Showing posts with label 322_ayvmarticle. Show all posts
Showing posts with label 322_ayvmarticle. Show all posts

Thursday, May 20, 2021

ஞானியை வழிபடுதல் இறைவனை வழிபடுவதற்கு ஒப்பாகுமா? (Jnaniyai vazhipadudal iraivanai vazhipaduvadarku oppaguma?)

மூலம்: சுமுக ஹெப்பார்

தமிழாக்கம்: வனஜா

மின்னஞ்சல் : (lekhana@ayvm.in)



நம் கலாசாரத்தில்  குரு மற்றும் மூத்தோரை மதித்து  கௌரவிக்கும் நடைமுறை உள்ளது. நாம் அவர்களை சிறந்தவர்கள் எனவும் வழிபடுகிறோம். இத்தகைய "தனிமனித வழிபாடு" சமூகத்தில் கேள்விகுறியாகிறது. இதனை ஸ்ரீரங்கமஹாகுருவின்  விளக்கத்தின் மூலம் புரிந்து கொள்ள இயலும்.


               ஒருவரின் உறவினர் இல்லத்தில் சுப காரியம்  நடைபெற உள்ளது. குடும்பத்தில் அனைவரும் அழைக்கப்பட்டுள்ளனர். ஆனால் அன்றைய தினம் முக்கிய விருந்தினர் வேறு அவசர நிமித்தம் விழாவில் பங்கேற்க இயலவில்லை. அவர் செல்லாவிடில்  விருந்தளிப்பவர் ஏமாற்றமடைவார். எனவே தனக்கு பதிலாக தன் மகனை அனுப்பினார். விருந்தளித்தவரும் அவருக்கு பதிலாக(ப்ரதிநிதியாக) வந்த மகனை ஆதரவாக வரவேற்றார்.  சிறுவனாக கருதாமல் தந்தைக்கு அளிக்கும் அதே மரியாதையுடன் அவருக்கு ஏற்படுத்திய இருக்கையை அளித்தார். மகன் தந்தைக்குரிய பரிசுகளையும் பெற்று நல்ல முறையில் வழியனுப்பப்பட்டார்.


               இது அனைவரின் வாழ்விலும் உள்ள நடைமுறை. பிரதிநிதியாக விழாவில் பங்கேற்பவர் தன் தலைவனுக்குரிய அனைத்து மரியாதையையும் பெறுகிறார். அவ்வாறே இறைவழிபாடு போன்ற நிகழ்வுகளில் இறைவனே நிதி. இறைவனை உணர்ந்த ஒருவர் அவரின் ப்ரதிநிதியாக கருதப்படும் தகுதியை பெறுகிறார்.

           

 

இரும்புத்துண்டொண்று  எரியும் தணலின் மத்தியில் சேர்ந்ததென்றால் சற்று நேரத்தில் அத்துண்டும் தணலைப்போலவே காணும். இரும்புத்துண்டிற்கும் தணலுக்கும் வித்தியாசமே தெரியாதவாறு அத்துண்டு மாறுபட்டுவிடும். இவ்வாறே இறைவனை உணர்ந்த ஞானி முற்றிலும் இறைஉணர்விலேயே ஆழ்ந்து விடுகிறான். அவனின் உதிரம், மாம்சம்  முதலான ஸப்த தாதுக்களும்,   மனம்மெய்வாக்கு எனும் முக்கரணங்களும் இடையறாது இறைஉணர்வால் நிரம்பியிருக்கும்.  

 

ஏலக்காயை சுவைத்தவன் பேசமுற்பட்டால் அவ்வார்த்தைகளுடன் ஏலக்காயின்  நறுமணம் தானாகவே வெளிப்பரவும்.  அதே போன்றே ஞானியின்அனைத்து செயல்களிலும் இறைஉணர்வு மலர்ந்து வெளிப்படும்.


அத்தகைய ஒரு ஞானி கிடைக்க பெறும்போது அவர் இறைவனுக்கும் அடியவருக்கும் இடைமுகமாகசெயல்படுகிறார்.  அவர் தமக்கு அளிக்கப்படும் அனைத்தையும் இறைவனடி சேர்த்து, இறைவனிடமிருந்து பெருகும்  அருளை நமக்கு அளிக்கிறார். எனவே தான் இத்தகு ஞானியை வழிபடுதல் இறைவனையே வழிபடுதலுக்கு இணையாகும். அத்தகையவர் வழிபடுவதற்கு ஏற்றவராவார்.             எனவே ஞானியை வழிபடுவதை சாமானிய மனிதனை வழிபடுவது போன்று – தனிமனித வழிபாடாக- இலேசாக எண்ணக்கூடாது. அது நிதியெனவிளங்கும், அண்ட சராசரங்களுக்கும் மூலமாகிய பரம்பொருளுக்கு அவனின் ப்ரதிநிதியின் மூலம் செலுத்தும் வழிபாடாகும். பண்டைய காலத்தில் அனைத்து குருமார்களும் ஞானிகளாயிருந்தனர். எனவே நமது பண்பாட்டில் அவர்களை கௌரவித்து வணங்கும் பழக்கம் தோன்றியது. நம் பண்பாட்டில் இத்தகைய சிறந்த பழக்கங்களை நிறுவிய மஹாஞானிகளை சிரம் தாழ்த்தி வணங்குவோமாக.


