Friday, July 30, 2021

Ananda Tandava Of Nataraja - 16

Respond to (lekhana@ayvm.in)



The Interpretation of Zimmer

Zimmer dedicates a chapter of his book, Myths and Symbols in Indian Art and Civilization (written towards the middle of the century) to the 'Dance of Shiva.' He states as a mature and responsible critic (that he was) of artefacts that the details of the image are to be read 'according to the Hindu tradition, in terms of a complex pictorial allegory.' (H. Zimmer, Myths and Symbols in Indian Art and Civilization, ed. Joseph Campbell, 1946, Bollingen Foundation, Washington D.C., Pantheon Books, New York, p.152).

 Each part of the image is capable, he says, of multiple significations. Referring first to the upper right hand holding the drum, he says: 'This connotes Sound, the vehicle of speech, the conveyer of revelation, tradition, incantation, magic and divine truth.' (ibid., p.152). He observes the relationship between sound and Ether, recognising Ether as 'the primary and most subtly pervasive manifestation of the divine substance', hence symbolising creation. Its counterpart on the left side has 'Fire, the element of destruction of the world'.

'In the balance of the hands', he argues, 'is illustrated a counterpoise of creation and destruction'. (ibid., p.153). His interpretation of the other two hands has not much to add to the traditional interpretation. Speaking of Apasmāra, he says it is 'symbolic of life's blindness, man's ignorance. Hence conquering this demon amounts to attainment of true wisdom wherein is 'release from the bondages of the world.' It may be remarked here that the transparency of the very name of the pigmy demon lends itself to this easy interpretation. After noting the signification of the balance of the two hands above, and Apasmāra beneath the foot, he proceeds to interpret the circle of glow that encases the image.

Thursday, July 29, 2021

பொய் பேசலாமா? (Poi Peshalama?)

மூலம் : கே.எஸ்.ராஜகோபாலன்
                தமிழாக்கம் : சி.ஆர். ஸ்ரீதர்
மின்னஞ்சல் : (lekhana@ayvm.in)

கௌசிகன் என்னும்  ஒரு முனிவர் காட்டில் வசித்து வந்தார். அவர் சாஸ்திரங்களை அதிகமாக படித்தவரல்ல. எப்பொழுதும் உண்மையையே பேசவேண்டும் என்னும் விரதம் பூண்டிருந்தார். ஒரு நாள் சில யாத்திரிகர்கள், திருடர்களின் பயத்தினால் கௌசிக முனிவரின் தோட்டத்தினுள் புகுந்து ஒரு மூலையில் ஒளிந்துகொண்டனர். அவர்களை தொடர்ந்து வந்த  திருடர்கள், கௌசிகரிடம் ‘இந்த வழியாக வந்த யாத்திரிகர்கள் எங்கு சென்றனர்?’ என்று வினவினர். உண்மையினின்று வழுவாத கௌசிகர், யாத்திரிகர்கள் ஒளிந்திருந்த இடத்தை காட்டிக்கொடுத்தார். திருடர்கள், யாத்திரிகர்களை கொன்று அவர்களிடமிருந்த பொக்கிஷங்களை திருடிக்கொண்டு சென்று விட்டனர். தர்மநுணுக்கங்களை அறியாத கௌசிகனின் சொற்கள் அதர்மமே  ஆயின. அவன் உயிர் பிரிந்தபின் நரகத்தில் விழவேண்டியதாயிற்று.

                இந்த உபகதை அர்ஜுனனுக்கு ஸ்ரீகிருஷ்ணனே கூறியது. நம் ரிஷிகள், உண்மையே பேச வேண்டும் என்னும் தர்மத்தை உபதேசித்திருப்பது போல, ஆபத்து நேரும் காலங்களில் தவிர்க்க முடியாத தர்மத்தையும் கூறியிருக்கிறார்கள். ஆபத்காலங்களில் மட்டும் கடைப்பிடிக்க வேண்டிய தர்மம் ஆபத்தர்மம்.

                    நடந்து செல்லும் ஒருவன், நடைபாதையிலேயே செல்வதுதான்  தர்மம். ஆனால் எதிரில் வரும் லாரியொன்று தன் கட்டுப்பாட்டை மீறி நடைபாதை மீதே ஏறிவிட்டால், அவன் தன் உயிரை காத்துக்கொள்வதற்காக, வாகனங்களுக்கென்று விதிக்கப்பட்ட தெருவிலேயே வேறு வழியின்றி நடக்கவேண்டியிருப்பது ஆபத்கால  தர்மம். அதே போல், ஆபத்தர்மத்திற்காக பொய் பேச வேண்டியிருக்கும். பொய் பேசுவதால் ஒரு நன்மை விளைவதாயிருந்தால், அப்பொழுது பொய்யையே  பேசலாம் என்று  மஹாபாரதம் கூறுகிறது. உதாரணத்திற்கு, உண்மை பேசுவதால் நம் உயிருக்கே ஆபத்து விளைவதானால் அல்லது நம்மிடமுள்ள அனைத்து சொத்துக்களும் பறிபோய்விடுவதாயிருந்தால், பொய் சொல்லலாம் என்று கூறுகிறது.

                  அதர்மத்தின் பக்கம் சார்ந்திருந்த த்ரோணாசார்யரை கொல்வதற்காக, அச்வத்தாமன் இறந்தான் என்னும் தோற்றத்தை விளைவிக்கும் வாக்கியத்தை, அறத்தின்  வழியிலேயே செல்லும் தர்மராஜனுடைய வாயினாலேயே  ஸ்ரீ கிருஷ்ணன் சொல்லவைப்பது யாவரும் அறிந்த கதை.  ஸ்ரீகிருஷ்ணனே பொய் சொல்ல வைத்த பின் நாமும் பொய் பேசலாம் என்று எண்ணக்கூடாது. ஸ்ரீகிருஷ்ணன் தர்ம நுணுக்கங்களை அறிந்தவன். பொய் பேசுவது மஹாபாபம் என்பதை அறிந்தவன்தான். ஆனால் அதர்மத்தை வேரறுக்க வேண்டுமென்னும்  ஆழ்ந்த நிச்சயமுள்வனாதலால், தக்க தருணங்களில் சாமானியர்களுக்கு அதர்மமென்று காணப்படும் சில செயல்களை செய்துள்ளான் மற்றும் செய்ய வைத்திருக்கிறான். சில சமயங்களில் ஒரு பெரிய தர்மத்தை காப்பாற்றுவதற்காக, சிறிய தர்மத்தை தியாகம் செய்ய வேண்டிவரும். அவனைப்போல நுண்ணறிவு உள்ளவர்கள்தான் அவனுடைய செயல்களை பின்பற்ற அருகதை உள்ளவர்கள்.

                ‘ஆயிரம் பொய் சொல்லி ஒரு திருமணம் செய்’ என்னும்  பழமொழியின் கருத்தை விவரிக்கையில்,  ஸ்ரீரங்கமஹாகுரு, ‘பொய் சொல்லியே ஒரு திருமணத்தை நடத்தி வைக்கவேண்டுமென்பது இதன் பொருள் அல்ல! சிலர் கெடுதி செய்யும் எண்ணத்தினால் பிறர் இல்லத்தில் நடக்கும் சுப காரியங்களை நிறுத்திவிடுகிறார்கள். அங்ஙனம் நற்பலனை தரக்கூடிய ஒரு திருமணம் நின்றுவிடக்கூடிய தருணம் வந்தால், பொய்யையாவது சொல்லி அந்த  சுப காரியம் நடைபெறும்படி செய்ய வேண்டும் என்பதுதான் இந்த பழமொழியின் பின்னுள்ள கருத்து. ஜீவிகளுக்கு  நன்மையும், யதார்த்தமுமே உண்மையாகும்’ என்று கூறியிருந்தார்.

                எப்பொழுதும் உண்மையையே  கூற வேண்டும் என்னும் தர்மத்தின் வழியை பின்பற்ற வேண்டும் என்பதுதான் சரி. ஆனால் அதனால் ஜீவிகளுக்கு(ஜீவத்திற்கு) நன்மை உண்டாகுமா என்னும் ஆய்வுத்திறன் நம்மிடம்  இருக்க வேண்டும். கௌசிகன் என்னும்  ஒரு முனிவர் காட்டில் வசித்து வந்தார். அவர் சாஸ்திரங்களை அதிகமாக படித்தவரல்ல. எப்பொழுதும் உண்மையையே பேசவேண்டும் என்னும் விரதம் பூண்டிருந்தார். ஒரு நாள் சில யாத்திரிகர்கள், திருடர்களின் பயத்தினால் கௌசிக முனிவரின் தோட்டத்தினுள் புகுந்து ஒரு மூலையில் ஒளிந்துகொண்டனர். அவர்களை தொடர்ந்து வந்த  திருடர்கள், கௌசிகரிடம் ‘இந்த வழியாக வந்த யாத்திரிகர்கள் எங்கு சென்றனர்?’ என்று வினவினர். உண்மையினின்று வழுவாத கௌசிகர், யாத்திரிகர்கள் ஒளிந்திருந்த இடத்தை காட்டிக்கொடுத்தார். திருடர்கள், யாத்திரிகர்களை கொன்று அவர்களிடமிருந்த பொக்கிஷங்களை திருடிக்கொண்டு சென்று விட்டனர். தர்மநுணுக்கங்களை அறியாத கௌசிகனின் சொற்கள் அதர்மமே  ஆயின. அவன் உயிர் பிரிந்தபின் நரகத்தில் விழவேண்டியதாயிற்று.

                இந்த உபகதை அர்ஜுனனுக்கு ஸ்ரீகிருஷ்ணனே கூறியது. நம் ரிஷிகள், உண்மையே பேச வேண்டும் என்னும் தர்மத்தை உபதேசித்திருப்பது போல, ஆபத்து நேரும் காலங்களில் தவிர்க்க முடியாத தர்மத்தையும் கூறியிருக்கிறார்கள். ஆபத்காலங்களில் மட்டும் கடைப்பிடிக்க வேண்டிய தர்மம் ஆபத்தர்மம்.

                    நடந்து செல்லும் ஒருவன், நடைபாதையிலேயே செல்வதுதான்  தர்மம். ஆனால் எதிரில் வரும் லாரியொன்று தன் கட்டுப்பாட்டை மீறி நடைபாதை மீதே ஏறிவிட்டால், அவன் தன் உயிரை காத்துக்கொள்வதற்காக, வாகனங்களுக்கென்று விதிக்கப்பட்ட தெருவிலேயே வேறு வழியின்றி நடக்கவேண்டியிருப்பது ஆபத்கால  தர்மம். அதே போல், ஆபத்தர்மத்திற்காக பொய் பேச வேண்டியிருக்கும். பொய் பேசுவதால் ஒரு நன்மை விளைவதாயிருந்தால், அப்பொழுது பொய்யையே  பேசலாம் என்று  மஹாபாரதம் கூறுகிறது. உதாரணத்திற்கு, உண்மை பேசுவதால் நம் உயிருக்கே ஆபத்து விளைவதானால் அல்லது நம்மிடமுள்ள அனைத்து சொத்துக்களும் பறிபோய்விடுவதாயிருந்தால், பொய் சொல்லலாம் என்று கூறுகிறது.

                  அதர்மத்தின் பக்கம் சார்ந்திருந்த த்ரோணாசார்யரை கொல்வதற்காக, அச்வத்தாமன் இறந்தான் என்னும் தோற்றத்தை விளைவிக்கும் வாக்கியத்தை, அறத்தின்  வழியிலேயே செல்லும் தர்மராஜனுடைய வாயினாலேயே  ஸ்ரீ கிருஷ்ணன் சொல்லவைப்பது யாவரும் அறிந்த கதை.  ஸ்ரீகிருஷ்ணனே பொய் சொல்ல வைத்த பின் நாமும் பொய் பேசலாம் என்று எண்ணக்கூடாது. ஸ்ரீகிருஷ்ணன் தர்ம நுணுக்கங்களை அறிந்தவன். பொய் பேசுவது மஹாபாபம் என்பதை அறிந்தவன்தான். ஆனால் அதர்மத்தை வேரறுக்க வேண்டுமென்னும்  ஆழ்ந்த நிச்சயமுள்வனாதலால், தக்க தருணங்களில் சாமானியர்களுக்கு அதர்மமென்று காணப்படும் சில செயல்களை செய்துள்ளான் மற்றும் செய்ய வைத்திருக்கிறான். சில சமயங்களில் ஒரு பெரிய தர்மத்தை காப்பாற்றுவதற்காக, சிறிய தர்மத்தை தியாகம் செய்ய வேண்டிவரும். அவனைப்போல நுண்ணறிவு உள்ளவர்கள்தான் அவனுடைய செயல்களை பின்பற்ற அருகதை உள்ளவர்கள்.

                ‘ஆயிரம் பொய் சொல்லி ஒரு திருமணம் செய்’ என்னும்  பழமொழியின் கருத்தை விவரிக்கையில்,  ஸ்ரீரங்கமஹாகுரு, ‘பொய் சொல்லியே ஒரு திருமணத்தை நடத்தி வைக்கவேண்டுமென்பது இதன் பொருள் அல்ல! சிலர் கெடுதி செய்யும் எண்ணத்தினால் பிறர் இல்லத்தில் நடக்கும் சுப காரியங்களை நிறுத்திவிடுகிறார்கள். அங்ஙனம் நற்பலனை தரக்கூடிய ஒரு திருமணம் நின்றுவிடக்கூடிய தருணம் வந்தால், பொய்யையாவது சொல்லி அந்த  சுப காரியம் நடைபெறும்படி செய்ய வேண்டும் என்பதுதான் இந்த பழமொழியின் பின்னுள்ள கருத்து. ஜீவிகளுக்கு  நன்மையும், யதார்த்தமுமே உண்மையாகும்’ என்று கூறியிருந்தார்.

                எப்பொழுதும் உண்மையையே  கூற வேண்டும் என்னும் தர்மத்தின் வழியை பின்பற்ற வேண்டும் என்பதுதான் சரி. ஆனால் அதனால் ஜீவிகளுக்கு(ஜீவத்திற்கு) நன்மை உண்டாகுமா என்னும் ஆய்வுத்திறன் நம்மிடம்  இருக்க வேண்டும்.

குறிப்பு: இக்கட்டுரை யின் கன்னட மூலம் AYVM blogs ல் காணலாம்.

Saturday, July 24, 2021

ಷೋಡಶೋಪಚಾರ - 10 ವಸ್ತ್ರ(Shodashopachaara - 10 Vastra)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ 
(ಪ್ರತಿಕ್ರಿಯಿಸಿರಿ lekhana@ayvm.in)



ಷೋಡಶೋಪಚಾರಗಳಲ್ಲಿ ಏಳನೆಯ ಉಪಚಾರ, ವಸ್ತ್ರ ಸಮರ್ಪಣೆ. ಭಗವಂತನನ್ನು ದಿಗಂಬರ, ಸರ್ವವ್ಯಾಪಕ, ದಿಗ್ವಾಸ ಎಂದೆಲ್ಲಾ ಹೇಳುತ್ತೇವೆ. ಇಂತಹ ಭಗವಂತನಿಗೆ ವಸ್ತ್ರೋಪಚಾರವನ್ನು ಸಲ್ಲಿಸುವುದು ಹೇಗೆ ಸಾಧ್ಯ? ಅಥವಾ ಒಂದರ್ಥದಲ್ಲಿ ಅಸಾಧ್ಯ. ಅವನನ್ನು ಆಚ್ಛಾದಿಸಲು ವಸ್ತ್ರವನ್ನು ಸಮರ್ಪಿಸುವುದು ಎಂದರೇನು? ನಿಜವಾಗಲೂ ಅವನಿಗೆ ವಸ್ತ್ರದ ಅವಶ್ಯಕತೆ ಇಲ್ಲ. ಅವನು ಇಡೀ ಪ್ರಪಂಚವನ್ನೇ ವ್ಯಾಪಿಸಿರುವ ಬ್ರಹ್ಮಾದಿ ಸ್ಥಾವರಪರ್ಯಂತ ಸಕಲದಲ್ಲೂ ನಿಷ್ಕಲನಾಗಿ ಇರುವಾತ. ಆದರೂ ನಾವು ಆರಾಧಿಸುವ ಸಲುವಾಗಿ ನಿಷ್ಕಲನಾದ ಭಗವಂತನನ್ನು ಸಕಲನನ್ನಾಗಿಸುತ್ತೇವೆ. ಆಗ ತಾನೆ ಪೂಜೆ! ಆಗ ತಾನೆ ವಸ್ತ್ರೋಪಚಾರ!. ಭಗವಂತನ ಪೂಜೆಗಾಗಿ ನಾವು ಆಯ್ದುಕೊಂಡಿರುವ ವಿಗ್ರಹಕ್ಕೆ ಇವೆಲ್ಲದರ ಸಲ್ಲಿಕೆ. ಇದರಿಂದ ನಮ್ಮ ಮನಸ್ಸಿಗೆ ಒಂದು ಬಗೆಯ ತೃಪ್ತಿ. ನಾವು ಯಾವ ದೇವತೆಯ ಪ್ರಸನ್ನತೆಗಾಗಿ ಪೂಜಿಸುತ್ತೇವೋ ಆ ದೇವತೆಯ ಪ್ರೀತಿಕರವಾದ ವಸ್ತ್ರವನ್ನೇ ಸಮರ್ಪಿಸಬೇಕು. 'ಪೀತಕೌಶೇಯವಸನಂ ವಿಷ್ಣುಪ್ರೀತ್ಯೈ ಪ್ರಕೀರ್ತಿತಮ್ | ರಕ್ತಂ ಶಕ್ತ್ಯರ್ಕವಿಘ್ನಾನಾಂ ಶಿವಸ್ಯ ಚ ಸಿತಂ ಪ್ರಿಯಮ್' ಎಂಬುದಾಗಿ ಹಳದಿ ವಸ್ತ್ರ ವಿಷ್ಣುವಿಗೆ, ಕೆಂಪು ವಸ್ತ್ರ ದುರ್ಗೆ, ಗಣಪತಿ, ಸೂರ್ಯರಿಗೆ ಮತ್ತು ಶಿವನಿಗೆ ಬಿಳಿಯ ವಸ್ತ್ರ ಪ್ರೀತಿಕರವಾದುದು. ಈ ವಸ್ತ್ರವು ರೇಷ್ಮೆ, ನಾರು, ಹತ್ತಿ ಮುಂತಾದ ಪೂಜಾಯೋಗ್ಯವಾದ ಪದಾರ್ಥದಿಂದಲೇ ಸಿದ್ಧವಾಗಿರಬೇಕು. ಟೆರಿಲಿನ್, ನೈಲಾನ್, ಟೆರಿಕಾಟ್ ಮೊದಲಾದ ವಸ್ತ್ರಗಳು ನಿಷಿದ್ಧ. ಇವುಗಳನ್ನು ದೇವರಿಗೆ ಸಮರ್ಪಿಸಲೇಬಾರದು. ಒಮ್ಮೆ ಶ್ರೀರಂಗಮಹಾಗುರುಗಳಲ್ಲಿ ಅವರ ಶಿಷ್ಯರೊಬ್ಬರು ಒಂದು ಪ್ರಶ್ನೆಯನ್ನು ಕೇಳಿದರು – "ಟೆರಿಲೀನ್ ಬಟ್ಟೆಗೆ ಐರನ್ ಚೆನ್ನಾಗಿ ನಿಲ್ಲುತ್ತದೆ, ಆದ್ದರಿಂದಟೆರಿಲೀನ್ ಒಳ್ಳೆಯದಲ್ಲವೇ?" ಎಂದು ಕೇಳಿದಾಗ ಅವರು- "ಹೌದಪ್ಪ ಐರನ್ ಚೆನ್ನಾಗಿ ನಿಲ್ಲುತ್ತದೆ, ಆದರೆ ಗೋಲ್ಡ್ ಹೋಗುತ್ತಪ್ಪ" ಎಂದು (ಭಗವತ್ಪ್ರಾಪ್ತಿಗಿರುವ ಸುವರ್ಣಾವಕಾಶವನ್ನೇ ಕಳೆದುಕೊಳ್ಳುತ್ತೀರಿ ಎಂಬರ್ಥದಲ್ಲಿ)ಹೇಳಿದ್ದರು. ಇವುಗಳು ನೋಡುವುದಕ್ಕೆ ಚೆಂದ ಕಾಣಬಹುದು. ಆದರೆ ಪೂಜೆಗೆ ಬೇಕಾದ ಮನೋಭೂಮಿಕೆಗೆ ತೊಡಕನ್ನುಂಟುಮಾಡುತ್ತದೆ. ಅದೇ ಪೂಜಾಯೋಗ್ಯವಾದ ವಸ್ತ್ರಗಳು ದೇವತಾಕೇಂದ್ರಗಳನ್ನು ಪ್ರಬೋಧಗೊಳಿಸಲು ಸಹಾಯ ಮಾಡುತ್ತವೆ. ಇದಕ್ಕೊಂದು ವಿಜ್ಞಾನವಿದೆ. ನಮ್ಮ ದೇಹದಲ್ಲಿ ದೇವತಾಸ್ಥಾನವನ್ನು ಪ್ರತೀಕಿಸುವ ನಾಡೀಮಾರ್ಗಗಳಿವೆ. ನಾಡೀ ಎಂದರೆ ದೇವತೆಗಳು ಸಂಚರಿಸುವ ಮಾರ್ಗ. ಅಂದರೆ ಆಯಾ ದೇವತೆಗಳು ಆ ನಾಡಿಯಲ್ಲಿ ಸಂಚರಿಸಬೇಕಾದರೆ ಆ ನಾಡಿಗೆ ಪೋಷಕವಾದ, ಅದಕ್ಕೆ ಯುಕ್ತವಾದ ವರ್ಣದಿಂದ ಕೂಡಿದ ವಸ್ತ್ರವನ್ನು ಭಗವಂತನ ಆಚ್ಛಾದನವಾಗಿ ಬಳಸಬೇಕು. ಆಗ ಮಾತ್ರ ಆ ದೇವತೆಯ ಪ್ರಸನ್ನತೆ ಸಾಧ್ಯ  

