೆ' ಎಂಬ ಸಮಾಚಾರವನ್ನು ತಿಳಿಸಿದರು. ಅದನ್ನು ಕೇಳಿದಾಗ ಮನಸ್ಸಿನಲ್ಲಿ ಉಂಟಾದ ಯೋಚನೆಗಳನ್ನು ನಮ್ಮ ಓದುಗರೊಡನೆ ಹಂಚಿಕೊಳ್ಳಲು ಇಚ್ಛಿಸುತ್ತೇವೆ.


ಕೃಷ್ಣನು ಗೀತೆಯಲ್ಲಿ


ಚತುರ್ವಿಧಾ ಭಜನ್ತೇ ಮಾಂ ಜನಾಃ ಸುಕೃತಿರ್ನೋರ್ಜುನ।

ಆರ್ತೋ ಜಿಜ್ಞಾಸುರರ್ಥಾರ್ಥೀ ಜ್ಞಾನೀ ಚ ಭರತರ್ಷಭ॥

ತೇಷಾಂ ಜ್ಞಾನೀ ನಿತ್ಯಯುಕ್ತಃ ಏಕಭಕ್ತಿರ್ವಿಶಿಷ್ಯತೇ।


ಆರ್ತ (ಕಷ್ಟದಲ್ಲಿರುವವನು),ಜಿಜ್ಞಾಸು(ತಿಳಿಯಲಿಚ್ಚಿಸುವವನು), ಅರ್ಥಾರ್ಥೀ

(ಧನ, ಅಧಿಕಾರ ಇತ್ಯಾದಿಗಳನ್ನು ಬಯಸುವವನು) ಮತ್ತು ಜ್ಞಾನಿಯೆಂಬ ನಾಲ್ಕು ಬಗೆಯ ಸುಕೃತಿ ಜನರು ನನ್ನನ್ನು ಭಜಿಸುತ್ತಾರೆ. ಅವರಲ್ಲಿ ನಿತ್ಯವೂ (ಸರ್ವದಾ) ನನ್ನಲ್ಲಿ ಒಂದಾಗಿರುವ ಮತ್ತು ಏಕ ಭಕ್ತಿಯಾದ ಜ್ಞಾನಿಯು ತುಂಬ ಶ್ರೇಷ್ಠನು) ಎಂದು ನುಡಿಯುತ್ತಾನೆ. ಪರಮಾತ್ಮನು ಕೃಷ್ಣ, ನಾರಾಯಣ, ಶ್ರೀನಿವಾಸ, ರಂಗ ಮುಂತಾದ ಹೆಸರುಗಳಿಂದ ಬೇರೆ ಬೇರೆ ದಿವ್ಯ ಸ್ಥಳಗಳಲ್ಲಿ ಪೂಜಿಸಲ್ಪಡುತ್ತಾನೆ. ತಿರುಪತಿಯಲ್ಲಿ ಅವನು ಶ್ರೀನಿವಾಸ. ಯೋಗಿಗಳಿಂದ ವೇದ್ಯನೂ ಅವಾಙ್ಮನಸ ಗೋಚರನೂ ಆದ ಅವನ ದಿವ್ಯವಾದ ಮಹಿಮೆಯನ್ನು ಸಾಮಾನ್ಯ ಮನುಷ್ಯರೂ ಕಲ್ಪನೆ ಮಾಡಿಕೊಳ್ಳಲು ಸಾಧ್ಯವಾಗುವಂತೆ ಅನೇಕ ವಿಧವಾದ ಯುಕ್ತಿಗಳನ್ನು ಬಳಸಿ ಜ್ಞಾನಿಗಳು ಈ ಕ್ಷೇತ್ರದ ನಿರ್ಮಾಣವನ್ನು ಮಾಡಿರುತ್ತಾರೆ. ಸಹಜವಾಗಿಯೇ ಅದರಲ್ಲಿ ಕೇವಲ ಯೋಗಿವೇದ್ಯವಾದ ಅನೇಕ ಸೂಕ್ಷ್ಮಗಳು ಹೆಣೆದುಕೊಂಡಿರುತ್ತವೆ. ಉದಾಹರಣೆಗೆ ಈ ಬೆಟ್ಟದಲ್ಲಿ ಸ್ವಲ್ಪ ಎತ್ತರವಾಗಿರುವ ನಾರಾಯಣ ಗಿರಿ ಎಂಬ ಜಾಗದಲ್ಲಿ ಭಗವಂತನ ಎರಡು ಪಾದಗಳು ಇರುತ್ತವೆ. ಪರಮಪದದಿಂದ ಇಳಿದು ಅಲ್ಲಿ ಎರಡು ಪಾದಗಳನ್ನು ಇರಿಸಿ ನಂತರ ಅವನು ತನ್ನ ಆಲಯದಲ್ಲಿ ಬಂದು ನೆಲೆಸಿದ ಎಂದು ಕೇಳುತ್ತೇವೆ. ಪರಮ ಪದದಿಂದ ಅಂತರಿಕ್ಷಕ್ಕೆ ಚಾಚಿರುವ ಪರ್ವತ ಶಿಖರ, ಆಮೇಲೆ ಅಲ್ಲಿಂದ ಭೂಮಿಯಲ್ಲಿರುವ ಅವನ ಶಾಶ್ವತವಾದ ಆವಾಸಸ್ಥಾನ ಇವು ಭಗವಂತನ ಮೂರು ಹೆಜ್ಜೆಗಳನ್ನೇ ಗುರುತಿಸುತ್ತವೆ. ಅವನ ಆಲಯವಿರುವ ಬೆಟ್ಟ ಶೇಷಾದ್ರಿ ಅಥವಾ ಸಪ್ತಗಿರಿ. ಅದು ಏಳು ಸುತ್ತುಗಳಿಂದ ಕೂಡಿ ಎಂಟನೆಯದರ ಮೇಲೆ ಭಗವಂತನನ್ನೇ ಧರಿಸಿರುವ ಕುಂಡಲ್ಯಾತ್ಮಕವಾದ ಪ್ರಣವವನ್ನೇ ಪ್ರತೀಕಿಸುತ್ತದೆ. ಭಗವಂತನು ನೆಲೆಸಿರುವ ಆಲಯವನ್ನು ಆನಂದ ನಿಲಯ ವಿಮಾನವೆಂದು ಸಂಪ್ರದಾಯವು ಕರೆಯುತ್ತದೆ. ಇವೆಲ್ಲವೂ ಯೋಗ ರಹಸ್ಯಗಳನ್ನೇ ಪುನರುಕ್ತಿಸುತ್ತವೆಂಬುದನ್ನು ಹೇಳಬೇಕಾಗಿಲ್ಲ. ಭಗವಾಕ್ಷಾತ್ಕಾರ ಮಾಡಿದವರಿಗೆ ಇವುಗಳ ಒಳಗುಟ್ಟು ಗೊತ್ತಾಗುತ್ತದೆ. ಅಂತಹವರು ಶ್ರೀನಿವಾಸನಿಗೆ 


