Monday, May 29, 2023

When do our actions qualify as karmayoga?

Kannada Article by: Soumya Pradeep
English Rendering by: Padmini Shrinivasan
Respond to (lekhana@ayvm.in)



Aanjaneya, a great devotee, executed Sriraamachandra's errands with utmost veneration, regarding Him as the prime source of his sustenance; he thus earned the goodwill of Sriraamachandra and Seethamaata. Searching for the whereabouts of Seetha, he performed a herculean feat of crossing the ocean to reach Lanka; met Seetha under the ashoka tree; consoled her and passed on the message of his master to her; returned with Seetha's message and became instrumental in uniting the two. Similarly, during the war between Raama and Raavana, when Lakshmana fell unconscious the valorous Aanjaneya flew to the Himalayas to fetch Sanjeevini herb, along with the hill! This way Aanjaneya executed many formidable tasks for his Lord with a happy countenance.

 One of the poets while portraying Sri Raama has skillfully described the repercussions of our actions (karma). Though deeply impressed with Hanumaan, Sri Raama told him "You have performed very mighty tasks for my sake. Yet, do not expect anything in return from me, because the one, who desires return favours, invites calamities in reality". If we help a person, who is in distress and expect a return, then, are we not justified in getting back our services only when we are in trouble?! The gist here is that Sri Raama wished that no misery or associated difficulties should befall Hanumaan. An additional message to all is that, when a return favour is expected the doer gets bound by the action (karma-bandhana). The fruits reaped out of every one of our actions, is preordained. Some day, commensurate with our activities, the meritorious deeds fetch us auspicious fruits while bad deeds fetch us equally bad fruits. Again, some results of actions are obtained immediately, whereas some others may take a long time. Yet a few other fruits have to be reaped over several births! The impact of karmas is intricate. So, rejecting bad deeds on all accounts, we should continue to perform our actions bereft of the 'I, Mine' feelings; then the action becomes a karmayoga when it is performed without expecting any return and with a feeling of submission to the Lord. Then, without binding us, it leads us through a path to unify us with the Supreme Lord. As the Lord himself says – "All we need to do is to perform our ordained duties zestfully - karmanyevaadhikaaraste maa phaleshu kadaachana". (Your authority lies in the performance of actions alone and never on the fruit of actions).

Aanjaneya never expected anything in return but executed the jobs with zest and devotion to the Lord, through body, mind and speech. Immortality and Sri Raama's embrace were the best fruits he attained. In contrast, Raavana who worked against the righteous path set by the Lord became a target for Sri Raama's arrows, culminating in his death.

As per Srirangamahaaguru's words - "In our lifetime, whatever actions we execute must have a significance. It should guide us to our roots. Our daily activities must be such that they show us the way to the Lord". Let us all engage ourselves in pursuits adored by the Lord and become karmayogis.

Note: The Kannada version of this article can be viewed at AYVM blogs. 

Sunday, May 28, 2023

ವ್ಯಾಸ ವೀಕ್ಷಿತ - 39 ಗಂಧರ್ವನು ಹೇಳಿದ ರಂಜಕ ಕಥೆ (Vyaasa Vikshita - 39 Gandharvanu Helida Ranjaka Kathe)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)



ಪಾಂಡವರನ್ನು ತಾನು ಕೆಣಕಿದುದರ ಕಾರಣವನ್ನು ತಿಳಿಸುತ್ತಾ, ಗಂಧರ್ವನು ಹೀಗೆಂದನು.  

ರಾಜನು ಹೇಗಿರಬೇಕು? – ಎಂಬುದನ್ನು ಹೇಳುತ್ತೇನೆ, ಕೇಳು. ತಾನು ಯಾವುದನ್ನಿನ್ನೂ ಪಡೆದಿಲ್ಲವೋ ಅದನ್ನುಆತನು ಪಡೆಯಬೇಕಷ್ಟೆ. ಅದಕ್ಕಾಗಿ, ಗುಣಭರಿತನಾದ ಪುರೋಹಿತನೊಬ್ಬನನ್ನು ರಾಜನಾದವನು ಮಾಡಿಕೊಂಡಿರಬೇಕು. ಪಡೆದುದನ್ನು ಪರಿರಕ್ಷಿಸಲೂ ಅದುವೇ ಬೇಕಾದದ್ದು. ತನಗೆ ಭೂತಿಯು (ಎಂದರೆ ಸಮೃದ್ಧಿಯು) ಬೇಕೆನ್ನುವುದಾದರೆ, ಆ ಪುರೋಹಿತನ ಅಭಿಪ್ರಾಯದಂತೆ ನಡೆಯಬೇಕು.

ಹಾಗೆಯೇ ಸಾಗರಾಂಬರಳಾದ ಇಡೀ ಭೂಮಿಯನ್ನು (ಎಂದರೆ ಸಮುದ್ರ-ವಸ್ತ್ರಳಾದ ಧರೆಯನ್ನು, ಅರ್ಥಾತ್ ಸಾಗರ-ಪರ್ಯಂತವಾದ ಭೂ-ಮಂಡಲವನ್ನು) ಎಲ್ಲ ರೀತಿಯಿಂದಲೂ ಪಡೆಯಬೇಕೆಂಬ ಅಪೇಕ್ಷೆಯಿದ್ದಲ್ಲಿ, ಹೀಗೆ ಮಾಡತಕ್ಕದ್ದು: ಯಾವನೇ ಭೂಪತಿಯಿರಲಿ, ಆತನು ಗುಣ-ಸಾಮರ್ಥ್ಯ-ಸಂಪನ್ನನಾದ ಪುರೋಹಿತನ ಜೊತೆಗಾರಿಕೆಯನ್ನು ಹೊಂದಿರಬೇಕು; ಹಾಗಿಲ್ಲದೆ, ಕೇವಲ ಶೌರ್ಯದಿಂದಲೇ ಭೂಮಿ-ಜಯವನ್ನು ಪಡೆದುಕೊಂಡುಬಿಡಲಾರನೇ ಸರಿ; ಅಷ್ಟೇ ಅಲ್ಲ, ಕೇವಲ ಅಭಿಜನದಿಂದಲೇ (ಎಂದರೆ ಸದ್ವಂಶದಲ್ಲಿ ಜನಿಸುವಿಕೆಯಿಂದಲೇ) ಆಗಲಿ, ಅದನ್ನು ಪಡೆಯಲಾರ, ಓ ತಾಪತ್ಯನೇ, ಓ ಕುರುವಂಶವರ್ಧಕನೇ! ಬದಲಾಗಿ, ಪುರೋಹಿತನನ್ನು ಪ್ರಧಾನನನ್ನಾಗಿ ಯಾವನು ಹೊಂದಿರುವನೋ ಅವನೇ ದೀರ್ಘಕಾಲ ಪರ್ಯಂತ ರಾಜ್ಯವನ್ನು ಪಾಲಿಸಲು ಸಮರ್ಥನಾಗುವುದು. (ಈ ವಿಷಯದಲ್ಲಿ ಪಾಂಡವರು ಎಚ್ಚರವಾಗಿರಲಿಲ್ಲವೆಂಬುದನ್ನು ಈ ಮೂಲಕ ಸೂಚಿಸಿದನೆಂದರ್ಥ).  ಹೀಗೆಂದು ಹೇಳಿ ಗಂಧರ್ವನು ತನ್ನ ಮಾತನ್ನು ಮುಗಿಸಿದನು.

ಆಗ ಅರ್ಜುನನು ಆತನನ್ನು ಹೀಗೆ ಕೇಳಿದನು: "ಅಯ್ಯಾ ಗಂಧರ್ವನೇ, ನನ್ನ ಪ್ರಶ್ನೆಗೆ ಉತ್ತರಿಸುವಾಗ ನನ್ನನ್ನು ಮೂರು ಬಾರಿ ನೀನು "ತಾಪತ್ಯ" ಎಂದು ಸಂಬೋಧಿಸಿದ್ದೀಯೆ. ತಾಪತ್ಯ ಎಂಬುದಕ್ಕೆ ಏನು ಅರ್ಥ?  ನಾವು ಕುಂತಿಯ ಮಕ್ಕಳು. ನಮ್ಮನ್ನು ಆ ಕಾರಣಕ್ಕಾಗಿ "ಕೌಂತೇಯ" ಎಂದು ಎಲ್ಲರೂ ಕರೆಯುವರು. ತಾಪತ್ಯ ಎಂಬ ಪದಕ್ಕೆ 'ತಪತೀ' ಎನ್ನುವವಳ ಪುತ್ರ - ಎಂದರ್ಥ. ಯಾರು ಆ ತಪತಿ ಎಂಬುವಳು?" ಎಂದನು.

ಅರ್ಜುನನ ಪ್ರಶ್ನೆಗೆ ಉತ್ತರವಾಗಿ ಆ ಗಂಧರ್ವನು ಹೇಳಿದನು: "ಇದೊಂದು ಮನೋರಮವಾದ (ಎಂದರೆ ರಂಜಕವಾದ) ಕಥೆ. ಇದನ್ನು ಯಥಾವತ್ತಾಗಿ (ಎಂದರೆ ಇರುವುದನ್ನು ಇರುವಂತೆಯೇ) ತಿಳಿಸುತ್ತೇನೆ. ಬುದ್ಧಿಶಾಲಿಗಳಲ್ಲಿ ಶ್ರೇಷ್ಠನಾದ ಪಾರ್ಥನೇ, ಏಕಮನಸ್ಕನಾಗಿ ಕೇಳು.

ಆಕಾಶದಲ್ಲಿ ಉದಯಿಸಿ ತನ್ನ ತೇಜಸ್ಸಿನಿಂದ ಸ್ವರ್ಗಪರ್ಯಂತವೂ ಯಾವನು ವ್ಯಾಪಿಸಿರುವನೋ, ಅಂತಹ ಆ ಸೂರ್ಯನಿಗೆ ತಪತೀ ಎಂಬ, ತಕ್ಕವಳಾದ ಪುತ್ರಿಯಿದ್ದಳು. ದೇವವಿವಸ್ವಂತನ ಮಗಳಾದ್ದರಿಂದ ಸಾವಿತ್ರಿಯ ತಂಗಿಯೂ ಹೌದು. ತಪಸ್ಸಿನಿಂದ ಕೂಡಿದ್ದವಳಾದ್ದರಿಂದಲೇ 'ತಪತೀ' ಎನಿಸಿಕೊಂಡಳು. ದೇವತೆಯಾಗಲಿ ಆಸುರಿಯಾಗಲಿ, ಯಕ್ಷಿಯಾಗಲಿ ರಾಕ್ಷಸಿಯಾಗಲಿ ಅವಳಂತಹ ರೂಪವನ್ನು ಹೊಂದಿದ್ದವಳು ಯಾವಳೊಬ್ಬಳೂ ಇರಲಿಲ್ಲ. ಅವಳ ಅಂಗಗಳು ಅನವದ್ಯವಾಗಿದ್ದವು (ಎಂದರೆ ದೋಷರಹಿತವಾಗಿದ್ದವು. ಅವದ್ಯವೆಂದರೆ ದೋಷ), ಸುವಿಭಕ್ತವಾಗಿದ್ದವು. (ಯಾವ ಭಾಗವು ಎಷ್ಟಿರಬೇಕೋ ಅಷ್ಟೇ ಇರುತ್ತಿತ್ತು). ಅವಳ ಕಣ್ಣುಗಳು ಕಪ್ಪಾಗಿದ್ದು ವಿಶಾಲವಾಗಿದ್ದವು. ಅವಳ ಆಚಾರವು ಚೆನ್ನಾಗಿದ್ದಿತು. ಸ್ವತಃ ಸಾಧುಸ್ವಭಾವ; ಅವಳ ವೇಷವೂ ಹೃದ್ಯವಾಗಿರುತ್ತಿತ್ತು. ರೂಪದಲ್ಲಾಗಲಿ, ಶೀಲದಲ್ಲಾಗಲಿ, ಗುಣದಲ್ಲಾಗಲಿ, ವಿದ್ಯೆಯಲ್ಲಾಗಲಿ, ಅವಳಿಗೆ ಸರಿಸಮನಾದ ವರನು ಮೂರುಲೋಕದಲ್ಲೂ ಇರಲಾರನೆಂದೇ ಸೂರ್ಯನು ಭಾವಿಸಿದನು.

ಆದರೆ ಮಗಳು ಯೌವನಕ್ಕೆ ಬಂದಿದ್ದಾಳೆ; ಅವಳನ್ನು ಯೋಗ್ಯವರನಿಗೆ ಮದುವೆಮಾಡಿಕೊಡಬೇಕು - ಎಂದು ಸೂರ್ಯನು ಚಿಂತಾಕುಲನಾದ. ಹೀಗೆ ಚಿಂತೆಯಲ್ಲಿರುವ  ಸೂರ್ಯನಿಗೆ ನೆಮ್ಮದಿಯೆಲ್ಲಿ ದೊರೆತೀತು?

ಸೂಚನೆ : 28/5/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Friday, May 26, 2023

The mystic symbolism of Sengol

Dr Mohan Raghavan
Respond to (lekhana@ayvm.in)



The Sengol has been all over the news ever since the announcement of its restoration to the seat of parliament; for the first time since 1947. Historically it was the symbol of authority wielded by the kings of bhārata; most famously by the Tamil kings who called it the Sengol, associated with righteousness, abundance and prosperity. The Sengol or dharma daṇḍa(in Sanskrit) is highly celebrated in Tamil1 and Sanskrit literature2 alike as the personification of dharma, upholding which was considered the greatest duty of the king; in fact, it was their raison d' etre. The word daṇḍadhara3 itself is a synonym for Yama, the lord of dharma in particular and in general to a king. The science of statecraft is often called daṇḍaniti4. However, all of this begs the question, "Why was the daṇḍa chosen to represent royal authority?". The staff is not the greatest of weapons when compared to the sword, mace, spear or bow. Royalty is indicated by the presence of several items like the catra (Umbrella) and cāmara (Whisk). However, the daṇḍa alone is a personification of royal authority. 


śrīranga mahāguru's beautiful exposition on this matter is worth recalling at this juncture. He identifies the king's dharma-daṇḍa or royal sceptre as the replica of merudaṇḍa or backbone which houses the spinal cord. The true king is said to rule over two kinds of kingdoms - the heavenly and the earthly ones5. The heavenly kingdom is the one that yogis see within themselves. The yogis dive deep within and enjoy the greatest bliss that anyone could achieve. Yoga śāstras say that this ultimate bliss is reached only when the yogi enters the sahasrāra or the crown. This state of bliss6 is followed by an experience of nectar or amṛta that pours downwards7, giving joy to every one of the senses and nourishes the physical body. It is thus that the process of Yoga gives unbounded joy within and also freshness and agility of the senses to enjoy the material world outside, albeit with a sense of calmness and balance. Thus such a prince who has learnt the secrets of yoga from his gurus and achieved the same by penance is a master of the inner heavenly kingdom and is also capable of enjoying the material world with a sense of equanimity and balance. 


Such a prince is in due course anointed as a king. His goal is to secure for his subjects, that which he has secured for himself - the two-fold happiness within and in the material. This is the dharma that he must uphold. He is anointed by the rājaguru in a ceremony which reminds him of the source of this dharma and the means to preserve it. His conquest of heavenly joys were made possible by the 'control over the senses' or damā. The dharma daṇḍa or royal sceptre presented to him is none other than a replica of the merudaṇḍa or backbone which houses the spinal cord. It is only with damā, that one ascends the suśumna within the spinal cord and enjoys the bliss of joy within the sahasrāra. The chatra over his head is the kunḍalinī that has risen up straight like a rod or daṇḍa and holds its hoods erect over the crown. The chatra also resembles an inverted lotus that showers the bliss of amṛta downwards. This downwards-shower of amṛta is represented by the abhiṣekha of the king where ceremonially purified waters from the sacred rivers are poured downwards from the crown of the head. Thus the rajyābhiṣekha in Indic tradition8 is not a transfer of power but a grand reminder of a king's role on earth. In fact it is said that a king is verily the viṣṇu on earth9, for he secures for his subjects all the joys.


Now how does the king practically achieve this? It is by creating institutional systems for the same if they do not exist. When they do exist he preserves, nourishes and upholds them. First and foremost is the protection of the system of yajña and its underlying methods of tapasya that bestows all boons. In a different age and time,  yajña could be replaced by pūja and another spiritual discipline. Thus he must ensure that the ṛshis who are the custodians of this knowledge of yogavidya (spiritual discipline) are well protected and provided for. The guru-śiṣya parampara must be well protected so that there is an unbroken transmission of the knowledge. This ensures dharma. 