ಸೂಚನೆ : 24/7/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.

ಯೋಗತಾರಾವಳಿ - 15 ಸಾವಲ್ಲದ ಸಾವು (Yogataravali - 15 Savallada Savu)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)




ಯೋಗತಾರಾವಳೀ (ಶ್ಲೋಕ ೧೫)

ಅಶೇಷದೃಶ್ಯೋಜ್ಝಿತ

 ಜೀವನ-ಚಿತ್ರ-ಪಟ

ಧ್ಯಾನಕ್ಕೆ ಪ್ರಶಸ್ತವೆಂದು ಶುಭಾಶ್ರಯವಾಗಿ ಒಂದು ದೃಶ್ಯವನ್ನು ಗುರುವು ಶಿಷ್ಯನಿಗೆ ಕೊಡುವುದುಂಟು. ದೃಶ್ಯವೆಂದರೆ ಯಾವುದೋ ಸೂರ್ಯೋದಯದ ಚಿತ್ರವೆಂದೋ ಸರೋವರದ ದೃಶ್ಯವೆಂದೋ ಆಗಿರಬೇಕಿಲ್ಲ. ನಿರ್ದಿಷ್ಟ-ದೇವತಾ-ಮೂರ್ತಿಯನ್ನೋ ಮಂತ್ರವನ್ನೋ ಧ್ಯಾನಕ್ಕೆ ಪೋಷಕವೆಂದು ಕೊಟ್ಟಿರಬಹುದು.

ಹಾಗೆ ನೋಡಿದರೆ ಜಗತ್ತೆಲ್ಲವೂ ದೃಶ್ಯವೇ. ನಾಟಕಗಳಲ್ಲಿ ಹೇಗೋ ಹಾಗೆ ನಮ್ಮ ಜೀವನದ-ನಾಟಕದ ದೃಶ್ಯಾವಳಿಗಳು ಒಂದಾದ ಮೇಲೊಂದು ನಮ್ಮ ಮುಂದೆ ಬಂದು ಹೋಗುತ್ತಲೇ ಇರುತ್ತವೆ - ಕಣ್ಣು ಮುಚ್ಚಿ ಕುಳಿತಾಗ! ಇವು  ನಿಂತುಹೋದಾಗ ನಮ್ಮ ಮನಸ್ಸೂ ನಿಲ್ಲುವುದೆಂದು ಕೆಲವೊಮ್ಮೆ ತೋರುವುದುಂಟು. ಆದರೆ ಅವೆಂತು ನಿಂತಾವು? ಹೊರಗಣ ಘಟನಾ-ಪರಂಪರೆಗಳು ನಮ್ಮ ಮೇಲೆ ಅಪ್ಪಳಿಸುತ್ತಲೇ ಇರುತ್ತವೆ.

"ಅಲೆಗಳು ಅಷ್ಟಷ್ಟಿರಲು ಈಜು ಕಲಿಯಲಾಗದು; ಅಲೆ ನಿಲ್ಲಲಿ, ನೀರಿಗಿಳಿಯುವೆ" - ಎಂದುಕೊಂಡರೆ ಹೇಗೋ ಹಾಗೆಯೇ ಇವೂ. ಅವುಗಳು ಶಾಂತವಾಗಲೆಂದು ಕಾಯುವುದಾದರೆ "ಮದುವೆಯಾಗದ ಹೊರತು ಹುಚ್ಚು ಬಿಡದು, ಹುಚ್ಚು ಬಿಡದ ಹೊರತು ಮದುವೆಯಾಗದು" ಎನ್ನುವ ಪರಿಯಾಗುವುದು.

ಹೀಗಾಗಿ ನಾವು ಪ್ರಪಂಚವನ್ನು "ತೊರೆದುಹೋಗೋಣ – ಕೆಲಹೊತ್ತಾದರೂ" - ಎಂದುಕೊಳ್ಳುವುದೂ ಸುಲಭವೇನಲ್ಲ. ಪ್ರಪಂಚವೇ ನಮ್ಮನ್ನು ತೊರೆಯುವಂತಾಗಬೇಕು! ಒಂದರ್ಥದಲ್ಲಿ ನಿದ್ರೆಯಲ್ಲಿ ಇದಾಗುತ್ತದೆ. ಎಲ್ಲವನ್ನೂ ಒದರಿಕೊಂಡು ನಿದ್ದೆಮಾಡುತ್ತೇವೆ. ದಣಿವೋ, ಕಣ್ಣುರಿಯೋ - ಇಂದ್ರಿಯದ್ವಾರಗಳನ್ನು ಮುಚ್ಚಿ ಹೊರಪ್ರಪಂಚಕ್ಕೆ ಬಾಗಿಲು ಹಾಕಿಬಿಡುತ್ತದೆ.

ನಿದ್ದೆಗೆ ಮುಂಚಿನ ಅಳು!

ಹೀಗೆ ನಿದ್ರೆ "ಕವಿಯುವಂತೆ" ಧ್ಯಾನವೂ "ಕವಿಯಬಾರದೆ"? - ಎಂದು ಹಂಬಲಿಸುವಂತಾಗುತ್ತದೆ. ನಿದ್ರೆ ಮಾಡುವಾಗ ಮಕ್ಕಳು ಅಳುವುದೇಕೆ? ಇದಕ್ಕೆ ಕಾರಣವನ್ನು ಶ್ರೀರಂಗಮಹಾಗುರುಗಳು ಸೂಚಿಸಿದ್ದರು: ತಮಗೆ ಪರಿಚಿತವೂ ಇಷ್ಟವೂ ಆದ ವಸ್ತುಗಳನ್ನೆಲ್ಲ ಬಿಟ್ಟುಹೋಗಬೇಕಾಗುತ್ತಿರುವುದೇ ಮಗುವಿನ ಅಳುವಿಗೆ ಕಾರಣ! ಈ ಆಟಿಕೆಗಳು ಕೊಡುವ ಸುಖಕ್ಕಿಂತ ಹೆಚ್ಚಿನದೆಡೆಗೆ ಹೋಗುತ್ತಿದ್ದೇನೆಂಬ ಭ್ರಾಂತಿಯಿದ್ದಿದ್ದರಾದರೂ ಅಳುವು ಕಡಿಮೆಯಾಗುತ್ತಿತ್ತೇನೋ? ಅದಿಲ್ಲವಾಗಿಯೇ ಅಳು! ಬಿಟ್ಟಿರಲಾರೆ – ಎಂಬ ಅಳು!

ಆದರಿದೋ ರಾಜಯೋಗದಲ್ಲಿ ನೆಲೆಕಂಡವರಿಗೆ ಜಗತ್ತನ್ನು "ಬಿಟ್ಟುಹೋಗುವ" ಕ್ಲೇಶವಿಲ್ಲ. ದೃಶ್ಯ-ಜಗತ್ತೇ ಮರೆಯಾಗುವುದು, ತಾನೇ; ಭಾಗಶಃ ಅಲ್ಲ, ಪೂರ್ಣವಾಗಿ, ಅಶೇಷವಾಗಿ. ಜಗತ್ತಿನ ಆಟಗಳೆಲ್ಲವೂ - ಓಡಾಟ ಒಡನಾಟಗಳ ಸ್ಮೃತಿಗಳು ಸಹ - ಮುಗಿಯುತ್ತವೆ. ರೂಪಪ್ರಪಂಚ- ದೃಶ್ಯಪ್ರಪಂಚಗಳು ಮಾತ್ರವಲ್ಲದೆ ಶಬ್ದ-ಸ್ಪರ್ಶ-ರಸ-ಗಂಧಗಳ ಪ್ರಪಂಚವೆಲ್ಲವೂ ತಾವೇ ತೊರೆದುಹೋಗುವುದು. ಆಗೊಂದು ಅಂತರ್ಮುಖ-ಸ್ಥಿತಿಯೂ ಲಭಿಸುವುದು. ಆ ಸ್ಥಿತಿಯಲ್ಲಿ ಪ್ರಪಂಚದ ಬಾಧೆಯಿರದು.

ಇದೂ ಅಲ್ಲ- ಅದೂ ಅಲ್ಲ !

ಓಹೋ! ಹಾಗಾದರೆ ಅದು ನಿದ್ದೆಯೋ? - ಎಂದರೆ ನಿದ್ದೆಯಲ್ಲ. ಏಕೆ? ನಿದ್ದೆಹೊಡೆಯುತ್ತಿರುವವನು ಬಿದ್ದುಗೊಂಡಿರುತ್ತಾನೆ. ನಿದ್ದೆ ಹತ್ತಿದವನ ಮಾಂಸಖಂಡಗಳು ಶಿಥಿಲವಾಗಿಬಿಟ್ಟಿರುತ್ತವೆ: ಕೈಯನ್ನು ಎತ್ತಿ ಬಿಟ್ಟರೆ ಅದು ಧೊಪ್ಪನೆ ಬಿದ್ದೀತು. ನಿದ್ದೆ ಬಂದವನು  ಕುಳಿತಿರಲೂ ಆರ. ಕುಳಿತಿದ್ದಾಗಲೇ ನಿದ್ದೆ ಹತ್ತಿದ್ದರೋ ತಲೆ ತೂಗಾಡುವುದು, ತೂರಾಡುವುದು.

ರಾಜ-ಯೋಗದಲ್ಲಿ ನೆಲೆಗೊಂಡವನು ಹಾಗಲ್ಲ. ನೇರಾಗಿ ಕುಳಿತಿರುತ್ತಾನೆ; ತ್ರಿ-ಬಂಧಗಳ ಕಾರಣ ಅಂಗ-ಶೈಥಿಲ್ಯವಿರುವುದಿಲ್ಲ. ನೆಟ್ಟಗೆ ಕುಳಿತಿದ್ದಾನಲ್ಲಾ, ಈತನ ಸ್ಥಿತಿಯು ಎಚ್ಚರವೇ ಇರಬೇಕೆಂದುಕೊಂಡರೆ ಅದು ಎಚ್ಚರವೂ ಅಲ್ಲ! ಏಕೆ? ಎಚ್ಚರವಾಗಿರುವವನಿಗೆ ಸುತ್ತಲ ಪ್ರಪಂಚದ ಅನುಭವವಾಗುತ್ತಿರುತ್ತದೆ; ಎಚ್ಚರವಾಗಿರುವ ವ್ಯಕ್ತಿಯ ಯಾವ ಇಂದ್ರಿಯವೂ 'ರಜೆ' ತೆಗೆದುಕೊಳ್ಳುವುದಿಲ್ಲ! ಆದರೆ ರಾಜಯೋಗದ ಸ್ಥಿತಿಯಲ್ಲಿರುವಷ್ಟು ಹೊತ್ತೂ ಎಲ್ಲ ಇಂದ್ರಿಯಗಳೂ ಬೀಗಹಾಕಿಕೊಂಡು ಒಳಸೇರಿರುತ್ತವೆ! ದೃಶ್ಯವೇ ಇಲ್ಲದ ದೃಕ್ ಉಳಿದಿದೆ: ನಿರಂಜನ-ಸಾಕ್ಷಿ-ಭಾವವಾಗಿದೆ!

ಕಣ್ಣು ಮುಚ್ಚಿದೆ, ಕಿವಿ ಕೇಳಿಸದು, ಉಸಿರಾಟವೂ ಗೊತ್ತಾಗುತ್ತಿಲ್ಲ - ಎಂಬೀ ಕಾರಣಗಳಿಂದಾಗಿ 'ಇದೇನು ಮರಣವೋ?' ಎಂಬ ಪ್ರಶ್ನೆಯೇ? ಕೆಲಕಾಲಾನಂತರ ಎದ್ದು ಉಳಿದವರಂತೆಯೇ ವ್ಯವಹಾರವನ್ನು ಮಾಡುವರಾದ್ದರಿಂದ ಅವರನ್ನು ಸತ್ತಿದ್ದಾರೆನ್ನಲಾದೀತೇ?

ಅನುಭವದ ಅಚ್ಚುಮೆಚ್ಚು

ಶ್ರೀರಂಗಮಹಾಗುರುಗಳು ಬಹುವಾಗಿ ಮೆಚ್ಚಿದ ಶ್ಲೋಕವಿದು. ಬರೀ ಮೆಚ್ಚುವುದೇನು? ತಮ್ಮ ನಿತ್ಯಗಟ್ಟಲೆ ಜೀವನದಲ್ಲಿ ಇಂತಹ ಉತ್ತುಂಗ-ಸ್ಥಿತಿಯಲ್ಲಿ ಹಲವೊಮ್ಮೆ ಇದ್ದು ಬರುತ್ತಿದ್ದರು: ಸಂಕಲ್ಪಿಸಿದಾಗಲೆಲ್ಲ! ಬರೀ ಶ್ಲೋಕವಲ್ಲ, ಈ ತಂಪಿನ ಅನುಭವವೇ ಅವರಿಗೆ ಅಚ್ಚುಮೆಚ್ಚಿನದಾಗಿತ್ತು! 

ಯೋಗಿ-ರಾಜರ ರಾಜ-ಯೋಗದ ಅನುಭವ-ನಿರೂಪಣೆಗಳು ಅನ್ಯಾದೃಶವೇ ಸರಿ!

ಅಶೇಷ-ದೃಶ್ಯೋಜ್ಝಿತ-ದೃಙ್ಮಯಾನಾಂ

   ಅವಸ್ಥಿತಾನಾಮ್ ಇಹ ರಾಜ-ಯೋಗೇ |

ನ ಜಾಗರೋ, ನೈವ ಸುಷುಪ್ತಿ-ಭಾವಃ,

   ನ ಜೀವಿತಂ, ನೋ ಮರಣಂ - ವಿಚಿತ್ರಮ್ !||೧೫||

ಸೂಚನೆ : 24/7/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.

Friday, July 23, 2021

Ananda Tandava Of Nataraja - 15

Respond to (lekhana@ayvm.in)

The Interpretation of Coomaraswamy (Continued)

Against the modern scourge of dividing life into water-tight compartments, the rishi-artists embraced a holistic vision, grasping and representing the fundamental rhythms of life. 'No artist of today, however great,' says Coomaraswamy, 'could more exactly or more wisely create an image of that Energy which science must postulate behind all phenomena.'  (ibid., p.94).  We must remember here that Coomaraswamy was primarily trained in science (he was a D.Sc. in Geology), and it is only out of his own predilection towards perceiving deeper meanings of things that he examined works of art, all on his own. Coomaraswamy's ability to reconcile Time and Eternity, and the alternations of phase extending over vast regions of space and great tracts of time, reveal his imposing blend of scientific thinking and artistic imagination. Alluding to the theme of cyclicity embodied in the sculpture, he succinctly remarks: 'This is poetry; but none the less, science.' (ibid., p.95.)

Returning to the Naṭarāja theme in his History of Indian and Indonesian Art, Coomaraswamy adds (nearly ten years later): 'the movement of the dancing figure is so admirably balanced that while it fills all space, it seems nevertheless to be at rest - in the sense that a spinning top or a gyrostat is at rest; thus realising the unity and simultaneity of the Five Activities.' (A. Coomaraswamy, History of Indian and Indonesian Art, New York: Dover Publications, 1927, p.12).

It could be recalled in anticipation that the same analogy - of the spinning top (called buguri in Kannada) - was provided  by Sri Ranga Mahaguru also, utterly independent of Coomaraswamy's interpretation.

           On the whole, Coomaraswamy's interpretation of the Naṭarāja image—profoundly influential on a good deal of later thinking on Indian art in general, and on Naṭarāja in particular—essentially concerns the cosmic scales of time and space, and the notions of matter and energy that scientists of his time were preoccupied with -  and indeed still are.

