Friday, January 31, 2020

ஶ்ரீரங்கமஹாகுரு - 55 (Sriranga Mahaguru - 55)

ஶ்ரீகுருவின் கண்ணோட்டம் – 44

அனைத்தையும் நிறைக்கும் பொருள்
===========================================================

மூலம்: வரததேசிகாசார்யர் 
தமிழாக்கம்: வனஜா
மின்னஞ்சல் : lekhana@ayvm.in


ஒருமுறை தர்மராஜன் மற்றும் துரியோதனன் இருவரையும் அழைத்து ஸ்ரீ க்ருஷ்ணன் ஒரு போட்டியை அறிவித்தான். ஒரு அறையை காண்பித்து "சிறிதும் இடைவெளியின்றி இந்த அறையை எந்த பொருளையாவது கொண்டு நிரப்புவீர்களா? சிறிய சந்து பொந்தும் விடாமல் நிரப்ப வேண்டும்" என்பதே போட்டியின் விதி.

"இதென்ன பெரிய போட்டி" என்று துரியோதனனே மிக்க ஊக்கத்துடன் முன்வந்தான்.  தன் செல்வத்தின் பெருமையை பறைசாற்றவே அவன் தக்க சமயத்திற்காக காத்திருந்தான். தன் கருவூலத்திலிருந்த முத்து, ரத்னம், வைர, வைடூர்யங்களை கொண்டுவர செய்து அவ்வறையை நிரப்பினான். அவ்வாறு நிரப்பி ஸ்ரீ க்ருக்ஷ்ணனுக்கு காட்டினான்.

வைர வைடூர்யங்களால் நிரம்பியிருப்பினும் முத்து ரத்தினங்களின் நடுவில் நிறைய இடைவெளியிருந்ததை ஸ்ரீக்ருஷ்ணன் சுட்டி காட்டினான். எவ்வளவுதான் நிரப்பினாலும் ஏதாவது ஒரு இடத்தில் இடைவெளி இருந்தது. முடிவில் துரியோதனன் சோர்வுடன் "நீ கூறுவது போல் நிரப்புவது யாராலும் இயலாது” என்று அனைத்தையும் காலி செய்வித்தான்.

இப்போது தர்மராஜனின் முறை. ஸ்ரீக்ருஷ்ணன் அவனை நோக்கினான். தர்மராஜன் பணிவுடன் வாசற்படியின் மேல் ஒரு விளக்கை ஏற்றி வைத்தான். உடனேயே  அறை  முழுவதும் ஒளி நிறைந்தது.

ஸ்ரீகருஷ்ணன் துரியோதனனை நோக்கினான். அவன் தலை குனிந்து தன் தோல்வியையும் தர்மராஜனின் வெற்றியையும் ஒப்புக்கொண்டான். வைர வைடூர்யம் முதலான செல்வங்கள் எத்துணை இருப்பினும் அவை வாழ்வை முழுமையாக்காது. வாழ்வின் ஒரு பகுதியை மட்டுமே நிரப்பும். அதுவே வாழ்வின்  சுவை என்று பெருமை பீற்றிக்கொள்பவர்கள் வாழ்வின் நிறைவை அனுபவிக்க இயலாமல் தோல்வியை ஒப்புக்கொள்ளவே வேண்டும்.

வாழ்வை முழுமையாக்குவது அதனை நடத்தும்  எல்லாம் வல்ல பரம்பொருளின் ஒளியேயாகும். அது நிறைந்திருப்பதனால் தான் வாழ்க்கை. இந்த ரகசியத்தை அறிந்து, தானே அந்த பரஞ்ஜோதியாகிருப்பவன் ஸ்ரீ க்ருஷ்ணன்.  இந்த ரகசியத்தை அறிந்தவர் யாரென்றறியவே அந்த சோதனையை முன்வைத்தான். தர்மராஜனோ "ஸ்ரீக்ருஷ்ணன்  பரம்பொருளின் வெளித்தோற்றம், அகிலமெல்லாம் நிறைந்திருக்கும் சைதன்ய ஒளிவிளக்கானவன்" என்றறிந்தவன். அத்தகு சைதன்ய ஒளியின் தூய்மையான எண்ணத்துடன் அதன் ப்ரதிநிதியாக விளக்கை ஏற்றி வைத்தான். அது ஒரு சாதாரண விளக்கு மட்டுமல்ல, வாழ்வை நிரப்பும் அழிவற்ற ஒளியின் ப்ரதிநிதி என்னும் அறிவு அவனிடமிருந்தது. ஒளிதானே அனைத்தையும் ஒன் றாக நிரப்ப வல்லது!

Tuesday, January 28, 2020

ಭಾರತೀಯರ ನಾಗರಿಕತೆ (Bhaaratheeyara naagarikathe)

ಲೇಖಕರು:  ಶ್ರೀ. ಸುಬ್ರಹ್ಮಣ್ಯ ಸೋಮಯಾಜಿ
(ಪ್ರತಿಕ್ರಿಯಿಸಿರಿ : lekhana@ayvm.in)


ನಮ್ಮ ಮಹರ್ಷಿಗಳು ಕಣ್ಣು ಮುಚ್ಚಿ ಧ್ಯಾನಸ್ಥರಾಗಿ ಮೂಲದ ಶೋಧನೆಯಲ್ಲಿ ತೊಡಗಿದಾಗ ಈ ದೇಹವನ್ನು ಒಂದು ನಗರವಾಗಿ, ಆಲಯವಾಗಿ, ರಥವಾಗಿ ತಮ್ಮ ಅಂತರ್ದರ್ಶನದಲ್ಲಿ ಕಂಡರು. ಹಾಗೆ ಒಳಗೆ ಕಂಡುದನ್ನೇ ಹೊರಗೆ ಅದರ ಅನುಕೃತಿಯಾಗಿ ಇಲ್ಲಿ ನಾಗರಿಕತೆಯನ್ನು ಬೆಳೆಸಿದುದನ್ನು ಕಾಣುತ್ತೇವೆ.  ಅಂತಹ ನಗರಗಳನ್ನು ನಿರ್ಮಿಸುವಾಗ ಆ ನಗರಗಳಿಗೆ ಮೂಲವನ್ನು ನೆನಪಿಸುವ ಹೆಸರನ್ನೇ ಇಟ್ಟರು. ಉದಾಹರಣೆಗೆ, ”ಅಯೋಧ್ಯಾ”- ಯುದ್ಧಮಾಡಿ ಜಯಿಸಲಾಗದುದು. ದೇವದೇವನು ವಾಸಿಸುವ ನಗರದಲ್ಲಿ ಯುದ್ಧದ ಮಾತೇ ಇಲ್ಲ. ಹೊರನಗರಗಳನ್ನು ಯುದ್ಧಮಾಡಿ ಜಯಿಸಬಹುದು. ಆದರೆ ಈ ದೇಹವು ಅವರ ದೃಷ್ಟಿಯಲ್ಲಿ ಒಳನಗರ. ಒಳಗೊಯ್ಯುವ ಹೊರನಗರವೂ ಸಹ. ಇದನ್ನು ಭಕ್ತಿಯಿಂದ, ಶರಣಾಗತಿಯಿಂದ ಸಾಧನೆಯಿಂದ ಮಾತ್ರ ಜಯಿಸಬಹುದಾಗಿದೆ.ಅದನ್ನು ನೆನಪಿಸುವ ಹೆಸರು.
ಅಂತೆಯೇ, ‘ಕಾಶೀ’-ಒಳಪ್ರಕಾಶವನ್ನೇ ನೆನಪಿಸುವ ಹೆಸರನ್ನು ಹೊರ ನಗರಕ್ಕೂ ಇಟ್ಟರು. 

ನಮ್ಮ ದೇವಸ್ಥಾನಗಳು: 

ದೇಹದೊಳಗೆ ದೇವನನ್ನು ಸಾಕ್ಷಾತ್ಕರಿಸಿಕೊಂಡ ಈ ದೇಶದ ಜ್ಞಾನಿಗಳು ಈ ದೇಹದೇವಾಲಯದ ಅನುಕೃತಿಯಾಗಿ ಹೊರಗೂ ದೇವಸ್ಥಾನಗಳನ್ನು ನಿರ್ಮಿಸಿದರು. ಹೆಸರೇ “ದೇವಸ್ಥಾನ”. ನಮ್ಮನ್ನು ಪಾಂಚಭೌತಿಕವಾದ ಭೂತಸ್ಥಾನದಿಂದ ದೇವಸ್ಥಾನಕ್ಕೆ ಹತ್ತಿಸುವ ಉಪಾಯವೇ ಜ್ಞಾನಿಗಳು ತಂದ ದೇವಾಲಯಗಳು. ಇಲ್ಲಿನ ಶಿಲ್ಪಗಳು “ಶೀಲ ಸಮಾಧೌ” ಎಂಬಂತೆ ಸಮಾಧಿಸ್ಥಿತಿಯಿಂದಲೇ ಹೊರಹೊಮ್ಮಿದುವಾಗಿವೆ. ಸಾಮಾನ್ಯವಾಗಿ ದೇವಾಲಯಗಳ ಪ್ರಾಕಾರದ  ಕೆಳಗಿನ ಅಂತಸ್ತುಗಳಲ್ಲಿ ಪಶುಪಕ್ಷಿಗಳ ಚಿತ್ರವಿರುತ್ತದೆ. ನಂತರ ಅಸುರರ ಚಿತ್ರಗಳು ನಂತರ ಮೇಲೆಮೇಲಿನ ಸುತ್ತುಗಳಲ್ಲಿ ಮನುಷ್ಯರ, ಗುರುಶಿಷ್ಯರ ಚಿತ್ರಗಳನ್ನು ಕಾಣುತ್ತೇವೆ. ನಂತರ ದೇವತೆಗಳ, ಭಗವಂತನ ಅವತಾರಗಳ ಚಿತ್ರಗಳು ಹಾಗೆಯೇ ಒಳ ಸುತ್ತುಗಳಲ್ಲಿ ತ್ರಿಮೂರ್ತಿಗಳ ಚಿತ್ರಗಳು ನಂತರ ದೇವಾಲಯದ ಗರ್ಭದಲ್ಲಿ- ಗರ್ಭಗುಡಿಯಲ್ಲಿ ದೇವದೇವನ ಶಿಲ್ಪವಿರುತ್ತದೆ.

ಏನಿದರ ಮರ್ಮ? 