ಪರಸ್ಮೈಬ್ರಹ್ಮಣೇ ಪೂರ್ಣಕಾಮಾಯ ಪರಮಾತ್ಮನೇ।


ಎಂದು ಮಂಗಳಾಶಾಸನ ಮಾಡಿರುವುದು ಸಹಜವೇ ಆಗಿರುತ್ತದೆ.


ಆ ರೀತಿ ಅರಿತವರಲ್ಲಿ ರಾಮಾನುಜರಿಗೆ ಅಗ್ರಸ್ಥಾನ. ಬೆಟ್ಟದ ಪಾವಿತ್ರ್ಯವನ್ನು ಮನಗಂಡ ಅವರು ಅದನ್ನು ಕಾಲಿನಿಂದ ತುಳಿಯಲಿಚ್ಛಿಸದೆ ತಮ್ಮ ಮಂಡಿಯ ಮೇಲೆ ಹತ್ತಿಕೊಂಡು ಹೋದರು ಎಂಬ ಐತಿಹ್ಯವನ್ನು ಕೇಳುತ್ತೇವೆ. ಈ ಸಂದರ್ಭದಲ್ಲಿ, "ಶ್ರುತಿ ಶಿರಸಿವಿದೀಪ್ತೇ ಬ್ರಹ್ಮಣಿ ಶ್ರೀನಿವಾಸೇ॥" (ಉಪನಿಷತ್ತುಗಳಲ್ಲಿ ಬೆಳಗುವ ಬ್ರಹ್ಮ ಸ್ವರೂಪನಾದ ಶ್ರೀನಿವಾಸನಲ್ಲಿ…) ಎಂಬ ಅವರ ಮಾತು ಸ್ಮರಿಸ ಯೋಗ್ಯವಾಗಿರುತ್ತದೆ. ಅವರನ್ನು ಹಿಂಬಾಲಿಸಿಯೇ ಶ್ರೀವೈಷ್ಣವರು ತ್ರಿಸಂಧ್ಯೆಗಳಲ್ಲಿಯೂ 'ಶ್ರೀ ವೆಂಕಟಾದ್ರಿಶಿಖರಾಲಯ ಕಾಳ ಮೇಘಂ ' ಎಂದು ಅವನನ್ನು ನಮಿಸುತ್ತಾರೆ.