Thursday, July 22, 2021

ಶ್ರೀರಾಮನ ಗುಣಗಳು - 14 ಸರ್ವಶಾಸ್ತ್ರಾರ್ಥತತ್ತ್ವಜ್ಞ – ಶ್ರೀರಾಮ (Sriramana Gunagalu - 14 Sarvashastrarthatattvajna - Sri Rama)


ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ 

(ಪ್ರತಿಕ್ರಿಯಿಸಿರಿ lekhana@ayvm.in)




ಶ್ರೀರಂಗಮಹಾಗುರುಗಳು ಶಾಸ್ತ್ರವೆಂದರೇನು? ಎಂಬುದನ್ನು ಅನೇಕ ಬಾರಿ ವಿವರಿಸಿದ್ದುಂಟು. ಅವರ ನುಡಿ ಈ ಬಗ್ಗೆ ಬಹಳ ಪ್ರಸ್ತುತವಾಗಿದೆ. " 'ಶಾಸ್ತ್ರ'ವೆಂದು ನಾನು ಹೇಳುತ್ತಿರುವುದು ಪುಸ್ತಕದ ಕಂತೆಯನ್ನಲ್ಲ; ಸೃಷ್ಟಿಯಲ್ಲಿರುವ ಶಾಸನವೇ ಶಾಸ್ತ್ರ" ಎಂದು. ಭಗವಂತನು ಸೃಷ್ಟಿಮಾಡಿದ ಪ್ರತಿಯೊಂದು ಪದಾರ್ಥದಲ್ಲೂ ಅದರದ್ದೇ ಆದ ಅಸ್ತಿತ್ವ ಇರುತ್ತದೆ, ಅದರದ್ದೇ ಆದ ನಿಲುವು ಇರುತ್ತದೆ. ಅದರದ್ದೇ ಆದ ಪ್ಲಾನ್ ಇರುತ್ತದೆ. ಇದರ ಅರಿವನ್ನೇ ಶಾಸ್ತ್ರವೆನ್ನುತ್ತಾರೆ. ಉದಾಹರಣೆಗೆ ಒಂದು ಬೀಜವನ್ನು ತೆಗೆದುಕೊಂಡರೆ, ಅದು ಯಾವ ರೀತಿಯಾಗಿ ತನ್ನನ್ನು ಬೆಳೆಸಿಕೊಳ್ಳಬೇಕು? ಯಾವ ರೀತಿಯಾಗಿ ಫಲವನ್ನು ಕೊಡಬೇಕು? ಇತ್ಯಾದಿ ಎಲ್ಲವೂ ಅದರಲ್ಲೇ ನಿಗೂಢವಾಗಿರುತ್ತದೆ. ಈ ಬೀಜದ ಶಾಸ್ತ್ರವೇನು? ಎಂಬುದನ್ನು ಅರಿಯಬೇಕು. 

ಬೀಜವನ್ನು ನೆಡುವಾಗ ಅದರ ಪ್ಲಾನ್(plan) ಅನ್ನು ಅರಿತು, ಅದಕ್ಕೆ ಬೇಕಾದ ನೀರು, ಗೊಬ್ಬರ ಇತ್ಯಾದಿ ಉಪಯುಕ್ತವಾದ ಸಾಮಗ್ರಿಗಳನ್ನು ಒದಗಿಸಬೇಕು. ಆಗ ಆ ಬೀಜವು ಉತ್ಕೃಷ್ಟವಾದ ಫಸಲನ್ನು ಕೊಡಲು ಸಾಧ್ಯ. ಬೀಜದ ಆಶಯಕ್ಕೆ ವಿರುದ್ಧವಾಗಿ 'ಗಿಡಕ್ಕೆ ನೀರನ್ನು ಉಣಿಸಬೇಕು' ಎಂದು ಅದಕ್ಕೆ ಹೆಚ್ಚಾಗುವಷ್ಟು ಕೊಟ್ಟರೂ ಆಗದು. ಅಥವಾ ಸಕಾಲದಲ್ಲಿ ಕೊಡುವುದರ ಬದಲು ಅಕಾಲದಲ್ಲಿ ಕೊಟ್ಟಾಗಲೂ ಉದ್ದಿಷ್ಟವಾದ ಫಲವನ್ನು ನಿರೀಕ್ಷಿಸಲೂ ಸಾಧ್ಯವಿಲ್ಲ. ಇದೊಂದು ಸಾಮಾನ್ಯವಾದ ಸ್ಥಾವರದ ವಿಷಯ. ಅತಿಶಯವಾದ ಜೀವಶಕ್ತಿಯು ಇರುವಂತಹ ಜಂಗಮವಾದ ಸೃಷ್ಟಿಯನ್ನು ತಿಳಿಯಬೇಕಾದರೂ ಅಷ್ಟೇ ಜವಾಬ್ದಾರಿ ಇದೆ. ಅದರಲ್ಲೂ ಮಾನವನು ಎಲ್ಲಾ ಪ್ರಾಣಿ, ಪಶು, ಪಕ್ಷಿಗಳಿಗಿಂತಲೂ ಶ್ರೇಷ್ಠವಾದ ಸೃಷ್ಟಿ. ಏಕೆಂದರೆ ಮಾನವರೂಪದಲ್ಲಿ ಮಾತ್ರ ಭಗವಂತನನ್ನು ಕಾಣಲು ಸಾಧ್ಯ ಎಂಬುದು ನಮ್ಮ ಋಷಿಮಹರ್ಷಿಗಳ ಒಕ್ಕೊರಳ ಸಂದೇಶವಾಗಿದೆ. ಹಾಗಾದರೆ ಈ ಮಾನವನ ಶಾಸ್ತ್ರವೇನು? ಎಂಬುದನ್ನು ಯಾರು ಪರಿಪೂರ್ಣವಾಗಿ ತಿಳಿಯಲು ಸಾಧ್ಯ ? ಎಂದರೆ ಶ್ರೀರಾಮನಂತಹ ಶುದ್ಧಾತ್ಮರು ಮಾತ್ರ. ಆದ್ದರಿಂದಲೇ ಶ್ರೀರಾಮನನ್ನು 'ಸರ್ವಶಾಸ್ತ್ರಾರ್ಥತತ್ತ್ವಜ್ಞ' ಎಂದು ಸಂಬೋಧಿಸಿರುವುದು. ಈ ಬಿರುದು ಶ್ರೀರಾಮನಂತಹವರಿಗೆ ಮಾತ್ರ ಸಲ್ಲುವಂತಹದ್ದು. 'ಏಕಸ್ಮಿನ್ ಜನ್ಮನಿ ಏಕಮೇವ ಶಾಸ್ತ್ರಮ್' – ಒಂದು ಜನ್ಮದಲ್ಲಿ ಒಂದೇ ಶಾಸ್ತ್ರವನ್ನು ಮಾತ್ರ ಓದಬಹುದು ಎಂಬ ಮಾತಿದೆ. ಆದರೆ ಶ್ರೀರಾಮನು ಹೇಗೆ ಎಲ್ಲಾ ಶಾಸ್ತ್ರಗಳ ತತ್ತ್ವವನ್ನು ತಿಳಿದಿದ್ದನು? ಎಂಬ ಸಂಶಯ ಬರುತ್ತದೆ. ಯಾವುದನ್ನು ತಿಳಿದರೆ ಎಲ್ಲವನ್ನೂ ತಿಳಿದಂತೆ ಆಗುವುದೋ; ಅದನ್ನು ತಿಳಿದರೆ ಅವನನ್ನು 'ಸರ್ವಜ್ಞ' ಎಂದೇ ಕರೆಯಲಾಗುವುದು. ಅಂದರೆ ನಮ್ಮ ಜೀವನದಲ್ಲಿ ಸರ್ವರಲ್ಲೂ, ಚೈತನ್ಯರೂಪದಲ್ಲಿ ನೆಲೆ ನಿಂತು, ಎಲ್ಲಾ ಕ್ರಿಯೆಯನ್ನು ಯಾವನು ನಿಯಂತ್ರಿಸುತ್ತಿದ್ದಾನೋ; ಅವನನ್ನೇ 'ಭಗವಂತ' ಎಂದು ಕರೆಯಲಾಗುತ್ತದೆ. ಶ್ರೀರಾಮನು ಭೌತಿಕವಾಗಿ ಮಾನವನಂತೆ ಕಂಡರೂ; ಸೂಕ್ಷ್ಮ, ಇನ್ನೂ ಸೂಕ್ಷ್ಮವಾಗಿ ನೋಡಿದಾಗ ಅವನು ಸಾಕ್ಷಾತ್ ಪರಬ್ರಹ್ಮರೂಪ. ಹಾಗಾಗಿ ಪರಬ್ರಹ್ಮ ತಾನೆ ಎಲ್ಲವನ್ನೂ ತಿಳಿದಿರಲು ಸಾಧ್ಯ! ತನ್ನನ್ನು ತಾನು ತಿಳಿದವನು ಮಾತ್ರ ತಾನೇ ಎಲ್ಲವನ್ನೂ ತಿಳಿಯಲು ಸಾಧ್ಯ! ಈ ನೇರದಲ್ಲಿ ಶ್ರೀರಾಮನು ಭಗವಂತನ ಅವತಾರರೂಪನಾಗಿ ಸರ್ವಶಾಸ್ತ್ರಗಳ ಮರ್ಮವನ್ನು ಅರಿತಿದ್ದಾನೆ ಎಂದು ಹೇಳಲು ಸಾಧ್ಯ.

ಸೂಚನೆ : 18/7/2021 ರಂದು ಈ ಲೇಖನವು  ಹೊಸದಿಗಂತ ಪತ್ರಿಕೆಯ " ಶ್ರೀರಾಮನ ಗುಣಗಳು " ಅಂಕಣದಲ್ಲಿ ಪ್ರಕಟವಾಗಿದೆ.

ಷೋಡಶೋಪಚಾರ - 9 ಸ್ನಾನ (Shodashopachaara - 9 Snana)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ 
(ಪ್ರತಿಕ್ರಿಯಿಸಿರಿ lekhana@ayvm.in)



ಷೋಡಶೋಪಚಾರಗಳಲ್ಲಿ ಆರನೆಯ ಉಪಚಾರ. ಭಗವಂತನಿಗೆ ಸ್ನಾನವನ್ನು ಮಾಡಿಸುವುದು. . ಈ ಹಿಂದೆ ಉಪಚಾರಗಳ ಬಗ್ಗೆ ಹೇಳಿದ ತಾತ್ತ್ವಿಕ ಅರ್ಥವು ಈ ಉಪಚಾರಕ್ಕೂ ಸಲ್ಲುತ್ತದೆ. ಸ್ನಾನೋಪಚಾರ ಎಂದರೆ ಸ್ನಾನದಿಂದ ಭಗವಂತನ ಪ್ರತಿಮೆ ಅಥವಾ ವಿಗ್ರಹವನ್ನು  ಶುದ್ಧಿಗೊಳಿಸುವುದು. ಆದರೆ ನಿರಾಕಾರನಾದ ಭಗವಂತನಿಗೆ ಇಂತಹ ಉಪಚಾರ ಸಲ್ಲುವುದಾದರೂ ಹೇಗೆ? ಎಂಬ ಪ್ರಶ್ನೆ ಹಾಗೆಯೇ ಉಳಿಯುತ್ತದೆ. ಅಂದರೆ ಇಲ್ಲಿ ಸ್ನಾನ ಮಾಡಿಸುವ ವಿಗ್ರಹವು ಭೌತಿಕವಾದ ಯಾವುದೋ ಒಂದು ಲೋಹವೋ, ಮೃತ್ತಿಕೆಯೋ ಅಥವಾ ಇನ್ನಾವುದೋ ಪದಾರ್ಥದಿಂದ ಮಾಡಿದ್ದು ಎಂದು ಮಾತ್ರ ಭಾವಿಸಬಾರದು. ಈ ವಿಗ್ರಹದಲ್ಲಿ ಹಿಂದೆ ಮಾಡಿರುವ ಆವಾಹನಾದಿ ಉಪಚಾರಗಳಿಂದ ಭಗವಂತನ ದಿವ್ಯವಾದ ಸಾನ್ನಿಧ್ಯ ಬಂದಿರುತ್ತದೆ. ಹಾಗಾಗಿ ಅಲ್ಲಿ ಮಾಡುವ ಸೇವೆಯು ನೇರವಾಗಿ ಭಗವಂತನಿಗೇ ತಲುಪುವುದರಲ್ಲಿ ಯಾವ ಸಂಶಯವೂ ಇಲ್ಲ. ಯಾವ ರೀತಿಯಾಗಿ ಒಬ್ಬ ವ್ಯಕ್ತಿಗೆ ಸ್ನಾನವನ್ನು ಮಾಡಿಸಲಾಗುತ್ತದೆಯೋ ಅಂತೆಯೇ ಭಗವಂತನಿಗೂ ಸ್ನಾನವನ್ನು ಮಾಡಿಸಲಾಗುತ್ತದೆ. ಅಭ್ಯಂಗಸ್ನಾನ, ಮೃತ್ತಿಕಾಸ್ನಾನ, ಸುಗಂಧದ್ರವ್ಯಯುಕ್ತವಾದ ಜಲದಿಂದ ಸ್ನಾನ, ಮಜ್ಜನಸ್ನಾನ ಹೀಗೆ.ಪಂಚಾಮೃತ ಮೊದಲಾದ ದ್ರವ್ಯಗಳಿಂದ ದೇವರಿಗೆ ಅಭಿಷೇಕವನ್ನು ಮಾಡುತ್ತೇವೆ. ಮನುಷ್ಯನು ಮಾಡುವ ಸ್ನಾನವು ದೇಹದಲ್ಲಿರುವ ಕೊಳೆಯನ್ನು ತೊಳೆದು, ತನ್ಮೂಲಕ ಮಾನಸಿಕವಾದ ಮಲವನ್ನೂ ತೊಳೆಯಲು ಸಹಕರಿಸುತ್ತದೆ. ಭಗವಂತನಿಗೆ ಮಾಡಿದ ಸ್ನಾನಕ್ಕೆ 'ಮಹಾಭಿಷೇಕ' ವೆಂದು ಕರೆಯಲಾಗುತ್ತದೆ. 

ಇಲ್ಲಿ ಮಾಡಿದ ಅಭಿಷೇಕಜಲದ ಪಾನ, ಸ್ನಾನ, ಪ್ರೋಕ್ಷಣಗಳು ನಮ್ಮನ್ನು ಶುದ್ಧಿಗೊಳಿಸುವುದು. ಇದು ನಮ್ಮನ್ನು ಶುದ್ಧಿಗೊಳಿಸುವ ಪ್ರಕ್ರಿಯೆಯೇ ಹೊರತು, ಭಗವಂತನಿಗೆ ಅಂಟಿದ ಮಲವನ್ನು ತೆಗೆಯುವ ಕಾರ್ಯವೆಂದರ್ಥವಲ್ಲ. ಭಗವಂತನಿಗೆ ಅಭಿಷೇಕೋಪಚಾರವನ್ನು ಸಲ್ಲಿಸುವಾಗ ನಾವು ಯಾವ ದೇವತೆಯನ್ನು ಆರಾಧಿಸುತ್ತೇವೋ ಅದಕ್ಕೆ ಸೂಕ್ತವಾದ ಮಂತ್ರ-ಶ್ಲೋಕಗಳನ್ನು ಪಠಿಸುತ್ತಾ ಮಂತ್ರಪೂತವಾದ ಜಲದಿಂದ ಪ್ರೋಕ್ಷಣ, ಅಭಿಷೇಕ, ಮಜ್ಜನ ಮೊದಲಾದ ವಿಧಾನಗಳಿಂದ ಸ್ನಾನವನ್ನು ಮಾಡಿಸುತ್ತೇವೆ. 'ಅಭಿಷೇಕ ಪ್ರಿಯಃ ಶಿವಃ' ಎಂಬಂತೆ ಮಹಾದೇವನಿಗೆ ಅಭಿಷೇಕವೆಂದರೆ ಅತ್ಯಂತ ಪ್ರಿಯ. ಹಾಗಾಗಿ ಶಿವನ ಪೂಜೆಯನ್ನು ಮಾಡುವಾಗ ಅಭಿಷೇಕವೆಂಬ ಉಪಚಾರವು ವಿಶೇಷತೆಯನ್ನು ಪಡೆದುಕೊಳ್ಳುತ್ತದೆ. ಉಳಿದ ಉಪಚಾರಗಳು ಇಲ್ಲಿ ಗೌಣವಾಗಿರುತ್ತವೆ. ಈ ಉಪಚಾರದಲ್ಲಿ ಬಳಸಲ್ಪಡುವ ವಿಶೇಷ ದ್ರವ್ಯವು ನೀರು ಆಗಿದೆ. ನೀರಿಗೂ ಶಿವನಿಗೂ ಯಾವುದೋ ಒಂದು ಬಗೆಯ ಸಂಬಂಧವಿರುವುದರಿಂದಲೇ ಶಿವನಿಗೆ ಅಭಿಷೇಕವು ಪ್ರಿಯವೆಂದು ಹೇಳಲು ಕಾರಣವಾಗಿದೆ. ಉಪಚಾರವು ಆ ದೇವತೆಯ ಸಮೀಪಕ್ಕೆ ಸಾಗಲು ಸಾಧನವಷ್ಟೆ.

ಸೂಚನೆ : 17/7/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ 
ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.

ಯೋಗತಾರಾವಳಿ - 14 ಶ್ರಮವಿಲ್ಲದ ಧ್ಯಾನ (Yogataravali - 14 Shramavillada Dhyana)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)




ಯೋಗತಾರಾವಳೀ (ಶ್ಲೋಕ ೧೪)

ನ ದೃಷ್ಟಿಲಕ್ಷ್ಯಾಣಿ.....

ನಮಗೆ ತುಂಬ ಇಷ್ಟವಾಗಿರುವ ಚಲಚ್ಚಿತ್ರವೊಂದನ್ನು ನೋಡುತ್ತಿದ್ದೇವೆನ್ನೋಣ. ಅದರಲ್ಲಿ ನಮಗೆ ತುಂಬ ಇಷ್ಟವಾದ ಸಂನಿವೇಶವು ಬಂದಾಗ ನಾವು ಪ್ರಪಂಚವನ್ನೇ ಮರೆತಿರುತ್ತೇವೆ. ಹಾಗೆಯೇ ನಮಗೆ ಇಷ್ಟವಾದ ಗಾನವು ಬರುತ್ತಿದ್ದಾಗಲೂ ನಮ್ಮ ಮನಸ್ಸು ಅದರಲ್ಲಿಯೇ ಸೇರಿಹೋಗಿರುತ್ತದೆ. ಒಳ್ಳೆಯ ಗಂಧ, ರುಚಿಸುವ ಖಾದ್ಯ, ಪ್ರಿಯವಾದ ಸ್ಪರ್ಶ - ಇವುಗಳಿದ್ದಾಗಲೂ ಹಾಗೆಯೇ.

ಚರ್ಮ, ನಾಲಿಗೆ, ಮೂಗು – ಈ ಇಂದ್ರಿಯಗಳ ವಿಷಯವನ್ನು ಆಸ್ವಾದಿಸುತ್ತಿದ್ದಾಗ ಏನಾದರೂ ದೊಡ್ಡ ಸದ್ದಾದರೆ ನಮ್ಮ ಏಕಾಗ್ರತೆಗೆ ಬೇಗನೆ ಭಂಗ ಬಂದುಬಿಡುವುದುಂಟು. ಆದರೆ ಚಲಿಸುತ್ತಿರುವ ದೃಶ್ಯಾವಳಿಯನ್ನು ಆಸ್ವಾದಿಸುತ್ತಿರುವಾಗ ಎಷ್ಟೋ ವೇಳೆ ಸದ್ದು ಕೂಡ ನಮ್ಮ ಮನಸ್ಸನ್ನು ಸುಲಭವಾಗಿ ಹೊರತರಲಾರದು. ಒಂದು ಇಂದ್ರಿಯದ ಕಾರ್ಯಕ್ಕೆ ಮತ್ತೊಂದರ ವಿಷಯವು ಅಡ್ಡಬರಬಹುದಾದರೂ, ಇಂದ್ರಿಯಗಳಲ್ಲೆಲ್ಲಾ ಪ್ರಧಾನವಾದುದೆಂದರೆ ಕಣ್ಣೇ.

