Friday, April 30, 2021

ಪ್ರಾರ್ಥನೆ ವೈಜ್ಞಾನಿಕವಾಗಿರಲಿ (Prarthane Vaijnanikavagirali)

ಲೇಖಕರು : ಶ್ರೀ ರಾಜಗೋಪಾಲನ್. ಕೆ. ಎಸ್  
(ಪ್ರತಿಕ್ರಿಯಿಸಿರಿ lekhana@ayvm.in)

ದೇವರಲ್ಲಿ ಏನನ್ನಾದರೂ ಬೇಡುವ ಅನೇಕ ಮಂದಿ ನಮಗೆ ಕಾಣಸಿಗುತ್ತಾರೆ. ಹೀಗೆ ಪ್ರಾರ್ಥಿಸುವಾಗ, ಜನರು ಕೆಲವೊಮ್ಮೆ ತೀರ ಅವೈಜ್ಞಾನಿಕವಾದ ಪ್ರಾರ್ಥನೆಗಳನ್ನೂ ಮಾಡುವುದುಂಟು. 


ಸೃಷ್ಟಿನಿಯಮಗಳಿಗೆ ವಿರುದ್ಧವಾದುದನ್ನು ಭಗವಂತನೂ ಕೊಡುವುದಿಲ್ಲ. ಒಮ್ಮೊಮ್ಮೆ ಮೇಲ್ನೋಟಕ್ಕೆ ಪವಾಡಸದೃಶವಾದ ಕೆಲವು ಘಟನೆಗಳು ನಡೆದಿವೆ ಎನ್ನಿಸಿದರೂ, ಸೂಕ್ಷ್ಮವಾಗಿ ನೋಡಿದಾಗ ಆ ಘಟನೆಯ ಹಿಂಬದಿಯಲ್ಲಿರುವ ನಿಸರ್ಗನಿಯಮದ ಅರಿವು ನಮಗಿಲ್ಲದಿರುವುದರಿಂದ ನಾವು "ಅದ್ಭುತವೊಂದು ನಡೆಯಿತು" ಎನ್ನುತ್ತೇವೆ. ದೂರದಲ್ಲಿರುವ ರಿಮೋಟಿನಿಂದ ಟಿ. ವಿ ಯನ್ನು ಚಾಲೂ ಮಾಡುವುದೂ ಮೊದಲಿಗೆ ಪವಾಡದಂತೆಯೇ ಭಾಸವಾಗುತ್ತದೆ. ಆದರೆ ಒಬ್ಬ ವಿಜ್ಞಾನದ ವಿದ್ಯಾರ್ಥಿಗೆ ಇದೊಂದು ವಿಜ್ಞಾನದ ಬಳಕೆಯಷ್ಟೆ.


ಭಗವಂತನು ಎಲ್ಲರ ಪ್ರಾರ್ಥನೆಗಳನ್ನೂ ನೆರವೇರಿಸಲಾದೀತೆ? ಎಂದು ಯೋಚಿಸೋಣ-

ಕಳ್ಳನೊಬ್ಬ ರಾತ್ರಿ ಮಾಲಿನೊಡನೆ ತಪ್ಪಿಸಿಕೊಳ್ಳಲೆತ್ನಿಸುವಾಗ "ನೀನು ನನ್ನನ್ನು ನಿಜವಾಗಿ ಕಾಪಾಡುವವನೇ ಆಗಿದ್ದಲ್ಲಿ ಇಂದು ಸೂರ್ಯೋದಯ ತಡವಾಗಿ ಆಗಲಿ; ಇಲ್ಲದಿದ್ದರೆ ನಾನು ಸಿಕ್ಕಿಬಿದ್ದೇನು" ಎಂದು ಪ್ರಾರ್ಥಿಸಬಹುದು. ಸಮಕಾಲದಲ್ಲಿ ಮತ್ತಾವುದೋ ಕಾರಣಕ್ಕಾಗಿ ಇನ್ನೊಬ್ಬ, "ಭಗವಂತ, ಇಂದು ಸೂರ್ಯೋದಯ ಬೇಗ ಆಗಲಪ್ಪ. ಹಾಗಾದಲ್ಲಿ ನೀನು ನನ್ನನ್ನು ಕಾಪಾಡಿದಂತೆ" ಎನ್ನಬಹುದು. ಭಗವಂತ ಯಾರ ಪ್ರಾರ್ಥನೆಗೆ ಕಿವಿಗೊಡಬೇಕು? 

ದೇವರು ನಮ್ಮ ಪ್ರಾರ್ಥನೆಯನ್ನು ಈಡೇರಿಸಬೇಕೆಂದಾದರೆ, ಅದನ್ನು ಸ್ವೀಕರಿಸಲು ನಮಗೆ ಒಂದು ಯೋಗ್ಯತೆಯೂ ಇರಬೇಕು. ಒಬ್ಬ ಒಳ್ಳೆಯ ತರಬೇತುಗಾರ, ಸಮರ್ಥನಾದ ಒಬ್ಬ ವ್ಯಕ್ತಿಯನ್ನು ಒಳ್ಳೆಯ ಓಟಗಾರನನ್ನಾಗಿ ಮಾಡಬಹುದು. ಆದರೆ, ಕುಂಟನೊಬ್ಬ "ನಾನು ಒಲಿಂಪಿಕ್ಸ್ ಸ್ಪರ್ಧೆಯ ಓಟದಲ್ಲಿ ಮೊದಲಸ್ಥಾನ ಗಳಿಸುವಂತೆ ಮಾಡಿ" ಎಂದು  ತರಬೇತುದಾರನಲ್ಲಿ ದುಂಬಾಲು ಬಿದ್ದರೆ, ಅವನು ಏನು ತಾನೇ ಮಾಡಿಯಾನು? ಅವೈಜ್ಞಾನಿಕವಾದ ವರಗಳನ್ನು ಕೊಡುವುದು ದೇವರಿಗೂ ಹೇಗೆ ಸಾಧ್ಯವಿಲ್ಲವೆಂಬ ಬಗ್ಗೆ ತಿಳಿವಳಿಕೆ ಕೊಡುತ್ತಾ ಶ್ರೀರಂಗಮಹಾಗುರುಗಳು ಹೇಳಿದ ಮಾತುಗಳು ಇಲ್ಲಿ ಮನನೀಯ.


"ದೇಹಪೋಷಣೆ-ಕುಟುಂಬಭರಣಗಳನ್ನು ಭಗವಂತನು ಕೊಟ್ಟ ಬುದ್ಧಿಬಲ, ಶರೀರಬಲದಿಂದ ನಿರ್ವಹಿಸಿಕೊಳ್ಳಬೇಕು. ದೇಹಪೋಷಣೆಯಲ್ಲಿ ಅಶಕ್ತರಾಗಿ ಭಗವಂತನನ್ನು ಹಣ ಕೇಳಲು ಹೋಗಬಾರದು. ಭಗವಂತನ ದೇಶದಲ್ಲಿ ಯಾವ ಧನವು ಚಲಾವಣೆಯಲ್ಲಿದೆಯೋ, ಅಂತಹ ಭಗವಂತನ ಗೌರ್ನಮೆಂಟಿನಲ್ಲಿರುವ ಹಣ ಇಲ್ಲಿ ಚಲಾವಣೆಯಲ್ಲಿಲ್ಲ. ಅದನ್ನು ತಂದರೂ ಇಲ್ಲಿ ಉಪಯೋಗಪಡುವುದಿಲ್ಲ. ನಮ್ಮ ಗೌರ್ನಮೆಂಟಿನಲ್ಲಿರುವ ಚಲಾವಣೆಯಲ್ಲಿರುವ ದುಡ್ಡು ಕೇಳಿದರೆ ನಮ್ಮದನ್ನು ಕೊಟ್ಟರೆ ಆಗಲೂ ಭಗವಂತ ಕೋರ್ಟ್ ಕೇಸ್ ಗೆ ಗುರಿಯಾಗಬೇಕಾಗುತ್ತೆ. ….. ಯಾವ ನಂಬರಿನ ನೋಟುಗಳನ್ನು ಕೊಡಬೇಕು? ಹಾಗೆ ಕೊಟ್ಟರೆ, ಖೋಟಾನೋಟು/ ಖೋಟಾನಾಣ್ಯ ತಯಾರಿಕೆಯ ಕಂಪ್ಲೇಂಟ್ ಗೆ ಬಾಧ್ಯನಾಗಬೇಕಾಗುತ್ತದೆ. ಆದ್ದರಿಂದ ಅವನಲ್ಲಿ ನಿಮ್ಮ ಕುಟುಂಬನಿರ್ವಹಣೆಗಾಗಿ ಹಣ ಕೇಳಹೋಗಬೇಡಿ. ಈ ವ್ಯವಹಾರದಲ್ಲಿ ಅವನೇ ನಿಮ್ಮ ಜೀವನ ನಿರ್ವಹಣೆಗೆ ಉಪಕರಣವಾಗಿ ಕೊಟ್ಟಿರುವ ಬುದ್ಧಿವಂತಿಕೆಯನ್ನು ಉಪಯೋಗಿಸಿಕೊಳ್ಳಬೇಕು."


ಭಗವಂತನಲ್ಲಿ  ನಮ್ಮ ಕೋರಿಕೆಯನ್ನು ನಿವೇದನೆ ಮಾಡಿಕೊಳ್ಳುವುದು ತಪ್ಪಲ್ಲ. ಆದರೆ, ನಮ್ಮ ಪ್ರಾರ್ಥನೆಯಲ್ಲಿ ಇದು ಹೀಗೇ ಆಗಬೇಕು ಎಂಬ ಆಗ್ರಹವಿರಬಾರದಷ್ಟೆ. "ನಿನಗಿಷ್ಟವಿದ್ದರೆ ಹೀಗಾಗಲಿ" ಎಂದು ದೇವರಲ್ಲಿ ಕೇಳಿಕೊಂಡು ಹಗುರವಾಗಿರೋಣ. ಹಾಗೆ ಮನಸ್ಸು ಹಗುರವಾದಾಗ ಕಾರ್ಯಸಾಧನೆಗೆ ಬೇಕಾದ ನಮ್ಮ ಪುರುಷಪ್ರಯತ್ನವನ್ನು ಇನ್ನೂ ಚೆನ್ನಾಗಿ ಮಾಡಬಹುದಲ್ಲವೇ? 


ಸೂಚನೆ: 29/04/2021 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.

ಪರಮ ಲಕ್ಷ್ಯ ಸಾಧನೆಗಾಗಿ ಕಷ್ಟಗಳನ್ನು ದಾಟೋಣ (Parama Laksya Sadhanegagi Kastagalannu Dstona)

ಲೇಖಕರು: ವಾದಿರಾಜ. ಪ್ರಸನ್ನ 
(ಪ್ರತಿಕ್ರಿಯಿಸಿರಿ lekhana@ayvm.in)



ಇತ್ತೀಚಿನ ದಿನಗಳಲ್ಲಿ ಪ್ರಪಂಚದಾದ್ಯಂತ ಕರೋನ ಮಹಾಮಾರಿಯ ಜೊತೆಯಲ್ಲಿ ಸಂಕಷ್ಟದ ಸರಮಾಲೆಗಳು ತಾಂಡವವಾಡುತ್ತಿವೆ, ಅಭದ್ರತೆಯ ಭಯವು ಎಲ್ಲರನ್ನೂ ಕಾಡುತ್ತಿದೆ. ಶಾಲಾ ಕಾಲೇಜು ವಿದ್ಯಾರ್ಥಿಗಳಲ್ಲಿಯೂ ಅನೇಕ ಗೊಂದಲಗಳಿವೆ. ನೂತನ ಮಾದರಿ ಆನ್ಲೈನ್ ವಿದ್ಯಾಭ್ಯಾಸ ನಡೆಯುತ್ತಿದ್ದರೂ, ವಾರ್ಷಿಕ ಪರೀಕ್ಷೆ ನಡೆಯುವುದೋ, ಇಲ್ಲವೋ ಎಂಬ ಭಯವಿದೆ. ಇನ್ನು ಕೆಲಸಕ್ಕೆ ಹೋಗುವವರ ಗತಿಯಂತೂ ಹೇಳತೀರದು. ಕಡಿಮೆಯಾದ ಸಂಬಳ, ಕೆಲಸವೇ ಹೋಗುವ ಭಯ,'ವರ್ಕ್ ಫ್ರಮ್ ಹೋಂ' ಅವಾಂತರಗಳು, ಇವುಗಳ ಮಧ್ಯದಲ್ಲಿ, 'ನೆಟ್ವರ್ಕ್ ಇಲ್ಲದೆ ನೆಟ್ಟಗೆ ಕೆಲಸಮಾಡಲಾಗುತ್ತಿಲ್ಲ' ಎಂಬ ಆತಂಕ.  ಇನ್ನು ವ್ಯಾಪಾರಸ್ಥರು ವ್ಯಾಪಾರವಿಲ್ಲದೆ, ಲಾಭವಿಲ್ಲದೆ, ಮುಚ್ಚಿದ ಅಂಗಡಿಗಳ ಸಂಖ್ಯೆಯು ಅಧಿಕವಾಗಿದೆ. ಅಂತೂ ಈ ವರ್ಷದಲ್ಲಿ ಉತ್ತಮ, ಮಧ್ಯಮ ಹಾಗೂ ಸಣ್ಣ ವ್ಯಾಪಾರಸ್ಥರು ನಷ್ಟದಲ್ಲಿಯೇ ವಹಿವಾಟು ನಡೆಸುತ್ತಿರುವುದಂತೂ ಸತ್ಯ. ಹೀಗೆ ಕರೋನ ರೋಗ ಮುಂದುವರೆದರೆ, ಇದೇ ವ್ಯಾಪಾರದಲ್ಲಿಯೇ ಮುಂದುವರೆಯಲು ಸಾಧ್ಯವೇ? ಎಂಬ ಭಯವು ಕಾಡಿದೆ. ಒಟ್ಟಾರೆ, ಆಬಾಲವೃದ್ಧರಲ್ಲಿ ಈ ರೋಗ ಅಸ್ಥಿರತೆ,ಭಯ,ಆತಂಕಗಳನ್ನು ಸೃಷ್ಟಿಸಿ ಜೀವನವನ್ನು ದುಸ್ತರವಾಗಿಸಿದೆ. ಚರಿತ್ರೆಯಲ್ಲಿ ಪ್ರತಿಯೊಂದು ದೊಡ್ಡಸಾಮ್ರಾಜ್ಯವೂ ಕೊನೆಗಾಣುತ್ತದೆ, ಅಂತೆಯೇ ಪ್ರತಿಯೊಂದು ವ್ಯಾಪಾರವೂ; ಪ್ರತಿಯೊಂದು ಕೆಲಸವೂ. ಆದರೆ ಒಂದು ಕೆಲಸ ಹೋದರೆ ಮತ್ತೊಂದು ಬರುತ್ತೆ, ಒಂದು ಸಾಮ್ರಾಜ್ಯ ಹೋದರೆ ಮತ್ತೊಂದು ಬರುತ್ತೆ. ವೃತ್ತಿ, ಮನೆ, ಸ್ಥಾನ ಪದವಿಗಳು ಬದಲಾಗುತ್ತವೆ ಅಷ್ಟೇ, ಆಡಳಿತ ಪಲ್ಲಟವಾದರೂ ಜನಜೀವನ ನಡೆಯುತ್ತೆ, ಕೆಲಸ ಬದಲಾದರೂ ನಾವು ಇರುತ್ತೇವೆ, ಅಂಗಡಿ ಬದಲಾದರೂ, ಯಜಮಾನ ಮುಂದುವರೆಯುತ್ತಾನೆ. ಅಂತೆಯೇ 'ಶರೀರ ಹೋದರೂ ಜೀವ ಮುಂದುವರೆಯುತ್ತಾನೆ' ಎಂಬುದು ಋಷಿಗಳ ದೀರ್ಘದೃಷ್ಟಿ.