குறிப்பு: இக்கட்டுரை யின் கன்னட மூலம் AYVM blogs ல் காணலாம்.

Friday, September 4, 2020

Is Worship of Jnaani equivalent to Worship of God ?

Original Article by: Sumukha Hebbar

English Rendering by: HS Sudheendra

Respond to (lekhana@ayvm.in)




We have a system in our culture to honour and respect our Guru & other elders. We also worship them as great personalities. This kind of 'Personal worship' is questionable in society. This needs to be understood through an illustration given by Sriranga Mahaguru.
There is an auspicious function in the house of one of the relatives of a person. All the members of the family are warmly and persuasively invited. But on that day, the main invitee is unable to attend the function due to his urgent commitments. If he doesn't attend, hosts would be disappointed. So he sent his son for the function as his Pratinidhi (representative). The hosts received this representative-son very warmly. Without being considered as a small boy, he was greeted to the same seat reserved for his father even as he received the same respectful treatment. He accepted the gifts due to his father and had a graceful farewell too at the time of departure.

This is a usual practice happening in everyone's life. The representative who attended the function received all sorts of respects which were due to his Master. Similarly, in situations like Pooja the Lord is the Nidhi. The one who has realized Nidhi deserves to be considered as His pratinidhi (representative).

Suppose a piece of iron  is placed in fire. After sometime the iron piece too starts glowing like fire. Owing to its  contact  with  the fire for a long duration it changes its form so drastically that it becomes  impossible  to distinguish between it and fire. A Jnaani who has realized God is fully immersed in divine thoughts. All his sapta-dhaatus (seven vital elements) and trikaranas (Body, mind and speech) will be filled with Bhagavadrasa always. The aroma of the cardamom is bound to emanate instinctively from the mouth of the one munching it. Likewise, the Bhagavadrasa blossoms in the personality and in all the activities of a Jnaani. When such a Jnaani is available, he acts as an interface between God and the devotees. He carries whatever we offer to God and in turn brings Lord's prasaadam (grace) to us. Worship of such a Jnaani is thus equivalent to worshipping God directly. Such a person is indeed a Blessed one.  

Hence, worshiping a Jnaani should not be lightly thought of as worship of an individual. It is a worship offered through the representative (Jnaani) of the Supreme Lord, who is the source and substratum of the entire Universe. In the past, the Gurus were Jnaanis. So the traditional reverence for them has been incorporated into our culture. Let us bow to the great Maharshis who have imbibed such noble practices into our culture.

Note: The Kannada version of this article can be viewed at AYVM blogs. 

Tuesday, April 21, 2020

ಪ್ರತಿನಿಧಿಯ ಪೂಜೆ, ನಿಧಿಯ ಪೂಜೆಯೇ? (Pratinidhiya Pooje Nidhiya Poojeye?)

ಲೇಖಕರು: ಸುಮುಖ ಹೆಬ್ಬಾರ್
(ಪ್ರತಿಕ್ರಿಯಿಸಿರಿ lekhana@ayvm.in)



ನಮ್ಮ ಸಂಸ್ಕೃತಿ, ಆಚಾರ, ಸಂಪ್ರದಾಯಗಳಲ್ಲಿ ಗುರು-ಹಿರಿಯರಿಗೆ, ಪೂಜನೀಯರಿಗೆ ಗೌರವ ನೀಡುವ ಪದ್ಧತಿಯಿದೆ. ತುಂಬಾ ಶ್ರೇಷ್ಠರೆಂದು ಪೂಜಿಸುವ ವಿಷಯವೂ ಇದೆ. ವ್ಯಕ್ತಿಪೂಜೆ ಸರಿಯೇ ಎಂಬುದು ಸಮಾಜದಲ್ಲಿ ಪ್ರಶ್ನಾರ್ಹ ವಿಷಯವೂ ಆಗಿದೆ. ಇದನ್ನು ಶ್ರೀರಂಗ ಮಹಾಗುರುಗಳು ಕೊಡುತ್ತಿದ್ದ ಒಂದು ದೃಷ್ಟಾಂತದ ಮೂಲಕ ಅರ್ಥಮಾಡಿಕೊಳ್ಳಬೇಕಿದೆ.