Secondly, the people in their daily lives must exercise due caution so that the vices like anger, lust, greed, infatuation and others do not take over and destroy dharma. Such codes of conduct must be implemented so that all must be able to enjoy the material and the higher joys. Legendary kings like rāma and yudhiṣṭira are celebrated for their ability to uphold the dharma - in individuals, homes, societies and the country at large. They did it rigorously,  meticulously and by setting an example themselves. Bathed in the shower of amṛta within, their mind, words and deeds became gentle, soft,  pleasant,  attractive and devoid of vices.  While they were kind and empathetic,  they were also unsparing in matters of dharma, even if it were their own kith and kin. It is thus no surprise that the dharma rājya is also called 'rāma rājya' and Rama is considered an embodiment of Dharma itself.


It is quite apt that the Dharma daṇḍa or Sengol will soon be installed in its rightful place in the assemblage of those whose duty it is to deliver dharma in our Bharata.


--------------------------------------------------------------------------------------------------------------------------------

1 tirukkuṟal̤: 543: antaṇar nūṟkum aṟattiṟkum ātiyāy niṉṟatu maṉṉavaṉ kol.

2 devībhāgavata purāṇa: 1.17.3: vinā daṇḍam kathaṃ rājyaṃ karoti janakaḥ kila | dharme na vartate loko daṇḍaścenna bhavedyadi

3 śabdakalpadruma: daṇḍadharaḥ:

4 śabdakalpadruma: daṇḍanītiḥ: tat cāṇakyādi prāṇītam nīti śāstram

5 ṛgveda: 4.42.1: mama dvitā rāṣṭraṃ kṣatriyasya viśvāyorviśve amṛtā yathā naḥ

6 ṣaṭcakranirūpaṇam: 40: daśa śata dalam pūrṇacandrāti śubhram…pravilasitavapuḥ kevalānandarūpaṃ

7 ṣaṭcakranirūpaṇam: 43: sudhā dhārā sāraṃ niravadhi vimuñcannatitarām

8 A classic example of the coronation with all these features are found in vālmīki rāmāyaṇam : 6.131.60 onwards: vasiṣṭhovāmadevaścajābālirathakāśyapaḥ | kātyāyanosuyajñaścagautamovijayastathā || abhyaṣiñcannaravyāghraṃprasannenasugandhinā | salilenasahasrākṣaṃvasavovāsavaṃyathā ||

9 devībhāgavatapurāṇam: 6.10.24: nādevāṃśo dadātyannaṃ nāviṣṇuḥ pṛthivīpatiḥ


The grandeur of the inner world

Kannada Article by: Sumukha Hebbar
English Rendering by: Padmini Shrinivasan
Respond to (lekhana@ayvm.in)




Praveen, a youth, was describing to his immediate family members, the beauty of parks, grandeur of buildings, lakes and rivers of a city he visited. A lad in the group who was listening to Praveen's description, thought this was sheer exaggeration and such a city could never exist! He raised an allegation that, all this was Praveen's imagination. Praveen heard all of it patiently and replied "If you accompany me, I will show you all of it. But, the path is formidable". The enthusiastic lad took it as a challenge and agreed to accompany. Both of them left.

The path was fraught with pebbles, stones, thorns, hillocks, forests etc. Praveen being familiar with the terrain, moved forward with ease, while the lad kept fainting on a couple of occasions, as he was not used to such hardships. Relaxing often and guided by Praveen he managed to move forward without collapsing. Praveen's words were succor to him, to proceed ahead. Travelling thus, one fine day, they reached the wonderful city and started enjoying its charm. The lad was convinced and accepted Praveen's description.

Bhaarateeya Itihaasas and Puraanas portray many such places. It is told that Shiva resides with his attendants at Kailasa. It seems Vishnu reclines over a huge snake, floating over the milky ocean, in a divine location named Vaikuntha! Swarga is the divine court of lord Indra. It is the dwelling of Indra, Agni, Varuna and other demigods. Celestial damsels Rambha, Urvashi, Menaka, Tillottama, dance in that court. As per sacred texts, the abode of lord Yama is a place, where people get punished for their sins. This way, not just about many places, scriptures vividly describe demigods - their features, attire and ornamentation, vehicle, weapons etc. Observing these, it is obvious that queries such as "Does it really exist? Or is it imaginary?" are but natural.

The vision of Maharsis was not limited to the physical world alone. By subjugating their sense organs, they possessed an ability, to extend and navigate it to the astral as well as to the spiritual domains, traversing through formidable terrains. The eternal and joyful Truth, which unveiled itself through their inner vision, was presented to the exterior world unadulterated, through the medium of Itihaasas, Puraanas, literature, hymns as well as through the idols sculpted in temples. A well-treaded path to comprehend this Truth is also well laid down by them.

Just as Praveen led the lad, through a formidable path full of obstacles, our rshis have taken the place of preceptors to guide their disciples till they visualize and experience the Eternal Truth. Srīrangamahāguru used to clarify: "Those who narrate to us, after experiencing the inner Truth are the real aaptas (meaning accomplished in Sanskrit and intimate people in Kannada)." Their Truth- impregnated speech is aaptavaakya (authorized or a well-warranted speech). Let us all wish that we too qualify one day to witness such a Truth, treating these scriptures as proofs and treading our lives using them as a means to attain Supreme Knowledge.


Note: The Kannada version of this article can be viewed at AYVM blogs.    

Thursday, May 25, 2023

ದೇವರು- ಒಂದು ಚಿಂತನೆ (Devaru-Ondu Cintane)

ಲೇಖಕರು: ಶ್ರೀ ಸುಬ್ರಹ್ಮಣ್ಯ ಸೋಮಯಾಜಿ 

(ಪ್ರತಿಕ್ರಿಯಿಸಿರಿ lekhana@ayvm.in)


ದೇವರಿದ್ದಾನೋ ಇಲ್ಲವೋ, ದೇವರು ವಸ್ತುಸ್ಥಿತಿಯೇ ಅಥವಾ ಕೇವಲ ಕಲ್ಪನೆಯೇ? ಅವನು ಇರುವುದಾದರೆ ನಮಗೆಲ್ಲ ಏಕೆ ಕಾಣಿಸಿಕೊಳ್ಳುವುದಿಲ್ಲ? ದೇವರ ಮೇಲಿನ ನಂಬಿಕೆ ಶ್ರೇಷ್ಠ, ಕನಿಷ್ಠ. ಹೀಗೆ ಸಾಗುತ್ತದೆ ಚರ್ಚೆ,ಭಾಷಣಗಳು. ದೇವರು ಎನ್ನುವ ವಿಷಯದ ಬಗ್ಗೆ ಶತ ಶತಮಾನಗಳ ಚರ್ಚೆ ಅವ್ಯಾಹತವಾಗಿ ನಡೆದಿದೆ, ನಡೆಯುತ್ತಲೇ ಇದೆ.

ಭಾರತೀಯರಲ್ಲಿ ಅಸಂಬದ್ಧವಾದ ಸಂಸ್ಕೃತಿ. ಜೀವನಕ್ಕೆ ಬೇಕಾದ ವಿಷಯಗಳ ಬಗ್ಗೆ ಚಿಂತಿಸುವುದನ್ನು ಬಿಟ್ಟು ದೇವರು ಎಂದೆಲ್ಲ ಇಟ್ಟುಕೊಂಡು ಹಾಳಾಗಿ ಹೋಗುತ್ತಿದ್ದಾರೆ. ಹೊರದೇಶವರು ಆ ಹೆಸರೇ ಇಲ್ಲದೆಯೇ ಎಷ್ಟು ಮುಂದುವರಿದಿದ್ದಾರೆ. ನಾವು ದೇವರು, ಧರ್ಮ ಎಂದೆಲ್ಲ ಇಟ್ಟುಕೊಂಡು ಎಲ್ಲವೂ ಹಾಳಾಗಿ ಹೋಯಿತು. ಭಾರತೀಯರು ಯಾವುದರಲ್ಲಿ ಮುಂದೆ ಬಂದಿದ್ದಾರೆ ಹೇಳಿ? ಆ ದೇವರು ಎಂದು ಒಂದಿಟ್ಟುಕೊಂಡಿದ್ದರಿಂದಲೇ ಇಷ್ಟು ಅನರ್ಥವಾಯಿತು. ಎಂದೆಲ್ಲಾ ತಮ್ಮ ವಾದವನ್ನು ಮಂಡಿಸುವವರನ್ನು ನಾವು ಕಾಣುತ್ತೇವೆ.ಈ ಮಾತುಗಳು ಕಿವಿಗೆ ಇಂಪಾಗಿರುತ್ತೆ. "ಏತದಗ್ರೇ ಅಮೃತಮಿವ ಪರಿಣಾಮೇ ವಿಷೋಪಮಂ" ಎಂಬಂತೆ ಕೇಳಲು ಅಮೃತದಂತೆ ಎನ್ನಿಸಿದರೂ  ಪರಿಣಾಮದಲ್ಲಿ ವಿಷಮಯ.

ಹಲಸಿನ ಗಿಡವನ್ನೋ ತೆಂಗಿನ ಗಿಡವನ್ನೋ ಬೆಳೆಯುವಾಗ ಅದರಲ್ಲಿ ಕಾಣದ ಬೀಜವೊಂದಿದೆ ಅಂದುಕೊಂಡಿದ್ದರಿಂದಲೇ ಇಷ್ಟು ಪಂಚಾಯಿತಿಯಲ್ಲವೇ? ಅದನ್ನು ತೆಗೆದುಬಿಡಿ ಸ್ವಾಮಿ. ಅಂದಾಗ  ಯಾವುದು ಬೆಳೆಯಬೇಕು ಎಂಬುದು ಪ್ರಶ್ನೆಯಾಗುತ್ತದೆ. ಹಾಗೆ ದೇವರನ್ನು ಜೀವದ ಬೇರಾಗಿ, ಬೀಜವಾಗಿ ತಮ್ಮ ಅನುಭವದಿಂದ ಕಂಡ ಮಹರ್ಷಿಗಳ ನಿರ್ಣಯವೇ ಇಲ್ಲಿ ಪ್ರಮಾಣವಾಗುತ್ತದೆ.

ಜೀವನದಲ್ಲಿ ನಮ್ಮನ್ನು ಕಾಪಾಡಿಕೊಂಡು ಗುರಿಯವರೆಗೂ ತಲುಪಿಸಲೊಂದು ನೇತೃತ್ವ ಬೇಕಾಗುತ್ತದೆ. ಪ್ರಪಂಚದಲ್ಲಿ ಯಾವ ಕೆಲಸಕ್ಕಾದರೂ ಒಂದು ನೇತೃತ್ವವಿರಲೇ ಬೇಕಾಗುತ್ತದೆ. ದೇವರು ಎನ್ನುವ ವಿಷಯವನ್ನು ಮುಂದುವರೆಸಲು ಇದು ಭದ್ರವಾದ ಬುನಾದಿಯಾಗಿದೆ.

ಉದಾಹರಣೆಗೆ ಒಂದು ಉದ್ಯಮ ಪ್ರಾರಂಭವಾಗುತ್ತದೆ. ಅದಕ್ಕೊಂದು ಕಾರ್ಖಾನೆ. ಕಚೇರಿ, ಕೆಲಸಗಾರರು ಎಲ್ಲವೂ ಸೇರಿಕೊಳ್ಳುತ್ತದೆ. ಆ ಉದ್ಯಮ ಆರಂಭಿಸಿದ ಒಬ್ಬ ಪ್ರಧಾನ ನಿರ್ದೇಶಕ(MD) ಇರುತ್ತಾನೆ. ಅವನು ಇಲ್ಲಿ ಯಾವುದನ್ನು ತಯಾರಿಸಬೇಕು ಎನ್ನುವ ಆಶಯವನ್ನಿಟ್ಟುಕೊಂಡಿದ್ದಾನೋ ಅದನ್ನು ಜಾರಿಗೊಳಿಸಲು ಬೇಕಾದ ಕೆಲಸಗಾರರೇ ಅಲ್ಲಿ ಬೇಕಾಗುತ್ತಾರೆ. ಹಾಗೆ ಪ್ರಧಾನನಿರ್ದೇಶಕನ ಅಭಿಪ್ರಾಯವನ್ನು ನಡೆಸುವ ಇತರ ನಿರ್ದೇಶಕರು ಬೇಕಾಗುತ್ತಾರೆ. ಆ ನಿರ್ದೇಶಕರು ಪ್ರಧಾನ ನಿರ್ದೇಶಕನ  ಜೊತೆಯಲ್ಲಿ ಐಕ್ಯವನ್ನು ಸಂಪಾದಿಸಿಕೊಂಡಿರಬೇಕು. ಅವನ ಹೃದಯವನ್ನು ಅರ್ಥ ಮಾಡಿಕೊಂಡಿರಬೇಕು. ಅಂತಹ ಡೈರೆಕ್ಟರ್ ಗಳು ಸೇರಿ ಸಾವಿರಾರು ಜನರನ್ನು ಕೆಲಸಕ್ಕೆ ತೆಗೆದುಕೊಂಡರೆ ಆ ಉದ್ಯಮ ನಿರ್ಮಾಪಕನ ಅಭಿಪ್ರಾಯವನ್ನು ಅಷ್ಟೂ ಜನರಿಗೂ ತಲುಪಿ ಅವರೆಲ್ಲರೂ ಅದನ್ನು ನಿರ್ವಹಿಸುವಂತಿರಬೇಕು.

ಆ ಉದ್ಯಮ ದೊಡ್ಡದಾಗಿ ಬೆಳೆದು ಅದರಲ್ಲಿ ಸಾವಿರಾರು ಕೆಲಸಗಾರರು ಕೆಲಸಮಾಡುತ್ತಿದ್ದು ಅವರಿಗೆಲ್ಲಾ ನಿರ್ದೇಶಕನ ಪರಿಚಯ ಇಲ್ಲವೆಂದ ಮಾತ್ರಕ್ಕೆ ಆ ಉದ್ಯಮಕ್ಕೆ ಮೂಲವಾಗಿ ನಿರ್ದೇಶಕರೇ ಇಲ್ಲ ಎನ್ನಲಾಗುವುದೇ?  ಶ್ರೀರಂಗ ಮಹಾಗುರುಗಳು ಒಂದು ಉದಾಹರಣೆ ಕೊಡುತ್ತಿದ್ದರು- ಮೈಸೂರಿನ ಕನ್ನಂಬಾಡಿ ಕಟ್ಟೆ ಅಣೆಕಟ್ಟು ಮೊದಲು ಶ್ರೀ ವಿಶ್ವೇಶ್ವರಯ್ಯನವರ ತಲೆಯಲ್ಲಿ ನಿರ್ಮಾಣವಾಯಿತು ಎಂದು. ಅವರ ತಲೆಯಲ್ಲಿ ಸಿಮೆಂಟ್, ಜಲ್ಲಿ, ಮರಳು ಏನೂ ಇಲ್ಲ. ಹಾಗೆಂದೇ ಈ ಮಾತಿಗೆ ಅರ್ಥವಿಲ್ಲ ಎನ್ನಬಹುದೇ? ಇಲ್ಲ. ಅವರ ತಲೆಯಲ್ಲಿ ಆ ಅಣೆಕಟ್ಟಿನ ಪ್ಲಾನ್ ಉಂಟಾಗದಿದ್ದರೆ ಅವರು ಅದನ್ನು ಹೀಗೆ ನಿರ್ಮಿಸಲಾಗುತ್ತಿರಲಿಲ್ಲ ಅಲ್ಲವೇ? ಹಾಗೆಂದು ಅಲ್ಲಿ ಸಿಮೆಂಟ್, ಮರಳಿನಿಂದ ಗಾರೆ ಕೆಲಸ ಮಾಡಿದವರಿಗೆಲ್ಲ ವಿಶ್ವೇಶ್ವರಯ್ಯನವರ ಪರಿಚಯ ಇರಬೇಕೆಂದೇನೂ ಇಲ್ಲ. ಹಾಗೆ ಪರಿಚಯ ಇಲ್ಲವೆಂದ ಮಾತ್ರಕ್ಕೆ ವಿಶ್ವೇಶ್ವರಯ್ಯ ಇರಲೇ ಇಲ್ಲ, ಅವರು ಈ ಅಣೆಕಟ್ಟನ್ನು ನಿರ್ಮಿಸಿಯೇ ಇಲ್ಲ ಎನ್ನಲಾದೀತೇ?