ಮಹಾಭಾರತದಲ್ಲಿ ನಡೆದ ರೋಚಕ ಪ್ರಸಂಗವೊಂದನ್ನು ಗಮನಿಸೋಣ. ಪಾಂಡವರು ವನವಾಸದಲ್ಲಿದ್ದಾಗ ಒಮ್ಮೆ ಎಲ್ಲರಿಗೂ ತೀವ್ರವಾದ ಬಾಯಾರಿಕೆಯಾಗಿತ್ತು, ಅಲ್ಲಿಯೇ ಇದ್ದ ಮರವನ್ನೇರಿದ ನಕುಲನು ಅನತಿ ದೂರದಲ್ಲಿ ನೀರಿನ ಸರೋವರವನ್ನು ಕಂಡನು. ಧರ್ಮರಾಜ ಅವನಿಗೆ ಅಲ್ಲಿಂದ ನೀರನ್ನು ತರಲು ಕಳುಹಿಸಿದನು. ನಕುಲನು ಅಲ್ಲಿಗೆ ಹೋಗಿ ನೀರನ್ನು ಕುಡಿಯಬೇಕೆನ್ನುವಷ್ಟರಲ್ಲಿ "ಬೇಡಪ್ಪ ! ಸಾಹಸಕಾರ್ಯ ಮಾಡಬೇಡ ! ಇದು ನನ್ನ ಸ್ವಾಮ್ಯಕ್ಕೆ ಒಳಪಟ್ಟಿದೆ. ನೀರು ಬೇಕಾದರೆ, ನಾನು ಕೇಳುವ ಪ್ರಶ್ನೆಗಳಿಗೆ ಉತ್ತರಿಸಿ ನೀರನ್ನು ಕುಡಿಯಬಹುದು !" ಎಂದು ಅಶರೀರವಾಣಿಯಾಯಿತು. ಅದನ್ನು ನಿರ್ಲಕ್ಷಿಸಿ ನೀರು ಕುಡಿದ ನಕುಲನು ಗತಪ್ರಾಣನಾಗಿ ಕೆಳಗೆ ಬಿದ್ದನು. ಇತ್ತ, ಎಷ್ಟು ಹೊತ್ತಾದರೂ ನಕುಲನು ಬರಲಿಲ್ಲವಾಗಿ ಯುಧಿಷ್ಠಿರನು ಸಹದೇವನನ್ನು ಕಳುಹಿಸಿದನು. ಅವನಿಗೂ ಇದೇ ಅಶರೀರವಾಣಿ ಮರುಕಳಿಸಿತು. ಇವನಿಗೂ ಸಹ ತೀವ್ರ ಬಾಯಾರಿಕೆಯಿದ್ದುದರಿಂದ, ಅದನ್ನು ಅಲಕ್ಷಿಸಿ ನೀರು ಕುಡಿಯಲು ಹೋಗಿ ಸತ್ತುಬಿದ್ದನು. ಆಮೇಲೆ ಅರ್ಜುನ, ಭೀಮರೂ ಒಬ್ಬೊಬ್ಬರಾಗಿ ಬಂದು ತಮ್ಮ ತಮ್ಮಂದಿರಂತೆಯೇ ಅಶರೀರವಾಣಿಯನ್ನು ಅಲಕ್ಷಿಸಿ ನೀರು ಕುಡಿಯಲು ಹೋಗಿ ಸತ್ತುಬಿದ್ದರು. ಕಡೆಗೆ ಯುಧಿಷ್ಠಿರನು ಅಲ್ಲಿಗೆ ಬಂದು ನೋಡಲು ನಾಲ್ಕು ತಮ್ಮಂದಿರು ಸತ್ತು ಬಿದ್ದಿರುತ್ತಾರೆ. ಪರಮಾಶ್ಚರ್ಯ ! ಯಾರ ಮೇಲೂ ಗಾಯವಾಗಲಿ, ಆಯುಧದ ಗುರುತಾಗಲಿ ಇಲ್ಲ.  ಹಾಗಾದರೆ ನೀರಿನಲ್ಲಿ ವಿಷವಿದೆಯೇ ಎಂದರೆ ಮೀನುಗಳು ಹಾಗೂ ಬಕಗಳು(ನೀರಹಕ್ಕಿ) ಆರಾಮವಾಗಿವೆ. ನೀರಿನಲ್ಲಿ ಇಳಿದಾಗ ಇವನಿಗೂ ಹಾಗೆಯೇ ಅಶರೀರವಾಣಿ.-'ಇದು ನನ್ನ ಕೊಳ. ನನ್ನ ಪ್ರಶ್ನೆಗಳಿಗೆ ಉತ್ತರಿಸಿ ನೀರನ್ನು ಕುಡಿ . ನಾನು ಎಚ್ಚರಿಕೆ ಕೊಟ್ಟರೂ ನಿರ್ಲಕ್ಷಿಸಿ ನಿನ್ನ ತಮ್ಮಂದಿರು ನಾಲ್ವರು ಸತ್ತಿದ್ದಾರೆ. ನೀನೂ ಹಾಗೆಯೇ ನಿರ್ಲಕ್ಷಿಸಿದರೆ ಐದನೇ ಸಾವೇ ನಿನ್ನದಾಗುವುದು' ಆಗ ಯುಧಿಷ್ಠಿರನು ವಿನಮ್ರನಾಗಿ ಕೈಮುಗಿದು ನೀನು ಯಾರು? ನಿನ್ನ ಅಪೇಕ್ಷೆಯಂತೆ ನಿನ್ನ ಪ್ರಶ್ನೆಗೆ ಉತ್ತರಿಸುವೆ.  ನಂತರ ನಿನ್ನ ಅಪ್ಪಣೆಯನ್ನು ಪಡೆದೇ ನೀರನ್ನು ಕುಡಿಯುವೆ ಎಂದಾಗ - ನಾನು ಯಕ್ಷ. ಎಂದು ತನ್ನ ಪರಿಚಯವನ್ನು ಹೇಳಿ ಹಲವು ಬಹಳ ಅಮೂಲ್ಯವಾದ ಪ್ರಶ್ನೆಗಳನ್ನು ಕೇಳುವನು. ಧರ್ಮಾತ್ಮನಾದ ಯುಧಿಷ್ಠಿರನು ಸಾವಧಾನ ಚಿತ್ತನಾಗಿ ಎಲ್ಲಾ ಪ್ರಶ್ನೆಗಳಿಗೂ ಸಮಂಜಸವಾದ ಉತ್ತರವನ್ನು ಕೊಡುವನು. ಯಕ್ಷನು ಸಂತೋಷಗೊಂಡು ಧರ್ಮಜನು ಬೇಡಿದಂತೆ ಅವನ ತಮ್ಮಂದಿರನ್ನೆಲ್ಲಾ ಪುನಃ ಜೀವಿತಗೊಳಿಸುವನು. ಇದು ಮಹಾಭಾರತದಲ್ಲಿ ಬರುವ ಯಕ್ಷಪ್ರಶ್ನೆ ಎಂದೇ ಪ್ರಸಿದ್ಧವಾಗಿರುವ ಕಥಾನಕ. ಮೇಲಿನ ಕತೆಯು ಇಂದಿಗೂ ನಮಗೆ ಹಲವು ನೀತಿಗಳನ್ನು ತಿಳಿಸುತ್ತದೆ. ನಾಲ್ವರು ಪಾಂಡವರು ಕೊಳದ ಯಜಮಾನನ ಮಾತನ್ನು ಅಲಕ್ಷಿಸಿದ್ದು ಆತುರದ ನಿರ್ಧಾರ. ಎಷ್ಟೇ ಬಾಯಾರಿಕೆಯಾದರೂ ಅಲ್ಲಿ ಇಂದ್ರಿಯ ಸಂಯಮವಿರಬೇಕಾಗಿತ್ತು. ಯಕ್ಷನ ಎಚ್ಚರಿಕೆಯ ನಂತರವೂ ತಮ್ಮ ಬಗೆಗಿನ ಅತಿಯಾದ ಅಭಿಮಾನ ಅವರ ಜೀವಕ್ಕೇ ಹಾನಿಮಾಡಿತು. ಯುಧಿಷ್ಠಿರನು ತನಗೆಷ್ಟು ಬಾಯಾರಿಕೆಯಾದರೂ ಸಮಯಪ್ರಜ್ಞೆಯಿಂದ, ಸಂಯಮದಿಂದ ಪರಿಸ್ಥಿತಿಯನ್ನು ನಿಭಾಯಿಸಿದ್ದರಿಂದ ಯಕ್ಷನ ನೆಪದಲ್ಲಿ ಲೋಕವನ್ನೇ ಕಾಡುತ್ತಿದ್ದ ಪ್ರಶ್ನೆಗಳಿಗೂ ಉತ್ತರಿಸಿ ಜೀವನದ ಮಾರ್ಗದರ್ಶಕನಾದ. ತಾನು ಗೆದ್ದು ಗತಪ್ರಾಣರಾಗಿದ್ದ ತನ್ನ ಪ್ರಾಣಪ್ರಿಯರಾದ ತಮ್ಮಂದಿರನ್ನೂ ಉಳಿಸಿಕೊಂಡ ! ಹಾಗೆಯೇ ಕರೋನದಿಂದ ಕಂಗಾಲಾದ ಮನಃಸ್ಥಿತಿಯಿಂದ ಹೊರಬಂದು ನೆಮ್ಮದಿಯ ಬದುಕನ್ನು ನಡೆಸಲು ಧರ್ಮಜನ ಈ ನಡೆ ನಮಗೆ ಮಾರ್ಗದರ್ಶಿಯಾಗಬಲ್ಲದು.

ಸುಖದಂತೆಯೇ ಕಷ್ಟಗಳೂ ಭಗವಂತನ ಪ್ರಸಾದವೇ ಎಂಬಂತೆ ತೆಗೆದುಕೊಳ್ಳಬೇಕು. ಕಷ್ಟಗಳು ಬಂದಾಗ ನಾವು ಗಟ್ಟಿಯಾಗುತ್ತೇವೆ. ಭಗವಂತನ ಸ್ಮರಣೆ ಮಾಡುತ್ತೇವೆ. ಜೀವನವನ್ನು ಯಶಸ್ವಿಯಾಗಿ ನಿಭಾಯಿಸುವುದನ್ನು ಕಲಿಯುತ್ತೇವೆ. ಕಷ್ಟಗಳು ಸಹಜವಾಗಿ ಬರುವಂತಹವು ಕೆಲವಾದರೆ, ನಾವಾಗಿಯೇ ಕಲ್ಪಿಸಿಕೊಳ್ಳುವಂತಹವೂ ಇವೆ. ದೇಶದಲ್ಲಿ ನಿಜವಾಗಿ ಸಂಕಷ್ಟಕ್ಕೆ ಸಿಲುಕಿರುವವರು ಕೆಲವರಾದರೆ, ರೋಗಭಯದಿಂದ ನರಳುವವರು ಎಷ್ಟೋ ಮಂದಿ ಇದ್ದಾರೆ. ಭಯಗ್ರಸ್ತರಿಗೆ ಔಷಧಕ್ಕಿಂತ ಹೆಚ್ಚಾಗಿ ಧೈರ್ಯದಿಂದ  ಕಷ್ಟಗಳನ್ನು ಎದುರಿಸುವ ಮನಃಪ್ರವೃತ್ತಿಯನ್ನು ಉಂಟು ಮಾಡುವುದೇ ಮುಖ್ಯ. ಅರ್ಜುನನು ಮಹಾವೀರನಾಗಿದ್ದರೂ, ಬಂಧುಮಿತ್ರರನ್ನು ಕೊಲ್ಲುವಂತಹ ಕಷ್ಟ ಬಂದಿತಲ್ಲ ಎಂದು ದುಃಖಿಸುತ್ತಾನೆ. ಅವನ ಗಾಂಡೀವ ಧನುಸ್ಸೇ ಕೈಯಿಂದ ಜಾರಿಬಿಡುತ್ತದೆ. ಧರ್ಮವನ್ನು ರಕ್ಷಿಸಲು ಯುದ್ಧ ಅಗತ್ಯವೆಂಬ ತಿಳಿವಳಿಕೆಯನ್ನು ಶ್ರೀಕೃಷ್ಣನು ಕೊಟ್ಟಾಗಲಷ್ಟೆ ಅರ್ಜುನನು ಭಯಮುಕ್ತನಾಗುತ್ತಾನೆ. ಅವನು ಯುದ್ಧದಲ್ಲಿ ಹೋರಾಡಿ, ಕೊನೆಗೆ ಪಾಂಡವರು ಜಯಶೀಲರಾಗುತ್ತಾರೆ. ಶ್ರೀಕೃಷ್ಣನು ಅರ್ಜುನನಿಗೆ ಕಷ್ಟದಲ್ಲಿ ಮಾರ್ಗದರ್ಶನ ಮಾಡಿದ್ದಾರೆ. ಶಿವಾಜಿಗೆ ಸಮರ್ಥ ರಾಮದಾಸರು, ಚಂದ್ರಗುಪ್ತನಿಗೆ ಚಾಣಕ್ಯ, ಹಕ್ಕ-ಬುಕ್ಕರಿಗೆ ವಿದ್ಯಾರಣ್ಯರು ಹೀಗೆ ಪಟ್ಟಿ ಬೆಳೆಯುತ್ತದೆ. ಅಂತಹವರ ಕಥೆಗಳನ್ನು ಮತ್ತೊಮ್ಮೆ ಅವಲೋಕಿಸಿದರೆ, ಇಂದು ನಮ್ಮನ್ನು ಆವರಿಸಿರುವ ಭೀತಿಯಿಂದ ಹೊರಬಂದು ಕಾರ್ಯ  ಪ್ರವೃತ್ತರಾಗಬಹುದು. ಈ ಸಾಧು ಸಂತರು ಯಾರೂ ಕಷ್ಟದಿಂದ ತಪ್ಪಿಸಿಕೊಂಡು ಕಾಡಿಗೆ ಹೋಗುವಂತೆ ಬೋಧಿಸಿಲ್ಲ. ಧೈರ್ಯವಾಗಿ ಕಷ್ಟಗಳನ್ನು ಎದುರಿಸಿ ಜೀವನದಲ್ಲಿ ಯಶಸ್ವಿಯಾಗುವ ಮಾರ್ಗವನ್ನೇ ಬೋಧಿಸಿದ್ದಾರೆ. ಭಾರತೀಯ ಮಹರ್ಷಿಗಳು ಜೀವನಕ್ಕೊಂದು ಸಹಜವಾದ, ಹಿರಿದಾದ ಗುರಿಯೊಂದನ್ನು ಕಂಡುಕೊಂಡರು. ಅದು ನಮ್ಮೊಳಗೇ ಬೆಳಗುವ ಜೀವಮೂಲವಾದ ಪರಂಜ್ಯೋತಿಯನ್ನು ಅನುಭವಿಸುವ ಗುರಿ. ಅಲ್ಲಿನ ನೆಮ್ಮದಿ, ಸುಖ ಇನ್ನೆಲ್ಲಿಯೂ ಇಲ್ಲದಿರುವುದು ಅವರ ಅನುಭವವಾಗಿತ್ತು. ಆ ನೆಮ್ಮದಿಯನ್ನು ಪಡೆಯುವ ಸಾಧನೆಗೆ ಅವರು ಜೀವನವನ್ನು ಮುಡುಪಿಟ್ಟರು. ಆ ಮಹಾ ಸಾಧನೆಯ ದಾರಿಯಲ್ಲಿ ಬರುವ ಕಷ್ಟ ಸುಖಗಳನ್ನೆಲ್ಲಾ ಗೌಣವಾಗಿ ಕಂಡರು. ಹಾಗೆಯೇ ಜೀವಲೋಕವೂ ಆ ಆತ್ಯಂತಿಕ ಸುಖವನ್ನು ಹೊಂದುವಂತಾಗಲೆಂದು ಇಲ್ಲಿ ಜೀವನಪದ್ಧತಿಯನ್ನು ರೂಪಿಸಿಕೊಟ್ಟರು. ಈ ಹಿರಿದಾದ ಜೀವನಲಕ್ಷ್ಯವನ್ನು ನಾವು ಇಟ್ಟುಕೊಂಡಾಗ ಅದರ ಹಾದಿಯಲ್ಲಿ ಬರುವ ಕಷ್ಟಗಳೆಲ್ಲವನ್ನು ಸಮಾಹಿತ ಮನಸ್ಸಿನಿಂದ ದಾಟಬಹುದಾಗಿದೆ.

ಮಹಾಮಾರಿಯು ಬಂದಾಗ, ತಮ್ಮ ಆಪ್ತೇಷ್ಟರಲ್ಲಿ ಯಾರಾದರೂ ಮರಣ ಹೊಂದಿದರೆ , ಜೀವನವೇ ನೀರಸವೆಂದು ಕೆಲವರು ಭಾವಿಸುವುದುಂಟು. ಆದರೆ ಜೀವನ ನೀರಸವೆನಿಸಲು ಮೂಲ ಕಾರಣವೇನೆಂದು ಶ್ರೀರಂಗಮಹಾಗುರುಗಳು ಹೇಳಿದ ಮಾತುಗಳು ಸ್ಮರಣೀಯ. "ಜೀವನಕ್ಕೆ ಮೂಲರೂಪನಾಗಿ, ಬೇರಾಗಿ, ಜೀವನವನ್ನು ಧರಿಸಿರುವವನು ಭಗವಂತನಪ್ಪಾ. ಅವನನ್ನು ಮರೆಯಬೇಡಿ. ಬೇರನ್ನು ಕಾಪಾಡಿಕೊಳ್ಳಿ. ಬೇರು ಹುಳು ಕಡಿದು, ಮರವು ಬೇರಿನ ಸಂಬಂಧದಿಂದ ಬೇರ್ಪಟ್ಟರೆ ಒಣಮರವಾಗುತ್ತೆ. ನೀರಸ ಜೀವನವಾಗುತ್ತೆ. ಆದ್ದರಿಂದ ಅದನ್ನು ಕೆಡಿಸಿಕೊಳ್ಳಬೇಡಿ. ರಸರೂಪಿಯಾದ ಅವನ ಸಂಬಂಧವಿಲ್ಲದಿದ್ದಾಗ ಜೀವನ ನೀರಸವಾಗುತ್ತೆ" ಈ ಲೋಕ, ಕರೋನ ಮಾದರಿಯ ಹಲವಾರು ರೋಗ-ರುಜಿನಗಳನ್ನು ಕಂಡಿದೆ. ಕಷ್ಟಗಳು ಬಂದಾಗ ಎದೆಗುಂದದೆ ಧೈರ್ಯವಾಗಿ ಬಂದದ್ದನ್ನು ಎದುರಿಸುತ್ತಾ ನಮ್ಮ ಋಷಿಗಳಂತೆ ಉದಾತ್ತವಾದ ಜೀವನಲಕ್ಷ್ಯದ ಕಡೆಗೆ ಹೆಜ್ಜೆಹಾಕುವಂತಹ ಮನಸ್ಸನ್ನು ಭಗವಂತನು ನಮಗೆಲ್ಲಾ ಕರುಣಿಸಲಿ ಎಂದು ಪ್ರಾರ್ಥಿಸೋಣ.

ಸೂಚನೆ: 29/04/2021 ರಂದು ಈ ಲೇಖನ ವಿಜಯವಾಣಿಯ ಸಂಸ್ಕೃತಿ ದಲ್ಲಿ ಪ್ರಕಟವಾಗಿದೆ. 

Ananda Tandava Of Nataraja-3



Dr. K S Kannan,
SRSJM Chair Professor,
IIT-Madras, Chennai.
Respond to (lekhana@ayvm.in)

Negative Criticisms of Indian Art before Coomaraswamy

It may be desirable to cite some of those negative criticisms here, at least as a sample. Coomaraswamy himself cites some typical cynical opinions current during his own times. Thus, B. H. Baden-Powell (1857-1941) had remarked: 'In a country like this [India], we must not expect to find anything that appeals to mind or deep feeling'! (italics ours). This quotation is cited by Coomaraswamy in his book entitled The Dance of Śiva: Fourteen Indian Essays [first published in 1918, New York, Publisher: The Sunwise Turn;] (reprinted 1974 Delhi: Munshiram Manoharlal), p.195). It must however be noted that the critic modified his views considerably in later years, presumably being influenced by Coomaraswamy.

