ಲೇಖಕರು : ವಿದ್ವಾನ್ ನರಸಿಂಹ ಭಟ್
ಪ್ರತಿಕ್ರಿಯಿಸಿರಿ (lekhana@ayvm.in)
ಪ್ರಶ್ನೆ - ೭೧. ರಾಮನಿಗಿಂತಲೂ ಶೂರ ಯಾರು?
ಮನ್ಮಥನಿಂದ ಪೀಡಿತನಾಗಿದ್ದರೂ ನಿಶ್ಚಲನಾದ ವ್ಯಕ್ತಿ.
ರಾಮನಿಗಿಂತಲೂ ಶೂರ ಯಾರಾದರೂ ಇದ್ದಾರೆಯೇ? ಎಂದು ಯಾರಾದರೂ ಪ್ರಶ್ನೆಯನ್ನು ಕೇಳಿದರೆ ಅದಕ್ಕೆ ಉತ್ತರ ‘ಇಲ್ಲ’ ಎಂಬುದೇ. ಶೂರನು ಯಾರು? ಎಂದು ಕೇಳಿದಾಗ ‘ರಾಮನೇ’ ಎಂಬುದಾಗಿ ಉತ್ತರ ಸಾಮಾನ್ಯ ಚಿಕ್ಕ ಮಗುವಿಗೂ ತಿಳಿದಿರುವ ವಿಷಯ. ಹೀಗಿರುವಾಗ ರಾಮನಿಗಿಂತಲೂ ಶೂರ ಯಾರು? ಎಂಬ ಪ್ರಶ್ನೆಗೆ ಇಲ್ಲಿನ ಉತ್ತರ ಔಚಿತ್ಯ ಪೂರ್ಣವಾಗಿದೆ. ಅದು ಹೇಗೆ? ಒಬ್ಬ ಶೂರನಾಗಲು ಏನು ಬೇಕು? ಅಂದರೆ ಅವನು ರಾಮನಿಗಿಂತಲೂ ಶ್ರೇಷ್ಠನಾಗಬೇಕು ಅಂತಾದರೆ ಯಾವ ಗುಣ ಇರಬೇಕು ಎಂಬ ಪ್ರಶ್ನೆ ಎಲ್ಲಿದೆ. ಅವನು ರಾಮನಿಗಿಂತಲೂ ಶೂರ ಎಂದಾಗಬೇಕಾದರೆ ಅವನು ಯಾವುದೇ ಕಾರಣಕ್ಕೂ ಮನ್ಮಥನಿಂದ ಅಥವಾ ಕಾಮ ಪೀಡಿತನಾಗದೇ ಇದ್ದರೆ ಮಾತ್ರ ಸಾಧ್ಯ ಎಂಬುದಾಗಿ ಇಲ್ಲಿ ಉತ್ತರವಿದೆ. ಶೂರ ಎಂದರೇನು? ಶೂರನೇ ಆಗಬೇಕಾದರೆ ಅವನು ಹೇಗೆ ಕಾಮವನ್ನು ಅಥವಾ ಮನ್ಮಥನನ್ನು ಹೇಗೆ ತನ್ನ ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು? ಎಂಬುದನ್ನೂ ಕೂಡ ತಿಳಿದುಕೊಳ್ಳುವುದು ಅತ್ಯಂತ ಅವಶ್ಯಕ.
