Thursday, August 20, 2020

ಶಾಶ್ವತ ಆನಂದದೆಡೆಗೆ ಹೋಗೋಣ (Shashvata Anandadedege hogona)

ಡಾII ಶ್ರುತಿ ಪ್ರಸಾದ್

(ಪ್ರತಿಕ್ರಿಯಿಸಿರಿ: lekhana@ayvm.in)




ಒಂದು ಊರಲ್ಲಿ ಬಡಪಾಯಿ ಮನುಷ್ಯನೊಬ್ಬ ಸಾಮಾನ್ಯ ವಿಷಯಗಳಲ್ಲಿ ಆನಂದವನ್ನನುಭವಿಸುತ್ತಾ ಪ್ರತಿನಿತ್ಯವೂ ದೇವರ ಪೂಜೆಯನ್ನು ಮಾಡುತ್ತಿದ್ದಒಮ್ಮೆ ದೇವರು ಪ್ರತ್ಯಕ್ಷವಾಗಿ ಏನು ವರ ಬೇಕೆಂದಾಗ ಆತ ಚಿನ್ನದ ನಾಣ್ಯಗಳು ಬೇಕೆಂದಆಗ ದೇವರು,"ನೀನು ಸಾಕೆಂದು ಹೇಳುವ ತನಕ ನಿನ್ನ ಕಿಸೆಯಲ್ಲಿ ನಾಣ್ಯಗಳನ್ನು ತುಂಬಿಸುತ್ತೇನೆಆದರೆ ಒಂದು ಸಾರಿ ನಾಣ್ಯಗಳು ಕೆಳಗೆ ಬಿದ್ದರೆ ಅವೆಲ್ಲವೂ ಮಣ್ಣಾಗಿ ಹೋಗುತ್ತವೆಎಂದು ಎಚ್ಚರಿಸಿದರುಆತನಿಗೆ ದೇವರು ಕೊಟ್ಟ ಎಚ್ಚರಿಕೆಯ ಬಗ್ಗೆ ಗಮನವಿರದೆಕೇವಲ ನಾಣ್ಯಗಳನ್ನು ನೋಡಿ ಮಹದಾನಂದವಾಯಿತುದುರಾಸೆಯಿಂದತನ್ನ ಕಿಸೆ ಪೂರ್ತಿಯಾದರೂಸಾಕೆನ್ನಲಿಲ್ಲನಾಣ್ಯಗಳನ್ನು ನೋಡುತ್ತಲಿರುವ ಕ್ಷಣಿಕಾನಂದದಲ್ಲಿ ವಿವೇಕವನ್ನು ಕಳೆದುಕೊಂಡಆಗ  ಕಿಸೆ ಹರಿದು ನಾಣ್ಯಗಳೆಲ್ಲಾ ಕೆಳಗೆ ಚೆಲ್ಲಿ ಮಣ್ಣಾಗಿಹೋದವು.

ಕೇವಲ ಭೌತಿಕಪ್ರಪಂಚದಲ್ಲಿ ವ್ಯವಹರಿಸುತ್ತಾ ಚಿನ್ನದಂತೆ ಕಾಣುವ ಕ್ಷಣಿಕವಾದ ಇಂದ್ರಿಯ ಸುಖವನ್ನೇ ಬಯಸುತ್ತೇವೆಕ್ಷಣಿಕವಾದಪರಿಭಾಷೆ  ಬದಲಾಗುವಂತಹ ಇಂದ್ರಿಯ  ಸುಖಗಳಿಗೆ ಮಾರುಹೋಗಿ ದೀರ್ಘಕಾಲದ ಮಹದಾನಂದವನ್ನು ಕಳೆದುಕೊಳ್ಳುತ್ತೇವೆಹಾಗಿದ್ದರೆ ಶಾಶ್ವತವಾದ ಮಹದಾನಂದ ಯಾವುದು ಮತ್ತು ಅದರ ಮಾನದಂಡ ಯಾವುದು?

