Tuesday, December 19, 2023

ಪೂಜ್ಯಶ್ರೀಸೀತಾರಾಮುಗಳು [ಶ್ರೀವಿಜಯಾನಂದಕಂದರು] Pujya Srisitaramugalu [Sri Vijayanandakandaru]

ಸಂಗ್ರಾಹಕರು – ಶ್ರೀಮತೀ ವಸಂತಲಕ್ಷ್ಮೀ ಏ.ಎಸ್., 

ಶ್ರೀಮತೀ ಪದ್ಮಾ ಏ.ಎಸ್., 

 ಶ್ರೀ ಈ.ಕೆ. ರಾಮಮೋಹನ



ಪೂಜ್ಯಶ್ರೀಸೀತಾರಾಮುಗಳು [ಶ್ರೀವಿಜಯಾನಂದಕಂದರು] (೧೯೨೭-೧೯೯೮)

ಶ್ರೀ ಮಂದಿರದ ಪ್ರಥಮಕಾರ್ಯದರ್ಶಿಗಳು 


ಪರಿವರ್ತಿನಿ ಸಂಸಾರೇ ಮೃತಃ ಕೋ ವಾ ನ ಜಾಯತೇ |

ಸ ಜಾತೋ ಯೇನ ಜಾತೇನ ಯಾತಿ ವಂಶಃ ಸಮುನ್ನತಿಮ್ ||


"ನಿರಂತರಪರಿವರ್ತನಶೀಲವಾದ ಈ ಸಂಸಾರದಲ್ಲಿ ಸತ್ತವನಾವನು ತಾನೇ ಹುಟ್ಟುವುದಿಲ್ಲ ?  ಆದರೆಯಾವನ ಹುಟ್ಟಿನಿಂದ ಅವನ ವಂಶವು ಸಮುನ್ನತಿಯನ್ನು ಪಡೆಯುವುದೋ ಅವನೇ ಹುಟ್ಟಿದವನು."

ಈ ಮೇಲಿನ ಸುಭಾಷಿತಕ್ಕೆ ಪೂಜ್ಯರಾದ ಶ್ರೀಸೀತಾರಾಮುಗಳ ಜೀವನವು ಒಂದು ಉದಾಹರಣೆಯೆಂದರೆ ಅದು ಅತಿಶಯೋಕ್ತಿಯಲ್ಲ.  ನಮ್ಮೂರಾದ ನಂಜನಗೂಡಿನಲ್ಲಿ '.ವಿ.ಎಸ್ಎಂದೇ ಪ್ರಖ್ಯಾತರಾದಸರಳಸಜ್ಜನಿಕೆಗಳ ಪ್ರಭವಸ್ಥಾನದಂತೆಯೇ ಇದ್ದಅತ್ಯಂತವಾತ್ಸಲ್ಯದಿಂದ ಪೂರ್ವಭಾಷಿಗಳಾಗಿದ್ದನಮ್ಮನ್ನೆಲ್ಲಾ ಪ್ರೋತ್ಸಾಹಿಸಿತಿದ್ದಿತೀಡಿಸನ್ಮಾರ್ಗಪ್ರವರ್ತರನ್ನಾಗಿಸಿದ ಪೂಜ್ಯರ ಬಗ್ಗೆಕೆಲವು ವಿಷಯಗಳನ್ನು ತಮ್ಮ ಮುಂದಿಡಲು ಪ್ರಯತ್ನಿಸುತ್ತೇವೆ.


ಶ್ರೀಯುತರ ಜನನ ಮತ್ತು ಬಾಲ್ಯವಿದ್ಯಾಭ್ಯಾಸ

ಶ್ರೀಸೀತಾರಾಮುಗಳು ಪ್ರಭವನಾಮ-ಸಂವತ್ಸರದ ಮಾರ್ಗಶಿರ-ಶುದ್ಧ-ಪೂರ್ಣಿಮೆಯಂದು ರೋಹಿಣಿನಕ್ಷತ್ರದಲ್ಲಿ ದಿನಾಂಕ ೮-೧೨-೧೯೨೭ರ ಗುರುವಾರದಂದು ಚಾಮರಾಜನಗರದ ನಿವಾಸಿಗಳಾದ ಶ್ರೀಪಿ.ವೆಂಕಟರಾಮಯ್ಯ ಮತ್ತು ಶ್ರೀಮತೀ ಲಕ್ಷ್ಮೀದೇವಮ್ಮನವರ ಜ್ಯೇಷ್ಠಪುತ್ರರಾಗಿ ಜನಿಸಿದರು.

   ಇವರ ತಂದೆ ವೆಂಕಟರಾಮಯ್ಯನವರು ಚಾಮರಾಜನಗರ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿದ್ದರು.  ಶ್ರೀಸೀತಾರಾಮಯ್ಯನವರ ಬಾಲ್ಯದ ವಿದ್ಯಾಭ್ಯಾಸವು ಚಾಮರಾಜನಗರದಲ್ಲಿಯೇ ನಡೆಯಿತುಇವರ ತಂದೆಗೆ ನಂಜನಗೂಡಿಗೆ ವರ್ಗಾವಣೆ ಆದ ಬಳಿಕ ನಂಜನಗೂಡಿಗೆ ಬಂದು ನೆಲೆಸಿದರುನಂತರ ಶ್ರೀಯುತರ ವಿದ್ಯಾಭ್ಯಾಸವು ನಂಜನಗೂಡಿನಲ್ಲಿ ಮುಂದುವರೆಯಿತು.


ಬೆಳೆಯುವ ಚಿಗುರು ಮೊಳಕೆಯಲ್ಲಿಯೇ !

  ಶ್ರೀಯುತರು ಬಾಲ್ಯದಿಂದಲೂ ಅವರ ತಂದೆ-ತಾಯಿಗಳಿಂದ ಉತ್ತಮಸಂಸ್ಕಾರವನ್ನು ಪಡೆದು ಅನೇಕಸ್ತೋತ್ರಗಳನ್ನೂಗಮಕಗಳನ್ನೂ ಸುಶ್ರಾವ್ಯವಾಗಿ ಹಾಡುತ್ತಿದ್ದರುಇಂದಿಗೂ ಶ್ರೀಮಂದಿರದ ಅನೇಕ ಹಿರಿಯರೂಅವರ ಸಹೋದರಿಯರೂಪೂಜ್ಯರ ಕಂಠಮಾಧುರ್ಯವನ್ನು ಸ್ಮರಿಸುತ್ತಾರೆಮುಂದೆ ಉಪನಯನಸಂಸ್ಕಾರವಾದ ಮೇಲೂ ಇವರು ಮಾಡುತ್ತಿದ್ದ ಸಂಧ್ಯಾವಂದನೆ ಬೇರೆವಟುಗಳಿಗಿಂತ ಭಿನ್ನವಾಗಿತ್ತು``ಸಂಧ್ಯಾವಂದನೆ ಮಾಡಲು ಕುಳಿತರೆ ಬಹಳ ಹೊತ್ತು ಮೌನವಾಗಿ ನಿಶ್ಚಲವಾಗಿ ಕುಳಿತಿರುತ್ತಿದ್ದರುಎಂದು ಅವರ ಸಹೋದರಿಯರೂಸಹಪಾಠಿಗಳೂಒಡನಾಡಿಗಳೂ ಹೇಳುತ್ತಾರೆಇದರಿಂದ ಬಾಲ್ಯದಲ್ಲಿ ಇದ್ದ ಅಧ್ಯಾತ್ಮಪ್ರಖರತೆಯನ್ನು ಗುರುತಿಸಬಹುದು.

  ಇವರಿಗೆ ಓದುವ ಹವ್ಯಾಸ ಬಾಲ್ಯದಿಂದಲೂ ಇದ್ದು ಅನೇಕದೇಶಭಕ್ತರಅಧ್ಯಾತ್ಮಸಾಧಕರ ಜೀವನ ಚರಿತ್ರೆಗಳನ್ನುರಾಮಾಯಣ-ಮಹಾಭಾರತಗಳನ್ನು ಓದಿ ಗ್ರಹಿಸುತ್ತಿದ್ದರುಬಹುಸೂಕ್ಷ್ಮಗ್ರಾಹಿಗಳಾಗಿದ್ದರುಏಕಸಂಧಗ್ರಾಹಿಗಳಾಗಿದ್ದರುಪಠ್ಯೇತರಚಟುವಟಿಕೆಗಳಲ್ಲೂ ಬಹಳ ಚುರುಕಾಗಿದ್ದರುಗುರುಹಿರಿಯರಲ್ಲಿ ಗೌರವವಿನಯಶ್ರದ್ಧಾ-ಭಕ್ತಿಧರ್ಮಸಂಸ್ಕೃತಿಗಳ ಬಗ್ಗೆ  ಗೌರವ ಎಲ್ಲವನ್ನೂ ಬಾಲ್ಯದಿಂದಲೇ ಮೈಗೂಡಿಸಿಕೊಂಡಿದ್ದರುಶ್ರೀಯುತರಿಗೆ ಬಾಲ್ಯದಿಂದಲೂ ಸ್ವಾಭಿಮಾನದೇಶಾಭಿಮಾನಭಾಷಾಭಿಮಾನಪೂರ್ವಗ್ರಹಪೀಡಿತವಲ್ಲದ ಚಿಂತನೆಗಳುನಮ್ಮ ನಾಡು-ನುಡಿ -ಸಂಸ್ಕೃತಿಗಳ ಬಗ್ಗೆ ಒಲವು ಬಹಳವಾಗಿಯೇ ಇತ್ತುಈ ಸ್ವಭಾವಕ್ಕೆ ಇಂಬು ಕೊಟ್ಟಂತೆ ಇವರು ಇಂಟರ್ಮೀಡಿಯಟ್ ಮುಗಿಸುವ ಹೊತ್ತಿಗೆ ಸ್ವಾತಂತ್ರ್ಯಚಳುವಳಿ ತೀವ್ರಗೊಂಡಿತ್ತು.