 The famous British historian Vincent A. Smith (1848-1920) had the nerve to remark thus in The Imperial Gazeteer, (Volume 2, 1910): 'Indian sculpture properly so-called, hardly deserves to be reckoned as art. The figures of both men and animals become stiff and formal, and the idea of power is clumsily expressed by the multiplication of members. The many-headed, many-armed gods and goddesses whose images crowd the walls and roofs of medieval temples have no pretensions to beauty, and are frequently hideous and grotesque' (italics ours). (How absurd or shocking should the awe-inspiring Virāṭ-puruṣa of the Puruṣa-Sūkta of the R̥gveda, or the Viśva-rūpa-darśana of the Bhagavad-gītā – with a thousand heads, thousand eyes, or a thousand feet - must then have appeared for them! What can look so grand and appealing for us can look so grotesque and appalling for them!)  Similarly, Alfred Maskell speaks of 'these hideous deities with animals' heads and innumerable arms' (Refer: A. Maskell, Ivories, New York: G. P. Putnam, 1905, p.332). Sir George Birdwood (1832-1917), though sympathetic to many Indian causes, considered that 'the monstrous shapes of the Puranic deities are unsuitable for the higher forms of artistic representation; and this is possibly why sculpture and painting are unknown as fine arts in India' (italics ours). (G. Birdwood, Industrial Arts of India, London: Chapman & Hall, 1880, p.125 cited in Coomaraswamy, The Dance of Shiva, p.96).

Thursday, April 29, 2021

அறம் எனப்படுவது யாது?(Aram enappaduvadu yadu?)

மூலம்: வித்வான் நரஸிம்ஹ பட்டா

தமிழாக்கம்: வனஜா

மின்னஞ்சல் : (lekhana@ayvm.in)




தர்மாத் அர்த: ப்ரபவதே தர்மாத்ப்ரபவதே சுகம் |

தர்மேண லபதே ஸர்வம் தர்மஸாரமிதம் ஜகத் || ராமாயணம்

 

பொழிப்புரை:

அறத்திலிருந்து  திடப்பொருள்          தோன்றுகிறது.  இன்பம் அறத்தினின்று தோன்றுகிறது. அனைத்தும் அறத்தினின்று கிடைக்கப்பெறும்.  இவ்வுலகே அறத்தின் சாரம்.

           

 

விரிவுரை:

உலகின் சாரமாக கருதப்படுவதால்  அறம் முக்கியத்துவம் பெறுகிறது. தர்மம்(அறம்)  எனும் சொல் வடமொழியின் 'த்ரிங் தாரண-போஷணயோ:' (dhring dhaarana poshanayoh) என்பதிலிருந்து  பிறந்துள்ளது. அதாவது எது அனைத்தையும்  தாங்கிகாக்கிறதோ அதுவே தர்மம் எனப்படும். இவ்வுலகம் தர்மத்தால் பராமரிக்கப்பட்டுநிலைநிறுத்தப்படுவதால் அனைத்தும் தர்மத்தை குறித்தே அறியப்படும். எனவே தான் ஸ்ரீரங்கமஹாகுரு தர்மத்தின் உண்மையானசிறப்பான பொருள் பரம்பொருளே என்றார். தர்மத்தின் உண்மையான பொருளை அறிந்தால் மட்டுமே இதனை ஒட்டியுள்ள மற்ற அனைத்து விஷயங்களையும் புரிந்து கொள்ள இயலும்.


            இறைவனால் தோற்றுவிக்கப்பட்ட இவ்வுலகம் அவனாலேயே பராமரிக்கபடுகிறது. இதனை கருத்தில் கொண்டு அவனையே பாதுகாவலனாக மதிப்பது  அவனது மேன்மைக்கு மேலும் மெருகூட்டுகிறது. இங்கு 'அர்த்தம்' என்பது திடப்பொருளை குறிக்கிறது. இந்நிலையில் "தர்மத்திலிருந்து திடவஸ்து  உண்டானது" எனும் சொற்றொடரின் பொருள் உலகம் எனும் வஸ்து  இறைவனால் படைக்கப்பட்டது என்பதேயாம். . மேலும் இறைவனே அனைத்தும் என உணர தலைப்பட்டால் வாழ்க்கையின் குறிக்கோளை அறிய முடியும். இதன் பின்னணியில் தர்மம் எனறால் நன்னடத்தைஇறைவனுடன் இணைவதற்கான வழி எனும்  இதர பொருட்களும் கூறப்படும். தர்மம் என்றால் இறைவன் என்று பொருள்கொண்டால் மட்டுமே மேற்கண்ட செய்யுளை புரிந்து கொள்ள இயலும்.


               மேற்கண்ட விவேகமுள்ள சொற்றொடரின் உட்கருத்து பின்வருமாறு:


          "திட வஸ்து இறைவனிடமிருந்து உருவாகிறது. இன்பம் பிறப்பது இறைவனிடமிருந்தே. அனைத்தும்  இறைவனிடமிருந்தே பெறப்படும். இவ்வுலகம் இறைவனின் சாம்"


குறிப்பு: இக்கட்டுரை யின் கன்னட மூலம் AYVM blogs ல் காணலாம்.

Monday, April 26, 2021

ಆರ್ಯಸಂಸ್ಕೃತಿ ದರ್ಶನ-40(Arya Samskruti Darshana-40)

ಗುಡುಗು ಏನು ಹೇಳುತ್ತದೆ ?
ಲೇಖಕರು: ಡಾ||ಶ್ರೀ ಎಸ್.ವಿ. ಚಾಮು


   
ಬೃಹದಾರಣ್ಯಕದಲ್ಲಿ ನೀತಿಯ ಬಗ್ಗೆ ಒಂದು ಸಣ್ಣ ಕಥೆ ಇದೆ.
"ದೇವತೆಗಳು, ಮನುಷ್ಯರು ಮತ್ತು ಅಸುರರು ಮೂವರೂ ಪ್ರಜಾಪತಿಯ ಮಕ್ಕಳು. ಅವರು ಪ್ರಜಾಪತಿಯಲ್ಲಿ ಬ್ರಹ್ಮಚಾರಿಗಳಾಗಿ ವಾಸಮಾಡಿದರು. ಅವರಲ್ಲಿ ದೇವತೆಗಳು ಬ್ರಹ್ಮಚಾರಿಗಳಾಗಿ ವಾಸಮಾಡಿ, ಪ್ರಜಾಪತಿಗೆ "ನೀನು ನಮಗೆ ಉಪದೇಶ ಮಾಡು" ಎಂದು ಹೇಳಿದರು.
ಅವನು ಅವರಿಗೆ "ದ" ಎಂಬ ಅಕ್ಷರವನ್ನು ಹೇಳಿ ತಿಳಿದಿರಾ? " ಎಂದು ಕೇಳಿದನು. ಅವರು ತಿಳಿಯಿತು. "ನೀವು ದಮನ ಮಾಡಿರಿ (ದಾಮ್ಯತ] ಎಂದು ಹೇಳಿದೆ" ಎಂದು ಅವನಿಗೆ ಹೇಳಿದರು. ಅವನು," ಓಂ, ನೀವು ನನ್ನ ಮನಸ್ಸನ್ನು ತಿಳಿದಿರಿ" ಎಂದು ಹೇಳಿದನು.
ನಂತರ ಮನುಷ್ಯರು ಅವನನ್ನು ಕೇಳಿದರು, "ನಮಗೆ ಹೇಳು". ಅವನು ಅವರಿಗೂ ಸಹ "ದ" ಎಂಬ ಅಕ್ಷರವನ್ನೇ ಹೇಳಿ "ತಿಳಿದಿರಾ" ಎಂದು ಕೇಳಿದನು. ಅವರು "ತಿಳಿದೆವು, ನೀವು ದಾನ ಮಾಡಿರಿ  (ದತ್ತ) ಎಂದು ನೀನು ನಮಗೆ ಹೇಳಿದೆ" ಎಂದರು. ಅವನು "ಓಂ,ನೀವು ನನ್ನ ಮನಸ್ಸನ್ನು ತಿಳಿದಿರಿ" ಎಂದು ಹೇಳಿದನು.
ನಂತರ ಅಸುರರು ಅವನನ್ನು ಕೇಳಿದರು "ನಮಗೆ ಹೇಳು". ಅವನು ಅವರಿಗೂ ಸಹ " ದ " ಎಂಬ ಅಕ್ಷರವನ್ನೇ ಹೇಳಿ, "ತಿಳಿದಿರಾ" ಎಂದು ಕೇಳಿದನು. ಅವರು "ತಿಳಿದೆವು, ನೀವು ದಯೆ ತೋರಿಸಿರಿ (ದಯಧ್ವ೦) ಎಂದು ನೀನು ನಮಗೆ ಹೇಳಿದೆ" ಎಂದರು. ಅವನು "ಓಂ, ನೀವು   ನನ್ನ ಮನಸ್ಸನ್ನು ತಿಳಿದಿರಿ" ಎಂದು ಹೇಳಿದನು. ಅದನ್ನೇ "ಬಾನುಲಿಯಾದ ಗುಡುಗು ದ—ದ---ದ ದಾಮ್ಯತ, ದತ್ತ, ದಯಧ್ವಂ..(ವಶದಲ್ಲಿರಿಸಿಕೊಳ್ಳಿರಿ, ದಾನಮಾಡಿರಿ, ದಯೆತೋರಿಸಿರಿ) ಎಂದು ಹೇಳುತ್ತವೆ. ಆದುದರಿಂದ ದಮ, ದಾನ ಮತ್ತು ದಯೆಗಳನ್ನು ಅನುಸರಿಸಬೇಕು" ಇದು ಆ ಕಥೆ.

ಅಗ್ನಿ, ಚಂದ್ರ, ದಿಕ್ಕುಗಳು, ಸೂರ್ಯ ಮತ್ತು ವಾಯುಗಳು, ವಾಕ್ಕು, ಮನಸ್ಸು, ಶ್ರೋತ್ರ, ಚಕ್ಷುಸ್ಸು ಮತ್ತು ಪ್ರಾಣಗಳ ಉತ್ಪತ್ತಿಗೆ ಕಾರಣರಾದ ಪ್ರತಿದೇವತೆಗಳು, ಉಪನಿಷತ್ತುಗಳು, ವಾಕ್ಕು, ಮನಸ್ಸು, ಮುಂತಾದವುಗಳನ್ನು ದೇವತೆಗಳೆಂದು ವ್ಯವಹರಿಸುತ್ತವೆ. ಯಾರಲ್ಲಿ ಯಾವ ಕೊರತೆಯಿದೆಯೋ ಅದನ್ನು ಸರಿಮಾಡಿಕೊಳ್ಳುವುದೇ ನೀತಿಯ ಸಾರ. ಈ ದೇವತೆಗಳು ದಾರಿತಪ್ಪಿ ಹೋಗುವ ಸಂಭವ ಬಹಳ ಜಾಸ್ತಿ. ಅವರು ತಮ್ಮನ್ನು  ವಶದಲ್ಲಿರಿಸಿಕೊಂಡಿದ್ದರೆ ಆಗ ಎಲ್ಲವೂ ಕ್ಷೇಮವಾಗಿರುತ್ತದೆ. ಆದುದರಿಂದ ಪ್ರಜಾಪತಿಯು ದೇವತೆಗಳಿಗೆ "ದಾಮ್ಯತ" ಎಂದು ಹೇಳುತ್ತಾನೆ. ಅವನು " ದ " ಎಂದು ಹೇಳಿದಾಗ, ದೇವತೆಗಳು ತಮಗೆ ಸಹಜವಾದ ಕೊರತೆ ಏನೆಂಬುದನ್ನು ಅರಿತು, ತಾವೇ "ದಾಮ್ಯತ " ಎಂದು ಹೇಳುವುದು ಕುತೂಹಲಕಾರಿಯಾಗುತ್ತದೆ.

ಅತಿ ಆಸೆಯು ಮನುಷ್ಯರ ಸಹಜದೋಷ. ಅವರು ಸುಲಭವಾಗಿ ಕೊಡರು. ಕೊಡಬೇಕೆಂದು ಉದಾರವಾದ ಸಂಕಲ್ಪಗಳನ್ನು ಮಾಡಿಕೊಂಡರೂ ಸಹ, ಕೊಡಬೇಕಾದ ಸಂದರ್ಭ ಬಂದಾಗ, ಕೊಡಲು ಹಿಂದೆಗೆಯುವರು. ಪ್ರಜಾಪತಿಯು ಉಚ್ಚರಿಸುವ "ದ " ಎಂಬ ಅಕ್ಷರವು ಅವರ ಸ್ವಭಾವ ದೋಷವನ್ನು ಓಸರಿಸಿ ಅವರಿಗೆ "ದತ್ತ"---ದಾನಮಾಡಿರಿ-- ಎಂಬ ನೀತಿಯು ಅರಿವಾಗುವಂತೆ ಮಾಡಿಸುತ್ತದೆ.
ಕ್ರೌರ್ಯವು  ಅಸುರರ ಸ್ವಭಾವ. ಆದುದರಿಂದ ಪ್ರಜಾಪ್ರತಿಯು ಹೇಳುವ" ದ" ಎಂಬ ಅಕ್ಷರವು ಅವರಲ್ಲಿ ದಯೆತೋರಿಸಿರಿ—ದಯಧ್ವಂ-- ಎಂಬ ಭಾವವನ್ನೇ ಮೂಡಿಸುತ್ತದೆ.
ಈ ದಮ, ದಾನ ಮತ್ತು ದಯೆಗಳೇ ನೀತಿಯ ತಳಹದಿಗಳು. ಅವೇ ಪ್ರಜಾಪತಿಯು ಸೃಷ್ಟಿಸಿರುವ ಪ್ರಕೃತಿಯೆಲ್ಲವನ್ನೂ ಹಾಸುಹೊಕ್ಕಾಗಿ ಹೆಣೆದುಕೊಂಡಿರುತ್ತವೆ. ಅವನ್ನೇ ಪ್ರಕೃತಿಯ ವಾಣಿಯಾದ ಗುಡುಗು ದ-ದ-ದ ಎಂದು ಹೇಳುತ್ತದೆ. ಗುಡುಗುವುದರ ಮೂಲಕ ಮೋಡವು ಪ್ರಜಾಪತಿಯ ಸಂದೇಶ ಮತ್ತು ಆದೇಶಗಳನ್ನೇ ಎಲ್ಲರಿಗೂ ಕೇಳಿಸುವಂತೆ ಉಚ್ಚವಾದ ಧ್ವನಿಯಲ್ಲಿ ಹೇಳುತ್ತದೆ. ಎಲ್ಲಿಯಾದರೂ ಮನುಷ್ಯರು ಅವುಗಳನ್ನು ಮರೆತು ಹೋದಾರೆಂದು ಎಣಿಸಿ, ಗುಡುಗು ಪ್ರತಿವರ್ಷವೂ ವರ್ಷಾಕಾಲವು ಬಂದೊಡನೆಯೇ ದ-ದ-ದ ಎಂದು ಹೇಳಿಯೇ ನಂತರ  ಜೀವಾತವಾದ ಮಳೆಯನ್ನು ಕರೆಯುತ್ತದೆ.
ಆದರೆ ಗುಡುಗಿನ ಸಂದೇಶಕ್ಕೆ ನಾವು ಕಿವುಡುರಂತೆಯೇ ಇರುತ್ತೇವೆ. ಗುರುಕುಲದಲ್ಲಿ ಅಸುರ ಬಾಲಕರಿಗೆ ದಯೆ ಏಕೆ ತೋರಿಸಬೇಕು ಎಂಬ ಬಗ್ಗೆ ಪ್ರಹ್ಲಾದನು ಮಾಡುವ ಉಪದೇಶವನ್ನು ನಾವು ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳಬಹುದು.
ನಹ್ಯಚ್ಯುತಂ  ಪ್ರೀಣಯತೋ  ಬಹ್ವಾಯಾಸೋsಸುರಾತ್ಮಜಾಃ|
ಆತ್ಮತ್ವಾತ್ ಸರ್ವಭೂತಾನಾಂ ಸಿದ್ಧ ತ್ವಾದಿಹ ಸರ್ವತಃ||
ಪರಾವರೇಷು ಭೂತೇಷು ಬ್ರಹ್ಮಾನ್ತಸ್ಥಾವರಾದಿಷು|  
ಭೌತಿಕೇಷು ವಿಕಾರೇಷು ಭೂತೇಶ್ವಥ ಮಹತ್ಸು ಚ||
ಗುಣೇಷು ಗುಣಸಾಮ್ಯೇ ಚ ಗುಣವ್ಯತಿಕರೇ ತಥಾ |
ಏಕ ಏವ ಪರೋಹ್ಯಾತ್ಮಾ ಭಗವಾನೀಶ್ವರೋsವ್ಯಯಃ ||
ಪ್ರತ್ಯಗಾತ್ಮಸ್ವರೂಪೇಣ ದೃಶ್ಯರೂಪೇಣ ಚ ಸ್ವಯಂ |
ವ್ಯಾಪ್ಯ ವ್ಯಾಪಕ ನಿರ್ದೇಶ್ಯೋ  ಹ್ಯನಿರ್ದೇಶ್ಯೋsವಿಕಲ್ಪಿತಃ ||
ಕೇವಲಾನುಭವಾನಂದ ಸ್ವರೂಪಃ ಪರಮೇಶ್ವರಃ|
ಮಾಯಯಾನ್ತರ್ಹಿತೈಶ್ವರ್ಯ ಈಯತೇ ಗುಣ ಸರ್ಗಯಾ ||
ತಸ್ಮಾತ್ ಸರ್ವೇಷು ಭೂತೇಷು ದಯಾಂ  ಕುರುತ ಸೌಹೃದಂ |
ಅಸುರಂ ಭಾವ ಮುನ್ಮುಚ್ಯ ಯಯಾ ತುಷ್ಯತ್ಯಧೋಕ್ಷಜಃ ||