ಭಾರತದ  ಜ್ಞಾನಿಗಳು ಇಡೀ ಸೃಷ್ಟಿ ರಹಸ್ಯವನ್ನೇ ನಮ್ಮೆದುರು ಬಿಚ್ಚಿಟ್ಟಿದ್ದಾರೆ. ಯಾವ ಸಂಸ್ಕಾರವೂ ಇಲ್ಲದಿದ್ದಾಗ ಪ್ರಾಣಿಗಳಂತೆ ಬದುಕುತ್ತೇವೆ. ನಂತರ ಹೊರಜೀವನದ್ದಷ್ಟೇ ಸಂಸ್ಕಾರ ಬೆಳೆದಾಗ ಅಸುರರಂತೆ ವರ್ತಿಸುತ್ತೇವೆ. “ಮನ ಅವಬೋಧನೇ”ಎಂಬಂತೆ ಅರಿತು ಮಾಡುವುದನ್ನು ಕಲಿತಾಗ ಮನುಷ್ಯರಾಗುತ್ತೇವೆ. ಅರಿತು ಮಾಡುವುದು ಎಂದಾಗ ಕೇವಲ ಭೌತಿಕ ಕ್ಷೇತ್ರದ ಅರಿವು ಮಾತ್ರವಲ್ಲದೇ ದೈವಿಕ, ಆಧ್ಯಾತ್ಮಿಕ ಕ್ಷೇತ್ರಗಳ ಅರಿವನ್ನೂ ಸೇರಿಸಿಕೊಂಡು ಜೀವನದಲ್ಲಿ ಹೆಜ್ಜೆಯಿಡುವವನಿಗೇ ವಾಸ್ತವವಾಗಿ “ಮಾನವ “, “ಮನುಷ್ಯ” ಎಂಬ ಪದಗಳು ಸಲ್ಲುತ್ತವೆ. ಇನ್ನೂ ಮೇಲಿನ ಮಜಲುಗಳಿಗೆ ಹತ್ತಿದ ಮನಸ್ಸು ಜೀವನ ಮೂಲವನ್ನು ಕಂಡ ಗುರುವನ್ನು ತನ್ನ ಉದ್ಧಾರಕ್ಕಾಗಿ ಆಶ್ರಯಿಸುತ್ತದೆ. ನಂತರ ನಿರಂತರ ಸಾಧನೆಯಿಂದ ತಪಸ್ಯೆಯಿಂದ ಒಳಗೆ ಶಕ್ತಿಸ್ವರೂಪರಾಗಿ ಬೆಳಗುವ ದೇವತೆಗಳನ್ನು ದರ್ಶನ ಮಾಡುತ್ತೇವೆ. ಇನ್ನೂ ಮುಂದೆ ಆ ದೇವತೆಗಳಿಗೆಲ್ಲ ಶಕ್ತಿಯನ್ನು ಹರಿಸಿ ಕಾರ್ಯನಿರ್ವಹಿಸುವಂತೆ ಮಾಡುವ ಒಂದೇ ಚೈತನ್ಯದ ಮೂರುರೂಪಗಳಾದ ತ್ರಿಮೂರ್ತಿಗಳ ದರ್ಶನ. ನಂತರ ಕಡೆಯಲ್ಲಿ ಸೃಷ್ಟಿಮೂಲನಾದ ವಿಕಾಸಮೂಲನಾದ ದೇವದೇವನ ದರ್ಶನ. ಹೀಗೆ ದೇವಾಲಯಗಳನ್ನು ನಾವು ನಮ್ಮ ಇಂದ್ರಿಯಜೀವನದ ವೇಗದಲ್ಲಿ ಮರೆತಿರುವ ನಡೆದುಬಂದ ದಾರಿಯನ್ನು ನೆನಪಿಸುವ ಸ್ಮಾರಕಗಳನ್ನಾಗಿ ತಂದಿದ್ದಾರೆ. ನಮ್ಮ ಶ್ರೀರಂಗ ಮಹಾಗುರುಗಳು ದೇವಾಲಯಗಳನ್ನು ಸ್ಮಾರಕ ಮಂದಿರಗಳು (Memory Hall) ಎಂದೇ ಕರೆದಿದ್ದಾರೆ. ಹೆಜ್ಜೆಹೆಜ್ಜೆಗೂ ಮೂಲದ ಸ್ಮರಣೆಯನ್ನು ತಂದುಕೊಟ್ಟು ವಿಸ್ಮರಣೆಯ ಕೊಳೆಯನ್ನು ತೆಗೆದು ಹಾಕುವ ನಿಜವಾದ ಸಂಸ್ಕೃತಿಯ ಕುರುಹು ಇಲ್ಲಿದೆ.

ಸೂಚನೆ: 28/1/2020 ರಂದು ಈ ಲೇಖನ ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Monday, January 27, 2020

ஶ்ரீரங்கமஹாகுரு - 54 (Sriranga Mahaguru - 54)

ஶ்ரீகுருவின் கண்ணோட்டம் – 43

புலன்களுக்கு அப்பாற்பட்ட உண்மை
===========================================================

மூலம்: வரததேசிகாசார்யர் 
தமிழாக்கம்: வனஜா
மின்னஞ்சல் : lekhana@ayvm.in



இறைவனைப்பற்றிய பலவகை  கருத்துக்களை புத்தகங்களிலும், பத்திரிகைகளிலும் படிக்கிறோம். சொற்பொழிவுகளிலும் கேட்கிறோம். கற்றறிந்தவர், கல்லாதவர், சாதாரண குடிமக்கள் அனைவரும் அதனை குறித்து உரையாடுகின்றனர். இவர்களில் சிலர் இறைவன் இருக்கின்றான் என்றும், சிலர் இல்லை என்றும், மற்றும் சிலர் இருக்கலாம் அல்லது இல்லாமலும் போகலாம்  என்றும் வாதிடுகின்றனர். இறைவன் இருக்கின்றான் என்பவர்களிலும் ஒத்த கருத்து இல்லை. அவனுக்கு குணமும் உருவமும் இல்லை என்று சிலரும், அவை உண்டு என்று சிலரும் கூறுகின்றனர்.

       இவ்வகையான கருத்துக்களை அவர்கள் எதன் அடிப்படையில் கூறுகின்றனர் எனில் சிலர் யுக்தியின் அடிப்படையிலும், சிலர் புத்தகங்களை மேற்கோள் காட்டியும் தங்கள் கருத்தை வலியுறுத்துகின்றனர். இவ்விரண்டு சாட்சிகளினாலும் தங்கள்  கருத்தை நிலைநிறுத்துபவர் உண்டு. இவர்களில் யாருக்கும் இறைவனின் நேற்முக அறிவில்லை .

      இறைவனைப்பற்றிய  இவர்கள் கருத்தனைத்தும் கற்பனையே.  இத்தகு கற்பனைகளில் சில மகிழ்ச்சியளிக்கும் இலக்கியங்களாகலாம்.   சில அறிவிற்கு மகிழ்ச்சி அளிக்கலாம். மற்றும் சில பொழுது போக்காக மட்டுமே பயன்படலாம்.  இவை அனைத்தும் புலன்களின் உலகை சார்ந்த   செய்திகள்தாம்.

     ஆயின் தவத்தில் சிறந்த ஆன்றோர் எதனை இறைவன் என்கின்றனரோ அது புலன்களுக்கு அப்பாற்பட்ட உண்மை. தவம்-மெய்யறிவு-ஸமாதி நிலை இவைகளின் மூலம் புலன்களை  கடந்த நிலையை அடையும்போது  மட்டுமே அறியக்கூடியது. புலன்களின் உலகில் எத்துணை  முயற்சி செய்திடினும் அதன் அறிவு நமக்கு கிட்டுவதில்லை. அதைக்குறித்து நாம் கூறும் செய்தி ஆதாரமாவதில்லை.

       புலன்களுக்கப்பாற்பட்ட  நிலையை அடைய வேண்டுமாயின் அதற்கே உரிய முறையில் செயல்பட வேண்டும். அவ்வாறன்றி வாதங்களிலும், கற்பனைகளிலும் காலம் கழிப்பவர்களை புத்த தேவன் "திட்டி வாதினோ” “அலஸோ" என்று கூறுகிறான். "விஷம் தோய்ந்த அம்பு உடலில் குத்தியுள்ளது.  அதனை பிடுங்கி எறிய முயற்சி செய். அதைக் குறித்து வாதிடுவதால் எந்த பயனும் இல்லை” என்று அவன் அறிவுரை கூறுகின்றான். "புலன்களை உள்நோக்கி செலுத்தும் வீரனுக்கே ஆத்ம தரிசனம்" என்கிறது கடோபநிஷதம். நாம் அத்தகைய முயற்ச்சியில் வீரராக வேண்டுமென ப்ரம்மஞானிகள் அறிவுறுத்துகின்றனர்.

ಈ ಜಗತ್ತೆಲ್ಲ ಮಾಯೆಯಂತೆ! (Ee jagattella mayeyante)

ಲೇಖಕರು:  ಡಾ || ಮೋಹನ ರಾಘವನ್
(ಪ್ರತಿಕ್ರಿಯಿಸಿರಿ lekhana@ayvm.in)




ದೇವರ್ಷಿ ನಾರದರು ಶ್ರೀಕೃಷ್ಣನಲ್ಲಿ ವಿಚಿತ್ರವಾದೊಂದು ಬೇಡಿಕೆಯನ್ನಿತ್ತರು. “ಕೃಷ್ಣಾ ! ನಿನ್ನ ಮಾಯೆಯ ಪರಿಚಯ ಮಾಡಿಕೊಡಪ್ಪ !’. ಶ್ರೀಕೃಷ್ಣ ಮಂದಹಾಸದಿಂದ ಆಗಲಿಯೆಂದ. ಇಬ್ಬರೂ ಯಾತ್ರೆಗಾಗಿ ಹೊರಟರು. ನಡೆಯುತ್ತಾ ಒಂದೆಡೆ ಆಯಾಸ ಬಾಯಾರಿಕೆಗಳಿಂದ ಪೀಡಿತನಾಗಿ ಕೃಷ್ಣ ಕುಳಿತೇಬಿಟ್ಟ. ನಂತರ  “ನಾರದ ನನಗಾಗಿ ನೀರು ತರುವೆಯ ?” ಎಂದು ಕೇಳಿದನು. ನಾರದರು ನೀರನ್ನು ಹುಡುಕುತ್ತ ಹಳ್ಳಿಯನ್ನು ಪ್ರವೇಶಿಸಿ ಭಾವಿಯ ಹತ್ತಿರ ನೀರು ಸೇದುತ್ತಿದ್ದ ಸ್ತ್ರೀಯನ್ನು ಯಾಚಿಸಿದರು. ಬೊಗಸೆ ನೀರು ಕುಡಿಯುತ್ತಿದ್ದಂತೆ ಆಕೆಯ ಸೌಂದರ್ಯ ನಾರದರ ಹೃದಯ ನಾಟಿತು. “ನನ್ನನ್ನು ವಿವಾಹವಾಗುವೆಯಾ ?” ಎಂದು ಕೇಳೇಬಿಟ್ಟರು. ನಾಚಿಕೊಂಡಾಕೆ ತಂದೆಯ ಕಡೆ  ಸಂಜ್ಞೆ ಮಾಡಿದಳು. ತಂದೆಯವರು “ಮನೆ ಅಳಿಯನಾಗಿ ಇರುವುದಾದರೆ ಒಪ್ಪುವೆ” ಎಂದು ಶರತ್ತಿಟ್ಟರು. ನಾರದರು ಒಪ್ಪಿಕೊಂಡು, ವಿಜೃಂಭಣೆಯಿಂದ ವಿವಾಹ ಸಂಪನ್ನವಾಯಿತು. ಕಾಲ ಉರುಳುತ್ತ, ಸಂತೋಷದಿಂದ ವಿಹರಿಸುತ್ತ ದಂಪತಿಗಳು ಕಾಲ ಕಳೆದರು. ಅನೇಕ ಮಂದಿ ಮಕ್ಕಳೂ ಜನಿಸಿದವು. ಮಕ್ಕಳ ಮಧುರವಾದ, ತೊದಲು ನುಡಿ, ಗೃಹಕೃತ್ಯಗಳ ಪಾಲನೆ, ಗದ್ದೆ-ತೋಟಗಳ ವ್ಯವಸಾಯ ಹೀಗೆ ವ್ಯಸ್ಥವಾಗಿ, ವರ್ಷಗಳು ಕಳೆದವು. ಒಮ್ಮೆ ಮಳೆಗಾಲದಲ್ಲಿ ರಾತ್ರಿಯ ಸಮಯ. ಧಾರಾಕಾರವಾಗಿ ಮಳೆ ಸುರಿಯಲಾರಂಭಿಸಿತು. ನದಿಯ ಪ್ರವಾಹ ಊರನ್ನು ಕೊಚ್ಚಿಕೊಂಡು ಹೋಯಿತು. ನಾರದರು, ಹೆಂಡತಿ, ಮಕ್ಕಳೆಲ್ಲರನ್ನೂ ಭದ್ರವಾಗಿ ಹಿಡಿದು, ಪ್ರವಾಹದ ರಭಸದಿಂದ ಕಾಪಾಡುವ ಪ್ರಯತ್ನಮಾಡಿ ವಿಫಲರಾದರು. ಕಣ್ಣೆದುರಿಗೆ ಪರಿವಾರ ಛಿನ್ನಭಿನ್ನವಾಯಿತು. ದಡದ ಮರಳಲ್ಲಿ ನಾರದರು ಕುಳಿತು ಬಿಕ್ಕಿ-ಬಿಕ್ಕಿ ಅಳುತ್ತಿದ್ದರು. ಆಗ  “ನಾರದ !” ಎಂಬ ಪರಿಚಿತವಾದ ಧ್ವನಿಯೊಂದು ಕೇಳಿಸಿತು. ತಲೆಯೆತ್ತಿ  ನೋಡಲು  ನೀರು, ಊರು ಯಾವುದೂ ಕಾಣಲಿಲ್ಲ. ಕೃಷ್ಣ ನಗುತ್ತ ಬಂಡೆಯಮೇಲೆ ಕುಳಿತು “ನೀರು ತಂದೇಯಾ ? ” ಎಂದನು. ನಾರದರಿಗೆ ಕ್ಷಣಕಾಲದಲ್ಲಿ ಅರ್ಥವಾಯಿತು. “ ಈ ಜಗತ್ತೆಲ್ಲಾ ಮಾಯೆಯೆಂದು ತಿಳಿದೇ  ಪರಮಾತ್ಮ !”      