ದೇಶಭಕ್ತಿಯ ಮೂರ್ತರೂಪ -

ಆಗ ನಮ್ಮ ದೇಶದಲ್ಲಿ ಬ್ರಿಟೀಷರ ದಾಸ್ಯದ ಶೃಂಖಲೆಯಲ್ಲಿ ಸಿಕ್ಕಿದ್ದ ತಾಯಿಭಾರತಿಯನ್ನು ಮುಕ್ತಗೊಳಿಸಲು ಆಂದೋಲನಗಳು ತೀವ್ರವಾಗಿ ನಡೆಯುತ್ತಿದ್ದ ಕಾಲಹೀಗಿದ್ದಾಗ  ಯುವಮುಖಂಡರನ್ನು ಕರ್ನಾಟಕದಲ್ಲಿ ಕ್ರೋಢೀಕರಿಸಿ ದೇಶಾಭಿಮಾನಮೂಡಿಸಲು ಅಂದಿನ ರಾಷ್ಟ್ರೀಯನಾಯಕರಲ್ಲಿ ಮುಂಚೂಣಿಯಲ್ಲಿದ್ದ ಶ್ರೀಜಯಪ್ರಕಾಶ್ ನಾರಾಯಣ್ (ಜೆ.ಪಿ.) ಅವರ ನೇತೃತ್ವದಲ್ಲಿ 'ಪ್ರಜಾ ಸೋಷಿಯಲಿಸ್ಟ್ ಪಾರ್ಟಿ'ಯ ನಾಯಕರುಗಳಾದ ಶ್ರೀಅಚ್ಯುತಪಟವರ್ಧನ್ ಹಾಗೂ ಶ್ರೀಅಶೋಕ್ ಮೆಹ್ತಾ ಮುಂತಾದವರು ಮೈಸೂರಿಗೆ ಜನಜಾಗೃತಿಮೂಡಿಸಲು ಬಂದರು``ಸ್ವಾತಂತ್ರ್ಯಸಂಗ್ರಾಮಕ್ಕೆ ಯುವಪೀಳಿಗೆಯ ಅವಶ್ಯಕತೆ ಇದೆಎಲ್ಲರೂ ಕೈಗೂಡಿಸಿ ಸಂಗ್ರಾಮದಲ್ಲಿ ಹೋರಾಡಿ ಜಯಗಳಿಸೋಣಎಂಬ ಉತ್ತೇಜನಕಾರಿಭಾಷಣಗಳನ್ನು ಕೇಳಿ ಇವರು ರೋಮಾಂಚಿತರಾಗುತ್ತಿದ್ದರು. "ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸೀಎಂಬ ಸ್ಫೂರ್ತಿದಾಯಕಮಾತುಗಳು ಇವರಲ್ಲಿದ್ದ ಕ್ಷಾತ್ರತೇಜಸ್ಸನ್ನು ಬಡಿದೆಬ್ಬಿಸಿತು``ಭಾರತಮಾತೆಯ ಸಂಕೋಲೆಯನ್ನು ಬಿಡಿಸಲು ಇಚ್ಛೆಯುಳ್ಳವರು ಬರಬಹುದುಎಂಬ ರಾಷ್ಟ್ರೀಯ ನಾಯಕರ ಕರೆಗೆ ಓಗೊಟ್ಟು ದೇಶಕ್ಕಾಗಿ ತ್ಯಾಗಬಲಿದಾನ ಮಾಡಲೇಬೇಕೆಂಬ ಛಲತುಡಿತಹೃದಯತುಂಬಿದ ಭಾವುಕತೆಗಳಿಂದ ಭರಿತರಾಗಿಮಾತೃಭೂಮಿಯ ಉಳಿವಿಗಾಗಿ ತನ್ನ ಕಾಣಿಕೆಯನ್ನು ಕೊಡಲೇಬೇಕೆಂದು ನಿರ್ಧರಿಸಿಇವರೂ ಸಹ ವಿದ್ಯಾಭ್ಯಾಸಕ್ಕೆ ವಿದಾಯ ಹೇಳಿಮನೆಯಲ್ಲಿ ಅನುಮತಿ ಕೇಳಿದರೆ ಎಲ್ಲಿ ತಡೆಯುವರೋ ಎಂದು ಯಾರಿಗೂ ಹೇಳದೇತಾನು ಹೊರಟನಂತರ ಮನೆಯಲ್ಲಿ ಹಿರಿಯರಿಗೆ ತಿಳಿಸಲು ತಮ್ಮ ಆಪ್ತರೊಬ್ಬರಿಗೆ ಸೂಚಿಸಿಯುವಮುಖಂಡರೊಡನೆ ಹೊರಟೇಬಿಟ್ಟರುವಯಸ್ಸು ೧೭ ರಿಂದ ೧೮ನವಯೌವ್ವನಬಿಸಿರಕ್ತ ಧಮನಿಧಮನಿಯಲ್ಲಿ ಹರಿಯುತ್ತಿತ್ತುದಿಟ್ಟಹೆಜ್ಜೆ ಮತ್ತು ಧೃಢಸಂಕಲ್ಪದೊಡನೆ ಇಟ್ಟ ಹೆಜ್ಜೆಯನ್ನು ಹಿಂದೆಗೆಯದೆಭಾರತಮಾತೆಯನ್ನು ದಾಸ್ಯಶೃಂಖಲೆಯಿಂದ ಬಿಡಿಸಲು ಕಟಿಬದ್ಧರಾಗಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡರುಯುವನಾಯಕರುಗಳ ಮಾರ್ಗದರ್ಶನದಲ್ಲಿಇವರು ಅನೇಕವೇದಿಕೆಗಳಲ್ಲಿಕ್ರಾಂತಿಕಾರಿಭಾಷಣಗಳನ್ನು ಮಾಡಿಬ್ರಿಟಿಷರ ವಿರುದ್ಧ ಕರಪತ್ರಗಳನ್ನು ಹಂಚಿಜನಜಾಗೃತಿಯನ್ನು ಉಂಟುಮಾಡುತ್ತಿದ್ದರುಮೊದಲೇ ವಾಗ್ಮಿಗಳಾಗಿದ್ದ ಇವರುಯುವಮುಖಂಡರ ಪ್ರಭಾವದಿಂದತಮ್ಮದೇ ಆದ ಶೈಲಿಯಲ್ಲಿಇಂಗ್ಲೀಷ್ಹಿಂದಿಕನ್ನಡಭಾಷೆಗಳಲ್ಲಿ ಆಯಾಯಾಪ್ರಾಂತ್ಯಕ್ಕನುಗುಣವಾಗಿ ಮಾತನಾಡುವುದನ್ನು ರೂಢಿಸಿಕೊಂಡರು.


ಶ್ರೀಯವರ ನಿಸ್ಸ್ವಾರ್ಥಸೇವೆ

ಶ್ರೀಸೀತಾರಾಮಯ್ಯನವರ ಸೂಕ್ಷ್ಮಬುದ್ಧಿದೂರದೃಷ್ಟಿ,ಹಾಗೂ ಚಾಣಾಕ್ಷತೆಯನ್ನು ಮನಗಂಡಿದ್ದ ರಾಷ್ಟ್ರೀಯನಾಯಕರು ದೆಹಲಿಯಲ್ಲಿ ಚರ್ಚಿಸಿ ಇವರಿಗೆ ``ಸೆಕ್ರೆಟ್ರಿಯೇಟ್ ವಿಭಾಗದಲ್ಲಿ ಉನ್ನತಪದವಿಯನ್ನು ಕೊಡುತ್ತೇವೆ ಬನ್ನಿಎಂದು ಪತ್ರಬರೆದರುಅಧಿಕಾರದ ಲಾಲಸೆಪದವಿಗಳ ಆಕಾಂಕ್ಷೆಯಿಲ್ಲದಬಾಹ್ಯವಾಗಿ ಹೆಸರನ್ನು ಪ್ರಚಾರಮಾಡಿಕೊಳ್ಳಲು ಆಸೆಯಿಲ್ಲದ ಇವರು ``ನನ್ನ ದೇಶಕ್ಕಾಗಿ ದುಡಿದೆದೇಶಸೇವೆ ನನ್ನ ಕರ್ತವ್ಯನನ್ನ ಜೀವನನಿರ್ವಹಣೆಗೆ ಒಂದು ಸರ್ಕಾರಿ ಉದ್ಯೋಗ ಸಿಕ್ಕಿದೆಅದು ಬೇರೆಯವರಿಗೆ ಸಿಗಲಿಎಂಬ ವಿಶಾಲ ಮನೋಭಾವದಿಂದ ಬಂದಂತಹ ಉತ್ತಮಪದವಿಅಧಿಕಾರದ ಅವಕಾಶವನ್ನು ನಯವಾಗಿ ತಳ್ಳಿಹಾಕಿದರುಸ್ವಾತಂತ್ರ್ಯಾನಂತರದಲ್ಲಿ  ಸ್ವಾತಂತ್ರಹೋರಾಟಗಾರರಿಗೆ  ಸರ್ಕಾರ ಮಾಸಾಶನನೀಡುತ್ತಿತ್ತುತುಂಬಿದ ಕುಟುಂಬಆರ್ಥಿಕಮುಗ್ಗಟ್ಟಿನಿಂದ ಬಳಲುತ್ತಿದ್ದರೂಪಿಂಚಣಿಗಾಗಿ ಅರ್ಜಿ ಹಾಕಲಿಲ್ಲ. "ನಾನು ನನ್ನ ತಾಯಿಗೆ  ಸೇವೆಮಾಡಿದರೆನಾಲ್ಕಾಣೆ ಕೊಡು ಎನ್ನಲೇಈ ರೀತಿಯ ಪ್ರತಿಫಲಾಪೇಕ್ಷೆ ಸರಿಯೇ?" ಎಂದು ಹೇಳುತ್ತಿದ್ದರುಕೀರ್ತಿ,ಧನ,ಪದವಿಗಳಿಗೆ  ಆಸೆಪಡದೆ ನಿಸ್ಪೃಹರಾಗಿ ದೇಶಸೇವೆಮಾಡಿದವರು. "ಪ್ರಯೋಜನಮನುದ್ದಿಶ್ಯ ನ ಮಂದೋಪಿ ಪ್ರವರ್ತತೇಎಂಬುದನ್ನು ಸುಳ್ಳಾಗಿಸಿದ ನಿಸ್ಪೃಹರು.


ಮುಂದುವರೆದ ವಿದ್ಯಾಭ್ಯಾಸ

ಶ್ರೀಯುತರ ತಂದೆಯವರಿಗೂ ಶ್ರೀಯುತರು ಮಾಡಿದ ದೇಶಸೇವೆಯ ಬಗ್ಗೆ ಮೆಚ್ಚುಗೆಯಾಗಿತ್ತುಸ್ವಾತಂತ್ರ್ಯ ಹೋರಾಟಕ್ಕೆಂದು ಅರ್ಧಕ್ಕೇ ನಿಲ್ಲಿಸಿದ್ದ ವಿದ್ಯಾಭ್ಯಾಸವನ್ನು ಮುಂದುವರೆಸಲು ಹೇಳಿದರುಆರ್ಥಿಕಸಂಕಷ್ಟ ಬಹಳವಾಗಿದ್ದರಿಂದ ಮೊದಲಿಗೆ ಟಿ.ಸಿ.ಹೆಚ್.ಮಾಡಿ ಸರ್ಕಾರಿ ಪ್ರಾಥಮಿಕಶಾಲೆಯಲ್ಲಿ ಉಪಾಧ್ಯಾಯವೃತ್ತಿಯನ್ನು ಹಿಡಿದು ತಂದೆಗೆ ನೆರವಾದರು.  ಇವರು ಶಿಕ್ಷಕವೃತ್ತಿಯಲ್ಲಿದ್ದಾಗಲೇ ಕನ್ನಡಪಂಡಿತ್ ಪರೀಕ್ಷೆಬಿ.ಎಡ್ಪರೀಕ್ಷೆಗಳಲ್ಲಿ ಪ್ರಥಮ ಶ್ರೇಣಿಪಡೆದುಚಿನ್ನದಪದಕವನ್ನು ಪಡೆದುಪ್ರೌಢಶಾಲೆಯ ಶಿಕ್ಷಕರಾಗಿ ಬಡ್ತಿ ಹೊಂದಿ ಯಶಸ್ವಿಯಾದರು.


ಉತ್ತಮಶಿಕ್ಷಕ

ಒಳ್ಳೆಯವಾಗ್ಮಿಗಳುಗಮಕಿಗಳೂ ಆಗಿದ್ದ ಇವರು ಕ್ರಮವಾಗಿ ಸಂಗೀತಪಾಠ ಆಗದಿದ್ದರೂ ಭಗವತ್ಕೃಪೆಯಿಂದ ಬಂದ ಸಿರಿಕಂಠದಲ್ಲಿ ಕುಮಾರವ್ಯಾಸನ ಭಾರತಲಕ್ಷ್ಮೀಶನ ಕಾವ್ಯದೇವರನಾಮಗಳುವಚನಗಳನ್ನು ಸೊಗಸಾಗಿ ಹಾಡುತ್ತಿದ್ದರು.  ಮಹಾಕಾವ್ಯದ ಪದ್ಯಗಳು ಜೀವಂತ ರಸಘಟ್ಟಿಗಳಾಗಿ ರಸೋತ್ಕರ್ಷ ಉಂಟುಮಾಡುತ್ತಿದ್ದುದನ್ನು ಆಯಾಯಾ ವಿವರಣೆಯನ್ನು ಕೇಳಿ ಆಸ್ವಾದಿಸಿದ ಅನೇಕ ಶಿಷ್ಯರುಭಾಷಾಪ್ರೇಮಿಗಳು  ಹಾಗೂ ಸಂಸ್ಕೃತಿಚಿಂತಕರು ಇಂದಿಗೂ ಸ್ಮರಿಸಿಕೊಳ್ಳುತ್ತಾರೆಇವರು ಶಿಕ್ಷಕರಾಗಿ ಸೂಜಿಗಲ್ಲಿನಂತೆ ವಿದ್ಯಾರ್ಥಿಗಳನ್ನು ಆಕರ್ಷಿಸಿದವರುಕೆತ್ತಿದ ಸುಂದರಮೂರ್ತಿಗೆ ಅಲಂಕಾರಮಾಡುವುದು ಸುಲಭಆದರೆ ಕಗ್ಗಲ್ಲನ್ನು ಮೂರ್ತಿಯಾಗಿಸುವ ಶಿಲ್ಪಿಯ ಕೆಲಸ ಗುರುತರವಾದುದಷ್ಟೆಅಂತೆಯೇ ಸರ್ಕಾರಿಶಾಲೆಗಳಲ್ಲಿ ಕನ್ನಡಪಂಡಿತರಾಗಿದ್ದ ಇವರು ಅನೇಕಹಳ್ಳಿಯ ಮಕ್ಕಳ ಮನಸ್ಸನ್ನು ತಿದ್ದಿ ತೀಡಿ ರೂಪಿಸುವಲ್ಲಿ ಸಫಲರಾಗಿದ್ದಾರೆಶುದ್ಧವಾದ ಭಾಷೆಯ ಅರಿವಿಲ್ಲದಗ್ರಾಮೀಣ ಕುಟುಂಬಗಳಿಂದ ಬಂದು ಸುಸಂಸ್ಕೃತರಾದ ವಿದ್ಯಾರ್ಥಿಗಳು ಇವರ ಪಾಠ ಕೇಳಿ ಆರ್ದ್ರವಾಗಿ ಬರೆದಿರುವ ಪತ್ರಗಳೇ ಇದಕ್ಕೆ ಸಾಕ್ಷಿ.