"ಎಲೆ ಅಸುರ ಬಾಲಕರೇ,. ಅಚ್ಯುತನಿಗೆ ಪ್ರೀತಿಯುಂಟುಮಾಡುವುದು ಬಹಳ ಪ್ರಯಾಸವಲ್ಲ. ಏಕೆಂದರೆ ಅವನು ಎಲ್ಲ ಜೀವಿಗಳ ಆತ್ಮ. ಅವನು ಎಲ್ಲೆಲ್ಲಿಯೂ ಎಲ್ಲದರಲ್ಲಿಯೂ ಇರುತ್ತಾನೆ. ಗಿಡಮರಗಳಿಂದ ಆರಂಭಿಸಿ ಬ್ರಹ್ಮನವರೆಗೆ ಇರುವ ಸಣ್ಣ ಮತ್ತು ದೊಡ್ಡ ಪ್ರಾಣಿಗಳಲ್ಲಿ,, ಪಂಚ ಭೂತಗಳಿಂದ ಉಂಟಾದ ಪದಾರ್ಥಗಳಲ್ಲಿ, ಪಂಚ ಮಹಾ ಭೂತಗಳಲ್ಲಿ, ಮೂರುಗುಣಗಳಲ್ಲಿ ಮತ್ತು ಅವುಗಳ ಸಾಮ್ಯದಲ್ಲಿ ಅವಿನಾಶಿಯಾದ ಅವನೇ ಇರುತ್ತಾನೆ. ಅವನೇ ಅಂತರ್ಯಾಮಿಯಾದ ದೃಶ್ಯಾದೃಶ್ಯವಾದ ಜಗತ್ತು. ಅವನು ಅನಿರ್ವಚನೀಯ. ವಿಕಲ್ಪರಹಿತ ದ್ರಷ್ಟೃ ದೃಶ್ಯಗಳೆರಡೂ ಅವನೇ. ವ್ಯಾಪ್ಯ (ಜಗತ್ತು) ಮತ್ತು ವ್ಯಾಪಕ (ವ್ಯಾಪಿಸುವವನು) ಎರಡೂ ಅವನೇ. ಅವನು ಕೇವಲಾನಂದ ಸ್ವರೂಪ. ಅವನೇ ಪರಮೇಶ್ವರ. ಗುಣಮಯವಾದ ಸೃಷ್ಟಿಗೆ ಕಾರಣವಾದ ಮಾಯೆಯು ಅವನ ಐಶ್ವರ್ಯ(ಮಹಿಮೆ] ಯನ್ನು ಮುಚ್ಚಿರುತ್ತದೆ. ಆದುದರಿಂದ ಅಸುರ ಭಾವವನ್ನು ಬಿಟ್ಟು ನೀವು ಎಲ್ಲ ಭೂತಗಳಲ್ಲಿಯೂ ದಯೆ ಮತ್ತು ಸೌಹೃದಗಳನ್ನು ತೋರಿಸಿರಿ. ಅದರಿಂದ ಅಧೋಕ್ಷಜನು (ಅಚ್ಯುತನು) ಪ್ರೀತಿಗೊಳ್ಳುತ್ತಾನೆ."

ಸೂಚನೆ : ಈ ಲೇಖನವು ಶ್ರೀಮಂದಿರದಿಂದ ಪ್ರಕಾಶಿತವಾಗುವ ಆರ್ಯಸಂಸ್ಕೃತಿ ಮಾಸ ಪತ್ರಿಕೆಯ ಸಂಪುಟ:10 ಸಂಚಿಕೆ: 03 1988 ಜನವರಿ ತಿಂಗಳಲ್ಲಿ  ಪ್ರಕಟವಾಗಿದೆ.

Saturday, April 24, 2021

ಯೋಗತಾರಾವಳಿ-4- ನಾದಾನುಸಂಧಾನ (Yogataravali-4-Nadanusandhana)

ಲೇಖಕರು: ಡಾ|| ಕೆ. ಎಸ್. ಕಣ್ಣನ್
 (BSc, MA (Sanskrit), MPhil, PhD, ವಿದ್ವತ್) 
(ಪ್ರತಿಕ್ರಿಯಿಸಿರಿ lekhana@ayvm.in)

ನಾದಾನುಸಂಧಾನ

ನಾದಾನುಸಂಧಾನ ನಮೋಽಸ್ತು ತುಭ್ಯಂ…


ಆಹತ-ನಾದ 


ಎರಡು ವಸ್ತುಗಳನ್ನು ಘಟ್ಟಿಸುವುದರಿಂದ ಸದ್ದಾಗುತ್ತದೆ. ಆಘಾತವೆಂದರೆ ಹೊಡೆತ, ಘಟ್ಟಿಸುವುದು. ಆಹತ ಎಂದರೆ ಹೊಡೆತಕ್ಕೆ ಒಳಪಟ್ಟಿರುವುದು. ಒಂದು ವಸ್ತುವಿಗೆ ಮತ್ತೊಂದರ ಏಟು ಬಿದ್ದಾಗ ಎದ್ದ ಸದ್ದು ಆಹತ-ನಾದ ಎಂದು ಕರೆಸಿಕೊಳ್ಳುತ್ತದೆ.


ಲೋಕದಲ್ಲಿ ಎಲ್ಲೆಲ್ಲೂ ಈ ಬಗೆಯ ಧ್ವನಿಗಳೇ. ಪ್ರಕೃತಿಯಲ್ಲೇ ದೊಡ್ಡದೊಡ್ಡ ಅಥವಾ ಸಣ್ಣಸಣ್ಣ ಧ್ವನಿಗಳು ಕೇಳಿಬರುವುವೇ: ಆಕಾಶದಲ್ಲಿ ಮೋಡಗಳ ಧ್ವನಿ, ಸಮುದ್ರದ ಬಳಿ ದಡಕ್ಕಪ್ಪಳಿಸುವ ಅಲೆಗಳ ಧ್ವನಿ, ನದೀಪ್ರವಾಹಧ್ವನಿ-ಜಲಪಾತಧ್ವನಿಗಳು, ಪಶು-ಪಕ್ಷಿ-ಕೀಟಗಳ ಧ್ವನಿಗಳು, ಮನುಷ್ಯರ ಮಾತಿನ ಧ್ವನಿ - ಇವೆಲ್ಲವೂ ಸೃಷ್ಟಿಯಲ್ಲಿ ತಾವಾಗಿ ಉಂಟಾಗತಕ್ಕ ಧ್ವನಿಗಳು. ಇವೆಲ್ಲವೂ ಆಹತವೇ.

ಇಷ್ಟೇ ಅಲ್ಲದೆ, ನಮ್ಮೊಳಗೇ ಏಳುತ್ತಿರುವ ಧ್ವನಿಗಳೂ ಉಂಟು. ಹೃದಯದ ಬಡಿತ, ನಾಡೀಮಿಡಿತಗಳು,ಇತ್ಯಾದಿ.


ಮಾನವ-ನಿರ್ಮಿತ-ಯಂತ್ರಗಳಲ್ಲಿ ಬಸ್ಸು-ಕಾರು-ಲಾರಿ-ವಿಮಾನಗಳ ಧ್ವನಿ, ಗಡಿಯಾರ, ಪಟಾಕಿ-ಬಾಂಬ್ ಮುಂತಾದುವುಗಳ ಧ್ವನಿ, ವಾದ್ಯಗಳ ಧ್ವನಿ – ಇತ್ಯಾದಿ. ಯಾವುದೇ ಧ್ವನಿ ಕೇಳಿತೆಂದರೂ ಅಲ್ಲಿ ಧ್ವನಿ-ತರಂಗಗಳು ಬಂದು ನಮ್ಮ ಕಿವಿದೆರೆಗೆ ಅಪ್ಪಳಿಸಿದುದರಿಂದಾದ ಕಂಪನಗಳಿಂದಾಗಿ ಜನಿತವಾದವೆಂದೇ ಅರ್ಥ.


ಅನಾಹತ-ನಾದ


ಲೋಕದಲ್ಲಿ ಒಂದು ವಸ್ತುವಿಗೂ ಮತ್ತೊಂದಕ್ಕೂ ಯಾವುದೇ ಘರ್ಷಣೆಯಿಲ್ಲದೆ, ಯಾವ ಹನನ(ಎಂದರೆ ಹೊಡೆತ)ವೂ ಇಲ್ಲದೆ, ಸ್ವತಃ ಹುಟ್ಟಿಕೊಳ್ಳುವ ಧ್ವನಿ-ವಿಶೇಷವೂ ಒಂದುಂಟು. ಅದನ್ನು ಯೋಗಶಾಸ್ತ್ರವು ಗಮನಿಸಿದೆ. ಅದು ಯೋಗಾಭ್ಯಾಸದಲ್ಲಿ ಮುಂದುವರಿದವರಿಗೆ ಕೇಳಿಸುವ ಧ್ವನಿ. ಆಹತವಲ್ಲದ ಈ ಧ್ವನಿಯೇ ಅನಾಹತ. 


ಅನಾಹತ-ನಾದದಲ್ಲಿ ನಾನಾಪ್ರಕಾರಗಳಿವೆ. ಪ್ರಾಕೃತಿಕ-ಧ್ವನಿಗಳು: ಸಮುದ್ರ, ಮೇಘ ಮುಂತಾದವುಗಳಿಂದ ಬರತಕ್ಕವು; ಮನುಷ್ಯ-ನಿರ್ಮಿತವಾದ ಘಂಟೆ, ವೇಣು, ವೀಣೆ ಮುಂತಾದ ನಾದಗಳು: ಇವನ್ನೇ ಹೋಲುವ ನಾದಗಳು ತಾವಾಗಿಯೇ ಕೇಳಿಬರುತ್ತವೆಂದು ಯೋಗಶಾಸ್ತ್ರಗಳು ನಿರೂಪಿಸುತ್ತವೆ. ಇವುಗಳಲ್ಲಿ ಕೆಲವು ನಾದಗಳು ಯೋಗದ ಆರಂಭಾವಸ್ಥೆಯಲ್ಲಿ ಗೋಚರ; ಕೆಲವು ಮಧ್ಯಾವಸ್ಥೆಯಲ್ಲಿ, ಕೆಲವು ಅಂತಾವಸ್ಥೆಯಲ್ಲಿ - ಎಂಬ ಲೆಕ್ಕಾಚಾರಗಳಿವೆ.


ಇವಲ್ಲಿ ಕೆಲವು ನಾದಗಳ ದೇವತಾಸಂಬಂಧ-ಅಧ್ಯಾತ್ಮಸಂಬಂಧಗಳನ್ನು ಸಹ ಅಲ್ಲಲ್ಲಿ ಕಾಣುತ್ತೇವೆ: ಬ್ರಹ್ಮನು ಸಾಮಗಾನ-ರತನು; ಸರಸ್ವತೀ-ಪಾರ್ವತಿಯರು ವೀಣಾ-ಪ್ರಿಯರು; ಕೃಷ್ಣನು ವೇಣು-ವಾದಕ; ಶಿವನು ತನ್ನ ನೃತ್ತ-ಸಮಯದಲ್ಲಿ ಡಮರುವನ್ನು ನುಡಿಸುವನು. "ವೀಣೆಯನ್ನು ನುಡಿಸುವುದರ ತತ್ತ್ವವನ್ನು ಬಲ್ಲವನು ಮೋಕ್ಷ-ಮಾರ್ಗವನ್ನೇ ಸೇರುತ್ತಾನೆ" - ಎಂದು ಹೇಳುವ ಶಾಸ್ತ್ರ-ವಾಕ್ಯಗಳೇ ಉಂಟು! ಒಳಗೆ ಕೇಳಿಬರುವ ಈ ಅನಾಹತ-ನಾದಗಳ ಆಧಾರವನ್ನಿಟ್ಟುಕೊಂಡೇ ಭಾರತೀಯರು ತಮ್ಮ ವಾದ್ಯಗಳನ್ನು ರೂಪಿಸಿರುವುದರ ಮರ್ಮವನ್ನು ಶ್ರೀರಂಗಮಹಾಗುರುಗಳು ತೋರಿಸಿಕೊಟ್ಟಿದ್ದರು.


ನಾದ-ವಂದನ!


ಈ ನಾದವನ್ನು ಅನುಸಂಧಾನಮಾಡಬೇಕು: ಮತ್ತೆ ಮತ್ತೆ ಕೇಳಿ ಕೇಳಿ ಆಸ್ವಾದಿಸಬೇಕು, ಮನಸ್ಸು ಅದರಲ್ಲಿಯೇ ಲಗ್ನವಾಗಬೇಕು. ಈ ಅನುಸಂಧಾನವು ಬಹಳ ಶ್ರೇಷ್ಠವಾದುದು. ಎಂದೇ ಅದನ್ನೇ – ನಾದಾನುಸಂಧಾನವನ್ನೇ - ಸಂಬೋಧಿಸಿ, ಅದಕ್ಕೆ ಒಂದು ನಮಸ್ಕಾರವನ್ನು ಸಹ ಇಲ್ಲಿ ಹೇಳಲಾಗಿದೆ! 


"ಮಹಾಪುರುಷರಿಗೋ ದೇವತೆಗಳಿಗೋ ನಮಸ್ಕಾರ ಮಾಡುವುದುಂಟು; ಆದರೆ ನಾದಕ್ಕೇ ನಮಸ್ಕಾರ ಹೇಳುವುದು ಎಲ್ಲಾದರೂ ಉಂಟೇ?" - ಎಂಬ ಪ್ರಶ್ನೆ ಬರಬಹುದು. ಹೌದು, ಬೇರೆ ದೇಶಗಳಲ್ಲಿ, ಅಲ್ಲಿಯ ಸಂಸ್ಕೃತಿಗಳಲ್ಲಿ, ಈ ಬಗೆಯ ವರ್ತನೆಗಳಿಲ್ಲ. ಆದರೆ ಭಾರತೀಯರು ತಮ್ಮ ತಪಸ್ಸಾಧನೆಯಲ್ಲಿ ಆಳವಾಗಿ ಮುಳುಗಿ ಶೋಧನೆ ಮಾಡಿದಂತೆ ಬೇರೆ ಯಾರೂ ಮಾಡಿರುವುದೂ ಕಂಡುಬಂದಿಲ್ಲವಷ್ಟೆ. ವಿಚಿತ್ರವೆಂದು ಕಂಡರೂ ವಾಸ್ತವವಾಗಿ ಉದಾತ್ತವಾದ ವರ್ತನೆಯೇ ಇದು. ಎಂದೇ ಅದಕ್ಕೆ ಕಾರಣವನ್ನೂ ಶ್ಲೋಕದಲ್ಲೇ ಹೇಳಿದೆ.


ನಾದಾನುಸಂಧಾನದ ಅನುಗ್ರಹವೊಂದಿದ್ದರೆ ಸಾಕು: ಪ್ರಾಣ-ವಾಯುವಿನೊಂದಿಗೆ ಮನಸ್ಸು ಸಹ ವಿಷ್ಣುಪದದಲ್ಲಿ ಲೀನವಾಗುವುದು! - ಎಂದು. ಹೀಗಾಗಿ ಈ ಅಂತರ್ನಾದ-ಶ್ರವಣವು ಯೋಗದ ಒಂದು ಉನ್ನತಾವಸ್ಥೆ, ದೊಡ್ಡ ಆನಂದದ ಅವಸ್ಥೆ. ಎಂದೇ ಇದಕ್ಕೂ ವಂದನೆ್:


ನಾದಾನುಸಂಧಾನ ನಮೋಽಸ್ತು ತುಭ್ಯಂ

      ತ್ವಾಂ ಸಾಧನಂ ತತ್ತ್ವ-ಪದಸ್ಯ ಜಾನೇ |

ಭವತ್-ಪ್ರಸಾದಾತ್ ಪವನೇನ ಸಾಕಂ

      ವಿಲೀಯತೇ ವಿಷ್ಣುಪದೇ ಮನೋ ಮೇ ||೪||



ಸೂಚನೆ : 24/4/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ 
ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.  

ಮೋಕ್ಷಸಾಧನವಾಗಿ ಕಾವ್ಯಗಳು (Moksasadhanavagi kavyagalu)

ಡಾ.  ಎನ್. ಎಸ್. ಸುರೇಶ್
(ಪ್ರತಿಕ್ರಿಯಿಸಿರಿ lekhana@ayvm.in)


ಮಾನವಜೀವನದ ಪರಮಲಕ್ಷ್ಯ ಭಗವತ್ಸಾಕ್ಷಾತ್ಕಾರವೇ ಎಂಬುದನ್ನು ಸನಾತನಾರ್ಯ ಭಾರತಮಹರ್ಷಿಗಳು ಉದ್ಘೋಷಿಸಿರುತ್ತಾರೆ. ವೇದಾದಿಸಾಹಿತ್ಯಗಳಲ್ಲಿ ಅದರ ಪಾರಮ್ಯವನ್ನು ಕೊಂಡಾಡಿರುವುದು ಸರ್ವವಿದಿತವಾಗಿರುವ ವಿಷಯವೇ ಆಗಿದೆ.ಹಾಗೆಯೇ ಕಾವ್ಯಗಳಲ್ಲಿಯೂ ಅದರದೇ ಆದ ಶೈಲಿಯಲ್ಲಿ ಮೋಕ್ಷದ ಶ್ರೇಷ್ಠತೆ ಮತ್ತು ಮೋಕ್ಷವನ್ನು ದೊರಕಿಸಿಕೊಡುವ ಸಾಧನಗಳು ಪ್ರತಿಪಾದಿತವಾಗಿರುವುದನ್ನು ನೋಡುತ್ತೇವೆ. ಮುಮುಕ್ಷುವಿಗೆ ಬೇಕಾದ ದೃಢಭಕ್ತಿ, ಜೀವನವ್ಯವಹಾರ,ಶರೀರಸ್ವಾಸ್ಥ್ಯ, ಗುರುವಾಕ್ಯದಲ್ಲಿ ಶ್ರದ್ಧೆ, ಜೀವನದ್ವಂದ್ವಗಳಾದ ಸುಖ-ದುಃಖ, ಲಾಭಾಲಾಭ, ಜಯ-ಪರಾಜಯ ಮುಂತಾದವಿಷಯಗಳಲ್ಲಿ  ಸಮಚಿತ್ತತೆ ಅಲ್ಲಲ್ಲಿ ಪಾತ್ರಗಳ ಮೂಲಕ, ಸನ್ನಿವೇಶಗಳ ಮೂಲಕ, ವರ್ಣನೆಗಳ ಮೂಲಕ ಪ್ರತಿಪಾದಿತವಾಗಿವೆ.ಈ ಲೇಖನದಲ್ಲಿ ಕೆಲವು ಉದಾಹರಣೆಗಳನ್ನು ವಾಚಕರ ಮುಂದಿಡಲು ಪ್ರಯತ್ನಿಸಲಾಗಿದೆ.

