Sunday, June 30, 2019

ஶ்ரீரங்கமஹாகுரு - 21 (Srirangamahaguru - 21)

ஶ்ரீகுருவின் கண்ணோட்டம் – 10  

       (மூலம்:  திரு. வரததேசிகாசார்யார் தமிழாக்கம் : திருமதி  வனஜா)

துன்புறுத்தல் - துன்புறுத்தாமை
 (ஹிம்ஸை - அஹிம்ஸை)


துன்புறுத்தல் மிகக்கொடிய தவறு. துன்புறுத்தாமை உயரிய அறம் என்று எல்லா அற நூல்களும் கூறுகின்றன. இது உயர்ந்த அறிவுரை என்பதில் ஐயமில்லை. ஆனால் அறிவுரை இருப்பது நடைமுறைக்காயினும் செயல்பாட்டிற்கு இல்லாமல் அறிவுரையாகவே நின்றால் அதனால் எவ்வித நற்பலனும் இல்லை. இந்த துன்புறுத்தாமையை முழுவதுமாக கடைபிடிப்பது இயலுமா? எனபதை அறிவுடன் ஆராய வேண்டும்.
துன்புறுத்தாமை என்றால் எவ்வுயிரையும் மனம், மொழி, மெய்யால் துன்புறுத்தாது இருத்தல். ஆனால் இவ்வாறு எவருக்கும் எவ்வகையிலும் துன்பம் விளைவிக்காமல் வாழ்வதென்பது இயலாது. ஏனெனில் நாம் கூறும் துன்புறுத்தாமை அறிவுரையே துன்பம் செய்வதையே வலியுறுத்தி, துன்புறுத்துவதையே வழக்கமாகக் கொண்ட சில தீயவர்கள் மனதிற்கு துன்பமளிக்கும். எனவே ஒருவருக்குமே துன்பமளிக்காமல் இருப்பது இயலாது. ஒரு வேலைக்கு நூற்றுகணக்கானோர் விண்ணப்பிக்கிறார்கள். அதில் ஒருவருக்கு மட்டுமே வேலை கிடைக்கிறது. அப்போது மற்றவர்களுக்கு மனத்துன்பம் ஏற்படுவது இயற்கை. எனவே முழுமையாக ஒருவருக்கும் தீது செய்யாமல் வாழ இயலாவிடினும் முடிந்த வரை குறைந்த அளவு துன்பமளித்து வாழும்படி ஆன்றோர்கள் அறிவுருத்துகின்றனர். 'அத்ரோஹேணைவ பூதானாம் அல்ப த்ரோஹேண வாபுன’ நாம் சைவஉணவையோ அல்லது மற்றெந்த வகை உணவையோ ஏற்றுக்கொண்டாலும் அதனால் துன்பம் ஏற்படும். எனவே உணவையே ஏற்காமல் தவிர்த்தால் நம் உயிருக்கே¸ மிக்க கேடு. எனவே உணவிற்காக தவிர்க்க இயலாமல் குறைந்த அளவே துன்பம் தரலாம். தவிர்க்க இயலாமல் அளித்த துன்பத்தால் விளையும் பாவத்தை இறைவனை பூஜித்தல், விருந்தோம்பல் போன்ற நற்செயல்களால் போக்கி கொள்ளலாம். ஆராய்ந்து பார்க்கையில் அனைவருக்கும் உண்மையான தேவை இன்பமும் மன அமைதியும்தான். அவற்றை அளிக்கவல்லவன் இறைவன். அவனை அடையும் முயற்சியில் தடையாக உள்ளதே மிகப்பெரிய துன்பமாகும். இறைவனை அடைவதில் உறுதுணையாக உள்ளதே துன்புறுத்தாமை என்று ஞான விஞானத்தில் உயரிய நிலை அடைந்த ஸ்ரீரங்கமஹாகுரு உபதேசித்தருளினார்.

ವಿವಾಹದಲ್ಲಿ ಮಾಂಗಲ್ಯದ ಅಂತರಾರ್ಥ (Vivahadalli mangalyada antharartha)

ಲೇಖಕರು: ತಾರೋಡಿ ಸುರೇಶ



ಗಂಡು ಹೆಣ್ಣುಗಳ ಮೈ ಬಲಿತು ಸಂತಾನ ಬೆಳೆಸುವ ಯೋಗ್ಯತೆ ಬೆಳೆಯುವುದಷ್ಟೇ ವಿವಾಹದ ಪಾತ್ರತೆಯಲ್ಲ. ಜೀವನದ ಬೇರಾಗಿರುವ ನಾರಾಯಣ(ಶಿವ) ಸ್ವರೂಪದಲ್ಲಿ ಮನಸ್ಸು ಸಂಲಗ್ನವಾಗಿ ತಾಮ್ರದ ತಂತಿಯಲ್ಲಿ ವಿದ್ಯುತ್ತಿನ ಪ್ರವಾಹವು ಹರಿಯುವಂತೆ ದೈವೀಭಾವವನ್ನು ಹರಿಯಿಸಬಲ್ಲ ಮೈ ಇವನದಾಗಿರಬೇಕು. ಅದಕ್ಕೆ ತಕ್ಕ ಯೋಗ್ಯತೆಯನ್ನು ಪಡೆದು ಗುರುವಿನ ಅನುಮತಿಯ ನಂತರವೇ ಅವನು ಗೃಹಸ್ಥಾಶ್ರಮಕ್ಕೆ ಹೆಜ್ಜೆಯಿರಿಸುತ್ತಾನೆ. ಅಂತೆಯೇ ವಧುವೂ ಸ್ವಗೃಹದಲ್ಲಿಯೇ ಸುಶಿಕ್ಷಿತಳಾಗಿರುತ್ತಾಳೆ. ಆದ್ದರಿಂದ ಇದು ಕೇವಲ ಹೊರಮೈಗಳ ಒಂದಾಗುವಿಕೆಯಲ್ಲ. ಒಳ ತತ್ವಗಳ-ಶಕ್ತಿಗಳ ಬೆಸುಗೆ. ಋಷಿಗಳ ಈ ನೋಟವನ್ನು ವಿವಾಹದ ಒಂದೊಂದು ಕ್ರಿಯಾಕಲಾಪಗಳಲ್ಲಿಯೂ ಗಮನಿಸಬಹುದು.

ಮಂಗಳಾಭರಣವಾದ ಮಾಂಗಲ್ಯವು (ತಾಳಿ) ಇದಕ್ಕೆ ಇನ್ನೊಂದು ಉದಾಹರಣೆಯಾಗಿದೆ. ಮಹರ್ಷಿಗಳು ಕಂಡ ಒಳಭಾವಕ್ಕೆ ಇದು ಹೊರನಕ್ಷೆಯಾಗಿದೆ. ಮಾಂಗಲ್ಯದಲ್ಲಿ ಸಾಮಾನ್ಯವಾಗಿ ಬಿಂದು, ವಿಸರ್ಗ, ಸೂರ್ಯಚಂದ್ರಾಗ್ನಿಗಳ ಕುರುಹು ಇದ್ದೇ ಇರುತ್ತವೆ. ಅದನ್ನು ಕಟ್ಟುವ ಸ್ಥಾನ ಕಂಠ ಮತ್ತು ಬಹುಮಟ್ಟಿಗೆ ಅದಕ್ಕೆ ಬಳಸುವ ದ್ರವ್ಯ ಸುವರ್ಣ. ಶ್ರೀರಂಗಮಹಾಗುರುಗಳು ಕೊಟ್ಟ ವಿವರಣೆಯನ್ನಾಧರಿಸಿ ಕೆಳಗಿನ ವಿವರಗಳನ್ನು ಕೊಡಬಹುದು. ವರನು ಮಾಂಗಲ್ಯವನ್ನು ವಧುವಿನ ಕಂಠಕ್ಕೆ ಕಟ್ಟುತ್ತಾನೆ. ಮಾನವನ ಬೆನ್ನುಮೂಳೆಯ ಒಳಪಾರ್ಷ್ವದಲ್ಲಿ ಮೂಲಾಧಾರ, ಸ್ವಾಧಿಷ್ಠಾನ, ಮಣಿಪೂರಕ, ಅನಾಹತ, ವಿಶುದ್ಧಿ, ಆಜ್ಞಾ ಮತ್ತು ಸಹಸ್ರಾರ ಎಂದು ಕರೆಯಲ್ಪಡುವ ಸಪ್ತಚಕ್ರಗಳಿವೆ ಎಂದು ಜ್ಞಾನಿಗಳು ಹೇಳುತ್ತಾರೆ. ಇದನ್ನು ಆರ್ಷಸಾಹಿತ್ಯಗಳೂ ಎತ್ತಿ ಹೇಳಿವೆ. ಹಾಗೆಯೇ ಮೂಲಾಧಾರದಿಂದ ಕಂಠದವರೆಗಿನ ಎಡೆಯನ್ನು ಶಕ್ತಿಸ್ಥಾನವೆಂದು( ಪ್ರಕೃತಿ ಸ್ಥಾನವೆಂದು) ಕಂಠದಿಂದ ಮೇಲಿನ ಭಾಗವನ್ನು ಶಿವನ(ಪುರುಷ) ಸ್ಥಾನವೆಂದೂ ಗುರುತಿಸಿದ್ದಾರೆ. ಕಂಠಪ್ರದೇಶವು ಶಿವಶಕ್ತಿಯರ ಸಂಗಮಸ್ಥಾನವಾಗಿದೆ. ಈ ಸಂಗಮದ ಎಡೆಯಲ್ಲಿಯೇ  ಮಾಂಗಲ್ಯವನ್ನು ವರನು ಕಟ್ಟುತ್ತಾನೆ. ಶಿವಭಾವವನ್ನು ಮುಟ್ಟಿರುವ ವರನು ತನ್ನ ದೈವೀಭಾವವನ್ನು ಪ್ರಕೃತಿಯಲ್ಲಿ ವಿಸ್ತರಿಸುವ, ಒಳಭಾವದ ನೆನಪಿನೊಡನೆ, ಶಿವಶಕ್ತಿಗಳ ಸಮಾಗಮದ ಸ್ಥಾನದಲ್ಲಿಯೇ ಮಾಂಗಲ್ಯವನ್ನು ಕಟ್ಟುತ್ತಾನೆ.

ಎರಡು ಹುಬ್ಬುಗಳ ನೇರಕ್ಕಿಂತಲೂ (ಆಜ್ಞಾಚಕ್ರದ) ಮೇಲ್ಮುಖವಾಗಿ ಜ್ಞಾನಿಯ ಯೋಗದೃಷ್ಟಿಯು ಹರಿದಾಗ ಅಲ್ಲಿ ಬಿಂದುವಿನಂತಹ ಒಂದು ಬೆಳಕಿನ ದರ್ಶನವಾಗುತ್ತದೆ. ಅದೆ ಶಿವ(ನಾರಾಯಣ) ರೂಪವಾದ ಜ್ಯೋತಿ. ಆ ಜ್ಯೋತಿಯೇ ತನ್ನ ಸಂಕಲ್ಪದಿಂದ ಪ್ರಕೃತಿರೂಪವಾದ ಕ್ಷೇತ್ರವನ್ನು ಸೃಷ್ಟಿಸಿಕೊಳ್ಳುತ್ತದೆ. ಆಗ ಒಂದು ಬಿಂದುವು ಎರಡಾದಂತಾಯಿತು. ಅದೇ ವಿಸರ್ಗರೂಪವಾದದ್ದು. ಮೂಲಚೈತನ್ಯವು ಪ್ರಕೃತಿಯಲ್ಲಿ ಪ್ರವೇಶಿಸಿದಾಗ ಪ್ರಕೃತಿಗೆ ವಿಸ್ತಾರಗೊಳಿಸುವ ಯೋಗ್ಯತೆ ಉಂಟಾಗುತ್ತದೆ. ತಾತ್ಪರ್ಯವೇನೆಂದರೆ ಮೊಟ್ಟಮೊದಲ ಬಿಂದುರೂಪವೂ ಶಿವರೂಪವೂ ಆದ ಚೈತನ್ಯವು ವಿಸರ್ಗರೂಪವಾದ ಪ್ರಕೃತಿಯೊಡನೆ ಸೇರಿದಾಗ ಬಾಳು ವಿಸ್ತಾರಗೊಳ್ಳುತ್ತದೆ. ಇದನ್ನೇ ಬಿಂದುವಿಸರ್ಗದ ರೂಪದಲ್ಲಿ ಮಾಂಗಲ್ಯದಲ್ಲಿ ಚಿತ್ರಿಸಿದ್ದಾರೆ. ಹಾಗೆಯೇ ಸೂರ್ಯಚಂದ್ರಾಗ್ನಿಗಳೂ ಅಂತರ್ಮುಖವಾಗಿ ಸಾಗಿದಾಗ ದರ್ಶನಕ್ಕೆ ಸಿಗುವ ಶಕ್ತಿಗಳೇ. ಹೊರಮೈಮನಸ್ಸುಗಳು ವಯೋಮಾನಕ್ಕನುಗುಣವಾಗಿ ಗಂಡು-ಹೆಣ್ಣಿನ ರೂಪದಲ್ಲಿ ಸೇರುವುದು ಪ್ರಕೃತಿಸಹಜವಾದದ್ದು. ಆದರೆ ಇಷ್ಟೇ ಜೀವನವಲ್ಲ. ಧರ್ಮಾರ್ಥಕಾಮ ಮತ್ತು ಮೋಕ್ಷರೂಪವಾದ ಎಲ್ಲ ಪುರುಷಾರ್ಥಗಳನ್ನು ಅನುಭವಿಸಬೇಕು. ಆಗಲೇ ಬಹುಪುಣ್ಯದ ಕಾರಣದಿಂದ ಒದಗಿದ ಮಾನವದೇಹ ಸಾರ್ಥಕವಾಗುವುದು.

ಒಂದು ಕಮಲಪುಷ್ಪದ ಚಿತ್ರವನ್ನು ಬರೆದಾಗ ಅದು ಮನಸ್ಸನ್ನು ನಿಜವಾದ ಪುಷ್ಪದತ್ತ ಸೆಳೆಯುತ್ತದೆ. ಹಾಗೆಯೇ ಮಾಂಗಲ್ಯದ ವಿನ್ಯಾಸವು ನಮ್ಮನ್ನು ಒಳಜೀವನದತ್ತ ಸೆಳೆಯುತ್ತದೆ. ಸುವರ್ಣದ ಸ್ಪರ್ಷವೂ ಇದಕ್ಕೆ ಪೋಷಕ.  


ಸೂಚನೆ: 29/06/2019 ರಂದು ಈ ಲೇಖನ ಪ್ರಜಾ ವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Thursday, June 27, 2019

Beware of Ego

Article in Kannada & English Rendering by: KS Rajagopalan



Jaya and Vijaya are the doorkeepers of Vaikuṇṭha, the abode of Mahavishnu. Once, the great Sanaka and his fellow sages came to visit Mahavishnu. Out of arrogance, the doorkeepers prevented them from entering Vaikuṇṭha despite being aware of the greatness of these sages. The sages were overpowered by anger and cursed Jaya and Vijaya: “You are unfit to remain in this holy place; take birth on earth as demons”. Mahavishnu appeared on the scene and gave two options to Jaya and Vijaya: either to be born as arch-enemies of Vishnu for three lives, or as His friends for seven lives. They eagerly chose the first option so that they can return to Vaikunta sooner. Vishnu now addressed the sages as He wanted to enlighten them too. Smilingly, He remarked: “It is highly unbecoming of Jaya and Vijaya to have stopped you sages, well-known as jitendriyas, (conquerors of the organs of sense) and distinguished for your control over anger. I personally apologise for their mistake!” Soon the sages realized their folly of not conquering anger while dealing with His assistants. This is a story familiar to students of Indian mythology.

Many may draw the conclusion that the urgency of Jaya and Vijaya to return to Vaikuṇṭha is understandable as they were unable to bear the separation from their Master Mahavishnu. 

Sriranga mahaguru had explained this story in a beautiful manner. When Jaya and Vijaya faced two options — to be foes or friends — and chose the former, the reason was that the curse had already started bearing fruit, thus driving their mind towards this alternative. They could have chosen to be associates of Vishnu, whether for seven lives or even a hundred! As residents of Vaikuntha, they ought to have had their minds always dwelling on the Lord. Even if they took birth on earth on account of the curse, if their minds were unfailingly devoted to Vishnu, neither the number of births nor their place of stay would matter. They did not realise this simple principle! “Whether in heaven or in hell, in happiness or in sorrow, may I always remember you” — to pray thus is a hallmark of Indian culture.

The story of Jaya and Vijaya nicely illustrates how even a great devotee, if he develops a craving for position, for fame or becomes possessed with such other selfishness, can forget his ultimate aim in life. If this can happen even to such Servitors of Lord Vishnu, what then to speak of the rest of us? That is why elders warn “प्रत्यहं प्रत्यवेक्षेत नरश्चरितमात्मनः। किं नु मे पशुभिस्तुल्यं किं नु सत्पुरुषैरिति॥” (A man should introspect everyday: am I behaving like a beast or like a noble person?) Animals can act only on instinct. It is only a man who is bestowed with an additional faculty of discretion. Even when we err as a result of our accumulated bad influences or bad company, it is wise to exercise better judgment, correct ourselves, and continue to move towards our goal.

Note: The Kannada version of this article can be viewed at AYVM blogs

Wednesday, June 26, 2019

ಅಂಟಿಲ್ಲದೆ ಕರ್ಮ ಮಾಡಲಾದೀತೆ? (Antillade karma maadalaadeete?)