ಶಿಸ್ತಿನ ಸಿಪಾಯಿ

     ಮೃದುಹೃದಯದವರೂ ಶಿಷ್ಯವತ್ಸಲರೂ ಆಗಿದ್ದ ಇವರು ಶಿಸ್ತಿನ ವಿಷಯದಲ್ಲಿಸಮಯಪರಿಪಾಲನೆಯಲ್ಲಿ ಬಹಳ ಕಟ್ಟುನಿಟ್ಟುದುರ್ನಡತೆಅಶಿಸ್ತುಇವುಗಳು ಕಂಡು ಬಂದಾಗ ನಿಷ್ಠುರವಾಗಿ ತಿದ್ದುತ್ತಿದ್ದರುಒಟ್ಟಾರೆ ಹೇಳುವುದಾದರೆ "ವಜ್ರಾದಪಿ ಕಠೋರಾಣಿ ಮೃದೂನಿ ಕುಸುಮಾದಪಿಎಂಬಂತಿದ್ದವರುಇವರು ಶಿಕ್ಷಕರಾಗಿ ಕೆಲಸ ಮಾಡಿದ ಎಲ್ಲ ಸರ್ಕಾರಿಶಾಲೆಗಳಲ್ಲೂ ಉತ್ತಮ ಫಲಿತಾಂಶ ಕಟ್ಟಿಟ್ಟಬುತ್ತಿಯಾಗಿತ್ತುಪಠ್ಯೇತರ ಚಟುವಟಿಕೆಗಳಾದ ಪ್ರಬಂಧಆಶುಭಾಷಣಕಂಠಪಾಠಗಾಯನಇತ್ಯಾದಿಸ್ಫರ್ಧೆಗಳಲ್ಲಿ ಭಾಗವಹಿಸಲು ವಿದ್ಯಾರ್ಥಿಗಳಿಗೆ ಉತ್ತೇಜನಮಾರ್ಗದರ್ಶನ ನೀಡಿಶಾಲೆಯ ಕೀರ್ತಿಗೆ ಕಾರಣರಾಗುತ್ತಿದ್ದರುಹೀಗೆ ಮಕ್ಕಳ ಸರ್ವತೋಮುಖಬೆಳವಣಿಗೆಗೆ ಹಾಗೂ ಶಾಲೆಯ ಕೀರ್ತಿಪತಾಕೆಹಾರುವುದಕ್ಕೆ ಮೂಲಕಾರಣರಾಗಿ 'ಆದರ್ಶಶಿಕ್ಷಕ'ರೆನಿಸಿದ್ದರು.


ಸದ್ಗುರುವಿನ ಅನ್ವೇಷಣೆಯಲ್ಲಿ

       ಶ್ರೀಯುತರಿಗೆ ಬಾಹ್ಯವಾದ ಕೀರ್ತಿಯಶಸ್ಸುಗಳಿಂದ ಸಂತೋಷಸಿಕ್ಕಿರಲಿಲ್ಲವೆನಿಸುತ್ತದೆಬಾಲ್ಯದಿಂದಲೂ ಇದ್ದ ಆಧ್ಯಾತ್ಮಿಕ ಒಲವು ಜಾಗೃತವಾಯಿತುಸದ್ಗುರುವಿನ ಅನ್ವೇಷಣೆಯಲ್ಲಿದ್ದರುಭಾರತದಾದ್ಯಂತ ಆಗಿಹೋದ ಗುರುಪರಂಪರೆಯಸಾಧಕರಯೋಗಿವರೇಣ್ಯರ ಜೀವನಚರಿತ್ರೆಗಳನ್ನು ಓದಿಅಧ್ಯಯನಮಾಡಿಅವರ ಆಪ್ತಮಿತ್ರರಾದ ಶ್ರೀವರದದೇಶಿಕಾಚಾರ್ಯ(ವರದಣ್ಣರವ)ರ ಬಳಿ (ಇಂದಿನ ಶ್ರೀಶ್ರೀರಂಗಪ್ರಿಯಸ್ವಾಮಿಗಳುಆಧ್ಯಾತ್ಮಿಕ ಚಿಂತನೆಗಳನ್ನು ಮಾಡುತ್ತಾ, "ಇಂದಿಗೂ ನಿಜವಾದ ಯೋಗಿಗಳು ಇದ್ದಾರೆಯೇನಮಗೂ ದೊರಕುವರೇ?" ಎಂದು ಕೇಳಿದಾಗ, ``ಹೌದುಎಲೆಯ ಮರೆಯ ಕಾಯಿಯಂತೆ ಇಂದಿಗೂ ಇದ್ದಾರೆಎಂದು ಹೇಳಿದರುಅಂತಹ ಯೋಗಿಗಳನ್ನು ನೋಡುವ ಹಂಬಲವನ್ನು ಶ್ರೀಯುತರು ವ್ಯಕ್ತಪಡಿಸಿದಾಗಇವರ ತೀವ್ರತುಡಿತವನ್ನು ಮನಗಂಡುತಮ್ಮ ಊರಿನವರೇ ಆದ 'ಶ್ರೀರಂಗಮಹಾಗುರು'ಗಳನ್ನು ಭೇಟಿ ಮಾಡಿಸಿದರು.


ಶ್ರೀಗುರುವಿನ ಕರುಣಾಪ್ರವಾಹಾವಗಮನ

ಶ್ರೀರಂಗಮಹಾಗುರುಗಳ ಮಾತುವ್ಯಕ್ತಿತ್ವನಿಲುವುಇವರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತಿತ್ತುಗುರುವಿನ ಆಕರ್ಷಣೆಗೆ ಒಳಗಾದ ಇವರು ಪದೇಪದೇ ನಂಜನಗೂಡಿನಿಂದ  ಹೆಡತಲೆಗೆ ಹೋಗಿ ಅವರ ದರ್ಶನವಚನಾಮೃತಗಳಿಂದ ಪುನೀತರಾಗುತ್ತಿದ್ದರುಎಲ್ಲಕ್ಕೂ ಕಾಲವು ಕೂಡಿಬರಬೇಕಷ್ಟೇಬಹುಬೇಗನೆ ಆ ಕಾಲವೂ ಕೂಡಿಬಂದು ಮಹಾಗುರುವಿನ ಅನುಗ್ರಹಕ್ಕೆ ಪಾತ್ರರಾದರು.


ಶ್ರೀಗುರುಚರಣಭೃಂಗ

 ಶ್ರೀರಂಗಮಹಾಗುರುವಿನ ಆಕರ್ಷಣೆಯ ಪರಿಧಿಗೆ ಒಳಗಾದ ಇವರಿಗೆ ಗುರುದಂಪತಿಗಳ ಪ್ರೀತಿ-ವಾತ್ಸಲ್ಯಅವ್ಯಾಜವಾದ ಕರುಣೆಬೆರಗನ್ನುಂಟುಮಾಡಿತುತಾಯ್ತಂದೆಗಳ ಮಡಿಲಿಗಿಂತಲೂ ಹೆಚ್ಚು ವಾತ್ಸಲ್ಯಸುಖವನ್ನು ಗುರುದಂಪತಿಗಳ ಮಡಿಲಿನಲ್ಲಿ ಅನುಭವಿಸಿದ ಭಾಗ್ಯಶಾಲಿಗಳು ಇವರು ಎಂದರೆ ಅತಿಶಯೋಕ್ತಿಯಾಗಲಾರದುಅಲ್ಲಿಂದ ಮುಂದೆ ಎಲ್ಲ ಪ್ರಮುಖಹಬ್ಬ-ಹರಿದಿನಗಳನ್ನು ಗುರುಗೃಹದಲ್ಲೇ ಗುರುದೇವನೊಡನೆ ಆಚರಿಸುತ್ತಿದ್ದರುದೇಶಸೇವೆಯಲ್ಲಿ ಸಾರ್ಥಕತೆಕಂಡುಕೊಂಡಿದ್ದ ಶ್ರೀಯುತರು ಸದ್ಗುರುವಿನ ಕೃಪಾಕಟಾಕ್ಷಕ್ಕೆ  ಪಾತ್ರರಾಗಿ ತಮ್ಮನ್ನು ಈಶಸೇವೆಯಲ್ಲಿಯೂ ತೊಡಗಿಸಿಕೊಂಡರುಶ್ರೀಗುರುವಿನ ಶ್ರೀಚರಣಗಳ ಅಡಿಯಲ್ಲಿ ಕುಳಿತು ಅವರ ಮಾರ್ಗದರ್ಶನದಲ್ಲಿ ನಿಗೂಢವಾದ ಯೌಗಿಕಪ್ರಪಂಚದ ಬಹುಸೂಕ್ಷ್ಮವಾದ ಪರಿಚಯವನ್ನು ಪಡೆದುಕೊಂಡರುಅಲ್ಲದೆನಾಡಿವಿಜ್ಞಾನಗಾಯನಕಲೆಜ್ಯೋತಿಷ್ಯಶಾಸ್ತ್ರಪದಾರ್ಥವಿಜ್ಞಾನಆಯುರ್ವೇದವೇ ಮೊದಲಾದ ಅನೇಕ ವಿಷಯಗಳಿಗೆ ಸಂಬಂಧಿಸಿದ ಸೂಕ್ಷ್ಮಾತಿಸೂಕ್ಷ್ಮಮರ್ಮಗಳನ್ನು ಶ್ರೀರಂಗಮಹಾಗುರುವು ಇವರಿಗೆ ಅನುಗ್ರಹಿಸಿದರುಶ್ರೀಗುರುವು ಹಾಕಿಕೊಟ್ಟ ಮಾರ್ಗದಲ್ಲಿ ನಿಷ್ಠೆಯಿಂದ ತೊಡಗಿಸಿಕೊಂಡರುಗುರುಚರಣ  ಭೃಂಗವಾದರು.

ದೈವಸಾಕ್ಷಾತ್ಕಾರ ಪಡೆದ ಜ್ಞಾನಿಗಳು ಬೇರೆ ಯಾರಾದರು ಇರುವರೇ ಎಂದು ತಿಳಿಯಬೇಕೆಂಬ ಅಪೇಕ್ಷೆಯಿಂದ ಕುಂಭಕೋಣಚಿದಂಬರತಿರುವಣ್ಣಾಮಲೈ ಮೊದಲಾದ ಸ್ಥಳಗಳಲ್ಲಿ ಕೆಲವು ದಿನಗಳು ಸುತ್ತಾಡಿ ಬಂದರುತಿರುವಣ್ಣಾಮಲೈಶ್ರೀರಮಣಮಹರ್ಷಿಗಳ ತಪೋಭೂಮಿಯಲ್ಲಿ ತಮಗಾದ ಅನುಭವಗಳನ್ನು ಶ್ರೀಗುರುಗಳಲ್ಲಿ ಅರಿಕೆ ಮಾಡಿಕೊಂಡಾಗ ಅವರು ಬಹಳ ಸಂತೋಷಪಟ್ಟರು.