ದೇವರ ವಿಷಯವೂ ಹಾಗೇ. ಇಡೀ ಸೃಷ್ಟಿಯ ಹಿಂಬದಿಯ ಚೈತನ್ಯವಾಗಿ ಅವನು ಬೆಳಗುತ್ತಿದ್ದಾನೆ. ತನ್ನ ಆಶಯದಂತೆ ಸೃಷ್ಟಿ ನಡೆಯಲು ಬೇಕಾದಂತೆ ಅವನ ವಿಭೂತಿಗಳಾಗಿ ದೇವಾನುದೇವತೆಗಳ ಸ್ತೋಮವನ್ನೇ ಇಟ್ಟುಕೊಂಡಿದ್ದಾನೆ ಎಂಬುದು ಅವನನ್ನು, ಅವನ ಸೃಷ್ಟಿ ರಹಸ್ಯವನ್ನು  ತಮ್ಮ ತಪಸ್ಯೆಯಿಂದ ಕಂಡು ಅನುಭವಿಸಿದ ಈ ದೇಶದ ಮಹರ್ಷಿಗಳ ಮಾತು. ಅವನು ನಮ್ಮ ಇಂದ್ರಿಯಗಳೆಲ್ಲದರ ಹಿಂದಿನ ಶಕ್ತಿಯಾಗಿ ಇದ್ದೇ ಇದ್ದಾನೆ. ಅವನಿಲ್ಲ ಎನ್ನಲೂ ಸಹ ಅವನ ಶಕ್ತಿಯೇ ಉಪಯೋಗವಾಗುತ್ತಿದೆ. ನಮಗೆ ಅವನ ಪರಿಚಯವಿಲ್ಲ ಎಂದ ಮಾತ್ರಕ್ಕೆ ಅವನು ಇಲ್ಲವೇ ಇಲ್ಲ ಎನ್ನುವುದು ಮೂರ್ಖತನ. ಎಲ್ಲರ ತಲೆಯೂ ಅವನ ಶಕ್ತಿಯಿಂದಲೇ ಕೆಲಸ ಮಾಡುವುದು. ತಲೆಯನ್ನು ಸುಶಿಕ್ಷಿತವಾಗಿ ಬೆಳೆಸಿಕೊಂಡಾಗ ಅವನ ಆಶಯದಂತೆ ನೆಮ್ಮದಿಯ ಜೀವನ. ಅದಿಲ್ಲವಾದರೆ ಅವನ ಶಕ್ತಿಯನ್ನೇ ಹೇಗುಹೇಗೋ ಬಳಸಿ ಕಡೆಯಲ್ಲಿ ಆ ಶಕ್ತಿಯೇ ಇಲ್ಲ ಎಂಬ ಬೇಜವಾಬ್ದಾರಿತನದ ಮಾತು.

ನ ಶಕ್ಯಃ ಚಕ್ಷುಷಾ ದ್ರಷ್ಟುಂ ದೇಹೇ ಸೂಕ್ಷ್ಮತಮೋ ವಿಭು:- ನಮ್ಮಲ್ಲಿ ಸೂಕ್ಷ್ಮತಮವಾಗಿ ಬೆಳಗುತ್ತಿರುವ ಆ ಚೈತನ್ಯವನ್ನು ಬರಿಯ ನಮ್ಮ ಚರ್ಮ ಚಕ್ಷುಸ್ಸಿನಿಂದ ನೋಡಲಾಗದು ಎಂದು ಅವರೇ ಸಾರಿದ್ದಾರೆ. ಆದರೆ "ದೃಶ್ಯತೇ ಜ್ಞಾನಚಕ್ಷುರ್ಭಿ: ತಪಶ್ಚಕ್ಷುರ್ಭಿರೇವ ಚ"- ಜ್ಞಾನದ ಕಣ್ಣಿನಿಂದ, ತಪಸ್ಸಿನ ಕಣ್ಣಿನಿಂದ ಅವನನ್ನು ನೋಡಬಹುದು ಎಂದೂ ಪಕ್ಕದಲ್ಲೇ ಹೇಳಿದ್ದಾರೆ. ಅಂತಹ ತಪಸ್ಸು, ತತ್ಪರಿಣಾಮದಿಂದ ಲಭಿಸಿದ ಜ್ಞಾನದ ಕಣ್ಣಿನಿಂದ ನೋಡಲು, ನೋಡಿ ಅಮಿತವಾದ ಆನಂದವನ್ನು ಅನುಭವಿಸಲು ಸಾಧ್ಯ ಎಂಬ ಘೋಷಣೆ ಅವರದು. ಕಣ್ಣಿನ ದೃಷ್ಟಿಗೆ ಎಟುಕದ ಸೂಕ್ಷ್ಮವಾದ ಭೌತಿಕ ಪದಾರ್ಥವನ್ನು ನೋಡಬೇಕಾದರೆ ನಾವು ಸೂಕ್ಷ್ಮದರ್ಶಕವನ್ನು ಉಪಯೋಗಿಸಬೇಕಿದೆ. ಎಂದಮೇಲೆ ಅಭೌತಿಕವಾಗಿ, ಇಂದ್ರಿಯಾತೀತವಾಗಿ ಬೆಳಗುವ ದೇವರನ್ನು ಬರಿಗಣ್ಣಿಂದ ನೋಡಬಯಸಿದರೆ ಹೇಗೆ? ಅದಕ್ಕೆ ಬೇಕಾದ ತಪಸ್ಸಿನ ಕಣ್ಣುಗಳನ್ನು ಜ್ಞಾನಿಗಳ ಮಾರ್ಗದರ್ಶನದಿಂದ ಸಂಪಾದಿಸಿ ಅನುಭವಿಸಬೇಕಾದ ವಿಷಯವದು.

ನಾವು ದೇವರು ಇದ್ದಾನೆ ಎನ್ನಲಿ, ಇಲ್ಲ ಎನ್ನಲಿ ಅವನಿರುವುದು ವಸ್ತುಸ್ಥಿತಿ. ಶ್ರೀ ರಂಗಪ್ರಿಯ ಸ್ವಾಮಿಗಳು ತಮಾಷೆಯಾಗಿ ಹೇಳಿದಂತೆ-ಇಷ್ಟು ಜನ ನಾನಿಲ್ಲ ಎನ್ನುತ್ತಿದ್ದಾರಲ್ಲ ಎಂದು ಅವನೇನೂ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ. ವಿಶ್ವ ಚೈತನ್ಯ ಶಕ್ತಿಯಾಗಿ ಅವನು ಎಂದೆಂದೂ ಇದ್ದಾನೆ ಎಂಬುದು ಅವನನ್ನು ಸದಾ ಅನುಭವಿಸುತ್ತಿರುವ ಜ್ಞಾನಿಗಳ ಅನುಭವದ ಮಾತು. ನಮಗೆ ನೆಮ್ಮದಿ, ಆನಂದ, ಬೇಕೆಂದಾದರೆ ಜ್ಞಾನಿಗಳ ಮಾರ್ಗದರ್ಶನದಿಂದ ಅವನನ್ನು ನೋಡುವ ಪ್ರಯತ್ನ ಮಾಡಿ ಕೃತಾರ್ಥರಾಗಬಹುದು. ಹಾಗೆ ನಮ್ಮ ಮೂಲವನ್ನು ಮುಟ್ಟಿ ಬಾಳಿದಾಗ  ಪರಿಷ್ಕೃತವಾದ ಜೀವನ ನಮ್ಮದಾಗುತ್ತದೆ. ಇಲ್ಲವೇ ಇತರ ಪ್ರಾಣಿಗಳಂತೆ ಕೇವಲ ಭೌತಿಕ ಸುಖ ದುಃಖಗಳನ್ನಷ್ಟೇ ಅನುಭವಿಸುತ್ತಾ ಅಪರಿಷ್ಕೃತ ಜೀವನ ನಡೆಸುತ್ತಿರಬಹುದು. ನಮ್ಮ ಜೀವನದಲ್ಲಿ ಏನು ಬೇಕು ಎಂದು ನಾವೇ ತೀರ್ಮಾನಿಸಬೇಕು. ನಮ್ಮ ಪೂಜ್ಯ ಪೂರ್ವಜರು ಅರುಹಿದ ದೇವರು ಎಂಬ ಆ ಪರಮ ಸತ್ಯದತ್ತ ನಮ್ಮ ಮನಸ್ಸುಗಳು ಹರಿಯಲಿ ಎಂದು ಪ್ರಾರ್ಥಿಸೋಣ.

ಸೂಚನೆ: 25/05/2023 ರಂದು ಈ ಲೇಖನ ವಿಜಯವಾಣಿಯ ಸಂಸ್ಕೃತಿ ದಲ್ಲಿ ಪ್ರಕಟವಾಗಿದೆ.

Sunday, May 21, 2023

ಅಷ್ಟಾಕ್ಷರೀ​ - 35 ಪದ್ಮಪತ್ರಮಿವಾಂಭಸಾ (Astakshara Darshana 35 Padmaptramivambhasa)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)




ಯಾರಾದರೂ ಅತ್ತರೆ ಸಂತೋಷವಾಗುವುದೇ? ಅಳದಿದ್ದರೆ ದುಃಖವಾಗುವುದೇ? ವಿವೇಕಿಯೂ ಶಾಂತಸ್ವಭಾವದವನೂ ಆದವನು "ಸರ್ವೇಽಪಿ ಸುಖಿನಃ ಸಂತು" ಎಲ್ಲರೂ ಸುಖಿಗಳಾಗಿರಲಿ ಎಂದು ಆಶಿಸುತ್ತಾನೆ; ಅಷ್ಟೇ ಅಲ್ಲ, ಎಲ್ಲರೂ ನಿರಾಮಯರಾಗಿರಲೆನ್ನುತ್ತಾನೆ. ಆಮಯವೆಂದರೆ ರೋಗ. ರೋಗವಿಲ್ಲದವನು ನಿರಾಮಯ. ಅಲ್ಲಿಗದು, "ಯಾರಿಗೂ ಯಾವ ಕ್ಲೇಶವೂ ಬರದಿರಲಿ" ಎಂದು ಬಯಸುವುದೇ. ಇಷ್ಟಲ್ಲದೆ, ಎಲ್ಲರೂ ಒಳ್ಳೆಯದನ್ನೇ ಕಾಣಲಿ, ಯಾರಿಗೂ ದುಃಖವಾಗದಿರಲಿ - ಎಂದೂ ಇಚ್ಛಿಸುವುದೇ. ಪರರಿಗೆ ಕೇಡನ್ನರಸುವುದೇ?


ಅಳು ಬರುವುದು ದುಃಖದಿಂದಾಗಿ. ಹಾಗಿರಲು ಮತ್ತೊಬ್ಬರು ಅತ್ತರೆ ಸಂತೋಷಪಡುವವರುಂಟೇ? ಆದರೆ ಒಂದು ಸಂದರ್ಭದಲ್ಲಿ ಮಾತ್ರ ಅಳುವನ್ನು ಸ್ವಾಗತಿಸಲೇಬೇಕು: ಮಗು ಹುಟ್ಟಿದಾಗ. ಹುಟ್ಟಿದೊಡನೆ ಮಗುವೇನಾದರೂ ಅಳಲಿಲ್ಲವೋ, ಡಾಕ್ಟರೂ ಗಾಬರಿಪಡುವವರೇ. ಪ್ರಯತ್ನಪಟ್ಟಾದರೂ ಆಗ ಮಗುವನ್ನು ಬೇಗನೆ ಅಳಿಸಬೇಕು! ಮಗುವು ಅತ್ತ ಆ ಘಳಿಗೆಯಿಂದಲೇ ಅದರ ಶ್ವಾಸಕ್ರಿಯೆಯು ಆರಂಭವಾಯಿತೆಂಬ ಲೆಕ್ಕ. ಉಸಿರಾಟವೇ ಮೊದಲ ಕ್ರಿಯೆ.


ಈ ಕ್ರಿಯೆಯೇ ಜೀವವಿರುವುದರ ಲಕ್ಷಣವೂ: ಉಸಿರಾಟವು ಮುಗಿಯಿತೆಂದರೆ ಜೀವಿತವೇ ಮುಗಿಯಿತು! ಹೀಗೆ ಆ ಪ್ರಥಮಶ್ವಾಸದೊಂದಿಗೆ ಆರಂಭಗೊಂಡ ಜೀವನವು ಕೊನೆಗೊಳ್ಳುವುದು ಶ್ವಾಸಕ್ರಿಯೆಯು ಕೊನೆಗೊಂಡಾಗಲೇ. ಅಲ್ಲಿಗೆ, ಮನುಷ್ಯನು ಹುಟ್ಟಿದಾಗಿನಿಂದ ಸಾಯುವವರೆಗೆ ಸಕ್ರಿಯನೇ ಆಗಿರುತ್ತಾನೆ. ನಿದ್ದೆ- ಮೂರ್ಛೆಗಳಲ್ಲಿ ಸಹ ಉಸಿರಾಟವೆಂಬ ಕ್ರಿಯೆಯು ಮಾತ್ರ ವಿಶ್ರಾಂತಿಯಿಲ್ಲದೆ ಸಾಗುವುದೇ. 


ಹೀಗಾಗಿ, ನಿಷ್ಕ್ರಿಯರಾಗಿದ್ದಾರೆಂದು ಯಾರನ್ನನ್ನಲೂ ಸಾಧ್ಯವೇ ಇಲ್ಲ. ದೇಹದಿಂದಲೋ ಮನಸ್ಸಿನಿಂದಲೋ ಕ್ರಿಯಾಕಲಾಪಗಳು ಎಡೆಬಿಡದೆ ನಡೆಯುತ್ತಲೇ ಇರುತ್ತವೆ. ಯೋಗಶಾಸ್ತ್ರದ ದೃಷ್ಟಿಯಿಂದ ಹೇಳುವುದಾದರೆ, ನಮ್ಮ ಶ್ವಾಸಕ್ರಿಯಾಪ್ರಕಾರವೇ ದೇಹ-ಮನಸ್ಸುಗಳ ಕ್ರಿಯೆಗಳನ್ನು ನಿಯಂತ್ರಿಸುವುದು. ಆ ವಿಷಯವಂತಿರಲಿ.


ನಮ್ಮ ಚಿತ್ತ-ಶರೀರಗಳು ನಾವೆಚ್ಚರವಾಗಿರುವಾಗಲಂತೂ ಒಂದು ಕ್ಷಣವೂ ಸುಮ್ಮನಿರಲಾರವು. ಹೀಗಾಗಿ ಒಂದಿಲ್ಲೊಂದು ಕರ್ಮಗಳಲ್ಲಿ ಸರ್ವದಾ ನಾವು ವ್ಯಗ್ರರೇ. ಎಷ್ಟೋ ವೇಳೆ ನಾವು ಸಂಕಲ್ಪಪೂರ್ವಕವಾಗಿ ಮಾಡುತ್ತೇವೆಂಬುದು ಸಹ ಇರುವುದಿಲ್ಲ. ಪೂರ್ವವಾಸನಾನುಸಾರ, ನಮ್ಮ ನಿಯಂತ್ರಣವಿಲ್ಲದೆಯೇ, ಏನೇನೋ ಕರ್ಮಗಳು ನಮ್ಮಿಂದ ಘಟಿತವಾಗಿಬಿಡುವುದೂ ಉಂಟು. ಹೀಗಾಗಿ ನಾವು "ಅವಶ"ರಾಗಿಯೂ ನಾನಾಕರ್ಮಗಳನ್ನು ಮಾಡುತ್ತಿರುತ್ತೇವೆ. ಸಂಕಲ್ಪಪೂರ್ವಕವಾಗಿ ಮಾಡುವುದಂತೂ ಇದ್ದದ್ದೇ.


ಕೆಲವೊಮ್ಮೆ ನಮ್ಮ ಸಂಕಲ್ಪದಲ್ಲೇ ದೋಷಮೂಡುತ್ತದೆ. ಬಂಧುವೋ ಮಿತ್ರನೋ ಹೆಚ್ಚಾದ ಏಳ್ಗೆಯನ್ನು ಸಾಧಿಸಿದಾಗ ಉರಿದುಕೊಳ್ಳುವವರಿರುವುದಿಲ್ಲವೇ? ಯುಧಿಷ್ಠಿರನ ರಾಜಸೂಯಯಾಗದಲ್ಲಿ ಕಪ್ಪ-ಕಾಣಿಕೆಗಳನ್ನೆಣಿಸುವ ಕಾರ್ಯದಲ್ಲಿ ತೊಡಗಿದ ದುರ್ಯೋಧನನು ಅದೆಷ್ಟು ಕರುಬಿದನು, ಅದೆಷ್ಟು ಕೊರಗಿದನು! ಈ ಕರುಬಾಟ-ಕೊರಗಾಟಗಳು ಮಿತಿಮೀರಿದಲ್ಲಿ, ಬರೀ ಕೇಡು ಬಗೆಯುವುದಿರಲಿ, ಹತ್ಯೆಮಾಡಲೂ ಹೇಸದವರುಂಟು! ದುಷ್ಟಸಂಕಲ್ಪ: ನಿಕೃಷ್ಟಕಾರ್ಯ. ಆ ಯಾಗದ ವಿಷಯ ಬಿಡಿ. ಪಾಂಡವರು ಚಿಕ್ಕವರಾಗಿದ್ದಾಗಲೂ ಕೌರವರಿತ್ತ ಕಿರಿಕಿರಿಗಳೇನು ಕಿರಿದಾದವೇ? ದುರಾಲೋಚನೆಯ ದೂರಾಲೋಚನೆಗಳೂ ಸತತವಾಗಿದ್ದವೇ.