ಭಾರತೀಯ-ಮಹರ್ಷಿಗಳು ಕಂಡುಕೊಂಡ ಆನಂದದ ಸ್ತರಗಳನ್ನು ತೈತ್ತಿರೀಯ ಉಪನಿಷತ್ತು ತಿಳಿಸುತ್ತದೆ ಆನಂದಾನುಭವವು ಮಾನುಷಗಂಧರ್ವ-ಪಿತೃ-ದೇವತಾನಂದ-ಬ್ರಹ್ಮಾನಂದದವರೆಗೂ ಪ್ರತಿಹಂತದಲ್ಲೂ ೧೦೦ ಪಟ್ಟು ಹೆಚ್ಚಾಗುತ್ತದೆ.  ಎಲ್ಲ ರೀತಿಯ ಭೌತಿಕ-ಸಂಪತ್ತುಗಳನ್ನೂ ಪಡೆದ ಮನುಷ್ಯನ ಸುಖಕ್ಕಿಂತ ಕೋಟಿ-ಕೋಟಿಪಾಲು ಹೆಚ್ಚು ಆನಂದಭಗವತ್ಸಾಕ್ಷಾತ್ಕಾರದಿಂದ ಸಿಗುತ್ತದೆ ಎಂಬುದು ಮಹರ್ಷಿಗಳ ಅನುಭವಮನುಷ್ಯ ಇಂದ್ರಿಯ ಸುಖವನ್ನು ಅನುಭವಿಸಬಾರದು ಎಂದಲ್ಲಆದರೆ ಅಷ್ಟರಲ್ಲೇ ನಿಲ್ಲದೆಅದಕ್ಕಿಂತ ಮಿಗಿಲಾದ ಶಾಶ್ವತ-ಆನಂದಕ್ಕಾಗಿ ಪ್ರಯತ್ನಪಡಬೇಕೆಂಬುದು ಅವರ ಆಶಯವಿಪರ್ಯಾಸವೇನೆಂದರೆ  ಕಥೆಯಲ್ಲಿ ಭೌತಿಕ ಚಿನ್ನಕ್ಕೆ ಅತಿ ಆಸೆಪಟ್ಟದ್ದರಿಂದ ವಿವೇಕ ನಷ್ಟವಾಗಿ ಅದು ಮಣ್ಣುಪಾಲಾದಂತೆಅವಿವೇಕಿಗಳಾಗಿ ನಮ್ಮೊಳಗೇ ಬೆಳಗುತ್ತಿರುವ ಪರಂಜ್ಯೋತಿಯೆಂಬ ಚಿನ್ನದ-ಗಣಿಗೆ ಹಾತೊರೆಯದಿದ್ದರೆ ನಮ್ಮ ಜೀವನವೂ ಮಣ್ಣುಪಾಲಾದಂತೆಯೇ ಸರಿ.

ಪುನಃ-ಪುನಃ ಪಡೆಯಬೇಕು ಎಂದೆನಿಸುವ ಶಾಶ್ವತಪರಮಾನಂದವನ್ನು 'ನಿತ್ಯಾನಂದ ವಪು'ವಾದ ದೇವನೇ ನೀಡಬೇಕು"ಭಗವತ್ಸಾಕ್ಷಾತ್ಕಾರವು ಪ್ರತಿ ಮಾನವನ ಜನ್ಮಸಿದ್ಧ ಹಕ್ಕುಎಂಬ ಶ್ರೀರಂಗಮಹಾಗುರುಗಳ ಮಾತು ಇಲ್ಲಿ ಸ್ಮರಣೀಯ.  ಹಕ್ಕಿಗಾಗಿ ಹೋರಾಡಿ ಪಡೆದು ಆನಂದಿಸೋಣ.

ಸೂಚನೆ: 19/08/2020 ರಂದು ಈ ಲೇಖನ ಉದಯವಾಣಿ ಯಲ್ಲಿ ಪ್ರಕಟವಾಗಿದೆ.