ಲೇಖಕರು: ರಾಜಗೋಪಾಲನ್. ಕೆ. ಎಸ್


ಒಬ್ಬ ವೃದ್ಧ ಸಂನ್ಯಾಸಿ ಹಾಗೂ ಮತ್ತೊಬ್ಬ ಯುವ ಸಂನ್ಯಾಸಿ ನದೀ ತೀರದಲ್ಲಿ ಅನುಷ್ಠಾನದಲ್ಲಿದ್ದರು. ಯುವತಿಯೊಬ್ಬಳು ಕಾಲು ಜಾರಿ ನೀರಿನಲ್ಲಿ ಬಿದ್ದುಬಿಟ್ಟಳು. ಈಜುಬಾರದ ಆಕೆಯ ಕೂಗು ಸಂನ್ಯಾಸಿಗಳಿಗೆ ಕೇಳಿತು. ಬಿದ್ದವಳು ಯುವತಿ ಎಂದರಿತೊಡನೆಯೇ  ವೃದ್ಧ ಸನ್ಯಾಸಿ, ಸ್ತ್ರೀಸ್ಪರ್ಶ ಮಾಡಬಾರದೆಂಬ ತನ್ನ ವ್ರತಭಂಗವಾಗಬಾರದೆಂದು ತಟಸ್ಥನಾಗಿಬಿಟ್ಟ. ಅಸಹಾಯಕಳಾದ ಸ್ತ್ರೀಯ ಕೂಗಿಗೆ ಓಗೊಟ್ಟ ಯುವ ಸಂನ್ಯಾಸಿ ಒಡನೆಯೇ ನೀರಿಗೆ ಹಾರಿ ಆಕೆಯನ್ನು ಹೊತ್ತು ಸುರಕ್ಷಿತ ತಾಣಕ್ಕೆ ಬಿಟ್ಟು ಮತ್ತೆ ಅನುಷ್ಠಾನಕ್ಕಿಳಿದ. ಎಲ್ಲವನ್ನು ನೋಡುತ್ತಿದ್ದ ವೃದ್ಧ ಸನ್ಯಾಸಿಗೆ ಈ ತರುಣ ಸಂನ್ಯಾಸಿಯ ವರ್ತನೆಯಿಂದ ಕೋಪ ಉಕ್ಕೇರಿತು. ಆದರೂ ಏನನ್ನೂ ಮಾತನಾಡದೆ ಮೌನಕ್ಕೆ ಶರಣಾದ. ಹಾಗೂ ಹೀಗೂ ಮೂರು ದಿನಗಳಾದವು. ವೃದ್ಧ ಸನ್ಯಾಸಿಯ ಮೌನದ ಕಟ್ಟೆಯೊಡೆಯಿತು. “ಆದರೂ ನೀನು ಆ ಯುವತಿಯನ್ನು ಹೊತ್ತೊಯ್ಯಬಾರದಿತ್ತು” ಎಂದು ಕ್ರೋಧದಿಂದ ಉದ್ಗರಿಸಿದ. ತರುಣ ಸಂನ್ಯಾಸಿ ಒಮ್ಮೆ ವೃದ್ಧ ಸನ್ಯಾಸಿಯನ್ನು ದಿಟ್ಟಿಸಿ ನೋಡಿದ. “ಯಾರು ಆಕೆಯನ್ನು ಹೊತ್ತಿರುವುದು? ಅವಳನ್ನು ನಾನು ಅಂದೇ ಕೆಳಗಿಳಿಸಿಯಾಯಿತಲ್ಲ” ಎಂದ. ವೃದ್ಧ ಸನ್ಯಾಸಿಗೆ ಅರಿವಾಯಿತು--ಮೂರೂ ದಿವಸಗಳಿಂದ ಮಾನಸಿಕವಾಗಿ ಆ ತರುಣಿಯನ್ನು ಹೊತ್ತಿರುವುದು ತಾನೇ ಎಂದು. ಎಚ್ಚೆತ್ತುಕೊಂಡ. 

ಮಹಾತ್ಮರು ನಮ್ಮಂತೆಯೇ ವ್ಯವಹಾರ ಮಾಡುವ ಹಾಗೆ ಕಂಡರೂ ಅವರ ಮನದ ಅಂತರಾಳವನ್ನು ಅರಿಯುವುದು ಸಾಮಾನ್ಯರಿಗೆ ಸುಲಭವಲ್ಲ. ಜಗದ ವ್ಯವಹಾರದಲ್ಲಿ ತಮ್ಮನ್ನು ತೊಡಗಿಸಿಕೊಂಡರೂ ಮಾನಸಿಕವಾಗಿ ಅಂಟದಂತಿರುವುದು ಅವರಿಗೆ ಸಾಧ್ಯ. ಈಜುಬಾರದವ, ಈಜು ಬರುವವ-- ಇಬ್ಬರೂ ನೀರಿನಲ್ಲಿರುವಂತೆ ಕಂಡರೂ, ಈಜು ಬಲ್ಲವ ನೀರಿನಿಂದ ಪಾರಾಗಿ ಮೇಲೇಳುತ್ತಾನೆ. ಈಜು ಬಾರದವ ನೀರಿನಲ್ಲೇ ಮುಳುಗಿಹೋಗುತ್ತಾನೆ. 

ಜೀವನದಲ್ಲಿ ಹೇಗಿರಬೇಕೆಂಬ ಬಗ್ಗೆ ಶ್ರೀರಂಗಮಹಾಗುರುಗಳು ಸಣ್ಣದೊಂದು ಸೂಕ್ತಿಯನ್ನು ಉದ್ಧರಿಸುತ್ತಿದ್ದರು--”ಪದ್ಮಪತ್ರಮಿವಾಂಭಸಾ” ಎಂದು. ತಾವರೆ ಎಲೆಯ ಮೇಲಿರುವ ನೀರು ಎಲೆಗೆ ಅಂಟದೇ ಇರುವಂತೆ ನಾವು ಇರಬೇಕೆನ್ನುತ್ತಿದ್ದರು. ತಾವರೆ ಎಲೆಗೆ ನೀರು ಅಂಟದೇ ಇರಲು, ಅದರಲ್ಲಿರುವ ಒಂದು ಬಗೆಯಾದ ಜಿಡ್ಡೇ ಕಾರಣ. ಜಿಡ್ಡಿಗೆ “ಸ್ನೇಹ” ಎಂಬ ಪದವೂ ಇದೆ. ಒಬ್ಬ ಜೀವಿಗೆ ಭಗವಂತನೊಡನೆ ಸ್ನೇಹವೇರ್ಪಟ್ಟರೆ, ಆತ ವ್ಯವಹಾರದಲ್ಲಿದ್ದರೂ ಅದಕ್ಕೆ ಅಂಟದೇ ಇರಬಹುದು. 

ಜೀವನದ ಗುರಿ ಭಗವಂತನನ್ನು ಸಾಕ್ಷಾತ್ಕರಿಸಿಕೊಳ್ಳುವುದೇ ಎಂದು ಘೋಷಿಸುವ ಭಾರತೀಯ ಸಂಸ್ಕೃತಿಯಲ್ಲಿ ಹೆಜ್ಜೆ ಹೆಜ್ಜೆಗೂ ದೇವರ ಸ್ಮರಣೆ ಮಾಡದೇ ಯಾವ ಸತ್ಕಾರ್ಯವನ್ನೂ ಮಾಡುವ ಪದ್ಧತಿ ಇಲ್ಲ.(ದುಷ್ಕೃತ್ಯಗಳನ್ನು ಮಾಡುವಾಗ ಭಗವತ್ಸ್ಮರಣೆ ಮಾಡಿ ಪಾರಾಗಲಾರೆವು.) ಇದರ ಹಿಂಬದಿಯ ಆಶಯ, ಭಗವಂತನ ಸ್ಮರಣೆ ನಮ್ಮನ್ನು ಕರ್ಮಗಳಿಗೆ ಅಂಟದಂತೆ ಮಾಡುವುದೇ ಆಗಿದೆ. ಶ್ರೀಕೃಷ್ಣನೂ ಭಗವದ್ಗೀತೆಯಲ್ಲಿ ಧರ್ಮರಕ್ಷಣೆಗಾಗಿ ಯುದ್ಧ ಮಾಡಲೇಬೇಕಾಗಿದ್ದ ಅರ್ಜುನನಿಗೆ “ನನ್ನನ್ನು ಸ್ಮರಿಸಿ ಯುದ್ಧ ಮಾಡು” ಎನ್ನುತ್ತಾನೆ. ಲೌಕಿಕ ವ್ಯವಹಾರಗಳಲ್ಲಿ ಯೋಧನಂತೆ ಆಯಾ ಕೆಲಸಕ್ಕೆ ಬೇಕಾದ ಶ್ರದ್ಧೆಯಿಂದಲೇ ಕೆಲಸ ಮಾಡಬೇಕು. ಭಗವಂತನೊಡನೆ “ಸ್ನೇಹ” ವನ್ನು ಹೊಂದಿ ಸತ್ಕರ್ಮನಿರತರಾಗೋಣ. 


ಸೂಚನೆ:  26/06/2019 ರಂದು ಈ ಲೇಖನ ವಿಜಯವಾಣಿ ಮನೋಲ್ಲಾಸ ಅಂಕಣದಲ್ಲಿ ಪ್ರಕಟವಾಗಿದೆ.

Tuesday, June 25, 2019

ವಿವಾಹ ಸಂಸ್ಕಾರದಲ್ಲಿ ಕಾಶೀಯಾತ್ರೆ ಮತ್ತು ಕನ್ಯಾದಾನ (Vivaaha samskaradalli kaashiyaatre mattu kanyadaana)

ಲೇಖಕರು: ತಾರೋಡಿ ಸುರೇಶ



ಜ್ಞಾನಸಂತಾನವನ್ನು ಬೆಳೆಸಬಲ್ಲ ವಧೂವರರೇ ವಿವಾಹಕ್ಕೆ ಯೋಗ್ಯರು ಎಂಬುದನ್ನು ನೋಡಿದೆವು. ವರನು ನಾರಾಯಣ ಸ್ವರೂಪನಾದರೆ ವಧುವು ಲಕ್ಶ್ಮೀಸ್ವರೂಪಳು. ವರನು ಮಹೇಶ್ವರನಾದರೆ ಅವಳು ಪಾರ್ವತೀಸ್ವರೂಪಳು. ಅವರಿಬ್ಬರೂ ಸೃಷ್ಟಿಮೂಲದಲ್ಲಿ ಬೆಳಗುತ್ತಿರುವ ಪ್ರಕೃತಿಪುರುಷ ತತ್ವಗಳನ್ನು ಪ್ರತಿನಿಧಿಸುವವರು. ಆರ್ಷಸಾಹಿತ್ಯಗಳಲ್ಲಿ ಇದನ್ನು ಅರ್ಥಮಾಡಿಸಬಲ್ಲ ಶ್ವೇತಕೇತು-ಸುವರ್ಚಲಾ ಮುಂತಾದವರ ಕಥೆಗಳನ್ನೂ ನೋಡಬಹುದು. ವಿವಾಹ ಆರಂಭವಾಗುವ ರೀತಿಯೂ ಇದನ್ನೇ ಪ್ರತಿಬಿಂಬಿಸುತ್ತದೆ.

ವಿವಾಹದಲ್ಲಿ ಕಾಶೀಯಾತ್ರೆಯ ಪ್ರಕರಣವೊಂದು ಬರುತ್ತದೆ. ಬ್ರಹ್ಮಚಾರಿಯು ಗುರುಕುಲದಲ್ಲಿ ಬ್ರಹ್ಮಚರ್ಯದ ನಿಯಮಗಳನ್ನೆಲ್ಲಾ ಪೂರ್ಣವಾಗಿ ಪಾಲಿಸಿ ಮಾಲೆಯನ್ನು ಧರಿಸಿ, ಉತ್ತರದಿಕ್ಕಿನಲ್ಲಿರುವ, ಜ್ಞಾನಮೂರ್ತಿಯಾದ ಶಿವನ ಕ್ಷೇತ್ರವಾದ ಪವಿತ್ರವಾದ ಕಾಶಿಯತ್ತ ಪ್ರಯಾಣ ಬೆಳೆಸುತ್ತಾನೆ. ವಯಸ್ಸಿನಲ್ಲಿ ಚಿಕ್ಕವನು. ಆದರೆ ಜ್ಞಾನದಲ್ಲಿ ಅಧಿಕನು. ಅಂತಹ ಮಹಾಪುರುಷ ಜೈ ಶಂಕರ್ ಎಂದು ಹೋಗುತ್ತಿರುವಾಗ ಕನ್ಯಾಪಿತೃಗಳು ‘ಜೈ ಶಂಕರ್ ಬದಲು ಜೈ ಪಾರ್ವತೀಶಂಕರ್ ಆಗು’ ಎಂದು ಅವನನ್ನು ಪ್ರಾರ್ಥಿಸಿ ತಮ್ಮ ಮನೆಗೆ ಕರೆದೊಯ್ಯುತ್ತಾರೆ. ‘ನಿನ್ನೊಳಗೆ ಬೆಳಗುತ್ತಿರುವ ಜ್ಯೋತಿಯನ್ನು ಹಾಗೆಯೇ ಧರಿಸಿ ಬೆಳೆಸಬಲ್ಲ ಸುಕ್ಷಿತಳಾದ ಕನ್ಯೆಯೊಬ್ಬಳಿದ್ದಾಳೆ. ಅವಳನ್ನು ಸ್ವೀಕರಿಸಿ ಧನ್ಯೋ ಗೃಹಸ್ಥಾಶ್ರಮಃ ಎನ್ನುವುದನ್ನು ಸಾರ್ಥಕಪಡಿಸಿ’ ಎಂದು ಪೂಜಾದಿಗಳನ್ನು ಮಾಡಿ ಸಾಲಂಕೃತ ಕನ್ಯೆಯನ್ನು ವಿವಾಹ ಮಾಡಿಕೊಡುತ್ತಾರೆ. ಧರ್ಮಸಂತಾನವನ್ನು ಪಡೆಯಿರಿ ಎಂದು ಆಶೀರ್ವದಿಸುತ್ತಾರೆ. ಲೋಕದಲ್ಲಿ ಸತ್ಪ್ರಜೆ ಬೇಕು. ಅದಕ್ಕೆ ಜ್ಞಾನಿಯಾದವನು ಪರಮಾತ್ಮನಲ್ಲಿಯೇ ವಿಹರಿಸುವುದರ ಜೊತೆಗೆ ಪ್ರಕೃತಿಕ್ಷೇತ್ರದಲ್ಲಿಯೂ ಇಳಿದುಬಂದು ತನ್ನ ಧರ್ಮವನ್ನು ಬೆಳೆಸಬೇಕು. “ತಂದೆ ಏನು ತಂದೆ? ಎಂದರೆ ಜ್ಞಾನವನ್ನು ತಂದೆ” ಎಂದು ಹೇಳುವ ಪಿತನಾಗಬೇಕಪ್ಪಾ” ಎಂದು ಶ್ರೀರಂಗಮಹಾಗುರುಗಳು ನುಡಿಯುತ್ತಿದ್ದರು. ಈ ತತ್ವವನ್ನು ತಿಳಿಯಪಡಿಸಲು ಕಾಶೀಯಾತ್ರೆಯ ಒಂದು ತಾತ್ವಿಕವಾದ  ಮತ್ತು ರಸಮಯವಾದ ಸನ್ನಿವೇಶ.

“ಧರ್ಮೇಚ ಅರ್ಥೇಚ ಕಾಮೇಚ ನಾತಿ ಚರಾಮಿ” ಧರ್ಮಾರ್ಥಕಾಮಗಳಲ್ಲಿ ಈಕೆಯನ್ನು ಮೀರಿ ನಡೆಯಬಾರದು ಎಂದು ವರನಿಗೂ, ನನ್ನನ್ನು ಸದಾ ಅನುವರ್ತಿಸುವವಳಾಗು, “ಇಬ್ಬರೂ ಒಂದುಗೂಡಿ ಈ ಜೀವನರಥವನ್ನು ಎಳೆಯೋಣ”  ಎಂದು ವಧುವಿಗೂ ನಡೆಯುವ ಸಂವಾದ, ಹಿರಿಯರ ಆದೇಶಗಳು. ಮೋಕ್ಷವೆಂಬ ಮುಖ್ಯ ಪುರುಷಾರ್ಥ ಸಾಧನೆಗಾಗಿ ತಕ್ಕುದಾದ ಶುದ್ಧ ಮನೋಧರ್ಮವು ಓತಪ್ರೋತವಾಗಿ ವಿವಾಹದಲ್ಲಿ ತುಂಬಿರುತ್ತದೆ. ಸಾಲಂಕೃತ ಕನ್ಯಾದಾನದ ಸಂದರ್ಭದಲ್ಲಿ ಪ್ರಸನ್ನವಾದ ಮನಸ್ಸಿನಿಂದ ಪುರೋಹಿತರು ಸಭಾಸದರ ಸಮಕ್ಷಮದಲ್ಲಿ “ ಸುಲಗ್ನಾ ಸಾವಧಾನಾಃ ಸುಮಹೂರ್ತಾಃ ಸಾವಧಾನಾಃ” ಎಂದು ಘೋಷಣೆ ಮಾಡುತ್ತಾರೆ. ನಿಮ್ಮ ಇಂದ್ರಿಯಮನೋಬುದ್ಧಿಗಳೆಲ್ಲವೂ ಈ ಸುಮುಹೂರ್ತದಲ್ಲಿ ಸಾವಧಾನವಾಗಿದ್ದು ವಧೂವರರನ್ನು ಮಂಗಳಮಯವಾದ ಮನಸ್ಸಿನಿಂದ ನೋಡಿರಿ ಎಂದು ಪ್ರಾರ್ಥಿಸುತ್ತಾರೆ. ಆದರೆ ಇಂದಿನ ದುರ್ದಶೆಯನ್ನು ನೋಡಿದಾಗ ಖೇದವಾಗುತ್ತದೆ. ಗಲಾಟೆಗಳು, ಅಸಂಬದ್ಧ ವಿಷಯಗಳನ್ನು ಕುರಿತು ವಾದವಿವಾದಗಳು, ಕೇವಲವಾದ ಲೌಕಿಕಭಾವಗಳು ವಿವಾಹದ ಉದ್ಧೇಶವನ್ನೇ ವ್ಯರ್ಥಗೊಳಿಸುತ್ತಿವೆ. ಈ ವಿವಾಹ ಕ್ರಮವನ್ನು ತಂದ ಕಾಲದಲ್ಲಿದ್ದ ಮಂತ್ರಗಳು, ಮಂಗಳ ವಾದ್ಯಗಳು, ದ್ರವ್ಯಗಳು, ದೇವಪ್ರೀತಿಗಾಗಿ ನಡೆಸುತ್ತಿದ್ದ ಉಪಚಾರಗಳು-ಇಂದು ವಿಸ್ಮೃತವಾಗಿ ಜೀವಚ್ಛವದಂತಾಗಿರುವುದು ಶೋಚನೀಯವಾಗಿದೆ.