ನಮಗೂ ಈ ಜಗತ್ತಿಗೂ ಇರುವ ಕೊಂಡಿ ನಮ್ಮ ಇಂದ್ರಿಯಗಳು. ಎಚ್ಚರವಿದ್ದಾಗ, ಇಂದ್ರಿಯಗಳು ಕೊಡುವ ವರ್ತಮಾನದ ಆಧಾರದ ಮೇಲೆ ಜಗತ್ತಿನ ಚಿತ್ರವನ್ನು ಮೆದುಳು  ಕಲ್ಪಿಸಿಕೊಳ್ಳುತ್ತದೆ. ಸ್ವಪ್ನದಲ್ಲಿ ಮೆದುಳು ಈಗಾಗಲೇ ಶೇಖರಿಸಿದ ವರ್ತಮಾನಗಳ ಆಧಾರದಮೇಲೆ ಮತ್ತೊಂದು ಸ್ವಂತ ಜಗತ್ತನ್ನು ಕಲ್ಪಿಸುತ್ತದೆ. ಸ್ವಪ್ನದಲ್ಲಿ ಸಿಂಹ ಬಂದರೂ ಹೃದಯಬಡಿತ ವೇಗವಾಗಿ, ಓಡುವುದೇ ಪ್ರತಿಕ್ರಿಯೆ ! ಆದರೆ ಎಚ್ಚರಗೊಂಡಮೇಲೆ, ಸ್ವಪ್ನದ ಜಗತ್ತು ಮಸುಕು-ಮಾಯೆ-ಸುಳ್ಳು ಎಂದನ್ನಿಸುತ್ತದೆ. ಜಾಗ್ರತ್, ಸ್ವಪ್ನ ಸುಷುಪ್ತಿಎಂಬ ಪ್ರಸಿದ್ಧವಾದ ಮೂರು ಅವಸ್ಥೆಗಳ ಜೊತೆಗೆ ಸಮಾಧಿ ಎಂಬ ನಾಲ್ಕನೆಯ ಅವಸ್ಥೆಯೂ ಉಂಟು. ಅಲ್ಲಿ, ಹೊರ ಜಗತ್ತು ಮರೆಯಾಗಿ ಬೆಳಕಿನ ಜಗತ್ತು ಕಾಣಿಸುತ್ತದೆ. ಆ ಬೆಳಕಿನ ಅನುಭವ ಕೋಟಿ-ಕೋಟಿ ಸೂರ್ಯರಿಗಿಂದಲೂ ಪ್ರಖರವಾಗಿದ್ದರೂ, ಬೆಳದಿಂಗಳಂತೆ ತಂಪಾಗಿ ಆನಂದದಾಯಕವಾಗಿರುವುದೆಂದು ಶ್ರೀರಂಗ ಮಹಾಗುರುಗಳು ಸ್ಮರಿಸಿಕೊಂಡಿದ್ದರು. ಆ ಬೆಳಕಿನ ಜಗತ್ತು ಪ್ರಖರ-ನಿಖರವಾದ ದರ್ಶನದಿಂದ ಕೂಡಿರುತ್ತದೆ. ಅದರ ಜೊತೆ ಹೋಲಿಸಿದರೆ, ಈ ಇಂದ್ರಿಯ ಜಗತ್ತು ಸ್ವಪ್ನದಂತೆ, ಮಸುಕು-ಮಸುಕಾಗಿದೆ ಎಂದನ್ನಿಸುತ್ತದೆ. ಅಂತಹ ಸಮಾಧಿಸಾಮ್ರಾಜ್ಯದಲ್ಲಿ ಸದಾ ಮುಳುಗಿರುತ್ತಿದ್ದ ಮಹರ್ಷಿಗಳು, ಈ ಜಗತ್ತು ಮಿಥ್ಯೆಯಪ್ಪ, ಆ ಬ್ರಹ್ಮವೊಂದೇ ಸತ್ಯ ಎಂದು ಹೇಳುತ್ತಾರೆ !   

ಸೂಚನೆ:  27/01/2020 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ಅಂಕಣದಲ್ಲಿ ಪ್ರಕಟವಾಗಿದೆ.

Sunday, January 26, 2020

Effect of companionship – Sukopadesa

Original Article & its English Rendering by: Rajagopalan K.S
(ಪ್ರತಿಕ್ರಿಯಿಸಿರಿ lekhana@ayvm.in)


 The saying ‘A man is known by the company he keeps” is narrated in the following story. A parrot had two chicks. Once a bird catcher (fowler) caught the two chicks and was on his way back to market to sell them for a price. One chick was fortunate enough to escape from his grip and flying reached a hermitage. The bird catcher sold the other chick to a butcher. Both the chicks were nurtured at their respective places. Once a wayfarer was passing close to the butcher’s house. The parrot at butcher’s place saw him and asked “hey, who are you?” and started using abusive language. The traveller started walking past the house and reached the hermitage. The parrot at that place saluted and welcomed him. It enquired about his welfare in a soft and sweet tone. Though the chicks are from the same mother-parrot, their attitude and language were entirely contrasting.
This story beautifully illustrates how the children cultivate the habits, language, mannerisms etc in the environment they are brought up. Thus cautioned SriRanga Mahaguru that mind of a growing child is like a creeper. The creeper grows in the direction where it is supported. It is sad to note that some mothers lack the ability and capability to guide properly the growing mind of a child. Once upon a time the great Rishis of our country had considered God as centre of their lives and thus built a culture and civilization around it which is unique only to our country. Elders in the society followed the path set by the Rishis. In turn growing children in the society automatically used to inculcate the culture and behaviour by observing elders. Till recent times there were many individuals who were content with what they possessed or got. To illustrate this, I wish to share my experience. One purohit used to come to our home to perform religious programmes. He was a school teacher with meagre income. Upon completion of the rituals when I asked him about the fee to be paid to him, he used to reply – “Give as per your wish. God has given me contentment”. If we have such people around us in society, there are more chances that our children will emulate them. To bring out the best in growing minds of children, it is high time and need of the hour to revamp the entire curricula in our education system. Topics such as lives of great humanitarians, selfless persons and patriots are to be included. It is but natural for parents to expect that their children should stand out amongst the rest of children. Hence children are caught in the whirl of school, tuition, homework etc. To re-introduce Indian culture and magnificent glory of the past, we need to educate people to lead a balanced life in performing worldly activities and at the same time to be in touch with divinity.
Note: The Kannada version of this article can be viewed at AYVM blogs

ಮೌನ ವ್ಯಾಖ್ಯಾನದ ಮಹತ್ವ(Mouna vyaakhyanada mahathva)

ಲೇಖಕರು: ಶ್ರೀ. ಸುಬ್ರಹ್ಮಣ್ಯ ಸೋಮಯಾಜಿ 
(ಪ್ರತಿಕ್ರಿಯಿಸಿರಿ : lekhana@ayvm.in)



ಅದೊಂದು ವಟವೃಕ್ಷ. ಅಲ್ಲೊಂದು ವಿಚಿತ್ರವಾದ ಸನ್ನಿವೇಶ. ಗುರುವನ್ನು ಸುತ್ತುವರಿದು ಶಿಷ್ಯರೆಲ್ಲ ಕುಳಿತಿದ್ದಾರೆ. ಶಿಷ್ಯರೆಲ್ಲಾ ವೃದ್ಧರು. ಗುರುವಾದರೋ ಯುವಕ. ಗುರುವು ಮೌನವಾಗಿ ವ್ಯಾಖ್ಯಾನ ಮಾಡುತ್ತಿದ್ದಾನಂತೆ. ಶಿಷ್ಯರ ಸಂಶಯಗಳೆಲ್ಲವೂ ನಿವಾರಣೆಯಾಯಿತಂತೆ. ಇದು ಶಂಕರಭಗವತ್ಪಾದರ ದಕ್ಷಿಣಾಮೂರ್ತಿ ಸ್ತೋತ್ರದ ಭಾವಾರ್ಥ.

ಸಾಮಾನ್ಯವಾಗಿ ಗುರುಗಳು ವೃದ್ಧರಾಗಿರುತ್ತಾರೆ. ಶಿಷ್ಯರು ಯುವಕರಾಗಿರುತ್ತಾರೆ. ಆದರೆ ಇಲ್ಲಿ ಅದಕ್ಕೆ ವ್ಯತಿರಿಕ್ತವಾಗಿದೆ. ಇನ್ನು ಮೌನ ಮತ್ತು ವ್ಯಾಖ್ಯಾನ ಎರಡೂ ಆಗುವುದು ಹೇಗೆ? ಮೌನವಾಗಿರಬೇಕು ಇಲ್ಲವೇ ವಾದಗಳಿಂದ, ಉದಾಹರಣೆಗಳಿಂದ ವ್ಯಾಖ್ಯಾನ ಮಾಡಬೇಕು. ಮುಂದಿನದು ಇನ್ನೂ ವಿಚಿತ್ರ. ಇವನ ಮೌನ ವ್ಯಾಖ್ಯಾನದಿಂದ ಶಿಷ್ಯರ ಸಂಶಯಗಳೆಲ್ಲ ನಿವಾರಣೆಯಾಯಿತಂತೆ. ಲೋಕದಲ್ಲಿ ಎಷ್ಟೆಷ್ಟು ಬಾರಿ, ಬಗೆಬಗೆಯ ವಾಗ್ವೈಖರಿಯಿಂದ ತಿಳಿ ಹೇಳಿದರೂ ಅರ್ಥವಾಗದೇ ಇರುವ ಸಂದರ್ಭಗಳಿರುತ್ತವೆ. ಇಲ್ಲಿ ಇವನು ಮಾತನ್ನೇ ಆಡುತ್ತಿಲ್ಲ. ಆದರೂ ಅವರ ಸಂಶಯಗಳು ನಿವಾರಣೆ ಆದುದು ಹೇಗೆ? ಎಲ್ಲವೂ ವಿಚಿತ್ರವಾಗಿವೆಯಲ್ಲವೇ?