ಅಷ್ಟಾಂಗಯೋಗಮಂದಿರ ನಿರ್ಮಾಣಕ್ಕೆ ಅಂಕುರಾರೋಪಣ

    ಪ್ರಾರಂಭದಲ್ಲಿ ಬೆರಳೆಣಿಕೆಯಷ್ಟು ಇದ್ದ ಶಿಷ್ಯರಲ್ಲಿ ಇವರೂ ಒಬ್ಬರಾಗಿದ್ದರುದಿನಕಳೆದಂತೆ ಶಿಷ್ಯರ ಸಂಖ್ಯೆ ಹೆಚ್ಚುತ್ತಿತ್ತುಇದನ್ನು ಗಮನಿಸಿದ ಶ್ರೀಸೀತಾರಾಮಯ್ಯನವರು "'ಅಷ್ಟಾಂಗಯೋಗವಿಜ್ಞಾನಮಂದಿರ'- ಈ ಸಂಸ್ಥೆ ಕೇವಲ ಕೆಲವರಿಗೆ ಸೀಮಿತವಾಗಬಾರದುಇದು ಹೊರಗೆ ಪ್ರಕಾಶವಾಗಬೇಕುಎಂಬ ತಮ್ಮ ಆಸೆಯನ್ನು ಗುರುವಿನ ಮುಂದಿಟ್ಟರುಹೀಗೆ ಗುರುಗೃಹದಲ್ಲಿ ನಡೆಯುತ್ತಿದ್ದ ಅ.ಯೋ.ವಿ.ಮಂದಿರದ ಕಾರ್ಯಕ್ರಮಗಳಿಗೆ ಗುರುವಿನ ಅನುಮತಿಯೊಡನೆ ಒಂದು ಕಟ್ಟಡವನ್ನು ಖರೀದಿಸಿರಿಜಿಸ್ಟರ್ಡ್-ಸಂಸ್ಥೆಯನ್ನಾಗಿಸಲಾಯಿತು


ಪ್ರಥಮಕಾರ್ಯದರ್ಶಿಗಳಾಗಿ 'ಶ್ರೀವಿಜಯಾನಂದಕಂದ'ರು

ಸಂಸ್ಥೆಯು ಪ್ರಪ್ರಥಮವಾಗಿ ಪ್ರಕಾಶವಾಗಲು ಇವರನ್ನೇ ಶ್ರೀಗುರುವು ನಿಮಿತ್ತವನ್ನಾಗಿಸಿದರುರಿಜಿಸ್ಟರ್ಡ್ ಸಂಸ್ಥೆ ಎಂದಾದಮೇಲೆಅಧ್ಯಕ್ಷರುಕಾರ್ಯದರ್ಶಿಗಳು ಎಲ್ಲವೂ ಬೇಕಷ್ಟೇಮಹಾಗುರುವಿನ ಅಪ್ಪಣೆಗೆ ಅನುಸಾರವಾಗಿ ಅ.ಯೋ.ವಿ.ಮಂದಿರದ ಸಂಸ್ಥಾಪಕ-ಕಾರ್ಯದರ್ಶಿಯಾಗಿಶ್ರೀಗುರುವೇ ಅನುಗ್ರಹಿಸಿದ "ವಿಜಯಾನಂದಕಂದಎಂಬ ಅಭಿಧಾನದಿಂದ ಕಾರ್ಯನಿರ್ವಹಿಸಿದರು.

ಶ್ರೀಮಂದಿರದ ಮಾಸಪತ್ರಿಕೆ 'ಆರ್ಯಸಂಸ್ಕೃತಿ'ಗೆ ಲೇಖನ ಬರೆಯುವುದುಪ್ರವಚನಗಳನ್ನು ಮಾಡುವುದುವಿದ್ಯಾವ್ಯವಸಾಯ ಮುಂತಾದ ಚಟುವಟಿಕೆಗಳಲ್ಲಿ ತಮ್ಮನ್ನು ತ್ರಿಕರಣಪೂರ್ವಕವಾಗಿ ತೊಡಗಿಸಿಕೊಂಡು ಶಿಕ್ಷಕವೃತ್ತಿಕಾರ್ಯದರ್ಶಿಯ ಕೆಲಸಗಳುಎರಡನ್ನೂ ಸಮತೋಲನದಿಂದ ನಿಭಾಯಿಸುತ್ತಿದ್ದರುಅಧ್ಯಾತ್ಮಿಕ ಜೀವನಕ್ಕೆ ಹೊಂದಿಕೊಂಡ ಲೌಕಿಕಜೀವನವನ್ನು ನಡೆಸುತ್ತಿದ್ದರು.


ಸಂಸ್ಥೆಗೆ ಲಾಂಛನ

ಸಂಸ್ಥೆಗೆ ಬೇಕಾದ ಚಿಹ್ನೆ/ಲಾಂಛನ (ಎಂಬ್ಲಂ)ಹಾಗೂ ಸಂಸ್ಥೆಯ ಮುಂದೆ ಹಾಕಬೇಕಾಗಿದ್ದ ತ್ರಿಕೋಣಾಕೃತಿಫಲಕ ಇವುಗಳನ್ನು ಶ್ರೀಗುರುವಿನ ಮಾರ್ಗದರ್ಶನದಲ್ಲಿ ಮಾಡಿಸಲಾಯಿತುಎಲೆಮರೆಯ ಕಾಯಿಯಂತೆ ಇರಲು ಬಯಸುತ್ತಿದ್ದ ಶ್ರೀಗುರುಭಗವಂತ-ಭಗವತಿಯವರ ಭಾವಚಿತ್ರಗಳನ್ನು (ಭಾವಚಿತ್ರಗಳನ್ನು ತೆಗೆಯುವುದಕ್ಕೆ ಕಷ್ಟವಿದ್ದ ಆ ಕಾಲದಲ್ಲಿಅವರ ಒಪ್ಪಿಗೆ ಪಡೆದು ತೆಗೆಸಿದ್ದಾರೆವಿಜ್ಞಾನಮಂದಿರದ ಪ್ರಥಮಕಾರ್ಯದರ್ಶಿಗಳಾಗಿ ಹಲವಾರು ಪ್ರಥಮಗಳಿಗೆ ಕಾರಣರಾದರು ಎಂಬುದು ಉತ್ಪ್ರೇಕ್ಷೆಯೇನಲ್ಲಇವರು ಕಾರ್ಯದರ್ಶಿಗಳಾಗಿದ್ದ ಸಮಯದಲ್ಲಿ ಮಂದಿರದ ಪ್ರಜೆಗಳಿಗೆ ಕಾರ್ಯಕ್ರಮದ ಪಟ್ಟಿಬಹಿರಂಗಕಾರ್ಯಕ್ರಮದ ಪತ್ರಎಲ್ಲವೂ ಬರವಣಿಗೆಯಲ್ಲೇ ಹೋಗುತ್ತಿತ್ತುವಿಜಯಾನಂದಕಂದರ ಆಪ್ತರೂಬಂಧುಗಳೂ ಆದ ಶ್ರೀ ವಿ.ಎಸ್.ಸುಬ್ಬಕೃಷ್ಣರವರುತಮ್ಮ ದುಂಡಾದ ಅಕ್ಷರಗಳಲ್ಲಿ ಬರೆದುಕೊಟ್ಟರೆ ಇವರು ಸೀಲ್ ಹಾಗೂ ಸಹಿ ಹಾಕಿ ಕಳುಹಿಸುತ್ತಿದ್ದರು``ಆವತ್ತಿನ ಕಾಲದಲ್ಲಿ ಮಂದಿರದ ಲೆಟರ್ ಹೆಡ್ಸೀಲು ಮತ್ತು ಇಂಕ್ ಪ್ಯಾಡ್ ಇದ್ದ ನನ್ನ ಬ್ಯಾಗೇ ಮಂದಿರದ ಆಫೀಸಾಗಿತ್ತುಎಂದು ಅವರು ನೆನಪಿಸಿಕೊಳ್ಳುತ್ತಿದ್ದುದುಂಟುಹೀಗೆ ಕಾರ್ಯದರ್ಶಿಗಳಾಗಿ ಶ್ರೀಗುರುಭಗವಂತನ ವಿಚಾರಧಾರೆಯನ್ನು   ಸೂಕ್ತವಾದ ಕಡೆಗಳಲ್ಲಿ  ಪರಿಚಯಿಸುವುದುಮಂದಿರಕ್ಕೆ ಸಂಬಂಧಿಸಿದ ಪ್ರಕಟಣೆಗಳನ್ನು ಪ್ರಕಾಶಕ್ಕೆ ತರುವುದುವಿದ್ಯಾವ್ಯವಸಾಯ ಇತ್ಯಾದಿಕೆಲಸಗಳಲ್ಲಿ ವ್ಯಾಪೃತರಾಗಿಮುಂದಿನ ಪೀಳಿಗೆಗೆ ಆದರ್ಶಪ್ರಾಯರಾಗಿದ್ದರು ಎಂದರೆ ತಪ್ಪಾಗಲಾರದುಬಸರೀಕಟ್ಟೆಯಲ್ಲಿರುವ 'ಶ್ರೀಸದ್ಗುರುವಿದ್ಯಾಶಾಲೆ'ಯ ಸ್ಥಾಪನೆಯಲ್ಲಿ ಹಾಗೂ ಬೆಳೆವಣಿಗೆಯಲ್ಲಿಯೂ ಸಕ್ರಿಯವಾದ ಪಾತ್ರವನ್ನು ವಹಿಸಿದರು.


ಸದ್ಗೃಹಸ್ಥರಾಗಿ ಶ್ರೀಯುತರು

    ಪ್ರಾಪ್ತವಯಸ್ಕರಾದರೂ ವಿವಾಹವಾದರೆ ಎಲ್ಲಿ ತಮ್ಮ ಆಧ್ಯಾತ್ಮಿಕಸಾಧನೆಗೆ ತೊಡಕಾದೀತೋ ಎಂಬ ಭಯದಿಂದ ಮನೆಯ ಹಿರಿಯರಿಗೆ ತಾವು ವಿವಾಹವಾಗುವುದಿಲ್ಲವೆಂದು ನಿಷ್ಠುರವಾಗಿ ಹೇಳಿಬಿಟ್ಟರುಇದರಿಂದ ಮನೆಯ ಹಿರಿಯರಿಗೆ ನಿರಾಸೆಯೇ ಆಗಿತ್ತುಆದರೆ ಗುರುದಂಪತಿಗಳು ಇವರನ್ನು ಗೃಹಸ್ಥರಾಗಿ ನೋಡಬೇಕೆಂದು ಇಚ್ಚಿಸಿದರುಶ್ರೀಗುರುವು, ``ವೈವಾಹಿಕಜೀವನವು ಧ್ಯಾತ್ಮಿಕಜೀವನಕ್ಕೆ ಅಡ್ಡಿಯಾಗುವುದಿಲ್ಲಎಂದು ಭರವಸೆಯನ್ನು ಕೊಟ್ಟಾಗ ಅವರ ಅಪ್ಪಣೆಗೆ ಅನುಸಾರವಾಗಿ ವಿವಾಹವಾಗಲು ಒಪ್ಪಿಕೊಂಡರುಇವರು ವಿವಾಹವಾಗುವ ಕನ್ಯೆಯನ್ನು ಮೊದಲ ಬಾರಿಗೆ ನೋಡಲೂ ಸಹ ಶ್ರೀಗುರುಭಗವಂತರು ಇವರ ತಂದೆ-ತಾಯಿಯವರೊಡನೆ ಇವರ  ಬಂಧುಗಳಾದ ವಿಸುಬ್ಬಕೃಷ್ಣರವರು ವಾಸಿಸುತ್ತಿದ್ದ ಮೈಸೂರಿನ 'ಸಿಹಿನೀರಿನಕಟ್ಟೆಬೀದಿ'ಯಲ್ಲಿದ್ದ ಮನೆಗೆ ಆಗಮಿಸಿದ್ದರುಅಲ್ಲಿ ಹಿಂದಿನ ಸಂಪ್ರದಾಯದಂತೆ ಹುಡುಗಿಯು ಹಾಡಿದ್ದನ್ನು ಕೇಳಿ,  ''ರಾಗತಾಳಗಳಿಗೆ ಬೆಲೆ ಕೊಡಬೇಡೀಪ್ಪಾಅದರ ಹಿಂದಿರುವ ಭಗವತ್ಪ್ರೇಮಕ್ಕೆ ಬೆಲೆ ಕೊಡಿಎಂದು ಹೇಳಿ ಆ ಕನ್ಯೆಯನ್ನು ವಿವಾಹವಾಗಲು ತಮ್ಮ ಸಮ್ಮತಿಯನ್ನು ಕೊಟ್ಟರುಶ್ರೀಯುತರ ವಿವಾಹಮಹೋತ್ಸವಕ್ಕೂ ಗುರುಭಗವಂತರು ತಮ್ಮ ಕೆಲವು ಶಿಷ್ಯರೊಂದಿಗೆ ಹೋಗಿದ್ದೂ ಅಲ್ಲದೆಗುಜುಗುಟ್ಟುತ್ತಿದ್ದ ಮದುವೆಮನೆಯಲ್ಲಿ "ಕಲ್ಯಾಣೋಲ್ಲಾಸಸೀಮಾ"ಎಂಬ ಶ್ಲೋಕವನ್ನು ಹಾಡಿದ್ದು ಬಹಳ ವಿಶೇಷವಾಗಿತ್ತು ಎಂದು ಅಂದಿನ ಹಿರಿಯರು ನೆನಪಿಸಿಕೊಳ್ಳುತ್ತಿದ್ದರು.