ಹಿಂದಿನ ಮತ್ತು ಮುಂದಿನ ಹತ್ತು ತಲೆಮಾರುಗಳು ಉದ್ಧಾರವಾಗಬೇಕೆಂಬ, ಶಾಶ್ವತ ಬ್ರಹ್ಮಲೋಕ ಸಿದ್ಧಿಸಬೇಕೆಂಬ ಸಂಕಲ್ಪವು ಕನ್ಯಾದಾನದ ಹಿಂಬದಿಯಲ್ಲಿರುತ್ತದೆ. ಹೀಗೆ ದಾಟಿಸಬೇಕಾದರೆ ಅಳಿಯನಾದವನು ಎಷ್ಟು ಸಮರ್ಥನಾಗಿರಬೇಕು. ಅಂತಹ ಮಹಾಪುರುಷನನ್ನು ಅಚ್ಯುತ ಎಂದು ಪೂಜಿಸುವುದು ಎಂತಹ ಹೃದಯಂಗಮವಾದ ದೃಶ್ಯವಾಗಿದೆ. (ಮುಂದುವರೆಯುತ್ತದೆ)  


ಸೂಚನೆ: 25/06/2019 ರಂದು ಈ ಲೇಖನ ಪ್ರಜಾ ವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Sunday, June 23, 2019

ಪರಮಾತ್ಮನೊಡನೆ ಸೇರುವೆಯೇ “ಯೋಗ” (Paramaathmanodane seruveye yoga)

ಲೇಖಕರು: ಸುಬ್ರಹ್ಮಣ್ಯ ಸೋಮಯಾಜಿ


ಒಂದು ಸುಭಿಕ್ಷವಾದ ರಾಜ್ಯದಲ್ಲಿ ಜನಾನುರಾಗಿಯಾದ ರಾಜನಿದ್ದ, ಒಮ್ಮೆ ದುರದೃಷ್ಟವಶಾತ್ ಆ ರಾಜ್ಯದ ಮೇಲೆ ಶತ್ರುಗಳ ಆಕ್ರಮಣವಾಯಿತು. ಶತ್ರುಗಳ ಕೈ ಮೇಲಾಯಿತು. ಆಗ ಮಂತ್ರಿಗಳೆಲ್ಲ ಸೇರಿ ಹೇಗಾದರೂ ಮಹಾರಾಜನನ್ನು ಕಾಪಾಡಬೇಕು. ಅವನು ಉಳಿದರೆ ಮುಂದೆ ಎಂದಾದರೂ ನಮ್ಮ ರಾಜ್ಯ ಸ್ವತಂತ್ರವಾದೀತು ಎಂದು ನಿಶ್ಚಯಿಸಿ ರಾಜನನ್ನು ತಲೆಮರೆಸಿಕೊಳ್ಳಲು ಪ್ರಾರ್ಥಿಸಿದರು. ಮೊದಲಿಗೆ ಒಪ್ಪದಿದ್ದರೂ ಮಂತ್ರಿಗಳ ಒತ್ತಾಯಕ್ಕೆ ಮಣಿದು ರಾಜ್ಯದ ಭವಿಷ್ಯದ ದೃಷ್ಟಿಯಿಂದ ರಾಜ-ರಾಣಿಯರು ಕಾಡಿನಲ್ಲಿ ತಲೆ ಮರೆಸಿಕೊಂಡರು. ಅನೇಕ ದಿನಗಳು ಕಾಡಲ್ಲಿ ಕಳೆಯಲಾಗದೆ ರಾಣಿ, ನಂತರ  ರಾಜ ಇಬ್ಬರೂ  ಸ್ವರ್ಗಸ್ಥರಾದರು. ಆದರೆ ಅವರ ಪುಟ್ಟ ಮಗುವೊಂದು ಮಾತ್ರವೇ ಉಳಿಯಿತು. ಕಾಡಿನಲ್ಲಿ ಮಗುವಿನ ಅಳುವನ್ನು ಕೇಳಿ ಬೇಡರ ಪರಿವಾರವೊಂದು ಕರುಣೆಯಿಂದ ಅದನ್ನು  ತಮ್ಮ ಮನೆಗೆ ಕರೆದೊಯ್ದರು. ತಮ್ಮ ಮಗುವಿನಂತೆಯೇ ಬೆಳೆಸಿದರು. ದೊಡ್ಡವನಾದ ಮೇಲೆ ಆ ಹುಡುಗ ಆ ಬೇಟೆಗಾರ ಹುಡುಗರ ಮುಖಂಡನಾಗಿ ಬೇಟೆಯಾಡುತ್ತಿರುವಾಗ ಅಲ್ಲೊಬ್ಬ ಸಾಧುಗಳು ಇವನನ್ನು ನೋಡಿದರು. ಇವನ ಲಕ್ಷಣಗಳನ್ನೆಲ್ಲ ನೋಡಿ ಅವನಿಗೆ ಹೇಳಿದರು -ನೀನು ಎಲ್ಲರಂತಲ್ಲ. ಇಂದು ಮನೆಗೆ ಹೋಗಿ ನಿನ್ನ ಶರೀರದ ಭಾಗಗಳನ್ನೆಲ್ಲ ಸೂಕ್ಷ್ಮವಾಗಿ ಕನ್ನಡಿಯಲ್ಲಿ ನೋಡು. ನಿನ್ನ ವಕ್ಷಸ್ಥಳ, ಬಾಹುಗಳು, ಮೈಮಾಟ ಎಲ್ಲವೂ ಇತರರಂತೆಯೇ ಇದೆಯೇ ಎಂದು ಗಮನಿಸು ಎಂದರು. 

ಹುಡುಗನಿಗೆ ಕುತೂಹಲ. ಅವರೆಂದಂತೆಯೇ ತನ್ನನ್ನು ತಾನು ನೋಡಿಕೊಂಡನು. ಹೌದು. ತನ್ನ ಜೊತೆಯ ಇತರ ಹುಡುಗರಿಗೂ ತನಗೂ ಬಹಳ ವ್ಯತ್ಯಾಸವಿದೆ. ತನ್ನ ವ್ಯಕ್ತಿತ್ವ, ತೇಜಸ್ಸು ಎಲ್ಲವೂ ಅವರಿಗಿಂತ ವಿಶೇಷವಾಗಿದ್ದುದು ಗಮನಕ್ಕೆ ಬಂತು. ಮತ್ತೊಮ್ಮೆ ಆ ಸಾಧುಗಳನ್ನು ಭೇಟಿಯಾದ. ತಾವೆಂದಂತೆ ನನ್ನಲ್ಲಿ ವಿಶೇಷವೇನೋ ಇದೆ. ದಯಮಾಡಿ ನಾನು ಯಾರೆಂದು ತಿಳಿಸಿ ಎಂದು ಪ್ರಾರ್ಥಿಸಿದ. ತ್ರಿಕಾಲಜ್ಞರಾದ ಸಾಧುಗಳು ಅವನ ವೃತ್ತಾಂತವೆಲ್ಲವನ್ನೂ ವಿವರವಾಗಿ ತಿಳಿಸಿದರು. ಮತ್ತು ಅವನಿಗೆ ಅವನ ಕರ್ತವ್ಯದ ಅರಿವನ್ನು ಮೂಡಿಸಿದರು. ಅವನನ್ನು ಸೈನ್ಯವನ್ನು ಕಟ್ಟಲು ಪ್ರೇರೇಪಿಸಿದರು. ರಾಜಕುಮಾರನು ಅಂದಿನಿಂದ ತನ್ನ ಜೀವನದ ದಾರಿಯನ್ನು ಬದಲಿಸಿದ. ಅತ್ಯಂತ ಪರಿಶ್ರಮದಿಂದ ಜನಗಳನ್ನು ಸಂಘಟಿಸಿದ. ಎಲ್ಲ ಶಸ್ತ್ರ ವಿದ್ಯೆಗಳನ್ನು ಕರಗತ ಮಾಡಿಕೊಂಡ. ಒಂದು ಬಲಿಷ್ಠ ಸೈನ್ಯವನ್ನು ಕಟ್ಟಿ  ಹೋರಾಡಿ ತನ್ನ ಪೂರ್ವಿಕರು ಕಳೆದುಕೊಂಡಿದ್ದ ರಾಜ್ಯವನ್ನು ಮತ್ತೆ ಪಡೆದುಕೊಂಡು ರಾಜನಾಗಿ ಬೆಳಗಿದ.

ಇದು ನಮ್ಮೆಲ್ಲರ ಕಥೆಯಾಗಿದೆ. ನಮ್ಮೊಳಗೇ ಬೆಳಗುತ್ತಿರುವ ಆತ್ಮರಾಜ್ಯ ಒಂದಿದೆ. ಅದೇ ಭಗವಂತನ ಮಡಿಲು. ಅಲ್ಲಿಂದ ನಮ್ಮ ಮನಸ್ಸುಗಳು ವಿಯೋಗವಾಗಿ ಕಾಡುಪಾಲಾಗಿದ್ದೇವೆ. ನಮ್ಮ ಇಂದ್ರಿಯ ಜೀವನದ ವೇಗದಲ್ಲಿ ನಮ್ಮ ಸ್ವಸ್ವರೂಪವನ್ನೇ ಸಂಪೂರ್ಣವಾಗಿ ಮರೆತಿದ್ದೇವೆ. ಜೀವನದ ಸಣ್ಣ ಸುಖಗಳಿಗೆ ಮಾರುಹೋಗಿ ಆನಂದದ ಒಳಬದುಕನ್ನು ಕಳೆದುಕೊಂಡಿದ್ದೇವೆ. ನಮ್ಮ ಸ್ವರೂಪದಿಂದ  ನಮಗೆ ವಿಯೋಗ ಉಂಟಾಗಿದೆ, ಆ ರಾಜಕುಮಾರನಿಗೆ ಆದಂತೆ. ಮತ್ತೆ ನಮ್ಮ ನೈಜ ಸ್ವರೂಪವನ್ನು ನಾವು ನೆನಪು ಮಾಡಿಕೊಳ್ಳಬೇಕೆಂದೇ ನಮ್ಮ ಮಹರ್ಷಿಗಳು ಯೋಗವನ್ನು ಉಪಾಯವಾಗಿ  ತಂದುಕೊಟ್ಟರು.“ಜೀವ-ದೇವರ ಸಂಯೋಗವೇ ಯೋಗ” ಎಂಬ ಶ್ರೀರಂಗ ಮಹಾಗುರುಗಳ ವಾಣಿ ಇಲ್ಲಿ ಸ್ಮರಣೀಯ. ಯೋಗವೆಂದರೆ ನಿಜವಾಗಿ ಪರಮಾತ್ಮನಲ್ಲಿ ಒಂದಾಗುವುದೇ ಆಗಿದೆ. ಆ ಸೇರುವೆಯ ಸಾಧನ ಮಾರ್ಗಕ್ಕೂ ಯೋಗವೆಂದೇ ಹೆಸರು. ಅದರಿಂದ  ನಮ್ಮ ಸ್ವರೂಪದಲ್ಲಿ “ಯೋಗ” ಉಂಟಾಗಿ ಆನಂದಿಸುವುದೇ ಯೋಗದ ಪರಮಗುರಿ. ನಮ್ಮೆಲ್ಲರ ಜೀವನದಲ್ಲೂ ಅಂತಹ ಯೋಗವನ್ನು ಹೊಂದುವಂತಾಗಲಿ. 


ಸೂಚನೆ:  21/06/2019 ರಂದು ಈ ಲೇಖನ ವಿಜಯವಾಣಿ ಮನೋಲ್ಲಾಸ ಅಂಕಣದಲ್ಲಿ ಪ್ರಕಟವಾಗಿದೆ.

ಜ್ಞಾನ ಸಂತಾನಕ್ಕಾಗಿ ವಿವಾಹ ಸಂಸ್ಕಾರ.(Jnaana santhaanakkagi vivaha samskara)

ಲೇಖಕರು: ತಾರೋಡಿ ಸುರೇಶ



ವಿವಾಹ ಸಂಸ್ಕಾರದ ವಿವಿಧ ಹೆಸರುಗಳ ವಿವರಗಳನ್ನು ನೋಡುತ್ತಿದ್ದೆವು. ‘ನಿನ್ನ ಹೃದಯ ನನ್ನದಾಗಲಿ, ನನ್ನ ಹೃದಯ ನಿನ್ನದಾಗಲೀ’ ಎನ್ನುವ ಸಂಕಲ್ಪದಿಂದ ವಿಶಿಷ್ಟವಾಗಿ ಕೈಹಿಡಿಯುವ ಕ್ರಮವಿದಾಗಿರುವುದರಿಂದ ಪಾಣಿಗ್ರಹಣವೆಂಬ ಹೆಸರು. ವರನು ವಧುವನ್ನು ತನ್ನ ಬಳಿಗೆ ಕರೆದುಕೊಳ್ಳುವಾಗ ಸಂಯಮದಿಂದ ಕೂಡಿದ್ದು, ಧರ್ಮರೂಪವಾದ ಒಂದು ಕಟ್ಟಿಗೆ ಒಳಪಡುವಂತಹ ದಿವ್ಯಭಾವವನ್ನು ಹೊಂದುವುದಕ್ಕೆ ಉಪಯಮ ಎಂದು ಹೆಸರು ಪಶುಪ್ರಾಣಿಗಳಲ್ಲಿ ವಿಶೇಷ ಸಂಕಲ್ಪವೇನೂ ಇರುವುದಿಲ್ಲ. ಅವು ಇಂದ್ರಿಯ ಪ್ರೇರಣೆಗೆ ಅನುಗುಣವಾಗಿ ಸೇರುತ್ತವೆ. ಮನುಷ್ಯನಲ್ಲಿಯೂ ‘ವಯಸ್ಸಾಯಿತು, ಮದುವೆ ಮಾಡಿಬಿಡಿ’ ಎನ್ನುವ ಧೋರಣೆಯಿದ್ದಲ್ಲಿ ಅದು ಪ್ರಾಣಿಗಳ ಜೀವನವೇ ಆಯಿತು. ಆದರೆ ಜ್ಞಾನಿಗಳು ಇನ್ನೂ ಕೆಲವು ಪಾತ್ರತೆಯನ್ನು ಗಮನಿಸಿದ್ದಾರೆ. ಅಂತಹ ಪಾತ್ರತೆ ಇದ್ದಲ್ಲಿ ವಿವಾಹವು ಸಂಸ್ಕಾರರೂಪದಲ್ಲಿ ನಡೆದು ಶುದ್ಧಿಯನ್ನು ಉಂಟುಮಾಡುತ್ತದೆ. ವರನು ಗುರುಕುಲದಲ್ಲಿ ಬ್ರಹ್ಮಚಾರಿಯಾಗಿ ಅಧ್ಯಯನ ನಡೆಸಿ ಸ್ನಾತಕನಾಗುತ್ತಾನೆ. ಪ್ರಜಾತಂತುವನ್ನು ಕಡಿಯಬೇಡ ಎಂದು ಗುರುವು ಅದೇಶನೀಡಿ ಗೃಹಸ್ಥಾಶ್ರಮ ಸ್ವೀಕರಿಸಲು ಅನುಮತಿಸುತ್ತಾನೆ. ಸೂರ್ಯನಿಂದ ಬೆಳಕನ್ನು ಪಡೆಯುವಂತೆ ಗುರುವಿನಿಂದ ಜ್ಞಾನವನ್ನು ಪಡೆದಿರುವ ಬ್ರಹ್ಮಚಾರಿಯು, ಧರ್ಮಸಂತಾನವನ್ನು ಪಡೆಯಲು ವಿವಾಹ ಮಾಡಿಕೊಳ್ಳುತ್ತಾನೆ. ಗುರು ಕೊಟ್ಟ ಶಿಕ್ಷಣದಂತೆ  ಜ್ಞಾನಿಯಾಗಿ, ಆ ಜ್ಞಾನನೇತ್ರದಿಂದ ಜೀವನವನ್ನು ನಡೆಸಬಲ್ಲ ಯೋಗ್ಯತೆಯನ್ನು ಹೊಂದಿರುವವನು ಯುಕ್ತವಯಸ್ಸಿನಲ್ಲಿ ವಿವಾಹಿತನಾಗಬೇಕು. “ ವಿದ್ಯಾಂಚ ವಿತ್ತಂಚ ವಪುಃ ವಯಶ್ಚ” ಎಂದು ಸೂಚಿಸುವಾಗ ವಯಸ್ಸನ್ನು ಕೊನೆಯಲ್ಲಿ ಹೇಳಿದ್ದಾರೆ. ಅವನು ಪಡೆದಿರುವ ವಿದ್ಯೆಯಾದರೂ ವಿದ್ ಜ್ಞಾನೇ ಎನ್ನುವಂತೆ ಪರಮಾತ್ಮಸಾಕ್ಷಾತ್ಕಾರವನ್ನು ಹೊಂದಿಸುವಂತಹದ್ದು. ಅದು ಕೇವಲ ಎಂಎ ಪಿಹೆಚ್‍ಡಿ ತರಹದ್ದಲ್ಲ.