ಒಬ್ಬ ವ್ಯಕ್ತಿಯ ಆತ್ಮೀಯ ಸಂಬಂಧಿಕರ ಮನೆಯಲ್ಲಿ ಶುಭ ಸಮಾರಂಭ. ಅವರು ಪ್ರೀತಿಯಿಂದ ಮತ್ತು ಒತ್ತಾಯ ಪೂರ್ವಕವಾಗಿ ಆಮಂತ್ರಿಸಿರುತ್ತಾರೆ. ಆದರೆ ಈ ವ್ಯಕ್ತಿಗೆ ಅತ್ಯಂತ ಒತ್ತಡದ ಮತ್ತು ಜವಾಬ್ದಾರಿಯುತವಾದ ಕೆಲಸ. ಹಾಗಾಗಿ ಸಮಾರಂಭಕ್ಕೆ ಹೋಗಲಾಗುತ್ತಿಲ್ಲ. ಹೋಗದಿದ್ದರೆ ಆತ್ಮೀಯರಿಗೆ ಬೇಸರವಾಗುತ್ತದೆ ಎಂಬ ಚಿಂತೆ. ಹಾಗಾಗಿ ತನ್ನ ಮಗನನ್ನು, ತನ್ನ ಪ್ರತಿನಿಧಿಯಾಗಿ ಕಳುಹಿಸಿದ. ಸಮಾರಂಭದಲ್ಲಿ ಸಂಬಂಧಿಕರು ವ್ಯಕ್ತಿಯ ಪ್ರತಿನಿಧಿಯಾಗಿ ಬಂದ ಮಗನನ್ನು ಆತ್ಮೀಯವಾಗಿ ಸ್ವಾಗತಿಸಿದರು. ಸಣ್ಣವನೆಂದು ಪರಿಗಣಿಸದೆ, ಆ ವ್ಯಕ್ತಿಗೆ ಹಾಕುತ್ತಿದ್ದ ಆಸನದಲ್ಲಿಯೇ ಕೂರಿಸಿದರು. ಅಷ್ಟೇ ಗೌರವದಿಂದ ಉಪಚರಿಸಿದರು. ಆ ವ್ಯಕ್ತಿಗೆ ನೀಡಬೇಕಿದ್ದ ಉಡುಗೊರೆಗಳನ್ನೆಲ್ಲಾ, ಇವನಿಗೆ ನೀಡಿದರು. ಕೊನೆಯಲ್ಲಿ ಅಷ್ಟೇ ಪ್ರೀತಿಯಿಂದ ಬೀಳ್ಕೊಟ್ಟರು.

ಎಲ್ಲರ ಜೀವನದಲ್ಲಿಯೂ ನಡೆಯುವ ಸಾಮಾನ್ಯ ಘಟನೆ ಇದು. ಇಲ್ಲಿ ಆಗಮಿಸಿದ ಪ್ರತಿನಿಧಿಗೆ ಎಲ್ಲಾ ರೀತಿಯ ಗೌರವವೂ ದೊರೆಯಿತು. ಹಾಗೆಯೇ ಪೂಜಾ ಸಂಧರ್ಭಗಳಲ್ಲಿ ನಿಧಿಯ ಸ್ಥಾನದಲ್ಲಿ ಭಗವಂತನನ್ನು ನೋಡಬೇಕು. ಯಾರು ಭಗವಂತನನ್ನು ಸಾಕ್ಷಾತ್ಕಾರ ಮಾಡಿಕೊಂಡಿರುತ್ತಾರೋ ಅಂತಹವರು ಪ್ರತಿನಿಧಿಯ ಸ್ಥಾನದಲ್ಲಿ ಪರಿಗಣಿಸಲು ಯೋಗ್ಯರಾದವರಾಗುತ್ತಾರೆ.