ಶ್ರೀರಂಗ ಮಹಾಗುರುಗಳು ಹೀಗೆ ವಿವರಣೆ ನೀಡಿದ್ದರು. ಅಲ್ಲಿ ಹೇಳಿದ ವಟವೃಕ್ಷ-  ಸಮಸ್ತ ವಿಶ್ವವೃಕ್ಷ. ಅದರ ಮೂಲದಲ್ಲಿ ಆದಿಬೀಜನಾದ ಪರಮಶಿವ ದಕ್ಷಿಣಾಮೂರ್ತಿ ಕುಳಿತಿದ್ದಾನೆ. ಅವನೇ ಲೋಕಗುರು. ಅವನು ಕಾಲದ ಸೀಮೆಯನ್ನು ಮೀರಿದವನು. ಕಾಲವನ್ನೇ ನಿಯಂತ್ರಿಸುವವನು. ಹಾಗೆಂದೇ ಕಾಲದ ಪ್ರಭಾವದ ವೃದ್ಧಾಪ್ಯ ಅವನಿಗಿಲ್ಲ. ನಿತ್ಯ ಯುವಕನಾಗಿದ್ದಾನೆ. ಶಿಷ್ಯರಾದರೋ ಕಾಲದ ಪ್ರಭಾವಕ್ಕೆ ಒಳಪಟ್ಟು ಪರಮ ಸತ್ಯದ ಅನ್ವೇಷಣೆಯಲ್ಲಿ ವೃದ್ಧರಾಗಿದ್ದಾರೆ. ಶಿಷ್ಯರಿಗೆ ಪರಮ ಸತ್ಯದ ಬಗೆಗೆ ಸಂಶಯ ಬಂದಾಗ ಎದುರಿಗೆ ಕುಳಿತ ಸತ್ಯಸ್ವರೂಪನಾದ ಪರಮ ಶಿವಮೂರ್ತಿಯನ್ನು ನೋಡಿದ್ದಾರೆ. ಅವನು ಒಳಸತ್ಯದ ತುತ್ತ ತುದಿಗೆ ಏರಿ ಕುಳಿತಿದ್ದಾನೆ. ಅವನನ್ನು ನೋಡುತ್ತಲೇ ಇವರ ಕರಣಗಳೆಲ್ಲವೂ ಅವನನ್ನೇ ಅನುಸರಿಸಿ ಆ ಉನ್ನತವಾದ ಸತ್ಯದೆಡೆಗೆ ಏರಿವೆ. ಆ ಸತ್ಯದ ಬೆಳಕಿನಲ್ಲಿ ಜೀವನದ ಎಲ್ಲ ಸಂಶಯಗಳೂ ನಿವಾರಣೆಯಾಗಿವೆ. ಮಾತು ಬಹಳ ಸೀಮಿತವಾದ ಮಾಧ್ಯಮ. ದಕ್ಷಿಣಾಮೂರ್ತಿಯ ಮೌನವೇ ಎಲ್ಲ ಒಳ ಸತ್ಯಗಳನ್ನು ಅವರೆದುರಿಗೆ ಬಿಚ್ಚಿಟ್ಟಿದೆ. ಸೃಷ್ಟಿಯ ಮೂಲ ಮತ್ತು ಅದರ ವಿಸ್ತಾರವೆಲ್ಲವೂ ಒಳಗಣ್ಣಿಗೆ ಗೋಚರವಾದಮೇಲೆ ಅವರಿಗೆ ಯಾವ  ಸಂಶಯಗಳೂ ಉಳಿಯಲಿಲ್ಲ.
ಅಂತಹ ದಕ್ಷಿಣಾಮೂರ್ತಿಯು ನಮ್ಮೆಲ್ಲರ ಅಂಧಕಾರವನ್ನು ಕಳೆದು ಒಳಬೆಳಕನ್ನು ಕರುಣಿಸಲಿ ಎಂದು ಪ್ರಾರ್ಥಿಸೋಣ.

ಸೂಚನೆ:  25/1/2020 ರಂದು ಈ ಲೇಖನವು ಉದಯವಾಣಿ ಮಹರ್ಷಿ ಬೆಳಕು ಅಂಕಣದಲ್ಲಿ ಪ್ರಕಟವಾಗಿದೆ

ಕಾಲಚಕ್ರದ ರಹಸ್ಯ (Kaalachakrada rahasya)

ಲೇಖಕರು: ಶ್ರೀರಾಮ ಚಕ್ರವರ್ತಿ
(ಪ್ರತಿಕ್ರಿಯಿಸಿರಿ : lekhana@ayvm.in)



ಕಾಲವು, ಪ್ರಕೃತಿಯ ಎಲ್ಲ ವಸ್ತುಗಳು ಹಾಗು ಜೀವಿಗಳ ಮೇಲೆ ಪ್ರಭಾವ ಬೀರುವಂತಹ ಒಂದು ಸೃಷ್ಟಿಯ ನಿಯಮ. ಅದೆಷ್ಟಿದ್ದರೂ ಸಾಲದೆಂದು ಬಯಸುವ ಮತ್ತು  ನಮ್ಮೆಲ್ಲರಿಗೂ ಅತ್ಯಮೂಲ್ಯವಾದ ಒಂದು ದ್ರವ್ಯ ಪದಾರ್ಥವೆಂದರೆ ಅತಿಶಯವಾಗಲಾರದು. ಲೋಕದ ಎಲ್ಲ ವ್ಯಾಪಾರಗಳು ಮತ್ತು ವ್ಯವಹಾರಗಳು, ಕಾಲವನ್ನು ಅವಲಂಬಿಸಿ ಅದರ ಸುತ್ತಲೂ ಸಹಜವಾಗಿಯೇ ತಮ್ಮನ್ನು ನಿಯೋಜಿಸಿಕೊಂಡಿವೆ. ಸೂರ್ಯೋದಯವಾಗುತ್ತಿದ್ದಂತೆಯೇ, ವಾತಾವರಣದಲ್ಲಿ  ಹಕ್ಕಿಗಳ ಕಲರವ ಕೇಳಿಬರುತ್ತದೆ , ಪ್ರಾಣಿ-ಪಕ್ಷಿಗಳ ಸಂಚಾರ, ಜೊತೆ-ಜೊತೆಗೆ ನಿಸರ್ಗದಲ್ಲೇ ಒಂದು ರೀತಿಯ ಲವಲವಿಕೆಯನ್ನು ಗಮನಿಸಬಹುದು. ದಿನ ಕಳೆದಂತೆ ಎಲ್ಲಾ ಚಟುವಟಿಕೆಗಳಲ್ಲೂ ಮಂದಗತಿಯುಂಟಾಗಿ ನಂತರ ದಿನದ ಕೊನೆಯಲ್ಲಿ ಒಂದು ವಿಧವಾದ ಸ್ಥಬ್ದತೆ ಹಾಗು ನಿಶಬ್ಧ ಸಹಜವಾಗಿ ಮೂಡಿಬರುವುದನ್ನು ಕಾಣಬಹುದು. ಚಂದ್ರನ ಉದಯ-ಅಸ್ತ, ವೃದ್ಧಿ-ಕ್ಷಯವನ್ನನುಸರಿಸಿ ಸಮುದ್ರವು ಉಕ್ಕಿ-ಅಡಗುತ್ತದೆ. ಪಕ್ಷ-ಮಾಸಗಳು ಉರುಳುತ್ತ ಋತುಗಳ ಬದಲಾವಣೆ. ವಸಂತ ಋತುವಿನಲ್ಲಿ ಗಿಡ-ಮರಗಳಲ್ಲಿ ಚಿಗುರನ್ನು , ಮಳೆಗಾಲದಲ್ಲಿ ನದಿಗಳು ತುಂಬಿ ಹರಿಯುವುದನ್ನು , ಶರತ್ಕಾಲದಲ್ಲಿ ಧಾನ್ಯ ಸಮೃದ್ಧಿ ಹಾಗು ಶಿಶಿರ ಋತುವಿನಲ್ಲಿ ವೃಕ್ಷಗಳಲ್ಲಿ ಹೂವು ಮತ್ತು ಎಲೆಗಳು ಬಾಡುವುದೆಲ್ಲವನ್ನೂ ಪ್ರತಿ ಸಂವತ್ಸರವೂ ನೋಡುತ್ತಿದ್ದೇವೆ. ಆಹಾರವು ಪುಷ್ಕಳವಾಗಿ ದೊರಕುವ ಋತುವಿನಲ್ಲಿ ಪಶುಪಕ್ಷಿಗಳು ಮರಿಗಳನ್ನುಹಾಕುತ್ತವೆ. ಮಳೆ ಬಂದಕೂಡಲೇ ಕಪ್ಪೆಗಳು ವಟಗುಟ್ಟುತ್ತವೆ, ನವಿಲುಗಳು ಗರಿಗಳನ್ನು ಬಿಚ್ಚುತ್ತವೆ.

ನಾವು ಮನುಷ್ಯರೂ ಪ್ರಕೃತಿಯಲ್ಲಿ ಆಗುವ ಬದಲಾವಣೆಗಳನ್ನೇ  ಕೇಂದ್ರವಾಗಿಟ್ಟುಕೊಂಡು, ನಮ್ಮ ಧ್ಯೇಯಕ್ಕನುಗುಣವಾಗಿ ಜೀವನ ಶೈಲಿಯನ್ನು ರೂಪಿಸಿಕೊಂಡಿದ್ದೇವೆ. ಗಡಿಯಾರದ ಘಂಟೆಗನುಗುಣವಾಗಿ, ವಿದ್ಯಾಭ್ಯಾಸ, ವೃತ್ತಿ, ನಿದ್ರೆ ಇತ್ಯಾದಿಯಾದ ನಮ್ಮ ದೈನಂದಿನ ಚಟುವಟಿಕೆಗಳನ್ನು  ಅಳವಡಿಸಿಕೊಂಡಿದ್ದೇವೆ. ಇಷ್ಟೇ ಅಲ್ಲದೆ, ಕಾಲಮಾನಕ್ಕೆ ತಕ್ಕಂತೆ ನಮ್ಮ ಉಡುಗೆ-ತೊಡುಗೆಗಳನ್ನು, ಆಹಾರ-ವಿಹಾರಗಳನ್ನು ಮತ್ತು ನಮ್ಮ ಅಭ್ಯಾಸ-ವ್ಯಾಪಾರಗಳನ್ನೂ ಯೋಜಿಸಿಕೊಂಡಿದ್ದೇವೆ. ಕೃಷಿಕರಿಗೆ ಮಳೆ-ಮೋಢ, ಬಿಸಿಲು-ಶೈತ್ಯ ಇತ್ಯಾದಿಗಳನ್ನವಲಂಬಿಸಿ ಕ್ರಿಯಾಕಲಾಪ. ಸಮುದ್ರಕ್ಕೆ ಹೋಗುವ ನಾವಿಕನಾಗಲೀ,   ಹಿಮಾಲಯದ ಗಗನಚುಂಬಿ ಶಿಖರಗಳನ್ನು ಹತ್ತುವರಾಗಲೀ ಹವಾಮಾನದ ಕಡೆ ಗಮನವಿಟ್ಟು ಸೃಷ್ಟಿ ನೀಡುವ ಕುರುಹುಗಳನ್ನು ಆಲಿಸುತ್ತಲೇ ಇರಬೇಕು.