ದೃಷ್ಟಿ-ಲಕ್ಷ್ಯಗಳು

ಆಧುನಿಕ-ವಿಜ್ಞಾನವು ತೋರಿಸಿಕೊಡುವಂತೆ, ಕಣ್ಣಿಗೆ ಸಂಬಂಧಪಟ್ಟಂತೆ ಇರುವಷ್ಟು ನರಗಳು ಮತ್ತಾವ ಇಂದ್ರಿಯಕ್ಕೂ ಇಲ್ಲ. ಹೀಗಾಗಿ ಯಾವುದೇ ಇಂದ್ರಿಯಕ್ಕೊಂದು ನಿರ್ದಿಷ್ಟ-ವಿಷಯವನ್ನು ಕೊಟ್ಟು ಮನಸ್ಸನ್ನು ಏಕಾಗ್ರಗೊಳಿಸುವುದಕ್ಕಿಂತ ನೇತ್ರೇಂದ್ರಿಯಕ್ಕೊಂದು ಯುಕ್ತವಾದ ದೃಶ್ಯವನ್ನು ಕೊಟ್ಟು ಮನಸ್ಸನ್ನು ಕಟ್ಟಿಹಾಕುವುದು ಸುಲಭತರ. ಎಂದೇ ಧ್ಯಾನಕ್ಕೆ ಶುಭಾಶ್ರಯವನ್ನು ಕೊಡುವಾಗ ಕಣ್ಣಿಗೆ ಗೋಚರವಾಗುವುದನ್ನೇ ಪ್ರಧಾನವಾಗಿ  ಕೊಡುವುದು. ಕೆಲವೊಮ್ಮೆ ದೂರದ ನಕ್ಷತ್ರವನ್ನೋ, ಬಳಿಯ ದೀಪ-ಶಿಖೆಯನ್ನೋ ಲಕ್ಷ್ಯಕ್ಕೆ ಕೇಂದ್ರವಾಗಿ ಕೊಡುವುದುಂಟು – ಐಕಾಗ್ರ್ಯ-ವೃದ್ಧಿಗಾಗಿ. ಇವೆಲ್ಲವೂ ದೃಷ್ಟಿ-ಲಕ್ಷ್ಯಗಳೆನಿಸುತ್ತವೆ.

ಹೀಗಲ್ಲದೆ ನಾಸಾಗ್ರ, ನಾಭಿ-ಸ್ಥಾನ, ಹೃದಯ-ಕಮಲ ಮೊದಲಾದ ಸ್ಥಾನಗಳನ್ನು ನಿರ್ದೇಶಿಸಿ, ಅಲ್ಲಿ ಮನಸ್ಸನ್ನು ಕೇಂದ್ರೀಕರಿಸೆನ್ನುವ ಉಪದೇಶದ ಕ್ರಮವೂ ಇರಬಹುದು.

ಇಷ್ಟಲ್ಲದೆ ಎಲ್ಲಿ ಕುಳಿತುಕೊಳ್ಳಬೇಕು, ಯಾವಾಗ, ಹೇಗೆ - ಎಂದು ಮುಂತಾದ ಲೆಕ್ಕಾಚಾರಗಳೂ ಬರಬಹುದು. ಗುಹೆ-ವೃಕ್ಷಮೂಲಗಳಲ್ಲಿ, ವ್ಯಾಘ್ರಚರ್ಮ-ಕೃಷ್ಣಾಜಿನಗಳ ಮೇಲೆ - ಮುಂತಾದ ಸ್ಥಾನ-ನಿರ್ದೇಶವನ್ನೋ; ಅಥವಾ ಸಂಧ್ಯಾಕಾಲ-ಮಧ್ಯರಾತ್ರಿ ಮುಂತಾದ ಕಾಲ-ನಿರ್ದೇಶವನ್ನೋ - ಹೇಳುವುದೂ ಉಂಟು.

ಆದರೆ ಕೇವಲ-ಕುಂಭಕದಿಂದಲೇ ಲಭ್ಯವಾಗುವ ರಾಜಯೋಗವು ಚೆನ್ನಾಗಿ ಅಭಿವೃದ್ಧಿಗೊಳ್ಳುತ್ತಿದ್ದಲ್ಲಿ, ಈ ನಿಯಮಗಳೆಲ್ಲ ಕಳಚಲಾರಂಭಿಸುವುವು. ಈ ನಿಯಮಗಳಿಂದಾಗಬೇಕಾದ ಲಾಭವು ಕೇವಲ-ಕುಂಭಕದ ಪ್ರಗತಿಯೊಂದಿಗೆ ತಾನೇ ಉಂಟಾಗಲು ಆರಂಭವಾಗುತ್ತದೆ. ದೃಷ್ಟಿ-ಲಕ್ಷ್ಯಗಳು, ಚಿತ್ತ-ಬಂಧ, ದೇಶ-ಕಾಲಗಳು ಹಾಗೂ ವಾಯು-ನಿರೋಧ - ಎಂಬೀ ನಾಲ್ಕೈದು ಕ್ರಮಗಳು ಪ್ರಯತ್ನವನ್ನು ಅಪೇಕ್ಷಿಸುತ್ತವೆ. ಆದರೆ ಕೇವಲಕುಂಭಕಾವಸ್ಥೆಯು ಈ ಬಗೆಯ ಯತ್ನಗಳನ್ನುಳಿದೂ ಅವುಗಳ ಗುರಿಯನ್ನು ಸಾಧಿಸಿಕೊಡುತ್ತದೆ.

ಧಾರಣಾ-ಧ್ಯಾನಗಳು

ಅಷ್ಟೇ ಅಲ್ಲ. ಧಾರಣಾ-ಧ್ಯಾನಗಳು ತಮ್ಮದೇ ಆದ ಶ್ರಮವನ್ನು ಅಪೇಕ್ಷಿಸುತ್ತವೆ. ಪ್ರತ್ಯಾಹಾರದಿಂದ ಸಿಕ್ಕಿದುದು ಧಾರಣೆಗೆ ದಕ್ಕದೇ ಹೋಗಬಹುದು! ಯೋಗವಾದದ್ದಕ್ಕೆ ಕ್ಷೇಮವಿರದೆ ಹೋದಂತೆ!

ಧ್ಯಾನಕ್ರಮವು ಹೀಗೆ: ಮೊದಲು ಪ್ರಾಣಾಯಾಮದಿಂದ ಪ್ರತ್ಯಾಹಾರವು ಸಾಧಿತವಾಗಬೇಕು. ಪ್ರತ್ಯಾಹೃತವಾದುದರ ಧಾರಣೆಯಾಗಬೇಕು. ಧಾರಣೆಯಿಂದ ಧೃತವಾದದ್ದರಲ್ಲಿ ಮಧ್ಯೆ ಮಧ್ಯೆ ಅಂತರವು ಉಂಟಾಗಬಾರದು: ಅರ್ಥಾತ್, ಅದು ನಿರ್-ಅಂತರವಾಗಬೇಕು. ಆ ನಿರಂತರತೆಯೇ ಧ್ಯಾನ.

ರಾಜಯೋಗ-ರಾಜಮಾರ್ಗ

ಪ್ರತ್ಯಾಹಾರ-ಧಾರಣಾ-ಧ್ಯಾನಗಳಲ್ಲಿ ಒಂದೊಂದಕ್ಕೂ ಪರಿಶ್ರಮವು ಬೇಕು. ಕೊನೆಗೆ ಏನಿಲ್ಲವೆಂದರೂ ಮತ್ತಾವುದೋ ಸಣ್ಣಸ್ಮೃತಿಯೊಂದು ನಡುವಿನಲ್ಲಿ ಪುಟಿದು ಈ ಮೂರರಲ್ಲಾವುದನ್ನಾದರೂ ಭಂಗಪಡಿಸಬಲ್ಲುದು: ಸಣ್ಣದೊಂದು ರಂಧ್ರದಿಂದಾಗಿ ಪೂರ್ಣ-ಕುಂಭವು ರಿಕ್ತ-ಕುಂಭವಾಗಿಬಿಡಬಹುದಲ್ಲವೆ! (ರಿಕ್ತವೆಂದರೆ ಖಾಲಿ). ಎಂದೇ ಈ ಮೂರೂ ಮನಸ್ಸಿಗೇ ನೇರವಾಗಿ ಸಂಬಂಧಪಡುವುದರಿಂದ ಎಚ್ಚರವನ್ನು ಅಪೇಕ್ಷಿಸುತ್ತವೆ.

ಆದರೆ ಕೇವಲ-ಕುಂಭಕವೆಂಬುದು ರಾಜ-ಯೋಗಕ್ಕೆ ಹಾದಿ; ಅಥವಾ ಅದುವೇ ರಾಜ-ಯೋಗವೆನ್ನಬಹುದು. ರಾಜಯೋಗದಲ್ಲಿ ಪ್ರಗತಿಯು ಸುಸೂತ್ರವಾಗಿ ಸಾಗಿತೆಂದರೆ ಹಿಂದೆಪಡುತ್ತಿದ್ದ ಪಾಡುಗಳು ಮುಂದುಮುಂದಕ್ಕಿಲ್ಲ: ಯೋಗಗಳ ರಾಜನೇ ರಾಜ-ಯೋಗ.

ಕಲ್ಲುಮುಳ್ಳಿನ ಮಾರ್ಗವಾದರೆ ಮುಂದಕ್ಕೆಳಸಿದರೂ ಮಂದಗತಿಯೇ; ಹಳ್ಳದಿಣ್ಣೆಗಳ ಹಾದಿಯಾದರೆ ಹೆಜ್ಜೆಹೆಜ್ಜೆಗೂ ಏಳುಬೀಳುಗಳೇ; ಕೊಚ್ಚೆ-ಪಾಚಿಗಳ ದಾರಿಯಾದರೆ ಅಲ್ಲಲ್ಲಿ ಜಾರಿಬೀಳುವ ಸಾಧ್ಯತೆಯೇ. ರಾಜಯೋಗವೆಂಬ ರಾಜಮಾರ್ಗದಲ್ಲಿ ಸಾಗುವವನಿಗೆ ಇದಾವ ಆತಂಕವೂ ಇಲ್ಲ: ಶ್ರಮ ಅಲ್ಪ, ಪ್ರಗತಿ ಪ್ರಕೃಷ್ಟ.

ಇದು ರಾಜ-ಯೋಗದ ಹಿರಿಮೆ.

ನ ದೃಷ್ಟಿ-ಲಕ್ಷ್ಯಾಣಿ, ನ ಚಿತ್ತ-ಬಂಧಃ

   ನ ದೇಶ-ಕಾಲೌ, ನ ಚ ವಾಯು-ರೋಧಃ, |

ನ ಧಾರಣಾ-ಧ್ಯಾನ-ಪರಿಶ್ರಮೋ ವಾ

   ಸಮೇಧಮಾನೇ ಸತಿ ರಾಜ-ಯೋಗೇ ||೧೪||

ಸೂಚನೆ : 7/7/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.


Friday, July 16, 2021

Ananda Tandava Of Nataraja - 14

Respond to (lekhana@ayvm.in)

  

 The Interpretation of Coomaraswamy (Continued)

           Coomaraswamy isolates the features of Śiva in order that one may grasp the specialities of Naṭarāja in better focus. He proceeds to describe the Pañcakṛtya ("the five activities") of Naṭarāja viz: Sṛṣṭi (overlooking, creation, evolution), Sthiti (preservation, support), Saṁhāra (destruction, evolution*), Tirobhāva (veiling, embodiment, illusion, and also, giving rest), Anugraha (release, salvation, grace). This cosmic activity is the central motif of the dance. (ibid., p.87.)

*We discern that what Coomaraswamy intended was "involution" here, and not "evolution", which has already been covered under Sṛṣṭi. We may also note here that Coomaraswamy does not employ diacritics in this chapter (and, for that matter, in this book itself) as it was intended for a very general audience (especially Western); (whence also hardly any Sanskrit citations).

The three key points of his analysis are thus stated by himself:

The Essential Significance of Shiva's Dance is threefold: First, it is the image of his Rhythmic Play as the Source of all Movement within the Cosmos, which is Represented by the Arch; Secondly, the Purpose of his Dance is to Release the Countless souls of men from the Snare of Illusion; Thirdly, the Place of the Dance, Chidambaram, the Centre of the Universe, is within the Heart. (ibid., p.93.) (Italics as in the original).

After identifying the essence of the symbolism, he proceeds to recognise the element of beauty, calling attention to the grandeur of this dance conceived of as a synthesis of science, religion, and art.

How amazing the range of thought and sympathy of those rishi-artists who first conceived such a type as this, affording an image of reality, a key to the complex tissue of life, a theory of nature, not merely satisfactory to a single clique or race, nor acceptable to the thinkers of one century only, but universal in its appeal to the philosopher, the lover, and the artist of all ages and all countries. (ibid., p.94.)

Thursday, July 15, 2021

ಲಕ್ಷ್ಯದತ್ತ ಸಾಗೋಣ ( Lakshyadatta Sagona)



ಲೇಖಕರು; ಡಾ. ರಾಮಮೂರ್ತಿ ಟಿ. ವಿ

(ಪ್ರತಿಕ್ರಿಯಿಸಿರಿ lekhana@ayvm.in)



ಫುಟ್- ಬಾಲ್ ಆಟದಲ್ಲಿ ಕ್ರೀಡಾಪಟುಗಳಿರಬೇಕಾದ ಮನೋಧರ್ಮ ಗಮನಿಸಿದರೆ, ಅವು ಜೀವನದಲ್ಲಿಯೂ ಅನುಸರಿಸಬಹುದಾದ ಒಳ್ಳೆಯ ಅಂಶಗಳೆಂದು ಮನವರಿಕೆಯಾಗುತ್ತದೆ. ತಂಡದ ಪಟು ತನ್ನ ತಂಡದ ಇನ್ನೊಬ್ಬ ಪಟುವಿಗೆ ಚೆಂಡನ್ನು ರವಾನಿಸುತ್ತಾನೆ. ಆತ ಇನ್ನೊಬ್ಬನಿಗೆ, ಹೀಗೆ ತಂಡದವರೆಲ್ಲಾ ಗುರಿಯತ್ತ ಸಾಗುತ್ತಲೇ ಇರುತ್ತಾರೆ. ಗುರಿಯನ್ನು ಮುಟ್ಟಿ ಪಂದ್ಯದಲ್ಲಿ ಗೆಲುವು ಸಾಧಿಸಬೇಕಾದರೆ- ಮಾರ್ಗದರ್ಶಿಯ ಸಲಹೆಗಳು, ಕ್ರೀಡೆಯ ನಿಯಮದ ಪಾಲನೆಯ ಬಗ್ಗೆ ಕಾಳಜಿ, ಧ್ಯೇಯದ ಚಿಂತನೆ, ಶಿಸ್ತು, ಪರಿಶ್ರಮ, ಏಕಾಗ್ರತೆ ಹಾಗೂ ಮತ್ತು ಸತತ ಅಭ್ಯಾಸ ಬೇಕಾಗುತ್ತವೆ. ಇವುಗಳಲ್ಲಿ ಯಾವುದೊಂದು ಕೊರತೆಯಾದರೂ ಕ್ರೀಡಾಪಟು ಪಂದ್ಯದಿಂದ ಹೊರಗಿರಬೇಕಾಗುತ್ತದೆ.


ಹೀಗೆಯೇ, ಆತ್ಮಕ್ರೀಡಃ ಆತ್ಮರತಿಃ, ಖೇಲತಿ ಮಮ ಹೃದಯೇ ರಾಮಃ, ಮನೆಯೊಳಗಾಡೋ ಗೋವಿಂದ ಎಂಬ ಸಾಹಿತ್ಯಗಳಲ್ಲಿ ಅಂತರಂಗ ಭಾವಧಾರೆಯನ್ನು ನೋಡಬಹುದು. ಇಂತಹ ಭಾವಧಾರೆ ಹರಿಯಬೇಕಾದರೆ, ಯೋಗಭೋಗಮಯವಾದ ಜೀವನವನ್ನನುಸರಿಸಿ ಬಾಳಿದರೆ ಸಾಧ್ಯವೆಂಬುದು ಸನಾತನ ಭಾರತೀಯರ ನಿಲುವು. ಇಲ್ಲಿ ಯೋಗವೆಂದರೆ ಸತ್ಯಸಾಕ್ಷಾತ್ಕಾರ ಎಂಬುದಾಗಿ ತಿಳಿಯಬೇಕೇ ಹೊರತು ಕೇವಲ ಆಸನಗಳು ಎಂಬುದಾಗಿ ತಿಳಿಯಬಾರದು. ಆಸನಗಳು ಯೋಗದ ಅಂಗವಷ್ಟೆ. ಇಂತಹ ಬಾಳಾಟಕ್ಕೆ ಫುಟ್ ಬಾಲ್ ಆಟದ ಕ್ರೀಡಾಪಟುಗಳಿರಬೇಕಾದ ಮೇಲಿನ ಅಂಶಗಳು ಅನುಸರಣೀಯ. ಯೋಗಕ್ಕೆ ವಿರುದ್ಧವಾದ ಬಾಳಾಟ ಅರ್ಥಹೀನವಾಗುತ್ತದೆಯಷ್ಟೆ ಅಲ್ಲದೆ, ಇಲ್ಲಿ ಸತ್ಯಸಾಕ್ಷಾತ್ಕಾರವನ್ನು ಮಾಡಿಕೊಳ್ಳದಿದ್ದಲ್ಲಿ ಮಹತ್ತಾದ ಆತ್ಮಹಾನಿಗೆ ಗುರಿಯಾಗುವನು ಎಂದು ಶ್ರುತಿಯು ಎಚ್ಚರಿಸುತ್ತದೆ.