          ಇವರನ್ನು ವಿವಾಹವಾಗಿ ಬಂದ ಶ್ರೀಮತಿಜಯಲಕ್ಷ್ಮಿಯವರೂ ಕೂಡ ಇವರ ಮನೋಧರ್ಮಕ್ಕೆ ಅನುಗುಣವಾಗಿತಾವೂ ಸಹ ಗುರುಕೃಪೆಗೆ ಪಾತ್ರರಾಗಿ ಇವರ ಧ್ಯಾತ್ಮಿಕಜೀವನಕ್ಕೆ ಪೂರಕವಾಗಿ ಗೃಹಸ್ಥಾಶ್ರಮವನ್ನು ನಡೆಸುತ್ತಿದ್ದರುತುಂಬಿದ ಕುಟುಂಬದಲ್ಲಿಇವರನ್ನು ನೋಡಲು ಬರುತ್ತಿದ್ದ ವಿದ್ಯಾರ್ಥಿಗಳಮಂದಿರದ ಪ್ರಜೆಗಳಭಗವದ್ಭಕ್ತರ ಊಟಉಪಚಾರಗಳ ಹೊಣೆ ಹೊತ್ತು ಮಾತೃವಾತ್ಸಲ್ಯವನ್ನು ತೋರಿಸುತ್ತಿದ್ದರು.


ಸದ್ಗುರುವಿನ ಕರುಣಾಲಹರಿ

ಶ್ರೀಯುತರ ಮೊದಲ ಮಗುವಿನ ಜನನಕ್ಕೆ ಮೊದಲಿನ ಸೀಮಂತೋನ್ನಯನವೂ ಗುರುಗೃಹದಲ್ಲಿ ಪೂಜ್ಯದೊರೆಸ್ವಾಮಿಗಳ ಪೌರೋಹಿತ್ಯದಲ್ಲಿ ನಡೆಯಿತುಶಿಷ್ಯವಾತ್ಸಲ್ಯಕ್ಕೆ ಎಣೆಯುಂಟೇ ?!! ರಾಮಾಯಣ ಹಾಗೂ ಮಹಾಭಾರತದ ಕಾಲದಲ್ಲಿ ಮಹರ್ಷಿವಸಿಷ್ಠರು ಹಾಗೂ ಗರ್ಗರೂ ಶ್ರೀರಾಮ ಹಾಗೂ ಶ್ರೀಕೃಷ್ಣರಿಗೆ ಸಂಸ್ಕಾರಗಳನ್ನು ಮಾಡಿದರೆಭಾಗವತೋತ್ತಮರಾದ ವಿಭೀಷಣಾದಿಗಳು ಭಗವಂತನಿಂದ ಪಟ್ಟಾಭಿಷಿಕ್ತರಾದರುಅಂತೆಯೇ ಭಗವಂತನಿಂದ ಸೀಮಂತೋನ್ನಯನ ಮಾಡಿಸಿಕೊಂಡ ಭಾಗ್ಯಶಾಲಿಗಳಿವರು.  ಮುಂದೆ ಇವರ ಎಲ್ಲಾ ಮಕ್ಕಳಿಗೂ ಗುರುವಿನ ಅನುಗ್ರಹದ ಭಾಗ್ಯಲಭಿಸಿತು.

ಸ್ಥಾನ-ಮಾನಗಳಿಗೆ ಅಂಟಿಕೊಳ್ಳದವರು

ಶ್ರೀಗುರುಗಳ ಆದೇಶ-ಸಂದೇಶ-ನಿರ್ದೇಶದಂತೆ ಕಾರ್ಯನಿರ್ವಹಿಸುತ್ತಿದ್ದ ಇವರಿಗೆ ಸಾಂಸಾರಿಕಜವಾಬ್ದಾರಿ ಹೆಚ್ಚುತ್ತಿತ್ತುಒಂದೆಡೆ ತಂದೆಯವರ ಅನಾರೋಗ್ಯಊರಿಂದೂರಿಗೆ ವರ್ಗಾವಣೆಈ ರೀತಿಯ ಅನೇಕ ಒತ್ತಡಗಳಿಂದ ಶ್ರೀಮಂದಿರದ ಕೆಲಸಗಳನ್ನು ಕಾರ್ಯದರ್ಶಿಯಾಗಿ ಸರಿಯಾಗಿ ನಿಭಾಯಿಸಲು ಸಾಧ್ಯವಾಗುತ್ತಿಲ್ಲ ಎಂಬ ಕೊರತೆ ಕಾಡಲು ಶುರುವಾಯಿತುತಮ್ಮ ವೈಯಕ್ತಿಕತೊಂದರೆಗಳಿಂದ ಸಂಸ್ಥೆಯ ಕಾರ್ಯಕ್ರಮಗಳಿಗೆ ತೊಂದರೆಯಾಗದಿರಲಿ ಎಂಬ ಉದ್ದೇಶದಿಂದ ಕಾರ್ಯದರ್ಶಿಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರುಕಾರ್ಯದರ್ಶಿಪದದಲ್ಲಿಲ್ಲದಿದ್ದರೂಜೀವಿತಾಂತ್ಯದವರೆಗೂ ಮನೆ-ಮಕ್ಕಳುಆರೋಗ್ಯಎಲ್ಲವನ್ನು ಬದಿಗಿರಿಸಿ ಮಂದಿರದ  ಕಾರ್ಯಕ್ರಮಗಳಲ್ಲಿ  ಭಾಗವಹಿಸುತ್ತಿದ್ದರು.


ಶ್ರೀಮಾತೆಯವರ ಆಶಯ – ಶ್ರೀಮಂದಿರದಲ್ಲಿ ಆಶ್ರಯ

   ಶ್ರೀವಿಜಯಾನಂದಕಂದರು ತಮ್ಮ ವೃತ್ತಿಯ ಕೊನೆಯ ಭಾಗವನ್ನು ನಂಜನಗೂಡಿನಲ್ಲಿಯೇ ಮುಗಿಸಿದರುನಿವೃತ್ತಿ ಹೊಂದಿದ ನಂತರದಲ್ಲಿಯೂ ಮೈಸೂರುಶಾಖೆಯಲ್ಲಿರುವ ಶ್ರೀಮಂದಿರದಲ್ಲಿ ಬರುತ್ತಿದ್ದ ಜಿಜ್ಞಾಸುಗಳಿಗೆ ಉತ್ತರಿಸಲು ಶ್ರೀಮಾತೆಯವರು ಮಂದಿರದ ಹಿಂಭಾಗದಲ್ಲಿದ್ದ ಮನೆಗೆ ಬರಲು ತಿಳಿಸಿದರು೧೯೮೮ನೇ ಇಸವಿಯಲ್ಲಿ ಮಂದಿರದ ಹಿಂಭಾಗದಲ್ಲಿದ್ದ ಮನೆಗೆ ಕುಟುಂಬಸಮೇತರಾಗಿ ಬಂದು ನೆಲೆಸಿದರುಮಂದಿರದ ಪುಸ್ತಕಗಳನ್ನು ಕೊಳ್ಳಲುಬರುತ್ತಿದ್ದ ಆಸಕ್ತರಿಗೆ ಶ್ರೀಗುರುವಿನ ವಿಚಾರಧಾರೆಯನ್ನು ಹೇಳುವುದು, 'ಆರ್ಯಸಂಸ್ಕೃತಿಮಾಸಪತ್ರಿಕೆಯ ಲೇಖನಗಳನ್ನು ಪರಿಶೀಲಿಸುವುದುಸಂಸ್ಥೆಯ ಬೇರೆ ಶಾಖೆಗಳಿಂದ ಬಂದ ಜ್ಞಾನಸೋದರರ ಬಗ್ಗೆ ಕಾಳಜಿಅತಿಥಿಸತ್ಕಾರವಿಚಾರವಿನಿಮಯ ಹೀಗೆ ಹಲವು ಹತ್ತು ಜವಾಬ್ದಾರಿಗಳನ್ನು ನಿಭಾಯಿಸಿಮಂದಿರದ ಕಾರ್ಯಕ್ರಮಗಳಲ್ಲಿ ಉತ್ಸಾಹದಿಂದ ಭಾಗವಹಿಸುತ್ತಿದ್ದರುಅನೇಕ ಪ್ರವಚನಗಳನ್ನು ಮಾಡಿದರು.


