Saturday, February 2, 2019

Mr. Narasimha Bhat (ನರಸಿಂಹ ಭಟ್ ಬಡಗು)


ಹುದ್ದೆ (Occupation) - ಸಂಸ್ಕೃತ ಉಪನ್ಯಾಸಕರು


Email: lekhana@ayvm.in



ಪರಿಚಯ (Introduction):
ಶ್ರೀಯುತರು ಸಂಸ್ಕ್ರತದಲ್ಲಿ ವಿದ್ವತ್ ಪದವಿ ಮತ್ತು ಮೈಸೂರು ಮುಕ್ತ ವಿಶ್ವವಿದ್ಯಾಲಯದಿಂದ ಎಂ ಎ ಪದವಿಗಳನ್ನು ಪಡೆದಿದ್ದಾರೆ. ನ್ಯಾಯಶಾಸ್ತ್ರದ ವಿಷಯದಲ್ಲಿ ನಡೆದ ರಾಷ್ಟ್ರಮಟ್ಟದ ಚರ್ಚಾಸ್ಪರ್ಧೆಯಲ್ಲಿ ಸ್ವರ್ಣಪದಕವನ್ನು ಗಳಿಸಿದ್ದಾರೆ. ಕಳೆದ ಇಪ್ಪತ್ತೈದು ವರ್ಷಗಳಿಂದ ಸಂಸ್ಕೃತ ಭಾಷೆ ಮತ್ತು ಭಾರತೀಯ ಸಂಸ್ಕೃತಿಗಳ  ಅಧ್ಯಯನ-ಸಂಶೋಧನೆಗಳನ್ನು ನಡೆಸುತ್ತಿದ್ದಾರೆ. ಕಳೆದ ಇಪ್ಪತ್ತು ವರ್ಷಗಳಿಂದ ಈ ವಿಷಯಗಳನ್ನು ಅಧಿಕರಿಸಿ ಪಾಠ ಪ್ರವಚನಗಳನ್ನೂ ಮಾಡುತ್ತಿದ್ದಾರೆ.

ಹವ್ಯಾಸ/ಆಸಕ್ತಿ (Hobbies/Interests):

ಪ್ರಸ್ತುತ ಬೆಂಗಳೂರಿನ ರಾಮಕೃಷ್ಣ ಆಯುರ್ವೇದ ಮಹಾವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದು ಆಯುರ್ವೇದ, ಮತ್ತು ಭಾರತೀಯ ಸಂಸ್ಕೃತಿಗೆ ಸಂಬಧವಾದ ಅನೇಕ ವಿಚಾರಗೋಷ್ಠಿಗಳಲ್ಲಿ ವಿಷಯ ಮಂಡನೆಯನ್ನು ಮಾಡಿರುತ್ತಾರೆ. ಅನೇಕ ಬೇಸಿಗೆ ಶಿಬಿರಗಳನ್ನು ಮಕ್ಕಳಿಗೆ ನಡೆಸಿಕೊಡುವುದರ ಜೊತೆಗೆ ಅನೇಕ ವಿಚಾರಸಂಕಿರಣಗಳಲ್ಲಿ ಉಪನ್ಯಾಸವನ್ನು ಮಾಡಿರುತ್ತಾರೆ. ರಾಜ್ಯಮಟ್ಟದ ಸಂಸ್ಕೃತಕ್ಕೆ ಸಂಬಂಧಿಸಿದ ಸ್ಪರ್ಧೆಗಳಲ್ಲಿ ನಿರ್ಣಾಯಕರಾಗಿ ಭಾಗವಹಿಸಿರುತ್ತಾರೆ.

ಉಪನ್ಯಾಸದ ಜೊತೆ ಜೊತೆಗೆ ಬರವಣಿಗೆಯಲ್ಲಿಯೂ ಶ್ರೀಯುತರು ಆಸಕ್ತರು. ಪದ್ಮಪಾದಾಚಾರ್ಯರು ಮತ್ತು ತೋಟಕಾಚಾರ್ಯರ ಬಗ್ಗೆ ಪುಸ್ತಕಗಳನ್ನು ಬರೆದಿರುತ್ತಾರೆ. ಪಾಠ ಪ್ರವಚನಗಳು ಇವರ ಹವ್ಯಾಸಗಳು