ಈ ದೃಷ್ಟಿಯಿಂದ ಜೀವನದಲ್ಲಿ ಗುರಿಯೇನು ಮತ್ತು ಅದನ್ನು ಹೇಗೆ ಗಳಿಸಬೇಕೆಂಬ ವಿಚಾರ ಪ್ರತಿಯೊಬ್ಬ ಸಾಧಕನಿಗಿರಬೇಕಾಗುತ್ತದೆ. ಜೀವನದ ಧ್ಯೇಯದ ಬಗ್ಗೆ ನಮ್ಮ ರಾಷ್ಟ್ರದ ಮಹರ್ಷಿಗಳ ನಿಲುವತ್ತ ದೃಷ್ಟಿ ಹರಿಸೋಣ- "ಮಹಾಜನರೇ, ಮೇಲೇಳಿರಿ, ಅಜ್ಞಾನಮಯ ನಿದ್ರೆಯಲ್ಲಿದ್ದು ಮೈ ಮರೆಯಬೇಡಿ, ನಿಮ್ಮ ಜೀವನದ ಅಗ್ರದಲ್ಲಿ ನೆಲೆಸಿರುವ ನಿಮ್ಮನ್ನೂ ಅಗ್ರಕ್ಕೊಯ್ಯಬಲ್ಲ ಜ್ಙಾನಾಗ್ನಿಯನ್ನು ಬಯಸಿರಿ".  ಇಲ್ಲಿ ಎಚ್ಚರಿಸುವ ಧ್ವನಿಯನ್ನು ಗಮನಿಸಬೇಕು. ಧ್ಯೇಯವನ್ನು ಮರೆತರೆ, ಪರಿಶ್ರಮ ಪಡದಿದ್ದರೆ, ಸಾಧನೆಗೆ ವಿರುದ್ಧವಾದ ಸೆಳೆತಗಳಿಗೆ ಒಳಗಾದರೆ, "ಕಣ್ಣು ಕೈಕಾಲು ನಾಲಿಗೆ ಇರಲಿಕ್ಕೆ, ಮಣ್ಣುಮುಕ್ಕಿ ಮರುಳಾಗುವರೆ" ಎಂಬ ದಾಸರ ಪ್ರಶ್ನೆಗೆ ಉತ್ತರ ನೀಡಬೇಕಾಗುತ್ತದೆ; ಎಚ್ಚರ ತಪ್ಪಿದರೆ ಜೀವನದ ಮಹಾಧ್ಯೇಯದಿಂದ ಜಾರಬೇಕಾಗುತ್ತದೆ. ಇಲ್ಲಿ ಶ್ರೀರಂಗಮಹಾಗುರುಗಳ ಮಾತುಗಳು ಸ್ಮರಣೀಯ "ದೇವನ ಕಡೆಗೆ ಜೀವನು ಸುಖ ಶಾಂತಿಗಾಗಿ ಹೋಗಲೇಬೇಕು. ಅದು ಅವನ ಜೀವನ ಸಹಜವಾದ ಹಕ್ಕು, ಮೂಲಭೂತವಾದ ಹಕ್ಕು". ಇಂತಹ ಹಕ್ಕನ್ನು ಪಡೆಯಲು ಸದ್ಗುರುವಿನ ಗುಲಾಮರಾಗಬೇಕೆಂಬುದೇ ಜಗದ್ಗುರುವಾದ ಗೀತಾಚಾರ್ಯನ ಉಪದೇಶ- ಜ್ಞಾನಿಗಳನ್ನು ಸೇವಿಸಿ, ನಮಸ್ಕರಿಸಿ, ಸದ್ಭಾವನೆಯಿಂದ ಪ್ರಶ್ನೆಮಾಡಿ, ಅವರು ಜೀವನದ ಧ್ಯೇಯವನ್ನು ಹೊಂದುವ ಮಾರ್ಗವನ್ನು ಉಪದೇಶಿಸುವರು. ಇಲ್ಲಿ ಜ್ಞಾನಿಗಳೆಂದರೆ ಸತ್ಯ ಸಾಕ್ಷಾತ್ಕಾರ ಮಾಡಿಕೊಂಡು ತಮ್ಮ ಸುಕೃತಿ ಶಿಷ್ಯರಿಗೂ ಅದನ್ನು ಮಾಡಿಸಬಲ್ಲ ಮಹಾತ್ಮರು ಎಂಬುದಾಗಿ ತಿಳಿಯಬೇಕು. ಉಪದೇಶವನ್ನು ಪಡೆದು "ಮರಳಿ ಯತ್ನವ ಮಾಡು" ಎಂಬಂತೆ ಸಾಧಕನು ಕ್ರೀಡಾಪಟುವಿನಂತೆ ಸತತ ಅಭ್ಯಾಸ, ಶಿಸ್ತು, ನಿಯಮಗಳ ಪಾಲನೆ, ಪರಿಶ್ರಮ, ಸತ್ಸಂಗ ಮತ್ತು ದ್ವಂದ್ವಗಳಲ್ಲಿ ಸಮಾನತೆ- ಇವುಗಳಿಂದ ಲಕ್ಷ್ಯವನ್ನು ಸೇರಬೇಕಾಗುತ್ತದೆ.


ಸೂಚನೆ: 15/7/2021 ರಂದು ಈ ಲೇಖನವು ವಿಶ್ವ ವಾಣಿ ಯಲ್ಲಿ ಪ್ರಕಟವಾಗಿದೆ.

ಮೂರು ಶ್ರೇಷ್ಠ ಪ್ರಾರ್ಥನೆಗಳು (Muru Shreshta Prarthanegalu)

ಲೇಖಕರು; ಸುಬ್ರಹ್ಮಣ್ಯ ಸೋಮಯಾಜಿ
(ಪ್ರತಿಕ್ರಿಯಿಸಿರಿ lekhana@ayvm.in)



"ಅಸತೋಮಾ ಸದ್ಗಮಯ| ತಮಸೋಮಾ ಜ್ಯೋತಿರ್ಗಮಯ| ಮೃತ್ಯೋರ್ಮಾ ಅಮೃತಂ ಗಮಯ" ಅಸತ್ಯದಿಂದ ಸತ್ಯದೆಡೆಗೆ, ಕತ್ತಲಿನಿಂದ ಬೆಳಕಿನೆಡೆಗೆ, ಮೃತ್ಯುವಿನಿಂದ ಅಮೃತತ್ವದ ಎಡೆಗೆ ನಮ್ಮನ್ನು ಕರೆದೊಯ್ಯು ಎಂದು ಭಗವಂತನಲ್ಲಿ ನಮ್ಮ ಪ್ರಾಚೀನ ಮಹರ್ಷಿಗಳ ಪ್ರಾರ್ಥನೆ. ಭಾರತೀಯ ಜೀವನದಲ್ಲಿ ಈ ಪ್ರಾರ್ಥನೆ ಜನಜನಿತ. ನಮ್ಮ ಪೂಜೆ ಪುರಸ್ಕಾರಗಳಲ್ಲಿ, ವಿಶೇಷ ಸಮಾರಂಭಗಳಲ್ಲಿ ಈ ಬಗೆಯ ಪ್ರಾರ್ಥನೆಮಾಡುವುದನ್ನು ಇಂದಿಗೂ ಅಲ್ಲಲ್ಲಿ ಕಾಣಬಹುದಾಗಿದೆ. ನಮ್ಮ ಶಾಲಾ ಕಾಲೇಜುಗಳಲ್ಲೂ ವಿದ್ಯಾರ್ಥಿಗಳು ಈ ಪ್ರಾರ್ಥನೆಯನ್ನು ಮೊಳಗುವುದನ್ನು ಕಾಣುತ್ತೇವೆ. 

ನಿಜ ಹೇಳಿದರೆ ಸತ್ಯ ನುಡಿದಂತೆ . ಸುಳ್ಳು ಹೇಳಬಾರದು ಎಂಬ ನೀತಿ ಎಲ್ಲರಿಗೂ ಗೊತ್ತಿರುವುದೇ. ಹಾಗೆಯೇ ಕತ್ತಲೆ ನಮಗೆ ಗೊತ್ತು. ಬೆಳಕೂ ಸಹ ಗೊತ್ತು. ಕತ್ತಲೆಯಿಂದ ಬೆಳಕಿನೆಡೆಗೆ ನಾವೇ ಸಾಗಬಹುದು. ಕಡೆಯದು ಮೃತ್ಯು.ಎಲ್ಲರಿಗೂ ಬರುವಂತಹದು. ಯಾರೂ ಚಿರಂಜೀವಿಗಳಲ್ಲ. ಎಂದಮೇಲೆ ಈ ಪ್ರಾರ್ಥನೆಯ ಔಚಿತ್ಯವಾದರೂ ಏನು? ಪ್ರಾಯಃ ಜೀವಿತಾವಧಿಯಲ್ಲೇ ಲೋಕದಲ್ಲಿ ಎಂದೆಂದಿಗೂ ಅಳಿಯದ ಕೆಲಸಗಳನ್ನು ಮಾಡಬೇಕು ಎಂದಿರಬೇಕು. ಇವೆಲ್ಲವೂ ನಮಗೆ ಗೊತ್ತಿದೆ ಎಂದಮೇಲೆ ಭಗವಂತನಲ್ಲಿ ಪ್ರಾರ್ಥನೆ ಮಾಡುವುದೇನಿದೆ? ನಾವೇ ಮಾಡಬಹುದಾದ ಕೆಲಸಕ್ಕೆ ಅವನ ಸಹಾಯ ಏಕೆ? ಬುದ್ಧಿಗೆ ಶ್ರಮ ಕೊಡದೇ ಇಷ್ಟನ್ನು ಆಲೋಚನೆ ಮಾಡಬಹುದು. ಆದರೆ ಪ್ರಾರ್ಥನೆ ಮಾಡಿದವರು ಈ ದೇಶದ ಮಹರ್ಷಿಗಳು. ಅಂತರಂಗದ ಸತ್ಯವನ್ನು, ಪರಮಾತ್ಮನನ್ನು ತಮ್ಮಲ್ಲಿ ಕಂಡು ಪ್ರಾರ್ಥನೆ ಮಾಡಿದ್ದಾರೆ. ವ್ಯರ್ಥವಾದ ಮಾತುಗಳು ಅವರಿಂದ ಬಾರವು. ಏನೀ ಪ್ರಾರ್ಥನೆಯ ಔಚಿತ್ಯ ಎಂದು ವಿಚಾರಮಾಡಬೇಕಿದೆ.

ಅಸತೋಮಾ ಸದ್ಗಮಯ

ಶಂಕರಭಗವತ್ಪಾದರು ಸತ್ಯವನ್ನು ಮೂರು ಬಗೆಯಲ್ಲಿ ವಿವರಿಸಿದ್ದಾರೆ- ವ್ಯಾವಹಾರಿಕ ಸತ್ಯ,ಪ್ರಾತಿಭಾಸಿಕ ಸತ್ಯ,ಮತ್ತು ಪಾರಮಾರ್ಥಿಕ ಸತ್ಯ ಎಂಬುದಾಗಿ. ನಾವು ಮೇಲೆ ಹೇಳಿದಂತೆ ನಿಜ ಹೇಳುವುದು ಇತ್ಯಾದಿ ವ್ಯಾವಹಾರಿಕ ಸತ್ಯವಾಗುತ್ತದೆ. ಪ್ರಾತಿಭಾಸಿಕ ಸತ್ಯವೆಂದರೆ ಕನಸಿನಲ್ಲಿ ಕಂಡ ಅನುಭವಗಳು, ನಾವು ನಮ್ಮ ಭ್ರಮೆಯಿಂದ ಸತ್ಯವೆಂದು ತಿಳಿದುಕೊಂಡ ಸತ್ಯಗಳು-ಉದಾಹರಣೆಗೆ ಹಗ್ಗವನ್ನು ಹಾವೆಂದು ಭಾವಿಸಿದಂತೆ. ಆದರೆ ಎಂದೆಂದಿಗೂ ಬದಲಾಗದ, ತಾನೇ ತಾನಾಗಿ ಬೆಳಗುತ್ತಿರುವ ಮತ್ತು ಎಲ್ಲವನ್ನೂ ತನ್ನ ಇರುವಿಕೆಯಿಂದ ಬೆಳಗುವಂತೆ ಮಾಡುವ, ನಿತ್ಯ ಶಾಶ್ವತವಾದ, ಜಗತ್ತಿನ ಇರುವಿಕೆಗೇ ಕಾರಣವಾದ ಪರಮಾತ್ಮ ಸತ್ಯವೇ ಪಾರಮಾರ್ಥಿಕ ಸತ್ಯ. ನಚಿಕೇತನಿಗೆ ಯಮನು ಉಪದೇಶಿಸುವಂತೆ " ನ ತತ್ರ ಸೂರ್ಯೋ ಭಾತಿ ನ ಚಂದ್ರತಾರಕಂ, ನೇಮಾ ವಿದ್ಯುತೋ ಭಾಂತಿ ಕುತೋಯಮಗ್ನಿ: ತಮೇವ ಭಾನ್ತಮ್ ಅನುಭಾತಿ ಸರ್ವಂ ತಸ್ಯ ಭಾಸಾ ಸರ್ವಮಿದಂ ವಿಭಾತಿ- ಎಂಬಂತೆ ಸೂರ್ಯಚಂದ್ರಾಗ್ನಿಗಳು ವಿದ್ಯುತ್ತು ಎಲ್ಲವೂ ಯಾವ ಬೆಳಕನ್ನು ತಮ್ಮಬೆಳಗುವಿಕೆಗಾಗಿ ಅವಲಂಬಿಸಿವೆಯೋ ಅಂತಹ ಪರಮಾತ್ಮಜ್ಯೋತಿಯನ್ನೇ ಇಲ್ಲಿ ಸತ್ಯ ಎಂದಿರುವುದು. ಅದು ಎಂದೆಂದಿಗೂ ಇರುವಂತಹದ್ದು. ಇವತ್ತಿದ್ದು ನಾಳೆ ಇಲ್ಲವಾಗುವುದಲ್ಲ. ಅಂತಹ ಸತ್ಯವು ನಮ್ಮ ಅರಿವಿಗೆ ಬರುವಂತೆ ಸತ್ಯಸ್ವರೂಪನಾದ ಅವನೇ ಮಾಡಬೇಕು. ನಮ್ಮ ಕೈಯಲ್ಲಿ ಯಾವುದನ್ನು ಮಾಡಲು ಸಾಧ್ಯವಾಗದೋ ಅಥವಾ ಅತ್ಯಂತ ಕಷ್ಟಸಾಧ್ಯವೋ ಅದನ್ನು ತಾನೇ ಭಗವಂತನನ್ನು ಕೇಳಬೇಕು? ಆ ಪರಮ ಸತ್ಯದ ನೇರದಲ್ಲಿ ಅದಲ್ಲದೇ ಉಳಿದುದೆಲ್ಲವೂ ಅಸತ್ಯವೇ. ಎಲ್ಲವೂ ಆ ಪರಮಸತ್ಯವನ್ನು ಮರೆ ಮಾಡುವಂತಹದ್ದೇ. ಅಂತಹ ಅಸತ್ಯಗಳಿಂದ ನಮ್ಮನ್ನು ಪರಮ ಸತ್ಯದೆಡೆಗೆ ಕೊಂಡೊಯ್ಯು ಎಂಬ ಪ್ರಾರ್ಥನೆ ಜೀವಲೋಕವೆಲ್ಲವೂ ಅನವರತವೂ ಮಾಡಬೇಕಾದ ಪ್ರಾರ್ಥನೆಯೇ ಆಗುತ್ತದೆ.

ತಮಸೋಮಾ ಜ್ಯೋತಿರ್ಗಮಯ

ಕತ್ತಲೆಯಿಂದ ಬೆಳಕಿನೆಡೆಗೆ. ಭಾರತೀಯರಿಗೆ ಕತ್ತಲೆಯೇ ಬೇಕಿಲ್ಲವೇ? ಹೊರಗಿನ ಕತ್ತಲೆ ನಾವು ವಿಶ್ರಾಂತಿ ತೆಗೆದುಕೊಳ್ಳಲು ಅವಶ್ಯವಾಗಿ ಬೇಕು. ಅಲ್ಲದೇ ತಾನಾಗಿ ಕತ್ತಲಾಗುತ್ತದೆ, ಸೂರ್ಯ ಉದಿಸಿದ ನಂತರ ಬೆಳಕೂ ಆಗುತ್ತದೆ. ಮತ್ತೆ ಈ ಪ್ರಾರ್ಥನೆಯ ಔಚಿತ್ಯವಾದರೂ ಏನು? ಎಂದರೆ ಆ ಪಾರಮಾರ್ಥಿಕ ಸತ್ಯದ ವಿಷಯದಲ್ಲಿ ನಮ್ಮ ಬುದ್ಧಿಗೆ ಕತ್ತಲು ಕವಿದಿದೆ.ನಾವು ನಮ್ಮ ವ್ಯಾವಹಾರಿಕ, ಇಂದ್ರಿಯಜೀವನದಲ್ಲೇ ಜನ್ಮ ಜನ್ಮಾಂತರಗಳಿಂದ ಕಾಲ ಕಳೆಯುತ್ತಾ ನಮ್ಮೊಳಗೇ ಬೆಳಗುತ್ತಿರುವ ಬೆಳಕನ್ನು ಕಾಣಲಾರದವರಾಗಿದ್ದೇವೆ. ಜ್ಞಾನಿಗಳು, ಸಂತರು ಹೇಳಿದರೂ ಅಂತಹ ಬೆಳಕೊಂದು ಉಂಟು ಎಂದು ನಮಗೆ ನಂಬಿಕೆ ಬಾರದಷ್ಟು ವಿಸ್ಮೃತರಾಗಿದ್ದೇವೆ. ಆ ಅಂತರ್ಜ್ಯೋತಿಯನ್ನು ಸಂಪೂರ್ಣವಾಗಿ ಮರೆತಿರುವುದೇ ತಮಸ್ಸು. ಅದನ್ನು ಕಳಚಿ ನಮ್ಮನ್ನು ಆ ಒಳ ಬೆಳಕಿನ ಕಡೆಗೆ ನಡೆಸು ಎಂದು ಬೆಳಕನ್ನೇ ಪ್ರಾರ್ಥಿಸಿದ್ದಾರೆ. ಆ ಬೆಳಕು ತಾನೇ ತಾನಾಗಿ ಬೆಳಗುತ್ತಿದೆ. ಅದರ ಭಿಕ್ಷೆಯಿಂದಲೇ ನಮ್ಮ ಲೌಕಿಕ ಜೀವನಗಳೂ ನಡೆಯುತ್ತಿವೆ. ಆದರೆ ನಮ್ಮ ಮನಸ್ಸುಗಳಲ್ಲಿ ಅದನ್ನು ಅರಿಯದ ಕತ್ತಲು. ಈ ಕತ್ತಲೆಯಿಂದಲೇ ನಮ್ಮನ್ನು ಆ ಬೆಳಕಿನೆಡೆಗೆ ಕರೆದೊಯ್ಯಬೇಕಿರುವುದು. ಅದಕ್ಕಾಗಿಯೇ ಋಷಿಗಳು ಭಗವಂತನಲ್ಲಿ ಪ್ರಾರ್ಥಿಸುತ್ತಿರುವುದು. ಅದು ಹೊರಗಿನ ಕತ್ತಲೆಯಿಂದ ಹೊರಗಿನ ಬೆಳಕಿನೆಡೆ ಅಲ್ಲ. ನಮ್ಮಬುದ್ಧಿಯಲ್ಲಿನ ಕತ್ತಲೆಯಿಂದ ಒಳಬೆಳಕಿನೆಡೆಗೆ. ನಮ್ಮ ಪ್ರಾರ್ಥನೆ ಎಷ್ಟು ಬಲವತ್ತರವೋ ಅಷ್ಟು ಬೇಗ ಅವನು ನಮ್ಮಕತ್ತಲೆಯನ್ನು ಹೋಗಲಾಡಿಸುತ್ತಾನೆ. ಈ ಭಾವವಿಲ್ಲದೇ ಶುಷ್ಕವಾಗಿ ಮಾಡುವ ಪ್ರಾರ್ಥನೆಯಿಂದ ಪ್ರಯೋಜನವಿರದು.