ಜೀವನದ ಪರಮಲಕ್ಷ್ಯವಾದ ಭಗವತ್ಸಾಕ್ಷಾತ್ಕಾರವನ್ನು ಸಾಧಿಸಬೇಕಾದರೆ ಮಾನವಜನ್ಮ ಬೇಕೇ ಬೇಕು. 'ಈದುಃಖಮಯವಾದ ಸಂಸಾರಸಾಗರವನ್ನು ದಾಟಲು ಈ ಮಾನವದೇಹವೆಂಬ ನೌಕೆಯನ್ನು ಪಡೆದಿದ್ದೀಯೆ. ಎಷ್ಟರಲ್ಲಿ ಈಶರೀರನೌಕೆಯು ಸಂಸಾರಸಾಗರದ ಅಲೆಗಳಿಗೆ ಸಿಕ್ಕಿ ನಶಿಸುವುದಿಲ್ಲವೋ ಅಷ್ಟರಲ್ಲಿ ಈ ಸಂಸಾರಸಾಗರವನ್ನು ದಾಟಿಬಿಡು'ಎಂಬ ಜ್ಞಾನಿಗಳ ಆದೇಶದಂತೆ ಉಪದೇಶದಂತೆ ಶರೀರದ ಸ್ವಾಸ್ಥ್ಯಕಾಪಿಡುವುದು ಅತ್ಯಂತ ಮುಖ್ಯವಾಗಿದೆ.ಕುಮಾರಸಂಭವಮಹಾಕಾವ್ಯದಲ್ಲಿ 'ಶರೀರಮಾದ್ಯಂ ಖಲು ಧರ್ಮಸಾಧನಮ್' ಎಂಬ ಮಹಾಕವಿ ಕಾಳಿದಾಸನ ಮಾತುಇದನ್ನು ಪುಷ್ಟೀಕರಿಸುತ್ತದೆ. ಶರೀರವು ರೋಗರುಜಿನಗಳ ಆಗರವಾಗಿದ್ದರೆ, ಅದರ ನಿವಾರಣೆಗಾಗಿ ಔಷಧೋಪಚಾರಗಳಸೇವನೆಯೇ ಮೊದಲಾದ ಕರ್ಮಗಳಲ್ಲಿ ತೊಡಗಿದ್ದು, ಜೀವನದ ಅಮೂಲ್ಯ ಕಾಲವನ್ನು ಹಾಳುಮಾಡಿಕೊಳ್ಳಬೇಕಾಗುತ್ತದೆ.ಶರೀರಸ್ವಾಸ್ಥ್ಯವನ್ನು ಕಡೆಗಾಣಿಸದೆ ಅದಕ್ಕೆ ಬೇಕಾದ ಆರೈಕೆಯನ್ನು ಮಾಡಿಕೊಂಡು ಹಿತಭುಕ್, ಮಿತಭುಕ್, ಋತುಭುಕ್ಮತ್ತು ಕಾಲಭುಕ್ ಆಗಿರುತ್ತಾ ಆತ್ಮಸಾಧನೆಯನ್ನು ಮಾಡಬೇಕೆಂದು ತಿಳಿದುಬರುತ್ತದೆ.ಮೋಕ್ಷಸಾಧನೆಗೆಂದು ಗುರು ಕೊಟ್ಟ ಮಾರ್ಗದಲ್ಲಿ ನಡೆಯುವಾಗ ಪ್ರಕೃತಿಯಲ್ಲಿ ಉಂಟಾಗುವ ಏರುಪೇರುಗಳು, ಸಿದ್ಧಿಗಳುಮತ್ತು ಆಕರ್ಷಣೆಗಳು ಮನಸ್ಸನ್ನು ಕಲಕಿಬಿಟ್ಟು ಸಾಧಕನನ್ನು ಪಥಭ್ರಷ್ಟನನ್ನಾಗಿಸುತ್ತದೆ. ಹಾಗಾಗದೇ, ಮೋಕ್ಷವೆಂಬ ಒಂದೇಗುರಿಯನ್ನು ಹೊಂದಿರುವವನಿಗೆ ಸಂಯಮ, ತಾಳ್ಮೆ, ಮನಸ್ಸ್ಥೈರ್ಯಗಳಿದ್ದು ಎದೆಗುಂದದೇ ಧೈರ್ಯವಾಗಿಮುಂದುವರೆಯಬೇಕಾಗುತ್ತದೆ. ಪರಶಿವನು ತಪಸ್ಸನ್ನಾಚರಿಸುವಾಗ ತ್ರಿಲೋಕಸುಂದರಿಯಾದ ಪಾರ್ವತಿಯು ಶಿವನಬಳಿ ಬಂದು ತಾನು ಅವನಿಗೆ ಸೇವೆಮಾಡುವುದಾಗಿಯೂ ತನಗೆ ಅನುಮತಿಯನ್ನು ನೀಡಬೇಕೆಂದು ಕೇಳಿಕೊಳ್ಳುತ್ತಾಳೆ.ತಪಸ್ಸು ಮಾಡುವಾಗ 'ಏಕಸ್ತಪಃ' ಒಬ್ಬನೇ ಇರಬೇಕೆಂದು ಅನುಭವಿಗಳ ಮಾತು. ಹಾಗಿರುವಾಗ ಒಬ್ಬ ಸ್ತ್ರೀಯ ಉಪಸ್ಥಿತಿತಪಸ್ವಿಗಳ ಮನಸ್ಸನ್ನು ಕದಡುವುದರಲ್ಲಿ ಸಂದೇಹವಿಲ್ಲ. ಇದಕ್ಕೆ ಅನೇಕ ನಿದರ್ಶನಗಳು ವಾಚಕರಿಗೆ ತಿಳಿದಿರುವುದೇ ಆಗಿದೆ.ಮಕ್ಕಳ ಮುಂದೆ ಅವರಿಗೆ ಪ್ರಿಯವಾಗಿರುವ ತಿನಿಸನ್ನು ಇಟ್ಟು 'ಈ ದಿನ ಈ ಕೆಲಸವನ್ನು ಮಾಡಿದ ಮೇಲೆ ಈ ತಿನಿಸನ್ನುತಿನ್ನಬೇಕು' ಎಂದು ಹೇಳಿಹೋದಾಗ ಏನಾಗುತ್ತದೆಂಬುದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ. ಆದರೂ ಶಿವನಅನುಮೋದನೆ ಎಲ್ಲರಿಗೂ ಆಶ್ಚರ್ಯವನ್ನುಂಟುಮಾಡುತ್ತದೆ. 'ವಿಕಾರಹೇತೌ ಸತಿ ವಿಕ್ರಿಯಂತೇ ಯೇಷಾಂ ನ ಚೇತಾಂಸಿ ತಏವ ಧೀರಾಃ', 'ಮನೋವಿಕಾರವನ್ನು ಉಂಟುಮಾಡುವ ವಸ್ತುವು ಪ್ರತ್ಯಕ್ಷವಾಗಿ ಇರುವಾಗಲೂ ಯಾರ ಮನಸ್ಸು ಕದಡದೇಇರುತ್ತದೆಯೋ ಅವನೇ ಧೀರ' ಎಂಬ ಕವಿಕಾಳಿದಾಸನ ಮಾತು ಶಿವನ ಮನಸ್ಸ್ಥೈರ್ಯಕ್ಕೆ ಕನ್ನಡಿಯಂತೆ. ಇದರಿಂದಅಧ್ಯಾತ್ಮಮಾರ್ಗದಲ್ಲಿ ಹೋಗುವವರಿಗೆ ಮನಸ್ಸ್ಥೈರ್ಯ ಎಷ್ಟು ಮುಖ್ಯವೆಂಬುದು ತಿಳಿದುಬರುತ್ತದೆ.

ಗುರುವು ಸಾಧಕನಿಗೆ ಮಂತ್ರವನ್ನೋ ಧ್ಯಾನಮೂರ್ತಿಯನ್ನೋ ಅಥವಾ ಇನ್ನಾವುದನ್ನೋ ಅವಲಂಬನೆಯಾಗಿ ಕೊಟ್ಟಿರುವಾಗಅಧ್ಯಾತ್ಮಮಾರ್ಗದಲ್ಲಿ ಸಾಗುವವನಿಗೆ ಆ ಗುರುವಾಕ್ಯದಲ್ಲಿ ಶ್ರದ್ಧೆ ಅತ್ಯಂತ ಮುಖ್ಯವಾಗಿರುತ್ತದೆ. ಶ್ರೀಗುರುವಿನ ಆಜ್ಞೆಯನ್ನುಮರುಮಾತನಾಡದೆ, ತರ್ಕಕ್ಕೆ ವಿಷಯವಾಗಿಸದೇ ನಂಬಿಕೆಯಿಂದ ಗುರುವಾಕ್ಯವನ್ನು ಪಾಲಿಸಬೇಕಾಗುತ್ತದೆ. ರಘುವಂಶಮಹಾಕಾವ್ಯದಲ್ಲಿ ಕೌತ್ಸನ ವಿಷಯದಲ್ಲಿ ರಘುಮಹಾರಾಜನಾಡುವ 'ಆಜ್ಞಾ ಗುರೂಣಾಂ ಹ್ಯವಿಚಾರಣೀಯಾ', 'ಗುರುಗಳಆಜ್ಞೆಯು ವಿಚಾರಣೆಗೆ ಯೋಗ್ಯವಲ್ಲ' ಎಂಬ ಮಾತು ಈ ವಿಷಯವನ್ನು ಪ್ರತಿಬಿಂಬಿಸುತ್ತದೆ.ಜೀವನದಲ್ಲಿ ಯಾವಾಗಲೂ ಸುಖವೇ ಇರುತ್ತದೆ ಎಂದಾಗಲೀ ಅಥವಾ ದುಃಖವೇ ಇರುತ್ತದೆ ಎಂದಾಗಲೀ ಇಲ್ಲ. ಸುಖದುಃಖಗಳ ಮಿಶ್ರಣವೇ ಜೀವನ. ಆದರೂಸುಖ ಬಂದಾಗ ಹಿಗ್ಗದೇ, ದುಃಖ ಬಂದಾಗ ಕುಗ್ಗದೇ ಜೀವನವನ್ನು ನಿರ್ವಹಿಸಬೇಕಾಗಿದೆ. 'ಹೇಗೆ ಕಾಯೊಂದರ ಬೆಳವಣಿಗೆಯಲ್ಲಿಕಾಲಕಾಲದಲ್ಲಿ ಉಪ್ಪು, ಹುಳಿ, ಖಾರ, ಒಗಚು ಮುಂತಾದ ರಸಗಳಿಂದ ಕೂಡಿರುತ್ತಾ ಕಡೆಯಲ್ಲಿ ಮಧುರರಸದಲ್ಲಿಯೇ ಹೋಗಿನಿಲ್ಲುತ್ತದೆಯೋ ಹಾಗೆಯೇ ಮಾನವನ ಜೀವನವೂ ಕೂಡ ಅನೇಕ ಏರಿಳಿತಗಳಿಂದ ಕೂಡಿದ್ದಾಗಿ ಕಡೆಯಲ್ಲಿ ಎಲ್ಲ ರಸಗಳಿಗೂನೆಲೆಯಾದ ಭಗವಂತನಲ್ಲಿಯೇ ನೆಲೆನಿಲ್ಲುತ್ತದೆ' ಎಂಬ ಶ್ರೀರಂಗಮಹಾಗುರುವಿನ ವಾಣಿ ಇಲ್ಲಿ ಸ್ಮರಣೀಯ. ಆದರೆ, ಈ ಮಧ್ಯೆಧೃತಿಗೆಡದೆ ಇಟ್ಟ ಹೆಜ್ಜೆಯನ್ನು ಹಿಂತೆಗೆಯಬಾರದು. ಸ್ಥಿರನಾಗಿ ಇರಬೇಕು ಸ್ಥಿತಪ್ರಜ್ಞನಂತೆ, ಶ್ರೀರಾಮನಂತೆ.ಕವಿ ಕಾಳಿದಾಸನು ತನ್ನ ರಘುವಂಶಮಹಾಕಾವ್ಯದಲ್ಲಿ ತಂದೆ ದಶರಥನ ಆಣತಿಯ ಮೇರೆಗೆ ವನವಾಸಕ್ಕೆ ಹೊರಟುನಿಂತಶ್ರೀರಾಮನನ್ನು ವರ್ಣಿಸುತ್ತಾನೆ. 'ದಧತೋ ಮಂಗಳಕ್ಷೌಮೇ ವಸಾನಸ್ಯ ಚ ವಲ್ಕಲೇ | ದದೃಶುಃ ವಿಸ್ಮಿತಾಸ್ತಸ್ಯ ಮುಖರಾಗಂಸಮಂ ಜನಾಃ || " – 'ಪಟ್ಟಾಭಿಷೇಕಕ್ಕೆ ಮಂಗಳಕರವಾದ ರೇಶಿಮೇ ಬಟ್ಟೆಯನ್ನು ಧರಿಸಿರುವಾಗಲೂ, ಈಗ ನಾರು ಮಡಿಯುಟ್ಟು ವನವಾಸಕ್ಕೆ ಹೊರಟು ನಿಂತಾಗಲೂ ಕೂಡ ಆಶ್ಚರ್ಯದಿಂದ ಕೂಡಿದ ಸಾಕೇತಪುರವಾಸಿಗಳು ಶ್ರೀರಾಮನ ಮುಖರಾಗದಲ್ಲಿ ಯಾವ ಒಂದು ಬದಲಾವಣೆಯನ್ನೂ ಕಾಣಲಿಲ್ಲ' ಎಂದು ವರ್ಣಿಸುತ್ತಾನೆ. 'ಜೀವನದಲ್ಲಿಎದುರಾಗುವ ಏರುಪೇರುಗಳನ್ನು ಸಹಿಸಿಕೊಂಡು ಧ್ಯೇಯವನ್ನು ಸಾಧಿಸಬೇಕು' ಎಂಬ ತಿಳಿವಳಿಕೆ ಕಾವ್ಯಗಳಲ್ಲಿ ಕಂಡುಬರುತ್ತದೆ.

ಸಾಧಕನು ನಿರಂತರಧ್ಯಾನದಲ್ಲಿ ಮುಳುಗಿದಾಗ ಅದು ಸಮಾಧಿಯಲ್ಲಿ ಪರ್ಯವಸಾನವಾಗುತ್ತದೆ. ಆಗ ಅವನುಭಗವದ್ದರ್ಶನವನ್ನು ಮಾಡುತ್ತಾ ಆ ಒಳಬೆಳಕಿನಲ್ಲಿ ಮುಳುಗಿ, ಸಮೃದ್ಧವಾದ ಶಾಂತಿಯನ್ನೂ, ಆನಂದವನ್ನೂ ಅನುಭವಿಸುತ್ತಾಬ್ರಹ್ಮದಲ್ಲಿ ಒಂದಾಗುತ್ತಾನೆಂಬ ವಿವರಣೆಯನ್ನು ವೇದವೇ ಮುಂತಾದ ಸಾಹಿತ್ಯಗಳಲ್ಲಿ ವರ್ಣಿಸಿರುವುದನ್ನು ನೋಡುತ್ತೇವೆ.ಹಾಗೆಯೇ ಕಾವ್ಯಗಳೂ ಕೂಡ ಸಮಾಧಿಸ್ಥಿತಿಯನ್ನು ತನ್ನದೇ ಆದ ಶೈಲಿಯಲ್ಲಿ ವರ್ಣಿಸುತ್ತದೆ. ವಿಶ್ವಪ್ರಸಿದ್ಧವಾದ ಅಭಿಜ್ಞಾನ ಶಾಕುಂತಲದ ಅಂತಿಮ ಶ್ಲೋಕವು ಕಾವ್ಯಸಮಾಧಿಗೆ ಉತ್ತಮವಾದ ಉದಾಹರಣೆಯಾಗಿದೆ. ಇದರಲ್ಲಿ ಕವಿಕುಲಗುರು ಕಾಳಿದಾಸನು – ಮಮಾಪಿ ಚ ಕ್ಷಪಯತು ನೀಲಲೋಹಿತಃ ಪುನರ್ಭವಂ ಪರಿಗತಶಕ್ತಿರಾತ್ಮಭೂಃ - ಭಗವಂತನಾದನೀಲಲೋಹಿತನು(ಶಂಕರನು) ನನ್ನ ಸಂಸಾರಸಂಸೃತಿಯನ್ನು ನಾಶಮಾಡಿ ಮೋಕ್ಷವನ್ನುಂಟುಮಾಡಲೆಂದುಕೇಳಿಕೊಳ್ಳುತ್ತಾನೆ. ಶೃಂಗಾರಾದಿ ರಸಗಳನ್ನು ವಾಚಕನು ಆಸ್ವಾದಿಸುವಂತೆ ಮಾಡಿ ಕಟ್ಟಕಡೆಯಲ್ಲಿ ಭಗವದ್ರಸದಲ್ಲಿಒಂದಾಗುವಂತೆ ಮಾಡಿ ಜೀವನದ ಸಾರ್ಥಕ್ಯವನ್ನುಂಟುಮಾಡಿ ಜೀವನದ ಪರಮಲಕ್ಷ್ಯವಾದ ಮೋಕ್ಷದಲ್ಲಿ ನಿಲ್ಲಿಸಿದ್ದಾನೆಕವಿ ಕಾಳಿದಾಸ. ಆದ್ದರಿಂದಲೇ 'ಕಾವ್ಯಾನಂದವು ಬ್ರಹ್ಮಾನಂದದ ಸಹೋದರ'ವೆಂದು ಖ್ಯಾತವಾಗಿದೆ.

ಸೂಚನೆ : 24/4/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.   