ಭಾರತೀಮಂದಿರ ಭಾರತೀನಿಕೇತನ

ಶ್ರೀರಂಗಮಹಾಗುರುಗಳ ಜನ್ಮಸ್ಥಳವೂಕಾರ್ಯಕ್ಷೇತ್ರವೂ ಆದ ಹೆಡತಲೆಗ್ರಾಮವು ನಂಜನಗೂಡು ತಾಲ್ಲೂಕಿಗೆ ಸೇರಿದೆ.  ಈ ಹಿನ್ನೆಲೆಯಲ್ಲಿ ನಂಜನಗೂಡಿಗೆ ಏನಾದರೂ ಮಾಡಬೇಕು ಎಂಬ ಅಭೀಪ್ಸೆ ಶ್ರೀಯುತರಲ್ಲಿ ಬಹುವಾಗಿ ಇತ್ತುಈ ಹಿನ್ನೆಲೆಯಲ್ಲಿ ಅವರು 'ಭಾರತೀಮಂದಿರಎಂಬ ಸಂಸ್ಥೆಯನ್ನು ಹುಟ್ಟುಹಾಕಿದರು.   ಆದರೆಅವರು ತೆರೆಯ ಮರೆಯಲ್ಲಿ ನಿಂತು ತಮ್ಮ ಆಪ್ತಸ್ನೇಹಿತರೂಸಹಪಾಠಿಗಳು ಆಗಿದ್ದ ಶ್ರೀ ಎನ್.ಶ್ರೀಕಂಠ ಅವರನ್ನು ಇದರ ಕಾರ್ಯದರ್ಶಿಯನ್ನಾಗಿ ಮುಂದಿರಿಸಿದರುಈ ಸಂಸ್ಥೆಯು 1950ರಲ್ಲಿ ಅರಂಭಗೊಂಡು 1952ರವರೆಗೂ (ಮೂರು ವರ್ಷಗಳುಬಹು ಯಶಸ್ವಿಯಾಗಿ ಕಾರ್ಯನಿರ್ವಹಿಸಿತುಸಾಹಿತ್ಯಸಂಗೀತಕಲೆ ಮೊದಲಾಗಿ ವಿವಿಧಕ್ಷೇತ್ರಗಳ ತಜ್ಞರನ್ನು ಕರೆಯಿಸಿ ತಿಂಗಳಿಗೊಮ್ಮೆ ಉಪನ್ಯಾಸಗಳನ್ನು  ಏರ್ಪಡಿಸಲಾಗುತ್ತಿತ್ತು.  ಶಿಕ್ಷಕರುವೈದ್ಯರೂವಕೀಲರೂ ಮೊದಲುಗೊಂಡು ವಿವಿಧಬಗೆಯ ಶ್ರೋತೃವರ್ಗ ಕಾರ್ಯಕ್ರಮಗಳಲ್ಲಿ ತುಂಬಿರುತ್ತಿತ್ತುಹೀಗೆ ಬರುವ ಉಪನ್ಯಾಸಕರಲ್ಲಿ ಅಷ್ಟಾಂಗಯೋಗವಿಜ್ಞಾನಮಂದಿರದ ಉಪನ್ಯಾಸಕರೂ ಇರುತ್ತಿದ್ದರು.  ಭಾರತೀಯಸಂಸ್ಕೃತಿಯ ಬಗ್ಗೆ ಶ್ರೀಗುರುವು ತನ್ನ ತಪಸ್ಯೆಯಿಂದ ತಂದ ವಿಚಾರಗಳಿಗೂಲೋಕದಲ್ಲಿ ಉಳಿದುಕೊಂಡಿರುವ ವಿಚಾರಗಳಿಗೂ ತುಲನಾತ್ಮಕವಾದ ನೋಟ ಉಂಟಾಗಿ ವಿಜ್ಞಾನಮಂದಿರದ ವಿಚಾರಗಳು ಅನನ್ಯವಾದುದೆಂಬುದು ಜನರಿಗೆ ಅರಿವಾಗುತ್ತಿತ್ತು.  ಅಂದಿನ ಕಾರ್ಯಕ್ರಮದ ಆದಿಮಂಗಳ ಹಾಗೂ ಅಂತ್ಯಮಂಗಳ (ಕಾರ್ಯಕ್ರಮದ ಕೊನೆಯಲ್ಲಿ ಹಾಡುವ ಮಂಗಳಾಶಂಸನೆ)ಗಳು ಅಂದಿನ ಉಪನ್ಯಾಸದ ವಿಷಯಕ್ಕೇ ಸಂಬಂಧಿಸಿರುತ್ತಿತ್ತು ಹಾಗೂ ವಂದನಾರ್ಪಣೆಯ ಸಮಯದಲ್ಲಿ ಕಾರ್ಯದರ್ಶಿಗಳಾಗಿದ್ದ ಶ್ರೀಶ್ರೀಕಂಠ ಅವರು ಅಂದಿನ ಉಪನ್ಯಾಸಕರು ಹೇಳಿದ್ದನ್ನು ಸಂಗ್ರಹಿಸಿ ಹೇಳುವುದರ ಜೊತೆಗೆ ಆ ವಿಷಯದ ಬಗ್ಗೆ ಸನಾತನ-ಆರ್ಯಭಾರತೀಯಮಹರ್ಷಿಗಳ ನೋಟನಿಲುವು ಏನಾಗಿದೆ ಎಂಬುದನ್ನೂ ತಿಳಿಸುತ್ತಿದ್ದರು.  ಇವೆರಡೂ 'ಭಾರತೀಮಂದಿರ'ದ ಕಾರ್ಯಕ್ರಮಗಳ ಪ್ರಧಾನ ಆಕರ್ಷಣೆಗಳಾಗಿ ಇಂದಿಗೂ ಅಂದಿನ ಹಲವು  ಶ್ರೋತೃಗಳ ಮನಸ್ಸಿನಲ್ಲಿ ಅಚ್ಚಳಿಯದೇ ನಿಂತಿವೆ.  ಈ ಆದಿಮಂಗಳಅಂತ್ಯಮಂಗಳಗಳನ್ನು ಹೇಳಿಕೊಟ್ಟು ತರಬೇತಿ ನೀಡುತ್ತಿದ್ದವರೂ ಮತ್ತು ಶ್ರೀಶ್ರೀಕಂಠರಿಗೆ ಏನು ಹೇಳಬೇಕೆಂಬ ತಯಾರಿ ನೀಡುತ್ತಿದ್ದವರು ಶ್ರೀಸೀತಾರಾಮುಗಳೇಶ್ರೀರಂಗಮಹಾಗುರುಗಳೂ ಸಹಾ ಭಾರತೀಮಂದಿರದ ಹಲವು ಕಾರ್ಯಕ್ರಮಗಳಲ್ಲಿ ಪೂಜ್ಯಸೀತಾರಾಮುಗಳೊಡನೆ ಕೊನೆಯ ಬೆಂಚಿನಲ್ಲಿ ಶ್ರೋತೃಗಳಾಗಿ ಭಾಗವಹಿಸಿದ್ದರು ಎಂಬುದು ಇಲ್ಲಿ ಉಲ್ಲೇಖನೀಯ.  ಹೀಗೆ ಶ್ರೀಮಂದಿರದ ವಿಚಾರಧಾರೆಯ ಸಂಪರ್ಕ ಮತ್ತು ಶ್ರೀಯುತರ ಸ್ನೇಹ ಇವೆರಡು ಶ್ರೀಶ್ರೀಕಂಠರನ್ನು ಶ್ರೀಗುರುವಿನ ಅನುಗ್ರಹಕ್ಕೆ ಪಾತ್ರರನ್ನಾಗಿಸಿತುಮುಂದೆ ಶ್ರೀಶ್ರೀಕಂಠರು ಶ್ರೀಮಂದಿರದ ಕಾರ್ಯದರ್ಶಿಗಳಾಗಿ ಬಹುಸುದೀರ್ಘವಾದ ಸೇವೆಯನ್ನು ಸಲ್ಲಿಸಿದರು ಎಂಬುದಿಲ್ಲಿ ಸ್ಮರಣೀಯ.

ಮುಂದೆ ಶ್ರೀಯುತರು ಶಿಕ್ಷಕವೃತ್ತಿಯಿಂದ ನಿವೃತ್ತರಾಗಿ ನಂಜನಗೂಡಿನಲ್ಲಿಯೇ ನೆಲಸಿದರುಅಂದಿನ 'ಭಾರತೀಮಂದಿರ'ವು ಈಗ 'ಭಾರತೀನಿಕೇತನಎಂಬ ಹೆಸರಿನೊಂದಿಗೆ ಆವಿರ್ಭವಿಸಿತುಈ ಬಾರಿ ಶ್ರೀಸೀತಾರಾಮುಗಳು ಆಯ್ಕೆ ಮಾಡಿಕೊಂಡಿದ್ದು ನಂಜನಗೂಡಿನ ಬಾಲಕರಸರ್ಕಾರಿಪದವಿಪೂರ್ವ ಕಾಲೇಜಿನಲ್ಲಿ ತಮ್ಮ ಸಹೋದ್ಯೋಗಿಯಾಗಿ ನಾಟಕಕಲೆಯ ಶಿಕ್ಷಕರಾಗಿದ್ದ ಶ್ರೀವೆಂಕಟರಮಣಕಲಗಾರ್ ಮತ್ತು ನಂಜನಗೂಡಿನವರೂತಮಗೆ ಪರಿಚಯವಿದ್ದವರ ಮನೆಯ ಮಕ್ಕಳೂಮಿಗಿಲಾಗಿ ತಮ್ಮ ವಿದ್ಯಾರ್ಥಿಗಳು ಆಗಿದ್ದ ನಾಲ್ವರು ತರುಣರನ್ನು.  ಈ ಸಂಸ್ಥೆಯೂ 'ಭಾರತೀಮಂದಿರ'ದ ಪಡಿಯಚ್ಚೇ ಆಗಿತ್ತುಇದು 1986 ರಿಂದ 1988ರವರೆಗೂ ಕಾರ್ಯನಿರ್ವಹಿಸಿತುಯಥಾಪ್ರಕಾರ ಈಗಲೂ ಶ್ರೀಸೀತಾರಾಮುಗಳು ತೆರೆಯ ಹಿಂದಿನ ಸೂತ್ರಧಾರರಾಗಿ ಮಾರ್ಗದರ್ಶನನೀಡುತ್ತಿದ್ದರುಇವೆರಡೂ ಸಂಸ್ಥೆಗಳಲ್ಲಿ ಮಾಸ್ತಿಯವರೇ ಮೊದಲಾಗಿ ಆಯಾಯಾ ಕಾಲಘಟ್ಟದ ಬಹು ದೊಡ್ಡವಿದ್ವಾಂಸರೂತಜ್ಞರೂ ಉಪನ್ಯಾಸಗಳನ್ನು ನೀಡಿದ್ದಾರೆ.  ಈ ಕಾರ್ಯಕ್ರಮಗಳ ಬಗ್ಗೆ ವಿವರವಾಗಿ ಮರುದಿನದ ದಿನಪತ್ರಿಕೆಗಳಲ್ಲಿ ವರದಿಯಾಗಿವೆಇವೆರಡೂ ಸಂಸ್ಥೆಗಳು ಅಪಾರವಾದ ಜನಮನ್ನಣೆಯನ್ನೂವಿದ್ವನ್ಮನ್ನಣೆಯನ್ನೂ ಗಳಿಸಿದ್ದವು.  ಭಾರತೀಯಸಂಸ್ಕೃತಿಯ ಬಗ್ಗೆ ಯಥಾರ್ಥವಾದ ನೋಟವನ್ನೂಶ್ರೀಮಂದಿರದ ವಿಚಾರಧಾರೆಯನ್ನೂ ಎಲ್ಲರಿಗೂ ತಲುಪಿಸಬೇಕೆಂಬ ಶ್ರೀಯುತರ ತುಡಿತದ ಹೆಗ್ಗುರುತುಗಳಾಗಿವೆ 'ಭಾರತೀಮಂದಿರಮತ್ತು 'ಭಾರತೀನಿಕೇತನ'ಗಳು.

ನಾದೋಪಾಸನೆ

ಶ್ರೀಯುತರು ಸಂಗೀತವನ್ನು ಶಾಸ್ತ್ರೀಯವಾಗಿ ಕಲಿಯದಿದ್ದರೂ ಅದರಲ್ಲಿ ಒಲವಿತ್ತುಮತ್ತು ಜನ್ಮತಃ ಸಂಗೀತದ ಜ್ಞಾನವೂಉತ್ತಮವಾದ ಶಾರೀರವೂ ಒದಗಿ ಬಂದಿತ್ತುಶ್ರೀರಂಗಮಹಾಗುರುಗಳು ಹಾಡುತ್ತಿದ್ದ ಸ್ತೋತ್ರಗಳನ್ನು ಮಧುರವಾಗಿ  ಹಾಡುತ್ತಿದ್ದರುಸಾಯಂಸಂಧ್ಯಾಕಾಲದಲ್ಲಿ ಇವರು ಹಾಡುವ ಸ್ತೋತ್ರಗಳನ್ನು ಕೇಳಲೆಂದೇ ಹಲವರು ಬರುತ್ತಿದ್ದರು.  ಹಾಗೆ ಬಂದವರಲ್ಲಿ ಹಲವರಿಗೆ ಮುಂದೆ ಶ್ರೀಗುರುವಿನ ಅನುಗ್ರಹವೂ ದೊರಕಿತು ಎಂಬುದನ್ನು ಇಲ್ಲಿ ಉಲ್ಲೇಖಿಸಲೇಬೇಕು.