ನಮ್ಮ ಕಾಲದಲ್ಲಿ ಶ್ರೀರಂಗಸದ್ಗುರುವೂ ಸಹ ಶ್ರೀನಿವಾಸನ ಮಹಿಮೆಯನ್ನರಿತ ಮಹಾನುಭಾವರಲ್ಲಿ ಒಬ್ಬರಾಗಿದ್ದರು. ಯೋಗಸೂತ್ರವು 'ಯಥಾಭಿಮತ ಧ್ಯಾನಾದ್ವಾ।' (ಮನಸ್ಸೊಪ್ಪುವ ದೇವಮೂರ್ತಿಯನ್ನು ಧ್ಯಾನಿಸಿ ಜ್ಞಾನದ ಚರಮಲಕ್ಷ್ಯವನ್ನು ಮುಟ್ಟಬೇಕು) ಎಂದು ಹೇಳುತ್ತದೆ. ಶ್ರೀ ಗುರುದೇವರು ಶ್ರೀನಿವಾಸಸ್ವಾಮಿಯ ಬಿಂಬವನ್ನು ಮನಸ್ಸಿನಲ್ಲಿ ಧರಿಸಿಯೇ ಯೋಗ ಭೂಮಿಗಳನ್ನು ಪ್ರವೇಶಿಸಿದರು ಎಂದು ಕೇಳಿರುತ್ತೇವೆ. ಧ್ಯಾನದಲ್ಲಿ ಕಣ್ಮುಚ್ಚಿಕೊಂಡಾಗ ಮೊದಲು ಶ್ರೀನಿವಾಸ ಮೂರ್ತಿಯು ಗೋಚರಕ್ಕೆ ಬಂದು ನಂತರ ಯೋಗ ವಿದ್ಯೆಯು ಹೇಳುವ ಅಂತರ್ದರ್ಶನ ಮತ್ತು ಅಂತಃ ಶ್ರವಣಗಳು ತಮಗೆ ಕಂಡು ಕೇಳಿದುದನ್ನು ಅವರು ಗುರುತಿಸಿರುವ ಹಲವು ಪತ್ರಗಳು ನಮ್ಮ ಬಳಿ ಇರುತ್ತವೆ. ಧ್ಯಾನದಲ್ಲಿ ಗುರು ಮೂರ್ತಿಯ ಹಿಂಬದಿಯಲ್ಲಿ ಶ್ರೀನಿವಾಸನ ಭವ್ಯ ಮೂರ್ತಿಯು ಹಲವು ಬಾರಿ ನಮಗೂ ಗೋಚರಕ್ಕೆ ಬಂದು ಹೃದಯವನ್ನು ಶಾಂತಿಯಿಂದ ತುಂಬಿರುತ್ತದೆ. ಧ್ಯಾನಸ್ಥರಾದಾಗ ಪರವ್ಯೋಮದವರೆಗೂ ಸುಲಭವಾಗಿ ಹೋಗಿ ಬಿಡುವ ರಂಗನಾಥನ ಸತಿಯವರೂ ಸಹ ಕಣ್ಣು ಮುಚ್ಚಿದಾಗ ಶ್ರೀನಿವಾಸನ ಮೂರ್ತಿಯನ್ನು ಮೊದಲು ದರ್ಶನ ಮಾಡಿಯೇ ಯೋಗ ಭೂಮಿಗಳಲ್ಲಿ ಪ್ರವೇಶ ಮಾಡುವುದಾಗಿ ಒಮ್ಮೆ ನಮಗೆ ನುಡಿದರು. ಶ್ರೀನಿವಾಸನ ಮೂರ್ತಿಯು ಅಷ್ಟು ಪ್ರಭಾವಶಾಲಿಯಾದುದು. ಅದೊಂದು ಪೂರ್ಣ ವಿಗ್ರಹ. ಪರಮಾತ್ಮ ವಿಗ್ರಹ.


