Sunday, October 22, 2023

ಪರಮಾತ್ಮನ ಸ್ವರೂಪವನ್ನು ಅರಿತ ಶುದ್ಧಪ್ರಕೃತೆ ತಾರಾ (Paramatmana Svarupavannu Arita Suddhaprakr̥te Tara)

 

ಲೇಖಕರು; ಶ್ರೀಮತಿ ಸೌಮ್ಯಾ ಪ್ರದೀಪ್

(ಪ್ರತಿಕ್ರಿಯಿಸಿರಿ lekhana@ayvm.in)



ತಾರಾ ವಾನರರ ರಾಜ ವಾಲಿಯ ಹೆಂಡತಿಸುಷೇಣನೆಂಬ ವಾನರಶ್ರೇಷ್ಠನ ಮಗಳು,ವಾನರರಲ್ಲಿ ಪರಕ್ರಮಿಯಾದ ಅಂಗದನ ತಾಯಿಶ್ರೀಮದ್ ರಾಮಾಯಣದಲ್ಲಿ ವಾಲಿಯ ಕಥೆ ಅತ್ಯಂತ ಪ್ರಸಿದ್ಧವಾಗಿದೆಇಂದ್ರನ ಪುತ್ರನಾದ ವಾಲಿಯು ಮಹಾ ಬಲಿಷ್ಠಅವನು ತನ್ನ ತಮ್ಮನಾದ ಸುಗ್ರೀವನ ಮೇಲಿನ ತಪ್ಪು ಗ್ರಹಿಕೆಯಿಂದ ಅವನನ್ನು ಸದಾಕಾಲ ದ್ವೇಷಿಸುತ್ತಾಸಂಹರಿಸಲು ಯತ್ನಿಸುತಿದ್ದಸುಗ್ರೀವನ ಎಲ್ಲಾ ಸಂಪತ್ತನ್ನೂ , ಕಡೆಗೆ ಅವನ ಪತ್ನಿಯಾದ ರುಮೆಯನ್ನೂ ಕೂಡ ಬಲವಂತವಾಗಿ ಅಪಹರಿಸಿದ್ದಸುಗ್ರೀವನು ವಾಲಿಯ ಕ್ರೋಧಕ್ಕೆ ಹೆದರಿ ತನ್ನನ್ನು ತಾನು ರಕ್ಷಿಸಿಕೊಳ್ಳಲು ಋಷ್ಯಮೂಕ ಎಂಬ ಪರ್ವತದಲ್ಲಿ ವಾಸವಾಗಿದ್ದ  ಪ್ರದೇಶಕ್ಕೆ ಋಷಿ ಶಾಪದ ಕಾರಣದಿಂದ ವಾಲಿಯ ಆಗಮನಕ್ಕೆ ನಿಷೇಧವಿತ್ತುವಾಲಿಯ ಪತ್ನಿ ತಾರಾ ನೀತಿವಂತೆಧರ್ಮಜ್ಞೆಅವಳು ಅನೇಕ ಬಾರಿ ಹಿತವಚನಗಳ ಮೂಲಕ ಪತಿಯ ತಪ್ಪು ನಡುವಳಿಕೆಗಳನ್ನು ತಿದ್ದಲು ಪ್ರಯತ್ನಿಸುತ್ತಲೇ ಇದ್ದಳುಆದರೂ ವಾಲಿಯು ಕ್ರೋಧದಿಂದ ಅಂಧನಾಗಿ ತನ್ನ ಹಠವನ್ನು ಮುಂದುವರಿಸಿ ಸುಗ್ರೀವನಿಗೆ ತೊಂದರೆ ಕೊಡುತ್ತಲೇ ಇದ್ದಅಂತಹ ಸಂದರ್ಭದಲ್ಲಿ ಋಷ್ಯಮೂಕ ಪರ್ವತಕ್ಕೆ ಶ್ರೀರಾಮ ಹಾಗೂ ಲಕ್ಷ್ಮಣರ ಆಗಮನವಾಗುತ್ತದೆಶ್ರೀರಾಮ ಹಾಗೂ ಸುಗ್ರೀವರ ಭೇಟಿಯಾಗುತ್ತದೆಸುಗ್ರೀವನು ವಾಲಿಯ ದುಷ್ಟತನವನ್ನು ವಿವರಿಸಿ ವಾಲಿಯ ಸಂಹಾರಕ್ಕೆ ಸಹಾಯ ಮಾಡುವಂತೆ ಶ್ರೀರಾಮನಲ್ಲಿ ವಿನಂತಿಸಿಕೊಳ್ಳುತ್ತಾನೆಅಂತೆಯೇ ಶ್ರೀರಾಮನೂ ಕೂಡ ಅಧರ್ಮಿಯಾದ ವಾಲಿಯನ್ನು ಸಂಹರಿಸಲು ಸಂಕಲ್ಪಿಸುತ್ತಾನೆ.


 ವಾಲಿ ಮತ್ತು ಸುಗ್ರೀವರ ಯುದ್ಧದಲ್ಲಿ ಶ್ರೀರಾಮನ ಬಾಣದ ಪ್ರಹಾರಕ್ಕೆ ತುತ್ತಾಗಿ ಮರಣಶಯ್ಯೆಯಲ್ಲಿರುವ ವಾಲಿಯನ್ನು ಕಂಡು ತಾರೆಯು ಅತ್ಯಂತ ದುಃಖಪಡುತ್ತಾಳೆಶ್ರೀರಾಮನನ್ನು ಕುರಿತು ಅನೇಕ ವಿಧವಾಗಿ ದುಃಖಭರಿತವಾದ ಮಾತುಗಳನ್ನು ಆಡುತ್ತಾಳೆಅವಳ ಮಾತುಗಳಲ್ಲಿ ಪತಿಯ ಬಗ್ಗೆ ಅವಳಿಗಿರುವ ಅನುರಾಗಶ್ರೀರಾಮನ ಮೇಲಿನ ಭಕ್ತಿ ಎಲ್ಲವೂ ವ್ಯಕ್ತವಾಗುತ್ತದೆಶಾಸ್ತ್ರವಾಕ್ಯಗಳನ್ನು ಒಳಗೊಂಡಂತಹ ಅವಳ ಮಾತು ಅವಳಲ್ಲಿದ್ದ ಶಾಸ್ತ್ರ ಜ್ಞಾನವನ್ನುಬುದ್ಧಿ ಪರಿಪಕ್ವತೆಯನ್ನು ತಿಳಿಸುತ್ತದೆಶ್ರೀರಾಮನ ಸಂಪೂರ್ಣ ಜೀವನ ಚರಿತ್ರೆಯ  ಹಾಗೂ ಅವನ ಮೂಲ ಸ್ವರೂಪದ ಅರಿವು ಅವಳಿಗೆ ಇತ್ತು ಎಂಬುದು ಅವಳ ಮಾತುಗಳಲ್ಲಿ ಸ್ಪಷ್ಟವಾಗುತ್ತದೆ.


 ಪತಿಯಾದ ವಾಲಿಯು ಮಧ್ಯರಾತ್ರಿಯಲ್ಲಿ ಸುಗ್ರೀವನ ಯುದ್ಧದ ಕರೆಗೆ ಓಗೊಟ್ಟು ಆವೇಶ ಭರಿತನಾಗಿ ಯುದ್ಧಕ್ಕೆ ಸಿದ್ಧನಾಗಿ ನಿಂತಾಗ ಇದು ಯುದ್ಧಕ್ಕೆ ಹೋಗುವ ಸಮಯವಲ್ಲಸುಗ್ರೀವನನ್ನು ಮೊದಲಿನಂತೆ ತಿಳಿಯಬೇಡ ಅವನಿಗೆ ಈಗ ಶ್ರೀರಾಮನೆಂಬ ಮಹಾಪುರುಷನ ಬೆಂಬಲ ದೊರಕಿದೆನೀನು ನಿನ್ನ ತಮ್ಮನೊಂದಿಗಿನ ವೈರವನ್ನು ತ್ಯಜಿಸಿ ಅವನೊಂದಿಗೆ ಮೈತ್ರಿಯನ್ನು ಸಂಪಾದಿಸಿಕೋ ಅದು ನಮ್ಮ ಇಡೀ ವಾನರ ಸಂಕುಲಕ್ಕೆ ಹಿತಕರವಾದದ್ದು ಎಂಬ ಯುಕ್ತಿಯುಕ್ತವಾದ ಮಾತುಗಳನ್ನಾಡುತ್ತಾಳೆ. ಆದರೆ ವಾಲಿಯ ಅಂತ್ಯ ಸಮೀಪಿಸಿರುವುದರಿಂದ ತಾರೆಯ ಸಮಯೋಚಿತವಾದ ಮಾತುಗಳು ಅವನಿಗೆ ಹಿಡಿಸುವುದಿಲ್ಲ.