ವಧೂವರರ ನಡುವೆ ನಡೆಯುವ ಸಂಭಾಷಣೆಯೂ ಇದಕ್ಕೆ ಸಾಕ್ಷಿಯಾಗಿದೆ.ವಧುವು ವರನನ್ನು ಕುರಿತು ”ತಪಸ್ಸಿನಿಂದ ಜ್ಞಾನಿಯಾಗಿರುವ ನಿನ್ನನ್ನು ನಾನು ನೋಡುತ್ತಿದ್ದೇನೆ.ನಿನ್ನಂತಹ ಜ್ಞಾನಿಯಾದ ಸತ್ಪುತ್ರನನ್ನು ನಾನು ಆಶಿಸುತ್ತೇನೆ. ಆ ದೃಷ್ಟಿಯಿಂದ ನೀನು ನನ್ನನ್ನು ಸೇರು” ಎಂದರೆ ವರನೂ ಕೂಡ “ಜ್ಞಾನಿಯಾಗಿರುವ ನಿನ್ನನ್ನು ನಾನೂ ನೋಡುತ್ತಿದ್ದೇನೆ” ಎಂದು ಪರಮಾತ್ಮಸ್ಮರಣೆಯಿಂದ ಹೇಳುತ್ತಾನೆ. ಜ್ಞಾನಿಗಳಾದ ವಧೂವರರು ಧರ್ಮಸಂತಾನವನ್ನು ಬಯಿಸಿ, ಒಂದು ಧರ್ಮದ ಕಟ್ಟುಪಾಡಿಗೆ ಒಳಪಟ್ಟು ಗೃಹಸ್ಥಜೀವನಕ್ಕೆ ಹೆಜ್ಜೆಯಿಡುವ  ಇಂತಹ ದೃಶ್ಯಗಳು ಅದೆಷ್ಟು ಮನೋಹರವಾಗಿವೆ.!  ಅಲ್ಲಿ ವಧೂವರರ, ಸಮಾರಂಭದಲ್ಲಿ ಭಾಗವಹಿಸಿರುವ ಬಂಧುಬಾಂಧವರ, ಇಷ್ಟರ ಎಲ್ಲರ ಮನಸ್ಸನ್ನೂ ಇಂತಹ ಪರಮಾತ್ಮ ಸ್ಮರಣೆಯಲ್ಲಿ ಮುಳುಗಿಸಿ ಶುದ್ಧಗೊಳಿಸುವ ಅದ್ಭುತವಾದ ಯೋಜನೆಯನ್ನು ಋಷಿಗಳು ಹೆಣೆದಿದ್ದಾರೆ. ಹಾಗಿದ್ದಲ್ಲಿ ತಾನೇ ಜೀವನವು ಪಶುಸ್ತರದಲ್ಲಿಯೇ ನಿಲ್ಲದೆ ಮಾನವನ ಸಹಜಯೋಗ್ಯತೆಯಾದ ಯೋಗ-ಭೋಗ ಎರಡನ್ನೂ ಪಡೆದು ಪೂರ್ಣಜೀವನವನ್ನು ನಡೆಸಿದಂತಾಗುತ್ತದೆ.

“ಜಾಮಾತಾ ವಿಷ್ಣುವತ್ಪೂಜ್ಯಃ”  ಎಂದು ಅಳಿಯನನ್ನು ಪೂಜಿಸುವ ಪದ್ಧತಿಯಿದೆ. ಶ್ರೀಧರಸ್ವರೂಪ -ಪರಮೇಶ್ವರ ಸ್ವರೂಪ ಎಂಬುದಾಗಿ ಪೂಜೆಯನ್ನು ಕೈಗೊಳ್ಳಬೇಕಾದಲ್ಲಿ ಎಂತಹ ಯೋಗ್ಯತೆ ಅಳಿಯನಾಗುವವನಲ್ಲಿ ಇರಬೇಕು. ಅದು ಕಾಲಕ್ರಮದಲ್ಲಿ ‘ಜಾಮಾತಾ ದಶಮೋಗ್ರಹಃ’ ಎಂದಾಗಿಬಿಟ್ಟಿದೆ. ಅನ್ಯ ಒಂಬತ್ತು ಗ್ರಹಗಳ ಗತಾಗತಿಯನ್ನು ನಿರ್ಣಯಿಸಿ ಹೇಳಬಹುದು. ಆದರೆ ಈ ಅಳಿಯ ಎನ್ನುವಂತಹ ಹತ್ತನೆಯ ಗ್ರಹವು ಯಾವಾಗ ಹೇಗೆ ವರ್ತಿಸುತ್ತದೆ ಎನ್ನುವುದು ಊಹಾತೀತ. ಇದು ಎಲ್ಲರ ಅನುಭವದಲ್ಲಿರುವಂತಹದ್ದೇ. ಋಷಿಸಂಸ್ಕೃತಿಯ ಅಪಮೌಲ್ಯವನ್ನು ಇದು ಎತ್ತಿ ತೋರಿಸುತ್ತದೆ.

ಶ್ರೀರಂಗಮಹಾಗುರುಗಳು  ‘ಅಳಿಯ ಎಂದರೆ ಅಳಿಯದೇ ಇರುವವನು, ಅವನು ಅಚ್ಯುತ ಎನ್ನುವ ಅರ್ಥದಲ್ಲಿ ಬಂದಿದೆಯಪ್ಪಾ’ ಎಂದು ವಿವರಿಸಿದ್ದರು. (ಮುಂದುವರೆಯುತ್ತದೆ)     


ಸೂಚನೆ: 22/06/2019 ರಂದು ಈ ಲೇಖನ ಪ್ರಜಾ ವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Thursday, June 20, 2019

ಹೂವಿನ ಮಾಲೆಯಿಂದ ನಿರ್ಣಯ (Hoovina maaleyinda nirnaya)

ಲೇಖಕರು: ತಾರೋಡಿ ಸುರೇಶ


ಸಭೆಯಲ್ಲಿ ಗಂಭೀರವಾದ ಮೌನ ಆವರಿಸಿದೆ. ವಿಶೇಷ ಕುತೂಹಲದಿಂದ ಸಭಾಸದರೆಲ್ಲ ಪ್ರತೀಕ್ಷೆಯಲ್ಲಿದ್ದಾರೆ. ಸಂಸ್ಕೃತಿಯ ಬಹುಮುಖ್ಯ ವಿಷಯವೊಂದನ್ನು ಕುರಿತು ಚರ್ಚೆ ನಡೆಯಲಿದೆ. ಸಂದರ್ಭದ ಗಹನತೆಯನ್ನು ಬಲ್ಲ ಪಂಡಿತರು, ಪಾಮರರು ಹೀಗೆ ಎಲ್ಲ ಬಗೆಯವರೂ ಸಭೆಯಲ್ಲಿ ಉಪಸ್ಥಿತರಿದ್ದರು. ಚರ್ಚೆಯಲ್ಲಿ ಜ್ಞಾನದ ಪಾರಮ್ಯವನ್ನು ಪ್ರತಿಪಾದಿಸುವವರು ಶ್ರೀಶಂಕರರು.  ಶಾಂತಗಂಭೀರವಾದ ಮುಖ. ಸರ್ವರನ್ನು ಆಕರ್ಷಿಸುವ, ಸಹಜವಾಗಿಯೇ  ದಿವ್ಯತೆಯ ಅನುಭೂತಿಯನ್ನುಂಟುಮಾಡುವ ವ್ಯಕ್ತಿತ್ವ. ಹಾಗೆಯೇ ಬೌದ್ಧಿಕ ಪ್ರಾಮಾಣಿಕತೆಯುಳ್ಳ ಸದ್ಗೃಹಸ್ಥರಾದ ಮಂಡನಮಿಶ್ರರು ಕರ್ಮಕಾಂಡದ ಶ್ರೇಷ್ಠತೆಯನ್ನು ಪ್ರತಿಪಾದಿಸಿ, ಶ್ರೀಶಂಕರರ ವಾದವನ್ನು ಖಂಡಿಸುವವರು. ಅವರು ಪ್ರಕಾಂಡ ಪಂಡಿತರೂ ಕೂಡ.

ಇಂತಹವರ ಚರ್ಚೆಗೆ ತೀರ್ಪುಗಾರರಾಗಲು ಯಾರು ಸಮರ್ಥರು ಎನ್ನುವುದು ಬಹು ದೊಡ್ಡ ವಿಷಯವೇ. ಶ್ರೀಮಂಡನಮಿಶ್ರರ ಧರ್ಮಪತ್ನಿಯಾದ ಉಭಯಭಾರತೀಯೇ ನಿರ್ಣಾಯಕಳಾಗಲಿ ಎನ್ನುವ ಸಲಹೆ ಶ್ರೀ ಶಂಕರರ ಕಡೆಯಿಂದಲೇ ಬಂದಿತು, ಎಲ್ಲರೂ ಅದನ್ನು ಒಪ್ಪಿದರು. ಚರ್ಚೆ ಆರಂಭಗೊಂಡಿತು.ಒಬ್ಬರ ಮಂಡನೆ. ಇನ್ನೊಬ್ಬರ ಖಂಡನೆ, ಪುನಃ ಪ್ರತಿಮಂಡನೆ ಹೀಗೆ ವಾದವು ಸಾಗುತ್ತಿತ್ತು.  ಹೀಗೆ ಮಂಡನೆ-ಪ್ರತಿಮಂಡನೆಗಳು ಕೊನೆಯಿಲ್ಲದೆ ಸಾಗಿತಾದರೂ ಯಾವುದು ಶ್ರೇಷ್ಠ ಎನ್ನುವುದು ತೀರ್ಮಾನವಾಗಲೇ ಇಲ್ಲ.

ಭಾರತೀದೇವಿಯ ನಿರ್ಣಯದ ವಿಧಾನವು ವಿಚಿತ್ರವಾಗಿತ್ತು.ಆಕೆಯು ಇಬ್ಬರ ಕೊರಳಿಗೂ ಒಂದೊಂದು ಹೂವಿನ ಮಾಲೆಯನ್ನು ಹಾಕಿದಳು. ಯಾರ ಹೂಮಾಲೆ ಮೊದಲು ಬಾಡುವುದೋ ಅವರು ಸೋಲೊಪ್ಪಿಕೊಳ್ಳಬೇಕು ಎಂದು ತನ್ನ ತೀರ್ಮಾನವನ್ನು ಘೋಷಿಸಿದಳು. ನಿರ್ಣಯದ ಈ ಕ್ರಮ ಹೇಗೆ ಸರಿಯಾದೀತು?. ಇಂಥಹ ವಿಚಿತ್ರವುಂಟೆ?, ಪುಷ್ಪಮಾಲೆಯು ಬಾಡುವುದಕ್ಕೂ ವಾದಕ್ಕೂ ಏನು ಸಂಬಂಧ?.ಎಂಬ ಪ್ರಶ್ನೆಗಳು ಸಹಜ. ಆದರೂ ಈ ನಿರ್ಣಯವು ಬಹು ಜಾಣ್ಮೆಯಿಂದ ಕೂಡಿದೆ. ಶ್ರೀರಂಗಮಹಾಗುರುಗಳು ಇದರ ಗುಟ್ಟನ್ನು ಹೀಗೆ ಬಿಚ್ಚಿಟ್ಟಿದ್ದರು.  ಕೋಪ-ತಾಪಗಳು ಏರಿದಾಗ ಮೈ ಬಿಸಿಯಾಗುತ್ತದೆ. ಮಾಲೆಯನ್ನು ಧರಿಸಿದವನ ಮೈ ಬಿಸಿಯಾದರೆ ಪುಷ್ಪವು ಬಾಡುತ್ತದೆಯಷ್ಟೆ. ಆದರೆ ಶಾಂತವಾದ ನೆಲೆಯಲ್ಲಿ ನಿಂತು ಶಾಂತವಾಗಿರುವ ಮನಸ್ಸಿನಿಂದ ಕೂಡಿದ್ದರೆ ಮೈಯೂ ತಂಪಾಗಿಯೇ ಇರುತ್ತದೆ. ಕೇವಲ ಶಾಸ್ತ್ರಪಾಂಡಿತ್ಯವನ್ನಿಟ್ಟುಕೊಂಡು ಗ್ರಂಥಗಳ ಬಲದ ಮೇಲೆ ವಾದಿಸುತ್ತಿದ್ದ ಮಂಡನಮಿಶ್ರರಿಗೆ ನೆತ್ತಿಗೆ ಪಿತ್ತ ಏರಿತು. ಮೈ ಬಿಸಿಯಾಯಿತು. ಹೂಮಾಲೆ ಬಾಡಿತು. ಕಾರಣ ಅವರಿಗೆ ಶಾಂತವಾದ ನೆಲೆ ಸಿಕ್ಕಿರಲಿಲ್ಲ. ವಿಷಯದ ನೆಲೆ ಸಿಕ್ಕದೆ ಉದ್ರೇಕ, ಉದ್ವೇಗಗಳಿಂದ ವಾದ ಮಾಡಿದರೆ ಬಾಡದೇ ಏನಾದೀತು?. ಉದಾಹರಣೆಗೆ ಜ್ವರ ಬಂದವನಿಗೆ ಮಾಲೆ ಹಾಕಿದರೆ ಬಾಡದಿರುತ್ತದೆಯೇ?. 

ತತ್ವದ ನೆಲೆ ಸಿಕ್ಕದವನು ಚರ್ಚೆಯಲ್ಲಿ ವಿಷಯಕ್ಕೆ ದೂರನಾಗುತ್ತಾನೆ. ಆದರೆ ತತ್ವಭೂಮಿಕೆಗೆ ಹೋಗಿ ತತ್ವದರ್ಶಿಯಾದಾಗ ಪ್ರಸನ್ನನಾಗಿರುತ್ತಾನೆ. ಹಾಗೆ ತತ್ವದರ್ಶಿಯಾಗಿದ್ದ ಶಂಕರರು ಕೇವಲ ಸತ್ಯಪ್ರತಿಪಾದನೆಯ ಗುರಿಯಿದ್ದು ಶಾಂತಮಾನಸರಾಗಿದ್ದುದರಿಂದ ಧರಿಸಿದ್ದ ಮಾಲೆ ಬಾಡಲಿಲ್ಲ. ಕರ್ಮವು ವಿಜ್ಞಾನವರಿತು ಆಚರಿಸಿದಾಗ ಧರ್ಮದಲ್ಲಿ ನಿಲ್ಲಿಸಿ ತನ್ಮೂಲಕ ಜ್ಞಾನದಲ್ಲಿ ಅಂದರೆ ಪರಮಾತ್ಮನಲ್ಲಿ ನೆಲೆಗೊಳಿಸುತ್ತದೆ. “ಸರ್ವಂ ಕರ್ಮಾಖಿಲಂ ಪಾರ್ಥ ಜ್ಞಾನೇ ಪರಿಸಮಾಪ್ಯತೇ” ಅಂತಹ ವಿಶ್ವಮೂಲದಲ್ಲಿ ಬೆಳಗುತ್ತಿರುವ ಜ್ಞಾನಕ್ಕಾಗಿಯೇ ಕರ್ಮ ಎನ್ನುವುದೂ ಸ್ಥಾಪಿತವಾಯಿತು. ತಮ್ಮ ಮಾತಿನಂತೆ ಮಂಡನಮಿಶ್ರರು ಶಂಕರರ ಶಿಷ್ಯತ್ವವನ್ನು ಸ್ವೀಕರಿಸುತ್ತಾರೆ. ಆದ್ದರಿಂದ  ವಾದನಿರ್ಣಯದ ವಿಧಾನ ಚಮತ್ಕಾರವಾಗಿ ಕಂಡರೂ ತತ್ವನಿರ್ಣಯದಲ್ಲಿ ನಿಲ್ಲಿಸಿತು ಎಂಬುದು ಗಮನಾರ್ಹ.


ಸೂಚನೆ:  20/06/2019 ರಂದು ಈ ಲೇಖನ ವಿಜಯವಾಣಿ ಮನೋಲ್ಲಾಸ ಅಂಕಣದಲ್ಲಿ ಪ್ರಕಟವಾಗಿದೆ.

Seemanta – an Elevating Rit

Article in Kannada by:  Tharodi Suresh
English Rendering by: Smt Padmini Srinivasan


Seemanta is a ritual performed subsequent to Pumsavanam. It is a Samskara performed exclusively for a woman pregnant for the first time. It is executed once and not repeated over successive pregnancies. ‘Seemantonnayana’ is its full form. In hair dressing, a central line over the head
demarcates and bifurcates the hair. The limit or boundary of this hair-parting is called Seemanta. An important aspect of this procedure is extending and combing the Seemanta (central bifurcating line of hair) upwards which is called Unnayana.

It is desired that the child be intelligent, honourable, wise and possess a radiant personality. Obviously when a child possesses these special qualities, it needs protection from evil forces which try to steal them. Sriranga Mahaguru used to say - “In addition to a beautiful body, the child should also possess complete Jnaana (knowledge of Supreme). Atmachaitanya (power of the Atman), Atmaguna (good qualities as desired by the Atman) and Dehapushti (a healthy body) will all follow”. We should not forget that rituals as per Maharshis Vijnaana (their vision of the expansion of the root Jnaana) encompass the three domains viz. Atmadharma (principles of the Atman), Manodharma (mental makeup) and Dehadharma (nature of the body) and ensures that they all blossom together. Finally as per the saying - “Sarvam Karmaakhilam Paartha Jnaane Parisamaapyate” all actions should integrate with the Supreme Eshwara. All ordained Mantras (hymns), Tantras (rituals) and Dravyas (materials) make the ritual complete in all aspects. On identification and confirmation of pregnancy, Seemanta is conducted in the third or fourth month, during Shuklapaksha (bright fortnight of the
moon), on a Purusha nakshatra day (as per Stree-Purusha classification of stars, a star with Purusha dharma favourable for Unnayana). It should be performed during daytime. Bull’s skin, bunch of fruits from a cluster fig tree (Atthi), porcupine quills with three white dots defining three divisions (Shalali)
should all be kept ready. Porcupine quills should never be kept inside the house.

It is believed to create strife. In a like manner three Darbha grasses should be plaited together. Three such knitted strands should be kept ready. On the Seemantam day, after holy bath and adorning of new clothes sanctification (Punyaaha) and recitation of the purpose (Sankalpa) are done. Kankanabandha (tying yellow thread over the wrist) follows next. The family’s personally preferred deity (Ishtadevata) is worshipped and a Homa (oblation made into fire) is performed with the chant of eight specific Mantras. These propitiate Dhaata, Raaka, Naejamesha, Indra, Agni and Prajaapati. It is very essential to invoke these deities.

Husband and wife sit facing east and west respectively. Keeping a twig with bunch of figs, Shalali and knitted Darbha strands together, the husband combs the hair, beginning with the top of the forehead right up to the end of the line parting. Unnayana is done thrice. This Unnayana points upwards and signifies uplifting.

