Sunday, January 23, 2022

ಶ್ರೀರಾಮನ ಗುಣಗಳು -41 ದುಷ್ಟ ಶಿಕ್ಷಕ- ಶ್ರೀರಾಮ (Sriramana Gunagalu -41 Dusta Sikshaka Shrirama)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ 

(ಪ್ರತಿಕ್ರಿಯಿಸಿರಿ lekhana@ayvm.in)


  

ಶ್ರೀರಾಮನ ದುಷ್ಟರನ್ನು ಶಿಕ್ಷಿಸುವ ಗುಣವು ಸಾಮಾನ್ಯರಿಗಿಂತಲೂ ವಿಶಿಷ್ಟವಾದುದುಶ್ರೀರಾಮನ ಅವತಾರದ ಉದ್ದೇಶವೇ ದುಷ್ಟರ ಶಿಕ್ಷಣವಾಗಿತ್ತು. ಎಲ್ಲಾ ಅವತಾರಗಳ ಉದ್ದೇಶವೂಅಧರ್ಮವನ್ನು ನಾಶಮಾಡಿ ಧರ್ಮವನ್ನು ಸಂಸ್ಥಾಪನೆ ಮಾಡುವುದೇ ಆಗಿದೆಅಧರ್ಮವು ದುಷ್ಟರಿಂದ ಉಂಟಾಗುತ್ತದೆಯಾವಾಗ ದುಷ್ಟರ ಅಂತ್ಯವು ಸಂಭವಿಸುವುದೋ ಅಂದೇ ಧರ್ಮಕ್ಕೆ ಜಯವೆಂದರ್ಥದುಷ್ಟರು ಶಿಷ್ಟರನ್ನು ಪೀಡಿಸುತ್ತಾ ಧರ್ಮಕಂಟಕರಾಗಿ ಇರುತ್ತಾರೆಒಂದು ದೃಷ್ಟಿಯಿಂದ ಇದು ಸೃಷ್ಟಿ ಸಹಜವಾಗಿ ನಡೆಯುವ ಪ್ರಕ್ರಿಯೆಈ ಸೃಷ್ಟಿಯಲ್ಲಿ ರಜಸ್ಸು ಮತ್ತು ತಮಸ್ಸೆಂಬ ಎರಡು ಅವಗುಣಗಳು ಸತ್ತ್ವವನ್ನು ಆವರಿಸಿಕೊಂಡೇ ಇರುತ್ತವೆಸತ್ತ್ವವು ಇವೆರಡರಿಂದ ಪೃಥಕ್ಕಾಗಲು ಸದಾ ಹವಣಿಸುತ್ತಿರುತ್ತದೆಇದನ್ನೇ ಯುದ್ಧ ಎಂಬುದಾಗಿ ಹೇಳಲಾಗುತ್ತದೆಸತ್ತ್ವಗುಣಾಧಿಪನಾದ ಭಗವಂತನ ಅಂಶಕ್ಕೂರಜಸ್ಸು ಮತ್ತು ತಮಸ್ಸಿಗೆ ವಶರಾಗಿ ಸತ್ತ್ವವನ್ನು ಮೆಟ್ಟಬಯಸುವ ರಾಕ್ಷಸರಿಗೂ ಸದಾ ಕಾಲ ಯುದ್ಧವು  ಸಂಭವಿಸುತ್ತಲೇ ಇರುತ್ತದೆಆದರೆ ಕೊನೆಗೆ ಜಯವಾಗುವುದು ಸತ್ತ್ವಕ್ಕೆಉಳಿದ ಗುಣಗಳು ಅದಕ್ಕೆ ಬಾಗಲೇಬೇಕುಇದನ್ನು ಶ್ರೀರಾಮನ ಜೀವನದಿಂದ ದುಷ್ಟರ ಶಿಕ್ಷಣದ ವಿಧಾನವನ್ನು ನೋಡಿದರೆ ಅರ್ಥವಾಗುತ್ತದೆಮತ್ತೊಂದು ವಿಷಯವನ್ನು ನಾವಿಲ್ಲಿ ಗಮನಿಸಬೇಕುಸತ್ತ್ವಕ್ಕೆ ಅವಿರೋಧವಾದಾಗ ರಜಸ್ಸು – ತಮಸ್ಸುಗಳು ಗುಣವೇ ಆಗುತ್ತವೆವಿರೋಧವಾದಾಗ ಇವೇ ದೋಷವಾಗುತ್ತವೆ ಎಂದು.