ಆದರೆ ಇಂದು ನಾವು ಕಂಡರಿಯದ ಒಂದು ವಿಶೇಷವಾದ ಧ್ಯೇಯವನ್ನು ನಮ್ಮ ಸಂಸ್ಕೃತಿಯ ಶಿಲ್ಪಿಗಳಾದ ಋಷಿ-ಮಹರ್ಷಿಗಳು ಹೊಂದಿದ್ದರು. ಇಂದ್ರಿಯ ತುಷ್ಟಿಯೊಡನೆ ಆತ್ಮದ ತುಷ್ಟಿಯನ್ನೂ ಬಯಸಿದವರವರು. ತಪಸ್ಯೆಯಿಂದ ತಮ್ಮೊಳಗಿನ ಮನೋವೃತ್ತಿಯ ಅಲೆಗಳನ್ನಡಗಿಸಿ, ಒಳ ಮೇರುಪರ್ವತವನ್ನು ಹತ್ತಿ, ಆನಂದಸಾಗರದಲ್ಲಿ ಮುಳುಗುವ ಹವ್ಯಾಸ ಅವರದು. ತಮ್ಮ ಈ ಆರೋಹಣಕ್ಕೆ ಪೋಷಕವಾದ ಕಾಲಗಳನ್ನು ಅವರು ಕೂಲಂಕುಷವಾಗಿ ಆರಿಸಿಕೊಂಡಿದ್ದರು. ಅಂತಹ ವಿಶೇಷವಾದ ಕಾಲ ‘ಪರ್ವ’ ಗಳನ್ನು ತದ್ಭವರೂಪದಲ್ಲಿ ‘ಹಬ್ಬ’ ಎಂದು ನಾವಿಂದು ಕರೆಯುತ್ತೇವೆ. ನಿತ್ಯವೂ ಬರುವ  ಮುಂಜಾನೆ, ಮುಸ್ಸಂಜೆಯ ಸಂಧಿಕಾಲಗಳು ಅಂತಹ ಪರ್ವಕಾಲಗಳು. ಪಕ್ಷ-ಮಾಸ-ನಕ್ಷತ್ರ-ತಿಥಿಗಳ ವಿಶೇಷ ಯೋಗಗಳನ್ನು ಹಬ್ಬ-ಹರಿದಿನಗಳ ರೂಪದಲ್ಲಿ ಆಚರಣೆಗೆ ತಂದರು. ಮಕರ ಸಂಕ್ರಾಂತಿ, ದೀಪಾವಳಿ, ಗಣೇಶ ಚತುರ್ಥಿ ಮುಂತಾದ ಹಬ್ಬಗಳು ಪ್ರಸಿದ್ಧವೇ ಆಗಿವೆ. ಆತ್ಮಸಾಧನೆಗೆ ಗ್ರಹಣಕಾಲಗಳು ಅತ್ಯಂತ ವಿಶೇಷವಾದ ಪರ್ವಕಾಲವೆಂದು ಶ್ರೀರಂಗ ಮಹಾಗುರುಗಳು ಜ್ಞಾಪಿಸುತ್ತಿದ್ದರು. ಸೂರ್ಯ-ಚಂದ್ರ-ತಾರಾದಿಗಳ ನಿಯಾಮಕನಾದ ಕಾಲಪುರುಷನನ್ನು ಕೃತಜ್ಞತೆಯಿಂದ ನೆನೆದು ಅವನು ಕೊಡುವ ಪ್ರಸಾದವನ್ನು ಸ್ವೀಕರಿಸುವ ಕಾಲವೇ ಹಬ್ಬವಾಗಿದೆ. ಆತ್ಮಸಾಧನೆಗೆ ಈ ಪರ್ವ ಕಾಲಗಳೆಲ್ಲ ಅತ್ಯಂತ ಪೋಷಕವಾದವುಗಳು ಎಂದು ಶ್ರೀರಂಗ ಮಹಾಗುರುಗಳು ಜ್ಞಾಪಿಸುತ್ತಿದ್ದರು. ಈ ಪರ್ವಕಾಲಗಳಲ್ಲಿ ಋಷಿಗಳು ಕಂಡರುಹಿದ ಮಹಿಮೆಯನ್ನು ಅರಿತು ನಮ್ಮ ಇಹ ಪರಗಳ ಒಳಿತಿಗಾಗಿ ಬಳಸಿಕೊಂಡು ಜೀವನವನ್ನು ಸಾರ್ಥಕಪಡಿಸಿಕೊಳ್ಳೋಣ.

ಸೂಚನೆ: 25/1/2020 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿ ವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.

ಸುಖದ ಮೂಲ ವೈರಾಗ್ಯ (Sukhada moola vairagya)

ಲೇಖಕರು: ನಾಗರಾಜ್. ಗುಂಡಪ್ಪ.ಜಿ 
(ಪ್ರತಿಕ್ರಿಯಿಸಿರಿ : lekhana@ayvm.in)



ವೈರಾಗ್ಯವೆಂದೊಡನೆ ನಮ್ಮ ಕಣ್ಣ ಮುಂದೆ ಬಂದು ನಿಲ್ಲುವ ಚಿತ್ರವು ಖಾವಿ ವೇಷ ತೊಟ್ಟಿರುವ ಸನ್ಯಾಸಿಯದೋ ಅಥವಾ ಗಡ್ಡ ಮೀಸೆ ಬಿಟ್ಟು ನಿಲುವಂಗಿ ಧರಿಸಿ ಜೈ ಶಂಕರ್ ಎಂದು ಅಬ್ಬರಿಸುವ ಭೈರಾಗಿಯದೋ ಆಗಿರುತ್ತದೆ. ಏಕೆಂದರೆ, ವೈರಾಗ್ಯವೆಂದರೆ ಪ್ರಾಪಂಚಿಕ ಭೋಗಗಳ ತ್ಯಾಗ ಅಥವಾ  ನಿರಾಕರಣೆ ಎನ್ನುವ ಅಭಿಪ್ರಾಯವೇ ಇಂದು ಜನಮನದಲ್ಲಿ ನೆಲೆ ಮಾಡಿದೆ. ಹೀಗಾಗಿ ವೈರಾಗ್ಯವೇ ಸುಖದ ಮೂಲ ಎಂದರೆ ಅದು ಬಹಳ ವಿರೋಧಾಭಾಸವಾಗಿ ತೋರುತ್ತದೆ. ಆದುದರಿಂದ, ವೈರಾಗ್ಯ ಮತ್ತು ಸುಖದ ನಡುವಿನ ಸಂಬಂಧ ವಿಚಾರ ಯೋಗ್ಯ ವಿಷಯವಾಗಿದೆ.

ರಾಗ ಎಂದರೆ ಅಂಟು ಎಂದರ್ಥ. ಈ ಅಂಟು ಇಲ್ಲದಿರುವಿಕೆಯೇ ವಿರಾಗ ಅಥವಾ ವೈರಾಗ್ಯ. ವೈರಾಗ್ಯಕ್ಕೂ ಸುಖಕ್ಕೂ ಇರುವ ನಂಟನ್ನು ನಮ್ಮ ದೈನಂದಿನ ಜೀವನದುದ್ದಕ್ಕೂ ಗಮನಿಸಬಹುದು. ಮಕ್ಕಳಿಗೆ ಚಾಕಲೇಟನ್ನೋ, ಐಸ್ ಕ್ರೀಮನ್ನೋ ಕೊಟ್ಟರೆ, ಅಯ್ಯೋ ತಿಂದರೆ ಆ ತಿಂಡಿ ಮುಗಿದೇ ಹೋಗುತ್ತದೆಯಲ್ಲಾ ಎನ್ನುವ ರಾಗದಿಂದ ಎಷ್ಟೋ ಹೊತ್ತು ತಿನ್ನದೇ ಉಳಿಸಿಕೊಂಡಿರುತ್ತದೆ ಅಥವಾ ಬಹಳ ಹೊತ್ತು ತೆಗೆದುಕೊಂಡು ನಂತರ ತಿನ್ನುತ್ತವೆ. ಇಲ್ಲಿ, ತಿಂಡಿ ಆಗಿಹೋಗಬಾರದು ಎನ್ನುವ ರಾಗದಿಂದ ತಿನ್ನದೇ ಉಳಿಸಿಕೊಂಡರೆ, ತಿಂಡಿಯಿಂದ ದೊರೆಯುವ ಸುಖವನ್ನು ಅನುಭವಿಸುವ ಹಾಗಿಲ್ಲ. ತಿಂಡಿ ಆಗಿ ಹೋದರೂ ಪರವಾಗಿಲ್ಲ ಎನ್ನುವ ವೈರಾಗ್ಯವಿದ್ದು, ತಿಂದರೆ, ತಿಂಡಿಯ ಸುಖಾನುಭವ ಉಂಟಾಗುತ್ತದೆ.

ಅದೇ ರೀತಿಯಲ್ಲಿ, ವಯಸ್ಕರನ್ನು ಗಮನಿಸುವುದಾದರೆ, ಸರ್ಕಾರ ಹೊಸ ರೀತಿಯ ಕರೆನ್ಸಿ ನೋಟನ್ನು ಮುದ್ರಿಸಿರುತ್ತದೆ. ಪ್ರಾರಂಭದಲ್ಲಿ ಈ ಹೊಸ ನೋಟಿನ ಮೇಲೆ ಕೆಲವರಿಗೆ ವ್ಯಾಮೋಹವಿದ್ದು ಖರ್ಚು ಮಾಡಲು ಮನಸ್ಸು ಬರುವುದಿಲ್ಲ. ಹೀಗೆ ನೋಟಿನ ಮೇಲೆ ರಾಗವಿದ್ದರೆ, ಅದರಿಂದ ಖರೀದಿಸಬಹುದಾದ ವಸ್ತುಗಳಿಂದ ದೊರೆಯುವ ಸುಖವು ದೊರೆಯುವುದಿಲ್ಲ. ನೋಟನ್ನೇ ಇಟ್ಟುಕೊಂಡು ಸುಮ್ಮನಿರಬೇಕಾಗುತ್ತದೆ. ಆದರೆ ನೋಟಿನ ಬಗ್ಗೆ ವೈರಾಗ್ಯವಿದ್ದು ಅದನ್ನು ಸರಿಯಾದ ರೀತಿಯಲ್ಲಿ ಖರ್ಚು ಮಾಡಿದರೆ, ಖರೀದಿಸಿದ ವಸ್ತುವಿನಿಂದ ದೊರೆಯುವ ಸುಖವನ್ನು ಅನುಭವಿಸಬಹುದು.

ಈ ಪ್ರಸಂಗಗಳಲ್ಲಿ ರಾಗವು ಮುಂದಿನ ಸುಖಕ್ಕೆ ಅಡಚಣೆಯಾದರೆ, ವೈರಾಗ್ಯವು ಮುಂದಿನ ಹಂತದ ಸುಖಕ್ಕೆ ದಾರಿಯಾಗುತ್ತದೆ.

ಈ ನೀತಿಯನ್ನು ಪಾರಮಾರ್ಥಿಕ ಜೀವನಕ್ಕೂ ವಿಸ್ತರಿಸಿದರೆ, ಪ್ರಪಂಚದ ಬಗೆಗಿನ ರಾಗವು ಅದನ್ನು ಮರೆತರೆ ಉಂಟಾಗುವ ತುರೀಯ ಸ್ಥಿತಿ ಮತ್ತು ಆ ಸ್ಥಿತಿಯಲ್ಲಿ ದೊರೆಯುವ ಅಧ್ಯಾತ್ಮಿಕ ಸುಖಕ್ಕೆ ಅಡಚಣೆಯನ್ನುಂಟು ಮಾಡುತ್ತದೆ. ಸಂಪೂರ್ಣ ವೈರಾಗ್ಯವು ಅಸದೃಶವಾದ ಆತ್ಮಾನಂದಕ್ಕೆ ದಾರಿ ಮಾಡಿಕೊಡುತ್ತದೆ. ಆ ಆತ್ಮಾನಂದವನ್ನೇ ಪರಮಗುರಿಯಾಗಿಟ್ಟುಕೊಂಡು ಪರಮವೈರಾಗ್ಯವನ್ನೇ ವಿಶೇಷವಾಗಿ ಅನುಸಂಧಾನ ಮಾಡುವವರು ಸನ್ಯಾಸಿಗಳು ಅಥವಾ ಭೈರಾಗಿಗಳಾಗುತ್ತಾರೆ. ಆದರೆ, ಎಲ್ಲರೂ ಪರಮವೈರಾಗ್ಯವನ್ನೇ ಅನುಸಂಧಾನ ಮಾಡಬೇಕೆಂದಿಲ್ಲಾ; ಪ್ರಾಪಂಚಿಕ ಜೀವನದಲ್ಲಿ ತೊಡಗಿಕೊಂಡೂ ಸಹಾ ಆತ್ಮ ಸಾಧನೆ ಮಾಡಬಹುದು. ಅಂತಹವರೂ ಸಹಾ ವಿವೇಕಬಲದಿಂದ ತಮ್ಮ ವೈರಾಗ್ಯದ ಮಟ್ಟವನ್ನು ಹೆಚ್ಚಿಸಿಕೊಂಡರೆ, ಆತ್ಮ ಸಾಧನೆಗೆ ಬಹಳ ಪೋಷಕವಾಗಿರುತ್ತದೆ ಮತ್ತು ಹಿಂದೆ ಗಮನಿಸಿದಂತೆ ಇಂದ್ರಿಯ ಸುಖಕ್ಕೂ ದಾರಿ ಮಾಡಿಕೊಡುತ್ತದೆ.