ಆದುದರಿಂದ ಯೋಗಿಗಳ, ಭಕ್ತರ ಮತ್ತು ಜ್ಞಾನಿಗಳ ಆರಾಧ್ಯದೈವನಾದ ಅವನ ದರ್ಶನವನ್ನು ವೈಕುಂಠೈಕಾದಶಿಯಂತಹ ಪುಣ್ಯ ದಿನದಲ್ಲಿ, ಅದರ ಪುಣ್ಯತಮವಾದ ವೇಳೆಯಲ್ಲಿ ಪ್ರಸನ್ನಚಿತ್ತರೂ ಮತ್ತು ಪರಿಶುದ್ಧಾತ್ಮರೂ ಆದ ಪುಣ್ಯಾತ್ಮರು ಮೊಟ್ಟ ಮೊದಲು ಮಾಡುವುದು ಉಚಿತವಾಗಿರುತ್ತದೆ. ಅಂತಹವರನ್ನು ಮುಂದಿಟ್ಟುಕೊಂಡು ಇತರರು ಭಗವದ್ದರ್ಶನ ಮಾಡಿದರೆ ಅದು ಅವರಿಗೆ ಶ್ರೇಯಸ್ಕರ. ಆ ರೀತಿ ಇರುವಾಗ ಕಾಮಕ್ರೋಧಗಳ ಮತ್ತೂ ಅವುಗಳಿಂದ ಜನಿಸುವ ಬಹು ವಿಧವಾದ ಪಾಪಗಳ ಮಡಿಲಲ್ಲಿ ವಾಸಮಾಡುವ ರಾಜಕೀಯ ನಾಯಕರು ತಮ್ಮ ಅಧಿಕಾರವನ್ನು ಬಳಸಿಕೊಂಡು ಇತರರನ್ನು ಭಗವತ್ಸಾನ್ನಿಧ್ಯದಿಂದ ಹೊರಗಿರಿಸುವುದು ನಮಗೆ ಒಂದು ವಿಪರ್ಯಾಸವಾಗಿ ಕಾಣುತ್ತದೆ.


ಸೂಚನೆ : ಈ ಲೇಖನವು ಶ್ರೀಮಂದಿರದಿಂದ ಪ್ರಕಾಶಿತವಾಗುವ ಆರ್ಯಸಂಸ್ಕೃತಿ ಮಾಸ ಪತ್ರಿಕೆಯ ಸಂಪುಟ:೧೮ ಸಂಚಿಕೆ:೩, ಜನವರಿ  ತಿಂಗಳಲ್ಲಿ ೧೯೯೬  ಪ್ರಕಟವಾಗಿದೆ.

Sunday, September 19, 2021

ಶ್ರೀರಾಮನ ಗುಣಗಳು - 23 ಸರ್ವ-ಜನ-ಪ್ರಿಯ - ಶ್ರೀರಾಮ (Sriramana Gunagalu - 23 Sarvajana Priya- Shrirama)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ 
(ಪ್ರತಿಕ್ರಿಯಿಸಿರಿ lekhana@ayvm.in)