ಗುಣಗಳು ಯಾವಾಗಲೂ ಒಬ್ಬ ವ್ಯಕ್ತಿಯನ್ನು ಆಶ್ರಯಿಸಿ ತನ್ನ ಅಸ್ತಿತ್ವವನ್ನು ತೋರಿಸುವುದುಆ ವ್ಯಕ್ತಿಯು ಇರುವ ತನಕ ಅವನಲ್ಲಿ ಆ ಗುಣವು ತೋರುತ್ತದೆವ್ಯಕ್ತಿಯ ಅವಸಾನದ ಬಳಿಕ ಅಲ್ಲಿ ಆ ಗುಣಕ್ಕೆ ಅಸ್ತಿತ್ವವಿರುವುದಿಲ್ಲಈ ಕಾರಣಕ್ಕೆ ಶ್ರೀರಾಮನು ವ್ಯಕ್ತಿಯನ್ನು ದ್ವೇಷಿಸಲಿಲ್ಲಬದಲಾಗಿ ಅವರಲ್ಲಿರುವ ಆ ದುಷ್ಟ ಸ್ವಭಾವವನ್ನು ಅಥವಾ ಗುಣವನ್ನು ಮಾತ್ರ ಅಲ್ಲಗಳೆದಮತ್ತು ಶಿಕ್ಷಣವೇ ಅವನ ಗುರಿಯಾಗಿತ್ತೇ ಹೊರತು ಆ ವ್ಯಕ್ತಿಯ ನಾಶವು ಆಗಿರಲಿಲ್ಲಶಿಕ್ಷಣವೆಂಬುದು ಶ್ರೀರಂಗಮಹಾಗುರುಗಳು ಹೇಳುವಂತೆ 'ಶಿಕ್ಷ-ವಿದ್ಯೋಪಾದಾನೇ' ಶಿಕ್ಷೆಗೆ ಒಳಪಡಿಸುವ ಉದ್ದೇಶ ಒಬ್ಬನನ್ನು ವಿದ್ಯಾವಂತನನ್ನಾಗಿ ಮಾಡುವುದೇ ಆಗಿದೆ. ತಾನು ಮೊದಲು ಮಾಡಿದ ತಪ್ಪನ್ನು ಅರಿತುಕೊಂಡುಪುನಃ ಅದೇ ತಪ್ಪನ್ನು ಮತ್ತೆ ಮಾಡದಿರುವಿಕೆಯಾಗಿದೆಯಾರಾದರೂ ತಪ್ಪನ್ನು ಒಪ್ಪಿಬಂದಾಗ ಅವರ ತಪ್ಪನ್ನು ಮನ್ನಿಸಿ ಕ್ಷಮಿಸುವುದೂ ದುಷ್ಟಶಿಕ್ಷಣದ ಇನ್ನೊಂದು ಮುಖವೇ ಆಗಿದೆಇದಕ್ಕೆ ಒಂದು ಉದಾಹರಣೆಯನ್ನು ರಾಮಾಯಣದಲ್ಲಿ ನೋಡಬಹುದುಸುಗ್ರೀವನು ಶ್ರೀರಾಮನ ಸಖ್ಯವನ್ನು ಮಾಡಿಕೊಂಡು ಹೋಗಿ ಅದನ್ನು ಮರೆತುಕಾಮಲಂಪಟನಾಗಿ ಕೊಟ್ಟ ಮಾತನ್ನೇ ಮರೆತಿದ್ದಕೊನೆಯಲ್ಲಿ ತನ್ನ ತಪ್ಪಿನ ಅರಿವಾಗಿ ಶ್ರೀರಾಮನಲ್ಲಿ ಶರಣು ಬಂದಅವನನ್ನು ಪೂರ್ವಾಗ್ರಹವಿಲ್ಲದೆ ಅಂಗೀಕಸಿದ ಶ್ರೀರಾಮಇದು ಶ್ರೀರಾಮನು ಮಾಡಿದ ದುಷ್ಟಪ್ರವೃತ್ತಿಯ ನಿಗ್ರಹವಾಲಿಯನ್ನು ಕೊಂದ ಅನಂತರ ಮತ್ತು ಯಾವನ ಸಂಹಾರಕ್ಕೆಂದೇ ಅವತರಿಸಿದನೋ ಅಂತಹ ಲಂಕಾಧಿಪನಾದ ರಾವಣನ ಸಂಹಾರದ ಕೊನೆಯಲ್ಲಿ ಶ್ರೀರಾಮನ ನಡೆಯು ಎಂಥಹದ್ದು ಎಂಬುದು ತಿಳಿಯುತ್ತದೆ

ಅಂದರೆ 'ಮರಣಾಂತಾನಿ ವೈರಾಣಿಎಂಬ ಮಾತು ಸಾಕು. ದುಷ್ಟನ ಮರಣದಿಂದಲೇ ಅವನಲ್ಲಿನ ವೈರವೂ ಅಂತ್ಯವಾಗುತ್ತದೆ. ಶ್ರೀರಾಮನು ದುಷ್ಟಪ್ರವೃತ್ತಿಯ ವೈರಿಯಾಗಿದ್ದನೇ ಹೊರತುವ್ಯಕ್ತಿಯ ವೈರಿಯಾಗಿರಲಿಲ್ಲ ಎಂಬುದುಇದಕ್ಕೆ ಹಿನ್ನೆಲೆ ಇಷ್ಟೆಗುಣದೋಷವನ್ನೆ ವಿಶೇಷವಾಗಿ ಪರಿಗಣಿಸಬೇಕೆ ವಿನಾ ಗುಣ ಅಥವಾ ದೋಷವಿಶಿಷ್ಟನಾದ ವ್ಯಕ್ತಿಯನ್ನಲ್ಲ ಎಂದುಈ ಪ್ರಕಾರವಾಗಿ ಶ್ರೀರಾಮನು ಸತ್ತ್ವವಿರೋಧಿಯಾದ ರಾಜಸ-ತಾಮಸಗಳನ್ನು ನಿಗ್ರಹಿಸಿ ಸತ್ತ್ವವನ್ನು ಜಾಗರಗೊಳಿಸಿ ಲೋಕದಲ್ಲಿ ಸಾಮರಸ್ಯವನ್ನು ಮೂಡಿಸಿದ.

ಸೂಚನೆ : 23/1/2022 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯ "ಶ್ರೀರಾಮನ ಗುಣಗಳು" ಅಂಕಣದಲ್ಲಿ ಪ್ರಕಟವಾಗಿದೆ.