We notice combinations of three in this ritual. This Karma extends over all three worlds. It should culminate in the root of all creation, viz. Pranava. Hence the Mantra ”Om Bhoohu Bhuvaha Suvaha Om” is chanted. Beginning with Pranava, three Lokas which are its expansion are the middle and the
culminating point is Pranava again. This does not stop in the material world or the domain of the sensory organs.

The combination of three items is such that each removes the blemishes (Doshas) of the other, thus ensuring total accrual of desired fruits.

Note: The Kannada version of this article can be viewed at AYVM blogs

Friday, June 14, 2019

काम :- त्याज्य है या पूज्य ? (Kaam :- thyajya he ya poojy?)

लेखक – डामोहन राघवन
हिन्दी अनुवाद – श्रीमती एम.हेच. इन्दिरा




‘काम’ कहने पर ही मुस्कुराते हुए बात बदलनेवाले कुछ लोग होते हैं | कतिपय मानते हैं कि ’ शालााओं में विद्यार्थियो को जानकारी देनेवाले विषय मे से एक यह भी है’ |  काम को नीचभाव  से देखनेवाले और कुछ लोग होते हैं | अधिकतर  लोग इसे  सिनेमा के ‘रोमान्स’ का पर्याय समझते है| 
       
 ‘काम’ से ही समाजका बचाव या नाश दोनों साध्य है| 

काम सृश्टिसहज एक वेग है | इस वेग के न होने से मनुकुल के इस भूतल पर रहना ही सवाल बनकर रह जाता | जन्म से ही यह वेग हम में गुप्त रूप से छिपकर रहके, तारुण्य में स्त्री-पुरुषों के परस्पर आकर्षण के रूप मे इस की  अभिव्यक्ति  चिरपरिचित  ही है | यह आकर्षण यदि समाज के नियमों और जीवन मौल्यौ के अनुसार हो तो यह उचित कहलाता है | यदि  विपरीत हो तो विपत्ति बन पडती है | यह सभी देशों के - सभी जनाङ्ग्  -पशु -पक्षियों के समाज का सामान्य नियम है  |  लेकिन हर समाज मे औचित्य या निषिद्ध कृत्यों की परिभाषा मात्र अलग अलग ही होती  है  | 

प्राचीन  भारत के महर्षी काम की शक्ती और सच्चे स्वरुप से भलीभांति  परिचित थे | काम का मूल रूप है ‘इन्द्रियों की इच्छाओ को तृप्त करने का तीव्र चापल्य ‘| परिस्थिति के अनुसार चपलता बहु रूपों को धरता है | उन्हे यह भी  ज्ञात था  कि अनियन्त्रित चपलता सारे रेखाओं को लाङ्घ् कर भागने वाली अश्व कि भांति है | इसी लिए घोडे को लगाम देने की व्यवस्था को भी साथ ही साथ जोडे | वह कैसे ? ‘कार ‘वेग से चलने के लिए ‘अक्सलरेटर ‘ जैसे रहता है वैसे ही वेग को रोकने के लिए ‘ब्रेक ‘ भी रहता है | ‘ब्रेक ‘ के बिना ‘आक्सीडेंट ‘ निश्चित है | जीवन की गाडी में,काम के वेग की नियन्त्रण के लिए ‘ब्रेक ‘ को जोडकर उसके उपयोग की शिक्षा भी देते थे | वह ‘ब्रेक ‘ ही  ‘इन्द्रियजय ‘ कहलाता है  | अत्यन्त प्रिय खाद्य यदि आँखों के सामने हो पर सेहत के लिये उचित न हो तो चाहते हुए भी उसे नकारने की दृढता है वह 'इन्द्रियजय' | मनोहर पर अनुचित दृश्यों के आँखों के सामने रहने पर भी दृष्टि हटाने की धृति है वह | ऐसे इन्द्रिय जय के बहुत उदाहरण है | मगर यदि हमेशा  ही सब कुछ नकारते ही रहें तो यह बात ऐसे हो गयी जैसे ‘गाडी पर ब्रेक लगाना आता है; पर गाडी चला नहीं सकते’| भीड भरी वीथियों मे धीरे चलाना भी जानो और हाईवे पर गाडी 120 कि.मी. की तेजी से चलाओ तभी तो 'वाह -वाह' होगी | ठीक उसी प्रकार ही इन्द्रियों के चाहते हुए भी अनुचित को मना करने का सामर्थ्य, और अनुमति हो तो भोग करने कि कुशलता रहनी चाहिये | एसे रहने पर ही जीवन में एक ‘बालेन्स ‘ रहता है | इसी अवस्था को हमारे ऋषियों ने ‘धर्म‘ शब्द से संबोधित किया | 

अर्थ का अर्जन और काम के सेवन के लिए धर्म का ‘लैसेन्स ‘चाहिए :-

भारतीय जीवनव्यवस्था में कामों का भोग और अर्थ का सम्पादन दोनों के लिए अनुमति या लैसेन्स देने के पहले दीर्घ समय तक धर्म की   शिक्षा देते थे | वही ब्रम्हचर्य - गुरुकुलवास कहलाता है| वहाँ आज की तरह केवल पुस्तकों के पाठ ही नहीं बल्कि तपस्या से मस्तक को प्रकाशित करने का पाठ भी था | धर्म को आत्मसात करने का अभ्यास था | यह शिक्षा को जो पूर्ण करेगा वही ‘स्नातक‘ पद प्राप्त करने योग्य रहता था | ऐसे ब्रह्मचर्य और तपस्या से पूत जो धर्मिष्ठ हैं वे कामों के भोग से मर्यादा का उललंघन नहीं करते | ऐसे कर्मों मे उनकी रुचि बनती ही नहि | इसी को श्रीमद् भगवद्गीता में श्री कृष्ण ने कहा है कि ‘’धर्माविरुद्धो  भूतेषु कामोsस्मि भरतर्षभ’’| श्री कृष्ण का कहना है कि धर्म के अनुसार होने पर मैं ही स्वतः काम  हूँ | इस तरह धर्मार्जन के बाद यदि अर्थ -कामों का भोग करें तो ऐसा व्यक्ति गृहस्थ -जीवन में उदारभाव से लोक -कल्याण के लिए अर्थ और कामों का सेवन करता है | न कि अपने स्वार्थ या इन्द्रियों की चपलता के लिए | ऐसा धर्मात्मा समय के बीतते तारुण्य के उपरान्त  वृद्दावस्था के आने पर विचलित न होते हुए वैराग्य से भोग को त्यागकर तपस्या का आश्रय लेता है | पुराने कपडों की भाँति निरातंक होकर शरीर का त्याग करता है | इसका वर्णन करते हुए महाकवि कालिदास कहते  है 

  ‘’शैशवेभ्यस्थ विद्यानां यौव्वने विषयैषिणाम् वार्धक्ये मुनिवृत्तीनां योगेनान्ते तनुत्यजां "

 यह विषय आज भी प्रसक्त है क्या ?

हमारे मन मे यः सवाल  उठ सक्ता है कि 'पुराने जमाने की बात आज हम क्यों दोहरा रहे हैं' ? पर काम के वेग से भरे इस शरीर की  गाड़ी को हम आज भी चलाते आ रहे है | सुखदायक और सुभद्र जीवन की गति को चाहनेवालों  के लिये यह विषय आज भी प्रसक्त है | चाहे हमारे सडकों मे हो या समाज मे; आज भी ‘अशिक्षित चालक‘ ही अपघात का कारण बने घूम रहें हैं | यह बात भूत और वर्तमान काल दोनों मे  सच ही कहलायेगा | ‘धर्म ‘ का लैसेन्स रहे तो काम पूज्य है | नहीं तो अपघात का आह्वान मानकर सर्वथा त्याज्य ही है |

Note: The Kannada version of this article can be viewed at AYVM blogs

Tuesday, June 11, 2019

ಮೇಲ್ಬೇರು, ಕೆಳಕೊಂಬೆ-ಈ ವೃಕ್ಷವಾದರೂ ಯಾವುದು? (Melberu, kelakombe. I vrukshavadaru yavudu?)

ಲೇಖಕರು: ಸುಬ್ರಹ್ಮಣ್ಯ ಸೋಮಯಾಜಿ


ಸಾಮಾನ್ಯವಾಗಿ  ಲೋಕದಲ್ಲಿ ನಾವು ನೋಡುವ ವೃಕ್ಷಗಳ ಬೇರು ಕೆಳಗೆ ಭೂಮಿಯ ಆಳದಲ್ಲಿರುತ್ತವೆ. ಕೊಂಬೆಗಳು ಮೇಲೆಲ್ಲಾ ಹರಡಿರುತ್ತವೆ. ಆದರೆ ಶ್ರೀ ಕೃಷ್ಣನು ಗೀತೆಯಲ್ಲಿ-
“ಊರ್ಧ್ವಮೂಲಮಧಃಶ್ಶಾಖಾ ಅಶ್ವತ್ಥಮ್ ಪ್ರಾಹುರವ್ಯಯಂ| ಛಂದಾಂಸಿ ಯಸ್ಯ ಪರ್ಣಾನಿ, ಯಸ್ತಂ ವೇದ ಸ ವೇದವಿತ್||- ಮೇಲೆ ಬೇರು ಕೆಳಗೆ ಕೊಂಬೆಗಳನ್ನುಳ್ಳ ಅಶ್ವತ್ಥವೃಕ್ಷವಿದೆ. ಅದನ್ನು ಆಮೂಲಾಗ್ರವಾಗಿ ಯಾರು ತಿಳಿಯುತ್ತಾರೋ ಅವನನ್ನೇ “ವೇದವಿತ್”- ವೇದವನ್ನು ತಿಳಿದವನು. ಅಥವಾ ಸತ್ಯವನ್ನು ತಿಳಿದವನು ಎನ್ನಲಾಗುತ್ತದೆ. ಎಂದಿದ್ದಾನೆ.

ಒಮ್ಮೆ ಶ್ರೀರಂಗ ಮಹಾಗುರುಗಳು ಅವರ ಶಿಷ್ಯರ ಸಮ್ಮುಖದಲ್ಲಿ ಇಂತಹ ಒಂದು ವೃಕ್ಷವನ್ನು ನೀವೆಲ್ಲಾದರೂ ನೋಡಿದ್ದೀರಾ? ಎಂದು ಕೇಳಿದರು. ಅಲ್ಲಿದ್ದವರೆಲ್ಲ ಎಷ್ಟು ಪ್ರಯತ್ನಿಸಿದರೂ ನಿಸರ್ಗದಲ್ಲಿ ಅಂತಹ ಒಂದು ವೃಕ್ಷವನ್ನು ನೋಡಿದ ನೆನಪಾಗಲಿಲ್ಲ. ಮುಂದುವರೆದು ಅವರು, ಇಲ್ಲೇ ಇವೆಯಪ್ಪಾ ಎಂದರು. ಆಗಲೂ ಗೊತ್ತಾಗದಿದ್ದಾಗ ಅವರು ಹೇಳಿದರು- ಆ ವೃಕ್ಷವನ್ನು ಹೊತ್ತುಕೊಂಡು ನಾವೆಲ್ಲರೂ ಓಡಾಡುತ್ತಿದ್ದೇವಪ್ಪಾ , ನಮ್ಮ ಶರೀರವೇ ಅಂತಹ ವೃಕ್ಷವಾಗಿದೆ ಎಂದು ವಿವರಿಸಿದರು.

ನಮ್ಮ ಮಸ್ತಿಷ್ಕ ಅಂದರೆ –ತಲೆ, ಮೇಲಿದೆ. ಅದುವೇ ಈ ಜೀವನವೃಕ್ಷದ ಬೇರು. ಅದು ಹೇಳಿದಂತೆ ಶಾಖೆಗಳನ್ತಿರುವ ಕೈ ಕಾಲುಗಳು ಕಾರ್ಯ ನಿರ್ವಹಿಸುತ್ತವೆ. ನಾವು ಯಾವ ಕ್ರಿಯೆಯನ್ನು ಮಾಡಬೇಕಾದರೂ ತಲೆ ಹೇಳಿದಂತೆಯೇ ಮಾಡಬೇಕು. ತಲೆ ಇಲ್ಲದಿದ್ದರೆ ಕೈ ಕಾಲುಗಳು ನಿಶ್ಚೇಷ್ಟಿತ. ನಮ್ಮ ನಮ್ಮ ಮಟ್ಟಿಗೆ ನಮ್ಮ ತಲೆಯೇ ನಮಗೆ ದೇವರು. ಅದರ ನಿರ್ದೇಶನದಲ್ಲೇ ನಾವು ಬದುಕುವುದು. ಎಂದೇ ತಲೆಯನ್ನು ಚೆನ್ನಾಗಿಟ್ಟುಕೊಂಡರೆ ಜೀವನ ಚೆನ್ನಾಗುತ್ತದೆ. ಕೆಲವು ವೇಳೆ ಹೊರಗೆ ನಾವು ನೋಡುವ ಕೆಲವು ಮರಗಳಲ್ಲಿ ಮೂಲ ಮರ ಒಂದಾದರೆ ಅದರ ಕೊಂಬೆಯ ಮೇಲೆ ಇನ್ನೊಂದು ಯಾವುದೋ ಬೀಜವು  ಮೂಲ ಮರದ ಶಕ್ತಿಯನ್ನು ತೆಗೆದುಕೊಂಡು ತಾನೇ ಬೆಳೆಯುತ್ತಿರುತ್ತದೆ. ಕೆಳಗೆ ಮಾವಿನ ಬೇರು, ಕಾಂಡ ಎಲ್ಲವೂ. ಮೇಲೆ ಬೇವು ಬೆಳೆಯುತ್ತಿದೆ.  ಇದನ್ನು ಬದನಿಕೆ ಎನ್ನುತ್ತಾರೆ. ಇದು ಸೃಷ್ಟಿಯ ಆಶಯಕ್ಕೆ ವಿರುದ್ಧವಾದ ಬೆಳವಣಿಗೆ. ವ್ಯವಸಾಯಜ್ಞ ಮರದ ಬೆಳವಣಿಗೆಯನ್ನು ಆಗಾಗ ಗಮನಿಸುತ್ತಾ ಅದಕ್ಕೆ ಸರಿಯಾದ ಕೃಷಿ ಮಾಡುತ್ತಾ ಇದ್ದರೆ ಈ ಬಗೆಯ ಬದನಿಕೆಯನ್ನು ಬೆಳೆಯದಂತೆ ಮರವನ್ನು ರಕ್ಷಿಸಬಹುದು. ವ್ಯವಸಾಯದ ಬಗ್ಗೆ ಪರಿಚಯವಿಲ್ಲದೇ ಇದ್ದರೆ ಬದನಿಕೆಯ ಫಲವನ್ನೇ ಮಾವಿನ ಹಣ್ಣೆಂದು ಭ್ರಮಿಸುವಂತಾಗುತ್ತದೆ. ಹಾಗೆಯೇ ನಮ್ಮ ಜೀವನವೃಕ್ಷಗಳಲ್ಲಿಯೂ  ಸಹಜವಾಗಿ ಭಗವಂತ ಇಟ್ಟ ನಮ್ಮ ತಲೆಯ ರೂಪದ ಬೀಜ, ಬೇರು ಒಂದಾದರೆ ಮುಂದೆ ಸರಿಯಾದ ಕೃಷಿ ಮಾಡದೇ ಬೆಳೆದ ಬದನಿಕೆಯಂತಹ ವೃಕ್ಷವೇ ಬೇರೆಯಾಗಿದೆ. ನಮ್ಮ ಸಹಜವಾದ ಆನಂದ ಶಾಂತಿ ಸಮೃದ್ಧಿಗಳ ಪರಿಚಯವೇ ನಷ್ಟವಾಗಿ ಬದನಿಕೆಯ ಬದುಕಾಗಿಬಿಟ್ಟಿದೆ ನಮ್ಮದು. ಮಾತ್ರವಲ್ಲ ಈ ಬದನಿಕೆಯನ್ನೇ ಸಹಜ ಎಂದು ತಿಳಿಯುವಷ್ಟು ಭ್ರಮೆಗೆ ಒಳಗಾಗಿದ್ದೇವೆ. ಬೇರಿಗೆ ಒಳ್ಳೆಯ ಸಂಸ್ಕಾರಗಳ ಕೃಷಿ ನಡೆದರೆ ಈ ಜೀವನವೃಕ್ಷದಲ್ಲೂ ಪರಮ ಫಲವನ್ನು ಪಡೆಯಬಹುದು ಎಂಬುದು ಈ ದೇಶದ ಮಹರ್ಷಿಗಳ ಮಾತು. 

ಇಲ್ಲಿ ಬೆಳೆದುಬಂದ ಸಂಸ್ಕೃತಿ,ನಾಗರೀಕತೆಗಳೆಲ್ಲವೂ ಮಾನವನ ಮೇಲ್ಬೇರಾದ  ಮಸ್ತಿಷ್ಕವನ್ನು  ಸಹಜವಾಗಿ ಬೆಳೆಸುವ, ಅದಕ್ಕಾಗಿ ಮಾಡುವ ಕೃಷಿಯಾಗಿಯೇ ಬೆಳೆದುಬಂದಿವೆ ಎಂಬುದನ್ನು ಮರೆಯದಿರೋಣ. ಜೀವನ ವ್ಯವಸಾಯವನ್ನು ಚೆನ್ನಾಗಿ ಬಲ್ಲ ಭಾರತೀಯ ಮಹರ್ಷಿಗಳು ಇಲ್ಲಿನ ಸಂಸ್ಕಾರಗಳು,ಪೂಜೆ ಪುರಸ್ಕಾರಗಳು,ಹೋಮ ಹವನಗಳು,ತೀರ್ಥಕ್ಷೇತ್ರಗಳು,ಗುಡಿ-ಗೋಪುರಗಳು ಎಲ್ಲವನ್ನೂ ನಮ್ಮ ಜೀವನ ವೃಕ್ಷದ ಬೇರಿಗೆ ನೀರೆರೆಯುವ, ಅದನ್ನು ಐಹಿಕ ಪಾರಮಾರ್ಥಿಕ ಎರಡನ್ನೂ ಆನಂದವಾಗಿ ಅನುಭವಿಸುವ ಮಹಾ ಜೀವನ ವೃಕ್ಷವಾಗಿ ಬೆಳೆಸುವ ಸಾಧನಗಳನ್ನಾಗಿಯೇ ತಂದಿದ್ದಾರೆ. ಅವರ ಜೀವಲೋಕದ ಮೇಲಿನ ಅಪಾರವಾದ ಕರುಣೆ ಅವಿಸ್ಮರಣೀಯ.