   ಅವರು ಶ್ರೀರಂಗಮಹಾಗುರು ಮತ್ತು ವಿಜಯಲಕ್ಷ್ಮೀಶ್ರೀಮಾತೆಯವರನ್ನು ಕುರಿತು ಭಕ್ತಿರಸಭಾವಪೂರ್ಣವಾದ ಹಲವು ಸ್ತೋತ್ರಗಳನ್ನೂ ರಚಿಸಿದ್ದಾರೆಅವರು ಭಕ್ತಿಭಾವಭರಿತರಾಗಿ ಆ ಸ್ತೋತ್ರಗಳನ್ನು ಹಾಡುತ್ತಿದ್ದರು.  ಅವನ್ನು ಕೇಳಿದಾಗ ಒಂದು ವಿಶೇಷವಾದ ಪರಿಪಾಕವನ್ನು ಕೇಳುಗರ ಮನಸ್ಸುಬುದ್ಧಿಗಳ ಮೇಲೆ ಆ ಸಾಹಿತ್ಯಗಾನಗಳು ಉಂಟುಮಾಡುತ್ತಿತ್ತು.  ಅಷ್ಟಲ್ಲದೇಈ ಪರಿಣಾಮವು ಬಹುದೀರ್ಘಕಾಲ ಉಳಿಯುತ್ತಿತ್ತುಅವರು ರಚಿಸಿ ಹಾಡುತ್ತಿದ್ದ ಸ್ತೋತ್ರಗಳಲ್ಲಿ ಕೆಲವನ್ನು ಕೆಳಗೆ ಕೊಟ್ಟಿದೆ:–

1.  ಜಯ ಜಯತು ಹೃದಯೇಶ ಗುರುವರ

    ಜಯ ಜಯ ಮಹೋದಾರ ಸಾಗರ

    ಜಯ ಜಿತೇಂದ್ರಿಯ ಸೌಮ್ಯ ನಿಷ್ಕಲ ಭಕ್ತವತ್ಸಲನೆ |

    ಜಯ ಜಯತು ಯೋಗೇಶ ಶಂಕರ

    ಜಯ ಪರಂಜ್ಯೋತಿಸ್ವರೂಪನೆ

    ದಯಮಹಾಂಬುಧಿ ಮನ್ನಿಸೆನ್ನನು ಚರಣಕೆರಗುವೆನು ||

 

2. ಜಯ ಜಯ ಶ್ರೀರಂಗ ದಿವ್ಯಮಂಗಳರೂಪ

   ಜಯತು ಮಂಗಳ ಮಹಾರಂಗೇಶ ಹಯವದನ

   ಜಯ ಜಯ ಸಕಲಕಲಾಸುರಕ್ಷಕ ಸರ್ವವಿದ್ಯಾಮೂಲ ದೀಪರೂಪ (ವಿಜಯಾಧವ)||

   ಜಯತು ವಿಜಯಾನಂದಕಂದವತ್ಸಲ ಕಾಂತ

   ಜಯ ಜಯತು ಭಾರತೀಪತಿ ಭಕ್ತಜನಪಾಲ

  ಜಯತು ಮನ್ಮನೋರಥವೇರಿ ರಾಜಿಪ ರಾಜಪಥಗಾಮಿ  ರಕ್ಷಿಪುದು ನೀ ||


 (ಅವರು ಮೂರನೆಯ ಸಾಲನ್ನು ಹಾಡುವಾಗ "ಸರ್ವವಿದ್ಯಾಮೂಲ ದೀಪರೂಪಎಂದು ಹಾಡಿನಂತರ "ಸರ್ವವಿದ್ಯಾಮೂಲ ವಿಜಯಾಧವಎಂದು ಹಾಡುತ್ತಿದ್ದರು.)

 

3. ಎನ್ನ ರಾಮನೆ ರಮಿಸುವೆನ್ನೊಳು

    ಎನ್ನನಾಕರ್ಷಿಸುವ ಕೃಷ್ಣನೆ

    ಎನ್ನ ಸಂಧ್ಯಾವಂದನೆಯ ಸವಿತೃವೆ ಸುಧಾಮೂರ್ತಿ||

    ಎನ್ನ ಯಜ್ಞದ ಯಜ್ಞಪುರುಷನೆ

    ನಿನ್ನ ನಳಿನಸಮಾನ ಸುಂದರ

    ಚೆನ್ನಡಿಯನೀ ಮುಡಿಯೊಳಿಡು ಬೇಡುವೆನು ಸೇವಕನ ||


(ಗಮನಿಸಿಹೃದ್ಯವಾಗಿರುವ ಸಂಸ್ಕೃತದ ಸಾಹಿತ್ಯವು ಕನ್ನಡಕ್ಕೆ ಅನುವಾದಗೊಳ್ಳುವುದು ಲೋಕದಲ್ಲಿ ಸರ್ವೇ ಸಾಧಾರಣ.  ಆದರೆಶ್ರೀವಿಜಯಾನಂದಕಂದರ ಈ ಮೇಲ್ಕಂಡ ರಚನೆಯನ್ನು ಶ್ರೀರಂಗಪ್ರಿಯಶ್ರೀಗಳವರು ಬಹು ಹಿಂದೆಯೇ "ರಾಮಸ್ತ್ವಂ ಹೃದಯೇ ಸದೈವ ರಮಸೇಎಂಬುದಾಗಿ ಸಂಸ್ಕೃತಕ್ಕೆ ಅನುವಾದಿಸಿದ್ದಾರೆ ಹಾಗು ಇದು ಬಹುಭಕ್ತಪ್ರಿಯವೂ ಆಗಿದೆ.)

 

4. ಗುರುವಿಕೆಗೆ ಗೊತ್ತು ಚೆಲುವಿಕೆಗೆ ಗಣಿ ನನ್ನಿಗಾ

    ಗರ ಉರ್ಕಿಗಿರ್ಕೆವನೆ ಕಲೆಗೆ ನೆಲೆ ಪೆಸರ್ವೆತ್ತ

    ಅರಿತಕ್ಕೆ ತಾಣ ಶಾಂತತೆಗೆ ಮೇರೆ ಬಲ್ಪಿಗೆ ಬೇರು ತಳ್ತಳ್ತಿಗೆ ತವರ್ ||

    ಸಿರಿಸೊಂಪಿಗಾಬೀಡು ಸೈಂಪಿಗೆ ನೆಲೆವೀಡು

    ಕರುಣಕೆ ಕಡಲು ಸುಪಾವಿತ್ರ್ಯಕ್ಕೆ ನೀ ನಿಂಬು

    ವರಧರ್ಮಕಾಶ್ರಯನೆ ಗುರುವರನೆ ನಿನ್ನಯಾ ಸೊಡರಡಿಗೆ ಮುಡಿಯಿಡುವೆನು ||

 

5. ದೀಪರೂಪ ಪವಿತ್ರ ನಿರ್ಮಲ

   ರೂಪ ಸುಜ್ಞಾನ ಪ್ರದಾಯಕ

   ರೂಪ ಮಮ ಹೃದಯಾಬ್ಜದಲಿ ನೆಲೆಸಿರ್ಪ ಓಂಕಾರ

   ರೂಪ ಸುಂದರ ದಿವ್ಯಮಂಗಳ

   ದೀಪ ಮಹದಾನಂದವೀವ ಸು

   ರೂಪ ಸಲಹೈ ರಂಗ  ನಿನ್ನಲರಡಿಗೆ ಮುಡಿಯಿಡುವೆಂ ||

 

6. ಕಾವುದೈ ಕೈಬಿಡದೆ ಕಾವನೆ

   ಕಾವುದೈ ಮತ್ಪ್ರಾಣಕಾಂತನೆ

   ಕಾವುದೈಯಘದೂರ ನಿರ್ಮಲ ಮೋಕ್ಷದಾಯಕನೆ |

   ಕಾವುದೈ ಕಾರುಣ್ಯಸಾಗರ

   ಕಾವುದೈ ಕೈವಲ್ಯನಾಥನೆ

   ಕಾವುದೈ ಕಡುದೀನನನು ಕಾಮಾದಿಗಳ ಕೈಯ್ಯಿಂ ||

 

7. ತಾಯೆ  ಮಲ್ಲೋಚನ ಕುಮುದಚಂದ್ರಿಕೆ ಮಹಾ

   ಪ್ರೇಯೆ ಮನ್ನಾಥಮುಖವನು ಸತತ ಚಿಂತಿಪ

   ಶ್ರೀಯೆ ಮದ್ದುಃಖಹಾರಿಣಿ ಮನೋಹಾರೆ ಸು

   ಕಾಯೆ ಮನ್ಮನದ ಮಂಟಪದಿ ಮಂಡಿಪುದು ನೀ ||

 

8. ದಿವ್ಯಾಂಬರೆ ದಯಮಾನದೀರ್ಘನಯನೆ ದೃಡಾಂಗೆದೇವಿ ದೇದೀಪ್ಯಮಾನ ಸುಭೂಷಭೂಷಿತೇ

   ಭವ್ಯಾನನೆ ಭಯಭಂಜನೆ ನಿರಂಜನೆ ವಿಜಯೆ ಹೇವರದೆ  ಮಂಗಳೆ ಮರಾಲಮಂದಗಮನೆ    

   ದಿವ್ಯಾಂಗನಾಮಣಿಯೆ ಮದ್ಗುರುವರಮನೋಜ್ಞೆ ಕುಂಕುಮಾಂಕಿತಫಾಲೆ ಕಲ್ಯಾಣಗುಣಪರಿಪೂರ್ಣೆ     

   ಅವ್ಯಾಜಕರುಣಾಪೂರಪೂರಿತೆ ಶ್ರೀರಂಗರಾಜಮಹಿಷಿ ಶ್ರೀಮಾತೆ ನಿನ್ನಡಿಗೆ ಮುಡಿಯಿಡುವೆನು ||

 

9. ಜಯ ಜಯತು ಭಾರತಿ ಭರತರತಿ ಮಹಾಸುಮತಿ

    ಜಯತು ವಾಗೀಶಸತಿ ಸುಮೇಧಾ ಸರಸ್ವತಿ

    ಜಯ ವಾಣಿ ವಿಶ್ವವಿಜ್ಞಾನವೀಣಾಪಾಣಿ ವಿಮಲೆ ಪನ್ನಗವೇಣಿ ||

    ಜಯ ಜಯತು ಕಲ್ಯಾಣಿ ವರದೆ ವಿದ್ಯಾರಾಣಿ

   ದಯಮಹಾಂಬುಧಿ ಹರಸು ನೀ ಸಚ್ಚಿದಾನಂದ

   ಪಯವುಣಿಸಿ ಕಂದಗಳ ಕಾಯ್ತಾಯೆ ನಿನ್ನಯಾ ಮಲರಡಿಗೆ ಮುಡಿಯಿಡುವೆನು ||

 

10.  ಪಾಹಿ ಪುಣ್ಯದೆ ಪೂರ್ಣೆ ಪಾವನೆ

     ತ್ರಾಹಿ ಭಗವತಿ ಭದ್ರೆ ಭಾರತಿ

     ಪಾಹಿ ಶಿವೆ ಶಾರದೆ ಸಿರಿಶುಭಪ್ರದೆ ಸುಸೌಮ್ಯೆಯೆ ನೀ |

     ತ್ರಾಹಿ ಭಕ್ತನ ನಿನ್ನ ಕಂದನ

     ಪಾಹಿ ಎನ್ನಂ ಪ್ರೀತಿಪುತ್ರನ

     ತ್ರಾಹಿ ತವಪದಪದುಮಸಾರವ ಪೀರ್ವ ಷಟ್ಪದವ ||

 