ದುಸ್ಸಂಕಲ್ಪಗಳಂತೆಯೇ ಸತ್ಸಂಕಲ್ಪಗಳೂ ಫಲಕಾರಿಯೇ: ಸತ್ಕಾರ್ಯಗಳಿಗವು ಪ್ರೇರಕ. ಶಿಬಿ-ದಧೀಚಿಗಳ ಮಹಾತ್ಯಾಗದ ಹಿಂದಿರುವ ಸಂಕಲ್ಪವೇನು ಸಾಮಾನ್ಯವಾದುದೇ? ಇವೆಲ್ಲದರ ಸಾರವೆಂದರೆ, ನಾವು ಮಾಡುವ ಕರ್ಮಗಳೆಲ್ಲಾ ಪುಣ್ಯಸಂಪಾದನೆಗೋ ಪಾಪಸಂಪಾದನೆಗೋ ಸದಾ ನಮ್ಮನ್ನು ಈಡುಮಾಡುತ್ತಿರತಕ್ಕವೇ - ನಮಗೆ ತಿಳಿದಿದ್ದರೂ, ತಿಳಿಯದಿದ್ದರೂ!


ಪಾಪದ ಬೀಜಕ್ಕೆ ದುಃಖವೇ ಫಲವಲ್ಲವೇ? ಹಾಗಾದರೆ ದುಃಖವು ಬೇಡವೆನ್ನುವರು ಪಾಪಸಂಕಲ್ಪಗಳೇ ಮೂಡದಿರುವಂತೇನನ್ನಾದರೂ ಮಾಡಬೇಕು. ಅಲ್ಲದೆ, ಸತ್ಸಂಕಲ್ಪಗಳಿದ್ದಾಗಲೂ ನಮ್ಮಿಂದ ಅಚಿಂತಿತ-ಪಾಪಕೃತ್ಯಗಳು ಘಟಿಸಿಬಿಡಬಹುದು! ಹಾಗಾಗುವುದಿದ್ದಲ್ಲಿ ಪಾಪಲೇಪವಾಗದಂತಾಗಲು ಏನಾದರೂ ಉಪಾಯವುಂಟೇ?


ಉಂಟೆನ್ನುತ್ತದೆ ಗೀತೆ, ಸುಂದರವಾದೊಂದು ಉಪಮೆಯೊಂದಿಗೆ: ಕಮಲದೆಲೆಗೆ ನೀರಂಟೀತೇ?  ಹಾಗೆಯೇ, ಪಾಪವಂಟದಂತಿರುವುದೂ ಶಕ್ಯ. ಹೇಗೆ? ಕರ್ಮಗಳನ್ನು ಬ್ರಹ್ಮದಲ್ಲಿಟ್ಟು, ಸಂಗವನ್ನು ತೊರೆದು, ಕರ್ಮ ಮಾಡಿದಲ್ಲಿ- ಎಂದಲ್ಲಿ ಹೇಳಿದೆ. 


ಈ ಗೀತೋಕ್ತಿಗೆ ನಾನಾವ್ಯಾಖ್ಯಾನಗಳಿದ್ದರೂ, ಯಾರೊಬ್ಬರೂ ಕೊಟ್ಟಿಲ್ಲದ ಸರಳಸುಂದರ ವಿವರಣೆಯೊಂದನ್ನು ಶ್ರೀರಂಗಮಹಾಗುರುಗಳು ಕೊಟ್ಟಿದ್ದರು. ಪೂರ್ಣಶ್ಲೋಕಕ್ಕೂ ಶ್ಲೋಕಸಂದರ್ಭಕ್ಕೂ ಸಲ್ಲುವ ಸಮಾಧಾನವದು; ಉಪಮೆಯ ಅಂತರಂಗದ ಸೊಬಗಿಗೆ ಹಿಡಿದ ಕನ್ನಡಿಯದು.


ಕಮಲದಳಕ್ಕೆ ನೀರಂಟದೇಕೆಂದರೆ, ಪದ್ಮಪತ್ರದಲ್ಲಿ ಒಂದು ಬಗೆಯ 'ಸ್ನೇಹ'ವಿರುತ್ತದೆ. "ಸ್ನೇಹ"ವೆಂಬುದಕ್ಕೆ ಜಿಡ್ಡು ಎಂಬರ್ಥವೂ ಉಂಟು; ನೀರಿನ ಅಂಟುಂಟಾಗದಂತೆ ಈ ಸ್ನೇಹವು "ಕಾಪಾಡುತ್ತದೆ". ಹಾಗೆಯೇ ಪಾಪಲೇಪವೇರ್ಪಡದಿರಲು ಬೇಕಾದುದೆಂದರೆ ಭಗವಂತನೊಂದಿಗಿನ ಸ್ನೇಹ. ಅದನ್ನಿಟ್ಟುಕೊಂಡವನಿಗೆ ಪಾಪಮಾತ್ರವೇನು, ಪುಣ್ಯಲೇಪವೂ ಏರ್ಪಡದು! ಸರ್ವ-ಸುಕೃತ-ದುಷ್ಕೃತ(=ಪುಣ್ಯ-ಪಾಪ)ಗಳನ್ನೂ ಮೀರಿರುವುದಲ್ಲವೇ ಬ್ರಾಹ್ಮೀಸ್ಥಿತಿ?: ಅದುವೇ ಜೀವನದ ಚರಮಲಕ್ಷ್ಯ.


ಆ ಸ್ಥಿತಿಯತ್ತ ಸಾಗಲು, ಕರ್ಮಗಳನ್ನು ನಾವು ಅನವರತ ಮಾಡುತ್ತಿದ್ದರೂ ಅವುಗಳಿಂದೇಳುವ ಪುಣ್ಯ-ಪಾಪಗಳ ಅಂಟು(ಕಗ್ಗಂಟು)ಗಳಿಂದ ತಪ್ಪಿಸಿಕೊಳ್ಳಲು ಸು(ಲಭ)ಮಾರ್ಗವೆಂದರೆ: ಭಗವಂತನೊಂದಿಗಿನ ಹಾರ್ದಸ್ನೇಹ!


ಸೂಚನೆ: 15/05/2023 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ.

ಯಕ್ಷ ಪ್ರಶ್ನೆ38 (Yaksha prashne 38)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ 

(ಪ್ರತಿಕ್ರಿಯಿಸಿರಿ lekhana@ayvm.in)

ಪ್ರಶ್ನೆ – 37 ಸನಾತನ ಧರ್ಮವು ಯಾವುದು ?

ಉತ್ತರ - ಅಮೃತ

ಯಕ್ಷನು ಕೇಳುವ ಈ ಪ್ರಶ್ನೆಯಲ್ಲಿ ಸನಾತನ, ಧರ್ಮ ಮತ್ತು ಅಮೃತ ಎಂಬ ಮೂರು ಶಬ್ದಗಳನ್ನು ವಿವೇಚಿಸಬೇಕಾಗಿದೆ. ಸನಾತನ ಮತ್ತು ಧರ್ಮ ಎಂಬ ಪದಗಳು ಇಂದು ಸ್ಥಾನಭ್ರಷ್ಟವಾಗಿರುವುದು ಕಂಡುಬರುತ್ತದೆ. ಪದವೆಂದರೆ ಸ್ಥಾನ. ಪ್ರತಿಯೊಂದು ಶಬ್ದವೂ ಯಾವುದೋ ಒಂದು ಸ್ಥಾನದಿಂದಲೇ ಉತ್ಪತ್ತಿಯಾಗುತ್ತದೆ ಎಂಬುದು ಸಂಸ್ಕೃತಭಾಷಾಶಾಸ್ತ್ರದ ಪರಿಭಾಷೆ. ಭಾರತೀಯ ಮಹರ್ಷಿಗಳ ಅಂತರಂಗದ ಸಾಧನೆಯ ಬಲದಿಂದ ಅವರ ಅಂತಃಪ್ರಪಂಚದಲ್ಲಿ ಗೋಚರವಾಗುವ ಶಬ್ದಗಳ ಸಾಲಿಗೆ ಸೇರುವಂತಹ ಉತ್ಕೃಷ್ಟವಾದ ಶಬ್ದಗಳಿವು. ಆ ನೇರದಲ್ಲಿ ಈ ಶಬ್ದಗಳ ನಿಷ್ಕರ್ಷೆಯನ್ನು ಮಾಡಬೇಕಾಗುತ್ತದೆ. 

'ಸನಾತನ' ಎಂಬ ಪದಕ್ಕೆ ಶ್ರೀರಂಗಮಹಾಗುರುಗಳು ಮಹಾಭಾರತದ ಈ ಶ್ಲೋಕವನ್ನು ಹೇಳುತ್ತಿದ್ದರು. " ಸ ಹಿ ಲೋಕಯೋನಿಃ ಅಮೃತಸ್ಯ ಪದಂ ಸೂಕ್ಷ್ಮಂ ಪರಾಯಣಮ್ ಅಚಲಂ ಹಿ ಪದಮ್ । ತ್ಸಾಂಖ್ಯಯೋಗಿಭಿಃ ಉದಾಹೃತಂ ತಂ ಬುದ್ಧ್ಯಾ ಯತಾತ್ಮಭಿರಿದಂ ಸನಾತನಮ್ ॥" ಎಂಬುದಾಗಿ. ಅಂದರೆ ಯಾವುದು ಈ ಲೋಕದ ಉತ್ಪತ್ತಿಗೆ ಮೂಲಕಾರಣವಾಗಿದೆಯೋ, ಶಾಶ್ವತವಾದ ಸ್ಥಾನವೋ, ಅತ್ಯಂತ ಸೂಕ್ಷ್ಮವೂ, ಎಲ್ಲಾ ಜೀವಿಗಳ ಪರಮಗತಿಯೂ, ಅಚಲವಾದದ್ದೋ, ಸಾಂಖ್ಯ ಮತ್ತು ಯೋಗಶಾಸ್ತ್ರ ಕೋವಿದರಿಂದ ತಿಳಿಯಲ್ಪಟ್ಟಿದ್ದೋ, ಅದು 'ಸನಾತನ' ಎಂದು. ಅಂದರೆ ಪರಬ್ರಹ್ಮಪದವಿಯನ್ನೇ 'ಸನಾತನ' ಎಂದು ಕರೆದಿದ್ದಾರೆ. ಇದೇ ಪರಮೋತ್ಕೃಷ್ಟ ಧ್ಯೇಯವೆಂದು ಸಾರುವ ಕಂಡೀಶನ್ ಏನುಂಟೋ ಅದನ್ನು 'ಸನಾತನಧರ್ಮ' ಎನ್ನಬಹುದು. ಭಾರತೀಯ ಋಷಿ ಮಹರ್ಷಿಗಳ ಅಂತರಂಗಭೂಮಿಯಲ್ಲಿ ಯಾವುದು ಗೋಚರವಾಗುವಂತಹದ್ದೋ ಅದು ತಾನೆ ಸನಾತನ ಧರ್ಮ. ಅದು ತಾನೇ ಶಾಶ್ವತ, ಅದು ತಾನೇ ಅಮರ- ಮರಣವಿಲ್ಲದ್ದು, ಅಮೃತವಾದುದು!. 

ಸನಾತನ, ಧರ್ಮ ಮತ್ತು ಅಮೃತ ಎಂಬ ಮೂರು ಪದಗಳನ್ನು ವಿಶ್ಲೇಷಿಸಿದರೂ ಕೊನೆಯಲ್ಲಿ ಒಂದೇ ಅರ್ಥವು ಭಾಸವಾಗುತ್ತದೆ. ಇಲ್ಲಿ ಯಕ್ಷನ ಪ್ರಶ್ನೆಯ ಆಶಯವಿಷ್ಟೇ - ನಮ್ಮೆಲ್ಲರ ಜೀವನದ ಗುರಿ ಯಾವುದು? ಎಂದು. ಅದಕ್ಕೆ ಉತ್ತರ ಅಮೃತತ್ವದ ಸಂಪಾದನೆ ಎಂದು. ಧರ್ಮ ಎಂಬ ಶಬ್ದವು ಇಂದು ಮತ ಎಂಬ ಅರ್ಥದಲ್ಲಿ ಬಳಕೆಯಾಗಿತ್ತಿದೆ. ಆದರೆ ಅದು ಹಾಗಲ್ಲ. 'ಧಾರಣಾತ್ ಧರ್ಮಃ' ಎಂದರೆ ನಮ್ಮನ್ನೆಲ್ಲವನ್ನೂ ಯಾವುದು ಧರಿಸಿದೆಯೋ ಅಥವಾ ನಮ್ಮನ್ನು ಹಿಡಿದುಕೊಂಡಿದೆಯೋ ಅದು ಧರ್ಮವಾಗುತ್ತದೆ. ಯಾವುದೋ ಬಗೆಯ ಕಂಡೀಶನ್ ಇರುವುದರಿಂದ ಈ ಜಗತ್ತು ನಿಂತಿದೆ. ಅದು ಈ ಬ್ರಹ್ಮಾಂಡವನ್ನು, ಈ ಪ್ರಪಂಚದ ಸೃಷ್ಟಿ-ಸ್ಥಿತಿ-ಲಯವನ್ನು ನಿಯಂತ್ರಿಸುತ್ತಿದೆ. ಆ ಧಾರಕ ಅಥವಾ ನಿಯಂತ್ರಕ ಶಕ್ತಿಯನ್ನು 'ಧರ್ಮ' ಎಂದು ಕರೆಯಲಾಗುತ್ತದೆ. ಅದು ನಿತ್ಯವಾದುದು, ಶಾಶ್ವತವಾದುದು. ಅದಕ್ಕೆ ಮೃತಿ ಇಲ್ಲ. ಆದ್ದರಿಂದಲೇ ಅದು ಅಮರ-ಅಮೃತ. 

ನಮ್ಮ ದಿನನಿತ್ಯದ ಜೀವನವೂ ಇಂತಹದ್ದೇ ಒಂದು ಧಾರಕಶಕ್ತಿಯಿಂದ ನಡೆದುಕೊಂಡು ಬರುತ್ತಿದೆ. ಯಾವುದೋ ಒಂದು ಕಂಡೀಶನ್ ಇದ್ದರೆ ಶರೀರ ಹಾಗೇ ನಿಂತಿಕೊಳ್ಳಬಲ್ಲದು. ಕಣ್ಣು ನೋಡಬಲ್ಲದು. ಇವ್ವೆಲ್ಲದರ ಒಟ್ಟಾರೆಯಾದ ಪರಿವರ್ತಿತಗೊಳ್ಳಬಲ್ಲ ಸ್ಥಿತಿವಿಶೇಷದಿಂದ ಇದೇ ಶರೀರದಲ್ಲಿ ಅದಾವುದೋ ಧರ್ಮವನ್ನು ಅಂದರೆ ಸ್ಥಿತಿಯನ್ನು ಅನುಭವಿಸಬಹುದು. ಅದನ್ನೇ ಆನಂದ, ನೆಮ್ಮದಿ, ಶಾಂತಿ ಎಂದೆಲ್ಲಾ ಕರೆಯುತ್ತಾರೆ. ಇದು ಶಾಶ್ವತವಾದುದು, ಇದು ಸನಾತನವಾದುದು. ಪಾಪ-ಪುಣ್ಯಫಲಕ್ಕೂ ಮೀರಿದುದು, ಅಮೃತವಾದುದು, ನಾಶರಹಿತವಾದುದು. ಇದನ್ನೇ 'ಮೋಕ್ಷ' ಎಂದೂ ಕರೆಯುತ್ತಾರೆ. ಇದೇ ಪ್ರತಿ ಮಾನವನ ಜನ್ಮದ ಹಿಂದಿರುವ ರಹಸ್ಯವೂ ಹೌದು. ಇಂತಹ 'ಅಮರತ್ವವೇ ಸನಾತನ ಧರ್ಮ' ಎಂಬುದು ಯಕ್ಷಪ್ರಶ್ನೆಯ ಆಶಯವಾಗಿದೆ.    

ಸೂಚನೆ : 21/5/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.  