ವೇದಗಳು ನಮ್ಮ ಶರೀರ-ಪಿಂಡಾಂಡ, ಮತ್ತು ಹೊರಗಿನ ಬ್ರಹ್ಮಾಂಡ ಇವುಗಳ ಸ್ವರೂಪವನ್ನು ಅಂತರಂಗದ ಅನುಭವದಿಂದ ತಿಳಿಸುವುವಾಗಿದೆ. ಅಂತಹ ಸ್ವರೂಪವನ್ನು ಕಾಪಿಟ್ಟುಕೊಂಡಾಗಲೇ  ನಮ್ಮ ಒಳ ಹೊರ ಜೀವನಗಳು ಸಮೃದ್ಧ. ಅದುವೇ ಈ ಜೀವನ ವೃಕ್ಷದ ಪರಮಫಲ.ಇಂತಹ ಜೀವನವೃಕ್ಷವಾದ  ನಮ್ಮೀ ಶರೀರವನ್ನು ಸಮಗ್ರವಾಗಿ ಅರ್ಥ ಮಾಡಿಕೊಂಡವನೇ ನಿಜವಾದ ವೇದವಿತ್ ಎಂಬ ಭಗವಂತನ ಮಾತು ಎಷ್ಟು ಉದ್ಬೋಧಕವಾಗಿದೆಯಲ್ಲವೇ?  


ಸೂಚನೆ:  11/06/2019 ರಂದು ಈ ಲೇಖನ ವಿಜಯವಾಣಿ ಮನೋಲ್ಲಾಸ ಅಂಕಣದಲ್ಲಿ ಪ್ರಕಟವಾಗಿದೆ.

ವಿವಾಹ-ಸಂಸ್ಕಾರದ ಪರಿಚಯ -1 (Vivaha samskarada parichaya -1)

ಲೇಖಕರು: ತಾರೋಡಿ ಸುರೇಶ



ಷೋಡಶ ಸಂಸ್ಕಾರಗಳಲ್ಲಿ ವಿವಾಹ ಸಂಸ್ಕಾರವು ಎಲ್ಲರಿಗೂ ಸುಪರಿಚಿತ. ಅತ್ಯಂತ ವೈಭವದಿಂದ ನಡೆಯುತ್ತದೆ ಕೂಡ. ಭಾರತದಲ್ಲಿ ಮಾತ್ರವೇ ಇದನ್ನು ಸಂಸ್ಕಾರವೆಂದು ಕರೆಯುವುದು. ಮಹರ್ಷಿಗಳು ಭಾರತದಲ್ಲಿ ವಿವಾಹಪದ್ಧತಿಯನ್ನು ವಿಶೇಷವಾದ ರೀತಿಯಲ್ಲಿ ಅಳವಡಿಸಿಕೊಟ್ಟಿದ್ದಾರೆ. ತನ್ನ ಮೌಲಿಕವಾದ ಸತ್ವದಿಂದ ಇಂದು ಜಾರಿದ್ದರೂ ಅದರ ಅನೇಕ ಅವಶೇಷಗಳನ್ನು ನಮ್ಮ ದೇಶದ ವಿವಾಹದ ಆಚರಣೆಯಲ್ಲಿ ಇಂದಿಗೂ ನೋಡಬಹುದು. ಕೊಳೆಯನ್ನು ತೊಳೆದು ಹೊಳೆಯುವಂತೆ ಮಾಡಿ ಮೌಲಿಕ ರೂಪಕ್ಕೆ ತರುವುದೇ ಸಂಸ್ಕಾರ. ದೇಹವನ್ನು ಸ್ನಾನದಿಂದ ಶುದ್ಧವಾಗಿಟ್ಟುಕೊಳ್ಳುತ್ತೇವೆ. ಹಾಗೆಯೇ ಅಂತಕರಣಗಳಾದ ಮನೋಬುದ್ಧಿಗಳನ್ನು ಶುದ್ಧಗೊಳಿಸುವ ಕರ್ಮಗಳನ್ನು ಸಂಸ್ಕಾರವೆಂದು ಕರೆಯಲಾಗಿದೆ. ಅಂತಹ ಸಂಸ್ಕಾರವನ್ನು ಕೊಟ್ಟು ಶುದ್ಧಿಯನ್ನು ತಂದುಕೊಂಡಾಗ ಅವು ಪರಮಾತ್ಮದರ್ಶನವನ್ನು ಮಾಡಿಸುತ್ತವೆ. ಈ ವಿವಾಹವೂ ಅಂತಹ ಒಂದು ಸಂಸ್ಕಾರವಾಗಿದೆ.

ವಿವಾಹವನ್ನು ಎಂಟು ಬಗೆಯಲ್ಲಿ ವರ್ಗೀಕರಿಸಿದ್ದಾರೆ. ಭಗವಂತನ ಆಶಯವನ್ನು ಅರಿತು ಅದಕ್ಕನುಗುಣವಾಗಿ ನಡೆಸುವ ವಿವಾಹಕ್ಕೆ ಬ್ರಾಹ್ಮವಿವಾಹವೆಂದು ಹೆಸರು. ಸಾಮಾನ್ಯವಾಗಿ ನಮ್ಮ ದೇಶದಲ್ಲಿ ಬ್ರಾಹ್ಮವಿವಾಹವೇ ನಡೆಯುವಂತಹದ್ದು. ದೈವ, ಪ್ರಾಜಾಪತ್ಯಾ ಆರ್ಷ,ಆಸುರ, ಗಾಂಧರ್ವ,ರಾಕ್ಷಸ ಮತ್ತು ಪೈಶಾಚ ಎಂದು ಅನ್ಯ ಏಳು ವಿವಾಹಗಳೂ ಉಂಟು. ಉದ್ವಾಹ, ಪರಿಣಯ, ಉಪಯಮ, ಪಾಣಿಗ್ರಹಣ ಇತ್ಯಾದಿಗಳು ವಿವಾಹಕ್ಕೆ ನಮ್ಮ ದೇಶದಲ್ಲಿ ಬಳಸುವ ಅನ್ಯ ಮಂಗಳ ಹೆಸರುಗಳು. ಅನ್ಯದೇಶಗಳಲ್ಲಿ ಕೇವಲ ಇಂದ್ರಿಯಸುಖಕ್ಕಾಗಿ ವಿವಾಹವೆಂಬ ವ್ಯವಹಾರವಿದೆ. ಆದರೆ ಮಹರ್ಷಿಗಳು ತಮ್ಮ ಭಾವವನ್ನು ವ್ಯಕ್ತಪಡಿಸಲು ಬಹಳ ಯೋಗ್ಯವಾದ ಪದಗಳನ್ನು ಬಳಸಿದ್ದಾರೆ.ಅವು ಇಂದ್ರಿಯಸುಖದ ಜೊತೆಯಲ್ಲಿ ಬದಕನ್ನು ಪರಮಾರ್ಥದಲ್ಲಿ ನಿಲ್ಲಿಸುವ ಅತೀಂದ್ರಿಯ ಸುಖವೆರಡನ್ನೂ ಒಳಗೊಳ್ಳುತ್ತದೆ. ಪರಬ್ರಹ್ಮದ ಸಂಕಲ್ಪಕ್ಕೆ ಅನುಗುಣವಾಗಿ ನಡೆಯುವಂತಹದ್ದಾದ್ದರಿಂದ ಬ್ರಾಹ್ಮವಿವಾಹ ಎನ್ನಿಸಿದೆ. ಎಂಟು ವಿವಾಹಗಳಲ್ಲಿ ಇದು ಅತ್ಯಂತ ಶ್ರೇಷ್ಠವಾದುದು. ಇದು ಬ್ರಹ್ಮಪ್ರಾಪ್ತಿಯನ್ನೇ ಜೀವನದ ಮಹಾಧ್ಯೇಯವಾಗಿ ಹೊಂದಿದೆ. ಉಳಿದ ವಿವಾಹಗಳು ಎಲ್ಲಕ್ಕೂ ಮೂಲನಾಗಿರುವ ಬ್ರಹ್ಮವನ್ನು ಬಿಟ್ಟು ಮಧ್ಯದಲ್ಲಿ ಪ್ರಾರಂಭವಾಗುತ್ತವೆ.

ಒಂದು ಗಿಡವನ್ನು ಬೆಳೆಸಲು ಕೆಲವರು ಎಲೆಗಳಿಗೆ ನೀರೆರದರೆ ಇನ್ನು ಕೆಲವರು ಕಾಂಡಕ್ಕೆ ಹಾಕುತ್ತಾರೆ.ಆದರೆ ಬೇರಿಗೆ ನೀರು ಹಾಕಿದಾಗ ತಾನೇ ವೃಕ್ಷವು ಬೆಳೆಯುತ್ತದೆ. ಹಾಗೆ ಜೀವನದ ಮೂಲದಲ್ಲಿ ಬೆಳಗತ್ತಿರುವ ಪರಬ್ರಹ್ಮರೂಪವಾದ ಬೇರನ್ನು ಸೇರುವಂತೆ ನಡೆಸುವ ವಿಧಾನವನ್ನೊಳಗೊಂಡಿದ್ದರಿಂದ ಬ್ರಾಹ್ಮವಿವಾಹವು ಶ್ರೇಷ್ಠವಾದದ್ದು. ಜೊತೆಗೆ ಧರ್ಮಾರ್ಥಕಾಮಮೋಕ್ಷ ಎಂಬ ನಾಲ್ಕು ಪುರುಷಾರ್ಥಗಳನ್ನೂ ಇದು ಕೂಡಿಸಿಕೊಡುತ್ತದೆ.
ವಿಶೇಷವಾದ ಮನೋಧರ್ಮದಿಂದ ಒಯ್ಯುವಿಕೆ, ವಿಶೇಷವಾದ ಸಂಕಲ್ಪದಿಂದ ಒಯ್ಯುವಿಕೆಗೆ ವಿವಾಹವೆಂಬ ಹೆಸರು. “ನಾವು ಒಟ್ಟಿಗೆ ಸೇರೋಣ, ಸತ್ಸಂಕಲ್ಪ ಮಾಡೋಣ, ಒಳ್ಳೆಯ ಪ್ರೇಮದಿಂದ ಕೂಡಿರೋಣ, ಬೆಳಗೋಣ, ಸುಮನಸ್ಕರಾಗೋಣ ಎಂಬುದು ವಧೂವರರ ನಡುವೆ ಆಗುವ ಒಪ್ಪಂದ. ಅದಕ್ಕೋಸ್ಕರ ವರನು ವಧುವನ್ನು ತನ್ನ ಮನೆಗೆ ಒಯ್ಯುತ್ತಾನೆ. ಭಗವಂತನ ಆಶಯವನ್ನು ವಿಸ್ತಾರಗೊಳಿಸುತ್ತಾ ಪುನಃ ಭಗವಂತನನ್ನೇ ಸೇರುವ ಸಂಕಲ್ಪದಿಂದ ಭಗವಂತನನ್ನು ಪ್ರತಿನಿಧಿಸುವ ಅಗ್ನಿಯನ್ನು ಪ್ರದಕ್ಷಿಣೆ ಬರುವುದು ಪರಿಣಯ ಎನ್ನಿಸಿಕೊಳ್ಳುತ್ತದೆ. ಪಾಣಿಗ್ರಹಣವೆಂದರೆ ಕೈಯಲ್ಲಿ ಹಿಡಿದುಕೊಳ್ಳುವಿಕೆ. ಮೇಲ್ಮುಖವಾಗಿ ಮಾಡಿಕೊಂಡಿರುವ ವಧುವಿನ ಹಸ್ತವನ್ನು ತನ್ನ ಹಸ್ತದಿಂದ, ಇಬ್ಬರ ಅಂಗುಷ್ಟವೂ ಮೇಲೆ ಬರುವಂತೆ ಹಿಡಿದುಕೊಳ್ಳುವುದು. “ಊರ್ಧ್ವಂ ಗಚ್ಛಂತಿ ಸತ್ವಸ್ಥಾಃ”-ಎಂಬಂತೆ ನಮ್ಮ ಜೀವನವೆಲ್ಲ ಊರ್ಧ್ವಮುಖವಾಗಿರಲಿ ಎಂಬ ಸಂಕಲ್ಪವಿರುತ್ತದೆ. ಪಾಣಿಗ್ರಹಣ ಪ್ರಕ್ರಿಯೆಯಲ್ಲಿ ಪಂಚಭೂತಗಳನ್ನು ಪ್ರತಿನಿಧಿಸುವ ಐದು ಬೆರಳುಗಳ ಸೇರುವೆಯುಂಟಾಗಿ ಜೀವನದಲ್ಲಿ ಒಂದು ಐಕ್ಯವನ್ನು ಸಾಧಿಸಿಕೊಳ್ಳುವ ಭಾವವಿರುತ್ತದೆ. (ಮುಂದುವರೆಯುತ್ತದೆ)   


ಸೂಚನೆ: 11/06/2019 ರಂದು ಈ ಲೇಖನ ಪ್ರಜಾ ವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Sunday, June 9, 2019

ರಾಜನಾಗುವ ಬಗೆ (Raajanaguva bage)

ಲೇಖಕರು: ನಾಗರಾಜ ಗುಂಡಪ್ಪ


ಹಿಂದೊಂದು ಕಾಲದಲ್ಲಿ ಮಕ್ಕಳಿಲ್ಲದ ರಾಜನೊಬ್ಬನು ಉತ್ತರಾಧಿಕಾಯನ್ನು ಆಯ್ಕೆ ಮಾಡಲು ಅನೇಕ ಯುವಕರನ್ನು ಪರೀಕ್ಷೆಗಳಿಗೆ ಒಳಪಡಿಸಿ ಯಶಸ್ವಿಯಾದ ಹತ್ತು ಮಂದಿ ಯುವಕರಿಗೆ ಒಂದು ಅಂತಿಮ ಪರೀಕ್ಷೆಯನ್ನು ಕೊಡುತ್ತಾನೆ. ಎಲ್ಲರಿಗೂ ಒಂದೊಂದು ಬೀಜವನ್ನು ಕೊಟ್ಟು, ಅದನ್ನು ನೆಟ್ಟು, ಪೋಷಿಸಿ ಆರು ತಿಂಗಳ ನಂತರ ತಂದು ತೋರಿಸಬೇಕು ಎಂದು ಹೇಳುತ್ತಾನೆ. ಜೊತೆಯಲ್ಲಿಯೇ ಒಂದು ನಿಯಮವನ್ನೂ ಹೇಳುತ್ತಾನೆ - ಇವರಿಗೆ ಯಾವ ಬೀಜವನ್ನು ಕೊಟ್ಟಿರುತ್ತಾನೆಯೋ ಅದೇ ಬೀಜವನ್ನೇ ನೆಟ್ಟು ಬೆಳೆಸಬೇಕು ಮತ್ತು ಯಾವುದೇ ಕಸಿಯನ್ನು ಮಾಡಬಾರದು ಎಂದು. 

ನಂತರ ಎಲ್ಲರೂ ಬೀಜವನ್ನು ನೆಟ್ಟು ಕೃಷಿ ಮಾಡಲು ಆರಂಭಿಸುತ್ತಾರೆ; ಅವರಲ್ಲಿ ಸತ್ಯಪಾಲನೆಂಬ ಯುವಕನಿಗೆ ಮಾತ್ರ ಯಾವ ಫಲಿತಾಂಶವೂ ದೊರಕುವುದಿಲ್ಲ.  ಬೀಜವನ್ನು ನೆಟ್ಟು ನೀರು, ಗೊಬ್ಬರಗಳನ್ನು ಹಾಕುತ್ತ ಬಂದರೂ ಅದು ಮೊಳೆಯುದಿಲ್ಲ; ಮಣ್ನನ್ನು ಬದಲಿಸಿದರೂ ಸಹಾ ಪ್ರಯೋಜನವಾಗುವುದಿಲ್ಲ.  ನಾನಾ ಪ್ರಯತ್ನಗಳು ವ್ಯರ್ಥವಾಗಲು, ಇತರರ ಪ್ರಯತ್ನ ಹೇಗಿದೆ ನೋಡೋಣವೆಂದು ಅಕ್ಕ ಪಕ್ಕದ ಗ್ರಾಮಗಳಿಗೆ ಹೋಗಿ ನೋಡುತ್ತಾನೆ - ಒಬ್ಬೊಬ್ಬರ ಬೀಜವೂ ಮೊಳೆತು ಸೊಂಪಾದ ಗಿಡವಾಗಿ ಬೆಳೆಯುತ್ತಲಿರುತ್ತದೆ. ಎಲ್ಲರ ಬೀಜವೂ ಇಷ್ಟು ಚೆನ್ನಾಗಿ ಬೆಳೆದರೂ ತನ್ನದು ಮಾತ್ರ ಏಕೆ ಮೊಳೆತಿಲ್ಲವೆಂದು ಎಷ್ಟು ಯೋಚಿಸಿದರೂ ಅವನಿಗೆ ಹೊಳೆಯುವುದಿಲ್ಲ; ತನ್ನ ಅದೃಷ್ಟವೇ ಇಷ್ಟು ಎಂದುಕೊಂಡು ಮರುಗುತ್ತಾ ವ್ಯರ್ಥ ಪ್ರಯತ್ನ ಪಡುತ್ತಲೇ ಆರು ತಿಂಗಳು ಕಳೆದೇ ಹೋಗುತ್ತದೆ. 

