Showing posts with label 260_ayvmarticle. Show all posts
Showing posts with label 260_ayvmarticle. Show all posts

Friday, February 7, 2020

ಮೋಕ್ಷಕ್ಕೆ ಎರಡು ದಾರಿ (Mokshakke eradu daari)

ಲೇಖಕರು: ಶ್ರೀ ವಿದ್ವಾನ್ ನರಸಿಂಹ ಭಟ್ಟರು
(ಪ್ರತಿಕ್ರಿಯಿಸಿರಿ : lekhana@ayvm.in)

 

ಅಷ್ಟಾಂಗ ಯೋಗ ವಿಜ್ಞಾನ ಮಂದಿರದ ಸ್ಥಾಪಕರಾದ ಯೋಗಿವರೇಣ್ಯ ಶ್ರೀರಂಗ ಮಹಾಗುರುಗಳು ಮೋಕ್ಷವನ್ನು ಕುರಿತು ಒಂದಲ್ಲ ಒಂದು ಮಾತನ್ನು ಆಡುತ್ತಲೇ ಇದ್ದರು. ಅವರು “ಮೋಕ್ಷವನ್ನು ಪಡೆಯುವುದು ಪ್ರತಿಮಾನವನ ಕರ್ತವ್ಯವಪ್ಪಾ. ಹೇಗೆ ಒಬ್ಬ ಪ್ರಜೆಗೆ ಹದಿನೆಂಟು ವರ್ಷವಾಯಿತೆಂದರೆ ಮತ ಚಲಾಯಿಸುವ ಹಕ್ಕು ಬರುವುದೋ ಅಂತೆಯೇ ಮಾನವನು ಹುಟ್ಟಿದ ಕ್ಷಣವೇ ಮೋಕ್ಷಕ್ಕೆ ಹಕ್ಕು ಬರುತ್ತಪ್ಪಾ.” ಎಂದು ಹೇಳುತ್ತಿದ್ದರು. ಮೋಕ್ಷವು ಪ್ರತಿಯೊಬ್ಬನಿಂದಲೂ ಪಡೆಯಲೇಬೇಕಾದದ್ದು. ಹಾಗಾದರೆ ಅದನ್ನು ಪಡೆಯುವುದು ಹೇಗೆ ಎಂಬ ಬಗ್ಗೆ ನಿರಂತರವಾಗಿ ಸಾಧನೆ ಶೋಧನೆ ಬೋಧನೆ ನಡೆದುಕೊಂಡು ಬರುತ್ತಲೇ ಇದೆ. ಇದರಿಂದ ಅನೇಕರು ಬದುಕಿನ ಸಾರ್ಥಕತೆಯನ್ನು ಕಂಡುಕೊಂಡಿದ್ದಾರೆ. ಅವರನ್ನು ಋಷಿ, ಮಹರ್ಷಿ ಎಂಬಿತ್ಯಾದಿ ಪದಗಳಿಂದ ಕರೆಯುತ್ತೇವೆ. ಅವರು ಕಂಡುಕೊಂಡ ಮಾರ್ಗ ಯಾವುದು ?

 ಲೋಕೇಽಸ್ಮಿನ್ ದ್ವಿವಿಧಾ ನಿಷ್ಠಾ ಪುರಾ ಪ್ರೋಕ್ತಾ ಮಯಾನಘ |
ಜ್ಞಾನಯೋಗೇನ ಸಾಂಖ್ಯಾನಾಂ ಕರ್ಮಯೋಗೇನ ಯೋಗಿನಾಮ್ || ಗೀತಾ ೪.೩


ಎಲೈ ಅರ್ಜುನ! ಈ ಹಿಂದೆಯೇ ನಾನು ಲೋಕದಲ್ಲಿ ಎರಡು ಬಗೆಯ ನಿಷ್ಠೆ(ಮಾರ್ಗ)ಯನ್ನು ಹೇಳಿದ್ದೇನೆ. ಸಾಂಖ್ಯರು ಜ್ಞಾನಯೋಗದಿಂದ, ಯೋಗಿಗಳು ಕರ್ಮಯೋಗದಿಂದ ಮೋಕ್ಷವನ್ನು ಪಡೆಯುವರು. ಎಂಬುದಾಗಿ ಶ್ರೀಕೃಷ್ಣನು ಭಗವದ್ಗೀತೆಯಲ್ಲಿ ಎರಡು ಬಗೆಯ ಮಾರ್ಗವನ್ನು ಹೇಳಿದ್ದಾನೆ. ಜ್ಞಾನಿಯಾದವನು ಜ್ಞಾನದಿಂದ ಮತ್ತು ಕರ್ಮಠನಾದವನು ಕರ್ಮದಿಂದಲೇ ಈ ಸಂಸಾರದಿಂದ ಮುಕ್ತಿ ಪಡೆಯಬೇಕು. ಹಾಗಾದರೆ ಮೋಕ್ಷ ಎಂದರೇನು ? ಮತ್ತು ಅದರ ಸ್ವರೂಪವೇನು ? ಎಂದು ತಿಳಿದಾಗ ಅದನ್ನು ಪಡೆಯಲು ನಾವು ಪ್ರಯತ್ನಿಸಬೇಕು.