ವ್ಯಾಸ ವೀಕ್ಷಿತ - 38 ಕೆಣಕಿದುದೇಕೆ? – ಎಂಬ ಅರ್ಜುನಪ್ರಶ್ನೆಗೆ ಗಂಧರ್ವನ ಉತ್ತರ (Vyaasa Vikshita - 38 Kenakidudeke? - Emba Arjunaprashnege Gandharvana Uttara)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)

 

ತಮಗೆ ನಿಷ್ಕಾರಣವಾಗಿ ತೊಂದರೆ ಕೊಟ್ಟದ್ದೇಕೆ? - ಎಂಬುದಾಗಿ ಅರ್ಜುನನು ಕೇಳಿದ ಪ್ರಶ್ನೆಗೆ ಉತ್ತರವನ್ನು ಕೊಡುತ್ತಾ, ಗಂಧರ್ವನು ಮುಂದುವರೆದನು:

ಅರ್ಜುನನೇ, ನಿನ್ನ ಆಚಾರ್ಯರಾದ ದ್ರೋಣರನ್ನು ನಾನು ಬಲ್ಲೆ. ಅವರು ತ್ರಿಲೋಕವಿಶ್ರುತರು (ಮೂರು ಲೋಕಗಳಲ್ಲೂ ಕೀರ್ತಿಯನ್ನು ಪಡೆದವರು). ನಿಮ್ಮ ವಂಶವರ್ಧಕರಾದ ಪಿತೃಗಳನ್ನೂ ಬಲ್ಲೆ: ಧರ್ಮ, ವಾಯು, ಇಂದ್ರ, ಹಾಗೂ ಅಶ್ವಿನೀದೇವತೆಗಳಿಬ್ಬರು, ಹಾಗೂ ಪಾಂಡು - ಈ ಆರು ಮಂದಿಯನ್ನೂ ಬಲ್ಲೆ. ದೇವತೆಗಳಲ್ಲೂ ಮನುಷ್ಯರಲ್ಲೂ ಸತ್ತಮರು ಇವರು (ಸತ್+ತಮ = ಸತ್ತಮ; ಅತ್ಯಂತ-ಶ್ರೇಷ್ಠರು). ಭ್ರಾತೃಗಳಾದ ನೀವುಗಳೂ ಅಷ್ಟೇ. ಎಲ್ಲರೂ ದಿವ್ಯಾತ್ಮರು, ಮಹಾತ್ಮರು; ಶಸ್ತ್ರಧಾರಿಗಳಲ್ಲೆಲ್ಲಾ ಶ್ರೇಷ್ಠರು; ಹಾಗೂ ಶೂರರು ಮತ್ತು ಸುಚರಿತ-ವ್ರತರು (ಒಳ್ಳೆಯ ನಡತೆಯೆಂಬುದನ್ನು ವ್ರತವಾಗಿ ಉಳ್ಳವರು). ನಿಮ್ಮಗಳ ಉತ್ತಮವಾದ ಮನೋಬುದ್ಧಿಗಳನ್ನೂ ನಾ ಬಲ್ಲೆ.

ಹಾಗಿದ್ದರೂ ನಿಮ್ಮನ್ನು ಕೆಣಕಿದೆನೆಲ್ಲವೇ, ಅದಕ್ಕೆ ಕಾರಣವಿಷ್ಟೆ: ತನ್ನ ಸ್ತ್ರೀಯೊಡನೆ ಇರುವಾಗ ಯಾವನೇ ಪುರುಷನಾಗಲಿ ಬೇರೆ ಯಾರಾದರೂ ತಿರಸ್ಕಾರ ಮಾಡಿದರೆ ಅವರನ್ನು ಕ್ಷಮಿಸ. ಅದರಲ್ಲೂ ಬಾಹುಬಲವೆಂಬುದು ತನಗೆ ಹೆಚ್ಚಾಗಿದ್ದಾಗ ಹಾಗಾಗುವುದು ಸಹಜ. ನಾವಾದರೋ ಗಂಧರ್ವರು; ರಾತ್ರಿಯ ವೇಳೆ ನಮ್ಮ ಬಲವು ಬಹಳವೇ ವೃದ್ಧಿಹೊಂದುವುದು. ಆ ಕಾರಣಕ್ಕೇ, ಓ ಅರ್ಜುನನೇ, ಪತ್ನಿಯೊಡಗೂಡಿದ್ದ ನನಗೆ ಕೋಪಾವೇಶವುಂಟಾದದ್ದು.

ಹಾಗಿದ್ದೂ ನೀನು ನನ್ನನ್ನು ಸೋಲಿಸಿದೆಯಲ್ಲವೆ, ತಾಪತ್ಯವರ್ಧನನೇ! (ಹಾಗೆಂದರೇನು? - ಎಂಬುದನ್ನು ಮುಂದೆ ಆತನೇ ವಿವರಿಸುತ್ತಾನೆ). ಅದೂ ಏಕೆನ್ನು, ಹೇಳುತ್ತೇನೆ. ಬ್ರಹ್ಮಚರ್ಯವೆಂಬುದು ಶ್ರೇಷ್ಠವಾದ ಧರ್ಮ (ಬ್ರಹ್ಮಚರ್ಯಂ ಪರೋ ಧರ್ಮಃ). ನಿನ್ನಲ್ಲಿ ಈಗದು ದೃಢವಾಗಿದೆ. ಆ ಕಾರಣಕ್ಕಾಗಿ ನಾನು ನಿನಗೆ ಸೋಲಬೇಕಾಯಿತು. ಯಾವ ಕ್ಷತ್ರಿಯನೇ ಆಗಿರಲಿ, ಆತನು [ವಿವಾಹವಾಗಿದ್ದು] ಕಾಮವೃತ್ತನಾಗಿದ್ದಲ್ಲಿ (ಎಂದರೆ ಕಾಮಪ್ರಧಾನವಾದ ನಡತೆಯುಳ್ಳವನಾಗಿದ್ದಲ್ಲಿ), ಅಂತಹವನು ನನ್ನೊಂದಿಗೇನಾದರೂ ರಾತ್ರಿಯ ಹೊತ್ತು ಯುದ್ಧಕ್ಕೆ ಬಂದಲ್ಲಿ, ಆತ ಉಳಿಯಲೇ ಆರ. ಆದರೆ ಗೃಹಸ್ಥನಾದ ಕ್ಷತ್ರಿಯನು ಒಂದು ವೇಳೆ ಹಾಗಿದ್ದರೂ ಬ್ರಹ್ಮಪುರಸ್ಕೃತನಾಗಿದ್ದರೆ, ಎಂದರೆ ವಿಪ್ರನೊಬ್ಬನನ್ನು ಮುಂದಿಟ್ಟುಕೊಂಡು ಮುನ್ನಡೆಯುತ್ತಿದ್ದಲ್ಲಿ, ರಾತ್ರಿಸಂಚಾರಿಗಳಾದವರನ್ನೆಲ್ಲರನ್ನೂ ಜಯಿಸಬಲ್ಲ. ಏಕೆಂದರೆ ಆತನ ಹೊಣೆಯನ್ನು ಆ ಪುರೋಹಿತನು ವಹಿಸಿಕೊಂಡಿರುವನು.

ಆದ್ದರಿಂದಲೇ ಓ ತಾಪತ್ಯನೇ, ಯಾವುದೇ ಶ್ರೇಯಸ್ಸನ್ನು ಬಯಸುವುದಾದಲ್ಲಿ, ಅಂತಹ ಕಾರ್ಯದಲ್ಲಿ ಪುರೋಹಿತರನ್ನು ನೇಮಿಸಬೇಕು. ಪುರೋಹಿತರಾದರೂ ಹೇಗಿರಬೇಕು, ತಿಳಿದುಕೋ. ಅವರು ದಾಂತಾತ್ಮರಾಗಿರಬೇಕು (ಎಂದರೆ ದಮವನ್ನು ಹೊಂದಿರಬೇಕು; ದಮವೆಂದರೆ ಇಂದ್ರಿಯಜಯ). ಷಡಂಗಗಳಿಂದ ಕೂಡಿದ ವೇದದಲ್ಲಿ ಅವರು ನಿರತರಾಗಿರಬೇಕು (ಷಡಂಗಗಳೆಂದರೆ ಷಟ್-ಅಂಗಗಳು, ಆರು ಅವಯವಗಳು. ವೇದಕ್ಕೆ ಆರು ಅಂಗಗಳು. ಅವು ಶಿಕ್ಷಾ, ವ್ಯಾಕರಣ, ಛಂದಸ್ಸು, ನಿರುಕ್ತ, ಜ್ಯೌತಿಷ, ಹಾಗೂ ಕಲ್ಪ - ಎಂಬಿವು). ಅಲ್ಲದೇ ಅವರು ಶುದ್ಧರಾಗಿರಬೇಕು; ಸತ್ಯವಾದಿಗಳಾಗಿರಬೇಕು. ಧರ್ಮಾತ್ಮರಾಗಿರಬೇಕು; ಕೃತಾತ್ಮರಾಗಿರಬೇಕು (ಕೃತಾತ್ಮರೆಂದರೆ ಒಳ್ಳೆಯ ಸಂಸ್ಕಾರವನ್ನು ಹೊಂದಿರುವ ಮನಸ್ಸುಳ್ಳವರು).

ಇಂತಹ ಪುರೋಹಿತರು ಯಾವ ರಾಜನಿಗಿರುವರೋ, ಅಂತಹ ರಾಜನು ಜಯವನ್ನು ನಿಶ್ಚಯವಾಗಿ ಹೊಂದುವನು. (ಮರಣಾನಂತರ) ಸ್ವರ್ಗವನ್ನೂ ಹೊಂದುವನು. ಧರ್ಮಜ್ಞನೂ ವಾಗ್ಮಿಯೂ, ಶೀಲಸಂಪನ್ನನೂ ಶುದ್ಧನೂ ಆದ ಪುರೋಹಿತನಿದ್ದಲ್ಲಿ ಇವೆಲ್ಲವೂ ಉಂಟಾಗತಕ್ಕವೇ.

ಸೂಚನೆ : 21
/5/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.  

Saturday, May 20, 2023

ವಿಶ್ವಾಸಃ ಫಲದಾಯಕಃ (Visvasah Phaladayakah)


ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ 

(ಪ್ರತಿಕ್ರಿಯಿಸಿರಿ lekhana@ayvm.in)



ನಂಬಿಕೆ ಎಂಬ ವಿಷಯ ಹೇಗೆ ಬಂತು? ಅದರ ಆವಶ್ಯಕತೆ ಇದೆಯೇ? ಈ ನಂಬಿಕೆಯಿಂದಲೇ ಭಾರತೀಯರು ಅಲಸರಾದರು? ಭಾರತೀಯರು ಇಷ್ಟು ಹಿಂದುಳಿಯಲು ಈ ನಂಬಿಕೆಯೇ ಕಾರಣ? ಕಣ್ಣಿಗೆ ಕಾಣದ, ಮನಸ್ಸಿಗೂ ತೋಚದ ವಿಷಯದ ಬಗ್ಗೆ ನಂಬಿಕೆಯಿಂದ ಏನು ಪ್ರಯೋಜನ? ಇವೆಲ್ಲಾ ಪ್ರಶ್ನೆಗಳು ಈ ನಂಬಿಕೆಯ ಬಗ್ಗೆ ಬಂತು. ಈ ವಿಷಯದಲ್ಲಿ ನಮ್ಮ ಹಿರಿಯರು ಯಾವ ರೀತಿ ಅಂದುಕೊಂಡಿದ್ದರು? ಈ ನಂಬಿಕೆಯೆಂಬ ವಿಷಯದಿಂದ ನಮಗಾದ ಪ್ರಯೋಜನವಾದರೂ ಏನು ಎಂಬ ವಿಚಾರವನ್ನು ಇಲ್ಲಿ ವಿಮರ್ಶಿಸೋಣ. 


ನಂಬಿಕೆ ಅಥವಾ ವಿಶ್ವಾಸ ಎಂಬುದು ಕಾಣದಿರುವ ವಿಷಯದ ಮೇಲೇ ಬಂದಿರುವಂಥದ್ದು. ಕಾಣುವಂತಹದ್ದಾದರೆ ನಂಬಿಕೆ ಬೇಕಾ ? ಉದಾಹರಣೆಗೆ 'ಇಲ್ಲಿ ದೀಪ ಇದೆ.' ಇಂಬುದಕ್ಕೆ ನಂಬಿಕೆ ಬೇಕೆ? ಕೆಲವೊಂದು ವಿಷಯ ಈಗ ಕಾಣದೆ ಇರಬಹುದು. ಆದರೆ ಯಾವಾಗಲೂ ಕಾಣುವುದೇ ಇಲ್ಲವೆಂದು ಹೇಳಲಾಗದು. ಈಗ ಸೆಕೆಯನ್ನು ಅನುಭವಿಸುತ್ತಿದ್ದೇವೆ. ಆದರೆ ಇದು ಶಾಶ್ವತವಲ್ಲ. ಮುಂದೊಂದು ದಿನ ವಾತಾವರಣ ಬದಲಾಗುತ್ತದೆ. ಹಾಗಾದರೆ ಕಾಣದೇ ಇರುವಂತಹದ್ದು ಯಾವುದು? ದೇವರು. ಭೌತಿಕವಾದ ಇಂದ್ರಿಯಗಳಿಗೆ ಮತ್ತು ಮನಸ್ಸಿಗೆ ಯಾವುದೇ ಕಾರಣಕ್ಕೂ ಕಾಣಲು ಸಾಧ್ಯವೇ ಇಲ್ಲದಿರುವಂತಹದ್ದು. ಪರಬ್ರಹ್ಮವೆಂಬ ವಿಷಯ ಮಾತ್ರ ಯಾವ ಕಾಲಕ್ಕೂ ಯಾವುದೇ ಕಾರಣಕ್ಕೂ ಗೋಚರಿಸುವುದೇ ಇಲ್ಲ. ಆದ್ದರಿಂದ ನಂಬಿಕೆಗೆ ವಿಷಯವಾದದ್ದು ಇದೇ ತಾನೆ! ಕೆಲವೊಮ್ಮೆ ಕಾಣುವ ವಿಷಯವನ್ನೇ ನಂಬುತ್ತೇವೆ ಅಂದಮೇಲೆ ಕಾಣದಿರುವುದಕ್ಕೆ ನಂಬಿಕೆ ಬೇಕಲ್ಲವೆ? ನಮಗೆ 'ಇವನು ತಂದೆ' ಎಂದು ಹೇಗೆ ತಿಳಿಯಿತು? ನಾವೇನೂ ನೋಡಲಿಲ್ಲ. ಅಮ್ಮ ಹೇಳಿದ್ದರಿಂದ ತಿಳಿಯಿತು. ಅಮ್ಮ 'ಇವನು ನಿನ್ನ ಅಪ್ಪ' ಎಂದು ಮತ್ತೆ ಮತ್ತೆ ಹೇಳಿಸಿ 'ಇವನೇ ಅಪ್ಪ' ಎಂದು ವಿಶ್ವಾಸಪಡುತ್ತೇವೆ. ನಮ್ಮ ಬೆನ್ನು ನಮಗೆ ಕಾಣುತ್ತದೆಯೇ? ನಮಗೆ ಬೆನ್ನು ಇಲ್ಲವೆಂದರೆ ನಾವು ನಂಬುತ್ತೇವೆಯೇ? 'ಕದಾಚಿತ್ ಕುಪಿತಂ ಮಿತ್ರಂ ಗುಪ್ತದೋಷಂ ಪ್ರಕಾಶಯೇತ್' ಎಂಬ ಮಾತಿದೆ. ಎಂತಹ ಮಿತ್ರನೇ ಆದರೂ ಕೋಪ ಬಂದರೆ ತನ್ನ ಮಿತ್ರನ ಗುಟ್ಟನ್ನು ಬಯಲು ಮಾಡಬಹುದು. ಹಾಗಾಗಿ ಯಾರಲ್ಲೂ ವಿಶ್ವಾಸಪಡುವುದು ಯೋಗ್ಯವಲ್ಲ. ಅದಕ್ಕೆ ಅತಿವಿಶ್ವಾಸ ಎಂದೂ ಕರೆಯುತ್ತಾರೆ. ವಿಶ್ವಾಸವು ವಿವೇಕದಿಂದ ಕೂಡಿರಬೇಕು. ಅದಿಲ್ಲದಿದ್ದರೆ ಅಪಾಯ ನಿಶ್ಚಿತ.


ಕೆಲವೊಮ್ಮೆ ನಂಬಿಕೆಯ ಹೆಸರಿನಲ್ಲಿ ಮೂಢನಂಬಿಕೆಯೂ ನಮ್ಮನ್ನು ಆವರಿಸುತ್ತದೆ. ಯಾವುದು ಮೂಢನಂಬಿಕೆ? ಎಂಬುದನ್ನು ತಿಳಿಯುವುದೂ ಅಷ್ಟೇ ಕರ್ತವ್ಯವೂ ಕೂಡ. ಯಾವುದು ಕಾರ್ಯಕಾರಣಬದ್ಧವಲ್ಲವೋ ಅಥವಾ ಯಾವುದು ವಿಜ್ಞಾನಬದ್ಧವಲ್ಲವೋ ಅಥವಾ ಯಾವುದು ಶಾಸ್ತ್ರನಿರ್ಣೀತವಲ್ಲವೋ ಅದನ್ನು ತಾನೇ ಮೌಢ್ಯ ಎಂದು ಕರೆಯಬೇಕು. ಶಾಸ್ತ್ರವೆಂದರೆ ವಿಜ್ಞಾನ. ಅಲ್ಲಿ ಪ್ರಣೀತವಾದುದು ಎಂದಿಗೂ ಮೌಢ್ಯವಾಗಲಾರದು. ಅದು ಮೌಢ್ಯವೆಂದು ಭಾವಿಸಿದರೆ ಶಾಸ್ತ್ರವನ್ನು ತಿಳಿಯಲು ನಾವು ಮೂಢರಾಗಿದ್ದೇವೆ ಎಂಬುದೇ ನಿಶ್ಚಯ.  