ಈಗ ಎಲ್ಲರೂ ತಮ್ಮ ಫಸಲನ್ನು ರಾಜನಿಗೆ ಸಮರ್ಪಿಸುತ್ತಾರೆ ಮತ್ತು ಸತ್ಯಪಾಲನೂ ಸಹಾ ಬರಡು ಕುಂಡವನ್ನೇ ಸಮರ್ಪಿಸುತ್ತಾನೆ. ಎಲ್ಲರ ಫಸಲನ್ನೂ ವೀಕ್ಷಿಸಿದ ರಾಜನು ಎಲ್ಲರ ನಿರೀಕ್ಷೆಗೆ ವ್ಯತಿರಿಕ್ತವಾಗಿ ಸತ್ಯಪಾಲನೇ ಉತ್ತರಾಧಿಕಾರಿಯೆಂದು ಘೋಷಣೆ ಮಾಡಿಬಿಡುತ್ತಾನೆ. ಎಲ್ಲರಿಗೂ ಪರಮಾಶ್ಚರ್ಯ; ಬಗೆ ಬಗೆಯಾದ ಸೊಂಪಾದ ಗಿಡಗಳನ್ನು ತಂದವರೆಲ್ಲರನ್ನೂ ಕಡೆಗಣಿಸಿ ಬರಡು ಕುಂಡವನ್ನು ತಂದವನಿಗೆ ರಾಜ ಪಟ್ಟವೇ ಎಂದು ಅಂದುಕೊಳ್ಳುತ್ತಿರುವಾಗ ರಾಜನು ತನ್ನ ನಿಶ್ಚಯವನ್ನು ವಿವರಿಸುತ್ತಾನೆ. 

ನಾನು ಎಲ್ಲರಿಗೂ ಬೇಯಿಸಿ ಒಣಗಿಸಿದ ಬೀಜವನ್ನು ಕೊಟ್ಟಿದ್ದೆ; ಹೀಗಾಗಿ ಯಾರ ಕುಂಡದಲ್ಲಿಯೂ ಮೊಳಕೆ ಬರುವ ಸಾಧ್ಯತೆಯೇ ಇರಲಿಲ್ಲ. ಅದರೆ ಸತ್ಯಪಾಲನನ್ನು ಹೊರತು ಪಡಿಸಿ ಉಳಿದವರೆಲ್ಲರೂ ಆತಂಕದಿಂದ, ನಿಯಮವನ್ನು ಮೀರಿ, ನಾನು ಕೊಟ್ಟ ಬೀಜವಲ್ಲದೇ ಬೇರೆ ಬೀಜವನ್ನು ಬೆಳೆಸಿ ಗಿಡವನ್ನು ತಂದಿದ್ದಾರೆ. ಆದರೆ ಸತ್ಯಪಾಲನಾದರೋ ನಿಯಮವನ್ನು ಪಾಲಿಸಿ ತನ್ನ ಪರಿಶ್ರಮದ ಫಲ ಏನಿದೆಯೋ ಅದನ್ನೇ ಪ್ರಾಮಾಣಿಕವಾಗಿ ಸಮರ್ಪಿಸಿದ್ದಾನೆ. ರಾಜನಾಗಲು ಸತ್ಯಶೀಲತೆ ಹಾಗೂ ಧರ್ಮಪ್ರಜ್ಞೆ ಅತ್ಯಂತ ಮುಖ್ಯ. ಅದುದರಿಂದ, ಸಮರ್ಥನೂ ಸತ್ಯಶೀಲನೂ ಆದ ಸತ್ಯಪಾಲನೇ ಅತ್ಯುತ್ತಮ ಅಧಿಕಾರಿಯೆಂದು ವಿವರಿಸುತ್ತಾನೆ. 

ಇದರ ನೀತಿ ಏನೆಂದರೆ, ನಮ್ಮ ಬದುಕಿನಲ್ಲಿ ಭಗವಂತನೆಂಬ ರಾಜನು ಆತ್ಮ ಸಾಮ್ರಾಜ್ಯದ ಪಟ್ಟಾಭಿಷೇಕ ಮಾಡಲು ಯೋಗ್ಯ ಜೀವಿಗಳಿಗಾಗಿ ಕಾಯುತ್ತಿರುತ್ತಾನೆ. ತೋರಿಕೆಯ ಬದುಕನ್ನು ಬದಿಗೊತ್ತಿ ಸತ್ಯ ಧರ್ಮಗಳಿಂದ ಜೀವನ ಮಾಡಿ ಸಾಧನೆ ಮಾಡುವವರಿಗೆ ಆತ್ಮ ಸಾಕ್ಷಾತ್ಕಾರ, ಆತ್ಮ ಸಾಮ್ರಾಜ್ಯದ ಪಟ್ಟಾಭಿಷೇಕ ಕಟ್ಟಿಟ್ಟ ಬುತ್ತಿ. ನಮ್ಮಲ್ಲಿ ಏನೇ ಸಾಮರ್ಥ್ಯವಿದ್ದರೂ ಸಹಾ ಜೀವನದ ಅಂತಿಮ ಘಟ್ಟವನ್ನು ದಾಟಿಸಬಲ್ಲವು ಸತ್ಯ ಧರ್ಮಗಳು ಮಾತ್ರವೇ. 


ಸೂಚನೆ:  09/06/2019 ರಂದು ಈ ಲೇಖನ ವಿಜಯವಾಣಿ ಮನೋಲ್ಲಾಸ ಅಂಕಣದಲ್ಲಿ ಪ್ರಕಟವಾಗಿದೆ.

ನೈವೇದ್ಯ - ತಿನಿಸು ನಮಗೋ ದೇವರಿಗೋ? (Naivedya - thinisu namago devarigo?)

ಲೇಖಕರು: ನಾಗರಾಜ ಗುಂಡಪ್ಪ



ಮನೆಯಲ್ಲಾಗಲೀ ಅಥವಾ ದೇವಾಲಯದಲ್ಲಾಗಲೀ, ದೇವರ ಪೂಜೆಯ ಒಂದು ಮುಖ್ಯ ಅಂಗ ನೈವೇದ್ಯ. ನೈವೇದ್ಯ ಎಂದರೆ, ಯಾವುದಾದರೂ ಒಂದು ಅಥವಾ ಹೆಚ್ಚು ಭಕ್ಷ್ಯಗಳನ್ನು ದೇವರ ಮುಂದೆ ಇಟ್ಟು ಸಮರ್ಪಣೆ ಮಾಡುವ ಉಪಚಾರ. ಪೂಜೆಯ ನಂತರ ಈ ಭಕ್ಷ್ಯವನ್ನು ಪ್ರಸಾದ ಎಂದು ನಾವು ಸ್ವೀಕರಿಸುತ್ತೇವೆ. ಕೆಲವು ಸಂದರ್ಭಗಳಲ್ಲಿ ಈ ನೈವೇದ್ಯಕ್ಕೆ ವಿಶೇಷತೆಯುಂಟು - ಇಂತಹಾ ದೇವತೆಗಳಿಗೆ ಇಂತಹಾ ಭಕ್ಷ್ಯಗಳೇ ಪ್ರಿಯ ಎಂದು ಪರಿಗಣಿಸಿ ಆಯಾ ಭಕ್ಷ್ಯಗಳನ್ನೇ ನಿವೇದನೆ ಮಾಡುವ ರೂಢಿಯುಂಟು. ಉದಾಹರಣೆಗೆ, ಗಣಪತಿಗೆ ಕಡಲೆ ಗುಗ್ಗುರಿ, ಕರಿಗಡುಬು, ಹಯಗ್ರೀವ ದೇವರಿಗೆ ಕಡಲೇ ಬೇಳೆಯಲ್ಲಿ ಮಾಡುವ ಹಯಗ್ರೀವ ಎಂದೇ ಹೆಸರಿರುವ ಒಂದು ಭಕ್ಷ್ಯ, ಪಿತೃ ದೇವತೆಗಳಿಗೆ ಉದ್ದಿನ ವಡೆ ಈ ರೀತಿ ಬೇರೆ ಬೇರೆ ದೇವರ ಪೂಜೆಗಳಲ್ಲಿ ಬೇರೆ ಬೇರೆ ಭಕ್ಷ್ಯಗಳನ್ನು ನೈವೇದ್ಯಕ್ಕಾಗಿ ಬಳಸುವುದುಂಟು.

ಈ ಹಿನ್ನೆಲೆಯಲ್ಲಿ ಒಂದೆರಡು ಆಕ್ಷೇಪಣೆಗಳು ಮತ್ತು ಕುಚೋದ್ಯಗಳು ಕೇಳಿ ಬರುವುದುಂಟು. ನಾವು ಸಮರ್ಪಣೆ ಮಾಡುವ ಭಕ್ಷ್ಯವನ್ನು ದೇವರೇನು ಬಂದು ತಿನ್ನುತ್ತಾನಾ? ಅದನ್ನು ತಿನ್ನುವುದು ನಾವೇ! ಆದುದರಿಂದ ನೈವೇದ್ಯ ಎಂದು ಮಾಡುವುದು ನಮ್ಮ ಆಸೆಯನ್ನು ಪೂರೈಸಿಕೊಳ್ಳುವುದಕ್ಕಾಗಿಯೇ ಹೊರತು ಅದರಲ್ಲಿ ದೇವರಿಗೆ ಸಲ್ಲುವ ಅಂಶವೇನಿಲ್ಲಾ ಎನ್ನುವುದು ಒಂದು ಆಕ್ಷೇಪಣೆಯಾದರೆ, ಇದರ ಮುಂದುವರಿಕೆಯಾಗಿ ಇಂತಹಾ ಭಕ್ಷ್ಯ ಇಂತಹಾ ದೇವರಿಗೆ ಪ್ರಿಯ ಎನ್ನುತ್ತೇವಲ್ಲಾ ಅದು ಹೇಗೆ? ಆ ದೇವರೇನು ಬಂದು ತಿನ್ನುವುದಿಲ್ಲ; ಆದುದರಿಂದ ನಮಗಿಷ್ಟವಾದ ತಿಂಡಿಗಳನ್ನು ಮಾಡಿಕೊಂಡು ತಿನ್ನುವುದಕ್ಕೆ ನಾವು ದೇವರ ಹೆಸರನ್ನು ಬಳಸಿಕೊಳ್ಳುತ್ತಿದ್ದೇವೆ ಎನ್ನುವುದು ಮತ್ತೊಂದು ಆಕ್ಷೇಪಣೆ. ಹೀಗೆ ನೈವೇದ್ಯ ಹಾಗೂ ಪ್ರಸಾದದ ಬಗ್ಗೆ ಅಸಡ್ಡೆ ಬೆಳೆಯುವ ಚಿಂತನೆ ಒಂದು ಕಡೆ ಬೆಳೆಯುತ್ತಿದ್ದರೆ, ಅದಕ್ಕೆ ಉತ್ತರ ಕೊಡುವ ಚಿಂತನೆಗಳು ಸಾಕಷ್ಟು ಕಾಣುತ್ತಿಲ್ಲ. ಆದುದರಿಂದ ನೈವೇದ್ಯ ಎನ್ನುವ ಪೂಜಾಂಗದ ಹಿಂದಿರುವ ವಿಜ್ಞಾನ ಏನು? ಅದು ಹೇಗೆ ಒಂದು ಯುಕ್ತವಾದ ಪೂಜಾಂಗ ಎಂದು ವಿಶ್ಲೇಷಿಸುವ ಅಗತ್ಯ ಇದೆ.

ಭಾರತೀಯ ಸಂಸ್ಕೃತಿಯ ಬಹಳಷ್ಟು ವಿಷಯಗಳಲ್ಲಿ ಪದದ ವಿಶ್ಲೇಷಣೆಯೇ ಅರ್ಥದ ವಿಶ್ಲೇಷಣೆಯನ್ನೂ ಕೊಡುತ್ತದೆ. ನೈವೇದ್ಯ ಪದವೇ ಏನು ಹೇಳುತ್ತದೆ ಎಂದು ನೋಡಿದರೆ, ಯಾವುದು ನಿವೇದಿಸಲ್ಪಡುತ್ತದೆಯೋ ಅದು ನೈವೇದ್ಯ. ನಿವೇದನೆ ಎಂದರೆ ಅರಿಕೆ, ದೇವರ ಮುಂದೆ ಒಂದು ವಿಷಯವನ್ನು ಅರಿಕೆ ಮಾಡುವುದು ನಿವೇದನೆ. ಈ ನೇರದಲ್ಲಿ, ನೈವೇದ್ಯ ಎನ್ನುವ ಪೂಜಾಂಗ ಏನು? ಅಲ್ಲಿ ಏನು ನಿವೇದನೆ ಮಾಡುತ್ತೇವೆ ಎಂದರೆ,ಅಪ್ಪಾ! ಇದು ನೀನು ಒದಗಿಸಿರುವ ಪದಾರ್ಥ, ಇದು ನಿನ್ನದೇ ಎಂದು ಅವನಿಗೆ ಒಪ್ಪಿಸುವ ಅಥವಾ ಮಾಡುವ ಸಮರ್ಪಣೆಯೇ ನಿವೇದನೆ. ಪ್ರಪಂಚದಲ್ಲಿ ಉತ್ಪತ್ತಿಯಾಗುವ ಆಹಾರವೆಲ್ಲಾ ನಮಗೆ ಭಗವಂತನ ಕೊಡುಗೆಯೇ ಆಗಿದೆ. ರೈತನೊಬ್ಬ ಬೆಳೆ ಬೆಳೆದರೂ ಬೆಳೆಸುವ ಸಾಮರ್ಥ್ಯ ಮಣ್ಣಿಗೂ ಹಾಗೂ ಬೆಳೆಯುವ ಧರ್ಮವನ್ನು ಬೀಜದಲ್ಲೂ ಇಟ್ಟಿದ್ದು ರೈತನಲ್ಲ; ಅದು ಪ್ರಕೃತಿಯ ಕೊಡುಗೆ ಅಥವಾ ಆ ಪ್ರಕೃತಿಗೂ ಒಡೆಯನಾದ ಭಗವಂತನ ಕೊಡುಗೆ. ಬೆಳೆಗೆ ಅವಶ್ಯಕವಾದ ಜಲ ಸಂಪತ್ತೂ ಸಹಾ ಮನುಷ್ಯನ ಸೃಷ್ಟಿಯಲ್ಲಾ! ನೀರಾವರಿ ಯೋಜನೆಯ ಮೂಲಕ ನದಿಯ ನೀರನ್ನು ಗದ್ದೆ, ತೋಟಗಳಿಗೆ ಹರಿಸುವಲ್ಲಿ ಮನುಷ್ಯ ಪ್ರಯತ್ನವಿದ್ದರೂ ಸಹಾ ನದಿಗೆ ನೀರು ಬರುವಲ್ಲಿ ಮನುಷ್ಯನ ಪಾತ್ರವಿಲ್ಲ. ಹೀಗೆ ಕೃಷಿಭೂಮಿಯಿಂದ ಹಿಡಿದು ನಮಗೆ ಆಹಾರ ರೂಪದಲ್ಲಿ ಅದು ಬರಬೇಕಾದರೆ ಉದ್ದಕ್ಕೂ ಭಗವಂತನ ಕೃಪೆ ಹಾಗೂ ಪಾತ್ರ ಇದ್ದೇ ಇದೆ. ಆದುದರಿಂದ ಭಗವಂತನದೇ ಆದ ಪದಾರ್ಥವನ್ನು ಅವನದ್ದೇ ಎಂದು ಕೃತಜ್ಞತೆಯಿಂದ ಸ್ಮರಿಸಿಕೊಳ್ಳುವುದೇ ನಾವು ಮಾಡುವ ನಿವೇದನೆ. ಹೀಗೆ ನಿವೇದನೆ ಮಾಡಿದಾಗ, ಭಗವಂತ ಆ ಆಹಾರ ಪದಾರ್ಥದಲ್ಲಿರುವ ಸೂಕ್ಷ್ಮಾಂಶವನ್ನು ಸ್ವೀಕರಿಸುತ್ತಾನೆ ಮತ್ತು ಆಗ ನಿವೇದಿತ ಪದಾರ್ಥವು ಪ್ರಸಾದವಾಗುತ್ತದೆ. ಭಗವಂತನಿಗೆ ಸಮರ್ಪಿಸಿದಾಗ, ಆ ಪದಾರ್ಥದಲ್ಲಿ ಭಗವಂತನ ಒಂದು ಶಕ್ತಿ ಹರಿದು, ಸೇವಿಸಿದವರಿಗೆ ಒಂದು ಪ್ರಸನ್ನತೆಯುಂಟು ಮಾಡುತ್ತದೆ.

ಇದು ನೈವೇದ್ಯ ಎನ್ನುವ ಪೂಜಾಂಗದ ಹಿನ್ನೆಲೆ. ಇನ್ನು ಭಗವಂತ ಬಂದು ತಿನ್ನುತ್ತಾನೆಯೇ ಎನ್ನುವ ಆಕ್ಷೇಪಣೆಗೆ ಉತ್ತರ ಕೊಡುವುದಾದರೆ, ಈ ಪೂಜಾಂಗದ ಉದ್ದೇಶದಲ್ಲಿಯೇ ನಾವು ಈ ಭಕ್ಷ್ಯವನ್ನು ದೇವರಿಗೆ ತಿನ್ನಿಸುತ್ತೇವೆ ಎನ್ನುವ ಅಭಿಪ್ರಾಯವಿಲ್ಲ. ಉದಾಹರಣೆಗೆ, ದೇವರಿಗೆ ಹಾಲಿನ ಅಭಿಷೇಕ ಮಾಡಬೇಕಾದರೆ, ಪೂಜೆ ಮಾಡುವವರು "ಕ್ಷೀರೇಣ ಸ್ನಪಯಾಮಿ" (ಹಾಲಿನಿಂದ ಸ್ನಾನ ಮಾಡಿಸುತ್ತೇನೆ) ಎಂದು ಹೇಳಿ ನಂತರ ಮೂರ್ತಿಯ ಮೇಲೆ ಹಾಲಿನ ಧಾರೆಯನ್ನು ಎರೆಯುತ್ತಾರೆ. ಆದರೆ ಭಕ್ಷ್ಯವನ್ನು ದೇವರ ಮುಂದಿಟ್ಟು "ಭಕ್ಷ್ಯಂ ಖಾದಯಾಮಿ" (ಭಕ್ಷ್ಯವನ್ನು ತಿನ್ನಿಸುತ್ತೇನೆ) ಎಂದು ಹೇಳುವುದಿಲ್ಲ. ಬದಲಾಗಿ "ಭಕ್ಷ್ಯಂ ನಿವೇದಯಾಮಿ" ಅಥವಾ "ಸಮರ್ಪಯಾಮಿ" ಎಂದು ಹೇಳುತ್ತಾರೆ. ಆದುದರಿಂದ ನೈವೇದ್ಯವೆಂಬ ಪೂಜಾಂಗದಲ್ಲಿ ದೇವರು ಬಂದು ಅದೆಲ್ಲವನ್ನೂ ತಿನ್ನುತ್ತಾನೆ ಎನ್ನುವ ನಿರೀಕ್ಷೆಯಿಲ್ಲ. ಎರಡನೆಯದಾಗಿ, ಆಹಾರದ ಸೂಕ್ಷ್ಮಾಂಶವನ್ನು ಭಗವಂತನು ಪರಿಗ್ರಹಿಸುವುದರಿಂದ ನೈವೇದ್ಯ ನಿರರ್ಥಕವಾದ ಆಚರಣೆಯಲ್ಲಾ.