ಮೋಕ್ಷ ಎಂದರೆ ಬಿಡುಗಡೆ. ಭಗವಂತನಿಂದ ಬೇರ್ಪಟ್ಟ ಜೀವ ಮತ್ತೆ ಅಲ್ಲೇ ಸೇರಬೇಕು. ಮಾರ್ಕೇಟ್ಟಿಗೆ ಸಾಮಾನು ತರಲೆಂದು ಕಳಿಸಿದ ಮಗುವು ಮನೆಯನ್ನು ಮರೆತು ಮಾರ್ಕೇಟ್ಟಿನಲ್ಲೆ ಸುತ್ತಾಡುವಂತೆ ಜೀವವೂ ಭಗವಂತನಿಂದ ಹೊರಬಂದು. ತನಗೆ ಭಗವಂತ ಕೊಟ್ಟ ವಿವೇಕವನ್ನು ಸರಿಯಾಗಿ ಉಪಯೋಗಿಸಿಕೊಳ್ಳದೇ ಅವಿವೇಕದಿಂದ ಭಗವಂತನನ್ನೇ ಮರೆತುಬಿಡುತ್ತಾನೆ. ಇದರಿಂದ ಬೀದಿ ಸುತ್ತುವಂತೆ ಈ ಜನನ ಮರಣ ಎಂಬ ಸಂಸಾರದಲ್ಲಿ ಸಿಲುಕಿರುತ್ತಾನೆ. ಜ್ಞಾನದಿಂದಲೋ ಕರ್ಮದಿಂದಲೋ ಮತ್ತೆ ವಿವೇಕವನ್ನು ಪಡೆದು ಭಗವಂತನ ಸಾನ್ನಿಧ್ಯವನ್ನು ಸೇರುವುದನ್ನೇ- ಈ ಸಂಸಾರದಿಂದ ಬಿಡುಗಡೆ ಹೊಂದುವುದನ್ನೇ ಮೋಕ್ಷ ಎಂದು ಕರೆದಿದ್ದಾರೆ.

ಜ್ಞಾನಮಾರ್ಗ ಮತ್ತು ಕರ್ಮಮಾರ್ಗ ಎಂದರೇನು? 
ಜ್ಞಾನ ಎಂದರೆ ಮೂಲತಃ ಭಗವಂತ-ಪರಬ್ರಹ್ಮವಸ್ತು-ಬೆಳಕು. ಇದರ ಅರಿವನ್ನು-ಇರವನ್ನು ತಿಳಿಯುವ ಕ್ರಮಕ್ಕೆ ಜ್ಞಾನಮಾರ್ಗವೆಂದು ಕರೆಯುತ್ತಾರೆ. ಅದು ಹೇಗೆ ಎಂಬುದನ್ನು ಈಶಾವಾಸ್ಯೋಪನಿಷತ್ ಹೀಗೆ ಸಾರಿದೆ- ‘ಈಶಾವಾಸ್ಯಮಿದಂ ಸರ್ವಂ’ ಎಂದು. ನಮಗೆ ಕಾಣುವ ಚರಾಚರಾತ್ಮಕವಾದ ಅಣುರೇಣುತೃಣಕಾಷ್ಠದಲ್ಲೂ ಆ ಪರಬ್ರಹ್ಮವಸ್ತುವನ್ನು ಅಂದರೆ ಅದರ ಅದ್ವೈತವನ್ನು ಕಾಣುವುದು. ವಿದ್ಯಾವಿನಯಸಂಪನ್ನನಾದ ಜ್ಞಾನಿಯು ಗೋವಿನಲ್ಲಿ, ಆನೆಯಲ್ಲಿ, ನಾಯಿಯಲ್ಲಿ ಮತ್ತು ನಾಯಿಯನ್ನು ತಿನ್ನುವವನಲ್ಲೂ ಯಾವ ಬೇಧ ಭಾವವನ್ನೂ ಕಾಣದೆ ಎಲ್ಲರನ್ನೂ ಸಮವಾಗಿ (ನಿರ್ದೋಷಂ ಹಿ ಸಮಂ ಬ್ರಹ್ಮ) ಕಾಣುತ್ತಾನೆ. ಅಂತಹವನನ್ನೇ ನಿಜವಾದ ಜ್ಞಾನಿ ಎಂದು ಕರೆಯುತ್ತಾರೆ. ಅವನು ಎಲ್ಲವನ್ನು ಸಮವಾಗಿ ನೋಡುವುದರಿಂದ ಶೋಕಮೋಹಗಳಿಗೆ ಅವಕಾಶವಿಲ್ಲ. ಶೋಕಮೋಹಗಳಿಗೆ ಅವಕಾಶವಿಲ್ಲದ್ದರಿಂದ ಅವುಗಳಿಂದಲೇ ಜನಿಸುವ ಅವಿದ್ಯಾಕಾಮಕರ್ಮಗಳಿಗೆ ಅವಕಾಶವಿರುವುದಿಲ್ಲ. ಯಾವಾಗ ಕರ್ಮದ ಲೇಪವಿರುವುದಿಲ್ಲವೋ ಆಗ ಆ ಜೀವ ಮುಕ್ತ ಎಂದರ್ಥ. ಇದನ್ನೇ ಜ್ಞಾನಮಾರ್ಗ ಎಂದು ಕರೆಯಲಾಗಿದೆ. ‘ಜ್ಞಾನಾದೇವ ತು ಕೈವಲ್ಯಂ’ ಎಂಬುದಕ್ಕೆ ಇದೇ ಅರ್ಥ.  