ದರ್ಶನ ವೈವಿಧ್ಯ (Darsana vaividhya)

ಲೇಖಕಿ: ಸೌಮ್ಯಾ ಪ್ರದೀಪ್

(ಪ್ರತಿಕ್ರಿಯಿಸಿರಿ lekhana@ayvm.in)

ಒಂದು ಸೊಂಪಾಗಿಬೆಳೆದಿರುವ ತೆಂಗಿನ ಮರಗಳ ತೋಟದ ಬಳಿ ಸಾಗುತ್ತಿರುವ ಬಾಯಾರಿದ ಒಬ್ಬ ದಾರಿಹೋಕನಿಗೆ ತೆಂಗಿನಮರವನ್ನು ನೋಡಿ ಇದರಲ್ಲಿ ಎಷ್ಟೊಂದು ಎಳನೀರಿದೆ!  ಅದನ್ನು ಕುಡಿದು ಬಾಯಾರಿಕೆ ಹೋಗಲಾಡಿಸಿ ಕೊಳ್ಳಬಹುದೆಂದು ಅವನದೃಷ್ಟಿ ಎಳನೀರಿನ ಮೇಲಿರುತ್ತದೆ,  ಕಸ ಗುಡಿಸುವವನಿಗೆ ಇದರಲ್ಲಿ ಎಷ್ಟೊಂದು ಗರಿಗಳಿವೆ ಅದರಿಂದ ಒಳ್ಳೆ ಪೊರಕೆಮಾಡಿಕೊಳ್ಳಬಹುದು, ಗುಡಿಸಲು ಅನುಕೂಲವಾಗುತ್ತದೆ!  ಎಂದೆನಿಸುತ್ತದೆ, ಆಯುರ್ವೇದ ವೈದ್ಯನಿಗೆ ಮರದ ಹೊಂಬಾಳೆ ಮೇಲೆದೃಷ್ಟಿ ಹರಿದು ಅದನ್ನು ಔಷಧಿಗೆ ಬಳಸಬಹುದೆಂದೆನಿಸುತ್ತದೆ. ಹೀಗೆ ಎಲ್ಲರೂ ತಮಗೆ ಬೇಕಾದ ಪ್ರಯೋಜನದ ದೃಷ್ಟಿಯಿಂದ ಮರವನ್ನುನೋಡುತ್ತಾರೆ.  ಆದರೆ ವ್ಯವಸಾಯಗಾರನ ಲಕ್ಷ್ಯ ಮಾತ್ರ ತೆಂಗಿನಮರದ ಬೇರಿನೆಡೆಗೇ ಇರುತ್ತದೆ. ಬೇರಿಗೆ ಚೆನ್ನಾಗಿ ಆರೈಕೆಮಾಡಿದರೆ ಇಡೀ ವೃಕ್ಷವೇ ಚೆನ್ನಾಗಿರುತ್ತದೆoಬುದು ಅವನ ನೋಟ, ಒಂದೇ ವಿಷಯದ ಬಗ್ಗೆ ಅನೇಕರು ತಮ್ಮಪ್ರಕೃತಿಗನುಗುಣವಾಗಿ ನಾನಾ ರೀತಿಯ ನೋಟವನ್ನು ಹೊಂದುತ್ತಾರೆ ಎಂಬುದನ್ನು ಶ್ರೀರಂಗ ಮಹಾಗುರುಗಳು ಹೀಗೆ ಅನೇಕ ಉದಾಹರಣೆಗಳ ಮೂಲಕ ವಿವರಿಸಿದ್ದಾರೆ.

ಅಂತೆಯೇ ಮಾನವ ಜೀವನದ ಬಗ್ಗೆಯೂ ಅನೇಕ ಸ್ತರದ ಜನರು ತಮ್ಮದೇ ಆದ ದರ್ಶನವನ್ನು ಇಟ್ಟುಕೊಂಡಿರುತ್ತಾರೆ, ದಿನನಿತ್ಯದ ಕೂಲಿಯನ್ನು ನಂಬಿ ಬದುಕುವವರು, ಇಂದಿನ ಹೊಟ್ಟೆಪಾಡಾದರೆ ಸಾಕು, ಸಾರ್ಥಕ ಜೀವನವೆಂದೂ, ಅದಕ್ಕಿಂತ ಸ್ವಲ್ಪಮೇಲ್ವರ್ಗದವರು ಸ್ವಲ್ಪ ಉಳಿತಾಯ, ಒಳ್ಳೆಯ ಬಟ್ಟೆ, ಮನೆ ಬಾಡಿಗೆಗೆ ವ್ಯವಸ್ಥೆಯಾದರೆ ಸಾರ್ಥಕವೆಂದೂ ಅದಕ್ಕಿಂತ ಇನ್ನೂಆರ್ಥಿಕವಾಗಿ ಸಧೃಢರಾಗಿರುವವರು ಸ್ವಂತ ಮನೆ, ಕಾರು, ಹೆಚ್ಚಿನ ಉಳಿತಾಯ, ವಿದೇಶಗಳಿಗೆ ಪ್ರವಾಸ ಇತ್ಯಾದಿಯಾಗಿ ಅವರವರ ಮಟ್ಟಕ್ಕೆ ತಕ್ಕಂತೆ ಸಾರ್ಥಕ ಜೀವನದ ಪರಿಕಲ್ಪನೆ ಇಟ್ಟುಕೊಂಡಿರುತ್ತಾರೆ. ಆದರೆ ಅಂತರ್ಬಾಹ್ಯ ದೃಷ್ಟಿಯನ್ನು ಹೊಂದಿದ್ದ ಮಹರ್ಷಿಗಳಜೀವನ ದರ್ಶನ, ಪೂರ್ಣವಾದ ಜೀವನದರ್ಶನ. ಹೇಗೆ ಬೀಜದಿಂದ ಆರಂಭವಾದ ಮರದ ಜೀವನ ಅಂಕುರ, ಕಾಂಡ, ಹೂವು,ಕಾಯಿ ಇತ್ಯಾದಿಯಾಗಿ ವಿಕಾಸಗೊಂಡು ಬೀಜದಲ್ಲಿಯೇ ಹೋಗಿ ನಿಂತಾಗ ಪೂರ್ಣವಾಗುತ್ತದೆಯೋ ಅಂತೆಯೇ ಪರಮಾತ್ಮನಿಂದಪ್ರಾರಂಭವಾದ ನಮ್ಮ ಜೀವನ- ಬಾಲ್ಯ,ಯೌವನ ಇತ್ಯಾದಿಯಾಗಿ ಜೀವನದ ಎಲ್ಲಾ ಅವಸ್ಥೆಗಳನ್ನು ದಾಟಿ ಮತ್ತೆ ಹೋಗಿಪರಮಾತ್ಮನಲ್ಲಿಯೇ ನೆಲೆ ನಿಂತಾಗ ಪೂರ್ಣವಾದ ಹಾಗೂ ಸಾರ್ಥಕವಾದ ಜೀವನವಾಗುತ್ತದೆ ಎಂಬುದನ್ನು ತಪಸ್ಯೆಯಿಂದರಿತುಅದಕ್ಕನುಗುಣವಾದ ಜೀವನ ವ್ಯವಸ್ಥೆಯನ್ನು ರೂಪಿಸಿಕೊಟ್ಟಿದ್ದಾರೆ.ರಘುವಂಶ ಮಹಾಕಾವ್ಯದಲ್ಲಿ ಕಾಳಿದಾಸನು ರಘುವಂಶದ ರಾಜರ ಜೀವನ ವ್ಯವಸ್ಥೆಯನ್ನು ಹೀಗೆ ಚಿತ್ರಿಸಿದ್ದಾನೆ- ಅವರು ಬಾಲ್ಯದಲ್ಲಿಯೇಜೀವನಕ್ಕೆ ಬೇಕಾದಂತಹ ಸಮಗ್ರವಾದ ವಿದ್ಯೆಯನ್ನು ಅಭ್ಯಸಿಸುತ್ತಿದ್ದರು, ಯೌವನದಲ್ಲಿ ಧರ್ಮಕ್ಕೆ ಅವಿರೋಧವಾದ ವಿಷಯಸುಖಗಳನ್ನು ಅನುಭವಿಸುತ್ತಿದ್ದರು, ವಾರ್ಧಕ್ಯದಲ್ಲಿ ಮುನಿಗಳಂತೆತೆ ಆತ್ಮಚಿಂತನೆಯನ್ನು ನಡೆಸುತ್ತಾ ಅಂತ್ಯದಲ್ಲಿ ಯೋಗಮಾರ್ಗದಿಂದ ಶರೀರವನ್ನು ತ್ಯಜಿಸಿ ಜೀವವನ್ನು ಭಗವಂತನಲ್ಲಿ ನೆಲೆಗೊಳಿಸುತ್ತಿದ್ದರು ಎಂದು ವರ್ಣಿಸಿದ್ದಾನೆ. ಜ್ಞಾನಿಗಳುಹಾಕಿಕೊಟ್ಟ ಜೀವನದ ಯೋಜನೆಯ ಸಂವಿಧಾನವನ್ನು ಮಹಾಕವಿಯಾದ ಕಾಳಿದಾಸನ ಈ ಮಾತು ಬಹು ಸ್ಫುಟವಾಗಿ, ಸಾರವತ್ತಾಗಿ ಪ್ರತಿಬಿಂಬಿಸುತ್ತದೆಂಬ ಶ್ರೀರಂಗಮಹಾಗುರುಗಳ ವಾಣಿ ಇಲ್ಲಿ ಸ್ಮರಣೀಯವಾಗಿದೆ.

ಸೂಚನೆ: 23/4/2020 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.

Friday, April 23, 2021

Ananda Tandava Of Nataraja-2



Dr. K S Kannan,
SRSJM Chair Professor,
IIT-Madras, Chennai.
Respond to (lekhana@ayvm.in)

Focus of this Study

Remarking about this image of Tiruvālaṅgāḍu in particular, Calambur Sivaramamurti (1909-1983), a well-known authority on Indian art and sculpture in general, and of Naṭarāja in particular, says that it is 'the best known image of its kind in any public museum of the world.' (And who does not know that, thanks to the British, and subsequently with the divine negligence (if not open and brazen connivance) of the political parties that reigned in our country, hundreds of masterpieces of Naṭarāja were routinely bought and sold in the "art markets" and antiquarian shops of the West, and for fancy prices? And this has not stopped or subsided even today.)

There can of course be numerous approaches to the study of Naṭarāja: artistic, historical, theological, philosophical, scientific, archaeological and so on. The focus of the present study, however, is the symbolism enshrined in the image, with special reference to the yogic ideas it embodies - an approach conceived of by none of the interpreters in respect of its depth and details, else than Sriranga Mahaguru. It cannot be missed, however, that Coomaraswamy had already noted how the processes of the creation of a true work of art in general as indeed its enjoyment had their yogic parallels and involvement.

It may be desirable to study how Indian art was handled by the West prior to, and subsequent to, Coomaraswamy, reputed as a "scholar colossus". Prior to the pioneering work of Coomaraswamy, general adverse criticism - goaded by rank prejudice and general contempt - ruled the field of art estimate with respect to Indian art; no place for Indian art would be accorded, or even acknowledged, by the essentially Euro-centric historians, chroniclers, and critics of the 19th and earlier centuries.  

Thursday, April 22, 2021

ವ್ಯಕ್ತಿ ಪೂಜೆ ನಿಂದ್ಯವೋ? ವಂದ್ಯವೋ? (Vyakti Pooje Nindyavo? Vandyavo?)

ಲೇಖಕರು; ಸುಬ್ರಹ್ಮಣ್ಯ ಸೋಮಯಾಜಿ
(ಪ್ರತಿಕ್ರಿಯಿಸಿರಿ lekhana@ayvm.in)



ಇಂದು ಲೋಕದಲ್ಲಿ ಅನೇಕ ವ್ಯಕ್ತಿಗಳನ್ನು ಪೂಜೆ ಮಾಡುವುದು ಕಂಡುಬರುತ್ತದೆ. ರಾಜಕೀಯ ಪ್ರಮುಖರನ್ನು ಅವರಿಂದಾಗಬೇಕಾದ ಅನುಕೂಲಗಳ ನಿರೀಕ್ಷೆಯಿಂದ ಪೂಜೆ ಮಾಡುತ್ತಾರೆ. ಸಿನೆಮಾ ತಾರೆಗಳನ್ನು ಇಷ್ಟಪಟ್ಟು ಅವರನ್ನೂ ಪೂಜೆ ಮಾಡುವವರನ್ನೂ ನೋಡುತ್ತೇವೆ. ಆಯಾ ಮತಗಳ ಪ್ರವರ್ತಕರನ್ನು-ಪ್ರಮುಖರನ್ನು, ಜಾತಿಗಳ ಪ್ರಮುಖರನ್ನು, ಸಿದ್ಧಾಂತಗಳ ನಿರೂಪಕರನ್ನು, ಆಧ್ಯಾತ್ಮಿಕ ಮಾರ್ಗದರ್ಶಕರನ್ನು- ಹೀಗೆ ಒಂದೇ ಎರಡೇ- ವ್ಯಕ್ತಿ ಪೂಜೆ ಎಲ್ಲೆಲ್ಲೂ ನಡೆದಿರುವುದನ್ನು ನೋಡುತ್ತೇವೆ. ನಾವು ಯಾರನ್ನು ಹೀರೋ ಎಂದುಕೊಳ್ಳುತ್ತೇವೋ ಅವರನ್ನೆಲ್ಲ ಪೂಜೆ ಮಾಡುವುದನ್ನು ನೋಡುತ್ತೇವೆ. ಹೀರೋ ವರ್ಶಿಪ್ ಎನ್ನುವ ಪದವೂ ಪ್ರಸಿದ್ಧವಾಗಿದೆ. ಹೀಗೆ ಪೂಜೆ ಮಾಡಿಸಿಕೊಳ್ಳುವುದು ದೊಡ್ಡಸ್ತಿಕೆಯ ಕುರುಹಾಗಿ ಇರುವುದನ್ನೂ ಕಾಣುತ್ತೇವೆ. ಎಷ್ಟೆಷ್ಟು ಹೆಚ್ಚು ಜನ ಪೂಜೆ ಮಾಡುತ್ತಾರೋ ಅಷ್ಟಷ್ಟು ಹಿರಿಮೆ ಆಯಾ ವ್ಯಕ್ತಿಗಳದ್ದು ಎಂಬಂತಾಗಿರುವುದನ್ನೂ ನೋಡುತ್ತೇವೆ.
ವ್ಯಕ್ತಿಪೂಜೆ-ಹೃದಯ ದೌರ್ಬಲ್ಯದ ಲಕ್ಷಣ:
ಇನ್ನೊಂದೆಡೆ ಈ ಬಗೆಯ ವ್ಯಕ್ತಿ ಪೂಜೆ ನಿಂದನೀಯ. ಹೃದಯ ದೌರ್ಬಲ್ಯದ ಲಕ್ಷಣ. ವಿಚಾರವಂತರಿಗೆ ಸಲ್ಲದಿರುವುದು ಎಂಬ ಮಾತೂ ಹೆಚ್ಚಾಗಿಯೇ ಕೇಳಿಬರುತ್ತಿದೆ. ನಮ್ಮಂತೆ ಇರುವ ವ್ಯಕ್ತಿಗಳನ್ನು ಪೂಜಿಸುವುದು ಎಷ್ಟು ವಿಚಿತ್ರ? ಇದರಲ್ಲಿ ವಿವೇಕವಂತೂ ಇರಲು ಸಾಧ್ಯವಿಲ್ಲ. ಭಾವುಕರಾಗಿ ಯಾರು ಯಾರನ್ನೋ ದೇವರನ್ನು ಪೂಜಿಸಿದಂತೆ ಪೂಜಿಸುವುದು ಬುದ್ಧಿಯ ದಿವಾಳಿತನವಲ್ಲದೆ ಮತ್ತೇನು? ವ್ಯಕ್ತಿ ಎಂದೂ ಪರಿಪೂರ್ಣನಲ್ಲ. ಆ ಪೂಜೆ ಅಪರಿಪೂರ್ಣತೆಯ ಪೂಜೆಯಾಗುತ್ತದೆ. ಅಲ್ಲದೆ, ವ್ಯಕ್ತಿಯನ್ನು ಪೂಜಿಸುವುದರಿಂದ ಅವನ ಅಹಂಕಾರ ಹೆಚ್ಚುತ್ತದೆ. ಪ್ರಜಾಪ್ರಭುತ್ವದಲ್ಲಂತೂ ಎಲ್ಲರೂ ಸಮಾನರು. ಯಾರೋ ಒಬ್ಬನನ್ನು ಶ್ರೇಷ್ಠ ಎಂದು ಪರಿಗಣಿಸಿ ಪೂಜಿಸುವುದೇ ಅಪರಾಧ. ಸನ್ಯಾಸಿಗಳನ್ನು, ಗುರುಗಳನ್ನು ಪಾದತೊಳೆದು ಪೂಜಿಸುವುದಂತೂ ಮತಿಹೀನತೆಯ ಪರಮಾವಧಿ. ಭಾವಾತಿರೇಕ. ಇವೊತ್ತಿನ ಆಧುನಿಕ ಜಗತ್ತಿನಲ್ಲಂತೂ ಇಂತಹ ಕಲ್ಪನೆಯೇ ಅಸಹ್ಯ. ಗುಲಾಮಗಿರಿಯ ಸಂಕೇತ. ಪರಿಪೂರ್ಣನಾದವನು ದೇವರು ಮಾತ್ರ. ಹಾಗೆಂದೇ ದೇವರನ್ನು, ಭಗವಂತನನ್ನು ಪೂಜಿಸಬೇಕೇ ಹೊರತು, ನಮ್ಮಂತೆ ನಡೆದಾಡುವ ವ್ಯಕ್ತಿಗಳನ್ನಲ್ಲ. ಹೌದು. ಇವೆಲ್ಲವೂ ಸರಿಯೆಂದೇ ಅನ್ನಿಸುತ್ತದೆ. ವ್ಯಕ್ತಿ ಪೂಜೆಯನ್ನು ಬುಡಸಹಿತ ಕಿತ್ತೊಗೆಯಬೇಕು ಎಂದೆನಿಸುವುದರಲ್ಲಿ ಆಶ್ಚರ್ಯವೇನೂ ಇಲ್ಲ.ಆದರೂ ಈ ವಿಷಯವನ್ನು ವಿಚಾರ ಪೂರ್ವಕವಾಗಿ ಚಿಂತಿಸಬೇಕಾಗಿದೆ.