ದೇವರು ನೈವೇದ್ಯವನ್ನು ಬಂದು ತಿನ್ನದೇ ಇರುವುದರಿಂದ, ಇಂತಹಾ ದೇವತೆಗೆ ಇಂತಹಾ ಭಕ್ಷ್ಯ ಪ್ರಿಯ ಎನ್ನುವುದರ ಮರ್ಮವೇನು ಎನ್ನುವ ಪ್ರಶ್ನೆ ಉಳಿಯುತ್ತದೆ. ಇದಕ್ಕೆ ಉತ್ತರ ಸಿಗಬೇಕೆಂದರೆ, ಶ್ರೀರಂಗ ಮಹಾಗುರುಗಳು ನಾಡೀ ವಿಜ್ಞಾನದ ಆಧಾರದಿಂದ ಕೊಟ್ಟಿರುವ ನೋಟವನ್ನು ಅವಲಂಬಿಸಿ ಮೊದಲಿಗೆ ದೇವತಾ ಪ್ರೀತಿ ಎಂದರೇನು? ಆ ದೇವತೆಯ ಅನುಗ್ರಹ ಎಂದರೇನು ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕಿದೆ.ನಾವು ಆರಾಧನೆ ಮಾಡುವ ದೇವತೆಗಳು ನಮ್ಮ ಒಳಗೇ ಬೇರೆ ಬೇರೆ ಸ್ಥಾನಗಳಲ್ಲಿ ಇರುವ ಶಕ್ತಿಗಳು. ಆಯಾ ದೇವತೆಯ ಶಕ್ತಿ ನಮ್ಮ ನಾಡಿಗಳ ಮೂಲಕ ಹರಿದಾಗ ನಮ್ಮ ದೇಹ, ಮನಸ್ಸು, ಬುದ್ಧಿಗಳ ಮೇಲೆ ವಿಶೇಷ ಪರಿಣಾಮವುಂಟಾಗುತ್ತದೆ. ಅಂದರೆ ನಮ್ಮ ದೇಹೇಂದ್ರಿಯ, ಮನಸ್ಸು ಬುದ್ಧಿಗಳಲ್ಲಿ ಒಂದು ಪ್ರಸನ್ನತೆ ಹಾಗೂ ಶಾಂತಿ ಉಂಟಾಗಿ ವಿಶೇಷ ಸಾಮರ್ಥ್ಯಗಳು ಕೂಡಿಬರತ್ತದೆ ಮತ್ತು ಹಾಗಾದಾಗ ಆ ದೇವತೆಯ ಪ್ರೀತಿ ಉಂಟಾಯಿತು ಅಥವಾ ಅನುಗ್ರಹ ಆಯಿತು ಎಂದು ಹೇಳುತ್ತೇವೆ. ನಾವು ಮಾಡುವ ಆರಾಧನೆಯಲ್ಲಿ, ಬಳಸುವ ಪದಾರ್ಥಗಳು, ಮಂತ್ರಗಳು, ಆ ಮೂರ್ತಿಯ ಆಕಾರ ಎಲ್ಲವೂ ಸಹಾ ನಮ್ಮ ಮನಸ್ಸು ಹಾಗೂ ಪ್ರಾಣಶಕ್ತಿಯು ನಾಡಿಗಳ ಮೂಲಕ ಹರಿದು ಆರಾಧಿತ ದೇವತೆಯ ಸ್ಥಾನವನ್ನು ತಲಪುವುದಕ್ಕೆ ಪೋಷಕವಾಗಿರುತ್ತದೆ. ನಮ್ಮ ಮನಸ್ಸು ಹಾಗೂ ಪ್ರಾಣಗಳು ಆ ದೇವತಾ ಕೇಂದ್ರವನ್ನು ತಲುಪಿದಾಗ ಅಲ್ಲಿನ ಬಾಗಿಲು ತೆರೆದು ಆ ದೇವತೆಯ ಶಕ್ತಿಯು ಶರೀರದಲ್ಲಿ ಹರಿದಾಗ ಅದು ನಮ್ಮ ಮೇಲೆ ವಿಶೇಷ ಪರಿಣಾಮವುಂಟಾಗಿ ದೇವತೆಯ ಅನುಗ್ರಹವು ಉಂಟಾಯಿತು ಎನ್ನುತ್ತೇವೆ. ನಾವು ಬಳಸಿದ ಪದಾರ್ಥಗಳು, ಮಾಡಿದ ಪೂಜೆ ಎಲ್ಲವೂ ಆ ದೇವತೆಗೆ ಪ್ರೀತಿಯಾಯಿತು ಎನ್ನುತ್ತೇವೆ. ಇದೇ ನೇರದಲ್ಲಿ ಯಾವ ಭಕ್ಷ್ಯಗಳನ್ನು ಪ್ರಸಾದ ರೂಪದಲ್ಲಿ ಸೇವಿಸಿದಾಗ ಅದು ಪ್ರಾಣಶಕ್ತಿಯು ಯಾವ ದೇವತಾಕೇಂದ್ರದ ಕಡೆಗೆ ಹರಿಯುವುದಕ್ಕೆ ಪೋಷಣೆಯನ್ನು ನೀಡುತ್ತದೆಯೋ ಆ ದೇವತೆಗೆ ಆ ಭಕ್ಷ್ಯ ಪ್ರಿಯ ಎಂದು ಪರಿಗಣಿಸಲ್ಪಡುತ್ತದೆ. ಅಂದರೆ, ಭಕ್ಷ್ಯವನ್ನು ಪ್ರಸಾದರೂಪದಲ್ಲಿ ಭಕ್ತರು ಸೇವಿಸಿದಾಗ ತಮ್ಮೊಳಗೆ ಇರುವ ದೇವತಾ ಕೇಂದ್ರಕ್ಕೆ ತಲುಪಿ ಆ ದೇವತೆಯ ಅನುಗ್ರಹಕ್ಕೆ ಪಾತ್ರರಾಗುವುಂತೆ ಆಗುವುದರಿಂದ ಆಯಾ ಭಕ್ಷ್ಯಗಳನ್ನು ಆಯಾ ದೇವತೆಗಳಿಗೆ ಪ್ರಿಯ ಎನ್ನುವ ರೂಢಿ ಬಂದಿದೆ.

ಆದುದರಿಂದ ನೈವೇದ್ಯ ಎನ್ನುವ ಪೂಜಾಂಗ ನಿರರ್ಥಕವಲ್ಲಾ; ಅದು ಬಹಳ ಸೂಕ್ಷ್ಮವಾಗಿ ಅರ್ಥಮಾಡಿಕೊಳ್ಳಬೇಕಾದಂತಹ ವಿಜ್ಞಾನದ ಹಿನ್ನೆಲೆಯುಳ್ಳದ್ದಾಗಿದ್ದು ಆರಾಧಕರಿಗೆ ಭೌತಿಕ, ದೈವಿಕ, ಅಧ್ಯಾತ್ಮಿಕ ಪ್ರಯೋಜನಗಳನ್ನು ಕೊಡುವಂತಹಾ, ಸಾರ್ಥಕವಾದ ಆಚರಣೆಯಾಗಿದೆ. 


ಸೂಚನೆ: 08/06/2019 ರಂದು ಈ ಲೇಖನ ಪ್ರಜಾ ವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Thursday, June 6, 2019

ಆಹಾ! ಆ ಕಂಗಳ ಸೊಬಗು (Ahaa! Aa kangala sobagu)

ಲೇಖಕರು: ಡಾ. ಆರ್. ಮೋಹನ


ಶ್ರೀರಂಗಂ ರಂಗನಾಥಸ್ವಾಮಿ ದೇವಾಲಯದ ಪ್ರಾಕಾರದಲ್ಲಿ ಸ್ವಾಮಿಯ ಉತ್ಸವ ಹೊರಟಿತ್ತು. ಗರುಡವಾಹನನಾಗಿ ಕಂಗೊಳಿಸುತ್ತಿರುವ ನಾರಾಯಣನ ದರ್ಶನಕ್ಕಾಗಿ ಎಲ್ಲರೂ ಹಾತೊರೆಯುತ್ತಿದ್ದರು. ಒಬ್ಬರಮೇಲೊಬ್ಬರು ಎದ್ದು ಬಿದ್ದು ಅತ್ತಣಿಂದ ಇತ್ತಣಿಂದ ಇಣುಕಿ ನೋಡುತ್ತಿದ್ದರು. ಆದರೆ ಒಬ್ಬ ಮಹಾಶಯ - ಧನುರ್ದಾಸ  ಉತ್ಸವ-ವಿಮುಖನಾಗಿ ತನ್ನದೇ ಲೋಕದಲ್ಲಿದ್ದ. ಕೈಲಿ ಛತ್ರ ಚಾಮರಗಳನ್ನು ಧರಿಸಿ ಒಬ್ಬ ಸುಂದರಸ್ತ್ರೀಯ ಸೇವೆಯಲ್ಲಿ ನಿರತನಾಗಿದ್ದ. ಅವಳ ಮುಖಸೌಂದರ್ಯವನ್ನೇ ಆಲಿಸುತ್ತ, ಸುತ್ತಲೂ ತನ್ನನ್ನು ನೋಡಿ ನಗಾಡುತ್ತಿರುವ ಜಗತ್ತು ಅವನ ಗಮನಕ್ಕೆ ಬಂದೆ ಇರಲಿಲ್ಲ. ‘ಇಂಥ ಕಾಮುಕ ಉಂಟೆ?‘ ಎಂದು ಎಲ್ಲರೂ ಅಂದುಕೊಂಡರು. ಅಲ್ಲೇ ಇದನ್ನು ಗಮನಿಸುತ್ತಾ ಭಕ್ತಶ್ರೇಷ್ಠರಾದ ರಾಮಾನುಜಾಚಾರ್ಯರೂ ನಿಂತಿದ್ದರು. ಶಿಷ್ಯನೊಬ್ಬನನ್ನು ಕಳುಹಿಸಿ ಧನುರ್ದಾಸನನ್ನು ಕರೆತರಲು ಹೇಳಿದರು. ‘ನಿನಗೆ ಆಕೆಯಲ್ಲಿ ಏನಪ್ಪಾ ಕಾಣಿಸಿತು? ಜನಸಮೂಹದ ಛೀ - ಥೂ ಗಳನ್ನೂ ನಿರ್ಲಕ್ಷಿಸಿ ಅವಳಲ್ಲೆ ತಲ್ಲೀನನಾಗಿದ್ದೀಯೆ ?’ ಎಂದು ವಿಚಾರಿಸಿದರು. ‘ಸ್ವಾಮೀ, ಆಕೆಯ ಕಣ್ಣುಗಳಲ್ಲಿ  ಅಸಾಧಾರಣ ಸೌಂದರ್ಯವಿದೆ. ನಾನದನ್ನು ಬಿಟ್ಟಿರಲಾರೆ’ ಎಂದು ಸತ್ಯವನ್ನು ನುಡಿದನು. ರಾಮಾನುಜರು  ‘ಹಾಗಾದರೆ, ಇದಕ್ಕಿಂತಲೂ ಸುಂದರವಾದ ಕಣ್ಣುಗಳನ್ನು ತೋರಿಸಿದರೆ ನನ್ನ ಜೊತೆ ಬರುತ್ತೀಯಾ ?’ ಎಂದರು. ‘ಖಾಂಡಿತ ‘ ಎಂದನು .

ಅಂದು ಸಂಜೆ ಆಚಾರ್ಯರು, ಧನುರ್ದಾಸ ಇಬ್ಬರೂ ರಂಗನಾಥನ ದೇವಾಲಯದ ಕಡೆಗೆ  ಹೊರಟರು. ಒಂದೊಂದಾಗಿ ಪ್ರಾಕಾರವನ್ನು ದಾಟಿ ಗರ್ಭಗುಡಿ ಪ್ರವೇಶಿಸಿದರು. ಸಂಜೆಯ ಆರತಿಯ ವೇಳೆಯಾಗಿತ್ತು. ಕತ್ತಲೆಯ ಗವಿಯೊಳು ಕರ್ಪೂರದಾರತಿಯ ಹೊಂಬೆಳಕು ಒಂದೇ ಕಂಗೊಳಿಸುತ್ತಿತ್ತು. ಆರತಿಯನ್ನು ಪ್ರದಕ್ಷಿಣವಾಗಿ ತಿರುಗಿಸಿದಾಗ ಭಗವಂತನ ಅಂಗಾಂಗಗಳು ಗೋಚರವಾದವು. ಮಂತ್ರಘೋಷ, ಘಂಟಾನಾದಗಳು ಮೊಳಗುತ್ತಿದ್ದವು. ಗರ್ಭಗುಡಿಯಲ್ಲಿ ಆ ನಾದ ಉದ್ಘೋಷಿಸಲು, ಹೊಂಬೆಳಕೊಮ್ಮೆ ಶೇಷ ಸರ್ಪದ ಮೇಲೆ ಯೋಗಶಯನದಲ್ಲಿ ಪವಡಿಸಿದ ರಂಗನಾಥನ ಕಣ್ಣುಗಳನ್ನು ಪ್ರತ್ಯಕ್ಷಗೊಳಿಸಿದವು. ಅರಳುತ್ತಿರುವ ಕಮಲದಂತೆ ಅರೆತೆರೆದು ಆ ಕಣ್ಣುಗಳು ಹೊಂಬೆಳಕಿನಲ್ಲಿ ಮಿಂಚಿದವು.  ಕ್ಷಣಾರ್ಧದಲ್ಲಿ ಹಾದು ಹೋದ ಆ  ಚಿತ್ರವು ಧನುರ್ದಾಸನ ಹೃನ್ಮನಗಳಲ್ಲಿ ಆಳವಾದ ಅಚ್ಚನ್ನೊತ್ತಿದವು. ಕಣ್ಣಲ್ಲಿ ಧಾರಾಕಾರವಾಗಿ ಆನಂದಭಾಷ್ಪವು ಹರಿಯ ತೊಡಗಿದವು. ಅಂದಿನಿಂದ ಧನುರ್ದಾಸ ಮತ್ತು ಅವನ ಆಕೆ ಭಗವಂತನ ಮಹಾಭಕ್ತರಾದರು.   

ಸೃಷ್ಟಿಯಲ್ಲಿ ಯಾವುದೂ ಪೂಜ್ಯ  ಅಥವಾ ತ್ಯಾಜ್ಯವೆಂದಿರುವುದಿಲ್ಲ. ಜಾಣ್ಮೆಯಿಂದ ಧ್ಯೇಯಸಿದ್ಧಿಗೆ  ಬಳಸಿಕೊಂಡರೆ  ಎಲ್ಲವೂ ಉತ್ಕೃಷ್ಟವೇ  ಸರಿ. ಸೌಂದರ್ಯವನ್ನು ನೋಡಿ ಮೈಮರೆವ ಕಾಮುಕನಲ್ಲಿ ಭಗವದ್ರಸದ ರಸಿಕನನ್ನು ಕಾಣಬೇಕಾದರೆ ರಾಮಾನುಜಾಚಾರ್ಯರಂಥಹ ಯೋಗಿಪುರುಷರಿಂದಲೇ ಸಾಧ್ಯ. ಸೃಷ್ಟಿಯಲ್ಲಿ ಮೈ ಮರೆತು ದೈವೀ ಅನುಭವವನ್ನು ಪಡೆಯುವ ನಾನಾ ಸಂಗತಿಗಳಿವೆ ಎಂದು ಜ್ಞಾನಿಗಳಾದ ಶ್ರೀರಂಗ ಮಹಾಗುರುಗಳು ತಿಳಿಸಿದ್ದರು. ಲೌಕಿಕ ಸೌಂದರ್ಯದ ರಸಿಕನಾದರೆ ಕಾಮುಕ. ದೈವೀ  ಸೌಂದರ್ಯದಲ್ಲಿ ಅದೇ ಆಸಕ್ತಿ ಮೂಡಿಬಂದರೆ ಪರಮ ಭಕ್ತ, ಭಾಗವತನಾಗುತ್ತಾನೆ. ಅಂಥಹ ದರ್ಶನಗಳನ್ನು ಒದಗಿಸಿ ಕೊಡುವ ಸ್ಥಾನಗಳೇ ದೇವಾಲಯಗಳು. ಅಲ್ಲಿನ ಸನ್ನಿವೇಶ ಹೇಗೆ ಕಲ್ಪಿಸಿದೆ ನೋಡಿ ! ಭಗವಂತನ ದಿವ್ಯ ದರ್ಶನದ  ಜೊತೆಗೆ ಘಂಟಾನಾದ, ಆ ಹೊಂಬೆಳಕು, ಮಂತ್ರಘೋಷ, ಶಂಖ-ಜಾಘಂಟೆಗಳ ಗುಂಗು ಎಲ್ಲವೂ ಸೇರಿ ನಮ್ಮನ್ನು ಈ ಪ್ರಪಂಚದಿಂದ ಹಾರಿಸಿ ಒಳ ಆನಂದದ ಕಡೆಗೆ ಕರೆತರುತ್ತವೆ.

ಸೂಚನೆ:  06/06/2019 ರಂದು ಈ ಲೇಖನ ವಿಜಯವಾಣಿ ಮನೋಲ್ಲಾಸ ಅಂಕಣದಲ್ಲಿ ಪ್ರಕಟವಾಗಿದೆ.