ಶ್ರೀರಾಮನು ಎಲ್ಲಾ ಜನರಿಗೂ ಪ್ರೀತಿಪಾತ್ರನಾಗಿದ್ದ. ಇಷ್ಟವಾದುದನ್ನೇ ಪ್ರಿಯ ಎನ್ನುತ್ತಾರೆ. 'ಸರ್ವಜನಪ್ರಿಯ' ಎಂಬ ಶಬ್ದವನ್ನು ಎರಡು ರೀತಿಯಲ್ಲಿ ಅರ್ಥ ಮಾಡಬಹುದು. ಎಲ್ಲ ಜನರಿಗೂ ರಾಮನು ಪ್ರಿಯನಾಗಿದ್ದ ಎಂಬುದು ಒಂದು ಅರ್ಥ. ಎಲ್ಲ ಜನರನ್ನು ರಾಮನು ಪ್ರೀತಿಸುತ್ತಿದ್ದ ಎಂಬುದು ಇನ್ನೊಂದು ಅರ್ಥ. ಪ್ರೀತಿ ಎಂಬುದು ದ್ವಿ- ನಿಷ್ಠವಾದುದು. ಒಂದು ಕಡೆಯಿಂದ ಮಾತ್ರ ಈ ಪ್ರೀತಿಗೆ ಅವಕಾಶವಿರುವುದಿಲ್ಲ. ಪ್ರಿಯವೆಂಬುದು ಕೆಲವು ಕಾಲ ಮತ್ತು ದೇಶಕ್ಕೆ ಅನುಗುಣವಾಗಿ ಭಿನ್ನವಾಗುತ್ತದೆ. ಒಂದು ಕಾಲಕ್ಕೆ ಪ್ರಿಯನಾದವನು ಇನ್ನೊಂದು ಕಾಲಕ್ಕೆ ಪ್ರಿಯವಾಗಬೇಕೆಂದಿಲ್ಲ. ಒಂದು ದೇಶಕ್ಕೆ ಪ್ರಿಯನಾದವನು ಇನ್ನೊಂದು ದೇಶಕ್ಕೆ ಪ್ರಿಯವಾಗಬೇಕೆಂದಿಲ್ಲ. ಕೆಲವರಿಗೆ ಪ್ರಿಯನಾದವನು ಎಲ್ಲರಿಗೂ ಪ್ರಿಯನಾಗಬೇಕೆಂದಿಲ್ಲ. ಯಾರು ಎಲ್ಲಾ ಕಾಲಕ್ಕೂ, ಎಲ್ಲಾ ದೇಶಕ್ಕೂ ಮತ್ತು ಎಲ್ಲ ಬಗೆಯ ಜನರಿಗೂ ಒಪ್ಪುವಂತೆ ಇರುತ್ತಾನೋ ಅಂತಹವನು ಸರ್ವಜನಪ್ರಿಯನಾಗುತ್ತಾನೆ. ಶ್ರೀರಾಮನು ಸಮಸ್ತವಿಧವಾಗಿಯೂ ಸರ್ವಪ್ರಿಯನಾಗಿದ್ದ ಎಂಬುದು ಅವನ ಸರ್ವಜನಪ್ರಿಯತೆಗೆ ಸಾಕ್ಷಿ.