 ಶ್ರೀರಾಮನ ಬಾಣದ ಪ್ರಹಾರಕ್ಕೆ ತುತ್ತಾಗಿ ಮೂರ್ಛೆಗೊಂಡಿರುವ ಪತಿಯನ್ನು ಕಂಡು ಸಾಧ್ವಿಯಾದ ತಾರೆಯು ಆರ್ತವಾಗಿ ವಿಲಪಿಸುತ್ತಾಳೆಪತಿಯ ಶೌರ್ಯ ಪರಾಕ್ರಮಗಳನ್ನು ಹಾಗೂ ಇಂದು ಅವನಿಗೆ ಬಂದಿರುವ ದೈನ್ಯಸ್ಥಿತಿಯನ್ನು ನೆನೆದು ಅತಿಯಾಗಿ ಶೋಕಿಸುತ್ತಾಳೆಪತಿಯೊಡನೆ ಸಹಗಮನ ಮಾಡಲು ಸಿದ್ಧಳಾಗುತ್ತಾಳೆಆಗ ಆಂಜನೇಯನೇಯನು ಅವಳನ್ನು ಕುರಿತು ಸಾಂತ್ವನದ ಮಾತುಗಳನ್ನು ಹೇಳಿಪುತ್ರನಾದ ಅಂಗದನನ್ನು ನೋಡಿಕೊಳ್ಳುವ ಕರ್ತವ್ಯವನ್ನು ನೆನಪಿಸುತ್ತಾನೆ.


 ಅಂತ್ಯಕಾಲ ಸಮೀಪಸುತ್ತಿರುವ ವಾಲಿಗೆ ಶ್ರೀರಾಮನ ದಯೆಯಿಂದ ಸುಬುದ್ಧಿ ಉಂಟಾಗುತ್ತದೆಸುಗ್ರೀವನ ಮೇಲೆ ತಾನು ಎಸಗಿದ ಅಪರಾಧ ತಪ್ಪು ಎಂಬ ಭಾವನೆ ಉಂಟಾಗುತ್ತದೆಸುಗ್ರೀವನನ್ನು ಕರೆದು ಸ್ನೇಹಯುಕ್ತವಾದ ಮಾತುಗಳನ್ನು ಆಡುತ್ತಾನೆತಾರೆ ಹಾಗೂ ಅಂಗದನ ರಕ್ಷಣೆಯ ಜವಾಬ್ದಾರಿಯನ್ನು ವಹಿಸುತ್ತಾನೆತಾರೆಯ ಬಗ್ಗೆ ವಾಲಿಯು ಆಡುವ ಮಾತುಗಳು ಅವಳ ಶ್ರೇಷ್ಠತೆಯನ್ನು ನಮಗೆ ತಿಳಿಸುತ್ತದೆ.