ಹೀಗೆ, ವೈರಾಗ್ಯವು ಈಶ್ವರ ಪ್ರೀತಿಕರವಾದ, ಲೌಕಿಕ-ಪಾರಮಾರ್ಥಿಕ ಸುಖಗಳೆರಡನ್ನೂ ದಯಪಾಲಿಸುವಂತಹಾ ಗುಣವಾಗಿದೆ. ವೈರಾಗ್ಯವು ಶ್ರೇಷ್ಠ ಸಂಪತ್ತುಗಳಲ್ಲಿಯೂ ಶ್ರೇಷ್ಠತಮವಾಗಿದೆ. ವೈರಾಗ್ಯ ಶತಕವು, ಶಾಸ್ತ್ರದಲ್ಲಿ ಪ್ರತಿವಾದಿಗಳ ಭಯ, ರೂಪದಲ್ಲಿ ಮುಪ್ಪಿನ ಭಯ, ಸುಖದಲ್ಲಿ ರೋಗಗಳ ಭಯ, ಹಣವಿದ್ದಲ್ಲಿ ರಾಜನ ಭಯ ಮುಂತಾಗಿ ಹೇಳುತ್ತಾ, ವೈರಾಗ್ಯವು ಇದ್ಯಾವ ಭಯವೂ ಇಲ್ಲದ ನಿರುಪಾಧಿಕ ಸಂಪತ್ತಾಗಿದೆ ಎಂದು ಕೊಂಡಾಡುತ್ತದೆ. ಭಾರತೀಯರು ಆಹಾರ ಸೇವಿಸಬೇಕಾದರೆ ಜ್ಞಾನ ವೈರಾಗ್ಯ ಸಿಧ್ಧ್ಯರ್ಥಂ ಭಿಕ್ಷಾಂದೇಹಿ ಪಾರ್ವತಿ ಎನ್ನುವ ಪ್ರಾರ್ಥನೆಯ ಮೂಲಕ ನಿತ್ಯದಲ್ಲಿಯೂ ಹೆಚ್ಚಿಸಿಕೊಳ್ಳಲು ಪ್ರಯತ್ನಿಸುವ ಗುಣರತ್ನವಾಗಿದೆ ವೈರಾಗ್ಯ. ಇಂತಹಾ ಅಮೋಘ ಗುಣರತ್ನವನ್ನು ಸಂಪಾದಿಸಿ ಧನ್ಯರಾಗೋಣ.

ಸೂಚನೆ: 25/1/2020 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿ ವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.

ದೋಷಾಪನಯನ ಮತ್ತು ಗುಣಾಧಾನ (Doshaapanayana mattu ginaadhana)

ಲೇಖಕರು: ಶ್ರೀ. ಸುಬ್ರಹ್ಮಣ್ಯ ಸೋಮಯಾಜಿ 
(ಪ್ರತಿಕ್ರಿಯಿಸಿರಿ : lekhana@ayvm.in)



ಮನಸ್ಸಿನ ದೋಷಗಳನ್ನು ತೆಗೆದು ಮೂಲದ ಆಶಯವನ್ನು ಎಲ್ಲೆಲ್ಲೂ ಬೆಳೆಸುವ ವಿಧಾನಗಳನ್ನು ಅವರು “ಸಂಸ್ಕಾರ”ಎಂಬ ಹೆಸರಿನಿಂದ ಕರೆದರು.  ನಮ್ಮ ಮನಸ್ಸು-ಬುದ್ಧಿಗಳಲ್ಲಿ ಉಂಟಾಗಿರುವ ನಮ್ಮ ಮೂಲಸ್ವರೂಪದ ವಿಸ್ಮರಣೆಯೇ ಆ ದೋಷ. ನಾವೆಲ್ಲಾ ಈ ವಿಶ್ವವೆಂಬ ಸಂತೆಗೆ ಬಂದಿದ್ದೇವೆ.
ಮನೆಯನ್ನು ಮರೆತಿದ್ದೇವೆ. “ನಾವು ಸಂತೆ ವ್ಯಾಪಾರಕ್ಕೆ ಬಂದಿರುವುದು ಸರಿಯೇ.ಹಾಗೆಂದು
ವ್ಯಾಪಾರದಲ್ಲಿ ನಿರುತ್ಸಾಹ ಪಡಬೇಕಾಗಿಲ್ಲ. ಆದರೆ ವ್ಯಾಪಾರದ ಉತ್ಸಾಹದಲ್ಲಿ ತನ್ನ ಮನೆಗೆ ಹೋಗಿ
ಸೇರಬೇಕಾದ್ದನ್ನು ಮಾತ್ರ ಮರೆಯಬಾರದು” ಎಂಬ ಶ್ರೀರಂಗಮಹಾಗುರುಗಳ ಮಾತು ನಮ್ಮ ಜೀವನಗಳ ವಿಷಯದಲ್ಲಿ ಸದಾ ನೆನಪಿಡಬೇಕಾಗಿದೆ. ಮೂಲ ಮನೆಯನ್ನು ಮರೆತಿರುವ ನಮ್ಮ ಸ್ಥಿತಿಯನ್ನು ಗಮನಿಸಿ, ಮತ್ತೆ ನಮಗೆ ನೆನಪಾಗಲು ಜ್ಞಾನಿಗಳು ಮಾಡಿದ ಉಪಾಯವೇ ಸಂಸ್ಕಾರಗಳು. ಅಂತಹ ವಿಸ್ಮರಣೆಯ ತಮಸ್ಸನ್ನು ತೊಡೆದುಹಾಕುವ, ಸ್ಮರಣೆಯನ್ನುಂಟುಮಾಡುವ ಕೆಲಸವೆಲ್ಲವೂ ಸಂಸ್ಕಾರವೇ ಆಗುತ್ತದೆ.

ಜ್ಞಾನಿಶ್ರೇಷ್ಠರಾದ ಶಂಕರಭಗವತ್ಪಾದರು ಸಂಸ್ಕಾರ ವೆಂದರೆ- “ದೋಷಾಪನಯನ “ ಮತ್ತು “ಗುಣಾಧಾನ “ ಎಂದಿದ್ದಾರೆ. ಒಂದು ತಾಮ್ರದ ಪಾತ್ರೆಯಲ್ಲಿನ ಕೊಳೆಯನ್ನು ತೊಳೆಯುವುದು ದೋಷಾಪನಯನದ ಕೆಲಸವಾದರೆ ಅದಕ್ಕೆ ಹೊಳಪು ಬರುವಂತೆ ಪಾಲಿಷ್ ಮಾಡುವುದು ಗುಣಾಧಾನ. ಜೀವನದಲ್ಲಿ ಇವೆರಡೂ ನಿರಂತರವಾಗಿ ಆಗುತ್ತಿರಬೇಕಾದ ಕ್ರಿಯೆ ಅಥವಾ ಕರ್ಮವಾಗಿದೆ. ದೋಷಗಳು ಸೇರಿಕೊಳ್ಳುವುದು ನಿಸರ್ಗ ಸಹಜ. ಒಂದು ಮೇಜನ್ನು ಒರೆಸಿಟ್ಟರೆ ಸಂಜೆಯವೇಳೆಗೆ ಮತ್ತೆ ಧೂಳಾಗಿರುತ್ತದೆ. ಪಾಂಚಭೌತಿಕವಾದ ಜಗತ್ತಿನಲ್ಲಿ ಈ ಬಗೆಯ ದೋಷಗಳು ಅನಿವಾರ್ಯ. ಎಂದೇ ಅವುಗಳನ್ನು ತೊಡೆದುಹಾಕುವ ಸಂಸ್ಕಾರದ ಕೆಲಸವೂ ನಿರಂತರವಾಗಿ ಆಗಬೇಕಾಗುತ್ತದೆ.

ಮನಸ್ಸಿನ ಮೂಲಸ್ವರೂಪದ ವಿಸ್ಮರಣೆಯನ್ನು ತೊಡೆದುಹಾಕಿ ಮನಸ್ಸಿಗೆ ತನ್ನ ಸ್ವಸ್ವರೂಪವಾದ
ಆನಂದವನ್ನು ಸ್ಮರಣೆಗೆ ತಂದುಕೊಡಲೆಂದೇ ಇಲ್ಲಿನ ಸಮಸ್ತ ಆಚಾರ-ವಿಚಾರಗಳೂ ಬಂದಿವೆ.
ಪ್ರಧಾನವಾಗಿ ಹದಿನಾರು ಸಂಸ್ಕಾರಗಳನ್ನು ಹೇಳಿದ್ದರೂ ಸಂಸ್ಕಾರಗಳು ನಿರಂತರ ನಡೆಯುವ ಪ್ರಕ್ರಿಯೆ. “ನಿಷೇಕಾದ್ಯೈಃ ಸ್ಮಶಾನಾಂತೈ: ಬ್ರಾಹ್ಮೀಯಂ ಕ್ರಿಯತೇ ತನುಃ”–ಗರ್ಭಾಧಾನದಿಂದಾರಂಭಿಸಿ-ಜಾತಕರ್ಮ, ನಾಮಕರಣ, ವಿವಾಹವೇ ಮುಂತಾಗಿ ಶವಸಂಸ್ಕಾರದವರೆಗಿನ ಎಲ್ಲ ಸಂಸ್ಕಾರಗಳ ಉದ್ದೇಶವೂ ಈ ಶರೀರವನ್ನು ಬ್ರಹ್ಮಮಯವನ್ನಾಗಿಸುವುದರ ಜೊತೆಗೆ ಇದಕ್ಕೆ ಅವಿರೋಧವಾದ ಇಂದ್ರಿಯ ಸುಖಗಳನ್ನೂ ಅನುಭವಿಸುವುದೇ ಆಗಿದೆ. ಈ ಎಲ್ಲ ಸಂಸ್ಕಾರಗಳ ಕಲಾಪಗಳಲ್ಲಿ ಮತ್ತು ಉಪಯೋಗಿಸುವ ದ್ರವ್ಯಗಳಲ್ಲಿ, ಮಂತ್ರಗಳಲ್ಲಿ ಆಯಾ ಕಾಲಘಟ್ಟಗಳಲ್ಲಿ ಜೀವಿಗೆ ತನ್ನ ಮೂಲ ಬೆಳಕಾದ ದೇವನನ್ನು ನೆನಪಿಸುವ ಮತ್ತು ಜೀವನದಲ್ಲಿ ಆ ಬೆಳಕನ್ನು ಅನುಸರಿಸಿ ಬದುಕುವ ಅಭ್ಯಾಸ ಮಾಡಿಸಲಾಗುತ್ತದೆ.

ಸೂಚನೆ: 25/1/2020 ರಂದು ಈ ಲೇಖನ ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ. 

Thursday, January 23, 2020

There is no accomplishment without Concentration

Original Article :  Dr K S Kannan
English rendering by M R Bhashyam 
(Respond to lekhana@ayvm.in)



While teaching archery,  Dronacharya showed an eagle perched on a tree top and instructed his pupils “you have to cut the head of that eagle when I tell you to”

Yudhishthira’s was the first turn. He told him “Yudhishthira, take aim, shoot the arrow as soon as my instructions are complete”.  Yudhistira readied his bow and arrow to shoot the bird. Then Drona asked him “Are you seeing the bird at the top of the tree?” He replied “Yes master, I am seeing the bird”.  He immediately asked again “You are seeing both the tree and me too?” Yudhishthira’s reply was “I am seeing the tree, yourself, my brothers   and the eagle too Master”. The same questions when repeated elicited same responses. Drona was irritated and told Yudhishthira “Move aside, it will not be possible for you to bring down the target”.  The next turn was Duryodhana’s followed by others. “We are seeing everything” was everyone’s response.  Even the responses of Bhima and his brothers’ were similar!

Then came the turn of Arjuna. Arjuna’s response to the same question was “I am seeing only the eagle but not the tree or you”. Drona then asked “You are seeing the Bird, is it not so?” Arjuna responded “I am seeing only the bird’s head not its body (" ಶಿರಃ ಪಶ್ಯಾಮಿ ಭಾಸಸ್ಯ, ನ ಗಾತ್ರಮ್")”.  Drona was thrilled. “Shoot the arrow” was his command. The cut head of the bird fell to the ground. Drona was in ecstasy.

 Did not Arjuna accomplish many great things later?

To do anything well, concentration is needed. Mind should be focused on the goal. When the mind is wandering hither and thither, where is the concentration? (an instance that applies to students of today “if we are browsing everything on the internet how can one concentrate?”)! Spiritualism also needs concentration and care. “One should take down the goal of Brahma without losing focus even a bit” is the teaching of the Upanishads too!

One last word “Did one have to kill the bird which was sitting all by itself?”  Do not feel bad! it was only an artificial bird made by a sculptor.

Note: The Kannada version of this article can be viewed at AYVM blogs

Wednesday, January 22, 2020

ಸ್ವಸ್ವರೂಪವಾದ ಆನಂದವೇ ಭಾರತೀಯ ಸಂಸ್ಕೃತಿ. (Svasvarupavada aanandave bharatheeya samskruthi)

ಲೇಖಕರು:  ಶ್ರೀ. ಸುಬ್ರಹ್ಮಣ್ಯ ಸೋಮಯಾಜಿ
(ಪ್ರತಿಕ್ರಿಯಿಸಿರಿ : lekhana@ayvm.in)


ನಮ್ಮ ದೇಶದ ಜ್ಞಾನಿಗಳು ಕೇವಲ ಭೌತಿಕ ಪ್ರಪಂಚದಲ್ಲೇ ನಿಲ್ಲದೇ ಈ ಭೌತಿಕವೂ ಯಾವ ಮೂಲದಿಂದ ಅರಳಿಬಂದಿದೆ ಎಂಬುದನ್ನು ತಮ್ಮ ಅಂತರ್ಮುಖವಾದ ಪ್ರಯಾಣದಿಂದ ಅರಿಯುವ ಸಾಹಸ ಮಾಡಿದರು. ತಮ್ಮ ತಪಸ್ಸು, ಸಾಧನೆಗಳಿಂದ ಜೀವನಮೂಲದಲ್ಲಿ ಬೆಳಗುತ್ತಿರುವ ಪರಂಜ್ಯೋತಿಸ್ವರೂಪನಾದ ದೇವನನ್ನು ಕಂಡರು. ಅಲ್ಲಿಂದಲೇ ಎಲ್ಲವೂ ವಿಕಾಸವಾಗಿ ಬಂದಿದೆ ಎಂಬುದನ್ನು ಅವರಿವರು ಹೇಳಿದ್ದನ್ನು ಕೇಳದೇ ತಮ್ಮದೇ ಅನುಭವದಿಂದ ಕಂಡುಕೊಂಡರು. ಆ ದರ್ಶನ, ಅನುಭವಗಳು ಅವರಿಗೆ ಅದುವರೆಗೆ ಕಾಣದ ಆನಂದವನ್ನೂ ಅಪರಿಮಿತವಾದ ನೆಮ್ಮದಿಯನ್ನೂ ತಂದುಕೊಟ್ಟಿದ್ದರಿಂದ ಅವರು ಪರಮ ಕರುಣೆಯಿಂದ ಅಂತಹ ಜೀವನವನ್ನು ಜೀವಲೋಕವೆಲ್ಲವೂ ಅನುಭವಿಸಲೀ ಎಂದು ಉದಾರಹೃದಯರಾಗಿ ಲೋಕದಲ್ಲಿ ಸಂಸ್ಕೃತಿ ವೃಕ್ಷವನ್ನು ಕೃಷಿಮಾಡಿ ಬೆಳೆಸಿದರು.

ವೃಕ್ಷ-ಸಂಸ್ಕೃತಿ, ಒಂದು ಉದಾಹರಣೆ:

ಒಂದು ವೃಕ್ಷದ ಹಿಂಬದಿಯಲ್ಲಿ ನೋಡುತ್ತಾ ಹೋದರೆ ಅದರ ಉಗಮಸ್ಥಾನವಾದ ಬೀಜದಲ್ಲಿ ನಿಲ್ಲುತ್ತದೆ. ಬೀಜದಲ್ಲಿನ ಅಭಿಪ್ರಾಯವೇ ವೃಕ್ಷರೂಪದಲ್ಲಿ ಅರಳುತ್ತದೆ. ಕಡೆಯಲ್ಲಿ ಬೀಜದಲ್ಲೇ ನಿಲ್ಲುತ್ತದೆ. ಹಾಗಾದರೆ ಬೀಜದಲ್ಲಿ ಈ ಬಗೆಯ ಕಾಂಡ, ಕೊಂಬೆಗಳು, ಎಲೆ, ಕಾಯಿ ಹಣ್ಣು ಎಲ್ಲವೂ ಇತ್ತೇ? ಎಂದರೆ ಇತ್ತು ಎಂದೇ ಹೇಳಬೇಕಾಗುತ್ತದೆ. ಇಲ್ಲದಿದ್ದರೆ ಮುಂದೆ ಅವೆಲ್ಲ ಬರುವುದಾದರೂ ಎಲ್ಲಿಂದ? ಹಾಗೆ ಬೀಜದ ಸ್ವರೂಪವನ್ನು ಅರ್ಥ ಮಾಡಿಕೊಳ್ಳಬೇಕಾದರೆ ಅವನು ಸಸ್ಯ ಶಾಸ್ತ್ರಜ್ಞ ಹಾಗೂ ವ್ಯವಸಾಯಜ್ಞನಾಗಿರಬೇಕು. ಈ ಬೀಜವೇ ಇಷ್ಟು ದೊಡ್ಡ ವೃಕ್ಷವಾಗಿದೆ ಎಂಬ ಅರಿವಿನಿಂದ ಮಾಡುವ ಕೃಷಿಯೆಲ್ಲವೂ ಬೀಜದ ತನ ಮುಂದುಮುಂದೆ ಬೆಳೆಯಲು ಸಹಾಯ ಮಾಡುವುದೇ ಆಗಿರುತ್ತದೆ. ಅವೆಲ್ಲವೂ ‘ವೃಕ್ಷ-ಸಂಸ್ಕೃತಿ’ಯೇ ಆಗುತ್ತದೆ. ಉದಾಹರಣೆಗೆ ಮಾವಿನ ಬೀಜ ಎಂದಾದರೆ ಅದರಲ್ಲಿ ಮಾವೇ ಮುಂದೆ ಬರುವುದು ನಿಸರ್ಗ ಸಹಜ. ಆದರೆ ಕೆಲವೊಮ್ಮೆ ಬೀಜದ ಶಕ್ತಿಯನ್ನು ಬಳಸಿಕೊಂಡು ಬದನಿಕೆಗಳು ಬೆಳೆದುಬಿಡುವುದುಂಟು. ವ್ಯವಸಾಯಜ್ಞನಾದವನು ಯಾವುದು ಬೀಜದ ತನ ಯಾವುದು ಬದನಿಕೆ ಎಂಬುದನ್ನು ಅರಿತವನಾಗಿರಬೇಕು. ಅಲ್ಲಿ ಅವನು ಬದನಿಕೆಯನ್ನು ಕಿತ್ತುಹಾಕಿ ಮಾವಿನ ಮರವೇ ಬೆಳೆಯುವಂತೆ ನೋಡಿಕೊಳ್ಳುವ ಜವಾಬ್ದಾರಿಯುಂಟು. ಹಾಗಾದಾಗ ತಾನೇ ಮಾವಿನ ರಸಾಸ್ವಾದನೆ ನಮಗೆ ಲಭಿಸೀತು?

ಹಾಗೆಯೇ ನಮ್ಮ ದೇಶದ ಜ್ಞಾನಿಗಳು ವಿಶ್ವಕ್ಕೆಲ್ಲಾ ಚೈತನ್ಯಬೀಜನಾದ ಭಗವಂತನನ್ನು ಅರ್ಥಮಾಡಿಕೊಂಡು ಅವನ ತನವೇ ಮುಂದೆಲ್ಲ ಬೆಳೆದರೆ ಜೀವನವು ಸರ್ವಾಂಗ ಸುಂದರವಾಗಿ ಚೇತೋಹಾರಿಯಾಗಿ, ಆನಂದಮಯವಾಗಿ ಇರುವುದನ್ನು ತಮ್ಮ ಅನುಭವದಿಂದ ಕಂಡುಕೊಂಡರು. ಹಾಗೆ ಆ ಜಗದ್ಬೀಜನಾದ ಭಗವಂತನ ತನವೇ ಲೋಕದಲ್ಲೂ ಮತ್ತು ನಮ್ಮಲ್ಲೂ ಬೆಳೆಯುವಂತೆ ಕೃಷಿ ಮಾಡಿ ಇಲ್ಲಿ ಸಂಸ್ಕೃತಿಯನ್ನು ತಂದರು. ಅವನ ತನ ಮರೆಮಾಡುವ ಬದನಿಕೆಗಳನ್ನು ಕಿತ್ತೆಸೆದು  ಅವನ ಸ್ವಸ್ವರೂಪವಾದ ಆನಂದವೇ ಎಲ್ಲೆಡೆ ಬೆಳೆಯುವಂತೆ ಶ್ರಮಿಸಿ ತಂದ ಸಂಸ್ಕೃತಿಯೇ ಭಾರತೀಯ ಸಂಸ್ಕೃತಿ. ಹಾಗೆ ತಂದ ಜೀವನ ವಿಧಾನಗಳೆಲ್ಲವೂ ಭಾರತೀಯ ಸಂಸ್ಕೃತಿಯೆನಿಸಿತು. ಶ್ರೀರಂಗ ಮಹಾಗುರುಗಳ ಮಾತಿನಂತೆ ‘ಭಾ’ರೂಪಿಯಾದ ಪರಂಜ್ಯೋತಿಯ ಸ್ವರೂಪವನ್ನು ಅರ್ಥ ಮಾಡಿಕೊಂಡು ಬೆಳೆದ ಸಂಸ್ಕೃತಿಯೇ-ಭಾರತೀಯ ಸಂಸ್ಕೃತಿ. ಅದು ವಿಕಾಸವಾಗಲು ಇರುವ ಪ್ರತಿಬಂಧಕಗಳನ್ನೆಲ್ಲ ಅವರು ಕೊಳೆ ಅಥವಾ ದೋಷ ಎಂದು ಕರೆದರು.  ಅಂತಹ ದೋಷಗಳನ್ನು ನಿರಂತರವಾಗಿ ತೆಗೆದುಹಾಕಿ ಆ ಪರಂಜ್ಯೋತಿಯ ಆಶಯದಂತೆ ಜೀವನವೆಲ್ಲವೂ ಅರಳಬೇಕು ಎಂಬ ಅತ್ಯುನ್ನತವಾದ ಧ್ಯೇಯದಿಂದ ಪ್ರೇರಿತರಾದವರು ತಂದುಕೊಟ್ಟ ಸಂಸ್ಕೃತಿಯಿದು. ಅವರ ಪಾವನ ಸಂಸ್ಕೃತಿಯ ಕೆಲವೇ ಕೆಲವು ಅಂಶಗಳನ್ನು ಸೂಚನಾಮಾತ್ರವಾಗಿದೆ

ಸೂಚನೆ: 20/1/2020 ರಂದು ಈ ಲೇಖನ ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Sunday, January 19, 2020

ಭಾರತೀಯ ಸಂಸ್ಕೃತಿಯ ವೈಭವ (Bharatheeya samskruthiya vaibhava)

ಲೇಖಕರು:  ಶ್ರೀ. ಸುಬ್ರಹ್ಮಣ್ಯ ಸೋಮಯಾಜಿ
(ಪ್ರತಿಕ್ರಿಯಿಸಿರಿ : lekhana@ayvm.in)