ಇನ್ನೊಂದು ಮಾರ್ಗ ಕರ್ಮಮಾರ್ಗ. ಕರ್ಮದಿಂದಲೇ ಜನಕಾದಿ ಮಹಾಜನರು ಸಂಸಿದ್ಧಿಯನ್ನು ಪಡೆದರು. ಯಜ್ಞಕ್ಕೆ ಹೊರತಾದ ಕರ್ಮವೆಲ್ಲವೂ ಬಂಧನವನ್ನು ಉಂಟುಮಾಡುತ್ತದೆ. ಉಸಿರಾಟದಿಂದ ಹಿಡಿದು ಅಗ್ನಿಹೋತ್ರದವರೆಗಿನ ಶ್ರಮಸಾಧ್ಯ ಯಾಗದವರೆಗಿನ ಪ್ರತಿಯೊಂದು ಕ್ರಿಯೆಯೂ ಯಜ್ಞವೇ. ಇಂತಹ ಕರ್ಮವು ಬಂಧಕವಲ್ಲ ಅದು ಮೋಚಕವೇ ಆಗಿದೆ. ಶಿಷ್ಟರು ಆಚರಿಸಿಕೊಂಡು ಬಂದ ಪ್ರತಿ ಆಚರಣೆಯೂ ಮೋಚಕವೇ.   ಧ್ಯಾನ ತಪಸ್ಸು ಮೊದಲಾದ ಮನೋನಿಗ್ರಹಕರ್ಮಗಳು ಮತ್ತು ಯಜ್ಞಯಾಗಾದಿ ಇಂದ್ರಿಯನಿಗ್ರಹ ಕರ್ಮಗಳಿಂದ ಕರ್ಮಲೇಪಕ್ಕೆ ಒಳಗಾಗದೇ ಕರ್ಮಬಂಧನದಿಂದ  ಬಿಡುಗಡೆ ಹೊಂದುವುದನ್ನೇ ಮುಕ್ತಿ ಎಂದು ಕರೆಯಲಾಗಿದೆ. ಹೀಗೆ ಮೋಕ್ಷಕ್ಕೆ ಜ್ಞಾನ ಮತ್ತು ಕರ್ಮವೆಂಬ ಎರಡು ದಾರಿಗಳು.

ಸೂಚನೆ:  0/02/2020 ರಂದು ಈ ಲೇಖನ ವಿಶ್ವ ವಾಣಿಯ ಗುರು ಪುರವಾಣಿ ಅಂಕಣದಲ್ಲಿ ಪ್ರಕಟವಾಗಿದೆ

Tuesday, February 4, 2020

मोक्षमार्गौ (Mokshamaargou)