ಹಾಗಾದರೆ ಶ್ರೀರಾಮನು ಯಾವ ರೀತಿಯಲ್ಲಿ ಪ್ರಿಯನಾಗಿದ್ದ? ಅವನಿಗೆ ಇಷ್ಟವಾಗದ ಜನರು ಇರಲಿಲ್ಲವೇ? ಶತ್ರುಗಳೂ ಯಾರೂ ಇರಲಿಲ್ಲವೇ? ರಾವಣ, ಕುಂಭಕರ್ಣ ಮೊದಲಾದ ರಾಕ್ಷಸರೂ ಅವನನ್ನೂ ಪ್ರೀತಿಸುತ್ತಿದ್ದರೇ? ಇತ್ಯಾದಿ ಸಂಶಯಗಳು ಬರುತ್ತವೆ. ಅವನ ರಾಜ್ಯದಲ್ಲಿ ಅವನನ್ನು ಪ್ರೀತಿ ಮಾಡದವರು ಯಾರೂ ಇರಲಿಲ್ಲ ಎಂದರ್ಥವೇ ಹೊರತೂ ರಾವಣಾದಿಗಳೂ ಪ್ರೀತಿಸುತ್ತಿದ್ದರು ಎಂದರ್ಥವಲ್ಲ. ಎಂದೆಂದಿಗೂ ಒಬ್ಬ ವ್ಯಕ್ತಿಯನ್ನು ಇಷ್ಟಪಟ್ಟರೆ ಆತನು ಪ್ರಿಯನಾಗುತ್ತಾನೆ. ಸದಾ ಅವನನ್ನೇ ಮನಸ್ಸಿನಲ್ಲಿ ಚಿಂತಿಸುತ್ತಾನೆ. ಅಥವಾ ಅವನನ್ನೇ ಸರ್ವಸ್ವವಾಗಿ ಭಾವಿಸುತ್ತಾನೆ. ಪತ್ನಿಯಾದ ಸೀತೆ, ತಾಯಂದಿರಾದ ಕೌಸಲ್ಯೆ, ಸುಮಿತ್ರೆ ಮತ್ತು ಕೈಕೇಯಿ, ತಮ್ಮಂದಿರು ಮತ್ತು ಅವನ ರಾಜ್ಯದಲ್ಲಿನ ಜನರೆಲ್ಲರೂ ಅವನನ್ನೇ ಸರ್ವಸ್ವವಾಗಿ ಭಾವಿಸುತ್ತಾ ಅವರೆಲ್ಲರ ಪ್ರೀತಿಪಾತ್ರನಾಗಿದ್ದ ಶ್ರೀರಾಮ. ರಾವಣಾದಿಗಳಾದರೋ, ನಿರಂತರವಾಗಿ ಅವನನ್ನೇ ಮನಸ್ಸಿನಲ್ಲಿ ಶತ್ರುವಾಗಿ ಭಾವಿಸುತ್ತಿದ್ದರು. ಒಂದು ಕ್ಷಣವೂ ಅವನ ವಿಚಾರ ಅವರಲ್ಲಿ ಸುಳಿಯದೇ ಇರುತ್ತಿರಲಿಲ್ಲ. ಶತ್ರುವಾಗಿ ಭಗವಂತನನ್ನು ಅನವರತ ಭಾವಿಸಿದರೂ ಅಂತವರು ಕೊನೆಯಲ್ಲಿ ಭಗವಂತನ ಅನುಗ್ರಹಕ್ಕೆ ಪಾತ್ರರಾಗುತ್ತಾರೆ, ಅವನ ದಿವ್ಯಸಾನ್ನಿಧ್ಯವನ್ನು ಪಡೆಯುವುದರಲ್ಲಿ ಯಾವುದೇ ಸಂದೇಹವಿಲ್ಲ. ಶ್ರೀರಾಮನು ವ್ಯಕ್ತಿಯನ್ನು ದ್ವೇಷಿಸುತ್ತಿರಲಿಲ್ಲ. ಅವರಲ್ಲಿದ್ದ ದುರ್ಗುಣವನ್ನು ಮಾತ್ರ ದ್ವೇಷಿಸುತ್ತಿದ್ದ. ಯುದ್ಧದ ಕೊನೆಯಲ್ಲಿ ಶ್ರೀರಾಮನು ರಾವಣನನ್ನು ಜಯಿಸುತ್ತಾನೆ. ರಾವಣನ ಹನನವೂ ಆಗುತ್ತದೆ. ಆಗ ವಿಭೀಷಣನನ್ನು ಶ್ರೀರಾಮನು ಕರೆಯುತ್ತಾನೆ. 'ಮರಣಾಂತಾನಿ ವೈರಾಣಿ' ಶತ್ರುತ್ವವು ಮರಣ ಹೊಂದುವ ತನಕ ಮಾತ್ರ ಎಂದು ಹೇಳಿ, ರಾವಣನ ಉತ್ತರಕ್ರಿಯೆಯನ್ನು ಸ್ವತಃ ರಾಮನೇ ನಿಂತು ಮಾಡಿಸುತ್ತಾನೆ. ವಾಲಿಯ ನಿಗ್ರಹದಲ್ಲೂ ಇದೇ ರೀತಿಯಾದ ಶ್ರೀರಾಮನ ಪ್ರೀತಿಯನ್ನು ಕಾಣಬಹುದು. ವಾಲಿಯ ಸಂಹಾರದ ಅನಂತರ ಸುಗ್ರೀವನಿಗೆ ವಾಲಿಯ ಅಂತ್ಯಕ್ರಿಯೆಯನ್ನು ನಡೆಸಲು ಸೂಚಿಸುತ್ತಾನೆ. ಆಗಲೂ ಶ್ರೀರಾಮನಿಂದ ಬರುವ ಮಾತು- 'ಮರಣಾಂತಾನಿ ವೈರಾಣಿ' ಎಂದೇ. ಶ್ರೀರಾಮನ ದ್ವೇಷವು ಕೇವಲ ವ್ಯಕ್ತಿಗತವಾಗಿರಲಿಲ್ಲ; ಅದು ಅವರಲ್ಲಿರುವ ದುಷ್ಟಸ್ವಭಾವದ ವಿರುದ್ಧವಾಗಿತ್ತು. ಈ ಕಾರಣಕ್ಕೆ ರಾಮನನ್ನು ಎಲ್ಲಾ ಬಗೆಯ ಜನರು ಇಷ್ಟಪಡುತ್ತಿದ್ದರು. ಇಂತಹ ಎಲ್ಲರನ್ನೂ ಪ್ರೀತಿಯಿಂದ ಕಾಣುವ ಮಾನವೀಯ ಗುಣವನ್ನು ಶ್ರೀರಾಮನು ಹೊಂದಿದ್ದ.

ಸೂಚನೆ : 19/9/2021 ರಂದು ಈ ಲೇಖನವು  ಹೊಸದಿಗಂತ ಪತ್ರಿಕೆಯ " ಶ್ರೀರಾಮನ ಗುಣಗಳು " ಅಂಕಣದಲ್ಲಿ ಪ್ರಕಟವಾಗಿದೆ.