ಒಂದು ಕಬ್ಬಿಣದ ತುಂಡು ಕೆಂಡದ ಮಧ್ಯದಲ್ಲಿ ಸೇರಿಕೊಂಡಿದೆ ಎಂದುಕೊಳ್ಳೋಣ. ಬಹಳ ಸಮಯದ ನಂತರ, ಕೆಂಡದ ಸಾಂಗತ್ಯದಿಂದ, ಕಬ್ಬಿಣದ ತುಂಡು, ಕೆಂಡದಂತೆಯೇ ಕಾಣುತ್ತದೆ. ಕೆಂಡದ ಮಧ್ಯದಲ್ಲಿ ಕಬ್ಬಿಣದ ತುಂಡು ಸೇರಿಕೊಂಡಿದೆ ಎಂದು ಗುರುತಿಸಲಾಗದ ಮಟ್ಟಿಗೆ, ಕಬ್ಬಿಣದ ತುಂಡಿನಲ್ಲಿ ಮಾರ್ಪಾಡು ಕಂಡುಬರುತ್ತದೆ. ಭಗವಂತನನ್ನು ಸಾಕ್ಷಾತ್ಕಾರ ಮಾಡಿಕೊಂಡ ಒಬ್ಬ ಜ್ಞಾನಿಯೂ ಹಾಗೆಯೇ ಭಗವದ್ರಸದಲ್ಲಿ ಸದಾ ಕಾಲದಲ್ಲಿಯೂ ಮುಳುಗಿರುತ್ತಾನೆ. ಹಾಗಾಗಿ ಭಗವದ್ರಸವನ್ನು ತನ್ನ ಸಪ್ತ-ಧಾತುಗಳಲ್ಲಿಯೂ, ತ್ರಿಕರಣಗಳಲ್ಲಿಯೂ ತುಂಬಿಕೊಂಡಿರುತ್ತಾನೆ.  ಏಲಕ್ಕಿ ತಿಂದು ಮಾತನಾಡುವವನ ಬಾಯಿಂದ ಮಾತಿನ ಜೊತೆಗೆ, ಏಲಕ್ಕಿಯ ಪರಿಮಳ ಸಹಜವಾಗಿ ಪಸರಿಸುತ್ತದೆ. ಹಾಗೆಯೇ ಅಂತಹ ಜ್ಞಾನಿಯ ಎಲ್ಲಾ ಕೆಲಸಗಳಲ್ಲಿಯೂ, ನಡೆಗಳಲ್ಲಿಯೂ ಭಗವದ್ರಸ ಎದ್ದು ಕಾಣುವಂತಿರುತ್ತದೆ. ಅಂತಹ ಜ್ಞಾನಿಯು ಸಿಕ್ಕರೆ, ಆತನಿಗೆ ಸಮರ್ಪಿಸಿದ ಎಲ್ಲವನ್ನೂ ಭಗವಂತನಿಗೆ ತಲುಪಿಸುವ ಮತ್ತು ಅಲ್ಲಿಂದ ಬಂದ ಪ್ರೇರಣೆಯನ್ನು ನಮ್ಮೆಡೆಗೆ ತಲುಪಿಸುವ ವಾಹಕನಾಗಿ ಕೆಲಸ ಮಾಡುತ್ತಾನೆ. ಅಂತಹವನಿಗೆ ಪೂಜೆ ಮಾಡಿದರೆ, ನೇರವಾಗಿ ಭಗವಂತನಿಗೆ ಪೂಜೆ ಮಾಡಿದಂತೆ. ಅಂತಹವನು ಸರ್ವಾತ್ಮನಾ ಪೂಜ್ಯ.

ಹಾಗಾಗಿ ಜ್ಞಾನಿಗೆ ಪೂಜೆ ಮಾಡುವ ವಿಷಯ ಯಾವುದೊ ಒಂದು ವ್ಯಕ್ತಿಗೆ ಸಲ್ಲಿಸುವ ಪೂಜೆ ಅಥವಾ ಗೌರವ ಎಂದು ಭಾವಿಸಬಾರದು. ಜ್ಞಾನಿ ಎಂಬ ಪ್ರತಿನಿಧಿಯ ಮೂಲಕ, ಇಡೀ ಜಗತ್ತಿಗೇ ನಿಧಿಯಾಗಿರುವ ಪರಮಾತ್ಮನಿಗೆ ಸಲ್ಲಿಸುವ ಪೂಜೆ. ಹಿಂದಿನ ಕಾಲದಲ್ಲಿ ಗುರು-ಹಿರಿಯರು ಇಂತಹ ಜ್ಞಾನಿಗಳಾಗಿರುತ್ತಿದ್ದರು. ಹಾಗಾಗಿ ಅವರನ್ನು ಗೌರವಿಸುವ ಪೂಜಿಸುವ ಪದ್ಧತಿ ನಮ್ಮ ಸಂಸ್ಕೃತಿಯಲ್ಲಿ ಸೇರಿಕೊಂಡಿದೆ. ಇಂತಹ ಪದ್ದತಿಗಳನ್ನು ನಮ್ಮ ಸಂಸ್ಕೃತಿಯಲ್ಲಿ ಸೇರಿಸಿದ ಮಹರ್ಷಿಗಳಿಗೆ ನತಮಸ್ತಕರಾಗೋಣ.   

ಸೂಚನೆ: 21/04/2020 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.