लेखकः – विद्वान् नरसिंह भट्टः
(प्रतिक्रियां दातुं शक्यते :  lekhana@ayvm.in)
अष्टाङ्ग-योग-विज्ञान-मन्दिरस्य स्थापकाध्यक्षाः योगिवरेण्याः श्रीरङ्गमहागुरवः मोक्षविषयकानि नानावचांसि विभिन्नकालेषु उक्तवन्तः एव आसान् । “यथा भारतवर्षस्य प्रत्येकस्य जनस्यापि अष्टादशवर्षात् स्वमतं स्थापयितुम् अधिकारः भवति तथा मोक्षः जन्ममात्रस्य प्रतिमानवस्य कर्तव्यः” इति । अत एव मोक्षः मानवमात्रेण अधिगन्तव्यः । तत् कथमधिगन्तव्यमित्यत्र साधनं शोधनं बोधनं च निरन्तरं प्रचलदस्ति । अनेन बहवः जीवनस्य सार्थकताम् अन्वभवन् । तान् ऋषिः महर्षिः इत्यादि पदैः व्यपदिश्यते । तैरेव अन्वेषितौ मार्गौ कौ ? “ लोकेऽस्मिन् द्विविधा निष्ठा पुरा प्रोक्ता मयानघ ।
ज्ञायोगेन सांख्यानां कर्मयोगेन योगिनाम् ॥“ (गीता ४.३)
-हे अर्जुन ! अस्मिन् लोके द्वौ मार्गौ स्तः इति मया पूर्वमेव प्रोक्तं किल । ज्ञानमार्गेण सांख्याः कर्ममार्गेण योगिनः मोक्षम् आप्नुवन् । एवं च ज्ञानी ज्ञानेन कर्मठः कर्मणा च मोक्षं प्राप्नुयात् । तर्हि ‘मोक्ष’ इत्युक्ते किम् । तस्य स्वरूपं किम् इत्यादि बोधेन अस्माभिः तदर्थं प्रयत्नः करणीयः भवति । मोक्षः- मोचनं विमोचनं मुक्तिः । भगवतः विभक्तः जीवः पुनः तत्रैव भक्तः भवेत् । यथा पदार्थं विक्रेतुम् गृहात् आपणं गतः बालः पुनः गृहमेव प्राप्तव्यम् । स च बालः यदि गृहं विस्मृत्य तत्रैव रमते चेत् कथं भवेत् । भगवता प्राप्तं विवेकमनुपयुज्य भगवन्तमेव विस्मरति । विस्मरणशीलेन ‘पुनरपि मरणं पुनरपि जननम्” इति संसारचक्रे परिभ्रमति । परन्तु यदा कदा वा यथा पुनः गृहगमनं स्वाभाविकं तथैव ज्ञानेन कर्मणा वा विवेकं सम्पाद्य भगवतः सामीप्यं सम्पादनीयम् । संसारचक्रात् मुक्तिश्च प्राप्तव्या । अयमेव मोक्षः इत्युच्यते ।
कः ज्ञानमार्गः
ज्ञानमित्युक्ते प्रकाशः आनन्दः परब्रह्म । अस्य अनुभवः अस्तित्वं च बोधरूपेण प्राप्यते चेत् स च मार्गः ज्ञानमार्गः । तत्कथमिति ईश्यावास्योपनिषत् उपदिशति –“ ईशावास्यमिदं सर्वम्” इति । चराचरात्मकेषु अणुरेणुतृनकाष्ठेषु परब्रह्मणः अद्वैतं तथैव “विद्याविनसम्पन्ने ब्राह्मणे गवि हस्तिनि । शुनि चैव श्वपाके च पण्डिताः समदर्शिनः ॥“ निर्दोषस्य समस्य ब्रह्मणः दर्शनं यस्य भवति स च ज्ञानी इत्युच्यते । तत्त्र समदर्शित्वात् शोकमॊहादीनाम् अविद्याकामकर्मणाम् अवकाशः नास्त्येव । अनेन जीवः मुक्तः भवति ।
कः कर्ममार्गः
अन्यः कर्ममार्गः । “कर्मणैव हि संसिद्धिमास्थिताः जनकादयः” यज्ञादन्यत् कर्म बन्धनाय । श्वासोछ्वासादारभ्य अग्निहोत्रपर्यन्तं सर्वोऽपि यज्ञ एव । एतादृशं कर्म मोचनाय भवति न बन्धाय । शिष्टानाम् सर्वोऽपि आचारः मोचक एव । तथैव ध्यानं तपः इत्यादि मनोनिग्राहकाणि कर्माणि तथा यज्ञयागादि इन्द्रियनिग्राहकानि कर्माणि च कर्मबन्धात् विमुच्यते । न तत्र कर्मलेपः । एतादृशकर्मणा जीवः मुक्तः भवति । अन्ये भक्तिराजरूपाः मार्गाः अत्रैव अन्तर्भवतीति न पार्थक्यं भजन्ते इत्यलं विस्तारेण ।