ಮೃತ್ಯೋರ್ಮಾ ಅಮೃತಂ ಗಮಯ
ಶರೀರವನ್ನು ತಳೆದು ಬಂದಮೇಲೆ ಇದಕ್ಕೆ ಮೃತ್ಯು ನಿಶ್ಚಿತ. ಜಾತಸ್ಯ ಮರಣಂ ಧ್ರುವಂ. ಎಂದಮೇಲೆ ಅಮರತ್ವಎಲ್ಲಿಂದ ಬರಬೇಕು? ನಾವು ಸಾಯದಂತೆ ವರವನ್ನು ಬೇಡುತ್ತಿದ್ದೆವೆಯೇ? ಅಂತಹ ಬೇಡಿಕೆ ಎಷ್ಟು ಅರ್ಥಪೂರ್ಣ? ಅದನ್ನುಭಗವಂತನು ಹೇಗೆ ಈಡೇರಿಸಿಯಾನು? ಎಲ್ಲವೂ ಪ್ರಶ್ನೆಯಾಗುತ್ತದೆ. ಇಲ್ಲಿ ಅಮರವಾದುದು ನಮ್ಮೊಳಗೇ ಬೆಳಗುತ್ತಿರುವ ಚೈತನ್ಯ. ಅದೇ ನಮ್ಮನ್ನು ಜೀವಂತವಾಗಿಟ್ಟಿರುವುದು. ಅದು ನಮ್ಮ ಆನಂದದ, ನೆಮ್ಮದಿಯ ನಿಜವಾದ ತಾಣ. ಅದರೊಡನೆ ನಮ್ಮ ಮನಸ್ಸು ನಿರಂತರವಾಗಿ ಸಂಪರ್ಕವನ್ನಿಟ್ಟುಕೊಂಡರೆ ಅದೇ ಅಮರ ಜೀವನ. ನದಿಯೊಂದು ತಾನು ಹರಿಯುತ್ತಿರುವ ಎಲ್ಲೆಕಟ್ಟುಗಳೊಂದಿಗೆ ಸಮುದ್ರವನ್ನು ಸೇರಿದಾಗಲೇ ಆ ನದಿಯ ಜೀವನ ಅಮರ. ಅಲ್ಲಿ ಅದನ್ನು ಗಂಗೆ,ಯಮುನೆ, ಗೋದಾವರಿ,ಕಾವೇರಿ ಎಂದು ಗುರುತಿಸಲಾಗದು. ಅದು ಮಹಾ ಸಮುದ್ರವೇ ಆಗಿಬಿಡುತ್ತೆ. ಹಾಗೆ ಈ ಜೀವನದಿಯೂ ತನ್ನ ಮೂಲವಾದ ಆ ಮಹಾ ಚೈತನ್ಯದ ಆಶಯದಂತೆ ಅದರ ನೆನಪನ್ನು ಒಂದಿನಿತೂ ಬಿಡದೇ ಬಾಳುತ್ತಾ ಕಡೆಯಲ್ಲಿ ನಾಮ-ರೂಪಗಳಿಂದ ಆರೋಪಿತವಾದ ಶರೀರದ ಎಲ್ಲೆಕಟ್ಟುಗಳನ್ನು ಮೀರಿ ಪರಮಾತ್ಮ ಸಮುದ್ರದಲ್ಲಿ ಸೇರುವಂತಾಗುವುದು ಇದರ ಸಹಜವಾದ ನಡೆ ಎಂಬುದನ್ನು ಹಾಗೆ ಅಮರಜೀವನವನ್ನು ಮಾಡಿದ ಮಹರ್ಷಿಗಳ ಆನುಭವಿಕ ಸತ್ಯ. ಎಂದೇ ನಮ್ಮ ಜೀವಿತಕಾಲದಲ್ಲಿ ನಮ್ಮ ಜೀವನದ ಸ್ರೋತಸ್ಸಾದ, ಎಂದೆಂದಿಗೂ ಇರುವ ಆ ಅಮರವಾದ ಬೆಳಕಿನ ಆಶಯದಂತೆ ಬದುಕಿ ಕಡೆಯಲ್ಲಿ ಆ ಅಮೃತನಾದ ದೇವನಲ್ಲಿ ಒಂದಾಗುವಂತೆ ಮಾಡೆಂದು ಭಗವಂತನಲ್ಲಿ ಪ್ರಾರ್ಥನೆ-ಮೃತ್ಯೋರ್ಮಾ ಅಮೃತಂ ಗಮಯ. ಈಗ ನಾವು ಆ ಸ್ರೋತಸ್ಸನ್ನು ಮರೆತು ಕೇವಲ ಮೃತ್ಯುಮುಖರಾಗಿ ಜೀವನ ನಡೆಸುತ್ತಿದ್ದೇವೆ. ಹಾಗಿಲ್ಲದೇ ಮೃತವಾಗುವ ಈ ಶರೀರದಿಂದ ಅಮೃತವಾದ ವಸ್ತುವನ್ನೇ ಕಾಣುತ್ತಾ ಕಡೆಯಲ್ಲಿ ಆ ಅಮೃತವೇ ಆಗಿಬಿಡುವಂತೆ ನಮ್ಮನ್ನು ಅನುಗ್ರಹಿಸು ಎಂಬ ಪ್ರಾರ್ಥನೆ. ನದಿಗಳು ಸಮುದ್ರವಾದಂತೆ. ಶ್ರೀರಂಗಮಹಾಗುರುಗಳು ಸತ್ಯ ಎನ್ನುವ ಪದಕ್ಕೆ "ಸತಿಯಂ" ಎಂಬ ಉಪನಿಷತ್ತಿನ ವ್ಯಾಖ್ಯೆಯನ್ನು ನೆನಪಿಸಿದ್ದರು. ಅದರಂತೆ ಅಮರವಾದದ್ದಕ್ಕೂ ಮರವಾದದ್ದಕ್ಕೂ ಸೇತುವೆಯನ್ನು ಹಾಕುವುದು ಸತ್ಯವೆಂದಾಗುತ್ತದೆ. ನಮ್ಮ ಬಾಳು ಮರವಾದ ಈ ದೇಹದಿಂದ ಅಮರವಾದ ಭಗವಂತನನ್ನು ಕಂಡು ಅವನಲ್ಲಿ ಒಂದಾಗುವ ಅಪೇಕ್ಷೆಯಿಂದ ಬಂದ ಪ್ರಾರ್ಥನೆ ಇದು.

ಇಂದು ಲೋಕವೆಲ್ಲವೂ ಕರೋನಾ ರೋಗದ ತೆಕ್ಕೆಯಲ್ಲಿ ನಲುಗಿ ಹೋಗಿದೆ. ಮೃತ್ಯುಭಯ, ಜೀವನದ ಅನಿಶ್ಚಿತತೆ ಇತ್ಯಾದಿ ಆತಂಕಗಳಿಂದ ನಾವೆಲ್ಲಾ ಭಯಗ್ರಸ್ತರಾಗಿದ್ದೇವೆ. ಈ ಶ್ರೇಷ್ಠ ಪ್ರಾರ್ಥನೆಗಳು ಇಂದು ಅತ್ಯಂತ ಪ್ರಸ್ತುತವಾಗಿವೆ. ನಮ್ಮ ಆರೋಗ್ಯವನ್ನು ರಕ್ಷಿಸಿಕೊಂಡು ಬದುಕುವ ಸರ್ವ ಪುರುಷಪ್ರಯತ್ನವನ್ನೂ ಮೆರೆಯೋಣ. ಉಳಿದುದನ್ನುಆ ಕರುಣಾಮಯನಿಗೆ ಬಿಡೋಣ. ನಮ್ಮ ಮನಸ್ಸುಗಳು ಎಂದೆಂದಿಗೂ ಬೆಳಗುವ ಸತ್ಯದಕಡೆಗೆ , ಬುದ್ಧಿಯು ಸದಾ ಬೆಳಗುವ ಬೆಳಕಿನೆಡೆಗೆ ಒಯ್ಯಲ್ಪಟ್ಟರೆ, ನಾವು ಈ ಮರವಾದ ಬದುಕನ್ನು ಅಮರವಾದ ಜೀವನದ ಚೈತನ್ಯದ ಜೊತೆಗೆ ಜೋಡಿಸಿಕೊಂಡೆವಾದರೆ ಎಲ್ಲಾ ಬಗೆಯ ಭಯ,ಆತಂಕಗಳಿಂದ ಮುಕ್ತರಾಗಿ ಜೀವನ ಮಾಡಬಹುದಾಗಿದೆ. 

ಕಡೆಯಲ್ಲಿ ಶ್ರೀರಂಗಮಹಾಗುರುಗಳ ಈ ಮಾತು ಇಲ್ಲಿ ಸ್ಮರಣೀಯ-"ಜ್ಞಾನವನ್ನು ಬೆಳೆಸಲು,ಸತ್ಯವನ್ನು ಮೆರೆಸಲು ಎಷ್ಟು ಸಮಾಜಗಳು ದುಡಿದಿವೆ! ಎಷ್ಟು ತಪಸ್ಯೆಗಳು ನಡೆದಿವೆ! ವೇದ-ಇತಿಹಾಸ-ಪುರಾಣಗಳನ್ನು ನೋಡಿದರೆ ಒಂದೊಂದು ವಿಷಯ ತರಲು ಲಕ್ಷಾಂತರ ವರ್ಷಗಳ ತಪಸ್ಯೆ ನಡೆದಿದೆ ಎಂಬುದು ತಿಳಿಯುತ್ತದೆ"

ಹೀಗೆ ಕೇವಲ ಪುರುಷಪ್ರಯತ್ನದಿಂದ ಸಾಧ್ಯವಾಗದ, ಅವನ ಅನುಗ್ರಹದಿಂದಲೇ ಆಗಬೇಕಾದದ್ದನ್ನೇ ಅವನಲ್ಲಿ ಪ್ರಾರ್ಥಿಸಿದ್ದಾರೆ. ಮಹರ್ಷಿಗಳು ತಾವು ಅಸತ್ಯದಿಂದ ಸತ್ಯದೆಡೆಗೆ,ತಮಸ್ಸಿನಿಂದ ಆಜ್ಯೋತಿರ್ಧಾಮದೆಡೆಗೆ, ಮೃತ್ಯುವಿನಿಂದ ಅಮೃತತ್ವದ ಎಡೆಗೆ ಸಾಗಿ ಜೀವನದ ಸಾರ್ಥಕತೆಯನ್ನು ಪಡೆದವರಾಗಿದ್ದರೂ ಜೀವಲೋಕವೆಲ್ಲವೂ ಅಂತಹ ನೆಮ್ಮದಿಯನ್ನು ಹೊಂದುವಂತಾಗಲಿ ಎಂಬ ಕರುಣೆಯಿಂದ ಈ ಪ್ರಾರ್ಥನೆಯನ್ನು ನಮ್ಮೆಲ್ಲರಿಗಾಗಿ ಮೊಳಗಿದ್ದಾರೆ. ಅವರ ಮನಸ್ಸಿನಂತೆ ನಮ್ಮ ಜೀವನದ ಯಶಸ್ಸಿಗಾಗಿ  ಅನವರತವೂ ಈ ಪ್ರಾರ್ಥನೆಯನ್ನು ಮಾಡೋಣ.

ಸೂಚನೆ: 15/07/2021 ರಂದು ಈ ಲೇಖನ ವಿಜಯವಾಣಿಯ ಸಂಸ್ಕೃತಿ ದಲ್ಲಿ ಪ್ರಕಟವಾಗಿದೆ.

Monday, July 12, 2021

ಆರ್ಯಸಂಸ್ಕೃತಿ ದರ್ಶನ - 50 ಬಿಡುಗಡೆಯ ದಾರಿ (Arya Samskruti Darshana - 50 Bidugadeya Dari)

ಲೇಖಕರು : ಚಾಮುಗಳು




ಪುರುಷನು ಕಾಮಮಯ. ಯಾವ ವಿಧವಾದ ಕಾಮದಿಂದ ಕೂಡಿರುತ್ತಾನೆಯೋ ಅದಕ್ಕೆ ಅನುಗುಣವಾಗಿ ಅವನು ಯೋಚನೆ ಮಾಡುತ್ತಾನೆ. ಆ ಯೋಚನೆಗನುಗುಣವಾಗಿ ಕರ್ಮವನ್ನು ಮಾಡುತ್ತಾನೆ. ಅದಕ್ಕನುಗುಣವಾಗಿ ಅವನು ಜನ್ಮತಾಳುತ್ತಾನೆ ಎಂಬುದು ಜನ್ಮಾಂತರದ ವಿಷಯದಲ್ಲಿ ಯಾಜ್ಞವಲ್ಕ್ಯನ ದೃಷ್ಟಿ.


ಯಾದೃಶೇನ ತು ಭಾವೇನ ಯದ್ಯತ್ಕರ್ಮನಿಷೇವತೇ ।

ತಾದೃಶೇನ ಶರೀರೇಣ ತತ್ತತ್ಫಲಮುಪಾಶ್ನುತೇ ॥ (ಅ. 12)


(ಯಾವ ಯಾವ ಭಾವದಿಂದ ಯಾವ ಯಾವ ಕರ್ಮವನ್ನು ಮಾಡುತ್ತಾನೆಯೋ ಆ ವಿಧವಾದ ಶರೀರದಿಂದ ಆಯಾ ಫಲವನ್ನು ಹೊಂದುತ್ತಾನೆ) ಎಂದು ಮನುವೂ ಅದನ್ನೇ ಹೇಳುತ್ತಾನೆ. ಆ ರೀತಿ ಪುರುಷನು ಮಾಡುವ ಕರ್ಮಕ್ಕೆ ಕೊನೆಯಿಲ್ಲ. ಕರ್ಮವು ಪರಂಪರೆಯಾಗಿ ಕರ್ಮಗಳನ್ನು ಸೃಷ್ಟಿಸುತ್ತದೆ. ಅವೆಲ್ಲವೂ ವಾಸನಾ ರೂಪವಾಗಿ ಅವನ ಹೃದಯವನ್ನು ಆಶ್ರಯಿಸಿರುತ್ತವೆ. ಅವೇ ಅವನನ್ನು ಸಂಸಾರಚಕ್ರಕ್ಕೆ ಬಂಧಿಸುತ್ತವೆ. ಅವುಗಳಿಂದಲೇ ಅವನು ಅನಂತಸಂಖ್ಯೆಯಲ್ಲಿ ಬಗೆ ಬಗೆಯಾದ ಜನ್ಮಗಳನ್ನು ಹೊಂದುತ್ತಾನೆ. ದೇವ ಮಾಯೆಯಿಂದ ಮೋಹಿತನಾಗಿ ಸುಖ ದುಃಖ ರೂಪವಾದ ಆ ಸ್ಥಿತಿಗಳೇ ತನಗೆ ಸಹಜವಾದುವೆಂದು ಭಾವಿಸಿ ಅಭ್ಯಾಸವಶದಿಂದ ಅವುಗಳಲ್ಲಿ ರಮಿಸುತ್ತಾನೆ. ಅವುಗಳಲ್ಲಿಯೇ ಮುಂದುವರಿಯಲು ಸರ್ವೋಪಾಯಗಳಿಂದಲೂ ಯತ್ನಿಸುತ್ತಾನೆ. 'ಕೋಶಕಾರ ಇವಾತ್ಮಾನಂ ಕರ್ಮಣಾಚ್ಛಾದ್ಯ ಮುಹ್ಯತಿ' ಗೂಡಿನಲ್ಲಿ ತನ್ನನ್ನು ಮುಚ್ಚಿಕೊಳ್ಳುವ ರೇಷ್ಮೆ ಹುಳುವಿನಂತೆ ಕರ್ಮದಿಂದ ತನ್ನನ್ನು ಮುಚ್ಚಿಕೊಂಡು ಮೋಹಗೊಳ್ಳುತ್ತಾನೆ. ಆ ಕರ್ಮಗಳ ಫಲೋದಯವನ್ನು ಮನುವು ಈ ರೀತಿ ವರ್ಣಿಸುತ್ತಾರೆ.


ಸಂಭವಾಶ್ಚ ವಿಯೋನೀಷು ದುಃಖಪ್ರಾಯಾಸು ನಿತ್ಯಶಃ ।

ಶೀತಾತಪಾಭಿಘಾತಾಂಶ್ಚ ವಿವಿಧಾನಿ ಭಯಾನಿ ಚ ॥

ಅಸಕೃತ್ ಗರ್ಭವಾಸೇಷು ವಾಸಂ ಜನ್ಮಚ ದಾರುಣಂ ।

ಬಂಧನಾನಿ ಚ ಕಷ್ಟಾನಿ ಪರ ಪ್ರೇಷ್ಯತ್ವಮೇವಚ ॥ 

ಬಂಧು ಪ್ರಿಯ ವಿಯೋಗಾಂಶ್ಚ ಸಂವಾಸಂಚೈವ ದುರ್ಜನೈಃ । 

ದ್ರವ್ಯಾರ್ಜನಂ ಚ ನಾಶಂಚ ಮಿತ್ರಾಮಿತ್ರಸ್ಯ ಚಾರ್ಜನಂ ॥

ಜರಾಂ ಚೈವಾಪ್ರತೀಕಾರಾಂ ವ್ಯಾಧಿಭಿಶ್ಚೋಪಪೀಡನಂ ।

ಕ್ಲೇಶಾಂಶ್ಚ ವಿವಿಧಾಂಸ್ತಾನ್ ಸ್ತಾನ್ ಮೃತ್ಯುಮೇವ ಚ ದುರ್ಜಯಂ ॥

(ಸದಾ ದುಃಖಪ್ರಾಯವಾದ ಬೇರೆ ಬೇರೆ ಜಾತಿ (ಯೋನಿ)ಗಳಲ್ಲಿ ಹುಟ್ಟುವುದು; ಛಳಿ ಬಿಸಿಲು ಮುಂತಾದ ಪೀಡೆಗಳು ಮತ್ತು ಬಗೆ ಬಗೆಯಾದ ಭಯಗಳು; ಮತ್ತೆ ಮತ್ತೆ ಗರ್ಭವಾಸ ಮತ್ತು ಅತ್ಯಂತ ಕ್ಲೇಶಕರವಾದ ಜನನ; ಕಷ್ಟಕರವಾದ ಬಂಧನಾದಿಗಳು; ಬೇರೆಯವರಿಗೆ ದಾಸ್ಯ; ಬಂಧುಗಳು ಮತ್ತು ಪ್ರಿಯರಿಂದ ವಿಯೋಗ; ದುರ್ಜನರ ಜೊತೆಯಲ್ಲಿ ಸಂವಾಸ; ದ್ರವ್ಯಾರ್ಜನೆ ಮತ್ತು ಅದರ ನಾಶ;  ಮಿತ್ರ ಮತ್ತು ಅಮಿತ್ರರ ಆರ್ಜನೆ; ಪ್ರತೀಕಾರವಿಲ್ಲದ ಮುಪ್ಪು ಮತ್ತು ವ್ಯಾಧಿಗಳಿಂದ ಪೀಡೆ, ಬೇರೆ ಬೇರೆ ವಿಧವಾದ ಕ್ಲೇಶಗಳು ಮತ್ತು ಕಡೆಗೆ ಜಯಿಸಲಶಕ್ಯವಾದ ಮೃತ್ಯು.)