ಶೂರ ಎಂಬ ಶಬ್ದಕ್ಕೆ ಧೀರ, ಪರಾಕ್ರಮಿ, ಬಲಯುತ ಇತ್ಯಾದಿ ಅರ್ಥಗಳು ಇವೆ. ಅಂದರೆ ಅವನಿಗೆ ಪರಾಕ್ರಮ ಬಲ ಇತ್ಯಾದಿ ಗುಣಗಳು ಬರಬೇಕಾದರೆ ಅವನ ಬುದ್ಧಿಯು ನಿಯಂತ್ರಣದಲ್ಲಿ ಇರಬೇಕು. ಯಾರ ಬುದ್ಧಿ ಸನ್ಮಾರ್ಗದಲ್ಲಿ ಇರುತ್ತದೆಯೋ ಅವನೇ ನಿಜವಾದ ಧೀರ ಎಂಬುದಾಗಿ ಹೇಳಲಾಗಿದೆ. ಹಾಗಾಗಿ ಅಂತಹ ಶೂರನಾಗಬಲ್ಲವು ತನ್ನ ನಿಯೋಜಿತಕಾರ್ಯವನ್ನು ಉಚಿತವಾಗಿ ಮಾಡಬಲ್ಲ ಸಾಮರ್ಥ್ಯವನ್ನು ಸಂಪಾದನೆ ಮಾಡಿರುತ್ತಾನೆ ಎಂಬುದಾಗಿ. ಹಾಗಿಲ್ಲದೆ ಕಾಮಪರವಶನಾಗಿ ಅಥವಾ ಮೋಹದಿಂದ ಕೂಡಿದ್ದರೆ ಅವನು ಧೀರನಾಗಲು ಸಾಧ್ಯವಿಲ್ಲ. ಅವನು ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಾನೆ ಎಂಬುದಾಗಿ ಒಂದು ಸುಭಾಷಿತ ಹೇಳುತ್ತದೆ - “ಪ್ರಾಯಃ ಸಮಾಪನ್ನವಿಪತ್ತಿಕಾಲೇ ಧಿಯೋSಪಿ ಪುಂಸಾಂ ಮಲಿನೀಭವಂತಿ” ಅಂದರೆ ಧೀರರಾದವರೂ ಕೂಡ ವಿಪತ್ತಿನ ಕಾಲದಲ್ಲಿ ತನ್ನ ಬುದ್ಧಿಯ ಸ್ತಿಮಿತತೆಯನ್ನು ಕಳೆದುಕೊಳ್ಳುತ್ತಾರೆ ಎಂಬುದಾಗಿ. ಇಲ್ಲಿ ರಾಮನನ್ನೇ ಉದಾಹರಣೆಯಾಗಿ ಕೊಡಲಾಗಿದೆ. ಸೀತೆಯು ಮಾಯಾಜಿಂಕೆಯನ್ನು ಕಂಡು ಅದು ತನಗೆ ಬೇಕೆಂಬುದಾಗಿ ಹಠ ಮಾಡುತ್ತಾಳೆ. ಒಂದು ಕ್ಷಣ ಯೋಚಿಸಿ ಮತ್ತೆ ಆ ಸೀತೆಯ ಬಯಕೆಯನ್ನು ಈಡೇರಿಸಲು ಮಾಯಜಿಂಕೆಯ ಹಿಂದೆ ರಾಮ ಧಾವಿಸುತ್ತೇನೆ. ವಸ್ತುತಃ ಅದು ಮಾಯಾಜಿಂಕೆಯೇ ಆಗಿತ್ತು. ಸೀತೆಯನ್ನು ಅಪಹರಿಸಲು ಮಾಡಿದ ಒಂದು ಕುತಂತ್ರ ಅದಾಗಿತ್ತು. ಆದರೆ ರಾಮನಂತಹ ರಾಮನು ಕೂಡ ಆ ಕ್ಷಣದಲ್ಲಿ ತನ್ನ ಬುದ್ಧಿಯನ್ನು ಸ್ತಿಮಿತವಾಗಿ ಇಟ್ಟುಕೊಳ್ಳಲು ಸಾಧ್ಯವಾಗಲಿಲ್ಲ. ಯಾಕೆಂದರೆ ಸೀತೆಯ ಮೇಲಿನ ಮೋಹ. ಅವಳ ಬಯಕೆಯನ್ನು ಈಡೇರಿಸುವುದೇ ಅವನ ಇಚ್ಛೆಯಾಗಿತ್ತು. ಅವನು ಸೀತೆಯ ಕಾಮನೆಗೆ ಅನುಸಾರವಾಗಿ ಅವಳ ಪ್ರೀತಿಗೆ ಮನಸೋತು ಮಾಯಾಜಿಂಕೆಯ ಹಿಂದೆ ಓಡಿದನು. ಅದರಿಂದ ರಾಮನು ಧೀರನಾದರೂ ತನ್ನ ಮಡದಿಯನ್ನು ಕಳೆದುಕೊಳ್ಳುವ ಸಂದರ್ಭ ಒದಗಿತು. ರಾಮನಂತಹವರಿಗೆ ಇಂತಹ ಬುದ್ಧಿಯು ಮಂಕಾಗುವ ಸಂದರ್ಭವಿದೆ ಎಂದಾದರೆ ಸಾಮಾನ್ಯವ್ಯಕ್ತಿಯ ಮಾತೇನು! ಹಾಗಾಗಿ ಇಲ್ಲಿ ಹೇಳಿರುವುದು ರಾಮನುಗಿಂತಲೂ ಅವನು ಶೂರನಾಗಬೇಕು ಎಂದಾದರೆ ಆಶೆಯನ್ನು ಅಥವಾ ಮನ್ಮಥನಿಂದ ಪ್ರೇರಿತವಾದ ಕಾಮನೆಯನ್ನು ಅವನು ಬಿಡಬೇಕು. ಹಾಗೆ ಬಿಟ್ಟಾಗ ಮಾತ್ರ ಅವನು ತನ್ನ ಬುದ್ಧಿಯನ್ನು ಶುದ್ಧವಾಗಿ ಇಟ್ಟುಕೊಳ್ಳಲು ಸಾಧ್ಯ. ಯಾವಾಗ ಬುದ್ಧಿ ಶುದ್ಧವಾಗುತ್ತದೆಯೋ ಆಗ ಅದು ಕಾಮಧೇನುವಿನಂತೆ ಬೇಡಿದ್ದನ್ನು ಕೊಡಲು ಸಾಧ್ಯ. ಆದ್ದರಿಂದ ಕಾಮಪರವಶನಾಗದಿದ್ದರೆ ಅವನು ರಾಮನೇ ಎಂಬುದಾಗಿ ಇಲ್ಲಿ ಹೇಳಲಾಗಿದೆ.
ಸೂಚನೆ : 21/6/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.
ಲೇಖಕರು : ವಿದ್ವಾನ್ ನರಸಿಂಹ ಭಟ್
ಪ್ರತಿಕ್ರಿಯಿಸಿರಿ (lekhana@ayvm.in)
ಪ್ರಶ್ನೆ - ೭೧. ರಾಮನಿಗಿಂತಲೂ ಶೂರ ಯಾರು?
ಮನ್ಮಥನಿಂದ ಪೀಡಿತನಾಗಿದ್ದರೂ ನಿಶ್ಚಲನಾದ ವ್ಯಕ್ತಿ.
ರಾಮನಿಗಿಂತಲೂ ಶೂರ ಯಾರಾದರೂ ಇದ್ದಾರೆಯೇ? ಎಂದು ಯಾರಾದರೂ ಪ್ರಶ್ನೆಯನ್ನು ಕೇಳಿದರೆ ಅದಕ್ಕೆ ಉತ್ತರ ‘ಇಲ್ಲ’ ಎಂಬುದೇ. ಶೂರನು ಯಾರು? ಎಂದು ಕೇಳಿದಾಗ ‘ರಾಮನೇ’ ಎಂಬುದಾಗಿ ಉತ್ತರ ಸಾಮಾನ್ಯ ಚಿಕ್ಕ ಮಗುವಿಗೂ ತಿಳಿದಿರುವ ವಿಷಯ. ಹೀಗಿರುವಾಗ ರಾಮನಿಗಿಂತಲೂ ಶೂರ ಯಾರು? ಎಂಬ ಪ್ರಶ್ನೆಗೆ ಇಲ್ಲಿನ ಉತ್ತರ ಔಚಿತ್ಯ ಪೂರ್ಣವಾಗಿದೆ. ಅದು