Saturday, September 18, 2021

ಷೋಡಶೋಪಚಾರ - 17 ತಾಂಬೂಲ (Shodashopachaara - 17 Thaambuula)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ 
(ಪ್ರತಿಕ್ರಿಯಿಸಿರಿ lekhana@ayvm.in)



ಶ್ರೀರಂಗಮಹಾಗುರುಗಳ "ಯಾವ ಹೃದಯದಲ್ಲಿ ಭಗವಂತನು ವಾಸಮಾಡುತ್ತಾನೋ, ಆ ರಸಸಿಕ್ತಹೃದಯದ ರಸದಿಂದ ನಮ್ಮ ಜೀವನ ಬೆಳೆಯಬೇಕು. ಆತ್ಮರಸದಿಂದ ಇಂದ್ರಿಯಗಳು ಬೆಳೆಯಬೇಕು" ಎಂಬ ರಸವತ್ತಾದ ಮಾತು ಸ್ಮರಣೀಯ. ಅಂದರೆ ನಮ್ಮ ಶರೀರ, ಇಂದ್ರಿಯ, ಮನಸ್ಸುಗಳು ಒಂದು ನೇರದಲ್ಲಿ ಬೆಳೆಯಬೇಕಾದರೆ ಅದಕ್ಕೆ ಹೊರಗಿನ ಸಾಮಗ್ರಿಗಳು ಬಹು ಮುಖ್ಯವಾಗುತ್ತವೆ. ಇಂತಹ ಅನೇಕ ಪದಾರ್ಥಗಳಲ್ಲಿ ತಾಂಬೂಲವೂ ಒಂದು. ಇದಕ್ಕೆ ಆಯುರ್ವೇದದಲ್ಲಿ ವಿಶಿಷ್ಟಸ್ಥಾನವಿದೆ. ಭಗವಂತನಿಗೆ ಸಮರ್ಪಿಸಿ, ಇದನ್ನು ಸ್ವೀಕರಿಸಬೇಕು. 'ತಾಂಬೂಲ' ಎಂಬ ಉಪಚಾರವು ನೈವೇದ್ಯದ ಅನಂತರ ಸಮರ್ಪಿಸುವ ಉಪಚಾರವಾಗಿದೆ. ಊಟವಾದ ಮೇಲೆ ತಾಂಬೂಲಚರ್ವಣೆಯನ್ನು ನಾವು ಮಾಡುತ್ತೇವೆ. ಸ್ವೀಕರಿಸಿದ ಆಹಾರವು ಚೆನ್ನಾಗಿ ಪಚನವಾಗಬೇಕು ಎಂಬ ಉದ್ದೇಶವಿದೆ. ಕಟು, ತಿಕ್ತ, ಉಷ್ಣ, ಮಧುರ, ಕ್ಷಾರ, ಕಷಾಯ ವಾತನಿವಾರಕ, ಕ್ರಿಮಿನಾಶಕ, ಕಫಹರ, ದುರ್ಗಂಧನಾಶನ, ವದನಭೂಷಣ, ಮುಖಶುದ್ಧಿಕರ ಮತ್ತು ಕಾಮಾಗ್ನಿಸಂದೀಪನ ಎಂಬ ಒಟ್ಟು ಹದಿಮೂರು ಉತ್ತಮಗುಣಗಳಿಂದ ಕೂಡಿದ ತಾಂಬೂಲವು ದೇವದುರ್ಲಭವಾದುದು ಎಂದು ಅದನ್ನು ಪ್ರಶಂಸಿಸಿದ್ದಾರೆ. ಇಷ್ಟೆಲ್ಲಾ ಆಯುರ್ವೇದೀಯ ಗುಣಗಳಿಂದ ಕೂಡಿದ ತಾಂಬೂಲವನ್ನು ಭಗವಂತನಿಗೆ ಸಮರ್ಪಿಸುವಾಗ "ಪೂಗೀಫಲಸಮಾಯುಕ್ತಂ ನಾಗವಲ್ಲೀದಲೈರ್ಯುತಮ್| ಕರ್ಪೂರಚೂರ್ಣಸಂಯುಕ್ತಂ ತಾಂಬೂಲಂ ಪ್ರತಿಗೃಹ್ಯತಾಮ್"II(ಅಡಿಕೆ,ವೀಳೆಯದೆಲೆ, ಕರ್ಪೂರ ಚೂರ್ಣಗಳಿಂದ ಕೂಡಿದ ತಾಂಬೂಲವನ್ನು ತೆಗೆದುಕೋ) ಎನ್ನುತ್ತೇವೆ.  ತಾಂಬೂಲದಲ್ಲಿ ಬಳಸುವ ಈ ಪದಾರ್ಥಗಳ ಯೋಗವು ಆರೋಗ್ಯವರ್ಧಕ ಗುಣದಿಂದ ಕೂಡಿದೆ.   