ಮನುವು ಕರ್ಮಮಯವಾದ ಸೃಷ್ಟಿಯ ಸಂಗ್ರಹವಾದ ಚಿತ್ರವನ್ನು ಚಿತ್ರಿಸಿ ನಮ್ಮ ಮುಂದಿರಿಸಿರುತ್ತಾರೆ. ಆ ಸೃಷ್ಟಿಯಲ್ಲಿ ಬಂಧಿಸಲ್ಪಟ್ಟಿರುವ ಪುರುಷನು ವಿವಶ. ಅನಂತ ಕಾಲಕ್ಕೂ ಅವನು ಅದರಲ್ಲಿ ತೊಳಲುತ್ತಾನೆಂಬ ಯೋಚನೆಯು ನಿಜಕ್ಕೂ ಭಯವನ್ನುಂಟುಮಾಡುವಂತಹದು. ಅದರಿಂದ ತಪ್ಪಿಸಿಕೊಳ್ಳಲಾಗುತ್ತದೆಯೇ ಎಂಬ ಪ್ರಶ್ನೆಯು ಎಲ್ಲರಿಗೂ ಅತ್ಯಂತ ಮಹತ್ವಪೂರ್ಣವಾದುದು. ಆದರೆ ಅದು ಎಲ್ಲರಲ್ಲಿಯೂ ಉಂಟಾಗುವುದಿಲ್ಲ. ನರಕದಲ್ಲಿದ್ದರೂ ಪುರುಷನು ಅದರೊಡನೆಯೇ ಸಾತ್ಮ್ಯವನ್ನುಂಟು ಮಾಡಿಕೊಂಡು ಅದರಲ್ಲಿಯೇ ಸುಖವನ್ನು ಕಾಣುತ್ತಾನೆಂದು ಭಾಗವತವು ಒಂದು ಕಡೆ ನುಡಿಯುತ್ತದೆ. ಹಾಗೆಯೇ ದುಃಖಪ್ರಾಯವಾದ ಜೀವನದಲ್ಲಿಯೂ ಸಹ.

ಆದರೂ ಲೋಕದಲ್ಲಿ ಮೋಹ ಹರಿದು ಕರ್ಮ ಬಂಧದಿಂದ ಬಿಡಿಸಿ ಕೊಳ್ಳಲಿಚ್ಛಿಸುವ ಪುರುಷರೂ ಪದೇ ಪದೇ ಹುಟ್ಟುತ್ತಾರೆ. ನಮ್ಮ ದೇಶದ ಪವಿತ್ರ ಸಾಹಿತ್ಯಗಳನ್ನು ಸಮೀಕ್ಷೆ ಮಾಡಿದಾಗ ಅಂತಹವರು ಇಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಹುಟ್ಟಿರುತ್ತಾರೆಂಬುದು ಸ್ಪಷ್ಟವಾಗುತ್ತದೆ. ನಮ್ಮ ಪವಿತ್ರ ಸಾಹಿತ್ಯಗಳೂ ಸಹ ಅದರಿಂದ ಬಿಡಿಸಿಕೊಳ್ಳುವ ಅನೇಕ ಮಾರ್ಗಗಳನ್ನು ಉಪದೇಶಿಸುತ್ತಾ ಬಂದಿವೆ. ವೇದ, ಉಪನಿಷತ್ತು, ಗೀತೆ, ಭಾರತ, ಭಾಗವತ, ಧರ್ಮಶಾಸ್ತ್ರ ಮತ್ತು ದೇಶ ಭಾಷೆಗಳಲ್ಲಿರುವ ಭಕ್ತಿಸಾಹಿತ್ಯಗಳೆಲ್ಲವೂ ಬಿಡುಗಡೆಯ ದಾರಿಯನ್ನು ತೋರಿಸುವ ಆಶಯದಿಂದಲೇ ವಿರಚಿತವಾಗಿರುತ್ತವೆ. ಅವೆಲ್ಲವನ್ನೂ ವಿಚಾರ ಮಾಡುವುದು ಸ್ವಲ್ಪದರಲ್ಲಾಗುವ ಕೆಲಸವಲ್ಲ. ನಾವು ಹಿಂದಿನ ಸಂಚಿಕೆಯಲ್ಲಿ ನೋಡಿದಂತೆ ಯಾಜ್ಞವಲ್ಕ್ಯ ಮಹರ್ಷಿಯು ಜನ್ಮಾಂತರವು ಹೇಗುಂಟಾಗುತ್ತದೆಂಬುದನ್ನು ಬಹು ಕುಶಲತೆಯಿಂದ ವರ್ಣಿಸುತ್ತಾನೆ. ಜೊತೆಗೆ ಜನ್ಮಾಂತರಗಳಿಂದ ಹೇಗೆ ತಪ್ಪಿಸಿಕೊಳ್ಳಬಹುದು ಎಂಬುದನ್ನೂ ಅವನು ಅಷ್ಟೇ ವಿಚಕ್ಷಣತೆಯಿಂದ ವಿವರಿಸುತ್ತಾನೆ. ಪ್ರಸಕ್ತ ಲೇಖನದಲ್ಲಿ ಉಪನಿಷತ್ದೃಷ್ಟಿಗಳ ದೃಷ್ಟಿಯೆಲ್ಲವನ್ನೂ ಒಂದೆಡೆ ಕ್ರೋಡೀಕರಿಸಿ ಹೇಳುವ ಅವನ ಉಪದೇಶವನ್ನು ತೆಗೆದುಕೊಂಡು ವಿಚಾರಿಸುವ ಅಭಿಪ್ರಾಯವುಳ್ಳವರಾಗಿರುತ್ತೇವೆ.

ಆ ವಿಷಯದಲ್ಲಿ ಋಷಿಯು ಮಂಡಿಸುವ ಮೂಲ ಸೂತ್ರವು ಹೀಗಿರುತ್ತದೆ. 'ಯೋ ಅಕಾಮೋ ನಿಷ್ಕಾಮ ಆಪ್ತಕಾಮ ಅತ್ಮಕಾಮೋ ನ ತಸ್ಯ ಪ್ರಾಣಾ ಉತ್ಕ್ರಾಮಂತಿ ಬ್ರಹ್ಮೈವ ಸನ್ ಬ್ರಹ್ಮಾಪ್ಯೇತಿ!' (ಯಾವನು ಅಕಾಮನೂ ನಿಷ್ಕಾಮನೂ ಆಪ್ತಕಾಮನೂ ಆತ್ಮಕಾಮನೂ ಆಗಿರುತ್ತಾನೆಯೋ ಅವನ ಪ್ರಾಣಗಳು ಉತ್ಕ್ರಮಣ ಹೊಂದುವುದಿಲ್ಲ. ಅವನು ಬ್ರಹ್ಮನೇ ಆಗಿ ಬ್ರಹ್ಮನನ್ನೇ ಹೋಗಿ ಸೇರುತ್ತಾನೆ.) ಅದರ ವಿಷಯದಲ್ಲಿ ಅವನು ಈ ಮುಂದಿನ ಶ್ಲೋಕವನ್ನು ಉಲ್ಲೇಖಿಸುತ್ತಾನೆ.

ಯದಾ ಸರ್ವೇ ಪ್ರಮುಚ್ಯಂತೇ ಕಾಮಾ ಯೇಽಸ್ಯ ಹೃದಿ ಶ್ರಿತಾಃ ।

ಅಥ ಮರ್ತ್ಯೋಽಮೃತೋ ಭವತಿ ಅತ್ರ ಬ್ರಹ್ಮ ಸಮಶ್ನುತೇ ॥ 

(ಯಾವಾಗ ಇವನ ಹೃದಯವನ್ನು ಆಶ್ರಯಿಸಿರುವ ಎಲ್ಲ ಕಾಮಗಳೂ ನಾಶವಾಗುತ್ತವೆಯೋ ಆಗ ಮರ್ತ್ಯನು ಅಮೃತನಾಗುತ್ತಾನೆ ಮತ್ತು ಅವನು ಇಲ್ಲಿ ಬ್ರಹ್ಮನನ್ನು ಹೊಂದುತ್ತಾನೆ.)

ಈ ಮಾತುಗಳ ಹಿಂಬದಿಯಲ್ಲಿ ಋಷಿಗಳು ಕಂಡ ಹಲವು ಅತ್ಯಂತ ಗಹನವಾದ ರಹಸ್ಯಗಳು ಇರುತ್ತವೆಯೆಂದು ಊಹಿಸಬಹುದು. ಒಂದು ಕಡೆ ಛಾಂದೋಗ್ಯೋಪನಿಷತ್ತಿನಲ್ಲಿ ಒಬ್ಬ ಗುರುವು ಈ ಶರೀರವನ್ನು ಬ್ರಹ್ಮಪುರವೆಂದು ಕರೆದು ಅದರಲ್ಲಿ ಪರಮಾತ್ಮನಿಗೆ ವಾಸಸ್ಥಾನವಾದ ಒಂದು ಸೂಕ್ಷ್ಮವಾದ ಪುಂಡರೀಕ (ಕಮಲ)ವಿರುತ್ತದೆ. ಅದರಲ್ಲಿ ಸೂಕ್ಷ್ಮತರವಾದ ಹೃದಯಾಕಾಶವಿರುತ್ತದೆ. ಆ ಹೃದಯಾಕಾಶದಲ್ಲಿ ಪಾಪರಹಿತನೂ, ಜರಾರಹಿತನೂ, ಮೃತ್ಯುವಿಲ್ಲದವನೂ, ಶೋಕರಹಿತನೂ, ಅನ್ನವನ್ನಪೇಕ್ಷಿಸದವನೂ, ಬಾಯಾರಿಕೆಯಿಲ್ಲದವನೂ, ಸತ್ಯಕಾಮನೂ, ಸತ್ಯಸಂಕಲ್ಪನೂ ಆದ ಆತ್ಮನಿರುತ್ತಾನೆಂದು ಹೇಳುತ್ತಾನೆ. ಶರೀರಕ್ಕೆ ಜರೆಯಂಟಾದುದರಿಂದ ಆತ್ಮನಿಗೆ ಜರೆಯುಂಟಾಗುವುದಿಲ್ಲ, ಶರೀರಕ್ಕೆ ಸಾವುಂಟಾದುದರಿಂದ ಆತ್ಮನಿಗೆ ಸಾವುಂಟಾಗುವುದಿಲ್ಲ ಎಂದು ಅವನು ಘೋಷಿಸುತ್ತಾನೆ.

ಈ ಸತ್ಯವನ್ನೇ ಯಜುರಾರಣ್ಯಕವು ಸುಂದರವಾದ ಮಾತುಗಳಲ್ಲಿ ಈ ರೀತಿ ಹೇಳುತ್ತದೆ.

ಅಷ್ಟಾಚಕ್ರಾ ನವದ್ವಾರಾ ದೇವಾನಾಂ ಪೂರಯೋಧ್ಯಾ।

ತಸ್ಯಾಂ ಹಿರಣ್ಮಯಃ ಕೋಶಃ ಸ್ವರ್ಗೋ ಲೋಕೋ ಜ್ಯೋತಿಷಾವೃತಃ ॥

ಯೋ ವೈತಾಂ ಬ್ರಹ್ಮಣೋ ವೇದ ಅಮೃತೇನವೃತಾಂ ಪುರೀಂ।

ತಸ್ಮೈ ಬ್ರಹ್ಮ ಚ ಬ್ರಹ್ಮಾ ಚ ಆಯುಃ ಕೀರ್ತಿಂ ಪ್ರಜಾಂ ದದುಃ ॥ 

(ಎಂಟು ಚಕ್ರಗಳಿಂದಲೂ ಒಂಬತ್ತು ದ್ವಾರಗಳಿಂದಲೂ ಕೂಡಿದ ಈ ಶರೀರವು ಗೆಲ್ಲಲಾಗದ ದೇವತೆಗಳ ಪಟ್ಟಣ. ಅದರಲ್ಲಿ ಒಂದು ಹಿರಣ್ಮಯವಾದ ಕೋಶವಿರುತ್ತದೆ. ಅದರೊಳಗಡೆ (ಆನಂದಧಾಮವಾದ) ಸ್ವರ್ಗಲೋಕವಿರುತ್ತದೆ. ಅದು ಬೆಳಕಿನಿಂದ ಆವೃತವಾಗಿರುತ್ತದೆ. ಇದೇ ಅಮೃತದಿಂದ ಆವೃತವಾದ ಬ್ರಹ್ಮನ ಪುರಿ. ಇದನ್ನು ಯಾವನು ತಿಳಿದಿರುತ್ತಾನೆಯೋ ಅವನಿಗೆ ಪರಮಾತ್ಮನೂ, ಪ್ರಜಾಪತಿಯಾದ ಬ್ರಹ್ಮನೂ ಮತ್ತು ಇತರ ದೇವತೆಗಳೂ ಆಯಸ್ಸು, ಕೀರ್ತಿ ಮತ್ತು ಪ್ರಜೆಗಳನ್ನು ಕೊಡುತ್ತಾರೆ. ) ಎಂಟು ಚಕ್ರ ಮತ್ತು ನವದ್ವಾರಗಳು, ರಸ, ಅಸೃಕ್, ಮಾಂಸ, ಮೇದಸ್ಸು, ಅಸ್ಥಿ, ಮಜ್ಜೆ ಮತ್ತು ಶುಕ್ರಗಳಿಂದ ಕೂಡಿದ ಸಪ್ತಧಾತುಮಯವಾದ ಶರೀರವನ್ನೇ ಹೇಳುತ್ತಾನೆ. ಅದು ಮರಣ ಧರ್ಮಿ. ಆದರೆ ಆ ಶರೀರದ ಒಳಗಡೆ ಇರುವ ಆತ್ಮನು ಅಮೃತ. ಇದನ್ನೇ ಛಾಂದೋಗ್ಯವು ಈ ರೀತಿ ಹೇಳುತ್ತದೆ. "ಮರ್ತ್ಯಂ ವಾ ಇದಗ್ಂ ಶರೀರಮಾತ್ತಂ ಮೃತ್ಯುನಾ ತದಸ್ಯಾಮೃತಸ್ಯಾಶರೀರಸ್ಯಾತ್ಮನೋಧಿಷ್ಠಾನಂ।"  (ಈ ಶರೀರವು ಮರ್ತ್ಯವಾದುದು, ಇದು ಮೃತ್ಯುವಿನ ವಶಕ್ಕೆ ಒಳಗಾದುದು. ಅಂತಹ ಈ ಶರೀರವು ಅಮೃತನೂ ಅಶರೀರನೂ ಅದ ಆತ್ಮನ ನಿವಾಸ ಸ್ಥಾನ.)

ಈ ಆತ್ಮನೇ ಜೀವ ರೂಪದಲ್ಲಿ ಶರೀರವನ್ನು ಪ್ರವೇಶಿಸಿ ತನ್ನ ಕರ್ಮಾನುಗುಣವಾಗಿ ಉಚ್ಚಾವಚವಾದ ಜನ್ಮಗಳೆಲ್ಲವನ್ನೂ ತೆಗೆದು ಕೊಳ್ಳುತ್ತಾನೆ. ಅವನೇ ಕರ್ಮಗಳೆಲ್ಲದರಿಂದಲೂ ವಿಮುಕ್ತನಾದಾಗ ತನ್ನ ಸ್ವರೂಪ ಜ್ಞಾನವನ್ನು ಪಡೆದು ಶಾಶ್ವತನೂ, ಪುನರಾವರ್ತಿರಹಿತನೂ, ಆನಂದಮಯನೂ ಅದ ಬ್ರಹ್ಮನಲ್ಲಿ ನೆಲೆಗೊಳ್ಳುತ್ತಾನೆ. ಈ ಶರೀರದಲ್ಲಿಯೇ ಕರ್ಮಾನುಸಾರ ಬೇರೆ ಬೇರೆ ಜನ್ಮಗಳಿಗೆ ಒಯ್ಯುವ ಮಾರ್ಗಗಳೂ ಇರುತ್ತವೆ. ಜ್ಞಾನದ ಅತ್ಯುನ್ನತವಾದ ಸ್ಥಿತಿಗೆ ತಲುಪಿಸುವ ಮಾರ್ಗವೂ ಇದರಲ್ಲಿಯೇ ಇರುತ್ತದೆ. ಅದನ್ನು ಋಷಿಯು ಈ ರೀತಿ ವರ್ಣಿಸುತ್ತಾನೆ -

ಶತಂ ಚೈಕಾಚ ಹೃದಯಸ್ಯ ನಾಡ್ಯಃ ತಾಸಾಂ ಮೂರ್ಧಾನಮಭಿನಿಸ್ಸೃತೈಕಾ ।

ತಯೋರ್ಧ್ವಮಾಯನ್ನಮೃತತ್ವಮೇತಿ ವಿಷ್ವಜ್ ಅನ್ಯಾ ಉತ್ಕ್ರಮಣೇ ಭವಂತಿ ॥

(ಹೃದಯುದಲ್ಲಿ ನೂರೊಂದು ನಾಡಿಗಳಿರುತ್ತವೆ. ಅವುಗಳಲ್ಲಿ ಒಂದು ಮೂರ್ಧದ ಕಡೆ ಹೋಗಿರುತ್ತದೆ. ಅದರಲ್ಲಿ ಮೇಲಕ್ಕೆ ಹೋದಾಗ ಅಮೃತತ್ವವನ್ನು ಹೊಂದುತ್ತಾನೆ. ಇತರ ನೂರು ನಾಡಿಗಳು ಬೇರೆ ಬೇರೆ ದಾರಿಗಳಲ್ಲಿ ಉತ್ಕ್ರಮಣ ಮಾಡಲು(ಶರೀರವನ್ನು ಬಿಟ್ಟು ಹೋಗಲು ಕಾರಣವಾಗುತ್ತವೆ.) ಮೇಲಕ್ಕೆ ಹೋಗುವ ನಾಡಿಯೇ ಜ್ಞಾನರಜ್ಜುವೆಂದು ಪ್ರಸಿದ್ಧವಾದ ಬ್ರಹ್ಮನಾಡಿ.ಧ್ಯಾನಯೋಗದಿಂದ ಅದನ್ನು ಪ್ರವೇಶಿಸಿ ಅದರಲ್ಲಿ ಮೇಲ್ಮುಖವಾಗಿ ಹೋದಾಗ ಆತ್ಮನು ಬ್ರಹ್ಮಜ್ಞಾನವನ್ನು ಹೊಂದುತ್ತಾನೆ. ಇತರ ನೂರು ನಾಡಿಗಳು ಅಸಂಖ್ಯಾತವಾದ ಶಾಖೋಪಶಾಖೆಗಳನ್ನುಂಟುಮಾಡಿಕೊಂಡು ಶರೀರವೆಲ್ಲವನ್ನು ವ್ಯಾಪಿಸಿಕೊಂಡಿರುತ್ತವೆ. ಆತ್ಮ(ಜೀವ)ನು ಕರ್ಮಾನುಗುಣವಾಗಿ ಅವುಗಳಲ್ಲಿ ಯಾವುದರಲ್ಲಿ ಬೇಕಾದರೂ ಉತ್ಕ್ರಮಣ ಮಾಡಬಹುದು. ಯಾವುದರಲ್ಲಿ ಉತ್ಕ್ರಮಣ ಮಾಡುತ್ತಾನೆಯೋ ಅದಕ್ಕನುಗುಣವಾಗಿ ಅವನಿಗೆ ಶರೀರ, ಲೋಕ ಇತ್ಯಾದಿಗಳು ಲಭಿಸುತ್ತವೆ.