ಭಾರತೀಯ ಸಂಸ್ಕೃತಿ ನಿಂತಿರುವುದೇ ವಿಶ್ವಾಸದ ಮೇಲೆ. ಸಂಪ್ರದಾಯ-ಪರಂಪರೆ-ಪದ್ಧತಿ ಇವೆಲ್ಲಕ್ಕೂ ಅರ್ಥ ಬರಬೇಕಾದರೆ ಅಲ್ಲಿ ನಂಬಿಕೆ ಬೇಕು. ಕಣ್ಣಿಗೆ ಕಾಣುವ ವಿಷಯಕ್ಕೆ ನಂಬಿಕೆ ಬೇಕು. ಒಳ್ಳೆಯ ಫಸಲು ಬರಬಹುದು ಎಂಬ ನಂಬಿಕೆಯಿಂದ ತಾನೆ ಬೀಜ ಬಿತ್ತುವುದು! ಪ್ರಕೃತಿವಿಕೋಪ ಬಂದರೆ?? ಯಾವುದೋ ಈತಿ ಬಾಧೆಗಳು ಬಂದು ಬೆಳೆ ನಾಶವಾಗಲೂ ಬಹುದು. ಭವಿಷ್ಯತ್ತಿನ ಆಪತ್ತಿಗೆ ಆಗುತ್ತದೆ ಎಂದು ಸಂಪತ್ತನ್ನು ರಕ್ಷಿಸುತ್ತೇವೆ. ಬ್ಯಾಂಕಿನಲ್ಲಿ ಶಾಶ್ವತನಿಧಿಯನ್ನು ಸ್ಥಾಪಿಸುತ್ತೇವೆ. ಇಲ್ಲಿ ನಂಬಿಕೆ ಮಾತ್ರ ವಿಷಯವಲ್ಲವೇ? ಬ್ಯಾಂಕು ಇರುತ್ತದೆ ಎಂಬ ಬಗ್ಗೆ ಯಾವ ಗ್ಯಾರಂಟಿ? ಮುಪ್ಪಿನಲ್ಲಿ ನಮಗೆ ಸಹಾಯವಾಗಬಹುದು ಎಂದು ಮಕ್ಕಳನ್ನು ನೋಡಿಕೊಳ್ಳುತ್ತೇವೆ. ಅವರು ಮುಪ್ಪಿನಲ್ಲ ಆಗಿಬರುತ್ತಾರೆ ಎಂಬುದಕ್ಕೆ ಯಾವ ಗ್ಯಾರಂಟಿ ಹೇಳಿ? ಇಲ್ಲಿ ನಮ್ಮ ಕರ್ತವ್ಯ ಎಂದು ಭಾವಿಸಬೇಕಷ್ಟೇ! ಯಾವುದೋ ರೋಗಶಮನಕ್ಕಾಗಿ ಶಾಂತಿಯಾಗವನ್ನು ಮಾಡುತ್ತೇವೆ. ಯಾವುದೋ ರೋಗನಿವಾರಣೆಗೋಸ್ಕರ ಔಷಧವನ್ನು ಸ್ವೀಕರಿಸುತ್ತೇವೆ. ಈ ಬಾಳಿನ ಉದ್ದಕ್ಕೂ ಸಂಗಾತಿಯಾಗುವಳು ಎಂದು ಕನ್ಯೆಯ ಕರಪಿಡಿಯುತ್ತೇವೆ. ಇವೆಲ್ಲವೂ ನಂಬಿಕೆಯ ಮೇಲೇ ನಿಂತಿವೆಯಲ್ಲವೇ? ಇವೆಲ್ಲವೂ ನಮ್ಮೆದುರಿಗೆ ಬಂದುನಿಲ್ಲುವ ಸಂಗತಿಗಳು. ಆದರೆ ಕಾಣದ ಸಂಗತಿಗಳಿಗೆ ವಿಶ್ವಾಸವೇ ಬೇಕಷ್ಟೇ. ಇಂತಹ ನಂಬಿಕೆಯ ಭವನದಲ್ಲಿ ತಂಪಾಗಿ ಬಾಳು ಸಾಗಿಸಿ ಬಾಳನ್ನು ಹಸನ ಮಾಡಿಕೊಂಡರು ನಮ್ಮ ಹಿರಿಯರು. ಅಸಾಧ್ಯವಾದುದನ್ನೇ ಸಾಧಿಸಿದರು. ತಪಸ್ಸನ್ನು ಆಚರಿಸಿದರು. ದೇವರನ್ನು ಕಂಡರು. ಶಾಂತಿಯನ್ನು ಅನುಭವಿಸಿದರು. ಲೋಕಕ್ಕೆಲ್ಲ ತಂಪಿನ ಅನುಭವವನ್ನು ಹಂಚಿದರು. ಇಂತಹ ಆಪ್ತರನ್ನು ನಂಬಿದರೆ ನಮ್ಮ ಜೀವನವನ್ನು ಹಸನಾಗಿಸಿಕೊಳ್ಳಬಹುದು. ನಾವೂ ನಮ್ಮ ಬಾಳಿನಲ್ಲಿ ಹಿರಿಯ ಸಾಧನೆಯನ್ನು ಮಾಡಬಹುದು. ಅಂದರೆ ಒಟ್ಟಾರೆ ಹೇಳುವುದಾದರೆ "ವಿಶ್ವಾಸಃ ಫಲದಾಯಕಃ"  ಅಷ್ಟೇ!


ಸೂಚನೆ: 18/05/2023 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ.

ನಮ್ಮ ಮನದ ಕೂಗು ಭಗವಂತನಿಗೆ ಕೇಳಿಸುವುದೇ?...(Namma Manada KUgu Bhagavantanige Kelisuvude?..)

ಲೇಖಕರು; ಸುಬ್ರಹ್ಮಣ್ಯ ಸೋಮಯಾಜಿ 
(ಪ್ರತಿಕ್ರಿಯಿಸಿರಿ lekhana@ayvm.in)



ಮಹಾಭಾರತದ ಪ್ರಸಂಗ. ದುರ್ಯೋಧನಾದಿ ದುಷ್ಟರು ಪರಮ ಪಾವನೆಯಾದ ದ್ರೌಪದಿಯ ವಸ್ತ್ರಕ್ಕೆ ಕೈಹಾಕಿದಾಗ, ಗಂಡಂದಿರೆಲ್ಲ ಯಾವುದೋ ಧರ್ಮಪ್ರಜ್ಞೆಯ ಅಡ್ಡಗೋಡೆಯಿಂದ ಅಸಹಾಯಕರಾಗಿ ಕುಳಿತಿದ್ದಾರೆ. ಆಗ ಪೂಜ್ಯಳಾದ ದ್ರೌಪದಿ ತನ್ನೆಲ್ಲ ಭಾವಗಳನ್ನೂ ಒಟ್ಟುಗೂಡಿಸಿ ಸರ್ವಸಮರ್ಪಣ ಭಾವದಿಂದ "ಗೋವಿಂದಾ" ಎಂದು ಭಗವಂತನನ್ನು ಸಹಾಯಕ್ಕಾಗಿ ಅಂಗಲಾಚಿದಳು. ಹಸ್ತಿನಾವತಿ ಎಲ್ಲಿ? ದ್ವಾರಕೆ ಎಲ್ಲಿ? ಕೂಗಳತೆಯೇ, ಮಾರಳತೆಯೇ ಎನ್ನುತ್ತಾರೆ ದಾಸರು. ಅದು ಜೀವ ನದಿಯೊಂದು ರಭಸದಿಂದ ಸಮುದ್ರವನ್ನು ಸೇರುವ ಕೂಗು. ಅನ್ಯಥಾ ಶರಣಂ ನಾಸ್ತಿ ಎಂಬ ಸರ್ವ ಶರಣಾಗತ ಭಾವದ ಕೂಗು. ಆ ಕೂಗಿನಲ್ಲಿ ನಿನ್ನನ್ನು ಬಿಟ್ಟು ಇನ್ನಾವುದನ್ನೂ ನಾನು ನಿರೀಕ್ಷಿಸುತ್ತಿಲ್ಲವೆಂಬ ನಿಶ್ಚಯ. ಭಗವಂತನಲ್ಲಿ ಏಕಾಂತಿಕ ನಿಷ್ಠೆ. ಇಂದ್ರಿಯ, ಮನೋ ಬುದ್ಧಿಗಳೆಲ್ಲವೂ ಜೀವದೊಡನೆ ಸೇರಿ ಏಕಮುಖವಾಗಿ ಏಕಮಾತ್ರ ಬಂಧುವನ್ನಾಗಿ ಭಗವಂತನನ್ನು ಭಾವಿಸಿ ಕರೆದ ಕೂಗದು. ಅದು ನೇರವಾಗಿ, ಯಾವ ಅಡೆತಡೆಗಳೂ ಇಲ್ಲದೇ ಭಗವಂತನ ಹೃದಯವನ್ನು ಮುಟ್ಟಿದೆ. ವಸ್ತ್ರದಾನ ಮಾಡಿ ಅವಳನ್ನು ಆ ಕ್ಷಣದಲ್ಲಿ ಕಾಪಾಡಿದ್ದೂ ಆಗಿದೆ. ಆದರೆ ಮುಂದೊಂದು ಸಂದರ್ಭದಲ್ಲಿ ಶ್ರೀಕೃಷ್ಣನು ಹೃದಯಕ್ಕೆ ನಾಟಿದ ಆ ಕೂಗನ್ನು ನೆನಪಿಸಿಕೊಂಡು ಆಡುವ ಮಾತು ಅದೆಷ್ಟು ರೋಮಾಂಚಕಾರಿ!

ಗೋವಿಂದೇತಿ ಯದಾsಕ್ರಂದತ್ ಕೃಷ್ಣಾ ಮಾಂ ದೂರವಾಸಿನಂ|

ಋಣಮೇತತ್  ಪ್ರವೃದ್ಧಂ  ಮೇ ಹೃದಯಾನ್ನಾಪಸರ್ಪತಿ ||

ಅವಳು ಅತ್ಯುನ್ನತವಾದ ಸ್ಥಾಯಿಯಲ್ಲಿ ಗೋವಿಂದಾ ಎಂದು ಕರೆದಳಲ್ಲಾ.. ಅದಕ್ಕೆ ಪ್ರತಿಯಾಗಿ ನಾನೇನೂ ಕೊಡಲಾರದೇ ಅವಳಿಂದ ಸಾಲ ತೆಗೆದುಕೊಂಡವನಂತೆ ಆಗಿ ಆ ಕೂಗು ಹೃದಯವನ್ನು ಸುತ್ತಿಕೊಂಡಿದೆ ಎಂದು ಶ್ರೀಕೃಷ್ಣನು ನೋಯುತ್ತಾನೆ.

ಅಂತಹ ಭಕ್ತಿಯ ಪರಾಕಾಷ್ಠೆಯಿಂದ ಬಂದ ಕೂಗು ಅವನಿಗೆ ಖಂಡಿತ ಕೇಳಿಸುತ್ತದೆ ಎಂಬುದು ಅನುಭವಿಗಳ ಮಾತು. ಹಾಗಾದರೆ ನಮ್ಮ ಕೂಗೇಕೆ ಅವನಿಗೆ ಕೇಳಿಸುತ್ತಿಲ್ಲ? ಕೇಳಿಸಿದ್ದರೆ ಅವನ ಅನುಗ್ರಹದ ಅನುಭವ ನಮಗೇಕೆ ಆಗುತ್ತಿಲ್ಲ? ಎಂದರೆ ಹಾಗೆ ಕರೆಯಲು ನಾವಿನ್ನೂ ಕಲಿತಿಲ್ಲ. ನಮ್ಮ ಕರಣಗಳೆಲ್ಲ ಅವನೆಡೆಗೆ ಹೋಗಲಾರದೇ ಕುಂಟುತ್ತವೆ. ನಮ್ಮ ಲೌಕಿಕ ಜೀವನದ ಅಂಟು ಬಲವಾಗಿದ್ದು ಹಾಗೆ ಶರಣಾಗತರಾಗಿ ಅವನನ್ನು ಕರೆಯಲು ಆಗುತ್ತಿಲ್ಲ. ನಾವು ಇಂದ್ರಿಯ ಶರಣರಾಗಿದ್ದೇವೆ. ಲೋಕಜೀವನದ ಬಗೆ ಬಗೆಯ ಆಕರ್ಷಣೆಗಳಿಗೆ ಶರಣಾಗತರಾಗಿದ್ದೇವೆ.

ನಿಸರ್ಗದಲ್ಲಿ ಗಲಾಟೆ, ಗೌಜುಗಳ ಮಧ್ಯೆ ಒಬ್ಬರ ಮಾತು ಇನ್ನೊಬ್ಬರಿಗೆ ಕೇಳದಿರುವ ಪ್ರಸಂಗವೂ ಇದೆ. ಆದರೆ ಆಕಾಶವಾಣಿ ಅಥವಾ ದೂರದರ್ಶನದಲ್ಲಿ ಎಲ್ಲಿಂದಲೋ ಪ್ರಸಾರವಾಗುವ ಕಾರ್ಯಕ್ರಮಗಳು ನಮ್ಮ ಮನೆಯವರೆಗೂ ಬಂದು, ನಮ್ಮ ರೇಡಿಯೋ ಅಥವಾ ಟಿ.ವಿಯಲ್ಲಿ ಕೇಳುವಂತಾಗುತ್ತವೆ. ಏಕೆಂದರೆ ಅಲ್ಲೊಂದು ಸಜ್ಜು( tuning) ಇದೆ. ನಿಸರ್ಗದಲ್ಲಿ ಧ್ವನಿ, ದರ್ಶನಗಳು ಪ್ರಯಾಣ ಮಾಡಬಲ್ಲವು ಎಂಬ ವಿಜ್ಞಾನವರಿತು ಅದಕ್ಕೆ ತಕ್ಕ ಸಜ್ಜನ್ನು ಮಾಡಿದಾಗ ದೂರದರ್ಶನ, ಆಕಾಶವಾಣಿಯಲ್ಲಿ ನಾವು ಕೇಳುತ್ತಿರುವುದು ನಮ್ಮ ಅನುಭವದಲ್ಲೇ ಇದೆ. ಹಾಗೇ ಸರ್ವವ್ಯಾಪಿಯಾದ ಭಗವಂತನು ನಮ್ಮ ಕೂಗನ್ನು ಕೇಳಿ ಅದಕ್ಕೆ ಪ್ರತಿಕ್ರಿಯೆ ಕೊಡುವಂತಾಗಲೂ ಸಹ ನಮ್ಮಲ್ಲಿ ಒಂದು ಬಗೆಯ ಸಜ್ಜು-tuning ನ್ನು ಅಪೇಕ್ಷಿಸುತ್ತದೆ. ಆ tuning ದ್ರೌಪದಿಯಲ್ಲಿತ್ತು. ಅದು ಭಾಗವತ ಶ್ರೇಷ್ಠರಲ್ಲೆಲ್ಲ ಇದೆ. ಅಷ್ಟೇಕೆ ಆದಿಮೂಲಾ ಎಂದು ಗಜೇಂದ್ರನು ಕರೆದ ಕೂಗು ಸಹ ಅವನಿಗೆ ಕೇಳಿಸಿತ್ತಲ್ಲವೇ? "ಜಗದ್ಧಿತವನ್ನು ಕೋರುವ ಕೃಷ್ಣನನ್ನು ಸೇರಿಕೊಂಡು ಬಾಳಿ.ಅವನನ್ನು ಬಿಟ್ಟರೆ ಬೇರೆ ಗತಿಯಿಲ್ಲ" ಎಂಬ ಶ್ರೀರಂಗ ಮಹಾಗುರುಗಳ ಮಾತು ಇಲ್ಲಿ ಸ್ಮರಣೀಯ. ಹಾಗೆ ಅವನನ್ನು ಕರೆಯುವ ಸರ್ವ ಶರಣಾಗತ ಭಾವಸಮೃದ್ಧಿ ನಮಗೆಲ್ಲ ಬರಲಿ, ಅವನ ಅನುಗ್ರಹ ಧಾರೆಯು ನಮ್ಮೆಲ್ಲರಮೇಲೆ ಹರಿಯುವಂತಾಗಲಿ ಎಂದು ಆ ಸರ್ವೇಶ್ವರನನ್ನು ಪ್ರಾರ್ಥಿಸೋಣ.