ವಾಲಿಯು ತಾರೆಯನ್ನು ಕುರಿತು ಆಡಿದ ಕೆಲವೊಂದು ಮಾತುಗಳು ಹೀಗಿವೆತಾರೆಯು ಸಾಮಾನ್ಯರಿಂದ ತಿಳಿಯಲು ಅಸಾಧ್ಯವಾದ ಸೂಕ್ಷ್ಮವಾದ ವಿಷಯಗಳನ್ನು ನಿರ್ಣಯಿಸಿ ಹೇಳುವುದರಲ್ಲಿಯೂವಿಧ ವಿಧವಾದ ಉತ್ಪಾತಗಳ ಫಲಾಫಲಗಳನ್ನು ತಿಳಿದು ಹೇಳುವುದರಲ್ಲಿಯೂ ವಿಶೇಷವಾದ ತಿಳುವಳಿಕೆಯನ್ನು ಹೊಂದಿದ್ದಾಳೆಅವಳು ಯೋಚಿಸಿ ನಿರ್ಧಾರಪೂರ್ವಕವಾಗಿ ಹೇಳುವ ವಿಷಯವು ಯಾವ ರೀತಿಯಲ್ಲಿಯೂ ವತ್ಯಾಸವಾಗುವುದೇ ಇಲ್ಲವಾಲಿಯ ಈ ಮಾತುಗಳಿಂದ ತಾರೆಯ ವ್ಯಕ್ತಿತ್ವದ ಔನ್ನತ್ಯ ತಿಳಿಯುತ್ತದೆಅಂದಿನ ಕಾಲದಲ್ಲಿ ಶ್ರೀರಾಮನ ಸ್ವಸ್ವರೂಪದ ಬಗ್ಗೆ ಅರಿವನ್ನು ಹೊಂದಿದ್ದ ಕೆಲವೇ ಕೆಲವರಲ್ಲಿ ತಾರೆಯೂ ಒಬ್ಬಳು ಎಂಬುದನ್ನು ರಾಮಾಯಣವು ತಿಳಿಸುತ್ತದೆವಾಲಿಯ ಮರಣದ ನಂತರ ಶೋಕಮಗ್ನಳಾಗಿ ಪ್ರಾಣತ್ಯಾಗ ಮಾಡಲು ನಿರ್ಧರಿಸಿದ ತಾರೆಯನ್ನು ಶ್ರೀರಾಮನು ಹಿತಕರವಾದ ಮಾತುಗಳಿಂದ ಸಾಂತ್ವನ ಪಡಿಸುತ್ತಾನೆವಾಲಿಯ ನಿಧನದ ನಂತರ ವಾನರ ಕುಲದಲ್ಲಿ ಅಂದಿನ ವಾನರರ ಸಾಮಾಜಿಕ ನಿಯಮಕ್ಕೆ ಅನುಗುಣವಾಗಿ ಸುಗ್ರೀವನನ್ನು ಮದುವೆಯಾಗಿ ಅವನ ರಕ್ಷಣೆಯಲ್ಲಿ ಜೀವನ ನಡೆಸುತ್ತಾಳೆ.


ಶ್ರೀರಾಮನ ಅವತಾರ ಕಾಲದಲ್ಲಿ ಅವನ ಸ್ವರೂಪವನ್ನು ಅರಿತು ಅದರ ಬಗ್ಗೆ ಪತಿಗೆ ಅರಿವನ್ನು ಮೂಡಿಸಲು ಪ್ರಯತ್ನಿಸಿದ ಮಹಾತ್ಮಳು ತಾರಾಪರಮಾತ್ಮನ ಸ್ವರೂಪವನ್ನು ಅರ್ಥಮಾಡಿಕೊಳ್ಳಲು ಪ್ರಕೃತಿಶುದ್ಧತೆ, ತಪಸ್ಯೆಯ ದೃಷ್ಟಿ ಬೇಕುಅವುಗಳನ್ನು ಮೌನವಾಗಿ ಸಂಪಾದಿಸಿಕೊಂಡಿದ್ದಂತಹ ಪವಿತ್ರಾತ್ಮಳು ತಾರಾಅಂತಹ ತಾರೆಯನ್ನು ಅವಳ ಸದ್ಗುಣಗಳೊಂದಿಗೆ ಸ್ಮರಣೆ ಮಾಡಿಕೊಂಡಾಗ ನಮ್ಮ ಪಾಪಗಳೂ ನಾಶವಾಗಿ ಜೀವನ ಪವಿತ್ರವಾಗುವುದರಲ್ಲಿ ಸಂದೇಹವಿಲ್ಲ.


ಸೂಚನೆ : 21/10/2023 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.