ಈ ಹಿನ್ನೆಲೆಯಲ್ಲಿ ತನ್ನ ಪ್ರವಚನವನ್ನು ಮುಂದುವರಿಸುತ್ತಾ ಯಾಜ್ಞವಲ್ಕ್ಯ ತದ್ಯಥಾ ಹಿರ್ನಿರ್ಲ್ವಯನೀ ವಲ್ಮೀಕೇ ಮೃತಾ ಪ್ರತ್ಯಸ್ತಾ ಶಯೀತ ಏವಮೇವೇದಗಂ ಶರೀರಗ್ಂ ಶೇತೇ, ಅಥಾಯಮಶರೀರೋಽಮೃತಃ ಪ್ರಾಣೋ ಬ್ರಹ್ಮೈವ ತೇಜ ಏವ. (ಹೇಗೆ ಹುತ್ತಿನಲ್ಲಿ ಹಾವಿನ ಸೋಲೆಯು ಜೀವರಹಿತನಾಗಿ ಎಸೆಯಲ್ಪಟ್ಟು ಬಿದ್ದಿರುತ್ತದೆಯೋ ಹಾಗೆಯೇ ಮೃತನಾದಾಗ ಶರೀರವು ಬಿದ್ದಿರುತ್ತದೆ. ಅದೇ ಅಶರೀರವೂ ಅಮ್ಮತವೂ ಆದ ಪ್ರಾಣವು (ಆತ್ಮನು) ಬ್ರಹ್ಮನೇ ಸರಿ. ತೇಜಸ್ಸೇ ಸರಿ.) ಎಂದು ನುಡಿಯುತ್ತಾನೆ. ಬೇರೆ ಮಾತುಗಳಲ್ಲಿ ಹೇಳುವುದಾದರೆ ಜ್ಞಾನಿಯಾದ ಪುರುಷನ ಪ್ರಾಣವು ತೇಜೋರೂಪವನ್ನು ತಾಳಿ ಬ್ರಹ್ಮನಲ್ಲಿ ಒಂದಾಗುತ್ತದೆ.

ಮನುಷ್ಯನ ಹೃದಯಾಕಾಶದಲ್ಲಿ ಹಾದು ಹೋಗಿರುವ ಈ ದಾರಿಯು ಅಣುವಿನಂತೆ ಬಹಳ ಸೂಕ್ಷ್ಮ ವಾದುದು. ಅದು ಪರಮಾತ್ಮನವರೆಗೆ ಪ್ರಸರಿಸಿರುತ್ತದೆ. ಅದು ಎಂದೆಂದಿಗೂ ಇರುವಂತಹದ್ದು. ಆ ದಾರಿಯನ್ನು ತಾನು ತಿಳಿದಿರುವುದಾಗಿ ಯಾಜ್ಞವಲ್ಕ್ಯನು ಹೇಳುತ್ತಾನೆ.

ಅಣುಃ ಪಂಥಾ ವಿತತಃ ಪುರಾಣೋ ಮಾಂಸ್ಪೃಷ್ಟೋ ಅನುವಿತ್ತೋ ಮಯೈವ। ತೇನ ಧೀರಾ ಅಪಿ ಯಂತಿ ಬ್ರಹ್ಮವಿದಃ ಸ್ವರ್ಗಂ ಲೋಕಮಿತ ಊರ್ಧ್ವಂ ವಿಮುಕ್ತಾಃ  ಅದರ ಮೂಲಕ ಧೀರರಾದ ಬ್ರಹ್ಮಜ್ಞಾನಿಗಳು (ಶರೀರದೊಳಗೆ ಇರುವ) ಪ್ರಕಾಶಮಾನವಾದ ಲೋಕವನ್ನು ಸೇರಿ ಅನಂತರ ಎಂದೆಂದಿಗೂ ಬಂಧನಕ್ಕೆ ಒಳಗಾಗದೆ ಇರುತ್ತಾರೆ.

ಆ ದಾರಿಯಲ್ಲಿ ನಡೆಯಲು ಧ್ಯಾನಯೋಗವೊಂದೇ ಉಪಾಯ. ಅದನ್ನು ಪ್ರವೇಶಿಸಿ ಮೇಲಕ್ಕೆ ಹೋಗುತ್ತಿರುವಾಗ ಯೋಗಿಯ ಒಳಗಣ್ಣಿಗೆ ಕಾಣುವ ಬೇರೆ ಬೇರೆ ವರ್ಣಗಳ ಪ್ರಕಾಶಗಳನ್ನು ಕುರಿತು ಹೇಳಿ, ಕಡೆಗೆ ಯೋಗಿಯು ಒಂದು ತೇಜಸ್ಸಾಗಿಯೇ ಉಳಿಯುತ್ತಾನೆ ಎಂದು ಯಾಜ್ಞವಲ್ಕ್ಯನು ಹೇಳುತ್ತಾನೆ.

ತಸ್ಮಿನ್ ಶುಕ್ಲಮುತ ನೀಲಮಾಹುಃ ಪಿಂಗಲಗ್ಂ ಹರಿತಂ ಲೋಹಿತಂಚ ।

ಏಷ ಪಂಥಾ ಬ್ರಹ್ಮಣಾ ಹಾನವಿತ್ತಃ ತೇನೈತಿ ಬ್ರಹ್ಮವಿತ್ ಪುಣ್ಯಕೃತ್ತೈಜಸಶ್ಚ ॥

(ಅದರಲ್ಲಿ ಬಿಳಿ, ನೀಲಿ, ಪಿಂಗಳ (ಕೆಂಪು ಬೆರೆತ ಗೋರೋಚನದ ಬಣ್ಣ), ಹಸಿರು ಮತ್ತು ಕೆಂಪು ಬಣ್ಣದ ಪ್ರಕಾಶಗಳು ಕಾಣುತ್ತವೆ. ಇದು ಬ್ರಹ್ಮನ ಬಳಿಗೆ ಹೋಗುವ ದಾರಿ. ಅದನ್ನು ನಾನು ತಿಳಿದಿರುತ್ತೇನೆ. ಪುಣ್ಯಕೃತನಾದ ಬ್ರಹ್ಮಜ್ಞಾನಿಯು ತೇಜೋ ರೂಪನಾಗಿ ಅದರಲ್ಲಿ ಹೋಗುತ್ತಾನೆ.)

ಅಂತರ್ದೃಷ್ಟಿಗೆ ಗೋಚರಿಸುವ ಆ ದಾರಿಯನ್ನು ಕುರಿತು ಹೇಳಿದ ನಂತರ ಬಹಳ ಜಟಿಲವಾದ ರಚನೆಯುಳ್ಳ ಶರೀರದ ಆಳದಲ್ಲಿ ಎಂದರೆ ಹೃದಯಗುಹೆಯಲ್ಲಿ ಪ್ರಕಾಶಕ್ಕೆ ಬರುವ ಪರಮಾತ್ಮನನ್ನು ಸ್ಮರಿಸಿಕೊಂಡು ಋಷಿಯು, 'ಅವನನ್ನು ತಿಳಿದವನೂ ಅವನೇ ಆಗುತ್ತಾನೆ', ಸ ವಿಶ್ವಕೃತ್ ಸ ಹಿ ಸರ್ವಸ್ಯ ಕರ್ತಾ ತಸ್ಯ ಲೋಕಃ ಸ ಲೋಕ ಏವ ॥ (ಅವನು ವಿಶ್ವಕೃತ್ತು, ಅವನೇ ಎಲ್ಲವನ್ನೂ ಮಾಡುವವನಾಗುತ್ತಾನೆ, ಲೋಕವೆಲ್ಲವೂ ಅವನದು, ಅವನೇ ಲೋಕವೂ ಸಹ) ಎಂದು ಘೋಷಣೆ ಮಾಡುತ್ತಾನೆ.

ಧ್ಯಾನಯೋಗದಿಂದ ಅಂತಹ ಉನ್ನತೋನ್ನತವಾದ ಸ್ಥಿತಿಯನ್ನು ಮುಟ್ಟಿದವನನ್ನು ಕುರಿತು ಋಷಿಯು ಪ್ರಾಸಂಗಿಕವಾಗಿ ಹೇಳುವ ಕೆಲವು ಮಾತುಗಳನ್ನು ಇಲ್ಲಿ ಕನ್ನಡಿಸುತ್ತೇವೆ - ಈ ಭೂಮಿಯಲ್ಲಿರುವಾಗಲೇ ನಾವು ಆ ಬ್ರಹ್ಮವಸ್ತುವನ್ನು ತಿಳಿದೆವು. ಇಲ್ಲಿ ಅದನ್ನು ತಿಳಿಯದಿದ್ದರೆ ದೊಡ್ಡ ನಷ್ಟವೇ ಸರಿ. ಯಾರು ಅದನ್ನು ತಿಳಿದಿರುತ್ತಾರೆಯೋ ಅವರು ಅಮೃತರೇ ಆಗುತ್ತಾರೆ. ಇತರರು ದುಃಖವನ್ನೇ ಹೊಂದುತ್ತಾರೆ. ನಾನು ಅವನೇ ಆಗಿರುತ್ತೇನೆಂಬುವ ಪುರುಷನು ಏನನ್ನು ಬಯಸುತ್ತಾನೆ ? ಯಾರ ತೃಪ್ತಿಗೋಸ್ಕರ ಶರೀರಕ್ಕೆ ಜ್ವರ (ಪೀಡೆ) ವನ್ನುಂಟು ಮಾಡುತ್ತಾನೆ ? (ಮಾಡನು.)

ಧೀರನಾದ ಬ್ರಾಹ್ಮಣನು ಅವನನ್ನೇ ತಿಳಿದು ತನ್ನ ಪ್ರಜ್ಞೆಯನ್ನು ಅವನಲ್ಲಿಯೇ ಇರಿಸಬೇಕು. ಬಹುವಾದ ಶಬ್ದಗಳನ್ನು ಚಿಂತಿಸಬಾರದು. ಅವುಗಳಿಂದ ನಾಲಿಗೆಗೆ ಆಯಾಸವುಂಟಾಗುವುದೇ ಹರತು ಮತ್ತಾವ ಪ್ರಯೋಜನವೂ ಇಲ್ಲ.

ಪರಸ್ಪರ ಸಂಬಂಧಿಸಿರುವ ಕಾಮ, ಸಂಕಲ್ಪ, ಕರ್ಮ ಮತ್ತು ಜನ್ಮಗಳಿಂದ ತಪ್ಪಿಸಿಕೊಳ್ಳಲು ಇದು ಯಾಜ್ಞವಲ್ಕ್ಯನು ತೋರಿಸುವ ದಾರಿ. ಅವನು ಅದನ್ನು ವರ್ಣಿಸುವ ಮಂತ್ರವಾಕ್ಯಗಳನ್ನು ಓದಿದುದರಿಂದಾಗಲಿ, ಅವುಗಳ ಬಗ್ಗೆ ಪ್ರವಚನ ಮಾಡಿದುದರಿಂದಾಗಲಿ ಅಥವಾ ವ್ಯಾಖ್ಯಾನಗಳನ್ನು ಕೇಳಿದುದರಿಂದಾಗಲಿ ಯಾವನೂ ಹೃದಯಾಂತರಾಳದಲ್ಲಿ ಪರಮ ಸೂಕ್ಷ್ಮವಾಗಿ ಹಾದು ಹೋಗಿರುವ ಆ ದಾರಿಯನ್ನು ಮುಟ್ಟಲಾರನು ಎಂಬುದನ್ನು ಹೇಳಬೇಕಾಗಿಲ್ಲ. ಯಾವನಿಗೆ ದೇವ(ಪರಮೆಶ್ವರ)ನಲ್ಲಿ ತುಂಬ ಭಕ್ತಿಯಿರುತ್ತದೆಯೋ, ಮತ್ತು ದೇವನಲ್ಲಿ ಹೇಗೋ ಹಾಗೆ ಗುರುವಿನಲ್ಲಿ ತುಂಬ ಭಕ್ತಿಯಿರುತ್ತದೆಯೋ, ಅಂತಹವನಿಗೆ ಈ ಅರ್ಥಗಳು ತಿಳಿದು ಬರುತ್ತವೆ. ಆಚಾರ್ಯವಂತನಾದ ಪುರುಷನು (ಇದನ್ನು) ತಿಳಿಯುತ್ತಾನೆ ಮುಂತಾದ ಮಾತುಗಳನ್ನು ಉಪನಿಷತ್ತುಗಳಲ್ಲಿ ಓದುತ್ತೇವೆ. ಅವು ಯಾಜ್ಞವಲ್ಕ್ಯನು ಹೇಳುತ್ತಿರುವ ಮಾತುಗಳಿಗೂ ಸಹ ಅತಿಶಯವಾದ ರೀತಿಯಲ್ಲಿ ಅನ್ವಯಿಸುತ್ತವೆ. ಅವುಗಳ ಹಿಂದೆ ಮಹತ್ತರವಾದ ಸಾಧನೆಯಿರುತ್ತದೆ. ಕಲ್ಪನೆ ಮಾಡಿಕೊಳ್ಳಲಾಗದ ಅನುಭವಗಳಿರುತ್ತವೆ. ದುರ್ಜ್ಞೇಯವಾದ ಆತ್ಮವಿಜ್ಞಾನವಿರುತ್ತದೆ. ಅವುಗಳನ್ನು ಪ್ರಾಯೋಗಿಕವಾಗಿ ಸಾಧಿಸಲಾರದವನು ಇಂತಹ ಜ್ಞಾನಮಾರ್ಗವನ್ನು ಕಲ್ಪನೆ ಸಹ ಮಾಡಿಕೊಳ್ಳಲಾರನು.

ಗೀತೆಯಲ್ಲಿ ಕೃಷ್ಣ ಪರಮಾತ್ಮನು ನೈಷ್ಕರ್ಮ್ಯಸಿದ್ಧಿ, ಸನ್ಯಾಸ ಯೋಗ, ಮುಂತಾದ ಶಬ್ದಗಳನ್ನು ಬಳಸುತ್ತಾನೆ. ಯಾಜ್ಞವಲ್ಕ್ಯ ಋಷಿಯು ಹೇಳುತ್ತಿರುವುದು ಆ ನೈಷ್ಕರ್ಮ್ಯದ ಪರಾಕಾಷ್ಠೆಯನ್ನೇ. ಎಲ್ಲಿ ಕರ್ಮವೂ ಮತ್ತು ಅದರ ವಾಸನೆಗಳೂ ದಗ್ಧ ಬೀಜದಂತೆ ಸಂಪೂರ್ಣವಾಗಿ ನಾಶ ಹೊಂದಿ ಬಿಡುತ್ತವೆಯೋ ಅಂತಹ ಜ್ಞಾನದ ಸ್ಥಿತಿಯನ್ನೇ. ಸುಷುಮ್ನೆಯು ಬ್ರಹ್ಮಪದ ಪ್ರಾಪಕವಾದ ನಾಡಿ. ಅದರಲ್ಲಿ ಮೇಲ್ಮುಖವಾಗಿ ಹೋದಾಗ ಕರ್ಮಗಳೆಲ್ಲವೂ ತಮ್ಮಷ್ಟಕ್ಕೆ ತಾವೇ ಕಳಚಿ ಹೋಗುತ್ತವೆ. ಅದನ್ನು ಪ್ರವೇಶಿಸಿದ ಯೋಗಿಯು ಜ್ಞಾನಾನಂದಮಯನಾಗಿ ಆಗುತ್ತಾನೆ. ಅದರಿಂದ ಇಳಿದು ಕರ್ಮ ಜ್ಞಾನೇಂದ್ರಿಯಗಳನ್ನು ಪೋಷಿಸುವ ಚಕ್ರ ಮತ್ತು ನಾಡಿಗಳನ್ನು ಪ್ರವೇಶಿಸಿದ ಮಾತ್ರಕ್ಕೆ ಕರ್ಮಗಳು ಅವನಿಗೆ ಅಂಟಿಕೊಳ್ಳುತ್ತವೆ. ಇಂದಿನ ಕಾಲದಲ್ಲಿ ತಂತಿ(wire)ಗಳಲ್ಲಿ ಸಂಗೀತವನ್ನು ರೆಕಾರ್ಡ್ ಮಾಡುವುದಂಟಷಟೇ. ಕಣ್ಣಿನಿಂದ ನೋಡಿದರೆ ರೆಕಾರ್ಡ್ ಮಾಡಿರುವುದು ತಿಳಿಯುವುದಿಲ್ಲ. ಯಂತ್ರಕ್ಕೆ ಹಾಕಿ ನುಡಿಸಿದರೆ ಆಗ ಸಂಗೀತ ಕೇಳುತ್ತದೆ. ಹಾಗೆಯೇ ನರತಂತುಗಳಲ್ಲಿ ಮತ್ತು ಅವುಗಳ ಸೂಕ್ಷ್ಮವಾದ ಕೇಂದ್ರಗಳಲ್ಲಿ ಪುರುಷನು ಮಾಡಿದ ಕರ್ಮವಾಸನೆಗಳೆಲ್ಲವೂ ರೆಕಾರ್ಡಾಗಿರುತ್ತವೆ. ಸೂಕ್ಷ್ಮ ಶರೀರದಲ್ಲಿ ಆ ವಾಸನೆಗಳೇ ಮುಂದುವರಿಯುತ್ತವೆ. ಆದುದರಿಂದಲೇ ಅವು ಜನಾಂತರದಲ್ಲಿಯೂ ಇವನನ್ನು ಆಳುತ್ತವೆ. ಅವುಗಳಿಂದ ತಪ್ಪಿಸಿ ಕೊಳ್ಳಬೇಕಾದರೆ ಜ್ಞಾನಮಾರ್ಗವಾದ ಸುಷುಮ್ನೆ(ಬ್ರಹ್ಮನಾಡಿ)ಯನ್ನು ಪ್ರವೇಶಿಸಬೇಕು. ಅದನ್ನು ಮುಟ್ಟಿದ ಪುರುಷನು ಅಕಾಮನೂ, ಆತ್ಮಕಾಮನೂ, ಅಪ್ತಕಾಮನೂ ಆಗುತ್ತಾನೆ. ಇದು ಕರ್ಮದಿಂದ ಮುಕ್ತಿ ಪಡೆಯಲು ಯಾಜ್ಞವಲ್ಕ್ಯ ಋಷಿಯು ನೋಡಿದ ದಾರಿ.

ಸೂಚನೆ : ಈ ಲೇಖನವು ಶ್ರೀಮಂದಿರದಿಂದ ಪ್ರಕಾಶಿತವಾಗುವ ಆರ್ಯಸಂಸ್ಕೃತಿ ಮಾಸ ಪತ್ರಿಕೆಯ ಸಂಪುಟ:೧೪ ಸಂಚಿಕೆ:೧೧, ಸೆಪ್ಟೆಂಬರ್   ೧೯೯೧ ತಿಂಗಳಲ್ಲಿ  ಪ್ರಕಟವಾಗಿದೆ.