11. ಮಂಗಳಂ ಶ್ರೀರಂಗರಾಜಗೆ

    ಮಂಗಳಂ ಶ್ರೀಗುರುವರೇಣ್ಯಗೆ

    ಮಂಗಳಂ ಜ್ಞಾನವಿಜ್ಞಾನವಿಚಾರವಾಹಿನಿಗೆ ||

    ಮಂಗಳಂ ಮನ್ಮಾತೆ  ವಿಜೆಯೆಗೆ

    ಮಂಗಳಂ ಶ್ರೀರಂಗರಾಣಿಗೆ

    ಮಂಗಳಂ ಮಂದಿರದ  ಸಹೃದಯಬಂಧುವರ್ಗಕ್ಕೆ ||


12. ಮಳೆಯಕ್ಕೆ ಕಾಲಕಾಲಕಾಬೆಳೆಗಳು ಬೆಳೆದ

ನೆಲದಿಂದ ತಣಿವಕ್ಕೆ ಬೆಳೆದ ನಾಲ್ಕರವತ್ತು

ಕಲೆಗಳಿಂದೊಡೆವೆರೆತು ಕಲೆಯನಾಥನ ಕೂಡಿ ಕೊಂಡಾಡಿ ಸೌಖ್ಯದೊಳಿರ್ಕೆ||

ಇಳೆಯ ನರವೃಂದ-ಹೃನ್ಮಂದಿರದಿ ಬೆಳಗಿ ಭಾ

ನೆಲಸಿ ಭಾರತೀಭಾರತರಾಗಿ ಸಲೆ ಬಾಳ್ಗೆ

ನಲಿದು ತಾಯ್ಮೊಲೆಗುಡಿದು ಮಲಗಿ ಮಡಿಲೊಳ್ ಕಂದಗಳಾನಂದದಿಂದಿರ್ಕೆ ||


ಗುರುಭಾವಿತಾಂತಃಕರಣರಾಗಿ ಶ್ರೀಯುತರು ಹೀಗೆ ತನ್ನ ಗುರುವಿನ ಹಿರಿಮೆಗರಿಮೆಗಳನ್ನು ಸಂದರ್ಭೋಚಿತವಾಗಿ ಹೇಳುತ್ತ ಸಂತೋಷಪಡುತ್ತಿದ್ದ ಮಹಾಚೇತನರಾಗಿದ್ದರು. "ನಾಪೃಷ್ಟಃ ಕಸ್ಯಚಿತ್ ಬ್ರೂಯಾತ್" ಎಂಬುದು ಅವರ ನಿಯಮವಾಗಿತ್ತು. ಹೀಗೆ ಜೀವನದುದ್ದಕ್ಕೂ ಗುರುಭಾವಭಾವಿತಾಂತಃಕರಣರಾಗಿ ಧ್ಯಾನ-ಮೌನ- ಗುರುಚಿಂತನೆಗಳಲ್ಲಿ ಮುಳುಗಿರುತ್ತಿದ್ದರು. ಶ್ರೀಯುತರು ಗುರುವಿನಲ್ಲಿ ನಮ್ಮ ಮನಸ್ಸು ಹೇಗೆ ಲಗ್ನವಾಗಬೇಕು ಎಂದು ಮನಮುಟ್ಟುವಂತೆ ಹೇಳುತ್ತಿದ್ದರು.  ”ಮನಶ್ಚೇನ್ನಲಗ್ನಂ ಗುರೋರಂಘ್ರಿಪದ್ಮೇ" ಎಂಬುದನ್ನು ವಿವರಿಸುತ್ತಾ, 

"ಅಂಕೋಲಂ ನಿಜಬೀಜಸಂತತಿರಯಸ್ಕಾಂತೋಪಲಂ ಸೂಚಿಕಾ

ಸಾಧ್ವೀ ನೈಜವಿಭುಂ ಲತಾಕ್ಷಿತಿರುಹಂ ಸಿಂಧು: ಸರಿದ್ವಲ್ಲಭಮ್ |

ಪ್ರಾಪ್ನೋತೀಹ ಯಥಾ ತಥಾ ಪಶುಪತೇ: ಪಾದಾರವಿಂದದ್ವಯಂ

ಚೇತೋವೃತ್ತಿರುಪೇತ್ಯ ತಿಷ್ಠತಿ ಸದಾ ಸಾ ಭಕ್ತಿರಿತ್ಯುಚ್ಯತೇ ||”

``ಅಂಕೋಲದ ಬೀಜ ಸಿಡಿದು ಆ ಗಿಡದ ಬುಡದಲ್ಲೇ ಸೇರಿ ಒಂದಾಗಿ ಮತ್ತೆ  ಅದರಿಂದ ಗಿಡಗಳು ಬೆಳೆಯುತ್ತವೆ. ಇಲ್ಲಿನ ಸೇರುವಿಕೆ ಸಹಜ ಹಾಗೂ ಗಾಢವಾಗಿದೆ. ಮುಂದಕ್ಕೆ ಅಯಸ್ಕಾಂತವು ಸೂಜಿಯನ್ನು ಸೇರುವಿಕೆಯಲ್ಲಿ, ಪತಿವ್ರತಾಸ್ತ್ರೀಯು ತನ್ನ ಪತಿಯನ್ನು ಸೇರುವಲ್ಲಿ, ಬಳ್ಳಿಯು ಮರವನ್ನು ಹಬ್ಬುವಲ್ಲಿ ಸೇರುವಿಕೆಯು ಮತ್ತಷ್ಟು ಗಾಢವಾಗಿದ್ದರೂ ಪ್ರಯತ್ನಪೂರ್ವಕವಾಗಿ ಬಿಡಿಸಲೂಬಹುದು.  ಆದರೆ ನದಿಗಳು ಸಮುದ್ರರಾಜನಲ್ಲಿ ವಿಲೀನವಾದ ನಂತರ ನೀವು ರುಚಿಯಲ್ಲಾಗಲೀ, ಬಣ್ಣದಲ್ಲಾಗಲೀ ಗಂಗೆ, ತುಂಗೆ ಎಂದಾಗಲೀ ಬೇರ್ಪಡಿಸಲಾರಿರಿ, ಗುರುತಿಸಲಾರಿರಿ. ಈ ರೀತಿ ನಿಮ್ಮ   ಮನಸ್ಸು ಗುರುವಿನಲ್ಲಿ ಸಂಲಗ್ನವಾಗಬೇಕು” ಎಂದು ವಿವರಿಸುತ್ತಿದ್ದರು.

ನಿಷ್ಠೆ ಮತ್ತು ಪ್ರಾಮಾಣಿಕತೆಗಳ ಸಾಕಾರಮೂರ್ತಿ

‘ಮೃದೂನಿ ಕುಸುಮಾದಪಿ’ ಎಂಬಂತಿದ್ದರೂ  ಸನಾತನಾರ್ಯಭಾರತೀಯ-ಋಷಿನೋಟಕ್ಕೆ, ಶ್ರೀಗುರುವಿನ ವಿಚಾರಧಾರೆಗೆ, ಧರ್ಮಸಂಸ್ಕೃತಿಗಳಿಗೆ, ಧಕ್ಕೆಬರುವಂತೆ, ಚ್ಯುತಿಬರುವಂತೆ ಮಾತನಾಡಿದರೆ ನೇರವಾಗಿ ನಿಷ್ಠುರವಾಗಿ ಪ್ರತಿಭಟನೆಯ ಧ್ವನಿ ಎತ್ತಿ ಖಂಡಿಸುತ್ತಿದ್ದರು. ಸರಳತೆ, ಸಜ್ಜನಿಕೆ, ನಲ್ನುಡಿ, ಶಿಸ್ತು, ಪ್ರಾಮಾಣಿಕತೆ, ಸತ್ಯ, ನಿಷ್ಠೆ, ಸ್ವಜನಾಭಿಮಾನ, ಶಿಷ್ಯವಾತ್ಸಲ್ಯ, ಗುರುಭಕ್ತಿ, ದೇಶಭಕ್ತಿ ಮುಂತಾದ ಸದ್ಗುಣಗಳ ಆಗರವಾಗಿದ್ದರು.

ಪೂಜ್ಯ ಶ್ರೀವಿಜಯಾನಂದಕಂದರು ಶ್ರೀಗುರುವಿನ ವಿಚಾರಧಾರೆಯನ್ನು ಮಂದಿರದ ಪರವಾಗಿ ಹೊರಗಿನ ಅನೇಕಸಂಸ್ಥೆಗಳಲ್ಲಿ ಮನೋಜ್ಞವಾಗಿ ಇಡುತ್ತಿದ್ದರು. ಮೈಸೂರು ಆಕಾಶವಾಣಿಯ ‘ಚೆನ್ನುಡಿ’ ಮತ್ತು ‘ಚಿಂತನ’ ಕಾರ್ಯಕ್ರಮಗಳಿಗೆ ಅನೇಕವಿಚಾರಗಳನ್ನು ರೆಕಾರ್ಡ್ ಮಾಡಿಕೊಟ್ಟಾಗ ಅದು ಆಕಾಶವಾಣಿಯಲ್ಲಿ ಬಿತ್ತರವಾಗಿ ಅನೇಕರ ಮನಸ್ಸನ್ನು ಆಕರ್ಷಿಸಿತ್ತು.    

ಬಹುಮುಖಪ್ರತಿಭರು ಶ್ರೀಯುತರು 

ಪೂಜ್ಯಶ್ರೀವಿಜಯಾನಂದಕಂದರು ಕನ್ನಡಶಿಕ್ಷಕರಾದರೂ ಬಹುಮುಖಪ್ರತಿಭೆಯುಳ್ಳವರಾಗಿದ್ದರು. ಶ್ರೀಗುರುವಿನಿಂದ ಆರ್ಷೇಯವಾದ ನಾಡಿವಿಜ್ಞಾನದ ಪಾಠವೂ ಆಗಿತ್ತು. ಜ್ಯೋತಿಷ್ಯಶಾಸ್ತ್ರದ ಪರಿಚಯವೂ ಸಾಕಷ್ಟಿತ್ತು. ಅನಾಟಮಿಯನ್ನೂ ಓದುತ್ತಿದ್ದರು. ಅಲೋಪತಿ ಹಾಗೂ ಆಯುರ್ವೇದಗಳ ತುಲನಾತ್ಮಕ-ಅಧ್ಯಯನವನ್ನು ಮಾಡುತ್ತಿದ್ದರು. ವಿಧ್ಯುಕ್ತವಾದ ಸಂಗೀತಪಾಠವಾಗದಿದ್ದರೂ, ಅನುಕರಿಸಿ ದೈವದತ್ತವಾದ ಸಿರಿಕಂಠದಿಂದ ಸೊಗಸಾಗಿ ಹಾಡುತ್ತಿದ್ದರು. ಅವರ ಗಾಯನದ ಸೊಗಸು ಇಂದಿಗೂ ಅನೇಕರ ಮನಸ್ಸಿನಲ್ಲಿ ಹಸಿರಾಗಿದೆ. ಇದರ ಬಗ್ಗೆ ಈ ಮೊದಲೇ ವಿವರಿಸಲಾಗಿದೆ.

ಶ್ರೀಗುರುಪದಸಾಯುಜ್ಯ 

ಶ್ರೀಗುರು, ಶ್ರೀಮಾತೆಯವರು ಹಾಗೂ ವಿಜ್ಞಾನಮಂದಿರ ಇವು ಇವರ ಜೀವನದ ಕೊನೆಯವರೆಗೂ ಉಸಿರಿನ ಉಸಿರಾಗಿದ್ದವು. ಕೊನೆಯ ದಿನವೂ ಅತಿಥಿಸತ್ಕಾರ ಮಾಡಿ ಬಹುಧಾನ್ಯಸಂವತ್ಸರದ ಆಶ್ವಯುಜಮಾಸದ, ಕೃಷ್ಣಪಕ್ಷತೃತೀಯಾದಂದು ತಮ್ಮ ಗುರುವಿನ ಜನ್ಮನಕ್ಷತ್ರವಾದ ಮಹಾಭರಣಿಯಂದು (ದಿ. ೭-೧೦-೧೯೯೮) ಗುರುಪದಸಾಯುಜ್ಯವನ್ನು ಹೊಂದಿದರು. ಶ್ರೀಯುತರು ಭೌತಿಕವಾಗಿ ಇಲ್ಲದಿದ್ದರೂ ಅವರ ಧ್ಯೇಯಾದರ್ಶಗಳಿಂದ ಸಹೃದಯರ ಮನಸ್ಸಿನಲ್ಲಿ ನೆಲೆಸಿದ್ದಾರೆ.

ಜಯಂತಿ ತೇ ಸುಕೃತಿನೋ ರಸಸಿದ್ಧಾ: ಕವೀಶ್ವರಾ: |

ನಾಸ್ತಿ ತೇಷಾಂ ಯಶ: ಕಾಯೇ ಜರಾಮರಣಜಂ ಭಯಮ್ ||