ಸೂಚನೆ: 18/05/2023 ರಂದು ಈ ಲೇಖನ ವಿಜಯವಾಣಿಯ ಸಂಸ್ಕೃತಿ ದಲ್ಲಿ ಪ್ರಕಟವಾಗಿದೆ.

Sunday, May 7, 2023

ಅಷ್ಟಾಕ್ಷರೀ​ - 34 ದಾಮ್ಯತ ದತ್ತ ದಯಧ್ವಮ್ (Astakshara Darshana 34 Damyata Datta Dayadhvam)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)

ಕಳೆದ ಶತಮಾನದ ಒಬ್ಬ ಪ್ರಧಾನ ಆಂಗ್ಲಕವಿ ಟಿ. ಎಸ್. ಎಲಿಯಟ್, ನೊಬೆಲ್ ಪ್ರಶಸ್ತಿಗೆ ಪಾತ್ರನಾದವನು. ಆತನು ಬರೆದ "ದಿ ವೇಸ್ಟ್-ಲ್ಯಾಂಡ್" ಕವಿತೆ ಸುಪ್ರಸಿದ್ಧ. ಇಪ್ಪತ್ತನೆಯ ಶತಮಾನದ ಅತಿಮುಖ್ಯವಾದ ಕವನಗಳಲ್ಲಿ ಅದೊಂದೆಂದು ಪರಿಗಣಿತವಾಗಿದೆ.  ಪಂಚಭಾಗಗಳಿಂದ ಕೂಡಿದ ಆ ಪದ್ಯದ ಪಂಚಮಭಾಗ: "ಗುಡುಗು ನುಡಿದುದೇನು?"

ಅದರ ಕೊನೆಯೆರಡು ಸಾಲುಗಳೆಂದರೆ,  ದತ್ತ-ದಯಧ್ವಂ- ದಾಮ್ಯತ; ಮತ್ತು  ಶಾಂತಿ-ಶಾಂತಿ-ಶಾಂತಿ.  ಇಲ್ಲಿಯ ಆರು ಸಂಸ್ಕೃತಪದಗಳಲ್ಲಿ ಕೊನೆಯ ಮೂರು ಪದಗಳನ್ನು ಯಾವ ಭಾರತೀಯ ಕೇಳಿರುವುದಿಲ್ಲ? "ಶಾಂತಿ"ಯು ಎಲ್ಲ ಭಾರತೀಯ ಭಾಷೆಗಳಲ್ಲೂ ಇರುವಂತಹುದೇ. ಅದರ ಹಿಂದಿನ ಮೂರೂ ಸಂಸ್ಕೃತಪದಗಳೂ ಕ್ರಿಯಾಪದಗಳೇ.

ಎಲ್ಲಿಯ ಪದಗಳಿವು? ಅವಕ್ಕೇನರ್ಥ? - ಎಂಬ ಪ್ರಶ್ನೆಗಳು ಸಹಜವೇ. ಉಪನಿಷತ್ತುಗಳಲ್ಲೆಲ್ಲಾ ಅತ್ಯಂತ ಬೃಹತ್ತಾದ ಬೃಹದಾರಣ್ಯಕೋಪನಿಷತ್ತಿನಲ್ಲಿ ಒಟ್ಟಿಗೇ ಬಂದಿರುವ ಪದಗಳಿವು. (ಅಲ್ಲೂ ಐದನೆಯ ಅಧ್ಯಾಯದಲ್ಲೇ ಬಂದಿರುವುದನ್ನು ಪ್ರತಿಧ್ವನಿಸಲೋ ಎಂಬಂತೆ ಎಲಿಯಟ್ ಸಹ ತನ್ನ ಪದ್ಯದ ಐದನೆಯ ಭಾಗದಲ್ಲಿ ಈ ಸಾಲುಗಳನ್ನು ಬಳಸಿದ್ದಾನೆ).

"ಶಾಂತಿ-ಶಾಂತಿ-ಶಾಂತಿ"ಯ ಪುನರುಕ್ತಿ ಇಲ್ಲಿ ಪ್ರಸ್ತುತವೇ ಸರಿ. ಏಕೆ? ಪ್ರಥಮ-ವಿಶ್ವಮಹಾಯುದ್ಧವು ಮುಗಿದು ಆಗಿನ್ನೂ ಮೂರು ವರ್ಷಗಳಷ್ಟೇ ಆಗಿದ್ದಾಗ ಎಲಿಯಟ್ ಬರೆದ ಪದ್ಯವಿದು. ಆ ಕದನದಲ್ಲಿ ಮರಣಿಸಿದ ಮಂದಿ ೪ ಕೋಟಿಗೆ ಕಡಿಮೆಯಿಲ್ಲ! ಜಗತ್ತಿಗೆ ಶಾಂತಿಸಂದೇಶವನ್ನು ಎಂದಿನಿಂದಲೂ ನೀಡುತ್ತ ಬಂದಿರುವುದು ಭಾರತವೇ - ಎಂಬುದು ಎಲಿಯಟ್ಟಿಗೆ ಗಟ್ಟಿಯಾಗಿದ್ದ ಅಂಶವೇ. ಏಕೆ? ಗೀತೆಯನ್ನು ಮೂಲಸಂಸ್ಕೃತದಲ್ಲೇ ಓದಿದ್ದವ ಆತ; ಪಾತಂಜಲಯೋಗಸೂತ್ರದ ಪಾಠವೂ ಹಾರ್ವರ್ಡಿನ ಉತ್ತಮಪ್ರಾಧ್ಯಾಪಕರಿಂದಲೇ ಆತನಿಗಾಗಿತ್ತು! ಎಂದೇ ಆತನ ಬಾಯಲ್ಲಿಈ ಮಾತು ಸಹಜವೇ ಸರಿ.

ಬೃಹದಾರಣ್ಯಕೋಪನಿಷತ್ತಿನಲ್ಲಿ ಬಂದಿರುವುದೇನು? ಒಂದು ಕಿರುಕಥೆ. ದೇವತೆಗಳು, ಮನುಷ್ಯರು, ಹಾಗೂ ಅಸುರರು - ಇವರು ಮೂವರೂ ಪ್ರಜಾಪತಿಯ ಮಕ್ಕಳು. ವಿದ್ಯಾರ್ಜನೆಗಾಗಿ ಆತನಲ್ಲಿಯೇ ಬ್ರಹ್ಮಚರ್ಯದಲ್ಲಿದ್ದವರು. ತಮಗೆ ಉಪದೇಶ ನೀಡಬೇಕೆಂದು ಆತನನ್ನು ದೇವತೆಗಳು ಕೇಳಿಕೊಂಡರು. ಅವರಿಗಾಗ ಗುಡುಗಾಗಿ ತೋರಿ, 'ದ' ಎಂಬ ಒಂದಕ್ಷರವನ್ನು ಪ್ರಜಾಪತಿ ಅವರಿಗೆ ಬೋಧಿಸಿದ. "ಅರ್ಥವಾಯಿತೇ?" ಎಂದು ಕೇಳಿದ. ನೀನು ಹೇಳಿದುದು "ದಾಮ್ಯತ" ಎಂದಲ್ಲವೆ? - ಎಂದರವರು. ಹೌದೆಂದ ಪ್ರಜಾಪತಿ.

ಆಮೇಲೆ ಮನುಷ್ಯರೂ ಹಾಗೆಯೇ ಕೇಳಲಾಗಿ ಅವರಿಗೂ 'ದ' ಎಂದೇ ಗುಡುಗಿದ. ನೀ ಹೇಳಿದುದು 'ದತ್ತ' ಎಂದಲ್ಲವೇ? ಎಂದವರೆಂದರು. ಹೌದೆಂದ ಪ್ರಜಾಪತಿ.

ಕೊನೆಯದಾಗಿ ಅಸುರರಿಗೂ 'ದ' ಎಂದೇ ಗುಡುಗಿದುದು. 'ದಯಧ್ವಮ್' ಎಂದಲ್ಲವೇ? - ಎಂದರವರು. ಹೌದೆಂದ.

ಪ್ರಜಾಪತಿಯು ಮೂವರಿಗೆ ಹೇಳಿದುದೂ ಒಂದೇ ಅಕ್ಷರವೇ. ಆದರೂ ತಮತಮಗೆ ಯುಕ್ತವಾದ ರೀತಿಯಲ್ಲಿ ಅವರವರು ಅರ್ಥಮಾಡಿಕೊಂಡರು. ದೇವತೆಗಳು 'ದಾಮ್ಯತ' ಎಂದುಕೊಂಡರು (ಹಾಗೆಂದರೆ 'ದಮವನ್ನು ಸಂಪಾದಿಸಿಕೊಳ್ಳಿ' ಎಂದು). ಮನುಷರು 'ದತ್ತ' ಎಂದು ತೆಗೆದುಕೊಂಡರು (ಹಾಗೆಂದರೆ 'ದಾನ ಮಾಡಿ' ಎಂದು). ಅಸುರರು 'ದಯಧ್ವಮ್' - ಎಂದು ಭಾವಿಸಿದರು (ಹಾಗೆಂದರೆ 'ದಯೆ ತೋರಿ' ಎಂದು). (ಎಲಿಯಟ್-ಪದ್ಯದಲ್ಲಿ ಕ್ರಮವ್ಯತ್ಯಯವಾಗಿದೆ).

ದೇವತೆಗಳಿಗೆ ಭೋಗಬುದ್ಧಿಯು ಹೆಚ್ಚು; ಅತಿಭೋಗ-ಲಾಲಸೆಯು ಪತನಕ್ಕೇ ದಾರಿಯಲ್ಲವೇ? ದಮವ್ರತವು (ಎಂದರೆ ಇಂದ್ರಿಯ-ಸಂಯಮವು) ಅವರಿಗವಶ್ಯ. ಮನುಷ್ಯರಲ್ಲಿ ಲೋಭ ಹೆಚ್ಚು; ಲೋಭವು ಪಾಪಗಳಿಗೆ ಹೆದ್ದಾರಿ; ಆದ್ದರಿಂದ ದಾನವ್ರತವು ಅವರಿಗುಪಕಾರಿ. ಅಸುರರಿಗೆ ಬಲ ಹೆಚ್ಚು; ಆದರವರ ಬಲವೆಲ್ಲ ಪರಪೀಡನಕ್ಕಾಗಿ! ಎಂದೇ ದಯಾವ್ರತವು ಅವರಿಗುದ್ಧಾರಕ.

ದೇವತೆಗಳಲ್ಲಿ ಸತ್ತ್ವಗುಣ ಹೆಚ್ಚು; ಮನುಷ್ಯರಲ್ಲಿ ರಜೋಗುಣ; ಅಸುರರಲ್ಲಿ ತಮೋಗುಣ. ಪ್ರಕೃತಿಯೆಲ್ಲಾ ಈ ತ್ರಿಗುಣಗಳ ಆಟವೇ. ಅದನ್ನು ಮೀರದೆ ಮುಕ್ತಿಯಿಲ್ಲ; ಮೀರುವುದಾದರೂ  ತ್ರಿಗುಣಸಾಮ್ಯವನ್ನು ಸಾಧಿಸಿದಾಗಲೇ - ಎಂದು ಶ್ರೀರಂಗಮಹಾಗುರುಗಳು ಯೋಗದೃಷ್ಟಿಯಿಂದ ಪ್ರತಿಪಾದಿಸುತ್ತಿದ್ದರು: ದ-ದ-ದ-ಗಳ ಪಾತ್ರವಿಲ್ಲಿದೆ.

ನಮ್ಮ ನಾಶಕ್ಕೆ ಮೂರು ಕಾರಣಗಳಿದ್ದಾವು: ಅತಿಯಾದ ಕಾಮ, ಎಲ್ಲೆಯಿಲ್ಲದ ಲೋಭ, ಮಿತಿಮೀರಿದ ಕ್ರೋಧ. ನರಕದ ದ್ವಾರಗಳೆಂದರೆ ಈ ಮೂರೇ. ಹಾಗೆಂದು ಗೀತೆಯೇ ಹೇಳುತ್ತದೆ. ಅಲ್ಲಿಗೆ, ಇದೋ ಈ ಉಪನಿಷತ್ತಿನಲ್ಲಿಯ ದೇವ-ಮನುಷ್ಯ-ಅಸುರರ ಕಥೆಯ ತತ್ತ್ವವೇ ಇದಾಯಿತು!  ಇನ್ನಿದರ ವಿಸ್ತಾರವೇ ಪುರಾಣಗಳೆಲ್ಲಾ!

ದಮ-ದಯೆಗಳಿಲ್ಲವಾದಾಗ ಮನುಷ್ಯರೇ ಇಲ್ಲಿಯ ದೇವಾಸುರರಂತೆ – ಅಥವಾ ಅವರೇ - ಆಗಿಬಿಟ್ಟಾರು! ದ-ದ-ದ-ಗಳು (=ದಮ-ದಾನ-ದಯೆಗಳು) ಇಲ್ಲದವರಿಂದಲೇ ವಿಶ್ವಯುದ್ಧಗಳು ನಡೆದುಹೋದವು! ದ-ದ-ದ-ಗಳು ಅತ್ತ ವಿಶ್ವಶಾಂತಿಗೂ ಬೇಕು, ಇತ್ತ ಅಂತರಂಗಸಾಧನೆಗೂ ಬೇಕು.

ಮತ್ತೆ ಕೇಳಿಸಲಿಲ್ಲವೆನ್ನಬೇಡಿ, ಗುಡುಗಿನ ಧ್ವನಿಯನ್ನು!


ಸೂಚನೆ: 07/05/2023 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ.

ಯಕ್ಷ ಪ್ರಶ್ನೆ37 (Yaksha prashne 37)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ 

(ಪ್ರತಿಕ್ರಿಯಿಸಿರಿ lekhana@ayvm.in)


ಪ್ರಶ್ನೆ – 36 ಎಲ್ಲಾ ಜನರಿಗೂ ಅತಿಥಿ ಯಾರು ?

ಉತ್ತರ - ಅಗ್ನಿ

ಯಕ್ಷನು ಇಲ್ಲಿ ಕೇಳುವ ಪ್ರಶ್ನೆಯು ಅಗ್ನಿಗೂ ಅತಿಥಿಗೂ ಇರುವ ಸಂಬಂಧವನ್ನು ಕುರಿತಾದದ್ದು. ನಾವೆಲ್ಲರೂ ಕೇಳಿದಂತೆ ನಮ್ಮ ಮನೆಗೆ ಯಾರು ಹೊರಗಡೆಯಿಂದ ಬರುತ್ತಾರೋ ಅವರನ್ನು ಅತಿಥಿ ಎಂದು ಕರೆದು ಅವರನ್ನು ಗೌರವಿಸುವ ರೂಢಿ ಬಂದಿದೆ. ಅಗ್ನಿಯು ಹೇಗೆ ಅತಿಥಿಯಾಗಬಲ್ಲದು? ಎಂಬುದು ಈ ಪ್ರಶ್ನೆಯ ಆಶಯವಾಗಿದೆ. 

ತಿಥಿ ಎಂದರೆ ಕಾಲದ ಗಣನೆಯ ಒಂದು ಮಾಧ್ಯಮ. ಕಾಲಕ್ಕೆ - ಗಣನೆಗೆ ಸಿಗುವ ವಿಷಯ ಎಂದರ್ಥ. ಪ್ರತಿಪತ್, ದ್ವಿತೀಯಾ ಇತ್ಯಾದಿಯಾಗಿ ಕಾಲವನ್ನು ವಿಭಾಗಿಸುತ್ತೇವೆ. ಇಲ್ಲಿ ಶ್ರೀರಂಗಮಹಾಗುರುಗಳು ಹೇಳಿದ ಮಾರ್ಮಿಕವಾದ ಮಾತು ಸ್ಮರಣೀಯ - "ಕಾಲಾತೀತವಾದ ವಿಷಯವನ್ನು ಹೊತ್ತುಕೊಂಡು ಬರುವವನೇ ಅತಿಥಿಯಪ್ಪ" ಎಂದು. ಕಾಲಾತೀತನಾದವನು ಭಗವಂತ. ಅವನನ್ನು ಯಾರು ತನ್ನೊಳಗೆ ಧರಿಸಿ ಬರುತ್ತಾರೋ ಅಂತವರು ಅತಿಥಿಗಳು. 'ಅತಿಥಿಃ ದೇವವತ್ ಪೂಜ್ಯಃ' ಎನ್ನುವಂತೆ ಅವರು ದೇವರಲ್ಲದೆ ಮತ್ತೇನೋ! ಯಾರು ದೇವರನ್ನು ಹೊತ್ತುಕೊಂಡಿರುವರೋ ಅವರು ಪೂಜ್ಯರು, ಅವರು ಅತಿಥಿಗಳು.ಇಲ್ಲಿ ಅಗ್ನಿಯನ್ನು ಅತಿಥಿಯೆಂದು ಕರೆಯಲು ಪ್ರಧಾನವಾಗಿ ಇದೇ ಕಾರಣ ಸಾಕಲ್ಲವೇ. 