ಪೂಜೆ ಎಂದರೇನು?
ಪೂಜ್ ಧಾತು ಗೌರವ ಎಂಬ ಅರ್ಥವನ್ನು ಹೊಂದಿದೆ. ಪೂಜೆ ಎಂದರೆ ಗೌರವಿಸುವುದು. ನಮಗೆ ಪರಿಚಿತರನ್ನು ನೋಡಿದಾಗ ಅವರಿಗೂ ನಮಗೂ ಇರುವ ಸಂಬಂಧದ ಮೇಲೆ ನಾವು ಅವರಿಗೆ ಕೊಡುವ ಗೌರವ ಅವಲಂಬಿತವಾಗಿದೆ. ನಮಗಿಂತ ಹಿರಿಯರಿಗೆ ಕೊಡುವ ಗೌರವ ಒಂದು ಬಗೆಯದಾದರೆ ನಮ್ಮ ಸಮಾನ ವಯಸ್ಕರಿಗೆ, ಸ್ನೇಹಿತರಿಗೆ ಕೊಡುವ ಗೌರವದ ರೀತಿ ಬೇರೆಯದಾಗಿರುತ್ತದೆ. ಹಾಗೆಯೇ ಭಗವಂತನಿಗೆ ಕೊಡುವ ಗೌರವ ಭಗವಂತನ ಪೂಜೆಯಾಗುತ್ತದೆ. ಗೌರವ ಕೊಡುವುದು ಕೃತಕವಾಗಿ ಅಭ್ಯಾಸ ಮಾಡಿ ಬರುವ ಕ್ರಿಯೆಯಲ್ಲ. ಸಹಜವಾಗಿ ನಾವು ಒಬ್ಬರನ್ನು ಕಂಡಾಗ ನಮ್ಮಲ್ಲಿ ಅಪ್ರಯತ್ನದಿಂದಾಗುವ ಕ್ರಿಯೆಯಾಗಿದೆ.

ದೇವರ ಪೂಜೆ ಎಂದರೇನು?
ಮಹರ್ಷಿಗಳು ಯೋಗಮಾರ್ಗದಲ್ಲಿ ಹಿಂದೆ ಹಿಂದಕ್ಕೆ ಸಾಗಿ ಜೀವನದ ಮೂಲನೆಲೆಯಾದ ಭಗವಂತನನ್ನು ಕಂಡಾಗ ಅವರಲ್ಲಾದ ಸಹಜವಾದ ಪ್ರತಿಕ್ರಿಯೆಯೇ ನಿಜಕ್ಕೂ ಭಗವಂತನ ಪೂಜೆ. ಅದನ್ನು ಅವರು ಜೀವಲೋಕದ ಮೇಲಿನ ಕರುಣೆಯಿಂದ, ಎಲ್ಲರೂ ತಮ್ಮೊಳಗಿನ ಭಗವಂತನನ್ನು ಕಂಡು ಆನಂದಿಸುವಂತಾಗಲಿ ಎಂಬುದಕ್ಕಾಗಿ ಲೋಕದಲ್ಲಿ ತಂದಿದ್ದಾರೆ. ಆದರೆ ಭಗವಂತನನ್ನು ಪೂಜಿಸಿದಂತೆ ವ್ಯಕ್ತಿಗಳನ್ನೇಕೆ ಪೂಜಿಸಬೇಕು? ದೀಪವನ್ನು ತೆಗೆದುಕೊಂಡು ಬನ್ನಿ ಎಂದರೆ ಹಣತೆಯೊಂದಿಗೇ ತರಬೇಕಾಗುತ್ತದೆ. ಹಣತೆ ಇಲ್ಲದೆ ಬರಿಯ ದೀಪವನ್ನು ತರಲಾಗದು. ಶ್ರೀರಂಗ ಮಹಾಗುರುಗಳು ಹೇಳುತ್ತಿದ್ದರು- ಎಳನೀರನ್ನು ತೆಗೆದುಕೊಂಡು ಬಾ ಎಂದರೆ ಹೊರಗಿನ ಮಟ್ಟೆ ಸಹಿತವಾಗಿಯೇ ತರಬೇಕು ಮಟ್ಟೆ ಇಲ್ಲದೆಯೇ ಎಳನೀರು ತರಲಾಗದು. ಹಾಗೆಯೇ ಭಗವಂತನೂ ವ್ಯಕ್ತಿಗಳ ಮೂಲಕ ನಮ್ಮ ಉದ್ಧಾರಕ್ಕಾಗಿ ವ್ಯಕ್ತನಾಗುವುದುಂಟು. ಆಗ ಅಂತಹ ವ್ಯಕ್ತಿಗಳು ದೀಪವನ್ನು ಹೊತ್ತ ಹಣತೆಯಂತೆ, ಎಳನೀರನ್ನು ಹೊತ್ತ ಮಟ್ಟೆಯಂತೆ, ವಿಶ್ವ ಚೈತನ್ಯನಾದ, ಆನಂದ ಸಾಗರನಾದ ಭಗವಂತನನ್ನು ಹೊತ್ತು ಪುಣ್ಯಶ್ಲೋಕರಾಗುತ್ತಾರೆ. ಅಂತಹ ವ್ಯಕ್ತಿಗಳ ಪೂಜೆ ಭಗವಂತನ ಪೂಜೆಯೇ ಆಗುತ್ತದೆ. ತಮ್ಮೊಳಗೆ ಭಗವಂತನನ್ನು ತುಂಬಿಕೊಂಡಂತಹ ವ್ಯಕ್ತಿಗಳಲ್ಲಿ ಭಗವಂತನೇ ವ್ಯಕ್ತವಾಗುತ್ತಾನೆಯೇ ಹೊರತು ಅವರ ಮೈ ಕೈಗಳ ಉಬ್ಬುತಗ್ಗುಗಳಲ್ಲ.  ವ್ಯಕ್ತಿ ಪೂಜೆ ಬೇಕೇ, ಬೇಡವೇ ಎಂದು ನಿರ್ಧರಿಸಬೇಕಾದರೆ ಅವರು ಯಾವ ಭಾವವನ್ನು ವ್ಯಕ್ತಗೊಳಿಸುತ್ತಿದ್ದಾರೆ ಎಂಬುದನ್ನು ನೋಡಿ ನಿಶ್ಚಯಿಸಬೇಕಾಗುತ್ತದೆ. ಯಾರ ಶರೀರದ ಒಂದೊಂದು ರೋಮ ಕೂಪಗಳೂ ಭಗವನ್ಮಯವಾಗಿದೆಯೋ ಅಂತಹ ವ್ಯಕ್ತಿಗಳು ನಿಜಕ್ಕೂ ಪೂಜೆಗೆ ಅರ್ಹರು. ಅಂತಹವರ ಪೂಜೆಯಿಂದ ನಮ್ಮ ಮೈ ಮನಸ್ಸುಗಳಲ್ಲಿ ಭಗವದ್ಧರ್ಮ ಹರಿದು ನಮ್ಮ ನೆಲೆಯನ್ನು ಮುಟ್ಟಲು ಸಾಧ್ಯವಾಗುತ್ತದೆ. ಅಂತಹ ವ್ಯಕ್ತಿಪೂಜೆ ಅಪೇಕ್ಷಣೀಯವೇ. ರಾಮನಾಗಲೀ, ಕೃಷ್ಣನಾಗಲೀ ಅವರವರ ಕಾಲದಲ್ಲಿ ವ್ಯಕ್ತಿಗಳಾಗಿಯೇ ಬಂದವರು. ಆದರೆ ನಾವಿಂದು ಅವರ ಚಿತ್ರಪಟಕ್ಕೋ, ಶಿಲಾಮೂರ್ತಿಗೋ ಪೂಜೆ ಮಾಡುವುದನ್ನು ನೋಡುತ್ತೇವೆ. ಅದನ್ನು ವ್ಯಕ್ತಿಪೂಜೆಯೆಂದು ನಿಂದಿಸುವುದಿಲ್ಲ.

ಭಗವಂತನೂ ತತ್ತ್ವಮಯವಾಗಿಯೇ ಕಾಣಿಸಿಕೊಳ್ಳಬೇಕು:
ಭಗವಂತನು ನಮ್ಮ ಮುಂದೆ ಕಾಣಿಸಿಕೊಳ್ಳಬೇಕಾದರೆ ಇಪ್ಪತ್ನಾಲ್ಕು ತತ್ತ್ವಗಳ ಜೊತೆಯಲ್ಲಿಯೇ ಕಾಣಿಸಿಕೊಳ್ಳಬೇಕಾಗುತ್ತದೆ. ಇಲ್ಲವಾದರೆ ಅವನು ಅವ್ಯಕ್ತನಾಗಿಯೇ ಇದ್ದು ಬಿಡಬೇಕಾಗುತ್ತದೆ. ಅವನು ಹಾಗೆ ಕಾಣಿಸಿಕೊಂಡಾಗ ನಮಗೆ, ಇವನು ನಮ್ಮಂತೆಯೇ ಇದ್ದಾನಲ್ಲ ಎಂದೆನಿಸಿಬಿಡುತ್ತದೆ. ಆದರೆ ಅವನು ತನ್ನ ಸಂಕಲ್ಪದಿಂದ ನಮ್ಮ ಉದ್ಧಾರಕ್ಕಾಗಿ ನಮ್ಮಂತೆ ಕಾಣಿಸಿಕೊಂಡು, ನಮ್ಮನ್ನು ತನ್ನ ಧಾಮಕ್ಕೆ ಸೆಳೆದೊಯ್ಯಲು ಬಂದಿದ್ದಾನೆ ಎಂಬುದರ ಅರಿವಾಗುವವರೆಗೂ ನಾವು ಭ್ರಮೆಯಲ್ಲಿಯೇ ಇರುತ್ತೇವೆ. ಹಾಗೆಯೇ ತಮ್ಮ ತಪಸ್ಯೆಯಿಂದ ಭಗವಂತನನ್ನು ಕಂಡು ಅವನ ದರ್ಶನದ ಆನಂದವನ್ನು ಮೈ ಮನಸ್ಸುಗಳಲ್ಲೆಲ್ಲಾ ತುಂಬಿಕೊಂಡು ನಮಗೂ ಅದನ್ನು ಹರಿಸುವ ಶಕ್ತಿಯುಳ್ಳ ಜ್ಞಾನಿಗಳನ್ನು ಪೂಜಿಸಿದಾಗಲೂ ನಮಗೆ ಲೌಕಿಕವಾದ  ವ್ಯಕ್ತಿಪೂಜೆ ಎನ್ನಿಸಬಾರದು..


 ಶ್ರೀ ಕೃಷ್ಣನು ಗೀತೆಯಲ್ಲಿ ಅಪ್ಪಣೆ ಕೊಡಿಸಿದಂತೆ - 
ಅವಜಾನಂತಿ ಮಾಂ ಮೂಢಾಃ ಮಾನುಷೀ ತನುಮಾಶ್ರಿತಂ, ಪರಂಭಾವಮಜಾನಂತಃ ಮಮಭೂತ ಮಹೇಶ್ವರಂ||. ಮನುಷ್ಯನ ಶರೀರವನ್ನು ಹೊತ್ತು ಬಂದಿದ್ದ ಕಾರಣದಿಂದ ಕೃಷ್ಣನನ್ನೂ ಇತರರಂತೆಯೇ ಮನುಷ್ಯನೆಂದು ಅವನ ಕಾಲದಲ್ಲೂ ಭಾವಿಸಿದವರುಂಟು. ಆದರೆ ಆ ಮಾನುಷ ಭಾವದ ಹಿಂದಿನ ಪರಭಾವ, ಪರಾತ್ಪರ ಭಾವ ಆಗಲೂ ಜ್ಞಾನಿಗಳಿಗೆ ಮಾತ್ರ ಅನುಭವವಾಗಿದ್ದುದನ್ನು ಕಾಣುತ್ತೇವೆ. ವ್ಯಕ್ತಿಯು ಪರಭಾವವನ್ನು ವ್ಯಕ್ತಗೊಳಿಸುತ್ತಿದ್ದರೆ ನಮ್ಮ ಜೀವನದ ಉದ್ಧಾರಕ್ಕೆ, ಆ ಪರಭಾವಕ್ಕೆ ನಾವೂ ಏರುವುದಕ್ಕಾಗಿ ಅಂತಹ ವ್ಯಕ್ತಿಯ ಪೂಜೆ ಅವಶ್ಯವಾಗಿ ಮಾಡಬೇಕು. ಹಾಗಿಲ್ಲದೆ ನಮ್ಮಂತೆ ಇಂದ್ರಿಯಗ್ರಾಮಗಳಲ್ಲೇ ಸಂಚರಿಸುವ ವ್ಯಕ್ತಿಗಳನ್ನು ಪೂಜೆಮಾಡುವುದರಿಂದ ಯಾವ ಪ್ರಯೋಜನವೂ ಇರದು. ಜೀವನದ ನೆಲೆ ಮುಟ್ಟದವನನ್ನು ಪೂಜೆ ಮಾಡಿದರೆ ಅವನಂತೆ ನಾವೂ ಬರಿಯ ಇಂದ್ರಿಯ ಕ್ಷೇತ್ರದಲ್ಲೇ ಓಡಾಡುತ್ತಿರಬೇಕಾಗುತ್ತದೆ. ಮೇಲೆ ಹೇಳಿದಂತೆ ಅದು ಮತಿಹೀನತೆ, ಹೃದಯ ದೌರ್ಬಲ್ಯದ ಸಂಕೇತವಾಗುತ್ತದೆ. ಮಾತ್ರವಲ್ಲದೆ ದುರ್ಗುಣಯುಕ್ತರಾದ ವ್ಯಕ್ತಿಗಳ ಪೂಜೆಯಿಂದ ನಮ್ಮಲ್ಲೂ ದುರ್ಗುಣಗಳ ದುರಾಕ್ರಮಣ ನಡೆಯುವ ಅಪಾಯವಿರುತ್ತದೆ. ಅಂತಹ ವ್ಯಕ್ತಿಪೂಜೆ ನಿಜಕ್ಕೂ ನಿಂದನೀಯ.ಹಾಗೆಂದೇ ವ್ಯಕ್ತಿಪೂಜೆ ಬೇಕೇ ಬೇಡವೇ ಎಂಬುದಕ್ಕೆ ಉತ್ತರ ಬೇಕು ಬೇಡ ಎರಡೂ ಆಗುತ್ತದೆ.

ಪ್ರಾಣಪ್ರತಿಷ್ಠೆ:
ದೇವಾಲಯದ ಶಿಲಾಮೂರ್ತಿಯನ್ನಾದರೋ ಜ್ಞಾನಿಗಳೇ ತಮ್ಮ ಪ್ರಾಣಪ್ರತಿಷ್ಠೆಯಿಂದ ಅದನ್ನು ಪೂಜಾಯೋಗ್ಯವನ್ನಾಗಿ ಮಾಡಿರುತ್ತಾರೆ. ಮಹಾಜ್ಞಾನಿಯಾದವನು ಪರಿಪೂರ್ಣ ಸ್ಥಿತಿಯಲ್ಲಿದ್ದುಕೊಂಡು ತನ್ನ ಪ್ರಾಣವನ್ನದರಲ್ಲಿಡಬೇಕು. ಆಗಲೇ ಪ್ರಾಣಪ್ರತಿಷ್ಠೆಯಾಗಿದೆ ಎನ್ನುವುದಕ್ಕೆ ವಿಷಯ. ಅವನ ಆತ್ಮಶಕ್ತಿಯನ್ನು ಅಲ್ಲಿಡದಿದ್ದರೆ, ಅದು ಬರಿಯ ಕಲ್ಲು. ಎಂದಮೇಲೆ ಅಂತಹ ಚೈತನ್ಯಶಕ್ತಿಯು ಪೂರ್ತಿಪೂರ್ತಿಯಾಗಿ, ಜೀವಂತವಾಗಿ ಕೆಲಸ ಮಾಡುತ್ತಿರುವ ಜ್ಞಾನಿಗಳನ್ನು ಪೂಜಿಸಲು, ನಮಗೆ ನಮ್ಮಂತೆಯೆ ಇರುವವರನ್ನು ಪೂಜಿಸುವುದು ಹೇಗೆ ಎನ್ನಿಸಿಬಿಡುತ್ತದೆ. ಅವರು ಗತಿಸಿ ಹೋಗಿ ಎಷ್ಟೋ ಕಾಲವಾಗಿ ನಂತರ ಶಿಲೆಯಾದ ಮೇಲೆಯೇ ನಮಗೆ ಇದು ದೇವರು ಎಂಬ ನಂಬಿಕೆ ಬರುವುದು.ಇದು ನಮ್ಮಲ್ಲಿರುವ ದೋಷವೆಂದೇ ತಿಳಿಯಬೇಕು.