 ತಾಂಬೂಲದ ಬಳಕೆಯು ನಮ್ಮ ಆರೋಗ್ಯಕ್ಕೆ ಉತ್ತಮವಾದುದು ಎಂಬ ವಿಷಯ ಸತ್ಯವಾದರೂ, ಇದನ್ನು ಭಗವಂತನಿಗೆ ನಿವೇದಿಸುವ ಉದ್ದೇಶವೇನು? ಭಗವಂತನೇನು ಆಹಾರವನ್ನು ಸ್ವೀಕರಿಸಿದನೇ? ಅಥವಾ ಅವನ ಬಾಯಿಯು ವಾಸನೆಯಿಂದ ಕೂಡಿತ್ತೇ? ಇತ್ಯಾದಿ ಪ್ರಶ್ನೆಗಳು ಬರುತ್ತವೆ. ಹಿಂದೆ ಹೇಳಿದಂತೆ ಈ ಉಪಚಾರವೂ ಪರ್ಯವಸಾನದಲ್ಲಿ ನಮ್ಮ ದೇಹ, ಮನಸ್ಸು, ಇಂದ್ರಿಯಗಳನ್ನು ಪ್ರಸನ್ನಗೊಳಿಸುವುದಕ್ಕಾಗಿ ಮಾತ್ರ. ದ್ರವ್ಯದ ಬಳಕೆಯು ನಮ್ಮ ದೇಹದಲ್ಲಿರುವ ಆಯಾ ದೇವತಾಶಕ್ತಿಕೇಂದ್ರಗಳನ್ನು ಜಾಗ್ರತಗೊಳಿಸುತ್ತದೆ. ಆದ್ದರಿಂದ  ಇಂತಹ ದೇವತಾಪ್ರೀತಿಗಾಗಿ ಇಂತಹ ದ್ರವ್ಯವನ್ನೇ ಬಳಸಬೇಕೆಂಬ ನಿಯಮವನ್ನು ವಿಧಿಸಲಾಗಿದೆ. ವಿಷ್ಣುಪ್ರೀತಿಯನ್ನು ಪಡೆಯಬೇಕೆಂದರೆ ಗಂಧಕರ್ಪೂರದಿಂದ ಕೂಡಿದ ತಾಂಬೂಲವನ್ನು ವಿಷ್ಣುವಿಗೆ ನಿವೇದಿಸಬೇಕೆಂಬ ಸಂಪ್ರದಾಯವಿದೆ. ಅಷ್ಟೇ ಅಲ್ಲ, ತಾಂಬೂಲದ ದಾನವನ್ನು ದಾನಗಳಲ್ಲೇ ಅತ್ಯಂತಶ್ರೇಷ್ಠವಾದ ದಾನ ಎಂದೂ ಕೊಂಡಾಡಿದ್ದಾರೆ. ಮತ್ತು ತಾಂಬೂಲವಿಲ್ಲದೆ ಉಳಿದ ದಾನಕ್ಕೂ ಅವಕಾಶವಿಲ್ಲ. ಹೀಗಿರುವುದರಿಂದ ತಾಂಬೂಲಕ್ಕೆ ಇರುವ ಮಹತ್ವವನ್ನು ಅರಿಯಬಹುದಾಗಿದೆ. ಅರ್ಚನೆಯ ಕಾಲದಲ್ಲಿ ತಾಂಬೂಲವು ಲಭ್ಯವಾಗದಿದ್ದರೆ ನೀರಿನಿಂದಲಾದರೂ ಅದನ್ನು ಕಲ್ಪಿಸಿಕೊಳ್ಳಬೇಕೆಂಬ ವಚನವು ಇದಕ್ಕಿರುವ ಹಿರಿಮೆಯನ್ನು ಸಾರುತ್ತದೆ. 

ಸೂಚನೆ : 18/9/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.