ಅಗ್ನಿಯು ದೇವರ ಪ್ರತೀಕ. ಭವಂತನ ವರ್ಣ ಅರಿಶಿನ, ಅಗ್ನಿಯ ವರ್ಣವೂ ಅರಿಶಿನ. ಭಗವಂತ ಬೆಳಗುವ ಮತ್ತು ಬೆಳಗಿಸುವ ಸ್ವಭಾವದವ, ಅಗ್ನಿಯೂ ತಾನೂ ಬೆಳಗಿ ಮತ್ತೊಂದನ್ನು ಬೆಳಗಿಸುವುದೇ ಆಗಿದೆ. ಊರ್ಧ್ವದಲ್ಲಿ ಎಲ್ಲಕ್ಕಿಂತಲೂ ಮೇಲೆ ಇರುವವನು ಭಗವಂತನಾದರೆ, ಎಲ್ಲಕ್ಕಿಂತಲೂ ಮೇಲೆಕ್ಕೆ ಹೋಗುವ  ಸ್ವಭಾವದ್ದು ಅಗ್ನಿ. ಹೀಗೆ ಸರ್ವವಿಧದಲ್ಲೂ ಭಗವಂತನನ್ನು ಹೋಲುವ ಸ್ವಭಾವ ಅಗ್ನಿಯಷ್ಟು ಈ ಪ್ರಪಂಚದಲ್ಲಿ ಬೇರೊಂದಿಲ್ಲ. ದೇವತಾಪ್ರಸನ್ನತೆಗೆ ಕ್ಷಿಪ್ರ ಕಾರಣವಾಗಲ್ಲದು ಎಂಬ ಕಾರಣದಿಂದಲೇ ದೀಪದ ಆರಾಧನೆಯು ನಮ್ಮಲ್ಲಿ ಬಂದಿದೆ. ಭವಂತನನ್ನು ಪರಿಪೂರ್ಣವಾಗಿ ಧರಿಸಿರುವ ವಸ್ತುವೆಂದರೆ, ಅದೇ ಅಗ್ನಿ. ಇದು ತಾನೆ ಅತಿಥಿಪದಕ್ಕೆ ವಿಷಯವಾಗಲ್ಲದು. 

'ಆಗ್ನೀಷೋಮೌ ಆತ್ಮಭಾಗೌ' ಎಂಬಂತೆ ಈ ಸೃಷ್ಟಿಗೆ ಕಾರಣವೇ ಅಗ್ನಿ. ಅಗ್ನಿಯಿಂದಲೇ ಸಮಸ್ತ ಪ್ರಪಂಚವೂ ಸೃಷ್ಟಿಯಾದದ್ದು. ಸಮಸ್ತ ಸೃಷ್ಟಿಯಲ್ಲೂ ಅಗ್ನಿಯ ಅಂಶ ಇದ್ದೇ ಇದೆ. ಅಗ್ನಿಯು ಇಲ್ಲದಿದ್ದರೆ ಈ ಪ್ರಪಂಚದಲ್ಲಿ ಯಾವ ಕಾರ್ಯವೂ ನಡೆಯುವುದಿಲ್ಲ. ಅಗ್ನಿಯು ಪಂಚಭೂತಗಳಲ್ಲಿ ಒಂದಾಗಿದೆ. ಆಯುರ್ವೇದದಲ್ಲಿ ಆರೋಗ್ಯವಂತನ ಲಕ್ಷಣವನ್ನು ಹೇಳುವಾಗ - ಯಾರಲ್ಲಿ 'ಸಮಾಗ್ನಿಃ- ಅಗ್ನಿಸಾಮ್ಯ ಅಥವಾ ಅಗ್ನಿತತ್ತ್ವದ ಸಮತೋಲನ ಇರುವುದೋ ಅವನನ್ನು ಸ್ವಸ್ಥ' ಎಂದು ಕರೆಯಬೇಕು ಎಂದು ಹೇಳುತ್ತದೆ. ತಿಂದ ಆಹಾರ ಪಚನವಾಗಬೇಕಾದರೆ ಅಗ್ನಿಯ ಸಹಾಯ ಬೇಕೇಬೇಕು. ಭಾರತೀಯರ ಜೀವನವು ಅಗ್ನಿಯಲ್ಲೇ ನಿಂತಿದೆ. ಭಾರತೀಯರ ಜೀವನ ಆರಂಭವಾಗುವುದೇ ಅಗ್ನಿಯಿಂದ. ಬ್ರಹ್ಮಚಾರಿಯಾದವನು ಅಗ್ನಿಕಾರ್ಯವನ್ನು ಮಾಡುವುದರ ಮೂಲಕ ಮತ್ತು, ಗೃಹಸ್ಥನಾದವನು ಪ್ರತಿನಿತ್ಯ ವೈಶ್ವದೇವ, ಅಗ್ನಿಹೋತ್ರಾದಿ ಕರ್ಮವನ್ನು ಮಾಡುವುದರ ಮೂಲಕ ಕರ್ತವ್ಯವನ್ನು ನಿರ್ವಹಿಸಬೇಕಾಗಿದೆ. ಅವನಿಗೆ ಅಗ್ನಿಯ ಉಪಾಸನೆ ನಿತ್ಯಕರ್ತವ್ಯವಾಗಿದೆ. ಇಂತಹ ಅಗ್ನ್ಯುಪಾಸಕನನ್ನು ಶ್ರೇಷ್ಠನೆಂದು ವೇದ ಶಾಸ್ತ್ರಗಳು ಸಾರುತ್ತವೆ. ಯಾವತ್ತು ಇಂತಹ ಸಾಧಕರು ಮನೆಗೆ ಆಗಮಿಸುತ್ತಾರೋ ಆ ದಿನವೇ ಶ್ರಾದ್ಧವನ್ನು ಮಾಡಬಹುದು ಎನ್ನುವಷ್ಟರಮಟ್ಟಿಗೆ ಅವರ ಶ್ರೇಷ್ಠತ್ವವನ್ನು ಸಾರಿದ್ದಾರೆ. ಇಂತಹ ಶ್ರೇಷ್ಠವ್ಯಕ್ತಿಯೇ ನಿಜವಾದ ಅತಿಥಿಯಾಗಬಲ್ಲ. ಇದೇ ಅಗ್ನಿಗೂ ಅತಿಥಿಗೂ ಇರುವ ತಾತ್ತ್ವಿಕಸಂಬಂಧ.    

ಸೂಚನೆ : 7/5/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ವ್ಯಾಸ ವೀಕ್ಷಿತ - 37 ಅಸ್ತ್ರಕ್ಕೆ ಪ್ರತಿಯಾಗಿ ಅಶ್ವ; ಕಾಟ ಕೊಡಲು ಕಾರಣ (Vyaasa Vikshita - 37 Astrakke Pratiyagi Asva; Aska Kodalu Karana)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)




ಯುಧಿಷ್ಠಿರನ ಮಾತಿನ ಮೇರೆಗೆ ಅರ್ಜುನನು ಆ ಗಂಧರ್ವನನ್ನು ಕ್ಷಮಿಸಿದನಷ್ಟೆ. ಆಗ ಆ ಗಂಧರ್ವನು, ತನಗಾದ ಪರಾಭವದಿಂದ ಕೆರಳುವ ಬದಲು, ಅರ್ಜುನನ ಸ್ನೇಹವನ್ನೇ ಬಯಸಿ ತನ್ನ ಮಾತನ್ನು ಹೀಗೆ ಮುಂದುವರಿಸಿದನು.

 

ಅಯ್ಯಾ ಅರ್ಜುನನೇ, ನಿನ್ನ ಸಹೋದರರಿಗೂ ನಿನಗೂ ಬೇರೆಬೇರೆಯಾಗಿ ನೂರು ನೂರು ಕುದುರೆಗಳನ್ನು ಕೊಡುವೆನು. ಆ ಅಶ್ವಗಳು ಗಂಧರ್ವಲೋಕದಲ್ಲಿ ಜನಿಸಿರತಕ್ಕವು; ದೇವತೆಗಳನ್ನೂ ಗಂಧರ್ವರನ್ನೂ ಹೊರತಕ್ಕವು; ಮನೋವೇಗದಲ್ಲಿ ಓಡತಕ್ಕವು. ಅವುಗಳ ರೂಪ ದಿವ್ಯವಾದುದು: ಸಣಕಲಾಗಿ ಕಾಣುತ್ತವೆಯಾದರೂ ಬಲಗುಂದವವು.

ಹಿಂದೆ ವೃತ್ರಸಂಹಾರಸಮರ್ಥವಾದ ವಜ್ರಾಯುಧವನ್ನು ಇಂದ್ರನಿಗಾಗಿ ನಿರ್ಮಿಸಲಾಯಿತಷ್ಟೆ. ಅದು ವೃತ್ರನ ಶಿರಸ್ಸಿನಲ್ಲಿ ಹತ್ತು ಹೋಳಾಗಿಯೂ ನೂರು ಹೋಳಾಗಿಯೂ ಸೀಳಿಕೊಂಡಿತು. ಆಮೇಲೆ ಅದನ್ನು ದೇವತೆಗಳು ಭಾಗಮಾಡಿದರು: ಆ ವಜ್ರದ ಚೂರುಗಳನ್ನು ಅವರು ಉಪಾಸಿಸುವರು! ಲೋಕದಲ್ಲಿ ಯಾವುದೇ ಕೀರ್ತಿಯಾಗಲಿ, ಐಶ್ವರ್ಯವಾಗಲಿ, ಅದು ವಜ್ರದ ಶರೀರವೆಂದೇ ಪರಿಗಣಿತವಾಗುತ್ತದೆ : ಬ್ರಾಹ್ಮಣನ ಹಸ್ತವೆಂದರೆ ಅದು ವಜ್ರವೇ; ಕ್ಷತ್ರದ ರಥವೂ ವಜ್ರಮಯವೆಂದೇ; ವೈಶ್ಯರು ಕೊಡುವ ದಾನವು ವಜ್ರದಂತೆಯೇ; ಇತರರು ಮಾಡುವ ಸೇವೆಯೂ ವಜ್ರವೇ. ಕ್ಷತ್ರಿಯರಥಕ್ಕೆ ಕಟ್ಟುವ ಕುದುರೆಗಳು ಅವಧ್ಯವೆನಿಸಿರುವುವು. ಏಕೆಂದರೆ ವಡವೆಯೆಂಬವಳಿಂದ ಜನಿಸಿದವು ಅವು. (ಸೂರ್ಯಪತ್ನಿಯು ಅಶ್ವರೂಪವನ್ನು ಧರಿಸಿದ್ದಾಗ ಜನಿಸಿದವಳು ವಡವೆ). ಬಲಶಾಲಿಗಳಾದ ಈ ಕುದುರೆಗಳು ಇಷ್ಟಬಂದ ವರ್ಣವನ್ನೂ ವೇಗವನ್ನೂ ಹೊಂದಬಲ್ಲವು; ಬಯಸಿದಾಗ ಉಪಸ್ಥಿತವಾಗಿಬಿಡಬಲ್ಲವು! ಹೀಗಿರುವ ಗಾಂಧರ್ವಾಶ್ವಗಳು ನಿನ್ನ ಅಪೇಕ್ಷೆಯನ್ನು ಪೂರೈಸತಕ್ಕವಾಗಿವೆ - ಎಂದನು.

ಅದಕ್ಕೆ ಅರ್ಜುನನು - "ನೀನು ಸಂತುಷ್ಟನಾಗಿರುವೆಯೆಂದೋ, ನಿನ್ನ ಪ್ರಾಣುವುಳಿಸಲಾಗಿದೆಯೆಂದೋ, ನನಗೆ ವಿದ್ಯಾರೂಪವಾದ ಧನವನ್ನೋ ಜ್ಞಾನವನ್ನೋ ನೀ ಕೊಡಬಯಸಿರುವೆ; ಆದರೆ ನಾನದನ್ನೇನೂ ಇಷ್ಟಪಡುವುದಿಲ್ಲ" ಎಂದನು.

 

ಅದಕ್ಕೆ ಗಂಧರ್ವನು, "ಅಯ್ಯಾ, ಮಹಾತ್ಮರೊಂದಿಗೆ ಸಂಗಮವೆಂಬುದೇ ಸಂತೋಷವನ್ನುಂಟುಮಾಡುವಂತಹುದು (ಸಂಯೋಗೋ ವೈ ಪ್ರೀತಿಕರೋ ಮಹತ್ಸು). ನೀನು ನನಗೆ ಜೀವಪ್ರದಾನವನ್ನು ಮಾಡಿರುವೆಯಲ್ಲವೆ? ಇದರಿಂದ ತುಷ್ಟನಾದ ನಾನು ನಿನಗೆ ವಿದ್ಯೆಯನ್ನು ಕೊಡುತ್ತೇನೆ. ನಿನಗದು ರುಚಿಸದಿದ್ದಲ್ಲಿ, ಇದೋ ಉತ್ತಮವಾದ ಆಗ್ನೇಯಾಸ್ತ್ರವನ್ನು ನಿನ್ನಿಂದ ನಾನು ಗ್ರಹಿಸುತ್ತೇನೆ; ಹಾಗೆ ಆದರಲ್ಲವೇ ಅರ್ಜುನನೇ, ಚಿರಕಾಲ ನಮ್ಮ ಮೈತ್ರಿಯು ಉಳಿಯತಕ್ಕದ್ದು? - ಎಂದನು.

 

ಆಗ ಅರ್ಜುನನು, "ಆಗಲಿ, ಅಸ್ತ್ರವನ್ನಿತ್ತು ಕುದುರೆಗಳನ್ನು ಪಡೆಯುವುದನ್ನೊಪ್ಪುವೆ. ನಮ್ಮ ಮೈತ್ರಿಯು ಚಿರಕಾಲವಿರಲಿ. ಮಿತ್ರ ಗಂಧರ್ವನೇ, ಆದರೆ ಈ ಪ್ರಶ್ನೆಗೆ ಉತ್ತರಕೊಡು: ಅದೇತಕ್ಕೆ ನಮಗೆ ನೀನು ತೊಂದರೆ ಕೊಟ್ಟೆ? ನಾವು ಎಷ್ಟಾದರೂ ಸಜ್ಜನರು, ವೇದಜ್ಞರು, ರಾತ್ರಿಯಲ್ಲಿ ಇಲ್ಲಿಗೆ ಬಂದವರು. ಆದರೂ ಹೀಗೇಕೆ? - ಎಂದನು.


ಅದಕ್ಕೆ ಗಂಧರ್ವನೆಂದನು: ಅದಕ್ಕೆ ಕಾರಣವುಂಟು. ತಮಗೀಗ ಅಗ್ನಿ-ಆಹುತಿಗಳೆಂಬುದಿಲ್ಲ, ಹೌದಲ್ಲವೇ? (ಅರ್ಥಾತ್, ವಿದ್ಯಾಭ್ಯಾಸವನ್ನು ಪೂರೈಸಿ ಸ್ನಾತಕರಾಗಿದ್ದಾರೆ; ಹೀಗೆ ಬ್ರಹ್ಮಚರ್ಯಾಶ್ರಮವನ್ನು ಮುಗಿಸಿಯೂ ಗೃಹಸ್ಥಾಶ್ರಮವನ್ನು ಇನ್ನೂ ಸ್ವೀಕರಿಸಿಲ್ಲ. ಎಂದರೆ, ಈಗ ಅನಾಶ್ರಮಿಗಳಾಗಿದ್ದಾರೆ; ಇದು ಧರ್ಮಯುಕ್ತವಲ್ಲವೆಂದು ಶಾಸ್ತ್ರವಿದೆ). ಹೋಗಲಿ, ವಿಪ್ರಪುರಃಸರರಾಗಿಯೂ ಬಂದಿಲ್ಲ. (ಕ್ಷತ್ರಿಯರು ತಮ್ಮ ಪುರೋಹಿತನನ್ನು ಮುಂದಿಟ್ಟುಕೊಂಡೇ ಸಾಗತಕ್ಕದ್ದು; ಹಿತೈಷಿಯಾದ ಆತನ ಮಾರ್ಗದರ್ಶನ ರಕ್ಷಕವಾದದ್ದು). ಈ ಕಾರಣಗಳಷ್ಟೇ ಅಲ್ಲ.


ಸೂಚನೆ : 7/5/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.