ಜ್ಞಾನಿಗಳ ಪೂಜೆ ಹೃದಯ ದೌರ್ಬಲ್ಯವಲ್ಲ:
ಅಂತಹ ಜ್ಞಾನಿಗಳ ಪಾದ ತೊಳೆದು ಪೂಜೆಮಾಡುವುದು ಭಾವಾತಿರೇಕವಲ್ಲ ಅದು ಭಾವಗಾಂಭೀರ್ಯ. ನಿಜಕ್ಕೂ ನದಿ, ಜಲಾಶಯಗಳನ್ನು ತೀರ್ಥವಾಗಿ ಮಾಡುವವರೂ ಸಹ ಜ್ಞಾನಿಗಳೇ. ಅವರ ಆತ್ಮ ಸಂಕ್ರಮಣದಿಂದಲೇ ಆ ನೀರು ತೀರ್ಥವಾಗಿ ಪರಿಣಮಿಸುತ್ತದೆ. ಅಂಥಹವರ ಪುಣ್ಯ ಪಾದಗಳ ತೀರ್ಥ ಸೇವನೆ ನಮ್ಮನ್ನು ಭವ ಸಾಗರದಿಂದ ದಾಟಿಸುತ್ತದೆ. ಎಂದಮೇಲೆ ಅದು ಹೃದಯ ದೌರ್ಬಲ್ಯವಲ್ಲ. ಹೃದಯವಂತಿಗೆ. ಅದು ಅಪರಿಪೂರ್ಣತೆಯ ಪೂಜೆಯಲ್ಲ, ಬದಲಿಗೆ ಪರಿಪೂರ್ಣತೆಯೆಡೆಗೆ ಸಾಗಲು ನಾವಿಡುವ ಹೆಜ್ಜೆ. ಅಂತಹವರ ಪೂಜೆಯಿಂದ ಅವರ ಅಹಂಕಾರ ಹೆಚ್ಚುವುದಿಲ್ಲ, ನಮ್ಮ ಅಹಂಕಾರ ಕಡಿಮೆಯಾಗಿ ಮೈ ಮನಸ್ಸುಗಳು ಹಗುರವಾಗುತ್ತವೆ. ಅದು ಬುದ್ಧಿಯ ದಿವಾಳಿತನವಲ್ಲ. ವ್ಯವಸಾಯಾತ್ಮಕವಾದ ಬುದ್ಧಿವೈಭವ. ಶ್ರೀಮದ್ಭಾಗವತದಲ್ಲಿ ಅಪ್ಪಣೆ ಕೊಡಿಸುವಂತೆ-" ನಹ್ಯಮ್ಮಯಾನಿ ತೀರ್ಥಾನಿ ನ ದೇವಾ ಮೃಚ್ಚಿಲಾಮಯಾಃ | ತೇ ಪುನನ್ತ್ಯುರುಕಾಲೇನ ದರ್ಶನಾದೇವ ಸಾಧವಃ || (ನೀರಿನಿಂದ ತುಂಬಿದ ಜಲಾಶಯಗಳು ಪ್ರಭಾವಶಾಲಿಗಳಾದ ದೇವರಲ್ಲ. ಮಣ್ಣು ಅಥವಾ ಕಲ್ಲುಗಳಿಂದಾಗಿ ದೇವರೆಂದು ಪೂಜಿಸಲ್ಪಡುವ ದೇವತಾ ವಿಗ್ರಹಗಳು ದೇವರಲ್ಲ. ಅವು ಬಹಳ ಕಾಲಾನಂತರ ನಮ್ಮನ್ನು ಪಾವನಗೊಳಿಸುತ್ತವೆ. ಜ್ಞಾನಿಗಳಾದರೋ ದರ್ಶನಮಾತ್ರದಿಂದಲೇ ಪಾವನಗೊಳಿಸುತ್ತಾರೆ).

ಬ್ರಹ್ಮಜ್ಞಾನಿಯು ದರ್ಶನದಿಂದ ಕತ್ತಲೆಯನ್ನು ನಾಶಮಾಡಬಲ್ಲನು:
ಜ್ಞಾನಿಗಳಲ್ಲಿ ಅಗ್ರಗಣ್ಯರಾದ ಶಂಕರ ಭಗವತ್ಪಾದರ ಮಾತನ್ನು ಜ್ಞಾಪಿಸಿಕೊಳ್ಳುವುದಾದರೆ- " ಸಾವಿರಾರು ಅಗ್ನಿಗಳು, ಚಂದ್ರರು, ಸೂರ್ಯರು ಯಾವ ಕತ್ತಲೆಯನ್ನು ನಾಶಪಡಿಸಲಾರರೋ ಅಂತಹ ಕತ್ತಲೆಯನ್ನು ಬ್ರಹ್ಮಜ್ಞಾನಿಯು ತನ್ನ ಪ್ರಸನ್ನವಾದ ನೋಟಮಾತ್ರದಿಂದ ನಾಶಪಡಿಸಬಲ್ಲನು" ಎಂದಿದ್ದಾರೆ. ಅಂತಹವರೇ ನಿಜಕ್ಕೂ ದೇವರ ಪೂಜೆಗೆ ವಿಷಯವಾಗಿದ್ದಾರೆ.

ಕೃಷ್ಣ-ಶಿಶುಪಾಲರು:
ಶಿಶುಪಾಲನೂ ಕೃಷ್ಣನನ್ನು ತನ್ನಂತೆಯೇ ಎಂದು ಭಾವಿಸಿದ. ಏಕೆಂದರೆ ಅವನದೂ ಮಾನುಷೀ ತನು, ಇವನದೂ ಮಾನುಷೀ ತನು. ಅಷ್ಟರವರೆಗೆ ಸಮಾನತೆ ಇದೆ. ಆದರೆ ಅವನು ಪಶುಪಾಲ, ಇವನು ಶಿಶುಪಾಲ ಎಂಬ ಅರಿವು ಶಿಶುಪಾಲನಿಗಾಗಲಿಲ್ಲ. ಮಾನುಷ ಭಾವದಿಂದ ಏನೇನನ್ನು ಮಾಡಿದರೆ ಅಪರಾಧ ಎಂದು ಜನಜನಿತವಾಗಿದೆಯೋ ಅದನ್ನೆಲ್ಲ ಆ ತನುವನ್ನು ಧರಿಸಿ ಬಂದ ಕೃಷ್ಣನೂ ಮಾಡಿದ್ದರಿಂದ ಕೃಷ್ಣನನ್ನೂ ಅಪರಾಧಿ ಎಂದನು. ಆದರೆ ಆ ಮಾನುಷೀ ತನುವು ಹೊತ್ತ ಪರ ಭಾವದ ಅರಿವು ಅವನಿಗೆ ಇರಲಿಲ್ಲ. ಹೇಗೆ ಭೂಮಿಯಲ್ಲಿನ ಉಬ್ಬುತಗ್ಗುಗಳು ಆಕಾಶಮಾರ್ಗದಲ್ಲಿ ಅನ್ವಯಿಸುವುದಿಲ್ಲವೋ ಹಾಗೆಯೇ ಪರಭಾವದ ನಡೆಗಳು ಮಾನುಷ ಭಾವದಲ್ಲಿ ಅನ್ವಯಿಸುವುದಿಲ್ಲ. ವಿಮಾನವು ಆಕಾಶದಲ್ಲಿ ಹಾರುವಾಗ ಯಾವ ಅಡೆ ತಡೆಗಳೂ ಅದಕ್ಕಿರುವುದಿಲ್ಲ. ಅಂತೆಯೇ ಭೂಪ್ರದೇಶಕ್ಕೆ ಬರುವಾಗ ಅಲ್ಲಿನ ಪರ್ವತಪ್ರದೇಶ, ಸಮತಟ್ಟಾದ ಜಾಗ ಇತ್ಯಾದಿಗಳಿಗನುಗುಣವಾಗಿ ಮೇಲೆ ಕೆಳಗೆ ಎಲ್ಲ ಮಾಡಬೇಕಾಗುತ್ತದೆ. ಹಾಗೆಯೇ ಕೃಷ್ಣನ ಪರಭಾವಕ್ಕನುಗುಣವಾದ ನಡೆಯೆಲ್ಲವನ್ನೂ ಮಾನುಷ ಭಾವದಿಂದ ನೋಡಲಾಗದು. ಜೀವಿಗಳ ಉದ್ಧಾರಕ್ಕಾಗಿಯೇ ಅವನ ಜೀವಿತದ ಸಮಸ್ತ ವ್ಯಾಪಾರವೂ ಇದ್ದಿತೆಂಬುದು ಇಲ್ಲಿ ಗಮನಾರ್ಹ. ಆ ಅರಿವಿದ್ದ ಜ್ಞಾನಿಯಾದ ಭೀಷ್ಮನು ಅವನಿಗೇ ಅಗ್ರ ಪೂಜೆಯಾಗಬೇಕು ಎಂದನು. ಅದು ಪರಮಾತ್ಮನ ಪೂಜೆಯೇ ಹೊರತು ಶಿಶುಪಾಲನೆಂದುಕೊಂಡ ಸಾಮಾನ್ಯ ವ್ಯಕ್ತಿಯ ಪೂಜೆಯಲ್ಲ.

ಅಂತಹವರನ್ನು ತಿಳಿಯುವುದು ಹೇಗೆ?
ಈಗ ಅಂತಹವರನ್ನು ನಾವು ತಿಳಿಯುವುದು ಹೇಗೆ? ಎಂಬ ಪ್ರಶ್ನೆ ಬರುವುದು ಸ್ವಾಭಾವಿಕ. ನಾವು ಜೀವನದಲ್ಲಿ ಏನಾದರೂ ಸಾಧಿಸಬೇಕು ಎನ್ನುವ ಸಂಕಲ್ಪ ಮಾಡಿದಾಗ ಅದಕ್ಕೆ ಸಂಬಂಧಿಸಿದ ವಿಷಯಗಳನ್ನೆಲ್ಲ ಹುಡುಕಿಕೊಂಡು ಹೋಗುವುದು ನಮಗೆಲ್ಲರಿಗೂ ತಿಳಿದ ವಿಷಯವೇ ಆಗಿದೆ. ಡಾಕ್ಟರಾಗಬೇಕು ಎಂದು ಸಂಕಲ್ಪ ಮಾಡಿದರೆ ತತ್ಸಂಬಂಧವಾದ ಎಲ್ಲ ವಿಷಯಗಳನ್ನೂ ಆಸ್ಥೆಯಿಂದ ಏಕ ನಿಷ್ಠೆಯಿಂದ ಹುಡುಕಿ, ಅಂತಹ ವಿದ್ಯಾಭ್ಯಾಸಗಳೆಲ್ಲವನ್ನೂ ಮಾಡಿ ನಮ್ಮ ಆಸೆಯನ್ನು ಈಡೇರಿಸಿಕೊಳ್ಳುವುದಿಲ್ಲವೇ? ಹಾಗೆಯೇ ನಮ್ಮ ಜೀವನದ ಪರಮ ನೆಲೆಯನ್ನು ಹೊಂದಬೇಕೆಂಬ ಮಹದಾಸೆ ನಮಗಿದ್ದರೆ, ಅದಕ್ಕೆ ಸಂಬಂಧಿಸಿದ ಮಾರ್ಗದರ್ಶಕರನ್ನೂ ಹುಡುಕಿಕೊಂಡು ಹೋಗುತ್ತೇವೆ. ನಮ್ಮ ಆಸೆ ಎಷ್ಟು ಬಲವತ್ತರವಾಗಿದೆಯೋ ಅಷ್ಟು ಬೇಗ ನಮಗೆ ಅಂತಹ ವ್ಯಕ್ತಿಗಳು ಸಿಗುತ್ತಾರೆ. ಒಳ್ಳೆಯ ವೈದ್ಯರು ಸಿಗದೇ ರೋಗಿ ಮೋಸ ಹೋದಂತೆ ಇಲ್ಲಿಯೂ ಆಗುವ ಸಂಭವವಿದ್ದೇ ಇದೆ. ಆದರೂ ಆರೋಗ್ಯದ ಅಪೇಕ್ಷೆ ನಮ್ಮನ್ನು ಒಳ್ಳೆಯ ವೈದ್ಯರನ್ನು ಹುಡುಕುವವರೆಗೂ ಬಿಡುವುದಿಲ್ಲವಲ್ಲವೇ? ಹಾಗೆಯೇ ಇಲ್ಲೂ ನಮ್ಮ ನೆಲೆಗಾಣುವ, ಅಪೇಕ್ಷೆ ಎಷ್ಟು ಬಲಿಷ್ಟವೋ ಅದರ ಮೇಲೆ ನಮಗೆ ಅಂತಹ ಜ್ಞಾನಿಗಳು ದೊರೆಯುವುದೂ ನಿಂತಿದೆ. ಅನೇಕ ಬಾರಿ ಅಂತಹ ವ್ಯಕ್ತಿಗಳು ನಮ್ಮ ನಡುವೆಯೇ ಇದ್ದರೂ ನಮ್ಮ ಅರಿವಿಗೆ ಬರದಿರುವುದೂ ಉಂಟು. ಅರ್ಜುನನೂ ಸಹ ಕೃಷ್ಣನ ಜೊತೆಜೊತೆಯಲ್ಲಿಯೇ ಇದ್ದರೂ ಅವನನ್ನು ಕೇವಲ ತನ್ನ ಆತ್ಮೀಯ ಗೆಳೆಯನೆಂದು, ಪ್ರೀತಿಯ ಸಂಬಂಧಿಯೆಂದಷ್ಟೇ ತಿಳಿದಿದ್ದ. ಆದರೆ ಕೃಷ್ಣನ ಕೃಪೆಯಿಂದ ಯಾವಾಗ ಅವನ ನಿಜಸ್ವರೂಪದ ಅರಿವಾಯಿತೋ ಆಗ "ನಷ್ಟೋ ಮೋಹಃ ಸ್ಮೃತಿರ್ಲಬ್ದಾ ತ್ವತ್ಪ್ರಸಾದಾನ್ಮಯಾಚ್ಯುತ" ಎಂದು ಕೃತಜ್ಞತೆಯಿಂದ ಕೈ ಜೋಡಿಸುತ್ತಾನೆ. ಹೀಗೆಯೇ ವ್ಯಕ್ತಿಯಾಗಿ ಕಾಣಿಸಿಕೊಳ್ಳುವ ಭಗವಂತನ, ಜ್ಞಾನಿಗಳ ಹಿಂಬದಿಯ ಶಕ್ತಿಯ ಅರಿವಾಗುವುದೂ ಸಹ ಅವರ ಕೃಪೆಯಿಂದ, ನಮ್ಮ ಸುಕೃತದಿಂದ ಆಗಬೇಕಾದ ವಿಷಯವಾಗಿದೆ.
ಭಗವಂತನನ್ನೇ ವ್ಯಕ್ತಪಡಿಸುವ ಅಂತಹ ವ್ಯಕ್ತಿಗಳು ನಮಗೆ ಒದಗಿಬರಲಿ ಎಂದು ಪ್ರಾರ್ಥಿಸೋಣ. 

ಸೂಚನೆ: 22/04/2021 ರಂದು ಈ ಲೇಖನ ವಿಜಯವಾಣಿಯ ಸಂಸ್ಕೃತಿ ದಲ್ಲಿ ಪ್ರಕಟವಾಗಿದೆ. 

வினையின் விளைவை மாற்ற இயலாது (Vinaiyin vilaivai matra iyaladu)

மூலம்: வித்வான் நரசிம்ஹ பட்டா

தமிழாக்கம்: வனஜா




नैवाकृतिः फलति नैव कुलम् न शीलम् विध्यापि नैव न च यत्क्रुतापि सेवा 

भाग्यानि पूर्वतपसा खलु सन्चितानि कालॆ फलंति पुरुषस्य यथैव व्यक्ताः ।। 

                                                                                            सुभाषित-नीतिशतक- ೯೭

நைவாக்றுதி: பலதி நைவ குலம் ன ஶீலம் வித்யாபி நைவ ன ச உத்க்றுதாபி சேவா |

பாக்யானி பூர்வதபசா கலு சம்சிதானி காலே பலம்தி புருஷச்ய யதைவ வ்ய்க்தா: ||

 

பொழிப்புரை:

ஒரு மனிதனின் தோற்றம்வம்ச பாரம்பரியம்நற்குணங்கள்கல்வி அல்லது தன்னலமற்ற சேவை பலனளிக்காது. மரமானது தக்க பருவத்தில் கனிகளை அளிப்பது போன்று பண்டைய தவத்தின் பயனாக சேர்த்த நற்பலனும் தக்க தருணத்திலேயே பலனளிக்கும்.

         

விரிவுரை:

 செழுமையான நிலத்தில் விதை விதைக்கிறோம். தண்ணீரும்உரமும்நன்கு வளர்வதற்கு தேவையான அனைத்தும் சரியான நேரத்தில் அளிக்கிறோம். சிறப்பான பயிறுக்கு தேவையான அனைத்தும் செய்யப்படுகிறது. இவ்வாறு செயலாற்றியும் நாம் கேட்கும்போதெல்லாம் பலன் கிட்டுவதில்லை. விதை வளர்ந்து மரம் கனி அளிப்பதற்கு இயற்கையே ஒரு காலவரையை ஏற்படுத்தியுள்ளது. மரமானது அதை மீறி நம் தேவைக்கேற்ப கனி அளிப்பதில்லை.

 

            இவ்வாறே, ஒரு மனிதன்  வலிமை, அழகு,      நற்குணம்  கருணைகல்வி அனைத்திலும் இவ்வுலகில் ஒப்பற்றவனாக விளங்கலாம்.  எனினும் அவன் ஆற்றிய தவமும்மனித குலத்திற்கு அளித்த தன்னலமற்ற தொண்டும் மரமா வளர்ச்சியடைந்து அதற்கேற்ற தருணத்தில் மட்டுமே பலனளிக்கும். அவன் எதிர்பார்க்கும் தருணத்தில் பலனடைய இயலாது. இதிலிருந்து அறியப்படுவது யாதெனில் நாம் அறிவுபூர்வமாக பெருந்தன்மையுடன் போராடி சேர்த்த கல்வி, குணங்களின் பலத்தால் பலனை நாம் விரும்பியபோது அனுபவிக்க இயலாது. செய்வினையை பொருத்தே பயன் கிட்டுமென்பது உறுதி. அது அதனுடையதே ஆன இயற்கை சுழற்சியிலேயே தோன்றும். எந்நே வினையின் வலிமை!         

 

நாம் ஒரு செயலை செய்தால் (நன்மை அல்லது தீமை) அதற்குரிய பலனை அனுபவித்தே ஆக வேண்டும். இதை கருத்தில் கொண்டு  விவேகியானவன் ஒரு செயலை நிறைவேற்றுமுன்  நன்கு ஆராய்ந்து  சரியான நல்வினைகளையே  செய்யவேண்டுமென்பது இச்செய்யுளின் கருத்து.


குறிப்பு: இக்கட்டுரை யின் கன்னட மூலம் AYVM blogs ல் காணலாம்.