ಹೇಗೆ? ಒಬ್ಬ ಶೂರನಾಗಲು ಏನು ಬೇಕು? ಅಂದರೆ ಅವನು ರಾಮನಿಗಿಂತಲೂ ಶ್ರೇಷ್ಠನಾಗಬೇಕು ಅಂತಾದರೆ ಯಾವ ಗುಣ ಇರಬೇಕು ಎಂಬ ಪ್ರಶ್ನೆ ಎಲ್ಲಿದೆ. ಅವನು ರಾಮನಿಗಿಂತಲೂ ಶೂರ ಎಂದಾಗಬೇಕಾದರೆ ಅವನು ಯಾವುದೇ ಕಾರಣಕ್ಕೂ ಮನ್ಮಥನಿಂದ ಅಥವಾ ಕಾಮ ಪೀಡಿತನಾಗದೇ ಇದ್ದರೆ ಮಾತ್ರ ಸಾಧ್ಯ ಎಂಬುದಾಗಿ ಇಲ್ಲಿ ಉತ್ತರವಿದೆ. ಶೂರ ಎಂದರೇನು? ಶೂರನೇ ಆಗಬೇಕಾದರೆ ಅವನು ಹೇಗೆ ಕಾಮವನ್ನು ಅಥವಾ ಮನ್ಮಥನನ್ನು ಹೇಗೆ ತನ್ನ ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು? ಎಂಬುದನ್ನೂ ಕೂಡ ತಿಳಿದುಕೊಳ್ಳುವುದು ಅತ್ಯಂತ ಅವಶ್ಯಕ.
ಶೂರ ಎಂಬ ಶಬ್ದಕ್ಕೆ ಧೀರ, ಪರಾಕ್ರಮಿ, ಬಲಯುತ ಇತ್ಯಾದಿ ಅರ್ಥಗಳು ಇವೆ. ಅಂದರೆ ಅವನಿಗೆ ಪರಾಕ್ರಮ ಬಲ ಇತ್ಯಾದಿ ಗುಣಗಳು ಬರಬೇಕಾದರೆ ಅವನ ಬುದ್ಧಿಯು ನಿಯಂತ್ರಣದಲ್ಲಿ ಇರಬೇಕು. ಯಾರ ಬುದ್ಧಿ ಸನ್ಮಾರ್ಗದಲ್ಲಿ ಇರುತ್ತದೆಯೋ ಅವನೇ ನಿಜವಾದ ಧೀರ ಎಂಬುದಾಗಿ ಹೇಳಲಾಗಿದೆ. ಹಾಗಾಗಿ ಅಂತಹ ಶೂರನಾಗಬಲ್ಲವು ತನ್ನ ನಿಯೋಜಿತಕಾರ್ಯವನ್ನು ಉಚಿತವಾಗಿ ಮಾಡಬಲ್ಲ ಸಾಮರ್ಥ್ಯವನ್ನು ಸಂಪಾದನೆ ಮಾಡಿರುತ್ತಾನೆ ಎಂಬುದಾಗಿ. ಹಾಗಿಲ್ಲದೆ ಕಾಮಪರವಶನಾಗಿ ಅಥವಾ ಮೋಹದಿಂದ ಕೂಡಿದ್ದರೆ ಅವನು ಧೀರನಾಗಲು ಸಾಧ್ಯವಿಲ್ಲ. ಅವನು ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಾನೆ ಎಂಬುದಾಗಿ ಒಂದು ಸುಭಾಷಿತ ಹೇಳುತ್ತದೆ - “ಪ್ರಾಯಃ ಸಮಾಪನ್ನವಿಪತ್ತಿಕಾಲೇ ಧಿಯೋSಪಿ ಪುಂಸಾಂ ಮಲಿನೀಭವಂತಿ” ಅಂದರೆ ಧೀರರಾದವರೂ ಕೂಡ ವಿಪತ್ತಿನ ಕಾಲದಲ್ಲಿ ತನ್ನ ಬುದ್ಧಿಯ ಸ್ತಿಮಿತತೆಯನ್ನು ಕಳೆದುಕೊಳ್ಳುತ್ತಾರೆ ಎಂಬುದಾಗಿ. ಇಲ್ಲಿ ರಾಮನನ್ನೇ ಉದಾಹರಣೆಯಾಗಿ ಕೊಡಲಾಗಿದೆ. ಸೀತೆಯು ಮಾಯಾಜಿಂಕೆಯನ್ನು ಕಂಡು ಅದು ತನಗೆ ಬೇಕೆಂಬುದಾಗಿ ಹಠ ಮಾಡುತ್ತಾಳೆ. ಒಂದು ಕ್ಷಣ ಯೋಚಿಸಿ ಮತ್ತೆ ಆ ಸೀತೆಯ ಬಯಕೆಯನ್ನು ಈಡೇರಿಸಲು ಮಾಯಜಿಂಕೆಯ ಹಿಂದೆ ರಾಮ ಧಾವಿಸುತ್ತೇನೆ. ವಸ್ತುತಃ ಅದು ಮಾಯಾಜಿಂಕೆಯೇ ಆಗಿತ್ತು. ಸೀತೆಯನ್ನು ಅಪಹರಿಸಲು ಮಾಡಿದ ಒಂದು ಕುತಂತ್ರ ಅದಾಗಿತ್ತು. ಆದರೆ ರಾಮನಂತಹ ರಾಮನು ಕೂಡ ಆ ಕ್ಷಣದಲ್ಲಿ ತನ್ನ ಬುದ್ಧಿಯನ್ನು ಸ್ತಿಮಿತವಾಗಿ ಇಟ್ಟುಕೊಳ್ಳಲು ಸಾಧ್ಯವಾಗಲಿಲ್ಲ. ಯಾಕೆಂದರೆ ಸೀತೆಯ ಮೇಲಿನ ಮೋಹ. ಅವಳ ಬಯಕೆಯನ್ನು ಈಡೇರಿಸುವುದೇ ಅವನ ಇಚ್ಛೆಯಾಗಿತ್ತು. ಅವನು ಸೀತೆಯ ಕಾಮನೆಗೆ ಅನುಸಾರವಾಗಿ ಅವಳ ಪ್ರೀತಿಗೆ ಮನಸೋತು ಮಾಯಾಜಿಂಕೆಯ ಹಿಂದೆ ಓಡಿದನು. ಅದರಿಂದ ರಾಮನು ಧೀರನಾದರೂ ತನ್ನ ಮಡದಿಯನ್ನು ಕಳೆದುಕೊಳ್ಳುವ ಸಂದರ್ಭ ಒದಗಿತು. ರಾಮನಂತಹವರಿಗೆ ಇಂತಹ ಬುದ್ಧಿಯು ಮಂಕಾಗುವ ಸಂದರ್ಭವಿದೆ ಎಂದಾದರೆ ಸಾಮಾನ್ಯವ್ಯಕ್ತಿಯ ಮಾತೇನು! ಹಾಗಾಗಿ ಇಲ್ಲಿ ಹೇಳಿರುವುದು ರಾಮನುಗಿಂತಲೂ ಅವನು ಶೂರನಾಗಬೇಕು ಎಂದಾದರೆ ಆಶೆಯನ್ನು ಅಥವಾ ಮನ್ಮಥನಿಂದ ಪ್ರೇರಿತವಾದ ಕಾಮನೆಯನ್ನು ಅವನು ಬಿಡಬೇಕು. ಹಾಗೆ ಬಿಟ್ಟಾಗ ಮಾತ್ರ ಅವನು ತನ್ನ ಬುದ್ಧಿಯನ್ನು ಶುದ್ಧವಾಗಿ ಇಟ್ಟುಕೊಳ್ಳಲು ಸಾಧ್ಯ. ಯಾವಾಗ ಬುದ್ಧಿ ಶುದ್ಧವಾಗುತ್ತದೆಯೋ ಆಗ ಅದು ಕಾಮಧೇನುವಿನಂತೆ ಬೇಡಿದ್ದನ್ನು ಕೊಡಲು ಸಾಧ್ಯ. ಆದ್ದರಿಂದ ಕಾಮಪರವಶನಾಗದಿದ್ದರೆ ಅವನು ರಾಮನೇ ಎಂಬುದಾಗಿ ಇಲ್ಲಿ ಹೇಳಲಾಗಿದೆ.
ಸೂಚನೆ : 21/6/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.