“ಸಂಸ್ಕೃತಿ”ಎಂಬ ಪದವನ್ನು ಇವೊತ್ತು ಅನ್ಯಾನ್ಯ ಸಂದರ್ಭಗಳಲ್ಲಿ ಬಳಸುವುದನ್ನು ಕಾಣುತ್ತೇವೆ. ಹೆಚ್ಚಾಗಿ ಆಂಗ್ಲ ಭಾಷೆಯಲ್ಲಿ ”culture” ಎಂಬ ಪದವನ್ನು ಸಂಸ್ಕೃತಿ ಎಂಬ ಪದಕ್ಕೆ ಸಮಾನಾರ್ಥಕವಾಗಿ ಬಳಸಲಾಗುತ್ತದೆ. ಈ ಪದವೂ ಸಹ ಏನನ್ನಾದರೂ ಬೆಳೆಸುವುದು ಎಂಬ ಅರ್ಥವನ್ನೇ ಕೊಡುತ್ತದೆ. ಉದಾಹರಣೆಗೆ –Agriculture, Horticulture, sericulture ಇತ್ಯಾದಿ ವಿಶೇಷಣಯುಕ್ತ ಪದಗಳು ಆಯಾ ವಿಷಯಗಳನ್ನು ವ್ಯವಸಾಯ ಮಾಡಿ ಬೆಳೆಸುವ ನಿಟ್ಟಿನಲ್ಲೇ ಬಳಸಲಾಗಿದೆ. ಆದರೆ Culture ಎಂಬ ಪದವು ಈಗ ಅನ್ಯಾನ್ಯ ಅರ್ಥಗಳಲ್ಲಿ ಉಪಯೋಗವಾಗಿ ಇಂದು ಶಾಲೆಗಳಲ್ಲಿ ನಡೆಯುವ ಮನೋರಂಜನಾದಿ ಕಾರ್ಯಕ್ರಮಗಳನ್ನು Cultural Programme ಎಂದು ಕರೆಯುವವರೆಗೆ ಬಂದುಬಿಟ್ಟಿದೆ. ಅದನ್ನೇ ಕನ್ನಡದಲ್ಲಿ ಅನುವಾದಿಸಿ “ಸಾಂಸ್ಕೃತಿಕ ಕಾರ್ಯಕ್ರಮಗಳು” ಎಂದು ಕರೆಯುವ ರೂಢಿಯಾಗಿಬಿಟ್ಟಿದೆ.

ಪದದ ಮೌಲಿಕವಾದ ಅರ್ಥ:

ಇಷ್ಟರ ಮಧ್ಯೆ “ಸಂಸ್ಕೃತಿ” ಎಂಬ ಪದವನ್ನು ಮೊದಲಿಗೆ ತಂದ ಈ ದೇಶದ ಜ್ಞಾನಿಗಳ ಅಭಿಪ್ರಾಯವೇನಿತ್ತು ಎಂಬುದನ್ನು ವಿಚಾರಮಾಡುವುದೇ ಇಲ್ಲಿನ ವಿಷಯವಾಗುತ್ತದೆ. ಸಂಸ್ಕೃತಿ (ಸಮ್ಯಕ್-ಕೃತ-ಸಂಸ್ಕೃತ) ಎಂದರೆ ಚೆನ್ನಾಗಿ ಮಾಡಲ್ಪಟ್ಟದ್ದು, ಪರಿಷ್ಕರಿಸಲ್ಪಟ್ಟದ್ದು ಎಂದರ್ಥ. ಅಂದರೆ ಒಂದು ಬಟ್ಟೆಯನ್ನು ಚೆನ್ನಾಗಿ ಮಾಡುವುದು ಎಂದರೇನು? ಅದರಲ್ಲಿ ಸೇರಿದ ಕೊಳೆಯನ್ನೆಲ್ಲ ತೊಳೆದು ಅದು ಮೊದಲಿದ್ದಂತೆ ಮಾಡುವುದೇ ಆಗಿದೆ. ಹಾಗೆಯೇ ಪಾತ್ರೆಯನ್ನು ತೊಳೆದು ಅದು ಮೊದಲಿನ ಸ್ಥಿತಿಗೆ ತರುವುದು ಅದನ್ನು ಚೆನ್ನಾಗಿ ಮಾಡಿದಂತೆ. ಅಂದರೆ ಸೇರಿದ ಕೊಳೆಯನ್ನು ತೆಗೆದುಹಾಕಿ ವಸ್ತುಗಳ ಮೂಲಸ್ವರೂಪದಲ್ಲಿಡುವ ಕ್ರಿಯೆಯೆಲ್ಲವೂ ಒಂದು ದೃಷ್ಟಿಯಿಂದ ‘ಸಂಸ್ಕೃತಿ’ಯೇ ಆಗುತ್ತದೆ.

ಇಲ್ಲಿ ವಸ್ತುಗಳ, ವಿಷಯಗಳ ಸ್ವರೂಪಕ್ಕನುಗುಣವಾಗಿ ಅವುಗಳ ಕೊಳೆಯನ್ನು ತೆಗೆಯುವ ವಿಧಾನ, ಅದಕ್ಕಾಗಿ ಉಪಯೋಗಿಸಲ್ಪಡುವ ಪರಿಕರಗಳೆಲ್ಲವೂ ಬದಲಾವಣೆಯಾಗುತ್ತವೆ. ಬಟ್ಟೆಯ ಕೊಳೆ ತೆಗೆಯುವ ರೀತಿಯೇ ಬೇರೆ, ಪಾತ್ರೆಯ ಕೊಳೆ ತೆಗೆಯುವ ರೀತಿಯೇ ಬೇರೆ. ಉಪಯೋಗಿಸುವ Detergent ಸಹ ಬೇರೆ ಬೇರೆ. ಮಾತ್ರವಲ್ಲ, ಬಟ್ಟೆ ಪಾತ್ರೆಗಳ ವೈವಿಧ್ಯಗಳ ಮೇಲೆಯೂ ಅವನ್ನು ಮೂಲಸ್ಥಿತಿಗೆ ತರುವ ವಿಧಾನಗಳು ಅವಲಂಬಿತವಾಗುತ್ತವೆ. ಉದಾಹರಣೆಗೆ- ತಾಮ್ರದ ಪಾತ್ರೆಯಾದರೆ ಅದನ್ನು ತೊಳೆಯಲು ಹುಣಿಸೆ ಹಣ್ಣನ್ನು ಉಪಯೋಗಿಸುತ್ತಾರೆ. ಸ್ಟೀಲ್ ಆದರೆ  ಬೇರೆ ರೀತಿಯ ಪುಡಿಗಳನ್ನು ಉಪಯೋಗಿಸುತ್ತಾರೆ. ಆದರೆ ಅವುಗಳ ಮೂಲಸ್ವರೂಪಕ್ಕೆ ತರುವ ವಿಷಯಮಾತ್ರ ಎಲ್ಲಕ್ಕೂ ಸಾಮಾನ್ಯ.
ಇನ್ನು ಮೂಲಸ್ವರೂಪಕ್ಕೆ ತರುವ ಧ್ಯೇಯವಿರುವವರಿಗೆ ಆಯಾ ವಸ್ತುಗಳ ಸ್ವರೂಪಜ್ಞಾನವಿರುವುದು ಅವಶ್ಯಕ. ಹಾಗಿದ್ದಾಗ ಮಾತ್ರ ಅದರ ಮೂಲವೇನು? ಕೊಳೆಯ ಭಾಗ ಯಾವುದು ಹೇಗೆ ಕೊಳೆಯನ್ನು ತೆಗೆದು ಹಾಕುವುದು ಎಂಬುದರಕಡೆ ಚಿಂತನೆ ಹರಿಯುತ್ತದೆ.

ಬಟ್ಟೆ, ಪಾತ್ರೆ, ಮನೆಯ ಕೊಳೆ, ವಸ್ತುಗಳ ಮೇಲಿನ ಕೊಳೆ ಇವೆಲ್ಲವೂ ಎಲ್ಲರಿಗೂ ಗೊತ್ತಾಗುವ ವಿಷಯ. ಆದರೆ ನಮ್ಮ ಶರೀರದ ಒಂದು ಪ್ರಮುಖ ಅಂಗವಾದ ಮನಸ್ಸಿನ ಕೊಳೆ ಯಾವುದು? ಅದರ ಮೂಲರೂಪವೇನು? ಅದಕ್ಕೂ ಹಿಂದೆ ಇರುವ ಜೀವನದ ಮೂಲವೇನು? ಅಲ್ಲಿ ಸೇರಿದ ಕೊಳೆ ಯಾವುದು? ಎಂಬುದರ ವಿಚಾರವನ್ನು ಮುಂದಿನ ಲೇಖನದಲ್ಲಿ ವಿಮರ್ಶಿಸೋಣ.

ಸೂಚನೆ: 18/1/2020 ರಂದು ಈ ಲೇಖನ ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Friday, January 17, 2020

ஶ்ரீரங்கமஹாகுரு - 53 (Sriranga Mahaguru - 53)

ஶ்ரீகுருவின் கண்ணோட்டம் – 42

பெரும் அநியாயம்
===========================================================

மூலம்: வரததேசிகாசார்யர் 
தமிழாக்கம்: வனஜா
மின்னஞ்சல் : lekhana@ayvm.in


சிற்பி கல்லில் சிலை வடித்தான். இது பாராட்டுக்குரியது. ஆனால் ஆன்மிகவாதி அத்தெய்வ சிலையை கோவிலில் வைத்தான். இது மிகவும் அநியாயம் எனும் பொருளில் சிலர் கூவுகின்றனர் இது சரியா?”

தவறு. மிகவும் தவறு. அழகான இறையுருவ சிலையை ஆலயத்தினுள் வைப்பது சரிதான். வேறென்ன செய்ய வேண்டி இருந்தது?”

          “அனைவரும் அவ்வடிவின் அழகை கண்டு ரசிக்கும்படி எந்த கட்டுப்பாடுமற்ற திறந்த வெளியில் அழகிய இடத்தில் வைத்திருக்க வேண்டும்.

           “அவ்வாறு மறைவில்லாத இடத்தில் வைத்திருந்தால் அச்சிலை காகம்குருவிகழுகுகளுக்கு இருப்பிடமாயிருக்கும். அவை அதன் மேல் மல ஜலம் கழித்திருக்கும். அதன் தூய்மை  சிறிதும் மிஞ்ஜியிராது. காற்றுமழை,வெப்பம்  இவைகளால்  பாழாகி இருக்கும்.  கோவிலில்  நிலைநிறுத்தி இருப்பதால்  அச்சிலை காப்பாற்றப்பட்டுள்ளது. தூய்மையும் நிலைத்திருக்கிறது என்பது பாமரருக்கும் விளங்குமல்லவாஇதை அநியாயமென்று ஏன் கூக்குரலிடவேண்டும்?”

           “கோவிலினுள் இருப்பதால் பாதுகாப்பு இருக்கலாம். ஆனால் தூய்மை எவ்வாறு மிஞ்ஜும்?”

     “தவத்தில் சிறந்த ஞானிகள் அச்சிலையை வெறுமனே கோவிலினுள் வைப்பதில்லை. அதன் புனிதத்தன்மைக்கு ஏற்ற  கருவறையில்  இருத்தி மந்திரங்களாலும் உரிய சடங்குகளாலும் இறைத்தன்மையை அச்சிலையினுள் நிரப்புகின்றனர். மேலும் ஆயிரக்கணக்கான மக்கள் அச்சிலையை இறைவனென்று பக்தியுடன் வழிபடும்பொழுது அதனுள் இறைதன்மை முழுமையாக நிரம்பி மிகவும் புனிதமாகிறது.

        இத்தகு புண்யமான செயலை செய்தவர்களைப்பற்றி கீழ்தரமாக விமர்சிப்பது அறிவுள்ள செயலல்ல. அதனால் அவர்களுக்கும் பயனில்லை. உலகிற்கும் நன்மையில்லை.
               
(அடுத்த வியாழனன்று தொடரும்)