Sunday, April 24, 2022

ಶ್ರೀ ರಾಮನ ಗುಣಗಳು - 52 ಶಿಷ್ಯೋತ್ತಮ- ಶ್ರೀರಾಮ (Sriramana Gunagalu -52 Sisyottama- Srirama)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್

(ಪ್ರತಿಕ್ರಿಯಿಸಿರಿ lekhana@ayvm.in)




ಪ್ರತಿಯೊಬ್ಬರಿಗೂ ಜೀವನದಲ್ಲಿ ಶಿಕ್ಷಣ ಅತ್ಯಂತ ಮುಖ್ಯಇದು ಲಭಿಸುವುದು ಗುರುವಿನಿಂ. ಅವನಿಂದ ಶಿಕ್ಷಣಪಡೆಯುವವನೇ ಶಿಷ್ಯನಾಗುತ್ತಾನೆ. ಗುರು-ಶಿಷ್ಯಸಂಬಂಧದಿಂದಲೇ ವಿದ್ಯೆ ಪೂರ್ಣವಾಗುವುದು. ಶ್ರೀರಾಮನೂ ಕೂಡ ಒಬ್ಬ ಸಾಮಾನ್ಯಮಾನವನಾಗಿ ಧರೆಗೆ ಅವತರಿಸಿ. ಹಾಗಾಗಿ ಶಿಕ್ಷಣವೆಂಬುದು ಅನಿವಾರ್ಯವಾಗಿತ್ತುವಸಿಷ್ಠರ ಬಳಿ ವೇದಾಂಗಸಹಿತವಾಗಿ ನಾಲ್ಕು ವೇದಸ್ಮೃತಿಇತಿಹಾಸಪುರಾಣಾದಿಗಳನ್ನು ಕಲಿತವಾಲ್ಮೀಕಿಗಳು ಹೇಳುವಂತೆ 'ಧನುರ್ವೇದೇ ಚ ನಿಷ್ಠಿತಃಎನ್ನುವಂತೆ ಧನುರ್ವೇದದಲ್ಲೂ ಅತ್ಯಂತ ಪ್ರಾವೀಣ್ಯವನ್ನು ಸಂಪಾದಿಸಿದ್ದನುಇಂತಹ ಸಂದರ್ಭದಲ್ಲಿ ಬಹಳ ವಿಶೇಷವಾದ ಘಟನೆಯೊಂದು ಘಟಿಸುತ್ತದೆಇದು ಶ್ರೀರಾಮನು 'ಶಿಷ್ಯೋತ್ತಮ'ನಾಗಿದ್ದ ಎಂಬುದನ್ನು ಪುಷ್ಟೀಕರಿಸುತ್ತದೆ.

ಒಬ್ಬ ಗುರುವಾದವನು ತನ್ನೆಲ್ಲ ವಿದ್ಯೆಗಳನ್ನು ಉತ್ತಮ ಶಿಷ್ಯನಿಗೆ ಧಾರೆಯೆರೆಯಬೇಕೆಂಬ ತುಡಿತವಿರುತ್ತದೆಆಗ ಆ ವಿದ್ಯಾಧಿದೇವತೆಯೂ ಅರ್ಹನ ಬಳಿ ವಿರಾಜಮಾನಳಾಗುತ್ತಾಳೆವಿದ್ಯಾದೇವತೆಯು ಗುರುವಿನ ಬಳಿ ಹೋಗಿ ಹೀಗೆ ಪ್ರಾರ್ಥಿಸುತ್ತಾಳೆ ಎಂಬುದಾಗಿ ಉಪನಿಷತ್ತು ಸಾರುತ್ತದೆ – "ಹೇವಿದ್ಯಾಗುರುವೇನನ್ನನ್ನು ರಕ್ಷಿಸುನನ್ನನ್ನು ಅಪ್ರಾಮಾಣಿಕನಿಗೆಅಸೂಯಕನಿಗೆಕೃತಜ್ಞತೆ ಇಲ್ಲದಿರುವವನಿಗೆ ಕೊಬೇಡನಾನು ಯಾವ ರೀತಿ ವೀರ್ಯವತಿಯಾಗಿ ಇರಬೇಕೋಅಂತೆಯೇ ನನ್ನನ್ನು ರಕ್ಷಿಸುಎಂದು.

ಅನೇಕ ವರ್ಷಗಳಿಂದ ಮಕ್ಕಳಾಗದಿರುವುದರಿಂದ ದಶರಥರಾಜನಿಗೆ ಸಂತತಿಯ ಕೊರಗಿತ್ತುಅದು ಶ್ರೀರಾಮನ ಮುಖದರ್ಶನದಿಂದ ದೂರವಾಯಿತುಸ್ವಲ್ಪ ಸಮಯದಲ್ಲಿ ಮತ್ತೊಮ್ಮೆ ಬಿರುಗಾಳಿಯೇ ಎದ್ದಂತೆ ಅವನಿಗೆ ಅನಿಸಿತುಅದಾವುದೆಂದರೆ ವಿಶ್ವಾಮಿತ್ರ ಮಹಾಮುನಿಗಳ ಆಗಮನಅವರು ಬಂದು ಶ್ರೀರಾಮನನ್ನು ಯಜ್ಞರಕ್ಷಣೆಗಾಗಿ ಕಳುಹಿಸಿಕೊಡುವಂತೆ ಕೇಳಿಕೊಳ್ಳುತ್ತಾರೆರಾಜನಾದರೋ 'ಊನಷೋಡಶವರ್ಷೀಯನಾದ ರಾಮನನ್ನು ಹೇಗಪ್ಪ ಕಳಿಸಲಿ!' ಎಂಬ ಆತಂಕಕ್ಕೆ ಒಳಗಾಗುತ್ತನೆಶ್ರೀರಾಮನ ನಿಜವಾದ ಸಾಮರ್ಥ್ಯ ಮತ್ತು ಸ್ವಭಾವವನ್ನು ಅರಿತಿದ್ದ ವಿಶ್ವಾಮಿತ್ರರು ಕಳಿಸಿಕೊಡುವಂತೆ ಒತ್ತಾಯಿಸುತ್ತಾರೆಅವರ ತುಡಿತವೇ ಬೇರೆಅವರಿಗೆ ಯಜ್ಞರಕ್ಷಣೆಯೆಂಬುದು ಒಂದು ನೆಪವಷ್ಟೆಎಂತೆಂಹ ರಾಕ್ಷಸರನ್ನೂ ಸಂಹರಿಸಬಲ್ಲ ಅಪಾರ ಶಕ್ತಿಸಂಪನ್ನರು ಅವರುಅವರಿಗೆ ಶ್ರೀರಾಮನ ಸಹಾಯದ ಅವಶ್ಯಕತೆ ಉಂಟೇಅಲ್ಲಿ ಶ್ರೀರಾಮನನ್ನು ಕರೆಯುತ್ತಿರುವ   ಉದ್ದೇಶ ಯಜ್ಞರಕ್ಷಣೆಯಲ್ಲಅದು ವಿದ್ಯಾದಾನದ ತುಡಿತಸತ್ಪಾತ್ರನಿಗೆ ವಿದ್ಯೆಯನ್ನು ಕೊಟ್ಟಾಗಲೇ ಗುರುವಿಗೆ ನೆಮ್ಮದಿಶ್ರೀರಾಮನಂತಹ ಸತ್ಪಾತ್ರರು ಇನ್ನಾರು ಸಿಕ್ಕಾರು?

ಶಿಷ್ಯ ಎಂಬ ಪದಕ್ಕೆ ಶ್ರೀರಂಗ ಮಹಾಗುರುಗಳ ಅಭಿಪ್ರಾಯದಂತೆ ಹೀಗೆ ವಿವರಿಸಬಹುದು – ಗುರುವಿನಲ್ಲಿ ಒಂದಾಗುವವನೇ ಶಿಷ್ಯ(ಶಿಷ್ಯತೇ ಇತಿ ಶಿಷ್ಯಃ) ಎಂದುಯಾರು ತನ್ನ ಅಸ್ತಿತ್ವವನ್ನು ಕಳೆದುಕೊಂಡು ಗುರುವಿನ ರೂಪವನ್ನೇ ತಾಳುತ್ತಾನೋ ಆತನನ್ನು ಶಿಷ್ಯನೆಂದು ಕರೆಯಬಹುದುಶಾಸನಕ್ಕೆ ಅರ್ಹನಾದವನು ಎಂಬುದಾಗಿಯೂ ಅದಕ್ಕೆ ವಿವರಣೆಯನ್ನು ಭಾಷಾಶಾಸ್ತ್ರದ ಹಿನ್ನೆಲೆಯೆಲ್ಲಿ ನೀಡಬಹುದುಒಬ್ಬ ಶಿಷ್ಯನಿಗೆ ಉತ್ತಮ ಗುರುವಿನ ಲಭ್ಯತೆಯು ಹೇಗೆ ಸಾರ್ಥಕತೆಯನ್ನು ತಂದುಕೊಡುತ್ತದೆಯೋಅಂತೆಯೇ ಒಬ್ಬ ಗುರುವಿಗೆ ಉತ್ತಮಶಿಷ್ಯನ ಲಾಭವು ಅಂತಹ ಸಾರ್ಥಕಭಾವವನ್ನು ತಂದುಕೊಡುತ್ತದೆಇಂತಹ ಗುರುಶಿಷ್ಯಭಾವವನ್ನು  ವಿಶ್ವಾಮಿತ್ರರು ಮತ್ತು ಶ್ರೀರಾಮನಲ್ಲಿ ಕಾಲು ಸಾಧ್ಯವಸಿಷ್ಠರ ಅನುಮೋದನೆಯೊಂದಿಗೆ ದಶರಥನು ಶ್ರೀರಾಮನನ್ನು ವಿಶ್ವಾಮಿತ್ರರ ಜೊತೆ ಕಳಿಸಿಕೊಡಲು ಸಮ್ಮತಿಸುತ್ತಾನೆವಿಶ್ವಾಮಿತ್ರರು ಶ್ರೀರಾಮ-ಲಕ್ಷ್ಮಣರಿಗೆ ಅನೇಕ ಗುಹ್ಯವಾದ ಅಸ್ತ್ರವಿದ್ಯೆಗಳನ್ನು ಧಾರೆಯೆರೆಯುತ್ತಾರೆ. ಬಲ-ಅತಿಬಲ ಎಂಬ ಅಸ್ತ್ರಗಳನ್ನು ಉಪದೇಶಿಸುತ್ತಾರೆದಾರಿಯುದ್ದಕ್ಕೂ ರಘುವಂಶದ ಹಿರಿಮೆಯನ್ನು ಸಾರುವಂತಹ ಗಂಗಾವತರಣ ಮುಂತಾದ ಕಥೆಗಳನ್ನು ಹೇಳುತ್ತಾ ಅವನನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿಯೂ ಶಿಕ್ಷಿತನನ್ನಾಗಿ ಮಾಡುತ್ತಾರೆ.

ಸೂಚನೆ :24/4/2022 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯ "ಶ್ರೀರಾಮನ ಗುಣಗಳು" ಅಂಕಣದಲ್ಲಿ ಪ್ರಕಟವಾಗಿದೆ.